IND VS BAN | ಮೊದಲ ಟೆಸ್ಟ್​: ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್​ ಅಂತರದ ಗೆಲುವು - Vistara News

Latest

IND VS BAN | ಮೊದಲ ಟೆಸ್ಟ್​: ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್​ ಅಂತರದ ಗೆಲುವು

ಆತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

VISTARANEWS.COM


on

ban vs ind
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ತಗಾಂಗ್​: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 188 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್​ ಇಂಡಿಯಾ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದಕೊಂಡಿದೆ.

ಗೆಲುವಿಗೆ 513 ರನ್ನುಗಳ ಕಠಿನ ಗುರಿ ಪಡೆದ ಬಾಂಗ್ಲಾದೇಶ ನಾಲ್ಕನೇ ದಿನದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಅದರಂತೆ 5ನೇ ಹಾಗೂ ಅಂತಿಮ ದಿನದಲ್ಲಿ ಆಡಲಿಳಿದ ಬಾಂಗ್ಲಾ ಕೇವಲ 52 ರನ್​ ಒಟ್ಟುಗೂಡಿಸಿದ ವೇಳೆ ಉಳಿದ ನಾಲ್ಕು ವಿಕೆಟ್​ ಕೂಡ ಕೈಚೆಲ್ಲಿ ಅಂತಿಮವಾಗಿ 324 ರನ್​ಗೆ ಆಲೌಟ್​ ಆಗುವ ಮೂಲಕ ಸೋಲು ಕಂಡಿತು.

ನಾಲ್ಕನೇ ದಿನವಾದ ಕೊನೇ ಅವಧಿಯಲ್ಲಿ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್​ (40*) ಹಾಗೂ ಮೆಹೆದಿ ಹಸನ್​ ಮಿರಾಜ್​ (9) ತಂಡಕ್ಕೆ ಆಸರೆಯಾಗಿದ್ದರು. ಅದರಂತೆ ಭಾನುವಾರ 5ನೇ ದಿನದ ಆಟ ಮುಂದುವರಿಸಿದ ಈ ಆಟಗಾರರು ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ಸಾಧ್ಯವಾಗಲಿಲ್ಲ. ಶಕಿಬ್​ 88 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರೆ, ಮೆಹೆದಿ ಹಸನ್ 13 ರನ್​ಗೆ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಅಕ್ಷರ್​ ಪಾಲಾಯಿತು. ಈ ವಿಕೆಟ್​ ಪತನದ ಬಳಿಕ ಉಳಿದ ಎರಡು ವಿಕೆಟ್​ ಕೂಡ ಬೇಗನೆ ಬಿದ್ದು ಬಾಂಗ್ಲಾ ಸೋಲಿಗೆ ತುತ್ತಾಯಿತು. ಅಂತಿಮ ದಿನದಲ್ಲಿ ಸರಿ ಸುಮಾರು ಅರ್ಧ ತಾಸು ಆಟವಷ್ಟೇ ನಡೆಯಿತು.

ಇದಕ್ಕೂ ಮುನ್ನ ನಾಲ್ಕನೇ ದಿನವಾದ ಶನಿವಾರ ಬಾಂಗ್ಲಾ ಪರ ಆರಂಭಿಕರಾದ ನಜ್ಮುಲ್​ ಹೊಸೈನ್​ (67) ಹಾಗೂ ಜಾಕಿರ್​ ಹಸನ್​ (100) ಭಾರತದ ಬೌಲರ್​ಗಳನ್ನು ಕಾಡಿದ್ದರು. ಭೋಜನ ವಿರಾಮದ ವೇಳೆಗೆ ಈ ಜೋಡಿ ವಿಕೆಟ್ ನಷ್ಟವಿಲ್ಲದೆ 119 ರನ್​ ಗಳಿಸಿ ಭಾರತದ ಪಾಳೆಯದಲ್ಲಿ ಆತಂಕ ಮೂಡಿಸಿತ್ತು. ಆದರೆ, 47ನೇ ಓವರ್​ನಲ್ಲಿ ಯಶಸ್ಸು ಸಾಧಿಸಿದ ಉಮೇಶ್ ಯಾದವ್​ ನಜ್ಮುಲ್​ ವಿಕೆಟ್​ ಕಬಳಿಸಿ ಬಾಂಗ್ಲಾಕ್ಕೆ ಬ್ರೇಕ್ ಹಾಕಿದ್ದರು. ಉಳಿದಂತೆ ಲಿಟನ್​ ದಾಸ್​ (19), ಮುಷ್ಪಿಕರ್ ರಹೀಮ್​ (23) ಗಳಿಸಿದರೆ, ನೂರುಲ್​ ಹಸನ್​ 3 ರನ್​ಗೆ ಸೀಮಿತಗೊಂಡಿದ್ದರು.

ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ಪರ ಅಕ್ಷರ್ ಪಟೇಲ್ 4 ಹಾಗೂ ಕುಲ್​ದೀಪ್​ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು. ಕೊನೆಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಢಾಕಾದಲ್ಲಿ ಆಯೋಜಿಸಲಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿ ಸಾಧನೆ ಮೆರೆದಿದ್ದ ಕುಲ್​ದೀಪ್​ ಯಾದವ್​ ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಜತೆಗೆ ಪ್ರಥಮ ಇನಿಂಗ್ಸ್‌ ಬ್ಯಾಟಿಂಗ್‌ ವೇಳೆ ಮಹತ್ವದ 40 ರನ್‌ ಬಾರಿಸಿದ ಕಾರಣಕ್ಕೆ ಪಂದ್ಯ ಶ್ರೇಷ್ಠ ಗೌರವವನ್ನೂ ತಮ್ಮದಾಗಿಸಿಕೊಂಡರು.

ಸ್ಕೋರ್​ ವಿವರ

ಭಾರತ : ಮೊದಲ ಇನಿಂಗ್ಸ್​ 404; ಎರಡನೇ ಇನಿಂಗ್ಸ್​ 258ಕ್ಕೆ2 ಡಿಕ್ಲೇರ್​​

ಬಾಂಗ್ಲಾದೇಶ : ಮೊದಲ ಇನಿಂಗ್ಸ್​ 150; ಎರಡನೇ ಇನಿಂಗ್ಸ್​ 324. (ಜಾಕಿರ್ ಹಸನ್​ 100, ಶಕಿಬ್​ ಅಲ್​ ಹಸನ್​ 84, ನಜ್ಮುಲ್​ ಹೊಸೈನ್​ 67, ಅಕ್ಷರ್​ ಪಟೇಲ್​ 77ಕ್ಕೆ 4, ಕುಲ್​​ದೀಪ್​ ಯಾದವ್​ 73ಕ್ಕೆ 3). ಪಂದ್ಯ ಶ್ರೇಷ್ಠ: ಕುಲ್​ದೀಪ್​ ಯಾದವ್​

ಇದನ್ನೂ ಓದಿ | INDvsAUS W | ಆಸ್ಟ್ರೇಲಿಯಾ ವನಿತೆಯರಿಗೆ ತಲೆಬಾಗಿದ ಭಾರತ ತಂಡ; ಸರಣಿಯಲ್ಲೂ ಸೋಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

MS Dhoni : ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

VISTARANEWS.COM


on

MS Dhoni
Koo

ಬೆಂಗಳೂರು: ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಎಂಎಸ್ ಧೋನಿ (MS Dhoni) ಸಂಪೂರ್ಣ ಗಮನ ಹರಿಸಿದ್ದಾರೆ. ಸ್ಟಾರ್ ವಿಕೆಟ್ ಕೀಪರ್ ನೆಟ್ ಸೆಷನ್ ಸಮಯದಲ್ಲಿ ತಮ್ಮ ವಿಕೆಟ್​ಕೀಪಿಂಗ್​ ಗ್ಲೌಸ್ ಗಳೊಂದಿಗೆ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅವರು ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಿದ್ದಾರೆ. ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಬೌಲಿಂಗ್ ಮಾಡಿಲ್ಲ. ಆದರೆ ಆರ್​ಸಿಬಿ ವಿರುದ್ಧ ಬೌಲಿಂಗ್ ಮಾಡಬಲ್ಲರು ಎಂದು ಹೇಳಲಾಗುತ್ತಿದೆ!

ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

ನೆಟ್ಸ್​ನಲ್ಲಿ ತಾವು ಎದುರಿಸಿದ ಕಠಿಣ ಬೌಲರ್ ಧೋನಿ ಎಂದು ರೈನಾ ಒಮ್ಮೆ ಹೇಳಿದ್ದರು. ಅಭ್ಯಾಸದ ವೇಲೆ ಧೋನಿ ಎಸೆತಕ್ಕೆ ಔಟಾದರೆ ಅವರು ನಿಮ್ಮನ್ನು ಪದೇ ಪದೇ ಕಾಡುತ್ತಾರೆ. ಹೇಗೆ ಔಟ್ ಮಾಡಿದೆ ಎಂಬುದನ್ನು ನೆನಪಿಸುತ್ತಾರೆ ಎಂದು ಸಿಎಸ್​ಕೆ ಮಾಜಿ ಬ್ಯಾಟ್ಸ್ಮನ್ ಹೇಳಿದ್ದರು.

“ನಾನು ಎದುರಿಸಿದ ಕಠಿಣ ಬೌಲರ್​​ ಮುರಳೀಧರನ್ ಮತ್ತು ಮಾಲಿಂಗ ಎಂದು ಭಾವಿಸುತ್ತೇನೆ. ಆದರೆ ನೆಟ್ಸ್​ನಲ್ಲಿ ಅದು ಎಂಎಸ್ ಧೋನಿ. ಅವರಯ ನಿಮ್ಮನ್ನು ಔಟ್ ಮಾಡಿದರೆ ನೀವು ಒಂದೂವರೆ ತಿಂಗಳವರೆಗೆ ಅವರ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಔಟಾದ ರೀತಿಯನ್ನು ಸನ್ನೆ ಮಾಡುತ್ತಲೇ ಇರುತ್ತಾರೆ. ಅವರು ನಿಮ್ಮನ್ನು ಹೇಗೆ ಔಟ್ ಮಾಡಿದನೆಂದು ನೆನಪಿಸುತ್ತಾರೆ . ಅವರು ಆಫ್-ಸ್ಪಿನ್, ಮಧ್ಯಮ ವೇಗ, ಲೆಗ್ ಸ್ಪಿನ್, ಎಲ್ಲವನ್ನೂ ಬೌಲಿಂಗ್ ಮಾಡುತ್ತಿದ್ದರು. ನೆಟ್ಸ್​ಬಲ್ಲಿ ಅವರು ತಮ್ಮ ಮುಂಭಾಗದ ಪಾದದ ನೋ-ಬಾಲ್​ಗಳನ್ನು ಸಹ ಸಮರ್ಥಿಸುತ್ತಿದ್ದರು. ಟೆಸ್ಟ್ ನೆಟ್ಸ್​ನಲ್ಲಿ ಅವರು ಬೌಲಿಂಗ್ ಚೆನ್ನಾಗಿ ಮಾಡುತ್ತಿದ್ದರು. ಇಂಗ್ಲೆಂಡ್​​ನಲ್ಲಿ ಅವರು ಅದನ್ನು ವೇಗದಲ್ಲಿ ಸ್ವಿಂಗ್ ಮಾಡುತ್ತಿದ್ದರು, “ಎಂದು ರೈನಾ ಹೇಳಿದ್ದರು.

