Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ - Vistara News

ದೇಶ

Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ

Lion & Lioness Name: ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿದ್ದ ಸಿಂಹದ ಜೋಡಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಕ್ಬರ್, ಸೀತಾ ಎಂದು ಈ ಹಿಂದೆ ನಾಮಕರಣ ಮಾಡಿತ್ತು. ಆದರೆ ಈ ನಾಮಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ನಾಮಕರಣ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಸಿಂಹದ ಜೋಡಿಗೆ ಅಕ್ಬರ್-ಸೀತಾ ಬದಲು ಸೂರಜ್ ತಾನ್ಯಾ ಎಂದು ಹೆಸರಿಡಲಾಗಿದೆ.

VISTARANEWS.COM


on

Lion & Lioness Name
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತಾ: ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಪಶ್ಚಿಮ ಬಂಗಾಳ ಮೃಗಾಲಯದ ಸಿಂಹ(Lion) ಮತ್ತು ಸಿಂಹಿಣಿ(Lioness) ಹೆಸರು ಕೊನೆಗೂ ಬದಲಾಗಿದೆ (Lion & Lioness Name). ಅಕ್ಬರ್‌(Akbar) ಮತ್ತು ಸೀತಾ(Seetha) ಸಿಂಹಗಳ ಹೆಸರನ್ನು ಬದಲಿಸಬೇಕೆಂದು ಪಟ್ಟು ಹಿಡಿದಿದ್ದ ವಿಶ್ವ ಹಿಂದೂ ಪರಿಷದ್‌(VHP)ಗೆ ಕೊನೆಗೂ ಜಯ ಸಂದಿದ್ದು, ಈ ಸಿಂಹ ಜೋಡಿಗಳ ಹೆಸರನ್ನು ಸೂರಜ್‌ ಮತ್ತು ತಾನ್ಯಾ ಎಂದು ಬದಲಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಪಶ್ಚಿಮ ಬಂಗಾಳದ ಸಫಾರಿ ಪಾರ್ಕ್‌ನಲ್ಲಿದ್ದ ಸಿಂಹದ ಜೋಡಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಕ್ಬರ್, ಸೀತಾ ಎಂದು ಈ ಹಿಂದೆ ನಾಮಕರಣ ಮಾಡಿತ್ತು. ಆದರೆ ಈ ನಾಮಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ನಾಮಕರಣ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು, ಸಿಂಹದ ಜೋಡಿಗೆ ಅಕ್ಬರ್-ಸೀತಾ ಬದಲು ಸೂರಜ್ ತಾನ್ಯಾ ಎಂದು ಹೆಸರಿಡಲಾಗಿದೆ.

ಸಿಂಹ ಹಾಗೂ ಸಿಂಹಿಣಿಯನ್ನು ತ್ರಿಪುರಾದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಲ್ಲಿ ಇರುವ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಕರೆ ತಂದ ಬಳಿಕ ಈ ವಿವಾದ ಭುಗಿಲೆದ್ದಿತ್ತು. ಈ ಪ್ರಕರಣ ಸಂಬಂಧ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಪಶ್ಚಮ ಬಂಗಾಳ ಘಟಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಇರುವ ಕೋಲ್ಕತ್ತಾ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ಫೆಬ್ರವರಿ 21 ರಂದು ಈ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸಿಂಹ ಹಾಗೂ ಸಿಂಹಿಣಿ ಹೆಸರನ್ನು ಈ ಕೂಡಲೇ ಬದಲಿಸುವಂತೆ ಆದೇಶ ನೀಡಿತ್ತು.

ಕೋರ್ಟ್‌ ಹೇಳಿದ್ದೇನು?

ಸಿಂಹಗಳನ್ನು ಕರೆತರಲಾದ ತ್ರಿಪುರಾದಿಂದಲೇ ಅವುಗಳಿಗೆ ವಿವಾದಾತ್ಮಕ ಹೆಸರುಗಳನ್ನು ನೀಡಲಾಗಿತ್ತು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಗುರುವಾರ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೋಯ್ಜಿತ್ ಚೌಧರಿ ಈ ಬಗ್ಗೆ ತೀರ್ಪು ಪ್ರಕಟಿಸಿದ್ದು, ಈ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. ರಾಜ್ಯ ಸರಕಾರವೇ ಆ ಹೆಸರನ್ನು ಇಟ್ಟಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಇದು ನಿಜವಲ್ಲ ಎಂದು ನಾವು ಸಾಬೀತಾಗಿದೆ. ಇದನ್ನು ತ್ರಿಪುರಾ ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ನಮಗೆ ತಿಳಿದಾಗ ಬಂಗಾಳ ಅರಣ್ಯ ಇಲಾಖೆ ಯಾವುದೇ ವಿವಾದವಾಗದಂತೆ ಅವರ ಹೆಸರನ್ನು ಬದಲಿಸಿದೆ. ಹೆಸರುಗಳನ್ನು ಬದಲಿಸಿ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: NEET: ಕರ್ನಾಟಕ ಬಳಿಕ ಪಶ್ಚಿಮ ಬಂಗಾಳದಲ್ಲೂ ನೀಟ್‌ ಪರೀಕ್ಷೆ ವಿರುದ್ಧ ನಿರ್ಣಯ; ಹೆಚ್ಚಾಯ್ತು ಆಕ್ರೋಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ

