Caste Name on Vehicle : ಕಾರುಗಳ ಮೇಲೆ ಮಿಂಚುತ್ತಿವೆ ಜಾತಿ ಹೆಸರು; ಫೋಟೋ ಹಾಕಿ ತೆಗಳಿದ ವಕೀಲೆ - Vistara News

ದೇಶ

Caste Name on Vehicle : ಕಾರುಗಳ ಮೇಲೆ ಮಿಂಚುತ್ತಿವೆ ಜಾತಿ ಹೆಸರು; ಫೋಟೋ ಹಾಕಿ ತೆಗಳಿದ ವಕೀಲೆ

ದೆಹಲಿಯಲ್ಲಿ ಕಾರಿನ ಮೇಲೆ ಜಾತಿ ಹೆಸರು (Caste Name on Vehicle) ಬರೆದುಕೊಂಡಿರುವ ಫೋಟೋಗಳನ್ನು ವಕೀಲೆ ಸ್ವಾತಿ ಅವರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಂಚಾರ ಸುಲಭವಾಗಲೆಂದು ಕೊಂಡುಕೊಳ್ಳುವ ವಾಹನಗಳ ಮೇಲೆ ಜಾತಿ ಹೆಸರು (Caste Name on Vehicle) ಹಾಕಿಕೊಂಡು ಮೆರೆಯುವವರನ್ನು ನೀವು ನೋಡಿರುತ್ತೀರಿ. ಕರ್ನಾಟಕದಲ್ಲಿ ಇದು ಸಾಮಾನ್ಯವಾಗಿದೆಯಾದರೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇದಕ್ಕೆ ಮನ್ನಣೆ ಇಲ್ಲ. ಜಾತಿ ಹೆಸರನ್ನು ಗಾಡಿ ಮೇಲೆ ಬರೆಸಿದರೆ ಅವರಿಗೆ ದಂಡವನ್ನೂ ಹಾಕಲಾಗುತ್ತದೆ. ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ರೀತಿಯ ಯಾವುದೇ ಕ್ರಮ ಇಲ್ಲದ ಹಿನ್ನೆಲೆ ಅಲ್ಲಿನ ವಾಹನಗಳ ಮೇಲೆ ಜಾತಿ ಹೆಸರು ಕಾಣಬಹುದು. ಅಂತದ್ದೇ ಒಂದು ಪೋಸ್ಟ್‌ ಅನ್ನು ವಕೀಲೆ ಒಬ್ಬರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.‌

ಇದನ್ನೂ ಓದಿ: Brahmin cookies: ಬಿಸ್ಕಿಟ್​ ಮೇಲೆ ಬ್ರಾಹ್ಮಣ ವಟುವನ್ನು ಚಿತ್ರಿಸಿದ ಬೇಕರಿ; ಜಾತಿ ಇಲ್ಲೂ ಬಂತಾ ಎಂದು ನೆಟ್ಟಿಗರ ಅಸಮಾಧಾನ

ಒಂದು ಕಾರಿನ ಮೇಲೆ “ಬ್ರಾಹ್ಮಣ”, ಇನ್ನೊಂದು ಕಾರಿನ ಮೇಲೆ “ಜಾಟ್‌” ಎಂದು ಬರೆದಿರುವ ಎರಡು ಫೋಟೋಗಳನ್ನು ವಕೀಲೆ ಸ್ವಾತಿ ಖನ್ನಾ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಭಾರತೀಯರು ಮತ್ತು ಅವರ ನಿಷ್ಪ್ರಯೋಜಕ ಜಾತಿಯ ಗೀಳು. ಈ ಜನರಿಗೆ ಇನ್ನೂ ಯಾವುದೇ ದಂಡಗಳನ್ನು ಹಾಕುತ್ತಿಲ್ಲವೇ?” ಎಂದು ಆಕೆ ಕ್ಯಾಪ್ಶನ್‌ನಲ್ಲಿ ಪ್ರಶ್ನಿಸಿದ್ದಾರೆ.


