Budget Analysis 2024: ಅನ್ನದಾತ, ಗರೀಬ, ಮಹಿಳಾ ಮತ್ತು ಯುವಜನತೆಯ ಅಭಿವೃದ್ಧಿಯನ್ನು ಕೇಂದ್ರೀಕರಿಸಿದ ಬಜೆಟ್ - Vistara News

ದೇಶ

Budget Analysis 2024: ಅನ್ನದಾತ, ಗರೀಬ, ಮಹಿಳಾ ಮತ್ತು ಯುವಜನತೆಯ ಅಭಿವೃದ್ಧಿಯನ್ನು ಕೇಂದ್ರೀಕರಿಸಿದ ಬಜೆಟ್

Budget Analysis 2024: ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ತನ್ನ ಮೊದಲ ಬಜೆಟ್‌ ಅನ್ನು ಮಂಗಳವಾರ ಮಂಡಿಸಿದೆ. ಏಳನೇ ಬಾರಿಗೆ ಬಜೆಟ್‌ ಮಂಡಿಸಿ ದಾಖಲೆ ಬರೆದ ವಿತ್ತ ಸಚಿವೆ ನಿರ್ನಲಾ ಸೀತಾರಾಮನ್‌ ವಿವಿ ಕೊಡುಗೆ ಪ್ರಕಟಿಸಿದ್ದಾರೆ. ಹಾಗಾದರೆ ಬಜೆಟ್‌ನಲ್ಲಿ ಏನಿದೆ? ಯಾರಿಗೆ ಸಿಹಿ? ಯಾರಿಗೆ ಕಹಿ? ಇಲ್ಲಿದೆ ಸಮಗ್ರ ಚಿತ್ರಣ.

VISTARANEWS.COM


on

Budget Analysis 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾರಾಯಣ ಯಾಜಿ
ಒಂದು ಕಾಲವಿತ್ತು, ಕೇಂದ್ರ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಂತೆ ಅದರ ಕುರಿತು ಜನರು ತಮ್ಮ ಅಭಿಪ್ರಾಯವನ್ನು ಇಂದಿನಷ್ಟು ಬಹಿರಂಗವಾಗಿ ಹೇಳುತ್ತಿರಲಿಲ್ಲ. ಅವರೆಲ್ಲರೂ ಓರ್ವ ವ್ಯಕ್ತಿ ಈ ಬಜೆಟ್ ಕುರಿತು ಏನು ಹೇಳುತ್ತಾರೆ ಎಂದು ಕಾಯುತ್ತಿದ್ದರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ., ಪ್ರಸಿದ್ಧ ವಕೀಲರಾದ ನಾನಿ ಪಾಲ್ಕೀವಾಲಾ. ಅವರು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಬಜೆಟ್ ಕುರಿತು ಭಾಷಣ ಮಾಡುತ್ತಿದ್ದಂತೆ ಅದಕ್ಕೆ ಸರಿಯಾಗಿ ಇಡೀ ದೇಶ ಪ್ರತಿಸ್ಪಂದಿಸುತ್ತಿತ್ತು. ಒಂದೆರಡು ತಿಂಗಳಾದಮೇಲೆ ಅದನ್ನು ಮರೆತೂ ಬಿಡುತ್ತಿದ್ದರು. ಜನಸಾಮಾನ್ಯರ ಬದುಕಿನಲ್ಲಿ ಬಜೆಟ್ ಕುರಿತಾದ ಚರ್ಚೆ ಇಂದಿನಷ್ಟು ಆಗುತ್ತಿರಲಿಲ್ಲ. ಆಗಿನ ಒಂದು ಜೋಕ್ “ಆರ್ಥಿಕ ಸಚಿವರು ನಾನಿ ಪಾಲ್ಕೀವಾಲಾರು ಬಜೆಟ್ ಮೇಲೆ ಭಾಷಣ ಮಾಡಿದಾಗಲೇ ತಾವು ಮಂಡಿಸಿದ ಬಜೆಟ್ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದರು”. ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ ಏಳನೆಯ ಸಲ ಬಜೆಟನ್ನು ಮಂಡಿಸುತ್ತಿರುವಂತೆ ಅನೇಕ ಕಡೆಯಿಂದ ಅನೇಕ ಅಭಿಪ್ರಾಯಗಳು ಪುಂಖಾನುಪುಂಖವಾಗಿ ಹಾರಾಡಿತು (Union Budget 2024). ಷೇರು ಮಾರುಕಟ್ಟೆ ಒಮ್ಮೆಲೆ ಎಲ್ಲವನ್ನೂ ಕಳೆದುಕೊಂಡಂತೆ 80,766.41ರಿಂದ ಕೆಳಕ್ಕೆ 1542.09 ಅಂಕಗಳಷ್ಟು ಜಾರಿ ದಿನದ ಕೊನೆಯಲ್ಲಿ 79,224,32 ಬಂದು ಸುಧಾರಿಸಿಕೊಂಡಿತು (Budget Analysis 2024).

ನಿರ್ಮಲಾ ಸೀತಾರಾಮನ್ ಅವರ ಬಜೆಟಿನಲ್ಲಿ ಕಂಡು ಬಂದ ಅಂಶವೆಂದರೆ ಮೊದಲಿಗೆ ಈ ಬಜೆಟಿನಲ್ಲಿ ಯಾವ ಆಕರ್ಷಣೆಯೂ ಇಲ್ಲ. ಇತಿಹಾಸದಲ್ಲಿಯೇ ಬೃಹತ್ತಾದ ರೂ. 47.66 ಲಕ್ಷ ಕೋಟಿ ರೂ.ಯ ಈ ಬಜೆಟ್ ಮೇಲುನೋಟಕ್ಕೆ ನಿರಾಸೆಯಾದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಮೊದಲನೆಯದು ಬಿಹಾರ ಮತ್ತು ಆಂಧ್ರಪ್ರದೇಶವನ್ನು ಬಿಟ್ಟರೆ ಉಳಿದ ರಾಜ್ಯಗಳಿಗೆ ಯಾವ ಯೋಜನೆಯ ಲಾಭವೂ ಇಲ್ಲದಿರುವುದು. ಎರಡನೆಯದು ಇತ್ತೀಚಿಗೆ ಭಾರತದ ಮಧ್ಯಮ ವರ್ಗ ತಮ್ಮ ಉಳಿತಾಯವನ್ನು ಸಾಂಪ್ರದಾಯಿಕವಾದ ಬ್ಯಾಂಕಿಂಗ್ ವಲಯದಿಂದ ಷೇರು ಮಾರುಕಟ್ಟೆ ಮತ್ತು ಪರಸ್ಪರ ನಿಧಿ (Mutual Fund)ಯತ್ತ ವಾಲಿದ್ದು, ಅವರಿಗೆ ಆಘಾತವಾದಂತೆ ಕಂಡು ಬಂದಿರುವುದು, ನಿರ್ಮಲಕ್ಕ ಇಲ್ಲಿ ಕ್ಯಾಪಿಟಲ್ ಗೇಯ್ನ್‌ ಅನ್ನು ಹೆಚ್ಚಿಸಿರುವುದು. ಒಂದು ವರ್ಷಕ್ಕೂ ಕಿರು ಅವಧಿಯಲ್ಲಿ ಮಾರಿದ ಬಂಡವಾಳ ಏರಿಕೆಯ ಲಾಭಕ್ಕೆ ಮೊದಲಿದ್ದ ಶೇ. 15ರಿಂದ ಇದೀಗ ಶೇ. 20ಕ್ಕೆ ಏರಿಸಲಾಗಿದೆ. ದೀರ್ಘಾವಧಿಯ ಅಂದರೆ ಒಂದು ವರ್ಷಕ್ಕೂ ಮೀರಿದ ಬಂಡವಾಳ ಹೆಚ್ಚಳಕ್ಕೆ ಶೇ. 10ರಿಂದ 12.5ಕ್ಕೆ ಏರಿಸಲಾಗಿದೆ.

