ಪ್ರವಾಸ
Summer holidays: ಈ ಬೇಸಿಗೆ ರಜೆಯಲ್ಲಿ ಮಕ್ಕಳ ಜೊತೆ ಇಲ್ಲಿಗೂ ಹೋಗಬಹುದು!
ನಮ್ಮ ಭಾರತದೊಳಗೇ ಅತ್ಯದ್ಭುತ ತಾಣಗಳಿರುವಾಗ ಇನ್ನು ಬೇರೆಡೆ ಹುಡುಕುವ ಮಾತೆಲ್ಲಿದೆ! ನಮ್ಮ ದೇಶದೊಳಗೇ ಈ ಬೇಸಿಗೆ ರಜೆಯಲ್ಲೊಮ್ಮೆ ಮಕ್ಕಳ ಜೊತೆ ಹೋಗಿ ನೋಡಬಹುದಾದ ಉತ್ತಮ ಆಯ್ಕೆಗಳಿವು!
ಇನ್ನೇನು ಶಾಲೆಗಳೆಲ್ಲ ಮುಗಿದು ಎಲ್ಲರೂ ಏಪ್ರಿಲ್ನಲ್ಲೊಂದು ಪ್ರವಾಸದ ಸಿದ್ಧತೆ ಮಾಡಿಕೊಳ್ಳುವುದು ಸಾಮಾನ್ಯ. ಎಲ್ಲಿಗೆ ಪ್ರವಾಸ ಹೋಗುವುದು ಎಂಬುದು ಅವರವರ ಆಸಕ್ತಿ, ಸಮಯ, ಹಣ ಎಲ್ಲವುಗಳ ಮೇಲೆ ನಿರ್ಧರಿತವಾದದ್ದು. ಆದರೆ, ವರ್ಷದಲ್ಲೊಮ್ಮೆ ಹೋಗುವ ಪ್ರವಾಸವು ಜೀವಮಾನದಲ್ಲೊಮ್ಮೆ ನೆನಪಿನಲ್ಲಿಟ್ಟುಕೊಳ್ಳುವಂಥದ್ದಾದರೆ ಅದಕ್ಕಿಂತ ಸುಂದರ ಅನುಭವ ಇನ್ನೇನಿದೆ ಹೇಳಿ! ಅದರಲ್ಲೂ ನಮ್ಮ ಭಾರತದೊಳಗೇ ಅತ್ಯದ್ಭುತ ತಾಣಗಳಿರುವಾಗ ಇನ್ನು ಬೇರೆಡೆ ಹುಡುಕುವ ಮಾತೆಲ್ಲಿದೆ! ನಮ್ಮ ದೇಶದೊಳಗೇ ಈ ಬೇಸಿಗೆ ರಜೆಯಲ್ಲೊಮ್ಮೆ ಮಕ್ಕಳ ಜೊತೆ ಹೋಗಿ ನೋಡಬಹುದಾದ ಉತ್ತಮ ಆಯ್ಕೆಗಳಿವು!
1. ಡಾರ್ಜಿಲಿಂಗ್, ಪಶ್ಚಿಮ ಬಂಗಾಳ: ಬೇಸಿಗೆಯಲ್ಲಿ ಗಿರಿಧಾಮಗಳಿಗೆ ಪ್ರವಾಸ ಹೋಗುವುದು ಎಂದರೆ ಮನಸ್ಸಿಗೆ, ದೇಹಕ್ಕೆ ಹಿತ. ವಸಂತ ಕಾಲದಲ್ಲಿ ಹೂಬಿಟ್ಟು ಆಗಷ್ಟೇ ನಳನಳಿಸುವ ಪ್ರಕೃತಿಯಿಂದ ಬೆಟ್ಟಗುಡ್ಡಗಳಿಗೆ ಆಗಷ್ಟೇ ರಂಗು ಬಂದಿರುತ್ತದೆ. ಡಾರ್ಜಿಲಿಂಗ್ನಲ್ಲಿ ರೋಡೋಡೆಂಡ್ರಾನ್ ಹೂಗಳು ಅರಳಿ ನಿಂತು ಇಡೀ ಬೆಟ್ಟವೇ ಪಿಂಕ್ ಬಣ್ಣಕ್ಕೆ ತಿರುಗುವುದನ್ನು ನೋಡುವುದು ಚಂದ. ಅದಕ್ಕಾದರೂ ಡಾರ್ಜಿಲಿಂಗ್ ಸುತ್ತಾಡಬೇಕು. ಮಕ್ಕಳ ಜೊತೆಗೆ ಅಲ್ಲಿನ ಪುಟಾಣಿ ರೈಲಿನಲ್ಲಿ ಕೂತು ಊರು ಸುತ್ತಬೇಕು. ಆಕಾಶ ಶುಭ್ರವಾಗಿದ್ದರೆ ದೂರದಿಂದ ಕಾಣುವ ಕಾಂಚನಜುಂಗವನ್ನು ಕಣ್ತುಂಬಬೇಕು. ಬೆಟ್ಟ ಗುಡ್ಡದ ಬದುಕು, ಚಹಾತೋಟಗಳು ಹೀಗೆ ಬದುಕಿನ ಅನುಭವಕ್ಕೆ ಇಲ್ಲಿ ಸಾಕಷ್ಟಿದೆ.
2. ತವಾಂಗ್, ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶವನ್ನು ನಮ್ಮ ನಕ್ಷೆಯಲ್ಲಿ ಮೂಲೆಯಲ್ಲಿ ನೋಡಿ ಅಷ್ಟೇ ಯಾಕೆ ಸುಮ್ಮನಾಗಬೇಕು ಹೇಳಿ! ಆ ಮೂಲೆಯನ್ನೊಮ್ಮೆ ಸಾಕ್ಷಾತ್ ಸ್ಪರ್ಶಿಸಿದರೆ ಹೇಗೆ ಎಂದು ಕಲ್ಪಿಸಿಕೊಳ್ಳಿ. ಒಮ್ಮೆ ಹೋಗಿ ಬಂದರೆ ಆಗುವ ಅನುಭವವೇ ಬೇರೆ. ಇಲ್ಲಿನ ಬೌದ್ಧ ಮಂದಿರಗಳ ಅನುಭೂತಿಯೊಂದಿಗೆ ಹಿಮಚ್ಛಾದಿತ ಬೆಟ್ಟಗಳನ್ನು ಕಣ್ತುಂಬಿಕೊಂಡು ಸ್ಪಟಿಕ ಶುದ್ಧ ಆಕಾಶವನ್ನೂ, ಸರೋವರದ ನೀರನ್ನೂ ಕಣ್ತುಂಬಿಕೊಳ್ಳಬಹುದು.
