Kashmir Tour: ವಸಂತ ಕಾಲದಲ್ಲಿ ಕಾಶ್ಮೀರವೆಂಬ ಸ್ವರ್ಗಕ್ಕೆ ಹೋದರೆ ಇವಿಷ್ಟು ಮರೆಯದಿರಿ! - Vistara News

ಪ್ರಮುಖ ಸುದ್ದಿ

Kashmir Tour: ವಸಂತ ಕಾಲದಲ್ಲಿ ಕಾಶ್ಮೀರವೆಂಬ ಸ್ವರ್ಗಕ್ಕೆ ಹೋದರೆ ಇವಿಷ್ಟು ಮರೆಯದಿರಿ!

ಚಳಿಗಾಲ ಮುಗಿದು ಹಿಮ ನಿಧಾನವಾಗಿ ಕರಗಿ ಬೆಳ್ಳನೆಯ ಹಿಮದ ನೆಲಹಾಸು ಮಾಯವಾಗಿ ಎಲ್ಲೆಲ್ಲೂ ಹಸಿರೇ ಹಸಿರು ಕಾಣುವ ಜೊತೆಗೆ ಎಲ್ಲೆಲ್ಲೂ ಅರಳಿ ನಿಲ್ಲುವ ಹೂಗಳು ಕಾಶ್ಮೀರಕ್ಕೆ ಬೇರೆಯದೇ ಬಣ್ಣವನ್ನು ನೀಡುತ್ತವೆ. ಜೀವಕಳೆ ತುಂಬಿ ತುಳುಕುವ ಕಾಶ್ಮೀರವನ್ನು ನೋಡಲೆರಡು ಕಣ್ಣು ಸಾಲದು!

VISTARANEWS.COM


on

kashmir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾಶ್ಮೀರವೆಂದರೆ ಭೂಮಿ ಮೇಲಿನ ಸ್ವರ್ಗ. ಕಣ್ಮನ ತಣಿಸುವ ಬೆಟ್ಟಗುಡ್ಡಗಳು, ಮುಗಿಲು ಚುಂಬಿಸುವ ಹಿಮಪರ್ವತಗಳು, ಕಣ್ಣು ಹಾಯಿಸಿದುದ್ದಕ್ಕೂ ಹಚ್ಚ ಹಸಿರಿನ ಬಯಲು, ಸ್ಪಟಿಕ ಶುದ್ಧವಾಗಿ ಹರಿವ ತೊರೆ… ಪೋಸ್ಟರ್‌ ಪರ್ಫೆಕ್ಟ್‌ ಲ್ಯಾಂಡ್‌ಸ್ಕೇಪ್‌ ನೋಡಬೇಕೆಂದರೆ ಕಾಶ್ಮೀರಕ್ಕೇ (Kashmir tour) ಹೋಗಬೇಕು. ಅದರಲ್ಲೂ, ವಸಂತ ಕಾಲದ ಕಾಶ್ಮೀರಕ್ಕೆ ಅದರದ್ದೇ ಆದ ಸೊಗಸಿದೆ. ಚಳಿಗಾಲದ ಕಾಶ್ಮೀರ, ಎಲೆಯುದುರುವ ಕಾಲದ ಕಾಶ್ಮೀರದ ಜೊತೆಗೆ ನೋಡಲೇಬೇಕಾದ ಕಾಶ್ಮೀರದ ಇನ್ನೊಂದು ಮುಖವೆಂದರೆ ಅದು ವಸಂತ ಕಾಲ. ಚಳಿಗಾಲ ಮುಗಿದು ಹಿಮ ನಿಧಾನವಾಗಿ ಕರಗಿ ಬೆಳ್ಳನೆಯ ಹಿಮದ ನೆಲಹಾಸು ಮಾಯವಾಗಿ ಎಲ್ಲೆಲ್ಲೂ ಹಸಿರೇ ಹಸಿರು ಕಾಣುವ ಜೊತೆಗೆ ಎಲ್ಲೆಲ್ಲೂ ಅರಳಿ ನಿಲ್ಲುವ ಹೂಗಳು ಕಾಶ್ಮೀರಕ್ಕೆ ಬೇರೆಯದೇ ಬಣ್ಣವನ್ನು ನೀಡುತ್ತವೆ. ಜೀವಕಳೆ ತುಂಬಿ ತುಳುಕುವ ಕಾಶ್ಮೀರವನ್ನು ನೋಡಲೆರಡು ಕಣ್ಣು ಸಾಲದು! ಹಾಗಾದರೆ ವಸಂತದ ಕಾಶ್ಮೀರವನ್ನು ನೋಡುವ ಆಸೆಯಿದ್ದರೆ ಯಾವುದನ್ನು ಮರೆಯಬಾರದು (travel tips) ಎಂಬುದನ್ನು ಇಲ್ಲಿ ನೋಡೋಣ.

1. ದಾಲ್‌ ಸರೋವರದಲ್ಲಿ ಶಿಖಾರ ರೈಡ್‌: ಕಾಶ್ಮೀರದ ಶ್ರೀನಗರಕ್ಕೆ ಹೋದರೆ ದಾಲ್‌ ಸರೋವರವನ್ನು ಹೇಗೆ ಮರೆಯಲಾದೀತು! ದಾಲ್‌ ಸರೋವರದಲ್ಲಿ ಶಿಖಾರ(ದೋಣಿ)ದಲ್ಲಿ ಕೂತು ನಿಧಾನವಾಗಿ ಹುಟ್ಟು ಹಾಕುತ್ತಾ ಸೂರ್ಯಾಸ್ತ ನೋಡುತ್ತಾ, ಕಾಶ್ಮೀರದ ಜನರ ಬದುಕನ್ನು ನೋಡುತ್ತಾ ಕಳೆಯುವುದೇ ಒಂದು ಅನುಭವ.

2. ಗುಲ್ಮಾರ್ಗ್‌ನಲ್ಲಿ ಗಾಲ್ಫ್‌: ಗುಲ್ಮಾರ್ಗ್‌ ಎಂಬ ಕಾಶ್ಮೀರದ ಸ್ವರ್ಗದಲ್ಲಿ ಒಂದು ದಿನ ಕಳೆಯುವುದೇ ಒಂದು ಅನುಭವ. ಗುಲ್ಮಾರ್ಗ್‌ನಲ್ಲಿ ಚಳಿಗಾಲದಲ್ಲಿ ಸ್ಕೀಯಿಂಗ್‌, ಸ್ಲೆಡ್ಜಿಂಗ್‌ ಮಾಡಿ ಮಜಾ ಮಾಡಬಹುದಾದರೆ, ವಸಂತ ಕಾಲದಲ್ಲಿ ಭೇಟಿಯಿತ್ತರೆ ಗಾಲ್ಫ್‌ ಆಡಬಹುದು. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಕಾಣುವ ಹಸಿರು ಹುಲ್ಲುಗಾವಲಲ್ಲಿ ಉದ್ದಕ್ಕೂ ನಡೆಯಬಹುದು. ಸುಮ್ಮನೆ ಕೂತು ಏಕಾಂತ ಸುಖ ಅನುಭವಸಬಹುದು. ಇಲ್ಲಿನ ಗಾಲ್ಫ್‌ ಕ್ಲಬ್‌ನಲ್ಲಿ ಗಾಲ್ಫ್‌ ಆಡಬಹುದು!

gulmarg

3. ಕಾಶ್ಮೀರದ ಟುಲಿಪ್‌ ಉದ್ಯಾನಗಳು: ವಸಂತಕಾಲದಲ್ಲಿ ಕಾಶ್ಮೀರಕ್ಕೆ ಭೇಟಿ ಕೊಟ್ಟರೆ ಖಂಡಿತ ಇಲ್ಲಿನ ಉದ್ಯಾನದಲ್ಲಿ ನಡೆದಾಡಬೇಕು. ಸುಂದರ ಹೂಗಳಿಗಿಂತ ಖುಷಿಕೊಡುವ ಸಂಗತಿ ಇನ್ನೇನಿದೆ. ಸುಖಾಸುಮ್ಮನೆ ಅರಳಿ ನಗುವ ಹೂವನ್ನು ನೋಡಲು ಇಲ್ಲಿನ ಜಗತ್ಪ್ರಸಿದ್ಧ ಮೊಘಲ್‌ ಗಾರ್ಡನ್‌ನಲ್ಲಿ ನಡೆದಾಡಬೇಕು. ಮುಖ್ಯವಾಗಿ ಇದೇ ಸಮಯದಲ್ಲಿ ಇಲ್ಲಿ ನಡೆಯುವ ಟುಲಿಪ್‌ ಹೂಗಳ ಉತ್ಸವದಲ್ಲಿ ಭಾಗಿಯಾಗಿ ಅಪರೂಪದ ಟುಲಿಪ್‌ ಸೊಬಗನ್ನು ಸವಿಯಬಹುದು.

4. ಗೊಂಡೋಲಾ ರೈಡ್‌: ಗುಲ್ಮಾರ್ಗ್‌ಗೆ ಹೋದರೆ ಗೊಂಡೋಲಾದಲ್ಲಿ ಕೂರದಿದ್ದರೆ ಹೇಗೆ ಹೇಳಿ! ಹೌದು ಗುಲ್ಮಾರ್ಗ್‌ನ ಕೇಬಲ್‌ ಕಾರ್‌ ಅರ್ಥಾತ್‌ ಗೊಂಡೋಲಾ ಸುಮಾರು ಐದು ಕಿಮೀಗಳಷ್ಟು ದೂರ ಸಾಗುವ ಹಾಗೂ ಅತ್ಯಂತ ಅದ್ಭುತ ದೃಶ್ಯಗಳನ್ನು ಸವಿಯುವಂತೆ ಮಾಡುತ್ತದೆ. ಗೊಂಡೋಲಾದಲ್ಲಿ ಕೂತು ಇಲ್ಲಿನ ಹಿಮಚ್ಛಾದಿತ ಬೆಟ್ಟಗಳ ಸೌಂದರ್ಯ ಸವಿಯುವುದೇ ಒಂದು ಅನುಭವ.

gondola ride

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

5. ಕಣಿವೆಗಳಿಗೆ ಪಯಣ: ಕಾಶ್ಮೀರಕ್ಕೆ ವಸಂತದಲ್ಲಿ ಹೋದರೆ ಇಲ್ಲಿನ ಕಣಿವೆಗಳಿಗೆ ಖಂಡಿತ ಹೋಗಲೇ ಬೇಕು. ಅರು ಕಣಿವೆ, ಬೇತಾಬ್‌ ಕಣಿವೆ ಮತ್ತಿತರ ಕಣಿವೆಗಳು ಕಾಶ್ಮೀರದ ಪ್ರಮುಖ ಆಕರ್ಷಣೆ. ಇಷ್ಟೇ ಅಲ್ಲದೆ, ಕಾಶ್ಮೀರದ ನಿಜವಾದ ಸೌಂದರ್ಯವನ್ನು ಕಣ್ತುಂಬಬೇಕಾದರೆ ಚಾರಣವನ್ನೂ ಮಾಡಬಹುದು. ಕಾಶ್ಮೀರದ ಗ್ರೇಟ್‌ ಲೇಕ್ಸ್‌ ಟ್ರೆಕ್‌ ಅತ್ಯಂತ ಜನಪ್ರಿಯ ಹಾಗೂ ಅಷ್ಟೇ ಅದ್ಭುತ ಚಾರಣಗಳಲ್ಲೊಂದು.