ಇದನ್ನೂ ಓದಿ: MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

ಧೋನಿ ಗುರುವಾರ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದರೂ, ಶನಿವಾರದ ಪಂದ್ಯದ ಸಮಯದಲ್ಲಿ ಸಿಎಸ್ಕೆ ಸ್ಟಾರ್ ಅದೇ ರೀತಿ ಮಾಡುವುದಿಲ್ಲ ಎಂದು ಅಭಿಮಾನಿಗಳು ಸಂಪೂರ್ಣವಾಗಿ ನಿರೀಕ್ಷಿಸಬಹುದು. ಧೋನಿ ಈ ಋತುವಿನಲ್ಲಿ ಕೆಲವು ಗಾಯದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಚೆನ್ನೈನ ಮಾಜಿ ನಾಯಕ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತಡವಾಗಿ ಬರಲು ಇದು ಕಾರಣವಾಗಿದೆ.

ಧೋನಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. 50 ಓವರ್​ಗಳ ಸ್ವರೂಪದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಧೋನಿ ಆರ್​ಸಿಬಿ ಶಿಬಿರದೊಂದಿಗೆ ಸ್ವಲ್ಪ ಮೋಜಿನ ಸಮಯವನ್ನು ಕಳೆಯುತ್ತಿದ್ದರು. ಅವರೊಂದಿಗೆ ಚಹಾ ಕೂಡ ಸೇವಿಸಿದ್ದರು.

Continue Reading

ಪ್ರಮುಖ ಸುದ್ದಿ

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

MS Dhoni: ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್​ಸಿಬಿಯ ಡ್ರೆಸ್ಸಿಂಗ್ ರೂಮ್​ನಲ್ಲಿ ಏಕಾಏಕಿ ಕಾಣಿಸಿಕೊಂಡರು.

VISTARANEWS.COM


on

MS Dhoni
Koo

ಬೆಂಗಳೂರು : ಆರ್​ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ ಆರ್​ಸಿಬಿ ಆಟಗಾರರು ಹಾಗೂ ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್​​ಲ್ಲಿದ್ದ ಆರ್​ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್​ಸಿಬಿಯ ಡ್ರೆಸ್ಸಿಂಗ್ ರೂಮ್​ನಲ್ಲಿ ಏಕಾಏಕಿ ಕಾಣಿಸಿಕೊಂಡರು.

ಧೋನಿ ಸಿಎಸ್​ಕೆ ತರಬೇತಿ ಕಿಟ್ ಧರಿಸಿ ಡ್ರೆಸ್ಸಿಂಗ್ ರೂಮ್​ನಿಂದ ಹೊರನಡೆದಿರುವ ವಿಡಿಯೊ ಬಹಿರಂಗಗೊಂಡಿದೆ. ಫ್ರಾಂಚೈಸಿ ಈ ಪೋಸ್ಟ್​ಗೆ “ವೆಲ್ಕಮ್ ಟು ಬೆಂಗಳೂರು ಮಹಿ” ಎಂದು ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

ಕಳೆದ ವರ್ಷ ಸಂದರ್ಶನವೊಂದರಲ್ಲಿ ಎಂಎಸ್ ಧೋನಿ ತಮ್ಮನ್ನು ಅನುಭವಿ ಎಂದು ಕರೆದುಕೊಂಡಿದ್ದರು. ಚಹಾವು ಅದರ ಸರಳತೆಯ ಪ್ರತಿಕೆ ಎಂದರು. ಎಲ್ಲಾದರೂ ಅಭ್ಯಾಸಕ್ಕೆ ಹೋದಾಗ ಮತ್ತು ಯಾರಾದರೂ ಅವರಿಗೆ ಚಹಾ ನೀಡಿದರೆ ಅವರು ಯಾವಾಗಲೂ ಸಂತೋಷ ಪಡುತ್ತೇನೆ ಎಂದು ಹೇಳಿದ್ದರು. ಬೆಂಗಳೂರು ಫ್ರಾಂಚೈಸಿ ವಿರುದ್ಧ 35 ಪಂದ್ಯಗಳಲ್ಲಿ 140.77 ಸ್ಟ್ರೈಕ್​​​ರೇಟ್​​ನಲ್ಲಿ 839 ರನ್ ಗಳಿಸಿದ್ದಾರೆ.

