Actress Jaya Bachchan | ಪೊದೆಗಳ ಹಿಂದೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸಬೇಕಿತ್ತು: ಆ ದಿನಗಳನ್ನು ನೆನಪಿಸಿಕೊಂಡ ಜಯಾ ಬಚ್ಚನ್! - Vistara News

ಪಾಡ್‌ಕಾಸ್ಟ್‌

Actress Jaya Bachchan | ಪೊದೆಗಳ ಹಿಂದೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸಬೇಕಿತ್ತು: ಆ ದಿನಗಳನ್ನು ನೆನಪಿಸಿಕೊಂಡ ಜಯಾ ಬಚ್ಚನ್!

ಹೊರಾಂಗಣ ಶೂಟಿಂಗ್‌ ಸಂದರ್ಭದಲ್ಲಿ ತಾವು ಎದುರಿಸಿದ ಕಷ್ಟದ ದಿನಗಳ ಬಗ್ಗೆ ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಹೇಳಿಕೊಂಡಿದ್ದಾರೆ.

VISTARANEWS.COM


on

Actress Jaya Bachchan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ಹೊರಾಂಗಣ ಶೂಟಿಂಗ್‌ ಸಂದರ್ಭದಲ್ಲಿ ಮುಟ್ಟಾದ ಸಂದರ್ಭದಲ್ಲಿ ತಾವು ಎದುರಿಸಿದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. 15ನೇ ವಯಸ್ಸಿನಲ್ಲಿಯೇ ಸಿನಿರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ನಟಿ ಜಯಾ ಬಚ್ಚನ್. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ ನಟಿ ಜಯಾ ಬಚ್ಚನ್.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದರು.

ಇದನ್ನೂ ಓದಿ | Kannada New Movie | ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಸಿನಿಮಾ ಟೀಸರ್‌ ಔಟ್‌ : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹೇಳಿದ್ದೇನು?

ಮಹಿಳೆಯರಿಗೆ ರಜೆಯನ್ನು ನೀಡಿ!
ʻʻಜನರು ತಾಯಂದಿರ ದಿನ ಅದ್ಧೂರಿಯಿಂದ ಆಚರಿಸುತ್ತಾರೆ. ತಮ್ಮ ತಾಯಂದಿರು ಏನನ್ನು ಅನುಭವಿಸಿದ್ದಾರೆಂದು ಅರ್ಥ ಮಾಡಿಕೊಳ್ಳಲು ನೀವು ಎಂದಾದರೂ ತಲೆಕೆಡಿಸಿಕೊಂಡಿದ್ದೀರಾ?ʼʼ ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಹಲವೆಡೆ ಮಹಿಳೆಯರಿಗೆ ಪಿರಿಯಡ್ ಸಮಯದಲ್ಲಿ ರಜಾ ನೀಡಲು ಹಿಂಜರಿಯುತ್ತಾರೆ ಮತ್ತು ವಿರೋಧಿಸುತ್ತಾರೆ. ಕನಿಷ್ಠ ಒಂದು ಅಥವಾ ಎರಡು ದಿನ ಮಹಿಳೆಯರಿಗೆ ಮುಟ್ಟಾದ ಸಂದರ್ಭದಲ್ಲಿ ರಜೆ ನೀಡಿ. ಬಳಿಕ ಕೆಲಸವನ್ನು ಬೇರೆ ಯಾವುದಾದರೂ ದಿನದಲ್ಲಿ ಅದನ್ನು ಸರಿದೂಗಿಸಲು ಅವರನ್ನು ಕೇಳಿಕೊಳ್ಳಿ. ಪುರುಷರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಕೆಲವು ಮಹಿಳೆಯರು ಕೂಡ ಈ ಬಗ್ಗೆ ಅರ್ಥ ಮಾಡಿಕೊಳ್ಳುವುದಿಲ್ಲ, ಇದರ ಬಗ್ಗೆ ಅವರೂ ಧ್ವನಿ ಎತ್ತಬೇಕುʼʼ ಎಂದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಮಿತಾಭ್ ಗೆದ್ದ ‌6 ಸವಾಲುಗಳು! ತಿರಸ್ಕಾರ, ಅಪಮಾನ, ನೋವುಗಳನ್ನು ಮೀರಿ ನಿಂತ ಖುಷಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ : ಬಾತ್ಕೋಳಿ ಮರಿಗಳ ಕಾಡಿನ ವಾಕಿಂಗ್

ಅಮ್ಮ ಬಾತುಕೋಳಿಗೆ ತನ್ನ ಮಕ್ಕಳು ತನ್ನ ಹಿಂದೆ ಬರ್ತಾನೇ ಇಲ್ಲ ಅನ್ನೋದು ಗೊತ್ತೇ ಆಗದೆ, ತನ್ನಷ್ಟಕ್ಕೆ ಅವರಿಗೆ ಬುದ್ಧಿ ಹೇಳ್ತಾ ಹೋಗ್ತಾ ಇತ್ತು. ಸುಮಾರು ಹೊತ್ತಾದ ಮೇಲೆ ʻಹೇಳಿದ್ದು ಕೇಳಿಸ್ತಾ ಎಲ್ರಿಗೂ?ʼ ಅಂತ ಹಿಂದೆ ತಿರುಗಿ ನೋಡಿದ್ರೆ… ಯಾರೂ ಇಲ್ಲ! ಅರೆ! ಎಲ್ಲಾ ಎಲ್ಲೋದ್ವು? ಮಕ್ಕಳ ಕಥೆ ಓದಿ.

VISTARANEWS.COM


on

Duck
Koo

ಅದು ಆ ಬಾತುಕೋಳಿ ಮರಿಗಳ ಮೊದಲ ಕಾಡು ಪಯಣ. ಅಂದರೆ ಸದಾ ಕಾಲ ಅಮ್ಮನ ಸುತ್ತಮುತ್ತ ಮತ್ತು ತಮ್ಮ ಕೊಳದ ಆಚೀಚೆ ಮಾತ್ರವೇ ಸುತ್ತುತ್ತಿದ್ದ ಆ ಮೂರು ಮರಿಗಳು ಇದೇ ಮೊದಲ ಬಾರಿಗೆ ಬಾತಮ್ಮನೊಂದಿಗೆ ಕಾಡು ಸುತ್ತಲು ಹೊರಟಿದ್ದವು. ಈ ಮರಿಗಳಲ್ಲಿ ಒಂದು ಹೆಣ್ಣು ಮತ್ತು ಎರಡು ಗಂಡು ಮರಿಗಳಿದ್ದವು. ಆ ಹೆಣ್ಣು ಮರಿಯ ಹೆಸರು ಚುಮ್ಮು ಎಂದಾಗಿದ್ದರೆ, ಸಪೂರ ಮರಿಯ ಹೆಸರು ತಿಮ್ಮು. ಗುಂಡುಗುಂಡಕ್ಕಿದ್ದ ಮರಿಯ ಹೆಸರು ಡುಮ್ಮು ಎಂದಾಗಿತ್ತು. ಹೀಗೆ ಚುಮ್ಮು, ತಿಮ್ಮು ಹಾಗೂ ಡುಮ್ಮುವಿನೊಂದಿಗೆ ಬಾತಮ್ಮ ವಾಕಿಂಗ್‌ ಹೊರಟಿತ್ತು. ಅಮ್ಮ ಮುಂದೆಮುಂದೆ. ಮರಿಗಳು ಹಿಂದೆಹಿಂದೆ!

ʻಕಾಡೂಂದ್ರೆ ಏನಂದ್ಕಂಡ್ರಿ ಮಕ್ಕಳೇ! ಅಮ್ಮನ್ನ ಬಿಟ್ಟು ಎಲ್ಲೆಲ್ಲೋ ಹೋಗಬಾರದು, ಸವೆದಿರೋ ದಾರಿ ಬಿಟ್ಟು ಸಿಕ್ಕಸಿಕ್ದಲ್ಲಿ ಅಲೀಬಾರದು, ದಾರಿ ತಪ್ಪೋಗತ್ತೆ. ಸಂದಿ-ಮೂಲೆಗಳಲ್ಲಿ ಅಪಾಯಗಳು ಕಾದಿರತ್ತೆ. ತುಂಬಾ ಎಚ್ಚರಿಕೆಯಿಂದ ಕಾಲಿಡುವ ಮೊದಲು ಕಣ್ಣಿಡಬೇಕು…ʼ ಅಂತೆಲ್ಲಾ ಬಾತಮ್ಮ ಮಕ್ಕಳಿಗೆ ಹೇಳ್ಕೊಂಡು ಹೋಗ್ತಾ ಇತ್ತು. ಆದರೆ ತಡವಾಗಿತ್ತು! ಅಷ್ಟರಲ್ಲಾಗಲೇ ಮಕ್ಕಳಿಗೆ ದಾರಿ ತಪ್ಪಿ ಆಗಿತ್ತು.

ಏನಾಯ್ತೂಂದ್ರೆ, ದೊಡ್ಡದೊಂದು ಚಿಟ್ಟೆ ತನ್ನ ಬಣ್ಣಬಣ್ಣದ ರೆಕ್ಕೆಗಳನ್ನು ಬಡೀತಾ ಇವರ ಸುತ್ತಾನೇ ಹಾರಾಡ್ತಿತ್ತು. ಇವು ಹಿಡಿಯೋದಕ್ಕೆ ಪ್ರಯತ್ನಿಸಿದ್ರೆ, ಒಂದು ಹೂವಿನತ್ರ ಹೋಯ್ತು. ಮತ್ತೆ ಇನ್ನೊಂದಕ್ಕೆ, ಹಾಗೆ ಮತ್ತೊಂದಕ್ಕೆ ಅಂತ ಚಿಟ್ಟೆ ಮುಂದೆ ಮುಂದೆ ಹೋಗ್ತಾನೇ ಇತ್ತು. ಚುಮ್ಮು, ತಿಮ್ಮು ಮತ್ತು ಡುಮ್ಮು ಅದರ ಹಿಂದೆ ಹಿಂದೆ ಹೋಗ್ತಾನೇ ಇದ್ದವು. ಈ ಕಡೆ ಅಮ್ಮ ಬಾತುಕೋಳಿಗೆ ತನ್ನ ಮಕ್ಕಳು ತನ್ನ ಹಿಂದೆ ಬರ್ತಾನೇ ಇಲ್ಲ ಅನ್ನೋದು ಗೊತ್ತೇ ಆಗದೆ, ತನ್ನಷ್ಟಕ್ಕೆ ಅವರಿಗೆ ಬುದ್ಧಿ ಹೇಳ್ತಾ ಹೋಗ್ತಾ ಇತ್ತು. ಸುಮಾರು ಹೊತ್ತಾದ ಮೇಲೆ ʻಹೇಳಿದ್ದು ಕೇಳಿಸ್ತಾ ಎಲ್ರಿಗೂ?ʼ ಅಂತ ಹಿಂದೆ ತಿರುಗಿ ನೋಡಿದ್ರೆ… ಯಾರೂ ಇಲ್ಲ! ಅರೆ! ಎಲ್ಲಾ ಎಲ್ಲೋದ್ವು?

