US Debt Ceiling Crisis What is Biden doing to avoid America defaulting on debtUS Debt Ceiling Crisis : ಸಾಲದ ಸುಳಿಯಲ್ಲಿ ಅಮೆರಿಕ, ಡಿಫಾಲ್ಟ್ ತಪ್ಪಿಸಲು ಬೈಡೆನ್‌ ಶತಪ್ರಯತ್ನ

EXPLAINER

US Debt Ceiling Crisis : ಸಾಲದ ಸುಳಿಯಲ್ಲಿ ಅಮೆರಿಕ, ಡಿಫಾಲ್ಟ್ ತಪ್ಪಿಸಲು ಬೈಡೆನ್‌ ಶತಪ್ರಯತ್ನ

US Debt Ceiling Crisis ಅಮೆರಿಕ ಸಾಲದ ಸುಳಿಗೆ ಸಿಲುಕಿದ್ದು ಡಿಫಾಲ್ಟ್‌ ಆಗುವುದನ್ನು ತಪ್ಪಿಸಲು ಸರ್ಕಾರದ ಸಾಲದ ಮಿತಿಯನ್ನು ಏರಿಸಲು ಅಧ್ಯಕ್ಷ ಬೈಡೆನ್‌ ಕಸರತ್ತು ನಡೆಸಿದ್ದಾರೆ. ವಿವರ ಇಲ್ಲಿದೆ.

VISTARANEWS.COM


on

USA whitehouse building
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್:‌ ಅಮೆರಿಕದ ಸಾಲದ ಬಿಕ್ಕಟ್ಟು ಅಕ್ಷರಶಃ ಅದರ ನಿಯಂತ್ರಣ ತಪ್ಪಿದೆ. ಜಗತ್ತಿನ ದೊಡ್ಡಣ್ಣನಂತಿದ್ದ ಅಮೆರಿಕ 31 ಟ್ರಿಲಿಯನ್‌ ಡಾಲರ್‌ (ಅಂದಾಜು 2,542 ಲಕ್ಷ ಕೋಟಿ ರೂ.) ರಾಕೆಟ್‌ನಂತೆ ಸಾಲದ ಹೊರೆ ಏರುತ್ತಿದ್ದು, ಬೈಡೆನ್‌ ಸರ್ಕಾರಕ್ಕೆ ಭಾರಿ ತಲೆನೋವಾಗಿದೆ. 1990ಕ್ಕೆ ಹೋಲಿಸಿದರೆ ಅಮೆರಿಕದ ಸಾಲದ ಪ್ರಮಾಣ ಹತ್ತು ಪಟ್ಟು ಏರಿದೆ. 2000ಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 600 ಶತಕೋಟಿ ಡಾಲರ್‌ ಕೇವಲ ಬಡ್ಡಿಯಾಗಿ ಕಟ್ಟಬೇಕಾಗುತ್ತದೆ. ಸದ್ಯಕ್ಕೆ ಡಿಫಾಲ್ಟ್‌ ಹಾಗೂ ಭವಿಷ್ಯದಲ್ಲಿ ದಿವಾಳಿ ಆಗುವುದನ್ನು ತಪ್ಪಿಸಲು ಅಧ್ಯಕ್ಷ ಜೋ ಬೈಡೆನ್‌ ಶತಪ್ರಯತ್ನ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಆಗಿದ್ದೇನು?

ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಸಿತ್ತು. ಇದರ ಪರಿಣಾಮ ಸಾಲದ ಬೆಟ್ಟವೂ ಬೆಳೆದಿದೆ. ಹೊಸ ಸಾಲ ತೆಗೆಯಲು ಕಾನೂನಿನ ಅಡಚಣೆಗಳನ್ನು ನಿವಾರಿಸಬೇಕಾಗಿದೆ. ಈ ಕಸರತ್ತನ್ನು ಬೈಡೆನ್‌ ಸರ್ಕಾರ ನಡೆಸುತ್ತಿದೆ. ಆದರೆ ಇದರ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಅಮೆರಿಕದ ಡಾಲರ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರಿಸರ್ವ್‌ ಕರೆನ್ಸಿಯಾಗಿ ಪ್ರಾಬಲ್ಯ ಮೆರೆಯುತ್ತಿದೆ. ಆದರೆ ಈ ಪಟ್ಟವನ್ನು ಸಾಲದ ಬಿಕ್ಕಟ್ಟಿನ ಪರಿಣಾಮ ಬಿಟ್ಟುಕೊಡಲಿದೆಯೇ ಎಂಬ ಪ್ರಶ್ನೆ ಉಂಟಾಗಿದೆ. ಮುಖ್ಯವಾಗಿ ಅಮೆರಿಕದ ಆರ್ಥಿಕ ಬಿಕ್ಕಟ್ಟು ಭಾರತದ ಷೇರು ಮಾರುಕಟ್ಟೆ, ಹಣಕಾಸು ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕಲಿದೆಯೇ ಎಂಬ ಆತಂಕವೂ ಸೃಷ್ಟಿಯಾಗಿದೆ.

dollar

ಸಾಲದ ಮಿತಿ ಹೆಚ್ಚಿಸಲು ಅಮೆರಿಕ ನಿರ್ಧಾರ:

ಅಮೆರಿಕ ಸರ್ಕಾರ ತೆಗೆದುಕೊಳ್ಳಬಹುದಾದ ಗರಿಷ್ಠ ಸಾಲದ ಮಿತಿಯನ್ನು ಡೆಟ್‌ ಸೈಲಿಂಗ್‌ ಲಿಮಿಟ್‌ (Debt ceiling limit) ಎನ್ನುತ್ತಾರೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ನಲ್ಲಿ ಸಾಲ ಪಡೆಯಲು ಒಂದು ಮಿತಿ ಇರುತ್ತದೆಯಲ್ಲವೇ? ಅದೇ ರೀತಿ ಅಮೆರಿಕ ಸರ್ಕಾರಕ್ಕೂ ಇದೆ. ಒಂದು ವೇಳೆ ಕ್ರೆಡಿಟ್‌ ಕಾರ್ಡ್‌ ಮೂಲಕ ಹೆಚ್ಚಿನ ಸಾಲ ಪಡೆಯಲು ಏನು ಮಾಡಬಹುದು? ಕ್ರೆಡಿಟ್‌ ಲಿಮಿಟ್‌ ಅನ್ನು ಹೆಚ್ಚಿಸುವಂತೆ ಬ್ಯಾಂಕಿಗೆ ಮನವಿ ಮಾಡಬಹುದು, ಅಲ್ಲವೇ ಅದೇ ರೀತಿ ಅಮೆರಿಕ ಸರ್ಕಾರ ಇದೀಗ ತನ್ನ ಸಾಲದ ಮಿತಿಯನ್ನು ಹೆಚ್ಚಿಸಿ ಡಿಫಾಲ್ಟ್‌ ಅಥವಾ ಭವಿಷ್ಯದಲ್ಲಿ ದಿವಾಳಿಯಾಗುವುದನ್ನು ತಪ್ಪಿಸಲು ಉದ್ದೇಶಿಸಿದೆ. ಈಗ 31.40 ಟ್ರಿಲಿಯನ್‌ ಡಾಲರ್‌ನ ಮಿತಿ ಇದೆ. ಈಗಾಗಲೇ ಅಮೆರಿಕ 31.48 ಟ್ರಿಲಿಯನ್‌ ಡಾಲರ್‌ ಸಾಲವನ್ನು ಅಮೆರಿಕ ಹೊಂದಿದೆ. 2023ರ ಜನವರಿ 19ರಂದು ಅಮೆರಿಕ ಸರ್ಕಾರ ಸಾಲದ ಗರಿಷ್ಠ ಮಿತಿಯನ್ನು ಮುಟ್ಟಿತ್ತು. ಹೀಗಾಗಿ ಹೊಸ ಸಾಲ ಹುಟ್ಟುತ್ತಿಲ್ಲ. ಹೊಸ ಸಾಲ ಬೇಕಿದ್ದರೆ ಕ್ರೆಡಿಟ್‌ ಲಿಮಿಟ್‌ ಅನ್ನು 2023ರ ಜೂನ್‌ 5ರೊಳಗೆ ವಿಸ್ತರಿಸಲೇಬೇಕು.

ಅಮೆರಿಕಕ್ಕೆ ಹೊಸ ಸಾಲ ಏಕೆ ಬೇಕು?

US president Joe Biden

ಅಮೆರಿಕ ಮತ್ತಷ್ಟು ಸಾಲವನ್ನು ಪಡೆಯದಿದ್ದರೆ ಜೂನ್‌ 1ಕ್ಕೆ ಭಾರಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ‌ಜೂನ್‌ 5ರ ಬಳಿಕ ಸಾಲ ತೀರಿಸಲು ಆಗದೆ ಡಿಫಾಲ್ಟ್‌ ಆಗಬಹುದು. (ಸುಸ್ತಿ ಸಾಲಗಾರ) ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಕೊಡಲು, ಮಿಲಿಟರಿ ವೆಚ್ಚ ಭರಿಸಲು, ಸಬ್ಸಿಡಿ ವೆಚ್ಚ ನೀಡಲು, ಈಗಾಗಲೇ ಪಡೆದಿರುವ ಸಾಲದ ಬಡ್ಡಿ ದರ ಪಾವತಿಸಲು ಸಾಧ್ಯವಾಗದು. ಆಗ ಅಮೆರಿಕದ ಕ್ರೆಡಿಟ್‌ ರೇಟಿಂಗ್‌ ಇಳಿಯಲಿದೆ. ಇದರ ಪರಿಣಾ ವಿಶ್ವವ್ಯಾಪಿಯಾಗುವ ಆತಂಕ ಇದೆ. ಈ ಹಿಂದೆಯೂ ಅಮೆರಿಕ ಇಂಥ ಬಿಕ್ಕಟ್ಟಿಗೆ ಸಿಲುಕಿತ್ತು. ಆಗ ಸಾಲದ ಮಿತಿಯನ್ನು ವಿಸ್ತರಿಸಲಾಗಿತ್ತು. ಈಗ ಮತ್ತೆ ಅಂಥದ್ದೇ ಸ್ಥಿತಿ ಎದುರಾಗಿದೆ.

