IPL2022| ಅಂಪೈರ್‌ ʼನೋಬಾಲ್‌ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್ Vistara News
Connect with us

ಐಪಿಎಲ್ 2023

IPL2022| ಅಂಪೈರ್‌ ʼನೋಬಾಲ್‌ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್

ʼನೋಬಾಲ್‌ʼ ಅಲ್ಲ ಎಂದು ಅಂಪೈರ್‌ ನಿರ್ಧಾರ ನೀಡಿದ್ದರು. ದಿಲ್ಲಿ ತಂಡದ ಕ್ಯಾಪ್ಟನ್‌ ರಿಷಭ್‌ ಪಂತ್‌ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್‌ಗೆ ಬರುವಂತೆ ಸನ್ನೆ ಮಾಡಿದ್ದರು.

VISTARANEWS.COM


on

Koo

IPL2022: ಐಪಿಎಲ್‌ನ 34ನೇ ಪಂದ್ಯದಲ್ಲಿ Rajasthan Royals ಹಾಗೂ Delhi Capitals ಮುಖಾಮುಖಿಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಬೌಲಿಂಗ್‌ ಮಾಡುತ್ತಿದ್ದ ವೇಳೆಗೆ ಕೊನೇ ಓವರ್‌ನಲ್ಲಿ ʼನೋಬಾಲ್‌ʼ ಅಗಿದ್ದರೂ ʼನೋಬಾಲ್‌ʼ ಅಲ್ಲ ಎಂದು ಅಂಪೈರ್‌ ನಿರ್ಧಾರ ನೀಡಿದ್ದರು. ಇದರಿಂದ ದಿಲ್ಲಿ ತಂಡದ ಕ್ಯಾಪ್ಟನ್‌ ರಿಷಭ್‌ ಪಂತ್‌ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್‌ಗೆ ಬರುವಂತೆ ಸನ್ನೆ ಮಾಡಿದ್ದರು.

ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ತಂಡ 2 ವಿಕೆಟ್‌ ನಷ್ಟಕ್ಕೆ 222 ಸ್ಕೋರ್‌ ಮಾಡಿತ್ತು. ಜೊಸ್‌ ಬಟ್ಲರ್‌ 116 ರನ್‌ಗಳಿಸುವ ಮೂಲಕ ಮಿಂಚಿನ ಆಟವಾಡಿದರು. ಆದರೆ 223 ಟಾರ್ಗೆಟ್‌ ಬೆನ್ನಟ್ಟಿದ ದಿಲ್ಲಿ ಕ್ಯಾಪಿಟಲ್ಸ್‌ ಕೂಡ ಉತ್ತಮ ಆಟವಾಡುತ್ತಿತ್ತು. ಡಿ.ಸಿ. ತಂಡಕ್ಕೆ ಪಂದ್ಯವನ್ನು ಗೆಲ್ಲಲು ಕೊನೇಯ ಓವರ್‌ನಲ್ಲಿ 36 ರನ್‌ ಅವಶ್ಯಕತೆ ಇತ್ತು. ಆರ್.‌ಆರ್. ತಂಡದಿಂದ ಕೊನೇ ಓವರ್‌ ಬೌಲ್‌ ಮಾಡಲು ಒಬೆಡ್‌ ಮೆಕೊಯ್‌ ಮುಂದಾದರು. ಹಾಗೂ ರೋವ್ಮನ್‌ ಪೊವೆಲ್‌ ಸ್ಟ್ರೈಕ್‌ನಲ್ಲಿದ್ದರು. ಮೆಕೊಯ್‌ ಮಾಡಿದ ಮೊದಲೆರಡು ಬಾಲ್‌ಗಳಿಗೆ ಸಿಕ್ಸ್‌ ಬಾರಿಸಿದ್ದರು. ಮೂರನೇ ಬಾಲ್ ಕೂಡ ಬೌಂಡರಿಯಿಂದ ಹೊರಕಳಿಸುವಲ್ಲಿ ಯಶಸ್ವಿಯಾದರು. ಮೂರನೇ ಬಾಲ್‌ ಬ್ಯಾಟ್ಸ್‌ಮನ್‌ ಸೊಂಟದಿಂದ ಮೇಲಿದ್ದ ಕಾರಣಕ್ಕೆ ನೋಬಾಲ್‌ ಆಗಿತ್ತು. ಅಂಪೈರ್‌ ನೋಬಾಲ್‌ ಎಂದು ಪರಿಗಣಸಲಿಲ್ಲ. ನೋಬಾಲ್‌ ನೀಡಿದ್ದರೆ ದಿಲ್ಲಿ ತಂಡಕ್ಕೆ ಫ್ರೀ-ಹಿಟ್‌, ಒಂದು ಎಕ್ಸ್‌ಟ್ರಾ ರನ್‌ ಹಾಗೂ ಒಂದು ಬಾಲ್‌ ಎಕ್ಸ್‌ಟ್ರಾ ಸಿಗುತ್ತಿತ್ತು.