ಈ ಕಡೆ ಮರಿಗಳಿಗೂ ಮೊದಲು ತಾವು ಹೋಗ್ತಾ ಇದ್ದಿದ್ದು ಅಮ್ಮನ ಹಿಂದಲ್ಲ, ಚಿಟ್ಟೆ ಹಿಂದೆ ಅನ್ನೋದು ತಿಳೀಲೇ ಇಲ್ಲ. ಅದು ಗೊತ್ತಾಗುವಷ್ಟರಲ್ಲಿ ತುಂಬಾ ದೂರ ಕಾಡೊಳಗೇ ಬಂದುಬಿಟ್ಟಿದ್ದರು. ಆಚೀಚೆ ಎಲ್ಲಿ ನೋಡಿದರೂ ಅಮ್ಮ ಕಾಣಲಿಲ್ಲ, ʻಅಮ್ಮಾ…ʼ ಕರೆದವು ಮಕ್ಕಳು. ಊಹುಂ, ಅಮ್ಮ ಉತ್ತರಿಸಲಿಲ್ಲ. ʻಅಮ್ಮಾ… ಅಮ್ಮಾ… ಎಲ್ಲಿದ್ದೀಯ?ʼ ಎಂದೆಲ್ಲಾ ಕರೆದವು. ಅಲ್ಲಿನ ಪೊದೆಗಳ ಸಂದಿಯನ್ನೆಲ್ಲಾ ಹುಡುಕಾಡಿದವು. ತಾವೆಲ್ಲಿದ್ದೇವೆ, ಯಾವ ಜಾಗ ಇದು ಎಂಬುದೇ ಅವಕ್ಕೆ ಅರ್ಥ ಆಗಲಿಲ್ಲ. ಅಷ್ಟರಲ್ಲೇ ಆ ನೆಲ ನಡುಗುವ ಶಬ್ದ ಕೇಳಬೇಕೆ? ಎಲ್ಲರೂ ಬೆಚ್ಚಿಬಿದ್ದು ಸಿಕ್ಕಸಿಕ್ಕ ಪೊದೆ, ಬಂಡೆಗಳ ಸಂದಿಯಲ್ಲಿ ಬಚ್ಚಿಟ್ಟುಕೊಂಡರು.

ಇವರು ಬಂದ ಕಾಡಿನ ಭಾಗದಲ್ಲಿ ಆನೆಯೊಂದು ವಾಸಿಸುತ್ತಿತ್ತು. ಅದಕ್ಕೆ ಯಾವತ್ತಾದರೂ ತೀರಾ ಖುಷಿಯಾಗಿಬಿಟ್ಟರೆ ಹೀಗೆ ಲೆಫ್ಟ್‌-ರೈಟ್‌-ಲೆಫ್ಟ್‌-ರೈಟ್‌ ಮಾಡುತ್ತಾ ಓಡಾಡಿಬಿಡುತ್ತಿತ್ತು. ಈಗಾಗಿದ್ದೂ ಅದೇ. ಆನೆಯೊಂದು ಕಾಲು ಬಡಿಯುತ್ತಾ ಲೆಫ್ಟ್‌-ರೈಟ್‌ ಮಾಡಿಬಿಟ್ಟರೆ ನೆಲ ನಡುಗದೇ ಇರತ್ಯೇ? ಅದೆಲ್ಲಾ ನಮ್ಮ ಪುಟ್ಟ ಚುಮ್ಮು, ತಿಮ್ಮು, ಡುಮ್ಮುಗೆ ಹೇಗೆ ತಾನೇ ಗೊತ್ತಾಗಬೇಕು. ಅವು ಹೆದರಿ ನಡಗ್ತಾ ಇದ್ದವು. ಇವರಿದ್ದ ಬಂಡೆಯ ಹತ್ತಿರವೇ ಬಂದ ಆನೆ, ತಾನೇ ಈ ಕಾಡಿನ ರಾಜ ಅನ್ನುವ ಹಾಗೆ ಬಂಡೆಯ ಮೇಲೆ ಕೂತ್ಕೊಂಡ್ತು. ಕಾಲು ಮೇಲೆ ಕಾಲು ಹಾಕಿ ಕೂತ್ಕೊಳ್ಳುವ ಪ್ರಯತ್ನದಲ್ಲಿದ್ದಾಗ ಬಂಡೆಯ ಮೇಲಿಂದ ಜರ್‌…ನೇ ಜಾರಿ ಬಿತ್ತು ಆನೆ. ಹೆದರಿ ನಡಗ್ತಾ ಇದ್ದ ಮೂವರಿಗೂ ಈಗ ನಗು ತಡೆಯೋದಕ್ಕಾಗಲಿಲ್ಲ.

ʻಅಯ್ಯೋ… ಅಮ್ಮಾʼ ಅಂತ ನರಳ್ತಾ ಇದ್ದ ಆನೆಗೆ ಇದ್ದಕ್ಕಿದ್ದ ಹಾಗೆ ಸಣ್ಣ ದನಿಗಳು ನಗ್ತಾ ಇರೋದು ಕೇಳಿಸ್ತು. ʻಯಾರು? ಯಾರದು ನಗೋದು?ʼ ಕೇಳಿತು ಆನೆ. ಅಷ್ಟರಲ್ಲಾಗಲೇ ಆನೆಯ ಬಗೆಗಿನ ಹೆದರಿಕೆ ಕಡಿಮೆ ಆಗಿತ್ತು ಬಾತು ಮರಿಗಳಿಗೆ. ʻನಾನು ಚುಮ್ಮು, ನಾನು ತಿಮ್ಮು, ನಾನು… ಡುಮ್ಮುʼ ಅಂತು ಮೂರೂ ಮರಿಗಳು ಮೂರು ಪೊದೆಗಳಿಂದ ಹೊರಬಂದವು. ಬಂದ ಮೇಲೂ ಆನೆ ಜರಿದು ಬಿದ್ದಿದ್ದನ್ನು ನೆನಪಿಸಿಕೊಂಡು ಕುಪ್ಪಳಿಸಿಕೊಂಡು ನಗುತ್ತಿದ್ದವು. ಆನೆಗೂ ಇವರನ್ನು ಕಂಡು ಮೋಜೆನಿಸಿತು.

ʻಹುಂ… ಚುಂ, ತಿಂ, ಡುಂ! ಇಲ್ಯಾಕೆ ಬಂದ್ರಿ ನೀವು?ʼ ವಿಚಾರಿಸಿಕೊಂಡಿತು ಆನೆ. ʻನಾವು ಶ್ರೀಮತಿ ಬಾತಮ್ಮನೊಂದಿಗೆ ವಾಕಿಂಗ್‌ ಹೊರಟವರು. ಈಗ ಕಳೆದುಹೋಗಿದ್ದೇವೆ!ʼ ಹೇಳಿಕೊಂಡಿತು ತಿಮ್ಮು. ʻನೀವೆಲ್ಲಿ ಕಳೆದೋಗಿದ್ದೀರಿ! ಇದ್ದೀರಲ್ಲಾ ನನ್ನೆದುರಿಗೇ!ʼ ಆನೆಗೆ ಸೋಜಿಗವಾಯ್ತು. ʻಹಂಗಲ್ಲ, ನಾವು ಬಾತಮ್ಮನವರ ಜೊತೆಗಿರಬೇಕಿತ್ತು. ಈಗ ಬೇರೆಯಾಗಿದ್ದೇವೆ ಅಂದಿದ್ದುʼ ಸ್ಪಷ್ಟಪಡಿಸಿತು ಚುಮ್ಮು. ʻಓಹ್!‌ ಹಂಗಾಯ್ತಾ! ಸರಿ. ನಿಮ್ಮಮ್ಮ ಬರೋತಂಕ ನಂಜೊತೆಗಿರಿʼ ಅಂತು ಆನೆ. ʻನಮ್ಮಮ್ಮ ಬರೋತಂಕ ನೀನೇಕೆ ನಮಗೆ ಅಮ್ಮ ಆಗಿರಬಾರದು?ʼ ಕೇಳಿತು ಡುಮ್ಮು.
ಆನೆಗೆ ಆಶ್ಚರ್ಯ. ಹೀಗೂ ಆಗಬಹುದೆಂದರೆ! ಇಲ್ಲಿರುವ ಚುಂ, ತಿಂ, ಡುಂ ಎಂಬ ಬಾತು ಮರಿಗಳಿಗೆ ನಾನು ಅಮ್ಮ. ʻಆದರೆ… ನಾನೀಗ ಆನೆಯಮ್ಮ ಆಗಬೇಕೋ ಬಾತಮ್ಮನೋ?ʼ ಗೊಂದಲದಿಂದ ಕೇಳಿತು ಆನೆ. ʻನೀನು ಬಾತಮ್ಮನೇ ಆಗುʼ ಎಲ್ಲವೂ ಒಕ್ಕೊರಲಿನಿಂದ ಹೇಳಿದವು.

