IPL 2023: ಈ ಬಾರಿ ಆರೆಂಜ್​,ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ; ರೇಸ್​ನಲ್ಲಿರುವ ಪ್ರಮುಖ ಆಟಗಾರರು ಯಾರು? ಇಲ್ಲಿದೆ ಮಾಹಿತಿ Vistara News
Connect with us

ಕ್ರಿಕೆಟ್

IPL 2023: ಈ ಬಾರಿ ಆರೆಂಜ್​,ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ; ರೇಸ್​ನಲ್ಲಿರುವ ಪ್ರಮುಖ ಆಟಗಾರರು ಯಾರು? ಇಲ್ಲಿದೆ ಮಾಹಿತಿ

ಶುಭಮನ್​ ಗಿಲ್​ ಅವರು ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಅತ್ಯಧಿಕ ರನ್​ ಪೇರಿಸಿ ಆರೆಂಜ್​ ಕ್ಯಾಪ್​ ಮುಡಿಗೇರಿಸಿಕೊಂಡಿದ್ದಾರೆ.

VISTARANEWS.COM


on

shubman gill
Koo

ಅಹಮದಾಬಾದ್​: 16ನೇ ಆವೃತ್ತಿಯ ಐಪಿಎಲ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯುವ ಫೈನಲ್​ ಪಂದ್ಯದ ಮೂಲಕ ಈ ಆವೃತ್ತಿಗೆ ಅದ್ಧೂರಿ ತರೆ ಬೀಳಲಿದೆ. ಸದ್ಯ ಟೂರ್ನಿಯಲ್ಲಿ ಪರ್ಪಲ್​ ಕ್ಯಾಪ್​ ಮತ್ತು ಆರೆಂಜ್​ ಕ್ಯಾಪ್​ ರೇಸ್​ನಲ್ಲಿರುವ ಆಟಗಾರರು ಯಾರು ಅವರ ಸಾಧನೆ ಏನು ಎಂಬ ಮಾಹಿತಿ ಇಂತಿದೆ.

ಪರ್ಪಲ್​ ಕ್ಯಾಪ್​ಗೆ ತೀವ್ರ ಮಧ್ಯೆ ಪೈಪೋಟಿ

ಈ ಬಾರಿಯ ಐಪಿಎಲ್​ನಲ್ಲಿ ಪರ್ಪಲ್​ ಕ್ಯಾಪ್​ಗಾಗಿ ಗುಜರಾತ್​ ಟೈಟನ್ಸ್​ ತಂಡದ ಮೊಹಮ್ಮದ್​ ಶಮಿ, ರಶೀದ್​ ಖಾನ್​ ಮತ್ತು ಮೋಹಿತ್​ ಶರ್ಮ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಶೀದ್​ ಖಾನ್​ ಮತ್ತು ಶಮಿ 16 ಪಂದ್ಯಗಳನ್ನಾಡಿ ಕ್ರಮವಾಗಿ 28 ಮತ್ತು 27 ವಿಕೆಟ್​ ಕಬಳಿಸಿದ್ದಾರೆ. ಸದ್ಯದ ಮಟ್ಟಿಗೆ ಪರ್ಪಲ್ ಕ್ಯಾಪ್​ ಶಮಿ ಬಳಿ ಇದೆ. ಇದೇ ತಂಡದ ಮೋಹಿತ್​ ಶರ್ಮ ಕೂಡ ಈ ರೇಸ್​ನಲ್ಲಿದ್ದಾರೆ ಅವರು 13 ಪಮದ್ಯಗಳನ್ನು ಆಡಿ 24 ವಿಕೆಟ್​ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತು ಮಿಂಚಿದ್ದರು. ಫೈನಲ್​ ಪಂದ್ಯದಲ್ಲಿಯೂ ಅವರು ಇದೇ ರೀತಿಯ ಸಾಧನೆ ತೋರಿದರೆ ಶಮಿ ಮತ್ತು ರಶೀದ್​ ಖಾನ್​ ಹಿಂದಿಕ್ಕಿ ಪರ್ಪಲ್ ಕ್ಯಾಪ್ ಪಡೆಯುವ ಅವಕಾಶವಿದೆ. ಮೂವರು ಆಟಗಾರರಿಗೆ ಪ್ರತಿಸ್ಪರ್ಧಿಯಾಗಿದ್ದ ಪಿಯೂಷ್​ ಚಾವ್ಲಾ ಕಳೆದ ಪಂದ್ಯದಲ್ಲಿ ಅವರ ತಂಡ ಮುಂಬೈ ಇಂಡಿಯನ್ಸ್​ ಸೋತು ಟೂರ್ನಿಯಿಂದ ಹೊರಬಿದ್ದ ಕಾರಣ ಅವರೂ ಕೂಡ ಈ ರೇಸ್​ನಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ IPL 2023: ಟೈಟನ್ಸ್​ ರನ್​ ಮಳೆಗೆ ಮುಳುಗಿದ ಮುಂಬೈ; ಫೈನಲ್​ಗೆ ಹಾರ್ದಿಕ್​ ಪಡೆ

