ಮರೆಯಲಾಗದ ಆಟಗಾರ Andrew Simonds - Vistara News

ಕ್ರಿಕೆಟ್

ಮರೆಯಲಾಗದ ಆಟಗಾರ Andrew Simonds

Andrew Simonds ಎಂದ ಕೂಡಲೇ ಭಾರತೀಯ ಕ್ರಿಕೆಟ್‌ ಪ್ರಿಯರಿಗೆ ನೆನಪಾಗುವುದು ಆತ ಮತ್ತು ನಮ್ಮ ಹರ್ಭಜನ್‌ ಸಿಂಗ್‌ ನಡುವಿನ ಜಗಳ. ಇದನ್ನೆಲ್ಲ ಮೀರಿದ ವ್ಯಕ್ತಿತ್ವ ಮತ್ತು ಸಾಧನೆ ಆತನದು.

VISTARANEWS.COM


on

Andrew Simonds
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾರ್‌ ಅಪಘಾತದಲ್ಲಿ ಅನ್ಯಾಯವಾಗಿ ಮರಣಕ್ಕೀಡಾದ ಆಸ್ಟ್ರೇಲಿಯದ ಕ್ರಿಕೆಟರ್ Andrew Simonds ಜೊತೆ ಭಾರತಕ್ಕೆ ಹಲವು ಕನೆಕ್ಷನ್‌ಗಳಿವೆ. ಮೊದಲನೆಯದಾಗಿ ಆತ ಭಾರತ ಕ್ರಿಕೆಟ್‌ ಟೀಮಿಗೆ ಸಿಂಹಸ್ವಪ್ನವಾಗಿದ್ದ ಆಸ್ಟ್ರೇಲಿಯ ಟೀಮಿನ ಸದಸ್ಯನಾಗಿದ್ದ. ಹರ್ಭಜನ್‌ ಜೊತೆಗಿನ ʼಮಂಕಿಗೇಟ್‌ʼ ಹಗರಣವನ್ನು ಮುನ್ನೆಲೆಗೆ ತಂದವನು. ಆಸ್ಟ್ರೇಲಿಯ- ಭಾರತ ಕ್ರಿಕೆಟ್‌ ಸಂಬಂಧ ಈ ಪ್ರಕರಣದ ಬಳಿಕ ಸ್ವಲ್ಪ ಹಳಸಿದಂತಾಯಿತು. ಆದರೆ ಆ್ಯಂಡ್ರ್ಯೂ ಸೈಮಂಡ್ಸ್ ವೈಯಕ್ತಿಕ ಪ್ರತಿಭೆ ಅದನ್ನೆಲ್ಲ ಮುಚ್ಚಿಹಾಕಿತು ಎನ್ನಬಹುದು.

ನೂರಾರು ಜನ ಅಂಗಣದಲ್ಲಿ ಇದ್ದರೂ ಇವನನ್ನು ಸುಲಭವಾಗಿ ಗುರುತಿಸಬಹುದಾಗಿತ್ತು. ಅವನ ತಲೆ ಮೇಲೆ ಕೂತಿದ್ದ ಗ್ರೀನ್‌ ಕ್ಯಾಪ್‌ನ ಸಂದಿಯಿಂದ ಹೊರಬಂದು ಹಾರಾಡುತ್ತಿದ್ದ ಗುಂಗುರು ಕಪ್ಪು ಕೂದಲ ಸುರುಳಿಗಳು, ದಪ್ಪ ತುಟಿಯ ಮೇಲೆ ಬಳಿದುಕೊಂಡ ಬಿಳಿ ಝಿಂಕ್‌ ಕ್ರೀಮ್‌ಗಳು ಅವನ ಟ್ರೇಡ್‌ ಮಾರ್ಕ್‌ಗಳಾಗಿದ್ದವು. ಎತ್ತರದ ಆಳ್ತನ ಅವನದು- ಆರಡಿ ಎರಡಿಂಚಿನ ಆಸಾಮಿ.

ಇಂದು ಅಪರೂಪ ಆಗುತ್ತಿರುವ ಆಟಗಾರರ ತಳಿಯಾದ ಆಲ್‌ರೌಂಡರ್‌ ಆಗಿದ್ದ ಸೈಮಂಡ್ಸ್. ಸ್ಪಿನ್‌ ಅಥವಾ ಮೀಡಿಯಂ ಪೇಸ್‌ ಬೌಲಿಂಗ್‌ನಲ್ಲಿ ಶಾರ್ಪ್‌ ಆಗಿದ್ದ. ದಪ್ಪ ಅಗಲ ಕೈಗಳು ಅವನ ಫೀಲ್ಡಿಂಗ್‌ ಅನ್ನು ಪರಿಣಾಮಕಾರಿಯಾಗಿಸಿದ್ದವು. ಅವನು ಗ್ರೇಟೆಸ್ಟ್‌ ಫೀಲ್ಡರ್‌ಗಳಲ್ಲಿ ಒಬ್ಬನಾಗಿದ್ದ. ಆದರೆ ಅವನು ಹೆಚ್ಚು ವಿಧ್ವಂಸಕನಾಗುತ್ತಿದ್ದುದು ಬ್ಯಾಟ್‌ ಹಿಡಿದಾಗ. 1998ರಿಂದ 2009ರ ವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದ ಅವನ ಹೆಸರಿನಲ್ಲಿ 26 ಟೆಸ್ಟ್‌ಗಳು ಹಾಗೂ 198 ಏಕದಿನ ಪಂದ್ಯಗಳು ದಾಖಲಾಗಿವೆ. 2003 ಹಾಗೂ 2007ರ ಒನ್‌ಡೇ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯ ತಂಡ ಗೆದ್ದಾಗ, ತಂಡದ ಸಮರ್ಥ ಅಂಗವಾಗಿದ್ದ. ಟೆಸ್ಟ್‌ನಲ್ಲಿ 1462 ರನ್‌ ಹಾಗೂ ಒನ್‌ಡೇ ಪಂದ್ಯಗಳಲ್ಲಿ 5088 ರನ್‌ಗಳನ್ನು ಕಲೆಹಾಕಿದ್ದಾನೆ. ಟೆಸ್ಟ್‌ನಲ್ಲಿ 40.6 ಮತ್ತು ಏಕದಿನದಲ್ಲಿ 39.8 ಸರಾಸರಿ ರನ್‌ರೇಟ್‌ ಸಾಧಿಸಿದ್ದ.