ಇದರಿಂದ ದಿಲ್ಲಿ ತಂಡದ ಆಟಗಾರರು ಕೋಪಗೊಂಡು ಡಗೌಟ್‌ನಲ್ಲಿ ರೊಚ್ಚಿಗೆದ್ದರು. ದಿಲ್ಲಿ ತಂಡದ ನಾಯಕ ರಿಷಭ್‌ ಪಂತ್‌ ಅಂಪೈರ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ರಿಷಭ್‌ ಪಂತ್ ಹಾಗೂ ಶಾರ್ದುಲ್‌ ಠಾಕುರ್‌ ಬ್ಯಾಟ್ಸ್‌ಮನ್‌ಗಳನ್ನು ಕೂಡಲೇ ಸ್ಟೇಡಿಯಂನಿಂದ ಹೊರಬರಲು ಸೂಚನೆ ನೀಡಿದರು. ರಾಜಸ್ಥಾನ್‌ ತಂಡದ ಜೊಸ್‌ ಬಟ್ಲರ್‌ ಹಾಗೂ ರಿಷಭ್‌ ಪಂತ್‌ ನಡುವೆ ಮಾತಿನ ಚಕಾಮಕಿ ಕೂಡ ಕಂಡುಬಂದಿತು. ಬ್ಯಾಟಿಂಗ್ ಮಾಡುತ್ತಿದ್ದ ಪೊವೆಲ್‌ ಹಾಗೂ ಕುಲ್ದೀಪ್‌ ಯಾದವ್‌ ಇಬ್ಬರೂ ಸ್ಟೇಡಿಯಂ ಬಿಟ್ಟು ಹೊರಟಿದ್ದರು. ಅಂಪೈರ್ಸ್‌ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಸ್ಟೇಡಿಯಂ ಬಿಟ್ಟು ಹೋಗದಂತೆ ತಡೆದರು. ರಾಜಸ್ಥಾನ್‌ ರಾಯಲ್ಸ್‌ನ ಲೆಗ್‌ ಸ್ಪಿನ್ನರ್‌ ಯುಜುವೇಂದ್ರ ಚಾಹಲ್‌ ಕೂಡ ಕುಲ್ದೀಪ್‌ ಯಾದವ್‌ ಹೊರಹೋಗದಂತೆ ತಡೆದರು. ನಂತರ ತಂಡದ ಹಿರಿಯ ಆಟಗಾರ ಶೇನ್‌ ವ್ಯಾಟ್ಸನ್‌ ರಿಷಭ್‌ ಅವರನ್ನು ಸಮಾಧಾನಗೊಳಿಸಿದರು.

ಪದ್ಯಂದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ರಿಷಭ್‌ ಅಂಪೈರ್‌ ನೀಡಿದ ನಿರ್ಧಾರದ ಕುರಿತು ಬೇಸರ ವ್ಯಕ್ತ ಪಡಿಸಿದರು.

ರಿಷಭ್‌ ಪಂತ್‌ ಹಾಗೂ ಶಾರ್ದುಲ್‌ ಠಾಕುರ್‌ ಅವರ ವರ್ತನೆಗೆ ಅವರಿಗೆ ದಂಡ ವಿಧಿಸಲಾಗಿದೆ ಹಾಗೂ ದಿಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್‌ ಪ್ರವೀಣ್‌ ಆಮ್ರೆಯವರನ್ನು ಒಂದು ಮ್ಯಾಚ್‌ ಮಟ್ಟಿಗೆ ಬ್ಯಾನ್‌ ಮಾಡಲಾಗಿದೆ.

