Viral video: ರಸ್ತೆಯಿಂದ ರಾಶಿಗಟ್ಟಲೆ ಮೊಳೆ ಹೆಕ್ಕಿ ತೆಗೆದ ಟ್ರಾಫಿಕ್‌ ಪೊಲೀಸರು; ಪಂಕ್ಚರ್‌ ಮಾಫಿಯಾ ಸಕ್ರಿಯ? - Vistara News

ವೈರಲ್ ನ್ಯೂಸ್

Viral video: ರಸ್ತೆಯಿಂದ ರಾಶಿಗಟ್ಟಲೆ ಮೊಳೆ ಹೆಕ್ಕಿ ತೆಗೆದ ಟ್ರಾಫಿಕ್‌ ಪೊಲೀಸರು; ಪಂಕ್ಚರ್‌ ಮಾಫಿಯಾ ಸಕ್ರಿಯ?

Viral Video: ನಿನ್ನೆ ಕುವೆಂಪು ವೃತ್ತದ ಅಂಡರ್‌ಪಾಸ್‌ನಲ್ಲಿ ರಾಶಿಗಟ್ಟಲೆ ಲೋಹದ ಮೊಳೆಗಳನ್ನು ಪತ್ತೆಹಚ್ಚಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು ಅವುಗಳನ್ನು ಸ್ವಚ್ಛಗೊಳಿಸಿದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುವೆಂಪು ಸರ್ಕಲ್ ಅಂಡರ್‌ಪಾಸ್‌ನಲ್ಲಿ ರಸ್ತೆಯನ್ನು ಗುಡಿಸುವ ವೀಡಿಯೊವನ್ನು ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅದೀಗ ವೈರಲ್‌ ಆಗಿದೆ.

VISTARANEWS.COM


on

puncture mafia viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಬೀದಿ ಬೀದಿಗಳಲ್ಲಿ ರಾಶಿಗಟ್ಟಲೆ ಮೊಳೆ (Nails) ಬಿಸಾಡಿ ವಾಹನಗಳ ಟಯರ್‌ ಪಂಕ್ಚರ್‌ (Puncture) ಆಗುವಂತೆ ಮಾಡಿ ದುಡ್ಡ ಮಾಡುವ ಮಾಫಿಯಾ (Mafia) ಕಾರ್ಯಪ್ರವೃತ್ತವಾಗಿದೆಯಾ ಎಂಬ ಅನುಮಾನ ಹೆಡೆಯೆತ್ತಿದೆ. ಜಾಲಹಳ್ಳಿಯ ಕುವೆಂಪು ವೃತ್ತದ (Kuvempu Circle) ಕೆಳಸೇತುವೆಯಲ್ಲಿ ಮುಷ್ಟಿಗಟ್ಟಲೆ ಮೊಳೆಗಳು ಒಂದೆಡೆಯೇ ಪತ್ತೆಯಾಗಿದ್ದು, ಸ್ವತಃ ಟ್ರಾಫಿಕ್‌ ಪೊಲೀಸರೇ (Traffic Police) ಇವುಗಳನ್ನು ಸ್ಥಳದಿಂದ ತೆಗೆದು ಕ್ಲೀನ್‌ ಮಾಡುವ ಅಭಿಯಾನ ನಡೆಸಿದ್ದಾರೆ. ಅದೀಗ ವೈರಲ್‌ (Viral Video) ಆಗಿದೆ.

ರಸ್ತೆ ಮಧ್ಯದಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಪಂಕ್ಚರ್ ಮಾಡಿಸಲಾಗುತ್ತಿದೆ ಎಂಬ ವದಂತಿ ಮೊದಲಿನಿಂದಲೂ ಇದೆ. ಇದೀಗ ಸ್ವತಃ ಟ್ರಾಫಿಕ್ ಪೊಲೀಸರಿಂದಲೇ ರಾಶಿಗಟ್ಟಲೆ ಮೊಳೆಗಳ ಸಂಗ್ರಹ ನಡೆದಿದ್ದು, ಅನುಮಾನ ರುಜುವಾತು ಆದಂತಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ಪಂಕ್ಚರ್ ಆಗುತ್ತಿದ್ದು, ಸಮೀಪದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ಸಾಕಷ್ಟು ವ್ಯಾಪಾರವಂತೂ ಆಗುತ್ತಿದೆ.

ನಿನ್ನೆ ಕುವೆಂಪು ವೃತ್ತದ ಅಂಡರ್‌ಪಾಸ್‌ನಲ್ಲಿ ರಾಶಿಗಟ್ಟಲೆ ಲೋಹದ ಮೊಳೆಗಳನ್ನು ಪತ್ತೆಹಚ್ಚಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು ಅವುಗಳನ್ನು ಸ್ವಚ್ಛಗೊಳಿಸಿದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುವೆಂಪು ಸರ್ಕಲ್ ಅಂಡರ್‌ಪಾಸ್‌ನಲ್ಲಿ ರಸ್ತೆಯನ್ನು ಗುಡಿಸುವ ವೀಡಿಯೊವನ್ನು ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅದೀಗ ವೈರಲ್‌ ಆಗಿದೆ.

