Raja Marga Column : ದೇಶಕ್ಕಾಗಿ ಕಾರ್ನಾಡ್‌ ರೀತಿಯ ತ್ಯಾಗ ಬೇರೆ ಯಾರೂ ಮಾಡಿಲ್ಲ Vistara News

ಅಂಕಣ

Raja Marga Column : ದೇಶಕ್ಕಾಗಿ ಕಾರ್ನಾಡ್‌ ರೀತಿಯ ತ್ಯಾಗ ಬೇರೆ ಯಾರೂ ಮಾಡಿಲ್ಲ

Raja Marga Column : ಕಾರ್ನಾಡ್‌ ಸದಾಶಿವ ರಾವ್‌ ಅವರು ಅದೆಷ್ಟು ನಿಸ್ಪೃಹವಾಗಿ ಬದುಕಿದರು ಎಂದರೆ ಕೊನೆಗೆ ಒಂದು ಟೀ ಕುಡಿಯುವಷ್ಟೂ ಹಣ ಅವರು ಉಳಿಸಿಕೊಂಡಿರಲಿಲ್ಲ. ಒಬ್ಬಆಗರ್ಭ ಶ್ರೀಮಂತ ಹೀಗೆ ಎಲ್ಲವನ್ನೂ ದೇಶಕ್ಕಾಗಿ ಕೊಡುವುದು ನಂಬಲಸಾಧ್ಯ ಸತ್ಯ.

VISTARANEWS.COM


on

Karnad Sadashiva Rao
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA Rajendra Bhat

ಡಾ. ಸೂರ್ಯನಾಥ ಕಾಮತ್ ಅವರು ಬರೆದ “ತ್ಯಾಗ ವೀರ” (Tyaga Veera) ಪುಸ್ತಕವನ್ನು ಓದುತ್ತಾ ಹೋದಂತೆ ಕಣ್ತುಂಬ ಅಣೆಕಟ್ಟು ಒಡೆದು ನೀರು ಹರಿಯಿತು! ಅರವಿಂದ ಚೊಕ್ಕಾಡಿ ಬರೆದ ‘ಕಬೀರನಾದ ಕುಬೇರʼ (Kabeeranada Kubera) ಪುಸ್ತಕವೂ ತುಂಬಾ ಭಾವಪೂರ್ಣ ಆಗಿದೆ. ತನ್ನ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ನಿಂತ, ಸ್ವಾತಂತ್ರ್ಯದ ಹೋರಾಟದ ಬೆಂಕಿಗೆ ಹವಿಸ್ಸಾಗಿ ತನ್ನನ್ನು ಸಂಪೂರ್ಣವಾಗಿ ಸಮರ್ಪಣೆ ಮಾಡಿದ ಕಾರ್ನಾಡ್ ಸದಾಶಿವ ರಾವ್ (Karnad Sadashiva Rao) ಅವರ ಬಗ್ಗೆ ಕಾಮತರು ಬರೆದ ಪುಸ್ತಕ ಅದು! ಕಾರ್ನಾಡ್ ಸದಾಶಿವ ರಾವ್ ಅವರನ್ನು ‘ದಕ್ಷಿಣ ಭಾರತದ ಗಾಂಧಿ’ (Gandhi of South India) ಎಂದು ಇತಿಹಾಸವು ಕರೆದಿದೆ. ಅದು ನೂರಕ್ಕೆ ನೂರರಷ್ಟು ಸತ್ಯ.

ಅವರು ಜನಿಸಿದ್ದು ಕರಾವಳಿ ಜಿಲ್ಲೆಯ ಅತ್ಯಂತ ಪ್ರಸಿದ್ದ, ಹೆಸರಾಂತ ಮತ್ತು ಆಗರ್ಭ ಶ್ರೀಮಂತರ ಕುಟುಂಬದಲ್ಲಿ. (1881). ಮನೆಯ ತುಂಬ ಶ್ರೀಮಂತಿಕೆ ಕಾಲು ಮುರಿದು ಬಿದ್ದಿತ್ತು. ದಕ್ಷಿಣಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಕಾರ್ನಾಡು ಅವರ ಊರು. (Raja Marga)

ಮಂಗಳೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ ಅವರು ಮದ್ರಾಸಿನ ಅತ್ಯಂತ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಅದರ ನಂತರ ಮುಂಬೈಯಲ್ಲಿ ಕಾನೂನು ಪದವಿಯನ್ನು ಯಶಸ್ವೀ ಆಗಿ ಪಡೆದು ಅವರು ಮಂಗಳೂರಿನಲ್ಲಿ ವಕೀಲಿಕೆಯ ಪ್ರಾಕ್ಟೀಸ್ ಆರಂಭ ಮಾಡಿದರು.

ಆರಂಭದಲ್ಲಿ ಮಾಡಿದ್ದು ದಲಿತಪರ ಹೋರಾಟ

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಅವರು ಕುದ್ಮುಲ್ ರಂಗರಾಯರು ಮಂಗಳೂರಿನಲ್ಲಿ ಆರಂಭ ಮಾಡಿದ ‘ದಲಿತೋದ್ಧಾರ’ ಚಳುವಳಿಯಿಂದ ಪ್ರಭಾವಿತ ಆದರು. ತಮ್ಮ ಪುಸ್ತಕಗಳು, ಬಟ್ಟೆ, ಚೀಲ ಎಲ್ಲವನ್ನೂ ದಲಿತರಿಗೆ ಹಂಚಿ ಬಿಡುತ್ತಿದ್ದರು. ಆಗ ಮಂಗಳೂರಿನ ದೇರೆಬೈಲಿನಲ್ಲಿದ್ದ ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಲಿತರಿಗೆ ಒಂದು ವಸತಿ ಕಾಲನಿಯನ್ನು ಮಾಡಿ ಮನೆಗಳನ್ನು ಹಂಚಿದ್ದರು. ದಲಿತರ ಶಿಕ್ಷಣಕ್ಕೆ ಸಹಾಯ ಮಾಡಲು ‘ತಿಲಕ್ ವಿದ್ಯಾಲಯ’ ಎಂಬ ಶಾಲೆಯನ್ನು ಸ್ಥಾಪನೆ ಮಾಡಿದರು. ಮನೆಯ ಅಂಗಳಕ್ಕೆ ಬರಲು ಕೂಡ ಹೆದರುತ್ತಿದ್ದ ದಲಿತರನ್ನು ತನ್ನ ಮನೆಯ ಒಳಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಭೋಜನವನ್ನು ಬಡಿಸುತ್ತಿದ್ದರು. ಅವರ ಧರ್ಮಪತ್ನಿ ಶಾಂತಾಬಾಯಿ ಕೂಡ ಪತಿಯ ಎಲ್ಲಾ ಸೇವಾ ಕಾರ್ಯಗಳಲ್ಲಿ ತುಂಬು ರೀತಿ ಸಹಕಾರ ನೀಡಿದರು.

Karnad Sadashiva Rao

ದಲಿತರಿಗೆ ದೇವಸ್ಥಾನ ಪ್ರವೇಶ ಮತ್ತು ಮಹಿಳಾ ಸಬಲೀಕರಣ

ಗೋಕರ್ಣದಿಂದ ಆರಂಭಿಸಿ ಕೇರಳದವರೆಗೆ ಎಲ್ಲಾ ದೇವಸ್ಥಾನಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ನೀಡಲು ಅಂದಿನ ಸ್ವಾಮೀಜಿಯಿಂದ ಅನುಮತಿ ಪತ್ರವನ್ನು ಪಡೆದುಕೊಂಡು ಬಂದರು.

ಅದೇ ಹೊತ್ತಿಗೆ ಸಂತ್ರಸ್ತರಾದ ಮತ್ತು ತಮ್ಮ ಧ್ವನಿಯನ್ನು ಕಳೆದುಕೊಂಡ ಮಹಿಳೆಯರ ಪೂರ್ಣ ಪ್ರಮಾಣದ ಪ್ರಗತಿಯನ್ನು ಸಾಧಿಸಲು “ಮಹಿಳಾ ಸಭಾ” ಎಂಬ ಒಂದು ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಅವರು ಮತ್ತು ಅವರ ಪತ್ನಿ ಇಬ್ಬರೂ ಅಲ್ಲಿಗೆ ಬರುವ ಬಾಲ ವಿಧವೆಯರಿಗೆ ಮತ್ತು ಬಡ ಹೆಣ್ಣು ಮಕ್ಕಳಿಗೆ ನೂಲುವ ಮತ್ತು ನೇಯುವ ಕಲೆಯನ್ನು ಕಲಿಸಿ ಅವರನ್ನು ಸಂಪೂರ್ಣ ಸ್ವಾವಲಂಬಿಯಾಗಿ ಮಾಡುವ ಪ್ರಯತ್ನವನ್ನು ಮಾಡಿದರು.

ಗಾಂಧೀಜಿಯವರ ದಟ್ಟ ಪ್ರಭಾವ

ಅಷ್ಟು ಹೊತ್ತಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮಂಗಳೂರಿಗೆ ವ್ಯಾಪಿಸಿತ್ತು. ಆಗ ಮಹಾತ್ಮಾ ಗಾಂಧೀಜಿಯವರ ದಟ್ಟ ಪ್ರಭಾವಕ್ಕೆ ಕಾರ್ನಾಡರು ಒಳಗಾಗುತ್ತಾರೆ. ತನ್ನ ಮನೆಯಲ್ಲಿದ್ದ ಅಷ್ಟೂ ಬಂಗಾರ, ಆಭರಣ, ವಸ್ತ್ರಗಳು, ಧಾನ್ಯ ಎಲ್ಲವನ್ನೂ ಬಡವರಿಗೆ ದಾನ ಮಾಡಿದರು. ಪಿತ್ರಾರ್ಜಿತ ಆಗಿ ಬಂದ ತುಂಬಾ ಬೆಲೆ ಬಾಳುವ ಆಸ್ತಿ, ಜಮೀನು ಎಲ್ಲವನ್ನೂ ಬಡವರಿಗೆ ಉಚಿತವಾಗಿ ಹಂಚಿ ಬರಿಗೈ ಫಕೀರ ಆದರು.