ಈ ಘಟನೆಯ ಬಗ್ಗೆ ಹಿರಿಯ ಅಟಗಾರರಾದ ಗ್ರೇಮ್‌ ಸ್ವಾನ್‌, ಇರ್ಫಾನ್‌ ಪಠಾಣ್‌, ಹರ್ಷಾ ಭೋಗ್ಲೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಂಪೈರ್‌ ನೀಡಿದ ನಿರ್ಧಾರ ತಪ್ಪು, ಅದು ನೋಬಾಲ್‌ ಎಂದು ಟ್ವೀಟ್‌ ಮಾಡಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡ ದಿಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ 15 ರನ್‌ಗಳ ಗೆಲುವು ಸಾಧಿಸಿದೆ.

ಇದನ್ನೂ ಓದಿ: IPL 2022 | ದುಬಾರಿ ದುಡ್ಡಿಗೆ ಮಾರಾಟವಾದವರು ಹೇಗೆ ಆಡಿದರು ನೋಡಿ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಐಪಿಎಲ್ 2023

IPL 2023: ಜಯದ ಖುಷಿಯಲ್ಲೂ ತಿಲಕ್‌ ವರ್ಮಾ ಬಾಯಿಗೆ ‘ಹುಳಿ’ ಹಿಂಡಿದ ಸೂರ್ಯಕುಮಾರ್; ವಿಡಿಯೊ ನೋಡಿ

IPL 2023: ಎಲ್‌ಎಸ್‌ಜಿ ವಿರುದ್ಧ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ ತಂಡವು ಕ್ವಾಲಿಫೈಯರ್‌ 2ರಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ವಿರುದ್ಧ ಸೆಣಸಲಿದೆ.

VISTARANEWS.COM


on

Edited by

Suryakumar Yadav And Tilak Varma On Flight
Koo

ಅಹ್ಮದಾಬಾದ್:‌ ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ಧ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸನಿಹಕ್ಕೆ ತೆರಳಿರುವ ಮುಂಬೈ ಇಂಡಿಯನ್ಸ್‌ ತಂಡದ (IPL 2023) ಆಟಗಾರರು ಖುಷಿಯಲ್ಲಿದ್ದಾರೆ. ಎಲಿಮಿನೇಟರ್‌ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ 81 ರನ್‌ ಅಂತರದಲ್ಲಿ ಗೆಲುವು ಸಾಧಿಸಿರುವ ಮುಂಬೈ, ಎಲಿಮಿನೇಟರ್‌ 2ರಲ್ಲಿ ಗುಜರಾತ್‌ ವಿರುದ್ಧ ಸೆಣಸಾಡಲಿದೆ. ಇದಕ್ಕಾಗಿ ತಂಡವು ಚೆನ್ನೈನಿಂದ ಅಹ್ಮದಾಬಾದ್‌ಗೆ ತೆರಳಿದೆ. ಹೀಗೆ, ವಿಮಾನದಲ್ಲಿ ತೆರಳುವಾಗ ಸೂರ್ಯಕುಮಾರ್‌ ಯಾದವ್‌ ಅವರು ತಿಲಕ್‌ ವರ್ಮಾ ಬಾಯಿಯಲ್ಲಿ ನಿಂಬೆ ಹಣ್ಣಿನ ಹುಳಿ ಹಿಂಡುವ ಮೂಲಕ ತಮಾಷೆ ಮಾಡಿದ್ದಾರೆ.

ಚೆನ್ನೈನಿಂದ ಅಹ್ಮದಾಬಾದ್‌ಗೆ ಸ್ಪೈಸ್‌ ಜೆಟ್‌ ವಿಮಾನದಲ್ಲಿ ತೆರಳುವಾಗ ಮುಂಬೈ ಇಂಡಿಯನ್ಸ್‌ ತಂಡದ ತಿಲಕ್‌ ವರ್ಮಾ ಅವರು ಗಡದ್ದಾಗಿ ನಿದ್ದೆ ಮಾಡುತ್ತಿದ್ದರು. ಇದನ್ನು ಕಂಡ ಸೂರ್ಯಕುಮಾರ್‌ ಯಾದವ್‌ ಅವರಿಗೆ ಚೇಷ್ಟೆ ಮಾಡುವ ಮನಸ್ಸಾಗಿದೆ. ಆಗ, ಸೂರ್ಯಕುಮಾರ್‌ ಯಾದವ್‌ ಅವರು ಗಗನಸಖಿ ಬಳಿ ನಿಂಬೆ ಹಣ್ಣನ್ನು ಪಡೆದು, ನಿದ್ದೆಯಲ್ಲೇ ಮಗ್ನರಾಗಿದ್ದ ತಿಲಕ್‌ ವರ್ಮಾ ಬಾಯಲ್ಲಿ ಹಿಂಡಿದ್ದಾರೆ. ಇದರಿಂದ ಎಚ್ಚರಗೊಂಡ ತಿಲಕ್‌ ವರ್ಮಾ ಗಾಬರಿಗೊಂಡಿದ್ದಾರೆ. ನಿಂಬೆ ಹಣ್ಣಿನ ರುಚಿ ಗೊತ್ತಾದ ಬಳಿಕ ಮುಖ ಸಿಂಡರಿಸಿದ್ದಾರೆ.