ರಸ್ತೆ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸರು ಆಕ್ಷನ್‌ಗೆ ಇಳಿದಿದ್ದರು. ವಾಹನಗಳನ್ನು ಪಂಕ್ಚರ್ ಮಾಡುವ ಉದ್ದೇಶದಿಂದಲೇ ಮೊಳೆಗಳನ್ನು ರಸ್ತೆಯಲ್ಲಿ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಮೊಳೆಗಳನ್ನು ಸಂಗ್ರಹಿಸಿ ಜಾಗವನ್ನು ಪ್ರಯಾಣಕ್ಕೆ ಸುರಕ್ಷಿತಗೊಳಿಸಿದ್ದಾರೆ. ಇನ್ನೂ ಇರಬಹುದಾದ ಮೊಳೆಗಳ ಬಗ್ಗೆ ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ.

ವೈರಲ್‌ ವಿಡಿಯೋ ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಮಾಡಿದ ಕೆಲಸವನ್ನು ಶ್ಲಾಘಿಸಿದ್ದಾರೆ. ಜೊತೆಗೆ ತೊಂದರೆ ಸೃಷ್ಟಿಸಲು ಮೊಳೆ ಎಸೆದ ಅಪರಾಧಿಗಳನ್ನು ಖಂಡಿಸಿದ್ದಾರೆ. ಹೆಚ್ಚಿನ ವ್ಯಾಪಾರಕ್ಕಾಗಿ ಹತ್ತಿರದ ಪಂಕ್ಚರ್‌ವಾಲಾಗಳು ಈ ಕೆಲಸ ಮಾಡಿರಬಹುದು ಎಂದು ಕೆಲವು ಸೂಚಿಸಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ನಾನು ಹೋದದ್ದು ಸಂಧಾನಕ್ಕಲ್ಲ: ವಿನೋದ್‌ ರಾಜ್

ಬೆಂಗಳೂರು: ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ವಿನೋದ್‌ ರಾಜ್‌ ಆಗಮಿಸಿದ್ದರು. ಜುಲೈ 26ರಂದು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ರಾಜಿ ಸಂಧಾನಕ್ಕಾಗಿ ಹೋಗಿದ್ದರು ಎಂಬಂತೆ ಬಿಂಬಿತವಾಗಿದೆ ಎಂದು ಇದೀಗ ವಿನೋದ್‌ ರಾಜ್‌ ಬೇಸರ ಹೊರ ಹಾಕಿದ್ದಾರೆ.

ಈ ಬಗ್ಗೆ ವಿನೋದ್‌ ರಾಜ್‌ ವಿಡಿಯೊ ಮೂಲಕ ಮಾತನಾಡಿ ʻʻದರ್ಶನ್ ಅವರನ್ನ ಒಬ್ಬ ಕಲಾವಿದ ಎನ್ನುವ ಕಾರಣಕ್ಕೆ ಭೇಟಿ ಮಾಡಿ ಬಂದೆ. ಮೊನ್ನೆ ನಾನು ದರ್ಶನ್‌ ಅವರನ್ನು ನೋಡೋಕೆ ಹೋಗಿದ್ದೆ. ಬಳಿಕ ರೇಣುಕಾ ಸ್ವಾಮಿ ಮನೆಗೆ ಹೋಗಿ ಬಂದೆ. ವಾಹಿನಿಗಳ ಮೂಲಕ ನನಗೆ ಅರ್ಥವಾಗಿದ್ದು ಏನೆಂದರೆ ರಾಜಿ ಸಂಧಾನಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಅಲ್ಲಿ ಹೋಗಿದ್ದೆ ಎಂದು ಸುದ್ದಿಗಳು ವೈರಲ್‌ ಆಯ್ತು. ಖಂಡತ ಅದು ಅಲ್ವೇ ಅಲ್ಲ. ಕಲಾವಿದರು ಎನ್ನುವ ದೃಷ್ಟಿಯಿಂದ ನಾನು ಹೋಗಿದ್ದೆ. ರೇಣುಕಾ ಸ್ವಾಮಿ ಅವರ ಶ್ರೀಮಿತಿ ಅವರು ಗರ್ಭಿಣಿ. ಹುಟ್ಟುವ ಮಗುಗೆ ಒಳ್ಳಯದ್ದೇನಾದರೂ ಮಾಡಲಿಕ್ಕೆ ಆಗುತ್ತಾ ಎನ್ನುವ ದೃಷ್ಟಿಯಿಂದ ನಾನು ಸಹಾಯ ಮಾಡಿ ಬಂದೆ. ನಮ್ಮಿಂದ ಆದ ಸಣ್ಣ ಕಾಣಿಕೆ ಅದು. ಯಾವುದೇ ರಾಜಿ ಸಂಧಾನ ಅಲ್ಲ. ಆ ತರ ಕೆಲಸ ಕೂಡ ನಾವು ಮಾಡಲ್ಲʼʼಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಮನೆಯೊಳಗೆ ವಿಚಿತ್ರ ವಾಸನೆ, ಇಡೀ ಕುಟುಂಬ ಅಸ್ವಸ್ಥ; ರಹಸ್ಯ ಕೆಮೆರಾದಲ್ಲಿತ್ತು ಶಾಕಿಂಗ್‌ ದೃಶ್ಯ!

ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ಅಸಾಮಾನ್ಯ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಎಲ್ಲರ ತಲೆ ಕೂದಲು ಉದುರತೊಡಗಿತು. ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು.

VISTARANEWS.COM


on

By

Viral News
Koo

ರಜೆ ಮುಗಿಸಿ ಮನೆಗೆ ಹಿಂತಿರುಗಿದ ಕುಟುಂಬವೊಂದು ಅನಾರೋಗ್ಯಕ್ಕೆ ಈಡಾಗಿದ್ದು ಕೂದಲು ಉದುರುವ ವಿಚಿತ್ರ ಸಮಸ್ಯೆಯನ್ನು (Hair Loss problem) ಎದುರಿಸುತ್ತಿತ್ತು. ಗಂಡ, ಹೆಂಡತಿ ಮತ್ತು ಚಿಕ್ಕ ಮಗುವಿನ ಕೂದಲು ಕೂಡ ಉದುರಲಾರಂಭಿಸಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.

ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ವಿಚಿತ್ರ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಇಷ್ಟು ಮಾತ್ರವಲ್ಲ ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದರೊಂದಿಗೆ ಮನೆಯವರೆಲ್ಲರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮನೆಯನ್ನು ಸಂಪೂರ್ಣ ಹುಡುಕಾಡಿದರೂ ಅವರಿಗೆ ಏನೂ ಸಿಗಲಿಲ್ಲ. ಅಂತಿಮವಾಗಿ ಬಾಗಿಲಿನ ಬಳಿ ಹಿಡನ್ ಕೆಮೆರಾವನ್ನು ಅಳವಡಿಸಿದರು. ಬಳಿಕ ಅದರಲ್ಲಿ ಅವರಿಗೆ ನೆರೆಯ ನಿವಾಸಿಗಳ ಅನುಮಾನಾಸ್ಪದ ಚಟುವಟಿಕೆ ಕಂಡು ಬಂತು.

Viral News
Viral News


ಅಮೆರಿಕದ ಫ್ಲೋರಿಡಾದ ಉಮರ್ ಮತ್ತು ಸಮೀರಾ ದಂಪತಿ ಮಗುವಿನೊಂದಿಗೆ ರಜೆಯಿಂದ ಹಿಂದಿರುಗಿದಾಗ ಈ ಸಸ್ಯೆ ಪ್ರಾರಂಭವಾಗಿತ್ತು. ಎಲ್ಲಿ, ಏನು ತಪ್ಪಾಗಿದೆ ಎಂದು ಅವರು ಹುಡುಕಲು ಪ್ರಾರಂಭಿಸಿದಾಗ ಭಿನ್ನವಾದ ವಿಚಿತ್ರ ಎನಿಸುವ ವಾಸನೆಯನ್ನು ಪತ್ತೆಹಚ್ಚಿದರು. ಈ ವಾಸನೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದರು.

ಗುಪ್ತ ಕೆಮೆರಾವನ್ನು ಅಳವಡಿಸಿ ವಾಸನೆಯನ್ನು ತೊಡೆದುಹಾಕಲು ಪ್ರಯತ್ನಿಸತೊಡಗಿದ ದಂಪತಿ ಮನೆಯ ಪ್ರತಿಯೊಂದು ಕಿಟಕಿಗಳನ್ನೂ ತೆರೆದರು. ಈ ಸಮಯದಲ್ಲಿ ಅವರ ಚಿಕ್ಕ ಮಗಳ ಆರೋಗ್ಯವು ಕ್ಷೀಣಿಸಿತು. ಅವಳು ನಿರಂತರವಾಗಿ ಅಳಲು ಶುರು ಮಾಡಿದಳು. ತಿನ್ನಲು ನಿರಾಕರಿಸಿದಳು.

ಉಮರ್ ಮತ್ತು ಸಮೀರಾ ಅವರಿಗೂ ತಲೆನೋವು ಕಾಣಿಸಿಕೊಂಡಿತು. ಮಗಳ ತಲೆಯಿಂದ ಗಮನಾರ್ಹ ಪ್ರಮಾಣದ ಕೂದಲನ್ನು ಕಳೆದುಕೊಂಡಿರುವುದನ್ನು ಉಮರ್ ಗಮನಿಸಿದರು. ಬಳಿಕ ಉಮರ್ ಅವರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮೂವರೂ ಹಾಸಿಗೆಯಲ್ಲೇ ಕಳೆಯುವಷ್ಟರ ಮಟ್ಟಿಗೆ ಅವರ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಅವರು ವೈದ್ಯಕೀಯ ಸಹಾಯವನ್ನು ಕೋರಿದರು ಮತ್ತು ಮನೆ ಮಾಲೀಕರಿಗೆ ಮಾಹಿತಿ ನೀಡಿದರು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ.