ಗಿಲ್​ ಬಳಿ ಆರೆಂಜ್​ ಕ್ಯಾಪ್​

ಮುಂಬೈ ಇಂಡಿಯನ್ಸ್​ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ಶುಭಮನ್​ ಗಿಲ್​ ಅವರು ಈ ಬಾರಿಯ ಐಪಿಎಲ್​ನ​ ಆರೆಂಜ್​ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 730 ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಗಿಲ್​ ಅವರು 851 ರನ್​ ಬಾರಿಸಿದ್ದಾರೆ. ಆರ್​ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್​ಗೆ ಇನ್ನು ಗಿಲ್​ ದಾಖಲೆ ಮುರಿಯುವ ಅವಕಾಶವಿಲ್ಲ. ಸದ್ಯ ಈ ರೇಸ್​ನಲ್ಲಿರುವ ಆಟಗಾರನೆಂದರೆ ಚೆನ್ನೈ ತಂಡದ ಡೆವೋನ್​ ಕಾನ್ವೆ. 15 ಪಂದ್ಯ ಆಡಿರುವ ಅವರು 625 ರನ್​ ಬಾರಿಸಿದ್ದಾರೆ. ಫೈನಲ್​ ಪಂದ್ಯ ಬಾಕಿ ಇದ್ದರೂ ಅವರಿಗೆ ಈ ಮೊತ್ತವನ್ನು ಗಳಿಸಲು ಅಸಾಧ್ಯ.

ಫೈನಲ್​ಗೆ ಲಗ್ಗೆ ಇಟ್ಟ ಗುಜರಾತ್​

ಶುಕ್ರವಾರ ರಾತ್ರಿ ನಡೆದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ 62 ರನ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್​ ಪಡೆ ಫೈನಲ್​ಗೆ ಲಗ್ಗೆಯಿಟ್ಟಿದೆ.​ ಮೇ 28 ರಂದು ನಡೆಯುವ ​ಪ್ರಶಸ್ತಿ ಸಮರದಲ್ಲಿ ಚೆನ್ನೈ ತಂಡದ ಸವಾಲು ಎದುರಿಸಲಿದೆ. ಸೋಲು ಕಂಡ ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ಶುಭಮನ್​ ಗಿಲ್​ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 233 ರನ್​ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್​ 18.2 ಓವರ್​ಗಳಲ್ಲಿ 171 ರನ್​ ಗಳಿಸಿ ಸರ್ವಪತನ ಕಂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಕ್ರಿಕೆಟ್

IPL 2023 : ಸಿಎಸ್​ಕೆ ತಂಡ ಚಾಂಪಿಯನ್ ಆದರೆ ಈ ಮೂರು ದಾಖಲೆಗಳು ಗ್ಯಾರಂಟಿ; ಯಾವೆಲ್ಲ ಅವು?

ಅಹಮದಾಬಾದ್​ನ ನರೆಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಗುಜರಾತ್​ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.

VISTARANEWS.COM


on

Chennai Super Kings Team
Koo

ಅಹಮದಾಬಾದ್​: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಮೇ 23ರಂದು) ನಡೆದ ಐಪಿಎಲ್ 2023ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು 15 ರನ್​ಗಳಿಂದ ಸೋಲಿಸಿತು. ಈ ಮೂಲಕ ದುಬೈನಲ್ಲಿ ನಡೆದಿದ್ದ 2021ರ ಋತುವಿನ ಐಪಿಎಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ಬಳಿಕ ಮತ್ತೊಂದು ಬಾರಿ ಫೈನಲ್​ಗೇರಿತು.

ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಇದುವರೆಗೆ ಆಡಿರುವ ಒಟ್ಟು ನಾಲ್ಕು ಪಂದ್ಯಗಳಲ್ಲಿ ಗಳಿಸಿದ ಮೊದಲ ಗೆಲುವಾಗಿದೆ. ಮಾರ್ಚ್ 31ರಂದು ಅಹಮದಾಬಾದ್​​ನಲ್ಲಿ ನಡೆದ ಐಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದರು. ಅದರಲ್ಲಿ ಪಾಂಡ್ಯ ಬಳಗ ಐದು ವಿಕೆಟ್​​ಗಳಿಂದ ವಿಜಯ ಸಾಧಿಸಿತ್ತು. ಏತನ್ಮಧ್ಯೆ ಸಿಎಸ್​ಕೆ ತಂಡ 2011ರ ಋತುವಿನಲ್ಲಿ ಅಳವಡಿಸಲಾದ ಪ್ಲೇಆಫ್ ಮಾದರಿಯಲ್ಲಿ ಇದುವರೆಗೆ ಸಿಎಸ್​ಕೆ ತಂಡ ಐದು ಬಾರಿ ಕ್ವಾಲಿಫೈಯರ್ 1ರಲ್ಲಿ ಗೆಲುವು ದಾಖಲಿಸಿದಂತಾಗಿದೆ.

