Kargil Vijay Diwas 2022 | ಕಾರ್ಗಿಲ್‌ ಯುದ್ಧ ಗೆದ್ದ ಹೆಮ್ಮೆಯ ದಿನ; ಯೋಧರ ತ್ಯಾಗ, ಶೌರ್ಯಕ್ಕೆ ಗೌರವ - Vistara News

ಕಾರ್ಗಿಲ್​ ವಿಜಯ್​ ದಿನ

Kargil Vijay Diwas 2022 | ಕಾರ್ಗಿಲ್‌ ಯುದ್ಧ ಗೆದ್ದ ಹೆಮ್ಮೆಯ ದಿನ; ಯೋಧರ ತ್ಯಾಗ, ಶೌರ್ಯಕ್ಕೆ ಗೌರವ

1999ರಲ್ಲಿ ಭಾರತೀಯ ಸೇನೆ ಕಾರ್ಗಿಲ್‌ ಯುದ್ಧವನ್ನು ಗೆದ್ದ ನೆನಪಿಗಾಗಿ, ವಿಜಯೋತ್ಸವ ಸ್ಮರಣೆಗಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್‌ ವಿಜಯ ದಿವಸ್‌ ಆಚರಣೆ ಮಾಡಲಾಗುತ್ತದೆ.

VISTARANEWS.COM


on

Kargil Vijay Diwas
ಕಾರ್ಗಿಲ್‌ ಯುದ್ಧ ಸ್ಮಾರಕ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಜುಲೈ 26 ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ. 1999ರ ಜುಲೈ 26ರಂದು ಭಾರತೀಯ ಯೋಧರು ಕಾರ್ಗಿಲ್‌ ಯುದ್ಧದಲ್ಲಿ, ಆಪರೇಶನ್‌ ವಿಜಯ್‌ ಮೂಲಕ ಪಾಕಿಸ್ತಾನದ ಸೈನಿಕರನ್ನು ಬಗ್ಗುಬಡೆದು, ವಿಜಯಪತಾಕೆ ಹಾರಿಸಿದ ದಿನ. ಕಾರ್ಗಿಲ್‌ ವಿಜಯೋತ್ಸವ ಆಚರಣೆ ಮತ್ತು ಯುದ್ಧದಲ್ಲಿ ಮಡಿದ ಯೋಧರ ಸ್ಮರಿಸಲು ಪ್ರತಿವರ್ಷ ಈ ದಿನವನ್ನು ಮೀಸಲಾಗಿಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಮೂರು ಸೇನೆಗಳ ಮುಖ್ಯಸ್ಥರೆಲ್ಲ ಸೇರಿ ಇಂದು ಕಾರ್ಗಿಲ್‌ ಯುದ್ಧದಲ್ಲಿ ಮಡಿದವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಇಂದು ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ, ʼಕಾರ್ಗಿಲ್‌ ವಿಜಯ ದಿನವೆಂಬುದು ಭಾರತ ಮಾತೆಯ ಹೆಮ್ಮೆ ಮತ್ತು ಮುಕುಟದಂತೆ ಇರುವ ದಿವಸ. ತಾಯ್ನಾಡಿನ ರಕ್ಷಣೆಗಾಗಿ ಶೌರ್ಯದಿಂದ ತ್ಯಾಗ ಮಾಡಿದ ಪ್ರತಿಯೊಬ್ಬ ಯೋಧನಿಗೂ ನನ್ನ ಸೆಲ್ಯುಟ್‌. ಜೈ ಹಿಂದ್‌ʼ ಎಂದು ಹೇಳಿದ್ದಾರೆ. ಯೋಧರ ಶೌರ್ಯ, ಬದ್ಧತೆಯನ್ನು ತೋರಿಸುವ ಒಂದು ಚೆಂದನೆಯ ವಿಡಿಯೋವನ್ನೂ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: kargil vijay diwas: ಭಾರತದ ಬೆನ್ನಿಗೆ ಇರಿದ ಪಾಕಿಗಳನ್ನು ನಮ್ಮ ಯೋಧರು ಮಟ್ಟ ಹಾಕಿದ್ದು ಹೇಗೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್‌ ಮಾಡಿ, ನಮ್ಮ ಸೇನಾ ಪಡೆಗಳ ಶೌರ್ಯ, ಶಕ್ತಿ ಮತ್ತು ದೃಢತೆಯ ಸಂಕೇತ ಈ ಕಾರ್ಗಿಲ್‌ ವಿಜಯ ದಿನ. ತಾಯಿ ಭಾರತೆಯ ರಕ್ಷಣೆಗೆ ಅಂದು ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹೋರಾಡಿದ ಪ್ರತಿಯೊಬ್ಬರಿಗೂ ನಾನು ತಲೆ ಬಾಗುತ್ತೇನೆ. ಈ ಯೋಧರಿಗೆ ಮತ್ತು ಅವರ ಕುಟುಂದವರಿಗೆ ಇಡೀ ದೇಶದ ನಾಗರಿಕರು ಸದಾ ಋಣಿಯಾಗಿರುತ್ತಾರೆ ಎಂದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಹೋಗಿ ಮೃತ ಯೋಧರ ಸಮಾಧಿಗೆ ಗೌರವ ಅರ್ಪಿಸಿದರು. ಹಾಗೇ, ಭೂಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌ ಹರಿ ಕುಮಾರ್‌ ಮತ್ತು ಏರ್‌ಫೋರ್ಸ್‌ ಮುಖ್ಯ ಏರ್‌ ಮಾರ್ಷಲ್‌ ವಿ.ಆರ್‌.ಚೌಧರಿಯವರೂ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: Kargil Vijay Divas: ಅಮ್ಮಾ ಗೆದ್ದರೆ, ತಿರಂಗಾ ಅರಳಿಸಿ ಬರುತ್ತೇನೆ, ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kargil Memory : ಕಾರ್ಗಿಲ್‌ ಯೋಧರಿಗೆ ನಮನ ಸಲ್ಲಿಸಲು 3200 ಕಿ.ಮೀ ಸೈಕಲ್‌ ತುಳಿದ ಬೆಂಗಳೂರಿನ ಹುಡುಗ್ರು!

Kargil Memory : ಕಾರ್ಗಿಲ್‌ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದ ಯೋಧರ ಸಾಹಸಿಕ ಕಥೆಗಳಿಂದ ಸ್ಪೂರ್ತಿ ಪಡೆದ ಬೆಂಗಳೂರಿನ ಕಾಲೇಜು ಹುಡುಗರಿಬ್ಬರು ಸೈಕಲ್‌ನಲ್ಲೇ ಡ್ರಾಸ್‌ವೆರೆಗೆ ಹೋಗಿ ವಿಜಯ ದಿವಸದಂದು ನಮನ ಸಲ್ಲಿಸಿ ಮರಳಿದ್ದಾರೆ.