3. ಬೀರ್, ಹಿಮಾಚಲ ಪ್ರದೇಶ: ಉತ್ತರ ಭಾರತದ ವಸಂತಕಾಲದ ಸ್ವರ್ಗ ಹಿಮಾಚಲದ ಬೀರ್. ತೀಕ್ಷ್ಣವಾದ ಚಳಿಗಾಲ ಮೆಲ್ಲನೆ ತನ್ನ ಬಾಹುಗಳನ್ನು ಸಡಿಲಗೊಳಿಸುತ್ತಿರುವ ವಸಂತ ಕಾಲದಲ್ಲಿ ಬೀರ್ನಂತಹ ಜಾಗಕ್ಕೆ ಹೋಗಬೇಕು. ಪಾರಾಗ್ಲೈಡಿಂಗ್ ಮತ್ತಿತರ ಸಾಹಸೀ ಕ್ರೀಡೆಗಳಿಗೆ ಬೀರ್ನಂತಹ ಪ್ರಶಸ್ತ ಸ್ಥಳ ಇನ್ನೊಂದಿಲ್ಲ. ಇಲ್ಲಿನ ಸ್ಥಳೀಯ ಕಲೆ, ಸಂಸ್ಕೃತಿ ತಿಳಿಯಲು, ಒಂದಿಷ್ಟು ಸಾಹಸೀಕ್ರೀಡೆಗಳನ್ನೂ ಆಡಿ, ಸಾಲುಸಾಲು ಬೆಟ್ಟಗಳನ್ನು ಸುಮ್ಮನೆ ಕುಳಿತು ನೋಡುತ್ತಾ ಕಳೆಯುವುದೇ ಖುಷಿ.
4. ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯ ಪ್ರದೇಶ: ನಮ್ಮ ಮಧ್ಯಪ್ರದೇಶದಲ್ಲಿರುವ ಕನ್ಹಾ ರಾಷ್ಟ್ರೀಯ ಉದ್ಯಾನವನವನ್ನೇ ನಾವು ಮರೆತರೆ ಹೇಗೆ? ವನ್ಯಜೀವಿಗಳ ಬಗ್ಗೆ ನಮ್ಮ ತಿಳುವಳಿಕೆ, ಕಳಕಳಿ ಹೆಚ್ಚಿಸಿಕೊಳ್ಳಲು ಹಾಗೂ, ಅವುಗಳ ಬಗ್ಗೆ ಬೇರೆಯವರಿಗೆ ನಮ್ಮ ಅರಿವು ದಾಟಿಸಲು, ನಾವು ಇನ್ನೂ ಹೆಚ್ಚು ಪ್ರಜ್ಞಾವಂತರಾಗಿ ಬದುಕಲು, ಭೂಮಿಯ ಮೇಲಿನ ಸಕಲ ಜೀವಜಂತುಗಳಿಗೆ ಬದುಕಲು ನಮ್ಮಷ್ಟೇ ಹಕ್ಕಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ನಾವು ಆಗಾಗ ಕಾಡಿಗೆ ಹೋಗಬೇಕು. ಕನ್ಹಾ ಕೂಡಾ ಆಂಥದ್ದೇ ಒಂದು ಒಳ್ಳೆಯ ಆಯ್ಕೆ.
ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!
5. ಅಮೃತಸರ, ಪಂಜಾಬ್: ನಮ್ಮ ದೇಶದ ಭವ್ಯ ಸಂಸ್ಕೃತಿ ಪರಂಪರೆ ಅರಿಯಲು ಕೇವಲ ನಮ್ಮ ಸುತ್ತಮುತ್ತಲ ಜಾಗಗಳ ಬಗ್ಗೆಯಷ್ಟೇ ಗೊತ್ತಿದ್ದರೆ ಸಾಲದು. ನಮ್ಮ ಗಡಿ ಪ್ರದೇಶಗಳ, ನಮ್ಮ ಭಾರತದ ಐತಿಹ್ಯ, ವಿವಿಧ ಧರ್ಮ ಸಂಸ್ಕೃತಿಯ ಬಗ್ಗೆಯೂ ತಿಳಿಯುವುದು ಮುಖ್ಯ. ಅಂಥದ್ದೊಂದು ಒಳ್ಳೆಯ ಆಯ್ಕೆ ಅಮೃತಸರ. ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ನೇಡಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ನೆಲದಲ್ಲಿ ನಡೆದಾಡಿ ಇತಿಹಾಸದ ಪುಟವನ್ನೊಮ್ಮೆ ಬಿಡಿಸಿ ಕಣ್ಣು ತೇವವಾಗಿಸಬಹುದು. ಅಷ್ಟೇ ಅಲ್ಲ, ವಾಘಾ ಗಡಿಯಲ್ಲಿ ನಮ್ಮ ದೇಶ ಕಾಯ್ವ ಸೈನಿಕರ ಕಾರ್ಯ ನೋಡಿ ರೋಮಾಂಚನಗೊಳ್ಳಬಹುದು. ಮಕ್ಕಳಿಗೆ ದೇಶದ ಕಥೆ ಹೇಳಲು, ದೇಶಪ್ರೇಮ ಚಿಗುರಿಸಲು ಪಂಜಾಬ್ ಪ್ರವಾಸಕ್ಕಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
ಪ್ರವಾಸ
Travel Tips: ಬೆಟ್ಟದ ಹಾದಿಯಲ್ಲಿ ಪ್ರವಾಸಕ್ಕೆ ಮೊದಲು ಈ ಆಹಾರಗಳನ್ನು ತಿನ್ನದಿರಿ!
ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
ಪ್ರವಾಸ ಎಂಬುದು ಖುಷಿ. ಈಗ ಬೇಸಗೆ ಹತ್ತಿರ ಬರುತ್ತಿದ್ದಂತೆ ಬಹುತೇಕ ಎಲ್ಲರೂ ಕುಟುಂಬ ಸಮೇತರಾಗಿ ಒಂದಲ್ಲ ಒಂದು ಪ್ರವಾಸದ ಸಿದ್ಧತೆಯಲ್ಲಿರುತ್ತಾರೆ. ವಿಮಾನದ ಮೂಲಕವೋ, ರಸ್ತೆ ಮಾರ್ಗವೋ, ರೈಲು ಮಾರ್ಗವೋ ಏನೇ ಆದರೂ ಪ್ರವಾಸ ತರುವ ಅನುಭವವೇ ಬೇರೆ. ಪ್ರವಾಸಕ್ಕೆ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುವುದು ಒಂದು ಸಡಗರವಾದರೆ, ಪ್ರವಾಸದಲ್ಲಿ ಮೂರೂ ಹೊತ್ತು ಏನೆಲ್ಲ ತಿನ್ನುವುದು, ಎಲ್ಲೆಲ್ಲಿ ತಿನ್ನಬೇಕು ಎಂಬು ಪ್ಲಾನ್ ಮಾಡಿಕೊಳ್ಳುವುದೂ ಕೂಡಾ ಇನ್ನೊಂದು ಹರುಷ. ಚೆನ್ನಾಗಿ ತಿಂದುಂಡು ಸ್ಥಳಗಳನ್ನು ನೋಡಿ ಎಲ್ಲ ಒತ್ತಡವನ್ನು ಬದಿಗಿಟ್ಟು ಪ್ರವಾಸದ ಮಜಾವನ್ನು ಅನುಭವಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಪ್ರವಾಸದ ಖುಷಿಯನ್ನು ಅನುಭವಿಸುವ ಭರದಲ್ಲಿ ತಿನ್ನುವ ಸಂಭ್ರಮದಲ್ಲಿ ಬಹಳಷ್ಟು ಮಂದಿ ತಪ್ಪನ್ನೇ ಮಾಡುತ್ತಾರೆ. ಚೆನ್ನಾಗಿ ತಿಂದು ಹೇರ್ಪಿನ್ ಬೆಂಡ್ಗಳಿರುವ ಹಾವಿನಂತೆ ತೆವಳುವ ರಸ್ತೆಯಲ್ಲಿ ಪ್ರಯಾಣ ಆರಂಭಿಸುತ್ತಾರೆ. ಆಗ ಹೊಟ್ಟೆ ನಮ್ಮ ಮಾತನ್ನು ಕೇಳದೆ ಇನ್ನೊಂದು ಹಾಡು ಹಾಡುತ್ತದೆ. ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ.
1. ಎಣ್ಣೆತಿಂಡಿಗಳನ್ನು ಬದಿಗಿಡಿ: ಹೌದು, ಪ್ರವಾಸದ ಸಂದರ್ಭ ಏನಾದರೊಂದು ಮೆಲ್ಲುತ್ತಾ ಕಾರಿನಲ್ಲೋ ಬಸ್ಸಿನಲ್ಲೋ ಪಯಣಿಸುವ ಮಜಾವೇ ಬೇರೆ. ಆದರೆ, ಸಿಕ್ಕಸಿಕ್ಕಲ್ಲೆಲ್ಲ ಪಕೋಡಾ, ಬಜ್ಜಿ, ಬೋಂಡಾ ಅಥವಾ ಏನಾದರೂ ಎಣ್ಣೆ ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಕಡಿದಾದ ಹಾದಿಯಲ್ಲಿ ಎಣ್ಣೆತಿಂಡಿಗಳನ್ನು ಅತಿಯಾಗಿ ತಿಂದರೆ ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆ ಕೆಡುವ ಸಂಭವ ಇದೆ. ಪಕೋಡಾ, ಆಲೂ ಟಿಕ್ಕಿ, ಚಿಪ್ಸ್, ಫ್ರೈಸ್, ಫ್ರೈಡ್ ಚಿಕನ್ ಇತ್ಯಾದಿಗಳನ್ನು ಸಾಧ್ಯವಾದಷ್ಟೂ ಅವಾಯ್ಡ್ ಮಾಡಿ.
2. ಮಾಂಸಾಹಾರ: ಪ್ರವಾಸದ ಸಂದರ್ಭ ಬೆಟ್ಟದ ಹಾದಿಯಲ್ಲಿ ಪ್ರಯಾಣವಿದ್ದಾಗ ಮೊದಲೇ ಮಾಂಸಹಾರ ಮಾಡಿ ಇಂತಹ ರಸ್ತೆಯಲ್ಲಿ ಹೊರಡಬೇಡಿ. ಬಟರ್ ಚಿಕನ್, ಮಟನ್ ರೋಗನ್ ಜೋಶ್, ಚಿಕನ್ ಟಿಕ್ಕಾ ಇತ್ಯಾದಿ ಇತ್ಯಾದಿ ಸ್ಪೈಸೀ ಮಾಂಸಾಹಾರವನ್ನು ತಿಂದು ಹೊರಟರೆ,ತಿರುವು ಮುರುವು ರಸ್ತೆಯಲ್ಲಿ ಖಂಡಿತಾ ಹೆಚ್ಚುಕಡಿಮೆಯಾಗಬಹುದು. ಮೀನು ಹಾಗೂ ಮಾಂಸ ದೇಹದಲ್ಲಿ ಸರಿಯಾಗಿ ಪಚನವಾಗಲು ಎರಡು ದಿನಗಳೇ ಬೇಕಾಗುತ್ತದೆ. ಇದರಲ್ಲಿ ಸಂಕೀರ್ಣವಾದ ಪ್ರೋಟೀನ್ ಇರುವುದರಿಂದ ಯಾವುದಾದರೂ ಲಘು ಆಹಾರ ತಿಂದು ಇಂತಹ ಜಾಗಕ್ಕೆ ಪ್ರಯಾಣ ಬೆಳೆಸಿ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
3. ಬಫೆ ಊಟ: ಬಗೆಬಗೆಯ ಭಕ್ಷ್ಯಗಳಿರುವ ಬಫೆ ಸೆಳೆಯುತ್ತದೆ ನಿಜ. ಆದರೆ, ಚೆನ್ನಾಗಿ ಬಫೆ ಉಂಡು ಹೊಟ್ಟೆ ಉಬ್ಬರಿಸಿದಂತಾಗಿ, ಹೊಟ್ಟೆ ಎತ್ತಲು ಶಕ್ತಿ ಇಲ್ಲದಷ್ಟು ತಿಂದಾಗ ಖಂಡಿತವಾಗಿಯೂ ಬೆಟ್ಟದ ಹಾದಿಯ ತಿರುವು ಮುರುವು ರಸ್ತೆ ನಿಮ್ಮ ಹೊಟ್ಟೆಕೆಡಿಸುವುದು ಗ್ಯಾರಂಟಿ. ಹಾಗಾಗಿ, ಪ್ರಯಾಣಕ್ಕೂ ಮುನ್ನ ಇಂತಹ ಹಬ್ಬದೂಟದ ಯೋಚನೆಯನ್ನು ಆದಷ್ಟೂ ಬದಿಗಿಡಿ.
4. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಆಹಾರ ಉತ್ಪನ್ನಗಳಾದ ಚೀಸ್, ಕ್ರೀಂ, ಐಸ್ ಕ್ರೀಂ ಇತ್ಯಾದಿಗಳು ಪ್ರಯಾಣದ ಸಂದರ್ಭ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತದೆ. ಮೋಷನ್ ಸಿಕ್ನೆಸ್ ತೊಂದರೆ ಇರುವವರಿಗೆ ಖಂಡಿತವಾಗಿ ಇದು ಒಳ್ಳೆಯದನ್ನು ಮಾಡುವುದಿಲ್ಲ. ದೇಹ ಕುಲುಕಾಡುವಾಗ ಹಾಲಿನ ಉತ್ಪನ್ನಗಳು ಬಹಳ ಸಾರಿ ವಾಂತಿ ತರಿಸುತ್ತದೆ. ಹಾಗಾಗಿ ಕಾರ್, ಬಸ್ನಲ್ಲಿ ಪಯಣಿಸುವ ಸಂದರ್ಭ ಹಾಲು ಕುಡಿಯಬೇಡಿ ಹಾಗೂ ಡೈರಿ ಉತ್ಪನ್ನಗಳನ್ನು ತಿನ್ನಬೇಡಿ.
5. ಕಾರ್ಬೋನೇಟೆಡ್ ಡ್ರಿಂಕ್ಗಳು ಹಾಗೂ ಆಲ್ಕೋಹಾಲ್: ಕಾರ್ಬೋನೇಟೆಡ್ ಡ್ರಿಂಕ್ಗಳು ಅಥವಾ ಸೋಡಾದಲ್ಲಿ ಇದರಲ್ಲಿ ಹೆಚ್ಚು ಸಕ್ಕರೆ ಇರುವುದರಿಂದ ಇದು ಹೊಟ್ಟೆಯನ್ನು ಕೆಡಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಆಗಿ ಪ್ರಯಾಣವೇ ಯಾತನಾಮಯವಾಗಬಹುದು. ಹಾಗಾಗಿ, ಬಾಯಾರಿಕೆಗೆ ಆದಷ್ಟೂ ತಾಜಾ ಹಣ್ಣು ಅಥವಾ ನೀರು ಕುಡಿಯುವುದು ಒಳ್ಳೆಯದು. ಆಲ್ಕೋಹಾಲ್ ಕೂಡಾ ಅಷ್ಟೇ, ಪ್ರಯಾಣದ ಸಂದರ್ಭ ವಾಂತಿ ತರಿಸುವ ಸಂಭವ ಹೆಚ್ಚು. ಹಾಗಾಗಿ ಇವುಗಳಿಂದ ದೂರವಿರಿ.
ಇದನ್ನೂ ಓದಿ: Travel Tips: ಬ್ಲೂ ಸರ್ಟೀಫಿಕೆಟ್ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ!
ಪ್ರವಾಸ
Travel Tips: ಗುಹೆಗಳೆಂಬ ಪ್ರಕೃತಿ ವಿಸ್ಮಯಗಳು: ನೋಡಲೇಬೇಕಾದ ಭಾರತದ ಗುಹೆಗಳಿವು!
ಜೀವನದಲ್ಲಿ ಒಮ್ಮೆಯಾದರೂ ನೀವು ಒಳಹೊಕ್ಕು ನೋಡಲೇಬೇಕಾದ ಗುಹೆಗಳು ಭಾರತದಲ್ಲಿವೆ. ಕೆಲವು ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ಅಷ್ಟೇನೂ ಪ್ರಸಿದ್ಧವಲ್ಲ. ಆದರೂ ಇವುಗಳ ಭೇಟಿ ಆನಂದದಾಯಕ.
ನಿಸರ್ಗ ನಿರ್ಮಿತ ಗುಹೆಗಳಿಗೆ ಭಾರತದಲ್ಲೇನೂ ಕೊರತೆಯಿಲ್ಲ. ಅಜಂತಾ ಎಲ್ಲೋರಾ, ಬಾದಾಮಿಯಂತಹ ಗುಹಾಂತರ್ದೇವಾಲಯಗಳು ಒಂದೆಡೆಯಾದರೆ, ಗುಹೆಗಳು ಹೇಗಿದ್ದವೋ ಅದೇ ಸ್ವರೂಪದಲ್ಲಿ ಇಂದಿಗೂ ಉಳಿಸಿಕೊಂಡು ಬಂದಿರುವುದು ಇನ್ನೊಂದು ಬಗೆಯ ಗುಹೆಗಳು. ಇಂಥ ಗುಹೆಗಳ, ಜೀವನದಲ್ಲೊಮ್ಮೆಯಾದರೂ ಗುಹೆಗಳೆಂಬ ರೋಮಾಂಚನದೊಳಕ್ಕೆ ಹೊಕ್ಕು ನೋಡಲೇಬೇಕಾದ ಪ್ರಕೃತಿ ವಿಸ್ಮಯಗಳಿವು.