ಸಿಎಸ್​ಕೆ ತಂಡ ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಐಪಿಎಲ್ ಫೈನಲ್​ನಲ್ಲಿ ಐದು ಬಾರಿ ಸೋತಿದೆ. ಮೂರು ಬಾರಿ ಮುಂಬಯಿ ಇಂಡಿಯನ್ಸ್ ತಂಡ ತಲಾ ಒಂದು ಸಲ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದೆ. ಇವೆಲ್ಲದರ ನಡುವೆ ಭಾನುವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದರೆ ಸಿಎಸ್​ಕೆ ತಂಡ ಮೂರು ದಾಖಲೆಗಳನ್ನು ಸೃಷ್ಟಿಸಲಿದೆ. ಅವುಗಳ ವಿವರ ಇಲ್ಲಿದೆ.

ಸರಿಗಟ್ಟಲಿದೆ ಮುಂಬಯಿ ದಾಖಲೆ

ಭಾನುವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ, ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿ ಹೊರಹೊಮ್ಮಲಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ದಾಖಲೆ ಸರಿಗಟ್ಟಲಿದೆ ಸಿಎಸ್​ಕೆ ತಂಡ ಇದವರೆಗೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದರೆ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ. 2010, 2011, 2018 ಮತ್ತು 2021ರಲ್ಲಿ ಸೂಪರ್ ಕಿಂಗ್ಸ್ ಐಪಿಎಲ್ ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 2013, 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಗೆಲುವಿನೊಂದಿಗೆ ಎಂಎಸ್ ಧೋನಿಯೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ : IPL 2023 : ಕ್ವಾಲಿಫೈಯರ್​ 1ರಲ್ಲಿ ಗೆಲ್ಲುವವರು ಯಾರು? ಸಿಎಸ್​ಕೆ ಅಥವಾ ಗುಜರಾತ್​?

ಐಪಿಎಲ್ ಗೆದ್ದ ಅತಿ ಹಿರಿಯ ನಾಯಕ

ಸಿಎಸ್​ಕೆ ನಾಯಕ ಎಂಎಸ್ ಧೋನಿ ಆರಂಭದಿಂದಲೂ ಸಿಎಸ್​ಕೆ ನಾಯಕರಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದರೆ, ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್​ ಪಟ್ಟ ಗಳಿಸಿದ ಹಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ. ಧೋನಿಗೆ ಈಗ 41 ನೇ ವರ್ಷ. ಈ ಮೂಲಕ ಮತ್ತೊಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ.

ಋತುರಾಜ್​ಗೂ ದಾಖಲೆಯ ಅವಕಾಶ

ಫೈನಲ್​ ಪಂದ್ಯದಲ್ಲಿ ಗಾಯಕ್ವಾಡ್ 36 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ ಮತ್ತು ಸಿಎಸ್​ಕೆ ತಂಡ ಟ್ರೋಫಿಯನ್ನು ಗೆದ್ದರೆ, ಅವರು ಪ್ರಶಸ್ತಿ ಗೆದ್ದ ವರ್ಷದಲ್ಲಿ 600+ ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಐಪಿಎಲ್ 2021ರಲ್ಲಿ ಋತುರಾಜ್​ 635 ರನ್​ ಪೇರಿಸಿದ್ದರು. ಹಾಲಿ ಋತುವಿನಲ್ಲಿ 564* ರನ್ ಗಳಿಸಿದ್ದಾರೆ.

Continue Reading

ಕ್ರಿಕೆಟ್

IPL 2023 : ಫೈನಲ್​ ಪಂದ್ಯದಲ್ಲಿ ಸೃಷ್ಟಿಯಾಗಲಿರುವ ಕೆಲವು ದಾಖಲೆಗಳ ವಿವರ ಹೀಗಿದೆ ನೋಡಿ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಇದು ಐಪಿಎಲ್​ನ 250ನೇ ಪಂದ್ಯವಾಗಿದೆ.

VISTARANEWS.COM


on

hardik Pandya and Mahendra singh Dhoni
Koo

ಅಹಮದಾಬಾದ್​ : 70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಮುಖಾಮುಖಿಗಳ ನಂತರ ಎಲ್ಲರ ಗಮನ ಇಂಡಿಯನ್ ಪ್ರೀಮಿಯರ್ ಲೀಗ್​​ನ (IPL 2023) ಮೆಗಾ ಫೈನಲ್​ ಕಡೆಗೆ ನೆಟ್ಟಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾನುವಾರ (ಮೇ 28ರಂದು) ಫೈನಲ್ ಹಣಾಹಣಿ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯದ ವೇಳೆ ಕೆಲವು ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹಾಗೂ ಮೈಲುಗಲ್ಲುಗಳನ್ನು ಸೃಷ್ಟಿಸಲಿದ್ದಾರೆ. ಅವುಗಳು ಇಂತಿವೆ.