VISTARANEWS.COM


on

Kargil memory
ಕಾರ್ಗಿಲ್‌ ಯೋಧರಿಗೆ ನಮನ ಸಲ್ಲಿಸಿದ ಬೆಂಗಳೂರಿನ ವಿದ್ಯಾರ್ಥಿಗಳು
Koo

ಬೆಂಗಳೂರು: ಕಾರ್ಗಿಲ್‌ ಯುದ್ಧ (Kargil War) ನಡೆದು 23 ವರ್ಷಗಳೇ ಕಳೆದಿವೆ. ಆದರೆ, ಪಾಕಿಸ್ತಾನದ ಕುತಂತ್ರವನ್ನು ಮಣಿಸಿ ನಮ್ಮ ದೇಶದ ಗಡಿಯನ್ನು ರಕ್ಷಿಸಿಕೊಂಡ ಆ ಮಹಾಸಾಹಸದ ನೆನಪುಗಳು (Kargil Memory) ಇವತ್ತಿಗೂ ಜೀವಂತವಾಗಿವೆ. ಈ ಯುದ್ಧದ ಬಳಿಕ ಹುಟ್ಟಿದ ಮಕ್ಕಳಲ್ಲಿ ಕೂಡಾ ಈ ಕಥನಗಳು ಸ್ಫೂರ್ತಿ ತುಂಬುತ್ತಿವೆ. ಆ ಮೂಲಕ ದೇಶಭಕ್ತ ನೈಜ ಹೀರೋಗಳ ಕಥೆಗಳು (Stories of Kargil Heroes) ಜನರಿಂದ ಜನರಿಗೆ ಹರಿದಾಡುತ್ತಿವೆ. ಈ ಕಾರ್ಗಿಲ್‌ ಯೋಧರ ಕಥನದಿಂದ ಪ್ರೇರಣೆ ಪಡೆದ ಬೆಂಗಳೂರಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Two College students from Bangalore) ಸೈಕಲ್‌ (Cycle travel) ಮೂಲಕ ದೇಶ ಸುತ್ತುತ್ತಾ ಅಲ್ಲಿಗೇ ಹೋಗಿ ಕಾರ್ಗಿಲ್‌ನ ಕಡಿದಾದ ಬೆಟ್ಟಗಳ ನಡುವೆ ನಿಂತು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ಕಾರ್ಗಿಲ್‌ ಕದನದಲ್ಲಿ ವೀರ ಮರಣವನ್ನು ಅಪ್ಪಿದ ವೀರ ಯೋಧ ಕ್ಯಾಪ್ಟನ್‌ ವಿಜಯಂತ್‌ ಥಾಪರ್‌ (Captain Vijayant Thapar) ಅವರ ಸಾಹಸದಿಂದ ರೋಮಾಂಚಿತರಾದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೈಕಲ್‌ ಮೂಲಕ 3200 ಕಿ.ಮೀ. ಕ್ರಮಿಸಿ ಕಾರ್ಗಿಲ್‌ಗೆ ಹೋಗಿ ಅಲ್ಲಿನ ಎನ್‌ಸಿಸಿ ಯುನಿಟ್‌ ಮೂಲಕ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಹೋಗಿ ಬರುವ ದಾರಿಯಲ್ಲಿ ಅವರು ಭಾರತೀಯ ಯೋಧರು ಮಾಡಿದ ಹೋರಾಟ, ತ್ಯಾಗ, ಬಲಿದಾನಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ರಾಮಯ್ಯ ಕಾಲೇಜಿನ ಬಿಬಿಎ ವಿದ್ಯಾರ್ಥಿಯಾಗಿರುವ ಕೃಷ್ಣನ್‌ ಎ ಮತ್ತು ಸೈಂಟ್‌ ಜೋಸೆಫ್‌ ಯುನಿವರ್ಸಿಟಿಯಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಪೆಡ್ಡಿ ಸಾಯಿ ಕೌಶಿಕ್‌ ಅವರೇ ಈ ರೀತಿಯಾಗಿ ಕಾರ್ಗಿಲ್‌ಗೆ ಪಯಣ ಬೆಳೆಸಿದವರು. ಈಗ ಎನ್‌ಸಿಸಿ ಕೆಡೆಟ್‌ಗಳಾಗಿರುವ ಅವರಿಗೆ ಮುಂದೆ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಕನಸೂ ಇದೆ.

ಈ ಕನಸು ಹುಟ್ಟಿದ್ದು ಹೇಗೆ?

ʻʻನಾನು ಹೊಸ ವರ್ಷದ ದಿನದಂದು ಕ್ಯಾಪ್ಟನ್‌ ವಿಜಯಂತ್‌ ಥಾಪರ್‌ ಅವರ ಕುರಿತ ಒಂದು ಪುಸ್ತಕವನ್ನು ಓದುತ್ತಿದ್ದೆ. ವಿಜಯಂತ್‌ ಥಾಪರ್‌ ಅವರು 1999ರಲ್ಲಿ ನಡೆದ ಕಾರ್ಗಿಲ್‌ ಕದನದಲ್ಲಿ ವೀರಮರಣವನ್ನು ಅಪ್ಪಿದ್ದರು. ನನಗೆ ಅವರ ಹೋರಾಟದ ಕಥೆ ತುಂಬಾ ಇಷ್ಟವಾಯಿತು. ಅವರಿಗೆ ವೀರಚಕ್ರ ಪ್ರಶಸ್ತಿಯನ್ನು ಕೂಡಾ ನೀಡಿ ಗೌರವಿಸಲಾಗಿತ್ತು.. ಈ ಪುಸ್ತಕ ಓದಿದ ಬಳಿಕ ಮನೆಗೆ ಹೋಗಿ ಕೇಳಿದೆ; ಶೌರ್ಯ ಪ್ರಶಸ್ತಿ ಪಡೆದ ಯಾವುದಾದರೂ ಸೈನಿಕ ಹೆಸರು ಹೇಳಿ ಅಂತ. ಆದರೆ ಅವರಿಗೆ ಯಾರ ಹೆಸರೂ ಗೊತ್ತಿರಲಿಲ್ಲ. ನನ್ನ ಗೆಳೆಯರ ಬಳಿ ಹೋಗಿ ಕೇಳಿದೆ. ಅವರಿಗೆ ಕೂಡಾ ಒಂದು ಹೆಸರೂ ನೆನಪಿರಲಿಲ್ಲ. ಆಗ ನನಗೆ ಇಂಥ ವೀರ ಯೋಧರ, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದವರ ಬಗ್ಗೆ ಜನರಿಗೆ ಅರಿವು ನೀಡುವ ಅಗತ್ಯವಿದೆ ಎಂದು ನನಗೆ ಅನಿಸಿತು. ಅವರು ಕೇವಲ ಒಂದೆರಡು ದಿನಗಳ ಕಾಲ ನೆನಪಲ್ಲಿ ಇರಬೇಕಾದವರಲ್ಲಿ, ದೇಶದ ಎಲ್ಲ ಜನರಿಗೆ ನಿರಂತರವಾಗಿ ನೆನಪಿನಲ್ಲಿ ಉಳಿಯುವಂತಾಗಬೇಕು, ಅದಕ್ಕಾಗಿ ಏನಾದರೂ ಮಾಡಬೇಕು ಅನಿಸಿತುʼʼ ಎಂದು ಸಾಯಿ ಕೌಶಿಕ್‌ ಅವರು ತಮ್ಮ ಸೈಕಲ್‌ ಪ್ರಯಾಣದ ಕನಸು ಹುಟ್ಟಿದ ಕಥೆಯನ್ನು ತೆರೆದಿಟ್ಟಿದ್ದಾರೆ.

ನಾವು ಮೇ ತಿಂಗಳಲ್ಲಿ ಸೈಕಲ್‌ ಯಾನ ಶುರು ಮಾಡಿದೆವು. ಜುಲೈ 26ರ ಕಾರ್ಗಿಲ್‌ ವಿಜಯ ದಿವಸ್‌ಗಿಂತ ಎರಡು ದಿನ ಮೊದಲು ಅಂದರೆ ಜುಲೈ 24ರಂದು ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ತಲುಪಿದೆವು. ನಾವು ಕನ್ಯಾಕುಮಾರಿ-ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ನಡೆಸಿದೆವು. ನಿಜವೆಂದರೆ ನಮ್ಮ ಪ್ರಯಾಣ ತುಂಬ ಕಷ್ಟಕರವಾಗಿತ್ತು. ಆದರೆ, ಅಂತಿಮವಾಗಿ ಗುರಿ ತಲುಪಿದಾಗ ಮ್ಯಾಜಿಕಲ್‌ ಅನುಭವವನ್ನು ಪಡೆದೆವು ಎಂದು ಕೃಷ್ಣನ್‌ ವಿವರಿಸಿದ್ದಾರೆ.