Wayanad Landslide: ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಮೇಘಶ್ರೀ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯಾಚರಣೆಯ ಪ್ರತಿ ನಿಮಿಷವೂ ಅತ್ಯಂತ ಅಮೂಲ್ಯವಾದುದು ಎನ್ನುತ್ತಾರೆ. ದಣಿವರಿಯದೆ ಕೆಲಸ ಮಾಡುತ್ತಿರುವ ಅವರು ಭೂಕುಸಿತಕ್ಕೆ ಬಲಿಯಾದವರ ಶವಗಳನ್ನು ವಯನಾಡ್ ಸ್ಮಶಾನದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುವಾಗಲೂ ಅಲ್ಲಿದ್ದರು.

VISTARANEWS.COM


on

meghashree DC Wayanad landslide 2
Koo

ಬೆಂಗಳೂರು: ವಯನಾಡ್ ಜಿಲ್ಲಾಧಿಕಾರಿ (Wayanad District Commissioner) ಮೇಘಶ್ರೀ ಡಿ.ಆರ್ (Meghashree DR) ಭೂಕುಸಿತ (Wayanad Landslide, Kerala Landslide) ಸಂಭವಿಸಿದ ದಿನದಿಂದಲೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಾರ್ಯಾಚರಣೆಯ (Rescue Operation) ಸಂಪೂರ್ಣ ಉಸ್ತುವಾರಿ ವಹಿಸಿದ್ದು, ರಕ್ಷಣೆ ಹಾಗೂ ಕಾಳಜಿ ವ್ಯವಸ್ಥೆಗಳ ಮೇಲೆ ಇಡೀ ದಿನ ನಿಗಾ ಇಟ್ಟಿರುತ್ತಾರೆ. ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಅವರ ಕರ್ತವ್ಯ ನಡುರಾತ್ರಿಯವರೆಗೂ ಮುಂದುವರಿಯುತ್ತದೆ. ಸ್ಥಳೀಯ, ಕೇರಳಿಗರ ಮೆಚ್ಚುಗೆ ಪಡೆದಿರುವ ಈ ಜಿಲ್ಲಾಧಿಕಾರಿ ಕನ್ನಡತಿ, ಚಿತ್ರದುರ್ಗದವರು ಎಂಬುದು ವಿಶೇಷ.

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಮೇಘಶ್ರೀ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯಾಚರಣೆಯ ಪ್ರತಿ ನಿಮಿಷವೂ ಅತ್ಯಂತ ಅಮೂಲ್ಯವಾದುದು ಎನ್ನುತ್ತಾರೆ. ದಣಿವರಿಯದೆ ಕೆಲಸ ಮಾಡುತ್ತಿರುವ ಅವರು ಭೂಕುಸಿತಕ್ಕೆ ಬಲಿಯಾದವರ ಶವಗಳನ್ನು ವಯನಾಡ್ ಸ್ಮಶಾನದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುವಾಗಲೂ ಅಲ್ಲಿದ್ದರು.

ಮೇಘಶ್ರೀ ಅವರ ತಂದೆ ರುದ್ರಮುನಿ ಎಸ್‌ಬಿಐನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾದವರು. ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದವರು. “ಸೋಮವಾರದವರೆಗೂ ನಾನು ವಯನಾಡಿನಲ್ಲಿದ್ದೆ. ಆ ಮಧ್ಯಾಹ್ನ ವಯನಾಡನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಘಟನೆ ಮಧ್ಯರಾತ್ರಿ ನಡೆದಿದೆ. ಕೆಲವೇ ಗಂಟೆಗಳಲ್ಲಿ ಮೇಘಶ್ರೀ ಸ್ಥಳಕ್ಕೆ ಧಾವಿಸಿದ್ದಳು. ಈ ತುರ್ತು ಪರಿಸ್ಥಿತಿಯ ಸಮಯದಲ್ಲಿ, ನನ್ನ ಮಗಳು ವಯನಾಡಿನ ಜನರನ್ನು ರಕ್ಷಿಸುವ ಅತ್ಯಂತ ಕಷ್ಟಕರವಾದ ಕೆಲಸವನ್ನು ಮಾಡುತ್ತಿರುವುದು ನನಗೆ ಅತ್ಯಂತ ಹೆಮ್ಮೆ ತಂದಿದೆ” ಎಂದು ತಂದೆ ಹೇಳಿದ್ದಾರೆ.