  • 05- ಗುಜರಾತ್ ಟೈಟನ್ಸ್​ ಹಾಗೂ ಐಪಿಎಲ್​ನಲ್ಲಿ ಐದನೇ ಬಾರಿ ಎದುರಾಗುತ್ತಿವೆ. ಮೂರು ಬಾರಿ ಟೈಟನ್ಸ್ ತಂಡ ಗೆದ್ದಿದ್ದರೆ ಒಂದು ಬಾರಿ ಚೆನ್ನೈ ತಂಡ ಗೆಲುವು ಸಾಧಿಸಿದೆ. ಐದನೇ ಬಾರಿಯ ಗೆಲುವು ಯಾರಿಗೆ ಎಂಬುದು ಈ ಪಂದ್ಯದ ಬಳಿಕ ಗೊತ್ತಾಗಲಿದೆ.
  • 06- ಅಜಿಂಕ್ಯ ರಹಾನೆ ಐಪಿಎಲ್​ನಲ್ಲಿ ಒಟ್ಟಾರೆ 94 ಸಿಕ್ಸರ್ ಬಾರಿಸಿದ್ದಾರೆ. 100 ಗುರಿ ತಲುಪಲು ಅವರು ಈ ಪಂದ್ಯದಲ್ಲ ಆರು ಸಿಕ್ಸರ್​ ಬಾರಿಸಬೇಕಾಗಿದೆ.
  • 16- ಅಜಿಂಕ್ಯ ರಹಾನೆ ಟಿ20 ಮಾದರಿ ಕ್ರಿಕೆಟ್​ನಲ್ಲಿ ಒಟ್ಟು 5939 ರನ್ ಬಾರಿಸಿದ್ದಾರೆ. 6000 ರನ್​ಗಳ ಮೈಲುಗಲ್ಲು ದಾಖಲು 61 ರನ್​ಗಳ ಕೊರತೆ ಎದುರಿಸುತ್ತಿದ್ದಾರೆ.
  • 02- ಟಿ20 ಕ್ರಿಕೆಟ್​​ನಲ್ಲಿ 150 ವಿಕೆಟ್​​ಗಳನ್ನು ಪಡೆಯಲು ಹಾರ್ದಿಕ್ ಪಾಂಡ್ಯ (148) ಅವರಿಗೆ ಎರಡು ವಿಕೆಟ್​​ಗಳ ಅಗತ್ಯವಿದೆ.
  • 04- ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಅಂಬಾಟಿ ರಾಯುಡು ಟಿ20 ಮಾದರಿಯಲ್ಲಿ 496 ಫೋರ್​ಗಳನ್ನು ಬಾರಿಸಿದ್ದಾರೆ. 500 ಸಾಧನೆ ಮಾಡಲು 4 ಫೋರ್​ಗಳು ಬೇಕಾಗಿವೆ.
  • 01- ಸಿಎಸ್​​ಕೆ ನಾಯಕ ಎಂ.ಎಸ್.ಧೋನಿ ಐಪಿಎಲ್​ನಲ್ಲಿ 349 ಫೋರ್​​ಗಳನ್ನು ಬಾರಿಸಿದ್ದಾರೆ. 350ರ ಗಡಿ ದಾಟಲು ಒಂದು ಫೋರ್​ನ ಅಗತ್ಯವಿದೆ.
  • 02- ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಐಪಿಎಲ್​ನಲ್ಲಿ 98 ಸಿಕ್ಸರ್​ಗಳನ್ನು ಬಾರಿಸಿದ್ದು, 100 ಸಿಕ್ಸರ್​ಗಳನ್ನು ಬಾರಿಸಲು 2 ಸಿಕ್ಸರ್ ಬೇಕಾಗಿದೆ.
  • 02- ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ ಇದುವರೆಗೆ 48 ವಿಕೆಟ್​ಗಳನ್ನು ಕಬಳಿಸಿದ್ದಾರೆ. 50 ವಿಕೆಟ್ ಕಬಳಿಸಲು ಅವರಿಗೆ 2 ವಿಕೆಟ್ ಅಗತ್ಯವಿದೆ.
  • 04- ರಶೀದ್ ಖಾನ್ ಗುಜರಾತ್ ತಂಡದ ಪರ 46 ವಿಕೆಟ್​ ಉರುಳಿಸಿದ್ದರು. 50 ವಿಕೆಟ್ ಪೂರೈಸಲು 4 ವಿಕೆಟ್ ಅಗತ್ಯವಿದೆ.