ಪ್ರತೀ ಮನೆಯೂ ಕಾಂಗ್ರೆಸ್ ಮನೆ

ತಾವೇ ತಯಾರಿಸಿದ ಖಾದಿಯ ಬಟ್ಟೆಯನ್ನು ತೊಟ್ಟು ಕಾರ್ನಾಡರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದುಬಿಟ್ಟರು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. “ಪ್ರತೀ ಮನೆ ಕೂಡ ಕಾಂಗ್ರೆಸ್ ಮನೆ” ಇದು ಕಾರ್ನಾಡರ ಆ ಕಾಲದ ಜನಪ್ರಿಯ ಘೋಷಣೆ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ (ಆಗ ಉಡುಪಿ ಮತ್ತು ದಕ್ಷಿಣಕನ್ನಡ ಒಂದೇ ಜಿಲ್ಲೆಯಾಗಿತ್ತು) ಮತ್ತು ರಾಜ್ಯ ಉಪಾಧ್ಯಕ್ಷರಾಗಿ ಅವರದ್ದು ದೀರ್ಘ ಅವಧಿಗೆ ಸೇವೆ. ಅತ್ಯಂತ ಸರಳ ಮತ್ತು ಶಿಸ್ತುಬದ್ಧವಾದ ಜೀವನ. ಉಪ್ಪಿನ ಸತ್ಯಾಗ್ರಹ ನಡೆಸಿ ಅರೆಸ್ಟ್ ಆಗಿ ಕಠಿಣ ಜೈಲುವಾಸ ಕೂಡ ಅವರು ಅನುಭವಿಸಿದ್ದರು.

ಗಾಂಧಿ, ಕಸ್ತೂರ್ಬಾ, ನೆಹರೂ, ಶಾಸ್ತ್ರೀಜಿ ಮೊದಲಾದ ಕಾಂಗ್ರೆಸ್ ಹಿರಿಯ ನಾಯಕರು ಕರಾವಳಿಗೆ ಬಂದಾಗ ಕಾರ್ನಾಡರ ಮನೆಯಲ್ಲಿಯೇ ವಾಸ್ತವ್ಯ ಮತ್ತು ಆತಿಥ್ಯ ಪಡೆಯುತ್ತಿದ್ದರು. ಅವರ ಮನೆಯು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಧರ್ಮಛತ್ರವೆ ಆಗಿ ಹೋಗಿತ್ತು. ಅವರ ಪತ್ನಿ ಮನೆಗೆ ಎಷ್ಟು ಜನ ಅತಿಥಿಗಳು ಬಂದರೂ ಊಟ, ಉಪಚಾರವನ್ನು ಒಂದಿಷ್ಟು ದಣಿವು ಇಲ್ಲದೆ ಪೂರೈಕೆ ಮಾಡುತ್ತಿದ್ದರು.

ಕಾರ್ನಾಡರ ದುರಂತ ಅಂತ್ಯ

ಈ ರೀತಿಯ ಸಾವು ಯಾರಿಗೂ ಬರಬಾರದು. ದೇಶಭಕ್ತ ಕಾರ್ನಾಡ್ ಸದಾಶಿವ ರಾಯರ ಅಂತ್ಯ ಅತ್ಯಂತ ದಾರುಣ ಆಗಿತ್ತು. ಅವರ ಪತ್ನಿ, ಸಣ್ಣ ಮಗಳು ಅವರನ್ನು ಆಗಲಿದಾಗ ಅವರು ಒಂದು ಕ್ಷಣ ವಿಚಲಿತರಾಗಿ ಬಿಟ್ಟರು. ಬಹಳ ನೊಂದುಕೊಂಡರು. ಇದ್ದ ಎಲ್ಲ ಸಂಪತ್ತು ದಾನ ಮಾಡಿದ ಕಾರಣ ಕೈ ಖಾಲಿ ಆಗಿ ಬದುಕು ತುಂಬಾ ಕಷ್ಟ ಆಯಿತು. ಅಹಮದಾಬಾದ್ ತನಕ ಹೋಗಿ ಗಾಂಧೀಜಿಯವರ ಆಶ್ರಮದಲ್ಲಿ ಹಲವು ತಿಂಗಳು ಕಾಲ ಉಳಿದರು. ಗಾಂಧೀಜಿಯವರು ಅವರಿಗೆ ಧೈರ್ಯ ತುಂಬಿಸಿ ಮತ್ತೆ ಸ್ವಾತಂತ್ರ್ಯ ಹೋರಾಟಕ್ಕೆ ಅವರನ್ನು ಸಿದ್ಧಪಡಿಸಿದರು.

1937ರಲ್ಲಿ ಮುಂಬೈ ಮಹಾನಗರದಲ್ಲಿ ಕಾರ್ನಾಡರು ಕಾಂಗ್ರೆಸ್ ಅಧಿವೇಶನಕ್ಕೆ ಹೋಗಿದ್ದಾಗ ಆರೋಗ್ಯವು ತೀವ್ರವಾಗಿ ಕುಸಿಯಿತು. ಶಿವರಾಮ ಕಾರಂತರು ಆಗ ಅವರ ಜೊತೆಯಲ್ಲಿ ಇದ್ದರು.

Book on Karnad Sadashiva Rao

ಒಮ್ಮೆ ತುಂಬಾ ಹಸಿವಿನಿಂದ ಬಳಲುತ್ತಿದ್ದ ಹಾಗೂ ಜ್ವರದಲ್ಲಿ ಒದ್ದಾಡುತ್ತಿದ್ದ ಸದಾಶಿವರಾಯರು ಕಾರಂತರ ಬಳಿ ಸ್ವಲ್ಪ ದುಡ್ಡು ಸಾಲ ಕೇಳಿದರು. ಕಾರಂತರು ಗಟ್ಟಿ ಆಗಿ ನೆಗಾಡಿ “ನಿನಗೇನು ಮಾರಾಯಾ ಹಣಕಾಸು ತೊಂದ್ರೆ? ನಿನ್ನದು ಆಗರ್ಭ ಶ್ರೀಮಂತರ ಕುಟುಂಬ ಅಲ್ವಾ?” ಅಂದು ತಮಾಷೆ ಮಾಡಿದ್ದರು! ಕಾರಂತರಿಗೆ ಕಾರ್ನಾಡರ ಕಷ್ಟಗಳ ಬಗ್ಗೆ ಆಗ ಗೊತ್ತಿರಲಿಲ್ಲ.

ಮುಂಬೈಯ ಬಹು ತೀವ್ರವಾದ ಚಳಿಯಲ್ಲಿ ಬೆಳಿಗ್ಗೆ ಟೀ ಕುಡಿಯಲು ಕೂಡ ಹಣ ಇಲ್ಲದೆ ಸದಾಶಿವ ರಾಯರು ತಲೆ ತಿರುಗಿ ಬಿದ್ದ ಪ್ರಸಂಗವೂ ಹಲವು ಬಾರಿ ನಡೆದಿತ್ತು!

ಅದೇ ವರ್ಷ ಜನವರಿ 9ರಂದು ಅವರು ಆಸ್ಪತ್ರೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ದುರಂತವೆಂದರೆ ಅವರ ಅಂತ್ಯಕ್ರಿಯೆಗೆ ಕೂಡ ಹಣವಿಲ್ಲದ ಕಾರಣ ಅವರ ಮೂವರು ಗೆಳೆಯರು ಸೇರಿ ಅವರ ಅಪರ ಕರ್ಮಗಳನ್ನು ಸರಳವಾಗಿ ನಡೆಸಬೇಕಾಯಿತು!

ಅತ್ಯಂತ ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನ್ಮ ತಾಳಿದ, ಮಂಗಳೂರಿನಲ್ಲಿ ಬಹು ದೊಡ್ಡ ವಕೀಲರಾದ ಕಾರ್ನಾಡ್ ಸದಾಶಿವ ರಾಯರು ಎಷ್ಟು ವೈಭವದಲ್ಲಿ ಬೇಕಾದರೂ ಬದುಕಬಹುದಿತ್ತು. ಆದರೆ ರಾಷ್ಟ್ರಕ್ಕೆ ಸರ್ವಸ್ವವನ್ನೂ ಧಾರೆ ಎರೆದ ಅವರು ತೀರಿ ಹೋದಾಗ ತಮಗಾಗಿ ಬಿಡಿಗಾಸು ಕೂಡ ಉಳಿಸಿರಲಿಲ್ಲ. ಅವರು ಸಾಯುವ ಹೊತ್ತಲ್ಲಿ ಕೂಡ ಅವರ ಅಮ್ಮ ಬದುಕಿದ್ದು, ಮಗನ ದಾರಿ ಕಾಯುತ್ತಾ ಮಂಗಳೂರಿನಲ್ಲಿ ಕಣ್ಣೀರು ಸುರಿಸುತ್ತಿದ್ದರು.

ಇದನ್ನೂ ಓದಿ : Raja Marga Column : ಸುಧಾಮೂರ್ತಿ ಚೇಂಬರಿನಲ್ಲಿ ಟಾಟಾ ಅವರ ಫೋಟೊ ಯಾಕಿದೆ?

ಕಾರ್ನಾಡರನ್ನು ಭಾರತವು ಮರೆಯಲಿಲ್ಲ

ಅಮರರಾದ ನಂತರ ಕಾರ್ನಾಡರ ಹೆಸರಿನ ಒಂದು ಬಡಾವಣೆಯೇ ಬೆಂಗಳೂರಿನಲ್ಲಿ ನಿರ್ಮಾಣ ಆಗಿದೆ. ಮಂಗಳೂರಿನಲ್ಲಿ ಒಂದು ಪ್ರಮುಖ ರಸ್ತೆಗೆ (ಕೆ.ಎಸ್. ರಾವ್ ರಸ್ತೆ) ಅವರ ಹೆಸರಿಡಲಾಗಿದೆ. ಮೂಲ್ಕಿಯಲ್ಲಿ ಅವರ ಒಂದು ಬಹು ಸುಂದರವಾದ ಪ್ರತಿಮೆಯು ಅನಾವರಣ ಆಗಿದೆ. ಆದರೆ, ಈಗಿನ ಯಾವ ಕಾಲೇಜು ವಿದ್ಯಾರ್ಥಿಗಳನ್ನು ಕೇಳಿದರೂ ಕಾರ್ನಾಡರ ಬಗ್ಗೆ ಹೆಚ್ಚು ಗೊತ್ತಿಲ್ಲ ಅಂತಾರೆ.

ಕಾರಂತರು ಕಾರ್ನಾಡರನ್ನು ‘ಧರ್ಮರಾಜ’ ಎಂದು ಕರೆದರು. ಕಾರ್ನಾಡರು ಬದುಕಿದ ರೀತಿಯೇ ಹಾಗಿತ್ತು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಫೋಟೊಗಳು, ಸೆಲ್ಫಿಗಳು, ಮತ್ತು ರೀಲ್ಸ್‌ಗಳ ನಿಯಂತ್ರಣ

ಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್‌ ಪ್ರೊಫೈಲನ್ನು ಕಾಯ್ದುಕೊಳ್ಳಿ.