ಭೀಮ್ಬೆಟ್ಕಾ ಗುಹೆಗಳು, ಮಧ್ಯ ಪ್ರದೇಶ: ಮಧ್ಯಪ್ರದೇಶದ ರಾತಾಪಾನಿ ವನ್ಯಜೀವಿ ರಕ್ಷಿತಾರಣ್ಯದಲ್ಲಿರುವ ಭೀಮ್ಬೆಟ್ಕಾ ಗುಹೆಗಳು ಭಾರತದ ಪ್ರಮುಖ ಗುಹೆಗಳಲ್ಲೊಂದು. ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವ ಈ ಗುಹೆಗಳ ಒಳಗೆ ಶಿಲಾಯುಗದ ಕಾಲದ ಚಿತ್ರಗಳನ್ನೂ ಹೊಂದಿದೆ. ಈ ಗುಹೆಗಳಿಗೆ ಪೌರಾಣಿಕ ಹಿನ್ನೆಲೆಯ ಕಥೆಗಳೂ ಇದ್ದು, ಹಿಂದೆ, ಪಾಂಡವರು ಅಜ್ಞಾತವಾಸದ ಸಂದರ್ಭ ಇಲ್ಲಿ ಯಾರಿಗೂ ಕಾಣದಂತಿರಲು ತಂಗಿದ್ದರು ಎಂಬ ಉಲ್ಲೇಖವೂ ಇದೆ. ಭಾರತದ ಪ್ರಮುಖ ಗುಹೆಗಳ ಪೈಕಿ ಇದೂ ಒಂದು.
ಬೋರಾ ಗುಹೆಗಳು, ಆಂಧ್ರಪ್ರದೇಶ: ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿರುವ ಬೋರಾ ಗುಹೆಗಳು ನಿಸರ್ಗದ ವಿಸ್ಮಯಗಳಲ್ಲೊಂದು. ಗುಹೆಯ ಒಳಗೆ ನೈಸರ್ಗಿಕ ಶಿವಲಿಂಗವಿದ್ದು ಅತ್ಯಂತ ಸುಂದರ ಗುಹೆಗಳ ಪೈಕಿ ಇದೂ ಒಂದು.
ಎಡಕಲ್ ಗುಹೆಗಳು, ಕೇರಳ: ಕೇರಳದ ವಯನಾಡಿನಲ್ಲಿರುವ ಎಡಕಲ್ಲು ಕನ್ನಡ ಸಿನಿಮಾವೊಂದರ ಹೆಸರಿನಿಂದ ಬಹಳ ಪ್ರಸಿದ್ಧ. ವಯನಾಡಿನ ಅದ್ಭುತ ಬೆಟ್ಟಗುಡ್ಡಗಳ ನಡುವಿರುವ ಈ ಗುಹೆಯಲ್ಲಿ ಶಿಲಾಯುಗದ ಕಾಲದ ಅಂದರೆ ಸುಮಾರು ಕ್ರಿಸ್ತಪೂರ್ವ ೬೦೦೦ನೇ ಇಸವಿಯ ಆಸುಪಾಸಿನದ್ದೆಂದು ಹೇಳಲಾದ ಚಿತ್ರಗಳೂ ಇವೆ. ಕಲ್ಲು ಬಂಡೆಗಳ ಮೇಲೆ ಬರೆಯಲಾದ ಈ ಚಿತ್ರಗಳು ಶಿಲಾಯುಗದ ಕಥೆಗಳನ್ನು ನಮಗೆ ದಾಟಿಸುತ್ತವೆ. ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿರುವ ಇದು ಮೂರ್ನಾಲ್ಕು ದಿನಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ.
ಮಾಸ್ಮಾಯ್ ಗುಹೆಗಳು, ಚಿರಾಪುಂಜಿ: ಮೇಘಗಳ ತವರು, ಭಾರತದ ಮಳೆನಾಡು ಮೇಘಾಲಯದ ತುಂಬ ಗುಹೆಗಳೂ ಬೇಕಾದಷ್ಟಿವೆ. ಚಿರಾಪುಂಜಿಯಲ್ಲಿರುವ ಮಾಸ್ಮಾಯ್ ಗುಹೆಗಳು ಇವುಗಳ ಪೈಕಿ ಅತ್ಯಂತ ಪ್ರಸಿದ್ಧವಾದದ್ದು. ತೆವಳಿಕೊಂಡೇ ಒಳಗೆ ಹೋಗಬೇಕಾದ ಈ ಗುಹೆ ಒಂದು ಅತ್ಯಪೂರ್ವ ಅನುಭವ ನೀಡುತ್ತದೆ.
ಬೆಲ್ಲುಂ ಗುಹೆಗಳು, ಆಂಧ್ರಪ್ರದೇಶ: ಭಾರತದ ಎರಡನೇ ಅತ್ಯಂತ ದೊಡ್ಡ ನೈಸರ್ಗಿಕವಾದ ಗುಹೆಯಿದು. ಇದು ಸುಮಾರು ೩೨೨೯ ಮೀಟರ್ಗಳಷ್ಟು ಉದ್ದವಿದ್ದು, ೧೨೦ ಟಡಿಗಳಷ್ಟು ನೆಲದಿಂದ ಆಳದಲ್ಲಿದೆ. ಕರ್ನೂಲ್ ಜಿಲ್ಲೆಯ ಬೆಲ್ಲುಂ ಎಂಬಲ್ಲಿ ಈ ಗುಹೆಯಿದ್ದು ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿದೆ. ಈ ಗುಹೆಗಳು ಬಹಳ ಹಿಂದೆ ಚಿತ್ರಾವತಿ ನದಿಯ ಹರಿವಿನಿಂದ ಭೂಗರ್ಭದಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಗುಹೆಗಳೆಂದು ಹೇಳಲಾಗಿದ್ದು, ಇಂದಿಗೂ ಗುಹೆಯೊಳಗೆ ಸಾಕಷ್ಟು ನೀರಿನ ಮೂಲಗಳನ್ನು ಕಾಣಬಹುದು. ಇಲ್ಲಿ ಬೌದ್ಧ ಸನ್ಯಾಸಿಗಳೂ ಒಂದು ಕಾಲದಲ್ಲಿ ವಾಸವಿದ್ದರು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿದ್ದು ಇವೆಲ್ಲವನ್ನೂ ಅನಂತಪುರದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ, ಗುಹೆಯೊಂದರ ಅದ್ಭುತ ಅನುಭವ ನೀಡಬಹುದಾದ ಗುಹೆ ಇದಾಗಿದ್ದು, ಕುಟುಂಬ ಸಮೇತರಾಗಿ ಒಂದೆರಡು ದಿನಗಳ ಪ್ರವಾಸದಲ್ಲಿ ನೋಡಿ ಬರಬಹುದಾದ ಸ್ಥಳವಿದು.
