ವಿಶ್ವದ ವೇಗದ ಪಯಣಿಗರು: ಐದೇ ದಿನದಲ್ಲಿ 50 ರಾಜ್ಯ ಸುತ್ತಿ ಬಂದವರು! - Vistara News

ಪ್ರಮುಖ ಸುದ್ದಿ

ವಿಶ್ವದ ವೇಗದ ಪಯಣಿಗರು: ಐದೇ ದಿನದಲ್ಲಿ 50 ರಾಜ್ಯ ಸುತ್ತಿ ಬಂದವರು!

ಐದೇ ದಿನದಲ್ಲಿ ಅಮೆರಿಕದ 50 ರಾಜ್ಯಗಳನ್ನು ಸುತ್ತಾಡಿ ದಾಖಲೆ ಬರೆದಿದ್ದಾರೆ ಇಲ್ಲಿ ಮೂವರು. ಆದರೆ ಗಿನ್ನೆಸ್‌ ದಾಖಲೆ ಆಗೊಲ್ಲ, ಯಾಕೆ ಗೊತ್ತೆ?

VISTARANEWS.COM


on

travel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇದೊಂದು ವಿಶಿಷ್ಟ ವಿಶ್ವದಾಖಲೆ. ನಂಬಲು ಕಷ್ಟವಾದರೂ ನಂಬಲೇಬೇಕು ಎಂಬುದೂ ಅಷ್ಟೇ ಸತ್ಯ. ನಾವು, ಸೈಕಲಿನಲ್ಲಿ ಹೊರಟು ದಿನಗಟ್ಟಲೆ ಸಾವಿರಗಟ್ಟಲೆ ಕಿಮೀ ದೂರ ಪ್ರವಾಸ ಮಾಡಿ ಬರುವವರನ್ನು ನೋಡಿದ್ದೇವೆ. ಕಾರಿನಲ್ಲೇ ಮಲಗಿ ಎದ್ದು, ವರ್ಷವಿಡಿ ಸುತ್ತುತ್ತಲೇ ಇರುವ ಪ್ರವಾಸಪ್ರಿಯರನ್ನೂ ನೋಡಿದ್ದೇವೆ. ದುಡ್ಡೇ ಖರ್ಚು ಮಾಡದೆ, ಹಿಚ್‌ ಹೈಕ್‌ ಮಾಡಿಕೊಂಡು ಪ್ರಪಂಚ ಸುತ್ತುವ ಮಂದಿಯೂ ಇದ್ದಾರೆ. ನಿರ್ದಿಷ್ಟ ಜಾಗದಲ್ಲಿ ಬೇರೂರದೆ, ತಿರುಗಾಡಿಕೊಂಡೇ ಜೀವನ ಮಾಡುವವರನ್ನೂ ನೋಡಿದ್ದೇವೆ. ಆದರೆ, ಇದೊಂದು ಸ್ವಲ್ಪ ಡಿಫರೆಂಟ್‌ ಕಥೆ. ಇಲ್ಲಿ ಮೂರು ಮಂದಿ ಗೆಳೆಯರು ಅತಿ ಕಡಿಮೆ ಸಮಯದಲ್ಲಿ ೫೦ ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ. ೫೦ ರಾಜ್ಯಗಳನ್ನು ಸುತ್ತಲು ಇವರು ತೆಗೆದುಕೊಂಡ ಸಮಯ ಕೇವಲ ೫ ದಿನ ೧೩ ಗಂಟೆ ಹಾಗೂ ೧೦ ನಿಮಿಷಗಳು!

ಐದುವರೆ ದಿನಗಳಲ್ಲಿ ೫೦ ರಾಜ್ಯವಾ? ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮೂಡುವುದು ಸಹಜ. ಆದರೂ, ಈ ಮೂವರು ಐದೇ ದಿನಗಳಲ್ಲಿ ೫೦ ರಾಜ್ಯ ಸುತ್ತಿದ್ದು ಮಾತ್ರ ಸತ್ಯ. ಅದಕ್ಕೇ ಈಗದು ವಿಶ್ವದಾಖಲೆಯಾಗಿದೆ. ಯುಎಸ್‌ನ ಎಲ್ಲಾ ೫೦ ರಾಜ್ಯಗಳನ್ನು ಅತೀ ಕಡಿಮೆ ಸಮಯದಲ್ಲಿ ಸುತ್ತಿದ ಮಂದಿ ಎಂಬ ಹೆಸರೀಗ ಅವರಿಗೇ ಲಭಿಸಿದೆ. ಆಸ್ಟಿನ್‌ ನಗರದ ಪೀಟರ್‌ ಮೆಕ್‌ಕೊನ್ವಿಲ್ಲೆ ಅವರು ತನ್ನಿಬ್ಬರು ಗೆಳೆಯರಾದ ಆಸ್ಟಿನ್‌ನ ಪಾವೆಲ್‌ (ಪಾಶಾ) ಕ್ರೆಚೆತೋವ್‌ ಹಾಗೂ ಮಿನ್ನೆಪೊಲಿಸ್‌ನ ಅಬ್ದುಲ್ಲಾಹಿ ಸಾಲ್ಹಾ ಅವರನ್ನು ಸೇರಿಸಿಕೊಂಡು ಈ ಭರ್ಜರಿ ಪ್ರವಾಸವನ್ನು ಮಾಡಿ ಮುಗಿಸಿ ಮರಳಿದ್ದಾರೆ!

