Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ - Vistara News

ಪ್ರಮುಖ ಸುದ್ದಿ

Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

Lok Sabha Election 2024: ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

VISTARANEWS.COM


on

lok sabha election 2024 voting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (voting) ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು.

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಂದು ಮತದಾನ ಮಾಡಲಿರುವ ರಾಜ್ಯಗಳು

ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 2 ಕ್ಷೇತ್ರಗಳು
ಅರುಣಾಚಲ ಪ್ರದೇಶದ 2 ಕ್ಷೇತ್ರಗಳು
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.

ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.

ಇದನ್ನೂ ಓದಿ: Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

ಮೊದಲ ಹಂತದ ಚುನಾವಣೆಯಲ್ಲಿನ ಹೈ ವೋಲ್ಟೇಜ್ ಕ್ಷೇತ್ರಗಳು

ಬಿಕಾನೆರ್: (ರಾಜಸ್ಥಾನ )
ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)

ಅಲ್ವಾರ್ : (ರಾಜಸ್ಥಾನ )
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

ಛಿಂದ್ವಾರಾ : (ಮಧ್ಯ ಪ್ರದೇಶ )
ವಿವೇಕ್ ಬಂಟಿ ಸಾಹು (ಬಿಜೆಪಿ)
ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ನಾಗ್ಪುರ :
ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)
ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)

ಅರುಣಾಚಲ ಪಶ್ಚಿಮ
ಕಿರಣ್ ರಿಜಿಜು (ಬಿಜೆಪಿ)
ನಬಮ್ ತುಕಿ (ಕಾಂಗ್ರೆಸ್)

ಕೊಯಮತ್ತೂರು:
ಗಣಪತಿ ರಾಜ್ ಕುಮಾರ್ (ಡಿಎಂಕೆ)
ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
ಕೆ ಅಣ್ಣಾಮಲೈ (ಬಿಜೆಪಿ)
ಪಿ.ಆರ್ ನಟರಾಜನ್ (ಸಿಪಿಎಂ)

ಚೆನ್ನೈ ದಕ್ಷಿಣ :
ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
ಜೆ ಜಯವರ್ಧನ್ (ಎಐಎಡಿಎಂಕೆ)
ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)

ನೀಲಗಿರಿ :
ಎ ರಾಜಾ (ಡಿಎಂಕೆ)
ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
ಎಲ್ ಮುರುಗನ್ (ಬಿಜೆಪಿ)

ಶಿವಗಂಗಾ:
ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
ಡಿ ದೇವನಾಥನ್ ಯಾದವ್ (ಬಿಜೆಪಿ)

ಚೆನ್ನೈ ಸೆಂಟ್ರಲ್:
ದಯಾನಿಧಿ ಮಾರನ್ (ಡಿಎಂಕೆ)
ಬಿ ಪಾರ್ಥಸಾರಥಿ (ಡಿಎಂಡಿಕೆ)
ವಿನೋಜ್ ಪಿ ಸೆಲ್ವಂ (ಬಿಜೆಪಿ)

ತಿರುವಳ್ಳೂರ್:
ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
ಕೆ ನಲ್ಲ ತಂಬಿ (DMDK)
ಪೊನ್ ವಿ ಬಾಲಗಣಪತಿ (ಬಿಜೆಪಿ)

ಪಿಲಿಭಿತ್ : (ಉತ್ತರ ಪ್ರದೇಶ )
ಜಿತಿನ್ ಪ್ರಸಾದ (ಬಿಜೆಪಿ)
ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಗಯಾ: (ಬಿಹಾರ್ )
ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
ಕುಮಾರ್ ಸರ್ವಜೀತ್ (ಆರ್ಜೆಡಿ)
ವಿಜಯ್ ಮಾಂಝಿ (ಜೆಡಿಯು)

ಜೋರ್ಹತ್ : (ಅಸ್ಸಾಂ )
ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
ಗೌರವ್ ಗೊಗೊಯ್ (ಕಾಂಗ್ರೆಸ್)

ಉತ್ತರಾಖಂಡ

ಹರಿದ್ವಾರ:
ವೀರೇಂದ್ರ ರಾವತ್ (ಕಾಂಗ್ರೆಸ್)
ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ )
[7:00 am, 19/04/2024] harish kera: ಲೋಕಸಭಾ ಚುನಾವಣೆಯ ಮೊದಲ ಹಂತದ ರಾಜ್ಯ ಹಾಗೂ ಕ್ಷೇತ್ರಗಳು