ಸರಿ, ಆನೆಯೆಂಬುದು ತಾತ್ಕಾಲಿಕವಾಗಿ ಬಾತಮ್ಮನಾಯಿತು. ಅಮ್ಮ ಅಂದ್ರೆ ಸುಮ್ನೇನಾ? ಮಕ್ಕಳಿಗೆ ಎಲ್ಲವನ್ನೂ ಹೇಳಿಕೊಡಬೇಕು ತಾನೇ! ʻನೋಡಿ ಮಕ್ಕಳೇ, ಶ್ರೀಮತಿ ಬಾತಮ್ಮನವರ ಚಿರಂಜೀವಿಗಳಾದಂಥ ನೀವು ಹೀಗೆ ಕೂಗಬೇಕುʼ ಎಂದು ಹೇಳಿ ಸುಂಡಿಲೆತ್ತಿ ಜೋರಾಗಿ ಕೂಗಿತು. ಥೇಟ್‌ ಆನೆ ಘೀಳಿಡುವ ಶಬ್ದವೇ ಬಂತು. ಆ ಶಬ್ದ ಎಬ್ಬಿಳಿದ ಗಾಳಿಗೆ ಬಾತು ಮರಿಗಳು ಒಮ್ಮೆ ಹಾರಾಡಿ ಕೆಳಗೆ ಬಿದ್ದವು; ಬಿದ್ದೂಬಿದ್ದು ನಗತೊಡಗಿದವು. ಎಲ್ಲವೂ ಒಟ್ಟಿಗೇ ಕ್ವಾಕ್‌… ಕ್ವಾಕ್‌ ಎಂದು ಕೂಗಿದವು. ಅರೆ! ಇದೇನೋ ಬೇರೆ ಶಬ್ದ ಬಂತಲ್ಲಾ ಎಂದು ಆನೆಗೆ ಮತ್ತೆ ಗೊಂದಲವಾಯಿತು.
ʻಸರಿ, ಬಾತು ಮರಿಗಳಾದ್ದರಿಂದ ನೀವು ಹಾರುವುದನ್ನೂ ಕಲಿಯಬೇಕು. ನೋಡಿ, ಹೀ….ಗೆʼ ಎನ್ನುತ್ತಾ ಅಲ್ಲಿದ್ದ ದೊಡ್ಡ ಬಂಡೆಯನ್ನು ಹತ್ತಿ. ಅಲ್ಲಿಂದ ತನ್ನ ಕೈ-ಕಾಲು-ಸುಂಡಿಲು-ಕಿವಿಗಳನ್ನೆಲ್ಲಾ ಬಡಿಯುತ್ತಾ ಗಾಳಿಯಲ್ಲಿ ಜಿಗಿಯಿತು. ಅಷ್ಟೇ! ಮೇಲಿಂದ ಧೊಪ್ಪನೆ ಮುಖ ಅಡಿಯಾಗಿ ಬಿತ್ತು ಪಾಪದ್ದು. ಆನೆ ಬಿದ್ದರೆ ಆಗುವ ಅನಾಹುತವೇನು ಸಾಮಾನ್ಯವೇ? ಸುತ್ತಲಿನ ಗಿಡ-ಮರಗಳೆಲ್ಲಾ ಒಮ್ಮೆ ಜೋರಾಗಿ ತೂಗಾಡಿದವು. ಹತ್ತಿರದ ಕೊಳದ ನೀರೆಲ್ಲಾ ಒಮ್ಮೆ ಉಕ್ಕಿದಂತಾಯ್ತು. ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಬಾತು ಮರಿಗಳು ಹಾರಿ-ಹಾರಿ ಬೀಳುತ್ತಿದ್ದವು.

ಇದನ್ನೂ ಓದಿ : ಮಕ್ಕಳ ಕಥೆ: ದರ್ಜಿ ಮತ್ತು ರಾಜಕುಮಾರಿ

ʻಏನಿದು ಇಷ್ಟೊಂದು ಶಬ್ದ?ʼ ಎನ್ನುತ್ತಾ ಶಬ್ದದ ಮೂಲವನ್ನೇ ಅರಸುತ್ತಾ ಬಾತಮ್ಮ ಅಲ್ಲಿಗೆ ಬಂತು. ʻಆಗಲಿಂದ ಈ ದಿಕ್ಕಿಗೇ ಭೂಕಂಪವಾದಂಥ ಶಬ್ದ ಬರುತ್ತಿತ್ತು. ಹಾಗಾಗಿ ಇತ್ತಲೇ ಹುಡುಕುತ್ತಾ ಬಂದೆʼ ಎಂದಿತು ಬಾತಮ್ಮ. ಮರಿಗಳೆಲ್ಲಾ ಓಡೋಡಿ ಬಂದು ಅಪ್ಪಿಕೊಂಡವು ಅಮ್ಮನನ್ನು. ಅಮ್ಮನ ಅನುಪಸ್ಥಿತಿಯಲ್ಲಿ ತಾನು ಈ ಮರಿಗಳಿಗೆ ಅಮ್ಮನಾಗುವುದಕ್ಕೆ ಹೋಗಿ ಆದ ಅನಾಹುತವನ್ನೆಲ್ಲಾ ಬಣ್ಣಿಸಿತು ಆನೆ. ʻಕ್ಷಮಿಸು ಬಾತಮ್ಮ. ನಿನ್ನಷ್ಟು ಒಳ್ಳೆಯ ಅಮ್ಮನಾಗುವುದಕ್ಕೆ ನನಗೆ ಆಗಲೇ ಇಲ್ಲʼ ಎಂದು ಬೇಸರಿಸಿಕೊಂಡಿತು. ʻಛೇ! ಎಲ್ಲಾದರೂ ಉಂಟೇ. ನನ್ನ ಮಕ್ಕಳು ಯಾವುದೇ ಅಪಾಯಕ್ಕೆ ಸಿಲುಕದಂತೆ ಅವರನ್ನು ಇಷ್ಟೂ ಹೊತ್ತು ಕಾಪಾಡಿಕೊಂಡಿದ್ದಕ್ಕೆ ನಿನಗೆ ಧನ್ಯವಾದಗಳು. ಎಲ್ಲಾ ಅಮ್ಮಂದಿರು ಮಾಡುವುದೂ ಇದನ್ನೇʼ ಎಂದಿತು ಬಾತಮ್ಮ. ಚುಂ, ತಿಂ, ಡುಂ ತಮ್ಮ ಅಮ್ಮನ ಬೆನ್ನಿಗೆ ನಡೆಯುತ್ತಾ ಆನೆಗೆ ಟಾಟಾ ಮಾಡಿ ನಕ್ಕವು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ದರ್ಜಿ ಮತ್ತು ರಾಜಕುಮಾರಿ

ರಾಜಕುಮಾರಿಯನ್ನು ಮದುವೆಯಾಬೇಕಿದ್ದರೆ ಆಕೆ ಸಾಕಿಕೊಂಡಿದ್ದ ಬೃಹದಾಕಾರದ ಕರಡಿಯ ಜೊತೆಗೆ ಒಂದು ರಾತ್ರಿ ಇರಬೇಕಿತ್ತು. ಆ ಕರಡಿಯೋ… ಮನುಷ್ಯರನ್ನು ಕಂಡರೆ ಬಿಡುತ್ತಲೇ ಇರಲಿಲ್ಲ. ಹಾಗಾಗಿ ರಾಜಕುಮಾರಿಯ ಮದುವೆ ಮುಂದಕ್ಕೆ ಹೋಗುತ್ತಲೇ ಇತ್ತು. ಮುಂದೆ? ಓದಿ, ಈ ಮಕ್ಕಳ ಕಥೆ.

VISTARANEWS.COM


on

Children story
Koo

ಒಂದಾನೊಂದೂರಿನ ರಾಜನಿಗೆ ಗೊಂಬೆಯಂಥ ಮಗಳೊಬ್ಬಳಿದ್ದಳು. ಅವಳು ಬುದ್ಧಿವಂತೆ ಮತ್ತು ಧೈರ್ಯವಂತೆಯೂ ಆಗಿದ್ದಳು. ಹಾಗಾಗಿ ಅವಳಿಗೆ ತಕ್ಕ ವರನನ್ನು ಹುಡುಕಲೆಂದು ರಾಜ ತನ್ನ ಶಕ್ತಿ ಮೀರಿ ಪ್ರಯತ್ನಿಸಿದರೂ ಆಗಿರಲಿಲ್ಲ. ಇದಕ್ಕೊಂದು ಕಾರಣವೂ ಇತ್ತು. ಯಾರೇ ತನ್ನನ್ನು ವಿವಾಹ ಆಗುವುದಕ್ಕೆ ಬಂದರೂ ಆಕೆ ಒಂದು ಪ್ರಶ್ನೆ ಕೇಳುತ್ತಿದ್ದಳು. ಅದಕ್ಕೆ ಸರಿಯುತ್ತರ ನೀಡಬೇಕಿತ್ತು. ಅದರಲ್ಲಿ ಗೆದ್ದರೆ, ಆಕೆ ಸಾಕಿಕೊಂಡಿದ್ದ ಬೃಹದಾಕಾರದ ಕರಡಿಯ ಜೊತೆಗೆ ಒಂದು ರಾತ್ರಿ ಇರಬೇಕಿತ್ತು. ಆ ಕರಡಿಯೋ… ಮನುಷ್ಯರನ್ನು ಕಂಡರೆ ಬಿಡುತ್ತಲೇ ಇರಲಿಲ್ಲ. ಹಾಗಾಗಿ ರಾಜಕುಮಾರಿಯ ಮದುವೆ ಮುಂದಕ್ಕೆ ಹೋಗುತ್ತಲೇ ಇತ್ತು.

ಪಕ್ಕದ ಊರಿನಿಂದ ಜಾಣ ದರ್ಜಿಯೊಬ್ಬ ಆ ಊರಿಗೆ ಬಂದಿದ್ದ. ಯಾವುದೋ ಮದುವೆಮನೆಗೆ ಒಳ್ಳೆಯ ಬಟ್ಟೆಗಳನ್ನು ಹೊಲಿದು ಕೊಡಬೇಕಿತ್ತು. ಬಂದ ಕೆಲಸ ಮುಗಿದ ನಂತರ ಅಲ್ಲಿನ ಜನರೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದ ದರ್ಜಿ. ಆಗ ಆ ಊರಿನ ರಾಜಕುಮಾರಿಯ ಮದುವೆಯ ವಿಷಯವೂ ಬಂತು. ಎಷ್ಟು ಹುಡುಕಿದರೂ ಆಕೆಗೆ ವರನೇ ದೊರೆಯುತ್ತಿಲ್ಲ ಎಂದು ಊರಿನವರು ಬೇಸರಿಸಿಕೊಂಡಿದ್ದರು. ತಾನೇಕೆ ಒಂದು ಕೈ ನೋಡಬಾರದು ಎಂದು ಯೋಚಿಸಿದ ದರ್ಜಿ. ಆತನ ಯೋಚನೆಯನ್ನು ಕೇಳಿ ಸುತ್ತಲಿನ ಜನಕ್ಕೆ ನಗು ತಡೆಯಲಾಗಲಿಲ್ಲ. ʻಎಂಥೆಂಥವರೇ ಕೈಸೋತು ಹೋಗಿದ್ದಾರೆ. ಇನ್ನು ನೀನ್ಯಾವ ಲೆಕ್ಕನಯ್ಯʼ ಎಂದು ಆಡಿಕೊಂಡು. ಯಾರೇನೆಂದರೂ ಮಾರನೇದಿನ ಅರಮನೆಗೆ ಹೋಗುವುದು ಎಂದು ದರ್ಜಿ ನಿರ್ಧರಿಸಿದ್ದ.