ಕುಟುಂಸಾರ್ ಗುಹೆಗಳು, ಛತ್ತೀಸ್ಗಢ: ಛತ್ತೀಸ್ಘಡದ ಬಸ್ತರ್ನ ಕಂಗೇರ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿರುವ ಈ ಗುಹೆ ನೈಸರ್ಗಿಕವಾಗಿ ನಿರ್ಮಿತವಾದ ಪ್ರಮುಖ ಗುಹೆಗಳಲ್ಲಿ ಒಂದು. ಇದರಲ್ಲಿ ಐದು ವಿಭಾಗಗಳಿದ್ದು, ಕೆಲವು ಬಾವಿಗಳನ್ನೂ ಹೊಂದಿದೆ. ೧೩೨೭ ಮೀಟರ್ ಉದ್ದವಿರುವ ಈ ಗುಹೆಯೊಳಗೆ ಸೂರ್ಯನ ಬಿಸಿಲು ತಾಗುವುದೇ ಇಲ್ಲ.
ನೆಲ್ಲಿತೀರ್ಥ, ಕರ್ನಾಟಕ: ಕರ್ನಾಟಕದೊಳಗೇ ಗುಹೆಯನ್ನು ನೋಡುವ ಆಸೆಯಿದ್ದವರಿಗೆ ನೆಲ್ಲಿತೀರ್ಥ ಉತ್ತಮ ಆಯ್ಕೆ. ದಕ್ಷಿಣ ಕನ್ನಡದಲ್ಲಿರುವ ಈ ಗುಹೆ ಸುಮಾರು ೨೦೦ ಮೀಟರ್ ಉದ್ದವಿದ್ದು, ಗುಹೆಯೊಳಗೆ ಶಿವಲಿಂಗವಿದೆ. ಗುಹೆಯೊಳಗೆ ನೆಲ್ಲಿಕಾಯಿ ಗಾತ್ರದ ನೀರಿನ ಬಿಂದುಗಳು ಬಿದ್ದು ಇಲ್ಲೆ ಕೊಳವೊಂದು ಉಂಟಾಗಿದ್ದು, ಈ ಕಾರಣದಿಂದಲೇ ಇಲ್ಲಿಗೆ ನೆಲ್ಲಿತೀರ್ಥವೆಂಬ ಹೆಸರು ಬಂದಿದೆ. ತೀರ್ಥೋದ್ಭವದ ದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಇದನ್ನೂ ಓದಿ: Travel Tips: Beach Tourism: ಬ್ಲೂ ಸರ್ಟಿಫಿಕೇಶನ್ ಪಡೆದ ಭಾರತದ ಸ್ವಚ್ಛ ಬೀಚ್ಗಳಿವು! (ಭಾಗ 2)
ಪ್ರವಾಸ
ವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ
ರಾಜ್ಯದಲ್ಲಿ ಮತದಾರರಿಗೆ ಗಿಫ್ಟ್ ಹಂಚುವ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವಕ್ಕೆ ಇದು ಭೂಷಣವಲ್ಲ. ಇಂತಹ ಆಮಿಷಗಳನ್ನು ಜನರೇ ತಿರಸ್ಕರಿಸಬೇಕು. ಚುನಾವಣೆ ಆಯೋಗ ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ನೀತಿ ಸಂಹಿತೆ ಜಾರಿಯಾಗಿಲ್ಲ. ಆದರೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತು ಜೋರಾಗಿದೆ. ಕುಕ್ಕರ್, ಸೀರೆ, ಪಂಚೆ, ಸ್ಕೂಲ್ ಬ್ಯಾಗ್, ಬಳೆ, ಬಾಡೂಟ, ಮದ್ಯ, ನಗದು ವಿತರಣೆ ಸೇರಿದಂತೆ ನಾನಾ ರೂಪದಲ್ಲಿ ಮತದಾರರನ್ನೂ ಭ್ರಷ್ಟರನ್ನಾಗಿಸುವ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಗಟ್ಟಲು ಚುನಾವಣಾ ಆಯೋಗವು, ವಿವಿಧ ಇಲಾಖೆಗಳ ಸಹಾಯದೊಂದಿಗೆ ದಾಳಿಗಳನ್ನು ನಡೆಸುತ್ತಿದೆ. ಈವರೆಗೆ, ವಿಶೇಷ ಕಾರ್ಯಾಚರಣೆ ಮೂಲಕ ಕಳೆದ 3 ದಿನಗಳಲ್ಲಿ 5.4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಅಕ್ರಮ ತಡೆಯಲು ಸೂಚನೆ ನೀಡಿದ್ದರು. ಬಳಿಕ, ಅಧಿಕಾರಿಗಳು ದಾಳಿಗಳನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಲಕ್ಷ್ಯದೊಂದಿಗೆ ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಮತದಾರರು ಸೊಪ್ಪ ಹಾಕಬಾರದು. ತಾತ್ಕಾಲಿಕ ಲಾಭಕ್ಕಾಗಿ ಮತವನ್ನು ಮಾರಿಕೊಳ್ಳುವುದನ್ನು ಜನರು ತಿರಸ್ಕರಿಸಬೇಕು.
ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ರಾಜಕಾರಣಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಕಂದಾಯ ಅಧಿಕಾರಿಗಳು, ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಫುಡ್ಕಿಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದೆಡೆ, ರಾಮನಗರ ತಾಲೂಕಿನಲ್ಲಿ, ಮತದಾರರಿಗೆ ಹಂಚಲು ಸಿದ್ಧವಾಗಿದ್ದ 2,900 ಕುಕ್ಕರ್ಗಳನ್ನು ತಹಸೀಲ್ದಾರ್ ಜಪ್ತಿ ಮಾಡಿದ್ದಾರೆ. ಐದು ದಿನಗಳ ಹಿಂದೆ, ಪರಿಷತ್ ಸದಸ್ಯರೊಬ್ಬರ ಹಾವೇರಿ ನಿವಾಸದ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ನಡೆಸಿ, 6000ಕ್ಕೂ ಅಧಿಕ ಸೀರೆ, 9000ಕ್ಕೂ ಅಧಿಕ ಸ್ಕೂಲ್ ಬ್ಯಾಗ್ಗಳು, ತಟ್ಟೆ-ಲೋಟಗಳು ಸೇರಿದಂತೆ ಒಟ್ಟಾರೆ 8 ಕೋಟಿ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. ಇದು ಯಾವುದೋ ಒಂದು ಕ್ಷೇತ್ರಕ್ಕೆ ಅಥವಾ ಯಾವುದೋ ಒಂದೇ ಪಕ್ಷಕ್ಕೆ ಮಾತ್ರ ಸಿಮೀತವಾಗಿಲ್ಲ.
ಈ ಹಿಂದೆ ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳು ಒಂದಿಷ್ಟು ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆದರೆ, ಈಗ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮತದಾರರು ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಇದೊಂದು ವಿಷ ವರ್ತುಲ. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಒಳ್ಳೆಯ ಲಾಭ ಜನರಿಗೇ ಆಗುತ್ತದೆ. ಆಮಿಷಕ್ಕೆ ಬಿದ್ದು ಅರ್ಹನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರಿಂದಾಗುವ ದುಷ್ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ
ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಸಭ್ಯರು ಎಲೆಕ್ಷನ್ ಗೆಲ್ಲುವುದೇ ಅಸಾಧ್ಯ. ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಈ ಕಳಂಕವನ್ನು ನಿವಾರಿಸಬೇಕಾದ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ. ಚುನಾವಣೆ ಆಯೋಗದ ಜವಾಬ್ದಾರಿಯೂ ಇಲ್ಲಿ ದೊಡ್ಡದಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು.
ಪ್ರವಾಸ
Travel Tips: Beach Tourism: ಬ್ಲೂ ಸರ್ಟಿಫಿಕೇಶನ್ ಪಡೆದ ಭಾರತದ ಸ್ವಚ್ಛ ಬೀಚ್ಗಳಿವು! (ಭಾಗ 2)
ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ
ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಬಹುದಾದ, ಚಂದನೆಯ ಸಮುದ್ರ ತೀರಗಳಿವೆ. ಸ್ಫಟಿಕ ಶುದ್ಧ ಸೊಗಸಿನ ಈ ಬೀಚ್ಗಳಲ್ಲಿ 12 ತೀರಗಳು ಬ್ಲೂ ಸರ್ಟಿಫಿಕೇಶನ್ ಪಡೆದಿವೆ. ಮೊದಲ ಭಾಗದಲ್ಲಿ ಆರು ಬೀಚ್ಗಳ ವಿವರ ಓದಿದ್ದೀರಿ. ಪಟ್ಟಿಯ ಮುಂದುವರಿದ ಭಾಗ ಇಲ್ಲಿದೆ!
೭. ಕಪ್ಪದ್, ಕೇರಳ: ಕೇರಳದ ಈ ಕಡಲ ಕಿನಾರೆಗೊಂದು ಇತಿಹಾಸವೇ ಇದೆ. ೧1498ರಲ್ಲಿ ವಾಸ್ಕೋಡಗಾಮ 170 ಮಂದಿ ಸಹಚರರೊಂದಿಗೆ ಭಾರತಕ್ಕೆ ಬಂದಿಳಿದ ಕಡಲ ಕಿನಾರೆಯಿದು. ಇದು ಸ್ವಚ್ಛವಷ್ಟೇ ಅಲ್ಲ, ಚಂದನೆಯ ವಲಸಿಗ ಹಕ್ಕಿಗಳಿಗೂ ತಾಣ. ಸದ್ಯ ಪ್ರವಾಸೋದ್ಯಮಕ್ಕೆ ಸೂಕ್ತವಾಗುವಂತೆ ವಾಕಿಂಗ್ ಟ್ರ್ಯಾಕ್, ವಾಶ್ರೂಂಗಳು ಸೇರಿದಂತೆ ಹಲವು ನಾಗರಿಕ ಸೇವೆಗಳು ಇಲ್ಲಿ ಲಭ್ಯವಿವೆ.
೮. ಗೋಲ್ಡನ್ ಬೀಚ್, ಪುರಿ, ಒಡಿಶಾ: ಒಡಿಶಾದ ಪುರಿಯ ಗೋಲ್ಡನ್ ಬೀಚ್ ಸಾವಿರಾರು ಜನರನ್ನು ನಿತ್ಯವೂ ಸೆಳೆಯುವ ಪ್ರಸಿದ್ಧ ಕಡಲತೀರಗಳಲ್ಲೊಂದು. ಇಲ್ಲಿ ಮಾಡಲಾದ ಸಾರ್ವಜನಿಕ ಸೇವೆಗಳಾದ, ಟಾಯ್ಲೆಟ್, ವಿಕಲಚೇತನರಿಗೆ ಸರಳ ವ್ಯವಸ್ಥೆಗಳು, ವಾಚ್ಟವರ್ಗಳು, ಸ್ನಾನದ ಝೋನ್ಗಳು ಎಲ್ಲವೂ ಇದನ್ನು ಅಧ್ಬುತವನ್ನಾಗಿಸಿದೆ. ಪ್ರತಿ ವರ್ಷವೂ ಇಲ್ಲಿ ನಡೆಯುವ ಬೀಚ್ ಉತ್ಸವ, ಮರಳು ಚಿತ್ರಕಲೆ ಸಾಕಷ್ಟು ಜನರನ್ನಿಲ್ಲಿಗೆ ಸೆಳೆಯುತ್ತದೆ.