“ವಯನಾಡಿನ ಪರಿಸ್ಥಿತಿ ಮತ್ತು ಒಬ್ಬ ತಂದೆಯಾಗಿ ನನ್ನ ಮಗಳ ಬಿಡುವಿಲ್ಲದ ಕೆಲಸದ ಬಗ್ಗೆ ನಾನು ಉದ್ವಿಗ್ನಗೊಂಡಿದ್ದೇನೆ. ಆದರೆ ನಾನು ಮೊದಲು ದೇಶದ ಪ್ರಜೆ; ತನ್ನ ಕರ್ತವ್ಯಕ್ಕೆ ಹಾಜರಾಗಲು ಮತ್ತು ಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸಲು ಆಕೆಗೆ ಹೇಳಿದ್ದೇನೆ. ಏಕೆಂದರೆ ಜನರಿಗೆ ಸೇವೆ ಮಾಡುವುದು ಹೆಚ್ಚು ಮುಖ್ಯ” ಎಂದು ಅವರು ಹೇಳಿದ್ದಾರೆ.

ಮೇಘಶ್ರೀ ಅವರು ಎರಡೂವರೆ ವರ್ಷ ಪ್ರಾಯದ ವಿಸ್ಮಯಾ ಮತ್ತು 6 ತಿಂಗಳ ಹಸುಳೆ ಧೃತಿ ಎಂಬ ಎರಡು ಮಕ್ಕಳ ತಾಯಿ. ಮೇಘಶ್ರೀ ಅವರ ಪತಿ ಡಾ.ವಿಕ್ರಂ ಸಿಂಹ ಅವರು ಕರ್ನಾಟಕ ಕೃಷಿ ವಿವಿಯ ಸಹಾಯಕ ಪ್ರಾಚಾರ್ಯರಾಗಿದ್ದಾರೆ. ತಮ್ಮ ಕುಟುಂಬದ ಪೂರ್ಣ ಬೆಂಬಲವೇ ತಮ್ಮ ಯಶಸ್ಸಿಗೆ ಪ್ರಧಾನ ಕಾರಣ ಎನ್ನುತ್ತಾರೆ ಮೇಘಶ್ರೀ.

ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮೇಘಶ್ರೀ ಶಾಲೆ ಹಾಗೂ ಕಾಲೇಜು ಹಂತಗಳನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದ್ದಾರೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು, ಕ್ಯಾಂಪಸ್ ಸಂದರ್ಶನದಲ್ಲಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಯಾದರು. ಬಾಲ್ಯದಲ್ಲೇ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಮೇಘಶ್ರೀ, ಇಂಜಿನಿಯರಿಂಗ್‌ ಪದವಿಗೆ ತಮ್ಮ ಸಾಧನೆಯನ್ನು ಸೀಮಿತಗೊಳಿಸದೆ, ಕಠಿಣ ಪರಿಶ್ರಮದ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದವರು.

ತಂದೆ ರುದ್ರಮುನಿ, ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಚೀಫ್ ಮ್ಯಾನೇಜರ್ ಆಗಿದ್ದರು. ತಾಯಿ ರುಕ್ಮಿಣಿದೇವಿ ಪ್ರಾಥಮಿಕ ಶಾಲಾ ಶಿಕ್ಷಕಿ. ಚಿತ್ರದುರ್ಗದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಪೂರೈಸಿದರು. ಎಸ್‌ಎಸ್‌ಎಲ್‌ಸಿ ಬಳಿಕ ತಂದೆಯವರಿಗೆ ವರ್ಗಾವಣೆಯಾಗಿದ್ದರಿಂದ ನಂತರದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದರು. ಎಂಇಎಸ್ ಕಿಶೋರ್ ಕೇಂದ್ರದಲ್ಲಿ ಪಿಯುಸಿ ಹಾಗೂ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಇ ಶಿಕ್ಷಣ ಪಡೆದರು.