Viral News
Viral News


ಬಳಿಕ ಬಾಗಿಲ ಬಳಿ ಅಳವಡಿಸಿದ್ದ ಕೆಮೆರಾವನ್ನು ಪರೀಕ್ಷಿಸಿದಾಗ ನೆರೆಹೊರೆಯವರಾದ 36 ವರ್ಷದ ಚೀನೀ ಪ್ರಜೆ ಲಿ ಬಾಗಿಲಿನ ಮೂಲಕ ದ್ರವ ಪದಾರ್ಥವನ್ನು ಎಸೆಯುತ್ತಿರುವುದನ್ನು ಕಂಡು ಬಂತು.


ಈ ವಸ್ತುವು ಮೆಥಡೋನ್, ಹೈಡ್ರೊಕೊಡೋನ್ ಮತ್ತು ಮತ್ತೊಂದು ಗುರುತಿಸಲಾಗದ ವಿಷಕಾರಿ ಅಂಶವನ್ನು ಒಳಗೊಂಡಿತ್ತು. ಉಮರ್ ಮನೆಯಿಂದ ಬರುವ ಶಬ್ದಗಳ ಕಿರಿಕಿರಿಯಿಂದಾಗಿ ಅವರನ್ನು ಅಲ್ಲಿಂದ ಓಡಿಸಲು ಹೀಗೆ ಮಾಡಿರುವುದಾಗಿ ಲೀ ಹೇಳಿದ್ದಾನೆ.

Viral News
Viral News


ಇದನ್ನೂ ಓದಿ: Viral Video: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ಬಳಿಕ ಲಿಯನ್ನು ಅಮೆರಿಕದಿಂದ ಚೀನಾಕ್ಕೆ ಗಡೀಪಾರು ಮಾಡಲಾಯಿತು. ಲಿ ಅಮೆರಿಕಕ್ಕೆ ಹಿಂತಿರುಗಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿದೆ.

Continue Reading

Latest

Viral Video: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

Viral Video: ಬೀದಿಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ್ದಾಗ ಆ ಮನೆಯ ಸಾಕು ನಾಯಿ ಬೀದಿ ನಾಯಿಯ ಮೇಲೆ ದಾಳಿ ಮಾಡಿ ಮಗುವನ್ನು ರಕ್ಷಿಸಿದೆ. ಹೃದಯವನ್ನೇ ನಡುಗಿಸುವಂತಹ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪುಟ್ಟ ಕಂದನನ್ನು ಬೀದಿ ನಾಯಿಯ ದಾಳಿಯಿಂದ ರಕ್ಷಿಸಿದ ಸಾಕು ನಾಯಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo


ನಿಯತ್ತಿಗೆ ಉತ್ತಮ ಉದಾಹರಣೆ ನಾಯಿ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಯಾಕೆಂದರೆ ಈ ಕಾಲದಲ್ಲಿ ನಾಯಿಗಿರುವ ನಿಯತ್ತು ಮನುಷ್ಯನಿಗೂ ಕೂಡ ಇಲ್ಲ. ನಾಯಿ ಅನ್ನ ಹಾಕಿ ಸಾಕಿದ ಮಾಲೀಕನ ಮನೆ ಕಾಯುವುದರ ಜೊತೆಗೆ ಅವು ಮಾಲೀಕ ಹಾಗೂ ಅವರ ಕುಟುಂಬದ ರಕ್ಷಣೆ ಕೂಡ ಮಾಡುತ್ತದೆ. ಇದೀಗ ನಾಯಿ ನಿಯತ್ತಿಗೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾ ಸಖತ್ ವೈರಲ್ (Viral Video) ಆಗಿದೆ.

ಬೀದಿಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ್ದಾಗ ಆ ಮನೆಯ ಸಾಕು ನಾಯಿ ಬೀದಿ ನಾಯಿಯ ಮೇಲೆ ದಾಳಿ ಮಾಡಿ ಮಗುವನ್ನು ರಕ್ಷಿಸಿದೆ. ಹೃದಯವನ್ನೇ ನಡುಗಿಸುವಂತಹ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಇಬ್ಬರು ಮಹಿಳೆಯರು ತಮ್ಮ ಮೂವರು ಮಕ್ಕಳ ಜೊತೆ ಮಾತನಾಡುತ್ತಾ ಬೀದಿಯ ಬದಿಯಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ಅವರ ಸಾಕು ನಾಯಿ ಕೂಡ ಕುಳಿತಿದೆ. ಆಗ ಅದರಲ್ಲಿ ಒಂದು ಮಗು ಪುಟ್ಟ ಹೆಜ್ಜೆ ಇಡುತ್ತಾ ರಸ್ತೆಗೆ ಓಡಿದೆ. ಆಗ ಬೀದಿಯಲ್ಲಿ ಬರುತ್ತಿದ್ದ ನಾಯಿ ಒಂದೇ ಸಮನೆ ಮಗುವಿನ ಮೇಲೆ ಎರಗಿ ದಾಳಿ ನಡೆಸಿ ಮಗುವನ್ನು ಕೆಳಗುರುಳಿಸಿದೆ. ಆಗ ಅಲ್ಲಿದ್ದವರೆಲ್ಲಾ ಮಗುವನ್ನು ಕಾಪಾಡಲು ಓಡಿ ಬರುತ್ತಿರುವಾಗ ಅಲ್ಲಿ ಕುಳಿತಿದ್ದ ಸಾಕು ನಾಯಿ ಬೀದಿ ನಾಯಿಯ ಮೇಲೆ ಪ್ರತಿದಾಳಿ ನಡೆಸಿ ಮಗುವನ್ನು ರಕ್ಷಿಸಿದೆ. ಇದರಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್; ಕುಣಿದು ಕುಪ್ಪಳಿಸಿದ ಹಾರ್ದಿಕ್ ,ರಣವೀರ್ ಸಿಂಗ್!

ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನಡೆದ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಪುಟ್ಟ ಕಂದನನ್ನು ಬೀದಿ ನಾಯಿಯ ದಾಳಿಯಿಂದ ರಕ್ಷಿಸಿದ ಸಾಕು ನಾಯಿಗೆ ಜನರು ಚಪ್ಪಾಳೆ ಹಾಗೂ ಹಾರ್ಟ್ ಎಮೋಜಿಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಿಗಳಿಗೆ ತುಂಬಾ ನಿಯತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಅದಕ್ಕಾಗಿಯೇ ನಾಯಿಗಳನ್ನು ತುಂಬಾ ಪ್ರೀತಿಸುತ್ತಾರೆ ಎಂದು ಬರೆದಿದ್ದಾರೆ. ಹಾಗೇ ಇನ್ನೊಬ್ಬರು ನಾಯಿಯಿಂದ ಮಗುವನ್ನು ಕಾಪಾಡಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಬಾಲಿವುಡ್

Janhvi Kapoor: ಇಡ್ಲಿ- ಚಿಕನ್ ಕರಿ ಕಾಂಬಿನೇಶನ್‌ಗೆ ಮುಖ ಕಿವುಚಿಕೊಂಡ ಖ್ಯಾತ ಯುಟ್ಯೂಬರ್‌; ತಿನ್ನಲು ಕೈ ಬಳಸಿ ಎಂದ ಜಾಹ್ನವಿ ಕಪೂರ್!

Janhvi Kapoor: ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಅವರ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಇಡ್ಲಿ ಮತ್ತು ಚಿಕನ್ ಕರಿ ಕಾಂಬಿನೇಷನ್‌ ಬಗ್ಗೆ ಹಾಗೂ ಕೈಯಿಂದ ಇಡ್ಲಿ ತಿನ್ನುವುದರ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲ ಅವರ ಮುಖ ಕಿವುಚಿಕೊಳ್ಳುವ ರೀತಿಗೆ ನೆಟ್ಟಿಗರು ಭಾರಿ ಟ್ರೋಲ್‌ ಮಾಡಿದ್ದಾರೆ.

VISTARANEWS.COM


on

Janhvi Kapoor interview Kamiya Jani trolled for calling idli-chicken curry weird combination
Koo

ಬೆಂಗಳೂರು: ಕರ್ಲಿ ಟೇಲ್ಸ್‌ನ ( Curly Tales) ಸಂಸ್ಥಾಪಕಿ ಕಾಮಿಯಾ ಜಾನಿ (Kamiya Jani) ಅವರು ಕಳೆದ ತಿಂಗಳು ನಟಿ ಜಾಹ್ನವಿ ಕಪೂರ್ (Janhvi Kapoor) ಅವರನ್ನು ಸಂದರ್ಶನ ಮಾಡಿದ್ದಾರೆ. ಕಾಮಿಯಾ ಜಾನಿ ಕ್ಲಿಪ್ ವೈರಲ್ ಆದ ನಂತರ ಭಾರಿ ಟ್ರೋಲ್‌ ಆಗುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಅವರ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಇಡ್ಲಿ ಮತ್ತು ಚಿಕನ್ ಕರಿ ಕಾಂಬಿನೇಷನ್‌ ಬಗ್ಗೆ ಹಾಗೂ ಕೈಯಿಂದ ಇಡ್ಲಿ ತಿನ್ನುವುದರ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲ ಅವರ ಮುಖ ಕಿವುಚಿಕೊಳ್ಳುವ ರೀತಿಗೆ ನೆಟ್ಟಿಗರು ಭಾರಿ ಟ್ರೋಲ್‌ ಮಾಡಿದ್ದಾರೆ.

