ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ - Vistara News

ಪ್ರಮುಖ ಸುದ್ದಿ

ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಧವಳ ಧಾರಿಣಿ ಅಂಕಣ: ಮಹಾಪುರುಷನಾದ ಶ್ರೀರಾಮನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಕಷ್ಟು ಘನತೆವೆತ್ತ ವ್ಯಕ್ತಿತ್ವದವನೇ ಆಗಿದ್ದ. ಇದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

VISTARANEWS.COM


on

king dasharatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಾಕಾವ್ಯದ ಮರೆಯಲ್ಲಿರುವ ಬಹುರೂಪಿ

dhavala dharini by Narayana yaji

ತಸ್ಯಾಂ ಪುರ್ಯಾಮಯೋಧ್ಯಾಯಾಂ ವೇದವಿತ್ಸರ್ವಸಙ್ಗ್ರಹಃ
ದೀರ್ಘದರ್ಶೀ ಮಹಾತೇಜಾಃ ಪೌರಜಾನಪದಪ್ರಿಯಃ ৷৷ಬಾ.ಕಾಂ.1৷৷

ಸಮಸ್ತ ವೇದವನ್ನು ಸಾಂಗವಾಗಿ ತಿಳಿದ ಧಶರಥನು (King Dasharatha) ಆ ಅಯೋಧ್ಯಾಪುರವನ್ನು (Ayodhya) ಆಳುತ್ತಿದ್ದನು. ಆತನು ಸರ್ವಜ್ಞನು. ಮುಂದೇನಾಗಬಹುದೆನ್ನುವುದನ್ನು ಇಂದೇ ಗ್ರಹಿಸಬಲ್ಲ ದೀರ್ಘದರ್ಶಿಯಾಗಿದ್ದನು. ಮಹಾತೇಜಸ್ವಿಯೂ ಪ್ರತಾಪಿಯೂ ಆಗಿದ್ದನು. ನಗರ ಮತ್ತು ಗ್ರಾಮಗಳ ಜನಪದರಿಗೆ ಅತಿಪ್ರಿಯನಾದ ರಾಜನಾಗಿದ್ದನು.

ಅಯೋಧ್ಯೆಯನ್ನು ಅರವತ್ತು ಸಾವಿರ ವರ್ಷಗಳ ಕಾಲ ಆಳಿದ ದಶರಥ ಮಹಾರಾಜನ ಕುರಿತು “ಓರ್ವ ತಿಕ್ಕಲು ದೊರೆಯಾಗಿದ್ದ, ತನ್ನ ಹೆಂಡತಿಯರಿಗೆ ಹೆದರಿದ್ದ, ಶತ್ರುಗಳಿಗೆ ಹೆದರುವ ಪುಕ್ಕಲನಾಗಿದ್ದ, ವಿಪರೀತ ಪುತ್ರಮೋಹಕ್ಕೊಳಗಾಗಿದ್ದ” ಎನ್ನುವ ಭಾವವೇ ಜನಜನಿತವಾಗಿವೆ. ರಾಮಾಯಣವೆಂದರೆ ಕೇವಲ ರಾಮನ ಕಥೆಯೆಂದು ಗ್ರಹಿಸಿದಾಗ ಇಂತಹ ವಿಪರೀತ ಅಭಿಪ್ರಾಯಕ್ಕೆ ಬರುವುದು ಸಹಜವೂ ಹೌದು. ಸ್ವಂತ ಅಸ್ತಿತ್ವವೇ ಇಲ್ಲದವನಂತೆ ಮತ್ತು ದುಃಖದಿಂದ ಕೊರಗಿ ಅಸುನೀಗುವ ದಶರಥನ ಮೇಲೆ ಅನುಕಂಪಕ್ಕಿಂತ ಇಂಥವನ ಕಾರಣದಿಂದಲೇ ರಾಮ ವನವಾಸಕ್ಕೆ ಹೋಗುವಂತಾಯಿತು ಎಂದು ತಿರಸ್ಕಾರಗೊಳ್ಳುವ ರೀತಿಯಲ್ಲಿ ಆತನ ಪಾತ್ರ ಚಿತ್ರಿತವಾಗಿದೆ. ಆತನ ಪಾತ್ರವೂ ಸಹ ಬಾಲಕಾಂಡ ಮತ್ತು ಅಯೋಧ್ಯಾ ಕಾಂಡಗಳಲ್ಲಿ ಮುಗಿದು ಹೋಗಿಬಿಡುತ್ತದೆ.

ಮುಂದೆ ಯುದ್ಧಕಾಂಡದಲ್ಲಿ ದೇವತೆಗಳ ಮತ್ತು ಬ್ರಹ್ಮನ ಸಂಗಡ ಆತ ಸಶರೀರನಾಗಿ ಬರುವಾಗ ಆತ ಇಂದ್ರನಿಗೆ ಸಮನಾದ ಪದವಿ ಮತ್ತು ಗೌರವದೊಂದಿಗೆ ದೇವರಥದಲ್ಲಿ ಗಮನಿಸಬಹುದು. ಅದು ಆತ ಕೇವಲ ರಾಮನ ತಂದೆಯಾಗಿರುವುದಕ್ಕೆ ಮಾತ್ರವೋ ಹೇಗೆ ಎನ್ನುವ ಸಂಶಯವೂ ಕಾಡಿದರೆ ಅದು ಸಹಜ. ಸುಮಾರು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ಏಳು ಕಾಂಡಗಳ ಮಹಾಕಾವ್ಯವು ಇಡಿಯಾಗಿ ಜನಸಾಮಾನ್ಯರಿಗೆ ಸಿಗುವುದು ಅಷ್ಟು ಸುಲಭವಲ್ಲ. ಹೆಚ್ಚಿನವರಿಗೆ ಅದನ್ನು ಕೇಳುವ ವ್ಯವಧಾನ ಮತ್ತು ಸಮಯವೂ ಇಲ್ಲ. ಮಹಾಕಾವ್ಯದ ವಸ್ತುಗಳನ್ನು ನಾಟಕವನ್ನಾಗಿಸಿ ಅದರಲ್ಲಿ ಬರುವ ವಿಷಯವನ್ನು ಖಂಡ ಖಂಡವನ್ನಾಗಿಸಿ (ವಿಭಾಗಿಸಿ) ಮೊದಲು ಕೊಟ್ಟಿರುವುದು ಪ್ರಾಚೀನ ಸಂಸ್ಕೃತ ನಾಟಕಗಳು ಹಾಗೂ ಯಕ್ಷಗಾನ, ಕೂಚಿಪುಡಿ ಮತ್ತು ಚಾರಣರು ಆಡಿ ತೋರಿಸಿದ ಪ್ರದರ್ಶನಕಲೆಗಳು. ಯಕ್ಷಗಾನದಲ್ಲಿ ಒಂದೊಂದು ಸನ್ನಿವೇಶವನಾಗಿ ಕೊಟ್ಟಿರುವ ಕಥಾಭಾಗವನ್ನು ಪ್ರಸಂಗವೆಂದು ನಿರೂಪಿಸಲ್ಪಟ್ಟಿದೆ.

ಮಹಾಕಾವ್ಯವೊಂದು ರೂಪುಗೊಳ್ಳಬೇಕಾದರೆ ಅದರಲ್ಲಿ ಅನೇಕ ಲಕ್ಷಣಗಳಿರಬೇಕಾಗುತ್ತದೆ. ಕಾವ್ಯಗಳೆಲ್ಲವೂ ರೂಪುಗೊಂಡಿರುವುದರ ಹಿಂದೆ ಶಾಸ್ತ್ರ ಅಂದರೆ ವಿಧಿ, ನಿಷೇಧದ ರಿವಾಜಿದೆ. ಶಾಸ್ತ್ರವೆಂದರೆ ಧರ್ಮ, ಅರ್ಥ ಕಾಮ ಮೋಕ್ಷಗಳೆನ್ನುವ ಪುರುಷಾರ್ಥವನ್ನು ಮುಖ್ಯವಾಗಿ ಬೋಧಿಸುವ ಗ್ರಂಥ. ಇದು ಉಪದೇಶ ರೂಪದಲ್ಲಿ ಇರುತ್ತದೆ. ʼವಿಷ್ಣು ಧರ್ಮೋತ್ತರ ಪುರಾಣʼ ಶಾಸ್ತ್ರ ಮತ್ತು ಕಾವ್ಯದ ಕುರಿತು ವಿವರಿಸುವುದು ಹೀಗೆ –

ಮೋಕ್ಷಸ್ಯ ಯತ್ರೋಪನ್ಯಾಸಃ ಇತಿಹಾಸ ಸ ಉಚ್ಯತೇ
ತದೇವ ಕಾವ್ಯಮಿತ್ಯುಕ್ತಂ ಚೋಪದೇಶಂ ವಿನಾ ಕೃತಂ

ಮೋಕ್ಷವೆಂಬ ಪುರುಷಾರ್ಥವನ್ನೇ ಮುಖ್ಯವಾಗಿ ಬೋಧಿಸುವ ಗ್ರಂಥಕ್ಕೆ ಇತಿಹಾಸವೆಂದು ಹೆಸರು. ಅಂತಹ ಗ್ರಂಥವೇ ಉಪದೇಶರೂಪದಲ್ಲಿರದೇ ಒಬ್ಬಾನೊಬ್ಬ ಮಹಾಪುರುಷನ ಚರಿತ್ರೆಯಾಗಿದ್ದಲ್ಲಿ ಅದು ಕಾವ್ಯವೆಂದು ಹೇಳಲ್ಪಡುತ್ತಾರೆ.