ತಮಿಳುನಾಡು

  1. ಕಾಂಚೀಪುರಂ:
    ಜಿ ಸೆಲ್ವಂ (ಡಿಎಂಕೆ)
    ರಾಜಶೇಖರ್ (ಎಐಎಡಿಎಂಕೆ)
    ವೆಂಕಟೇಶನ್ (ಪಿಎಂಕೆ)
  2. ಅರಕ್ಕೋಣಂ:
    ಎಸ್ ಜಗತ್ರಕ್ಷಕನ್ (ಡಿಎಂಕೆ)
    ಎಎಲ್ ವಿಜಯನ್ (ಎಐಎಡಿಎಂಕೆ)
    ಕೆ ಬಾಲು (ಪಿಎಂಕೆ)
  3. ತಿರುವಳ್ಳೂರ್:
    ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
    ಕೆ ನಲ್ಲ ತಂಬಿ (DMDK)
    ಪೊನ್ ವಿ ಬಾಲಗಣಪತಿ (ಬಿಜೆಪಿ)
  4. ಚೆನ್ನೈ ಉತ್ತರ :
    ಕಲಾನಿಧಿ ವೀರಸ್ವಾಮಿ (ಡಿಎಂಕೆ)
    ರಾಯಪುರಂ ಆರ್ ಮನೋ (ಎಐಎಡಿಎಂಕೆ)
    ಆರ್ ಸಿ ಪಾಲ್ ಕನಕರಾಜ್ (ಬಿಜೆಪಿ)
  5. ಚೆನ್ನೈ ದಕ್ಷಿಣ :
    ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
    ಜೆ ಜಯವರ್ಧನ್ (ಎಐಎಡಿಎಂಕೆ)
    ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)
  6. ಚೆನ್ನೈ ಸೆಂಟ್ರಲ್:
    ದಯಾನಿಧಿ ಮಾರನ್ (ಡಿಎಂಕೆ)
    ಬಿ ಪಾರ್ಥಸಾರಥಿ (ಡಿಎಂಡಿಕೆ)
    ವಿನೋಜ್ ಪಿ ಸೆಲ್ವಂ (ಬಿಜೆಪಿ)
  7. ವೆಲ್ಲೂರು:
    ಡಿಎಂ ಕತೀರ್ ಆನಂದ್ (ಡಿಎಂಕೆ)
    ಎಸ್ ಪಶುಪತಿ (ಎಐಎಡಿಎಂಕೆ)
    ಎಸಿ ಷಣ್ಮುಗಂ (ಬಿಜೆಪಿ)
  8. ತಿರುವಣ್ಣಾಮಲೈ:
    ಸಿಎನ್ ಅಣ್ಣಾದೊರೈ (ಡಿಎಂಕೆ)
    ಎಂ ಕಲಿಯಪೆರುಮಾಳ್ (ಎಐಎಡಿಎಂಕೆ)
    ಬಿ ಅಶ್ವಥಾಮನ್ (ಬಿಜೆಪಿ)
  9. ಧರ್ಮಪುರಿ:
    ಎ ಮಣಿ (ಡಿಎಂಕೆ)
    ಆರ್ ಅಶೋಕನ್ (ಎಐಎಡಿಎಂಕೆ)
    ಸೌಮ್ಯಾ ಅಂಬುಮಣಿ (ಪಿಎಂಕೆ)
  10. ಕೃಷ್ಣಗಿರಿ :
    ಕೆ ಗೋಪಿನಾಥ್ (ಕಾಂಗ್ರೆಸ್)
    ವಿ ಜಯಪ್ರಕಾಶ್ (ಎಐಎಡಿಎಂಕೆ)
    ಸಿ ನರಸಿಂಹನ್ (ಬಿಜೆಪಿ)
  11. ಶ್ರೀಪೆರಂಬದೂರ್ :
    ಟಿ ಆರ್ ಬಾಲು (ಡಿಎಂಕೆ)
    ಜಿ ಪ್ರೇಮಕುಮಾರ್ (ಎಐಎಡಿಎಂಕೆ)
  12. ವಿಲುಪ್ಪುರಂ:
    ಡಿ ರವಿಕುಮಾರ್ (ಡಿಎಂಕೆ)
    ಜೆ ಬಕ್ಕಿಯರಾಜ್ (ಎಐಎಡಿಎಂಕೆ)
    ಮುರಳಿ ಶಂಕರ್ (ಪಿಎಂಕೆ)
  13. ಕೊಯಮತ್ತೂರು:
    ಗಣಪತಿ ರಾಜ್ ಕುಮಾರ್ (ಡಿಎಂಕೆ)
    ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
    ಕೆ ಅಣ್ಣಾಮಲೈ (ಬಿಜೆಪಿ)
    ಪಿ.ಆರ್ ನಟರಾಜನ್ (ಸಿಪಿಎಂ)
  14. ನೀಲಗಿರಿ :
    ಎ ರಾಜಾ (ಡಿಎಂಕೆ)
    ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
    ಎಲ್ ಮುರುಗನ್ (ಬಿಜೆಪಿ)
  15. ಈರೋಡ್:
    ಕೆ.ಇ.ಪ್ರಕಾಶ್ (ಡಿಎಂಕೆ)
    ಆತ್ರಾಳ್ ಅಶೋಕ್ ಕುಮಾರ್ (ಎಐಎಡಿಎಂಕೆ)
    ಪಿ ವಿಜಯಕುಮಾರ್ (ಟಿಎಂಸಿ-ಎಂ)
  16. ತಿರುಪ್ಪೂರ್:
    ಕೆ ಸುಬ್ಬರಾಯ (ಸಿಪಿಐ)
    ಪಿ ಅರುಣಾಚಲಂ (ಎಐಎಡಿಎಂಕೆ)
    ಎಪಿ ಮುರುಗಾನಂದಂ (ಬಿಜೆಪಿ)
  17. ನಾಮಕ್ಕಲ್:
    ವಿ ಎಸ್ ಮಾಥೇಶ್ವರನ್ (ಡಿಎಂಕೆ)
    ಎಸ್ ತಮಿಳು ಮಣಿ (ಎಐಎಡಿಎಂಕೆ)
    ಕೆಪಿ ರಾಮಲಿಂಗಂ (ಬಿಜೆಪಿ)
  18. ಸೇಲಂ :
    ಟಿಎಂ ಸೆಲ್ವಗಣಪತಿ (ಡಿಎಂಕೆ)
    ಪಿ ವಿಘ್ನೇಶ್ (ಎಐಎಡಿಎಂಕೆ)
    ಎನ್ ಅಣ್ಣಾದೊರೈ (ಪಿಎಂಕೆ)
  19. ಅರಣಿ:
    ಎಂಎಸ್ ತರಣಿವೇಂದನ್ (ಡಿಎಂಕೆ)
    ಜಿವಿ ಗಜೇಂದ್ರನ್ (ಎಐಎಡಿಎಂಕೆ)
    ಎ ಗಣೇಶಕುಮಾರ್ (ಪಿಎಂಕೆ)
  20. ಕಲ್ಲಕುರಿಚಿ:
    ಡಿ ಮಲೈಯರಸನ್ (ಡಿಎಂಕೆ)
    ಆರ್ ಕುಮಾರಗುರು (ಎಐಎಡಿಎಂಕೆ)
    ದೇವದಾಸ್ ಒಡೆಯರ್ (ಪಿಎಂಕೆ)
  21. ಕನ್ಯಾಕುಮಾರಿ:
    ವಿಜಯ ವಸಂತ್ (ಕಾಂಗ್ರೆಸ್)
    ನಜೆರತ್ ಪಸಿಲಿಯನ್ (AIADMK)
    ಪೊನ್ ರಾಧಾಕೃಷ್ಣನ್ (ಬಿಜೆಪಿ)
  22. ತೂತುಕ್ಕುಡಿ:
    ಕನಿಮೊಳಿ ಕರುಣಾನಿಧಿ (ಡಿಎಂಕೆ)
    ಆರ್ ಶಿವಸಾಮಿ ವೇಲುಮಣಿ (ಎಐಎಡಿಎಂಕೆ)
    ವಿಜಯಶೀಲನ್ (TMC-M)
  23. ವಿರುದುನಗರ:
    ಮಾಣಿಕಂ ಟ್ಯಾಗೋರ್ (ಕಾಂಗ್ರೆಸ್)
    ವಿ ವಿಜಯ ಪ್ರಭಾಕರನ್ (DMDK)
    ರಾಧಿಕಾ ಶರತ್‌ಕುಮಾರ್ (ಬಿಜೆಪಿ)
  24. ತೆಂಕಶಿ :
    ಡಾ ರಾಣಿ ಶ್ರೀಕುಮಾರ್ (ಡಿಎಂಕೆ)
    ಕೆ ಕೃಷ್ಣಸಾಮಿ (ಎಐಎಡಿಎಂಕೆ)
    ಜಾನ್ ಪಾಂಡಿಯನ್ (ಬಿಜೆಪಿ)
  25. ರಾಮನಾಥಪುರ:
    ಕಣಿ ಕೆ ನವಾಸ್: IUML
    ಪಿ ಜಯಪೆರುಮಾಳ್: ಎಐಎಡಿಎಂಕೆ
    ಓ ಪನ್ನೀರಸೆಲ್ವಂ: ಪಕ್ಷೇತರ

26.ಥೇನಿ:
ತಂಗ ತಮಿಳ್ ಸೆಲ್ವನ್ (ಡಿಎಂಕೆ)
ವಿಟಿ ನಾರಾಯಣಸ್ವಾಮಿ (ಎಐಎಡಿಎಂಕೆ)
ಟಿಟಿವಿ ದಿನಕರನ್ (ಎಎಂಎಂಕೆ)

  1. ತಂಜಾವೂರು :
    ಎಸ್ ಮುರಸೊಲಿ (ಡಿಎಂಕೆ)
    ಪಿ ಶಿವನೇಶನ್ (DMDK)
    ಎಂ ಮುರುಗಾನಂದಂ (ಬಿಜೆಪಿ)
  2. ಶಿವಗಂಗಾ:
    ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
    ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
    ಡಿ ದೇವನಾಥನ್ ಯಾದವ್ (ಬಿಜೆಪಿ)
  3. ಮಧುರೈ :
    ಎಸ್ ವೆಂಕಟೇಶನ್ (ಸಿಪಿಎಂ)
    ಪಿ ಸರವಣನ್ (ಎಐಎಡಿಎಂಕೆ)
    ರಾಮ ಶ್ರೀನಿವಾಸನ್ (ಬಿಜೆಪಿ)
  4. ತಿರುನೆಲ್ವೇಲಿ:
    ಸಿ ರಾಬರ್ಟ್ ಬ್ರೂಸ್ (ಕಾಂಗ್ರೆಸ್)
    ಎಂ ಜಾನ್ಸಿ ರಾಣಿ (ಎಐಎಡಿಎಂಕೆ)
    ನೈನಾರ್ ನಾಗೇಂದ್ರನ್ (ಬಿಜೆಪಿ)
  5. ಪೊಲ್ಲಾಚಿ:
    ಕೆ ಈಶ್ವರಸ್ವಾಮಿ (ಡಿಎಂಕೆ)
    ಕಾರ್ತಿಕೇಯನ್ (ಎಐಎಡಿಎಂಕೆ)
    ಕೆ ವಸಂತರಾಜನ್ (ಬಿಜೆಪಿ)
  6. ಕರೂರ್ :
    ಜೋತಿಮಣಿ ಸೆನ್ನಿಮಲೈ (ಕಾಂಗ್ರೆಸ್)
    ಕೆಆರ್‌ಎಲ್ ತಂಗವೇಲ್ (ಎಐಎಡಿಎಂಕೆ)
    ವಿವಿ ಸೆಂಥಿಲನಾಥನ್ (ಬಿಜೆಪಿ)
  7. ದಿಂಡಿಗಲ್:
    ಆರ್ ಸಚ್ಚಿದಾನಂದಂ (ಸಿಪಿಎಂ)
    ವಿಎಂಎಸ್ ಮೊಹಮ್ಮದ್ ಮುಬಾರಕ್ (ಎಐಎಡಿಎಂಕೆ)
    ಎಂ ತಿಲಗಬಾಮ (ಪಿಎಂಕೆ)
  8. ಪೆರಂಬಲೂರು :
    ಅರುಣ್ ನೆಹರು (ಡಿಎಂಕೆ)
    ಎನ್‌ಡಿ ಚಂದ್ರಮೋಹನ್ (ಎಐಎಡಿಎಂಕೆ)
    ಟಿಆರ್ ಪಾರಿವೇಂದರ್ (ಬಿಜೆಪಿ)
  9. ಕುಡಲೋರು:
    ಎಂಕೆ ವಿಷ್ಣು ಪ್ರಸಾದ್ (ಕಾಂಗ್ರೆಸ್)
    ಪಿ ಶಿವಕೊಜಂದು (ಡಿಎಂಡಿಕೆ)
    ತಂಗರ್ ಬಚನ್ (ಪಿಎಂಕೆ)
  10. ತಿರುಚಿರಾಪಳ್ಳಿ:
    ದುರೈ ವೈಕೋ (MDMK)
    ಪಿ ಕರುಪ್ಪಯ್ಯ (ಎಐಎಡಿಎಂಕೆ)
    ಪಿ ಸೆಂಥಿಲ್ನಾಥನ್ (AMMK)
  11. ಚಿದಂಬರಂ:
    ತೊಲ್ ತಿರುಮಾವಳವನ್ (ವಿಸಿಕೆ)
    ಎಂ ಚಂದ್ರಹಾಸನ್ (ಎಐಎಡಿಎಂಕೆ)
    ಪಿ ಕಾರ್ತಿಯಾಯಿನಿ (ಬಿಜೆಪಿ)
  12. ನಾಗಪಟ್ಟಿಣಂ:
    ವಿ ಸೆಲ್ವರಾಜ್ (ಸಿಪಿಐ)
    ಡಾ ಜಿ ಸುರ್ಜಿತ್ ಶಂಕರ್ (ಎಐಎಡಿಎಂಕೆ)
    ಎಸ್‌ಜಿಎಂ ರಮೇಶ್ (ಬಿಜೆಪಿ)
  13. ಮೈಲಾಡುತುರೈ:
    ಆರ್ ಸುಧಾ (ಕಾಂಗ್ರೆಸ್)
    ಪಿ ಬಾಬು (ಎಐಎಡಿಎಂಕೆ)
    ಮಾ ಕಾ ಸ್ಟಾಲಿನ್ (ಪಿಎಂಕೆ)