ಡೈನಿಂಗ್ ಟೇಬಲ್‌ನಲ್ಲಿ, ದೋಸೆ, ಇಡ್ಲಿ, ಚಿಕನ್ ಕರಿ, ಪನೀರ್ ಭುರ್ಜಿ ಮತ್ತು ಮೂಂಗ್ ದಾಲ್ ಇತ್ತು. ಆಗ ಕಾಮಿಯಾ ಜಾನಿಗೆ ಜಾಹ್ನವಿ ಅವರು ಇಡ್ಲಿಯೊಂದಿಗೆ ಚಿಕನ್ ಕರಿ ಟ್ರೈ ಮಾಡಿ ಎಂದು ಹೇಳುತ್ತಾರೆ. ಆಗ ಕಾಮಿಯಾ ಬಹಳ ಆಶ್ಚರ್ಯ ಚಕಿತರಾಗಿ ಏನು? ಇಡ್ಲಿ ಜೊತೆ ಚಿಕನ್ ಕರಿ?” ಇದೆಂಥ ಕಾಂಬಿನೇಶನ್‌? ನೀವೇ ಇದ್ದನ್ನ ಪರಿಚಯಿಸಿದ್ದೀರಾ ಅಥವಾ ಇದು ಕಾಂಬಿನೇಶನ್‌ ಇರೋದು ಹೌದಾ? ಎಂದು ಕೇಳುತ್ತಾರೆ. ಮಾತ್ರವಲ್ಲ ಇದು ಬೋನಿ ಸ್ಪೆಷಲ್. ಚಿಕನ್ ಕರಿ ಜೊತೆ ಇಡ್ಲಿ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಪ್ರಯತ್ನಿಸಿದ್ದೀರಿ ಎಂದು ನನಗೆ ತಿಳಿದಿಲ್ಲ. ಇಡ್ಲಿಯ ಮೇಲೆ ಚಿಕನ್ ಕರಿ. ಇದನ್ನು ಪ್ರಯತ್ನಿಸಲು ನನಗೆ ತುಂಬಾ ಭಯವಾಗಿದೆ” ಎಂದು ಅವಳು ಹೇಳುತ್ತಾರೆ.

ಆಗ ಕಾಮಿಯಾ ಜಾನಿಗೆ ಜಾಹ್ನವಿ ಚಮಚ ಬಳಸಬೇಡಿ, ಕೈಗಳಿಂದ ತಿನ್ನಿರಿ ಎಂದಾಗ, ಕೈಯಿಂದ ಇಡ್ಲಿ ತಿನ್ನಲು ನನಗೆ ಗೊತ್ತಿಲ್ಲ,” ಎಂದು ಜಾನಿ ನಗುತ್ತಾ ಪ್ರತಿಕ್ರಿಯಿಸುತ್ತಾರೆ. ಮ್ಯಾಗಿ ನೂಡಲ್ಸ್ ಸೇರಿದಂತೆ ಎಲ್ಲವನ್ನೂ ಕೈಯಿಂದ ತಿನ್ನಬಹುದು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ. ಬಳಿಕ ಇಡ್ಲಿ-ಕೋಳಿ ಕರಿ ಕಾಂಬಿನೇಶನ್‌ ತಿಂದ ಬಳಿಕ ಕಾಮಿಯಾ ʻʻವಿಚಿತ್ರ ಕಾಮಬಿನೇಶನ್‌ʼʼಎಂದು ಎಂದು ಹೇಳುತ್ತಾರೆ.

ಕ್ಲಿಪ್ ಅನ್ನು ವೀಕ್ಷಿಸಿದ ಹೆಚ್ಚಿನ ಸಂಖ್ಯೆಯ ಜನರು ಕಾಮಿಯಾ ಜಾನಿ ಅವರನ್ನು ಟೀಕೆ ಮಾಡಿದ್ದಾರೆ. ದಕ್ಷಿಣ ಭಾರತದ ಆಹಾರಗಳ ಬಗ್ಗೆ ಆಕೆಗೆ ತಿಳಿದಿಲ್ಲ ಎಂದು ಟ್ರೋಲ್‌ ಮಾಡಿದ್ದಾರೆ. ಆಕೆ ಎಂದಾದರೂ ತಮಿಳುನಾಡಿಗೆ ಭೇಟಿ ನೀಡಿದ್ದಾಳೆಯೇ? ಅಲ್ಲದೆ, ಇಡ್ಲಿ ಅಥವಾ ಮಟನ್‌ನೊಂದಿಗೆ ದೋಸೆಯನ್ನು ಪ್ರಯತ್ನಿಸಿ, ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Janhvi Kapoor: ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಅಪ್‌ ಆಗ್ತಿತ್ತು ಎಂದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌!

ಕರ್ಲಿ ಟೇರ್ಲ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಕಾಮಿಯಾ ಜಾನಿ ಈ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯಿಂದ ಬೆಸ್ಟ್ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅವಾರ್ಡನ್ನು ಗಳಿಸಿದ್ದಾರೆ. 