VISTARANEWS.COM


on

cyber security
Koo
cyber safty logo

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ನ ಅವಲಂಬನೆ ಮತ್ತು ಅದರಲ್ಲಿರುವ ಆ್ಯಪ್‌ಗಳನ್ನು ಮತ್ತು ಮಾಹಿತಿಯನ್ನು ವಿವಿಧ ರೀತಿಯ ಫಿಷಿಂಗ್‌ (Fishing) ದಾಳಿಗಳಿಂದ ಸುರಕ್ಷಿತಗೊಳಿಸುವುದರ ಬಗ್ಗೆ
‘ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?’ದಲ್ಲಿ ಹೇಳಿದ್ದೆ. ಇಂಟರ್ನೆಟ್ ನಮಗೆ ಎಲ್ಲೆಡೆ ಲಭ್ಯವಾಗುತ್ತಿರುವಾಗ ನಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳಿಗೆ ನಮ್ಮ ಮೊಬೈಲನ್ನೇ ಅವಲಂಬಿಸಿದ್ದೇವೆ. ಹಾಗಾಗಿ ನಿಮ್ಮ ಮೊಬೈಲಿನ ಸುರಕ್ಷತೆ ಹೆಚ್ಚಿಸಲು ವೈರಸ್ ಗುರುತಿಸುವ ಸಾಫ್ಟ್‌ವೇರ್‌(Anti-virus) ಬಳಸುವ ಬಗ್ಗೆ ತಿಳಿಸಿದ್ದೆ. ಮರೆತಿದ್ದರೆ ಮೇಲಿನ ಲಿಂಕ್ ಒತ್ತಿ ಪುನರಾವಲೋಕನ ಮಾಡಿ. ಕಳೆದ ವಾರ ನಿಮ್ಮ “ಸೋಶಿಯಲ್ ಮೀಡಿಯಾದಿಂದಲೇ ನಿಮ್ಮ ಸುರಕ್ಷತೆಗೆ ಅಪಾಯ!” ಲೇಖನದಲ್ಲಿ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಪ್‌ಲೋಡ್ ಆಗುತ್ತಿರುವ ನಿಮ್ಮ ಫೋಟೊಗಳು, ವೀಡಿಯೊಗಳು, ಸೆಲ್ಫಿಗಳು, ರೀಲ್ಸ್‌ಗಳನ್ನು ದುರ್ಮಾರ್ಗಿಗಳು ದುರುಪಯೋಗಿಸಿಕೊಂಡರೆ ಎನಾಗಬಹುದು ಎನ್ನುವುದರ ಬಗ್ಗೆ ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಜೊತೆಗೆ ಆಂಡ್ರಾಯಿಡ್ ಫೇಸ್ಬುಕ್ ಆ್ಯಪ್ ಬಳಸುತ್ತಿರುವವರು ತಮ್ಮ ಗೌಪ್ಯತೆಯನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ತಿಳಿಸಿದ್ದೆ.

ಇವತ್ತು ನಿಮ್ಮ ಇನ್ಸಸ್ಟಾಗ್ರಾಂ ಪೋಸ್ಟ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು, ನಿಮ್ಮ ಪೋಸ್ಟ್‌ಗಳಿಗೆ ಯಾರು ಕಾಮೆಂಟ್ ಮಾಡಬಹುದು ಮತ್ತು ನಿಮ್ಮನ್ನು ಯಾರು ಅನುಸರಿಸಬಹುದು ಎಂಬುದು ಇನ್‌ಸ್ಟಾಗ್ರಾಂ ಆ್ಯಪ್‌ನ ಸುರಕ್ಷತಾ ಸೆಟ್ಟಿಂಗಿನ ಮೇಲೆ ಅವಲಂಬಿತವಾಗಿದೆ. ನಿಮ್ಮಂದಿಗೆ ಇತರರು ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಸಹ ನೀವು ಸೆಟ್ಟಿಂಗಿನ ಮೂಲಕ ಮಿತಿಗೊಳಿಸಬಹುದು.

ಇನ್ಸಸ್ಟಾಗ್ರಾಂ ಸಹಾಯ ವಿಭಾಗದಲ್ಲಿ, ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಮಾಹಿತಿ ವಿಭಾಗದಲ್ಲಿ ಈ ಕೆಳಗಿನ ವಿಷಯಗಳನ್ನು ವಿವರಿಸಲಾಗಿದೆ.

ಮೊದಲನೆಯದಾಗಿ ನಿಮ್ಮ ಖಾತೆಯನ್ನು ‘ಖಾಸಗಿ’ ಅಥವಾ ‘ಸಾರ್ವಜನಿಕ’ವನ್ನಾಗಿಸುವುದು.

ನೀವು ಇನ್ಸಸ್ಟಾಗ್ರಾಂನಲ್ಲಿ ಖಾತೆ ತೆರೆದಾಗ (ಸೈನ್ ಅಪ್ ಮಾಡಿದಾಗ) ನೀವು 16 ವರ್ಷದೊಳಗಿನವರಾಗಿದ್ದರೆ, ಸಾರ್ವಜನಿಕ ಅಥವಾ ಖಾಸಗಿ ಖಾತೆಯ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಆದರೆ ಡೀಫಾಲ್ಟ್ ಆಯ್ಕೆ ಖಾಸಗಿ ಎಂದೇ ಇರುತ್ತದೆ.

ನೀವು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ Instagram ಖಾತೆಯು ಡಿಫಾಲ್ಟ್ ಆಗಿ ಸಾರ್ವಜನಿಕವಾಗಿರುತ್ತದೆ. ನಿಮ್ಮ ಖಾತೆಯನ್ನು ಯಾವುದೇ ಸಮಯದಲ್ಲಿ ಖಾಸಗಿಯಾಗಿ ಮಾಡಲು ನೀವು ಬಯಸಿದರೆ ಈ ಕೆಳಗಿನ ಕ್ರಮಗಳನ್ನು ನಿಮ್ಮ ಆ್ಯಪ್‌ನಲ್ಲಿ ಕೈಗೊಳ್ಳಿ. ಈ ಕ್ರಮಗಳು ಐಫೋನ್ ಮತ್ತು ಆಂಡ್ರಯಾಡ್‌ಗಳಲ್ಲಿನ ಇನ್‌ಸ್ಟಾಗ್ರಾಂ ಆ್ಯಪಿನಲ್ಲಿ ಬಹುತೇಕ ಒಂದೇ ರೀತಿಯಲ್ಲಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಬೆಳಕಿನ ಹಬ್ಬದ ಕರಾಳ ಮುಖ

ನಿಮ್ಮ ಫೋನಿನಲ್ಲಿ ಇನ್‌ಸ್ಟಾಗ್ರಾಂ ಆ್ಯಪನ್ನು ತೆರೆಯಿರಿ. ಇದರ ಮೇಲೆ ಕ್ಲಿಕ್ ಮಾಡಿ ಅದಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮಾಡಿ. ಅದರಲ್ಲಿ ನಿಮ್ಮ ಖಾತೆಯನ್ನು ಯಾರು ನೋಡಬಹುದು ಎನ್ನುವುದರ ಕೆಳಗೆ ಇರುವ ಅಕೌಂಟ್ ಗೌಪ್ಯತೆಯ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿ ನಿಮ್ಮ ಖಾತೆಯನ್ನು ಪ್ರೈವೇಟ್ ಮಾಡಿ. ನಂತರ ಪ್ರೈವೇಟಿಗೆ ಬದಲಾಗುವುದನ್ನು ಖಚಿತ ಪಡಿಸಿ.

ಹೀಗೆ ಸರವಾಗಿ ನಿಮ್ಮ ಗೌಪ್ಯತೆಯನ್ನು ಲಾಕ್ ಮಾಡಿಕೊಳ್ಳಬಹುದು. ನಿಮ್ಮ ಖಾತೆಯನ್ನು ನೀವು ಸಾರ್ವಜನಿಕವಾಗಿ ಇರಿಸಿಕೊಂಡು ಅದರ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

ಯಾರಾದರೂ ಮುಜುಗರವನ್ನುಂಟುಮಾಡುವಂತಹ ಫೋಟೊ ಅಥವಾ ವೀಡಿಯೊ ಶೇರ್ ಮಾಡಿದ್ದರೆ ಅವರನ್ನು ಅನ್‌ಫಾಲ್‌ ಮಾಡಬಹುದು. ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದರೆ ಅಥವಾ ಹೆದರಿಸುತ್ತಿದ್ದರೆ ನಿಮ್ಮ ಶಿಕ್ಷಕರ ಅಥವಾ ತಂದೆತಾಯಿಯ ಸಹಾಯ ಪಡೆಯಬಹದು. ಸೈಬರ್ ಕ್ರೈಮ್ ಇಂಟರ್‌ವೆಂಷನ್‌ ಆಫೀಸರ್‌ಗಳ ಸಹಾಯವನ್ನೂ ಪಡೆಯಬಹದು. ನಿಮ್ಮ ಫೋಟೊ ಮತ್ತು ರೀಲ್ಸ್‌ಗಳನ್ನು ಕ್ರಿಮಿನಲ್‌ಗಳು ದುರುಪಯೋಗಿಸದಂತೆ ಸುರಕ್ಷತೆಗೊಳಿಸಿಕೊಳ್ಳಿ. ಜಾಗರೂಕರಾಗಿ ನಿಮ್ಮ ಸೋಷಿಯಲ್‌ ಪ್ರೊಫೈಲನ್ನು ಕಾಯ್ದುಕೊಳ್ಳಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ‌ ತಡೆಯಲು ಕೆಲವು ಟಿಪ್ಸ್

Continue Reading

ಅಂಕಣ

Raja Marga Column : ಚೆನ್ನಾಗಿದ್ದ ಸಂಬಂಧಗಳು ಕೆಡೋದ್ಯಾಕೆ? ಇಲ್ಲಿವೆ 12 ಕಾರಣಗಳು

Raja Marga Column : ತುಂಬಾ ಚೆನ್ನಾಗಿರುತ್ತದೆ ಸಂಬಂಧ. ಆದರೆ, ಒಮ್ಮಿಂದೊಮ್ಮೆಗೆ ಹದಗೆಡುತ್ತದೆ. ಯಾಕೆ ಅಂತಾನೇ ಗೊತ್ತಾಗಲ್ಲ.. ಹೀಗೆ ಆಗುವುದಕ್ಕೆ ಕಾರಣ ಇಲ್ಲಿದೆ.