ಇಲ್ಲಿದೆ ವಿಡಿಯೊ

ಸೂರ್ಯಕುಮಾರ್‌ ಅವರು ತಮಾಷೆ ಮಾಡುತ್ತಿದ್ದನ್ನು ನೋಡಿದ ಸಹ ಪ್ರಯಾಣಿಕರು ಹಾಗೂ ಗಗನಸಖಿಯರು ಕೂಡ ನಕ್ಕಿದ್ದಾರೆ. ಸೂರ್ಯಕುಮಾರ್‌ ಸೇರಿ ತಂಡದ ಆಟಗಾರರು ಕೂಡ ತಿಲಕ್‌ ವರ್ಮಾ ಅವರ ಸ್ಥಿತಿ ಕಂಡು ಇನ್ನೂ ಜೋರಾಗಿ ನಕ್ಕಿದ್ದಾರೆ. ಹೀಗೆ, ವಿಮಾನದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಚೇಷ್ಟೆಯಿಂದ ತಿಲಕ್‌ ವರ್ಮಾ ಪೆಚ್ಚಾಗಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: IPL 2023: ಗುಜರಾತ್​-ಮುಂಬೈ ನಡುವೆ ಕ್ವಾಲಿಫೈಯರ್ ಪಂದ್ಯ; ಯಾರಿಗೆ ಒಲಿಯಲಿದೆ ಫೈನಲ್​ ಲಕ್​

ಎಲಿಮಿನೇಟರ್‌ ಪಂದ್ಯದಲ್ಲಿ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಅವರ ಸಮಯೋಚಿತ ಬ್ಯಾಟಿಂಗ್‌ ಹಾಗೂ ಆಕಾಶ್‌ ಮಧ್ವಾಲ್‌ ಆಕ್ರಮಣಕಾರಿ ಬೌಲಿಂಗ್‌ ನೆರವಿನಿಂದ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌ ತಂಡವು ಕ್ವಾಲಿಫೈಯರ್‌ 2ರಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಶುಕ್ರವಾರ ಸೆಣಸಾಡಲಿದೆ. ಗುಜರಾತ್‌ ಹಾಗೂ ಮುಂಬೈ ತಂಡದಲ್ಲಿ ಯಾವ ತಂಡ ಗೆದ್ದರೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲಿದೆ. ಹಾಗಾಗಿ, ಎಲ್ಲರ ಗಮನ ಎಲಿಮಿನೇಟರ್‌ 2 ಪಂದ್ಯದ ಮೇಲಿದೆ.

Continue Reading

ಐಪಿಎಲ್ 2023

IPL 2023: ಸೋಲಿನೊಂದಿಗೆ ಐಪಿಎಲ್‌ನಿಂದ ಹೊರಬಿದ್ದ ಆರ್‌ಸಿಬಿ; ಹೀಗಿದೆ ತಂಡದ 16 ವರ್ಷದ ಪ್ರದರ್ಶನ

IPL 2023: ಗುಜರಾತ್‌ ಟೈಟನ್ಸ್‌ ವಿರುದ್ಧ ಸೋಲನುಭವಿಸುವುದರೊಂದಿಗೆ ಆರ್‌ಸಿಬಿಯು 16ನೇ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದೆ. ಹಾಗಾದರೆ, ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ಇಲ್ಲಿದೆ ಮಾಹಿತಿ.