ದಾರಿಯುದ್ದಕ್ಕೂ ಸಂಕಷ್ಟಗಳ ಸರಮಾಲೆ

ನಿಜವೆಂದರೆ ನಮಗೆ ದಾರಿಯುದ್ದಕ್ಕೂ ಹಲವು ಸಮಸ್ಯೆಗಳು ಎದುರಾದವು. ನಾವು ಪಂಜಾಬ್‌ ತಲುಪುವ ಹೊತ್ತಿಗೆ ಅಲ್ಲಿ ಪ್ರವಾಹ ಎದುರಾಗಿತ್ತು. ಇದನ್ನು ದಾಟಿ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಅಂತ ಅನಿಸಿತ್ತು. ಸಾಯಿ ಕೌಶಿಕ್‌ಗೆ ಟೈಫಾಯಿಡ್‌ ಬಂದು ಬಿಟ್ಟಿತ್ತು. ಹೀಗಾಗಿ ಪ್ರಯಾಣವನ್ನು ಎರಡು ವಾರ ನಿಧಾನಗೊಳಿಸಬೇಕಾಯಿತು. ದಾರಿ ಮಧ್ಯೆ ನನಗೆ ಅಪಘಾತವಾಗಿತ್ತು. ಹೀಗಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಅಂತಿಮವಾಗಿ ಒಂದು ದೊಡ್ಡ ಸಾಧನೆಯ ನೆಮ್ಮದಿ ನಮ್ಮದಾಯಿತು ಎಂದು ಖುಷಿಪಟ್ಟರು ಕೃಷ್ಣನ್‌.

ನಾವು ನಮ್ಮ ಎನ್‌ಸಿಸಿ ಮೂಲಕ ವಿಜಯ ದಿವಸ್‌ ಆಚರಣೆಯ ಕಾರ್ಯಕ್ರಮ ವಿಚಾರದಲ್ಲಿ ಸಂಪರ್ಕದಲ್ಲಿದ್ದೆವು. ಡ್ರಾಸ್‌ ತಲುಪುತ್ತಿದ್ದಂತೆಯೇ ನಮ್ಮ ಸಂಭ್ರಮಕ್ಕೆ ಪಾರವೇ ಇಲ್ಲ. ನಮಗೆ ಅಲ್ಲಿ ವಿಐಪಿ ಪಾಸ್‌ಗಳನ್ನು ಕೊಡಲಾಯಿತು. ಮಾತ್ರವಲ್ಲ ವೀರಯೋಧರ ಸಮಾಧಿಗಳ ಮೇಲೆ ಪುಷ್ಪ ಗುಚ್ಛ ಇಡುವ ಅವಕಾಶವನ್ನೂ ಒದಗಿಸಿದ್ದರು ಎಂದು ಅವರಿಬ್ಬರೂ ಖುಷಿ ಹಂಚಿಕೊಂಡರು.

ಇದನ್ನೂ ಓದಿ: Kargil war | ಕಾರ್ಗಿಲ್‌ ಕದನ ಕಲಿಗಳಿವರು

ಬೆಂಗಳೂರು: ಕಾರ್ಗಿಲ್‌ ಯುದ್ಧ (Kargil War) ನಡೆದು 23 ವರ್ಷಗಳೇ ಕಳೆದಿವೆ. ಆದರೆ, ಪಾಕಿಸ್ತಾನದ ಕುತಂತ್ರವನ್ನು ಮಣಿಸಿ ನಮ್ಮ ದೇಶದ ಗಡಿಯನ್ನು ರಕ್ಷಿಸಿಕೊಂಡ ಆ ಮಹಾಸಾಹಸದ ನೆನಪುಗಳು (Kargil Memory) ಇವತ್ತಿಗೂ ಜೀವಂತವಾಗಿವೆ. ಈ ಯುದ್ಧದ ಬಳಿಕ ಹುಟ್ಟಿದ ಮಕ್ಕಳಲ್ಲಿ ಕೂಡಾ ಈ ಕಥನಗಳು ಸ್ಫೂರ್ತಿ ತುಂಬುತ್ತಿವೆ. ಆ ಮೂಲಕ ದೇಶಭಕ್ತ ನೈಜ ಹೀರೋಗಳ ಕಥೆಗಳು (Stories of Kargil Heroes) ಜನರಿಂದ ಜನರಿಗೆ ಹರಿದಾಡುತ್ತಿವೆ. ಈ ಕಾರ್ಗಿಲ್‌ ಯೋಧರ ಕಥನದಿಂದ ಪ್ರೇರಣೆ ಪಡೆದ ಬೆಂಗಳೂರಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Two College students from Bangalore) ಸೈಕಲ್‌ (Cycle travel) ಮೂಲಕ ದೇಶ ಸುತ್ತುತ್ತಾ ಅಲ್ಲಿಗೇ ಹೋಗಿ ಕಾರ್ಗಿಲ್‌ನ ಕಡಿದಾದ ಬೆಟ್ಟಗಳ ನಡುವೆ ನಿಂತು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

Continue Reading

ಕಾರ್ಗಿಲ್​ ವಿಜಯ್​ ದಿನ

Kargil Vijay Diwas : ಕಾರ್ಗಿಲ್‌ ವೀರರಿಗೆ ಬಾಲಿವುಡ್‌ ತಾರೆಯರು, ಗಣ್ಯರ ಭಾವುಕ ಸಂದೇಶ

ಕಾರ್ಗಿಲ್‌ ವಿಜಯ ದಿನದ (Kargil Vijay Diwas) ಪ್ರಯುಕ್ತ ಅನೇಕ ಗಣ್ಯರು ಹುತಾತ್ಮ ಯೋಧರನ್ನು ಸ್ಮರಿಸಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಟ್ವೀಟ್‌ಗಳು ಇಲ್ಲಿವೆ.

VISTARANEWS.COM


on

Kargil Vijay Diwas
Koo

ಮುಂಬೈ: ಇಂದು ಕಾರ್ಗಿಲ್‌ ವಿಜಯ ದಿನ(Kargil Vijay Diwas). 1999ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ದೇಶವನ್ನು ಕಾಪಾಡಲು ಪಾಕಿಸ್ತಾನಿ ಯೋಧರೊಂದಿಗೆ ಹೊಡೆದಾಡಿ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರನ್ನು ನೆನಪಿಸಿಕೊಳ್ಳುವಂತಹ ದಿನ. ಈ ವಿಶೇಷ ದಿನದಂದು ಇಡೀ ದೇಶವೇ ಯೋಧರನ್ನು ಸ್ಮರಿಸಿಕೊಳ್ಳುತ್ತಿದೆ. ಅದೇ ರೀತಿಯಲ್ಲಿ ಬಾಲಿವುಡ್‌ನ ತಾರೆಗಳು ಹಾಗೂ ಹಲವಾರು ಗಣ್ಯರು ಕೂಡ ಯೋಧರ ಬಲಿದಾನವನ್ನು ಸ್ಮರಿಸಿ, ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಬಾಲಿವುಡ್‌ನ ನಟ ಅಕ್ಷಯ್‌ ಕುಮಾರ್‌ ಅವರು ಕಾರ್ಗಿಲ್‌ ವಿಜಯ ದಿನವನ್ನು ಸ್ಮರಿಸುತ್ತಾ ಟ್ವೀಟ್‌ ಮಾಡಿದ್ದಾರೆ. “ಹೃದಯದಲ್ಲಿ ಕೃತಜ್ಞತೆ ಮತ್ತು ಬಾಯಿಯಲ್ಲಿ ಪ್ರಾರ್ಥನೆಯೊಂದಿಗೆ, ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಹೃದಯಗಳನ್ನು ಸ್ಮರಿಸುತ್ತೇನೆ. ಇಂದು ನಿಮ್ಮಿಂದಾಗಿ ನಾವು ಬದುಕಿದ್ದೇವೆ” ಎಂದು ಬರೆದುಕೊಂಡಿದ್ದಾರೆ.


ಹಾಗೆಯೇ ನಟಿ ನಿಮ್ರತ್‌ ಕೌರ್‌ ಅವರು ಕೂಡ ಈ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಾರ್ಗಿಲ್‌ ವಿಜಯ ದಿನದ ಅಂಗವಾಗಿ ನೋಯ್ಡಾದಲ್ಲಿ ಆಯೋಜಿಸಲಾಗಿದ್ದ ಸೈಕ್ಲಿಂಗ್‌ ಕಾರ್ಯಕ್ರಮದಲ್ಲಿ ಅವರ ತಾಯಿ ಭಾಗವಹಿಸಿದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. “ಕಾರ್ಗಿಲ್‌ ವಿಜಯ್‌ ದಿವಸ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸುತ್ತೇನೆ. ನೋಯ್ಡಾದಲ್ಲಿ ನನ್ನ ತಾಯಿ ಕಾರ್ಗಿಲ್‌ ವಿಜಯ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ 20ಕಿ.ಮೀ. ಸೈಕ್ಲಿಂಗ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಕಾರ್ಗಿಲ್‌ ಯುದ್ಧದ ವೀರರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು” ಎಂದು ಬರೆದುಕೊಂಡಿದ್ದಾರೆ.