VISTARANEWS.COM


on

Healthy relationship
Koo
RAJAMARGA

ಉತ್ತಮ ಸಂಬಂಧವನ್ನು (Good Realationship) ಪ್ರತಿಯೊಬ್ಬರೂ ಹೊಂದಲು ಆಸೆ ಪಡುತ್ತಾರೆ. ಆರೋಗ್ಯಪೂರ್ಣ ಸಂಬಂಧಗಳು (Healthy Relationship) ನಮ್ಮೆಲ್ಲರ ಬದುಕನ್ನು ಸುಂದರವಾಗಿ ಮಾಡುತ್ತವೆ. ಆದರೆ ಒಂದು ಸದೃಢವಾದ ದೋಣಿಯಲ್ಲಿ ಸಣ್ಣ ಬಿರುಕು ಉಂಟಾದ ಹಾಗೆ, ಒಂದು ತೊಟ್ಟು ಹುಳಿಯು ಒಂದು ಪಾತ್ರೆ ಹಾಲನ್ನು ಕೆಡಿಸಿದ ಹಾಗೆ, ಒಂದು ಬಿಂದು ವಿಷವು ನಮ್ಮನ್ನು ಪೂರ್ತಿ ಸಾಯಿಸುವ ಹಾಗೆ ಒಮ್ಮೆ ಸಣ್ಣ ಅಪನಂಬಿಕೆಯು ಉಂಟಾದರೆ ಆ ಸಂಬಂಧಗಳು ನಿಧಾನವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದ ನಮ್ಮ ಬದುಕು ಅರ್ಥಹೀನ ಆಗುತ್ತದೆ. ಉತ್ತಮ ಸಂಬಂಧವನ್ನು ಕದಡುವ ಈ ಕೆಳಗಿನ ಅಂಶಗಳು ನಮ್ಮ ಗಮನದಲ್ಲಿ ಇರಲಿ (Raja Marga Column).

1. ಫೇಕ್ ವ್ಯಕ್ತಿತ್ವ ಸಂಬಂಧಗಳಿಗೆ ಕೊಡಲಿ ಏಟು (Fake Personality)

ನಮ್ಮ ನಡೆ, ನುಡಿಯಲ್ಲಿ ಅಗಾಧವಾದ ವ್ಯತ್ಯಾಸಗಳು ನಮ್ಮ ಸಂಬಂಧಗಳಿಗೆ ಕೊಡಲಿಯ ಏಟು ಆಗುತ್ತವೆ. ನಮ್ಮ ನಡೆ, ನುಡಿ ಮತ್ತು ಭಾವನೆಗಳು ಒಂದೇ ಆಗಿಸುವ ಪ್ರಯತ್ನವನ್ನು ಮಾಡಿ ನೋಡಿ. ಅದೆಷ್ಟು ಕಷ್ಟ ಎಂದು ನಮ್ಮ ಗಮನಕ್ಕೆ ಬರುತ್ತವೆ. ಮುಖವಾಡ ಹಾಕಿದ ಬದುಕು ದೀರ್ಘ ಕಾಲ ಉಳಿಯಲು ಸಾಧ್ಯವೇ ಇಲ್ಲ!

Relationships

2. ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯ ಮಾಡ್ತೀರಾ? (Irresponsible Behaviour)

ತನ್ನ ಪ್ರೀತಿ ಪಾತ್ರರನ್ನು ಪದೇಪದೆ ನಿರ್ಲಕ್ಷ್ಯ ಮಾಡುವ, ಅವರ ಭಾವನೆಗಳನ್ನು ಅವಗಣನೆ ಮಾಡುವ ನಮ್ಮ ವರ್ತನೆಗಳು ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಿಸುವ ಕೆಲಸವೂ ತುಂಬಾ ಮುಖ್ಯ. ಈ ವಿಷಯದಲ್ಲಿ ಮೈ ಮರೆವು ಖಂಡಿತ ಸಮರ್ಥನೀಯ ಅಲ್ಲ!

3. ವಿಪರೀತವಾದ ಇಗೋವನ್ನು ಯಾರು ಒಪ್ತಾರೆ? (Ego kills relationship)

ಊಟದ ರುಚಿಗೆ ತಕ್ಕ ಉಪ್ಪು ಇರುವ ಹಾಗೆ ಇಗೋ ಇಲ್ಲದೆ ನಾವ್ಯಾರೂ ಬದುಕಲು ಸಾಧ್ಯ ಇಲ್ಲ. ಆದರೆ ಬೇರೆ ಯಾರನ್ನೂ ಒಪ್ಪದೇ ಇರುವ ಮನಸ್ಥಿತಿಯು ತುಂಬಾ ಅಪಾಯಕಾರಿ. ನಾನು ಹೇಳಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಮೈಂಡ್ ಸೆಟ್ ನಮ್ಮನ್ನು ಅಪಾಯದ ಅಂಚಿಗೆ ದೂಡಬಲ್ಲದು.

Relationship

4. ಸಂಬಂಧಗಳ ಅಸ್ಪಷ್ಟತೆ ಗೊಂದಲಕ್ಕೆ ತಳ್ಳುತ್ತದೆ (Conflict in relationship)

ನಾವು ಯಾರ ಜೊತೆಗಾದರೂ ಎರಡೇ ರೀತಿಯ ಸಂಬಂಧ ಹೊಂದಿರುವುದು ಸಾಧ್ಯ ಇದೆ. ಒಂದು ಆಫಿಷಿಯಲ್ ಮತ್ತು ಇನ್ನೊಂದು ಭಾವನಾತ್ಮಕ! ಯಾರ ಜೊತೆ ಯಾವ ಸಂದರ್ಭದಲ್ಲೆಲ್ಲಾ ಆಫಿಶಿಯಲ್ ಆಗಿರಬೇಕು ಮತ್ತು ಯಾವ ಸಂದರ್ಭದಲ್ಲಿ ಎಮೋಷನಲ್ ಆಗಿರಬೇಕು ಎಂದು ನಿರ್ಧಾರ ಮಾಡುವವರು ನಾವೇ! ಇಲ್ಲಿ ಎಡವಿದರೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ.

5. ತಪ್ಪುಗಳ ಸಮರ್ಥನೆ ಮಾಡುವುದು ಡೇಂಜರ್‌ (Mistakes and argument)

ತಪ್ಪು ಮಾಡುವುದು ಅತ್ಯಂತ ಸಹಜ. ತಪ್ಪನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥನೆ ಮಾಡಲು ಹೊರಡುವುದು ಅಥವಾ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು ಅಥವಾ ತಪ್ಪುಗಳನ್ನು ರಿಪೀಟ್ ಮಾಡುವುದು ನಮ್ಮ ಸಂಬಂಧಗಳನ್ನು ತೇಪೆ ಹಾಕಲೂ ಆಗದಷ್ಟು ಕೆಡಿಸಿಬಿಡುತ್ತವೆ. ಒಮ್ಮೆ ಕ್ಷಮೆಯನ್ನು ಕೇಳುವುದರಿಂದ ನಮ್ಮ ಸಂಬಂಧಗಳು ಉಳಿಯುತ್ತವೆ ಅಂತಾದರೆ ನಾನು ತಪ್ಪು ಮಾಡದಿದ್ದರೂ ಎಷ್ಟೋ ಬಾರಿ ಸಾರಿ ಕೇಳಿ ನಮ್ಮ ಸಂಬಂಧ ಉಳಿಸಿಕೊಂಡಿದ್ದೇನೆ.

relationship meter

6. ವಿಪರೀತ ಮೋಹ ಮತ್ತು ಅವಲಂಬನೆ ಬೇಕಾ? (Over Possessiveness)

ತಾನು ಪ್ರೀತಿಸುವವರು ತನ್ನನ್ನು ಮಾತ್ರ ಪ್ರೀತಿಸಬೇಕು ಎನ್ನುವ ಮೋಹ ಮತ್ತು ಭಾವನಾತ್ಮಕ ಅವಲಂಬನೆಯು ನಮ್ಮ ಸಂಬಂಧಗಳಿಗೆ ಅಪಾಯಕಾರಿ. ವಿಪರೀತ ಎನಿಸುವ ಅವಲಂಬನೆಯು ನಮ್ಮನ್ನು ದೂರ ಮಾಡುತ್ತದೆ.

7. ಕೃತಘ್ನತೆಯಿಂದ ಬೀಳುತ್ತೆ ಹೊಡೆತ (Ingratitude perosonality)

ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಹಾಯ ಮಾಡಿದವರು ಮತ್ತು ಕೊಡುಗೆಗಳನ್ನು ನೀಡಿದವರು ನಮ್ಮ ಭಾವಕೋಶದಲ್ಲಿ ಶಾಶ್ವತ ಸ್ಥಾನ ಪಡೆಯಬೇಕು. ನಮಗೆ ಐದು ನಿಮಿಷ ಹ್ಯಾಪಿನೆಸನ್ನು ಕೊಟ್ಟವರು ಕೂಡ ನಮ್ಮ ಪ್ರೀತಿಯ ಹಕ್ಕುದಾರರು ಆಗಿರಬೇಕು. ಅಂತವರನ್ನು ಮರೆತರೆ ಸಂಬಂಧ ಬಿರುಕು ಬಿಡುವುದು ಖಂಡಿತ.

8. ಪದೇಪದೆ ಬದಲಾಗುವ ನಿಷ್ಠೆಯಿಂದ ಅಪಾಯ (Loyalty must)

ನಮ್ಮ ಆದ್ಯತೆಗಳು ಪದೇಪದೆ ಬದಲಾಗುತ್ತ ಹೋದಂತೆ ನಮ್ಮ ಸಂಬಂಧಗಳ ಒಳಗೆ ಒಡಕು ಉಂಟಾಗಬಹುದು. ತುಂಬಾ ಪ್ರೀತಿಪಾತ್ರರಿಗೆ ನಾವು ಕೊಡುವ ಸಮಯ, ಪ್ರೀತಿ ಮತ್ತು ಭಾವನೆಗಳಲ್ಲಿ ಕೊರತೆ ಉಂಟಾದಾಗ ಉತ್ತಮ ಸಂಬಂಧಗಳು ನಮ್ಮಿಂದ ದೂರ ಆಗುತ್ತವೆ.

Relationship problems

9. ಸಂವಹನದ ಕೊರತೆ ಮಾಡಿಕೊಳ್ಳಬೇಡಿ (Communication problem)

ನಮ್ಮಲ್ಲಿ ಎಷ್ಟೋ ತಪ್ಪು ಕಲ್ಪನೆ ಉಂಟಾಗಲು ಕಾರಣ ಸಂವಹನದ ಕೊರತೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ಉತ್ತಮ ಸಂವಹನ ನಡೆಯದೆ ಹೋದರೆ ತಪ್ಪು ಕಲ್ಪನೆಗಳು ಉಂಟಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಳ್ಳುತ್ತವೆ. ಪ್ರೀತಿ ಪಾತ್ರರೊಂದಿಗೆ ಮನಸು ಬಿಚ್ಚಿ ಮಾತಾಡುವ ಸಮಯ ಮತ್ತು ಸಂದರ್ಭಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು.