ಅಂದಹಾಗೆ ಪೀಟರ್ ಅವರಿಗೆ ಇಂಥದ್ದೊಂದು ಪಯಣದ ಯೋಚನೆ ಬರಲು ಕಾರಣ ಥಾಮಸ್‌ ಕ್ಯಾನನ್‌ ಹಾಗೂ ಜಸ್ಟಿನ್‌ ಮೋರಿಸ್‌! ಈ ಹಿಂದೆ ಆ ಇಬ್ಬರು ೫೦ ರಾಜ್ಯಗಳನ್ನು ಐದು ದಿನಗಳು ೧೬ ಗಂಟೆ ಹಾಗೂ ೨೦ ನಿಮಿಷಗಳಲ್ಲಿ ಪ್ರಯಾಣಿಸಿದ್ದರು.ವರಿಬ್ಬರ ಪಯಣವನ್ನೇ ಸ್ಪೂರ್ತಿಯಾಗಿಸಿಕೊಂಡು ಆ ದಾಖಲೆ ಮುರಿಯಬೇಕೆಂದೇ, ಅವರದೇ ಹಾದಿಯಲ್ಲಿ  ಅವರದ್ದೇ ಸಿದ್ಧ ಮಾದರಿಯಲ್ಲಿ ಈ ಪ್ರಯಾಣವನ್ನು ಮಾಡಿದ್ದಾರೆ.

ಇದನ್ನೂ ಓದಿ: ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ಆದರೂ, ಐದುವರೆ ದಿನಗಳಲ್ಲಿ ಅವರು ಈ ಪಯಣ ಮಾಡಿದ್ದಾದರೂ ಹೇಗೆ ಎಂಬ ಕುತೂಹಲ ಮೂಡಿದರೆ ಅವರ ಮಾತುಗಳಲ್ಲೇ ಕೇಳಬೇಕು. ಈ ಪಯಣದ ರುವಾರಿ ಮೆಕ್‌ಕೊನ್ವಿಲ್ಲೆ ಹೇಳುವ ಪ್ರಕಾರ, ಈ ಇಡೀ ಐದುವರೆ ದಿನಗಳ ಅನುಭವವನ್ನು ಹೇಗೆ ಹೇಳಬೇಕೆಂದೇ ಅರ್ಥವಾಗುತ್ತಿಲ್ಲ. ಮುಖ್ಯವಾಗಿ ಎಷ್ಟು ಸುಸ್ತಾಗಿದೆ ಎಂದರೆ ವಿವರಿಸಲು ಪದಗಳೇ ಇಲ್ಲ. ಆದರೆ, ಒಂದೇ ಸಲ ಬಹಳಷ್ಟನ್ನು ನೋಡಿದೆವು. ಕಡಿಮೆ ಸಮಯದಲ್ಲಿ ಎಷ್ಟೊಂದು ನೋಡಿದೆವು ಅನಿಸುತ್ತಿದೆ. ಆದರೆ ಜೀವಮಾನ ಮರೆಯದ ಐದು ದಿನಗಳಿವು. ಇದನ್ನು ಬೇರೆ ಯಾವುದರೊಂದಿಗೂ ಹೋಲಿಸಲಾಗದು. ಅದ್ಭುತ ಅನುಭವ ಎಂದಷ್ಟೇ ಹೇಳಬಲ್ಲೆ ಎಂದು ವಿವರಿಸಿದ್ದಾರೆ.