6. ಹೌಸ್‌ಬೋಟ್‌ನಲ್ಲಿ ರಾತ್ರಿ: ಕಾಶ್ಮೀರಕ್ಕೆ ಹೋದ ಮೇಲೆ ಹೌಸ್‌ಬೋಟ್‌ನಲ್ಲಿ ತಂಗದಿದ್ದರೆ ಇಡೀ ಪ್ರವಾಸವೇ ಅಪೂರ್ಣ. ಅದು ಚಳಿಗಾಲದಲ್ಲಿರಲಿ, ಬೇಸಿಯಲ್ಲಿರಲಿ, ಹೌಸ್‌ಬೋಟ್‌ನಲ್ಲಿ ಒಂದು ರಾತ್ರಿಯಾದರೂ ತಂಗದಿದ್ದರೆ ಕಾಶ್ಮೀರದ ಪೂರ್ಣ ಅನುಭವ ಸವಿದ ಸವಿ ಸಿಗಲಿಕ್ಕಿಲ್ಲ.

houseboat

7. ಕಾಶ್ಮೀರಿ ಊಟ: ನೀವು ಆಹಾರ ಪ್ರಿಯರಾಗಿದ್ದರೆ ಕಾಶ್ಮೀರದ ವಿಶೇಷ ರುಚಿಗಳನ್ನು ಯಾವ ಕಾಲದಲ್ಲಿ ಭೇಟಿ ಮಾಡಿದರೂ ಸವಿಯಲೇಬೇಕು. ಕಾಶ್ಮೀರದ ಚಹಾ ಖಾವಾ, ವಿಶೇಷ ರುಚಿಗಳಾದ ರೋಗನ್‌ ಜೋಶ್‌, ದಮ್‌ ಆಲೂ, ಆಬ್‌ ಘೋಷ್‌, ಘೋಷ್‌ ತಾಬಾ ಇವೆಲ್ಲವುಗಳ ರುಚಿ ನೋಡಬಹುದು. ಜಗತ್ಪ್ರಸಿದ್ಧ ಕಾಶ್ಮೀರದ ಕೇಸರಿ, ಪಶ್ಮೀನಾ ಶಾಲು ಸೇರಿದಂತೆ ಇಲ್ಲಿನ ವಿಶೇಷತೆಗಳನ್ನೂ ಖರೀದಿಸಬಹುದು.

kashmir meal

ಇದನ್ನೂ ಓದಿ: Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ಧವಳ ಧಾರಿಣಿ ಅಂಕಣ: ಭರತ ಅಯೋಧ್ಯೆಯಲ್ಲಿ ಇಲ್ಲದ ಸಮಯದಲ್ಲಿ ರಾಮನ ಪಟ್ಟಾಭಿಷೇಕಕ್ಕೆ ದಶರಥ ಅವಸರ ಮಾಡಿದ್ದೇಕೆ? ರಾಮಾಯಣ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

king dasharatha
Koo

ದಶರಥ- ಭಾಗ 4: ಪಟ್ಟಾಭಿಷೇಕಕ್ಕಾಗಿ ಘನ ದೊರೆಯ ಜಾಣ ನಡೆ

dhavala dharini by Narayana yaji

ಧವಳ ಧಾರಿಣಿ ಅಂಕಣ: ದಿವ್ಯನ್ತರಿಕ್ಷೇ ಭೂಮೌ ಚ ಘೋರಮುತ್ಪಾತಜಂ ಭಯಮ್
ಸ್ಚಚಕ್ಷೇಥ ಮೇಧಾವೀ ಶರೀರೇ ಚಾತ್ಮನೋ ಜರಾಮ್. ৷৷ಅ. 1.42৷৷

“ಮೇಧಾವಿಯಾದ ದಶರಥನು (ಮಂತ್ರಿಗಳನ್ನು ಉದ್ದೇಶಿಸಿ) ಸ್ವರ್ಗಾಕಾಶ, ಭೂಮಿಯಲ್ಲಿ ದೃಷ್ಟಿಗೆ ಗೋಚರವಾಗುವಂತೆ ಉತ್ಪಾತಗಳಾಗುತ್ತಿವೆ. ಭಯಂಕರವಾದ ಕಾಲವು ಹತ್ತಿರದಲ್ಲಿಯೇ ಬರಲಿದೆ. ನನ್ನ ದೇಹದಲ್ಲಿ ದಿನದಿನಕ್ಕೆ ವಾರ್ಧಕವೂ ಹೆಚ್ಚಾಗುತ್ತಿದೆ.”

ದಶರಥ (king dasharath) ಅಶ್ವಪತಿ ರಾಜನಿಗೆ ಕೈಕೇಯಿಯನ್ನು (Kaikeyi) ಮದುವೆಯಾಗುವ ಸಮಯಕ್ಕೆ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ಕೊಟ್ಟಿದ್ದ. ಆದರೆ ಈಗ ಆತನಿಗೆ ತನ್ನ ಕುಲದ ಪರಂಪರೆಯನ್ನು ಮೀರಿ ಹೀಗೆ ಕನ್ಯಾಶುಲ್ಕವಾಗಿ ಕೊಡಲು ಮನಸ್ಸಿಲ್ಲ. ಆ ಕಾರಣಕ್ಕೆ ಭರತನನ್ನು ಕೇಕಯಕ್ಕೆ ಕಳುಹಿಸಿದ್ದಾನೆ. ಇತ್ತ ಅಯೋಧ್ಯೆಯಲ್ಲಿ ರಾಮ ತನ್ನ ಸಹಜವಾದ ಗುಣಗಳಿಂದಾಗಿ ಹೇಗೆ ಹೂವು ದುಂಬಿಯನ್ನು ಆಕರ್ಷಿಸುವುದೋ ಅದೇ ರೀತಿ ಎಲ್ಲರ ಮನವನ್ನೂ ಗೆದ್ದಿದ್ದನು. ಹಣ್ಣು ಬಲಿತಿದೆ, ಇದೇ ಸರಿಯಾದ ಸಮಯ ಎಂದು ದಶರಥ ತನ್ನ ಕೆಲವೇ ಮಂತ್ರಿಗಳನ್ನು ಕರೆಯಿಸಿ “ಪ್ರಕೃತಿಯಲ್ಲಿ ಕೆಲ ಉತ್ಪಾತಗಳನ್ನು ತಾನು ನೋಡುತ್ತಿದ್ದೇನೆ. ತಾನು ವೃದ್ಧನೂ ಆಗುತ್ತಿದ್ದೇನೆ. ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಸಮರ್ಥನಾದ ರಾಜನ ಆಯ್ಕೆಯ ಸಮಯ ಬಂದಿದೆಯೆಂದು” ಹೇಳುತ್ತಾನೆ. ಅವರಿಗೆ ಮಾತನಾಡಲು ಅವಕಾಶ ಕೊಡದೇ ತಕ್ಷಣವೇ ಪೂರ್ಣಚಂದ್ರನಂತೆ ಮುಖವುಳ್ಳ ರಾಮನು ರಾಜನಾದರೆ ಸೂಕ್ತವಾಗುವುದೆಂದು ಹೇಳುವನು. ರಾಮನೇ ರಾಜನಾಗಬೇಕೆಂಬ ಅತುಲವಾದ ಆಸೆ ತನಗಿದ್ದರೂ ಅದನ್ನು ತೋರಿಸಿಕೊಳ್ಳದೇ ಪ್ರಜೆಗಳ ಶ್ರೇಯೋಭಿವೃದ್ಧಿಗೋಸ್ಕರ ಇದೇ ಸೂಕ್ತವೆಂದು ಮತ್ತೆ ಮತ್ತೆ ಹೇಳುತ್ತಿದ್ದನು.

ಅವನ ಆತುರ ಎಷ್ಟಿತ್ತೆಂದರೆ ಸ್ವಲ್ಪವೇ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲೂ ಆತನಿಗೆ ಮನಸ್ಸಿರಲಿಲ್ಲ. ಆ ಕೂಡಲೇ ಪಟ್ಟಾಭಿಷೇಕಕ್ಕೆ (Sri Rama Pattabhisheka) ಬೇಕಾಗಿರುವ ಸಾಂಬಾರಗಳನ್ನು ಸಿದ್ಧಮಾಡಿಕೊಳ್ಳುವಂತೆ ಮಂತ್ರಿಗಳಿಗೆ ತ್ವರೆಮಾಡಿದನು. ರಾಜನೀತಿಯಲ್ಲಿ ರಾಜ ತನಗೆ ಅನುಕೂಲವಾದ ವಿಷಯಗಳನ್ನು ಒಪ್ಪಿಗೆ ಪಡೆಯಲು ಅನುಸರಿಸುವ ಮಾರ್ಗವೆಂದರೆ ಮೊದಲು ತನ್ನ ಮನಸ್ಸಿನಲ್ಲಿ ಯೋಜನೆಗಳನ್ನು ಚನ್ನಾಗಿ ಮನನಮಾಡಿಕೊಂಡಿರಬೇಕು. ಅದು ರಾಜ್ಯದ ಹಿತದ ಸಲುವಾಗಿ ಎನ್ನುವ ರೀತಿಯಲ್ಲಿ ಬಿಂಬಿಸಬೇಕು. ಅರಸವಿನ ಅಭಿಪ್ರಾಯ ಸರಿ ಎಂದು ಹೇಳಲು ಅಗತ್ಯವಿರುವ ಮಂತ್ರಿಗಳನ್ನೂ ಇತರರನ್ನೂ ಆ ಮೊದಲೇ ಮಾನಸಿಕವಾಗಿ ಸಿದ್ಧತೆ ಮಾಡಿಸಿರಬೇಕು. ಸಭಾಸದರಿಗೆ ಆ ಕುರಿತು ವಿಮರ್ಶಿಸಲು ಸಮಯ ನೀಡದೇ ವಿಷವನ್ನು ಮಂಡಿಸಿದ ತಕ್ಷಣ ತನ್ನ ಕಡೆಯವರು ಅದಕ್ಕೆ ಒಪ್ಪಿಗೆ ಸೂಚಿಸುವಂತೆ ಮಾಡಿ ಸಭೆಯ ಅಭಿಪ್ರಾಯವನ್ನು ಏಕತ್ರ ತರುವ ಚಾಕಚಕ್ಯತೆಯನ್ನು ಪ್ರದರ್ಶಿಸಬೇಕು. ಇದನ್ನು ಗುಂಪು ಒಪ್ಪಿಗೆ (Mass acceptance) ಎನ್ನುತ್ತಾರೆ. ಆ ಕೂಡಲೇ ದಶರಥನು ತನ್ನ ರಾಜ್ಯದ ನಗರ ಪ್ರದೇಶಗಳಿಂದ, ಗ್ರಾಮ ಪ್ರದೇಶಗಳಿಂದ ಜನರನ್ನು ಕರೆಯುವಂತೆ ಮಂತ್ರಿಗಳಿಗೆ ನಿರ್ದೇಶನವನ್ನು ನೀಡಿದನು. ಪೃಥ್ವಿಯ ಇತರ ರಾಜರನ್ನೂ ಸಹ ಕರೆಯಿಸಿದನು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅವಸರದ ಕಾರಣದಿಂದ ಕೇಕಯ ರಾಜನನ್ನೂ ಜನಕನನ್ನೂ ಕರೆಯಲಿಲ್ಲವಂತೆ. ದಶರಥನ ಜಾಣತನ ಇಲ್ಲಿ ವ್ಯಕ್ತವಾಗುತ್ತಿದೆ. ಜನಕರಾಜನ ಕುರಿತು ಅವನಿಗೆ ಸಮಸ್ಯೆಯಿರಲಿಲ್ಲ. ಆದರೆ ಕೇಕಯ ರಾಜ ಅಶ್ವಪತಿಯೇನಾದರೂ ಬಂದಿದ್ದರೆ, ಮದುವೆಯ ಕಾಲಕ್ಕೆ ಕನ್ಯಾಶುಲ್ಕವನ್ನಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯವನ್ನು ಎತ್ತಿದ್ದರೆ ಎನ್ನುವ ಆತಂಕ ಆತನಿಗಿತ್ತು.