ಪೆಟ್ರೋಲಿಯಮ್ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಇಲ್ಲ

ಪೆಟ್ರೋಲಿಯಮ್ ವಸ್ತುಗಳನ್ನು GST ವ್ಯಾಪ್ತಿಗೆ ತರುವ ಯಾವ ಸೂಚನೆಯನ್ನೂ ಈ ಬಜೆಟ್‌ ಕೊಟ್ಟಿಲ್ಲ. ಆದರೆ ಕಳೆದ ಏಳು ವರ್ಷಗಳಿಂದ ಮೋದಿ ಸರ್ಕಾರ ಮಂಡಿಸುತ್ತಿರುವ ಬಜೆಟ್‌ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಪ್ರತೀ ಬಜೆಟ್ ಸಹ ಹಿಂದಿನ ಆರ್ಥಿಕ ನೀತಿಯ ಮುಂದುವರಿದ ಭಾಗವಾಗಿದೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಮಕಾಲೀನ (Interim) ಬಜೆಟಿನ ಮುಂದುವರಿದ ಭಾಗವಾಗಿ ಈ ಬಜೆಟ್ ಹೊರಬಂದಿದೆ. ಕಳೆದ ಚುನಾವಣೆಯಲ್ಲಿ ಮೋದಿಯವರ ಕೆಲವೊಂದು ಆರ್ಥಿಕ ನೀತಿಗಳು ಅಪಪ್ರಚಾರಕ್ಕೆ ಗುರಿಯಾಗಿ ಅದರ ಪರಿಣಾಮ ಚುನಾವಣೆಯಲ್ಲಿ ಕಾಣಬಂದಿತ್ತು. ಅದನ್ನು ನಿವಾರಿಸಲೋ ಎಂಬಂತೆ ಈ ಸಾರಿ ತಮ್ಮ ಆಯವ್ಯವನ್ನು ಮುಖ್ಯವಾಗಿ ಅನ್ನದಾತ, ಗರೀಬ್-ಬಡವರ್ಗ, ಮಹಿಳಾವರ್ಗ ಮತ್ತು ಯುವಜನತೆಯನ್ನು ಕೇಂದ್ರೀಕರಿಸಿ ಹಣೆಯಲಾಗಿದೆ (Budget Analysis 2024).

ಮಧ್ಯಮ ವರ್ಗದ ಕಲ್ಯಾಣ

ಈ ಬಜೆಟಿನ ಮುಖ್ಯ ಥೀಮ್ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, MSME ಮತ್ತು ಮದ್ಯಮ ವರ್ಗದ ಜನರ ಕಲ್ಯಾಣ. ಇದಕ್ಕೆ 9 ವಿಧದ ಮಾರ್ಗಸೂಚಿಯನ್ನು ಹಮ್ಮಿಕೊಂಡು ಇದು ವಿಕಸಿತ ಭಾರತದ ಬಜೆಟ್ ಎಂದು ಘೋಷಿಸಲಾಗಿದೆ. ಮುಖ್ಯವಾದ ಅಂಶಗಳನ್ನು ಗಮನಿಸಬೇಕಾದುದು ಎಂದರೆ ಇಂತಹ ಅನೇಕ ಆಕರ್ಷಕ ಘೋಷಣೆಗಳನ್ನು ಸಾಕಷ್ಟು ನೋಡಿದ್ದೇವೆ. ಉದ್ಯೋಗ ಸೃಷ್ಟಿಯಲ್ಲಿ ಮೊದಲನೆಯದಾದ 15,000 ರೂ. ಮಿತಿಗೆ ಒಳಪಟ್ಟು ಜಾರಿಗೆ ತಂದ ಇನ್ನಿತರ ಯೋಜನೆಗಳನ್ನು ಸರಿಯಾಗಿ ಅಳವಡಿಸದಿದ್ದರೆ ಇವು ಘೋಷಣೆಯಾಗಿಯೇ ಉಳಿಯುವ ಅಪಾಯವಿದೆ. ಆದರೆ ಮುಖ್ಯವಾಗಿ ಮೆಚ್ಚಿಕೊಳ್ಳಲೇ ಬೇಕಾದ ವಿಷಯ ದೇಶದ ಪ್ರಮುಖ 500 ಕಂಪನಿಗಳಲ್ಲಿ ಯುವಜನತೆಗೆ ಇಂಟರ್ನಶಿಪ್ ತರಬೇತಿಯನ್ನು ಕೊಡಿಸುವುದು. ಈ ಕುರಿತು ಸರಿಯಾಗಿ ಜಾರಿಗೆ ತರುವತ್ತ ಒಂದು ಪರಿಣಾಮಕಾರಿಯಾದ ಆಡಳಿತ ಯಂತ್ರವನ್ನು ಕಟ್ಟಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಮೋದಿ ಈ ಮೊದಲು ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಭಾರತ, ಅಟಲ್ ಪೆನ್ಷನ್ ಯೋಜನೆಗಳೊಂದಿಗೆ ಒಂದಾಗಬಹುದಾದ ಅಪಾಯವೂ ಉಂಟು.

ದುಡಿಯವ ಮಹಿಳೆಯರಿಗೆ ಅನುಕೂಲ

ದುಡಿಯವ ಮಹಿಳೆಯರಿಗೆಂದೇ ತೆರೆಯಲಿರುವ ಹಾಸ್ಟೇಲ್ ಮತ್ತು ಸ್ವಸಹಾಯ ಗುಂಪುಗಳ ಉತ್ಪಾದನೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುವ ಯೋಜನೆಗಳೂ ಸಹ ಮೆಚ್ಚತಕ್ಕದ್ದೇ. ಈ ದೇಶದಲ್ಲಿ ಸುಧಾರಣೆಗಳನ್ನು ರಾಜಕೀಯ ದೃಷ್ಟಿಯಿಂದ ನೋಡುವ ಕಾರಣ ಇದನ್ನು ಜಾರಿಗೊಳಿಸಿವ ರಾಜ್ಯ ಸರ್ಕಾರಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ. ಕಲ್ಯಾಣ ಯೋಜನೆಗಳನ್ನು ಈಡೇರಿಸುವತ್ತ ಪಕ್ಷಬೇಧ ಮರೆತು ಎಲ್ಲರೂ ಒಂದಾಗುತ್ತಾರೆ ಎಂದು ಆಶಿಸೋಣ (Budget Analysis 2024).

ವಿರೋಧ ಪಕ್ಷಗಳ ಟೀಕೆ

ಈಗಾಗಲೇ ಮೊದಲ ಸಲ ಉದ್ಯೋಗ ಸಿಕ್ಕಿದವರಿಗೆ 5,000 ರೂ. ತಮ್ಮ ಪ್ರಣಾಳಿಕೆಯಿಂದ ಕದ್ದದ್ದು ಎಂದು ವಿರೋಧ ಪಕ್ಷಗಳು ಹೇಳತೊಡಗಿವೆ. ಒಳ್ಳೆಯ ವಿಚಾರಗಳು ಎಲ್ಲಿಂದಲೂ ಬರಲಿ ತೊಂದರೆ ಏನಂತೆ? ಮುಖ್ಯವಾಗಿ ಈ ಸಲ ಬಜೆಟಿನಲ್ಲಿ ಕೃಷಿಗೆ ಒತ್ತು ನೀಡಿರುವುದು. ಅದರಲ್ಲಿಯೂ ನೈಸರ್ಗಿಕ ಕೃಷಿ ಮತ್ತು ಶಿಗಡಿ ಕೃಷಿಯ ಮತ್ತು ಅದರ ರಪ್ತಿನ ಕುರಿತು ನಬಾರ್ಡಿನ ಸಹಯೋಗದಲ್ಲಿ ಅನುಷ್ಠಾನಗೊಳಿಸುವ ಕ್ರಿಯೆ ಸ್ವಾಗತಾರ್ಹ. ನಬಾರ್ಡ್ ಇಂತಹ ಹಲವಾರು ಯೋಜನೆಗಳನ್ನು ಸದಾ ಜಾರಿಗೊಳಿಸುತ್ತಲೇ ಇದೆ. ಬ್ಯಾಂಕು ಮತ್ತು ಇತರ ಸಂಸ್ಥೆಗಳು ಇದರ ಪ್ರಯೋಜನಕ್ಕೆ ಮುಂದೆ ಬರಬೇಕು. ಕೃಷಿವಲಯಕ್ಕೆ Digital Public Infrastructure ಒಂದು ಕ್ರಾಂತಿಯನ್ನು ತರಬಹುದು. ದಿಜಿಟಲ್ ವೇದಿಕೆಯಲ್ಲಿ ರೈತರಿಗೆ ಕೃಷಿಯ ವಿವಿಧ ಸುಧಾರಣೆ ಮತ್ತು ಕೃಸಿಯೋತ್ಪನ್ನಗಳ ಮಾರುಕಟ್ಟೆಯ ವಿಷಯದಲ್ಲಿ ತಕ್ಷಣಕ್ಕೆ ಮಾಹಿತಿಯನ್ನು ಇದು ಒದಗಿಸುತ್ತದೆ.

ಮುದ್ರಾ ಸಾಲದ ಮೊತ್ತ ಏರಿಕೆ

ಸರಕಾರದ ಮುದ್ರಾ ಸಾಲ ಆರ್ಥಿಕವಾಗಿ ಹಿಂದುಳಿದವರಿಗೆ ಒಂದು ವರದಾನ. ರಸ್ತೆಬದಿಯ ತಳ್ಳುಗಾಡಿಯವರಿಂದ ಹಿಡಿದು ಮದ್ಯಮ ಹಂತದ ಕೈಗಾರಿಕಗಳ ವರೆಗೆ ಸುಲಭದಲ್ಲಿ ಸಾಲ ಸಿಗುವ ವ್ಯವಸ್ಥೆ ಇದಾಗಿದೆ. ಬ್ಯಾಂಕು ವಿಧಿಸುವ ಬಡ್ಡಿಗೆ ಸಹಾಯಧನವೂ ಇದೆ. ಇದೀಗ ಮೊದಲಿದ್ದ 10 ಲಕ್ಷ ರೂಪಾಯಿಯ ಮಿತಿಯನ್ನು 20 ಇಪ್ಪತ್ತು ಲಕ್ಷ ರೂಪಾಯಿಗೆ ಏರಿಸಿದ್ದು ಸ್ವಾಗತಾರ್ಹ (Budget Analysis 2024).

ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳು ತಮ್ಮ ಉತ್ಪಾದನೆಯನ್ನು ಪೂರೈಸಿದರೂ ಅದರ ಮೊತ್ತ ಖರೀದಿದಾರರಿಂದ ಸರಿಯಾಗಿ ಸಿಗದೇ ಇರುವ ಕುರಿತು ಕಷ್ಟ ಪಡುತ್ತಿದ್ದರು. ಇದರಿಂದ ಅವರ ಬ್ಯಾಲೆನ್ಸ್ ಶೀಟನಲ್ಲಿ ಬರತಕ್ಕ ಬಾಕಿ ಎಂದು ತೋರಿಸಬೇಕಾಗಿತ್ತು. ಇದಕ್ಕ ಉತ್ತರವಾಗಿ ಬಂದಿರುವುದು TReDs (Trade Receivable Discounting System). ಕೇವಲ MSMEಗಳು ಮಾತ್ರ ಈ ವೇದಿಕೆಯಲ್ಲಿ ಭಾಗವಹಿಸಬಹುದಾಗಿದೆ. ದುಡಿಯುವ ಬಂಡವಾಳವನ್ನು ಸ್ಪರ್ಧಾತ್ಮಕ ದರದಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆಯಬಹುದಾದ ಅವಕಾಶ ಇಲ್ಲಿದೆ. ಇಲ್ಲಿ ಉದ್ದಿಮೆದಾರ ಮಾರಾಟ ಮಾಡಿದ ಇನ್ವಾಯಿಸಿನ ಮೇಲೆ ಡಿಸ್ಕೌಂಟ್ ಮಾಡಿ ತನಗೆ ಬರಬೇಕಾದ ಹಣವನ್ನು ಪಡೆದುಕೊಂಡು ಅದನ್ನು ಉದ್ದಿಮೆ ನಡೆಸಲು ಬಳಸಬಹುದಾಗಿದೆ. ಇಷ್ಟು ದಿವಸ ಇದರಲ್ಲಿ ನೋಂದಾಯಿಸಿಕೊಳ್ಳುವ ಖರೀದಿದಾರರ ವ್ಯವಹಾರ 500 ಕೋಟಿ ರೂ. ಇದ್ದಿದ್ದನ್ನು ಇದೀಗ 250 ಕೋಟಿ ರೂ.ಗೆ ಇಳಿಸಲಾಗಿದೆ.

ಇದನ್ನೂ ಓದಿ: Narendra Modi:‌ ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಅಕ್ಷಯಪಾತ್ರೆ; ನರೇಂದ್ರ ಮೋದಿ ಬಣ್ಣನೆ

ಆರ್ಥಿಕಾಭಿವೃದ್ಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ಯೋಗಸೃಷ್ಟಿ ಮತ್ತು ಆದ್ಯತಾವಲಯದ ಅಗತ್ಯಗಳನ್ನು ಪೂರೈಸುವತ್ತ ದೊಡ್ಡ ಹೆಜ್ಜೆಯನ್ನು ಈ ನೀತಿಯ ಅನುಷ್ಠಾನ ಇರಿಸುತ್ತವೆ. ಆತ್ಮನಿರ್ಭರ ಭಾರತಕ್ಕೆ ಸಣ್ಣ ಉದ್ದಿಮೆಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಹತ್ವದ ಹೊಸ ಘೋಷಣೆಯನ್ನು ನಿರ್ಮಲಾ ಸೀತಾರಾಮನ್ ಹೇಳಿರುವ ಅಂಶವೆಂದರೆ ನೂರು ಕೋಟಿ ರೂಪಾಯಿವರೆಗಿನ ಉದ್ದಿಮೆ ಸ್ಥಾಪಿಸಲು ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ ಒಂದನ್ನು ಸ್ಥಾಪಿಸಲು ಮುಂದೆ ಬಂದಿರುವುದು. ಇದು ತನಕ ಯಾವುದೇ ಉದ್ದಿಮೆದಾರ ಹೊಸ ಉದ್ದಿಮೆಯನ್ನು ಸ್ಥಾಪಿಸಲು ಆತನಲ್ಲಿ ಬ್ಯಾಂಕಿಗೆ ಕೊಡಬೇಕಾದ ಅಡಮಾನ ಅಥವಾ ಜಾಮೀನು ಇಲ್ಲದಿದ್ದರೆ ಈ ಸಂಸ್ಥೆಯಿಂದ 5 ಕೋಟಿ ರೂ.ಯ ತನಕ ಸಾಲ ಪಡೆಯಲು CGTMSE ಎನ್ನುವ ಸಂಸ್ಥೆ ಆ ಭದ್ರತೆಯನ್ನು ತಾನು ಒದಗಿಸುತ್ತದೆ. ಇದಕ್ಕೆ ಪ್ರತೀ ವರ್ಷವೂ ಸಾಲಗಾರ ನಿರ್ಧಿಷ್ಟ ಮೊತ್ತದ ಫೀಯನ್ನು ಕಟ್ಟಬೇಕಾಗುತ್ತದೆ. ಅದನ್ನು ನೂರು ಕೋಟಿ ರೂ.ಗೆ ಏರಿಸಿರುವುದು ಆತ್ಮನಿರ್ಭರ ಭಾರತಕ್ಕೆ ಅವಶ್ಯವಿರುವ Start Upಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ. Ideaಗಳಿದ್ದರೆ ಯಾರೂ ಉದ್ದಿಮೆಯನ್ನು ಸ್ಥಾಪಿಸಿ ಯಶಸ್ಸನ್ನು ಗಳಿಸಲು ಸಾಧ್ಯವೆನ್ನುವ ಅನೇಕ ಸವಲತ್ತುಗಳನ್ನು CGTMSE ಮತ್ತು TReDS ಪ್ಲಾಟಫಾರ್ಮ್‌ಗಳು ಒದಗಿಸುತ್ತವೆ. ಇವು ಯಶಸ್ವಿಯಾದರೆ ಮೋದಿ 3.0 ಭಾರತದ ಆತ್ಮನಿರ್ಭರ ಮತ್ತು ಸ್ವಾವಲಂಭಿ ಅರ್ಥವ್ಯವಸ್ಥೆಗೆ ದೊಡ್ಡ ಕೊಡುಗೆಯಾಗಲಿದೆ (Budget Analysis 2024).

ಏಂಜೆಲ್ ಟ್ಯಾಕ್ಸ್‌ ರದ್ದು

ಅದೇ ರೀತಿ ಏಂಜೆಲ್ ಕರ (Angel Tax) ವ್ಯವಸ್ಥೆ ಎನ್ನುವುದು 2012ರಿಂದ ಜಾರಿಯಲ್ಲಿತ್ತು. ಯಾವುದೇ ಒಂದು (Unlisted in the stock market) ಉದ್ದಿಮೆ ಅಥವಾ Startupಗಳು ಯಾರನ್ನಾದರೂ ಹೂಡಿಕೆದಾರರನ್ನು ಹೂಡಿಕೆಗೆಂದು ತನ್ನಲ್ಲಿರುವ ಷೇರುಗಳನ್ನು ಮಾರಿ ಹಣ ಹೊಂದಿಸಿದರೆ ಅದರ ನಿವ್ವಳ ಮೊತ್ತಕ್ಕಿಂತ ಹೆಚ್ಚಿಗೆ ಹಣ ಹೂಡಿಕೆಯಾದರೆ ಅದರ ಮೇಲೆ ಶೇ. 30.9ರಷ್ಟು ಆದಾಯ ಕರವನ್ನು ತುಂಬಬೇಕಾಗಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದರಿಂದ ಉಳ್ಳವರಿಂದ ಹಣ ಹೊಂದಿಸಲು ಇವುಗಳಿಗೆ ತೊಂದರೆಯಾಗಲಾರದು. ದೊಡ್ಡ ಪ್ರಮಾಣದ ಹೂಡಿಕೆಯನ್ನು ದೇಶದೊಳಗಿನಿಂದ ಮತ್ತು ವಿದೇಶದಿಂದ ವೆಂಚರ್ ಕ್ಯಾಪಿಟಲ್ಸ್ ಗಳನ್ನು ನಿರೀಕ್ಷಿಸಬಹುದಾಗಿದೆ. ಈ ಬಜೆಟಿನ ವಿಶೇಷವೆಂದರೆ ಕೃಷಿ ಮತ್ತು ಆದ್ಯತಾವಲಯ ಹೀಗೆ ಯಾವ ವಿಧಾನದಲ್ಲಿ ನೀಡಬಹುದಾದ ಕೊಡುಗೆಗಳು ಅಂತಿಮವಾಗಿ ಸಣ್ಣ ಉದ್ದಿಮೆಗಳಿಗೆ ಸಹಾಯವಾಗುವಂತಿರಬೇಕೆನ್ನುವುದು. ಸಂಶೋಧನೆ ಮತ್ತು ತಾಂತ್ರಿಕತೆಯ ಮೇಲೆತ್ತುವಿಕೆಯಲ್ಲೂ ಇದಕ್ಕೇ ಒತ್ತು ಕೊಡಲಾಗಿದೆ. ನಗರಾಭಿವೃದ್ಧಿ ಮತ್ತು ಆವಾಸ ಯೋಜನೆಯನ್ನೂ ಧನಾತ್ಮಕ ವಿಧಾನದಲ್ಲಿಯೇ ನೋಡಬೇಕಾಗಿದೆ.