ಸ್ವಾತಿ ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. “ಈ ರೀತಿ ಜಾತಿ ಹೆಸರು ಹಾಕುವ ಬದಲು ಅವರ ಕುಟುಂಬದಲ್ಲಿನ ಹೆಣ್ಣು ಮಕ್ಕಳು ಪಡೆದಿರುವ ಹೈಯಸ್ಟ್‌ ಡಿಗ್ರಿ ಯಾವುದೆಂದು ಹಾಕಿಸಿಕೊಂಡರೆ ಬೇರೆಯವರಿಗೂ ಅವರ ಮೌಲ್ಯ ತಿಳಿಯುತ್ತದೆ” ಎಂದು ಒಬ್ಬ ನೆಟ್ಟಿಗ ಹೇಳಿದ್ದಾನೆ. ಬೆಂಗಳೂರಿನ ಹಲವರು ಇಲ್ಲಿನ ಜಾತಿ ಹೆಸರು ಅಂಟಿಕೊಂಡಿರುವ ಹೋಟೆಲ್‌ಗಳ ಫೋಟೋಗಳನ್ನು ತೆಗೆದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಅನೇಕರು ಅನೇಕ ರೀತಿಯ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ayodhya Ram Mandir: ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ; ಪೂಜಿಸಿ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು

Ayodhya Ram Mandir: ಶೃಂಗೇರಿ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥರು (sri vidhushekhara bharati Teertha) ಈ ಸಂದರ್ಭದಲ್ಲಿ ಹಾಜರಿದ್ದು, ಬೆಳ್ಳಿಯ ಬಿಲ್ಲು- ಬಾಣದ ಅಂದಚಂದವನ್ನು ಸವಿದರು. ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು.

VISTARANEWS.COM


on

ayodhya ram mandir 1
Koo

ಚಿಕ್ಕಮಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ayodhya Ram Mandir) ಆರಾಧ್ಯ ಮೂರ್ತಿ ಬಾಲಕ ರಾಮ (Balak Ram) ನಿಗೆ ಬೆಳ್ಳಿಯ ಬಿಲ್ಲು-ಬಾಣ (Silver bow, silver Arrow) ಸಮರ್ಪಿಸಲಾಗುತ್ತಿದೆ. ಬೆಂಗಳೂರು ಮೂಲದ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು-ಬಾಣ ಸಮರ್ಪಣೆ ಮಾಡುತ್ತಿದ್ದು, ಅದಕ್ಕೂ ಮೊದಲು ಶೃಂಗೇರಿಯ ಶಾರದಾ ಪೀಠದಲ್ಲಿ (Sringeri Sharada Peetham) ಶ್ರೀ ಗುರುಗಳ ಮುಂದೆ ಅದನ್ನು ಪ್ರದರ್ಶಿಸಿದರು.

ಅತ್ಯಂತ ಸುಂದರ ಹಾಗೂ ಮನಮೋಹಕವಾದ, ಬೆಳ್ಳಿಯಿಂದ ಮಾಡಲಾದ ಈ ಬಿಲ್ಲು-ಬಾಣವನ್ನು ಶೃಂಗೇರಿ ಹಿರಿಯ ಹಾಗೂ ಕಿರಿಯ ಶ್ರೀಗಳು ಪೂಜಿಸಿ ಕಳಿಸಿಕೊಟ್ಟರು. ಶೃಂಗೇರಿ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥರು (sri vidhushekhara bharati Teertha) ಈ ಸಂದರ್ಭದಲ್ಲಿ ಹಾಜರಿದ್ದು, ಬೆಳ್ಳಿಯ ಬಿಲ್ಲು- ಬಾಣದ ಅಂದಚಂದವನ್ನು ಸವಿದರು. ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು.

ರಾಮ ಮಂದಿರದ ಪ್ರತಿಷ್ಠಾಪನೆಗೆ ಶೃಂಗೇರಿ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ಶ್ರೀಗಳು ಶುಭಹಾರೈಕೆಯ ಸಂದೇಶವನ್ನು ಕಳಿಸಿಕೊಟ್ಟಿದ್ದರಲ್ಲದೆ, ಆ ದಿನ ಮಠದಲ್ಲಿ ಹಾಗೂ ಶಾಖಾಮಠಗಳಲ್ಲಿ ಶ್ರೀರಾಮನ ಆರಾಧನೆಗೆ ನಿರ್ದೇಶನ ನೀಡಿದ್ದರು.