ಮಹಾಕಾವ್ಯವಾಗಬೇಕಾದರೆ ಅಲ್ಲಿ ನಾಯಕ ಮತ್ತು ಪ್ರತಿನಾಯಕನ ಗುಣಗಳ ವಿಸ್ತ್ರತ ವಿವರಗಳಿರಬೇಕು. ಪ್ರಯಾಣ ಸನ್ನದ್ಧನಾದ ಪುರುಷನ ಮತ್ತು ದೂತಪ್ರೇಷಣಾದಿಗಳ ಹಾಗೂ ಯುದ್ಧವೃತ್ತಾಂತದ ವರ್ಣನೆಗಳೆಲ್ಲವನ್ನು ಒಳಗೊಂಡಿರಬೇಕು. ನಾಯಕನ ಅಭ್ಯುದಯದಿಂದ ಕೂಡಿರಬೇಕು. ನಾಯಕ ಸನ್ಮಾರ್ಗಗಾಮಿಯಾಗಿಯೂ ಧರ್ಮವಿಜಯಿಯಾಗಿಯೂ ಇರಬೇಕು. ಹಾಗೇ ಪ್ರತಿನಾಯಕನೂ ಸಹ ಜಗದ್ವಿಜಯಿಯೇ ಆಗಿರಬೇಕು. ದೇಶ, ಪಟ್ಟಣ, ರಾಜರು, ಋತುಗಳು, ಅಗ್ನಿ, ನದಿಗಳು, ಸ್ತ್ರೀಯರು ಇವೆಲ್ಲವೂ ವಿವರಿಸಲ್ಪಟ್ಟಿರಬೇಕು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭೀಭತ್ಸ, ಅದ್ಭುತ ಮತ್ತು ಶಾಂತವೆನ್ನುವ ನವರಸಗಳಿಂದ ಶೋಭಿಸಬೇಕು. ಭರತನ ನಾಟ್ಯ ಶಾಸ್ತ್ರಕ್ಕಿಂತಲೂ ಮೊದಲೇ ರಚಿತವಾಗಿದೆಯೆಂದು ನಂಬಲಾಗಿರುವ “ವಿಷ್ಣು ಧರ್ಮೋತ್ತರ ಪುರಾಣದಲ್ಲಿ” ಶಾಸ್ತ್ರ, ಮಹಾಕಾವ್ಯ ಮತ್ತು ನಾಟಕಗಳ ಲಕ್ಷಣಗಳನ್ನು ಹೀಗೆ ಸ್ಪಷ್ಟವಾಗಿ ವಿಭಾಗಿಸಿ ಹೇಳಿದೆ.

ಮಹಾಕಾವ್ಯ ಲಕ್ಷಣಕ್ಕೆ ಅನುಗುಣವಾಗಿ ವಾಲ್ಮೀಕಿ ರಾಮಾಯಣವನ್ನು ರಚಿಸಿರುವುದನ್ನು ಗಮನಿಸಿದರೆ ಆತನ ಕಾಲದಲ್ಲಿಯೇ ಕಾವ್ಯಲಕ್ಷಣಗಳು ಪ್ರಚಲಿತದಲ್ಲಿ ಇತ್ತು ಎನ್ನಬಹುದಾಗಿದೆ. ಅಥವಾ ಅದನ್ನು ಆಧಾರವನ್ನಾಗಿರಿಸಿಕೊಂಡು ನಾಟ್ಯಶಾಸ್ತ್ರವನ್ನು ರಚಿಸಿದ್ದಾರೆನ್ನುವ ದುರ್ಬಲವಾದ ವಾದವನ್ನೂ ಕೆಲ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅದೇನೆ ಇರಲಿ, ನಾಯಕನ ಚರಿತ್ರೆಯನ್ನು ಹೇಳುವ ಮಹಾಕಾವ್ಯದಲ್ಲಿ ಎಲ್ಲಾ ಪಾತ್ರಗಳೂ ನಾಯಕನ ಗುಣಗಳ ನೆರಳಿನಲ್ಲಿ ಬೆಳೆಯುತ್ತವೆ. ಪೋಷಕ ಪಾತ್ರಗಳ ಗುಣಗಳು ನಾಯಕನನ್ನು ಮೀರಿ ಹೋಗದಂತೆ ಎಚ್ಚರದಿಂದ ಪಾತ್ರವನ್ನು ಹೆಣೆಯಲಾಗುತ್ತದೆ. ಇದಕ್ಕೆ ರಾಜಾ ದಶರಥನ ಪಾತ್ರವೂ ಹೊರತಲ್ಲ. ಮಹಾವಿಷ್ಣು ಸಹಿತವಾಗಿ ದೇವತೆಗಳು ತಮ್ಮ ಅವತಾರಕ್ಕೆ ಕೇಂದ್ರವನ್ನಾಗಿ ಅಯೋಧ್ಯೆಯನ್ನು ಆರಿಸಿಕೊಂಡಾಗ ಅಲ್ಲಿನ ಚಕ್ರವರ್ತಿಯೂ ಘನತೆಯಿಂದಲೇ ಕೂಡಿರಬೇಕಾಗುತ್ತದೆ. ಕೇವಲ ಅಶ್ವಮೇಧ ಯಾಗ ಮತ್ತು ಪುತ್ರಕಾಮೇಷ್ಟಿ ಯಾಗದ ಮೂಲಕ ಅವತಾರಿ ಪುರುಷನಿಗೆ ಕ್ಷೇತ್ರವಾಗಲು ಸಾಧ್ಯವಿಲ್ಲ.

ayodhya

ರಾಮಾಯಣದ ಮೂಲತಃ ಮಾನವ ಸಂಬಂಧಗಳ ಗುಣಗಳನ್ನು ಮೈಗೂಡಿಸಿಕೊಂಡ ಕಾವ್ಯ. ಪ್ರತೀ ಪಾತ್ರದಲ್ಲಿಯೂ ಗುಣ, ದೋಷ ಎರಡೂ ಇವೆ. ರಾಮ ಆದರ್ಶ ಪುರುಷ ಹೇಗೋ ಅದೇ ರೀತಿ ತನ್ನ ನಿಷ್ಠುರ ನಡವಳಿಕೆಯ ಮೂಲಕ ತನ್ನನ್ನು ನೆಚ್ಚಿಕೊಂಡ ಪಾತ್ರಗಳಿಗೆ ನೋವನ್ನು ಅದೇ ಪ್ರಮಾಣದಲ್ಲಿ ಕೊಟ್ಟಂತವನೂ ಹೌದು. ಇದನ್ನು ದಶರಥನಿಂದ ಪ್ರಾರಂಭಿಸಿ ಕೊನೆಗೆ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವವವರೆಗೆ ನಿರಂತರವಾಗಿ ಗಮನಿಸಬಹುದಾಗಿದೆ. ಅದಕ್ಕೆ ಕಾರಣಗಳನ್ನು ಹುಡುಕಿ ರಾಮನ ಆದರ್ಶವನ್ನು ಲೋಕಕ್ಕೆ ವಿಮರ್ಶಕರು ಕೊಟ್ಟಿದ್ದಾರೆ ಎನ್ನುವುದೂ ಸಹ ಅಷ್ಟೇ ಗಮನಾರ್ಹ. ಮನುಷ್ಯರಲ್ಲಿ ಪರಿಪೂರ್ಣನಾದ ವ್ಯಕ್ತಿಗಳು ಇದ್ದಾರೆಯೋ ಎನ್ನುವ ವಾಲ್ಮೀಕಿಯ ಸಂಶಯಕ್ಕೆ (ಕೋ ನ್ವಸ್ಮಿನ್ಸಾಂಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್) ನಾರದರು ಆತನ ಹದಿನಾರು ಗುಣಗಳನ್ನು ವರ್ಣಿಸಿ ರಾಮಾಯಣ ಕಥೆಯನ್ನು ಹೇಳಿರುವ ವಿಷಯವನ್ನು ಈ ಹಿಂದೆಯೇ ಪ್ರಸ್ತಾಪಿಸಿಯಾಗಿದೆ. ಇಂತಹ ಮಹಾಪುರುಷನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಮಾನ್ಯರ ತಿಳುವಳಿಕೆಯಂತೆ ಅಳುಮುಂಜಿಯಾಗಿರದೇ, ಸಾಕಷ್ಟು ಘನವೆತ್ತ ವ್ಯಕ್ತಿತ್ವದವನೇ ಆಗಿದ್ದ ಎನ್ನುವುದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