ಈ ಮೂವರ ಪಯಣ ಶುರುವಾಗಿದ್ದು ವೆರ್‌ಮೌಂಟ್‌ನಿಂದ ಕಾರಿನಲ್ಲಿ. ಕೊನೆಯ ಎರಡು ರಾಜ್ಯಗಳಾದ ಅಲಾಸ್ಕಾ ಹಾಗೂ ಹವಾಯ್‌ಗಳಿಗೆ ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಬಿಟ್ಟರೆ, ಉಳಿದ ಎಲ್ಲ ೪೮ ರಾಜ್ಯಗಳನ್ನೂ ಕಾರಿನಲ್ಲೇ ಪಯಣಿಸಿ ಪೂರ್ಣಗೊಳಿಸಿದ್ದಾರೆ. ಆದರೂ, ಐದುವರೆ ದಿನಗಳಲ್ಲಿ ಇಷ್ಟು ದೊಡ್ಡ ಪಯಣ ಊಹಿಸುವುದೂ ಕಷ್ಟ ಸಾಧ್ಯವಾಗಿದ್ದು, ಇವರು ಗಂಟೆಗೆ ೧೨೦ ಕಿಮೀ ವೇಗದಲ್ಲಿ ಒಟ್ಟು ೭,೨೦೦ ಕಿಮೀ ದೂರವನ್ನು ಐದುವರೆ ದಿನಗಳಲ್ಲಿ ಕ್ರಮಿಸಿದ್ದಾರೆ. ಈ ಇಡೀ ಪಯಣಕ್ಕೆ ೧೨,೦೦೦ ಡಾಲರ್‌ಗಳನ್ನು ಪೆಟ್ರೋಲ್‌, ಊಟ ಹಾಗೂ ವಸತಿಗಾಗಿ ಖರ್ಚು ಮಾಡಿದ್ದಾರೆ. ವಾಷಿಂಗ್ಟನ್‌ನಿಂದ ಅಲಾಸ್ಕಾಕ್ಕೆ ವಿಮಾನದಲ್ಲಿ ಪಯಣಿಸಿ ಅಲ್ಲಿಂದ ಮತ್ತೆ ಹವಾಯ್‌ಗೆ ವಿಮಾನದಲ್ಲಿ ತೆರಳಿ ಈ ಪಯಣಕ್ಕೆ ಅವರು ಮಂಗಳ ಹಾಡಿದ್ದಾರೆ.

ಇದನ್ನೂ ಓದಿ: Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!

೧೯೯೬ರಲ್ಲಿ ಗಿನ್ನಿಸ್‌ ವಿಶ್ವದಾಖಲೆ, ವೇಗವಾದ ಪ್ರಯಾಣ ವಿಭಾಗವನ್ನೇ ತೆಗೆದು ಹಾಕಿದೆ. ಯಾಕೆಂದರೆ ಜನರು ಈ ವಿಭಾಗದಲ್ಲಿ ಪ್ರಯತ್ನಗಳನ್ನು ಮಾಡುವ ಮೂಲಕ ವೇಗವಾಗಿ ಪ್ರಯಾಣಿಸಿ ದಾಖಲೆ ಮಾಡಲು ತಮ್ಮ ಜೀವವನ್ನೇ ಅಪಾಯಕ್ಕೆ ತಂದೊಡ್ಡಿಕೊಳ್ಳುತ್ತಾರೆ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ ಮೆಕ್‌ಕೋನ್ವಿಲ್ಲೆ ಹಾಗೂ ಅವನ ಗೆಳೆಯರು ಇದೀಗ ʻಆಲ್‌ ಫಿಫ್ಟಿ ಸ್ಟೇಟ್ಸ್‌ ಕ್ಲಬ್‌ʼನಲ್ಲಿ ವೇಗದ ಪಯಣಿಗರೆಂಬ ವಿಶ್ವದಾಖಲೆ ಹೊಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Milind Kumar : ಆರ್​ಸಿಬಿಯ ಮಾಜಿ ಆಟಗಾರ ಕ್ರಿಕೆಟ್​ನಿಂದ ನಿವೃತ್ತಿ

Milind Kumar: ಹೌದು, ಭಾರತದಲ್ಲಿ ಕ್ರಿಕೆಟ್​ನಿಂದ ನಿವೃತ್ತರಾಗುವ ನನ್ನ ನಿರ್ಧಾರವನ್ನು ನಾನು ಬಿಸಿಸಿಐಗೆ ತಿಳಿಸಿದ್ದೇನೆ. ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರೊಂದಿಗೆ ದೆಹಲಿ ಪರ ಆಡು