10. ಸುಳ್ಳು ಹೇಳಿದರೆ ಸಾವಿರ ಸಂಕಷ್ಟ (Lies prove dangerous)

ಪದೇಪದೆ ಸುಳ್ಳು ಹೇಳುವವರಿಗೆ ಹೆಚ್ಚು ಮೆಮೊರಿಯ ಪವರ್ ಇರಬೇಕು ಅನ್ನುತ್ತದೆ ಒಂದು ಚೈನೀಸ್ ಗಾದೆ! ಒಂದೆರಡು ಸುಳ್ಳುಗಳು ನಮ್ಮನ್ನು ಆ ಕಾಲಕ್ಕೆ ಸೇಫ್ ಮಾಡಬಹುದು. ಆದರೆ ಮುಂದೆ ಅದೇ ಸುಳ್ಳುಗಳು ಬಯಲಾಗುತ್ತ ಹೋದಂತೆ ನಮ್ಮ ವಿಶ್ವಾಸಾರ್ಹತೆಯು ಕಡಿಮೆ ಆಗುತ್ತದೆ. ನಾವು ಸವಕಲು ನಾಣ್ಯ ಆಗಿಬಿಡುತ್ತೇವೆ.

11. ವಿಪರೀತ ಸಿಟ್ಟು ಮತ್ತು ಸಿಡುಕುವುದು (Anger Management)

ಸಿಟ್ಟು ಎಷ್ಟೋ ಬಾರಿ ಒಳ್ಳೆಯ ಉದ್ದೇಶಕ್ಕೆ ಬಂದರೂ ಕೆಟ್ಟದಾದ ಪರಿಣಾಮವನ್ನು ಬಿಟ್ಟು ಹೋಗುತ್ತದೆ. ನಮ್ಮ ಪ್ರೀತಿ ನಿಜ ಎಂದಾದರೆ, ನಮ್ಮಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಎಂದಾದರೆ, ನಾವು ಅವರ ಸ್ಥಳದಲ್ಲಿ ಕುಳಿತು ಯೋಚನೆ ಮಾಡುತ್ತೇವೆ ಅಂತಾದರೆ ನಮಗೆ ಸಿಟ್ಟು ಬರಲು ಸಾಧ್ಯವೇ ಇಲ್ಲ!

ಇದನ್ನೂ ಓದಿ: Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ

12. ವಿಪರೀತವಾದ ನಿರೀಕ್ಷೆ ಇಟ್ಟುಕೊಳ್ತೀರಾ? (Over Expectations)

ನಮ್ಮ ಪ್ರೀತಿಯ ವ್ಯಕ್ತಿಗಳ ಬಗ್ಗೆ ನಮ್ಮ ಅತಿಯಾದ ನಿರೀಕ್ಷೆಗಳು ಎಲ್ಲ ಬಣ್ಣ ಮಸಿ ನುಂಗಲು ಕಾರಣ ಆಗುತ್ತದೆ. ನಾವು ನಿರೀಕ್ಷೆ ಮಾಡಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಹಠ ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ಬದಲಾವಣೆ ಮಾಡಲು ಹೋಗದೆ ಹಾಗೆಯೇ ಪ್ರೀತಿಸುವುದು ಉತ್ತಮ ನಿರ್ಧಾರ. ನಮ್ಮದಾದ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರುವುದು ಖಂಡಿತ ಸರಿ ಅಲ್ಲ.

ಉತ್ತಮವಾದ ಆರೋಗ್ಯಪೂರ್ಣ ಸಂಬಂಧಗಳು ನಮ್ಮನ್ನು ಖಂಡಿತವಾಗಿ ಬೆಳೆಸುತ್ತವೆ ಅನ್ನುವುದು ನೂರಕ್ಕೆ ನೂರು ನಿಜ. ನಮ್ಮನ್ನು ಪ್ರೀತಿ ಮಾಡುವವರ ಬಗ್ಗೆ ಸ್ವಾರ್ಥ ಇಲ್ಲದ ಪ್ರೀತಿ, ಒಂದು ಹಿಡಿಯಷ್ಟು ಕಾಳಜಿ, ಸದಾ ಜಾಗೃತವಾದ ನಂಬಿಕೆ ಮತ್ತು ಅವುಗಳ ಜೊತೆಗೆ ಒಂದಿಷ್ಟು ಕೊರತೆ ಆಗದ ಗೌರವವೂ ಇದ್ದರೆ ನಮಗೆ ಅಪರಿಮಿತವಾದ ಯಶಸ್ಸು ದೊರೆಯುವುದು ಖಂಡಿತ. ಏನಂತೀರಿ?

ಈ ಲೇಖನದ ಬಗ್ಗೆ ನಿಮಗೆ ಏನನಿಸುತ್ತದೆ? ಕಮೆಂಟ್‌ ಮಾಡಿ ತಿಳಿಸಿ

Continue Reading

ಅಂಕಣ

ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!

ಎನ್‌ಇಪಿ (NEP) ಹಾಗೂ ರಾಜಕೀಯ ಪ್ರತಿಷ್ಠೆಗಾಗಿ ತರಲಾಗುತ್ತಿರುವ ಎಸ್‌ಇಪಿಗಳ (SEP) ನಡುವಿನ ಸಮರದಲ್ಲಿ ಬಡವಾಗುವವರು ರಾಜ್ಯದ ಬಡ, ಸರ್ಕಾರಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು. ಇದು ಕನ್ನಡ ಶಾಲೆಗಳನ್ನು ಉಳಿಸುವ ದಾರಿಯೂ ಅಲ್ಲ.

VISTARANEWS.COM


on

kannada school
Koo
Vistara Column @ Hariprakash Konemane

ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…!

ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲೆಂದೇ ಈ ಯೋಜನೆಗಳು ವಿನ್ಯಾಸಗೊಂಡಿವೆ. ಶಿಕ್ಷಣ ಹಕ್ಕೂ (Education right) ಕೂಡ ಜಾರಿಯಾಗಿ ದಶಕಗಳೇ ಸಂದಿವೆ. ಆದರೂ ಉನ್ನತ ಶಿಕ್ಷಣದ ದಾಖಲಾತಿಯ ಸರಾಸರಿ ಪ್ರಮಾಣ ನಿರೀಕ್ಷಿಸಿದಷ್ಟು ಹೆಚ್ಚುತ್ತಿ,ಲ್ಲ. ಹಾಗಾಗಿ ಶಿಕ್ಷಣದ ವ್ಯವಸ್ಥೆ ತಳ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಸಹಕಾರಿಯಾಗಿಲ್ಲ ಎಂಬುದು ಇನ್ನೂ ಕೆಲವರು ಮುಂದಿಡುವ ಕೊರಗು. ಒಂದಿಷ್ಟು ಮಂದಿಯಂತೂ, ನಮ್ಮ ರ್ಯಾಂಕ್‌ಗಳನ್ನೇ ಗೇಲಿ ಮಾಡುವುದುಂಟು. “ರ್ಯಾಂಕ್ ಬಂದ ಮಕ್ಕಳು ಅಗ್ರ ಶ್ರೇಯಾಂಕಿತರೇ ಹೊರತು ಬುದ್ಧಿವಂತರಲ್ಲ, ಕೌಶಲಿಗಳೂ ಅಲ್ಲ!” ಎಂದು ಮೂಗು ಮುರಿಯುತ್ತಾರೆ.

ಅಂದರೆ ಏನು? ಈಗಿನ ನಮ್ಮ ಶಿಕ್ಷಣದಲ್ಲಿ ಏನೋ ಸಮಸ್ಯೆ ಇದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಮೊದಲನೆಯದಾಗಿ ಶಿಕ್ಷಣದ ಗುಣಮಟ್ಟ ಸರಿಯಿಲ್ಲ. ಎರಡನೆಯದಾಗಿ, ಗುಣಮಟ್ಟದ ಶಿಕ್ಷಣವು ಬಡವರ ಕೈಗೆ ಸಿಗುತ್ತಿಲ್ಲ. ಮೂರನೆಯದಾಗಿ, ಈ ಶಿಕ್ಷಣವು ವಿದ್ಯಾರ್ಥಿಗಳನ್ನು ಮಕ್ಕಿ ಕಾ ಮಕ್ಕಿ ಗಿರಾಕಿಗಳನ್ನಾಗಿ ಮಾಡಿದೆಯೇ ಹೊರತು ಜ್ಞಾನವಂತರನ್ನಾಗಿ ಅಲ್ಲ. ಇದೆಲ್ಲವೂ ಅನೇಕರು ಒಪ್ಪುವ ಮಾತು. ಇದೇ ಕಾರಣಕ್ಕೆ, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.

ಭಾರತದಲ್ಲಿ 34 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National education policy) ಜಾರಿಗೆ ತರಲಾಗಿದೆ. ನೆನಪಿರಲಿ, ಈ ಮೂರೂವರೆ ದಶಕದಲ್ಲಿ ಶರವೇಗದಲ್ಲಿ ಬದಲಾಗಿದೆ (2000ರ ಹಿಂದಿನ ಸಾವಿರಾರು ವರ್ಗಗಳಲ್ಲಿ ಘಟಿಸದ ಬದಲಾವಣೆಯ ವೇಗದ ಪ್ರಮಾಣ, ಆ ನಂತರದ ಎರಡೂವರೆ ದಶಕದ ಅವಧಿಯಲ್ಲಿ ಸಾವಿರ ಪಟ್ಟು ಹೆಚ್ಚಿದೆ ಎಂಬ ಮಾತಿದೆ). ಬದಲಾಗದೇ ಉಳಿದಿದ್ದು ನಮ್ಮ ಅಧಿಕೃತ ಶಿಕ್ಷಣ ನೀತಿ. ಇದೇ ಇರಲಿ, ಈ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿ ಮಾಡಿದೆಯೇ? ಹಾಗೇನೂ ಇಲ್ಲ. 2015 ಫೆಬ್ರವರಿಯಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿ ನಡೆಸಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ಘೋಷಿಸಿದ್ದರು. ಭಾರತದ ಶಿಕ್ಷಣಕ್ಕೆ ಸಂಬಂಧಿಸಿದ 39 ಅಂಶಗಳನ್ನು ಜನರ ಮುಂದೆ ಇಡುತ್ತಿದ್ದೇವೆ, ದೇಶದ ಎಲ್ಲ ಜನರೂ ಇದಕ್ಕೆ ಸಲಹೆ ಕೊಡಬೇಕು, ಅದೆಲ್ಲದರ ಆಧಾರದಲ್ಲಿ ಶಿಕ್ಷಣ ನೀತಿ ರೂಪಿಸುತ್ತೇನೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ನಂತರ ಐದು ವರ್ಷ ವಿಚಾರ ಮಂಥನ ನಡೆಸಲಾಗಿದೆ.