ನಟ ಅಭಿಷೇಕ್‌ ಬಚ್ಚನ್‌ ಅವರೂ ಕೂಡ ಈ ದಿನವನ್ನು ಸ್ಮರಿಸಿಕೊಂಡಿದ್ದಾರೆ. ಕಾರ್ಗಿಲ್‌ ವಿಜಯ ದಿನದ ಕುರಿತಾಗಿರುವ ಪೋಸ್ಟರ್‌ ಅನ್ನು ಅವರು ತಮ್ಮ ಇನ್‌ಸ್ಟಾಗ್ರಾಂನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.


ಹಾಗೆಯೇ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೂಡ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. “ನಮ್ಮ ರಾಷ್ಟ್ರದ ಕೆಚ್ಚೆದೆಯ ಹೃದಯಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರ ತ್ಯಾಗವನ್ನು ಎಂದಿಗೂ ಮರೆಯದಿರುವುದು. ಕಾರ್ಗಿಲ್‌ನಲ್ಲಿ ಭಾರತದ ಧ್ವಜ ಹಾರುತ್ತಲೇ ಇರುವಂತೆ ಮಾಡಿದ ಎಲ್ಲ ವ್ಯಕ್ತಿಗಳು ಮತ್ತು ಅವರ ಕುಟುಂಬದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಕಲಾವಿದರಾಗಿರುವ ಸುದರ್ಶನ್‌ ಪಟ್ನಾಯಕ್‌ ಕೂಡ ಕಾರ್ಗಿಲ್‌ ವಿಜಯ ದಿನದ ನೆನಪನ್ನು ಮಾಡಿಕೊಂಡಿದ್ದಾರೆ. ಅವರು ಮರಳು ಕಲೆಯ ಮೂಲಕ ಕಾರ್ಗಿಲ್‌ ವಿಜಯ ದಿನದ ಶುಭಾಶಯ ತಿಳಿಸಿದ್ದಾರೆ ಹಾಗೆಯೇ ವೀರ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ತಿಳಿಸಿದ್ದಾರೆ.

Continue Reading

ಕಾರ್ಗಿಲ್​ ವಿಜಯ್​ ದಿನ

Kargil Vijay Diwas: ಕೆಚ್ಚೆದೆಯ ಸಮರ ಸಾಹಸಿಗಳ ಸ್ಮರಿಸೋಣ…

ಸತತವಾಗಿ ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 400ಕ್ಕೂ ಹೆಚ್ಚು ಸೈನಿಕರನ್ನು ಈ ದೇಶ ಕಳೆದುಕೊಂಡಿತು. ದೇಶಾದ್ಯಂತ ಜುಲೈ 26ರಂದು ಕಾರ್ಗಿಲ್ ವಿಜಯ ದಿನವೆಂದು ದೇಶಭಕ್ತ ಭಾರತೀಯರೆಲ್ಲರೂ ಹೆಮ್ಮೆಯಿಂದ ಆಚರಿಸುತ್ತಾರೆ.

VISTARANEWS.COM


on

kargil
Koo
mayuralakshmi

ಮಯೂರಲಕ್ಷ್ಮೀ

ಆರ್ಥಿಕವಾಗಿ ಮತ್ತು ರಾಜಕೀಯವಾಗಿ ವಿಶ್ವದಲ್ಲಿ ತನ್ನ ಛಾಪು ಮೂಡಿಸಲಾಗದ ಪಾಕಿಸ್ತಾನ, ಕಾಶ್ಮೀರದ ಮೇಲೆ ನಡೆಸಿದ ನಿರಂತರ ಆಕ್ರಮಣಗಳ ಪರಿಣಾಮವೇ ಕಾರ್ಗಿಲ್ ಯುದ್ಧ. ಶ್ರೀನಗರದಿಂದ 205 ಕಿಲೋ ಮೀಟರ್ ದೂರದಲ್ಲಿರುವ “ಕಾರ್ಗಿಲ್” ಜಿಲ್ಲೆ, ಸಿಂಧು ನದಿಯ ಬತಾಲಿಕ್ ವಲಯಗಳ ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯ ಉತ್ತರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-1ರ ಕಡೆಗೆ ಪಾಕ್ ಸೈನಿಕರು ನುಸುಳಿದ್ದನ್ನು ಕಂಡು ಅಲ್ಲಿನ ದನಗಾಹಿಗಳು ಭಾರತೀಯ ಸೇನಾ ನೆಲೆಯ ಗಮನಕ್ಕೆ ತಂದರು.

ಮೇ 3, 1999ರಿಂದ ಆರಂಭವಾಗಿ ಜುಲೈ ತಿಂಗಳ 26ರವರೆಗೆ ನಡೆದದ್ದು ಸಶಸ್ತ್ರ ಕಾರ್ಗಿಲ್ ಯುದ್ಧ. ಮೇ ಎರಡನೇ ವಾರದಲ್ಲಿ ಪಾಕ್ ಸೈನಿಕರು ಡ್ರಾಸ್, ಮುಷೋಕ್ ಇನ್ನಿತರ ಪ್ರಾಂತ್ಯಗಳಲ್ಲಿ ಭಾರತೀಯ ಜಾಗಗಳಲ್ಲಿ ಸೇರಿಕೊಂಡರು. ಕ್ಯಾಪ್ಟನ್ ಸೌರವ್ ಕಾಲಿಯಾ ನೇತೃತ್ವದಲ್ಲಿ ರಕ್ಷಣಾತ್ಮಕ ಕದನ ಅರಂಭವಾಯಿತು. ಮೇ 26ರಂದು ಫ್ಲೈಟ್ ಲೆಫ್ಟಿನೆಂಟ್ ನಚಿಕೇತ ಅವರ ಮಿಗ್-27 ವಾಯುವಿಮಾನ ಬೆಂಕಿಗಾಹುತಿಯಾಗಿ ಅವರು ಪಾಕ್ ಕೈವಶವಾದರು. ಏಳು ದಿನಗಳು ಪಾಕ್‍ನ ಸೆರೆಯಲ್ಲಿದ್ದು ನಂತರ ಜೂನ್ 3, 1999ರಂದು ಮತ್ತೆ ಭಾರತಕ್ಕೆ ಅವರನ್ನು ಹಸ್ತಾಂತರಿಸಲಾಯಿತು. ತೀವ್ರವಾಗಿ ಗಾಯಗೊಂಡರೂ ದಿಟ್ಟತನದಿಂದ ಹೋರಾಡಿ ಬದುಕುಳಿದ ಸಾಹಸಿ ನಚಿಕೇತ್‍ರವರು.

ಸಿಂಹದಂತೆ ಗರ್ಜಿಸಿ ದಿಟ್ಟತನದಿಂದ ಹೋರಾಡಿದ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ತನ್ನ ವಾಯುವಿಮಾನದಿಂದ “ಲ್ಯಾಂಡಿಂಗ್”ನಲ್ಲಿದ್ದಾಗಲೇ ಪಾಕಿಸ್ತಾನ ಸೈನಿಕರು ಅವರ ಮೇಲೆ ಗುಂಡಿನ ಮಳೆಗರೆದರು. ಎಡಗಿವಿಯ ಬಳಿ ಗುಂಡು ಒಳಹೊಕ್ಕಿತ್ತು. ಪಾಕಿಸ್ಥಾನಿ ಸೈನಿಕರಿಂದ ನಾನಾ ರೀತಿ ಚಿತ್ರ ಹಿಂಸೆಗೆ ಗುರಿಯಾಗಿ ಛಿದ್ರವಾಗಿದ್ದ ಅವರ ಶರೀರ ಭಾರತಕ್ಕೆ ದೊರೆಯಿತು. ಅಜಯ್ ಅಹುಜಾ ಅವರ ಸಾವು ಅತ್ಯಂತ ಅಮಾನುಷ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಭಾರತ ಪ್ರತಿಭಟಿಸಿತು.