ಅರಮನೆಗೆ ಬಂದ ಸಾದಾ ಉಡುಗೆಯ ದರ್ಜಿಯನ್ನು ಕಂಡು ರಾಜಕುಮಾರಿ ಬೇಸರದಿಂದ ಮುಖ ತಿರುಗಿಸಿದಳು. ಆದರೆ ಆಕೆಯ ಪ್ರಶ್ನೆಗೆ ಉತ್ತರಿಸಲು ಯಾರು ಬೇಕಾದರೂ ಪ್ರಯತ್ನಿಸಬಹುದು ಎಂದು ರಾಜನೇ ಹೇಳಿದ್ದರಿಂದ ಆಕೆ ಸುಮ್ಮನಿರಬೇಕಾಯಿತು. ಆತನೊಂದಿಗೆ ಇನ್ನೂ ಇಬ್ಬರು ಯುವಕರು ಅಲ್ಲಿದ್ದರು. ಮೂವರಿಗೂ ತನ್ನ ಎರಡೂ ಕೈ ಮುಷ್ಟಿಯನ್ನು ತೋರಿಸಿದ ಅರಸುಗುವರಿ, ʻಈ ಮುಷ್ಟಿಗಳಲ್ಲಿ ಎರಡು ಕೂದಲುಗಳಿವೆ. ಆ ಕೂದಲುಗಳ ಬಣ್ಣವೇನು ಎಂಬುದನ್ನು ಹೇಳಬಲ್ಲಿರಾ?ʼ ಎಂದು ಕೇಳಿದಳು. ಎರಡೂ ಕೂದಲುಗಳು ಒಂದೇ ಬಣ್ಣದಲ್ಲಿವೆಯೇ, ಬೇರೆ ಬಣ್ಣಗಳಲ್ಲಿವೆಯೇ ಎಂಬುದೇ ಆ ಯುವಕರಿಗೆ ತಿಳಿಯಲಿಲ್ಲ. ಕೂದಲು ಎನ್ನುತ್ತಿದ್ದಂತೆ ಹೆಚ್ಚು ಯೋಚಿಸದ ಮೊದಲ ಯುವಕ, ʻಕಪ್ಪು ಕೂದಲುʼ ಎಂದ. ʻತಪ್ಪುʼ ಎಂದಳು ರಾಜಕುಮಾರಿ. ʻಬಿಳಿ ಮತ್ತು ಕೆಂಚು ಕೂದಲುʼ ಎಂದು ಎರಡನೇ ಯುವಕ. ʻಊಹುಂ! ಇದೂ ಸರಿಯಲ್ಲʼ ಎಂದಳು ರಾಜನ ಮಗಳು. ಆವರೆಗೂ ದರ್ಜಿ ಸೂಕ್ಷ್ಮವಾಗಿ ರಾಜಕುಮಾರಿಯ ಕೂದಲನ್ನೇ ಗಮನಿಸುತ್ತಿದ್ದ. ಆಕೆ ತಲೆಯ ಮೇಲೆ ಧರಿಸಿದ್ದ ಪರದೆಯಂಥ ಬಟ್ಟೆಯಿಂದ ಕೂದಲ ಬಣ್ಣ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಕಿವಿಯ ಬಳಿ ಇಣುಕುತ್ತಿದ್ದ ಎಳೆಗಳಿಂದ ಅವಳ ಕೂದಲ ಬಣ್ಣವನ್ನು ದರ್ಜಿ ಪತ್ತೆ ಮಾಡಿದ್ದ. ʻಬಂಗಾರ ಬಣ್ಣದ ಕೂದಲುʼ ಎಂದ ಆತ. ಉತ್ತರ ಸರಿಯಿದ್ದಿದ್ದರಿಂದ ರಾಜಕುಮಾರಿ ಮೌನವಾಗಿ ತಲೆಯಾಡಿಸಿದಳು. ಬಂದ ದೊರೆ ಮಕ್ಕಳನ್ನೆಲ್ಲಾ ಬಿಟ್ಟು ಈಗ ದರ್ಜಿಯನ್ನು ವರಿಸಬೇಕೆ ಎಂಬುದು ಅವಳ ಚಿಂತೆಯಾಗಿತ್ತು. ಆದರೆ ಅಂದಿನ ರಾತ್ರಿಯನ್ನು ದೊಡ್ಡ ಕರಡಿಯ ಬೋನಿನಲ್ಲಿ ಕಳೆಯಬೇಕಲ್ಲವೇ, ಹೇಗಿದ್ದರೂ ಕರಡಿಯಂತೂ ಇವನನ್ನು ಉಳಿಸುವುದಿಲ್ಲ ಎಂದು ನೆಮ್ಮದಿ ತಳೆದಳು.

ಆ ದಿನ ರಾತ್ರಿಯಾಯಿತು, ದರ್ಜಿಯನ್ನು ಕರೆತಂದು ಕರಡಿಯ ಬೋನಿನೊಳಗೆ ಬಿಡಲಾಯಿತು. ತನ್ನಷ್ಟಕ್ಕೆ ಮಲಗಿದ್ದ ಕರಡಿ ಇವನನ್ನು ನೋಡಿ, ಎದ್ದು ಕುಳಿತು ಆಕಳಿಸಿತು. ಇವನು ಬೋನಿನ ಬಾಗಿಲ ಬಳಿಯೇ ಕಾಲು ಚಾಚಿ ಕುಳಿತ. ತನ್ನ ಕಿಸೆಯಲ್ಲಿದ್ದ ಯಾವುದೋ ಬೀಜವನ್ನು ತೆಗೆದು, ಅದರ ಚಿಪ್ಪನ್ನು ಹಲ್ಲುಗಳಲ್ಲಿ ʻಕಟಂʼ ಎಂದು ಕತ್ತರಿಸಿ ಮೆಲ್ಲತೊಡಗಿದ. ಆ ಬೀಜದ ಪರಿಮಳಕ್ಕೆ ಕರಡಿ ತನಗೂ ಬೇಕೆಂಬಂತೆ ಕೈಯೊಡ್ಡಿತು. ಇನ್ನೊಂದು ಕಿಸೆಯಿಂದ ಒಂದೆರಡು ಗೋಲಿಗಳನ್ನು ತೆಗೆದು ಅದರ ಕೈ ಮೇಲಿಟ್ಟ. ಅದನ್ನು ಬಾಯಿಗೆಸೆದುಕೊಂಡ ಕರಡಿಗೆ ಎಷ್ಟೇ ಪ್ರಯತ್ನಿಸಿದರೂ ಅದನ್ನು ಒಡೆದು ʻಕಟಂʼ ಮಾಡುವುದಕ್ಕೆ ಆಗಲೇ ಇಲ್ಲ. ಈತ ಮತ್ತೆ ತನ್ನ ಕಿಸೆಯಲ್ಲಿದ್ದ ಬೀಜಗಳನ್ನು ಬಾಯಿಗೆ ಹಾಕಿ, ಅದರ ಚಿಪ್ಪನ್ನು ಕಟಂ ಮಾಡಿ ತಿನ್ನತೊಡಗಿದ. ಕರಡಿಗೆ ಗಾಬರಿಯಾಯಿತು. ತನ್ನಿಂದ ಒಡೆಯುವುದಕ್ಕಾಗದ ಬೀಜಗಳನ್ನು ಈತ ಇಷ್ಟೊಂದು ಸಲೀಸಾಗಿ ಒಡೆಯುತ್ತಿದ್ದಾನಲ್ಲ, ಇವನ ಶಕ್ತಿ ಎಷ್ಟಿರಬಹುದು ಎನಿಸಿತು. ಹಾಗಾಗಿ ಆತನ ತಂಟೆಗೇ ಹೋಗದೆ ಸುಮ್ಮನೆ ಕುಳಿತಿತು ಕರಡಿ.