ಬಹುಶಃ ಜಗತ್ತಿನಲ್ಲಿ ಯಾವುದೇ ಶಿಕ್ಷಣ ನೀತಿ ರೂಪಿಸುವಾಗ ಇಷ್ಟು ಪ್ರಮಾಣದ ಚರ್ಚೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ನಡೆದಿಲ್ಲ. ದೇಶದ 30 ಕೋಟಿ ಜನರ ಬಳಿಗೆ ಇದನ್ನು ಕೊಂಡೊಯ್ಯಲಾಗಿದೆ. ಹರಿದು ಬಂದ 2 ಲಕ್ಷಕ್ಕಿಂತ ಅಧಿಕ ಸಲಹೆಗಳನ್ನು ಸೇರಿಸಿದ್ದರೆ, ಅದರ ಒಟ್ಟು ಪುಟಗಳ ಸಂಖ್ಯೆ 50 ಸಾವಿರ ದಾಟುತ್ತಿತ್ತು. ನಿವೃತ್ತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಸಮಿತಿ ಇದೆಲ್ಲವನ್ನೂ ದತ್ತಾಂಶ ರೂಪಕ್ಕೆ ಇಳಿಸಿಕೊಂಡು ಎಲ್ಲವನ್ನೂ ಅಧ್ಯಯನ ಮಾಡಿ ಕರಡು ನೀತಿಯೊಂದನ್ನು ರೂಪಿಸಿತು. ಬಳಿಕ ಮತ್ತೆ ಸಾರ್ವಜನಿಕರ ಚರ್ಚೆಗೆ ಬಿಡಲಾಯಿತು. ಅಲ್ಲಿಂದ ಬಂದ ಸಲಹೆಗಳನ್ನೂ ಅಳವಡಿಸಿ ಕೊನೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಘೋಷಣೆ ಮಾಡಲಾಯಿತು.

ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಇರುವ ಪ್ರಮುಖ ದೂರು ಯಾವುದು? ಅವರು ಮುಖ್ಯವಾಗಿ ಇರುವುದೇ ನೀತಿ ನಿರೂಪಣೆ ಮಾಡಲು. ಆದರೆ ಸಂಸತ್ತಿನಲ್ಲಿ ಕಾನೂನು ರಚನೆ, ತಿದ್ದುಪಡಿಯಂತಹ ಶಾಸನ ರಚನಾ ಕೆಲಸಕ್ಕೆ ಅವರ ಬಳಿ ಸಮಯವೇ ಇರುವುದಿಲ್ಲ. ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪ ಮಾಡಿಕೊಂಡಿರುತ್ತಾರೆ ಎನ್ನುವುದು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅತ್ಯಂತ ವಿಸ್ತೃತವಾದ ಚರ್ಚೆ, ಸಾರ್ವಜನಿಕ ಸಹಭಾಗಿತ್ವ ನಡೆಸಲಾಗಿದೆ. ಆದರೂ ಕೇಂದ್ರದಲ್ಲಿ ಪ್ರತಿಪಕ್ಷಗಳು ಹಾಗೂ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಮಾತನಾಡುತ್ತಿದೆ.

kids study

ಕರ್ನಾಟಕದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಶಿಕ್ಷಣ ನೀತಿ ಜಾರಿ (state education policy) ಮಾಡುವುದಾಗಿಯೂ ಘೊಷಣೆ ಮಾಡಲಾಗಿದೆ. ಇದಕ್ಕಾಗಿ ಸಮಿತಿಯನ್ನೂ ರಚಿಸಿ ಮೊದಲ ಸಭೆಯೂ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎನ್ನುವುದು ಸಚಿವರ ಹಾಗೂ ಸ್ವತಃ ಮುಖ್ಯಮಂತ್ರಿಗಳ ವಾದ. ಎಲ್ಲಿ ಅನ್ಯಾಯವಾಗುತ್ತದೆ ಎಂದು ಕೇಳಿದರೆ, ಇದರಲ್ಲಿ ಹಿಂದುತ್ವ ಹೇರುವ ಪಠ್ಯವಿದೆ, ನಾವು ಸಮಾನತೆಯನ್ನು ಸಾರುವ ಪಠ್ಯ ರೂಪಿಸುತ್ತೇವೆ ಎನ್ನುತ್ತಾರೆ. ಅಸಲಿಗೆ ಇವರಿಗೆಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎನ್ನುವುದೇ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ಈ ರೀತಿ ನಟಿಸುತ್ತಿದ್ದಾರೆ. ಏಕೆಂದರೆ ʼನೀತಿʼಗೂ ʼಪಠ್ಯʼಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೀತಿ ಎನ್ನುವುದು ಒಟ್ಟಾರೆ ಶಿಕ್ಷಣದ ವ್ಯವಸ್ಥೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ, ಭಾಷಾ ದೃಷ್ಟಿಕೋನ, ವಿಜ್ಞಾನದ ಕುರಿತು ದೃಷ್ಟಿಕೋನ, ಸಂಶೋಧನೆಗೆ ನೀಡುವ ಒತ್ತು, ಮೂಲಸೌಕರ್ಯ ಸೇರಿ ಅನೇಕ ವಿಚಾರಗಳಲ್ಲಿ ಇರುತ್ತದೆ. ಹೆಚ್ಚೆಂದರೆ ದೇಶದ ಘನತೆ, ಸಾರ್ವಭೌಮತೆ, ಗಣತಂತ್ರದ ಮಹತ್ವ ಸಾರುವ ಪಠ್ಯ ಸೇರಿಸಬೇಕು ಎಂದಿರಬಹುದೇ ಹೊರತು, ಇಂಥದ್ದೇ ಪಠ್ಯವನ್ನು ಸೇರಿಸಿ ಎಂದಿರುವುದಿಲ್ಲ. ಇದನ್ನೇ ಹಿಂದುತ್ವ, ಕೇಸರೀಕರಣ ಎನ್ನುವುದು ಸರಿಯಲ್ಲ. ವಾಸ್ತವವಾಗಿ ಶಿಕ್ಷಣ ನೀತಿ, ಪಠ್ಯ ಹೇಗಿರಬೇಕು ಎಂಬುದನ್ನು ಹೇಳಿದಿಯೇ ಹೊರತು, ಯಾವುದಿರಬೇಕು ಎಂಬುದನ್ನು ಹೇಳುವುದಿಲ್ಲ. ಇದನ್ನು ನಿರ್ಧಾರ ಮಾಡುವುದು ಆಯಾ ರಾಜ್ಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು. ಹಾಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಸರೀಕರಣದ ಪ್ರಯತ್ನ ಎನ್ನುವುದು ಒಪ್ಪುವ ಮಾತಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಸಾಮಾನ್ಯವಾಗಿ ಪೋಷಕರ ಮನೋಭಾವವನ್ನು ನೋಡೋಣ. ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿಸಬೇಕು ಎಂಬ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಸೋಲಾಗಿ, ಶಿಕ್ಷಣ ಮಾಧ್ಯಮ ಯಾವುದು ಎನ್ನುವುದನ್ನು ಪೋಷಕರು ನಿರ್ಧರಿಸಬೇಕೆ ವಿನಃ ಸರ್ಕಾರವಲ್ಲ ಎಂದು ತೀರ್ಪು ಬಂದಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಕನ್ನಡ ಅಭಿಮಾನ ಇಲ್ಲ ಎಂದು ಅರ್ಥವೇ? ತಮ್ಮ ಮಕ್ಕಳು ದೇಶದ ಮಟ್ಟದಲ್ಲಿ, ವಿಶ್ವದ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಿದ್ಧವಾಗಬೇಕು ಎನ್ನುವುದು ಎಲ್ಲ ಪೋಷಕರ ಆಸೆ, ಅದು ಸಹಜವೂ ಹೌದು. ಕನ್ನಡದಲ್ಲಿ ಓದಿದರೆ ಅವಕಾಶಗಳು ಕಡಿಮೆ ಎನ್ನುವುದು ಅವರ ಅನಿಸಿಕೆ. ಅವರ ಅನಿಸಿಕೆ ಸರಿಯೋ ತಪ್ಪೋ ಎನ್ನುವುದು ಬೇರೆ ಚರ್ಚೆಯ ವಿಷಯ. ಆದರೆ ತಮ್ಮ ಮಕ್ಕಳು ಉನ್ನತ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬೇಕು ಎನ್ನುವುದು ಪೋಷಕರ ಆಸೆ.

kids playing in school

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿವಿಧ ರಾಜ್ಯಗಳು ಅನುಷ್ಠಾನ ಮಾಡುತ್ತವೆ. ಹಾಗೂ ವಿಶ್ವವಿದ್ಯಾಲಯಗಳಲ್ಲೂ ಜಾರಿ ಮಾಡಲಾಗುತ್ತದೆ. ಅಲ್ಲಿನ ಬೋಧನಾ ಪದ್ಧತಿ, ಪರೀಕ್ಷೆ, ಮೌಲ್ಯಮಾಪನ, ಅಂಕನೀಡಿಕೆಗಳು ಇದೀಗ ವಿಶ್ವದ ಮಟ್ಟದಲ್ಲಿ ಇರುವ ವ್ಯವಸ್ಥೆಗೆ ಅನುಗುಣವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಾಲ್ಕು ವರ್ಷದ ಪದವಿ ಇದೆ. ಆದರೆ ಭಾರತದಲ್ಲಿ ಮಾತ್ರ ಮೂರು ವರ್ಷದ ಪದವಿ ಕೋರ್ಸ್‌ಗಳಿವೆ. ವಿದೇಶಿ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಈಗಾಗಲೆ ಅದು ಸಮಸ್ಯೆಯಾಗುತ್ತಿದೆ. ಮೂರು ವರ್ಷ ಪದವಿಯನ್ನು ಪದವಿ ಎಂದೇ ಅನೇಕ ದೇಶಗಳು ಪರಿಗಣಿಸದೇ ಇರುವುದರಿಂದ, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಲು ಅಡ್ಡಿಯಾಗುತ್ತಿದೆ. ಹಾಗಾಗಿ ಎನ್ಇಪಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಪ್ರಸ್ತಾಪಿಸಲಾಗಿದೆ. ಇದೇನೂ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಕೋರ್ಸ್‌ನ ಯಾವುದೇ ವರ್ಷ ಹೊರನಡೆಯಬಹುದು. ಆಯಾ ವರ್ಷಕ್ಕೆ ಅನುಗುಣವಾಗಿ ಪ್ರಮಾಣಪತ್ರ, ಡಿಪ್ಲೊಮಾ ಮುಂತಾದ ಮಾನ್ಯತೆಯನ್ನು ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡಬೇಕು, ವಿದೇಶಕ್ಕೆ ತೆರಳಬೇಕು ಎನ್ನುವುವವರು ನಾಲ್ಕು ವರ್ಷ ಪೂರೈಸುತ್ತಾರೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌!