ಚಿನ್ನದ ಬಿಲ್ಲು ಬಾಣ

ಪ್ರಸ್ತುತ ಅಯೋಧ್ಯಾ ರಾಮನ ಕೈಯಲ್ಲಿ ಚಿನ್ನದ ಬಿಲ್ಲು ಬಾಣ ಇವೆ. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನವೇ ಹಲವು ಅಮೂಲ್ಯ ಉಡುಗೊರೆಗಳು ಅಯೋಧ್ಯೆಯನ್ನು ತಲುಪಿದ್ದವು. ದೇಶಾದ್ಯಂತ ಹಲವು ಭಕ್ತರು ಅನೇಕ ಉಡುಗೊರೆಗಳನ್ನು ಶ್ರೀರಾಮನಿಗಾಗಿ ಅಯೋಧ್ಯೆಗೆ ಕಳಿಸಿದ್ದರು. ಅತ್ತ ನೇಪಾಳದಿಂದಲೂ ಅತ್ಯಮೂಲ್ಯ ವಸ್ತುಗಳು ಅಯೋಧ್ಯೆ ಸೇರಿದ್ದವು. ಶ್ರೀರಾಮನಿಗಾಗಿ ಚಿನ್ನದ ಬಿಲ್ಲು (golden bow), ಚಿನ್ನದ ಬಾಣ (golden arrow), ಚಿನ್ನದ ಘಂಟೆ (golden bell) ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಬಂದಿದ್ದವು.

ಒನವಿಲ್ಲು ಸಮರ್ಪಣೆ

ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು (Padmanabhaswamy Temple) ಕೂಡ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ (Ayodhya Ram Mandir) ಪ್ರತಿಷ್ಠಾಪನೆ ಸಮಾರಂಭದ ಸಂದರ್ಭದಲ್ಲಿ ಸಾಂಪ್ರದಾಯಿಕ ಬಿಲ್ಲು ‘ಒನವಿಲ್ಲು’ (Onavillu) ಸಮರ್ಪಿಸಿತ್ತು. ‘ಒನವಿಲ್ಲು’ ಮೂರು ಶತಮಾನಗಳ ಹಳೆಯ ಸಂಪ್ರದಾಯದ ಭಾಗವಾಗಿ ಭಗವಾನ್ ಶ್ರೀ ಪದ್ಮನಾಭನಿಗೆ ಸಮರ್ಪಿತವಾದ ವಿಧ್ಯುಕ್ತ ಅರ್ಪಣೆಯಾಗಿದೆ. ಇಲ್ಲಿನ ಸ್ಥಳೀಯರು ಇದನ್ನು ಪ್ರತಿ ವರ್ಷ ‘ತಿರು ಓಣಂ’ ಹಬ್ಬದಂದು ಪದ್ಮನಾಭ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಭಕ್ತರಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ‘ವಿಲ್ಲು’ ಸಾಮಾನ್ಯವಾಗಿ ಬಿಲ್ಲಿನ ಆಕಾರದ ಮರದ ಫಲಕವಾಗಿದ್ದು, ಅನಂತಶಯನಂ ಪೌರಾಣಿಕ ಸರ್ಪ ಅನಂತ, ದಶಾವತಾರಂ ವಿಷ್ಣುವಿನ ಅವತಾರಗಳು, ಶ್ರೀರಾಮ ಪಟ್ಟಾಭಿಷೇಕ ಮುಂತಾದ ವರ್ಣಚಿತ್ರಗಳನ್ನು ಹೊಂದಿದೆ.

ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

ಭಗವಾನ್ ಶ್ರೀರಾಮನ (sriram) ಜನ್ಮ ಸ್ಥಳವಾದ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ರಾಮಲಲ್ಲಾನ (ram lalla) ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಪ್ರತಿನಿತ್ಯ ಸುಮಾರು ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ದೇವಾಲಯ ಉದ್ಘಾಟನೆಯಾದ ಬಳಿಕ ಈವರೆಗೆ ಸುಮಾರು 1.5 ಕೋಟಿ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Theertha Kshetra Trust) ಪ್ರಧಾನ ಕಾರ್ಯದರ್ಶಿ (Principal Secretary) ಚಂಪತ್ ರಾಯ್‌ (Champat Rai), ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ಇದನ್ನೂ ಓದಿ: Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

Continue Reading

ವಾಣಿಜ್ಯ

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Highest Paid CEO: 2024ರ ಹಣಕಾಸು ವರ್ಷದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಐಟಿ ಸಿಇಒ ವಿಪ್ರೊದ ಥಿಯೆರ್ರಿ ಡೆಲಾಪೋರ್ಟೆ ಅವರು ಏಪ್ರಿಲ್ 6ರಂದು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ 32 ವರ್ಷಗಳ ಕಾಲ ಅನುಭವಿ ಶ್ರೀನಿವಾಸ್ ಪಾಲ್ಲಿಯಾ ಅವರನ್ನು
ನೇಮಿಸಲಾಗಿದೆ. ಬೃಹತ್‌ ಐಟಿ ಕಂಪನಿಗಳ ಸಿಇಒಗಳು ಹೆಚ್ಚು ಸಂಬಳ ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Highest Paid CEO
Koo