ಸಾಲದ ಬೆಟ್ಟ ಏರುತ್ತಲೇ ಇದ್ದರೆ ಅದೂ ಸಮಸ್ಯೆಯೇ. ಹೆಚ್ಚು ಹಣದುಬ್ಬರ, ಹೆಚ್ಚು ತೆರಿಗೆಗೆ ಅಮೆರಿಕ ಸಾಕ್ಷಿಯಾಗಬಹುದು. ಇದರ ಪರಿಣಾಮ ಜಿಡಿಪಿ ಕುಸಿದು ಆರ್ಥಿಕ ಹಿಂಜರಿತ ಸಂಭವಿಸಿದರೆ ಲಕ್ಷಾಂತರ ಉದ್ಯೋಗಗಳು ನಷ್ಟವಾಗಲಿದೆ. ಅಮೆರಿಕದ ಆದಾಯದ 7%ನಷ್ಟು ಈಗಾಗಲೇ ಸಾಲದ ಬಡ್ಡಿ ತೀರಿಸಲು ಬಳಕೆಯಾಗುತ್ತದೆ. ಅಂದರೆ ಅಮೆರಿಕದ ರಕ್ಷಣಾ ಬಜೆಟ್‌ಗೆ ಸಮವಾಗುವಷ್ಟು ಮೊತ್ತ. ಹೀಗಾಗಿ ಪ್ರತಿಪಕ್ಷಗಳ ಬೆಂಬಲ ಪಡೆದು ಸರ್ಕಾರದ ಸಾಲದ ಲಿಮಿಟ್‌ ಅನ್ನು ಹೆಚ್ಚಿಸಲು ಅಧ್ಯಕ್ಷ ಜೋ ಬೈಡೆನ್‌ ಕಸರತ್ತು ನಡೆಸಿದ್ದಾರೆ. ಆದರೆ ಪ್ರತಿಪಕ್ಷಗಳು ವೆಚ್ಚ ನಿಯಂತ್ರಣಕ್ಕೆ ಒತ್ತಾಯಿಸುತ್ತಿವೆ. ಆದರೆ ಯಾವುದೇ ಷರತ್ತಿಲ್ಲದೆ ಸಾಲದ ಮಿತಿ ಹೆಚ್ಚಿಸಲು ಬೈಡೆನ್‌ ಯತ್ನಿಸುತ್ತಿದ್ದಾರೆ.

ಅಮೆರಿಕದ ಸಾಲದ ಹೊರೆ

1930 : 16 ಶತಕೋಟಿ ಡಾಲರ್‌

1990: 3.2 ಟ್ರಿಲಿಯನ್‌ ಡಾಲರ್‌

2010: 5.6 ಟ್ರಿಲಿಯನ್‌ ಡಾಲರ್‌

2020 :‌ 27.7 ಟ್ರಿಲೊಯನ್‌ ಡಾಲರ್

2023: 31.8 ಟ್ರಿಲಿಯನ್‌ ಡಾಲರ್

ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ?

ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಬಗೆಹರಿಯದಿದ್ದರೆ ಭಾರತದ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಅಮೆರಿಕದಲ್ಲಿ ಬಾಂಡ್‌ಗಳ ಬಡ್ಡಿ ದರ ಹೆಚ್ಚಿದರೆ ಹೂಡಿಕೆದಾರರು ಡಾಲರ್‌ನಲ್ಲಿ ಹೂಡಿಕೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಆಗ ಷೇರು ಮಾರುಕಟ್ಟೆಯಿಂದ ಹೂಡಿಕೆಯ ಹೊರ ಹರಿವು ಹೆಚ್ಚಬಹುದು.

ಸಾಲದ ಮಿತಿ ಹೆಚ್ಚಿಸಲು ಕೊನೆಗೂ ಒಪ್ಪಂದ:

ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡೆನ್‌ ಹಾಗೂ ರಿಪಬ್ಲಿಕನ್‌ ನಾಯಕ ಕೆವಿನ್‌ ಮೆಕಾರ್ತಿ ಕಳೆದ ಶನಿವಾರ ಸರ್ಕಾರದ ಸಾಲದ ಮಿತಿ ಹೆಚ್ಚಿಸಲು ಒಪ್ಪಂದ ಅಂತಿಮವಾಗಿದೆ ಎಂದು ಘೋಷಿಸಿದ್ದಾರೆ. ಮುಂದಿನ 2 ವರ್ಷಗಳಿಗೆ ಇದು ಅನ್ವಯವಾಗಲಿದೆ. ಮೇ 31ಕ್ಕೆ ಈ ಬಗ್ಗೆ ಅಮೆರಿಕದ ಸಂಸತ್ತಿನಲ್ಲಿ ಮತದಾನ ನಡೆಯಲಿದೆ. ಅಂದಹಾಗೆ ಅಮೆರಿಕ ಈ ರೀತಿ ಸಾಲದ ಮಿತಿಯನ್ನು ಹೆಚ್ಚಿಸುತ್ತಾ ಹೋಗುವುದು ಇದು ಹೊಸತಲ್ಲ. ಈ ಹಿಂದೆ 2013ರಲ್ಲಿಯೂ ವಿಸ್ತರಿಸಿತ್ತು. ಇತ್ತೀಚೆಗೆ ಅಂದರೆ 2021ರ ಡಿಸೆಂಬರ್‌ನಲ್ಲೂ ವಿಸ್ತರಿಸಲಾಗಿತ್ತು.

ಇದನ್ನೂ ಓದಿ :Good News | ಇಳಿಯಲಿದೆ ಚಿನ್ನದ ದರ! ಡಾಲರ್‌, ಅಮೆರಿಕದ ಎಕಾನಮಿ, ತೈಲ ದರ ನಿರ್ಣಾಯಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

ಚುನಾವಣೆ ಫಲಿತಾಂಶದ ಬಳಿಕ ಅಭ್ಯರ್ಥಿಗೆ ಇವಿಎಂ ಪರಿಶೀಲನೆ ಅವಕಾಶ; ಏನಿದು ಸುಪ್ರೀಂ ಆದೇಶ?

ದೇಶದಲ್ಲಿ ಬ್ಯಾಲಟ್‌ ಪೇಪರ್‌ ಮತದಾನ ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಮಾಡಬೇಕು ಎಂಬ ಅರ್ಜಿಯನ್ನೂ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಆದರೆ, ಚುನಾವಣೆ ಫಲಿತಾಂಶದ ಬಳಿಕ ಅಭ್ಯರ್ಥಿಗೆ ಗೊಂದಲ, ಅನುಮಾನ ಇದ್ದರೆ, ಆತನು ಮತಯಂತ್ರಗಳನ್ನು ಪರಿಶೀಲನೆ ಮಾಡಿಸುವ ಅವಕಾಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದು ಮಹತ್ವದ ಆದೇಶ ಎನಿಸಿದೆ.

VISTARANEWS.COM


on

VVPAT Verification
Koo

ನವದೆಹಲಿ: ಚುನಾವಣೆ ಮತಯಂತ್ರಗಳ (EVM) ಬದಲು ಬ್ಯಾಲಟ್‌ ಪೇಪರ್‌ ಮತದಾನ ವ್ಯವಸ್ಥೆ ಜಾರಿಯಾಗಬೇಕು, ಇವಿಎಂ ಹ್ಯಾಕ್‌ ಮಾಡಲಾಗುತ್ತಿದೆ, ಇವಿಎಂ-ವಿವಿಪ್ಯಾಟ್‌ ತಾಳೆಯಾಗಬೇಕು ಎಂದು ವಾದಿಸುತ್ತಿದ್ದವರಿಗೆ ಸುಪ್ರೀಂ ಕೋರ್ಟ್‌ ತೀರ್ಪು ಕಹಿಯಾಗಿದೆ. ಬ್ಯಾಲಟ್‌ ಪೇಪರ್‌ ಮತದಾನ ವ್ಯವಸ್ಥೆ ಜಾರಿಗೆ ಬರಬೇಕು, ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ತಾಳೆ (EVM VVPAT Verification) ಹಾಕಬೇಕು ಎಂಬುದಾಗಿ ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ (Supreme Court) ಶುಕ್ರವಾರ (ಏಪ್ರಿಲ್‌ 26) ತಿರಸ್ಕರಿಸಿದೆ. ಇದರ ಜತೆಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶವೊಂದನ್ನು ನೀಡಿದೆ. ಚುನಾವಣೆ ಫಲಿತಾಂಶದ ಬಳಿಕ ಗೊಂದಲ ಇದ್ದರೆ ಆ ಅಭ್ಯರ್ಥಿಗಳು ಮತಯಂತ್ರ ಪರಿಶೀಲನೆಯ ಸೌಲಭ್ಯ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಏನಿದು ಹೊಸ ತಂತ್ರಜ್ಞಾನ?