ರಾಜಸ್ಥಾನ

  1. ಸಿಕರ್:
    ಸುಮೇಧಾನಂದ ಸರಸ್ವತಿ (ಬಿಜೆಪಿ)
    ಅಮ್ರ ರಾಮ್ ಪರಸ್ವಾಲ್ (ಸಿಪಿಎಂ)
  2. ಚುರು :
    ದೇವೇಂದ್ರ ಜಜಾರಿಯಾ (ಬಿಜೆಪಿ)
    ರಾಹುಲ್ ಕಸ್ವಾನ್ (ಕಾಂಗ್ರೆಸ್)
  3. ಜುಂಜುನು :
    ಸುಭಕರನ್ ಚೌಧರಿ (ಬಿಜೆಪಿ)
    ಬ್ರಿಜೇಂದ್ರ ಸಿಂಗ್ ಓಲಾ (ಕಾಂಗ್ರೆಸ್)
  4. ಬಿಕಾನೆರ್:
    ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
    ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)
  5. ಗಂಗಾನಗರ :
    ಪ್ರಿಯಾಂಕಾ ಬಾಲನ್ ಮೇಘವಾಲ್ (ಬಿಜೆಪಿ)
    ಕುಲದೀಪ್ ಇಂದೋರಾ (ಕಾಂಗ್ರೆಸ್
  6. ಜೈಪುರ :
    ಮಂಜು ಶರ್ಮಾ (ಬಿಜೆಪಿ)
    ಪ್ರತಾಪ್ ಸಿಂಗ್ ಖಚರಿಯಾವಾಸ್ (ಕಾಂಗ್ರೆಸ್)
  7. ಜೈಪುರ ಗ್ರಾಮಾಂತರ:
    ರಾವ್ ರಾಜೇಂದ್ರ ಸಿಂಗ್ (ಬಿಜೆಪಿ)
    ಅನಿಲ್ ಚೋಪ್ರಾ (ಕಾಂಗ್ರೆಸ್)

47.ಅಲ್ವಾರ್ :
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

  1. ದೌಸಾ :
    ಕನ್ಹಯ್ಯಾ ಲಾಲ್ ಮೀನಾ (ಬಿಜೆಪಿ)
    ಮುರಾರಿ ಲಾಲ್ ಮೀನಾ (ಕಾಂಗ್ರೆಸ್)
  2. ನಾಗೌರ್:
    ಜ್ಯೋತಿ ಮಿರ್ಧಾ (ಬಿಜೆಪಿ)
    ಹನುಮಾನ್ ಬೇನಿವಾಲ್ (RLP) ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ
  3. ಕರೌಲಿ-ಧೋಲ್ಪುರ್:
    ಇಂದು ದೇವಿ ಜಾತವ್ (ಬಿಜೆಪಿ)
    ಭಜನ್ ಲಾಲ್ ಜಾತವ್ (ಕಾಂಗ್ರೆಸ್)
  4. ಭರತಪುರ:
    ರಾಮಸ್ವರೂಪ್ ಕೋಲಿ (ಬಿಜೆಪಿ)
    ಸಂಜನಾ ಜಾತವ್ (ಕಾಂಗ್ರೆಸ್)

ಉತ್ತರಪ್ರದೇಶ

  1. ಸಹರಾನ್ಪುರ್:
    ರಾಘವ್ ಲಖನ್‌ಪಾಲ್ (ಬಿಜೆಪಿ)
    ಇಮ್ರಾನ್ ಮಸೂದ್ (ಕಾಂಗ್ರೆಸ್)
    ಮಜೀದ್ ಅಲಿ (BSP)
  2. ಕೈರಾನಾ:
    ಪ್ರದೀಪ್ ಕುಮಾರ್ ಚೌಧರಿ (ಬಿಜೆಪಿ)
    ಇಕ್ರಾ ಹಸನ್ ಚೌಧರಿ (ಎಸ್‌ಪಿ)
    ಶ್ರೀಪಾಲ್ (ಬಿಎಸ್ಪಿ)
  3. ಮುಜಾಫರ್‌ನಗರ
    ಸಂಜೀವ್ ಕುಮಾರ್ ಬಲ್ಯಾನ್ (ಬಿಜೆಪಿ)
    ಹರೇಂದ್ರ ಸಿಂಗ್ ಮಲಿಕ್ (ಎಸ್‌ಪಿ)
    ದಾರಾ ಸಿಂಗ್ ಪ್ರಜಾಪತಿ (BSP)
  4. ಬಿಜ್ನೋರ್
    ಚಂದನ್ ಚೌಹಾಣ್ (RLD)
    ದೀಪಕ್ ಸೈನಿ (SP)
    ಚೌಧರಿ ವಿಜೇಂದರ್ ಸಿಂಗ್ (ಬಿಎಸ್ಪಿ)
  5. ನಾಗಿನಾ :
    ಓಂ ಕುಮಾರ್ (ಬಿಜೆಪಿ)
    ಮನೋಜ್ ಕುಮಾರ್ (ಎಸ್ಪಿ)
    ಸುರೇಂದ್ರ ಪಾಲ್ ಸಿಂಗ್ (ಬಿಎಸ್ಪಿ)
  6. ಮೊರಾದಾಬಾದ್ :
    ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ (ಬಿಜೆಪಿ)
    ರುಚಿ ವೀರ್ (ಎಸ್‌ಪಿ)
    ಮೊಹಮ್ಮದ್ ಇರ್ಫಾನ್ ಸೈಫಿ (ಬಿಎಸ್ಪಿ)
  7. ರಾಂಪುರ:
    ಘನಶ್ಯಾಮ್ ಸಿಂಗ್ ಲೋಧಿ (ಬಿಜೆಪಿ)
    ಮೊಹಿಬುಲ್ಲಾ ನದ್ವಿ (ಎಸ್‌ಪಿ)
    ಜೀಶನ್ ಖಾನ್ (BSP)
  8. ಪಿಲಿಭಿತ್ :
    ಜಿತಿನ್ ಪ್ರಸಾದ (ಬಿಜೆಪಿ)
    ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
    ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಮಧ್ಯಪ್ರದೇಶ

  1. ಸಿದ್ಧಿ :
    ಡಾ ರಾಜೇಶ್ ಮಿಶ್ರಾ (ಬಿಜೆಪಿ)
    ಕಮಲೇಶ್ವರ್ ಕುಮಾರ್ ಪಟೇಲ್ (ಕಾಂಗ್ರೆಸ್)
  2. ಶಹದೋಲ್:
    ಹಿಮಾದ್ರಿ ಸಿಂಗ್ (ಬಿಜೆಪಿ)
    ಫುಂಡೇಲಾಲ್ ಸಿಂಗ್ ಮಾರ್ಕೊ (ಕಾಂಗ್ರೆಸ್)
  3. ಜಬಲ್ಪುರ್ :
    ಆಶಿಶ್ ದುಬೆ (ಬಿಜೆಪಿ)
    ದಿನೇಶ್ ಯಾದವ್ (ಕಾಂಗ್ರೆಸ್)
  4. ಮಂಡಲ :
    ಫಗ್ಗನ್ ಸಿಂಗ್ ಕುಲಸ್ತೆ (ಬಿಜೆಪಿ)
    ಓಂಕಾರ್ ಸಿಂಗ್ ಮಾರ್ಕಮ್ (ಕಾಂಗ್ರೆಸ್)
  5. ಬಾಲಘಾಟ್ :
    ಭಾರತಿ ಪಾರ್ಧಿ (ಬಿಜೆಪಿ)
    ಸಾಮ್ರಾಟ್ ಸಾರಸ್ವತ್ (ಕಾಂಗ್ರೆಸ್)
  6. ಛಿಂದ್ವಾರಾ :
    ವಿವೇಕ್ ಬಂಟಿ ಸಾಹು (ಬಿಜೆಪಿ)
    ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ಉತ್ತರಾಖಂಡ