ಎಸ್ಇಪಿ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಒಂದು ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ಶಿಫಾರಸಿನಂತೆ ಎನ್ಇಪಿ ಜಾರಿಯನ್ನು ಮಾಡುವುದರಿಂದ ರಾಜ್ಯ ಸರ್ಕಾರ ಹಿಂತೆಗೆಯಿತು ಎಂದೇ ಭಾವಿಸಿಕೊಳ್ಳೋಣ. ಇದು ಯಾರಿಗೆ ಅನ್ವಯವಾಗುತ್ತದೆ? ಸರ್ಕಾರದ ನಿಯಂತ್ರಣದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರದ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಅಷ್ಟೆ. ಈಗಂತೂ ರಾಜ್ಯದಲ್ಲಿ ಸರ್ಕಾರದಷ್ಟೇ, ಉನ್ನತ ಶಿಕ್ಷಣದಲ್ಲಿ ಸರ್ಕಾರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಗಳು ಸೆಳೆಯುತ್ತಿವೆ. ರಾಜ್ಯದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲ್ಪಡುವ ಖಾಸಗಿ ವಿವಿಗಳು, ಡೀಮ್ಡ್ ವಿವಿಗಳಿಗೆ ಎಸ್ಇಪಿ ಅನ್ವಯವೇ ಆಗುವುದಿಲ್ಲ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಇರುವ ಖಾಸಗಿ ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮಗಳಿಗೆ ಎಸ್ಇಪಿ ಅನ್ವಯ ಆಗುವುದಿಲ್ಲ. ಜಿಲ್ಲೆಗೊಂದರಂತಿರುವ ಜವಾಹರ ನವೋದಯ ವಿದ್ಯಾರ್ಥಿಗಳು, ಕೇಂದ್ರೀಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಎನ್ಇಪಿಯೇ ಜಾರಿಯಾಗುತ್ತದೆ, ಅಲ್ಲಿಗೂ ಎಸ್ಇಪಿ ಅನ್ವಯ ಆಗುವುದಿಲ್ಲ. ರಾಜ್ಯ ಸರ್ಕಾರದಿಂದಲೇ ನಡೆಸುವ ಕೆಲವು ವಸತಿ ಶಾಲೆಗಳಲ್ಲೂ ಸಿಬಿಎಸ್ಸಿ ಪಠ್ಯವಿದ್ದು, ಅಲ್ಲಿಂದಲೂ ಎಸ್ಇಪಿ ಹೊರಗೇ ಇರಲಿದೆ. ಇಡೀ ದೇಶ ಎನ್ಇಪಿ ರೀತಿಯಲ್ಲಿ ನಡೆಯುತ್ತಿರುವುದರಿಂದ, ಎಸ್ಇಪಿಯಲ್ಲಿ ಓದಿದ ಕರ್ನಾಟಕ ವಿದ್ಯಾರ್ಥಿಗಳಿಗೆ ಹೊರರಾಜ್ಯಗಳಲ್ಲಿ ಉನ್ನತ ಶಿಕ್ಷಣಕ್ಕೆ, ಕೆಲಸಕ್ಕೆ ತೊಂದರೆಯಾಗಬಹುದು. ಇದೇ ಕಾರಣಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆಯಲೂ ಅಡಚಣೆ ಆಗಬಹುದು. ಆಗ ನಷ್ಟ ಆಗುವುದು ಯಾರಿಗೆ? ಇದೇ ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ.

ಈಗಾಗಲೆ ಹೇಳಿದಂತೆ, ಪೋಷಕರ ಮೊದಲ ಆದ್ಯತೆ ತಮ್ಮ ಮಕ್ಕಳ ಏಳಿಗೆ. ತಮ್ಮ ಮಕ್ಕಳು ಎಸ್ಇಪಿಯಲ್ಲಿ ಓದಿದರೆ ಭವಿದ್ಯ ಇಲ್ಲ ಎಂದು ತಿಳಿದರೆ ಅವರೂ ನಿಧಾನವಾಗಿ ಸಿಬಿಎಸ್ಇ ಶಾಲೆಗಳತ್ತ ಹೊರಳುತ್ತಾರೆ. ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿರುವ ಕಾರಣ, ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳೂ ನಿಧಾನವಾಗಿ ಸಿಬಿಎಸ್ಇ (CBSE) ಮಾನ್ಯತೆಯತ್ತ ಹೆಜ್ಜೆ ಹಾಕುತ್ತವೆ. ಅಲ್ಲಿಗೆ, ಅನುದಾನಿತ ಶಾಲೆಗಳನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ರಾಜ್ಯ ಪಠ್ಯಕ್ರಮ ದಿನೇದಿನೇ ಕಡಿಮೆಯಾಗುತ್ತದೆ. ಕೊನೆಗೆ ಉಳಿಯುವುದು ಸರ್ಕಾರಿ ಶಾಲೆ, ಕಾಲೇಜುಗಳು, ಅನುದಾನಿತ ಶಾಲೆ ಕಾಲೇಜುಗಳು. ಇವೆಲ್ಲದರಲ್ಲಿ ಓದುವ ಬಡ ಮಕ್ಕಳಿಗೆ ಇದು ಅನ್ಯಾಯ ಆಗುತ್ತದೆ. ತಾನು ಬಡವರ ಪರ, ಬಡವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಇತ್ತ ರಾಜಕೀಯ ಕಾರಣಗಳಿಗೋಸ್ಕರ ಎನ್ಇಪಿಯನ್ನು ವಿರೋಧಿಸುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತದೆ. ರಾಜಕೀಯ ಉದ್ದೇಶದಿಂದ, ಬಡ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಲ್ಲು ಹಾಕುವುದು ಸರ್ವಥಾ ಸಮರ್ಥನೀಯವಲ್ಲ. ರಾಜ್ಯ ಸರ್ಕಾರ ಕೂಡಲೆ ಈ ಎನ್ಇಪಿ ವರ್ಸಸ್ ಎಸ್ಇಪಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪೋಷಕರೆಲ್ಲ ಒತ್ತಾಯ ಮಾಡುವುದೊಂದೇ ಕನ್ನಡ ಶಾಲೆಗಳನ್ನು ಉಳಿಸಲು ಇರುವ ದಾರಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಾಂಬೆಯ ವಿರುದ್ಧ ಆಕೆಯ ತನುಜಾತೆಯನ್ನು ಎತ್ತಿಕಟ್ಟುವುದು ಏಕೆ?

Continue Reading

ಅಂಕಣ

Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ

Raja Marga Column : ಜಗತ್ತು ಯಾವತ್ತಿದ್ದರೂ ನೆನಪಿಸಿಕೊಳ್ಳುವುದು ಮೊದಲ ಬಾರಿ ತನ್ನ ಹೆಜ್ಜೆ ಗುರುತು ಮೂಡಿಸಿದವನನ್ನು. ನಿಮಗೆ ನಿಮ್ಮ ಹೆಜ್ಜೆ ಗುರುತು ಮೂಡಿಸಲು ಲಕ್ಷಾಂತರ ಅವಕಾಶಗಳಿವೆ.

VISTARANEWS.COM


on

Sachin tendulkar first timer to 200 ODI
Koo
RAJAMARGA Rajendra Bhat

ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು (First time Achievers) ಪಯೋನೀರ್ (pioneer achievers) ಎಂದು ಕರೆಯುತ್ತಾರೆ. ಜಗತ್ತು ಅವರನ್ನು ಮಾತ್ರ ನೆನಪಿಟ್ಟು ಕೊಳ್ಳುತ್ತದೆ (Raja Marga Column).

1. ಭಾರತದ ಮೊಟ್ಟಮೊದಲ ಮಹಿಳಾ ವೈದ್ಯೆ ಡಾಕ್ಟರ್ ಆನಂದಿ ಬಾಯಿ ಜೋಶಿ. ಮುಂದೆ ಸಾವಿರಾರು ಮಹಿಳೆಯರು ವೈದ್ಯರಾದರು. ಜಗತ್ತು ಅವರನ್ನೆಲ್ಲ ನೆನಪಿಟ್ಟುಕೊಂಡದ್ದು ಕಡಿಮೆ.

2. ಜುಲೈ 20, 1969ರಂದು ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಬೇಕಾದದ್ದು ಎಡ್ವಿನ್ ಆಲ್ಡ್ರಿನ್. ಆದರೆ ಆತ ಸ್ವಲ್ಪ ಅಳುಕಿದ ಕಾರಣ ನೀಲ್ ಆರ್ಮ್ ಸ್ಟ್ರಾಂಗ್ ಮೊದಲು ಇಳಿದ. ಅರ್ಧ ಕ್ಷಣ ನಂತರ ಆಲ್ಡ್ರಿನ್ ಕೂಡ ಇಳಿದನು. ಆದರೆ ಜಗತ್ತು ಇಂದು ನೀಲ್ ಆರ್ಮ್ ಸ್ಟ್ರಾಂಗ್‌ನನ್ನು ನೆನಪಿಟ್ಟುಕೊಂಡುಕೊಂಡಿದೆ! ಆಲ್ಡ್ರಿನ್ ಜಗತ್ತಿಗೆ ಮರೆತೇ ಹೋಗಿದ್ದಾನೆ.

Neil Armstrong
ಚಂದ್ರನ ಮೇಲೆ ಮೊದಲು ಕಾಲಿಟ್ಟ ನೀಲ್‌ ಆರ್ಮ್‌ ಸ್ಟ್ರಾಂಗ್

3. ಮೌಂಟ್ ಎವರೆಸ್ಟ್ ಮೇಲೆ ಮೊದಲ ಹೆಜ್ಜೆ ಜೊತೆಯಾಗಿ ಇಟ್ಟವರು ಇಬ್ಬರು. ತೆನ್ಸಿಂಗ್ ನೋರ್ಕೆ ಮತ್ತು ಎಡ್ಮಂಡ್ ಹಿಲರಿ (ಅಥವಾ ಅವರು ಹಾಗೆ ಹೇಳುತ್ತಾರೆ. ನೋಡಿದವರು ಅಲ್ಲಿ ಯಾರೂ ಇರಲಿಲ್ಲ). ಅವರು ಜೊತೆಯಾಗಿ ಆ ಸಾಧನೆ ಮಾಡಿದ ಕಾರಣ ಇಬ್ಬರೂ ನೆನಪಲ್ಲಿ ಇದ್ದಾರೆ.

Tensing Norge Edmund hilary

4. ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಹತ್ತಕ್ಕೆ ಹತ್ತು ಅಂಕ ಮೊದಲು ಪಡೆದವರು ನಾಡಿಯಾ ಕೊಮೇನೆಸಿ(1976). ಆಗ ಆಕೆಗೆ 14 ವರ್ಷ ಪ್ರಾಯ! ನಂತರ ತುಂಬಾ ಜನ ಈ ಸಾಧನೆಯನ್ನು ರಿಪೀಟ್ ಮಾಡಿದರು. ಅವರ್ಯಾರನ್ನೂ ಇತಿಹಾಸ ನೆನಪಿಟ್ಟುಕೊಂಡಿಲ್ಲ.