ಮೂರು ವರ್ಷ ಸಾಫ್ಟ್‌ವೇರ್‌ ಕೆಲಸ ಮಾಡಿದ ಮೇಘಶ್ರೀ, 2014ರಲ್ಲಿ ಉದ್ಯೋಗ ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರಾರಂಭಿಸಿದರು. ಒಂದು ವರ್ಷದ ಸಿದ್ಧತೆಯ ಬಳಿಕ 2015ರಲ್ಲಿ ಯುಪಿಎಸ್‌ಸಿ ಜತೆಗೆ ಕೆಎಎಸ್ ಪರೀಕ್ಷೆಯನ್ನೂ ಬರೆದರು. ಕೇವಲ 1.6 ಅಂಕಗಳಿಂದ ಬ್ಯಾಂಕ್ ಪಟ್ಟಿಯಿಂದ ವಂಚಿತರಾಗಿದ್ದರಿಂದ, ಪೂರ್ಣ ಪ್ರಮಾಣದಲ್ಲಿ ಯುಪಿಎಸ್‌ಸಿ ಮೇಲೆಯೇ ಗಮನ ಕೇಂದ್ರೀಕರಿಸಿದರು. ಸತತ ಅಧ್ಯಯನದೊಂದಿಗೆ 2016ರಲ್ಲಿ 2ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್‌ಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Continue Reading

Latest

Land Dispute: ಭೂ ವಿವಾದ ಪ್ರಕರಣ; ಜೀವಂತ ಸಮಾಧಿಯಾದವನನ್ನು ರಕ್ಷಿಸಿದ ಬೀದಿನಾಯಿಗಳು!

Land Dispute: ಭೂ ವಿವಾದದಲ್ಲಿ ಜೀವಂತವಾಗಿ ಸಮಾಧಿ ಮಾಡಿದ ವ್ಯಕ್ತಿಯನ್ನು ನಾಯಿಗಳು ರಕ್ಷಿಸಿದ್ದು ಹೇಗೆ ಗೊತ್ತಾ?ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಮರೆಯುತ್ತಿದ್ದಾರೆ.ಇದರ ಮುಂದೆ ಸಂಬಂಧಗಳಿಗೂ ಬೆಲೆಯಿಲ್ಲ.ಆಸ್ತಿಗಾಗಿ ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ಬೀದಿನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

VISTARANEWS.COM


on

Land Dispute
Koo


ಆಗ್ರಾ: ಹಣ, ಆಸ್ತಿ, ಅಧಿಕಾರದ ಆಸೆಗೆ ಮನುಷ್ಯರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಸಾಕ್ಷಿಯಾಗಿದೆ. ಇಂದಿಗೂ ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಕಳೆದುಕೊಂಡು ಬಹಳ ಕ್ರೂರವಾಗುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ (Land Dispute )ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಸಂತ್ರಸ್ತ ರೂಪ್ ಕಿಶೋರ್ (24) ಎಂಬುದಾಗಿ ತಿಳಿದುಬಂದಿದೆ. ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಜುಲೈ 18 ರಂದು ರೂಪ್ ಕಿಶೋರ್ ಮೇಲೆ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು ಹಲ್ಲೆ ನಡೆಸಿದ್ದರು. ಅವರು ಅವನನ್ನು ಕತ್ತು ಹಿಸುಕಿ ನಂತರ ಅವನು ಸತ್ತಿದ್ದಾನೆಂದು ಭಾವಿಸಿ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ. ಆದರೆ ಅದೃಷ್ಟವಶಾತ್ ಕಿಶೋರ್ ಅವರನ್ನು ಸಮಾಧಿ ಮಾಡಿದ ಪ್ರದೇಶವನ್ನು ಬೀದಿ ನಾಯಿಗಳು ಅಗೆದು ಅವರ ದೇಹವನ್ನು ಕಚ್ಚಿ ತಿನ್ನಲು ಮುಂದಾದಾಗ ಕಿಶೋರ್ ಗೆ ಪ್ರಜ್ಞೆ ಬಂದಿದೆ. ಆಗ ಅವರು ಅಲ್ಲೇ ಹತ್ತಿರದ ಪ್ರದೇಶಕ್ಕೆ ನಡೆದುಕೊಂಡು ಹೋಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿಗಳು ತನ್ನ ಮಗನನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು, ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ, ನಂತರ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ ಎಂದು ಕಿಶೋರ್ ತಾಯಿ ಹೇಳಿದ್ದಾರೆ. ಈ ಬಗ್ಗೆ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

ಆಸ್ತಿಯ ವಿಚಾರಕ್ಕೆ ಜನರು ತಮ್ಮವರ ಮೇಲೆ ಹಲ್ಲೆ ಮಾಡುವ ಪ್ರಕರಣ ಇದೇ ಮೊದಲಲ್ಲಾ. ಈ ಹಿಂದೆ ಜುಲೈ ತಿಳಗಳಿನಲ್ಲಿ ಅನಂತಪುರ ಜಿಲ್ಲೆಯ ಗರ್ಲದಿನ್ನೆ ಮಂಡಲದ ಪೆನಕಚೆರ್ಲಾ ಗ್ರಾಮದಲ್ಲಿ ಆಸ್ತಿ, ಮನೆ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಆಕೆಯನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಜಿಲಾನಿ ಎಂಬ ವ್ಯಕ್ತಿ ತನ್ನ ಸಹೋದರಿ ಮೆಹಬೂಬಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading

ವಾಣಿಜ್ಯ

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗವನ್ನು ತಲುಪಲು ಭಾರತಕ್ಕೆ ಸುಮಾರು 75 ವರ್ಷಗಳು ಬೇಕಾಗಬಹುದು. ಭಾರತದ ಪ್ರತಿಸ್ಪರ್ಧಿ ಚೀನಾ ಈ ಸಾಧನೆಯನ್ನು 10 ವರ್ಷಗಳಲ್ಲಿ ಸಾಧಿಸಲಿದೆ. ಇಂಡೋನೇಷ್ಯಾಕ್ಕೆ ಸುಮಾರು 70 ವರ್ಷ ಬೇಕಾಗಬಹುದು ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

VISTARANEWS.COM


on

World Bank
Koo

ನವದೆಹಲಿ: ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ ವಿಶ್ವ ಬ್ಯಾಂಕ್ (World Bank) ಕೆಲವೊಂದು ಗಂಭೀರ ವಿಚಾರಗಳನ್ನು ಹಂಚಿಕೊಂಡಿದೆ. ಮುಂದಿನ ಕೆಲವು ದಶಕಗಳಲ್ಲಿ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳು ತಲಾ ಆದಾಯ (Per Capita Income)ವನ್ನು ಹೆಚ್ಚಿಸಿಕೊಳ್ಳಲು ಅನೇಕ ಸವಾಲು, ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕದ ತಲಾ ಆದಾಯದ ಕಾಲು ಭಾಗವನ್ನು ತಲುಪಲು ಭಾರತಕ್ಕೆ ಸುಮಾರು 75 ವರ್ಷಗಳು ಬೇಕಾಗಬಹುದು. ಭಾರತದ ಪ್ರತಿಸ್ಪರ್ಧಿ ಚೀನಾ ಈ ಸಾಧನೆಯನ್ನು 10 ವರ್ಷಗಳಲ್ಲಿ ಸಾಧಿಸಲಿದೆ. ಇಂಡೋನೇಷ್ಯಾಕ್ಕೆ ಸುಮಾರು 70 ವರ್ಷ ಬೇಕಾಗಬಹುದು ಎಂದು ತಿಳಿಸಿದೆ.

ವಿಶ್ವ ಅಭಿವೃದ್ಧಿ ವರದಿ 2024: ದಿ ಮಿಡಲ್ ಇನ್‌ಕಮ್‌ ಟ್ರ್ಯಾಪ್‌ (World Development Report 2024: The Middle Income Trap)ನಲ್ಲಿ ಈ ವಿವರಗಳನ್ನು ಹಂಚಿಕೊಳ್ಳಲಾಗಿದೆ.

2023ರ ಅಂತ್ಯದ ವೇಳೆಗೆ 108 ದೇಶಗಳನ್ನು ಮಧ್ಯಮ ಆದಾಯದ ದೇಶಗಳು ಎಂದು ವರ್ಗೀಕರಿಸಲಾಗಿದೆ. ಈ ದೇಶಗಳ ಜಿಡಿಪಿ ಆಧರಿಸಿ ತಲಾ ಆದಾಯ 1,136 ಡಾಲರ್‌ರಿಂದ 13,845 ಡಾಲರ್ (95,189.98 ರೂ. – 1,160,127.93 ರೂ.) ವ್ಯಾಪ್ತಿಯಲ್ಲಿದೆ. ಈ ದೇಶಗಳಲ್ಲಿ ಸುಮಾರು 600 ಕೋಟಿ ಜನರಿದ್ದಾರೆ. ಅಂದರೆ ಜಾಗತಿಕ ಜನಸಂಖ್ಯೆಯ ಶೇ. 75ರಷ್ಟು. ಇಲ್ಲಿ ವಾಸಿಸುವ ಪ್ರತಿ ಮೂವರಲ್ಲಿ ಇಬ್ಬರು ತೀವ್ರ ಬಡತನದಲ್ಲಿದ್ದಾರೆ ಎಂದು ವರದಿ ವಿವರಿಸಿದೆ.