VISTARANEWS.COM


on

dilip Kumar
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಭಾಗವಾಗಿದ್ದ ಮಿಲಿಂದ್ ಕುಮಾರ್ (Milind Kumar) ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಈಗ ಯುಎಸ್ಎಯಲ್ಲಿ ಮೈನರ್ ಲೀಗ್ ಕ್ರಿಕೆಟ್​ನೊಂದಿಗೆ ಸಹಿ ಹಾಕಿದ್ದಾರೆ. ಅಲ್ಲಿ ಅವರು ಫಿಲಡೆಲ್ಫಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಅಂಡರ್-19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಾಂದ್​ ಅವರು ಭಾರತೀಯ ಕ್ರಿಕೆಟ್​ನಿಂದ ನಿವೃತ್ತರಾಗಿ ಅಮೆರಿಕಕ್ಕೆ ತೆರಳಿದ್ದರು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಸ್ಮಿತ್ ಪಟೇಲ್, ಹರ್ಮೀತ್ ಸಿಂಗ್ ಮತ್ತು ಸಿದ್ಧಾರ್ಥ್ ತ್ರಿವೇದಿ ಎಂಐಎಲ್​​ಸಿ ಸೇರಿದ್ದರು.

ಬಿಸಿಸಿಐ ನಿಯಮದ ಪ್ರಕಾರ, ಒಬ್ಬ ಆಟಗಾರ (ಪುರುಷ) ಭಾರತೀಯ ಕ್ರಿಕೆಟ್​ನಿಂದ ನಿವೃತ್ತರಾಗದಿದ್ದರೆ ಇತರ ಲೀಗ್​ಗಳಲ್ಲಿ ಆಡಲು ಸಾಧ್ಯವಿಲ್ಲ. “ಹೌದು, ಭಾರತದಲ್ಲಿ ಕ್ರಿಕೆಟ್​ನಿಂದ ನಿವೃತ್ತರಾಗುವ ನನ್ನ ನಿರ್ಧಾರವನ್ನು ನಾನು ಬಿಸಿಸಿಐಗೆ ತಿಳಿಸಿದ್ದೇನೆ. ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರೊಂದಿಗೆ ದೆಹಲಿ ಪರ ಆಡುವುದನ್ನು ನಾನು ಆನಂದಿಸಿದೆ. ಇದು ಮುಂದುವರಿಯುವ ಸಮಯ ಎಂದು ಮಿಲಿಂದ್ ಕುಮಾರ್ ತಿಳಿಸಿದ್ದಾರೆ.

ರಣಜಿ ವಿವರ

2018-19ರ ರಣಜಿ ಟ್ರೋಫಿ ಋತುವಿನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ್ದ ಮಿಲಿಂದ್ ಕುಮಾರ್, 2014 ರ ಐಪಿಎಲ್​​ನಲ್ಲಿ ದೆಹಲಿ ತಂಡದ ಭಾಗವಾಗಿದ್ದರು. 2019 ರ ಋತುವಿನಲ್ಲಿ ಆರ್​ಸಿಬಿಯೊಂದಿಗೆ ಇದ್ದರು. ಆದಾಗ್ಯೂ, ಆ ಎರಡು ಋತುಗಳಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ.

ಇದನ್ನೂ ಓದಿ: Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

ದೇಶೀಯ ಕ್ರಿಕೆಟ್​ನಲ್ಲಿ ದೆಹಲಿ, ಸಿಕ್ಕಿಂ ಮತ್ತು ತ್ರಿಪುರಾವನ್ನು ಪ್ರತಿನಿಧಿಸಿದ ಅವರು 46.68 ಸರಾಸರಿಯಲ್ಲಿ 9 ಶತಕಗಳು ಮತ್ತು 15 ಅರ್ಧಶತಕಗಳೊಂದಿಗೆ 2988 ಪ್ರಥಮ ದರ್ಜೆ ರನ್ ಗಳಿಸಿದ್ದಾರೆ. ಅವರು 2023 ರ ಲಿಸ್ಟ್-ಎ ರನ್ಗಳನ್ನು 43.04 ಸರಾಸರಿಯಲ್ಲಿ ಮತ್ತು 1176 ಟಿ 20 ರನ್​ಗಳನ್ನು 29.40 ಸರಾಸರಿಯಲ್ಲಿ ಗಳಿಸಿದ್ದಾರೆ.

2013 ರಲ್ಲಿ ಇಂಗ್ಲೆಂಡ್ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಸೋಲಿಸಿದ ದೆಹಲಿ ತಂಡದ ಭಾಗವಾಗಿದ್ದರು, ಅಲ್ಲಿ ಅವರು 85 ಎಸೆತಗಳಲ್ಲಿ 78* ರನ್ ಗಳಿಸಿದ್ದರು. ಅವರು 2017ರಲ್ಲಿ ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಂಡಳಿಯ ಅಧ್ಯಕ್ಷರ ಇಲೆವೆನ್ ಅನ್ನು ಪ್ರತಿನಿಧಿಸಿದರು.