ಕೇವಲ ಅಶ್ವಪತಿಯನ್ನು ಬಿಟ್ಟರೆ ಅಪವಾದ ಬರುವುದೆಂದೆಣಿಸಿ ಜನಕನನ್ನು ಕರೆಯಲಿಲ್ಲ. ಕೇಳಿದರೆ ಬಹುದೂರವಿರುವ ಅವರನ್ನು ಕರೆಯಿಸಲಾಗಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಬಹುದು. ರಾಜರುಗಳೆಲ್ಲರೂ ಬಂದು ಸೇರಲು ಕೆಲ ದಿನಗಳು ಹಿಡಿದಿರಬಹುದು. ಎಷ್ಟು ಸಮಯದೊಳಗೆ ಅವರೆಲ್ಲರೂ ಬಂದು ಸೇರಿದ್ದರು ಎನ್ನುವುದನ್ನು ವಾಲ್ಮೀಕಿ ಹೇಳುವುದಿಲ್ಲ. ಬಂದವರಿಗೆಲ್ಲ ಉಳಿದುಕೊಳ್ಳಲು ಯಥೋಚಿತವಾದ ಬಿಡಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಂದು ಸೇರಿದ ರಾಜರುಗಳ ಮತ್ತು ಪ್ರಜೆಗಳ ವಿವರವನ್ನು ನೋಡಿದರೆ ಒಂದು ನಾಲ್ಕೈದು ದಿನಗಳಷ್ಟಾದರೂ ಸಮಯಬೇಕು. ದೂರದ ಗುಡ್ಡಗಾಡು ಪ್ರದೇಶದ ಮಾಂಡಲಿಕರು ಬರಬಹುದಾದರೆ ಕೇಕಯ ಮತ್ತು ಮಿಥಿಲೆಯವರಿಗೆ ಬರಲು ಸಾಧ್ಯವಿಲ್ಲವೇ! ರಾಮನ ಗುಣಗಳ ಕುರಿತು ಎಲ್ಲರಲ್ಲಿಯೂ ಒಳ್ಳೆಯ ಅಭಿಪ್ರಾಯ ಅದಾಗಲೇ ಮೂಡಿರುವುದರಿಂದ ಒಮ್ಮೆ ರಾಜನಾಗಿ ಬಿಟ್ಟರೆ ಅಶ್ವಪತಿ ತೋರಿಕೆಗಾದರೂ ಸಮ್ಮತಿ ಸೂಚಿಸಲೇ ಬೇಕಾಗುತ್ತದೆ. ಅವರೇನಾದರೂ ಕಾರಣ ಕೇಳಿದರೆ ತನಗೆ ಬಿದ್ದ ದುಃಸ್ವಪ್ನ ಮತ್ತು ಶುಕುನದ ವಿಷಯವನ್ನು ಹೇಳಿದರಾಯಿತು, ಎನ್ನುವ ನೆವ ಆತನಲ್ಲಿತ್ತು.

ಜನಕನಿಗೆ ತನ್ನ ಅಳಿಯ ರಾಜನಾಗುವುದು ಸಹಜವಾಗಿಯೇ ಸಂತೋಷದ ಸಂಗತಿ. ಸಂಶಯಾತ್ಮಾ ವಿನಶ್ಯತಿ ಎನ್ನುವ ಗಾದೆಯೊಂದಿದೆ. ರಾಜನೀತಿಯಲ್ಲಿ ರಾಜನಾದವ ಸದಾ ಜಾಗರೂಕನಾಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಒಂದು ಸಂಶಯದ ಕಣ್ಣನ್ನು ಇತರರಮೇಲೆ ಇರಿಸಬೇಕೆಂದಿದೆ. ರಾಜನ ಮೂರನೆಯ ಕಣ್ಣು ಮತ್ತು ಕಿವಿಯಾಗಿ ಸಮರ್ಥ ಗೂಢಾಚಾರರನ್ನು ಇರಿಸಿಕೊಂಡು ಆ ಮೂಲಕ ವಿಷಯಗಳನ್ನು ಸಂಗ್ರಹಿಸಿ ವಿವೇಚಿಸಿಬೇಕೆಂದಿದೆ. ದಶರಥ ಇಲ್ಲಿ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಬರಬಹುದಾದ ವಿಘ್ನಗಳ ಕುರಿತು ಆಲೋಚಿಸಿದ್ದಾನೆ. ಆದರೆ ರಾಮನ ಕುರಿತು ಅಶ್ವಪತಿಗಾಗಲಿ, ಯುಧಾಜಿತ್ತುಗಾಗಲಿ, ಕೈಕೇಯಿಗಾಗಲಿ, ಕೊನೆಗೆ ಭರತನಿಗಾಗಲಿ ಯಾವ ಅಭಿಪ್ರಾಯ ಇದೆ ಎನ್ನುವುದನ್ನು ಒಮ್ಮೆಯೂ ತಿಳಿದುಕೊಳ್ಳುವ ಪ್ರಯತ್ನವನ್ನು ಆತ ಮಾಡಿಲ್ಲ. ತನ್ನ ಮನಸ್ಸಿನೊಳಗೇ ಎಲ್ಲವನ್ನೂ ಕಲ್ಪಿಸಿಕೊಂಡು ಅಪರಾಧಿ ಪ್ರಜ್ಞೆಯಿಂದ ಹೇಗಾದರೂಸರಿ ರಾಮನನ್ನು ಪಟ್ಟಕ್ಕೆ ಏರಿಸಿಬಿಡಬೇಕೆನ್ನುವ ಹುಂಬತನ ಆತನಲ್ಲಿತ್ತು. ಹಾಗಾಗಿ ಆತ ತನ್ನ ಮನಸ್ಸಿನೊಳಗಿರುವುದನ್ನು ವಶಿಷ್ಠರಿಗೂ ಮೊದಲು ಹೇಳಿಲ್ಲ.

ಸಭೆಯನ್ನು ಸೇರಿಸಿದವನೇ ಎಲ್ಲರನ್ನೂ ಉದ್ಧೇಶಿಸಿ ಗಂಭೀರ ಧ್ವನಿಯಲ್ಲಿ ಮಾತನಾಡತೊಡಗಿದ. ಅವನ ಧ್ವನಿ ಭೇರಿಯ ಶಬ್ಧದಂತೆ ಇತ್ತು. ವಿಲಿಯಮ್ ಷೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಜ್ಯುಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿ ತನ್ನ ಅಭಿಪ್ರಾಯವನ್ನು ಪ್ರಜೆಗಳು ಒಪ್ಪುವಂತೆ ಮಾಡಿದ ಭಾಷಣ ಬಹು ಪ್ರಸಿದ್ಧ. ಭಾರತೀಯ ಕಾವ್ಯದಲ್ಲಿ ಸಂದರ್ಭದಲ್ಲಿ ದಶರಥನ ಮಾತುಗಳು ಅದಕ್ಕೆ ಮಿಗಿಲಾಗಿದ್ದವು. ಎರಡರಲ್ಲಿಯೂ ಸಂಧರ್ಭ ಮತ್ತು ಉದ್ಧೇಶ ಬೇರೆ ಬೇರೆ. ಆದರೆ ಪರಿಣಾಮಕಾರಿ ಮಾತುಗಳಿಗೆ ಇದೊಂದು ಉದಾಹರಣೆಯಾಗಬಹುದು. ಸೂರ್ಯವಂಶದ ಶ್ರೇಷ್ಠ ದೊರೆಗಳನ್ನು ಉದಾಹರಿಸುತ್ತ “ತನ್ನ ಅರವತ್ತು ಸಾವಿರ ವರ್ಷಗಳ ಆಡಳಿತವನ್ನೂ ಸಮರ್ಥಿಸುತ್ತಾನೆ. ರಾಜ ಪರಿಪಾಲನೆಯೆನ್ನುವುದು ಸುಲಭವಲ್ಲ, ಧೈರ್ಯ-ಶೌರ್ಯ-ಪರಾಕ್ರಮಗಳಿಂದ ಮಾತ್ರವೇ ರಾಜ್ಯವನ್ನು ಆಳಲು ಸಾಧ್ಯವಿದೆ. ಜಿತೇಂದ್ರಿಯನಲ್ಲದಿರುವವ ರಾಜ್ಯಾಡಳಿತವನ್ನು ನಿರ್ವಹಿಸಲಾರ, ಇಂಥ ಹೊಣೆಯನ್ನು ಹೊತ್ತಿರುವ ತಾನು ನಿಶ್ಚರ್ಯವಾಗಿಯೂ ಬಹಳ ಬಳಲಿದ್ದೇನೆ” ಎಂದವನೇ ಮುಂದೆ ಈ ರಾಜ್ಯವನ್ನು ಆಳಲು ಇಲ್ಲಿರುವ ಬ್ರಾಹ್ಮಣಶ್ರೇಷ್ಠರ ಅನುಮತಿ ಪಡೆದು “ಪುಷ್ಯನಕ್ಷತ್ರಯುಕ್ತನಾಗಿರುವ ರಾಮನನ್ನು ತೊಡಗಿಸಿಕೊಳ್ಳುವೆ” ಎನ್ನುತ್ತಾನೆ. ದಶರಥನ ಜಾಣನುಡಿಗಳನ್ನು ಗಮನಿಸಿ “ನಾನು ಧರ್ಮದಿಂದ ರಾಜ್ಯವಳುತಿರುವಾಗ ನನ್ನ ಮಗನು ಯುವರಾಜನಾಗುವುದನ್ನ ನೀವು ಸ್ವಾಗತಿಸುವಿರೋ ಹೇಗೆ” ಎನ್ನುವ ಮಾತುಗಳನ್ನಾಡಿ ಭಾಷಣವನ್ನು ಮುಗಿಸುತ್ತಾನೆ. ನವಿರಾದ ಮಾತುಗಳು ಹೇಗಿತ್ತೆಂದರೆ ಪ್ರತಿರೋಧ ಇರಲೇ ಬಾರದು. ಅದಾಗಲೇ ರಾಮ ಪ್ರಜೆಗಳ ಮನಸ್ಸನ್ನು ಗೆದ್ದಿದ್ದ ಕಾರಣದಿಂದ ಪ್ರತಿರೋಧದ ಮಾತೇ ಬಂದಿಲ್ಲ. ಒಕ್ಕೋರಲಿಂದ ಒಪ್ಪಿಗೆ ಸೂಚಿಸಿದರು.