ಇದನ್ನೂ ಓದಿ: Union Budget 2024: ಯುವಜನ, ಉದ್ಯೋಗ, ಉದ್ದಿಮೆಯೇ ಫೋಕಸ್‌; ಇಲ್ಲಿದೆ ಕೇಂದ್ರ ಬಜೆಟ್‌ನ ಸಮಗ್ರ ಚಿತ್ರಣ

ಬಿಹಾರದ ಅಭಿವೃದ್ಧಿಯ ನೆವದಲ್ಲಿ ಇಡೀ ಉತ್ತರಭಾರತದಲ್ಲಿ ಅಮೃತಸರದಿಂದ ಹಿಡಿದು ಆಸಾಮಿನವರೆಗೆ ಔದ್ಯಮಿಕ ಕಾರಿಡಾರು ರೂಪಿಸಲು ಯೋಜನೆಯನ್ನು ಘೋಷಿಸಲಾಗಿದೆ. ಟೆಂಪಲ್ ಟೂರಿಸಮ್ ಯೋಜನೆಯೂ ಸಹ ಇದರ ಭಾಗವಾಗಿ ಮೂಡಿ ಬಂದಿದೆ. ಆಂಧ್ರಪ್ರದೇಶಕ್ಕೆ ಹದಿನೇಳು ಸಾವಿರ ಕೋಟಿ ರೂ.ಯನ್ನು ಕೊಟ್ಟು ಚಂದ್ರಬಾಬು ನಾಯ್ಡು ಖುಷಿಯಿಂದ ಇರುವಂತೆ ಮತ್ತು ಎಲ್ಲ ಹೊಸ ಉದ್ದಿಮೆಗಳು ತಮ್ಮ ರಾಜ್ಯಕ್ಕೆ ಬರುವಂತೆ ಮಾಡುವ ಅವರ ಪ್ರಯತ್ನಕ್ಕೆ ಇನಷ್ಟು ಇಂಬು ಸಿಗಲಿದೆ. ಪೂರ್ವಾಂಚಲದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿರುವುದು ಅನಿವಾರ್ಯ ಮತ್ತು ಅಗತ್ಯವೂ ಹೌದು. ಈ ಭಾಗದಲ್ಲಿ ಪ್ರವಾಸೋದ್ದಿಮೆ ಹೆಚ್ಚಾದಂತೆ ಅವು ಸ್ವಾವಲಂಬಿಯಾಗಲು ಸಾಧ್ಯ.

ಶಿಕ್ಷಣ ಕ್ಷೇತ್ರಕ್ಕೂ ಒತ್ತು

ಉನ್ನತ ವಿದ್ಯಾಭ್ಯಾಸಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲದ ಸೌಲಭ್ಯ ಮತ್ತು ಅವುಗಳ ಪ್ರತೀ ವರ್ಷದ ಬಡ್ಡಿಯ ಮೇಲೆ 3 ಲಕ್ಷ ರೂ.ವರೆಗೆ ಸಹಾಯಧನ ಉತ್ತಮ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಕನಸನ್ನು ಹೊತ್ತ ಅನೇಕರಿಗೆ ವರವಾಗಲಿದೆ.

ಆರ್ಥಿಕ ಶಿಸ್ತು

ಈ ವಿಚಾರದಲ್ಲಿ ಈ ಬಜೆಟ್ ಸಾಕಷ್ಟು ಶ್ರಮಪಟ್ಟಿದೆ. ದೇಶದ ಆಂತರಿಕ ಸಾಲ ಮೇರೆ ಮೀರುತ್ತಿದೆ ಎನ್ನುವವರಿಗೆ ಉತ್ತರವಾಗಿ ವಿತ್ತೀಯ ಕೊರತೆಯನ್ನು ಶೇ 4.9ಕ್ಕೆ ಇಳಿಸಲಾಗಿದೆ. ರೆವಿನ್ಯೂ ವೆಚ್ಚವನ್ನು ಬಿಟ್ಟರೆ ಕ್ಯಾಪಿಟಲ್ ವೆಚ್ಚ ಎರಡನೆಯದು. ಒಟ್ಟು 11,11,111 ಕೋಟಿ ರೂಪಾಯಿಯನ್ನು ಕ್ಯಾಪಿಟಲ್ ವೆಚ್ಚಕ್ಕೆ ಮೀಸಲಿಟ್ಟಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಅಗತ್ಯವಾದ ಮೂಲಭೂತ ಸೌಲಭ್ಯ, ರಸ್ತೆ, ಬಂದರು ಮೊದಲಾದ ರಂಗದಲ್ಲಿ ವಿನಿಯೋಗಿಸಲ್ಪಡುತ್ತದೆ (Budget Analysis 2024).

ಆದಾಯ ಕರದ ವಿಚಾರದಲ್ಲಿಯೂ ಹಾಗೇ ಹೊಸ ಕರದ ಪ್ರಕಾರ ತೆರಿಗೆ ತುಂಬುವವರಿಗೆ Standard Deduction ಮೊತ್ತ ಈಗಿರುವ 5,0000 ರೂ.ಯಿಂದ ರೂ. 7,5000 ರೂ.ಗೆ ಏರಿಸಲಾಗಿದೆ. ಸರ್ಕಾರ ಹಳೆಯ ವಿಧಾನದಲ್ಲಿ ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತಿತ್ತು. ಅದಕ್ಕಿಂತ ತೆರಿಗೆಯನ್ನು ಕಟ್ಟಿಸಿ ಉಳಿದದ್ದನ್ನು ಕರದಾತನ ಇಚ್ಛೆಗೆ ಬಿಡುವ ಆಲೋಚನೆಯನ್ನು ಹೊಂದಿದೆ. ಕಳೆದ ವರ್ಷ ಭಾರತದಲ್ಲಿ ಒಟ್ಟು ಮಾರಟವಾದ ವಾಹನಗಳ ಸಂಖ್ಯೆ 2.38 ಕೋಟಿ. ಈ ದೇಶದಲ್ಲಿ ಆದಾಯ ಕರವನ್ನು ತುಂಬುವವರ ಸಂಖ್ಯೆ 2.34 ಕೋಟಿ. 145 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಆದಾಯಕರದ ವ್ಯಾಪ್ತಿಯಲ್ಲಿ ಬರುವರ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಲು ಈ ಸರ್ಕಾರ ಸಿದ್ಧವಿಲ್ಲ. ಅದೇ ರೀತಿ, ಹೂಡಿಕೆಯ ಮೇಲಿನ ಬಂಡವಾಳದ ಗಳಿಕೆಯ ವಿಚಾರದಲ್ಲಿಯೂ ಅಷ್ಟೇ. ದೀರ್ಘಾವದಿಯ ಗಳಿಕೆಯನ್ನು ಶೇ 12.5ಕ್ಕೆ ಏಸಿಸಿದರೂ ಇದುತನಕ ಇದ್ದ ಮಿತಿಯನ್ನು 1,00,000 ರೂ.ಯಿಂದ 1,25,000 ರೂ.ಗೆ ಏರಿಸಲಾಗಿದೆ.