“ದೇಶದಲ್ಲಿ ಚುನಾವಣೆ ವೇಳೆ ಪ್ರತಿಯೊಂದು ಮತಯಂತ್ರಗಳಿಗೂ ಮೈಕ್ರೋ ಕಂಟ್ರೋಲರ್‌ ಪ್ರೋಗ್ರಾಮ್‌ಗಳನ್ನು ಅಳವಡಿಸಬೇಕು. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮೈಕ್ರೋಕಂಟ್ರೋಲರ್‌ ಪ್ರೋಗ್ರಾಮ್‌ ಸೌಲಭ್ಯ ನೀಡಬೇಕು. ಅಂದರೆ, ಚುನಾವಣೆ ಫಲಿತಾಂಶದ ಬಳಿಕ ಯಾವುದೇ ಗೊಂದಲ ಇದ್ದರೆ, ಆ ಕ್ಷೇತ್ರದ ವ್ಯಾಪ್ತಿಯ ಚುನಾವಣಾ ಮತಯಂತ್ರಗಳನ್ನು ಎಂಜಿಯನಿಯರ್‌ಗಳ ತಂಡವು ಪರಿಶೀಲನೆ ಮಾಡಬೇಕು. ಚುನಾವಣೆ ಫಲಿತಾಂಶ ಪ್ರಕಟವಾದ ಏಳು ದಿನಗಳ ಒಳಗೆ ಈ ಕುರಿತು ಅಭ್ಯರ್ಥಿಯು ಮನವಿ ಮಾಡಿದರೆ ಮಾತ್ರ ಮತಯಂತ್ರಗಳ ಪರಿಶೀಲನೆ ಮಾಡಬಹುದು” ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಇದು ಮತಯಂತ್ರಗಳ ದಕ್ಷತೆ ಪ್ರಶ್ನಿಸುವವರಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗಿದೆ. ಯಾವುದೇ ಗೊಂದಲ, ಅನುಮಾನ ಇದ್ದರೆ ಅಭ್ಯರ್ಥಿಯು ಇನ್ನುಮುಂದೆ ತಜ್ಞರ ನೆರವು ಪಡೆಯಬಹುದಾಗಿದೆ. ಇದಲ್ಲದೆ, ಸಿಂಬಲ್‌ ಲೋಡಿಂಗ್‌ ಪ್ರಕ್ರಿಯೆ ಮುಗಿದ ಬಳಿಕ ಸಿಂಬಲ್‌ ಲೋಡಿಂಗ್‌ ಯುನಿಟ್‌ಗಳನ್ನು (SLU) ಸೀಲ್‌ ಮಾಡಿ, 45 ದಿನ ಸಂಗ್ರಹಿಸಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಮತ್ತೊಂದು ಆದೇಶವಾಗಿದೆ. ಇದರಿಂದ ಇವಿಎಂ ಡೇಟಾ ಚುನಾವಣೆ ಮುಗಿದ 45 ದಿನಗಳವರೆಗೆ ಸಂಗ್ರಹಿಸಿಡಲು ಸಾಧ್ಯವಾಗಲಿದೆ.

ಬ್ಯಾಲಟ್‌ ಪೇಪರ್‌ ಬೇಕಾಗಿಲ್ಲ

ಅರ್ಜಿದಾರರ ವಾದ-ಪ್ರತಿವಾದವನ್ನು ಆಲಿಸಿದ್ದ, ಚುನಾವಣೆ ಆಯೋಗದ ಮಾಹಿತಿಯನ್ನೂ ಪಡೆದಿದ್ದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತ ಅವರು, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದರು. “ನಾವು ತಾಂತ್ರಿಕ ವಿಭಾಗದ ಎಲ್ಲ ಮಾಹಿತಿಯನ್ನು ಗಮನಿಸಿದ್ದೇವೆ. ಹಾಗಾಗಿ, ಇವಿಎಂ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಮಾಡುವ ಅವಶ್ಯಕತೆ ಇಲ್ಲ. ದೇಶದಲ್ಲಿ ಬ್ಯಾಲಟ್‌ ಪೇಪರ್‌ ವ್ಯವಸ್ಥೆಯೂ ಬೇಕಾಗಿಲ್ಲ ಹಾಗಾಗಿ, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ. ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಏನಿದು ಪ್ರಕರಣ?

ಚುನಾವಣಾ ಮತಯಂತ್ರಗಳಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಯಂತ್ರಗಳ ಜತೆ ತಾಳೆ ಹಾಕಬೇಕು ಎಂಬುದಾಗಿ ನಿರ್ದೇಶನ ನೀಡುವಂತೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಈಗ ಪ್ರತಿ ಕ್ಷೇತ್ರದಲ್ಲಿ ಐದು ಮತಯಂತ್ರಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ ಮಾಡಲಾಗುತ್ತದೆ. ಶೇ.100ರಷ್ಟು ಇವಿಎಂಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ ಮಾಡಲು ಆದೇಶ ನೀಡಬೇಕು ಎಂಬುದು ಅರ್ಜಿದಾರರ ವಾದವಾಗಿತ್ತು.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ತಾಳೆ ಹೇಗೆ ಮಾಡಲಾಗುತ್ತದೆ?

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಚುನಾವಣೆ ಆಯೋಗದ ವಾದ ಏನು?

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ. ಇವಿಎಂ ಸ್ವಯಂ ರೋಗನಿರ್ಣಯಕ್ಕೆ ಸಮರ್ಥವಾಗಿದೆ ಮತ್ತು ಸ್ವತಂತ್ರವಾಗಿದೆ.

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ಓದಿ: VVPAT Verification: ಬ್ಯಾಲಟ್‌ ಪೇಪರ್‌ ಬೇಕಿಲ್ಲ, ವಿವಿಪ್ಯಾಟ್‌ 100% ತಾಳೆಯೂ ಬೇಡ ಎಂದ ಸುಪ್ರೀಂ; ಇವಿಎಂ ವಿರೋಧಿಗಳಿಗೆ ಹಿನ್ನಡೆ

Continue Reading

ಪ್ರಮುಖ ಸುದ್ದಿ

ವಿಸ್ತಾರ Explainer: Wealth redistribution: ನಿಮ್ಮ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾ? ಸುಪ್ರೀಂ ಕೋರ್ಟ್ ಮುಂದಿದೆ ಕೇಸ್‌

wealth redistribution: ಮೂರು ದಶಕಗಳಷ್ಟು ಹಳೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ (Supreme Court) ಪೀಠ ಮರಳಿ ಕೈಗೆತ್ತಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು (nine judges bench) ಇಂದಿನಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ.

VISTARANEWS.COM


on

supreme court wealth redistribution
Koo

ಹೊಸದಿಲ್ಲಿ: “ಸಂಪತ್ತು ಮರುಹಂಚಿಕೆ” (Wealth redistribution) ಕುರಿತ ವಿವಾದ (controversy) ರಾಷ್ಟ್ರ ರಾಜಕೀಯದಲ್ಲಿ ಜೋರಾಗುತ್ತಿರುವಂತೆ, ವ್ಯಕ್ತಿಯ ಖಾಸಗಿ ಒಡೆತನದ (Private property) ಆಸ್ತಿಯನ್ನು “ಸಮುದಾಯದ ವಸ್ತು ಸಂಪನ್ಮೂಲ” (community property) ಎಂದು ಪರಿಗಣಿಸಬಹುದೇ ಎಂದು ನಿರ್ಧರಿಸಲು ಮೂರು ದಶಕಗಳಷ್ಟು ಹಳೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ (Supreme Court) ಪೀಠ ಮರಳಿ ಕೈಗೆತ್ತಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು (nine judges bench) ಇಂದಿನಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ವಿವಾದವೇನು?

ಬಿರುಸಿನ ಲೋಕಸಭೆ ಚುನಾವಣೆ (lok Sabha Election 2024) ಪ್ರಚಾರ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದ್ದ ಒಂದು ಉಲ್ಲೇಖವನ್ನು ಎತ್ತಿ ಆಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi), “ಸಂಪತ್ತು ಪುನರ್ ವಿತರಣಾ ಯೋಜನೆಯ ಭಾಗವಾಗಿ ಮನೆ, ಚಿನ್ನ, ವಾಹನ ಸೇರಿದಂತೆ ಖಾಸಗಿ ಆಸ್ತಿಯನ್ನು ಕಿತ್ತುಕೊಳ್ಳುವುದಾಗಿ ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ” ಎಂದಿದ್ದರು. ಇದು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.

ಅಂತಹ ಯಾವುದೇ ಯೋಜನೆಯನ್ನು ಕಾಂಗ್ರೆಸ್ ನಿರಾಕರಿಸಿದೆ. ಪ್ರಧಾನಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಕಾಂಗ್ರೆಸ್ ಆಯ್ಕೆಯಾದರೆ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಿದೆ ಎಂದು ಅದರ ಪ್ರಣಾಳಿಕೆ ಹೇಳುತ್ತದೆ. “ಜಾತಿಗಳು ಮತ್ತು ಉಪ-ಜಾತಿಗಳು ಮತ್ತು ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಎಣಿಸಲು ಕಾಂಗ್ರೆಸ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸುತ್ತದೆ. ದತ್ತಾಂಶದ ಆಧಾರದ ಮೇಲೆ, ನಾವು ಸಕಾರಾತ್ಮಕ ಕ್ರಮಕ್ಕಾಗಿ ಕಾರ್ಯಸೂಚಿಯನ್ನು ಬಲಪಡಿಸುತ್ತೇವೆ.” ಖಾಸಗಿ ಆಸ್ತಿ ಮರುಹಂಚಿಕೆ ಯೋಜನೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿಲ್ಲ.

Narendra Modi

ಕೋರ್ಟ್‌ ಮುಂದಿರುವ ಪ್ರಕರಣ ಮತ್ತು ಅದರ ಇತಿಹಾಸ

ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠದ ಮುಂದಿರುವ ಪ್ರಕರಣವು 1986ರ ಹಿಂದಿನದು. ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಕಾಯಿದೆ- 1976 (MHADA) ಇದನ್ನು ತಿದ್ದುಪಡಿ ಮಾಡಿತ್ತು. 70 ಪ್ರತಿಶತ ನಿವಾಸಿಗಳ ಒಪ್ಪಿಗೆಯಿದ್ದರೆ ಮರುಸ್ಥಾಪನೆ ಉದ್ದೇಶಗಳಿಗಾಗಿ ಕೆಲವು “ಸೆಸ್ಡ್ ಆಸ್ತಿಗಳನ್ನು” ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಅಧಿಕಾರವನ್ನು ಇದು ಮುಂಬೈ ಕಟ್ಟಡ ದುರಸ್ತಿ ಮತ್ತು ಪುನರ್ನಿರ್ಮಾಣ ಮಂಡಳಿಗೆ ಹೊಂದಲು ಅವಕಾಶ ಮಾಡಿಕೊಟ್ಟಿತು. ತಿದ್ದುಪಡಿಯು ಸಂವಿಧಾನದ 39(ಬಿ) ವಿಧಿಯನ್ನು ಉಲ್ಲೇಖಿಸಿದೆ. ಅದು “ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸಲಾಗುವುದು” ಎಂದು ಹೇಳುತ್ತದೆ.