  • 08- ರವೀಂದ್ರ ಜಡೇಜಾ ಐಪಿಎಲ್​ನಲ್ಲಿ 192 ಫೋರ್​​ಗಳನ್ನು ಬಾರಿಸಿದ್ದಾರೆ. 200 ಫೋರ್​ಗಳನ್ನು ಪೂರ್ಣಗೊಳಿಸಲು ಎಂಟು ಫೋರ್​ಗಳ ಅಗತ್ಯವಿದೆ.
  • 11- ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಎಗ ಐಪಿಎಲ್​ನಲ್ಲಿ 11 ಬಾರಿ ಫೈನಲ್ ತಲುಪಿದ ಹೆಗ್ಗಳಿಕೆ ಸಿಗಲಿದೆ.
  • 01- ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್​ಕೆ ಪರ 249 ಪಂದ್ಯಗಳಲ್ಲಿ ಆಡಿದ್ದು 250ನೇ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಒಂದು ಪಂದ್ಯ ಬಾಕಿ ಇದೆ.
  • 49- ಗುಜರಾತ್​ ತಂಡದ ಬ್ಯಾಟರ್​ ಶುಭ್​ಮನ್​ ಗಿಲ್​ಗೆ ಐಪಿಎಲ್​ನಲ್ಲಿ 900 ರನ್​ಗಳ ಗಡಿ ದಾಟಲು 49 ರನ್​ಗಳ ಅಗತ್ಯವಿದೆ.
  • 123- ಐಪಿಎಲ್​ನಲ್ಲಿ ಋತು ಒಂದರಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ದಾಖಲೆ ಮಾಡಲು ಶುಭ್​ಮನ್​ ಗಿಲ್​​ಗೆ (851) ಗೆ 123 ರನ್​ಗಳ ಅಗತ್ಯವಿದೆ.
  • 01- ಗುಜರಾತ್​ ತಂಡದ ಬೌಲರ್​ ಅಲ್ಜಾರಿ ಜೋಸೆಫ್ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 99 ವಿಕೆಟ್​ ಉರುಳಿಸಿದ್ದು. 00ರ ಸಾಧನೆ ಮಾಡಲು ಒಂದು ವಿಕೆಟ್​ ಬೇಕಾಗಿದೆ.
  • 03- ಗುಜರಾತ್ ಬೌಲರ್​ ಮೋಹಿತ್ ಶರ್ಮಾ ಟಿ20 ಕ್ರಿಕೆಟ್​ನಲ್ಲಿ 147 ವಿಕೆಟ್​ ಪಡೆದಿದ್ದು. 150 ವಿಕೆಟ್​​ಗಳನ್ನು ಪೂರೈಸಲು 3 ವಿಕೆಟ್​ಗಳ ಅಗತ್ಯವಿದೆ.
  • 01- ಚೆನ್ನೈ ತಂಡದ ಬೌಲರ್​ ದೀಪಕ್ ಚಾಹರ್​ ಟಿ20 ಮಾದರಿಯಲ್ಲಿ 149 ವಿಕೆಟ್​ಗಳನ್ನು ಉರುಳಿಸಿದ್ದು. 150ರ ಮೈಲುಗಲ್ಲು ಸ್ಥಾಪಿಸಲು ಒಂದು ವಿಕೆಟ್ ದೂರದಲ್ಲಿದ್ದಾರೆ.
  • 05- ಐಪಿಎಲ್​​ನಲ್ಲಿ 100 ಫೋರ್​​ಗಳ ಸಾಧನೆ ಮಾಡಲು ಸಿಎಸ್​ಕೆ ಆರಂಭಿಕ ಬ್ಯಾಟರ್​ ಡೆವೊನ್ ಕಾನ್ವೆಗೆ (95) ಐದು ಫೋರ್​​ಗಳ ಅಗತ್ಯವಿದೆ.
  • 01- ಗುಜರಾತ್ ತಂಡದ ಬೌಲರ್​ ಮೋಹಿತ್ ಶರ್ಮಾ (99) ಅವರಿಗೆ ಐಪಿಎಲ್​ನ 100ನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ.
Continue Reading