ತೇ ತಮೂಚುರ್ಮಹಾತ್ಮಾನಂ ಪೌರಜಾನಪದೈಸ್ಸಹ.
ಬಹವೋ ನೃಪ ಕಲ್ಯಾಣಾ ಗುಣಾಃ ಪುತ್ರಸ್ಯ ಸನ್ತಿ ತೇ৷৷ಅ .2.26৷৷

ಅಲ್ಲಿ ಸೇರಿದ ಪೌರ ಜಾನಪದ- ಪಟ್ಟಣಗಳ ಮತ್ತು ಹಳ್ಳಿಗಳಿಂದ ಬಂದ ಪ್ರಜಾಜನರು ಇನ್ನಿತರ ರಾಜರೊಡನೆ ಏಕಕಂಠದಲ್ಲಿ “ಮಹಾರಾಜಾ, ನಿನ್ನ ಮಗನಲ್ಲಿ ಅನೇಕ ಕಲ್ಯಾಣಗುಣಗಳಿವೆ. ಆತ ಬುದ್ಧಿವಂತನಾದವ, ದೇವಸೃದಶನಾದವ, ಗುಣವಂತನಾದವ ಎನ್ನುತ್ತಾ ಆತನು ಯುವರಾಜನಾಗಲು ಒಪ್ಪಿಗೆಯನ್ನು ಸೂಚಿಸಿದರು. ಅರಸನ ಸಂತಸಕ್ಕೆ ಪಾರವೇ ಇರಲಿಲ್ಲ. ವಶಿಷ್ಠರ ಹತ್ತಿರ ತಿರುಗಿದವನೇ ಚೈತ್ರಪಕ್ಷದ ಪುಷ್ಯನಕ್ಷತ್ರದ ಸುಮೂರ್ತವೇ ಒಳ್ಳೆಯದು ಎಂದು ತಾನೇ ನಿಶ್ಚಯಿಸಿದ್ದ ಮುಹೂರ್ತವನ್ನು ಸಾರಿಯೂ ಬಿಟ್ಟ. ಗಮನಿಸಬೇಕಾದ ಸಂಗತಿಯೆಂದರೆ ರಾಮಪಟ್ಟಾಭಿಷೇಕದ ಈ ಭಾಗದಲ್ಲಿ ಇನ್ನಿತರ ಕಾವ್ಯದಲ್ಲಿ ಬರುವಂತೆ ವಶಿಷ್ಠರಾಗಲಿ, ವಾಮದೇವರಾಗಲಿ ಇಟ್ಟ ಮೂಹೂರ್ತವಲ್ಲ. ದಶರಥನಿಗೆ ಮುಹೂರ್ತಗಳ, ಜ್ಯೋತಿಷ್ಯದ ಕಲ್ಪನೆಯಿತ್ತು. ರಾಮನದ್ದು ಪುನರ್ವಸು ನಕ್ಷತ್ರ, ಪುನರ್ವಸುವಿನ ನಂತರ ಬರುವ ನಕ್ಷತ್ರ ಪುಷ್ಯ ರಾಮನಿಗೆ ಸಂಪತ್ತನ್ನು ತರುವ ತಾರೆಯಾಗುತ್ತದೆ. ಅದೂ ಅಲ್ಲದೇ ಪುಷ್ಯ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಬರುತ್ತದೆ. ಇದು ಚಂದ್ರನಿಗೆ ಸ್ವಕ್ಷೇತ್ರ. ಸ್ವಕ್ಷೇತ್ರದಲ್ಲಿ ಗ್ರಹಗಳು ಪ್ರಭಲರಾಗಿರುತ್ತವೆ. ಚಂದ್ರ ಮನಃಕಾರಕ. ರಾಜನಾದವನಿಗೆ ಮನಸ್ಸಿನ ಸ್ಥೈರ್ಯ ಬೇಕು. ರಾಮನಿಗೆ ರಾಜನಿಟ್ಟ ಮುಹೂರ್ತ ಸಂಪತ್ತು ಮತ್ತು ಧೈರ್ಯವನ್ನು ತಂದುಕೊಡುತ್ತದೆ ಎನ್ನುವ ಅರ್ಥವನ್ನು ಕೊಡುತ್ತದೆ. ಅವನ ಅವಸರ ಎಷ್ಟಿತ್ತೆಂದರೆ ತಕ್ಷಣವೇ ಸುಮಂತ್ರನಿಗೆ ರಾಮನನ್ನು ಕರೆತರಲು ಹೇಳಿಕಳಿಸಿಯೂಬಿಟ್ಟ. ಸುಮಂತ್ರ ರಾಮನನ್ನು ಯುವರಾಜನಿಗೆ ಒಪ್ಪುವ ಬಿರುದುಬಾವಲಿಗಳಿಂದಲೇ ಕರೆದುತಂದ. ದಶರಥನಿಗೆ ರಾಮನನ್ನು ನೋಡಿ ಆನಂದವೋ ಆನಂದ. ತನ್ನ ಒತ್ತಿನಲ್ಲಿಯೇ ಕುಳ್ಳಿರಿಸಿ ಪ್ರಜೆಗಳನ್ನು ತೋರಿಸಿ ಇವರೆಲ್ಲರೂ ನಿನ್ನನ್ನು ಯುವರಾಜನನ್ನಾಗಿ ನೋಡಲು ಕಾತರದಿಂದ ಇದ್ದಾರೆ ಎಂದು ಸಂಭ್ರಮಿಸಿದ. ಸಭಾಸದರ ಹರ್ಷೋದ್ಗಾರಗಳ ನಡುವೆ ರಾಮನೂ ಸಂತೋಷದಿಂದ ಒಪ್ಪಿ ತನ್ನ ಅರಮನೆಗೆ ಹಿಂತಿರುಗಿದ. ಸಭೆಯೂ ವಿಸರ್ಜಿಸಲ್ಪಟಿತು.

king dasharatha dhavala dharini

ದಶರಥ ರಾಮ ಪಟ್ಟಾಭಿಷೇಕದ ವಿಷಯದಲ್ಲಿ ತಾನೋರ್ವನೇ ಎಲ್ಲವನ್ನೂ ನಿಶ್ಚಯಿಸಿದ್ದಾನೆ. ಸಭಾಸದರೆಲ್ಲ ಹೊರಟ ಮೇಲೆ ಅಲ್ಲಿದ್ದ ಮಂತ್ರಿಗಳು ಮತ್ತು ವಶಿಷ್ಠರನ್ನು ಕರೆಯುತ್ತಾನೆ. ಮೊದಲು ಯಾವುದೋ ಒಂದು ನೆವದಿಂದ ಅವಸರದಲ್ಲಿ ಸಭೆ ಸೇರಿಸಿದವ, ತನಗೆ ಅನುಕೂಲವಾಗುವಂತೆ ರಾಮನ ವಿಷಯವನ್ನು ಪ್ರಸ್ತಾಪಿಸಿದ. ಅದಕ್ಕೆ ಒಪ್ಪಿಗೆ ಸಿಕ್ಕಮೇಲೆ ಚೈತ್ರಮಾಸದ ಶುಕ್ಲಪಕ್ಷದ ಪುಷ್ಯ ನಕ್ಷತ್ರದಂದು ಎಂದ. ಈಗ ಮಂತ್ರಾಲೋಚನೆಯಲ್ಲಿ ಇನ್ನಷ್ಟು ತನ್ನ ತಂತ್ರವನ್ನು ವಿಶದಪಡಿಸುತ್ತಾನೆ. ನಾಳೆಯೇ ಪುಷ್ಯ ನಕ್ಷತ್ರದ ಯೋಗವಿದೆ. ಹಾಗಾಗಿ ನಾಳೆಯೇ ಮುಹೂರ್ತವನ್ನು ನಿಗದಿಪಡಿಸಿ ಎನ್ನುತ್ತಾನೆ. ಅವರೆಲ್ಲರೂ ಹೋದಮೇಲೆ ಪುನಃ ರಾಮನನ್ನು ಕರೆಯಲು ಸುಮಂತ್ರನಿಗೇ ಹೇಳುತ್ತನೆ. ಸುಮಂತ್ರ ದಶರಥನ ಅಂತರಂಗವನ್ನು ಅರಿತ ನಂಬಿಗಸ್ತನಾಗಿದ್ದ. ರಾಮ ಮನೆಗೆ ಹೋಗಿದ್ದನೋ ಇಲ್ಲವೋ ಮತ್ತೊಮ್ಮೆ ದಶರಥನನ್ನು ನೋಡಲು ಕರೆ ಬಂದಿರುವುದರಿಂದ ಅವಸರವಾಗಿ ತಂದೆಯನ್ನು ಕಂಡ. ಇಲ್ಲಿ ರಾಜ ತನ್ನ ಅಂತರಂಗದ ಮಾತುಗಳನ್ನು ರಾಮನಲ್ಲಿ ಆಡುತ್ತಾನೆ. ಪಟ್ಟಾಭಿಷೇಕಕ್ಕೆ ಸಿದ್ದನಾಗಬೇಕಾದ ನೀನು ನಿನ್ನ ಪತ್ನಿಯೊಡನೆ ಉಪವಾಸವಿದ್ದು ಈ ರಾತ್ರಿ ದರ್ಭಾಸ್ತರಣದಲ್ಲಿ ಮಲಗಬೇಕು ಎನ್ನುತ್ತಾನೆ.

ದರ್ಭಾಸ್ತರಣವೆನ್ನುವುದು ಇಂದು ಸತ್ತಮೇಲೆ ಮಲಗಿಸುವ ಕ್ರಿಯೆಯಾಗಿದೆ. ಅದರ ಮೂಲ ಕಾರಣ ರಾಜನಾದವನಿಗೆ ತನ್ನದು ಎನ್ನುವುದಿರುವುದಿಲ್ಲ. ಸಮಷ್ಟಿಯ ಹಿತವನ್ನು ಆತ ಗಮನಿಸುವಾಗ ಸ್ವಾರ್ಥರಹಿತನಾಗಿರಬೇಕಾಗುತ್ತದೆ. ಸನ್ಯಾಸವನ್ನು ಸ್ವೀಕರಿಸುವ ಮೊದಲದಿನ ರಾತ್ರಿಯೂ ದರ್ಭಾಸ್ತರಣದಲ್ಲಿ ಮಲಗಬೇಕಾಗುತ್ತದೆ. ಸನ್ಯಾಸಿಯೂ ಪ್ರಾಪಂಚಿಕ ಸುಖವನ್ನು ಆತ್ಮಶ್ರಾದ್ಧ ಮಾಡಿಕೊಂಡು ತ್ಯಜಿಸುತ್ತಾನೆ. ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಹೋಗುವಾಗ ತನ್ನದೆನ್ನುವ ಎಲ್ಲವನ್ನೂ ಬಿಡಬೇಕೆನ್ನುವುದು ಇದು ಸೂಚಿಸುತ್ತದೆ. ರಾಜ ಆತ್ಮ ಶಾದ್ಧ ಮಾಡಿಕೊಳ್ಳುವುದಿಲ್ಲ. ಆತ ಪ್ರಾಪಂಚಿಕ ಪ್ರಪಂಚದಲ್ಲಿ ಇದ್ದೂ ಇಲ್ಲದಂತಿರಬೇಕು. ಆತ್ಮ ಸಂಯಮವನ್ನು ಆತ ಇಟ್ಟುಕೊಳ್ಳಬೇಕು. ಸನ್ಯಾಸಿಯಂತೆ ಆತ ಋಣಮುಕ್ತನಲ್ಲ; ಆತನಿಗೆ ದೇವಋಣ, ಋಷಿಋಣ, ಪಿತೃಋಣಗಳ ಜೊತೆಗೆ ವಿಪ್ರಋಣ ಮತ್ತು ಆತ್ಮಋಣಗಳಿವೆ. ಈ ಭೂಮಿಯನ್ನು ಪರಶುರಾಮ ಕ್ಷತ್ರಿಯರನ್ನು ಗೆದ್ದ ಮೇಲೆ ಕಾಶ್ಯಪರಿಗೆ ದಾನವಾಗಿ ಕೊಟ್ಟಿದ್ದ. ಅವರು ಪುನಃ ಅದನ್ನು ಕ್ಷತ್ರಿಯರಿಗೆ ರಾಜ್ಯವಾಳಲು ಕೊಟ್ಟಿದ್ದರು. ಆ ಕಾರಣಕ್ಕೆ ವಿಪ್ರಋಣವಿರುತ್ತದೆ. ಅದರ ನಿವಾರಣೆಗೆ ಆತ ದಾನ ಧರ್ಮಗಳನ್ನು ಮಾಡಬೇಕು. ಶರೀರವನ್ನು ಪುಷ್ಟಿಯುತವಾಗಿರಿಸಿಕೊಳ್ಳಲೇ ಬೇಕಾಗಿರುವುದರಿಂದ ವಿಹಿತವಾದ ಸುಖವನ್ನು ಅನುಭವಿಸಬೇಕು. ಸನ್ಯಾಸಿ ಪ್ರಾಪಂಚಿಕವನ್ನು ಬಿಟ್ಟವನಾದರೆ, ರಾಜ ಪ್ರಾಪಂಚಿಕದಲ್ಲಿದ್ದು ತನ್ನದೆನ್ನುವ ಸ್ವಾರ್ಥವನ್ನು ಬಿಟ್ಟಿರಬೇಕು. ನಾನು ಎನ್ನುವುದು ವಯಕ್ತಿಕ ನಾವು ಎನ್ನುವುದು ಸಮಷ್ಟಿ. ಹಾಗಾಗಿ ಸನ್ಯಾಸಿಗಳು ಮತ್ತು ರಾಜ ತನ್ನನ್ನು ಉದ್ಧೇಶಿಸಿ ಹೇಳುವಾಗ ನಾನು ಎನ್ನದೇ ನಾವು ಎನ್ನುತ್ತಾರೆ. ಒಂದೊಂದು ಮಾತಿನ ಮೂಲಕವೂ ವಾಲ್ಮೀಕಿ ದಶರಥನ ಜ್ಞಾನ ಮತ್ತು ಸಮಯಪ್ರಜ್ಞೆಯನ್ನು ಎತ್ತಿ ತೋರಿಸುತ್ತಾರೆ. ಆಧ್ಯಾತ್ಮ ಮತ್ತು ಲೌಕಿಕ ಎರಡರಲ್ಲಿಯೂ ಪಾರಂಗತನಾಗಿರುವುದರಿಂದ ಆತ ರಾಜರ್ಷಿಯಾಗಿದ್ದ.