ವಯಸ್ಸಾಗುತ್ತಿರುವವರ ಜನಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬೆಳೆಯುತ್ತಿರುವ ಸಾಲ ಆರ್ಥಿಕ ಪ್ರಗತಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಇನ್ನೂ ಅನೇಕ ಮಧ್ಯಮ ಆದಾಯದ ದೇಶಗಳು ಪ್ಲೇಬುಕ್ ಅನ್ನು ಬಳಸುತ್ತವೆ. ಇದು ಕಾರನ್ನು ಫಸ್ಟ್‌ ಗೇರ್‌ನಲ್ಲಿ ವೇಗವಾಗಿ ಓಡಿಸುವುದಕ್ಕೆ ಸಮ ಎಂದು ವಿಶ್ವ ಬ್ಯಾಂಕ್‌ ವರದಿ ತಿಳಿಸಿದೆ. ʼʼಅಭಿವೃದ್ಧಿಶೀಲ ದೇಶಗಳು ಇನ್ನೂ ಹಳೆಯ ಪ್ಲೇಬುಕ್‌ಗೆ ಅಂಟಿಕೊಂಡರೆ ಅಭಿವೃದ್ಧಿಯ ಓಟದಲ್ಲಿ ಹಿಂದುಳಿಯಬೇಕಾಗುತ್ತದೆʼʼ ಎಂದು ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಹಿರಿಯ ಉಪಾಧ್ಯಕ್ಷ ಇಂದರ್ಮಿತ್ ಗಿಲ್ ಹೇಳಿದ್ದಾರೆ.

ತಮ್ಮ ಅಭಿವೃದ್ಧಿಯ ಹಂತವನ್ನು ಅವಲಂಬಿಸಿ ಎಲ್ಲ ದೇಶಗಳು ಅತ್ಯಾಧುನಿಕ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. 1990ರಿಂದ 34 ಮಧ್ಯಮ-ಆದಾಯದ ದೇಶಗಳು ಮಾತ್ರ ಹೆಚ್ಚಿನ ಆದಾಯದ ಗಳಿಸುವ ಆರ್ಥಿಕತೆಯಾಗಿ ಬದಲಾಗಿವೆ. ಆ ಪೈಕಿ ಮೂರನೇ ಒಂದು ಭಾಗದಷ್ಟು ಯುರೋಪಿಯನ್ ಒಕ್ಕೂಟ ಏಕೀಕರಣದ ಫಲಾನುಭವಿಗಳು ಅಥವಾ ತೈಲ ರಫ್ತು ದೇಶಗಳು ಎನ್ನುವುದು ವಿಶೇಷ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: Per capita income : 2030ಕ್ಕೆ ಭಾರತದ ತಲಾ ಆದಾಯ 3.28 ಲಕ್ಷ ರೂ.ಗೆ ಏರಿಕೆ

ತಲಾ ಆದಾಯ ಎಂದರೇನು?

ತಲಾ ಆದಾಯವು ದೇಶದಲ್ಲಿ ವಾಸಿಸುವ ಜನರ ಸರಾಸರಿ ಆದಾಯವಾಗಿದೆ. ಇದನ್ನು ಲೆಕ್ಕಾಚಾರ ಮಾಡಲು ಆ ದೇಶದ ಜಿಡಿಪಿಯನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ಇದು ಯಾವುದೇ ದೇಶ ಅಥವಾ ರಾಜ್ಯದ ಜನರ ಆದಾಯದ ಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಜನರು ಏನನ್ನು ಖರೀದಿಸಲು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಇದು ಹೇಳುತ್ತದೆ.

Continue Reading

ವೈರಲ್ ನ್ಯೂಸ್

ಜಯಾ ಬಚ್ಚನ್‌ ಯೂಟರ್ನ್‌; ಮೊನ್ನೆ ಅಮಿತಾಭ್‌ ಹೆಸರಿನಿಂದ ಗುರುತಿಸಿದ್ದಕ್ಕೆ ಗರಂ ಆಗಿದ್ದವರು ಸ್ವತಃ ಪತಿಯ ಹೆಸರು ಉಲ್ಲೇಖಿಸಿದರು!

Jaya Bachchan: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್‌ ಬಚ್ಚನ್‌ʼ ಎಂದು ಕರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ

VISTARANEWS.COM


on

Jaya Bachchan
Koo

ನವದೆಹಲಿ: ಸಂಸತ್‌ನಲ್ಲಿ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಕೆಲವು ದಿನಗಳ ಹಿಂದೆ ಹಿರಿಯ ನಟಿ, ರಾಜಕಾರಣಿ, ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ (Jaya Bachchan) ಅವರು ರಾಜ್ಯಸಭೆಯಲ್ಲಿ ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಕೋಪಗೊಂಡಿದ್ದರು. ಆದರೆ ಶುಕ್ರವಾರ ಅವರೇ ತಮ್ಮನ್ನು ʼಜಯಾ ಅಮಿತಾಭ್‌ ಬಚ್ಚನ್‌ʼ ಎಂದು ಕರೆದುಕೊಂಡಿದ್ದಾರೆ. ಊಹಿಸಿರದ ಈ ಬೆಳವಣಿಗೆಯಿಂದ ಒಂದುಕ್ಷಣ ಅಚ್ಚರಿಗೊಳಗಾದ ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಬಳಿಕ ಜೋರಾಗಿ ನಗಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ಈ ವೇಳೆ ಹಾಜರಿದ್ದ ಪ್ರತಿಪಕ್ಷಗಳ ಸದಸ್ಯರಾದ ಕಾಂಗ್ರೆಸ್‌ನ ಜೈರಾಂ ರಮೇಶ್‌ ಮತ್ತು ಆಮ್‌ ಆದ್ಮಿ ಪಾರ್ಟಿಯ ರಾಘವ್‌ ಛಡ್ಡಾ ಅವರ ಮುಖದಲ್ಲಿಯೂ ನಗು ಅರಳಿದೆ.

ರಾಜ್ಯಸಭೆಯಲ್ಲಿ ಏನಾಯ್ತು?

ಜಯಾ ಬಚ್ಚನ್ ಮತ್ತು ಜಗದೀಪ್ ಧನ್ಕರ್ ನಡುವೆ ತಮಾಷೆಯ ಮಾತುಕತೆ ನಡೆಯಿತು. “ನಾನು ಜಯಾ ಅಮಿತಾಭ್‌ ಬಚ್ಚನ್‌ ಮಾತನಾಡುತ್ತಿದ್ದೇನೆ. ಇಂದು ನಿಮಗೆ ಊಟದ ವಿರಾಮ ಸಿಕ್ಕಿದೆಯೇ? ಇಲ್ಲ? ಅದಕ್ಕಾಗಿಯೇ ನೀವು ಜೈರಾಮ್ ಜಿ ಅವರ ಹೆಸರನ್ನು ಪದೇ ಪದೆ ಹೇಳುತ್ತಿದ್ದೀರಿ. ಅವರ ಹೆಸರನ್ನು ಉಲ್ಲೇಖಿಸದೆ ನಿಮಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಜಯಾ ಬಚ್ಚನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನ್ಕರ್, “ನಾನು ಇಂದು ಊಟಕ್ಕೆ ವಿರಾಮ ತೆಗೆದುಕೊಳ್ಳಲಿಲ್ಲ. ಆದರೆ ನಾನು ಜೈರಾಮ್‌ ಅವರೊಂದಿಗೆ ಊಟ ಮಾಡಿದೆʼʼ ಎಂದರು. ಜತೆಗೆ ತಾವು ಜಯಾ ಬಚ್ಚನ್‌ ಮತ್ತು ಅಮಿತಾಭ್‌ ಬಚ್ಚನ್‌ ಅವರ ಅಭಿಮಾನಿ ಎಂದೂ ತಿಳಿಸಿದರು. ಇದಕ್ಕೆ ಕೈಮುಗಿದು ಜಯಾ ಬಚ್ಚನ್‌ ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ಬಿಸಿ ಬಿಸಿ ಚರ್ಚೆಯಿಂದ ಕಾವೇರುತ್ತಿದ್ದ ರಾಜ್ಯಸಭೆ ಕೆಲ ಹೊತ್ತು ನಗೆಗಡಲಲ್ಲಿ ತೇಲಿ ಹಗುರವಾಯಿತು.

ಈ ಹಿಂದೆ ಜಯಾ ಬಚ್ಚನ್‌ ಹೇಳಿದ್ದೇನು?

ಜುಲೈ 29ರಂದು  ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಜಯಾ ಅಮಿತಾಭ್ ಬಚ್ಚನ್ ಜೀ, ದಯವಿಟ್ಟು ಮಾತನಾಡಿʼʼ ಎಂದು ಸದನದಲ್ಲಿ ಜಯಾ ಬಚ್ಚನ್ ಅವರನ್ನು ಕರೆದಿದ್ದರು. ಇದರಿಂದ ಕೆರಳಿದ ಜಯಾ ಬಚ್ಚನ್‌ ಅವರು, ʼʼಸರ್ ನನ್ನನ್ನು ಕೇವಲ ಜಯಾ ಬಚ್ಚನ್ ಎಂದು ಕರೆದರೆ ಸಾಕಿತ್ತುʼʼ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Parliament Session: ಪತಿ ಅಮಿತಾಬ್‌ ಹೆಸರು ಜಯಾ ಬಚ್ಚನ್‌ಗೆ ಅಲರ್ಜಿ! ಸಂಸತ್‌ನಲ್ಲಿ ಆ ಹೆಸರು ಹೇಳಬೇಡಿ ಎಂದ ನಟಿ!