ಬಿಸಿಸಿಐ ಅಡಿಯಲ್ಲಿ ಕ್ರಿಕೆಟ್ ತೊರೆದ ನಂತರ, ಮಿಲಿಂದ್ ಕುಮಾರ್ ಈಗ ಇತರ ಫ್ರ್ಯಾಂಚೈಸ್ ಲೀಗ್​ಗಳಲ್ಲಿ ಆಡಲು ಅರ್ಹರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತೀಯ ಕ್ರಿಕೆಟ್​​ನಲ್ಲಿ ವಿದಾಯ ಹೇಳಿದ ಸ್ಮಿತ್ ಪಟೇಲ್ ಅವರನ್ನು ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ಗೆ ಬಾರ್ಬಡೋಸ್ ಟ್ರೈಡೆಂಟ್ಸ್ ಆಯ್ಕೆ ಮಾಡಿದೆ.

Continue Reading

ವಿದೇಶ

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Gopi Hinduja: ಗೋಪಿಚಂದ್‌ ಅವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

VISTARANEWS.COM


on

Gopi Hinduja
Koo

ಲಂಡನ್‌: ಬ್ರಿಟಿಷರು ನಮ್ಮನ್ನು ಆಳಿದರು, ಶತಮಾನಗಳವರೆಗೆ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು ಎಂಬ ಬೇಸರವು ಪ್ರತಿ ಭಾರತೀಯನನ್ನೂ ಕಾಡುತ್ತದೆ. ಆದರೆ, ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾದರೆ, ಭಾರತವು ಆರ್ಥಿಕತೆ ಸೇರಿ ಯಾವುದೇ ವಿಷಯದಲ್ಲಿ ಹಿಂದಿಕ್ಕಿದರೆ ನಮಗೆ ಖುಷಿಯಾಗುತ್ತದೆ. ಇಂತಹ ಖುಷಿಗೆ ಮತ್ತೊಂದು ಕಾರಣ ಸಿಕ್ಕಿದೆ. ಭಾರತ ಮೂಲದ ಗೋಪಿಚಂದ್‌ ಹಿಂದುಜಾ (Gopi Hinduja) ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ (UK’s Richest) ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಗೋಪಿಚಂದ್‌ ಹಿಂದುಜಾ ಅವರು ಭಾರತ ಮೂಲದವರಾಗಿದ್ದು, ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರ ತಂದೆಯೂ ಉದ್ಯಮಿಯಾಗಿದ್ದರು. ಹಿಂದುಜಾ ಗ್ರೂಪ್‌ಗೆ ಗೋಪಿಚಂದ್‌ ಹಿಂದುಜಾ ಅವರು ಸಹ ಚೇರ್ಮನ್‌ ಆಗಿದ್ದಾರೆ. ಇವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

“ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಜಗತ್ತಿನಾದ್ಯಂತ 48 ದೇಶಗಳಲ್ಲಿ ಉದ್ಯಮಗಳನ್ನು ಹೊಂದಿದೆ. ಆಟೋಮೋಟಿವ್‌, ತೈಲ, ಕೆಮಿಕಲ್‌, ಬ್ಯಾಂಕಿಂಗ್‌, ಐಟಿ, ಫೈನಾನ್ಸ್‌, ಸೈಬರ್‌ ಸೆಕ್ಯುರಿಟಿ, ಆರೋಗ್ಯ, ಮೂಲ ಸೌಕರ್ಯ ಅಭಿವೃದ್ಧಿ, ಮನರಂಜನೆ, ಮಾಧ್ಯಮ, ರಿಯಲ್‌ ಎಸ್ಟೇಟ್‌ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಹಿಂದುಜಾ ಗ್ರೂಪ್‌ ಪ್ರಾಬಲ್ಯ ಸಾಧಿಸಿದೆ” ಎಂದು ದಿ ಸಂಡೇ ಟೈಮ್ಸ್‌ ಬಣ್ಣಿಸಿದೆ. ಹಿಂದುಜಾ ಕುಟುಂಬಸ್ಥರು ಮುಂಬೈನಲ್ಲಿ ಸಣ್ಣದೊಂದು ಉದ್ಯಮ ಆರಂಭಿಸಿ, ಈಗ ಬ್ರಿಟನ್‌ನ ಶ್ರೀಮಂತ ಔದ್ಯಮಿಕ ಕುಟುಂಬ ಎನಿಸಿದೆ. ಇವರ ಮನೆಯು ಬ್ರಿಟನ್‌ ಅರಸ ವಾಸಿಸುವ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಬಳಿಯೇ ಇದೆ.