ಶುಕ್ರನೀತಿಯಲ್ಲಿ ದಶರಥ ಪರಿಣಿತನಾಗಿದ್ದ. ಆತನಿಗೆ ಶತ್ರುಗಳು ಎಲ್ಲಿಯಾದರೂ ಯುವರಾಜನಾಗುವ ರಾಮನ ಮೇಲೆ ಆಕ್ರಮಣ ಮಾಡಿದರೆ ಎನ್ನುವ ಸಂಶಯವಿದೆ. ಅದಕ್ಕೆ ಆತ ರಾಮನ ಹತ್ತಿರ ವ್ರತಸ್ಥನಾದ ರಾಮ ನಿರಾಯುಧನಾಗಿ ಇರುತ್ತಾನೆ. ಹಾಗಾಗಿ ಆತನಿಗೆ ನಂಬಿಗಸ್ತರಾದ ಸ್ನೇಹಿತರು ಆತನನ್ನು ಬಹಳ ಜಾಗರೂಕತೆಯಿಂದ ಕಾಯಬೇಕು. ಅಂಥವರನ್ನು ನಿಯಮಿಸಿಕೋ ಎನ್ನುತ್ತಾನೆ. ರಾಜಕಾರಣದ ಅಂತರಂಗವನ್ನೆಲ್ಲ ರಾಮನಿಗೆ ರಾಜ ಹೇಳುತ್ತಾನೆ. ರಾಮ ಇಷ್ಟು ಅವಸರವೇಕೆ ಎಂದು ಕೇಳಿದ್ದನೋ ಏನೋ. ಆಗ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಮಹತ್ತರವಾದ ಕಾರ್ಯವಾಗಬೇಕಾದರೆ ಅದಕ್ಕೆ ಅನೇಕ ವಿಧವಾದ ವಿಘ್ನಗಳು ಬರುತ್ತದೆ ಎಂದು ಎಚ್ಚರಿಸುತ್ತಾ “ಭರತ ಬರುವದರೊಳಗಾಗಿ ನಿನಗೆ ಪಟ್ಟಾಭಿಷೇಕವಾಗಬೇಕು” ಎನ್ನುವ ಮಾತುಗಳನ್ನು ಆಡುತ್ತಾನೆ. ಅದರೊಂದಿಗೆ ಭರತನ ಗುಣಗಳನ್ನು “ಆತ ಸತ್ಪುರುಷರ ಮಾರ್ಗದಲ್ಲಿಯೇ ನಡೆಯತಕ್ಕವನು, ಅಣ್ಣನಾದ ನಿನ್ನನ್ನೇ ಅನುಸರಿಸಿ ಇರುವವನು; ಧರ್ಮಾತ್ಮನು; ದಯಾಪರನು; ಜಿತೇಂದ್ರಿಯನು ಇದರಲ್ಲಿ ಯಾವ ಸಂಶಯವೂ ಇಲ್ಲ ಎನ್ನುತ್ತಾ

ಕಿನ್ತು ಚಿತ್ತಂ ಮನುಷ್ಯಾಣಾಮನಿತ್ಯಮಿತಿ ಮೇ ಮತಿಃ.
ಸತಾಂ ಚ ಧರ್ಮನಿತ್ಯಾನಾಂ ಕೃತಶೋಭಿ ಚ ರಾಘವ!৷৷ಅ.4.27৷৷

“ಮಾನವರ ಮನಸ್ಸು ಸ್ಥಿರವಲ್ಲವೆಂಬುದು ನನ್ನ ಖಚಿತವಾದ ಅಭಿಪ್ರಾಯವಾಗಿದೆ. ಧರ್ಮನಿರತರಾದ ಸತ್ಪುರುಷರ ಮನಸ್ಸೂ ಸಹ ತತ್ತನ್ನಿಮಿತ್ತವಾದ ರಾಗದ್ವೇಷಗಳಿಂದ ಕೂಡಿರುತ್ತದೆ.”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

ಸ್ವಭಾವತ ಸಾಧುವಾದ ಭರತನ ಮನಸ್ಸು ಕೇಕಯದವರ ಮಾತುಗಳನ್ನು ಕೇಳಿ ವಿರುದ್ಧವಾಗಿ ವರ್ತಿಸಬಹುದು ಎನ್ನುವ ಎಚ್ಚರಿಕೆ ಇಲ್ಲಿದೆ. ದಶರಥನಿಗೆ ತನ್ನ ಮಾತುಗಳ ಕುರಿತು ಎಷ್ಟೊಂದು ಅಳುಕಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಈ ಸಂಭಾಷಣೆಯ ಹೊತ್ತಿನಲ್ಲಿಯೇ ರಾಮ ಇದಕ್ಕೆ ಕಾರಣವನ್ನು ಕೇಳಿರಬಹುದು. ಅದಕ್ಕೆ ಕನ್ಯಾಶುಲ್ಕದ ವಿಷಯ ಬಂದಿರಬಹುದಾಗಿದೆ. ಭರತ ಅರಣ್ಯಕ್ಕೆ ಬಂದು ರಾಮನಿಗೆ ಪುನಃ ಅರಮನೆಗೆ ಬರಬೇಕೆಂದು ಒತ್ತಾಯಿಸಿದಾಗ ಕನ್ಯಾಶುಲ್ಕದ ವಿಷಯವನ್ನು ಭರತನಿಗೆ ತಿಳಿಸುತ್ತಾನೆ. ರಾಜ್ಯ ಭರತನದೇ ಆಗಿತ್ತು ಎನ್ನುವುದನ್ನು ಒತ್ತಿಹೇಳಿ ತಾನು ಅರಣ್ಯದಿಂದ ಬರಲಾರೆ ಎನ್ನುತ್ತಾನೆ. ರಾಮ ತನ್ನ ತಂದೆಯ ಹತ್ತಿರ ಈ ವಿಷಯವನ್ನು ಹೇಳಿ ರಾಜ್ಯವನ್ನು ಏಕೆ ನಿರಾಕರಿಸಲಿಲ್ಲ. ಎನ್ನುವುದಕ್ಕೆ ಕಾರಣ ವಾಲ್ಮೀಕಿ ವಿವರಿಸುವುದಿಲ್ಲ. ಇದು ಧರ್ಮಸೂಕ್ಷ್ಮದ ಪ್ರಶ್ನೆ. ಮೊದಲನೆಯದ್ದು ಯುವರಾಜ ಪದವಿ ಎನ್ನುವುದು ಸೂರ್ಯವಂಶದಲ್ಲಿ ಜ್ಯೇಷ್ಠಾನುವರ್ತಿ. ಅದು ಹಿರಿಯವನ ಕರ್ತವ್ಯವೂ ಹೌದು. ಎರಡನೆಯದು ರಾಮ ತನ್ನ ತಂದೆಯ ಮಾತನ್ನು ಮೀರಲಾರ. ರಾಜನಾದವ ತನ್ನ ರಾಜ್ಯವನ್ನು ಯಾರು ಯಾರಿಗೋ ಕೊಡುವಂತಿಲ್ಲ ಎನ್ನುವುದನ್ನು ಗಣತಂತ್ರ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಅಯೋಧ್ಯೆಯ ವಿಷಯದಲ್ಲಿ ಮೊದಲೇ ನೋಡಿದ್ದೇವೆ. ದಶರಥ ಕರೆದ ಸಭೆಯಲ್ಲಿ ಸಭಾಸದರು ಭರತ ಬೇಡ ಎಂದು ಹೇಳಿಬಿಟ್ಟಿದ್ದರೆ ದಶರಥನ ಭಾಷೆ ವ್ಯರ್ಥವಾಗಿ ಹೋಗುತ್ತಿತ್ತು. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ರಾಜನ ಮುತ್ತಿನ ಸತ್ತಿಗೆಯನ್ನು ಕೊಡಲಾಗುವುದಿಲ್ಲ ಎನ್ನುವ ಅಭಿಪ್ರಾಯವಿದೆ.

ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವವಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು

ಯಜುರ್ವೇದದಲ್ಲಿಯೂ ರಾಜತ್ವವೆನ್ನುವುದು ಅರ್ಹರು ಮಾತ್ರ ಪಾಲಿಸಬೇಕಾದ ಹೊಣೆ ಎನ್ನುತ್ತದೆಯೇ ಹೊರತು ಕೇವಲ ಪಿತ್ರಾರ್ಜಿತವಾದ ಆಸ್ತಿಯಾಗಿರುವುದಲ್ಲ ಎಂದಿದೆ. “ವಿಶ್ವಾಮಿತ್ರರು ಆತನಿಗೆ ಎರಡೆರಡು ಸಾರಿ “ಕರ್ತವ್ಯಂ ದೈವಮಾನ್ಹಿಕಂ- ಕರ್ತವ್ಯವೇ ನಿನಗೆ ದೇವಪೂಜೆ” ಎಂದು ಹೇಳಿರುವುದರಿಂದ ದೊರೆತನವನ್ನು ರಾಮ ತಾನು ಪಾಲಿಸಬೇಕಾದ ಕರ್ತವ್ಯದ ಭಾಗವಾಗಿ ನೋಡಿದ್ದಾನೆ. ತಂದೆಯ ಮಾತು ಸಹ ಕರ್ತವ್ಯದ ಭಾಗವಾಗಿರುವುದರಿಂದ ಆತ ಮುಂದೆ ಭರತನಿಗೋಸ್ಕರ ಸಿಂಹಾಸನವನ್ನು ತ್ಯಜಿಸಿದ್ದಾನೆ. ಆ ವಿವರ ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

Continue Reading

ಅಂಕಣ

ದಶಮುಖ ಅಂಕಣ: ಮೌನವೆಂಬ ಭಾವಸೇತು

ದಶಮುಖ ಅಂಕಣ: ಮೌನವೆಂದರೆ ಸುಮ್ಮನೆ ಮಾತಾಡದಿರುವುದಲ್ಲ; ಆಡದೆಯೇ ನುಡಿಸುವುದು; ಮುಟ್ಟದೆಯೇ ತಟ್ಟುವುದು. ಮೌನವೆಂಬುದು ಜಗತ್ತಿನ ಅತಿ ಸುಂದರ ಭಾಷೆ.