ವಿಪ್ರೋದ (Wipro) ಮಾಜಿ ಸಿಇಒ (ex-ceo) ಮತ್ತು ಆಡಳಿತ ನಿರ್ದೇಶಕ ಥಿಯೆರ್ರಿ ಡೆಲಾಪೋರ್ಟೆ (Thierry Delaporte) ಅವರು 20 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 166 ಕೋಟಿ ರೂ. ಗಳಿಸಿ ಸತತ ಎರಡನೇ ವರ್ಷ ಐಟಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ (Highest Paid CEO) ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಥಿಯೆರಿ ಡೆಲಾಪೋರ್ಟೆ ಅವರು ಏಪ್ರಿಲ್‌ 6ರಂದು ಕಂಪನಿಗೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಕಂಪನಿಯು 32 ವರ್ಷಗಳ ಕಾಲ ಅನುಭವ ಹೊಂದಿರುವ ಶ್ರೀನಿವಾಸ್ ಪಾಲ್ಲಿಯಾ ಅವರನ್ನು ನೇಮಕ ಮಾಡಿದೆ. ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ ವಿಪ್ರೊ ಸಲ್ಲಿಸಿರುವ 20 ಎಫ್ ಫೈಲಿಂಗ್‌ಗಳ ಪ್ರಕಾರ ಡೆಲಾಪೋರ್ಟೆ 3.9 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಸಂಬಳ ಮತ್ತು ಭತ್ಯೆ, 5 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಕಮಿಷನ್/ ವೇರಿಯಬಲ್ ಪೇ, ಸುಮಾರು 7 ಮಿಲಿಯನ್ ಡಾಲರ್ ಇತರ ಮತ್ತು 4 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ದೀರ್ಘಾವಧಿಯ ಪರಿಹಾರವನ್ನು ಗಳಿಸಿದ್ದಾರೆ.

ಶ್ರೀನಿವಾಸ್ ಪಲ್ಲಿಯಾ ಅವರು ಸುಮಾರು 50 ಕೋಟಿ ರೂಪಾಯಿಗಳ ವಾರ್ಷಿಕ ಸಂಭಾವನೆ ಪ್ಯಾಕೇಜ್‌ ಸ್ವೀಕರಿಸಿದ್ದಾರೆ. ಇದರಿಂದ ಅವರು ಆರ್ಥಿಕ ವರ್ಷ 2025ರಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಸಿಇಒ ಆಗಿದ್ದಾರೆ. ಕಂಪನಿಯ ಆದಾಯವು ಇಳಿಮುಖವಾಗುತ್ತಿರುವ ಹೊತ್ತಲ್ಲಿ ಹೊಸ ಸಿಇಒ ನೇಮಕ ವೇತನದ ನಡುವಿನ ಅಸಮಾನತೆಯನ್ನು ಹೆಚ್ಚಿಸಿದೆ. ಸಿಇಒ ವೇತನವು ಸತತ ಎರಡನೇ ವರ್ಷಕ್ಕೆ ಹೆಚ್ಚಾಗಿದೆ.

ಮತ್ತೊಂದೆಡೆ ವಿಪ್ರೋ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ ಅವರು ಹೆಚ್ಚುತ್ತಿರುವ ಏಕೀಕೃತ ನಿವ್ವಳ ಲಾಭದ ಮೇಲೆ ಶೇ. 0.35ರಷ್ಟು ಕಮಿಷನ್‌ಗೆ ಅರ್ಹರಾಗಿದ್ದಾರೆ. ಕಂಪನಿಯ ಹಣಕಾಸಿನ ವರ್ಷದಲ್ಲಿ ನಷ್ಟವನ್ನು ಅನುಭವಿಸಿದ ಕಾರಣ ಅದನ್ನು ತಡೆಹಿಡಿಯಲಾಗಿದೆ.

ಕಂಪನಿಯ ಆದಾಯ ಇಳಿಕೆ

ಆರ್ಥಿಕ ವರ್ಷ 2024ರ ಪೂರ್ಣ ವರ್ಷದಲ್ಲಿ ವಿಪ್ರೋ ಆದಾಯವು ವರ್ಷಕ್ಕೆ 90,486 ಕೋಟಿಗಳಿಂದ 89,760 ಕೋಟಿಗೆ ಇಳಿದಿದೆ.