ಇದನ್ನೂ ಓದಿ: Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3

Continue Reading

ಕರ್ನಾಟಕ

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

SSLC 2024 Exam 2: ರಾಜ್ಯ ಸರ್ಕಾದ ಸೂಚನೆಗಳ ಅನ್ವಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮಾಡಲು ಉದ್ದೇಶಿಸಲಾಗಿದ್ದ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಲಾಗಿದೆ. ಮೇ 29ರಿಂದ ಜೂ.6ರವರೆಗೆ ಈ ವಿಶೇಷ ತರಗತಿಗಳು ನಡೆಯಲಿವೆ. ಇನ್ನು ಜೂ. 14ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ-2 ಆರಂಭವಾಗಲಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಬಿಡುಗಡೆ ಮಾಡಲಿದೆ

VISTARANEWS.COM


on

SSLC Exam 2024
Koo

ಬೆಂಗಳೂರು: 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರಲ್ಲಿ (SSLC 2024 Exam 2) ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿ ರಾಜ್ಯ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾದ ಸೂಚನೆಗಳ ಅನ್ವಯ ಮುಂದೂಡಲಾಗಿದ್ದು, ಮೇ 29ರಿಂದ ಜೂ.6ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿಗಳು ನಡೆಯಲಿವೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ನಿರ್ದೇಶಕರು (ಪ್ರೌಢ ಶಿಕ್ಷಣ) ಆದೇಶ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಹಿಂದೆ ಮೇ 15ರಿಂದ ಜೂನ್‌ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಈಗ ಸರ್ಕಾರದ ಸೂಚನೆ ಮೇರೆಗೆ ವಿಶೇಷ ತರಗತಿಗಳನ್ನು ಮೇ 29ರಿಂದ ಜೂನ್‌ 13ವರೆಗೆ ನಡೆಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜೂ. 14ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ-2

ಎಸ್ಎಸ್ಎಲ್‌ಸಿ ಪರೀಕ್ಷೆ-2 ಜೂನ್ 14ರಿಂದ (Karnataka SSLC 2024 Exam 2) ಆರಂಭವಾಗಲಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಬಿಡುಗಡೆ ಮಾಡಲಿದೆ. ಈ ಹಿಂದೆ ಜೂನ್‌ 7ರಿಂದ 14ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆ-2 ನಿಗದಿಯಾಗಿತ್ತು. ಆದರೆ, ಪರೀಕ್ಷೆ ಮುಂದೂಡಿಕೆಯಾಗಿದ್ದು, ಜೂನ್‌ 14ರಿಂದ ಪರೀಕ್ಷೆ ಆರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಎಸ್‌ಎಸ್‌ಎಲ್‌ಸಿ 2, 3ನೇ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್‌! ಇರಲಿದೆ ಸ್ಪೆಷಲ್‌ ಕ್ಲಾಸ್‌

SSLC Result 2024 SSLC 2nd and 3rd exam aspirants to have special classes

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. ಅಲ್ಲದೆ, ಫಲಿತಾಂಶವನ್ನು ಸುಧಾರಣೆ ಮಾಡಿಕೊಳ್ಳುವವರು, ಅನುತ್ತೀರ್ಣ ಹೊಂದಿದವರ ಸಲುವಾಗಿ ವಿಶೇಷ ಬೋಧನೆ ವ್ಯವಸ್ಥೆಯನ್ನು ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಅಂದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಂದಿಲ್ಲ. ಕೆಲವು ಕಟ್ಟುನಿಟ್ಟಿನ ಕ್ರಮದಿಂದಾಗಿ ಭಾರಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಶೇಕಡಾ 20ರಷ್ಟು ಗರೇಸ್‌ ಮಾರ್ಕ್ಸ್‌ ಅನ್ನು ಕೊಟ್ಟು ಪಾಸ್‌ ಮಾಡಲಾಗಿತ್ತು. ಮುಂದೆ ಬರುವ 2, 3ನೇ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮವನ್ನು ತೆಗೆದುಕೊಂಡಿದೆ. ಅಂಥ ಮಕ್ಕಳಿಗೆ ಮುಂದಿನ ಒಂದು ತಿಂಗಳಲ್ಲಿ “ಪರಿಹಾರ ಬೋಧನೆ” ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ | SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಪರಿಹಾರ ಕ್ರಮವಾಗಿ ಶಿಕ್ಷಣ ಇಲಾಖೆಯು ಪರೀಕ್ಷೆ-1 ರಲ್ಲಿ ಉತ್ತಮ ಸಾಧನೆ ಮಾಡದ ಅಥವಾ ತಮ್ಮ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಬಯಸುವ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಒಂದು ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ-2 ಮತ್ತು ಪರೀಕ್ಷೆ-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