VISTARANEWS.COM


on

dashamukha column silence
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಗೆಳತಿಯೊಬ್ಬಳು ಸಿಕ್ಕಿದ್ದಳು. ಎಂದಿನ ಲವಲವಿಕೆ ಕಾಣದೆ ಶೋಕವೇ ಮೂರ್ತಿವೆತ್ತಂತೆ ಗೋಚರಿಸುತ್ತಿದ್ದಳು. ಅತ್ತು ಕೆಂಪಾಗಿದ್ದ ಕಣ್ಣುಗಳಲ್ಲಿ ಈಗಲೂ ಪಸೆಯಿತ್ತು. ಸಂಕಟದ ನಗೆಯೊಂದನ್ನು ಬೀರಿದಳು. ‘ಏನಾಯ್ತೆ?’ ಎಂದು ಕೇಳಿದ್ದೆ ತಡ, ಮನಸ್ಸಿಗೆ ಕೋಡಿ ಬಿದ್ದೇಬಿಟ್ಟಿತ್ತು. ವಿಷಯ ಮತ್ತೇನಲ್ಲ, ಅವಳ ಮನೆಯ ನಾಯಿ, ಮರಿ ಹಾಕಿತ್ತು. ಹೊಸದಾಗಿ ಹುಟ್ಟಿದ್ದ ನಾಲ್ಕು ಮರಿಗಳಲ್ಲಿ ಒಂದನ್ನಷ್ಟೇ ಇರಿಸಿಕೊಂಡು ಉಳಿದೆಲ್ಲವನ್ನೂ ಸಾಕುವ ಆಸಕ್ತರಿಗೆ ಕೊಟ್ಟಿದ್ದಳು. ಮೊದಲಿನ ಎರಡು ಮರಿಗಳನ್ನು ಕೊಡುವಾಗ ಅವಿನ್ನೂ ಸಣ್ಣವಾದ್ದರಿಂದ ಹೆಚ್ಚಿನ ಪ್ರತಿರೋಧ ತೋರಿರಲಿಲ್ಲ. ಆದರೆ ಮೂರನೇ ಮರಿಯನ್ನು ಕೊಡುವಾಗ ಉಳಿದವಕ್ಕಿಂತ ಕೊಂಚ ದೊಡ್ಡದಾಗಿದ್ದ ಮರಿ, ಹೊಸಬರೊಂದಿಗೆ ಹೋಗಲೊಲ್ಲೆ ಎಂದು ತನ್ನ ಮೂಕಭಾಷೆಯಲ್ಲಿ ಗೋಳಾಡಿತ್ತಂತೆ. ಬಂದವರು ಎತ್ತಿಕೊಂಡು ಹೋಗುವಾಗ ತನ್ನತ್ತ ನೋಡುತ್ತಾ ಕಣ್ಣಲ್ಲೇ ಬೇಡಿಕೊಂಡಿದ್ದ ಮರಿಯ ಚಿತ್ರವನ್ನು ಮನಸ್ಸಿಗೆ ತಂದುಕೊಂಡು ಅತ್ತೂಅತ್ತು ಹೈರಾಣಾಗಿದ್ದಳು. ಜೊತೆಗೆ ಒಬ್ಬೊಂಟಿಯಾಗಿದ್ದ ಕೊನೆಯ ಮರಿ ಮನೆಯಲ್ಲೇ ಮಂಕಾಗಿ ಕುಳಿತಿದ್ದು ಆಕೆಯನ್ನು ಇನ್ನೂ ಸಂಕಟಕ್ಕೆ ದೂಡಿತ್ತು. ಏನನ್ನೂ ತಿನ್ನದೆ ಮರಿಗಳ ಅಮ್ಮನೂ ಮೌನವಾಗಿ ಕೂತಿದ್ದು ಕಂಡು ಹೀಗೆ ಶೋಕವೇ ಮೂರ್ತಿವೆತ್ತಂತಾಗಿದ್ದಳು. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಎಷ್ಟೇ ಸಮಾಧಾನ ಹೇಳಿದರೂ, ವಿಹ್ವಲತೆ ಅವಳನ್ನು ಬಿಡುತ್ತಲೇ ಇರಲಿಲ್ಲ. ಇವಳ ದುಃಖಕ್ಕಿಂತಲೂ ನನ್ನ ಗಮನವನ್ನು ಹೆಚ್ಚಾಗಿ ಸೆಳೆದಿದ್ದು ಆ ಮೂಕ ಜೀವಿಗಳ ಭಾವ. ಏನನ್ನೂ ಹೇಳದೆಯೇ ತಮ್ಮ ಮನಸ್ಸಿನ ವೇದನೆಯನ್ನು ಇನ್ನೊಬ್ಬರಿಗೆ ತಲುಪಿಸಿದವಲ್ಲ ಅವು, ಹಾಗಾದರೆ ಏನನ್ನು ಹೇಳದಿದ್ದರೂ ಸಂವಹನ ನಡೆಯುತ್ತದೆ ಎಂದಾಯಿತು. ಭಾವಕ್ಕೆ ಭಾಷೆಯೆಂಬುದೇ ಸೇತುವೆಯಲ್ಲವೇ?

ನಿಜಕ್ಕೂ, ಭಾಷೆ ಮಾತ್ರವೇ ಭಾವಸೇತುವೇ? ಭಾಷೆ ಇಲ್ಲದಿದ್ದರೆ ಸಂವಹನ ನಡೆಯುವುದಿಲ್ಲವೇ? ಅಥವಾ ಶಬ್ದಗಳಿಗಿಂತಲೂ ಮೌನವೇ ಸಮರ್ಥವಾದ ಭಾಷೆಯೇ? ಯಾವುದೆಲ್ಲ ಕಾರಣಗಳಿಗೆ ನಾವು ಮೌನವಾಗುತ್ತೇವೆ? ಮಾತಿಗಿಂತಲೂ ಹೆಚ್ಚು ಮೌನವೇ ನಮ್ಮನ್ನು ಕಾಡುವುದೇಕೆ? ಹೇಳದೆ ಮೌನವಾದಾಗ ಭಾವತೀವ್ರತೆ ಹೆಚ್ಚಾಗುತ್ತದೆಯೇ ಅಥವಾ ಇರುವುದಕ್ಕಿಂತ ಹೆಚ್ಚು ಭಾವಗಳನ್ನು ನಾವು ಕಲ್ಪಿಸಿಕೊಳ್ಳುತ್ತೇವೆಯೇ? ಮೌನ ಯಾಕಷ್ಟು ತಾಕುತ್ತದೆ ನಮ್ಮನ್ನು? ಏನೀ ಮೌನದ ಹಕೀಕತ್ತು?

ಮೌನದ ಭಾವಗಳು ನಿಜಕ್ಕೂ ಕುತೂಹಲ ಹುಟ್ಟಿಸುವಂಥವು. ಉದಾಹರಣೆಗೆ ಹೇಳುವುದಾದರೆ, ಮೌನವು ಸಮ್ಮತಿಯ ಲಕ್ಷಣ ಎನ್ನುತ್ತದೆ ಜನಪ್ರಿಯ ಗಾದೆ. ನಿಜಕ್ಕೂ ಸಮ್ಮತಿಸುವಾಗ ಮಾತ್ರವೇ ಮೌನವಾಗಿ ಇರುತ್ತೇವೆಯೇ? ಕೆಲವು ಸಂದರ್ಭಗಳಲ್ಲಿ ಮೌನವು ಅಸಮ್ಮತಿಯನ್ನೂ ಸೂಚಿಸುತ್ತದಲ್ಲ. ಕೋಪ ಬಂದಾಗಲೂ ಮಾತು ಬಿಡುತ್ತೇವೆ. ಮನಸ್ಸಿಗೆ ಹಿತವಾಗದಿದ್ದರೆ, ನಿರಾಕರಣೆಯ ಭಾವದಲ್ಲಿ, ನಿರ್ಲಕ್ಷಿಸುವಾಗ, ಪ್ರತಿರೋಧದ ಭಾವದಲ್ಲಿ, ಅತಿಯಾದ ಶೋಕದಲ್ಲಿ ನಾವು ಆಶ್ರಯಿಸುವುದು ಮೌನವನ್ನೇ. ಕದಪು ಕೆಂಪಾಗಿ ನಾಚಿಕೆಯಲ್ಲಿ ಮಿಂದೇಳುವಾಗ ಮಾತಿಗೇನು ಕೆಲಸ? ನಮ್ಮೊಳಗೆ ಏನನ್ನೋ ಧೇನಿಸುವಾಗ ಮೌನವೇ ಹಿತ ಎನಿಸುತ್ತದೆ. ಭಗವಂತನ ಸಾನಿಧ್ಯಕ್ಕೂ ಸಲ್ಲುವುದು ಮೌನವೇ. ಹಾಗಾದರೆ ಶಾಂತಿ, ಪ್ರೀತಿ, ಭಕ್ತಿ ಮುಂತಾದ ಎಷ್ಟೊಂದು ಭಾವಗಳ ಪ್ರವಾಹಕ್ಕೆ ಮೌನವೇ ಪಾತ್ರವಾಗಬಲ್ಲದು. ಮೌನವು ಜಗತ್ತಿನ ಸುಂದರವಾದ ಭಾಷೆ ಎಂಬುದು ನಿಜವೇ?

ಮೌನಕ್ಕೆ ಕಾರಣಗಳು ಏನು ಬೇಕಿದ್ದರೂ ಆಗಬಹುದು. ಊಟ ಮಾಡುವಾಗ ಮಾತಾಡಬಾರದು ಎನ್ನುವುದಕ್ಕೆ ಆಚಾರ-ವಿಚಾರಗಳು ಕಾರಣವಾದರೆ, ಧ್ಯಾನಕ್ಕೆ ಕೂತಾಗ ಮೌನವಾಗಿರಬೇಕು ಎನ್ನುವುದಕ್ಕೆ ಧಾರ್ಮಿಕ ಕಾರಣಗಳು ಇರಬಹುದು. ಎಷ್ಟೋ ಧರ್ಮಗಳಲ್ಲಿ ಮೌನವೆಂಬುದು ದೇವೋಪಾಸನೆಯ ಮಾರ್ಗವೂ ಹೌದು. ವರ್ಷಕ್ಕೆ ನಿಗದಿತ ದಿನಗಳು ಮೌನವಾಗಿರುವುದು ಧಾರ್ಮಿಕ ಅನುಷ್ಠಾನಗಳ ಕ್ರಮವೂ ಆಗಿದ್ದೀತು. ದೇವನಿಗೆ ಮಾತಿನಷ್ಟೇ ಮೌನವೂ ಪ್ರಿಯ ಎಂಬುದು ಇದರರ್ಥವೇ? ಅಥವಾ ಹೊರಗಿನ ಜಗತ್ತಿನೊಂದಿಗೆ ಮಾತು ನಿಂತಾಗಲೇ ʻಒಳ-ಹೋಗುವುದಕ್ಕೆʼ ಸಾಧ್ಯ ಎನ್ನುವ ಚಿಂತನೆ ಇಂಥ ಉಪಾಸನೆಗಳ ಹಿಂದಿರಬಹುದೇ? ಎಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು.