ಮುಂಬೈನಲ್ಲಿರುವ 20,000ಕ್ಕೂ ಹೆಚ್ಚು ಭೂಮಾಲೀಕರನ್ನು ಪ್ರತಿನಿಧಿಸುವ ಆಸ್ತಿ ಮಾಲೀಕರ ಸಂಘ (POA) ಈ ತಿದ್ದುಪಡಿಯನ್ನು ಪ್ರಶ್ನಿಸಿದೆ ಮತ್ತು ವಸತಿ ಸಂಕೀರ್ಣಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮಂಡಳಿಗೆ ಇದು ಅನಿಯಂತ್ರಿತ ಅಧಿಕಾರವನ್ನು ನೀಡಿದೆ ಎಂದು ವಾದಿಸಿದೆ. ಡಿಸೆಂಬರ್ 1991ರಲ್ಲಿ, ಬಾಂಬೆ ಉಚ್ಚ ನ್ಯಾಯಾಲಯವು, “ಸಾಮಾನ್ಯ ಜನರಿಗೆ ಆಶ್ರಯ ನೀಡುವುದು ಸರ್ಕಾರವು ಕರ್ತವ್ಯವಾಗಿದೆ” ಎಂಬ ಕಾರಣಕ್ಕಾಗಿ ಅರ್ಜಿಗಳನ್ನು ರದ್ದುಗೊಳಿಸಿತು.

ಪಿಒಎ ಮತ್ತು ಇತರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅವರ ಅರ್ಜಿಯನ್ನು ಇನ್ನೆರಡು ಪ್ರಕರಣಗಳಿಗೆ ಜೋಡಿಸಲಾಗಿದೆ. ಅವು ಶಿವರಾಮ ರಾಮಯ್ಯ ಯೆರಾಳ ವರ್ಸಸ್‌ ಮಹಾರಾಷ್ಟ್ರ ಸರ್ಕಾರ ಪ್ರಕರಣ ಹಾಗೂ ಬಾಂಬೆಯ ಪ್ರಮೀಳಾ ಚಿಂತಾಮಣಿ ಮೋಹನ್‌ದಾಸ್ ವರ್ಸಸ್‌ ಮಹಾರಾಷ್ಟ್ರ ರಾಜ್ಯ ಸರ್ಕಾರ. ಇವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅತ್ಯಂತ ಹಳೆಯ ಪ್ರಕರಣಗಳಾಗಿವೆ. ಸುಪ್ರೀಂ ಕೋರ್ಟ್ ಪೀಠವು ಇವನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಅದು ಇವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು. 2002ರಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಎಸ್‌ಪಿ ಭರೂಚಾ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು.

2019ರಲ್ಲಿ, ಮತ್ತೊಂದು ಪ್ರಮುಖ ಬೆಳವಣಿಗೆ ನಡೆಯಿತು. ಮಹಾರಾಷ್ಟ್ರ ಸರ್ಕಾರ ಮತ್ತೆ ಕಾನೂನನ್ನು ತಿದ್ದುಪಡಿ ಮಾಡಿತು. ಹೊಸ ತಿದ್ದುಪಡಿಯ ಪ್ರಕಾರ, ಗಡುವಿನೊಳಗೆ ಆಸ್ತಿ ಮರುಸ್ಥಾಪಿಸಲು ಭೂಮಾಲೀಕರು ವಿಫಲವಾದರೆ, ರಾಜ್ಯ ಸರ್ಕಾರವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದಿತ್ತು. ಇದು ಕಲ್ಯಾಣ ಶಾಸನ ಎಂದು ರಾಜ್ಯ ಸರ್ಕಾರ ಒತ್ತಿಹೇಳಿತು. ಆದರೆ ಆಸ್ತಿಯನ್ನು ಕಡಿಮೆ ಬೆಲೆಗೆ ಕಿತ್ತುಕೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸುವ ಯೋಜನೆ ಇದು ಎಂದು ಭೂಮಾಲೀಕರು ಆರೋಪಿಸಿದರು.

ಕಳೆದ ವರ್ಷ, ವಿಚಾರಣೆಗೆ ಬಾಕಿ ಇರುವ ಒಂಬತ್ತು ನ್ಯಾಯಾಧೀಶರ ಪೀಠದ ಪ್ರಕರಣಗಳನ್ನು ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಈ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ನಿನ್ನೆ ನಡೆಸಿತು. ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಬಿವಿ ನಾಗರತ್ನ, ನ್ಯಾಯಮೂರ್ತಿ ಸುಧಾಂಶು ಧುಲಿಯಾ, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ, ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರು ಪೀಠದಲ್ಲಿರುವ ಇತರ ಎಂಟು ನ್ಯಾಯಾಧೀಶರು. ಒಟ್ಟು 16 ಅರ್ಜಿಗಳು ನ್ಯಾಯಾಲಯದ ಮುಂದಿವೆ.

ನಿರ್ಣಾಯಕ ಪ್ರಶ್ನೆ

ನ್ಯಾಯಾಲಯದ ಮುಂದಿರುವ ಪ್ರಮುಖ ಸಮಸ್ಯೆಯು ಸಂವಿಧಾನದಲ್ಲಿನ ಎರಡು ನಿಬಂಧನೆಗಳಿಗೆ ಸಂಬಂಧಿಸಿದೆ- ಆರ್ಟಿಕಲ್ 31 ಸಿ ಮತ್ತು ಆರ್ಟಿಕಲ್ 39 (ಬಿ). ಇವುಗಳು ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್‌ಗೆ ಸಂಬಂಧಿಸಿವೆ. ಈ ತತ್ವಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವುದಿಲ್ಲ. ಆದರೆ ದೇಶದ ಆಡಳಿತಕ್ಕೆ ಇವು ಮೂಲಭೂತವಾಗಿವೆ. ಕಾನೂನುಗಳನ್ನು ರಚಿಸುವಾಗ ಈ ತತ್ವಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ.

ಆರ್ಟಿಕಲ್ 39(ಬಿ) ಹೇಳುವಂತೆ, ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸಬಹುದು. ಆರ್ಟಿಕಲ್ 31(ಸಿ) ಕೆಲವು ನಿರ್ದೇಶನ ತತ್ವಗಳನ್ನು ಜಾರಿಗೆ ತರುವ ಕಾನೂನುಗಳನ್ನು ರಕ್ಷಿಸುತ್ತದೆ. ಇದರ ಅರ್ಥವೇನೆಂದರೆ, ನಿರ್ದೇಶನದ ತತ್ವಗಳ ಅಡಿಯಲ್ಲಿ ರಾಜ್ಯವು ಜಾರಿಗೊಳಿಸಿದ ಯಾವುದೇ ಕಾನೂನನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳೊಂದಿಗೆ ವ್ಯವಹರಿಸುವ ಸಂವಿಧಾನದ ಆರ್ಟಿಕಲ್ 14 ಮತ್ತು ಆರ್ಟಿಕಲ್ 19ನ್ನು ಮುಂದಿಟ್ಟುಕೊಂಡು ಕೂಡ ಪ್ರತಿಭಟಿಸಲು ಸಾಧ್ಯವಿಲ್ಲ.

supreme court CJI DY chandrachud

ನಿರ್ದೇಶನದ ತತ್ವಗಳಲ್ಲಿ ರಾಜ್ಯವು “ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ಶ್ರಮಿಸಬೇಕು ಮತ್ತು ವ್ಯಕ್ತಿಗಳ ನಡುವೆ ಮಾತ್ರವಲ್ಲದೆ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಅಥವಾ ವಿವಿಧ ಕೆಲಸಗಳಲ್ಲಿ ತೊಡಗಿರುವ ಜನರ ಗುಂಪುಗಳ ನಡುವೆಯೂ ಸಹ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕು” ಎಂದು ಹೇಳುತ್ತದೆ.

ಹಾಗಾಗಿ ಖಾಸಗಿ ಆಸ್ತಿಯನ್ನು ʼಸಮುದಾಯದ ವಸ್ತು ಸಂಪನ್ಮೂಲಗಳು’ ಎಂದು ಪರಿಗಣಿಸಬಹುದೇ ಮತ್ತು ಸಾಮಾನ್ಯ ಒಳಿತಿಗಾಗಿ ರಾಜ್ಯವು ಸ್ವಾಧೀನಪಡಿಸಿಕೊಳ್ಳಬಹುದೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

ಪ್ರಮುಖ ಅವಲೋಕನಗಳು

ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು ಕೆಲವು ಪ್ರಮುಖ ಅವಲೋಕನಗಳನ್ನು ಮಾಡಿದರು. “ನೀವು ಆಸ್ತಿಯ ಬಂಡವಾಳಶಾಹಿ ಪರಿಕಲ್ಪನೆಯನ್ನು ನೋಡಿದರೆ, ಅದು ಆಸ್ತಿಗೆ ಪ್ರತ್ಯೇಕತೆಯ ಭಾವನೆಯನ್ನು, ಇದು ಪ್ರತ್ಯೇಕವಾಗಿ ನನ್ನದು ಎಂಬ ಭಾವನೆಯನ್ನು ಆರೋಪಿಸುತ್ತದೆ. ಆಸ್ತಿಯ ಸಮಾಜವಾದಿ ಪರಿಕಲ್ಪನೆಯು ಕನ್ನಡಿ ಪ್ರತಿಬಿಂಬವಾಗಿದೆ. ಇದು ಆಸ್ತಿಗೆ ಸಾಮಾನ್ಯತೆಯ ಕಲ್ಪನೆಯನ್ನು ಸೂಚಿಸುತ್ತದೆ. ಯಾವುದೂ ವ್ಯಕ್ತಿಗೆ ಪ್ರತ್ಯೇಕವಾಗಿಲ್ಲ. ಎಲ್ಲಾ ಆಸ್ತಿಯೂ ಸಮುದಾಯಕ್ಕೆ ಸಾಮಾನ್ಯವಾಗಿದೆ. ಇದು ತೀವ್ರ ಸಮಾಜವಾದಿ ದೃಷ್ಟಿಕೋನ” ಎಂದು ಹೇಳಿದರು.