ದಶರಥನಲ್ಲಿರುವ ಮೊದಲ ಗುಣವೇ ಆತ ವೇದವಿತ್ ಎನ್ನುವುದರ ಮೂಲಕವಾಗಿ. ವೇದ್ ಎನ್ನುವುದು ಜ್ಞಾನಿ ಎನ್ನುವ ಅರ್ಥದಲ್ಲಿಯೂ ಬಳಸಲಾಗುತ್ತಿದೆ. 2. ಸರ್ವಜ್ಞನಾಗಿದ್ದನು, 3. ಮುಂದೆ ಬರಬಹುದಾದ ವಿಪ್ಪತ್ತನ್ನು ಗ್ರಹಿಸಿ ಅದಕ್ಕೆ ತಕ್ಕ ಪರಿಹಾರವನ್ನು ಮೊದಲೇ ಕೈಗೊಳ್ಳುತ್ತಿದ್ದನು. (Pro Active), 4, ಮಹಾತೇಜಸ್ವಿಯು, 5, ಪೌರಜಾನಪದಪ್ರಿಯ – ಆತ ನಗರವಾಸಿ ಮತ್ತು ಗ್ರಾಮವಾಸಿಗಳಿಗೂ ಪ್ರೀತಿಪಾತ್ರ ದೊರೆಯಾಗಿದ್ದನು. ಆತನ ಮಿತ್ರರಲ್ಲಿ ಕೇವಲ ಕ್ಷತ್ರಿಯರು ಮಾತ್ರ ಇರದೇ ಗುಹನಂತಹ ಬೇಡರು, ಜಟಾಯು, ಸಂಪಾತಿಯಂತಹ ಪಕ್ಷಿಗಳೂ ಸಹ ಸೇರಿದ್ದರು. ಎಲ್ಲರನ್ನೂ ಸಮಭಾವ ಸಮಚಿತ್ತದಿಂದ ಆದರಿಸುವ ದೊರೆ ಆತ ಆಗಿದ್ದನು. 6. ಇಕ್ಷ್ವಾಕುವಂಶವೆಂದರೆ ಆ ಕಾಲದ ಶ್ರೇಷ್ಠ ವಂಶವಾಗಿತ್ತು. ಮನುವಿನಿಂದ ದಶರಥನ ವರೆಗೆ ಸುಮಾರು ಎಪ್ಪತ್ತು ರಾಜರುಗಳು ಈ ವಂಶವನ್ನು ಆಳಿಹೋಗಿದ್ದರು. ಈ ಸಂಖ್ಯೆ ನಿಖರವಲ್ಲ, ವಿವಿಧ ರಾಮಾಯಣದಲ್ಲಿ ಅನೇಕ ವಿಧಗಳಲ್ಲಿ ವಿವರಿಸಲಾಗಿದೆ. ಆದರೂ ಬಲು ದೀರ್ಘವಾದ ಶೂರರ ಪರಂಪರೆಯನ್ನು ಈ ವಂಶ ಹೊಂದಿತ್ತು. ಅಂತಹ ಇಕ್ಷಾಕುಗಳಲ್ಲಿಯೇ ಅತಿರಥನೆನ್ನುವ ಖ್ಯಾತಿಯನ್ನು ಧಶರಥ ಹೊಂದಿದ್ದನು. ಹತ್ತುಸಾವಿರ ಮಹಾರಥಿಗಳನ್ನು ಏಕಾಂಗಿಯಾಗಿ ಎದುರಿಸುವ ಸಾಮರ್ಥ್ಯ ಆತನಿಗಿತ್ತು. 7. ಲೋಕದಲ್ಲಿ ಶ್ರೇಷ್ಠವೆನಿಸಿದ ಯಾಗಗಳನ್ನೆಲ್ಲವನ್ನೂ ದಶರಥ ನೆರವೇರಿಸಿದ್ದನು. ರಾಜಸೂಯ ಯಾಗವನ್ನೂ ಮಾಡಿದ್ದ ಎನ್ನುವುದನ್ನು ಸೀತೆ ಚಿತ್ರಕೂಟದಲ್ಲಿ ದಶರಥನ ಗುಣಗಳನ್ನು ನೆನೆದು ದುಃಖಿಸುವಾಗ ಹೇಳುತ್ತಾಳೆ. 8. ಆತ ಧರ್ಮರಥ ಅಂದರೆ ಸದಾ ಕಾಲ ಧರ್ಮದಲ್ಲಿ ತನ್ನ ಬುದ್ಧಿಯನ್ನು ಸ್ಥಿರವಾಗಿ ಇಟ್ಟವನಾಗಿದ್ದನು, 9. ದಕ್ಷ ಆಡಳಿತದ ಮೂಲಕ ಪ್ರಜೆಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದನು. ಪ್ರಜೆಗಳಿಗೆ ಅನುಕೂಲವಾಗುವಂತೆ ಕೆರೆ, ಬಾವಿಗಳನ್ನು ತೋಡಿಸಿದ ಪ್ರಜಾನುರಾಗಿ ದೊರೆಯಾಗಿದ್ದನು. 10. ಕ್ಷತ್ರಿಯ ಧರ್ಮಗಳನ್ನು ನುರಿತವನಾದರೂ ಧರ್ಮದ ವಿಷಯದಲ್ಲಿ ಮಹರ್ಷಿಗಳಿಗೆ ಸಮನಾಗಿದ್ದನು. ಮಹರ್ಷಿಕಲ್ಪನೆನ್ನುವ ಗೌರವಕ್ಕೆ ಪಾತ್ರನಾಗಿದ್ದನು. 11. ಆತ್ಮಬಲ, ತೇಜೋ ಬಲ ಮತ್ತು ಜ್ಞಾನಬಲವುಳ್ಳವನಾಗಿದ್ದನು. ಈ ಕಾರಣಕ್ಕೆ ಮೂರು ಲೋಕದಲ್ಲಿಯೂ ಕೀರ್ತಿಯನ್ನು ಗಳಿಸಿಕೊಂಡಿದ್ದನು. ಶತ್ರುಗಳನ್ನು ನಿಗ್ರಹಮಾಡುವ ಆತನ ಸಾಮರ್ಥ್ಯದ ಕಾರಣದಿಂದ ಆತನನ್ನು ನಿಹತಾಮಿತ್ರನೆಂದು ಕರೆಯುತ್ತಾರೆ. ಸದ್ವಂಶದಲ್ಲಿ ಜನಿಸಿದವರನ್ನು ಮತ್ತು ಸುಗುಣ ಸಂಪನ್ನರನ್ನು ತನ್ನ ಸ್ನೇಹಿತರನಾಗಿಸಿಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ. 12. ಮನುಷ್ಯರು ಪಾಲಿಸಬೇಕಾದ ದೇವಋಣ, ಪಿತೃ ಋಣ, ಋಷಿ ಋಣಗಳೆನ್ನುವ ಮೂರು ಋಣಗಳ ಜೊತೆಗೆ ಕ್ಷತ್ರಿಯರು ಪಾಲಿಸಬೇಕಾದ ವಿಪ್ರಋಣ ಮತ್ತು (ಬ್ರಾಹ್ಮಣರಿಗೆ ದಾನಧರ್ಮಮಾಡುವ ಮೂಲಕ) ಅತ್ಮಋಣ – ವಿಹತವಾದ ಸುಖಭೋಗಗಳನ್ನು ಅನುಭವಿಸುವುದು ಇವುಗಳನ್ನು ಆತ ಸದಾಕಾಲದಲ್ಲಿಯೂ ಪಾಲಿಸುತ್ತಿದ್ದನು. 13. ಧನ ಮತ್ತು ಅನರ್ಘ್ಯವಾದ ವಸ್ತುಗಳ ಸಂಗ್ರಹಣೆಯಲ್ಲಿ ಆತ ಕುಬೇರ ಮತ್ತು ಇಂದ್ರನಿಗೆ ಸಮನಾದ ದೊರೆಯೆನಿಸಿದ್ದನು. 14. ಹಿಂದೆ ವೈವಸ್ವತ ಮನುವು ಮಹಾ ತೇಜಸ್ಸಿನಿಂದ ಕೂಡಿದವನಾಗಿ ಲೋಕವನ್ನು ಹೇಗೆ ರಕ್ಷಣೆಯನ್ನು ಮಾಡುತ್ತಿದ್ದನೋ ಅದೇ ರೀತಿಯಲ್ಲಿ ಮಾನವಕುಲಾವತಂಸನಾದ ದಶರಥನೂ ಅಯೋಧ್ಯೆಯಲ್ಲಿ ಸತ್ಯವ್ರತನಾಗಿ ಧರ್ಮಾರ್ಥಕಾಮಗಳೆಂಬ ಪುರುಷಾರ್ಥವನ್ನು ಅನುಸರಿಸುತ್ತಾ ಅಮರಾವತಿಯನ್ನು ಪಾಲನೆ ಮಾಡುತ್ತಿದ್ದ ಇಂದ್ರನಂತೆಯೆ ಶೋಭಿಸುತ್ತಿದ್ದನು.