VISTARANEWS.COM


on

Edited by

RCB Out Of IPL 2023 Here Is 16 Seasons Performance By The Team
Koo

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (IPL 2023) ತಂಡವು ಸೋಲಿನ ಅಭಿಯಾನ ಮುಂದುವರಿಸಿದೆ. ಗುಜರಾತ್‌ ಟೈಟನ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ 2023ರ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಆರ್‌ಸಿಬಿ ಅಭಿಯಾನ ಅಂತ್ಯವಾಗಿದೆ. ಇನ್ನು ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ಎಷ್ಟು ಬಾರಿ ಪ್ಲೇಆಫ್‌ಗೆ ಹೋಗಿತ್ತು? ಎಷ್ಟು ಸಲ ಫೈನಲ್‌ಗೇರಿತ್ತು ಹಾಗೂ ಎಷ್ಟು ಬಾರಿ ಪ್ಲೇಆಫ್‌ ಕೂಡ ಪ್ರವೇಶಿಸದೆ ಮನೆಗೆ ಹೋಗಿತ್ತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಂಟು ಬಾರಿ ಪ್ಲೇಆಫ್‌ ಪ್ರವೇಶ

ಆಡಿರುವ 16 ಸೀಸನ್‌ಗಳಲ್ಲಿ ಆರ್‌ಸಿಬಿಯು ಎಂಟು ಬಾರಿ ಪ್ಲೇಆಫ್‌ಗೆ ತಲುಪಿದ ಸಾಧನೆ ಮಾಡಿದೆ. 2022 ಹಾಗೂ 2021ರಲ್ಲಿ ಪ್ಲೇಆಫ್‌ಗೆ ತೆರಳಿದ್ದ ಆರ್‌ಸಿಬಿ, ಫೈನಲ್‌ಗೇರುವಲ್ಲಿ ವಿಫಲವಾಗಿತ್ತು. 2020ರಲ್ಲಿ ಬೆಂಗಳೂರು ತಂಡವು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು 2019ರಲ್ಲಿ 8, 2018ರಲ್ಲಿ 6, 2017ರಲ್ಲಿ 8, 2016ರಲ್ಲಿ ರನ್ನರ್ಸ್‌ ಅಪ್‌, 2015ರಲ್ಲಿ ತೃತೀಯ, 2014ರಲ್ಲಿ 7, 2013ರಲ್ಲಿ 5, 2012ರಲ್ಲಿ 5, 2011ರಲ್ಲಿ ರನ್ನರ್ಸ್‌ ಅಪ್‌, 2010ರಲ್ಲಿ ತೃತೀಯ, 2009ರಲ್ಲಿ ರನ್ನರ್ಸ್‌ ಅಪ್‌ ಹಾಗೂ 2008ರಲ್ಲಿ 7ನೇ ಸ್ಥಾನ ಪಡೆದಿತ್ತು. ಈಗ 2023ರಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಮಾತ್ರ ಶಕ್ತವಾಗಿದೆ.

ಇದನ್ನೂ ಓದಿ: IPL 2023: ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಕಿಂಗ್​ ಕೊಹ್ಲಿ

ಮೂರು ಬಾರಿ ಫೈನಲ್‌ಗೆ ಲಗ್ಗೆ

ಇದುವರೆಗೆ ಆರ್‌ಸಿಬಿ ತಂಡವು ಮೂರು ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐಪಿಎಲ್‌ ಆರಂಭವಾದ ಎರಡನೇ ವರ್ಷ ಅಂದರೆ, 2009ರಲ್ಲಿ ಪ್ರಶಸ್ತಿ ಸುತ್ತಿಗೆ ತೆರಳಿದ್ದ ಬೆಂಗಳೂರು ತಂಡವು ಫೈನಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧ ಸೋಲನುಭವಿಸಿತ್ತು. ಇನ್ನು 2011ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ 2016ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತು ರನ್ನರ್ಸ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

Continue Reading

ಐಪಿಎಲ್ 2023

IPL 2023: ಮತ್ತೆ ಸೊನ್ನೆ ಸುತ್ತಿದ ದಿನೇಶ್‌ ಕಾರ್ತಿಕ್;‌ ಡಕ್‌ಔಟ್‌ನಲ್ಲಿ ಈಗ ರೋಹಿತ್‌ ಶರ್ಮಾಗಿಂತ ಮುಂದು

IPL 2023: ಗುಜರಾತ್‌ ಟೈಟನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಸೊನ್ನೆಗೆ ಔಟಾಗುವ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಅಪಖ್ಯಾತಿಯನ್ನು ದಿನೇಶ್‌ ಕಾರ್ತಿಕ್‌ ತಮ್ಮದಾಗಿಸಿಕೊಂಡರು.