ಮಾತಿನ ಬಗ್ಗೆ ಕೆಲವು ಅಪಸ್ವರದ ಧಾಟಿಗಳನ್ನು ಅಲ್ಲಲ್ಲಿ ಕಾಣಬಹುದು. ಉದಾ, ಮಾತು ಮನೆ ಕೆಡಿಸಿತು ಅಥವಾ ಮಾತು ಆಡಿದರೆ ಹೋಯಿತು ಇಂಥವು. ಅಂದರೆ ಒಮ್ಮೆ ಬಾಯಿಂದ ಹೊರಬಿದ್ದ ಮಾತನ್ನು ಮತ್ತೆ ಹಿಂತೆಗೆದುಕೊಳ್ಳಲು ಆಗದೇ ಇರುವುದರಿಂದ ಆಗುವ ಅನಾಹುತಗಳನ್ನು ಸೂಚಿಸುವಂಥವು ಇವೆಲ್ಲ. ಹಾಗಾಗಿಯೇ ʻನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು…ʼ ಎಂಬೆಲ್ಲ ವಚನಗಳೂ ನಮ್ಮ ಮುಂದಿವೆ. ಮಾತಿಗೆ ಇಷ್ಟೆಲ್ಲ ನೀತಿ-ಸೂತ್ರಗಳು ಇದ್ದರೂ ಅದು ಕೇವಲ ಬೆಳ್ಳಿಯಂತೆ. ಮೌನ ಮಾತ್ರ ಬಂಗಾರ! -ಎನ್ನುವಲ್ಲಿಗೆ ಮಾತಿಗಿಂತ ಹೆಚ್ಚಿನ ಸ್ಥಾನ-ಮಾನ ಮೌನದ್ದು ಎನ್ನೋಣವೇ? ಹಾಗೆಂದೇ ʻಮೌನೇನ ಕಲಹಂ ನಾಸ್ತಿʼ ಎನ್ನುತ್ತದೆ ಒಂದು ಸುಭಾಷಿತ. ಆದರೆ ʻಮಾತು ಬಲ್ಲವನಿಗೆ ಜಗಳವಿಲ್ಲʼ ಎಂಬ ಗಾದೆಯೂ ಪ್ರಚಲಿತವಿದೆಯಲ್ಲ. ʻವಾದವಿರುವ ಮಾತಿಗಿಂತ ಸ್ವಾದವಿರುವ ಮೌನವೇ ಲೇಸುʼ ಎನ್ನುತ್ತದೊಂದು ನಾಣ್ಣುಡಿ. ಅಂತೂ ಮಾತಾಡಿ ಅಥವಾ ಬಿಡಿ- ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿರುವಂತೆ, ಅದರದ್ದೇ ಆದ ಹದವೂ ಇದೆ ಎನ್ನೋಣವೇ?

ಪ್ರಕೃತಿಯಲ್ಲೂ ಮೌನವಿದೆಯೇ? ನಿರ್ಜನವಾದ ಯಾವುದೇ ಪ್ರದೇಶಕ್ಕೆ ಹೋದರೂ ಮೌನ ಸಿಗಬಹುದೇ? ಬೆಟ್ಟದ ತುದಿಗೆ, ನದಿ ತಟಕ್ಕೆ, ಸಮುದ್ರದ ದಂಡೆಗೆ, ಮರಳುಗಾಡಿಗೆ, ಗೊಂಡಾರಣ್ಯಕ್ಕೆ- ಇಂಥ ಯಾವುದೇ ಸ್ಥಳಗಳಿಗೆ ಹೋದರೂ ಮೌನ ದೊರೆಯಬಹುದೇ? ಇಲ್ಲೆಲ್ಲ ನೀರಿನ ಮೊರೆತ, ಗಾಳಿಯ ಹೊಡೆತ, ಹಕ್ಕಿಗಳ ಕೂಜನವೆಲ್ಲ ಕೇಳುತ್ತದಲ್ಲ… ಆದರೂ ಪ್ರಕೃತಿಯಲ್ಲಿ ಮೌನವಿದೆ ಎಂದು ನಮಗೇಕನ್ನಿಸುತ್ತದೆ? ಈ ಸದ್ದುಗಳನ್ನೆಲ್ಲ ಸೇರಿಸಿಯೇ ನಾವು ನಿಸರ್ಗವನ್ನು ಭಾವಿಸುವುದೇ? ಅದಿಲ್ಲದ ನೀರವತೆ ಉಲ್ಲಾಸದ ಬದಲು ಬೇಸರ ತಂದೀತು ಎಂದೇ? ಕೇರಳದ ಮೌನ ಕಣಿವೆಯ ಬಗ್ಗೆ ನಾವೆಲ್ಲ ಕೇಳಿದವರೇ. ವಿಸ್ತಾರವಾದ ಆ ನಿತ್ಯ ಹರಿದ್ವರ್ಣ ಕಣಿವೆಗಳಲ್ಲಿ ನೆಲೆಸಿದ್ದ ಅಮೂಲ್ಯ ಮೌನವನ್ನು ಸ್ವರ್ಗ ಸದೃಶ್ಯ ಎಂದೇ ಬಣ್ಣಿಸಲಾಗುತ್ತಿತ್ತಲ್ಲ. ಈ ವೈವಿಧ್ಯಮಯ ಜೀವಜಗತ್ತಿನ ಖಜಾನೆಯನ್ನು ಅಣೆಕಟ್ಟೆಯಡಿ ಮುಳುಗಿಸುವ ಅಧಿಕಾರದ ಹುನ್ನಾರಿಗೆ ಪ್ರತಿಯಾಗಿ ಪ್ರಬಲವಾದ ಜನಾಂದೋಲನ ರೂಪುಗೊಂಡು, ಅದನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಕಾಪಾಡಿಕೊಂಡಿದ್ದು ಈಗ ಇತಿಹಾಸ.

ಪ್ರಕೃತಿಯಲ್ಲಿರುವ ಮೌನದ ಬಗ್ಗೆ ಬಹಳಷ್ಟು ಕವಿಗಳು ನಾನಾ ರೂಪದಲ್ಲಿ ವರ್ಣಿಸಿದ್ದಿದೆ. “ಮೌನ ತಬ್ಬಿತು ನೆಲವ/ ಜುಮ್ಮನೆ ಪುಳಕಗೊಂಡಿತು ಧಾರಿಣಿ/ ನೋಡಿ ನಾಚಿತು ಬಾನು/ ಸೇರಿತು ಕೆಂಪು ಸಂಜೆಯ ಕದಪಲಿ/ ಹಕ್ಕಿಗೊರಲಿನ ಸುರತಗಾನಕೆ/ ಬಿಗಿಯು ನಸುವೆ ಸಡಿಲಿತು/ ಬೆಚ್ಚಬೆಚ್ಚನೆಯುಸಿರಿನಂದದಿ/ ಗಾಳಿ ಮೆಲ್ಲನೆ ತೆವಳಿತು” ಎನ್ನುವ ಗೋಪಾಲಕೃಷ್ಣ ಅಡಿಗರ ಕವನದಲ್ಲಿ ಪ್ರಕೃತಿಯೊಂದಿಗಿನ ಮೌನದ ಅನುಸಂಧಾನ ಹೃದ್ಯವಾಗಿದೆ. ಮೌನವು ಇಷ್ಟೇ ತೀವ್ರವಾಗಿ ಅಭಿವ್ಯಕ್ತಿಗೊಂಡಿರುವುದು ಪು.ತಿ. ನರಸಿಂಹಾಚಾರ್‌ ಅವರ ʻಯದುಗಿರಿಯ ಮೌನ ವಿಕಾಸʼ ಕವನದಲ್ಲಿ. ಯದುಗಿರಿಯ ಮೂಡಣದ ಕಣಿವೆಯಲ್ಲಿ ಸೂರ್ಯೋದಯಕ್ಕೆ ಮೆಲ್ಲಗೆ ಎಚ್ಚರಗೊಳ್ಳುವ ಮೌನ ಒಂದೆಡೆ; ಪಡುವಣದ ಕಣಿವೆಯಲ್ಲಿ ಎಲ್ಲ ಸದ್ದುಗಳ ನಡುವೆಯೆ ನಿದ್ರಿಸುವ ಘನ ಮೌನ- ಈ ಎರಡೂ ಮೌನಗಳ ನಡುವೆ ಮುಂಜಾನೆಯ ಹೊತ್ತಿನ ದೇಗುಲದ ಸೊಬಗು- ಇದು ಕವಿಯನ್ನು ತೀವ್ರವಾಗಿ ಕಾಡಿದೆ. “ತಮ ಹುದುಗುತಿದೆ, ಬೆಳಕೊಗೆಯುತಿದೆ/ ಬೆಳ್ಳಿಯು ಮಂಜೊಳು ಕರಗುತಿದೆ” ಎಂಬಂತೆ ಅವರಿಗೆ ಕಾಣುತ್ತಿದೆ. “ಸಹಸ್ರಕಂಠದಿ ಮೇಳವಿಸಿದೆ ನುತಿ/ ದೇಗುಲವಾಗಿದೆ ಘೋಷವತಿ” ಎನ್ನುವ ಸಾಲುಗಳಲ್ಲೇ ಹುಸಿ ಬೆಳಗು, ನಸು ಬೆಳಗು, ಮುಂಬೆಳಗುಗಳೆಲ್ಲ ಕಳೆದು ಮೌನ ವಿಕಾಸವಾಗುವ ಅದ್ಭುತ ಲಯವೊಂದು ಸೃಷ್ಟಿಯಾಗುತ್ತದೆ. ಲೌಕಿಕ ಮೌನದ ವಿಕಾಸದಲ್ಲಿ ಅಂತರಂಗದ, ಅಧ್ಯಾತ್ಮದ ವಿಕಾಸದ ಹಾದಿಯನ್ನೂ ಕವಿ ತೆರೆದಿಡುವಂತಿದೆ.

ಇದನ್ನೂ ಓದಿ: ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ಮನುಷ್ಯ ಭಾವದ ಮೌನವೂ ಕವಿಗಳ ಕಲ್ಪನೆಗೆ ದಕ್ಕಿದ್ದಿದೆ. ಕೆ.ಎಸ್.‌ ನರಸಿಂಹಸ್ವಾಮಿಗಳ ʻಮೊದಲ ದಿನ ಮೌನʼ ಕವಿತೆಯನ್ನು ಮರೆಯುವುದು ಹೇಗೆ? ಆಗಿನ್ನೂ ಮದುವೆಯಾಗಿ ಗಂಡನ ಮನೆಯ ಹೊಸಿಲು ತುಳಿದ ಹೊಸ ವಧುವಿನ ಭಾವಭಿತ್ತಿಯಲ್ಲಿ ಆಗುವ ಪಲ್ಲಟಗಳನ್ನು ಈ ಕವನ ಎಳೆಎಳೆಯಾಗಿ ಕಟ್ಟಿಕೊಡುತ್ತದೆ. “ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ/ ಜೀವದಲಿ ಜಾತ್ರೆ ಮುಗಿದಂತೆ/… ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ/ ಚಿಂತೆ ಬಿಡಿ ಹೂವ ಮುಡಿದಂತೆ” ಎನ್ನುವ ಸಾಲುಗಳು, ಆ ಎಳೆಯ ಜೀವದಲ್ಲಿ ಮೂಡಿದ ಭಾವಗಳ ಜಾತ್ರೆಯನ್ನು ತಂತಿ ಮೀಟುವಂತೆ ಚಿತ್ರಿಸುತ್ತವೆ. “ಮೂಕನಾಗಬೇಕು, ಜಗದೊಳು ಜ್ವಾಕ್ಯಾಗಿರಬೇಕು” ಎನ್ನುವ ಕಡಕೋಳ ಮಡಿವಾಳೇಶ್ವರರ ತತ್ವಪದವು, ಮಾತು, ಮೌನ, ನೀತಿ, ತತ್ವ, ಆಸೆಗಳ ಬಗ್ಗೆ ತೀರಾ ಸರಳವಾಗಿ ತಿಳಿಸುತ್ತವೆ.

ಅಲ್ಲ, ಮೌನದ ಬಗ್ಗೆ ಹೇಳುವುದಕ್ಕೆ ಇಷ್ಟೊಂದು ಮಾತಾಡಬೇಕೆ? ಹಾಗೇನಿಲ್ಲ! ವಾಚ್ಯವಾಗಿ ಏನೂ ಹೇಳದೆಯೆ ಕೇವಲ ನಿಟ್ಟುಸಿರು, ಕಣ್ಣೋಟ, ಕಿರುನಗೆ, ಕೊಂಕು ತುಟಿಗಳೆಲ್ಲ ಎಷ್ಟೊಂದು ಅರ್ಥಗಳನ್ನು ನಮಗೆ ದಾಟಿಸುತ್ತವೆ. ಹಾಗಾದರೆ ಮೌನವೆಂದರೆ ಸುಮ್ಮನೆ ಮಾತಾಡದಿರುವುದಲ್ಲ; ಬೇಸರ ತರುವಂಥ ನಿಶ್ಶಬ್ದವಲ್ಲ; ಹೆದರಿಸುವ ನೀರವತೆಯೂ ಅಲ್ಲ. ಮೌನವೆಂದರೆ ಹೇಳದೆಯೇ ತಿಳಿಸುವುದು; ಆಡದೆಯೇ ನುಡಿಸುವುದು; ಮುಟ್ಟದೆಯೇ ತಟ್ಟುವುದು. ಹೌದೇಹೌದು, ಮೌನವೆಂಬುದು ಜಗತ್ತಿನ ಅತಿ ಸುಂದರ ಭಾಷೆ.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Continue Reading

ಪ್ರಮುಖ ಸುದ್ದಿ

PUC Results 2024: ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ; ಇಲ್ಲಿ ವೀಕ್ಷಿಸಿ

PUC Results 2024: ಮನೆಯಲ್ಲಿಯೇ ಕುಳಿತು ಅಥವಾ ಇಂಟರ್ನೆಟ್ ಸೆಂಟರ್‌ಗಳಲ್ಲಿ ವೀಕ್ಷಿಸಲು ಅವಕಾಶವಿದೆ. ಅದೇ ದಿನ ಕಾಲೇಜುಗಳಲ್ಲಿಯೂ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು.