ಭಗವಂತ ತನ್ನ ಅವತಾರಕ್ಕಾಗಿ ಒಂದು ಕ್ಷೇತ್ರವನ್ನು ಆಯ್ದುಕೊಳ್ಳುವಾಗ ದುರ್ಬಲರಾದವರನ್ನು ಆಯ್ಕೆ ಮಾಡಿಕೊಂಡರೆ ಕಾವ್ಯ ವೈಕಲತೆಯಿಂದ ಸೊರಗುತ್ತದೆ. ವಾಲ್ಮೀಕಿಯಲ್ಲಿ ಈ ಪ್ರಜ್ಞೆ ಸದಾ ಜಾಗ್ರತವಾಗಿದೆ. ರಾಮಾಯಣ ಮಹಾ ಕಾವ್ಯವಾಗುವ ಜೊತೆಗೆ ಸನಾತನ ಪರಂಪರೆಯ ಇತಿಹಾಸವೂ ಆಗಿದೆ. ಶಾಸ್ತ್ರಗಳಲ್ಲಿ ಧರ್ಮವನ್ನು ಮಂತ್ರಗಳ ಮೂಲಕ ಹೇಳುತ್ತಾರೆ. ಈ ಮಂತ್ರಗಳ ಅರ್ಥವನ್ನು, ಸೃಷ್ಟಿ, ಸಂಹಾರ, ಅವುಗಳನ್ನು ವಿನಿಯೋಗಿಸುವ ವಿಧಾನವನ್ನು ವಿವರಿಸುವುದೇ ಬ್ರಾಹ್ಮಣಗಳು. ಇದು ಕಾವ್ಯಕ್ಕೆ ಬಂದಾಗ ಪ್ರಕ್ರಿಯಾ, ಉಪೋದ್ಘಾತ, ಅನುಸಂಗ ಮತ್ತು ಉಪಸಂಹಾರ ಹೀಗೆ ನಾಲ್ಕು ಬಗೆಗಳಿವೆ. ಈ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಂಡಾಗ ದಶರಥನ ಶ್ರೇಷ್ಠತೆಯನ್ನು ಮನಗಾಣ ಬಹುದಾಗಿದೆ.

ದಶರಥನ ರಾಜ್ಯಭಾರ –

ಆಡಳಿತದ ವಿಷಯದಲ್ಲಿ ದಶರಥ ಸಮರ್ಥ ಆಡಳಿತಗಾರನಾಗಿದ್ದ. ಆತನ ಕಾಲದಲ್ಲಿ ಪ್ರಜೆಗಳು ನಿತ್ಯಸಂತುಷ್ಟರಾಗಿದ್ದರು. ಎಲ್ಲರೂ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ತಮಗೆ ಸಿಕ್ಕಿದುದರಲ್ಲಿಯೇ ನಿತ್ಯತೃಪ್ತಿಯನ್ನು ಹೊಂದಿದ್ದರು. ಅಯೋಧ್ಯೆಯಲ್ಲಿ ವಿಶೇಷ ಕಾಮಾಸಕ್ತರಾಗಲಿ, ಕ್ರೂರಕರ್ಮಿಗಳಾಗಲಿ, ಅಜ್ಞರಾಗಲಿ, ನಾಸ್ತಿಕರಾಗಲಿ, ದರಿದ್ರರಾಗಲಿ ಇರಲಿಲ್ಲ. ಅಯೋಧ್ಯೆಯ ವರ್ಣನೆಯನ್ನು ಮಾಡುವಾಗ ದಶರಥನ ಸೇನೆ ಮತ್ತು ಅಯೋಧ್ಯೆಯ ಜನರ ಗುಣಸ್ವಭಾವವನ್ನು ವಿವರಿಸಿದ್ದೇನೆ. ಯಾವುದೇ ರಾಜನ ಆಡಳಿತ ಬಿಗಿಯಾಗಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರ ವರ್ಗ ದಕ್ಷತೆಯಿಂದ ಕೂಡಿರಬೇಕು, ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು. ದಶರಥನಿಗೆ ಸಹಾಯಮಾಡಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಸದಾ ಕಾರ್ಯತತ್ಪರರಾದ ಮತ್ತು ಪರರ ಮನಸ್ಸಿನಲ್ಲಿರುವ ವಿಷಯಗಳನ್ನು ಅವರ ಮುಖಭಾವದಿಂದಲೇ ತಿಳಿಯಬಲ್ಲ ಇಂಗಿತಜ್ಞರಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳು ಆತನ ಆಸ್ಥಾನದಲ್ಲಿ ಇದ್ದರು. ಅವರು ವಂಶಪರಂಪರೆಯಿಂದ ಬಂದವರು ಎನ್ನುವ ಕಾರಣಕ್ಕಾಗಿ ತಮ್ಮ ಹುದ್ದೆಯಲ್ಲಿ ಇದ್ದವರಲ್ಲ. ಹಾಗಂತ ರಾಜಕಾರಣಕ್ಕೆ ಹೊಸಬರೂ ಆಗಿರಲಿಲ್ಲ.