ಆಗ ಹರಿವಂಶ್ ನಾರಾಯಣ್ ಸಿಂಗ್ ಅವರು ʼʼಸಂಸತ್ತಿನ ದಾಖಲೆಗಳಲ್ಲಿ ಅಧಿಕೃತವಾಗಿ ಜಯಾ ಅಮಿತಾಭ್‌ ಬಚ್ಚನ್ ಎಂದು ನಿಮ್ಮ ಹೆಸರನ್ನು ನೋಂದಾಯಿಸಲಾಗಿದೆʼʼ ಎಂದು ತಿಳಿಸಿದ್ದರು. ʼʼಇದು ಹೊಸ ಸಂಗತಿಯಾಗಿದೆ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಮಹಿಳೆಯರು ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳನ್ನು ಹೊಂದಿಲ್ಲ ಏಕೆ?ʼʼ ಎಂದು ಜಯಾ ಬಚ್ಚನ್ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಮತ್ತೊಮ್ಮೆ ಜಯಾ ಬಚ್ಚನ್‌ ತಮ್ಮ ಹೆಸರಿನ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Continue Reading
Advertisement
meghashree DC Wayanad landslide 2
ಪ್ರಮುಖ ಸುದ್ದಿ10 mins ago

Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ

Dhruva Sarja in hiriyuru dboss slogan in front o martin actor
ಸ್ಯಾಂಡಲ್ ವುಡ್33 mins ago

Dhruva Sarja:  ಧ್ರುವ ಸರ್ಜಾ ಕಂಡು ʻಡಿ ಬಾಸ್’ ಎಂದು ಕೂಗಿದ ದರ್ಶನ್ ಫ್ಯಾನ್ಸ್; ಭರದಿಂದ ಸಾಗಿದೆ ‘ಮಾರ್ಟಿನ್’ ಪ್ರಚಾರ!

Bike Mileage Tips
ಆಟೋಮೊಬೈಲ್33 mins ago

Bike Mileage Tips: ಬೈಕ್‌‌ಗೆ ಟ್ಯೂಬ್, ಟ್ಯೂಬ್ ಲೆಸ್ ಟಯರ್; ಇವೆರಡರಲ್ಲಿ ಯಾವುದು ಬೆಸ್ಟ್?

Robbery Case
Latest43 mins ago

Robbery Case: ಹಾಡಹಗಲೇ ಬಂದೂಕು ತೋರಿಸಿ ಆಭರಣ ಮಳಿಗೆ ದೋಚಿದ ದರೋಡೆಕೋರರು; ವಿಡಿಯೊ ನೋಡಿ

rowdy sheeter murder case
ಕ್ರೈಂ44 mins ago

Murder Case: ಒಂಟಿ ಕೈ ರೌಡಿಯಿಂದ ಇನ್ನೊಬ್ಬ ರೌಡಿಯ ಕೊಚ್ಚಿ ಕೊಲೆ

Land Dispute
Latest46 mins ago

Land Dispute: ಭೂ ವಿವಾದ ಪ್ರಕರಣ; ಜೀವಂತ ಸಮಾಧಿಯಾದವನನ್ನು ರಕ್ಷಿಸಿದ ಬೀದಿನಾಯಿಗಳು!

Neeraj Chopra
ಕ್ರೀಡೆ52 mins ago

Neeraj Chopra: ನೀರಜ್​ ಚಿನ್ನ ಗೆದ್ದರೆ ನೀವು ಕೂಡ ಉಚಿತ ವಿದೇಶ ಪ್ರವಾಸ ಕೈಗೊಳ್ಳಬಹುದು; ಇದು ಹೇಗೆ ಸಾಧ್ಯ?

World Bank
ವಾಣಿಜ್ಯ58 mins ago

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

US Military
ವಿದೇಶ1 hour ago

US Military: ಇರಾನ್, ಹಮಾಸ್, ಹೆಜ್ಬುಲ್ಲಾ ದಾಳಿಯಿಂದ ಇಸ್ರೇಲ್ ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಅಮೆರಿಕ

Jr NTR -Janhvi Kapoor Devara Song take centre stage
ಟಾಲಿವುಡ್1 hour ago

Jr NTR -Janhvi Kapoor: ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಜ್ಯೂನಿಯರ್‌ ಎನ್‌ಟಿಆರ್- ಜಾಹ್ನವಿ; ಆ.5ಕ್ಕೆ ಚಿತ್ರತಂಡದಿಂದ ಗಿಫ್ಟ್‌!​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