ಇದನ್ನೂ ಓದಿ : ಮಕ್ಕಳ ಕಥೆ: ಸನ್ಯಾಸಿ ಮತ್ತು ಇಲಿ

ಆತ ತನ್ನ ಕೋಟಿನ ಕಿಸೆಯಿಂದ ಕೊಳಲೊಂದನ್ನು ತೆಗೆದು ನುಡಿಸತೊಡಗಿದ. ಬೇಸರದಲ್ಲಿ ಕುಳಿತಿದ್ದ ಕರಡಿಗೆ ಈ ಸಂಗೀತ ಕೇಳಿ ಖುಷಿಯಾಗತೊಡಗಿತು. ಮೆಲ್ಲಗೆ ಆತನ ಬಳಿ ಬಂತು. ಕೊಳಲನ್ನು ತನ್ನ ಕೈಗೆತ್ತಿಕೊಂಡು ಊದಲು ನೋಡಿತು. ಎಷ್ಟು ಪ್ರಯತ್ನಿಸಿದರೂ ಅದಕ್ಕೆ ಶಬ್ದವನ್ನೇ ಹೊರಡಿಸಲಾಗಲಿಲ್ಲ. ಹಾಗಾಗಿ ಈತ ತುಂಬಾ ವಿಶೇಷ ವ್ಯಕ್ತಿ ಅನಿಸಿತು ಪಾಪದ ಪ್ರಾಣಿಗೆ. ಆತ ಮತ್ತೆ ಮತ್ತೆ ಕೊಳಲೂದತೊಡಗಿದ ಕರಡಿ ತಲೆದೂಗಿತು. ಎದ್ದು ಕುಣಿಯಿತು. ಕುಣಿದೂ ಕುಣಿದೂ ಸುಸ್ತಾಗಿ ನಡುರಾತ್ರಿಯ ಹೊತ್ತಿಗೆ ನಿದ್ದೆ ಹೋಯ್ತು. ಎಷ್ಟೋ ದಿನಗಳಿಂದ ಅದಕ್ಕೆ ಯಾವುದೇ ಮನರಂಜನೆ ಇಲ್ಲದೆ ಬೇಸರವಾಗಿತ್ತು. ಆ ರಾತ್ರಿಯ ಕೊಳಲಿನ ನಾದದಿಂದ ಕರಡಿಗೆ ತುಂಬಾ ಸಂತೋಷವಾಗಿತ್ತು.
ಬೆಳಗಾಯಿತು. ಹೇಗಿದ್ದರೂ ಕರಡಿ ಈ ದರ್ಜಿಯನ್ನು ಬಿಡುವುದಿಲ್ಲ ಎಂದು ನೆಮ್ಮದಿಯಿಂದ ಮಲಗಿದ್ದ ರಾಜಕುಮಾರಿಗೆ ಅಚ್ಚರಿ ಕಾದಿತ್ತು. ಕೂದಲೂ ಕೊಂಕದಂತೆ ಸುರಕ್ಷಿತವಾಗಿದ್ದ ಆತ, ರಾಜಕುಮಾರಿಯ ಎದುರಿಗಿದ್ದ. ಕರಡಿ ತನ್ನನ್ನೇನೂ ಮಾಡಲಿಲ್ಲ ಎಂಬ ದರ್ಜಿಯ ಮಾತನ್ನು ನಂಬದ ರಾಜನ ಮಗಳು, ಆತನನ್ನು ತನ್ನೆದುರಿಗೇ ಕರಡಿಯ ಬೋನಿಗೆ ಹಾಕುವಂತೆ ಹೇಳಿದಳು. ತನ್ನ ಬೋನಿನೊಳಗೆ ಬಂದ ಈತನನ್ನು ಕರಡಿ ಪ್ರೀತಿಯಿಂದ ನೆಕ್ಕಿತು. ಇದನ್ನು ಕಂಡ ರಾಜಕುಮಾರಿಗೆ ಇನ್ನಷ್ಟು ಅಚ್ಚರಿಯಾಯಿತು.

ನಿನ್ನ ಮಾತಿಗೆ ನೀನೇ ತಪ್ಪುವಂತಿಲ್ಲ ಎಂದು ರಾಜ ಎಚ್ಚರಿಸಿದ. ಮಾತ್ರವಲ್ಲ, ದರ್ಜಿಯ ಜಾಣತನ ರಾಜನಿಗೆ ಮೆಚ್ಚುಗೆಯಾಗಿತ್ತು. ಆತ ತನ್ನ ಮಗಳನ್ನು ದರ್ಜಿಯೊಂದಿಗೆ ಮದುವೆ ಮಾಡಿಸಿದ.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಸನ್ಯಾಸಿ ಮತ್ತು ಇಲಿ

ಸಿಕ್ಕಸಿಕ್ಕಲ್ಲಿ ಸನ್ಯಾಸಿ ಕೋಲಿಟ್ಟುಕೊಂಡು ಇಲಿಗೆ ಬಡಿಯುತ್ತಿದ್ದ. ಆದರೆ ಆತನನ್ನು ದೇಗುಲದ ತುಂಬೆಲ್ಲಾ ಓಡಾಡಿಸುತ್ತಿತ್ತೇ ಹೊರತು, ಕೋಲಿನ ಪೆಟ್ಟಿನಿಂದ ಸರಾಗವಾಗಿ ತಪ್ಪಿಸಿಕೊಳ್ಳುತ್ತಿತ್ತು. ಸನ್ಯಾಸಿಗಂತೂ ಇಲಿ ಕಾಟದಿಂದ ಸಾಕುಸಾಕಾಗಿತ್ತು. ಮುಂದೆ? ಓದಿ, ಈ ಮಕ್ಕಳ ಕಥೆ.

VISTARANEWS.COM


on

sanyasi and rat children story
Koo

ಈ ಕಥೆಯನ್ನು ಇಲ್ಲಿ ಆಲಿಸಿ:

ಒಂದೂರಿನ ಹೊರಗೊಂದು ದೇವಸ್ಥಾನವಿತ್ತು. ಅಲ್ಲೊಬ್ಬ ಸನ್ಯಾಸಿ ವಾಸವಾಗಿದ್ದ. ಅವನು ಊರಿನವರಿಗೆಲ್ಲಾ ಪರಿಚಿತ ಆಗಿದ್ದು ಸನ್ಯಾಸಿಗಿಂತಲೂ ಒಬ್ಬ ವೈದ್ಯನಾಗಿ. ತುಂಬಾ ವರ್ಷಗಳ ಕಾಲ ದೇಶಾಂತರ ಹೋಗಿದ್ದ ಆತ, ಯಾವ್ಯಾವುದೋ ಊರಿನ ಏನೇನೋ ಔಷಧಗಳ ಬಗ್ಗೆ ತಿಳಿದುಕೊಂಡಿದ್ದ. ಸುತ್ತ ಹತ್ತೂರಲ್ಲಿ ಯಾರಿಗೂ ಗೊತ್ತಿಲ್ಲದ ಗಿಡ-ಮೂಲಿಕೆಗಳೆಲ್ಲಾ ಆತನಿಗೆ ಗೊತ್ತಿದ್ದವು. ಹಾಗಾಗಿ ಸುತ್ತಮುತ್ತಲ ಜನರೆಲ್ಲಾ ಆತನಲ್ಲಿ ಔಷಧಿ ಕೇಳಿಕೊಂಡು ಬರ್ತಾ ಇದ್ದರು. ಔಷಧಿ ಕೇಳಿಕೊಂಡು ಬಂದವರು ತಾವಾಗಿಯೇ ಏನಾದರೂ ಕೊಟ್ಟರೆ ಆತ ತೆಗೆದುಕೊಳ್ತಾ ಇದ್ದ. ಹಾಗೆ ಜನರಿಂದ ಸ್ವೀಕರಿಸಿದ ಕಾಣಿಕೆಯನ್ನು ತನ್ನ ಅಗತ್ಯಕ್ಕೆ ಬೇಕಷ್ಟು ಬಳಸಿಕೊಂಡು, ಉಳಿದಿದ್ದನ್ನು ಆತ ಆ ದೇವಸ್ಥಾನದಲ್ಲಿ ಕೆಲಸ ಮಾಡ್ತಾ ಇದ್ದವರಿಗೆ ಕೊಡ್ತಾ ಇದ್ದ.

ಈವರೆಗೆ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಆ ದೇವಾಲಯದ ಆವರಣದಲ್ಲಿ ಇಲಿಯೊಂದು ಬಂದು ಸೇರಿಕೊಂಡಿತ್ತು. ಬಿಲ ಮಾಡಿಕೊಂಡಿದ್ದರೆ ತೊಂದರೆಯಿಲ್ಲ, ಅದರದ್ದು ಒಂದೆರಡೇ ಅಲ್ಲ ಉಪಟಳ! ಸನ್ಯಾಸಿಯ ಭಕ್ತರು ಅಥವಾ ರೋಗಿಗಳು ನೀಡಿದ್ದ ಧವಸ-ಧಾನ್ಯಗಳ ಕಾಣಿಕೆಗೆ ಕನ್ನ ಹಾಕುತ್ತಿತ್ತು; ಆತ ಔಷಧಿಗಾಗಿ ಒಣಗಿಸಿಟ್ಟುಕೊಂಡಿದ್ದ ನಾರು-ಬೇರುಗಳನ್ನು ಮಾಯ ಮಾಡುತ್ತಿತ್ತು; ಆತ ಸಂಗ್ರಹಿಸಿದ್ದ ಕಾಯಿಗಳನ್ನು ಮುರಿದು ಮುಕ್ಕುತ್ತಿತ್ತು; ಕಾಯಿಸಿಟ್ಟಿದ್ದ ಲೇಹಗಳ ರುಚಿ ನೋಡುತ್ತಿತ್ತು. ಸನ್ಯಾಸಿ ಮಾಡುವುದೆಲ್ಲವೂ ತನ್ನದೇ ಪೋಷಣೆಗಾಗಿ ಎಂಬಂತೆ ರಾಜಾರೋಷವಾಗಿ ಲೂಟಿ ಮಾಡುತ್ತಿತ್ತು.

ತನ್ನ ಔಷಧಿ ವಸ್ತುಗಳನ್ನು ರಕ್ಷಿಸಿಕೊಳ್ಳಲು ಸನ್ಯಾಸಿ ಒದ್ದಾಡುತ್ತಿದ್ದ. ಔಷಧೀಯ ಹಣ್ಣ-ಕಾಯಿಗಳು ಮತ್ತು ಬೇರು-ನಾರುಗಳನ್ನು ಎಲ್ಲೆಲ್ಲೋ ಬಚ್ಚಿಡುತ್ತಿದ್ದ. ಕಾಯಿಸಿದ್ದ ಲೇಹಗಳನ್ನು ಗಡಿಗೆಗಳಲ್ಲಿ ಹಾಕಿ ಗೋಕುಲದ ಗೋಪಿಕೆಯರಂತೆ ನೆಲುವಿನಲ್ಲಿ ತೂಗಾಡಿಸುತ್ತಿದ್ದ. ತಮ್ಮ ಕಾಣಿಕೆಗೆಂದು ಬಂದ ಧವಸ-ಧಾನ್ಯಗಳನ್ನಂತೂ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದ. ಇಲಿ ಹಿಡಿಯುವುದಕ್ಕಾಗಿ ಆತ ಬೆಕ್ಕೊಂದನ್ನು ಸಾಕಿದ್ದರೆ, ಆ ಬೆಕ್ಕನ್ನೇ ಹೆದರಿಸುತ್ತಿತ್ತು ಇಲಿ. ಸಿಕ್ಕಸಿಕ್ಕಲ್ಲಿ ಸನ್ಯಾಸಿ ಕೋಲಿಟ್ಟುಕೊಂಡು ಇಲಿಗೆ ಬಡಿಯುತ್ತಿದ್ದ. ಆದರೆ ಆತನನ್ನು ದೇಗುಲದ ತುಂಬೆಲ್ಲಾ ಓಡಾಡಿಸುತ್ತಿತ್ತೇ ಹೊರತು, ಕೋಲಿನ ಪೆಟ್ಟಿನಿಂದ ಸರಾಗವಾಗಿ ತಪ್ಪಿಸಿಕೊಳ್ಳುತ್ತಿತ್ತು. ಸನ್ಯಾಸಿಗಂತೂ ಇಲಿ ಕಾಟದಿಂದ ಸಾಕುಸಾಕಾಗಿತ್ತು.