king dasharatha

ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣ ಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ. ದಶರಥನ ಈ ಅಷ್ಟ ಮಂತ್ರಿಗಳು ರಾಜದ್ರೋಹ-ಪ್ರಜಾದ್ರೋಹ-ಸ್ವಾರ್ಥಗಳಿಂದ ಮುಕ್ತರಾಗಿದ್ದರು. ರಾಮನನ್ನು ಅರಣ್ಯಕ್ಕೆ ಕಳಿಸು ಎನ್ನುವ ಸಂದರ್ಭದಲ್ಲಿ ಸುಮಂತ್ರ ರಾಜನ ಎದುರಿಗೇ ಕೈಕೇಯನ್ನು ದೂಷಿಸುವಾಗ ಮತ್ತು ವಶಿಷ್ಠರು ಆಕೆಯನ್ನು ಕಟುವಾಗಿ ನಿಂದಿಸುವಾಗ ಅವರ ರಾಜನಿಷ್ಟೆ, ನಿಸ್ವಾರ್ಥಪರತೆ ಎದ್ದು ಕಾಣುತ್ತದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಅವರೆಲ್ಲ ವಿದ್ಯಾವಿನೀತಾ- ಎಲ್ಲ ವಿಷಯಗಳಲ್ಲಿಯೂ ಪಾರಂಗತರಾಗಿದ್ದರು. ಹಿಮನ್ತಃ-ಅಕಾರ್ಯವನ್ನು ಮಾಡಲು ಲಜ್ಜೆಪಡುತ್ತಿದ್ದರು, ಕುಶಲಾ-ನೀತಿಶಾಸ್ತ್ರ ಕೋವಿದರು, ನಿಯತೇಂದ್ರಿಯಾ-ಇಂದ್ರಿಯ ನಿಗ್ರಹವನ್ನು ಸ್ಥಾಪಿಸಿದವರು, ಶ್ರೀಮನ್ತಃ – ಭಾಗ್ಯಸಂಪನ್ನರು, ನೀತಿ ಶಾಸ್ತ್ರ ಬಲ್ಲವರು, ದೃಢವಿಕ್ರಮಿಗಳು, ಕೀರ್ತಿವಂತರು, ಪ್ರಣಿಹೀತಾ-ಕೊಟ್ಟಮಾತಿನಂತೆ ನಡೆಯುವವರು, ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯುಳ್ಳವರು, ಸದಾ ನಗುಮುಖದಿಂದಲೇ ಮಾತನಾಡುತ್ತಾ ಎದುರಿನಲ್ಲಿರುವವರ ಅಂತರಂಗವನ್ನು ಶೋಧಿಸುವಂತವರು, ಆಡಿದ ಮಾತಿನಂತೆ ನಡೆಯುವವರು-ಯಥಾವಚನಕಾರಿಣಃ ಹೀಗೆ ರಾಜಕಾರಣದ ಸಮಗ್ರವನ್ನು ಅರ್ಥಮಾಡಿಕೊಂಡವರಾಗಿದ್ದರು. ತಮ್ಮ ಮಕ್ಕಳೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವಂತಹ ದಂಡಕೋವಿದರಾಗಿದ್ದರು.. ಹಾಗಂತ ಇವರನ್ನು ನೇಮಿಸಿಕೊಳ್ಳುವಾಗ ಸುಖಾಸುಮ್ಮನೆ ನೇಮಿಸಿಕೂಳ್ಳಲಿಲ್ಲ. ಅವರ ರಾಜನಿಷ್ಠೆಯನ್ನು ಚನ್ನಾಗಿ ಪರೀಕ್ಷಿಸಿದ–ಸೌಹ್ಯದೇಷು ಪರೀಕ್ಷಿತಾಃ, ನಂತರವೇ ಅವರನ್ನು ಆಯಾ ಹುದ್ಧೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿತ್ತು. ದಶರಥ ನಿಧನನಾದಾಗ ಭರತನನ್ನು ಕರೆತರಲು ಹೋದವರಲ್ಲಿ ಅಶೋಕ ಮತ್ತು ವಿಜಯ ಪ್ರಮುಖರಾದವರು. ಆಗ ಅವರು ಭರತ ಎಷ್ಟೇ ಒತ್ತಾಯಿಸಿದರೂ ಅಯೋಧ್ಯೆಯಲ್ಲಿ ಏನಾಗಿದೆ ಎನ್ನುವುದನ್ನು ಹೇಳದೇ ಆತನನ್ನು ಅಯೋಧ್ಯೆಗೆ ಕರೆತರುವಲ್ಲಿ ನಡೆಸಿದ ಕಾರ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಪ್ರಾಚೀನ ಕಾಲದಲ್ಲಿ ಧಾರ್ಮಿಕ ವಿಚಾರದಲ್ಲಿಯೂ ರಾಜನ ಆಸ್ಥಾನದಲ್ಲಿ ತುಂಬಾ ಮಹತ್ವವಿತ್ತು. ಈ ಪುರೋಹಿತ ವರ್ಗ ತಮಗಾಗಿ ಏನನ್ನೂ ಬಯಸುತ್ತಿರಲಿಲ್ಲ. ರಾಜ ತಪ್ಪಿ ನಡೆದಾಗ ಆತನನ್ನು ಎಚ್ಚರಿಸಿ ಅಗತ್ಯಬಿದ್ದರೆ ಆತನನ್ನು ಅಧಿಕಾರದಿಂದ ಇಳಿಸುವ “ಧರ್ಮದಂಡ್ಯೋಸಿ” ಧರ್ಮದಂಡವನ್ನು ಹೊಂದಿದ್ದರು. ವಶಿಷ್ಠ ಮತ್ತು ವಾಮದೇವರೆನ್ನುವ ಇಬ್ಬರು ಪುರೋಹಿತರಾಗಿ ಅಯೋಧ್ಯೆಯ ಹಿತವನ್ನು ಸದಾಕಾಲವೂ ಬಯಸಿದ್ದರು. ವಸಿಷ್ಠರೂ ಸಹ ನಿಷ್ಟುರವಾದಿಗಳು. ತ್ರಿಶಂಕು ತನಗಾಗಿ ಇಂದ್ರಪದವಿಯ ಯಜ್ಞವನ್ನು ಮಾಡಿ ಎಂದಾಗ ನಿಷ್ಟುರವಾಗಿ ತಿರಸ್ಕರಿಸಿದ್ದರು. ಶಶಾದನೆನ್ನುವವ ಇಕ್ಷ್ವಾಕುವಿನ ಮಗ. ಆತ ನಡತೆ ತಪ್ಪಿದಾಗ ಆತನಿಗೆ ಶಿಕ್ಷೆ ವಿಧಸಲೇಬೇಕು ಎಂದು ಇಕ್ಷ್ವಾಕುವಿಗೆ ಹೇಳಿದವರು. ಇಲ್ಲಿ ನೆನಪಿಡಬೇಕಾದದ್ದು ವಸಿಷ್ಠನೆನ್ನುವುದು ಒಂದು ಪರಂಪರೆ. ವಂಶವಾಹಿನಿ. ಶಂಕರಪೀಠವನ್ನೇರುವ ಎಲ್ಲರೂ ಶಂಕರಾಚಾರ್ಯರು ಎಂದು ಕರೆಯಿಸಿಕೊಳ್ಳುವ ಹಾಗೆ, ಆಗಿನ ಕಾಲದಲ್ಲಿ ಬ್ರಹ್ಮರ್ಷಿಗಳನ್ನು ಅದೇ ಹೆಸರಿನಿಂದ ಕರೆಯಲಾಗುತ್ತಿತ್ತು ಎನ್ನಬಹುದು. ನಂತರ ಇದೇ ಗೋತ್ರವಾಗಿ ಬದಲಾಗಿರಬೇಕು. ಹೀಗೆ ಒಂದು ಪ್ರಬಲ ರಾಜ್ಯವೊಂದರ ಅಧಿಕಾರಿಯಾಗಿ ದಶರಥ ಆಳುತ್ತಿದ್ದ. ರಾಮನಂತವ ಅವತರಿಸಬೇಕಾದ ಕ್ಷೇತ್ರಕ್ಕೆ ಆ ಕಾಲದಲ್ಲಿ ಭೂಮಂಡಲದಲ್ಲಿ ಇದಕ್ಕಿಂತ ಮತ್ತೊಂದು ಯುಕ್ತವಾದ ಮನೆತನವಿರಲಿಲ್ಲವೆನ್ನುವುದನ್ನು ವಾಲ್ಮೀಕಿ ಇಲ್ಲಿ ತಿಳಿಸುತ್ತಾನೆ.