  1. ತೆಹ್ರಿ ಗರ್ವಾಲ್:
    ಮಾಲಾ ರಾಜ ಲಕ್ಷ್ಮಿ ಶಾ (ಬಿಜೆಪಿ)
    ಜೋತ್ ಸಿಂಗ್ ಗುನ್ಸೋಲಾ (ಕಾಂಗ್ರೆಸ್)
  2. ಅಲ್ಮೋರಾ:
    ಅಜಯ್ ತಮ್ತಾ (ಬಿಜೆಪಿ)
    ಪ್ರದೀಪ್ ತಮ್ತಾ (ಕಾಂಗ್ರೆಸ್)
  3. ಗರ್ವಾಲ್ :
    ಅನಿಲ್ ಬಲುನಿ (ಬಿಜೆಪಿ)
    ಗಣೇಶ್ ಗೋಡಿಯಾಲ್ (ಕಾಂಗ್ರೆಸ್)
  4. ನೈನಿತಾಲ್-ಉದಮ್ಸಿಂಗ್ ನಗರ:
    ಅಜಯ್ ತಮ್ಮಟಾ (ಬಿಜೆಪಿ)
    ಪ್ರಕಾಶ್ ಜೋಶಿ (ಕಾಂಗ್ರೆಸ್)
  5. ಹರಿದ್ವಾರ:
    ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ)
    ವೀರೇಂದ್ರ ರಾವತ್ (ಕಾಂಗ್ರೆಸ್)

ಮಹಾರಾಷ್ಟ್ರ

  1. ರಾಮ್ಟೆಕ್:
    ರಾಜು ದೇವನಾಥ ಪರ್ವೆ (ಶಿವಸೇನೆ)
    ಶ್ಯಾಮಕುಮಾರ್ ದೌಲತ್ ಬರ್ವೆ (ಕಾಂಗ್ರೆಸ್)
  2. ನಾಗ್ಪುರ :
    ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)
    ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)
  3. ಭಂಡಾರ-ಗೊಂಡಿಯಾ
    ಸುನಿಲ್ ಬಾಬುರಾವ್ ಮೆಂಡೆ (ಬಿಜೆಪಿ)
    ಡಾ ಪ್ರಶಾಂತ್ ಯಾದವರಾವ್ ಪಡೋಲೆ (ಕಾಂಗ್ರೆಸ್)
  4. ಗಡ್ಚಿರೋಲಿ-ಚಿಮೂರ್:
    ಅಶೋಕ್ ಮಹದೇವರಾವ್ ನೇತೆ (ಬಿಜೆಪಿ)
    ಡಾ ನಾಮದೇವ ದಾಸರಾಂ ಕಿರ್ಸನ್ (ಕಾಂಗ್ರೆಸ್)
  5. ಚಂದ್ರಾಪುರ:
    ಸುಧೀರ್ ಮುಂಗಂತಿವಾರ್ (ಬಿಜೆಪಿ)
    ಪ್ರತಿಭಾ ಸುರೇಶ್ ಧನೋರ್ಕರ್ (ಕಾಂಗ್ರೆಸ್)

ಅಸ್ಸಾಂ

  1. ಸೋನಿತ್ಪುರ್ :
    ರಂಜಿತ್ ದತ್ತಾ (ಬಿಜೆಪಿ)
    ಪ್ರೇಮಲಾಲ್ ಗಂಜು (ಕಾಂಗ್ರೆಸ್)
    ರಾಜು ದೇರಿ (BPF)
  2. ಕಾಜಿರಂಗ :
    ಕಾಮಾಖ್ಯ ಪ್ರಸಾದ್ ತಾಸಾ (ಬಿಜೆಪಿ)
    ರೋಸೆಲಿನಾ ಟಿರ್ಕಿ (ಕಾಂಗ್ರೆಸ್)
  3. ದಿಬ್ರುಗಢ :
    ಸರ್ಬಾನಂದ ಸೋನೋವಾಲ್ (ಬಿಜೆಪಿ)
    ಲುರಿಂಜ್ಯೋತಿ ಗೊಗೋಯ್ (ಎಜೆಪಿ)
  4. ಲಖಿಂಪುರ:
    ಪ್ರದಾನ್ ಬರುವಾ (ಬಿಜೆಪಿ)
    ಉದಯಶಂಕರ್ ಹಜಾರಿಕಾ (ಕಾಂಗ್ರೆಸ್)
  5. ಜೋರ್ಹತ್ :
    ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
    ಗೌರವ್ ಗೊಗೊಯ್ (ಕಾಂಗ್ರೆಸ್)

ಬಿಹಾರ್

  1. ಔರಂಗಾಬಾದ್:
    ಬಿಹಾರ ಸುಶೀಲ್ ಕುಮಾರ್ ಸಿಂಗ್ (ಬಿಜೆಪಿ)
    ಅಭಯ್ ಕುಮಾರ್ ಸಿನ್ಹಾ (ಆರ್‌ಜೆಡಿ)
  2. ಗಯಾ:
    ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
    ಕುಮಾರ್ ಸರ್ವಜೀತ್ (ಆರ್ಜೆಡಿ)
    ವಿಜಯ್ ಮಾಂಝಿ (ಜೆಡಿಯು)
  3. ನಾವಡ:
    ವಿವೇಕ್ ಠಾಕೂರ್ (ಬಿಜೆಪಿ)
    ಶ್ರವಣ್ ಕುಮಾರ್ ಕುಶ್ವಾಹ (ಆರ್‌ಜೆಡಿ)
    ಚಂದನ್ ಸಿಂಗ್ (ಎಲ್‌ಜೆಪಿ)
  4. ಜಮುಯಿ:
    ಅರುಣ್ ಭಾರತಿ (LJP-RV)
    ಅರ್ಚನಾ ಕುಮಾರಿ (ಆರ್‌ಜೆಡಿ)
    ಚಿರಾಗ್ ಪಾಸ್ವಾನ್ (LJP)

ಪಶ್ಚಿಮ ಬಂಗಾಳ

  1. ಕೂಚ್ ಬೆಹಾರ್ :
    ನಿಸಿತ್ ಪ್ರಮಾಣಿಕ್ (ಬಿಜೆಪಿ)
    ಜಗದೀಶ್ ಚಂದ್ರ ಬರ್ಮಾ ಬಸುನಿಯಾ (ಟಿಎಂಸಿ)
    ನಿತೀಶ್ ಚಂದ್ರ ರಾಯ್ (AIFB)
    ಪಿಯಾ ರಾಯ್ ಚೌಧರಿ (ಕಾಂಗ್ರೆಸ್)
  2. ಜಲ್ಪೈಗುರಿ:
    ಜಯಂತ ಕುಮಾರ್ ರಾಯ್ (ಬಿಜೆಪಿ)
    ನಿರ್ಮಲ್ ಚಂದ್ರ ರಾಯ್ (ಟಿಎಂಸಿ)
    ದೇಬ್ರಾಜ್ ಬರ್ಮನ್ (ಸಿಪಿಎಂ)
  3. ಅಲಿಪುರ್ದುವಾಸ್:
    ಮನೋಜ್ ತಿಗ್ಗಾ (ಬಿಜೆಪಿ)
    ಪ್ರಕಾಶ್ ಚಿಕ್ ಬರೈಕ್ (ಟಿಎಂಸಿ)
    ಮಿಲಿ ಓರಾನ್ (RSP)

ಅರುಣಾಚಾಲ ಪ್ರದೇಶ

  1. ಅರುಣಾಚಲ ಪಶ್ಚಿಮ
    ಕಿರಣ್ ರಿಜಿಜು (ಬಿಜೆಪಿ)
    ನಬಮ್ ತುಕಿ (ಕಾಂಗ್ರೆಸ್)
  2. ಅರುಣಾಚಲ ಪೂರ್ವ
    ತಾಪಿರ್ ಗಾವೊ (ಬಿಜೆಪಿ)
    ಬೋಸಿರಾಮ್ ಸಿರಾಮ್ (ಕಾಂಗ್ರೆಸ್)