2008ರಲ್ಲಿ ಸಿಡ್ನಿಯಲ್ಲಿ ಭಾರತ- ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯ ನಡೆಯಿತು. ಅದು ಆ್ಯಂಡ್ರ್ಯೂ ಸೈಮಂಡ್ಸ್ನ ಬೆಸ್ಟ್‌ ಇನ್ನಿಂಗ್ಸ್.‌ ನಾಟೌಟ್‌ 162 ರನ್‌ ಬಾರಿಸಿದ. ಆದರೆ ಈ ಸಾಧನೆಯ ಮೇಲೆ ಮಂಕಿಗೇಟ್‌ ಹಗರಣ ಕಪ್ಪು ಮಸುಕು ಹೊದೆಸಿತು. ಭಾರತೀಯ ಬೌಲರ್‌ ಹರ್ಭಜನ್‌ ಸಿಂಗ್‌, ತನ್ನನ್ನು “ಮಂಕಿʼ ಎಂದು ಹೀಯಾಳಿಸಿದ ಎಂದು ಆ್ಯಂಡ್ರ್ಯೂ ಸೈಮಂಡ್ಸ್ ಆರೋಪಿಸಿದ. ಅದು ಜನಾಂಗೀಯ ನಿಂದನೆ ಎಂದು ಆಸ್ಟ್ರೇಲಿಯನ್‌ ಆಟಗಾರರು ತಗಾದೆಗೆ ನಿಂತುಬಿಟ್ಟರು. ಆದರೆ ತಾನು ಹಾಗೆ ಹೇಳಿಲ್ಲ, ಅದು ʼತೇರಿ ಮಾಕಿʼ ಎಂದದ್ದು ಎಂದು ಹರ್ಭಜನ್‌ ಸಾಧಿಸಿದ.

ಯಾವುದೇ ಕ್ರಿಕೆಟ್‌ ತಂಡ ಎದುರಿಗೆ ಇದ್ದರೂ ಸ್ಲೆಡ್ಜಿಂಗ್‌ ಮೂಲಕ ಅವರ ನೈತಿಕ ಧೈರ್ಯ ಕುಸಿಯುವಂತೆ ಮಾಡುವುದು ಆಸ್ಟ್ರೇಲಿಯನ್‌ ಕ್ರಿಕೆಟ್‌ ತಂಡ ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಕುಖ್ಯಾತ ರೂಢಿ. ಆದರೆ ಅವರ ನೆಲದಲ್ಲೇ, ಅವರಿಗೆ ಸೆಡ್ಡು ಹೊಡೆಯುವಂತೆ ನಿಂತ ಹರ್ಭಜನ್‌ ನಿಲುವು ಭಾರತೀಯರಿಗೆ ಖುಷಿ ಕೊಟ್ಟಿತು. Andrew Simonds ವಿಲನ್‌ ಎನಿಸಿಕೊಂಡ. ಇದಾದ ಬಳಿಕ ಅವನೇನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ದಿನ ಉಳಿಯಲಿಲ್ಲ. 18 ತಿಂಗಳ ಬಳಿಕ ವಿದಾಯ ಹೇಳಿದ.

ಆದರೆ ಇದೇ ಸಮಯದಲ್ಲಿ ಆರಂಭವಾದ ಇಂಡಿಯನ ಪ್ರೀಮಿಯರ್‌ ಲೀಗ್ಸ್‌ ಹಾಗೂ ಟಿ-ಟ್ವೆಂಟಿ ಆಟಗಳು ಕ್ರಿಕೆಟ್‌ ಆಟಗಾರರ ಸಾಧನೆ, ಭವಿಷ್ಯ, ಬಾಂಧವ್ಯಗಳಲ್ಲಿ ಹೊಸ ಸಮೀಕರಣಗಳನ್ನು ಬರೆದವು. 2011ರ ಐಪಿಎಲ್‌ ಪಂದ್ಯಾಟದಲ್ಲಿ ಮುಖಾಮುಖಿಯಾದಾಗ ಅವರಿಬ್ಬರೂ ಪರಸ್ಪರ ʼಸಾರಿʼ ಕೇಳಿಕೊಂಡರು. ಮೂರು ವರ್ಷ ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿ ಆಡಿದ ಸೈಮಂಡ್ಸ್‌, ನಂತರ 2011ರಲ್ಲಿ ಮುಂಬಯಿ ಇಂಡಿಯನ್ಸ್‌ ತಂಡ ಸೇರಿಕೊಂಡ. ಆಗ ತಂಡದ ಕ್ಯಾಪ್ಟನ್‌ ಆಗಿದ್ದವನು ಹರ್ಭಜನ್‌ ಸಿಂಗ್.‌ ಆ ಹೊತ್ತಿಗೆ ಇಬ್ಬರೂ ಯಾವುದೇ ಹಳೆಯ ಕಹಿಗಳನ್ನು ಉಳಿಸಿಕೊಳ್ಳದೆ ಆಪ್ತರಾಗಿದ್ದರು. ಹರ್ಭಜನ್‌ನನ್ನು ಸೈಮಂಡ್ಸ್‌ “ಸರ್‌ʼ ಎಂದು ಕರೆಯುತ್ತಿದ್ದ.