Continue Reading

ಕ್ರಿಕೆಟ್

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Gautam Gambhir : ಮುಂದಿನ ತಿಂಗಳು ಟಿ 20 ವಿಶ್ವಕಪ್ ಮುಗಿದ ನಂತರ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಈ ಬಾರಿ ವಿಸ್ತರಣೆ ಅವಧಿ ಸ್ವೀಕರಿಸದಿರಲು ಭಾರತದ ಮಾಜಿ ನಾಯಕ ನಿರ್ಧರಿಸಿದ್ದಾರೆ. ಅವರ ಮೂಲ ಒಪ್ಪಂದವು ಏಕದಿನ ವಿಶ್ವಕಪ್ ನಂತರ ಕಳೆದ ವರ್ಷವೇ ಕೊನೆಗೊಂಡಿತ್ತು ಆದರೆ ಟಿ 20 ವಿಶ್ವಕಪ್ ವರೆಗೆ ಕೋಚ್ ಆಗಿ ಮುಂದುವರಿಯಲು ಬಿಸಿಸಿಐ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

VISTARANEWS.COM


on

Koo

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್​ ಗೌತಮ್ ಗಂಭೀರ್ (Gautam Gambhir) ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಬಿಸಿಸಿಐ ಪ್ರಸ್ತುತ ರಾಹುಲ್ ದ್ರಾವಿಡ್ ಅವರ ಬದಲಿ ಆಟಗಾರನನ್ನು ಹುಡುಕುತ್ತಿದೆ. ಈಗಾಗಲೇ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅವರಲ್ಲಿ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಯೋಜನೆ ರೂಪಿಸಿದೆ.

ಮುಂದಿನ ತಿಂಗಳು ಟಿ 20 ವಿಶ್ವಕಪ್ ಮುಗಿದ ನಂತರ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಈ ಬಾರಿ ವಿಸ್ತರಣೆ ಅವಧಿ ಸ್ವೀಕರಿಸದಿರಲು ಭಾರತದ ಮಾಜಿ ನಾಯಕ ನಿರ್ಧರಿಸಿದ್ದಾರೆ. ಅವರ ಮೂಲ ಒಪ್ಪಂದವು ಏಕದಿನ ವಿಶ್ವಕಪ್ ನಂತರ ಕಳೆದ ವರ್ಷವೇ ಕೊನೆಗೊಂಡಿತ್ತು ಆದರೆ ಟಿ 20 ವಿಶ್ವಕಪ್ ವರೆಗೆ ಕೋಚ್ ಆಗಿ ಮುಂದುವರಿಯಲು ಬಿಸಿಸಿಐ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

ಅಂತಿಮವಾಗಿ ದ್ರಾವಿಡ್ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಗೌತಮ್ ಗಂಭೀರ್ ಅವರನ್ನು ಬದಲಿಯಾಗಿ ಬಿಸಿಸಿಐ ಬಯಸಿದೆ ಎಂದು ಇಎಸ್​​ಪಿಎನ್​ ಕ್ರಿಕ್ಇನ್ಫೋ ವರದಿ ಮಾಡಿದೆ. ಮಾಜಿ ಬ್ಯಾಟರ್​ ಬಿಸಿಸಿಐನ ವಿಶ್ ಲಿಸ್ಟ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: rfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

ವರದಿಯ ಪ್ರಕಾರ, ಬಿಸಿಸಿಐ ಈಗಾಗಲೇ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ನ ಅಭಿಯಾನವು ಕೊನೆಗೊಂಡ ನಂತರ ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವ ನಿರೀಕ್ಷೆಯಿದೆ. ವಿಶ್ವಕಪ್ ವಿಜೇತ ಆಟಗಾರ ಪ್ರಸ್ತುತ ಕೆಕೆಆರ್ಗೆ ಮಾರ್ಗದರ್ಶಕರಾಗಿ ತಮ್ಮ ವೃತ್ತಿಯನ್ನು ನಡೆಸುತ್ತಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಬಳಿಕ ಮೇ 27ರಂದು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಗೌತಮ್ ಗಂಭೀರ್ ಅವರ ಕೋಚಿಂಗ್ ಅನುಭವ