ಮೇಘಾಲಯ

  1. ತುರಾ:
    ಅಗಾಥಾ ಕೆ ಸಂಗ್ಮಾ (NPP)
    ಸಲೇಂಗ್ ಎ ಸಂಗ್ಮಾ (ಕಾಂಗ್ರೆಸ್)
    ಜೆನಿತ್ ಎಂ ಸಂಗ್ಮಾ (ಟಿಎಂಸಿ)
  2. ಶಿಲ್ಲಾಂಗ್:
    ಡಾ ಮಜೆಲ್ ಅಂಪಾರೀನ್ ಲಿಂಗ್ಡೋಹ್ (NPP)
    ವಿನ್ಸೆಂಟ್ ಎಚ್ ಪಾಲಾ (ಕಾಂಗ್ರೆಸ್)
    ರಾಬರ್ಟ್ ಜೂನ್ ಖರ್ಜಹ್ರಿನ್ (ಯುಡಿಪಿ)

ಮಣಿಪುರ

  1. ಔಟರ್ ಮಣಿಪುರ :
    ಕಚುಯಿ ತಿಮೋತಿ ಝಿಮಿಕ್ (NPF)
    ಆಲ್ಫ್ರೆಡ್ ಕಂಗಮ್ ಎಸ್ ಆರ್ಥರ್ (ಕಾಂಗ್ರೆಸ್)
  2. ಇನ್ನರ್ ಮಣಿಪುರ:
    ತೌನೊಜಂ ಬಸಂತ ಕುಮಾರ್ ಸಿಂಗ್ (ಬಿಜೆಪಿ)
    ಅಂಗೋಮ್ಚಾ ಬಿಮೋಲ್ ಅಕೋಯಿಜಮ್ (ಕಾಂಗ್ರೆಸ್)

94.ಪಶ್ಚಿಮ ತ್ರಿಪುರಾ
ಬಿಪ್ಲಬ್ ಕುಮಾರ್ ದೇಬ್ (ಬಿಜೆಪಿ)
ಆಶಿಶ್ ಕುಮಾರ್ ಸಹಾ (ಕಾಂಗ್ರೆಸ್)

ಛತ್ತೀಸ್‌ಗಢ

  1. ಬಸ್ತಾರ್:
    ಮಹೇಶ್ ಕಶ್ಯಪ್ (ಬಿಜೆಪಿ)
    ಕವಾಸಿ ಲಖ್ಮಾ (ಕಾಂಗ್ರೆಸ್)
  2. ಪುದುಚೇರಿ
    ನಮಸ್ಶಿವಾಯಂ (ಬಿಜೆಪಿ)
    ವಿ ವೈತಿಲಿಂಗಂ (ಕಾಂಗ್ರೆಸ್)
  3. ಅಂಡಮಾನ್ ಮತ್ತು ನಿಕೋಬಾರ್
    ಬಿಷ್ಣು ಪದಾ ರೇ (ಬಿಜೆಪಿ)
    ಕುಲದೀಪ್ ರಾಯ್ ಶರ್ಮಾ (ಕಾಂಗ್ರೆಸ್)
  4. ಲಕ್ಷದ್ವೀಪ:
    ಮೊಹಮ್ಮದ್ ಫೈಜಲ್ ಪಡಿಪ್ಪುರ (ಎನ್‌ಸಿಪಿ-ಶರದ್ ಪವಾರ್)
    ಮುಹಮ್ಮದ್ ಹಮ್ದುಲ್ಲಾ ಸಯೀದ್ (ಕಾಂಗ್ರೆಸ್)
    ಟಿಪಿ ಯೂಸುಫ್ (ಎನ್‌ಸಿಪಿ)
  5. ಮಿಜೋರಾಂ
    ರಿಚರ್ಡ್ ವನ್ಲಾಲ್ಮಂಗೈಹ (ZPM)
    ಕೆ ವನಲಲ್ವೆನಾ (MNF)
    ಲಾಲ್ಬಿಯಾಕ್ಜಮಾ (ಕಾಂಗ್ರೆಸ್)
    ವನ್‌ಲಾಲ್‌ಮುವಾಕಾ (ಬಿಜೆಪಿ)
  6. ನಾಗಾಲ್ಯಾಂಡ್
    ಡಾ ಚುಂಬೆನ್ ಮರ್ರಿ (NDPP)
    ಎಸ್ ಸುಪೊಂಗ್ಮೆರೆನ್ ಜಮೀರ್ (ಕಾಂಗ್ರೆಸ್)

ಜಮ್ಮು & ಕಾಶ್ಮೀರ

  1. ಉಧಂಪುರ :
    ಡಾ ಜಿತೇಂದ್ರ ಸಿಂಗ್ (ಬಿಜೆಪಿ)
    ಚೌಧರಿ ಲಾಲ್ ಸಿಂಗ್ (ಕಾಂಗ್ರೆಸ್)
  2. ಸಿಕ್ಕಿಂ :
    ಇಂದ್ರ ಹ್ಯಾಂಗ್ ಸುಬ್ಬ (SKM)
    ಪ್ರೇಮ್ ದಾಸ್ ರೈ (SDF)
    ದಿನೇಶ್ ಚಂದ್ರ ನೇಪಾಳ (ಬಿಜೆಪಿ)
    ಗೋಪಾಲ್ ಚೆಟ್ರಿ (ಕಾಂಗ್ರೆಸ್)
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Vote Jihad: ಗುಜರಾತ್‌ನ ಆನಂದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಬಯಸುತ್ತದೆ ಎಂದು ಕುಟುಕಿದರು.

VISTARANEWS.COM


on

Vote Jihad
Koo

ಗಾಂಧಿನಗರ: ಕಾಂಗ್ರೆಸ್‌ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ಅವರ ಸಹೋದರ ಸೊಸೆ, ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ (Maria Alam) ಅವರು ವೋಟ್‌ ಜಿಹಾದ್‌ಗೆ ಕರೆ ನೀಡಿರುವುದು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಮಾರಿಯಾ ಆಲಂ ವಿರುದ್ಧ ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಇದರ ಬೆನ್ನಲ್ಲೇ, ವೋಟ್‌ ಜಿಹಾದ್‌ ಹೇಳಿಕೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ವೋಟ್‌ ಜಿಹಾದ್‌ಗೆ (Vote Jihad) ಕರೆ ನೀಡಿರುವುದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಹಿಡಿದ ಕೈಗನ್ನಡಿ” ಎಂದು ಮೋದಿ ಟೀಕಿಸಿದ್ದಾರೆ.

“ಮುಸ್ಲಿಮರೆಲ್ಲರೂ ವೋಟ್‌ ಜಿಹಾದ್‌ ಕೈಗೊಳ್ಳಬೇಕು. ಮದರಸಾದಲ್ಲಿ ಅಲ್ಲ, ಉನ್ನತ ಶಿಕ್ಷಣ ಪಡೆದವರೇ ಇಂತಹ ಹೇಳಿಕೆ ನೀಡಿದ್ದಾರೆ. ಮುಸ್ಲಿಮರೆಲ್ಲರೂ ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ಗೆಲ್ಲಿಸಬೇಕು ಎಂಬುದಾಗಿ ಅವರು ಕರೆ ನೀಡುತ್ತಿದ್ದಾರೆ. ಇವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದಾರೆ. ಇದು ಇಂಡಿಯಾ ಒಕ್ಕೂಟದ ನಾಯಕರ ಮನಸ್ಥಿತಿಯಾಗಿದೆ” ಎಂದು ಗುಜರಾತ್‌ನ ಆನಂದ್‌ ನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ ನಡೆಸಿದರು.

“ಇದೇ ವೇಳೆ ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವೋಟ್‌ ಜಿಹಾದ್‌ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. “ನಾವು ಲವ್‌ ಜಿಹಾದ್‌ ಮತ್ತು ಭೂ ಜಿಹಾದ್‌ ಕೇಳಿದ್ದೇವೆ. ಇದೀಗ ಮೊದಲ ಬಾರಿಗೆ ವೋಟ್‌ ಜಿಹಾದ್‌ ಬಗ್ಗೆ ಕೇಳುತ್ತಿದ್ದೇವೆ. ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ವೋಟ್‌ ಜಿಹಾದ್‌ ಮಾಡುವಂತೆ ಕರೆ ಕೊಡಲಾಗುತ್ತಿದೆ. ಇದು ಪ್ರತಿಪಕ್ಷಗಳ ನಿಜವಾದ ಮುಖ. ತಮ್ಮ ಮೈತ್ರಿ ಸರ್ಕಾರಗಳು ಅಧಿಕಾರದದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರಿಗೆ ವಾಮಮಾರ್ಗದಲ್ಲಿ ಮೀಸಲಾತಿ ಘೋಷಿಸುವುದೇ ಕಾಂಗ್ರೆಸ್‌ನ ಪ್ರಮುಖ ಗುರಿ. ಹಾಗೆ ಇಲ್ಲದಿದ್ದರೆ ಕಾಂಗ್ರೆಸ್‌ ಲಿಖಿತ ರೂಪದಲ್ಲಿ ಬರೆದುಕೊಡಲಿ” ಎಂದು ಸವಾಲೆಸದರು.

ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಭಾರತದಲ್ಲಿ ದುರ್ಬಲ ಸರ್ಕಾರ ಇರಬೇಕು. ಈ ಹಿಂದೆ ಇದ್ದ ದುರ್ಬಲ ಸರ್ಕಾರದ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಮುಂಬೈ ಭಯೋತ್ಪಾದಕಾ ದಾಳಿ ನಡೆಸಲು ಸಾಧ್ಯವಾಗಿತ್ತು. ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಪಾಕಿಸ್ತಾನದ ಫಾಲೋವರ್‌ನಂತೆ ವರ್ತಿಸುತ್ತಿದೆ. ಹೀಗಾಗಿಯೇ ಇಲ್ಲಿ ಕಾಂಗ್ರೆಸ್‌ ಅಧಃಪತನ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಕಣ್ಣೀರುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇವತ್ತು ನಾನು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುತ್ತೇವೆ ಎಂಬ ಗ್ಯಾರಂಟಿಯನ್ನು ಕೊಡುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Maria Alam Khan: “ಜಿಹಾದ್‌ಗಾಗಿ ಮತ ನೀಡಿ..”ಮಾಜಿ ಕೇಂದ್ರ ಸಚಿವರ ಸೊಸೆಯಿಂದ ಭಾರೀ ಎಡವಟ್ಟು

Continue Reading

Lok Sabha Election 2024

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Prajwal Revanna Case: ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Prajwal Revanna Case PM Modi defends MP accused of rape says Rahul Gandhi
Koo

ಶಿವಮೊಗ್ಗ: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ದೇಶದ ಮಹಾನ್‌ ರೇಪಿಸ್ಟ್‌ ಒಬ್ಬನನ್ನು ಮೋದಿ ರಕ್ಷಣೆ ಮಾಡಿದ್ದಾರೆ. ಇದು ಮಹಾ ಅಪರಾಧ ಎಂದು ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪರ ಪ್ರಚಾರ ಭಾಷಣ ಮಾಡಿದ ರಾಹುಲ್‌ ಗಾಂಧಿ, ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ 400 ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಾರೆ. ಇದು ಕೇವಲ ಸೆಕ್ಸ್ ಕ್ಯಾಂಡಲ್ ಅಲ್ಲ, ಅತ್ಯಾಚಾರವಾಗಿದೆ. ಇದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಂತಿದ್ದಾರೆ. ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಅಂತ ಬಿಜೆಪಿ ನಾಯಕರಿಗೆ ಗೊತ್ತಿತ್ತು. ಆದರೆ, ಹಾಸನದಲ್ಲಿ ಟಿಕೆಟ್ ಕೊಟ್ಟರು. ಬಿಜೆಪಿಯವರಿಗೆ ಹಾಗೂ‌ ಮಹಿಳೆಯರಿಗೆ ಇದು ತಿಳಿಯಬೇಕು. ಮೋದಿ ಅವರು ಹಾಸನ ಹಾಗೂ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ತಲೆಬಾಗಿ ಕ್ಷಮೆ ಕೇಳಬೇಕು. ಇಡೀ ಪ್ರಪಂಚದಲ್ಲಿ ಇಂತಹ ಘಟನೆ ನೋಡಿಲ್ಲ, ನೋಡುವುದೂ ಇಲ್ಲ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು. ‌

ಕಾಂಗ್ರೆಸ್‌ನಿಂದ ಸೂಕ್ತ ತನಿಖೆ

ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆಸಿ ಸೂಕ್ತ ತನಿಖೆಯನ್ನು ನಮ್ಮ ಕಾಂಗ್ರೆಸ್‌ ಸರ್ಕಾರ ನಡೆಸುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು.

ಮೋದಿಗೆ ಭಯ ಶುರುವಾಗಿದೆ

ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟಿದ್ದೇವೆ. ಪ್ರತಿ ಮನೆ ಯಜಮಾನಿಗೆ ಮಾಸಿಕವಾಗಿ ತಲಾ 2000 ರೂಪಾಯಿಯಂತೆ ಒಂದು ವರ್ಷಕ್ಕೆ 24 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ಈಗ ಗ್ಯಾರಂಟಿಯ ಭಾಗವಾಗಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದೇವೆ. ಇಡೀ ದೇಶದಲ್ಲಿ ಅಧಿಕಾರ ಬಂದರೆ ಮೊದಲು ಮಹಾಲಕ್ಷ್ಮಿ ಯೋಜನೆಯನ್ನು ತರುತ್ತೇವೆ. ಮೋದಿಯವರು ಜನರನ್ನು ಬಡವರನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಕುಟುಂಬದಿಂದ ಮಹಿಳೆಯರ ಹೆಸರನ್ನು ಸಂಗ್ರಹ ಮಾಡುತ್ತಾ ಇದ್ದಾರೆ. 1 ಲಕ್ಷ ರೂಪಾಯಿಯನ್ನು ಖಾತೆಗೆ ಹಾಕಲಾಗುವುದು. ಇದರಿಂದ ಮೋದಿಗೆ ಭಯ ಶುರುವಾಗಿದೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದರೆ ಉದ್ಯೋಗ ಭರ್ತಿ, ಸಾಲ ಮನ್ನಾ

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇವೆ. ಕೇಂದ್ರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುತ್ತೇವೆ. ಆಶಾ ಕಾರ್ಯಕರ್ತರಿಗೆ ನಾವು ಸಹಾಯ ಮಾಡುತ್ತೇವೆ. ನರೇಂದ್ರ ಮೋದಿ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ. ನಾವು ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತೇವೆ ಎಂದು ರಾಹುಲ್‌ ಗಾಂಧಿ ಆಶ್ವಾಸನೆ ನೀಡಿದರು.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ವಿಡಿಯೊ

ಬಿಜೆಪಿ, ಆರ್‌ಎಸ್ಎಸ್‌ನವರಿಂದ ಸಂವಿಧಾನ ಬದಲಾವಣೆಗೆ ಮುಂದು

ವಿದ್ಯಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ನಾವು ಸಂವಿಧಾನದಲ್ಲಿ ರಕ್ಷಣೆ ಮಾಡಬೇಕಿದೆ. ಬಿಜೆಪಿಯವರು, ಆರ್‌ಎಸ್ಎಸ್‌ನವರು ಸಂವಿಧಾನ ಬದಲಾಯಿಸಲು ಮುಂದಾಗಿದ್ದಾರೆ. ಸಂವಿಧಾನದಿಂದ ದಲಿತರು ಆದಿವಾಸಿಗಳಿಗೆ ರಕ್ಷಣೆ ಸಿಗುತ್ತಿದೆ. ಇದನ್ನು ತಿರುಚಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿರುವ ಸಂಪತ್ತನ್ನು 22 ಮಂದಿಯ ಪ್ಯಾಕೆಟ್‌ಗೆ ಹಾಕಿದ್ದಾರೆ. ಅದಾನಿ, ಅಂಬಾನಿ ಕೈಯಲ್ಲಿ ದೇಶದ ಸಂಪತ್ತು ಇದೆ. ಕರ್ನಾಟಕಕ್ಕೆ ಮೋಸ ಮಾಡಿರುವ ಮೋದಿ 22 ಜನರಿಗೆ ಹಣ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾವು ಸಮಾನತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಒಬಿಸಿ ದಲಿತರು, ಆದಿವಾಸಿಗಳ ಬಗ್ಗೆ ಮಾತನಾಡಿದರೆ ನಾವು ನಕ್ಸಲರು ಅಂತಿದ್ದಾರೆ. ಆದರೆ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.

Continue Reading

ಕ್ರೈಂ

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Prajwal Revanna Case: “ನಿನ್ನ ಮಗ ಮಾಡಿದ ಕೃತ್ಯಕ್ಕೆ ನಾವು ತಲೆ ತಗ್ಗಿಸಬೇಕು. ಇಡೀ ಪ್ರಪಂಚಕ್ಕೆ ಗೊತ್ತಾಗುವ ಕೆಲಸ ಮಾಡಿ ಹೋದ. ದೇಶದಲ್ಲಿ ತಲೆ ಎತ್ತಿಕೊಳ್ಳದಂತೆ ಮಾಡಿ ಹೋದ” ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಸಹ ಇದೇ ವೇಳೆ ತಮ್ಮ ಅಸಮಾಧಾನ ಹೊರಹಾಕಿದ್ದು, ನನ್ನ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದು ಹರಿಹಾಯ್ದಿದ್ದಾರೆ.