ತೀವ್ರಗೊಂಡ ಯುದ್ಧದ ಪರಿಸ್ಥಿತಿ. ಜೂನ್ 13ರಂದು ನಮ್ಮ ಸೈನಿಕರಿಂದ ಮುಖ್ಯವಾದ “ಟೋಲೋಲಿಂಗ್ ಪರ್ವತ” ಮತ್ತೆ ಭಾರತಕ್ಕೆ ಮರಳಿತು. 22 ದಿನಗಳು ಪಾಕ್ ಸೇನೆಯ ವಶದಲ್ಲಿದ್ದ ಸೌರವ್ ಕಾಲಿಯಾ ಮತ್ತವರ ಸಂಗಡಿಗರನ್ನು ಚಿತ್ರಹಿಂಸೆಯಿಂದ ನಿರ್ದಾಕ್ಷಿಣ್ಯವಾಗಿ ಕೊಂದದ್ದಲ್ಲದೇ ಅವರ ಶರೀರ ದೊರೆತಾಗ ಅಂಗಹೀನವಾಗಿದ್ದ ಸ್ಥಿತಿ.

ಕ್ಯಾಪ್ಟನ್ ವಿಕ್ರಂ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಭಟ್ಟಾಚಾರ್ಯ, ಕೇಸಿಂಗ್ ನಿಂಗ್ರಾಂ, ಇನ್ನೂ 527 ವೀರರ ಬಲಿದಾನವಾಯಿತು. ಬದುಕುಳಿದವರು ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್, ಮೇಜರ್ ಸೋನಂ ವಾಂಗ್‍ಚುಕ್, ಇನ್ನೂ ಮುಂತಾದ 1300ಕ್ಕೂ ಹೆಚ್ಚಿನ ಭಾರತದ ಯೋಧರು. ಇವರೆಲ್ಲರ ಬಲಿದಾನ ಮತ್ತು ತ್ಯಾಗಗಳ ಫಲವೇ, ತನ್ನ ದೇಶವನ್ನು ಶತ್ರುಗಳ ಕರಾಳ ಹಸ್ತದಿಂದ ಮುಕ್ತಗೊಳಿಸುವ ಛಲವೇ ಅಂತಿಮವಾಗಿ ವಿಜಯದ ಸಂಕೇತವಾಯ್ತು.

200,000ಕ್ಕೂ ಹೆಚ್ಚು ಸೈನಿಕರನ್ನೊಳಗೊಂಡ ಸೇನೆಯ ತುಕಡಿಗಳು ಹಗಲು ರಾತ್ರಿಯೆನ್ನದೇ, ಕೊರೆವ ಚಳಿಯಲ್ಲಿ ಹಿಮದಲ್ಲಿ “ಆಪರೇಶನ್ ವಿಜಯ್” ಮತ್ತು ವಾಯಸೇನೆಯ “ಆಪರೇಶನ್ ಸಫೇದ್ ಸಾಗರ್” ಕಾರ್ಯಾಚರಣೆ ನಡೆಸಿದವು. ಕಾರ್ಗಿಲ್-ಡ್ರಾಸ್ ಪ್ರಾಂತ್ಯಗಳಲ್ಲಿ ನಿರಂತರವಾಗಿ ಸಾಗಿದ 2 ತಿಂಗಳ ಸಂಘರ್ಷದ ನಂತರ ಅನೇಕ ಶಿಖರಗಳನ್ನು ಭಾರತದ ಪಡೆಗಳು ಮರುವಶಕ್ಕೆ ತೆಗೆದುಕೊಂಡವು.

ಭಾರತದ ಶಕ್ತಿಯ ಅರಿವಿದ್ದ ಪಾಕ್ ಸೋಲು ಖಚಿತವೆಂದು ಅರಿವಾದಾಗ ತನ್ನ ವಶದಲ್ಲಿದ್ದ ಭಾರತದ ಸೈನಿಕರನ್ನು ಅಮಾನುಷವಾಗಿ ನಡೆಸಿಕೊಂಡಿತು. ಭಾರತೀಯ ಯೋಧರನ್ನು ಚಿತ್ರಹಿಂಸೆಗಳಿಂದ ಕೊಂದ ರೀತಿಗೆ ವಿಶ್ವದೆಲ್ಲೆಡೆ ವಿರೋಧ ವ್ಯಕ್ತವಾದಾಗ ಪಾಕಿಸ್ತಾನಕ್ಕೆ ಹಿನ್ನಡೆಯಾಯಿತು. ಕಾರ್ಗಿಲ್ ಯುದ್ಧದ ಆರಂಭದಲ್ಲಿ ತನ್ನ ಸೇನೆಯು ಗಡಿಯಲ್ಲಿರುವುದನ್ನು ಒಪ್ಪಿಕೊಳ್ಳದೆ ಮುಜಾಹಿದೀನ್‍ನಂತಹ ಕಾಶ್ಮೀರ ಪ್ರತ್ಯೇಕವಾದಿಗಳ ಮೇಲೆ ದೋಷಾರೋಪಣೆ ಮಾಡಿತ್ತು. ನಂತರ ಭಾರತದಿಂದ ಸೋಲು ಅನುಭವಿಸಿ ತನ್ನ ಕುಟಿಲ ನೀತಿಯನ್ನು ಒಪ್ಪಿಕೊಳ್ಳಬೇಕಾಯಿತು.

Kargil War

ಪಾಕ್ ಅಮೇರಿಕಾವನ್ನು ಮಧ್ಯ ಪ್ರವೇಶಿಸಲು ಕೇಳಿದಾಗ ಅಮೆರಿಕಾ ನಿರಾಕರಿಸಿದ್ದಲ್ಲದೆ ಪಾಕ್ ತನ್ನ ಸೇನೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆದೇಶ ನೀಡಿತು. ಅಂದಿನ ಜಿ-8 ರಾಷ್ಟ್ರಗಳು ಪಾಕಿಸ್ತಾನದ ಈ ಕೃತ್ಯವನ್ನು ತೀವ್ರವಾಗಿ ಪ್ರತಿಭಟಿಸಿ ಭಾರತವನ್ನು ಸಮರ್ಥಿಸಿದವು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಗಡಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆದೇಶ ನೀಡಿದರು.

ಭಾರತಮಾತೆಯ ಮಡಿಲಲ್ಲಿ ದೇಶರಕ್ಷಣೆಯ ಕಂಕಣ ಕಟ್ಟಿದ್ದ ನಮ್ಮ ಸೈನಿಕರು ವೀರಸ್ವರ್ಗವನ್ನೇ ಪಡೆದರು. ಜಮ್ಮು ಕಾಶ್ಮೀರದಲ್ಲಿ ಕಾರ್ಗಿಲ್, ಡ್ರಾಸ್, ಬತಾಲಿಕ್ ಸತತವಾಗಿ ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 400ಕ್ಕೂ ಹೆಚ್ಚು ಸೈನಿಕರನ್ನು ಈ ದೇಶ ಕಳೆದುಕೊಂಡಿತು. ದೇಶಾದ್ಯಂತ ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ನಮ್ಮ ರಕ್ಷಣಾ ಇಲಾಖೆ ಮತ್ತು ದೇಶಭಕ್ತ ಭಾರತೀಯರೆಲ್ಲರೂ ಹೆಮ್ಮೆಯಿಂದ ಆಚರಿಸುತ್ತಾರೆ.