VISTARANEWS.COM


on

SSLC exam
Koo

ಬೆಂಗಳೂರು: 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶಗಳು (PUC Results 2024) ನಾಳೆ (ಮಾರ್ಚ್ 30) ಶನಿವಾರದಂದು ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯ (KSEAB) ವೆಬ್‌ಸೈಟ್ karresults.nic.inನಲ್ಲಿ ಫಲಿತಾಂಶಗಳು ಅಂದು ಬೆಳಿಗ್ಗೆ 9ರಿಂದ 11ರೊಳಗೆ ಪ್ರ ಕಟವಾಗಲಿವೆ.

ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ರೋಲ್ ನಂಬರ್ ಆಧರಿಸಿ ತಮ್ಮ ಫಲಿತಾಂಶಗಳನ್ನು ಈ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಈ ಬಾರಿಯ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಫೆಬ್ರವರಿ 12ರಿಂದ 27ರವರೆಗೆ ನಡೆಸಿತ್ತು. ಕರ್ನಾಟಕದಲ್ಲಿ ಪ್ರಥಮ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದರು.

ಈ ಪರೀಕ್ಷೆಗಳ ಮೌಲ್ಯಮಾಪನ ಇದೀಗ ಮುಗಿದಿದ್ದು, ಫಲಿತಾಂಶವನ್ನು ಈ ಬಾರಿ ಬೇಗನೇ ಪ್ರಕಟಿಸಲು ಮಂಡಳಿ ಮುಂದಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಫಲಿತಾಂಶಗಳು ಲಭ್ಯವಾಗಲಿವೆ. ಮಾರ್ಚ್ 30ರಂದು ಮೊಬೈಲ್‌ ಮೂಲಕ ಮನೆಯಲ್ಲಿಯೇ ಕುಳಿತು ಅಥವಾ ಇಂಟರ್ನೆಟ್ ಸೆಂಟರ್‌ಗಳಲ್ಲಿ ವೀಕ್ಷಿಸಲು ಅವಕಾಶವಿದೆ. ಅದೇ ದಿನ ಕಾಲೇಜುಗಳಲ್ಲಿಯೂ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು.

ಪ್ರತಿ ವರ್ಷ ಪ್ರಥಮ ಪಿಯುಸಿಯ ವಾರ್ಷಿಕ/ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಕ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಆಯೋಜಿಸುತ್ತಾ ಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಬಹುತೇಕ ವಿಷಯಗಳ ಪರೀಕ್ಷೆಗಳು ನಡೆದಿವೆ. ಕೆಲವು ಪರೀಕ್ಷೆಗಳು ಬೆಳಿಗ್ಗೆ 10.15ರಿಂದ ಮಧ್ಯಾಹ್ನ 12.30ರವರೆಗೆ ನಡೆದಿವೆ.

ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಇಲ್ಲವೇ ಪರೀಕ್ಷೆಯನ್ನು ಬರೆಯಲಾಗದವರಿಗೆ ಮೇ ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಇದರ ವೇಳಾಪಟ್ಟಿಯನ್ನು
ಪ್ರಕಟಿಸಲಾಗಿದೆ. ಈ ಪರೀಕ್ಷೆಗೆ ಶುಲ್ಕ ತುಂಬಲು ಏಪ್ರಿಲ್ 20ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಆಯಾ ಜಿಲ್ಲಾ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸಪ್ಲಿಮೆಂಟರಿ ಪರೀಕ್ಷೆ ವಿವರ ಪ್ರಕಟಿಸುವಂತೆ ಸೂಚಿಸಲಾಗಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ತುಂಬಿ ಪರೀಕ್ಷೆ ಎದುರಿಸಲು ಬೇಕಾದ ಸಹಕಾರ ನೀಡುವಂತೆಯೂ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Continue Reading

ಭವಿಷ್ಯ

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Dina Bhavishya: ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷದ ಚೌತಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ವೃಶ್ಚಿಕ ರಾಶಿಯಿಂದ ಶುಕ್ರವಾರ ಮಧ್ಯಾಹ್ನ 03:51ಕ್ಕೆ ಧನಸ್ಸು ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ವೃಶ್ಚಿಕ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ವೃಷಭ ರಾಶಿಯವರು ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ, ಅಚಾತುರ್ಯದಿಂದ ಆಡಿದ ಮಾತುಗಳು ಅಪಾಯ ತರುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ತುಲಾ ರಾಶಿಯವರು ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿಯಾಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (29-03-2024)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ.
ತಿಥಿ: ಚೌತಿ 20:20 ವಾರ: ಶುಕ್ರವಾರ
ನಕ್ಷತ್ರ: ವಿಶಾಖ 20:34 ಯೋಗ: ವಜ್ರ 23:10
ಕರಣ: ಭವ 07:41 ಅಮೃತ ಕಾಲ: ಬೆಳಗ್ಗೆ 11:05 ರಿಂದ 12:49ರ ವರೆಗೆ
ದಿನ ವಿಶೇಷ: ಗುಡ್‌ ಫ್ಲೈಡೇ, ನಾಯಕನಹಟ್ಟಿ ಜಾತ್ರೆ, ಕಗ್ಡಾಲು ಮಹಾಲಕ್ಷ್ಮೀ ಜಾತ್ರೆ

ಸೂರ್ಯೋದಯ : 06:18   ಸೂರ್ಯಾಸ್ತ : 06:31

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ನಿಮ್ಮ ಸತತ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲದಿಂದ ಬಯಸಿದ ಫಲಿತಾಂಶಗಳು ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಕೊಂಚ ಕೆಲಸದ ನಿರಾಳತೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ವರ್ತಿಸಿ, ಅಚಾತುರ್ಯದಿಂದ ಆಡಿದ ಮಾತುಗಳು ಅಪಾಯ ತರುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಹೂಡಿಕೆ ವ್ಯವಹಾರಗಳ ಕುರಿತು ಆಲೋಚನೆ ಮಾಡುವಿರಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಅತಿಥಿಗಳ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ ಮಾಡುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಅತಿಯಾದ ಕೆಲಸದ ಒತ್ತಡದಿಂದ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಕುರಿತು ಜಾಗೃತಿ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ ಎಚ್ಚರಿಕೆ ಇರಲಿ. ವಿಶ್ವಾಸದಿಂದ ಕಾರ್ಯ ಸಿದ್ಧಿ. ಲಾಭದ ಹೂಡಿಕೆ ಕುರಿತಾಗಿ ಆಲೋಚನೆ ಮಾಡುವಿರಿ. ಕುಟುಂಬದ ಜತೆಗೆ ಕಾಲ ಕಳೆಯಲು ಹೆಚ್ಚು ಸಮಯ ವಿನಿಯೋಗಿಸುವ ಸಾಧ್ಯತೆ ಇದೆ .ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ನಿಮ್ಮ ಕ್ರಿಯಾಶೀಲ ಕಾರ್ಯ ಯೋಜನೆ ಸಫಲತೆಯನ್ನು ತಂದು ಕೊಡಲಿದೆ. ಆಪ್ತರು ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಅದರ ಹೊರತಾಗಿಯೂ ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ . ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಬಿಡುವಿಲ್ಲದ ಕಾರ್ಯದಿಂದ ಆಯಾಸ, ಇದರಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಆದಷ್ಟು ವಿಶ್ರಾಂತಿ ಪಡೆಯಿರಿ.ಅನಗತ್ಯ ಖರ್ಚು.ಹಿರಿಯರಿಂದ ಮಾರ್ಗದರ್ಶನ.ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಸಂತೋಷ ತುಂಬಿದ ವಾತಾವರಣ. ಮಕ್ಕಳಿಗಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಈ ದಿನ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಗುರುತಿಸುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ಮತ್ತು ಆರಾಮ ತರುತ್ತದೆ. ಹಣಕಾಸು ವ್ಯವಹಾರ ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ನಿಮ್ಮ ಬಗೆಗೆ ಕಾಳಜಿ ಮಾಡುವವರ ಬಗ್ಗೆ ಉದಾಸೀನತೆ ಬೇಡ. ದೀರ್ಘಕಾಲದ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆರೋಗ್ಯ ಪರಿಪೂರ್ಣ ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ಮೀನ: ವಿನಾಕಾರಣ ವಿಚಾರ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಸಂಗಾತಿಯ ಸಲಹೆ ಹಿತಕರವೆನಿಸುವುದು. ಆತ್ಮೀಯರೊಂದಿಗೆ ಕಾಲ ಕಳೆಯುವ ಸಾಧ್ಯತೆ. ದಿನದ ಮಟ್ಟಿಗೆ ಆರೋಗ್ಯ ಹದಗೆಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6.

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
king dasharatha
ಅಂಕಣ37 seconds ago

ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ipl 2023
ಕ್ರಿಕೆಟ್23 mins ago

IPL 2024: ಇಂದು ಆರ್‌ಸಿಬಿ- ಕೆಕೆಆರ್‌ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

dashamukha column silence
ಅಂಕಣ39 mins ago

ದಶಮುಖ ಅಂಕಣ: ಮೌನವೆಂಬ ಭಾವಸೇತು

SSLC exam
ಪ್ರಮುಖ ಸುದ್ದಿ52 mins ago

PUC Results 2024: ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ; ಇಲ್ಲಿ ವೀಕ್ಷಿಸಿ

Cooking utensils Health Tips
ಆರೋಗ್ಯ1 hour ago

Health Tips: ನಮ್ಮ ಅನಾರೋಗ್ಯದಲ್ಲಿ ನಾವು ಬಳಸುವ ಪಾತ್ರೆಗಳ ಪಾತ್ರವೇ ಮುಖ್ಯ!

Karnataka Weather
ಮಳೆ2 hours ago

Karnataka Weather : ಉತ್ತರದಲ್ಲಿ ಬಿಸಿಲ ಏಟು; ಮಲೆನಾಡು, ಕರಾವಳಿಯಲ್ಲಿ ಮಳೆಯಾಟ

Tea or Juice
ಆರೋಗ್ಯ2 hours ago

Tea or Juice: ಬೆಳಗ್ಗೆ ಟೀ ಕುಡಿದರೆ ಒಳ್ಳೆಯದೇ ಅಥವಾ ಹಣ್ಣಿನ ರಸ ಉತ್ತಮವೇ?

Dina Bhavishya
ಭವಿಷ್ಯ3 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

kea
ಕರ್ನಾಟಕ7 hours ago

KEA: ಕೆಸೆಟ್-‌2023ರ ಪರಿಷ್ಕೃತ ಕೀ ಉತ್ತರ ಪ್ರಕಟ; ಹೀಗೆ ಪರಿಶೀಲಿಸಿ

Viral News: Holi at delhi metro
ದೇಶ8 hours ago

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202418 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202420 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