VISTARANEWS.COM


on

Prajwal Revanna Case HD DeveGowda and HD Kumaraswamy slams HD Revanna
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಚ್‌.ಡಿ. ರೇವಣ್ಣ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಮಗನಿಂದ ತಲೆ ತಗ್ಗಿಸಬೇಕಾಗಿ ಬಂತು. ನಿನ್ನ ಮಗನಿಂದ ಇಂತಹ ಕಪ್ಪು ಚುಕ್ಕೆ ಬಂತು ಎಂದು ಹರಿಹಾಯ್ದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಎಚ್‌.ಡಿ. ದೇವೇಗೌಡ ನಿವಾಸದಲ್ಲಿ ಸಭೆ ನಡೆದಿದ್ದು, ಪ್ರಜ್ವಲ್ ಪ್ರಕರಣದಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಕಾನೂನು ಹೋರಾಟದ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ದೇವೇಗೌಡರ ಸಮ್ಮುಖದಲ್ಲಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಟ್ಟಾಗಿ ರೇವಣ್ಣ ಮೇಲೆ ಕಿಡಿಕಾರಿದ್ದಾರೆ ಎನ್ನಲಾಗಿದೆ.

“ನಿನ್ನ ಮಗ ಮಾಡಿದ ಕೃತ್ಯಕ್ಕೆ ನಾವು ತಲೆ ತಗ್ಗಿಸಬೇಕು. ಇಡೀ ಪ್ರಪಂಚಕ್ಕೆ ಗೊತ್ತಾಗುವ ಕೆಲಸ ಮಾಡಿ ಹೋದ. ದೇಶದಲ್ಲಿ ತಲೆ ಎತ್ತಿಕೊಳ್ಳದಂತೆ ಮಾಡಿ ಹೋದ” ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಸಹ ಇದೇ ವೇಳೆ ತಮ್ಮ ಅಸಮಾಧಾನ ಹೊರಹಾಕಿದ್ದು, ನನ್ನ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಇಂತಹ ಕಪ್ಪು ಚುಕ್ಕೆ ನಮ್ಮ ವಿರುದ್ಧ ಬಂದಿರಲಿಲ್ಲ. ನಿನ್ನ ಮಗನಿಂದ ಇಂತಹ ಕಪ್ಪು ಚುಕ್ಕೆ ಬಂತು. ಮಗನನ್ನು ಬೆಳೆಸುವ ವಿಚಾರದಲ್ಲಿ ನೀನು ಎಡವಿದ್ದೀಯಾ ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.

ರಾಜಕೀಯ ಮತ್ತು ಕಾನೂನಾತ್ಮಕ ಹೋರಾಟದ ಚರ್ಚೆ

ಬಳಿಕ ಈ ಪ್ರಕರಣದಲ್ಲಿ ರಾಜಕೀಯ ವಿರೋಧಿಗಳಿಗೂ ಖಡಕ್ ಎಚ್ಚರಿಕೆ ಕೊಡಬೇಕು. ಅಲ್ಲದೆ, ನಮ್ಮ ತಂಟೆಗೆ ಬಂದ ಡಿ.ಕೆ. ಬ್ರದರ್ಸ್‌ಗೆ ತಿರುಗೇಟು ಕೊಡಬೇಕು. ಕೇವಲ ರಾಜಕೀಯವಾಗಿ ಅಷ್ಟೇ ಅಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಆ ವಿಡಿಯೊಗಳನ್ನು ಬಿಡುಗಡೆ ಮಾಡಿದವರು ಯಾರು? ಇದರ ಹಿಂದೆ ಇರುವ ಶಕ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡಲು ತಂತ್ರಗಾರಿಕೆ ರೂಪಿಸಲಾಗಿದೆ ಎನ್ನಲಾಗಿದೆ.

ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪಿವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು

1- ಪ್ರಜ್ವಲ್ ಅವರೇ ನಿಮಗೆ ವಯಸ್ಸು ಎಷ್ಟು?
2- ನೀವು ಏನು ಓದಿದ್ದೀರಿ? ಎಲ್ಲಿ ಓದಿದ್ದು?
3- ಎಲೆಕ್ಷನ್ ಮುಗಿದ ತಕ್ಷಣ ತಾವು ಎಲ್ಲಿಗೆ ಹೋದಿರಿ?
4- ನೀವು ಹೆಚ್ಚಾಗಿ ವಾಸವಿರೋದು ಹಾಸನವಾ? ದೆಹಲಿಯಾ? ಅಥವಾ ಬೆಂಗಳೂರಲ್ಲೋ?
5- ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಏನಂತೀರಿ?
6- ಅಸಲಿಗೆ ಅವು ನಿಮ್ಮ ವಿಡಿಯೊಗಳಾ?
7- ವಿಡಿಯೋದಲ್ಲಿರುವ ಧ್ವನಿ ನಿಮ್ಮದಲ್ಲವೇ?
8- ನಿಮ್ಮಿಂದಲೇ ರೆಕಾರ್ಡ್‌ ಎನ್ನಲಾಗುತ್ತಿದೆ, ಹೌದೇ?
9- ರೆಕಾರ್ಡ್ ಮಾಡಲು ಬಳಸಿದ ಸಾಧನ ಯಾವುದು?
10- ನೀವೇ ರೆಕಾರ್ಡ್ ಮಾಡಿದ್ದಂತೆ. ಯಾಕೆ ಮಾಡಿದಿರಿ?
11 – ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ?
12- ನಿಮ್ಮ ಮೋಜಿಗೆ ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದಿರಾ?
13- ರೆಕಾರ್ಡ್ ಮಾಡುವುದು ತಪ್ಪು ಎಂದು ನಿಮಗೆ ಗೊತ್ತಿಲ್ವೆ?
14- ದೃಶ್ಯಗಳಲ್ಲಿ ಇರುವ ಮಹಿಳೆಯರು ನಿಮಗೆ ಪರಿಚಯವೇ?
15- ಆ ಮಹಿಳೆಯರನ್ನು ನೀವು ಎಲ್ಲಿ ಭೇಟಿ ಮಾಡಿದಿರಿ?
16- ದೈಹಿಕ ಸಂಪರ್ಕ ಬೆಳೆಸಲು ಏನಾದರೂ ಆಮಿಷ ಒಡ್ಡಿದ್ರಾ?
17 – ಅದು ಅತ್ಯಾಚಾರಕ್ಕೆ ಸಮ ಎಂದು ಗೊತ್ತಿದೆಯೇ?
18- ಪ್ರಮೋಷನ್, ಕೆಲಸದ ನೆಪದಲ್ಲಿ ದೈಹಿಕ ಸಂಪರ್ಕ ಮಾಡಿದಿರಾ?
19- ನಿಮಗೇನಾದರೂ ಮಾನಸಿಕ ಸಮಸ್ಯೆ ಇದೆಯಾ?
20- ನೀವು ದೌರ್ಜನ್ಯ ನಡೆಸುತ್ತಿರುವಂತಿದೆ, ಏನಂತೀರಿ?
21- ನೋಟಿಸ್ ಕೊಟ್ಟರೂ 7 ದಿನ ಟೈಮ್ ಯಾಕೆ ಕೇಳಿದಿರಿ?
22- ನೀವು ದೃಶ್ಯ ಶೂಟ್ ಮಾಡಲು ಬಳಸಿದ ಸಾಧನ ಎಲ್ಲಿದೆ?
23- ಬೇರೆ ಯಾರ ಬಳಿಯಾದರೂ ವಿಡಿಯೊ ಶೇರ್ ಮಾಡಿದಿರಾ?
24- ಖಾಸಗಿ ದೃಶ್ಯಗಳು ಹೇಗೆ ಹೊರಗೆ ಬಂದವು ಹೇಳಬಹುದಾ?
25- ನಿಮಗೆ ಕಾರ್ತಿಕ್ ಎಂಬ ವ್ಯಕ್ತಿ ಗೊತ್ತಾ?
26 – ನಿಮಗೂ ಕಾರ್ತಿಕ್‌ಗೂ ಸ್ನೇಹವಿತ್ತಾ?
27 – ನಿಮ್ಮ ವಿರುದ್ಧ ಸುದ್ದಿ ಪ್ರಸಾರವಾಗದಂತೆ ತಡೆ ತಂದಿದ್ದಿರಿ ಯಾಕೆ?
28 – ನಿಮ್ಮ ಮೇಲಿನ ಪಿತೂರಿ ಅಂತಾದರೆ ನೀವ್ಯಾಕೆ ದೂರು ನೀಡಲಿಲ್ಲ?
29 – ನಿಮ್ಮ ವಿರುದ್ಧ ಆರೋಪ ಬಂದ ಕೂಡಲೇ ಯಾಕೆ ದೇಶ ಬಿಟ್ಟು ಹೋದಿರಿ?
30 – ಮನೆಯಲ್ಲಿ ಯಾರ ಬಳಿಯಾದರೂ ಈ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಿರಾ?
31 – ಕೆಲಸದಾಕೆಯ ಆರೋಪದ ಬಗ್ಗೆ ಏನಂತೀರಿ?
32 – ಪ್ರಜ್ವಲ್ ನೀವು ತನಿಖೆಗೆ ಸಹಕರಿಸಬೇಕು
33 – ತನಿಖೆ ಪೂರ್ಣವಾಗುವವರೆಗೂ ದೇಶ ಬಿಟ್ಟು ಹೋಗಬೇಡಿ