ಆರ್ಸಿಬಿ-ಸಿಎಸ್ಕೆ ಪಂದ್ಯದ ವೇಳೆ ಮಳೆ ಭೀತಿ?

ಬೆಂಗಳೂರಿನಲ್ಲಿ ಶನಿವಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ತಜ್ಞರ ಭವಿಷ್ಯವಾಣಿಗಳು ಬೆಂಗಳೂರು ಮೂಲದ ಫ್ರಾಂಚೈಸಿಯ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯಾಗಿದೆ. ಆದಾಗ್ಯೂ, ಎರಡೂ ತಂಡಗಳು, ವಿಶೇಷವಾಗಿ ಆರ್​​ಸಿಬಿ ಮುಖಾಮುಖಿಯ ದಿನದಂದು ಮಳೆಗಾಲದ ಹವಾಮಾನ ಊಹಿಸುವುದಿಲ್ಲ.

Continue Reading

ಪ್ರಮುಖ ಸುದ್ದಿ

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

VISTARANEWS.COM


on

IPL 2024
Koo

ಹೈದರಾಬಾದ್​​: ಇಲ್ಲಿ ಗುರುವಾರ ನಿಗದಿಯಾಗಿದ್ದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ (Sunrisers Hyderabad) ತಂಡ ಬೆವರು ಸುರಿಸದೇ 2024ನೇ ಆವೃತ್ತಿಯ (IPL 2024) ಐಪಿಎಲ್​ನ ಪ್ಲೇಆಫ್​​ಗೆ ಪ್ರವೇಶಿಸಿತು. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್​​ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಎಸ್​ಆರ್​ಎಚ್​ ಪಾತ್ರವಾಯಿತು. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಮೇ 16) ಗುಜರಾತ್ ವಿರುದ್ಧ ಸೆಣಸಬೇಕಾಗಿತ್ತು. ಆದರೆ ಪಂದ್ಯ ಟಾಸ್​ ಕೂಡ ಕಾಣದೆ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ 2016ರ ಚಾಂಪಿಯನ್ಸ್ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿತು.

2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ. ಮಾಜಿ ಚಾಂಪಿಯನ್​ಗಳು ​2021, 2022 ಮತ್ತು 2023 ರಲ್ಲಿ ಕ್ರಮವಾಗಿ 8, 8 ಮತ್ತು 10 ನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ ​ಷಿಪ್​​ ಮತ್ತು ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ನಾಯಕ ಪ್ಯಾಟ್ ಕಮಿನ್ಸ್, ಐಪಿಎಲ್ 2024 ರಲ್ಲಿ ನಿರ್ಭೀತ ಬ್ರಾಂಡ್ ಕ್ರಿಕೆಟ್ ಆಡುತ್ತಿದ್ದಾರೆ.

ಪಂದ್ಯಕ್ಕೆ ಮುಂಚಿತವಾಗಿ ನಿರಂತರವಾಗಿ ಮಳೆ ಸುರಿಯಿತು. 10 ಗಂಟೆ ದಾಟಿದರೂ ಪಿಚ್​ನಿಂದ ಟಾರ್ಪಾಲ್​ ತೆಗೆಯಲು ಸಾಧ್ಯವಾಗಲಿಲ್ಲ. ನಾಯಕರಾದ ಪ್ಯಾಟ್ ಕಮಿನ್ಸ್ ಮತ್ತು ಶುಬ್ಮನ್ ಗಿಲ್ ಪಿಚ್ ಅನ್ನು ಅನೇಕ ಬಾರಿ ಪರಿಶೀಲನೆ ನಡೆಸಿದರು. ಆದರೆ ಅವರು ತಮ್ಮ ತರಬೇತಿ ಕಿಟ್​​ ಧರಿಸಿದರೇ ಹೊರತು ಮ್ಯಾಚ್​ ಕಿಟ್​ ಧರಿಸಲಿಲ್ಲ. . ಮಳೆಯ ಹೊರತಾಗಿಯೂ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್ಆರ್​ಎಚ್​ ಪ್ಲೇಆಫ್​ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.