ಇದೇ ದಿನಗಳಲ್ಲಿ ಇನ್ನೊಬ್ಬ ಸನ್ಯಾಸಿ ಆ ಊರಿಗೆ ಬಂದ. ದೇಶ-ದೇಶಗಳನ್ನು ಸುತ್ತಿ ಬಂದಿದ್ದ ಆತನಿಗೆ ಆ ರಾತ್ರಿ ಉಳಿಯುವುದಕ್ಕೆ ಜಾಗವೊಂದು ಬೇಕಿತ್ತು. ಊರಾಚೆಯ ದೇಗುಲಕ್ಕೆ ಆತ ಬಂದ. ಬಂದಂಥ ಹೊಸ ಸನ್ಯಾಸಿಯನ್ನು ಬರಮಾಡಿಕೊಳ್ಳುವ ಗೋಜೂ ಇಲ್ಲದಂತೆ ಇಲಿಯ ಹಿಂದೆ ಓಡುತ್ತಿದ್ದ ವೈದ್ಯ ಸನ್ಯಾಸಿ. ಹೊಸ ಸನ್ಯಾಸಿಯ ಯಾವ ಮಾತುಗಳನ್ನೂ ಸರಿಯಾಗಿ ಕೇಳಿಸಿಕೊಳ್ಳದಷ್ಟು ಚಿಂತೆಯಲ್ಲಿದ್ದ ವೈದ್ಯನನ್ನು ಕಂಡ ಹೊಸಬ, ವಿಷಯವೇನು ಎಂದು ಕೇಳಿದ.

ʻಏನು ಹೇಳಲಿ ಮಹಾತ್ಮ! ಲೋಕದೆಲ್ಲಾ ಚಿಂತೆಗಳನ್ನು ಬಿಟ್ಟು, ನಿಮ್ಮಂತೆಯೇ ದೇಶಾಂತರ ಮಾಡಿ, ಈಗ ವಯಸ್ಸಾಯಿತು ಎಂಬ ಕಾರಣಕ್ಕೆ ಈ ಊರಾಚೆಗಿನ ದೇವಾಲಯದಲ್ಲಿ ತಂಗಿದ್ದೇನೆ. ನನಗೆ ತಿಳಿದಿರುವ ಅಲ್ಪಸ್ವಲ್ಪ ವೈದ್ಯ ವೃತ್ತಿಯನ್ನೂ ಮಾಡಿಕೊಂಡು, ಊರಿನವರಿಗೆ ಉಪಕಾರಿಯಾಗಿದ್ದೇನೆ. ಆದರೆ ನನ್ನ ಗ್ರಹಚಾರಕ್ಕೆ ಇಲಿಯೊಂದು ಗಂಟುಬಿದ್ದಿದೆ ಸ್ವಾಮಿ. ಎಷ್ಟು ಪ್ರಯತ್ನ ಮಾಡಿದರೂ ಅದನ್ನು ದೇವಾಲಯದ ಪ್ರಾಂಗಣದಿಂದ ಓಡಿಸಲಾಗುತ್ತಿಲ್ಲ. ಮಾತ್ರವಲ್ಲ, ನನ್ನ ಔಷಧೀಯ ಮೂಲಿಕೆಗಳನ್ನೂ ನನಗೆ ಅದರಿಂದ ರಕ್ಷಿಸಿಕೊಳ್ಳಲಾಗುತ್ತಿಲ್ಲ. ರೋಗಿಗಳು ನೆರವು ಕೇಳಿ ಬಂದಾಗ, ನನ್ನಲ್ಲಿ ಮೂಲಿಕೆಗಳೇ ಇಲ್ಲದಿದ್ದರೆ ಏನು ಔಷಧಿ ಕೊಟ್ಟೇನು ನಾನು?ʼ ಎಂದು ಆತ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡ.

ಇದನ್ನೂ ಓದಿ: ಮಕ್ಕಳ ಕಥೆ: ಕೆಂಪಂಗಿ ಚಿಣ್ಣಿ

ʻಸ್ವಾಮಿಗಳೇ! ನಿಮ್ಮ ಕಷ್ಟ ನನಗೆ ಅರ್ಥ ಆಯ್ತು. ಬೆಕ್ಕು, ಬಡಿಗೆ ಅಂತ ಯಾವುದಕ್ಕೂ ಬಗ್ಗದ ಈ ಇಲಿಯನ್ನು ಹಾಗೆಯೇ ಮಟ್ಟ ಹಾಕೋದಕ್ಕೆ ಆಗೋದಿಲ್ಲ ಅನ್ಸತ್ತೆ. ಅದರ ಬಿಲವನ್ನು ಮೊದಲು ಪತ್ತೆ ಮಾಡೋಣ. ನಿಮ್ಮಿಂದ ಕದ್ದಿರುವ ಆಹಾರವನ್ನೆಲ್ಲಾ ಅದು ಅಲ್ಲಿಯೇ ಅಡಗಿಸಿಟ್ಟಿರಬೇಕು. ಶತ್ರು ಸಣ್ಣದಾದರೇನು, ಅದರ ಮೂಲ ಸಣ್ಣದಾಗದೇ ಇರಬಹುದು. ಹಾಗಾಗಿ ಅದನ್ನು ನಾವು ಮೊದಲು ಕಂಡುಹಿಡಿದರೆ ಇಲಿಯ ಬಲವನ್ನು ಕುಗ್ಗಿಸಬಹುದುʼ  ಅಂತ ಹೇಳಿದ ಹೊಸ ಸನ್ಯಾಸಿ. ವೈದ್ಯ ಸನ್ಯಾಸಿಗೂ ಈ ಮಾತು ಹೌದು ಅನಿಸಿತು.

ಅಂದು ಮತ್ತೆ ಇಲಿ ಕಾಣಿಸಿಕೊಂಡಾಗ, ಅದನ್ನು ಹೊಡೆಯುವುದಕ್ಕೆಂದು ಬೆನ್ನಟ್ಟದೇ ಉಪಾಯದಿಂದ ಹಿಂಬಾಲಿಸಿದರು. ತನಗೆ ಬೇಕಾದ್ದನ್ನೆಲ್ಲಾ ತೆಗೆದುಕೊಂಡ ಇಲಿ, ದೇವಸ್ಥಾನದ ಹೊರಗೋಡೆಯ ಮೂಲೆಯಲ್ಲಿದ್ದ ತನ್ನ ಬಿಲದೊಳಗೆ ಹೋಯಿತು. ಕೂಡಲೇ ದೊಡ್ಡ ಹಾರೆಗಳಿಂದ ಆ ಬಿಲವನ್ನು ಅಗೆದು ನೋಡಿದ ಸನ್ಯಾಸಿ. ಅದರೊಳಗೆ ಏನೇನೋ ಕಾಯಿ, ಬೀಜ, ನಾರು-ಬೇರುಗಳಿಂದ ಹಿಡಿದು ಸಾಕಷ್ಟು ವಸ್ತುಗಳನ್ನು ಇಲಿ ದಾಸ್ತಾನು ಮಾಡಿಕೊಂಡಿತ್ತು. ತನ್ನ ಮೇಲೆ ಮಾತ್ರವೇ ಆಕ್ರಮಣ ಮಾಡುತ್ತಾರೆಂದು ತಿಳಿದಿದ್ದ ಇಲಿಗೆ, ಈಗ ತನ್ನ ಬಿಲದ ಮೇಲೂ ಪ್ರಹಾರ ಮಾಡಿದ್ದು ಅನಿರೀಕ್ಷಿತವಾಗಿತ್ತು. ಕೋಲಿನಿಂದ ಬಿದ್ದ ಒಂದೇ ಪೆಟ್ಟಿಗೆ ಇಲಿ ತತ್ತರಿಸಿತು. ಅದರ ಜೀವ ಹೋಗದಿದ್ದರೂ, ಈ ಪ್ರಹಾರಕ್ಕೆ ಇಲಿ ಕಂಗಾಲಾಗಿತ್ತು. ಜೀವದಾಸೆಯಿಂದ ಈ ಸ್ಥಳವನ್ನೇ ಬಿಟ್ಟು ಓಡಿಹೋಯಿತು. ಅಂದಿನಿಂದ ವೈದ್ಯ ಸನ್ಯಾಸಿಗೆ ಔಷಧಿ ದಾಸ್ತಾನಿನ ಚಿಂತೆ ಕಾಡಲಿಲ್ಲ.

ಇದನ್ನೂ ಓದಿ: ಮಕ್ಕಳ ಕಥೆ: ಹಳ್ಳಿ ಇಲಿ ಮತ್ತು ಪಟ್ಟಣದ ಇಲಿ

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಕೆಂಪಂಗಿ ಚಿಣ್ಣಿ

ಪೇಟೆಯ ಬೀದಿಯ ಸುತ್ತಲೇ ಠಳಾಯಿಸುತ್ತಿದ್ದ ಖದೀಮನೊಬ್ಬನಿಗೆ ಈ ಎಳೆ ಹುಡುಗಿ ಕಂಡಳು. ಅವಳ ಕೈಯಲ್ಲೊಂದು ಬುಟ್ಟಿಯೂ ಕಂಡಿತು. ತನಗೆ ಆಗುವಂಥದ್ದು ಏನಾದರೂ ಆ ಬುಟ್ಟಿಯಲ್ಲಿ ಇರಬಹುದು ಎಂಬ ನಿರೀಕ್ಷೆಯಿಂದ ಆತ ಗುಟ್ಟಾಗಿ ಹಿಂಬಾಲಿಸತೊಡಗಿದ. ಮುಂದೆ? ಓದಿ, ಈ ಮಕ್ಕಳ ಕಥೆ.