“ಭಾರತದ ರಾಜ್ಯ ನೀತಿಯ ನಿರ್ದೇಶನ ತತ್ವಗಳು ಗಾಂಧಿ ತತ್ವ ಮತ್ತು ಸಿದ್ಧಾಂತಕ್ಕೆ ಅನುಗುಣವಾಗಿವೆ. ಆ ತತ್ವಗಳೇನು? ನಮ್ಮ ನೀತಿಯು ನಂಬಿಕೆಯ ಆಸ್ತಿಯನ್ನು ಪರಿಗಣಿಸುತ್ತದೆ. ಖಾಸಗಿ ಆಸ್ತಿ ಇಲ್ಲ ಎಂಬುದಕ್ಕಾಗಿ ನಾವು ಸಮಾಜವಾದಿ ಮಾದರಿಯನ್ನು ಅಳವಡಿಸಿಕೊಳ್ಳಲು ಹೋಗಿಲ್ಲ. ಆದರೆ ಖಾಸಗಿ ಆಸ್ತಿ ಇದೆ” ಎಂದವರು ಗಮನಿಸಿದರು.

“ನಮ್ಮ ಆಸ್ತಿಯ ಪರಿಕಲ್ಪನೆಯು ತೀವ್ರ ಬಂಡವಾಳಶಾಹಿ ದೃಷ್ಟಿಕೋನದಿಂದ ಅಥವಾ ತೀವ್ರ ಸಮಾಜವಾದಿ ದೃಷ್ಟಿಕೋನದಿಂದ ಅತ್ಯಂತ ವಿಭಿನ್ನವಾದ, ಅತ್ಯಂತ ಸೂಕ್ಷ್ಮವಾದ ಬದಲಾವಣೆ ಹೊಂದಿದೆ. ನಾವು ಆಸ್ತಿಯನ್ನು ನಂಬುವ ವಿಷಯವೆಂದು ಪರಿಗಣಿಸುತ್ತೇವೆ. ನಾವು ಕುಟುಂಬದಲ್ಲಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ನೀಡುವ ನಂಬಿಕೆಯನ್ನು ಇರಿಸಿದ್ದೇವೆ. ಆದರೆ ವಿಶಾಲವಾಗಿ ನಾವು ಆಸ್ತಿಯನ್ನು ವಿಶಾಲ ಸಮುದಾಯದ ವಿಶ್ವಾಸದಲ್ಲಿರಿಸುತ್ತೇವೆ. ಅದು ಸುಸ್ಥಿರ ಅಭಿವೃದ್ಧಿಯ ಸಂಪೂರ್ಣ ಪರಿಕಲ್ಪನೆಯಾಗಿದೆ. ಅದನ್ನೇ ನಾವು ಇಂಟರ್‌ಜೆನೆರೇಶನಲ್ ಇಕ್ವಿಟಿ ಎಂದು ಕರೆಯುತ್ತೇವೆ,” ಎಂದು ಅವರು ಹೇಳಿದರು.

“ಸಮುದಾಯದ ವಸ್ತು ಸಂಪನ್ಮೂಲಗಳು ಎಂದರೆ ಸಾರ್ವಜನಿಕ ಸಂಪನ್ಮೂಲಗಳು ಮತ್ತು ನಾವು ವ್ಯಕ್ತಿಯ ಖಾಸಗಿ ಆಸ್ತಿಯಲ್ಲಿ ಅದಿಲ್ಲ ಎಂದು ಸೂಚಿಸುವುದು ಸ್ವಲ್ಪ ವಿಪರೀತ. ಆ ದೃಷ್ಟಿಕೋನವನ್ನು ತೆಗೆದುಕೊಳ್ಳುವುದು ಏಕೆ ಅಪಾಯಕಾರಿ ಎಂದು ನಾನು ಹೇಳುತ್ತೇನೆ. ಗಣಿಗಳು ಮತ್ತು ಖಾಸಗಿ ಅರಣ್ಯಗಳಂತಹ ಸರಳ ವಿಷಯಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, 39 (ಬಿ) ಅಡಿಯಲ್ಲಿ ಖಾಸಗಿ ಅರಣ್ಯಗಳಿಗೆ ಸರ್ಕಾರಿ ನೀತಿ ಅನ್ವಯಿಸುವುದಿಲ್ಲ ಎಂದು ನಾವು ಹೇಳುತ್ತೇವೆ. ಆದ್ದರಿಂದ ಪ್ರತಿಪಾದನೆಯಾಗಿ ಅತ್ಯಂತ ಅಪಾಯಕಾರಿ,” ಅವರು ಹೇಳಿದರು.

ಸಂವಿಧಾನ ರಚನೆಯಾದ 1950ರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, “ಸಂವಿಧಾನವು ಸಾಮಾಜಿಕ ಪರಿವರ್ತನೆಯನ್ನು ತರಲು ಉದ್ದೇಶಿಸಲಾಗಿತ್ತು. ಆಸ್ತಿಯನ್ನು ಖಾಸಗಿಯಾಗಿ ಹೊಂದಿರುವ ನಂತರ 39 (ಬಿ) ವಿಧಿಗೆ ಯಾವುದೇ ಅನ್ವಯವಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ.” ಎಂದರು.

ಆದಾಗ್ಯೂ, ಮಹಾರಾಷ್ಟ್ರದ ಕಾನೂನು ಶಿಥಿಲಗೊಂಡ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಿದೆಯೇ ಎಂಬುದು ವಿಭಿನ್ನ ವಿಷಯವಾಗಿದೆ ಮತ್ತು ಅದನ್ನು ಸ್ವತಂತ್ರವಾಗಿ ನಿರ್ಧರಿಸಲಾಗುತ್ತದೆ ಎಂದು ಅದು ಒತ್ತಿಹೇಳಿತು. ‘ಜಮೀಂದಾರಿ’ ಪದ್ಧತಿಯ ರದ್ದತಿಯನ್ನೂ ಮುಖ್ಯ ನ್ಯಾಯಮೂರ್ತಿ ಉಲ್ಲೇಖಿಸಿದರು. “ಸಂವಿಧಾನವು ಸಾಮಾಜಿಕ ಪರಿವರ್ತನೆಯನ್ನು ತರಲು ಉದ್ದೇಶಿಸಿರುವುದರಿಂದ ಸಂವಿಧಾನದಲ್ಲಿ 39 (ಬಿ) ವಿಧವನ್ನು ನಿರ್ದಿಷ್ಟ ರೀತಿಯಲ್ಲಿ ರಚಿಸಲಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ನಾವು ಖಾಸಗಿ ಆಸ್ತಿಯನ್ನು ಖಾಸಗಿ ಆಸ್ತಿ ಎಂದು ಹೇಳಿದಾಗ ಆರ್ಟಿಕಲ್ 39 (ಬಿ) ಯಾವುದೇ ಅನ್ವಯವನ್ನು ಹೊಂದಿರುವುದಿಲ್ಲ” ಎಂದು ಅವರು ಹೇಳಿದರು. ಇಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Continue Reading

Lok Sabha Election 2024

Lok Sabha Election: ರಾಜಕೀಯ ಕುಟುಂಬಗಳಿಂದ ರಾಜಮನೆತನದವರೆಗೆ; ಬಿಜೆಪಿಯಿಂದ 68 ಮಹಿಳೆಯರು ಕಣಕ್ಕೆ

Lok Sabha election 2024: ಹಿಂದಿನ ಸಾಲಿಗಿಂತ ಈ ಬಾರಿ ಬಿಜೆಪಿ ಹೆಚ್ಚಿನ ಮಹಿಳೆಯರನ್ನು ಲೋಕಸಭಾ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಆದರೆ ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕುಟುಂಬ ರಾಜಕಾರಣದಿಂದ ಬಂದವರು. ಇವರಲ್ಲಿ ಪ್ರಮುಖರು ಯಾರಿದ್ದಾರೆ. ಈ ಕುರಿತ ಚಿತ್ರಣ ಇಲ್ಲಿದೆ.

VISTARANEWS.COM


on

By

Lok Sabha election-2024
Koo

ನವದೆಹಲಿ: ಲೋಕಸಭಾ ಚುನಾವಣೆ-2024ರಲ್ಲಿ (Lok Sabha election 2024) ಬಿಜೆಪಿ (bjp) ಈ ಬಾರಿ ಹಿಂದೆಂದಿಗಿಂತ ಹೆಚ್ಚು ಮಹಿಳೆಯರನ್ನು ಕಣಕ್ಕೆ ಇಳಿಸಿದೆ. ಆದರೂ ಈ ಪ್ರಮಾಣ ಶೇ. 16 ಮಾತ್ರ. ಇವರಲ್ಲಿ ಅರ್ಧದಷ್ಟು ಮಂದಿ ರಾಜಕೀಯ ಕುಟುಂಬಗಳ (political families) ಹಿನ್ನೆಲೆಯಿಂದ ಬಂದವರು. ಬಿಜೆಪಿ 417 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇವರಲ್ಲಿ ಕೇವಲ 68 ಮಂದಿ ಮಹಿಳೆಯರಿದ್ದಾರೆ. ಬಿಜೆಪಿಯ ಮಹಿಳಾ ಅಭ್ಯರ್ಥಿಗಳ ಪಟ್ಟಿಯಲ್ಲಿ 40 ಮಂದಿ ಆಳವಾಗಿ ಬೇರೂರಿರುವ ರಾಜಕೀಯ ಸಂಪರ್ಕ ಹೊಂದಿರುವ ಕುಟುಂಬಗಳಿಂದ ಬಂದವರಾಗಿದ್ದಾರೆ.

ಬಿಜೆಪಿಯು 417 ಸಂಸದೀಯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ 68 ಮಂದಿ ಶೇ. 16ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಪಕ್ಷವು 2009ರಲ್ಲಿ 45, 2014ರಲ್ಲಿ 38 ಮತ್ತು 2019ರಲ್ಲಿ 55 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಇದನ್ನೂ ಓದಿ: Parliament Flashback: 1996ರ ಬಳಿಕ ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

ಕಣದಲ್ಲಿರುವ ಪ್ರಮುಖ ಮಹಿಳೆಯರು ಯಾರು?

ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ , ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಸೀತಾ ಸೊರೆನ್, ಮಾಜಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ, ಮಾಜಿ ಸಂಸದ ನಾಥೂರಾಂ ಮಿರ್ಧಾ ಅವರ ಮೊಮ್ಮಗಳು ಜ್ಯೋತಿ ಮಿರ್ಧಾ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ, ಶಾಸಕ ರವಿ ರಾಣಾ ಅವರ ಪತ್ನಿ ನವನೀತ್ ರಾಣಾ, ಮಾಜಿ ಕಲಹಂಡಿ ಸಂಸದ ಅರ್ಕಾ ಕೇಶರಿ ದೇವ್ ಅವರ ಪತ್ನಿ ಮಾಳವಿಕಾ ದೇವಿ, ತಿಪ್ರಾ ಮೋಥಾ ಪಕ್ಷದ ಸಂಸ್ಥಾಪಕ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರ ಸಹೋದರಿ ಕೃತಿ ಸಿಂಗ್ ದೆಬ್ಬರ್ಮಾ ಅವರು ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಬಿಜೆಪಿಯ ಪ್ರಮುಖ ಮಹಿಳಾ ಅಭ್ಯರ್ಥಿಗಳು.

ಕಣದಲ್ಲಿರುವ ಪ್ರಮುಖರು

ಸೀತಾ ಸೊರೆನ್ ರಾಜಕೀಯ ಕುಟುಂಬದಿಂದ ಬಂದವರಾದರೂ ಒಂದು ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದೇ ಶಕ್ತಿಯೊಂದಿಗೆ ಕಣಕ್ಕೆ ಇಳಿದಿದ್ದೇನೆ ಎಂದು ತಿಳಿಸಿದ್ದಾರೆ.

ರಾಜಮಂಡ್ರಿಯ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವೆ ಮತ್ತು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ. ಪುರಂದೇಶ್ವರಿ ಅವರು ಪ್ರಸಿದ್ಧ ನಟ ಮತ್ತು ಎನ್‌.ಟಿ. ರಾಮರಾವ್ ಅವರ ಪುತ್ರಿ.

ಮಹಾರಾಷ್ಟ್ರದಲ್ಲಿ ಆರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು ಹಾಲಿ ಸಂಸದೆ ಭಾರತಿ ಪವಾರ್ ಮತ್ತೆ ದಿಂಡೂರಿನಲ್ಲಿ ಸ್ಪರ್ಧಿಸಿದ್ದಾರೆ. ಇವರ ಮಾವ ಎಂಟು ಬಾರಿ ಶಾಸಕರಾಗಿದ್ದರು ಮತ್ತು ಮಹಾರಾಷ್ಟ್ರ ಸಚಿವರಾಗಿದ್ದರು. ಮಗ ಕೂಡ ಶಾಸಕರಾಗಿದ್ದಾರೆ.

ಬಿಜೆಪಿ ಸಂಸದೆ, ಆರು ಬಾರಿ ಶಾಸಕ ಮತ್ತು ಬುಡಕಟ್ಟು ನಾಯಕರಾಗಿದ್ದ ವಿಜಯ್ ಗವಿತ್ ಅವರ ಪುತ್ರಿ ಹೀನಾ ಗವಿತ್ ಈಗ ನಂದೂರ್ಬಾರ್‌ನಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ, ಹಿರಿಯ ನಾಯಕಿ ಪಂಕಜಾ ಮುಂಡೆ ಬೀಡಿನಿಂದ ಸ್ಪರ್ಧಿಸುತ್ತಿದ್ದಾರೆ.

ಸಂಸದೆ ರಕ್ಷಾ ಖಡ್ಸೆ ಮತ್ತೆ ರೇವರ್ ನಿಂದ ಸ್ಪರ್ಧಿಸಿದ್ದಾರೆ. ಇವರ ಮಾವ ಏಕನಾಥ್ ಖಾಡ್ಸೆ 2020ರಲ್ಲಿ ಬಿಜೆಪಿ ತೊರೆದು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಲ್ಲಿದ್ದಾರೆ.

ಜಲಗಾಂವ್‌ನಲ್ಲಿ ಎಂಎಲ್ಸಿ ಸ್ಮಿತಾ ವಾಘ್ ಅವರನ್ನು ಕಣಕ್ಕಿಳಿಸಲು ಹಾಲಿ ಸಂಸದ ಉನ್ಮೇಶ್ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅವರ ಪತಿ ಉದಯ್ ವಾಘ್ ಬಿಜೆಪಿ ಜಲಗಾಂವ್ ಜಿಲ್ಲಾಧ್ಯಕ್ಷರಾಗಿದ್ದಾರೆ. ಅಮರಾವತಿಯಿಂದ ಹಾಲಿ ಸಂಸದ ನವನೀತ್ ರಾಣಾ ಮತ್ತೆ ಸ್ಪರ್ಧಿಸಿದ್ದಾರೆ.

ಹೊಸ ಮುಖವಾಗಿರುವ ಅನಿತಾ ಅವರ ಪತಿ ಮಧ್ಯಪ್ರದೇಶದ ಅರಣ್ಯ ಸಚಿವ ಮತ್ತು ಮೂರು ಬಾರಿ ಶಾಸಕ ನಗರ್ ಸಿಂಗ್ ಚೌಹಾಣ್. ಮತ್ತೊಂದು ಹೊಸ ಮುಖ ಲತಾ ವಾಂಖೆಡೆ ಸಾಗರ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಅವರ ಪತಿ ನಂದಕಿಶೋರ್ ಅಲಿಯಾಸ್ ಗುಡ್ಡು ವಾಂಖೆಡೆ ಕೂಡ ರಾಜಕೀಯದಲ್ಲಿದ್ದಾರೆ.

ಬಿಜೆಪಿ ಸಂಸದ ಹಿಮಾದ್ರಿ ಸಿಂಗ್ – ಮಾಜಿ ಸಂಸದರಾದ ದಲ್ವಿರ್ ಸಿಂಗ್ ಮತ್ತು ರಾಜೇಶ್ ನಂದಿನಿ ಸಿಂಗ್ ಅವರ ಪುತ್ರಿ ಶಹದೋಲ್‌ನಿಂದ ಮತ್ತೊಂದು ಅವಧಿಯನ್ನು ನಿರೀಕ್ಷಿಸುತ್ತಿದ್ದಾರೆ. ಅವರ ಪತಿ ನರೇಂದ್ರ ಮರಾವಿ ಕೂಡ ಬಿಜೆಪಿ ನಾಯಕರಾಗಿದ್ದಾರೆ.

ರಾಜಮನೆತನದವರು

2019 ರಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಇದುವರೆಗೆ ಐದು ಮಹಿಳಾ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ದೇವಿ ಜಾತವ್ (ಧೋಲ್ಪುರ್ ಕರೌಲಿ), ಪ್ರಿಯಾಂಕಾ ಬಾಲನ್ (ಶ್ರೀಗಂಗಾನಗರ), ಮಂಜು ಶರ್ಮಾ (ಜೈಪುರ), ಜ್ಯೋತಿ ಮಿರ್ಧಾ (ನಾಗೌರ್) ಮತ್ತು ಮಹಿಮಾ ವಿಶ್ವರಾಜ್ ಸಿಂಗ್ (ರಾಜಸಮಂದ್). ಮಹಿಮಾ ವಿಶ್ವರಾಜ್ ಸಿಂಗ್ ಮೇವಾರ್‌ನ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.

ಮಾಳವಿಕಾ ಕೇಶರಿ ದೇವ್ ಅವರು ಕಲಹಂಡಿ ಜಿಲ್ಲೆಯ ಹಿಂದಿನ ರಾಜಮನೆತನದ ಸಂಪರ್ಕವನ್ನು ಹೊಂದಿದ್ದಾರೆ. 2019ರಲ್ಲಿ ಅಸ್ಕಾದಿಂದ ಸ್ಪರ್ಧಿಸಿ ಸೋತಿದ್ದ ಅನಿತಾ ಪ್ರಿಯದರ್ಶಿನಿ ಮತ್ತೆ ಅದೇ ಸ್ಥಾನದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ರಾಜಕೀಯ ಹಿನ್ನೆಲೆಯುಳ್ಳವರು

ಜಾರ್ಖಂಡ್ ಮೂರು ಮಹಿಳಾ ಅಭ್ಯರ್ಥಿಗಳಾದ ಸೀತಾ ಸೊರೆನ್, ಗೀತಾ ಕೊಡ ಮತ್ತು ಅನ್ನಪೂರ್ಣ ದೇವಿ ಅವರು ದುಮ್ಕಾ, ಸಿಂಗ್‌ಭೂಮ್ ಮತ್ತು ಕೊಡರ್ಮಾದಿಂದ ಸ್ಪರ್ಧಿಸಿದ್ದಾರೆ. ಈ ಮೂವರೂ ಅಭ್ಯರ್ಥಿಗಳು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ರೇಖಾ ವರ್ಮಾ (ಧಾರುಹರ) ಮತ್ತು ಮೇನಕಾ ಗಾಂಧಿ (ಸುಲ್ತಾನ್‌ಪುರ) ಕೂಡ ರಾಜಕೀಯದಲ್ಲಿ ಕುಟುಂಬ ಸದಸ್ಯರನ್ನು ಹೊಂದಿದ್ದರು. ಹಿಂದಿನವರು 2014 ರಿಂದ ಧರುಹರಾದಿಂದ ಹಾಲಿ ಸಂಸದರಾಗಿದ್ದರೆ, ನಂತರದವರು 1989ರಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.

Continue Reading

ಆಹಾರ/ಅಡುಗೆ

Food Expired Date: ಅವಧಿ ಮೀರಿದ ಆಹಾರದಿಂದ ಜೀವಕ್ಕೇ ಅಪಾಯ! ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ

Food Expired Date: ತಿನ್ನುವ ಆಹಾರ ಎಷ್ಟು ಸುರಕ್ಷಿತ ಮತ್ತು ಗುಣಮಟ್ಟದಲ್ಲಿದೆ ಎಂಬುದನ್ನು ನಾವು ತಿಳಿದುಕೊಂಡಿರಲೇಬೇಕು. ಇಲ್ಲವಾದರೆ ಆರೋಗ್ಯ ಹಾಳಾಗಬಹುದು. ಇವುಗಳನ್ನು ಪರೀಕ್ಷಿಸುವ ಹಲವು ವಿಧಾನಗಳು ಇಲ್ಲಿವೆ.