ಇದನ್ನೂ ಓದಿ: IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

ಹೈದರಾಬಾದ್​​ನ ನಡೆದ ಪಂದ್ಯದಲ್ಲಿ ಒಂದು ಅಂಕ ಗಳಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​​ 13 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿದೆ. ಮೇ 19ರಂದು ಪಂಜಾಬ್ ವಿರುದ್ಧ ತವರಿನಲ್ಲಿ ಸೆಣಸಲಿರುವ ಪ್ಯಾಟ್ ಕಮಿನ್ಸ್ ಪಡೆಗೆ ಅಗ್ರ ಎರಡು ಸ್ಥಾನಗಳನ್ನು ಗಳಿಸುವ ಅವಕಾಶವಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಆಡುವ ಅವಕಾಶ ಸಿಗಲಿದೆ. . ಎಸ್​ಆರ್​​ಎಚ್​​ ಅರ್ಹತೆಯು ದೆಹಲಿ ಮತ್ತು ಲಕ್ನೋದ ಪ್ಲೇಆಫ್ ಭರವಸೆಗಳನ್ನು ಕೊನೆಗೊಳಿಸಿತು. ಶನಿವಾರ ಬೆಂಗಳೂರಿನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ನಡುವಿನ ಬಹುನಿರೀಕ್ಷಿತ ಪಂದ್ಯದ ಕಿಚ್ಚನ್ನು ಹೆಚ್ಚಿಸಿತು.

ಗುಜರಾತ್ ಗೆ ನಿರಾಶಾದಾಯಕ ಅಭಿಯಾನ

ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು. ಅಹ್ಮದಾಬಾದ್​ನಲ್ಲಿ ಕೆಕೆಆರ್ ವಿರುದ್ಧ ಜಿಟಿಯ ಕೊನೆಯ ತವರು ಪಂದ್ಯವೂ ಕೆಟ್ಟ ಹವಾಮಾನದಿಂದಾಗಿ ರದ್ದಾಗಿತ್ತು. 2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್​ಗೆ ಇದು ನಿರಾಶಾದಾಯಕ ಅಭಿಯಾನ. ಏಕೆಂದರೆ ಹೊಸ ನಾಯಕ ಶುಭ್ಮನ್ ಗಿಲ್ ಅವರ ಅಡಿಯಲ್ಲಿ ತಂಡವು ಪ್ರತಿಭೆಯ ಕಿಡಿಗಳನ್ನು ಹೊಂದಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತು.

ಸನ್ರೈಸರ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಎರಡನೇ ಸ್ಥಾನಕ್ಕೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳ ಸೋಲಿನ ಹಾದಿಯಲ್ಲಿರುವ ರಾಜಸ್ಥಾನ್ ಭಾನುವಾರ ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಕಳೆದುಕೊಳ್ಳಲಿ ಎಂದು ಅವರು ಪ್ರಾರ್ಥಿಸಬೇಕಾಗಿದೆ. ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೆ, ಆ ತಂಡ ಎರಡನೇ ಸ್ಥಾನ ಪಡೆಯುತ್ತದೆ.