VISTARANEWS.COM


on

little red children story
Koo

ಈ ಕಥೆಯನ್ನು ಇಲ್ಲಿ ಆಲಿಸಿ:

ಬ್ರಿಟನ್‌ ದೇಶದ ಒಂದೂರು. ಆ ಊರಿನ ಅಂಚಿನಲ್ಲಿ ಪುಟ್ಟ ಹುಡುಗಿಯೊಬ್ಬಳು ತನ್ನ ತಂದೆ-ತಾಯಿಯೊಂದಿಗೆ ವಾಸ ಮಾಡ್ತಾ ಇದ್ದಳು. ಅದೇ ಊರಿನ ಮತ್ತೊಂದು ತುದಿಯಲ್ಲಿ, ಆ ಹುಡುಗಿಯ ಅಜ್ಜಿಯ ಮನೆಯಿತ್ತು. ಊರಿನ ತುದಿಯಲ್ಲಿ ಅಂದರೆ, ಊರು ದಾಟಿ ಸ್ವಲ್ಪ ಕಾಡಂಚಿನಲ್ಲಿತ್ತು ಅಜ್ಜಿಯ ಮನೆ. ಊರಲ್ಲಿ ಎಲ್ಲರಿಗೂ ಬೇಕಾದವಳಾಗಿ, ಎಲ್ಲರೊಂದಿಗೂ ಚೆನ್ನಾಗಿ ಮಾತಾಡ್ತಾ ಇದ್ದಳು ಈ ಹುಡುಗಿ. ಅವಳಿಗೊಂದು ಹೆಸರು ಇರಬೇಕಲ್ವ? ತನ್ನ ಅಜ್ಜಿ ಹೊಲಿದು ಕೊಟ್ಟಿದ್ದ ಕೆಂಪುಬಣ್ಣದ ಫ್ರಾಕ್‌ ಧರಿಸುವುದು ಅವಳಿಗೆ ಪ್ರಿಯವಾಗಿದ್ದರಿಂದ, ಹೆಚ್ಚಾಗಿ ಕೆಂಪು ಫ್ರಾಕ್‌ನಲ್ಲೇ ಆಕೆ ಇರುತ್ತಿದ್ದರು. ಹಾಗಾಗಿ ಊರಲ್ಲಿ ಎಲ್ಲರೂ ಆಕೆಯನ್ನು ಕೆಂಪಂಗಿ ಚಿಣ್ಣಿ ಎಂದು ಕರೆಯುತ್ತಿದ್ದರು.

ಒಂದು ಸಾರಿ ಆಕೆಯ ಅಜ್ಜಿಗೆ ಜ್ವರ, ನೆಗಡಿ, ಕೆಮ್ಮು ಎಲ್ಲಾ ಆಗೋಯ್ತು. ಪಾಪ! ಒಬ್ಬಳೇ ಮನೆಯಲ್ಲಿ ಇರುವುದರಿಂದ ಸ್ವಲ್ಪ ಸಹಾಯವಾಗಲಿ ಆಕೆಗೆ ಅಂತ ಯೋಚಿಸಿದ ಕೆಂಪಂಗಿ ಚಿಣ್ಣಿಯ ಅಮ್ಮ, ಒಂದಿಷ್ಟು ಕೇಕ್‌ಗಳನ್ನು ಸಿದ್ಧ ಮಾಡಿ ಒಂದು ಬುಟ್ಟಿಗೆ ತುಂಬಿಸಿದರು. ಜೊತೆಗೆ ಚಕ್ಕೆ ಮತ್ತು ಶುಂಠಿ ಹಾಕಿ ಮಾಡಿದ ಕಟುವಾದ ಪೆಪ್ಪರ್ಮಿಂಟುಗಳನ್ನು ಒಂದು ಸಣ್ಣ ಡಬ್ಬಿಗೆ ತುಂಬಿಸಿ, ಆ ಬುಟ್ಟಿಯಲ್ಲಿಟ್ಟರು. ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅಜ್ಜಿಗೆ ಸ್ವಲ್ಪ ಬೇಗ ಗುಣವಾಗಲಿ ಎಂದು ಇದನ್ನೆಲ್ಲಾ ಅಮ್ಮ ಮಾಡಿದ್ದರು. ಕೆಂಪಂಗಿ ಚಿಣ್ಣಿಯನ್ನು ಕರೆದು- “ನಿನ್ನಜ್ಜಿಗೆ ಆರಾಮಿಲ್ಲ. ಅವರಿಗೆ ಬೇಗ ಆರಾಮಾಗಲಿ ಎಂದು ಒಂದಿಷ್ಟು ಕೇಕ್‌ ಮಾಡಿರಿಸಿದ್ದೇನೆ ಈ ಬುಟ್ಟಿಯಲ್ಲಿ. ಜೊತೆಗೆ ನೆಗಡಿ, ಕೆಮ್ಮಿಗಾಗಿ ಒಳ್ಳೆಯ ಕಟುವಾದ ಶುಂಠಿ ಪೆಪ್ಪರ್ಮಿಂಟುಗಳನ್ನು ಈ ಡಬ್ಬಿಯಲ್ಲಿರಿಸಿದ್ದೇನೆ. ಒಂದು ತಿಂದರೂ ನೆಗಡಿ ವಾಸಿಯಾಗತ್ತೆ. ಇವನ್ನೆಲ್ಲಾ ಹೋಗಿ ಅಜ್ಜಿಗೆ ಕೊಟ್ಟು ಬಾ. ಆದರೆ ನೆನಪಿರಲಿ, ಎಲ್ಲೂ ದಾರಿ ತಪ್ಪಿ ಕಾಡೊಳಗೆ ಹೋಗಕೂಡದುʼ ಎಂದರು ಅಮ್ಮ.

ಅಮ್ಮ ಕೊಟ್ಟ ಬುಟ್ಟಿಯನ್ನು ಹಿಡಿದುಕೊಂಡು ಅಜ್ಜಿ ಮನೆಯ ದಾರಿ ತುಳಿದಳು ಕೆಂಪಂಗಿ ಚಿಣ್ಣಿ. ಅಜ್ಜಿ ಮನೆಗೆ ಹೋಗುವ ದಾರಿಯು ಆ ಊರಿನ ಪೇಟೆಯ ನಡುವಿನಿಂದಲೇ ಹೋಗುತ್ತಿತ್ತು. ಪೇಟೆಯಲ್ಲಿ ಹಲವಾರು ಮಂದಿ ಆಕೆಯನ್ನು ಮಾತಾಡಿಸುತಿದ್ದರು. ಎಲ್ಲರನ್ನೂ ನಗೆಮೊಗದಿಂದಲೇ ಮಾತಾಡಿಸಿ ಮುಂದುವರಿಯುತಿದ್ದಳು ಹುಡುಗಿ. ಅದೇ ಹೊತ್ತಿನಲ್ಲಿ ಪೇಟೆಯ ಬೀದಿಯ ಸುತ್ತಲೇ ಠಳಾಯಿಸುತ್ತಿದ್ದ ಖದೀಮನೊಬ್ಬನಿಗೆ ಈ ಎಳೆ ಹುಡುಗಿ ಕಂಡಳು. ಅವಳ ಕೈಯಲ್ಲೊಂದು ಬುಟ್ಟಿಯೂ ಕಂಡಿತು. ತನಗೆ ಆಗುವಂಥದ್ದು ಏನಾದರೂ ಆ ಬುಟ್ಟಿಯಲ್ಲಿ ಇರಬಹುದು ಎಂಬ ನಿರೀಕ್ಷೆಯಿಂದ ಆತ ಗುಟ್ಟಾಗಿ ಹಿಂಬಾಲಿಸತೊಡಗಿದ.

ಪೇಟೆ ಬೀದಿಯಲ್ಲಿದ್ದ ಹಣ್ಣು ಮಾರುವವ, ತರಕಾರಿ ಮಾರುವವಳು, ಸೊಪ್ಪು ಮಾರುವ ಅಜ್ಜಿ, ದರ್ಜಿ, ಮಿಠಾಯಿ ಅಂಗಡಿಯಾತ- ಹೀಗೆ ಎಲ್ಲರೊಂದಿಗೆ ಚುಟುಕು ಮಾತಾಡಿ ಆಕೆ ಮುಂದುವರಿಯುತ್ತಿರುವಾಗ ಆಕೆಯ ಬುಟ್ಟಿಯಲ್ಲಿ ರುಚಿಕರವಾದ ಕೇಕ್‌ ಇದೆ ಎಂಬುದು ಖದೀಮನಿಗೆ ತಿಳಿಯಿತು. ಅದನ್ನಾಕೆ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾಳೆ ಎಂಬುದು ಆತನಿಗೆ ತಿಳಿಯಲಿಲ್ಲ. ಬೆಳಗಿನಿಂದ ಹೊಟ್ಟೆಗೇನೂ ಬೀಳದೆ ಚೆನ್ನಾಗಿ ಹಸಿದಿದ್ದ ಆತ, ಬುಟ್ಟಿಯೊಳಗಿನ ತಿಂಡಿಯನ್ನು ಲಪಟಾಯಿಸಬೇಕು ಎಂದು ನಿರ್ಧರಿಸಿದ.

ಕೆಂಪಂಗಿ ಚಿಣ್ಣಿ ಪೇಟೆಯ ದಾರಿಯನ್ನು ದಾಟಿ ಕಾಡಿನತ್ತ ಮುಖ ಮಾಡುತ್ತಿದ್ದಂತೆಯೇ ಮೆಲ್ಲಗೆ ಆಕೆಯ ಬಳಿಗೇ ಬಂದು ಜೊತೆಯಾಗಿ ನಡೆಯತೊಡಗಿದ ಖದೀಮ. ಉಪಾಯವಾಗಿ ಚಿಣ್ಣಿಯನ್ನು ಮಾತಿಗೆಳೆದ. ಹುಷಾರಿಲ್ಲದ ತನ್ನಜ್ಜಿಗಾಗಿ ಕೇಕ್‌ ತೆಗೆದುಕೊಂಡು, ತಾನೊಬ್ಬಳೇ ಹೋಗುತ್ತಿರುವುದಾಗಿ ಚಿಣ್ಣಿ ಹೇಳಿದಳು. ಇದ್ದಕ್ಕಿದ್ದಂತೆ ಖೊಕ್‌ ಖೊಕ್‌ ಎಂದು ಕೆಮ್ಮತೊಡಗಿದ ಖದೀಮ, ತನಗೂ ನೆಗಡಿ-ಕೆಮ್ಮು, ಹುಷಾರಿಲ್ಲ. ಹಾಗಾಗಿ ಬುಟ್ಟಿಯಲ್ಲಿದ್ದ ಕೇಕ್‌ ಕೊಟ್ಟರೆ ಆರಾಮಾಗುತ್ತದೆ ಎಂದು ಕೇಳಿದ. ʻಆದರೆ ಇದನ್ನು ತಂದಿದ್ದು ಅಜ್ಜಿಗಾಗಿ. ಹಾಗೆಲ್ಲಾ ಕೊಡಲಾಗದುʼ ಎಂದಳು ಹುಡುಗಿ. ಅವಳು ಕೊಡುವುದಿಲ್ಲ ಎಂಬುದನ್ನು ತಿಳಿದ ಖದೀಮ, ಅವಳ ದಾರಿಯನ್ನು ಬಿಟ್ಟು ಅಡ್ಡದಾರಿ ಹಿಡಿದು ಅವಳಗಿಂತ ಬೇಗನೇ ಅಜ್ಜಿಮನೆ ಸೇರಿದ.