ಸೈಮಂಡ್ಸ್‌ ಸಾವಿಗೆ ತುಂಬಾ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಮುಖ್ಯವಾಗುವುದು ಹರ್ಭಜನ್‌ ಏನು ಹೇಳಿದ್ದಾನೆ ಎಂಬುದು. ತನಗಾದ ಆಘಾತ, ಅಪನಂಬಿಕೆಯನ್ನು ಆತ ವ್ಯಕ್ತಪಡಿಸಿದ್ದಾನೆ. ʼʼನನಗಿದ್ದ ಆಪ್ತ ಗೆಳೆಯರಲ್ಲಿ ಅವನೊಬ್ಬ. ನಾವು ಹೇಗಿದ್ದೆವು ಎಂದರೆ, ರಾತ್ರಿ ಎರಡೂವರೆ ಹೊತ್ತಿನಲ್ಲಿ ನಾನು ಅವನಿಗೆ ಫೋನ್‌ ಮಾಡಿ, ಏನು ಮಾಡ್ತಿದೀಯ ಎಂದು ಕೇಳಬಹುದಾಗಿತ್ತು. ನಾವು ಜೊತೆಯಾಗಿ ಕೂತು ಕುಡಿಯುತ್ತಿದ್ದೆವು, ನಗುತ್ತಿದ್ದೆವು, ಸಾಕಷ್ಟು ಕತೆಗಳನ್ನು ಹಂಚಿಕೊಳ್ಳುತ್ತಿದ್ದೆವುʼʼ ಎಂದು ಹರ್ಭಜನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾನೆ.

ಕುತೂಹಲಕಾರಿ ಸಂಗತಿ ಎಂದರೆ ಆ್ಯಂಡ್ರ್ಯೂ ಸೈಮಂಡ್ಸ್ ಮೂಲತಃ ಆಸ್ಟ್ರೇಲಿಯನ್‌ ಅಲ್ಲ. ಆತನ ತಂದೆ ಆಫ್ರಿಕನ್‌ ಕೆರಿಬಿಯನ್‌ ಮತ್ತು ತಾಯಿ ಸ್ಕಾಂಡಿನೇವಿಯಾ ಮೂಲದವಳು ಎಂದು ನಂಬಲಾಗಿದೆ. ಮಗುವಿಗೆ ಮೂರು ವರ್ಷವಿದ್ದಾಗ ಈತನನ್ನು ಆಸ್ಟ್ರೇಲಿಯಾದ ಬಾರ್ಬರಾ ಮತ್ತು ಕೆನ್‌ ಸೈಮಂಡ್ಸ್‌ ದಂಪತಿ ದತ್ತು ಪಡೆದರು. ಒರಟು ಸ್ವಭಾವದ ಈತ ತಂಡದಲ್ಲಿ ಕೆಲವು ಬಾರಿ ಶಿಸ್ತುಕ್ರಮಕ್ಕೆ ಒಳಗಾದದ್ದೂ ಉಂಟು. ಫ್ಯಾಮಿಲಿ ಬದುಕನ್ನು ಅತ್ಯಂತ ಖಾಸಗಿಯಾಗಿಟ್ಟಿದ್ದ ಈತನಿಗೆ ಕ್ಲೋಯೆ ಎಂಬ ಮಗಳು, ಬಿಲ್ಲಿ ಎಂಬ ಮಗ ಇದ್ದಾರೆ. ಪತ್ನಿಯ ಹೆಸರು ಲಾರಾ.

ಇದನ್ನೂ ಓದಿ: ಯುವರಾಜ್‌ ಸಿಂಗ್‌ಗೆ ಟಿ20 ತಂಡದ ನಾಯಕತ್ವ ತಪ್ಪಿದ್ದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

IPL 2024: ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ : ಜಿದ್ದಾಜಿದ್ದಿನಿಂದ ಕೂಡಿದ್ದ ಐಪಿಎಲ್​ 17ನೇ ಆವೃತ್ತಿಯ (IPL 2024) 56ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ 20 ರನ್​ಗಳಿಂದ ಗೆಲುವು ಸಾಧಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಆಟಗಾರರು ಗೆಲುವು ತಮ್ಮದಾಗಿಸಿಕೊಂಡು. ಇದು ಡೆಲ್ಲಿ ತಂಡದಕ್ಕೆ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 6ನೇ ಗೆಲುವಾಗಿದೆ. 12 ಅಂಕಗಳನ್ನು ಸಂಪಾದಿಸಿರುವ ರಿಷಭ್​ ಪಂತ್ ಬಳಗ ಲಕ್ನೊ ಸೂಪರ್ ಜೈಂಟ್ಸ್​ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು. ಅತ್ತ ರಾಜಸ್ಥಾನ್ ತಂಡ ಆಡಿರುವ 11 ಪಂದ್ಯಗಳಲ್ಲಿ 3ನೇ ಸೋಲಿಗೆ ಒಳಗಾಯಿತು. ಆದಾಗ್ಯೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಬಿಟ್ಟುಕೊಟ್ಟಿಲ್ಲ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಸಂಜು ಹೋರಾಟ ವ್ಯರ್ಥ