ಅನಿಶ್ಚಿತಿತ ಆರ್ಥಿಕ ವ್ಯವಸ್ಥೆಗೆ ಉತ್ತರ

ಈ ಸರ್ಕಾರ ಪ್ರಸ್ತುತ ಪಡಿಸಿರುವ ಬಜೆಟ್ ಅನೇಕ ಧನಾತ್ಮಕ ಅಂಶಗಳನ್ನು ಒಳಗೊಂಡಿದೆ. ಜಾಗತಿಕವಾಗಿ ಕಾಡುತ್ತಿರುವ ಅನಿಶ್ಚಿತಿತ ಆರ್ಥಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಎದುರಿಸುವತ್ತ ಗಮನ ಹರಿಸಲಾಗಿದೆ. ಚೀನಾದ ಮಾದರಿಯಲ್ಲಿ ಗೃಹ ಮತ್ತು MSME ವಿಭಾಗವನ್ನು ಸಶಕ್ತಗೊಳಿಸುವ ಉದ್ದೇಶವನ್ನು ಕಾಣಬಹುದಾಗಿದೆ. ಆದರೆ ರಾಜ್ಯಗಳಿಗೆ ಅವರ ಪಾಲಿನ GST ವಿಚಾರದಲ್ಲಿ ಯವುದೇ ಒಂದು ನಿರ್ಣಯವನ್ನು ಜಾರಿಗೊಳಿಸುವಲ್ಲಿ ಆಸಕ್ತಿಯನ್ನು ಹೊಂದಿದಂತೆ ಕಾಣಿಸುವುದಿಲ್ಲ. ಮಹತ್ವದ ವಿಚಾರವೆಂದರೆ ರಾಜ್ಯಗಳಿಗೆ ನೀಡುವ ಪ್ರಮಾಣದಲ್ಲಿ ಕಳೆದ ವರ್ಷ ರೂ. 20.98 ಕೋಟಿ ರೂ. ಇದ್ದಿದ್ದು ಈ ವರ್ಷ 23.48 ಕೋಟಿ ರೂ.ಗೆ ಏರಿದೆ. ಆದರೂ ಕೆಲ ರಾಜ್ಯಗಳು ಕಾಲು ಕೆರೆಯುತ್ತಿದೆ. ಸುಪ್ರೀಂ ಕೋರ್ಟ್‌ ಈಗಾಗಲೇ ಮಧ್ಯ ಪ್ರವೇಶಿಸುವ ಸೂಚನೆಯನ್ನು ಕೊಟ್ಟಿದೆ. ಆ ನಿರ್ಣಯದ ಮೇಲೆ ಮತ್ತೊಮ್ಮೆ ಆರ್ಥಿಕ ನೀತಿಯನ್ನು ಪುನಃ ಆಲೋಚಿಸುವ ಕಾಲಬರಬಹುದೋ ಏನೋ (Budget Analysis 2024).

ಇದನ್ನೂ ಓದಿ: Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

Sea King Chopper: ನೌಕಾಪಡೆಯ ಸೀ ಕಿಂಗ್‌ ಚಾಪರ್‌ ಬಳಸಿ, ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಮಾನವೀಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನದ ಮೀನುಗಾರರನ್ನು ಕೂಡ ಭಾರತದ ನೌಕಾಪಡೆ ಸಿಬ್ಬಂದಿ ರಕ್ಷಿಸಿದ್ದರು.

VISTARANEWS.COM


on

King Chopper
Koo

ನವದೆಹಲಿ: ಸಾಗರ ಪ್ರದೇಶದಲ್ಲಿ ವೈರಿಗಳ ಮೇಲೆ ನಿಗಾ ಇಡುವುದು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ಕೈಗೊಳ್ಳುವುದರಲ್ಲಿ ಸಮರ್ಥವಾಗಿರುವ ಜತೆಗೆ ಭಾರತೀಯ ನೌಕಾಪಡೆಯು (Indian Navy) ಬೇರೆಯವರನ್ನು ರಕ್ಷಣೆ ಮಾಡುವುದರಲ್ಲಿಯೂ ಅಷ್ಟೇ ದಕ್ಷತೆ ಹಾಗೂ ಮಾನವೀಯತೆಯನ್ನು ಹೊಂದಿದೆ. ಇದಕ್ಕೆ ನಿದರ್ಶನ ಎಂಬಂತೆ, ನೌಕಾಪಡೆಯ ಸೀ ಕಿಂಗ್‌ ಚಾಪರ್‌ (Sea King Chopper) ಬಳಸಿ, ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಮಾನವೀಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು, ಮುಂಬೈನಿಂದ ಸುಮಾರು 370 ಕಿಲೋಮೀಟರ್‌ ದೂರದ ಸಾಗರ ಪ್ರದೇಶದಲ್ಲಿ ಚೀನಾದ ಝೋಂಗ್‌ ಶಾನ್‌ ಮೆನ್‌ ಎಂಬ ನೌಕೆಯು ಹವಾಮಾನ ವೈಪರೀತ್ಯದಿಂದ ಚಲಿಸಲು ಆಗಿಲ್ಲ. ಇನ್ನು, ಹಡಗಿನ ನಾವಿಕನಿಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವದಿಂದ ತೀವ್ರ ತೊಂದರೆಗೆ ಸಿಲುಕಿದ್ದ. ಈ ಕುರಿತು ಮುಂಬೈನಲ್ಲಿರುವ ಮರಿಟೈಮ್‌ ರೆಸ್ಕ್ಯೂ ಕೋ-ಆಪರೇಷನ್‌ ಸೆಂಟರ್‌ಗೆ ಮಂಗಳವಾರ (ಜುಲೈ 24) ರಾತ್ರಿ ಕರೆ ಬಂದಿದೆ. ಕೂಡಲೇ 51 ವರ್ಷದ ನಾವಿಕನ ರಕ್ಷಣೆ ಮಾಡಬೇಕು ಎಂದು ಕರೆ ಮಾಡಲಾಗಿತ್ತು.

ಇದಾದ ಬಳಿಕ ಭಾರತೀಯ ನೌಕಾಪಡೆಯ ಸೀ ಕಿಂಗ್‌ ಹೆಲಿಕಾಪ್ಟರ್‌ಅನ್ನು ಶಿಖ್ರಾದಲ್ಲಿರುವ ಭಾರತದ ನೌಕಾಪಡೆಯ ಏರ್‌ ಸ್ಟೇಷನ್‌ನಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಹವಾಮಾನ ವೈಪರೀತ್ಯದ ಕುರಿತು ಮಾಹಿತಿ ಇದ್ದರೂ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯು ಚೀನಾದ ನಾವಿಕನನ್ನು ರಕ್ಷಿಸಿ, ಆತನಿಗೆ ವೈದ್ಯಕೀಯ ನೆರವು ನೀಡಿದೆ. ಈ ರೋಚಕ ವಿಡಿಯೊವನ್ನು ನೌಕಾಪಡೆಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೌಕಾಪಡೆಯ ಮಾನವೀಯತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಭಾರತದ ನೌಕಾಪಡೆಯ ಐಎನ್‌ಎಸ್‌ ಸುಮಿತ್ರ ಸಮರನೌಕೆಯ ಮೂಲಕ ಅರಬ್ಬೀ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ 19 ನಾವಿಕರನ್ನು ರಕ್ಷಿಸಲಾಗಿತ್ತು. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ 19 ನಾಗರಿಕರಿದ್ದ ಹಡಗನ್ನು ಅಪಹರಿಸಿದ್ದ ಸೋಮಾಲಿಯಾ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸಿ ರಕ್ಷಣೆ ಮಾಡಲಾಗಿತ್ತು. ಇದಕ್ಕೂ ಕೆಲ ದಿನಗಳ ಮೊದಲು ಇರಾನ್‌ ಮೂಲದ ಹಡಗು ಹಾಗೂ ಹಡಗಿನಲ್ಲಿದ್ದ 17 ಜನರನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: INS Brahmaputra: ನೌಕಾಪಡೆಯ ಐಎನ್‌ಎಸ್‌ ಯುದ್ಧನೌಕೆಯಲ್ಲಿ ಭೀಕರ ಅಗ್ನಿ ದುರಂತ; ನಾವಿಕ ನಾಪತ್ತೆ

Continue Reading

ದೇಶ

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

SkyDeck: ಸಂಪೂರ್ಣವಾಗಿ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಕಂಪನಿಯಾದ ಆಸ್ಟರಿಯಾ ಏರೋಸ್ಪೇಸ್, ಅತ್ಯಾಧುನಿಕ ನವೀನ ಬಗೆಯ ಕ್ಲೌಡ್ ಪ್ಲಾಟ್ ಫಾರ್ಮ್ ಆದ ಸ್ಕೈಡೆಕ್ ಅನ್ನು ಪರಿಚಯಿಸುತ್ತಿದೆ. ಇದೀಗ ಅದನ್ನು ಸೆಲ್ಫ್ ಸರ್ವೀಸ್ SaaS ಸಲ್ಯೂಷನ್ ಆಗಿ ನೀಡುತ್ತಿದೆ. ಡ್ರೋನ್ ಡೇಟಾದ ಬಳಕೆದಾರರು ಹಾಗೂ ಸೇವಾ ಪೂರೈಕೆದಾರರು ಇಬ್ಬರಿಗೂ ಇದು ಸಮಗ್ರ ಸಾಫ್ಟ್ ವೇರ್ ಪ್ಲಾಟ್ ಫಾರ್ಮ್ ರೀತಿಯಲ್ಲಿ ಸೇವೆ ಒದಗಿಸುತ್ತದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.