೯. ಮಿನಿಕೋಯ್ ತುಂಡಿ ಬೀಚ್, ಲಕ್ಷದ್ವೀಪ: ಪಚ್ಚೆ ರತ್ನವೆನ್ನ ನೀರಲ್ಲಿ ಕರಗಿ ಹೋಗಿದೆಯೋ ಎಂಬಂತೆ ಸದಾ ಹರಿರು ಬಣ್ಣದಲ್ಲಿ ಫಳಪಳಿಸುತ್ತಿರುವ ಸಮುದ್ರ ತೀರವಿದು. ಜೀವನದಲ್ಲಿ ಒಮ್ಮೆಯಾದರೂ ಭಾರತದ ಈ ಪುಟಾಣೀ ದ್ವೀಪವನ್ನು ನೋಡಿ, ಇಲ್ಲಿನ ಸ್ಪಟಿಕ ಶುದ್ಧ ತೀರಗಳಲ್ಲಿ ಅಲೆದಾಡಬೇಕು.
೧೦. ಕದ್ಮತ್ ಬೀಚ್, ಲಕ್ಷದ್ವೀಪ: ಲಕ್ಷದ್ವೀಪದ ಕಡಲ ಕಿನಾರೆಗಳೆಲ್ಲವೂ ಅದ್ಭುತವೇ. ಹಸಿರು ಹಸಿರಾಗಿ ಕಂಗೊಳಿಸುವ ಇವು ನಮ್ಮ ಸಾದಾ ಬೀಚ್ಗಳಿಗಿಂತ ಕೊಂಚ ಭಿನ್ನವಾಗಿಯೇ ಕಾಣುತ್ತವೆ.
ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!
೧೧. ಈಡನ್ ಬೀಚ್, ಪಾಂಡಿಚೇರಿ: ಪಾಂಡಿಚೇರಿ ಎಂಬ ಪುಟಾಣಿ ನಗರ ಹಲವಾರು ಕಾರಣಗಳಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅವುಗಳ ಪೈಕಿ ಸುಂದರ ಕಡಲ ಕಿನಾರೆಯೂ ಒಂದು. ಈಡೆನ್ ಬೀಚ್ ಪಾಂಡಿಯ ಚಂದನೆಯ ಸ್ವಚ್ಛವಾದ ಬೀಚ್ಗಳ ಪೈಕಿ ಅಗ್ರಗಣ್ಯ. ಪಾಂಡಿಯ ಆರೋವಿಲ್ಲೆಯಲ್ಲಿ ನಡೆದಾಡಿ, ಧ್ಯಾನ ಮಾಡಿ, ಅರವಿಂದಾಶ್ರಮದಲ್ಲಿ ಒಂದಿಷ್ಟು ಹೊತ್ತು ಕೂತು, ಸಂಜೆ ಈ ಕಡಲ ಕಿನಾರೆಯ ಗಾಳಿ ಸೇವನೆಗೆ ಕೂತರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಬಹುದು.
೧೨. ಕೋವಲಂ ಬೀಚ್, ತಮಿಳುನಾಡು: ಸರ್ಫಿಂಗ್ ಕಲಿಯಲು ಆಸಕ್ತಿಯಿರುವ ಮಂದಿಗೆ ದಕ್ಕುವ ಕೆಲವೇ ಕೆಲವು ದಕ್ಷಿಣದ ಬೀಚ್ಗಳ ಪೈಕಿ ಕೋವಲಂ ಬೀಚ್ ಕೂಡಾ ಒಂದು. ಚಂದನೆಯ, ಚಿಪ್ಪುಗಳಿಂದಾವೃತವಾದ ಮರಳ ದಿಣ್ಣೆಗಳಿರುವ ಸಂಜೆಯ ಹೊತ್ತು ತಪ್ಪದೇ ಭೇಟಿಕೊಡಬಹುದಾದ ಸರಳ ಸುಂದರ ಬೀಚ್ ಇದು. ಚೈನ್ನೈನ ಜನಜಂಗುಳಿಯ ಸಮುದ್ರ ತೀರಗಳಾದ ಬೆಸೆಂಟ್ ನಗರ ಹಾಗೂ ಮರೀನಾ ಬೀಚ್ಗಳಿಂದ ದೂರವಿರುವ ಆಫ್ಬೀಟ್ ಜಾಗ ಬೇಕು ಎಂದು ಆಸೆಪಡುವ ಮಂದಿಗೆ, ಚೆನ್ನೈನಿಂದ ಸುಮಾರು ೪೦ ಕಿಮೀ ದೂರದಲ್ಲಿರುವ ಈ ಬೀಚ್ ಬೆಸ್ಟ್ ಆಯ್ಕೆ.
ಕೇವಲ ಇವಿಷ್ಟೇ ಅಲ್ಲ, ಇವೆಲ್ಲ ಈಗಾಗಲೇ ಬ್ಲೂ ಸರ್ಟಿಫಿಕೇಶನ್ ಪಡೆದ ಸಮುದ್ರ ತೀರಗಳ ಕಥೆಯಾಯಿತು. ಇನ್ನೂ ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ ಎಂಬುದನ್ನು ಮಾತ್ರ ನಾವು ಸದಾ ನೆನಪಿಟ್ಟುಕೊಳ್ಳಬೇಕು.
ಸ್ಪಟಿಕ ಶುದ್ಧ ಚಂದನೆಯ ಬೀಚ್ಗಳ ಪಟ್ಟಿಯ ಮೊದಲ ಆರು ಬೀಚ್ಗಳ ವಿವರಕ್ಕೆ ಮೊದಲ ಭಾಗ ಓದಿ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
-
ಕರ್ನಾಟಕ16 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್17 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್14 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ15 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!