ಮುಂದಿನ ಸಂಚಿಕೆಯಲ್ಲಿ ಆತನ ವ್ಯಕ್ತಿತ್ವದ ವಿಶೇಷಗಳ ಕುರಿತು ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾವತಾರಕ್ಕೊಂದು ಪೀಠಿಕಾ ಪ್ರಕರಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Cow Smuggling : ಗೋವು ಸಾಗಿಸುತ್ತಿದ್ದವರಿಂದ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಗಂಭೀರ ಹಲ್ಲೆ

Cow Smuggling : ಟಂ ಟಂ‌ ಹಾಗೂ ಪಿಕ್ ವಾಹನದ ಮೂಲಕ ಸಾಗಿಸಲಾಗುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಘಟನೆಯಲ್ಲಿ ರಮೇಶ್ ದೇಸಾಯಿ, ಹಾಗೂ ಮಹಾದೇವ್ ಎನ್ನುವರಿಗೆ ಗಾಯವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

cow smuuggling
Koo

ಕಲಬುರಗಿ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಆರು ಗೋವುಗಳ ರಕ್ಷಣೆ ಮಾಡಲು(Cow Smuggling) ಮುಂದಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣ ಗುರುವಾರ ರಾತ್ರಿ ನಡೆದಿದೆ. ಗೋವುಗಳನ್ನು ಸಾಗಿಸುತ್ತಿದ್ದನ್ನು ತಡೆದಿದ್ದಕ್ಕೆ‌ 30ರಿಂದ 35 ಮುಸ್ಲಿಂ ಯುವಕರು ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ಮಾಡಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಲಬುರಗಿ ನಗರದ ಖಾದ್ರಿ ಚೌಕ್ ಬಳಿ ಘಟನೆ. ನಡೆದಿದ್ದು, ರಾಮ ಸೇನೆ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಕಲ್ಲು ತೂರಾಟ ನಡೆದಿದೆ ಎಂಬುದಾಗಿ ದೂರಿನಲ್ಲಿ ದಾಖಲಾಗಿದೆ. ಬಕ್ರಿದ್ ಹಬ್ಬದ ಹಿನ್ನಲೆಯಲ್ಲಿ ಖಾದ್ರಿ ಚೌಕ್ ಬಳಿ‌ ಕಸಾಯಿ ಖಾನೆಗೆ‌ ಗೋವುಗಳನ್ನು ಸಾಗಿಸುತ್ತಿದ್ದರು. ಆಳಂದ ಕಾಲೋನಿ ಬಳಿ ಒಂದು ಟಂ ಟಂ‌ ಹಾಗೂ ಪಿಕ್ ವಾಹನದ ಮೂಲಕ ಸಾಗಿಸಲಾಗುತ್ತಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲುಗಳನ್ನು ತೂರಿದ್ದಾರೆ. ಘಟನೆಯಲ್ಲಿ ರಮೇಶ್ ದೇಸಾಯಿ, ಹಾಗೂ ಮಹಾದೇವ್ ಎನ್ನುವರಿಗೆ ಗಾಯವಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಚೌಕ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲೂ ಹಲ್ಲೆ, ಪ್ರತಿಭಟನೆ

ಗೋವು ಸಾಗಿಸುತ್ತಿದ್ದನ್ನು ಪ್ರಶ್ನಿಸಿದ ಬಜರಂಗ ದಳ ಕಾರ್ಯಕರ್ತನ ಮೇಲೆ ಮುಸ್ಲಿಮರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಘಟನೆ ಬಳಿಕೆ ಇಲ್ಲಿನ ಉಪನಗರ ಠಾಣೆಗೆ ಹಿಂದೂಪರ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಸೋಮಶೇಖರ ಚೆನ್ನಶೆಟ್ಟಿ ಹಲ್ಲೆಗೊಳಗಾದ ಯುವಕ. ಗೋ ರಕ್ಷಣೆ ಮಾಡಲು ಹೋದಾಗ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ನಗರದ ಹಳೆ ಎಪಿಎಂಸಿ ಬಳಿ ಘಟನೆ ನಡೆದಿದ್ದು, ಪ್ರಾಣಿ ರಕ್ಷಕನೂ ಆಗಿರೋ ಸೋಮಶೇಖರನ ಮೇಲಿನ ಹಲ್ಲೆಯನ್ನು ಖಂಡಿಸಲಾಗಿದೆ. ಉರಗ ರಕ್ಷಕನೂ ಆಗಿರೋ ಸೋಮಶೇಖರ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇದನ್ನೂ ಓದಿ: Road Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಸ್ಥಳದಲ್ಲೇ ನಾಲ್ಕು ಮಂದಿ ಸಾವು

ಪ್ರತಿಭಟನೆ ಬಳಿಕ ವಿಧಾನ ಸಭೆ ವಿಪಕ್ಷ ಉಪನಾಯಕರ ಅರವಿಂದ ಬೆಲ್ಲದ್ ಮಾತನಾಡಿ, ಶಾಂತ ಧಾರವಾಡದಲ್ಲಿ ಇವತ್ತು ಇನ್ನೊಂದು ದುರ್ಘಟನೆ ಆಗಿದೆ. ಬಕ್ರೀದ್ ಸಮಯದಲ್ಲಿ ಹಸುಗಳನ್ನು ಕಡಿಯಲು ಉದ್ದೇಶಿಸಿದ್ದರು. ಇಂತಿಷ್ಟು ವಯಸ್ಸಾದ್ರೆ ಮಾತ್ರ ವಧೆ ಮಾಡುವ ಅವಕಾಶವಿದೆ. ಆದರೆ, ಚಿಕ್ಕವಯಸ್ಸಿನ ಹಸು ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಯುವಕ ಹಲ್ಲೆ ಮಾಡಿದ್ದಾರೆ.

ಸೋಮಶೇಖರ್ ಚನ್ನಶಟ್ಟಿ ಎಲ್ಲ ಪ್ರಾಣಿ, ಜೀವಿಗಳ ರಕ್ಷಣೆ ಮಾಡುತ್ತಾರೆ. ಪ್ರಾಣಿ ಪಕ್ಷಿಗಳಿಗೆ ತೊಂದರೆಯಾದರೆ ಚಿಕಿತ್ಸೆ ಕೊಡಿಸುತ್ತಾರೆ. ಬೇಫಾರಿ ಎಂಬ ಕಸಾಯಿಖಾನೆ ಮಾಲೀಕ ಹಲ್ಲೆ ಮಾಡಿದ್ದಾನೆ. ಅವನ ಜೊತೆಗೆ 50-60 ಜನ ಸೇರಿ ಹಲ್ಲೆ ಮಾಡಿದ್ದಾರೆ. ಕಿವಿ ಕತ್ತರಿಸುವಂತೆ ಹೊಡೆದಿದ್ದಾರೆ. ಘಟನೆ ಆಗಿ ಮೂರುವರೆ ಗಂಟೆಯಾದರೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಹೀಗಾಗಿ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ಈಗ ಪೊಲೀಸ್ ಆಯುಕ್ತರು ಕ್ರಮದ ಭರವಸೆ ನೀಡಿದ್ದಾರೆ. ಅರ್ಧ ತಾಸಿನಲ್ಲಿ ಎಫ್.ಐಆರ್ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಈಗ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾಎ.

ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿಕೆ ನೀಡಿ, ಜಾನುವಾರು ವಿಚಾರವಾಗಿ ಎರಡು ಕೋಮಿನವರ ಮಧ್ಯೆ ಗಲಾಟೆಯಾಗಿದೆ. ಒಂದು ಕೋಮಿನವರು ದೂರು ಕೊಟ್ಟಿದ್ದಾರೆ. ಗಂಭೀರ ಹಲ್ಲೆಯ ದೂರು ಕೊಟ್ಟಿದ್ದಾರೆ. ಇದರ ಪ್ರಕಾರ ಎಫ್​ಐಆರ್​ ದಾಖಲಿಸಲಾಗಿದೆ. ದೂರಿನಲ್ಲಿ ಇಬ್ಬರು ಮತ್ತು ಒಂದಷ್ಟು ಹತ್ತು ಜನರು ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಹಲ್ಲೆಯಾದ ಏರಿಯಾದಲ್ಲಿ ಸಿಸಿಟಿವಿಗಳಿವೆ. ಅದು ಎಪಿಎಂಸಿ ಯಾರ್ಡ್ ಇದೆ. ಅದನ್ನೆಲ್ಲ‌ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Road Accident : ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಸ್ಥಳದಲ್ಲೇ ನಾಲ್ಕು ಮಂದಿ ಸಾವು

Road Accident : ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Chitradurga News
Koo