VISTARANEWS.COM


on

Asteria Aerospace has introduced a SkyDeck platform that helps in various fields including agriculture
Koo

ಬೆಂಗಳೂರು: ಸಂಪೂರ್ಣವಾಗಿ ಎಲ್ಲವನ್ನೂ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಕಂಪನಿಯಾದ ಆಸ್ಟರಿಯಾ ಏರೋಸ್ಪೇಸ್ (Asteria Aerospace), ಅತ್ಯಾಧುನಿಕ ನವೀನ ಬಗೆಯ ಕ್ಲೌಡ್ ಪ್ಲಾಟ್‌ಫಾರ್ಮ್ ಆದ ಸ್ಕೈಡೆಕ್ (SkyDeck) ಅನ್ನು ಪರಿಚಯಿಸುತ್ತಿದ್ದು, ಇದೀಗ ಅದನ್ನು ಸೆಲ್ಫ್ ಸರ್ವೀಸ್ SaaS ಸಲ್ಯೂಷನ್ ಆಗಿ ನೀಡುತ್ತಿದೆ.

ಉದ್ಯಮಗಳಿಗೆ ಡ್ರೋನ್ ದತ್ತಾಂಶ ನಿರ್ವಹಣೆಯನ್ನು ಸುವ್ಯವಸ್ಥಿತ ಮಾಡುವುದಕ್ಕೆ ಸ್ಕೈಡೆಕ್ ಪ್ಲಾಟ್‌ಫಾರ್ಮ್‌ ಬಲ ತುಂಬುತ್ತದೆ. ಡ್ರೋನ್ ಡೇಟಾದ ಬಳಕೆದಾರರು ಹಾಗೂ ಸೇವಾ ಪೂರೈಕೆದಾರರು ಇಬ್ಬರಿಗೂ ಇದು ಸಮಗ್ರ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್‌ ರೀತಿಯಲ್ಲಿ ಸೇವೆ ಒದಗಿಸುತ್ತದೆ. ಆ ಮೂಲಕ ಅವರ ಡಿಜಿಟಲ್ ರೂಪಾಂತರ ಪ್ರಯಾಣವನ್ನು ಸರಳಗೊಳಿಸುತ್ತದೆ ಮತ್ತು ಡ್ರೋನ್‌ನಿಂದ ಡೇಟಾ ಚಾಲಿತ ಒಳನೋಟಗಳನ್ನು ಸಕ್ರಿಯಗೊಳಿಸುತ್ತದೆ.

ಜಿಐಎಸ್‌ನಂಥ ಉದ್ಯಮಗಳು ನಿರ್ಮಾಣ, ತೈಲ ಹಾಗೂ ಅನಿಲ, ಕೃಷಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿವೆ. ಸ್ಕೈಡೆಕ್ ಇಂಥವುಗಳಿಗೆ ತಂತ್ರಜ್ಞಾನದ ದೃಷ್ಟಿಯಿಂದ ಆಧುನಿಕವಾದ ಸಲಕರಣೆಗಳು ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ. ಅದರೊಂದಿಗೆ ಡ್ರೋನ್ ಡೇಟಾವನ್ನು ಬಳಸಿಕೊಂಡು, ಸೈಟ್‌ಗಳು ಮತ್ತು ತಮ್ಮ ನಿರ್ಣಾಯಕ ಸ್ವತ್ತುಗಳನ್ನು ಡಿಜಿಟಲ್ ಆಗಿ ರೂಪಾಂತರ ಮಾಡಿಕೊಳ್ಳಬಹುದಾಗಿರುತ್ತದೆ.

ಇದನ್ನೂ ಓದಿ: Assembly Session 2024: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ ನ್ಯೂಸ್‌; ಶೀಘ್ರವೇ ಗೌರವಧನ ಹೆಚ್ಚಳ!

ಈ ಕ್ಲೌಡ್ ಪ್ಲಾಟ್‌ಫಾರ್ಮ್ ಸುರಕ್ಷಿತವಾದ, ಕೇಂದ್ರೀಕೃತ ಡ್ರೋನ್ ನಿರ್ವಹಣೆ ಒದಗಿಸುವುದರ ಜತೆಗೆ ತತ್‌ಕ್ಷಣಕ್ಕೆ ದೃಶ್ಯವನ್ನು ಸಹ ತಂದುಕೊಳ್ಳುತ್ತದೆ. ಸಹಯೋಗ ಹಾಗೂ ವರದಿ ಮಾಡುವ ಸಾಧನಗಳೊಂದಿಗೆ ಸುವ್ಯವಸ್ಥಿತ ಸೈಟ್ ಮೇಲ್ವಿಚಾರಣೆ ಮತ್ತು ನಿಗಾ ವಹಿಸಲು ಅನುಕೂಲ ಮಾಡಿಕೊಡುತ್ತದೆ.

ಸ್ಕೈಡೆಕ್‌ನ ವಿಶೇಷತೆ ಏನು?

ಸ್ಕೈಡೆಕ್ ಎಷ್ಟು ವಿಶಿಷ್ಟ ಅಂದರೆ, ಅದರ ಪೂರ್ವ- ನಿರ್ಮಿತ, ಉದ್ಯಮಕ್ಕೆ ನಿರ್ದಿಷ್ಟ ಕೃತಕ ಬುದ್ಧಿಮತ್ತೆ (ಎಐ- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮಾದರಿಗಳಿಂದಾಗಿ ಅದು ವೈಮಾನಿಕ ದತ್ತಾಂಶಗಳನ್ನು ಶೀಘ್ರವಾಗಿ ವಿಶ್ಲೇಷಣೆ ಮಾಡುತ್ತದೆ. ಪೂರ್ವಭಾವಿಯಾಗಿ ನಿರ್ಧಾರ ಒದಗಿಸುತ್ತದೆ ಮತ್ತು ಉದ್ಯಮದ ಉತ್ಕೃಷ್ಟತೆಯನ್ನು ಸಾಧಿಸುತ್ತದೆ.

ಯೋಜನಾ ನಿರ್ವಹಣೆ, ಹಾರಾಟದ ಯೋಜನೆ ಮತ್ತು ಅನುಷ್ಠಾನ ಇವೆಲ್ಲವನ್ನೂ ಸಂಯೋಜನೆ ಮಾಡುವ ಮೂಲಕವಾಗಿ ಡ್ರೋನ್ ಸೇವಾ ಪೂರೈಕೆದಾರರಿಗೆ ಕೆಲಸದ ಹರಿವು (ವರ್ಕ್ ಫ್ಲೋ) ಸರಾಗ ಮಾಡಿಕೊಡುತ್ತದೆ ಸ್ಕೈಡೆಕ್. ಆಟೋಮೆಟೆಡ್ ಡ್ರೋನ್ ದತ್ತಾಂಶದ ಸಂಸ್ಕರಣೆಗೆ ಇದು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ, ಕ್ಲೌಡ್ ಆಧಾರಿತವಾದ ಸಲ್ಯೂಷನ್ ಆಗಿದ್ದು, ಉದ್ಯಮದ ಅಗತ್ಯಗಳಿಗೆ ವ್ಯಾಪಕವಾಗಿ ನೆರವಾಗುತ್ತದೆ. ಇದರ ಜತೆಗೆ ಸ್ಕೈಡೆಕ್ ಏಕೀಕೃತವಾದ ರೆಪಾಸಿಟರಿ ಡ್ರೋನ್ ದತ್ತಾಂಶವನ್ನು ಒದಗಿಸುತ್ತದೆ, ಸಹಯೋಗ ವಿಶ್ಲೇಷಣೆಯನ್ನು ಸರಳಗೊಳಿಸುತ್ತದೆ ಮತ್ತು ಬಳಕೆದಾರರೊಂದಿಗೆ ಡೇಟಾ ಹಂಚಿಕೊಳ್ಳುತ್ತದೆ.

ಇದನ್ನೂ ಓದಿ: Assembly Session 2024: ಕಾಲುವೆಗಳ ಕೊನೇ ಭಾಗದ ರೈತರಿಗೆ ನೀರು ಖಾತರಿ; ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

ಈ ಕುರಿತು ಆಸ್ಟರಿಯಾ ಏರೋಸ್ಪೇಸ್ ಸಹ ಸಂಸ್ಥಾಪಕ ನೀಲ್ ಮೆಹ್ತಾ ಮಾತನಾಡಿ, “ಸುರಕ್ಷಿತ ಮತ್ತು ವ್ಯಾಪಕವಾದ ಡ್ರೋನ್ ಕಾರ್ಯಾಚರಣೆಗಳು ಮತ್ತು ಡೇಟಾ ನಿರ್ವಹಣೆ ಸಲ್ಯೂಷನ್‌ಗಳನ್ನು ಬಯಸುವ ಉದ್ಯಮಗಳು ಮತ್ತು ವೃತ್ತಿಪರರಿಗೆ ಸ್ಕೈಡೆಕ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ತಿಳಿಸಿದ್ದಾರೆ.