ಇದಕ್ಕೂ ಮುಂಚೆ ಮುಂಬಯಿನಲ್ಲಿ (mumbai) ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant Radhika Wedding) ಸಮಾರಂಭದಲ್ಲಿ ವ್ಯಾಪಾರ, ರಾಜಕೀಯ ಮತ್ತು ಮನರಂಜನಾ ಲೋಕದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಈ ಬಗ್ಗೆ ಕರ್ಲಿ ಟೇಲ್ಸ್ ನ (Curly Tales) ಕಾಮಿಯಾ ಜಾನಿ (kamiya jani) ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ಉನ್ನತ-ಪ್ರೊಫೈಲ್ ಮದುವೆ ಎಷ್ಟು ಸ್ಮರಣೀಯ ಮತ್ತು ಭವ್ಯವಾಗಿತ್ತು ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದರು.





Continue Reading

ವೈರಲ್ ನ್ಯೂಸ್

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

Viral Video: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಈ ಮಹಿಳೆ ಅದನ್ನೇ ಪ್ರವೃತ್ತಿ ಮಾಡಿಕೊಂಡಂತಿದೆ. ಕಳೆದ 6 ಡಿವೋರ್ಸ್ ಪ್ರಕರಣದಲ್ಲಿ ಈ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಈ ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಸದ್ಯ ಈ ಪ್ರಕರಣದ ವಿಚಾರಣೆ ಬೆಂಗಳೂರಿನ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮಹಿಳೆಯ ಕಥೆ ಕೇಳಿ ನ್ಯಾಯಾಧೀಶರೇ ಅಚ್ಚರಿಗೊಳಗಾಗಿದ್ದಾರೆ.

VISTARANEWS.COM


on

Koo

ಬೆಂಗಳೂರು: ಮದುವೆಯಾದ ಬಳಿಕ ಪತಿ-ಪತ್ನಿ ಮಧ್ಯೆ ಒಮ್ಮತ ಮೂಡದಿದ್ದರೆ, ಸರಸಕ್ಕಿಂತ ವಿರಸವೇ ಹೆಚ್ಚಾದರೆ ವಿಚ್ಛೇದನ ಪಡೆಯುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಡಿವೋರ್ಸ್‌ ಪಡೆದುಕೊಳ್ಳಲೆಂದೇ ಮದುವೆ ಮಾಡಿಕೊಳ್ಳುತ್ತಿದ್ದಾಳ ಎನ್ನುವ ಅನುಮಾನ ಮೂಡುವಂತಾಗಿದೆ. ಯಾಕೆಂದರೆ ಇದೀಗ ಈಕೆಯ 7ನೇ ಡಿವೋರ್ಸ್ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಧೀಶರನ್ನೇ ಅಚ್ಚರಿಗೆ ದೂಡಿದೆ. ಈ ವಿಚಾರಣೆಯ ವಿಡಿಯೊ ಇದೀಗ ವೈರಲ್ ಆಗಿದೆ (Viral Video).

ಮದುವೆಯಾದ ನಂತರ ಮಹಿಳೆಯರು ತಮ್ಮ ಮನೆಗಳಿಂದ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಅನೇಕ ಪ್ರಕರಣಗಳು ನಡೆದಿವೆ. ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಅದಕ್ಕಿಂತ ಭಿನ್ನವಾಗಿ, ನ್ಯಾಯಾಧೀಶರನ್ನೇ ಬೆರಗುಗೊಳಿಸಿದ ಡಿವೋರ್ಸ್‌ ಪ್ರಕರಣ ಇದೀಗ ಬೆಂಗಳೂರಿನಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಈ ಮಹಿಳೆ ಅದನ್ನೇ ಪ್ರವೃತ್ತಿ ಮಾಡಿಕೊಂಡಂತಿದೆ. ಕಳೆದ 6 ಡಿವೋರ್ಸ್ ಪ್ರಕರಣದಲ್ಲಿ ಈ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಈ ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಮದುವೆಯಾದ ಬಳಿಕ 6 ತಿಂಗಳು ಸಂಸಾರ ನಡೆಸಿ ಬಳಿಕ 6 ತಿಂಗಳಲ್ಲಿ ಪತಿ ವಿರುದ್ಧ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಸಕ್ಷನ್ 498ಎ ಅಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ. 6 ಪ್ರಕರಣಗಳಲ್ಲಿಯೂ ಗಂಡಂದಿರಿಂದ ದುಬಾರಿ ಮೊತ್ತವನ್ನು ಪಡೆದಿದ್ದಾಳೆ. ಇದೀಗ ಈ ಮಹಿಳೆಯ ವಂಚನೆಯನ್ನು ಬಯಲಿಗೆಳೆಯಲು ಏಳನೇ ಪತಿ ಮುಂದಾಗಿದ್ದಾನೆ. ಹೀಗಾಗಿ ಪತ್ನಿಯ ವಿರುದ್ಧವೇ ಈತ ಪ್ರಕರಣ ದಾಖಲಿಸಿದ್ದಾನೆ. ಈ ಅರ್ಜಿಯ ಕೈಗೆತ್ತಿಕೊಂಡ ನ್ಯಾಯಾಧೀಶರು ಮಹಿಳೆಯ ಕಥೆ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ಪತಿ ಪರ ವಕೀಲರು ವಾದ ಮಂಡಿಸಿ, “ವಿವಾಹಿತ ಮಹಿಳೆಯರ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಸೆಕ್ಷನ್ 498ಎ ಅಡಿಯಲ್ಲಿ ಎಲ್ಲ ಗಂಡಂದಿರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ ಆಕೆ ಜೀವನಾಂಶವನ್ನು ಆಗ್ರಹಿಸಿದ್ದಾಳೆʼʼ ಎಂದು ತಿಳಿಸಿದರು. ಇದಕ್ಕೆ ನ್ಯಾಯಾಧೀಶರು ʼʼಅವಳು ಪ್ರತಿ ಗಂಡನೊಂದಿಗೆ ಎಷ್ಟು ಸಮಯದಿಂದ ಇರುತ್ತಾಳೆ?ʼʼ ಎಂದು ಕೇಳಿದರು. ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವಳು ಪ್ರತಿ ಪತಿಯೊಂದಿಗೆ ಒಂದು ವರ್ಷದಿಂದ ಆರು ತಿಂಗಳವರೆಗೆ ವಾಸಿಸುತ್ತಿದ್ದಳು ಎಂದು ವಕೀಲರು ತಿಳಿಸಿದರು.