VISTARANEWS.COM


on

Edited by

Dinesh Karthik falls for 17th IPL duck surpasses Rohit Sharma for most ducks in IPL
Koo

ಬೆಂಗಳೂರು: 2021 ಹಾಗೂ 2022ರ ಐಪಿಎಲ್‌ ಪಂದ್ಯಾವಳಿಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಎಲ್ಲ ಗಮನ ಸೆಳೆದಿದ್ದ ಆರ್‌ಸಿಬಿ ಆಟಗಾರ ದಿನೇಶ್‌ ಕಾರ್ತಿಕ್‌ ಈ ಬಾರಿಯ (IPL 2023) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ, ಭಾನುವಾರ ರಾತ್ರಿ ಗುಜರಾತ್‌ ಟೈಟನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್‌ ಒಪ್ಪಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಅಪಖ್ಯಾತಿ ಗಳಿಸಿದರು.

ಹೌದು, ಐಪಿಎಲ್‌ ಇತಿಹಾಸದಲ್ಲಿ ಇದುವರೆಗೆ ಅತಿ ಹೆಚ್ಚು ಬಾರಿ ಎಂದರೆ, 16 ಬಾರಿ ಡಕ್‌ ಔಟ್‌ ಆದ ಖ್ಯಾತಿ ರೋಹಿತ್‌ ಶರ್ಮಾ ಅವರ ಹೆಸರಲ್ಲಿತ್ತು. ಆದರೆ, 17 ಬಾರಿ ಸೊನ್ನೆಗೆ ಔಟಾಗುವ ಮೂಲಕ ದಿನೇಶ್‌ ಕಾರ್ತಿಕ್‌ ಅವರು ಅನವಶ್ಯಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಈಗ ದಿನೇಶ್‌ ಕಾರ್ತಿಕ್‌ 17 ಬಾರಿ, ರೋಹಿತ್‌ ಶರ್ಮಾ 16, ಮನ್‌ದೀಪ್‌ ಸಿಂಗ್‌ ಹಾಗೂ ಸುನಿಲ್‌ ನರೈನ್‌ ತಲಾ 15 ಬಾರಿ ಡಕ್‌ಔಟ್‌ ಆದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: IPL 2023: ಮುಂಬೈ ಗೆದ್ದರೂ ಪ್ಲೇ ಆಫ್​ ಭವಿಷ್ಯ ಗುಜರಾತ್​ ಕೈಯಲ್ಲಿ

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿಯೇ ದಿನೇಶ್‌ ಕಾರ್ತಿಕ್‌ ಮೂರು ಬಾರಿ ಡಕ್‌ಔಟ್‌ ಆಗಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 12 ಪಂದ್ಯ ಆಡಿರುವ ದಿನೇಶ್‌ ಕಾರ್ತಿಕ್‌ ಕೇವಲ 140 ರನ್‌ ಬಾರಿಸಿದ್ದಾರೆ. ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಯಶ್‌ ದಯಾಳ್‌ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌, ವೃದ್ಧಿಮಾನ್‌ ಸಾಹ ಅವರಿಗೆ ಕ್ಯಾಚಿತ್ತು ಹೊರನಡೆದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿದೆ. ವಿರಾಟ್‌ ಕೊಹ್ಲಿ ಭರ್ಜರಿ ಶತಕದ ನೆರವಿನೊಂದಿಗೆ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

Continue Reading

ಐಪಿಎಲ್ 2023

IPL 2023: ಟಿಕೆಟ್‌ ಸಿಗದಕ್ಕೆ ಗರಂ; ರಾಹುಲ್ ದ್ರಾವಿಡ್ ಕಾರಿಗೆ ಅಡ್ಡ ಹಾಕಿದ ಆರ್‌ಸಿಬಿ ಫ್ಯಾನ್ಸ್‌

ದೇಶದಲ್ಲಿ ಐಪಿಎಲ್‌ ಫಿವರ್‌ ಜೋರಾಗಿದ್ದು, ಐಪಿಎಲ್‌ (IPL 2023) ಅಭಿಮಾನಿಗಳು ಟಿಕೆಟ್‌ಗಾಗಿ ಗಲಾಟೆ ಮಾಡಿದ್ದಾರೆ. ಭಾನುವಾರ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಟಿಕೆಟ್‌ ಸಿಗದೆ ಅಭಿಮಾನಿಗಳು ಗರಂ ಆಗಿದ್ದು ರಾಹುಲ್‌ ದ್ರಾವಿಡ್‌ ಕಾರಿಗೆ ಅಡ್ಡಗಟ್ಟಿದ್ದಾರೆ.