VISTARANEWS.COM


on

By

Food products
Koo

ಎರಡು ದಿನಗಳ ಹಿಂದೆ ಡೇಟ್ ಎಕ್ಸ್‌ಪೈರ್‌ (Food Expired Date) ಆಗಿದ್ದ ಚಾಕಲೇಟ್ (Chocolate) ಸೇವಿಸಿ ಪಂಜಾಬ್‌ನ (punjab) ಪಟಿಯಾಲದಲ್ಲಿ (patiyala) ಬಾಲಕಿ ಒಬ್ಬಳು ಮೃತಪಟ್ಟಿದ್ದಳು, ವಾರದ ಹಿಂದೆ ಮಂಡ್ಯ (mandya) ಜಿಲ್ಲೆ ಶ್ರೀರಂಗಪಟ್ಟಣ (srirangapattana) ತಾಲೂಕಿನ ಬೆಟ್ಟಹಳ್ಳಿಯಲ್ಲಿ ಐಸ್ ಕ್ರೀಮ್ (icecream) ತಿಂದು ಅವಳಿ ಜವಳಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ಈ ಎರಡೂ ಘಟನೆಗಳಲ್ಲಿ ಖರೀದಿ ಮಾಡಿದ ಆಹಾರದ (Food products) ಗುಣಮಟ್ಟದ (quality) ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಆಹಾರ ಮತ್ತು ಔಷಧ ಇವೆರಡೂ ನಿರ್ದಿಷ್ಟ ಸಮಯದ ಬಳಿಕ ಹಾಳಾಗುತ್ತದೆ ಮತ್ತು ವಿಷಕಾರಿಯಾಗುತ್ತದೆ. ಹೀಗಾಗಿ ಅರೋಗ್ಯ ಸುರಕ್ಷತೆಯ ದೃಷ್ಟಿಯಲ್ಲಿ ಇವೆರಡನ್ನು ನಿಗದಿತ ಸಮಯದೊಳಗೆ ಸೇವಿಸುವುದು ಉತ್ತಮ.

ಇವೆರಡರ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧಗಳಲ್ಲಿ ಬಳಸುವ ರಾಸಾಯನಿಕ ಮಿಶ್ರಣವು ವಿಷವಾಗುತ್ತದೆ. ಅದಕ್ಕಾಗಿ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧವನ್ನು ಸೇವಿಸಬಾರದು ಮತ್ತು ಎಸೆಯಬೇಕು. ಇಲ್ಲಿ ಸುರಕ್ಷತೆ ಸಮಸ್ಯೆಯೇ ಹೊರತು ಗುಣಮಟ್ಟ ಅಲ್ಲ.

ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

ಇದಕ್ಕೆ ವ್ಯತಿರಿಕ್ತವಾಗಿ ಆಹಾರ ಉತ್ಪನ್ನಗಳು ಕ್ರಮೇಣ ಹಾಳಾಗುತ್ತವೆ. ಅಪರೂಪ ಎಂಬಂತೆ ಕೆಲವೊಮ್ಮೆ ವಿಷಕಾರಿಯಾಗುತ್ತವೆ. ಆಹಾರ ವಿಷಕಾರಿ ಆಗುವ ಮೊದಲು ರುಚಿ, ಪರಿಮಳ ಮತ್ತು ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತದೆ. ಕಾಲಾನಂತರದಲ್ಲಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇಲ್ಲಿ, ಗುಣಮಟ್ಟ ಪ್ರಮುಖ ವಿಚಾರವಾಗಿದೆಯೇ ಹೊರತು ಸುರಕ್ಷತೆ ಅಲ್ಲ. ಹೀಗಾಗಿ ಆಹಾರ ಉತ್ಪನ್ನಗಳಿಗೆ ಎಕ್ಸ್‌ಪೈರಿ ಡೇಟ್ ಈನ್ದು ಇರುವುದಿಲ್ಲ. ಬದಲಾಗಿ ಅವನ್ನು ತಯಾರಿಸಿದ, ಬಳಸಲಾಗುವ ದಿನಾಂಕಗಳನ್ನು ಮಾತ್ರ ಹೇಳಲಾಗುತ್ತದೆ.


ಆಹಾರ ಪೋಲು

ಇದರಿಂದಾಗಿ ಪ್ರಪಂಚದಾದ್ಯಂತ ಜನರು ಸೇವಿಸಲು ಯೋಗ್ಯವಾದ ಸಾಕಷ್ಟು ಉತ್ತಮವಾದ ಆಹಾರಗಳು ಕಸದ ಬುಟ್ಟಿ ಸೇರುತ್ತದೆ.

ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಮೆರಿಕ, ಮಲೇಷ್ಯಾ ದೇಶಗಳು ವಿಶ್ವದಲ್ಲೇ ಹೆಚ್ಚು ಆಹಾರ ಪೋಲು ಮಾಡುವ ರಾಷ್ಟ್ರಗಳಾಗಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ನಾವು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಜೊತೆಗೆ ಅವುಗಳ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಆಹಾರ ಉತ್ಪನ್ನಗಳ ದಿನಾಂಕ

ಬೇರೆಬೇರೆ ಆಹಾರಗಳು ಬೇರೆಬೇರೆ ಅವಧಿಯವರೆಗೆ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಅಂದರೆ, ಎಲ್ಲಾ ಆಹಾರ ಪದಾರ್ಥಗಳು ಒಂದೇ ಪ್ರಮಾಣದಲ್ಲಿ, ಒಂದೇ ಸಮಯದಲ್ಲಿ ಹಾಳಾಗುವುದಿಲ್ಲ. ಆಹಾರ ಕಂಪನಿಗಳು ಶೆಲ್ಫ್ ಜೀವನವನ್ನು ಹೆಚ್ಚಿಸಲು ಸಂರಕ್ಷಕಗಳನ್ನು ಬಳಸುತ್ತವೆ. ಇದರ ಆಧಾರದ ಮೇಲೆ ಅವುಗಳ ಗುಣಮಟ್ಟದ ಬಾಳಿಕೆ ಅವಧಿಯನ್ನು ನಿರ್ಧರಿಸಲಾಗುತ್ತದೆ.

ಆಹಾರದ ಗುಣಮಟ್ಟಕ್ಕೆ ದಿನಾಂಕಗಳನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ವಿಶ್ವದ ಯಾವುದೇ ದೇಶದಲ್ಲೂ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳನ್ನು ಹೊಂದಿಲ್ಲ. ಇದನ್ನು ಅನುಭವದ ಆಧಾರದ ಮೇಲೆ ನಿರ್ಧರಿಸಲು ಆಹಾರ ತಯಾರಕರಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಆಹಾರ ಕಂಪೆನಿಗಳು ಗುಣಮಟ್ಟವನ್ನು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸುತ್ತವೆ.

ವಿದೇಶಗಳಲ್ಲಿ ಆಹಾರ ಗುಣಮಟ್ಟ ನಿರ್ಧರಿಸುವ ದಿನಾಂಕಗಳನ್ನು ಉಲ್ಲೇಖಿಸಲಾಗುತ್ತದೆ. ಇದರ ಬಗ್ಗೆ ಭಾರತೀಯರು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಪ್ರವಾಸ ಮಾಡುವ ಯೋಜನೆ ಇದ್ದರೆ ಇದು ಹೆಚ್ಚು ಉಪಯುಕ್ತವಾಗಿರುತ್ತದೆ.


ಪ್ಯಾಕ್ಡ್ ಆನ್ / ಕ್ಲೋಸ್ಡ್ ಆನ್

ಆಹಾರ ಪದಾರ್ಥವನ್ನು ಕಂಟೇನರ್‌ನಲ್ಲಿ ಸೀಲ್ ಮಾಡಿದ ದಿನಾಂಕ ಮತ್ತು ಅದರ ಬಾಳಿಕೆ ಹಾಗೂ ಆಹಾರದ ಗುಣಮಟ್ಟವನ್ನು ನಿರ್ಣಯಿಸಲು ಇದು ಉಪಯುಕ್ತವಾಗಿದೆ.

ಸೆಲ್ ಬೈ / ಪುಲ್ ಬೈ

ಈ ಸಂದೇಶವು ತಯಾರಕರಿಂದ ಚಿಲ್ಲರೆ ವ್ಯಾಪಾರಿಗಳಿಗೆ. ನಿರ್ಧಿಷ್ಟ ದಿನಾಂಕದೊಳಗೆ ಉತ್ಪನ್ನವನ್ನು ಮಾರಾಟ ಮಾಡದಿದ್ದರೆ ಅದನ್ನು ಶೆಲ್ಫ್‌ನಿಂದ ತೆಗೆದು ಕಸದ ಬುಟ್ಟಿಗೆ ಹಾಕಬೇಕು.

ಬೆಸ್ಟ್ ಯೂಸ್ಡ್ ಬಿಫೋರ್/ ಬೆಸ್ಟ್ ಯೂಸ್ಡ್ ಬೈ

ಇದು ಆಹಾರ ಪದಾರ್ಥಗಳ ಗುಣಮಟ್ಟ ಕಡಿಮೆಯಾಗುವುದನ್ನು ಸೂಚಿಸುವ ದಿನಾಂಕವಾಗಿದೆ. ನಿರ್ದಿಷ್ಟ ದಿನಾಂಕದೊಳಗೆ ಬಳಸದೇ ಇದ್ದರೆ ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶದ ಮೌಲ್ಯವು ನಂತರ ಬದಲಾಗುತ್ತದೆ. ಈ ದಿನಾಂಕದ ಅನಂತರ ಕೆಲವು ದಿನಗಳವರೆಗೆ ಆಹಾರವು ಸೇವಿಸಲು ಸಾಕಷ್ಟು ಉತ್ತಮವಾಗಿರುತ್ತದೆ.

ಯೂಸ್ ಬೈ/ ಡು ನಾಟ್ ಯೂಸ್ ಆಫ್ಟರ್

ನಿಗದಿತ ಅವಧಿ ಮುಗಿದ ಬಳಿಕ ಆಹಾರದ ಗುಣಮಟ್ಟವು ಹದಗೆಟ್ಟಿರುತ್ತದೆ. ಅದನ್ನು ಕಸದ ಬುಟ್ಟಿಗೆ ಹಾಕಲೇ ಬೇಕು ಎಂಬುದನ್ನು ಇದು ಹೇಳುತ್ತದೆ.