ಅತಿ ಹೆಚ್ಚು ವಾರ್ಷಿಕ ಸಂಭಾವನೆ

2023- 24ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ವಾರ್ಷಿಕ ಸಂಭಾವನೆ ಪ್ಯಾಕೇಜ್‌ನಲ್ಲಿ 56 ಕೋಟಿ ರೂ. ಆಗಿದೆ. ಎಚ್‌ಸಿಎಲ್‌ಟೆಕ್‌ನ ಸಿ ವಿಜಯಕುಮಾರ್, 28.4 ಕೋಟಿ ರೂ. ಗಳಿಸಿದ್ದಾರೆ. L&T ಮತ್ತು Mindtree ವಿಲೀನದ ಅನಂತರ ನವೆಂಬರ್ 2022 ರಲ್ಲಿ ಚುಕ್ಕಾಣಿ ಹಿಡಿದ ಅದರ ಸಿಇಒ ದೇಬಾಶಿಸ್ ಚಟರ್ಜಿ ಆರ್ಥಿಕ ವರ್ಷ 22-23ರಲ್ಲಿ 17.5 ಕೋಟಿ ರೂ. ಗಳಿಸಿದ್ದಾರೆ.

ಇದನ್ನೂ ಓದಿ: Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

ಟೆಕ್ ಮಹೀಂದ್ರಾದ ಮೋಹಿತ್ ಜೋಶಿ ಅವರು ವಾರ್ಷಿಕವಾಗಿ 6.5 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಿಇಒ ಮತ್ತು ಎಂಡಿ ಕೆ. ಕೃತಿವಾಸನ್ ಅವರು 2024ರಲ್ಲಿ ವಾರ್ಷಿಕ ಪರಿಹಾರದಲ್ಲಿ 25.36 ಕೋಟಿ ರೂ. ಗಳನ್ನು ಪಡೆದರು.

2024ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಡೆಲಾಪೋರ್ಟೆ ಅವರಿಗೆ ನೀಡಿದ ಪರಿಹಾರವು 9,89,130 ಅನ್ವೆಸ್ಟೆಡ್ ಸ್ಟಾಕ್ ಆಯ್ಕೆ ಮತ್ತು 4.33 ಮಿಲಿಯನ್ ಡಾಲರ್ ಮೊತ್ತದ ನಗದು ಪರಿಹಾರವನ್ನು ಒಳಗೊಂಡಿದೆ.

Continue Reading

ದೇಶ

Share Market: ದಾಖಲೆ ಬರೆದ ನಿಫ್ಟಿ, ಸೆನ್ಸೆಕ್ಸ್‌ ಭರ್ಜರಿ ನೆಗೆತ; ಹೂಡಿಕೆದಾರರಿಗೆ ಭಾರಿ ಲಾಭ!

Share Market: ಆಟೋಮೊಬೈಲ್‌, ಐಟಿ, ಪಿಎಸ್‌ಯು (ಸಾರ್ವಜನಿಕ ವಲಯದ ಬ್ಯಾಂಕ್‌ಗಳು), ಖಾಸಗಿ ಬ್ಯಾಂಕ್‌ಗಳು ಹಾಗೂ ಮೂಲ ಸೌಕರ್ಯ ಕ್ಷೇತ್ರದ ಕಂಪನಿಗಳು ಲಾಭ ಗಳಿಸಿದವು. ಫಾರ್ಮಾ, ಎಫ್‌ಎಂಸಿಜಿ, ಇಂಧನ ಕ್ಷೇತ್ರದ ಕಂಪನಿಗಳು ನಷ್ಟ ಅನುಭವಿಸಿವೆ. ಆಕ್ಸಿಸ್‌ ಬ್ಯಾಂಕ್‌, ಎಲ್‌&ಟಿ, ಮಾರುತಿ ಸುಜುಕಿ, ಇಂಡಸ್‌ಐಎನ್‌ಡಿ ಬ್ಯಾಂಕ್‌, ಇನ್ಫೋಸಿಸ್‌, ಬಜಾಜ್‌, ಎಸ್‌ಬಿಐ, ಟೈಟಾನ್‌, ಐಸಿಐಸಿಐ ಬ್ಯಾಂಕ್‌ಗಳು ಲಾಭ ಗಳಿಸಿದ ಪ್ರಮುಖ ಕಂಪನಿಗಳಾಗಿವೆ.