VISTARANEWS.COM


on

Edited by

Koo

ಬೆಂಗಳೂರು: ಮೇ 21ರಂದು ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಗುಜರಾತ್‌ ಟೈಟನ್ಸ್‌ ಮತ್ತು ಆರ್‌ಸಿಬಿ ನಡುವಿನ (IPL 2023) ಹೈ ವೋಲ್ಟೇಜ್ ಪಂದ್ಯದ ಟಿಕೆಟ್‌ ಸಿಗದೆ ಆಕ್ರೋಶಗೊಂಡ ಕ್ರಿಕೆಟ್‌ ಅಭಿಮಾನಿಗಳು ಅಧಿಕಾರಿಗಳ ವಿರುದ್ಧ ತಮ್ಮ ಸಿಟ್ಟು ಪ್ರದರ್ಶಿಸಿದರು. ಕ್ರಿಕೆಟ್‌ ಫ್ಯಾನ್ಸ್‌ ಆಕ್ರೋಶದ ಬಿಸಿ ಭಾರತ ಕ್ರಿಕಟ್‌ ತಂಡದ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ (Rahul dravid) ಅವರಿಗೂ ತಟ್ಟಿತು.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡ ಗುರುವಾರ (ಮೇ 18) ಜಯಬೇರಿ ಸಾಧಿಸಿ ಮುಂದಿನ ಪ್ಲೇಆಫ್​ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಿಟ್ಟಿದೆ. ಮೇ 21ರಂದು ಗುಜರಾತ್‌ ಟೈಟನ್ಸ್‌ ಮತ್ತು ಆರ್‌ಸಿಬಿ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಅತ್ಯಂತ ಮಹತ್ವದ ಈ ಪಂದ್ಯವನ್ನು ನೋಡಲು ಕ್ರಿಕೆಟ್‌ ಅಭಿಮಾನಿಗಳು ಅದರಲ್ಲೂ ಆರ್‌ಸಿಬಿ ಫ್ಯಾನ್ಸ್‌ ಕಾತರರಾಗಿದ್ದಾರೆ. ಆದರೆ, ಟಿಕೆಟ್‌ ಸಿಗದೆ ಅವರು ಸಿಟ್ಟಿಗೆದ್ದಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರವೇ ಅಭಿಮಾನಿಗಳು ಸಾಲುಗಟ್ಟಿ ನಿಂತರೂ ಟಿಕೆಟ್‌ ಸಿಗದೆ ನಿರಾಸೆಗೊಂಡಿದ್ದಾರೆ. ಟಿಕೆಟ್‌ ಕೌಂಟರ್‌ನಲ್ಲಿ ಟಿಕೆಟ್ ನೀಡದೆ ಸೋಲ್ಡ್‌ಔಟ್ (Ticket soldout) ಎಂದು ಬೋರ್ಡ್‌ ಹಾಕಿದ್ದಕ್ಕೆ ಕ್ರಿಕೆಟ್‌ ಪ್ರೇಮಿಗಳು ಗರಂ ಆಗಿದ್ದಾರೆ.

ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ, ಹುಬ್ಬಳ್ಳಿಯಿಂದ ಕ್ರಿಕೆಟ್‌ ಅಭಿಮಾನಿಗಳು ಆಗಮಿಸಿದ್ದಾರೆ. ಗುರುವಾರ ರಾತ್ರಿಯಿಂದಲೇ ಕ್ಯೂ ನಿಂತಿದ್ದರು ಟಿಕೆಟ್‌ ಸಿಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಒಂದು ಟಿಕೆಟ್‌ಗೆ 9 ಸಾವಿರ ಎಂದು ಹೇಳುತ್ತಿದ್ದಾರೆ. ಕೇವಲ 150 ಟಿಕೆಟ್ ಮಾತ್ರ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಟಿಕೆಟ್ ವಿಚಾರದಲ್ಲಿ ತುಂಬಾ ಮೋಸ ಆಗುತ್ತಿದೆ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದರು.