ʻಅಜ್ಜಮ್ಮಾ ಅಜ್ಜಮ್ಮಾ… ಬಾಗಿಲು ತೆಗೀʼ ಎಂದು ಕೂಗಿದ ಕಳ್ಳಧ್ವನಿಯಲ್ಲಿ ಕೂಗಿದ ಕಳ್ಳ.

ʻಯಾರದು ಬಂದಿದ್ದು?ʼ ಕೇಳಿದರು ಅಜ್ಜಮ್ಮ

ʻನಾನು…. ನಿನ್ನ ಮೊಮ್ಮಗಳು. ನಿನಗಾಗಿ ರುಚಿಕರ ತಿಂಡಿ ತಂದಿದ್ದೇನೆʼ

ʻಬಾಗಿಲು ತೆಗೆದೇ ಇದೆ, ಬಾ ಮರೀ…ʼ ಹೇಳಿದರು ಅಜ್ಜಿ.

ಬಾಗಿಲೊಳಗೆ ಕುಪ್ಪಳಿಸಿದ ಖದೀಮ, ನೇರವಾಗಿ ಅಜ್ಜಿ ಮಲಗಿದ್ದ ಮಂಚಕ್ಕೆ ನಡೆದ. ಅಜ್ಜಿಯ ಕೈ-ಕಾಲು-ಬಾಯಿಗಳನ್ನು ಕಟ್ಟಿ, ಮಂಚದಡಿಗೆ ಉರುಳಿಸಿದ. ತಾನು ಅಜ್ಜಿಯ ವಸ್ತ್ರಗಳನ್ನು ತೊಟ್ಟು ಮುಸುಕಿಕ್ಕಿ ಮಲಗಿಬಿಟ್ಟ. ಇದ್ಯಾವುದನ್ನೂ ಅರಿಯದ ಕೆಂಪಂಗಿ ಚಿಣ್ಣಿ ಅಜ್ಜಿ ಮನೆಗೆ ಬಂದಳು.

ಅರೆ! ಬಾಗಿಲು ತೆರೆದೇ ಇದೆಯಲ್ಲ ಎಂದು ಸೋಜಿಗಪಡುತ್ತಾ ಒಳಗೆ ನಡೆದ ಚಿಣ್ಣಿಗೆ ಮಂಚದ ಮೇಲೆ ಅಜ್ಜಿ ಮುಸುಕಿಕ್ಕಿ ಮಲಗಿದ್ದು ಕಾಣಿಸಿತು. ʻಅಜ್ಜೀ… ನಿನ್ನ ಮೊಮ್ಮಗಳು ಬಂದಿದ್ದೀನಿ, ಮುಸುಕು ತೆಗಿʼ ಎಂದಳು ಕೆಂಪಂಗಿ ಚಿಣ್ಣಿ. ʻಆಗದು!ʼ ಎಂದ ಅಜ್ಜಿ ರೂಪದಲ್ಲಿದ್ದ ಖದೀಮ.

ʻಅಜ್ಜೀ, ನಿನ್ನ ಧ್ವನಿ ಎಷ್ಟು ದೊಡ್ಡದಾಗಿದೆ!ʼ ಎಂದಳು ಚಿಣ್ಣಿ.

ʻನಿನ್ನನ್ನು ಕರೆಯೋದಕ್ಕೆ ಮರೀʼ ಎಂದು ರಾಗವಾಗಿ ಸುಳ್ಳಜ್ಜಿ.

ʻಅಜ್ಜೀ, ನಿನ್ನ ಕೈಗಳು ಎಷ್ಟು ದಪ್ಪವಾಗಿವೆ!ʼ ಅಚ್ಚರಿಪಟ್ಟಳು ಚಿಣ್ಣಿ.

ʻನಿನ್ನ ಎತ್ತಿಕೊಳ್ಳೋದಕ್ಕೆ ಮರಿʼ ಎಂದಳು ಸುಳ್ಳಜ್ಜಿ

ʻಅಜ್ಜೀ, ನಿನ್ನ ಹೊಟ್ಟೆ ಎಷ್ಟೊಂದು ಡುಮ್ಮಕ್ಕಿದೆ!ʼ ಆಶ್ಚರ್ಯಪಟ್ಟಳು ಹುಡುಗಿ

ʻನಿನ್ನ ತಿಂಡಿಯನ್ನೆಲ್ಲಾ ತಿಂದು ಹಾಕುವುದಕ್ಕೆʼ ಎಂದು ಕರ್ಕಶವಾಗಿ ಹೇಳಿದ ಖದೀಮ, ತನ್ನ ಮುಸುಕು ತೆಗೆದವನೇ ಚಿಣ್ಣಿಯ ಕೈಯಲ್ಲಿದ್ದ ಬುಟ್ಟಿಯ ಮುಚ್ಚಳ ಕಿತ್ತು, ಕೈಗೆ ಸಿಕ್ಕಿದ್ದನ್ನು ಬಾಯಿಗೆ ಸುರಿದುಕೊಂಡ. ಎಂಥಾ ಕೆಲಸ ಆಯ್ತು ಅಂತೀರಾ!!

ಇದನ್ನೂ ಓದಿ: ಮಕ್ಕಳ ಕಥೆ: ಹಳ್ಳಿ ಇಲಿ ಮತ್ತು ಪಟ್ಟಣದ ಇಲಿ

ಅಜ್ಜಿಯ ನೆಗಡಿ-ಕೆಮ್ಮಿಗಾಗಿ ಇರಿಸಿದ್ದ ಶುಂಠಿ ಪೆಪ್ಪರ್ಮಿಂಟಿನ ಇಡೀ ಡಬ್ಬಿಯನ್ನೇ ಆತ ಬಾಯಿಗೆ ಸುರಿದುಕೊಂಡಿದ್ದ! ಮೊದಲಿಗೆ ಒಂದೆರಡು ಕ್ಷಣ ಏನೂ ತಿಳಿಯಲಿಲ್ಲ. ಆಮೇಲಾಮೇಲೆ ಬಾಯಿಯ ಉರಿ ಹೆಚ್ಚುತ್ತಲೇ ಹೋಯ್ತು. ʻಖಾರಾ… ಖಾರಾ…ʼ ಎಂದು ಬೊಬ್ಬೆ ಹೊಡೆಯುತ್ತಾ, ಕೆಮ್ಮುತ್ತಾ ಕ್ಯಾಕರಿಸುತ್ತಾ ಕುಣಿದಾಡಿದ ಖದೀಮ. ʻನೀರು, ನೀರುʼ ಎನ್ನುತ್ತಾ ಹೊರಗೋಡಿ, ಅಲ್ಲಿ ಬಾವಿಯಿಂದ ನೀರು ಸೇದಿ ಸೇದಿ ಕುಡಿಯತೊಡಗಿದ. ಶುಂಠಿ ಪೆಪ್ಪರ್ಮಿಂಟಿನ ಬಾಯಿಗೆ ನೀರು ತಾಗುತ್ತಲೇ ಉರಿ ಇನ್ನೂ ಹೆಚ್ಚಾಗಿ, ಬಾಯಿ-ಗಂಟಲು-ಎದೆಯೆಲ್ಲಾ ಉರಿ ಹತ್ತಿ ಚೀರಾಡುತ್ತಾ ಕಾಡಿನತ್ತ ಓಡಿದ ಕಳ್ಳ.

ಇದನ್ನೆಲ್ಲಾ ನೋಡುತ್ತಾ ಕಲ್ಲಿನಂತೆ ನಿಂತಿದ್ದಳು ಚಿಣ್ಣಿ. ಆತ ಓಡಿಹೋದ ಮೇಲೆ ಮಂಚದಡಿಯಿಂದ ಕ್ಷೀಣವಾದ ಧ್ವನಿಯೊಂದು ಕೇಳಿದಂತಾಯಿತು. ಬಗ್ಗಿ ನೋಡಿದರೆ… ನಿಜವಾದ ಅಜ್ಜಿ! ಲಗುಬಗೆಯಿಂದ ಆಕೆಯನ್ನು ಹೊರತೆಗೆದು ಉಪಚಾರ ಮಾಡಿದಳು ಚಿಣ್ಣಿ. ಸಂಜೆಯವರೆಗೂ ಅಲ್ಲಿಯೇ ಇದ್ದು, ಆಕೆಗೆ ಕೇಕ್‌ ತಿನ್ನಿಸಿ, ಬಿಸಿಯಾದ ಮಸಾಲೆ ಚಹಾ ಮಾಡಿಕೊಟ್ಟು ಹುಡುಗಿ ಆರೈಕೆ ಮಾಡಿದಳು. ಅಜ್ಜಿಯ ಆರೋಗ್ಯ ಚೇತರಿಸಿಕೊಂಡ ಮೇಲೆ ಕೆಂಪಂಗಿ ಚಿಣ್ಣಿಯ ಸವಾರಿ ಮನೆಯತ್ತ ಸಾಗಿತು

(ಲಿಟ್ಲ್‌ ರೆಡ್‌ ರೈಡಿಂಗ್‌ ಹುಡ್‌ ಕಥೆಯಿಂದ ಪ್ರೇರಿತ)

ಇದನ್ನೂ ಓದಿ: ಮಕ್ಕಳ ಕಥೆ: ಒವೆನ್‌ನ ಬ್ಲಾಂಕೆಟ್

Continue Reading
Advertisement
Prajwal Revanna Case
ಕರ್ನಾಟಕ3 hours ago

Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

IPL 2024
ಪ್ರಮುಖ ಸುದ್ದಿ3 hours ago

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

Chetan Chandra
ಕರ್ನಾಟಕ4 hours ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest4 hours ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ4 hours ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ5 hours ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ5 hours ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ5 hours ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ5 hours ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ5 hours ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ8 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ9 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ9 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ13 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ14 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ22 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ3 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ3 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