“ಸ್ಕೈಡೆಕ್ ಕಠಿಣವಾದ ಸವಾಲಿನ ಅಂಶಗಳನ್ನು ಸರಿಪಡಿಸುತ್ತದೆ, ದತ್ತಾಂಶವನ್ನು ದಾಖಲಿಸುವುದರಿಂದ ಹಿಡಿದು ಕಾರ್ಯಸಾಧುವಾಗುವಂಥ ಒಳನೋಟಗಳ ತನಕ ಎಲ್ಲ ಉದ್ಯಮಗಳಿಗೂ ಡ್ರೋನ್ ಆಧಾರಿತವಾದ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಕೆಲಸದ ಹರಿವನ್ನು ಸುವ್ಯವಸ್ಥಿತಗೊಳಿಸುತ್ತದೆ. ನಮ್ಮಲ್ಲಿನ ಹೊಂದಿಕೊಳ್ಳುವ ಬೆಲೆಯು ಎಲ್ಲ ಗಾತ್ರದ ಉದ್ಯಮಗಳಿಗೂ-ವ್ಯವಹಾರಗಳಿಗೂ ತಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವುದನ್ನು ಸ್ಕೈಡೆಕ್ ಸಾಮರ್ಥ್ಯ ಖಾತ್ರಿ ಮಾಡುತ್ತದೆ.” ಎಂದು ತಿಳಿಸಿದ್ದಾರೆ.

ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಕುರಿತು

ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಎಂಬುದು ವೈಮಾನಿಕ ದತ್ತಾಂಶದಿಂದ ಕ್ರಿಯಾಶೀಲ ಬುದ್ಧಿಮತ್ತೆಯನ್ನು ಒದಗಿಸುವ ಪೂರ್ಣ ಪ್ರಮಾಣದ ಡ್ರೋನ್ ತಂತ್ರಜ್ಞಾನ ಕಂಪನಿಯಾಗಿದೆ. ಆಸ್ಟರಿಯಾ ತನ್ನ ಆಂತರಿಕ ಹಾರ್ಡ್‌ವೇರ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು ಸರ್ಕಾರ ಹಾಗೂ ಉದ್ಯಮ ಗ್ರಾಹಕರಿಗೆ ಅವರಿಗೆ ಬೇಕಾದಂತ ರೀತಿಯಲ್ಲಿ ರೂಪಿಸಿದ ಗ್ರಾಹಕ ನಿರ್ದಿಷ್ಟ ಡ್ರೋನ್ ಸಲ್ಯೂಷನ್‌ಗಳನ್ನು ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ: Greater Bengaluru Governance Bill 2024: ಗ್ರೇಟರ್ ಬೆಂಗಳೂರಿನಲ್ಲಿ ಯಾವ್ಯಾವ ಏರಿಯಾಗಳು ಸೇರಬಹುದು? ಇದರ ಉದ್ದೇಶ ಏನು?

ದೀರ್ಘಾವಧಿಯ, ಗುಣಮಟ್ಟ-ಕೇಂದ್ರಿತ ಮತ್ತು ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಸೇವೆಗಳನ್ನು ರಕ್ಷಣೆ ಮತ್ತು ಹೋಮ್‌ಲ್ಯಾಂಡ್ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಯುಟಿಲಿಟಿ, ದೂರಸಂಪರ್ಕ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಒದಗಿಸಲು ಆಸ್ಟರಿಯಾವು ವಿಶ್ವಾಸಾರ್ಹ ಪಾಲುದಾರ ಆಗಿದೆ. ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ, ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬಹುಪಾಲು ಸ್ವಾಮ್ಯದ ಅಂಗಸಂಸ್ಥೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ದೇಶ

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Dog Attack: ನಗರದ ಆವಾಸ್ ವಿಕಾಸ್ ಕಾಲೋನಿಯಲ್ಲಿ ಜುಲೈ 16ರಂದು ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತ ವಕೀಲ ವಿಕಾಸ್ ಭವನದ ಬಳಿ ವಾಸವಿದ್ದು, ಅಲ್ಲಿನ ಬಿಜೆಪಿ ಮುಖಂಡ, ದಿವಂಗತ ವಕೀಲ ಸುಧೀರ್ ಕುಮಾರ್ ಸಿಂಗ್ ಸಿಧು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

VISTARANEWS.COM


on

Dog attack
Koo

ಲಖನೌ: ಉತ್ತರಪ್ರದೇಶ(Uttar Pradesh)ದಲ್ಲಿ ಶ್ವಾನ ದಾಳಿ ನಿಲ್ಲುತ್ತಲೇ ಇಲ್ಲ. ಬಾರಬಂಕಿಯಲ್ಲಿ ವಕೀಲ(Lawyer)ರೊಬ್ಬರ ಮೇಲೆ ಪಿಟ್‌ಬುಲ್‌ ಶ್ವಾನ ದಾಳಿ(Dog Attack) ನಡೆಸಿರುವ ಪ್ರಕರಣ ದಾಖಲಾಗಿದೆ. ನಡುರಸ್ತೆಯಲ್ಲೇ ವಕೀಲನ ಖಾಸಗಿ ಅಂಗಕ್ಕೆ ನಾಯಿ ಕಚ್ಚಿದೆ. ಗಂಭೀರವಾಗಿ ಗಾಯಗೊಂಡಿದ್ದ ವಕೀಲನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಲಕ್ನೋಗೆ ಕಳುಹಿಸಲಾಯಿತು.

ನಗರದ ಆವಾಸ್ ವಿಕಾಸ್ ಕಾಲೋನಿಯಲ್ಲಿ ಜುಲೈ 16ರಂದು ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತ ವಕೀಲ ವಿಕಾಸ್ ಭವನದ ಬಳಿ ವಾಸವಿದ್ದು, ಅಲ್ಲಿನ ಬಿಜೆಪಿ ಮುಖಂಡ, ದಿವಂಗತ ವಕೀಲ ಸುಧೀರ್ ಕುಮಾರ್ ಸಿಂಗ್ ಸಿಧು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲಿಂದ ಅವನು ತನ್ನ ಮನೆಯ ಕಡೆಗೆ ಹಿಂತಿರುಗುತ್ತಿರುವಾಗ ದರಿಯಾಬಾದ್ ಬ್ಲಾಕ್ ಮುಖ್ಯಸ್ಥ ಆಕಾಶ್ ಪಾಂಡೆ ಅವರ ಮನೆ ಬಳಿ ತಲುಪಿದ ತಕ್ಷಣ, ಅವರ ತಂದೆ ವಿವೇಕಾನಂದ ಪಾಂಡೆ ಅವರನ್ನು ಸಂಭಾಷಣೆಗೆ ನಿಲ್ಲಿಸಿದರು. ಈ ವೇಳೆ ಶೌಚಾಲಯಕ್ಕೆ ತೆರಳಲು ಗಡಿ ಗೋಡೆ ಬಳಿ ಬಂದಿದ್ದ ವೇಳೆ ಸಾಕು ನಾಯಿ ದಾಳಿ ಮಾಡಿದೆ ಎಂದಿದ್ದಾರೆ.

ಲಕ್ನೋದಲ್ಲಿ ಚಿಕಿತ್ಸೆ

ಕುಟುಂಬ ಸದಸ್ಯರ ಪ್ರಕಾರ, ನಾಯಿ ನೇರವಾಗಿ ವಕೀಲರ ಖಾಸಗಿ ಅಂಗದ ಮೇಲೆ ದಾಳಿ ಮಾಡಿತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಕೀಲರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಸ್ಥಿತಿಯನ್ನು ನೋಡಿದ ವೈದ್ಯರು ಪ್ರಥಮ ಚಿಕಿತ್ಸೆಯ ನಂತರವೇ ಅವರನ್ನು ಲಖ್ನಾಫ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ. ಇದಾದ ಬಳಿಕ ವಕೀಲರ ಕುಟುಂಬದವರು ಅವರನ್ನು ಲಕ್ನೋ ವೈದ್ಯಕೀಯ ಕಾಲೇಜಿನ ಟ್ರಾಮಾ ಸೆಂಟರ್‌ಗೆ ದಾಖಲಿಸಿದ್ದರು. ಅಲ್ಲಿ ಅವರ ಚಿಕಿತ್ಸೆ ಮುಂದುವರಿಯುತ್ತಿದೆ ಎಂದಿದ್ದಾರೆ.

ಮೂತ್ರ ವಿಸರ್ಜನೆ ವೇಳೆ ನಡೆದಿತ್ತಾ ದಾಳಿ?