ಸಂಜು ಸ್ಯಾಮ್ಸನ್​ 46 ಎಸೆತಕ್ಕೆ 86 ರನ್ ಬಾರಿಸಿದ್ದ ತನಕ ಪಂದ್ಯ ರಾಜಸ್ಥಾನ್ ತಂಡದ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನಗೊಳ್ಳುತ್ತಿದ್ದಂತೆ ಏಕಾಏಕಿ ಕುಸಿತ ಕಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸೋಲಿಗೆ ಸಿಲುಕಿತು. ಕುಲ್ದೀಪ್​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಏತನ್ಮಧ್ಯೆ ಸಂಜು ಸ್ಯಾಮ್ಸನ್​ ವಿಕೆಟ್ ವಿವಾದಾತ್ಮಕ ವಿಕೆಟ್ ಆಗಿ ಪರಿವರ್ತನೆಗೊಂಡಿತು. ಮುಖೇಶ್ ಕುಮಾರ್​ ಎಸೆತವನ್ನು ಸಂಜು ಬೌಂಡರಿ ಲೈನ್ ಮೇಲೆ ಹೊಡೆಯಲು ಯತ್ನಿಸಿದ್ದರು. ಆದರೆ, ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಶಾಯ್​ ಹೋಪ್ ಕ್ಯಾಚ್ ನೀಡಿದರು. ಥರ್ಡ್​ ಅಂಪೈರ್ ಅದನ್ನು ಮರುಪರಿಶೀಲಿಸಿ ಔಟ್​ ನೀಡಿದರು. ಆದರೆ, ಸಂಜು ಸ್ಯಾಮ್ಸನ್​ ಫೀಲ್ಡರ್ ಕಾಲು ಬೌಂಡರಿ ಲೈನ್​ಗೆ ತಾಗಿದೆ ಎಂದು ಅಂಪೈರ್​ಗಳ ಜತೆ ವಾದ ಮಾಡಿದರು.

ರಾಜಸ್ಥಾನ್ ರಾಯಲ್ಸ್​ ಗುರಿ ಬೆನ್ನಟ್ಟುವ ಹಾದಿಯಲ್ಲಿ ಆರಂಭಿಕ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್​ 4 ರನ್​ಗೆ ಔಟಾದರೆ ಜೋಸ್ ಬಟ್ಲರ್​ 19 ರನ್ ಬಾರಿಸಿದರು. ರಿಯಾನ್ ಪರಾಗ್​ 27 ಹಾಗೂ ಶುಭಂ ದುಬೆ 25 ರನ್ ಬಾರಿಸಿ ಗೆಲುವಿನ ಕನಸು ಬಿತ್ತಿದರು. ಆದರೆ, ಕೊನೇ ಹಂತದಲ್ಲಿ ಡೆಲ್ಲಿ ಬೌಲರ್​ಗಳು ಗೆಲುವಿನ ಅವಕಾಶವನ್ನು ತಮ್ಮದಾಗಿಸಿಕೊಂಡರು.

ಉತ್ತಮ ಆರಂಭ

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದರೆ ಅಭಿಷೇಕ್ ಪೊರೆಲ್​ 65 ರನ್​ ಬಾರಿಸಿದರು. ಶಾಯ್​ ಹೋಪ್​ ವಿಫಲರಾಗಿ 1 ರನ್​ಗೆ ಔಟಾದಾಗ ಡೆಲ್ಲಿ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಕ್ಷರ್ ಪಟೇಲ್​ ಹಾಗೂ ರಿಷಭ್​ ಪಂತ್​ ತಲಾ 15 ರನ್ ಬಾರಿಸಿದರು. ಆದರೆ, ಕೊನೇ ಹಂತದಲ್ಲಿ ಟ್ರಿಸ್ಟಾನ್​ ಸ್ಟಬ್ಸ್​​ 20 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಆರ್​ ಅಶ್ವಿನ್​ 24 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಉರುಳಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.

Continue Reading

ಕ್ರಿಕೆಟ್

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Yuzvendra Chahal: ಆಟದ ಕಿರು ಸ್ವರೂಪದಲ್ಲಿ 350 ವಿಕೆಟ್​​ಗಳ ಕ್ಲಬ್​​ ಪ್ರವೇಶಿಸಲು ಭಾರತದ ಸ್ಪಿನ್ನ್ ತಾರೆಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಅವರು ಅದನ್ನು ಪೂರ್ಣಗೊಳಿಸಿದರು. ಚಹಲ್ ತಮ್ಮ ಸಹ ಆಟಗಾರ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರನ್ನು ಔಟ್ ಮಾಡಿ ಟಿ 20 ಯಲ್ಲಿ 350 ವಿಕೆಟ್​​​ಗಳನ್ನು ಪೂರೈಸಿದರು. ಅವರು ತಮ್ಮ 301 ನೇ ಟಿ 20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

VISTARANEWS.COM


on

Yuzvendra Chahal
Koo

ನವ ದೆಹಲಿ: ರಾಜಸ್ಥಾನ್​ ರಾಯಲ್ಸ್​ ತಂಡದ ಸ್ಪಿನ್ ಬೌಲರ್​ ಯಜುವೇಂದ್ರ ಚಹಲ್ (Yuzvendra Chahal) ಮಂಗಳವಾರ (ಮೇ 7) ಟಿ20 ಪಂದ್ಯಗಳಲ್ಲಿ 350 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ದೊಡ್ಡ ಮೈಲಿಗಲ್ಲನ್ನು ಸಾಧಿಸಿದರು.