ಕ್ರಿಕೆಟ್

IPL 2023: ಫೈನಲ್​ ಪಂದ್ಯಕ್ಕೆ ಮಳೆ ನಿಯಮ ಹೇಗಿದೆ?

ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟನ್ಸ್​ ವಿರುದ್ಧದ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನಕ್ಕೆ ಈ ಪಂದ್ಯವನ್ನು ಮುಂದೂಡಲಾಗುತ್ತದೆ.

VISTARANEWS.COM


on

Edited by

rain forecast
Koo

ಅಹಮದಾಬಾದ್​: ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟನ್ಸ್​ ವಿರುದ್ಧದ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ಯಾವ ತಂಡಕ್ಕೆ ಲಾಭ, ಫಲಿತಾಂಶ ನಿರ್ಣಯ ಹೇಗೆ ಎಂಬ ಕ್ರಿಕೆಟ್​ ಅಭಿಮಾನಿಗಳ ಹಲವು ಕುತೂಹಲಕ್ಕೆ ಇಲ್ಲಿದೆ ಸಂಪೂರ್ಣ ಉತ್ತರ.

ಅಹಮದಾಬಾದ್​ನಲ್ಲಿ ನಡೆಯುವ ಈ ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಇರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಕ್ವಾಲಿಫೈಯರ್​ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿ ಪಂದ್ಯ ವಿಳಂಬಗೊಂಡಿತ್ತು. ಇದೀಗ ಫೈನಲ್​ ದಿನ ಮಳೆ ಬಂದರೆ ಏನಾಗಲಿದೆ ಎಂಬುದಕ್ಕೆ ಐಪಿಎಲ್ ಮಂಡಳಿ ಸಂಪೂರ್ಣ ಮಾಹಿತಿ ನೀಡಿದೆ. ಆರಂಭದಲ್ಲಿ ಮಳೆ ನಿಲ್ಲುವ ವರೆಗೆ ಕಾಯಲಾಗುತ್ತದೆ. ಮೊದಲ ಯೋಜನೆಯಂತೆ ಓವರ್​ ಕಡಿತಗೊಳಿಸಿ ಪಂದ್ಯವನ್ನು ಆಡಿಸಲು ನಿರ್ಧಾರಿಸಲಾಗುತ್ತದೆ. ಒಂದೊಮ್ಮೆ ಇದಕ್ಕೂ ಮಳೆ ಅನುವು ಮಾಡಿಕೊಡದಿದ್ದರೆ ಆಗ ರಾತ್ರಿ1.20 ವರೆಗೆ ಕಾದು ಸೂಪರ್​ ಓವರ್​ ಮೂಲಕ ಪಂದ್ಯದ ಫಲಿತಾಂಶಕ್ಕೆ ಮೊರೆಹೋಗಲಾಗುತ್ತದೆ. ಇದು ಕೂಡ ಸಾಧ್ಯವಾಗದಿದ್ದರೆ ಮೀಸಲು ದಿನವಾದ 29ನೇ ತಾರಿಕಿಗೆ ಪಂದ್ಯವನ್ನು ಮುಂದೂಡಲಾಗುತ್ತದೆ.

ಒಂದೊಮ್ಮೆ ಭಾನುವಾರ ಟಾಸ್​ ಗೆದ್ದು ಪಂದ್ಯ ನಡೆಯದೇ ಇದ್ದರೆ ಆಗ ಮೀಸಲು ದಿನ ಹೊಸ ಟಾಸ್​ ಪ್ರಕ್ರಿಕೆ ಮೂಲಕ ಪಂದ್ಯ ಆರಂಭಿಸಲಾಗುತ್ತದೆ. ಇನ್ನೊಂದು ನಿಯಮದ ಪ್ರಕಾರ ಭಾನುವಾರ ಒಂದು ತಂಡ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಮಳೆ ಬಂದು ಅಂತಿಮ ನಿಗದಿತ ಸಮಯದಲ್ಲೂ ಪಂದ್ಯ ನಡೆಯದಿದ್ದರೆ, ಆಗ ಮೀಸಲು ದಿನದಂದು ಹಿಂದಿನ ದಿನ ಎಷ್ಟು ಓವರ್​ಗೆ ಪಂದ್ಯ ನಿಂತಿದೆಯೋ ಅಲ್ಲಿಂದ ಪಂದ್ಯ ಮರು ಆರಂಭವಾಗಲಿದೆ. ಉದಾಹರಣೆಗೆ ಭಾನುವಾರ ಒಂದು ತಂಡ 4 ಓವರ್​ ಬ್ಯಾಟಿಂಗ್​ ನಡೆಸಿ ಬಳಿಕ ಮಳೆಯಿಂದ ಪಂದ್ಯ ರದ್ದಾದರೆ ಮೀಸಲು ದಿನ ಉಳಿದ 16 ಓವರ್​ ಆಟವನ್ನು ಆಡಲಿದೆ.

ಇದನ್ನೂ ಓದಿ IPL 2023: ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ; ಚೆನ್ನೈ-ಗುಜರಾತ್​ ನಡುವೆ ಫೈನಲ್​ ಕಾದಾಟ

ಮೀಸಲು ದಿನವೂ ಮಳೆ ಬಂದರೆ ಏನು ಗತಿ

ಒಂದೊಮ್ಮೆ ಮೀಸಲು ದಿನವೂ ಮಳೆಯಿಂದ ಸಂಪೂರ್ಣವಾಗಿ ಪಂದ್ಯ ನಡೆಯದೇ ಇದ್ದರೆ. ಆಗ ಲೀಗ್​ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹೀಗಾದರೆ ಈ ಲಕ್​ ಗುಜರಾತ್​ ತಂಡಕ್ಕೆ ಒಲಿಯಲಿದೆ. ಕಾರಣ ಗುಜರಾತ್​ ಲೀಗ್​ನಲ್ಲಿ 10 ಪಂದ್ಯ ಗೆದ್ದು 20 ಅಂಕ ಸಂಪಾದಿಸಿತ್ತು.