ಗೌತಮ್ ಗಂಭೀರ್ ಅವರು ಅಂತಾರಾಷ್ಟ್ರೀಯ ಅಥವಾ ರಾಜ್ಯ ತಂಡಕ್ಕೆ ತರಬೇತುದಾರರಾಗಿ ತಮ್ಮ ವೃತ್ತಿಜೀವನವನ್ನು ಇನ್ನೂ ನಡೆಸಿಲ್ಲ. ಆದಾಗ್ಯೂ, ಮಾಜಿ ಕ್ರಿಕೆಟಿಗ ಕಳೆದ ಮೂರು ಋತುಗಳಲ್ಲಿ ಐಪಿಎಲ್ ಫ್ರಾಂಚೈಸಿಗಳೊಂದಿಗೆ ತರಬೇತುದಾರರಾಗಿ ಸಂಬಂಧ ಹೊಂದಿದ್ದರು. 2022 ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ, ಎಲ್ಎಸ್​ಜಿ ಎರಡೂ ಋತುಗಳಲ್ಲಿ ಪ್ಲೇಆಫ್​ಗೆ ಅರ್ಹತೆ ಪಡೆಯಿತು.

ಪ್ರಸಕ್ತ ಋತುವಿನಲ್ಲಿ, ಅವರು ಕೆಕೆಆರ್ಗೆ ಸೇರಲು ನಿರ್ಧರಿಸಿದರು ಮತ್ತು ತಕ್ಷಣದ ಪರಿಣಾಮ ಬೀರಿದ್ದಾರೆ. ಕೆಕೆಆರ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಪಡೆದ ನಂತರ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ಗೌತಮ್ ಗಂಭೀರ್ ದೊಡ್ಡ ಸಂದರ್ಭಗಳಲ್ಲಿ ಪ್ರದರ್ಶನ ನೀಡುವ ಖ್ಯಾತಿಯನ್ನು ಹೊಂದಿದ್ದಾರೆ.

2007ರ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ವಿಶ್ವಕಪ್ ಫೈನಲ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್ನಲ್ಲಿ ಗಂಭೀರ್ 2012 ರಲ್ಲಿ ಕೆಕೆಆರ್ ತಂಡವನ್ನು ಚೊಚ್ಚಲ ಪ್ರಶಸ್ತಿಗೆ ಮುನ್ನಡೆಸಿದರು ಮತ್ತು 2014 ರಲ್ಲಿ ಮತ್ತೊಂದು ಪ್ರಶಸ್ತಿಗೆ ಮಾರ್ಗದರ್ಶನ ನೀಡಿದರು. 2014ರಲ್ಲಿ ಕೆಕೆಆರ್ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯ ಫೈನಲ್ಗೆ ಅರ್ಹತೆ ಪಡೆದಿತ್ತು.

Continue Reading
Advertisement
ಕರ್ನಾಟಕ8 mins ago

Rain News: ಮುಧೋಳದಲ್ಲಿ ಸಿಡಿಲಿಗೆ ಬಾಲಕಿ ಬಲಿ; ಚನ್ನರಾಯಪಟ್ಟಣ, ಗುಂಡ್ಲುಪೇಟೆ ಸೇರಿ ವಿವಿಧೆಡೆ ವರುಣಾರ್ಭಟ

dilip Kumar
ಪ್ರಮುಖ ಸುದ್ದಿ9 mins ago

Milind Kumar : ಆರ್​ಸಿಬಿಯ ಮಾಜಿ ಆಟಗಾರ ಕ್ರಿಕೆಟ್​ನಿಂದ ನಿವೃತ್ತಿ

Fan Code OTT Subscription Now for Jio AirFiber JioFiber Jio Mobility Customers
ದೇಶ24 mins ago

Reliance Jio: ಜಿಯೋ ಏರ್‌ಫೈಬರ್, ಜಿಯೋಫೈಬರ್, ಜಿಯೋ ಮೊಬಿಲಿಟಿ ಗ್ರಾಹಕರಿಗೆ ಫ್ಯಾನ್ ಕೋಡ್ ಒಟಿಟಿ ಸಬ್‌ಸ್ಕ್ರಿಪ್ಷನ್!

Gopi Hinduja
ವಿದೇಶ29 mins ago

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

AC visited Gandabommanahalli Goshala and inspected
ವಿಜಯನಗರ1 hour ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ1 hour ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ1 hour ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಕ್ರಿಕೆಟ್1 hour ago

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Retirement Plan
ಮನಿ ಗೈಡ್2 hours ago

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

Siddharth Kak
ದೇಶ2 hours ago

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ2 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ16 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