VISTARANEWS.COM


on

Share Market
Koo

ಮುಂಬೈ: ಷೇರು ಮಾರುಕಟ್ಟೆಯಲ್ಲಿ (Share Market) ಗುರುವಾರ (ಮೇ 23) ಹೂಡಿಕೆದಾರರಿಗೆ ಭಾರಿ ಲಾಭವಾಗಿದೆ. ನಿಫ್ಟಿ (Nifty) 303 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 22,900 ಪಾಯಿಂಟ್ಸ್‌ ತಲುಪಿದರೆ, ನಿಫ್ಟಿ 986 ಅಂಕಗಳ ಏರಿಕೆಯೊಂದಿಗೆ 75,206 ಪಾಯಿಂಟ್ಸ್‌ ತಲುಪುವ ಮೂಲಕ ದಾಖಲೆ ಸೃಷ್ಟಿಸಿತು. ಸೆನ್ಸೆಕ್ಸ್‌ (Sensex) ಶೇ.1.33ರಷ್ಟು ಏರಿಕೆಯಾದರೆ, ನಿಫ್ಟಿ ಕೂಡ ಶೇ.1.33ರಷ್ಟು ಏರಿಕೆಯಾಯಿತು. ನಿಫ್ಟಿ ಮಿಡ್‌ಕ್ಯಾಪ್‌ ಇಂಡೆಕ್ಸ್‌ ಕೂಡ 238 ಪಾಯಿಂಟ್‌ಗಳ ಏರಿಕೆಯೊಂದಿಗೆ 52,405 ಪಾಯಿಂಟ್ಸ್‌ ತಲುಪಿದರೆ, ನಿಫ್ಟಿಯ ಸ್ಮಾಲ್‌ಕ್ಯಾಪ್‌ ಕೂಡ 27 ಅಂಕಗಳ ಏರಿಕೆಯೊಂದಿಗೆ 16,909 ಪಾಯಿಂಟ್ಸ್‌ ತಲುಪಿತು.

ಆಟೋಮೊಬೈಲ್‌, ಐಟಿ, ಪಿಎಸ್‌ಯು (ಸಾರ್ವಜನಿಕ ವಲಯದ ಬ್ಯಾಂಕ್‌ಗಳು), ಖಾಸಗಿ ಬ್ಯಾಂಕ್‌ಗಳು ಹಾಗೂ ಮೂಲ ಸೌಕರ್ಯ ಕ್ಷೇತ್ರದ ಕಂಪನಿಗಳು ಲಾಭ ಗಳಿಸಿದವು. ಫಾರ್ಮಾ, ಎಫ್‌ಎಂಸಿಜಿ, ಇಂಧನ ಕ್ಷೇತ್ರದ ಕಂಪನಿಗಳು ನಷ್ಟ ಅನುಭವಿಸಿವೆ. ಆಕ್ಸಿಸ್‌ ಬ್ಯಾಂಕ್‌, ಎಲ್‌&ಟಿ, ಮಾರುತಿ ಸುಜುಕಿ, ಇಂಡಸ್‌ಐಎನ್‌ಡಿ ಬ್ಯಾಂಕ್‌, ಇನ್ಫೋಸಿಸ್‌, ಬಜಾಜ್‌, ಎಸ್‌ಬಿಐ, ಟೈಟಾನ್‌, ಐಸಿಐಸಿಐ ಬ್ಯಾಂಕ್‌ಗಳು ಲಾಭ ಗಳಿಸಿದ ಪ್ರಮುಖ ಕಂಪನಿಗಳಾಗಿವೆ.

ಇನ್ನು ಸನ್‌ ಫಾರ್ಮಾ, ಪವರ್‌ ಗ್ರಿಡ್‌, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್‌, ಐಟಿಸಿ, ಟಾಟಾ ಸ್ಟೀಲ್‌ ನಷ್ಟ ಹೊಂದಿದವು. ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.

2023ರ ನವೆಂಬರ್‌ನಲ್ಲಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೊತ್ತವು 4 ಲಕ್ಷ ಕೋಟಿ ಡಾಲರ್‌ ಇತ್ತು. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಕಳೆದ 6 ತಿಂಗಳಲ್ಲಿಯೇ 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ. ಬಿಎಸ್‌ಇ ಲಿಸ್ಟ್‌ ಆಗಿರುವ ಕಂಪನಿಯಗಳ ಮಾರುಕಟ್ಟೆ ಬಂಡವಾಳವು 2007ರ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ, 2017ರ ಜುಲೈನಲ್ಲಿ 2 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇನ್ನು 2021ರ ಮೇ ತಿಂಗಳಲ್ಲಿ 4 ಲಕ್ಷ ಕೋಟಿ ಡಾಲರ್‌ ಆಗಿತ್ತು. ಈಗ ಆರೇ ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Continue Reading

ದೇಶ

ಕುಡಿದು ಕಾರು ಓಡಿಸಿ ಇಬ್ಬರ ಕೊಂದ ಬಾಲಕನಿಗೆ ರಿಮಾಂಡ್ ಹೋಮ್‌ನಲ್ಲಿ ಏನೆಲ್ಲ ಸವಲತ್ತಿದೆ ನೋಡಿ!