ನೆನೆಯಬೇಕಾದ ಪ್ರಮುಖ ಸಾಹಸಿಗಳು:

ಲೆಫ್ಟಿನೆಂಟ್ ಮನೋಜ ಕುಮಾರ್ ಪಾಂಡೇ ಗೂರ್ಖಾ ರೈಫಲ್ಸ್- ಪರಮ ವೀರ ಚಕ್ರ- ಮರಣೋತ್ತರ
ಕ್ಯಾಪ್ಟನ್ ವಿಕ್ರಂ ಭಾತ್ರಾ- ಪರಮ ವೀರ ಚಕ್ರ – ಮರಣೋತ್ತರ
ಕ್ಯಾಪ್ಟನ್ ಅನುಜ್ ನಾಯರ್- ಜಾಟ್ ರೆಜಿಮೆಂಟ್- ಮಹಾ ವೀರ ಚಕ್ರ ಮರಣೋತ್ತರ
ಮೇಜರ್ ರಾಜೇಶ್ ಅಧಿಕಾರಿ, 18 ಗ್ರೇನೇಡಿಯರ್ಸ್- ಮಹಾ ವೀರ ಚಕ್ರ ಮರಣೋತ್ತರ
ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಏರ್‍ಫೋರ್ಸ್ – ವೀರ್ ಚಕ್ರ ಮರಣೋತ್ತರ
ಗ್ರೆನೇಡಿಯರ್ ಯೋಗೇಂದರ್ ಸಿಂಗ್ ಯಾದವ್, 18 ಗ್ರೆನೇಡಿಯರ್ಸ್– ಪರಮವೀರ ಚಕ್ರ
ರೈಫಲ್‍ಮ್ಯಾನ್ ಸಂಜಯ ಕುಮಾರ್- ಪರಮ ವೀರ ಚಕ್ರ
ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್- ವಾಯುಸೇನಾ ಪದಕ

ಇದನ್ನೂ ಓದಿ: Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!

Continue Reading

ಕಾರ್ಗಿಲ್​ ವಿಜಯ್​ ದಿನ

Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!, ಯೋಧರ ಸಾಹಸ ರೋಚಕ…

Kargil Vijay Diwas: 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತೀಯ ಸೇನೆಯು ಸೋಲಿಸಿತು. ಅಂದು ನಮ್ಮ ಯೋಧರು ತಮ್ಮ ಪ್ರಾಣವನ್ನು ನೀಡಿ, ಭಾರತದ ಗಡಿಗಳನ್ನು ರಕ್ಷಣೆ ಮಾಡಿದರು.

VISTARANEWS.COM


on

Kargil War
Koo

1999ರ ಕಾರ್ಗಿಲ್ ಯುದ್ಧದಲ್ಲಿ (Kargil War) ಮಡಿದ ಯೋಧರನ್ನು ಸ್ಮರಿಸಲು ಪ್ರತಿ ವರ್ಷವೂ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಆಚರಣೆ ಮಾಡಲಾಗುತ್ತದೆ. ಯುದ್ಧ ನಡೆದು ಈಗ 24 ವರ್ಷಗಳಾದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(LoC)ಗುಂಟ 1999ರ ಮೇ ತಿಂಗಳಿಂದ ಜುಲೈವರೆಗೂ ಅಂದರೆ ಎರಡು ತಿಂಗಳು ಪಾಕಿಸ್ತಾನದ (Pakistan) ಜತೆ ಭಾರತವು (India) ಯುದ್ಧ ನಡೆಸಿತು. ಭಾರತದ ಗಡಿಯೊಳಗೇ ನುಸುಳಿದ್ದ ಪಾಕಿಸ್ತಾನದ ಯೋಧರನ್ನು, ಭಾರತೀಯ ಸೇನೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಈ ಯುದ್ಧದಲ್ಲಿ ನೂರಾರು ಯೋಧರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದರು. ಅವರ ಸಾಹಸ, ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸುವುದಕ್ಕಾಗಿ ಇಡೀ ಭಾರತವು ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡುತ್ತದೆ.

1999ರ ಮೇ ತಿಂಗಳಲ್ಲಿ ಪಾಕಿಸ್ತಾನವು ತನ್ನ ಸೈನಿಕರನ್ನು ನುಸುಳುಕೋರರ ವೇಷದಲ್ಲಿ ಭಾರತದ ಗಡಿಯೊಳಗೆ ಕಳುಹಿಸಿತ್ತು. ಈ ಪಾಕ್ ಯೋಧರು ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಎಲ್ಒಸಿ ಗುಡಿಗುಂಟ ಅಡಗಿ ಕುಳಿತುಕೊಂಡಿದ್ದರು. ಭಾರತದ ಗಡಿಯಲ್ಲಿ ಸಂಘರ್ಷ ಸೃಷ್ಟಿಸುವುದಕ್ಕಾಗಿ ಲಡಾಕ್ ಮತ್ತು ಕಾಶ್ಮೀರ ನಡುವಿನ ಸಂಪರ್ಕ ಕಡಿತ ಮಾಡುವುದು ಪಾಕ್ ಯೋಧರ ಉದ್ದೇಶವಾಗಿತ್ತು. ಈ ವೇಳೆ, ಪಾಕ್ ಸೈನಿಕರು ಪರ್ವತಗಳ ತುದಿಯಲ್ಲಿದ್ದರೆ ಭಾರತದ ಯೋಧರು ಪರ್ವತದ ತಪ್ಪಲಿನಲ್ಲಿದ್ದರು. ಹಾಗಾಗಿ, ಭಾರತೀಯ ಸೇನೆಯ ಮೇಲೆ ಪಾಕ್ ಸೈನಿಕರ ದಾಳಿ ನಡೆಸುವುದು ಬಹಳ ಸುಲಭವಾಗಿತ್ತು. ಅಂತಿಮವಾಗಿ ಎರಡೂ ಕಡೆಯಿಂದಲೂ ಯುದ್ಧ ಘೋಷಣೆಯಾಯಿತು. ಪಾಕಿಸ್ತಾನದ ಯೋಧರು ಎಲ್ಒಸಿಯನ್ನು ದಾಟಿ ಭಾರತದ ಗಡಿಯೊಳಗೇ ನುಗ್ಗಿದರು.

ಆಪರೇಷನ್ ವಿಜಯ್ ಆರಂಭ

1999 ಮೇ 3ರಂದು ಕಾರ್ಗಿಲ್ ಯುದ್ಧವನ್ನು ಪಾಕಿಸ್ತಾನವು ಆರಂಭಿಸಿತು. ಕಾರ್ಗಿಲ್ ಜಿಲ್ಲೆಯ ಬಂಡೆಗಳಿಂದ ಕೂಡಿರುವ ಪರ್ವತಗಳಲ್ಲಿ ಪಾಕಿಸ್ತಾನದ ಸುಮಾರು 50000ಕ್ಕೂ ಅಧಿಕ ಸೈನಿಕರು ಅಡಗಿಕೊಂಡಿದ್ದರು ಮತ್ತು ಆ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಯಾವಾಗ ಈ ಮಾಹಿತಿ ದೊರೆಯಿತೋ ಭಾರತೀಯ ಸೇನೆಯ ಆಪರೇಷನ್ ವಿಜಯ್ ಆರಂಭಿಸಿತು. ಭಾರತದ ಗಡಿಯೊಳಗೇ ನುಗ್ಗಿದ್ದ ಅಷ್ಟೂ ಪಾಕಿಸ್ತಾನ ಸೈನಿಕರನ್ನು ವಾಪಸ್ ಪಾಕಿಸ್ತಾನಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತು.

ಭಾರೀ ಸಿದ್ಧತೆ ಮಾಡಿಕೊಂಡಿದ್ದ ಪಾಕ್

1998-1999ರ ಚಳಿಗಾಲದಲ್ಲಿ ಪಾಕಿಸ್ತಾನಿ ಸೇನೆಯು ಸಿಯಾಚಿನ್ ಗ್ಲೇಸಿಯರ್ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಪ್ರದೇಶದಲ್ಲಿ ಪ್ರಾಬಲ್ಯ ಮೆರೆಯಲು ಕಾರ್ಗಿಲ್ ಬಳಿ ರಹಸ್ಯವಾಗಿ ತನ್ನ ಯೋಧರಿಗೆ ತರಬೇತಿ ನೀಡಿತ್ತು. ಅಲ್ಲದೇ ಸೇನೆಯನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಆರಂಭಿಸಿತ್ತು. ಈ ಕುರಿತು ಪ್ರಶ್ನಿಸಿದಾಗ, ಅವರು ಪಾಕಿಸ್ತಾನದ ಯೋಧರಲ್ಲ, ಇಂಡಿಯನ್ ಮುಜಾಹಿದ್ದೀನ್ ಉಗ್ರರು ಎಂದು ಸಮಜಾಯಿಸಿ ನೀಡಿತ್ತು. ಪಾಕಿಸ್ತಾನದ ಉದ್ದೇಶವೇ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ತನ್ನತ್ತ ಸೆಳೆಯುವುದಾಗಿತ್ತು. ಆ ಮೂಲಕ ಭಾರತೀಯ ಸೇನೆಯ ಮೇಲೆ ಒತ್ತಡ ತಂದು, ಸಿಯಾಚಿನ್ ಪ್ರದೇಶದಿಂದ ಯೋಧರನ್ನ ಭಾರತವು ವಾಪಸ್ ಕರೆಯಿಸಿಕೊಳ್ಳುವ ಹುನ್ನಾರವನ್ನು ಪಾಕಿಸ್ತಾನ ಮಾಡಿತ್ತು. ಅಲ್ಲದೇ, ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಭಾರತದ ಮೇಲೆ ಒತ್ತಡ ತರುವುದು ಉದ್ದೇಶವಾಗಿತ್ತು.