Gymnastics

5. ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಬಾರಿ 625/625 ಅಂಕಗಳನ್ನು ಪಡೆದವನು ಭದ್ರಾವತಿಯ ಹುಡುಗ ರಂಜನ್. ಮುಂದಿನ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳು ಆ ಸಾಧನೆ ಮಾಡಿದರು. ಆದರೆ ರಂಜನ್ ಹೆಸರು ಎಸೆಸೆಲ್ಸಿ ಪರೀಕ್ಷೆ ಇರುವತನಕ ಶಾಶ್ವತ!

SSLC Ranjan Bhadravati

6. ಮಹಿಳಾ ಕಬಡ್ಡಿ ವಿಶ್ವಕಪ್ ಆರಂಭವಾದಾಗ ಮೊದಲ ಟ್ರೋಫಿ ಗೆದ್ದದ್ದು ಭಾರತ (2004). T20 ವಿಶ್ವಕಪ್ ಆರಂಭ ಆದಾಗಲೂ ಮೊದಲು ಟ್ರೋಫಿ ಎತ್ತಿದ್ದು ಭಾರತ! ಅಷ್ಟರಮಟ್ಟಿಗೆ ಅದು ಇತಿಹಾಸ. ನಂತರ ಗೆದ್ದವರು ಕೂಡ ಸಾಧಕರು ಹೌದು. ಆದರೆ ಮೊದಲು ಗೆದ್ದವರು ಮಾತ್ರ ಇತಿಹಾಸದಲ್ಲಿ ನೆನಪಲ್ಲಿ ಉಳಿಯುತ್ತಾರೆ.

7. ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಖ್ಯಾತ ವಸ್ತ್ರ ವಿನ್ಯಾಸಕಿ ಭಾನೂ ಅಥೈಯ್ಯ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ ಕುವೆಂಪು. ಮೊದಲ ಭಾರತರತ್ನ ಕರ್ನಾಟಕವು ಪಡೆದದ್ದು ವಿಶ್ವೇಶ್ವರಯ್ಯನವರ ಮೂಲಕ. ಅದರಿಂದಾಗಿ ಅವರೆಲ್ಲರೂ ಪಯೋನೀರ್ ಆದರು. ಲೆಜೆಂಡ್ ಆದರು.

Kuvempu kannada sahitya

8. ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಮೊದಲು ಪಡೆದವನು ಇಂಗ್ಲೆಂಡ್ ಬೌಲರ್ ಜಿಮ್ ಲೇಕರ್ (1956). ಮುಂದೆ ಅನಿಲ್ ಕುಂಬ್ಳೆ (1999) ಮತ್ತು ಎಜಾಜ್ ಪಟೇಲ್ ( 2021) ಈ ಸಾಧನೆಯನ್ನು ಲೆವೆಲ್ ಮಾಡಿದರು (ಮುರಿಯುವುದು ಸಾಧ್ಯ ಇಲ್ಲ ಅಲ್ವಾ?). ಕುಂಬ್ಳೆ ಭಾರತೀಯ ಅನ್ನುವ ಕಾರಣಕ್ಕೆ ನಮಗೆ ಅದು ಸ್ಪೆಷಲ್ ಅನ್ನಿಸಬಹುದು. ಆದರೆ ಜಿಮ್ ಲೇಕರ್ ಸಾಧನೆಯೇ ಎಲ್ಲರಿಗಿಂತ ಪ್ರಖರ ಎಂದು ನನ್ನ ಭಾವನೆ.

Jim laker

9. ಏಕದಿನದ ಪಂದ್ಯಗಳಲ್ಲಿ ಮೊದಲ ದ್ವಿಶತಕ ಹೊಡೆದ ಕೀರ್ತಿ ದೊರೆತದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ. ಮುಂದೆ ಹತ್ತಾರು ಜನರು ಈ ಸಾಧನೆಯನ್ನು ರಿಪೀಟ್ ಮಾಡಿದರು. ರೋಹಿತ್ ಶರ್ಮ ಮೂರು ಬಾರಿ ಈ ಸಾಧನೆ ಮಾಡಿದರು. ಆದರೆ ಸಚಿನ್ ದ್ವಿಶತಕ ಅದು ಜಗತ್ತಿಗೇ ಸ್ಪೆಷಲ್. ಏಕೆಂದರೆ ಅದು ಜಗತ್ತಿಗೇ ಮೊದಲ ಸಾಧನೆ. ಏಕದಿನದ ಒಂದು ಪಂದ್ಯದಲ್ಲಿ ದ್ವಿಶತಕ ಹೊಡೆಯಲು ಸಾಧ್ಯ ಎಂದು ಮೊದಲು ತೋರಿಸಿಕೊಟ್ಟದ್ದು ಸಚಿನ್ ಅಲ್ವಾ?

10. ಜಗತ್ತಿನ ಮೊದಲ ಬಲ್ಬ್ ಸಂಶೋಧನೆ ಮಾಡಿದ್ದು ಎಡಿಸನ್. ನಂತರ ನೂರಾರು ವಿಜ್ಞಾನಿಗಳು ಆ ಬಲ್ಬನ್ನು ಇಂಪ್ರೂವ್ ಮಾಡಿದರು. ಹೊಸ ಫಿಲಮೆಂಟ್, ಹೊಸ ವಿನ್ಯಾಸ ಪರಿಚಯ ಮಾಡಿದರು. ಆದರೆ ಎಲೆಕ್ಟ್ರಿಕ್ ಬಲ್ಬ್ ಸಂಶೋಧನೆಯ ಶ್ರೇಯಸ್ಸು ಎಡಿಸನ್ ಮತ್ತು ಎಡಿಸನ್ ಅವರಿಗೆ ಮಾತ್ರ ಸಲ್ಲುತ್ತದೆ.

Thomas Alva Edison

11. ಹಾಗೆಯೇ ಜಗತ್ತಿನ ಮೊದಲ ಎಣಿಕೆ ಯಂತ್ರ ಸಂಶೋಧನೆ ಮಾಡಿದ್ದು ಚಾರ್ಲ್ಸ್ ಬ್ಯಾಬೇಜ್. ಮುಂದೆ ಹಲವಾರು ವಿಜ್ಞಾನಿಗಳು ಸೂಪರ್ ಸಾನಿಕ್ ಕಂಪ್ಯೂಟರ್ ಕಂಡುಹಿಡಿದರು. ಆದರೆ ಚಾರ್ಲ್ಸ್ ಬ್ಯಾಬೇಜ್ ಆ ಕ್ಷೇತ್ರದ ಪಯೊನೀರ್ ಎಂದು ಖಚಿತವಾಗಿ ಹೇಳಬಹುದು.

Charles Babbage

ಇದನ್ನೂ ಓದಿ : Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

ಭರತವಾಕ್ಯ

ಹೀಗೆ ಜಗತ್ತಿನ ಸಾವಿರಾರು ಮೊದಲಿಗರ ಪಟ್ಟಿ ಮಾಡಬಹುದು. ಹಾಗೆಯೇ ಅವರ ಸಾಧನಾ ಕ್ಷೇತ್ರಗಳು ವಿಸ್ತಾರ ಆಗಿರುವುದನ್ನು ಕೂಡ ಗಮನಿಸಿ. ಯಾವುದೇ ಕ್ಷೇತ್ರದಲ್ಲಿ ಅದೇ ಸಾಧನೆ ರಿಪೀಟ್ ಮಾಡಿದವರನ್ನು ಜಗತ್ತು ಬೇಗ ಮರೆಯುತ್ತದೆ. ಆದ್ದರಿಂದ ಮಾನವನ ಕ್ರಿಯಾಶಾಲಿ ಮೆದುಳು ಹೊಸ ಹೊಸ ಸಾಧನಾ ಕ್ಷೇತ್ರಗಳನ್ನು ಹುಡುಕಿಕೊಂಡು ಮುಂದೆ ಹೋಗುತ್ತಿದೆ ಅನ್ನಬಹುದು. ಹಾಗೆಯೇ ಮೊದಲಿಗರನ್ನು ಕೂಡ ಸೃಷ್ಟಿ ಮಾಡುತ್ತ ಜಗತ್ತು ಮುಂದೆ ಹೋಗುತ್ತದೆ. ಇದುವರೆಗೂ ಪಯೋನೀರ್ ಇಲ್ಲದ ಸಾವಿರಾರು ಕ್ಷೇತ್ರಗಳು ಇನ್ನೂ ಬಾಕಿ ಇವೆ. ಅಂತಹ ಕ್ಷೇತ್ರ ಆರಿಸಿ ಅದರಲ್ಲಿ ಸಾಧನೆ ಮಾಡಿದರೆ ನಾವು ನಮ್ಮ ಬದುಕಿನ ನಂತರವೂ ನೆನಪಲ್ಲಿ ಉಳಿಯುತ್ತೇವೆ. ಏನಂತೀರಿ?

Continue Reading
Advertisement
Crime Sense Murder Case
ಕರ್ನಾಟಕ15 mins ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ21 mins ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ35 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ37 mins ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Bobby Deol cries after paparazzi praise him as Animal
ಬಾಲಿವುಡ್40 mins ago

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

R Ashok
ಕರ್ನಾಟಕ53 mins ago

Election Results 2023 : ತೆಲಂಗಾಣ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಸೇವೆ ಮಾಡಿದ್ರೆ ಉಗ್ರ ಪ್ರತಿಭಟನೆ; ಆರ್.‌ ಅಶೋಕ್

Snehit Gowda and Namratha Gowda
ಬಿಗ್ ಬಾಸ್1 hour ago

BBK SEASON 10: ನಮ್ರತಾ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ ಎಂದ ಸ್ನೇಹಿತ್‌!

Narendra Modi
ದೇಶ1 hour ago

Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ

DK Shivakumar Telangana congress
ಕರ್ನಾಟಕ2 hours ago

Telangana Results 2023 : ತೆಲಂಗಾಣದಲ್ಲಿ ಗೆದ್ದ‌ ಕೈ ಶಾಸಕರೆಲ್ಲರೂ ಹೈದರಾಬಾದ್‌ಗೆ ಶಿಫ್ಟ್

MLA T.B.Jayachandra spoke at the inauguration program of the new Para Medical College at Shira
ತುಮಕೂರು2 hours ago

Tumkur News: ಪ್ಯಾರಾ ಮೆಡಿಕಲ್ ಓದಿದವರಿಗೆ ವಿಫುಲ ಅವಕಾಶ: ಶಾಸಕ ಟಿ.ಬಿ.ಜಯಚಂದ್ರ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ35 mins ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ7 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ20 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