ಬಳಿಕ ನ್ಯಾಯಾಧೀಶರು ಮಹಿಳೆ ಕಾನೂನನ್ನು ತಿರುಚುತ್ತಿದ್ದಾರೆ ಎಂದು ಟೀಕಿಸಿದರು. ಆಕೆಯ ಪತಿಯ ವಕೀಲರು ಮದುವೆಯ ಎಲ್ಲ ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಮುಂದಿನ ವಿಚಾರಣೆಯಂದು ವಿವರವಾದ ಮಾಹಿತಿಯೊಂದಿಗೆ ಹಾಜರಾಗುವಂತೆ ಆಕೆಯ ಎಲ್ಲ ಪತಿಯಂದಿರಿಗೆ ಜಡ್ಜ್‌ ಸೂಚಿಸಿದರು. ಇದು ಕಾನೂನಿನ ದುರ್ಬಳಕೆ. ಇಲ್ಲಿ ಕಾನೂನು ಜತೆ ಆಟವಾಡುತ್ತಿದ್ದೀರಿ ಎಂದು ಮಹಿಳೆಗೆ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಈ ಪ್ರಕರಣ ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Continue Reading
Advertisement
Paris Olympics 2024
ಪ್ರಮುಖ ಸುದ್ದಿ50 mins ago

Paris Olympics 2024: ಮತ್ತೊಂದು ಕಂಚಿನ ಪದಕದ ಸನಿಹ ಮನು ಭಾಕರ್, ನಾಳೆ ಇತಿಹಾಸ ಸೃಷ್ಟಿ?

Business Ideas
Latest57 mins ago

Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ
ಕರ್ನಾಟಕ1 hour ago

KRS Dam: ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ; ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ

signal free corridor
ಪ್ರಮುಖ ಸುದ್ದಿ1 hour ago

Signal-Free Corridor: ಬೆಂಗಳೂರಿನಲ್ಲಿ 17 ಸಿಗ್ನಲ್ ಮುಕ್ತ ಕಾರಿಡಾರ್‌; ಯಾವ ಮಾರ್ಗಗಳಲ್ಲಿ ನೋಡಿ

karnataka rain
ಮಳೆ1 hour ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tharun Sudhir and Sonal modeled by eco-friendly invitations
ಸ್ಯಾಂಡಲ್ ವುಡ್1 hour ago

Tharun Sudhir: ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ಸೋನಾಲ್ ಮತ್ತು ತರುಣ್!

Ranbir Kapoor
ದೇಶ1 hour ago

Ranbir Kapoor: ಮೋದಿಯದ್ದು ‘ಆಯಸ್ಕಾಂತದಂಥ ವ್ಯಕ್ತಿತ್ವ’ ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು?

Viral News
ವೈರಲ್ ನ್ಯೂಸ್2 hours ago

Viral News: ಮನೆಯೊಳಗೆ ವಿಚಿತ್ರ ವಾಸನೆ, ಇಡೀ ಕುಟುಂಬ ಅಸ್ವಸ್ಥ; ರಹಸ್ಯ ಕೆಮೆರಾದಲ್ಲಿತ್ತು ಶಾಕಿಂಗ್‌ ದೃಶ್ಯ!

Actor Dhanush Shares FIRST Post After Speech
ಕಾಲಿವುಡ್2 hours ago

Actor Dhanush: ಮನೆ ಬಗ್ಗೆ ಮಾತಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬೆನ್ನಲ್ಲೇ ಹೊಸ ಪೋಸ್ಟ್‌ ಹಂಚಿಕೊಂಡ ನಟ ಧನುಷ್‌!

Curry Leaves
ಆರೋಗ್ಯ2 hours ago

Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka rain
ಮಳೆ1 hour ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ21 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ23 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

ಟ್ರೆಂಡಿಂಗ್‌