ಚಿತ್ರದುರ್ಗ : ಶನಿವಾರ ಮುಂಜಾನೆ ವೇಳೆಗೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಹಾದು ಹೋಗುವ NH 4 ರಲ್ಲಿ ಭೀಕರ ಅಪಘಾತ(Road Accident) ನಡೆದಿದೆ. ನ್ಯಾಷನಲ್​ ಹೈವೇನಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಂದ ಲಾರಿಯೊಂದು ರಭಸದಿಂದ ಗುದ್ದಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಇರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಶನಿವಾರವಾಗಿದ್ದ ಕಾರಣ ಮುಂಜಾನೆ ತಮ್ಮ ಪ್ರಯಾಣ ಆರಂಭಿಸಿರಬಹುದು ಎಂದು ಹೇಳಲಾಗಿದೆ. ನಿಗದಿತ ಕಾರ್ಯಕ್ರಮವನ್ನು ಉದ್ದೇಶವಾಗಿಟ್ಟುಕೊಂಟು ಅವರು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದರೆ ಯಮಧರ್ಮರಾಯನಂತೆ ನುಗ್ಗಿದ ಲಾರಿಯು ಹಿಂಬದಿಂದ ಜೋರಾಗಿ ಗುದ್ದಿದೆ. ದೊಡ್ಡ ಲಾರಿಯು ಗುದ್ದಿದ ರಭಸಕ್ಕೆ ಕಾರಿನ ಹಿಂಭಾಗದಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಈ ವೇಳೆ ಹಿಂಬದಿ ಸೀಟಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರಿಬ್ಬರು ಅಲ್ಲೇ ಮೃತಪಟ್ಟಿದ್ದಾರೆ. ಮುಂಬದಿ ಸೀಟು ಹಾಗೂ ಮಧ್ಯದಲ್ಲ ಕುಳಿತಿದ್ದವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಡಿವೈಡರ್ ಕಲ್ಲುಗಳಿಗೆ ಬಡಿದು ಕಾರು ಪಲ್ಟಿ

ರಸ್ತೆ ಮಧ್ಯೆ ಇಟ್ಟಿದ್ದ ಕಲ್ಲಿಗೆ ಕಾಣದೇ ಗುದ್ದಿದ ಕಾರೊಂದು ಪಲ್ಟಿಯಾ ಘಟನೆ ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ತೀವ್ರ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: Namma Metro : ಮೆಟ್ರೊ ಪ್ರಯಾಣಿಕರೆ ಗಮನಿಸಿ;ಮಧ್ಯಾಹ್ನ1 ಗಂಟೆವರೆಗೆ ಚಲ್ಲಘಟ್ಟದಿಂದ ಕೆಂಗೇರಿ ತನಕ ಸೇವೆ ಇಲ್ಲ

ಮಣಿಪಾಲದಿಂದ ಉಡುಪಿಯತ್ತ ಬರುತ್ತಿದ್ದ ಫೋರ್ಡ್ ಫಿಗೊ ಕಾರು ರಸ್ತೆ ಮಧ್ಯದಲ್ಲಿ ನಿರ್ಲಕ್ಷ್ಯದಿಂದ ಇಡಲಾಗಿದ್ದ ಕಲ್ಲಿಗೆ ಗುದ್ದಿದೆ. ಕಾರು ಡಿವೈಡರ್ ಕಲ್ಲಿಗೆ ಡಿಕ್ಕಿ ಹೊಡೆದ ತಕ್ಷಣ ಕಲ್ಲಿನ ತುಂಡೊಂದು ಹಾರಿ ಸಮೀಪದಲ್ಲಿ ಹೋಗುತ್ತಿದ್ದ ಹಾರಿ ಬೈಕ್ ಗೂ ತೀವ್ರ ಹಾನಿಯಾಗಿದೆ. ಆದರೆ, ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆ ಮಧ್ಯೆ ವಿಭಜಕವನ್ನು ನಿರ್ಮಿಸಲು ಬಳಸುತ್ತಿದ್ದ ಕಲ್ಲುಗಳನ್ನು ಎಲ್ಲೆಂದರಲ್ಲಿ ಇಡಲಾಗಿತ್ತು. ಮುಂಜಾನೆ ವೇಳೆ ಹೆಡ್​ ಲೈಟ್ ಪ್ರಭಾವಕ್ಕೆ ಕಲ್ಲುಗಳು ಇರುವುದನ್ನು ಅರಿಯದ ಚಾಲಕ ಅದಕ್ಕೆ ಡಿಕ್ಕಿ ಹೊಡೆದಿದ್ದಾನೆ.

Continue Reading

ಪ್ರಮುಖ ಸುದ್ದಿ

Namma Metro : ಮೆಟ್ರೊ ಪ್ರಯಾಣಿಕರೆ ಗಮನಿಸಿ; ಜೂನ್​ 17ರಂದು 1 ಗಂಟೆವರೆಗೆ ಚಲ್ಲಘಟ್ಟದಿಂದ ಕೆಂಗೇರಿ ತನಕ ಸೇವೆ ಇಲ್ಲ

Namma Metro: ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯ ಲಭ್ಯವಿರುವುದಿಲ್ಲ. ರೈಲು ಸೇವೆಗಳು ಮಧ್ಯಾಹ್ನ 1 ಗಂಟೆಯ ನಂತರ ವೇಳಾಪಟ್ಟಿಯ ಪ್ರಕಾರ ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ.

VISTARANEWS.COM


on

Namma Metro
Koo

ಬೆಂಗಳೂರು: ನಮ್ಮ ಮೆಟ್ರೊದಲ್ಲಿನ (Namma Metro) ನೇರಳೆ ಮಾರ್ಗದ ಚಲ್ಲಘಟ್ಟ ನಿಲ್ದಾಣದಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ಸೋಮವಾರ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಟ್ರೊ ರೈಲುಗಳು ಸಂಚರಿಸುವುದಿಲ್ಲ. ಈ ಮಾರ್ಗದ ರೈಲುಗಳನ್ನು ಅವಲಂಬಿಸಿರುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಈ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ದುರಸ್ತಿಗಾಗಿ ನಮ್ಮ ಮೆಟ್ರೊ ರೈಲು ಪ್ರಾಧಿಕಾರ ಸೇವೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಸೋಮವಾರವಾಗಿರುವ ಕಾರಣ ಐಟಿ ಅಂದು ಕಚೇರಿ ಕೆಲಸಗಳು ಇರುತ್ತವೆ. ಹೀಗಾಗಿ ಈ ಮಾರ್ಗವನ್ನು ಅತಿ ಹೆಚ್ಚು ನಂಬಿಕೊಂಡವರು ಆದ್ಯತೆ ಮೇರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

ನಮ್ಮ ಮೆಟ್ರೊ ಕೊಟ್ಟಿರುವ ಪ್ರಕಟಣೆ ಈ ರೀತಿ ಇದೆ; ನೇರಳೆ ಮಾರ್ಗದಲ್ಲಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ದಿನಾಂಕ 17ನೇ ಜೂನ್ 2024 (ಸೋಮವಾರ) ರಂದು ನಿರ್ವಹಣೆ ಕೆಲಸ ನಡೆಯಲಿದೆ. ಹೀಗಾಗಿ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯ ಲಭ್ಯವಿರುವುದಿಲ್ಲ. ರೈಲು ಸೇವೆಗಳು ಮಧ್ಯಾಹ್ನ 1 ಗಂಟೆಯ ನಂತರ ವೇಳಾಪಟ್ಟಿಯ ಪ್ರಕಾರ ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ. ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತವೆ. ಪ್ರಯಾಣಿಕರ ಅನಾನುಕೂಲಕ್ಕೆ ವಿಷಾದಿಸುತ್ತೇವೆ.

ನಮ್ಮ ಮೆಟ್ರೊ ರೈಲುಗಳ ವ್ಯಾಪ್ತಿ ವಿಸ್ತರಣೆಗೊಂಡಿರುವ ಜತೆಯಾಗಿ ತಾಂತ್ರಿಕ ಸಮಸ್ಯೆಯೂ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಮೆಟ್ರೊ ರೈಲು ತಾಂತ್ರಿಕ ದೋಷದಿಂದ ನಿಂತು ಪ್ರಯಾಣಕರು ಅರ್ಧದಾರಿಯಲ್ಲೇ ಪರಿತಪಿಸಿದ್ದರು.

ಅಂದು ಏನಾಗಿತ್ತು?

ಜೂ.13ರಂದು ಬೆಳಗ್ಗೆ ಹಲವೆಡೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಎಂ.ಜಿ ರಸ್ತೆ ಸೇರಿದಂತೆ ಹಲವೆಡೆ ರೈಲು ಬರುವುದು ತಡವಾಗಿದ್ದವು. ಎಂಜಿ ರಸ್ತೆ, ಟ್ರಿನಿಟಿ, ಹಲಸೂರು ಸೇರಿದಂತೆ ಹಲವೆಡೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾದು ನಿಂತಿದ್ದರು. ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯದಿಂದ ರೈಲು ಬಾರದೇ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು.