Continue Reading

ಕ್ರಿಕೆಟ್

IPL 2023 : ಇಶಾನ್​ ಬದಲಿಗೆ ಆಡಿದ ಈ ಆಟಗಾರ ಐಪಿಎಲ್​ ಇತಿಹಾಸದ ಮೊದಲ ಕಂ​ಕಶನ್​ ಸಬ್​​ಸ್ಟಿಟ್ಯೂಟ್​

ಐಪಿಎಲ್ 2023 ರ ಕ್ವಾಲಿಫೈಯರ್ 2 ಪಂದ್ಯದ ಮೊದಲ ಇನ್ನಿಂಗ್ಸ್​ ವೇಳೆ ಇಶಾನ್ ಕಿಶನ್ ಕಣ್ಣಿನ ಗಾಯಕ್ಕೆ ಒಳಗಾಗಿದ್ದರಿಂದ ಬ್ಯಾಟಿಂಗ್​​ಗೆ ಇಳಿದಿರಲಿಲ್ಲ.

VISTARANEWS.COM


on

Vishnu Vinod
Koo

ಅಹಮದಾಬಾದ್​: ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಗುಜರಾತ್​ ಟೈಟನ್ಸ್​ ತಂಡ ಫೈನಲ್​ಗೇರಿದ್ದು ಭಾನುವಾರ ಇದೇ ತಾಣದಲ್ಲಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎದುರಾಗಲಿದೆ. ಏತನ್ಮಧ್ಯೆ, ಆರನೇ ಬಾರಿ ಟ್ರೋಫಿ ಗೆಲ್ಲುವ ಆಸೆಯೊಂದಿಗೆ ಕಣಕ್ಕೆ ಇಳಿದಿದ್ದ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಭಾರೀ ನಿರಾಸೆ ಎದುರಾಯಿತು. ಪಂದ್ಯದ ನಡುವೆ ಇಬ್ಬರು ಆಟಗಾರರು ಗಾಯಗೊಂಡಿರುವುದೇ ತಂಡದ ಸೋಲಿಗೆ ಕಾರಣ ಎಂದೂ ಹೇಳಲಾಗುತ್ತಿದೆ. ಇಶಾನ್​ ಕಿಶನ್​ ಹಾಗೂ ಕ್ಯಾಮೆರಾನ್​ ಗ್ರೀನ್​ ಗಾಯಗೊಂಡವರು. ಗ್ರೀನ್​ ಆಟ ಮುಂದುವರಿಸಿದರೂ, ಇಶಾನ್​ಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರ ಬದಲಿಗೆ ವಿಷ್ಣು ವಿನೋದ್​ ಅವಕಾಶ ಪಡೆದುಕೊಂಡರು. ಈ ಮೂಲಕ ವಿಷ್ಣು ಐಪಿಎಲ್​ ಇತಿಹಾಸದ ಮೊದಲ ಇನ್​ಕಷನ್​ ಬದಲಿ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡರು.

ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ಗುಜರಾತ್ ಟೈಟನ್ಸ್​​ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸಹ ಆಟಗಾರ ಕ್ರಿಸ್ ಜೋರ್ಡಾನ್ ಅವರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಅವರ ಕಣ್ಣಿಗೆ ಗಾಯವಾಗಿತ್ತು. ಹೀಗಾಗಿ ಅವರಿಗೆ ಆಟ ಮುಂದುವರಿಯಲ ಸಾಧ್ಯವಾಗಲಿಲ್ಲ. ಈ ವೇಳೆ ಟೀಮ್ ಮ್ಯಾನೇಜ್ಮೆಂಟ್​ ಆಯ್ಕೆ ಮಾಡಿದ್ದ ವಿಕೆಟ್​ಕೀಪರ್​ ಆಗಿ ಆಯ್ಕೆ ಮಾಡಿದ್ದು ವಿಷ್ಣು ವಿನೋದ್ ಅವರನ್ನು. ಆದರೆ ತಮಗೆ ಸಿಕ್ಕ ಅವಕಾಶವನ್ನು ವಿನೋದ್ ಬಳಸಿಕೊಳ್ಳಲಿಲ್ಲ. 7 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ಔಟಾದರು.

ಇದನ್ನೂ ಓದಿ : IPL 2023 : ಟ್ರೋಫಿ ಗೆದ್ದವರ ಜೇಬಿಗಿಳಿಯಲಿದೆ ಕೋಟಿ ಕೋಟಿ ರೂಪಾಯಿ! ಇಲ್ಲಿದೆ ಬಹುಮಾನದ ವಿವರ

ಅದಕ್ಕಿಂತ ಮೊದಲು ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರಾನ್​ ಗ್ರೀನ್ ಕೂಡ ಗಾಯಗೊಂಡಿದ್ದರು. 16ನೇ ಓವರ್​ನ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಹಿಡಿಯಲು ಯತ್ನಿಸಿದಾಗ ರೋಹಿತ್ ಕೈಗೆ ಸಣ್ಣ ಗಾಯವಾಗಿತ್ತು. ಹೀಗಾಗಿ ಬ್ಯಾಟಿಂಗ್ ಮಧ್ಯ ಒಂದು ಬಾರಿ ಮೈದಾನದಿಂದ ಹೊರಕ್ಕೆ ನಡೆದರು. ಬಳಿಕ ವಾಪಸ್​ ಬಂದರೂ ಸರಿಯಾಗಿ ಆಡಲು ಅವರಿಗೆ ಸಾಧ್ಯವಾಗಲಿಲ್ಲ.