Continue Reading

ಪ್ರಮುಖ ಸುದ್ದಿ

IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

IPL 2024 : ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಇಶಾನ್ ಮತ್ತು ಡೇವಿಡ್ ಸ್ನೇಹಪರ ಕುಸ್ತಿ ಪ್ರದರ್ಶನದೊಂದಿಗೆ ತಮ್ಮ ತರಬೇತಿ ಸಮಯವನ್ನು ಸವಿಯುತ್ತಿರುವುದನ್ನು ಕಾಣಬಹುದು. ಕ್ರಿಕೆಟ್​ ನ ಅತ್ಯಂತ ರೋಚಕ ಸ್ಟೇಡಿಯಮ್​ ವಾಂಖೆಡೆ ಸ್ವಲ್ಪ ಸಮಯದವರೆಗೆ ಡಬ್ಲ್ಯುಡಬ್ಲ್ಯುಇ ರಿಂಗ್ ಆಗಿ ಮಾರ್ಪಟ್ಟಿತು.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024ರ (IPL 2024 ) ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿರುವ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರಾದ ಟಿಮ್ ಡೇವಿಡ್ (Tim David) ಹಾಗೂ ಇಶಾನ್ ಕಿಶನ್ (Ishan Kishan)​ ತಮಾಷೆಗೆ ಕುಸ್ತಿಯಾಡಿದ ವಿಡಿಯೊಗಳು ವೈರಲ್ ಆಗಿವೆ. ಗ್ರೂಪ್ ಹಂತದ ತಮ್ಮ ಕೊನೇ ಪಂದ್ಯಕ್ಕೆ ಮೊದಲು ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಅವರು ತಮಾಷೆಗೆ ಕುಸ್ತಿಯಾಡಿದ್ದಾರೆ. ಅದಕ್ಕೆ ಕೀರನ್ ಪೊಲಾರ್ಡ್​ ಸಾಕ್ಷಿಯಅಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಇಶಾನ್ ಮತ್ತು ಡೇವಿಡ್ ಸ್ನೇಹಪರ ಕುಸ್ತಿ ಪ್ರದರ್ಶನದೊಂದಿಗೆ ತಮ್ಮ ತರಬೇತಿ ಸಮಯವನ್ನು ಸವಿಯುತ್ತಿರುವುದನ್ನು ಕಾಣಬಹುದು. ಕ್ರಿಕೆಟ್​ ನ ಅತ್ಯಂತ ರೋಚಕ ಸ್ಟೇಡಿಯಮ್​ ವಾಂಖೆಡೆ ಸ್ವಲ್ಪ ಸಮಯದವರೆಗೆ ಡಬ್ಲ್ಯುಡಬ್ಲ್ಯುಇ ರಿಂಗ್ ಆಗಿ ಮಾರ್ಪಟ್ಟಿತು.

ವಿಡಿಯೊದಲ್ಲಿ ಕಾಣುತ್ತಿರುವಂತೆ ಕುಸ್ತಿಯನ್ನು ಇಶಾನ್ ಕಿಶನ್​ ಪ್ರಾರಂಭಿಸಿದ ಹಾಗಿದೆ. ಅವರು ತಮಾಷೆಯಾಗಿ ಡೇವಿಡ್ ಗೆ ತನ್ನ ತಲೆಯಿಂದ ಗುದ್ದಲು ಪ್ರಯತ್ನಿಸಿದ್ದರು. ಆದಾಗ್ಯೂ, ಆಸ್ಟ್ರೇಲಿಯಾದ ಆಟಗಾರ ಇಶಾನ್ ಅವರ ತಲೆಯನ್ನು ತನ್ನ ದೈತ್ಯ ತೋಳುಗಳಿಂದ ಲಾಕ್ ಮಾಡುವ ಮೂಲಕ ಅದರಿಂದ ತಪ್ಪಿಸಿಕೊಳ್ಳುತ್ತಾರೆ.