ಎಂಬಿತ್ಯಾದಿ ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಒಂದು ವೇಳೆ ಇವುಗಳಿಗೆ ಆರೋಪಿ ಪ್ರಜ್ವಲ್‌ ಸ್ಪಂದಿಸದೆ ಸಮರ್ಪಕ ಉತ್ತರ ನೀಡಿದ್ದರೆ ಮುಂದಿನ ಕ್ರಮದ ಬಗ್ಗೆ ಎಸ್‌ಐಟಿ ಚಿಂತನೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಎಚ್‌‌‌‌.ಡಿ.ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು!

1) ನಿಮ್ಮ ಹೆಸರೇನು..? ಏನು ಕೆಲಸ ಮಾಡಿಕೊಂಡಿದ್ದೀರಿ..?
2) ಯಾವ ವಿಳಾಸದಲ್ಲಿ ವಾಸವಾಗಿದ್ದೀರಾ? ಎಷ್ಟು ವರ್ಷ..?
3) ನಿಮ್ಮ ಮೇಲೆ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಮಾಹಿತಿ ಇದೆಯಾ?
4) ದೂರು ನೀಡಿರುವ ಮಹಿಳೆ ಪರಿಚಯಸ್ಥರಾ? ಸಂಬಂಧಿನಾ?
5) ಎಷ್ಟು ವರ್ಷಗಳಿಂದ ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ..?
6) ದೂರಿನಲ್ಲಿ ಉಲ್ಲೇಖಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದೀರಾ?
7) ನಿಮ್ಮ ಪುತ್ರನ ಮೇಲೂ ಆರೋಪಿವಿದೆ ಗಮನಕ್ಕೆ ಬಂದಿತ್ತಾ..?
8) ನಿಮ್ಮ ಗಮನಕ್ಕೆ ಬಂದಿದ್ದರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ?
9) ಒಂದು ವೇಳೆ ಚರ್ಚೆ ಮಾಡಿದ್ದರೆ ನಿಮ್ಮ ಪುತ್ರ ಏನು ಹೇಳಿದ್ದರು?
10) ನಿಮ್ಮ ಪುತ್ರನ ಕಾರು ಚಾಲಕ ಕಾರ್ತಿಕ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ?
11) ನಿಮ್ಮ ಡ್ರೈವರ್ ಕಾರ್ತಿಕ್ ಜತೆ ಏನಾದರೂ ಗಲಾಟೆ ಆಗಿತ್ತಾ?
12) ವಿಡಿಯೊ ನಾನೇ ಕೊಟ್ಟಿದ್ದು ಎಂದು ಕಾರ್ತಿಕ್ ಹೇಳಿಕೆ ನೀಡಿದ್ದಾರಲ್ವಾ, ಇದು ಸತ್ಯನಾ?
13) ಪೆನ್‌ಡ್ರೈವ್‌ನಲ್ಲಿರೋ ವಿಡಿಯೊ ಪ್ರಜ್ವಲ್ ರೇವಣ್ಣನವರೆದ್ದೇನಾ..?
14) ಇಲ್ಲ ಅಂದಾದರೆ ಕೋರ್ಟ್‌ನಲ್ಲಿ ಸ್ಟೇ ತಂದಿದ್ದು ಯಾಕೆ?
15) ಮನೆ ಕೆಲಸದವಳು ಮಾಡುವ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

Continue Reading

ಕ್ರೀಡೆ

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Uber Cup 2024 Quarterfinal: ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನಿರೀಕ್ಷೆ ಹುಸಿಯಾಗಿದೆ.

VISTARANEWS.COM


on

Uber Cup 2024 Quarterfinal
Koo

ಚೆಂಗ್ಡು (ಚೀನಾ): ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್​ ಫೈನಲ್(Uber Cup 2024 Quarterfinal)​ ಪಂದ್ಯದಲ್ಲಿ ಭಾರತದ(India) ಮಹಿಳಾ ತಂಡ ಜಪಾನ್(Japan)​ ವಿರುದ್ಧ 3-0 ಅಂತರದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಗುರುವಾರ ನಡೆದ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಜಪಾನ್​ ಸೆಮಿಫೈನಲ್​ಗೆ ಪ್ರವೇಶಿಸಿದೆ. ಶುಕ್ರವಾರ ನಡೆಯಲಿರುವ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ ತಂಡ 6 ಬಾರಿಯ ಚಾಂಪಿಯನ್​ ​ಚೀನಾದ ಸವಾಲು ಎದುರಿಸಲಿದೆ.

ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 10-21, 22-20, 15-21 ರಲ್ಲಿ ಅಯಾ ಒಹೊರಿ ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸಪಟ್ಟ ಚಲಿಹಾ ಎರಡನೇ ಗೇಮ್​ನಲ್ಲಿ ತಿರುಗಿ ಬಿದ್ದು 22-20 ಅಂತರದಿಂದ ಕೈವಶ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಸೋಲು ಕಂಡರು.

ಮೊದಲ ಮಹಿಳಾ ಡಬಲ್ಸ್​ನಲ್ಲಿ ಕೆ.ಪ್ರಿಯಾ-ಶ್ರುತಿ ಮಿಶ್ರಾ ಜೋಡಿಯನ್ನು ನಮಿ ಮತ್ಸುಯಾಮಾ-ಚಿಹರು ಶಿದಾ ಸೇರಿಕೊಂಡು 8-21, 9-21 ನೇರ ಗೇಮ್​ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಮಹಿಳಾ ಸಿಂಗಲ್ಸ್​ನಲ್ಲಿ ಇಶಾರಾಣಿ ಶಾರಾಣಿ ಬರುಹಾ ಅವರನ್ನು 15-21, 12-21 ನೇರ ಗೇಮ್​ಗಳ ಅಂತದಿಂದ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಮಣಿಸಿದರು. ಈ ಸೋಲಿನೊಂದಿಗೆ ಭಾರತ ತಂಡದ ಸವಾಲು ಕೂಡ ಅತ್ಯಂಗೊಂಡಿತು. ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

ಥಾಮಸ್‌ ಕಪ್‌: ಇಂದು ಭಾರತ-ಚೀನಾ ಸೆಣಸಾಟ


ಇಂದು ನಡೆಯುವ ಪುರುಷರ ಥಾಮಸ್‌ ಕಪ್‌(Thomas Cup 2024) ಟೂರ್ನಿಯ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತ(Indian men’s Badminton team) ತಂಡ ಬದ್ಧ ಎದುರಾಳಿ ಚೀನಾ ತಂಡದ ಸವಾಲು ಎದುರಿಸಲಿದೆ. ಬುಧವಾರ ನಡೆದಿದ್ದ ಅಂತಿಮ ಲೀಗ್​ ಪಂದ್ಯದಲ್ಲಿ ಭಾರತ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ 1-4 ಅಂತರದಿಂದ ಸೋಲನುಭವಿಸಿತ್ತು. ಸೋಮವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 5-0 ಅಂತರದಿಂದ, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 4-1 ಅಂತರದ ಭರ್ಜರಿ ಗೆಲುವು ಸಾಧಿಸಿತ್ತು.

Continue Reading
Advertisement
assault case in Bengaluru
ಬೆಂಗಳೂರು2 mins ago

Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Vote Jihad
ದೇಶ15 mins ago

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Prajwal Revanna Case PM Modi defends MP accused of rape says Rahul Gandhi
Lok Sabha Election 202420 mins ago

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Rinku Singh
ಕ್ರೀಡೆ28 mins ago

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Crime News
ಕ್ರೈಂ29 mins ago

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Samsung
ತಂತ್ರಜ್ಞಾನ48 mins ago

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

students self harming
ಕ್ರೈಂ1 hour ago

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

Prajwal Revanna Case HD DeveGowda and HD Kumaraswamy slams HD Revanna
ಕ್ರೈಂ2 hours ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್2 hours ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ2 hours ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