ಇದನ್ನೂ ಓದಿ: Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

ಎಕ್ಸ್‌ ಮೂಲಕ ಬಿಎಂಆರ್‌ಸಿಎಲ್‌ಗೆ ಟ್ಯಾಗ್‌ ಮಾಡಿ ಮೆಟ್ರೋ ರೈಲು ವಿಳಂಬಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದರು. ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿತ್ತು.

ಮೆಟ್ರೋ ಸೇವೆಯಲ್ಲಿ ವ್ಯತ್ಯಯ ವಿಚಾರ ಕುರಿತು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿತ್ತು. ಗುರುವಾರ ಬೆಳಗ್ಗೆ 9.58 ಕ್ಕೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಮೆಜೆಸ್ಟಿಕ್‌ನಲ್ಲಿ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್ಗೆ ಸ್ಥಳಾಂತರಿಸಲಾಗಿದೆ. ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಬಹುದು. ಆದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಕೋರಿತ್ತು.

Continue Reading

ಪ್ರಮುಖ ಸುದ್ದಿ

G7 Summit : ನಿಮ್ಮ ಭೇಟಿಯಿಂದ ಸಂತೋಷವಾಗಿದೆ; ಅಮೆರಿಕ ಅಧ್ಯಕ್ಷ ಬೈಡೆನ್​ ಭೇಟಿ ಬಗ್ಗೆ ಮೋದಿ ಉತ್ಸಾಹ

G7 Summit : ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

VISTARANEWS.COM


on

G7 Summit
Koo

ಅಪುಲಿಯಾ: ಜಿ 7 ಶೃಂಗಸಭೆಯ (G7 Summit) ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ಇಟಲಿಯಲ್ಲಿ ಅಮರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಅನೌಪಚಾರಿಕವಾಗಿ ಭೇಟಿಯಾದರು. ಭಾರತ ಮತ್ತು ಯುಎಸ್ “ಜಾಗತಿಕ ಒಳಿತನ್ನು ಮತ್ತಷ್ಟು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತವೆ” ಈ ಭೇಟಿಯ ಬಳಿಕ ಮೋದಿ ಹೇಳಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪಿಎಂ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಯುಎಸ್ ಅಧ್ಯಕ್ಷರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷವಾಗಿದೆ ಎಂದು ಬರೆದಿದ್ದಾರೆ.

ಜೋ ಬೈಡೆನ್​, ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ಸಂತೋಷದ ಸಂಗತಿ. ಜಾಗತಿಕ ಒಳಿತಿಗಾಗಿ ಭಾರತ ಮತ್ತು ಯುಎಸ್ಎ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ” ಎಂದು ಪಿಎಂ ಮೋದಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಅಧ್ಯಕ್ಷ ಮ್ಯಾಕ್ರನ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ತಮ್ಮ ಸಭೆಯಲ್ಲಿ, ಪಿಎಂ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸುವ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ರಕ್ಷಣಾ ಸಹಯೋಗವು ಚರ್ಚೆಯಲ್ಲಿ ಪ್ರಮುಖ ವಿಷಯವಾಗಿತ್ತು. ಉಭಯ ನಾಯಕರು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಚರ್ಚೆಯ ಸಮಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಗಳ ವೃದ್ಧಿಗೂ ಆದ್ಯತೆ ನೀಡಲಾಯಿತು.

ಇದನ್ನೂ ಓದಿ: Narendra Modi: ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ; ಇಟಲಿ ಜಿ7 ಸಭೆಯಲ್ಲಿ ಮೋದಿ

ಜಿ 7 ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆವು. ಇಂಧನ, ರಕ್ಷಣೆ, ಸಂಶೋಧನೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ಅನ್ನು ಒಂದುಗೂಡಿಸುವ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಅವರಲ್ಲಿ ಅತ್ಯುತ್ಸಾಹವಿದೆ. ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದು ವರ್ಷದಲ್ಲಿ ನಾಲ್ಕನೇ ಭೇಟಿ

ಒಂದು ವರ್ಷದಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ಮೋದಿಯವರ ನಾಲ್ಕನೇ ಸಭೆ ಇದಾಗಿದೆ. ಯುವಕರಲ್ಲಿ ಸಂಶೋಧನಾ ಜಾಯಮಾನ ಉತ್ತೇಜಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದ್ದಾರೆ.

ಜಿ 7 ಶೃಂಗಸಭೆಯ ಹೊರತಾಗಿ ಪ್ರಧಾನಿ ಮೋದಿ ಅವರು ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು ಭೇಟಿಯಾದರು. ವಿಶೇಷವೆಂದರೆ, ಭಾರತವು ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಯಲ್ಲಿ ವಿದೇಶಿ ಆಹ್ವಾನಿತ ದೇಶವಾಗಿ ಭಾಗವಹಿಸಿದೆ.

ಜೂನ್ 13 ರಿಂದ 15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೊರ್ಗೊ ಎಗ್ನಾಜಿಯಾ ರೆಸಾರ್ಟ್​​ನಲ್ಲಿ ಶೃಂಗಸಭೆ ನಡೆದಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

Continue Reading
Advertisement
ESP vs CRO
ಕ್ರೀಡೆ10 mins ago

ESP vs CRO: ಯುರೋ ಕಪ್​ನಲ್ಲಿ ಇಂದು 2 ಪಂದ್ಯ; ಸ್ಪೇನ್‌ಗೆ ಸವಾಲೊಡ್ಡೀತೇ ಕ್ರೊವೇಷಿಯಾ?

Actor Darshan
ಕರ್ನಾಟಕ10 mins ago

Actor Darshan: ಇಂದೇ ಪರಪ್ಪನ ಅಗ್ರಹಾರ ಸೇರ್ತಾರ ದರ್ಶನ್‌, ಪವಿತ್ರಾ ಗೌಡ?

Actor Darshan continue as Agriculture Department ambassador What MB Patil said
ಸ್ಯಾಂಡಲ್ ವುಡ್47 mins ago

Actor Darshan: ಕೃಷಿ ಇಲಾಖೆ ರಾಯಭಾರಿ ಹುದ್ದೆಯಿಂದ ಕೊಲೆ ಆರೋಪಿ ದರ್ಶನ್‌ ವಜಾ!

Pakistan cricket team
ಕ್ರೀಡೆ49 mins ago

Pakistan Team Troll: ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಪಾಕ್​ಗೆ ಟ್ರೋಲ್​ಗಳ ಛಡಿಯೇಟು

Road Accident
ಕರ್ನಾಟಕ54 mins ago

Road Accident: ಬೆಂಗಳೂರು-ಮೈಸೂರು‌ ಎಕ್ಸ್‌ಪ್ರೆಸ್‌ ವೇಯಲ್ಲಿ ಸರಣಿ ಅಪಘಾತ; ಐದು ಕಾರುಗಳು ಜಖಂ

Importance Of Tilaka
ಧಾರ್ಮಿಕ55 mins ago

Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

Raveena Tandon sues man for Rs 100 crore for defamatory
ಬಾಲಿವುಡ್1 hour ago

Raveena Tandon: ರವೀನಾ ಟಂಡನ್ ವಿಡಿಯೊ ವೈರಲ್​ ಮಾಡಿದ ವ್ಯಕ್ತಿ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

Students Fall Sick
ಯಾದಗಿರಿ1 hour ago

Students Fall Sick: ಬಿಸಿಯೂಟ ಸೇವಿಸಿ ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆರೋಗ್ಯ ವಿಚಾರಿಸಿದ ಶಾಸಕ

RSA vs NEP
ಕ್ರೀಡೆ1 hour ago

RSA vs NEP: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ; ಗೆಲುವಿನ ಖಾತೆ ತೆರೆದ ಕಿವೀಸ್​

Actor Darshan Chandranna Family Members Want Anu To Attend Funeral
ಸ್ಯಾಂಡಲ್ ವುಡ್2 hours ago

Actor Darshan: ಎಷ್ಟೇ ದಿನ ಆದರೂ ಚಂದ್ರಣ್ಣನ ಶವ ಎತ್ತಲ್ಲ; ಅನು ತಂದೆ ನಿಧನಕ್ಕೆ ಸಂಬಂಧಿಕರ ಕಣ್ಣೀರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು18 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು18 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ19 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