ಕುಸ್ತಿ ಇನ್ನೂ ಕೆಲವು ನಿಮಿಷಗಳ ಕಾಲ ಮುಂದುವರಿಯುತ್ತದೆ. ಇಬ್ಬರೂ ಆಟಗಾರರು ಅಂತಿಮವಾಗಿ ಪರಸ್ಪರರನ್ನು ನೆಲಕ್ಕೆ ಬೀಳಿಸುತ್ತಾರೆ. ಇದು ಎಂಐ ಶಿಬಿರದಲ್ಲಿ ಮೋಜಿನ ವಾತಾವರಣವನ್ನು ಸೃಷ್ಟಿಸಿತು. ಕೀರನ್ ಪೊಲಾರ್ಡ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಅವರಿಬ್ಬರ ಕುಸ್ತಿ ಚಲನೆಗಳನ್ನು ನೋಡಿ ಖುಷಿಪಟ್ಟರು.

ಇದನ್ನೂ ಓದಿ: Virat kohli : ಕೊಹ್ಲಿಯನ್ನು ಹೊಗಳಿದ ಜಗತ್​​ಪ್ರಸಿದ್ಧ ವೇಗದ ಓಟಗಾರ ಉಸೇನ್​ ಬೋಲ್ಟ್​​

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 2024ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದೆ. ಸತತ ಮೂರು ಸೋಲುಗಳೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ನಂತರ ಅವರು ಪುನರಾಗಮನ ಮಾಡಿದರೂ ಬಳಿಕ ಕೊಟ್ಟ ಕಳಪೆ ಫಾರ್ಮ್ ಅಂತಿಮವಾಗಿ ಪಂದ್ಯಾವಳಿಯಿಂದ ಗುಂಪು ಹಂತದ ಹೊರಗುಳಿಯಲು ಕಾರಣವಾಯಿತು.

ಅಂತಿಮ ಪಂದ್ಯಕ್ಕೆ ತೆರಳುತ್ತಿರುವ ಎಂಐ ತಮ್ಮ ಹೆಮ್ಮೆಗಾಗಿ ಆಡಲು ಬಯಸುತ್ತದೆ. ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಬಯಸುತ್ತದೆ.

Continue Reading
Advertisement
Physical Abuse
ಕ್ರೈಂ6 mins ago

Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

anjali murder suspect girish2
ಕ್ರೈಂ8 mins ago

Anjali Murder Case: ಥಳಿಸಿದವರಿಗೆ ಈತ ಅಂಜಲಿ ಹಂತಕ ಎಂದು ಗೊತ್ತೇ ಇರಲಿಲ್ಲ! ಕೊಲೆಗಾರ ಸಿಕ್ಕಿಬಿದ್ದಿದ್ದು ಹೀಗೆ

Viral video
ವೈರಲ್ ನ್ಯೂಸ್12 mins ago

Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

T20 World Cup 2024
ಕ್ರೀಡೆ20 mins ago

T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?

Anushka Shetty producer marriage news viral
ಟಾಲಿವುಡ್29 mins ago

Anushka Shetty: ಕನ್ನಡ ನಿರ್ಮಾಪಕನ ಜತೆ ʻಟಾಲಿವುಡ್‌ ಸ್ವೀಟಿʼ ಅನುಷ್ಕಾ ಶೆಟ್ಟಿ ಮದುವೆ?

RCB vs CSK
ಕ್ರೀಡೆ43 mins ago

RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್​ಸಿಬಿಗೆ ಇದು ಅದೃಷ್ಟವಾ?

shoot out doddaballapur murder case
ಕ್ರೈಂ1 hour ago

Shoot Out: ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

Narendra Modi
Lok Sabha Election 20241 hour ago

Narendra Modi: ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ವಿಪಕ್ಷಕ್ಕೆ ಪ್ರಧಾನಿ ಮೋದಿ ತಿರುಗೇಟು

Pakistan
ವಿದೇಶ1 hour ago

Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

Rashmika Madanna Appreciation Post PM Modi Reacts
ಟಾಲಿವುಡ್1 hour ago

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಪೋಸ್ಟ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ4 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ20 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು23 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