ಆಟದ ಕಿರು ಸ್ವರೂಪದಲ್ಲಿ 350 ವಿಕೆಟ್​​ಗಳ ಕ್ಲಬ್​​ ಪ್ರವೇಶಿಸಲು ಭಾರತದ ಸ್ಪಿನ್ನ್ ತಾರೆಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಅವರು ಅದನ್ನು ಪೂರ್ಣಗೊಳಿಸಿದರು. ಚಹಲ್ ತಮ್ಮ ಸಹ ಆಟಗಾರ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರನ್ನು ಔಟ್ ಮಾಡಿ ಟಿ 20 ಯಲ್ಲಿ 350 ವಿಕೆಟ್​​​ಗಳನ್ನು ಪೂರೈಸಿದರು. ಅವರು ತಮ್ಮ 301 ನೇ ಟಿ 20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಿಯೂಷ್ ಚಾವ್ಲಾ ಮತ್ತು ರವಿಚಂದ್ರನ್ ಅಶ್ವಿನ್ 300 ಮತ್ತು ಅದಕ್ಕಿಂತ ಹೆಚ್ಚಿನ ಟಿ 20 ವಿಕೆಟ್ ಪಡೆದ ಇತರ ಭಾರತೀಯ ಬೌಲರ್​ಗಳು. ಚಾವ್ಲಾ 310 ವಿಕೆಟ್ ಪಡೆದರೆ, ಅಶ್ವಿನ್ 306 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ 297 ವಿಕೆಟ್​ಗಳೊಂಇಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಅಮಿತ್ ಮಿಶ್ರಾ 285 ಟಿ 20 ವಿಕೆಟ್​​ಗಳನ್ನು ಪಡೆದಿದ್ದಾರೆ.

ಟಿ20 ಕ್ರಿಕೆಟ್​ಬಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಸಾಧನೆಗಳು

  • ಯಜುವೇಂದ್ರ ಚಾಹಲ್: 350 ವಿಕೆಟ್​
  • ಪಿಯೂಷ್ ಚಾವ್ಲಾ: 310 ವಿಕೆಟ್​
  • ರವಿಚಂದ್ರನ್ ಅಶ್ವಿನ್: 306 ವಿಕೆಟ್​
  • ಭುವನೇಶ್ವರ್ ಕುಮಾರ್: 297 ವಿಕೆಟ್​
  • ಅಮಿತ್ ಮಿಶ್ರಾ: 285 ವಿಕೆಟ್​

ವೆಸ್ಟ್ ಇಂಡೀಸ್​ನ ಮಾಜಿ ಆಲ್ರೌಂಡರ್ ಡ್ವೇನ್ ಬ್ರಾವೋ 625 ವಿಕೆಟ್​​ಗಳನ್ನು ಕಬಳಿಸುವ ಮೂಲಕ ಟಿ20 ಕ್ರಿಕೆಟ್​​ಗೆ ತೆರೆ ಎಳೆದಿದ್ದಾರೆ. ವಿಶ್ವದ ಬೇರೆ ಯಾವುದೇ ಬೌಲರ್ ಇದುವರೆಗೆ 600 ವಿಕೆಟ್​ಗಳ ಗಡಿ ಮುಟ್ಟಲು ಸಾಧ್ಯವಾಗಿಲ್ಲ.

ಅಫ್ಘಾನಿಸ್ತಾನದ ಸೂಪರ್ ಸ್ಟಾರ್ ರಶೀದ್ ಖಾನ್ 572 ವಿಕೆಟ್​ಗಳೊಂಇಎಗ ಅತಿ ಹೆಚ್ಚು ಟಿ 20 ವಿಕೆಟ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸುನಿಲ್ ನರೈನ್ 549 ವಿಕೆಟ್​ಗಳನ್ನು ಪಡೆದಿದ್ದಾರೆ. ಇಮ್ರಾನ್ ತಾಹಿರ್ (502) ಮತ್ತು ಶಕೀಬ್ ಅಲ್ ಹಸನ್ (482) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ:IPL 2024 : ಅಭಿಮಾನಿಯ 80 ಸಾವಿರ ರೂಪಾಯಿ ಮೊಬೈಲ್​ ಒಡೆದು ಹಾಕಿದ ಚೆನ್ನೈ ಸ್ಟಾರ್​; ಇಲ್ಲಿದೆ ವಿಡಿಯೊ

ಐಪಿಎಲ್​ನಲ್ಲಿ ಚಹಲ್ ಸಾಧನೆ

ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಯಜುವೇಂದ್ರ ಚಾಹಲ್ ಪಾತ್ರರಾಗಿದ್ದಾರೆ. ಕಳೆದ ತಿಂಗಳು ಜೈಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡುವ ಮೂಲಕ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಚಹಲ್ ಈ ಋತುವಿನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗೆ 11 ಪಂದ್ಯಗಳನ್ನಾಡಿರುವ ಅವರು 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಋತುವಿನಲ್ಲಿ ಅವರ ಉತ್ತಮ ಪ್ರದರ್ಶನವು ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿತು.