Crime News: ಪುಣೆಯಲ್ಲಿ ಮದ್ಯ ಸೇವಿಸಿ, ತಂದೆಯ 2.5 ಕೋಟಿ ರೂ. ಮೌಲ್ಯದ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಇಬ್ಬರ ಸಾವಿಗೆ ಕಾರಣನಾದ 17 ವರ್ಷದ ಬಾಲಾಪರಾಧಿಗೆ ಜೈಲಿನಲ್ಲಿ ರಾಜಾತಿಥ್ಯ ಲಭಿಸಿದೆ. ಉಪಾಹಾರ, ಪ್ರಾರ್ಥನೆ, ಅಧ್ಯಯನ, ವಿಶ್ರಾಂತಿ ಮತ್ತು ಆಟಕ್ಕೆ ಅವಕಾಶ ನೀಡಲಾಗಿದೆ.

VISTARANEWS.COM


on

Crime News
Koo

ಮುಂಬೈ: ಬೆಳಿಗ್ಗೆ ಆರೋಗ್ಯಕರ ಉಪಾಹಾರ ಬಳಿಕ ಪ್ರಾರ್ಥನೆ ನಂತರ ಮೂರು ಗಂಟೆ ಅಧ್ಯಯನ, ವಿಶ್ರಾಂತಿ…ಇದು ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬನ ದಿನಚರಿಯಲ್ಲ. ಬದಲಿಗೆ ಪುಣೆಯಲ್ಲಿ ಮದ್ಯ ಸೇವಿಸಿ, ತಂದೆಯ 2.5 ಕೋಟಿ ರೂ. ಮೌಲ್ಯದ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಇಬ್ಬರ ಸಾವಿಗೆ ಕಾರಣನಾದ 17 ವರ್ಷದ ಬಾಲಾಪರಾಧಿಗೆ ಜೈಲಿನಲ್ಲಿ ಸಿಕ್ಕ ಆತಿಥ್ಯ (Crime News).

ಸದ್ಯ ಜೂನ್‌ 5ರವರೆಗೆ ಅಪ್ರಾಪ್ತನನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ಅಲ್ಲಿ ಆತನಿಗೆ ಪೋಹಾ, ಉಪ್ಮಾ, ಮೊಟ್ಟೆ ಮತ್ತು ಹಾಲಿನ ಉಪಹಾರ ನೀಡಲಾಗುತ್ತದೆ. ಇದನ್ನು ಬೆಳಿಗ್ಗೆ 8ರಿಂದ 10ರವರೆಗೆ ವಿತರಿಸಲಾಗುತ್ತದೆ. ಈತನಿಗೆ ಪ್ರತಿ ದಿನ ಒಂದು ಗಂಟೆ ವಿಶ್ರಾಂತಿ ನೀಡಲಾಗುತ್ತದೆ. ಜತೆಗೆ ದೈನಂದಿನ ಪ್ರಾರ್ಥನೆಗೂ ಅವಕಾಶ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಟೈಮ್‌ ಟೇಬಲ್‌

ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ತರಗತಿಗೆ ಹಾಜರಾಗುವ ಆತನಿಗೆ 1ರಿಂದ 4 ಗಂಟೆ ತನಕ ವಿಶ್ರಾಂತಿಗೆ ಸಮಯಾವಕಾಶ ನೀಡಲಾಗಿದೆ. ಸಂಜೆ 4 ಗಂಟೆಗೆ ತಿಂಡಿ ಸರಬರಾಜು ಮಾಡಲಾಗುತ್ತದೆ. ಬಳಿಕ 1 ಗಂಟೆ ಟಿವಿ ವೀಕ್ಷಣೆಯ ಸಮಯ. ನಂತರ 2 ಗಂಟೆ ಕಾಲ ಔಟ್‌ ಡೋರ್‌ ಕ್ರೀಡೆಗೆ ಅವಕಾಶ ಇದೆ. ಫುಟ್ಬಾಲ್‌ ಅಥವಾ ವಾಲಿಬಾಲ್‌ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತೆ ಸಂಜೆ ಏಳು ಗಂಟೆಗೆ ಬಾಲಾಪರಾಧಿಗೆ ಊಟ ವಿತರಿಸಲಾಗುತ್ತದೆ. ಇದು ತರಕಾರಿ, ದಾಲ್‌, ಅನ್ನ ಮತ್ತು ರೊಟ್ಟಿಯನ್ನು ಒಳಗೊಂಡಿದೆ. ರಾತ್ರಿ 8 ಗಂಟೆಗೆ ನಿದ್ದೆ ಮಾಡುವ ಸಮಯ.

ಏನಿದು ಪ್ರಕರಣ?