ಇವೆಲ್ಲವೂ ಮುಚ್ಚಿರುವ ಆಹಾರಗಳಿಗೆ ಮಾತ್ರ ಅನ್ವಯಾವಾಗುತ್ತದೆ. ಒಮ್ಮೆ ಪ್ಯಾಕೆಟ್ ತೆರೆದರೆ ಅಥವಾ ಗಾಳಿಗೆ ಒಡ್ಡಿಕೊಂಡರೆ ಅವುಗಳ ಗುಣಮಟ್ಟ ಕ್ಷೀಣಿಸಲು ಪ್ರಾರಂಭವಾಗುತ್ತದೆ.

ಖರೀದಿ ಮಾಡುವಾಗ ಎಚ್ಚರ

ಪ್ಯಾಕೆಟ್ ನಲ್ಲಿರುವ ದಿನಾಂಕ ಕೇವಲ ಗುಣಮಟ್ಟಕ್ಕೆ ಸಂಬಂಧಿಸಿರುತ್ತದೆ. ಆದರೆ ಆಹಾರದಲ್ಲಿ ನಾವು ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕು.

ಪ್ಯಾಕೆಟ್ ಆಹಾರ ಖರೀದಿ ಪ್ಯಾಕೆಟ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ ಆಹಾರ ಪ್ಯಾಕೇಜಿಂಗ್, ಸ್ಥಳಾಂತರದ ವೇಳೆ ಅದು ಹಾನಿಗೊಳಾಗಿರಬಹುದು. ಇಂತಹ ಪ್ಯಾಕೆಟ್‌ಗಳು ಇಲಿ, ನೊಣಗಳಿಂದ ಸೋಂಕಿಗೆ ಒಳಗಾಗಿ, ಗಾಳಿಯ ತೇವಾಂಶದಿಂದ ವಿಷಕಾರಿ ಆಗಿರಬಹುದು.

ಆಹಾರ ಡಬ್ಬಿಯಲ್ಲಿ ಬಿರುಕು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ ಕೆಲವೊಂದು ಡಬ್ಬಿಗಳು ಉಬ್ಬಿದ್ದರೆ ಆಹಾರದಲ್ಲಿ ತೀವ್ರವಾದ ಬ್ಯಾಕ್ಟೀರಿಯಾ ಇದ್ದು, ಆಹಾರ ವಿಷಕಾರಿಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು.


ಮನೆಯಲ್ಲಿ ಸಿದ್ಧಪಡಿಸಿದ ಆಹಾರ

ಕೆಟ್ಟ ವಾಸನೆ, ಪ್ಯಾಕೆಟ್, ಕ್ಯಾನ್‌ನಲ್ಲಿ ಕಪ್ಪು ಕಲೆಗಳು- ಇದು ಇಲಿಗಳಿಂದ ಆಹಾರ ಹಾಳಾಗಿದೆ ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ಆಹಾರದ ಬಣ್ಣ ಬದಲಾಗಿದ್ದರೆ, ಅವುಗಳ ಮೇಲೆ ಹಸಿರು ಅಥವಾ ಕಪ್ಪು ತೇಪೆಗಳು ಕಂಡುಬಂದರೆ ಇದು ಶಿಲೀಂಧ್ರಗಳ ಬೆಳವಣಿಗೆಯಾಗಿದೆ. ಇದು ಹೆಚ್ಚಾಗಿ ಬೇಯಿಸಿದ ಪದಾರ್ಥಗಳಲ್ಲಿ ಕಾಣಿಸುತ್ತದೆ.

ಆಹಾರವು ತುಂಬಾ ಬಲವಾದ ಅಸಾಮಾನ್ಯ ವಾಸನೆಯನ್ನು ಹೊಂದಿದ್ದರೆ ಆಹಾರವು ಹುಳಿಯಾಗಿರುತ್ತದೆ. ಸಾಮಾನ್ಯವಾಗಿ ದೋಸೆ ಅಥವಾ ಇಡ್ಲಿ ಹಿಟ್ಟು ಮತ್ತು ಮೊಸರಿನಲ್ಲಿ ಹೀಗಾಗುತ್ತದೆ.

ಆಹಾರ ಪದಾರ್ಥವು ಲೋಳೆ ಅಥವಾ ಜಿಗುಟಾಗಿದ್ದರೆ ಬ್ಯಾಕ್ಟೀರಿಯಾ ಅಥವಾ ವೈರಲ್ ತಗಲಿದೆ ಎಂಬುದರ ಸೂಚಕವಾಗಿದೆ.

ಆಹಾರ ಸಾಮಾನ್ಯಕ್ಕಿಂತ ಹೆಚ್ಚು ಕಹಿ ಅಥವಾ ಹೆಚ್ಚು ಹುಳಿಯಾಗಿದ್ದಾರೆ ಬ್ಯಾಕ್ಟೀರಿಯಾದ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಯಬೇಕು.

ಯಾವತ್ತೂ ಆಹಾರದ ಮುಚ್ಚಳ ತೆರೆಯುವಾಗ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಬಳಸಲು ಯೋಗ್ಯವಾಗಿಲ್ಲ ಎಂದು ಅನಿಸಿದರೆ ಕೂಡಲೇ ಅದನ್ನು ಕಸದ ಬುಟ್ಟಿಗೆ ಹಾಕಿ.

ಗುಣಮಟ್ಟ ಕಾಪಾಡಿ

ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ವಸ್ತುಗಳ ಗುಣಮಟ್ಟ ಕಾಪಾಡುವುದು ನಮ್ಮ ಜವಾಬ್ದಾರಿ. ಹಣ್ಣು ಅಥವಾ ತರಕಾರಿಗಳನ್ನು ತೊಳೆದು ರೆಫ್ರಿಜರೇಟರ್ ನಲ್ಲಿ ಇಡಿ. ಆಹಾರ ಪ್ಯಾಕೆಟ್‌ಗಳ ಮೇಲೆ ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ಎಂದು ಸೂಚಿಸಲಾಗಿರುತ್ತದೆ. ಅದನ್ನು ತಿಳಿದುಕೊಳ್ಳಿ. ಉದಾ- ಬೀಜಗಳನ್ನು ತೆರೆದು ಇಡಬಾರದು ಏಕೆಂದರೆ ಅವುಗಳಲ್ಲಿನ ತೈಲಗಳು ಕಂದುಬಣ್ಣಕ್ಕೆ ತಿರುಗುವುದರಿಂದ ಅವು ಮೃದು ಮತ್ತು ಕಹಿಯಾಗಬಹುದು.
ಕೆಲವು ಉತ್ಪನ್ನಗಳನ್ನು ತಕ್ಷಣವೇ ಬಳಸಲಾಗುವುದಿಲ್ಲ. ಆದರೆ ಹೆಚ್ಚು ಕಾಲ ಉಳಿಯಬೇಕು. ಆಗ ಅವುಗಳನ್ನು ಫ್ರೀಜರ್ ನಲ್ಲಿ ಇರಿಸಿ.

ಆಹಾರದ ಪ್ಯಾಕೆಟ್ ಅನ್ನು ತೆರೆದ ಬಳಿಕ ತಕ್ಷಣವೇ ಖಾಲಿ ಮಾಡಿ. ಪದೇಪದೇ ಗಾಳಿಗೆ ಒಡ್ಡುವುದರಿಂದ ಅವುಗಳ ಸತ್ವ ನಾಶವಾಗುತ್ತದೆ.

Continue Reading
Advertisement
lok sabha election 2024
Lok Sabha Election 202411 mins ago

Lok Sabha Election 2024 : ಬೋಟ್‌ನಲ್ಲಿ ಬಂದು ವೋಟ್‌ ಮಾಡಿದ 150ಕ್ಕೂ ಮತದಾರರು

Congress election camapaign meeting in haliyala
ರಾಜಕೀಯ53 mins ago

Lok Sabha Election 2024: ಬಿಜೆಪಿಯವರಿಂದ ಹಿಂದೂ ಧರ್ಮಕ್ಕೆ ಅಪಾಯ ಎಂದ ಅಂಜಲಿ ನಿಂಬಾಳ್ಕರ್

Modi in Karnataka PM Modi to address rally in Bengaluru Here live video
ಪ್ರಮುಖ ಸುದ್ದಿ58 mins ago

PM Narendra Modi: “ಇವಿಎಂ ಅಪಪ್ರಚಾರ ಮಾಡುವವರಿಗೆ ಕಪಾಳಮೋಕ್ಷ…” ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರಧಾನಿ ಸ್ವಾಗತ

Palki Sharma
ದೇಶ1 hour ago

Palki Sharma: ಬ್ರಿಟನ್‌ನಲ್ಲಿ ಭಾರತದ ಏಳಿಗೆ ಬಿಚ್ಚಿಟ್ಟ ಪತ್ರಕರ್ತೆ ಪಾಲ್ಕಿ ಶರ್ಮಾಗೆ ಮೋದಿ ಮೆಚ್ಚುಗೆ!

Lok sabha Election 2024
Lok Sabha Election 20241 hour ago

Lok Sabha Election 2024: ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು

Lok Sabha Election 2024 sandalwood celebrities reaction
Lok Sabha Election 20241 hour ago

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

ಕರ್ನಾಟಕ1 hour ago

Lok sabha Election 2024: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ನೇರವಾಗಿ ಮತಗಟ್ಟೆಗೆ ಬಂದ ನಾರಾಯಣ ಮೂರ್ತಿ

Lok Sabha Election 2024: Karnataka records 38.23% voter turnout; highest in Dakshina Kannda
ಕರ್ನಾಟಕ2 hours ago

Lok Sabha Election: ರಾಜ್ಯಾದ್ಯಂತ 1 ಗಂಟೆ ವೇಳೆಗೆ 38.23% ಮತದಾನ; ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

Lok Sabha Election 2024 Kannada Celeb vote Pictures
ಸ್ಯಾಂಡಲ್ ವುಡ್2 hours ago

Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

Lok Sabha Election 2024 DK brothers distribute Rs 505 in Bengaluru Rural constituency HD Kumaraswamy allegations
Lok Sabha Election 20242 hours ago

Lok Sabha Election 2024: ಕನಕಪುರದಲ್ಲಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ; ಎಚ್‌ಡಿಕೆ ಗಂಭೀರ ಆರೋಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ3 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20244 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20245 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ11 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ23 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ23 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