ಈ ನಡುವೆ, ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಆಗಿರುವ ರಾಹುಲ್ ದ್ರಾವಿಡ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಪರಿಸರಕ್ಕೆ ಬಂದಾಗ ಕಾರನ್ನು ಅಡ್ಡಗಟ್ಟಿ ʻʻಟಿಕೆಟ್ ಸಿಗುತ್ತಿಲ್ಲ ಸರ್ʼʼ ಎಂದು ಆರ್‌ಸಿಬಿ ಅಭಿಮಾನಿಗಳು ಅಳಲು ತೋಡಿಕೊಂಡರು.

ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
India vs West Indies Schedule
ಕ್ರಿಕೆಟ್7 mins ago

INDvsWI: ಭಾರತ-ವಿಂಡೀಸ್‌ ಕ್ರಿಕೆಟ್​ ಸರಣಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Marnus Labuschagne
ಕ್ರಿಕೆಟ್22 mins ago

WTC Final 2023 : ಶಮಿ ಎಸೆತಕ್ಕೆ ಮರ್ನಸ್​ ಲಾಬುಶೇನ್​ ಬೌಲ್ಡ್​ ಆದ ರೀತಿ ಹೀಗಿದೆ

wrestlers protest
ಕ್ರೀಡೆ1 hour ago

Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

abhishek ambareesh wedding Reception
ಕರ್ನಾಟಕ1 hour ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

KS Bharat
ಕ್ರಿಕೆಟ್1 hour ago

WTC Final 2023 : ವಿಕೆಟ್​ ಕೀಪರ್​ ಕೆಎಸ್​ ಭರತ್​​ ಹಿಡಿದ ರೋಮಾಂಚಕಾರಿ ಕ್ಯಾಚ್​ ಹೀಗಿತ್ತು

for tenants also to wrestlers protest and more news
ಕರ್ನಾಟಕ1 hour ago

ವಿಸ್ತಾರ TOP 10 NEWS: ಬಾಡಿಗೆಯವರಿಗೂ ಫ್ರೀ ಕರೆಂಟ್‌ನಿಂದ, ಅಂತಿಮ ಘಟ್ಟದಲ್ಲಿ ಕುಸ್ತಿ ಕದನದವರೆಗಿನ ಪ್ರಮುಖ ಸುದ್ದಿಗಳಿವು

Anita Madhu Bangarappa was felicitated by Block Mahila Congress at soraba
ಕರ್ನಾಟಕ1 hour ago

Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ

MLA TB Jayachandra visited Shira Public Hospital
ಕರ್ನಾಟಕ1 hour ago

Tumkur News: ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ಬಿ. ಜಯಚಂದ್ರ ಭೇಟಿ, ಪರಿಶೀಲನೆ

Farooq Abdullah meets HD Devegowda
ಕರ್ನಾಟಕ2 hours ago

Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್‌ ಅಬ್ದುಲ್ಲಾ ʼಲೋಕಾʼಭಿರಾಮ!

Good Train Accident
ದೇಶ2 hours ago

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

abhishek ambareesh wedding Reception
ಕರ್ನಾಟಕ1 hour ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ9 hours ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ16 hours ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

Salman Khan Bigg Boss ott 2
South Cinema1 day ago

Big Boss OTT 2: ಜೂನ್ 17ಕ್ಕೆ ಬಿಗ್‌ಬಾಸ್ ಒಟಿಟಿ 2 ಪ್ರಸಾರ, ಇಲ್ಲೂ ನಿರೂಪಕ ಸಲ್ಲೂ!

dining table vastu tips
ಭವಿಷ್ಯ1 day ago

Vastu Tips : ಮನೆಯ ಡೈನಿಂಗ್‌ ಹಾಲ್‌ನಲ್ಲಿ ಈ ಆಕಾರದ ಟೇಬಲ್‌ ಇರಲೇಬಾರದು!

pineapple cultivation
ಕೃಷಿ1 day ago

Krishi Khajane : ಆರೋಗ್ಯಕರ ಅನಾನಸ್‌ ಬೆಳೆಯುವುದು ಕಷ್ಟವೇನಲ್ಲ!

health and horoscope horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಇರಲಿ ಎಚ್ಚರ!

Chakravarthy Sulibele and MB Patil
ಕರ್ನಾಟಕ2 days ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ2 days ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ3 days ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

ಟ್ರೆಂಡಿಂಗ್‌

error: Content is protected !!