1971ರ ಇಂಡೋ-ಪಾಕ್ ಯುದ್ಧದ ಬಳಿಕ ಉಭಯ ರಾಷ್ಟ್ರಗಳ ನಡುವೆ ಅನೇಕ ಸೇನಾ ಸಂಘರ್ಷಗಳು ಸಂಭವಿಸಿವೆ. ಎರಡೂ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಿವೆ. 1999 ಫೆಬ್ರವರಿಯಲ್ಲಿ ಪಾಕಿಸ್ತಾನ ಮತ್ತು ಭಾರತಗಳೆರಡೂ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಅನ್ವಯ ಕಾಶ್ಮೀರ ಸಂಘರ್ಷವನ್ನು ದ್ವಿಪಕ್ಷೀಯ ಹಾಗೂ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದಾಗಿತ್ತು.

ಆಪರೇಷನ್ ಭದ್ರ್

ಭಾರತದ ಗಡಿಯೊಳಗೆ ನುಗ್ಗಿ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಈ ಕ್ರಿಯೆಗೆ ಪಾಕಿಸ್ತಾನವು ಆಪರೇಷನ್ ಭದ್ರ್ ಎಂದು ಹೆಸರಿಟ್ಟಿತ್ತು. ಇದರ ಮುಖ್ಯ ಉದ್ದೇಶವೇ ಲಡಾಕ್ ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಕಡಿತಗೊಳಿಸುವುದು ಮತ್ತು ಸಿಯಾಚಿನ್ ಪ್ರದೇಶದಿಂದ ಭಾರತೀಯ ಸೇನೆ ವಾಪಸ್ ಹೋಗುವಂತೆ ಮಾಡುವುದಾಗಿತ್ತು. ಅಲ್ಲದೇ, ಈ ಪ್ರದೇಶದಲ್ಲಿ ಉದ್ಭವವಾಗುವ ಯಾವುದೇ ಕದಲಿಕೆಯು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಿತ್ತು. ಅದೇ ಉದ್ದೇಶದಿಂದ ಪಾಕಿಸ್ತಾನವು ಭಾರತದ ಗಡಿಯೊಳಗೇ ತನ್ನ ಸೈನಿಕರನ್ನು ಕಳುಹಿಸಿತ್ತು. ಆದರೆ, ಭಾರತೀಯ ಸೇನೆಯು ಈ ಎಲ್ಲ ಸೈನಿಕರನ್ನು ಸದೆ ಬಡಿಯಿತು. ಅಲ್ಲದೇ ಪಾಕಿಸ್ತಾನದ ಹುನ್ನಾರವನ್ನು ಜಗಜ್ಜಾಹೀರು ಮಾಡಿತು.

ವಾಯುಪಡೆಯ ಪಾತ್ರ

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಪಾತ್ರ ನಿರ್ವಹಿಸಿತು. ಮಿಗ್-2ಐ, ಮಿಗ್-23ಸ್, ಮಿಗ್-27ಎಸ್, ಜಾಗ್ವಾರ್ ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ಪರಿಣಾಮಕಾರಿಯಾಗಿ ಬಳಸಲಾಯಿತು. ಮಿಗ್ 21 ಮತ್ತು ಮಿಗ್ 23 ಹಾಗೂ ಮಿಗ್ 27 ಮೂಲಕ ಪಾಕಿಸ್ತಾನದ ಅನೇಕ ಟಾರ್ಗೆಟ್‌ಗಳನ್ನು ನಾಶ ಮಾಡಲಾಯಿತು. ಹಾಗಾಗಿ, ಯುದ್ಧದ ವೇಳೆ ಆಪರೇಷನ್ ಸುರಕ್ಷಿತ್ ಸಾಗರಕ್ಕಾಗಿ ವಾಯುಪಡೆಯು ಮಿಗ್ 21 ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು.

ಘನ ಘೋರ ಯುದ್ಧ

ಕಾರ್ಗಿಲ್ ಯುದ್ಧದ ವೇಳೆ ರಾಕೆಟ್ಸ್, ಬಾಂಬ್‌ಗಳನ್ನು ಬಳಸಲಾಯಿತು. ಎರಡೂವರೆ ಲಕ್ಷ ಶೆಲ್, ಬಾಂಬ್ ಮತ್ತು ರಾಕೆಟ್‌ಗಳ ಮೂಲಕ ದಾಳಿ ನಡೆಸಲಾಯಿತು. ಸರಿಸುಮಾರು 5,000 ಫಿರಂಗಿ ಶೆಲ್‌ಗಳು, ಮಾರ್ಟರ್ ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಪ್ರತಿದಿನ 300 ಬಂದೂಕುಗಳು, ಮಾರ್ಟರ್‌ಗಳು ಮತ್ತು ಎಂಬಿಆರ್‌ಎಲ್‌ಗಳಿಂದ ಹಾರಿಸಲಾಯಿತು ಮತ್ತು ಟೈಗರ್ ಹಿಲ್ ಅನ್ನು ಮರಳಿ ಪಡೆದ ದಿನ 9,000 ಶೆಲ್‌ಗಳನ್ನು ಹಾರಿಸಲಾಯಿತು.

ಯೋಧರ ಬಲಿದಾನ

ಕಾರ್ಗಿಲ್ ಯುದ್ಧ ವೇಳೆ 527 ಯೋಧರು ಬಲಿದಾನ ಮಾಡಿದರು. 1300ಕ್ಕೂ ಅಧಿಕ ಯೋಧರು ಗಾಯಗೊಂಡರು. ಸಾಕಷ್ಟು ಸಾವು ನೋವು ಸಂಭವಿಸಿತು. ಆದರೂ, ನಮ್ಮ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತೀಯ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾದಾಡಿದರು. ಪಾಕಿಸ್ತಾನದ ಸೇನೆಗೆ ಸರಿಯಾದ ಪಾಠವನ್ನು ಕಲಿಸಿದರು.

ಅಮ್ಮಾ‌, ಗೆದ್ದರೆ ತಿರಂಗಾ ಅರಳಿಸಿ ಬರುತ್ತೇನೆ; ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!

1999ರ ಮೇ ತಿಂಗಳಿನಲ್ಲಿ ಕಾರ್ಗಿಲ್ ಯುದ್ದದ ನಿರ್ಧಾರ ಆದಾಗ ಎಲ್ಲ ಸೈನಿಕರಿಗೂ ʻಎಲ್ಲಿದ್ದರೂ ಬನ್ನಿʼ ಎಂಬ ಆದೇಶ ನೀಡಲಾಗಿತ್ತು. ಆಗ ಭಾರತೀಯ ಸೇನೆ ಬಹುತೇಕ ರಜೆಯ ಮೂಡಿನಲ್ಲಿ ಇತ್ತು. ಕ್ಯಾಪ್ಟನ್ ವಿಕ್ರಂ ಬಾತ್ರಾ ಕೂಡ ರಜೆಯಲ್ಲಿ ಊರಿಗೆ ಬಂದು ಅಮ್ಮನ ಮುಂದೆ ಕೂತಿದ್ದರು. ಅವರ ಅಮ್ಮ ಒಬ್ಬರು ಶಿಕ್ಷಕಿ ಆಗಿದ್ದರು. ಅವರದ್ದು ಹಿಮಾಚಲ ಪ್ರದೇಶದ ಒಂದು ಪುಟ್ಟ ಹಳ್ಳಿ. ತನ್ನ ಸ್ವಂತ ಇಚ್ಛೆಯಿಂದ ಮಗ ಕಂಬೈನ್ ಡಿಫೆನ್ಸ್ ಪರೀಕ್ಷೆ ಬರೆದು ಸೈನಿಕನಾಗಿ ಸೇರಿದ್ದ.