Continue Reading

ಕ್ರೀಡೆ

IPL 2024 : ಅಭಿಮಾನಿಯ 80 ಸಾವಿರ ರೂಪಾಯಿ ಮೊಬೈಲ್​ ಒಡೆದು ಹಾಕಿದ ಚೆನ್ನೈ ಸ್ಟಾರ್​; ಇಲ್ಲಿದೆ ವಿಡಿಯೊ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯಕ್ಕಾಗಿ ಚೆನ್ನೈ ಧರ್ಮಶಾಲಾಗೆ ಪ್ರಯಾಣಿಸಿದೆ. ಪಂದ್ಯಕ್ಕೂ ಮುನ್ನ ಸಿಎಸ್​ಕೆ ಬ್ಯಾಟ್ಸ್ಮನ್ ಡ್ಯಾರಿಲ್ ಮಿಚೆಲ್ ಬೌಂಡರಿ ಲೈನ್​ನಲ್ಲಿ ಥ್ರೋಡೌನ್​ಗಳನ್ನು ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಈ ಅನಿರೀಕ್ಷಿತ ಘಟನೆ ನಡೆದಿದೆ,

VISTARANEWS.COM


on

IPL 2024
Koo

ಚೆನ್ನೈ: ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ಅಭ್ಯಾಸ ನಡೆಸುವ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings ) ಕ್ರಿಕೆಟಿಗ ಡ್ಯಾರಿಲ್ ಮಿಚೆಲ್ ಆಕಸ್ಮಿಕವಾಗಿ ಅಭಿಮಾನಿಯೊಬ್ಬರ ಫೋನ್ ಅನ್ನು ಒಡೆದು ಹಾಕಿದ ಪ್ರಸಂಗ ನಡೆದಿದೆ. ಅವರು ಹೊಡೆದ ಶಕ್ತಿಯುತ ಶಾಟ್​ನಿಂದಾಗಿ ಚೆಂಡು ಐಫೋನ್​​ಗೆ ಬಡಿದು ಅದು ಸಂಪೂರ್ಣವಾಗಿ ಹಾಳಾಗಿದೆ. ಚೆಂಡು ನೇರವಾಗಿ ಬಂದು ಮೊಬೈಲ್​ಗೆ ಬಡಿಯುತ್ತಿರುವ ವಿಡಿಯೊ ವೈರಲ್ ಆಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯಕ್ಕಾಗಿ ಚೆನ್ನೈ ಧರ್ಮಶಾಲಾಗೆ ಪ್ರಯಾಣಿಸಿದೆ. ಪಂದ್ಯಕ್ಕೂ ಮುನ್ನ ಸಿಎಸ್​ಕೆ ಬ್ಯಾಟ್ಸ್ಮನ್ ಡ್ಯಾರಿಲ್ ಮಿಚೆಲ್ ಬೌಂಡರಿ ಲೈನ್​ನಲ್ಲಿ ಥ್ರೋಡೌನ್​ಗಳನ್ನು ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಈ ಅನಿರೀಕ್ಷಿತ ಘಟನೆ ನಡೆದಿದೆ,

ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಕೆಲವು ಸಿಎಸ್ಕೆ ಅಭಿಮಾನಿಗಳು ಧರ್ಮಶಾಲಾ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಮಿಚೆಲ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಂತೆ ಅವರನ್ನು ಹುರಿದುಂಬಿಸಿದ್ದರು. ಆದಾಗ್ಯೂ, ಮಿಚೆಲ್ ಎತ್ತರದ ಶಾಟ್ ಒಂದನ್ನು ಹೊಡೆದರು, ಅದು ಪ್ರೇಕ್ಷಕರೊಬ್ಬರ ಮೊಬೈಲ್ ಫೋನ್​ಗೆ ಅಪ್ಪಳಿಸಿತು. ಅಲ್ಲದೆ, ಅವರ ಪಕ್ಕದಲ್ಲಿ ನಿಂತಿದ್ದವರಿಗೆ ಬಡಿದಿತ್ತು.