ಇನ್ನು ಮತ್ತೊಂದು ವರದಿ ಪ್ರಕಾರ ಅಂತ್ಯಕ್ರಿಯೆ ಮುಗಿಸಿಕೊಂಡು ಸಂತ್ರಸ್ತ ವಕೀಲ ವಾಪಾಸಾಗುತ್ತಿದ್ದಾಗ, ದಾರಿ ಮಧ್ಯೆ ಮೂತ್ರ ವಿಸರ್ಜನೆಗೆ ಮುಂದಾಗಿದ್ದರು. ಈ ವೇಳೆ ಶ್ವಾನ ದಾಳಿ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಒಬ್ಬ ಜವಾಬ್ದಾರಿಯುತ ವಕೀಲನಾಗಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಎಷ್ಟು ಸರಿ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ಇಂತಹ ಅಪಾಯಕಾರಿ ಶ್ವಾನಗಳನ್ನು ಸಾಕುವವರ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆಯೂ ಪ್ರಕರಣಗಳು ನಡೆದಿವೆ

ಉತ್ತರ ಪ್ರದೇಶದಲ್ಲಿ ಪಿಟ್‌ಬುಲ್ ನಾಯಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ನೋಯ್ಡಾ, ಗಾಜಿಯಾಬಾದ್, ಮೀರತ್ ಮತ್ತು ಲಕ್ನೋದಲ್ಲಿ ಪಿಟ್‌ಬುಲ್ ನಾಯಿಗಳ ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಗಾಯಾಳುಗಳ ಹೇಳಿಕೆ ಆಧರಿಸಿ ಪೊಲೀಸ್ ಪ್ರಕರಣಗಳನ್ನೂ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ದೆಹಲಿ ಎನ್‌ಸಿಆರ್‌ನಲ್ಲಿ ಇಂತಹ ಹಲವಾರು ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಈ ಅಪಾಯಕಾರಿ ನಾಯಿಗಳನ್ನು ಸಾಕುವುದನ್ನು ನಿಷೇಧಿಸಿದೆ. ಇದರ ಹೊರತಾಗಿಯೂ, ಅನೇಕ ಜನರು ಈ ನಾಯಿಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಶ್ವಾನಗಳ ದಾಳಿಗೆ ಕುರಿಗಳು ಬಲಿ; ಕೊಡಗಿನಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ

Continue Reading

ದೇಶ

Supreme Court: ರೈತರು, ಸರ್ಕಾರದ ಮಧ್ಯೆ ‘ತಟಸ್ಥ ಅಂಪೈರ್’‌ ಬೇಕು; ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ

Supreme Court: ಸಚಿವರು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆಯೇ? ಸರ್ಕಾರ ಹಾಗೂ ರೈತರ ಮಧ್ಯೆ ನಂಬಿಕೆಯ ಸಮಸ್ಯೆ ಇದೆ. ಇದಕ್ಕಾಗಿ ಕೆಲ ತಟಸ್ಥ ನಿರ್ಣಾಯಕರು ಬೇಕಾಗಿದ್ದಾರೆ ಎಂದು ಕೋರ್ಟ್‌ ತಿಳಿಸಿತು. ಹಾಗೆಯೇ, ಗಡಿಯಲ್ಲಿ ಯಥಾಸ್ಥಿತಿ ಮುಂದುವರಿಸಬೇಕು ಎಂಬುದಾಗಿ ಪಂಜಾಬ್‌ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳಿಗೆ ಸೂಚಿಸಿತು.

VISTARANEWS.COM


on

Supreme Court
Koo

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP Law) ನೀಡುವ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಐದಾರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾತುಕತೆಗೆ ಮುಂದಾಗಿದ್ದ ಕೇಂದ್ರ ಸರ್ಕಾರವು, ಐದು ವರ್ಷಗಳಿಗೆ ಎಂಎಸ್‌ಪಿ ಖಾತರಿ ನೀಡಲಾಗುವುದು ಎಂದಿದೆ. ಆದರೆ, ಇದಕ್ಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇನ್ನು, ಆಗಸ್ಟ್‌ 15ರಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದರ ಮಧ್ಯೇಯೇ, “ಸರ್ಕಾರ ಹಾಗೂ ರೈತರ ನಡುವೆ ಇರುವ ನಂಬಿಕೆಯ ಸಮಸ್ಯೆಯನ್ನು ಬಗೆಹರಿಸಲು ತಟಸ್ಥ ಅಂಪೈರ್‌ಗಳು (ನಿರ್ಣಾಯಕರು) ಬೇಕಾಗಿದ್ದಾರೆ” ಎಂದು ಸಲಹೆ ನೀಡಿದೆ.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಗಡಿ ಬಂದ್‌ ಆಗಿದ್ದು, ಇದನ್ನು ಓಪನ್‌ ಮಾಡಬೇಕು ಎಂಬುದಾಗಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿತು. “ರೈತರ ಜತೆ ಸಂಧಾನ ಮಾಡಿಕೊಳ್ಳಲು ಸರ್ಕಾರ ಪ್ರಯತ್ನಿಸಿದೆಯೇ? ಯಾವುದಾದರೂ ಕ್ರಮ ತೆಗೆದುಕೊಂಡಿದೆಯೇ? ಸಚಿವರು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆಯೇ? ಸರ್ಕಾರ ಹಾಗೂ ರೈತರ ಮಧ್ಯೆ ನಂಬಿಕೆಯ ಸಮಸ್ಯೆ ಇದೆ. ಇದಕ್ಕಾಗಿ ಕೆಲ ತಟಸ್ಥ ನಿರ್ಣಾಯಕರು ಬೇಕಾಗಿದ್ದಾರೆ” ಎಂದು ಕೋರ್ಟ್‌ ತಿಳಿಸಿತು. ಹಾಗೆಯೇ, ಗಡಿಯಲ್ಲಿ ಯಥಾಸ್ಥಿತಿ ಮುಂದುವರಿಸಬೇಕು ಎಂಬುದಾಗಿ ಪಂಜಾಬ್‌ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ತಟಸ್ಥ ತೀರ್ಪುಗಾರರು ಇದ್ದರೆ ಹೆಸರು ಸೂಚಿಸಿ ಎಂಬುದಾಗಿಯೂ ಸರ್ಕಾರಗಳಿಗೆ ತಿಳಿಸಿತು.

farmers protest shabhu
farmers protest shabhu

ಆಗಸ್ಟ್‌ 15ರಂದು ದೇಶಾದ್ಯಂತ ರ‍್ಯಾಲಿ

ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಗಸ್ಟ್‌ 15ರಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಳ್ಳಲಾಗುವುದು ಎಂದು ರಾಹುಲ್‌ ಗಾಂಧಿ ಜತೆ ಮಾತುಕತೆ ನಡೆಸಿದ ಬಳಿಕ ರೈತ ಸಂಘಟನೆಗಳ ನಾಯಕರು ತಿಳಿಸಿದ್ದಾರೆ. ರೈತರು ಕೈಗೊಂಡ ದೆಹಲಿ ಚಲೋ ಹೋರಾಟವು ಆಗಸ್ಟ್‌ 31ಕ್ಕೆ 200 ದಿನ ಪೂರೈಸುತ್ತದೆ. ಹಾಗಾಗಿ, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ತೀರ್ಮಾನಿಸಲಾಗಿದೆ. ಪಂಜಾಬ್‌ ಹಾಗೂ ಹರಿಯಾಣದ ಗಡಿಗೆ ರೈತರು ಆಗಮಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದಾಗಿ ರೈತ ಸಂಘಟನೆಗಳು ಮನವಿ ಮಾಡಿದವು.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆಯೇ, ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್‌ ನೀಡಿತ್ತು.

ಮುಂದಿನ ಐದು ವರ್ಷಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯೂ ಕೇಂದ್ರದ ಆಫರ್‌ಗಳಲ್ಲಿ ಸೇರಿತ್ತು. ಆದರೆ, ಕೇಂದ್ರ ಸರ್ಕಾರದ ಆಫರ್‌ ತಿರಸ್ಕರಿಸಿದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Assembly Session 2024: ಕಾಲುವೆಗಳ ಕೊನೇ ಭಾಗದ ರೈತರಿಗೆ ನೀರು ಖಾತರಿ; ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Continue Reading
Advertisement
King Chopper
ದೇಶ17 mins ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ18 mins ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು30 mins ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ33 mins ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು34 mins ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Asteria Aerospace has introduced a SkyDeck platform that helps in various fields including agriculture
ದೇಶ37 mins ago

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

Health Tips Kannada
ಆರೋಗ್ಯ1 hour ago

Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

Dog attack
ದೇಶ1 hour ago

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Paris Olympics
ಕ್ರೀಡೆ1 hour ago

Paris Olympics: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು

Supreme Court
ದೇಶ2 hours ago

Supreme Court: ರೈತರು, ಸರ್ಕಾರದ ಮಧ್ಯೆ ‘ತಟಸ್ಥ ಅಂಪೈರ್’‌ ಬೇಕು; ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