ಅಮ್ಮನಿಗೆ ಮಗ ಅಪರೂಪಕ್ಕೆ ಊರಿಗೆ ಬಂದಿದ್ದಾನೆ, ಸ್ವಲ್ಪ ದಿನ ಜೊತೆಗೆ ಇದ್ದರೆ ಚೆನ್ನಾಗಿತ್ತು ಅಂತ ಆಸೆ ಇತ್ತು. ಆದರೆ ಯುದ್ಧಕ್ಕೆ ಕರೆಬಂದಾಗ ಭಾರತೀಯ ಸೈನಿಕ ಹೊರಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಹಾಗೆ ಕ್ಯಾಪ್ಟನ್ ವಿಕ್ರಂ ಬಾತ್ರಾ ಹೊರಟು ನಿಂತಿದ್ದ ತನ್ನ ಎದೆಯನ್ನು ಕಲ್ಲು ಮಾಡಿಕೊಂಡು! ಅಮ್ಮನಿಗೆ ಕಣ್ಣೀರು ತಡೆದುಕೊಳ್ಳಲು ಆಗಲೇ ಇಲ್ಲ. ಆಗ ಮಗ ಅಮ್ಮನಿಗೆ ಧೈರ್ಯ ತುಂಬುತ್ತಾ, “ಅಳಬೇಡ ಅಮ್ಮ. ನೀನು ವೀರ ಸೈನಿಕನ ತಾಯಿ. ನಾನು ಖಂಡಿತ ಹಿಂದೆ ಬರುತ್ತೇನೆ. ಯುದ್ಧವನ್ನು ಗೆದ್ದರೆ ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ. ಅಥವಾ ತ್ರಿವರ್ಣ ಧ್ವಜವನ್ನು ಹೊದ್ದು ಹಿಂದೆ ಬರುತ್ತೇನೆ!” ಅಮ್ಮನಿಗೆ ಎಷ್ಟು ಅರ್ಥ ಆಯಿತೋ ಗೊತ್ತಿಲ್ಲ. ಅವನಿಗೆ ಆರತಿ ಎತ್ತಿ ಆಶೀರ್ವಾದ ಮಾಡಿ ಕಳುಹಿಸಿದರು.

ಈ ಸುದ್ದಿಯನ್ನೂ ಓದಿ: Pervez Musharraf Death: ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದ ಮುಷರಫ್, ಆಗ್ರಾ ಮಾತುಕತೆ ಮುರಿದರು

1999ರ ಮೇ ತಿಂಗಳಿನಲ್ಲಿ ಆರಂಭ ಆದ ಕಾರ್ಗಿಲ್ ಯುದ್ಧವು ಎರಡು ತಿಂಗಳ ಕಾಲ ಮುಂದುವರಿಯಿತು. ಅದರಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಿಗೆ ತುಂಬಾ ಕ್ಲಿಷ್ಟಕರವಾದ ಟಾಸ್ಕ್ ನೀಡಲಾಯಿತು. ಏಳು ಸಾವಿರ ಅಡಿ ಎತ್ತರದ ಹಿಮ ಪರ್ವತದ ಶಿಖರ (ಅದರ ಹೆಸರು ಪಾಯಿಂಟ್ 5140)ವನ್ನು ಆಕ್ರಮಿಸಿಕೊಂಡ ಪಾಕ್ ಸೈನಿಕರಿಂದ ಮತ್ತೆ ಭಾರತದ ವಶಕ್ಕೆ ಪಡೆಯುವ ಟಾಸ್ಕ್ ಅದು. ಕ್ಯಾಪ್ಟನ್ ಬಾತ್ರಾ ಅವರು ತನ್ನ ಜೊತೆಗೆ ಇದ್ದ ಐವರು ಸೈನಿಕರಿಗೆ ಧೈರ್ಯ ಹೇಳಿ ‘ಯೇ ದಿಲ್ ಮಾಂಗೇ ಮೋರ್’ ಎಂಬ ಘೋಷಣೆಯನ್ನು ಕೊಡುತ್ತಾರೆ. ಆ ಶಿಖರವನ್ನು ಮುಂಭಾಗದಿಂದ ಏರಿ ಅದನ್ನು ವಶಪಡಿಸಿಕೊಳ್ಳುತ್ತಾರೆ. ನಿರಂತರ ಬಾಂಬ್, ಗ್ರಾನೈಡ್ ಮತ್ತು ಕ್ಷಿಪಣಿ ದಾಳಿಗಳ ನಡುವೆ, ದುರ್ಗಮ ಹಾದಿಯಲ್ಲಿ ಸಾಗಿ ಆ ಶಿಖರವನ್ನು ಏರಿ ಅದನ್ನು ಗೆದ್ದದ್ದು ಅಸಾಮಾನ್ಯ ಸಾಹಸವೇ ಆಗಿತ್ತು.

ಅದನ್ನು ಮುಗಿಸಿ ಇನ್ನೊಂದು ಶಿಖರವನ್ನು (ಪಾಯಿಂಟ್ 4875) ವಶ ಮಾಡಲು ಹೊರಟಾಗ ಕ್ಷಿಪಣಿ ದಾಳಿಗೆ ತುತ್ತಾಗಿ ಕ್ಯಾಪ್ಟನ್ ವಿಕ್ರಂ ಬಾತ್ರಾ ತಮ್ಮ ಪ್ರಾಣವನ್ನು ಕಳೆದುಕೊಂಡರು. ಅವರಿಗೆ ಮರಣೋತ್ತರ ಆಗಿ ಸೈನಿಕನಿಗೆ ನೀಡುವ ಪರಮೋಚ್ಚ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಈ ರೀತಿ ಹುತಾತ್ಮರಾದ 527 ಭಾರತೀಯ ಸೈನಿಕರ ಬಲಿದಾನದ ಫಲವಾಗಿ ಭಾರತವು ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆ ಸೈನಿಕರ ಗೌರವದ ದಿನ ಇಂದು ಕಾರ್ಗಿಲ್ ವಿಜಯ ದಿವಸ್. ಆ ಮಹಾನ್ ಸೈನಿಕರಿಗೆ ನಮ್ಮ ಶೃದ್ಧಾಂಜಲಿ ಇರಲಿ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Sachin Tendulkar Birthday
ಕ್ರೀಡೆ28 mins ago

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

PM Narendra Modi
ಕರ್ನಾಟಕ31 mins ago

PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Chikkaballapur Lok Sabha Constituency Congress candidate Raksha Ramaiah election campaign in Nelamangala
ಚಿಕ್ಕಬಳ್ಳಾಪುರ51 mins ago

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Sunetra Pawar
ದೇಶ1 hour ago

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

2nd PUC Exam
ಕರ್ನಾಟಕ1 hour ago

2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

DCM D K Shivakumar visit adichunchanagiri mutt
ಕರ್ನಾಟಕ1 hour ago

Lok Sabha Election 2024: ನನ್ನ ಜೀವ, ನನ್ನ ದೇಹ ಇರುವುದೇ ನಮ್ಮ ಜನರಿಗಾಗಿ: ಡಿ.ಕೆ. ಶಿವಕುಮಾರ್

Road Accident
ಕರ್ನಾಟಕ2 hours ago

Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

Madrid Open 2024
ಕ್ರೀಡೆ2 hours ago

Madrid Open 2024: ಫಿಟ್​ನೆಸ್​ ಸಲುವಾಗಿ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಹಾಲೆಪ್‌

Kotak Bank
ದೇಶ2 hours ago

Kotak Bank: ಕೊಟಕ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಷೇಧ; ಹಳೆಯ ಗ್ರಾಹಕರಿಗೆ ಏನು ತೊಂದರೆ? ಇಲ್ಲಿದೆ ಮಾಹಿತಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