17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್‌ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಬಳಿಕ ಅತನಿಗೆ ಜಾಮೀನು ಸಿಕ್ಕಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬ ಷರತ್ತು ವಿಧಿಸಿತ್ತು. ಇದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ತೀರ್ಪನ್ನು ಬದಲಾಯಿಸಿ ಜೂನ್‌ 5ರ ತನಕ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

ಮದ್ಯ ಸೇವಿಸಿದ್ದ

ಇನ್ನು ಅಪಘಾತ ನಡೆಸಿದ 17 ವರ್ಷದ ಬಾಲಕನ ತಂದೆಯನ್ನು ಪುಣೆ ಪೊಲೀಸರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದರು. ಜತೆಗೆ ಬಾಲಕನಿಗೆ ಮದ್ಯ ಸರಬರಾಜು ಮಾಡಿದ್ದ ಬಾರ್‌ ಮಾಲೀಕನ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು. ಅಪಘಾತ ನಡೆಯುವ ಮುನ್ನ ಸ್ಥಳೀಯ ಪಬ್‌ ಒಂದರಲ್ಲಿ ಅಪ್ರಾಪ್ತ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಿ ಮದ್ಯ ಸೇವಿಸಿದ್ದರು. ಪಬ್‌ಗಳಲ್ಲಿ ಸುಮಾರು ಒಂದೂವರೆ ಗಂಟೆ ಕಳೆದಿದ್ದ ಇವರು ಸುಮಾರು 48 ಸಾವಿರ ರೂ. ಬಿಲ್‌ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

Continue Reading
Advertisement
ayodhya ram mandir 1
ಪ್ರಮುಖ ಸುದ್ದಿ45 seconds ago

Ayodhya Ram Mandir: ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ; ಪೂಜಿಸಿ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು

Highest Paid CEO
ವಾಣಿಜ್ಯ3 mins ago

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Share Market
ದೇಶ21 mins ago

Share Market: ದಾಖಲೆ ಬರೆದ ನಿಫ್ಟಿ, ಸೆನ್ಸೆಕ್ಸ್‌ ಭರ್ಜರಿ ನೆಗೆತ; ಹೂಡಿಕೆದಾರರಿಗೆ ಭಾರಿ ಲಾಭ!

Viral Video
ವೈರಲ್ ನ್ಯೂಸ್25 mins ago

Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

Crime News
ದೇಶ48 mins ago

ಕುಡಿದು ಕಾರು ಓಡಿಸಿ ಇಬ್ಬರ ಕೊಂದ ಬಾಲಕನಿಗೆ ರಿಮಾಂಡ್ ಹೋಮ್‌ನಲ್ಲಿ ಏನೆಲ್ಲ ಸವಲತ್ತಿದೆ ನೋಡಿ!

cm siddaramaiah meet 2
ಪ್ರಮುಖ ಸುದ್ದಿ53 mins ago

CM Siddaramaiah: ರೈತರ ಬರ ಪರಿಹಾರ ಸಮಸ್ಯೆಯಾದರೆ ಸಹಿಸುವುದಿಲ್ಲ- ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

viral video
ಕ್ರೀಡೆ1 hour ago

Viral Video: ಔಟಾದ ಸಿಟ್ಟಿನಲ್ಲಿ ಡಗೌಟ್​​ ಸ್ಟ್ಯಾಂಡ್​ಗೆ ಕೈ ಬಡಿದ ಯಶಸ್ವಿ ಜೈಸ್ವಾಲ್

Prajwal Revanna Case JDS mega plan to cancel Parliament membership even if Rahul Gandhi wins
ರಾಜಕೀಯ2 hours ago

Prajwal Revanna Case: ರಾಹುಲ್‌ ಗಾಂಧಿ ಗೆದ್ದರೂ ಸಂಸತ್‌ ಸದಸ್ಯತ್ವ ರದ್ದು ಮಾಡಲು ಜೆಡಿಎಸ್‌ ಮೆಗಾ ಪ್ಲ್ಯಾನ್‌!

Naxal activities
ತುಮಕೂರು2 hours ago

Naxal activities: ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ ಕೇಸ್‌; 19 ವರ್ಷಗಳಿಂದ ತಲೆಮರೆಸಿಕೊಂಡಿದ್ದವನು ಅರೆಸ್ಟ್‌

Viral Video
ವೈರಲ್ ನ್ಯೂಸ್2 hours ago

Viral Video: ದಬಾಂಗ್‌ ಸ್ಟೈಲ್‌ನಲ್ಲಿ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸ್‌ ಜೀಪ್‌! ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ11 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