ಮೂರು ವರ್ಷದ ಹಿಂದೆ ಪರಿಚಿತವಾದ ನಿಯಮ

ಐಪಿಎಲ್​​ನ 2020ರ ಆವೃತ್ತಿಯಲ್ಲಿ ಕಂಕಷನ್​ ನಿಯಮವನ್ನು ಪರಿಚಯಿಸಲಾಗಿತ್ತು. ಆದರೆ, ಅದನ್ನು ಮೊದಲು ಬಳಿಸಿದ್ದು ಮುಂಬಯಿ ಇಂಡಿಯನ್ಸ್​ ತಂಡ ಎಂಬ ಇತಿಹಾಸ ಬರೆಯಿತು. ಇಶಾನ್​ ಕಿಶನ್​ ಆಡದೇ ಉಳಿದರೆ ವಿನೋದ್ ಕಂಕಷನ್​ ಆಯ್ಕೆ ಎಂಬ ಖ್ಯಾತಿ ಪಡೆದರು. ಅಚ್ಚರಿಯೆಂದೇ ಇದೇ ಪಂದ್ಯದಲ್ಲಿ ಗುಜರಾತ್​ ತಂಡದ ಬ್ಯಾಟರ್​ ಸಾಯಿ ಸುದರ್ಶನ್ ಅವರೂ ಗಾಯದಿಂದ ಹೊರನಡೆದರು. 31 ಎಸೆತಗಳಲ್ಲಿ 42 ರನ್ ಗಳಿಸಿದ ನಂತರ ಅವರು ಪೆವಿಲಿಯನ್​​ಗೆ ನಡೆದರು.

ಗುಜರಾತ್​ ತಂಡ ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮಾ ಅವರ ಅದ್ಭುತ ಐದು ವಿಕೆಟ್​​ಗಳನ್ನು ಪಡೆಯುವ ಮೂಲಕ ಮುಂಬೈ ತಂಡದ ವಿರುದ್ಧ 62 ರನ್​ಗಳ ಗೆಲುವಿಗೆ ಕಾರಣರಾದರು.

Continue Reading
Advertisement
Foundation laying programme of new parliament building
ಕರ್ನಾಟಕ10 mins ago

New Parliament Building : ನೂತನ ಸಂಸತ್‌ ಭವನ ಉದ್ಘಾಟನೆಗೆ ಶೃಂಗೇರಿ ಪುರೋಹಿತರು

Laxmi Hebbalkar Shashikala jolle and leelavati r prasad
ಕರ್ನಾಟಕ18 mins ago

Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!

New Parliament Building
ದೇಶ19 mins ago

ಹಳೇ ಬೇರು, ಹೊಸ ಚಿಗುರು: ಮೊದಲಿನ ಸಂಸತ್‌, ನೂತನ ಸಂಸತ್‌ ಭವನದ ನಡುವಿನ ವ್ಯತ್ಯಾಸ ಹೀಗಿದೆ ನೋಡಿ

Darbar Film
South Cinema24 mins ago

V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್

TB Jayachandra granddaughter with letter to rahul gandhi
ಕರ್ನಾಟಕ29 mins ago

Karnataka Cabinet: ತಾತನನ್ನು ಮಿನಿಸ್ಟರ್‌ ಮಾಡಿ ಪ್ಲೀಸ್‌: ರಾಹುಲ್‌ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು

new Simple One Scooter
ಆಟೋಮೊಬೈಲ್38 mins ago

Simple One: ಒಂದು ಚಾರ್ಜ್​​ಗೆ 212 ಕಿ.ಮೀ ಓಡುವ ಸ್ಕೂಟರ್​ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತೇ?

upsc prelims 2023 IAS prelims 2023
ಉದ್ಯೋಗ40 mins ago

UPSC Prelims 2023: ನಾಳೆ ಯುಪಿಎಸ್‌ಸಿ ಪ್ರಿಲಿಮ್ಸ್‌; ಈ ಬಾರಿಯೂ ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

soudi
ವೈರಲ್ ನ್ಯೂಸ್44 mins ago

Viral News : ನಿತ್ಯ ಶಾಪಿಂಗ್‌ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!

TB Jayachandra speaking with media
ಕರ್ನಾಟಕ46 mins ago

Karnataka Cabinet: ರಾಜ್ಯ ಕಾಂಗ್ರೆಸ್‌ ನಾಯಕರ ಜತೆಗೆ ಮಾತುಕತೆ ಕಟ್‌: ಸದನದಲ್ಲಿ ನೋಡ್ಕೊತೀನಿ ಎಂದ ಜಯಚಂದ್ರ

Pond near kolar
ಕರ್ನಾಟಕ52 mins ago

Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Laxmi Hebbalkar oath taking as a minister
ಕರ್ನಾಟಕ2 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ24 hours ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ1 day ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ2 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ3 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ3 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!