ಇದನ್ನೂ ಓದಿ: IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

ಡ್ಯಾರಿಲ್ ಮಿಚೆಲ್ ಆದ ಘಟನೆಗೆ ಪಶ್ಚಾತ್ತಾಪಪಟ್ಟರು ಮತ್ತು ತಕ್ಷಣ ಜನಸಮೂಹಕ್ಕೆ ಕ್ಷಮೆಯಾಚಿಸಿದರು. ಇದಲ್ಲದೆ, ಪರಿಹಾರವಾಗಿ, ಮಿಚೆಲ್ ತಮ್ಮ ದುಬಾರಿ ಬ್ಯಾಟಿಂಗ್ ಗ್ಲೌಸ್​ಗಳನ್ನು ಮೊಬೈಲ್ ಒಡೆದು ಹೋದ ಅಭಿಮಾನಿಗೆ ಉಡುಗೊರೆಯಾಗಿ ನೀಡಿದರು, ಅವರು ಕಿವೀಸ್ ಬ್ಯಾಟರ್​​ನ ಒಳ್ಳೆಯತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ಘಟನೆಯು ಉದ್ದೇಶಪೂರ್ವಕವಲ್ಲದ ಮತ್ತು ದುರದೃಷ್ಟಕರ ಅಪಘಾತ ಎಂದು ಹೇಳಬೇಕಾಗಿಲ್ಲ. ಆದಾಗ್ಯೂ, ಮಿಚೆಲ್ ಅವರ ಪ್ರತಿಕ್ರಿಯೆ ಮತ್ತು ನಿಜವಾದ ತಪ್ಪನ್ನು ಒಪ್ಪಿಕೊಂಡಿರುವುದು ಅಭಿಮಾನಿಗಳ ಹೃದಯವನ್ನು ಗೆದ್ದಿತು. ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ಸಿಎಸ್​ಕೆ ಅಭಿಮಾನಿಗಳು ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಸಿಎಸ್ಕೆ ತನ್ನ ಪ್ಲೇಆಫ್ ಅಭಿಯಾನ ಹೆಚ್ಚಿಸಲು ಹೆಚ್ಚು ಅಗತ್ಯ ಗೆಲುವಿನೊಂದಿಗೆ ಧರ್ಮಶಾಲಾದಿಂದ ಮರಳಿದೆ. ಆಡಿರುವ 11 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಸಿಎಸ್​ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ, ದೀಪಕ್ ಚಹರ್ ಮತ್ತು ಮಥೀಶಾ ಪಥಿರಾನಾ ಅವರಂತಹ ಪ್ರಮುಖ ಆಟಗಾರರು ತಂಡದಿಂದ ನಿರ್ಗಮಿಸುತ್ತಿರುವುದರಿಂದ ಇನ್ನು ಮುಂದೆ ಸಿಎಸ್​ಕೆ ಅಭಿಯಾನ ಸುಲಭವಾಗಿಲ್ಲ.

Continue Reading

ಪ್ರಮುಖ ಸುದ್ದಿ

IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

IPL 2024: ಕೋಲ್ಕತಾ ನೈಟ್ ರೈಡರ್ಸ್ ವಿಮಾನವು ರಾತ್ರಿ 8:50ಕ್ಕೆ ಕೋಲ್ಕೊತಾದ ಬದಲಿಗೆ ಗುವಾಹಟಿಯಲ್ಲಿ ಇಳಿಯುತ್ತಿದ್ದಂತೆ, ತಂಡದ ಮೂಲದಿಂದ ಮಾಹಿತಿ ಹೊರಗೆ ಬಂತು. ಲಕ್ನೋದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಕೆಕೆಆರ್​​ನ ಚಾರ್ಟರ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಗೆ ತಿರುಗಿಸಲಾಗಿದೆ. ವಿಮಾನವು ಪ್ರಸ್ತುತ ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಿಂತಿದೆ” ಎಂದು ಫ್ರ್ಯಾಂಚೈಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024: KKR's Flight to Kolkata Unexpectedly Diverted Mid-Air
Koo

ಬೆಂಗಳೂರು: ಲಕ್ನೊ ಸೂಪರ್​ ಜೈಂಟ್ಸ್​ ತಂಡದ ವಿರುದ್ಧದ ಐಪಿಎಲ್​ ಪಂದ್ಯದ (IPL 2024) ಬಳಿಕ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಆಟಗಾರರು ಲಕ್ನೋದಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಪ್ರಯಾಣವು ಅನಿರೀಕ್ಷಿತವಾಗಿ ಬೇರೆ ಕಡೆಗೆ ಸಾಗಿದ ಪ್ರಸಂಗ ನಡೆದಿದೆ. ಪ್ರತಿಕೂಲ ಹವಾಮಾನದಿಂದಾಗಿ ಅವರು ಸಾಗುತ್ತಿದ್ದ ಚಾರ್ಟರ್ ವಿಮಾನವನ್ನು ಕೋಲ್ಕೊತಾದಲ್ಲಿ ಇಳಿಸಲು ಸಾಧ್ಯವಾಗದ ಕಾರಣ ಗುವಾಹಟಿಗೆ ತಿರುಗಿಸಲಾಗಿತ್ತು. ಈ ವಿಷಯವನ್ನು ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಹೇಳಿಕೊಂಡಿದೆ

ಯೋಜನೆಗಳ ಹಠಾತ್ ಬದಲಾವಣೆಯನ್ನು ತಂಡವು ಸೋಮವಾರ ಸಂಜೆ ಇನ್ಸ್ಟಾಗ್ರಾಮ್​ನಲ್ಲಿ ವಿವರಿಸಿತು. ಇದು ಅವರ ಮುಂದಿನ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಲ್ಲಿ ಹಲವಾರು ಕೌತುಕಗಳನ್ನು ಹುಟ್ಟಿಕೊಳ್ಳುವಂತೆ ಮಾಡಿತು.

ಗುವಾಹಟಿಗೆ ತೆರಳಿದ ಕೆಕೆಆರ್ ಚಾರ್ಟರ್ ವಿಮಾನ

ಕೋಲ್ಕತಾ ನೈಟ್ ರೈಡರ್ಸ್ ವಿಮಾನವು ರಾತ್ರಿ 8:50ಕ್ಕೆ ಕೋಲ್ಕೊತಾದ ಬದಲಿಗೆ ಗುವಾಹಟಿಯಲ್ಲಿ ಇಳಿಯುತ್ತಿದ್ದಂತೆ, ತಂಡದ ಮೂಲದಿಂದ ಮಾಹಿತಿ ಹೊರಗೆ ಬಂತು. ಲಕ್ನೋದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಕೆಕೆಆರ್​​ನ ಚಾರ್ಟರ್ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಗೆ ತಿರುಗಿಸಲಾಗಿದೆ. ವಿಮಾನವು ಪ್ರಸ್ತುತ ಗುವಾಹಟಿ ವಿಮಾನ ನಿಲ್ದಾಣದಲ್ಲಿ ನಿಂತಿದೆ” ಎಂದು ಫ್ರ್ಯಾಂಚೈಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವಲ್ಪ ಸಮಯದ ನಂತರ, ಕೋಲ್ಕತ್ತಾಗೆ ಮರಳಲು ಎಲ್ಲ ಅವಕಾಶಗಳು ಸಿಕ್ಕಿತು. ಬಳಿಕ ಅವರ ವಿಮಾನ ರಾತ್ರಿ 11:00 ಕ್ಕೆ ಕೋಲ್ಕೊತಾಗೆ ಮರಳಿತಿಉ.

ಎಲ್​ಎಸ್​ಜಿ ವಿರುದ್ಧ ಭರ್ಜರಿ ವಿಜಯ

ಲಕ್ನೋದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವನ್ನು 98 ರನ್ಗಳಿಂದ ಸೋಲಿಸಿತ್ತು. ಈ ಗೆಲುವಿನೊಂದಿಗೆ ಕೆಕೆಆರ್ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು ಮತ್ತು ಪ್ಲೇಆಪ್​​ನಲ್ಲಿ ಬಹುತೇಕ ಖಚಿತ ಸ್ಥಾನ ಭದ್ರಪಡಿಸಿತು.

ಗೌತಮ್ ಗಂಭೀರ್ ನಾಯಕತ್ವದಲ್ಲಿ 2014ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕೆಕೆಆರ್, ಈ ಋತುವಿನಲ್ಲಿ ಎಂಟು ಗೆಲುವುಗಳನ್ನು ಪಡೆದಿದೆ. ಲೀಗ್ ಹಂತದ ಅಗ್ರ ಎರಡು ಸ್ಥಾನಗಳನ್ನು ತಲುಪಲು ಕೇವಲ ಮೂರು ಪಂದ್ಯಗಳು ಬಾಕಿ ಉಳಿದಿವೆ.

ಇದನ್ನೂ ಓದಿ: T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

ಮೇ 11 ರಂದು ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದು ಋತುವಿನ ಕೊನೆಯ ತವರು ಪಂದ್ಯವಾಗಿದೆ. ಅಲ್ಲಿ ಅವರು ತಮ್ಮ ಏಳು ತವರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದ ನಂತರ ತಮ್ಮ ಪ್ರಾಬಲ್ಯ ಗಟ್ಟಿಗೊಳಿಸುವ ಗುರಿಯನ್ನು ಹೊಂದಿದ್ದಾರೆ.

ಕಳೆದ ತಿಂಗಳು ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುಗಳು ಈಡನ್ ಗಾರ್ಡನ್ಸ್ನಲ್ಲಿ ಅವರ ದಾಖಲೆಯಲ್ಲಿ ಏಕೈಕ ಕಳಂಕವಾಗಿದೆ.

ಮುಂಬೈ ನಂತರ, ನೈಟ್ ರೈಡರ್ಸ್ ಅಹಮದಾಬಾದ್ಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ, ನಂತರ ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ರಾಜಸ್ಥಾನ ವಿರುದ್ಧ ಲೀಗ್ ಹಂತದ ಫೈನಲ್ ಪಂದ್ಯ ನಡೆಯಲಿದೆ.

Continue Reading
Advertisement
Prajwal Revanna Case SIT not issuing notice to Karthik HDK decides to approach Governor and Court
ರಾಜಕೀಯ2 mins ago

Prajwal Revanna Case: ಕಾರ್ತಿಕ್‌ಗೆ ನೋಟಿಸ್‌ ನೀಡದ SIT; ರಾಜ್ಯಪಾಲ, ಕೋರ್ಟ್‌ ಮೊರೆ ಹೋಗಲು ಎಚ್‌ಡಿಕೆ ನಿರ್ಧಾರ

Self Harming
ಕ್ರೈಂ7 mins ago

Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

Flights cancelled
ದೇಶ10 mins ago

Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

prajwal revanna case puttaraj shreyas patel karthik
ಪ್ರಮುಖ ಸುದ್ದಿ42 mins ago

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Actor Sathyaraj throwback picture of with veteran actor
ಮಾಲಿವುಡ್50 mins ago

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Alia Bhatt Deep Fake Wamiqa Gabbi face replaced
ಬಾಲಿವುಡ್50 mins ago

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Sindhuri Vs Roopa
ಕರ್ನಾಟಕ54 mins ago

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Puttakkana Makkalu umashree acting praised
ಕಿರುತೆರೆ55 mins ago

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

hanuman flag keragodu mandya
ಕ್ರೈಂ2 hours ago

Hanuman Flag: ಕೆರಗೋಡು ಹನುಮಧ್ವಜ ಪ್ರಕರಣದ 3 ಹೋರಾಟಗಾರರ ಮೇಲೆ ರೌಡಿಶೀಟ್

Human trafficking
ದೇಶ2 hours ago

Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ15 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ18 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ20 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