Tungabhadra Dam: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್‌ ಅಳವಡಿಸುವ ಕಾರ್ಯ; ತಜ್ಞ ಕನ್ನಯ್ಯ ನಾಯ್ಡು ಸಾಹಸ - Vistara News

ಪ್ರಮುಖ ಸುದ್ದಿ

Tungabhadra Dam: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್‌ ಅಳವಡಿಸುವ ಕಾರ್ಯ; ತಜ್ಞ ಕನ್ನಯ್ಯ ನಾಯ್ಡು ಸಾಹಸ

Tungabhadra Dam: ಕನ್ನಯ್ಯ ನಾಯ್ಡು ಅವರ ಪ್ರಯತ್ನದಿಂದ ನೀರು ಉಳಿಯುವ ಭರವಸೆ ಮೂಡಿದೆ. ಪರಿಣಿತರಾದ ಕನ್ನಯ್ಯ ನಾಯ್ಡು ಅವರಿಂದ ನೀರು ಉಳಿಸುವ ಪ್ರಯತ್ನ ನಡೆದಿದ್ದು, ಬಳ್ಳಾರಿಯ ಜಿಂದಾಲ್‌ನಿಂದ ಬೃಹತ್‌ ಯಂತ್ರಗಳು ಬಂದಿವೆ. ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್, ಹೊಸಳ್ಳಿಯ ಹಮೀದ್ ಎಂಜನಿಯರ್ಸ್‌ಗಳಲ್ಲಿ ಗೇಟ್‌ ರೆಡಿ ಮಾಡಲಾಗಿದೆ.

VISTARANEWS.COM


on

cm siddaramaiah tungabhadra dam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಮುರಿದುಹೋಗಿರುವ 19ನೇ ನಂಬರ್‌ ಗೇಟ್ (19 gate crash) ಅನ್ನು ಮತ್ತೆ ಅಳವಡಿಸುವ ಕಾರ್ಯ ಇಂದಿನಿಂದಲೇ ಆರಂಭವಾಗುತ್ತಿದೆ. ಡ್ಯಾಂ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನೀರು ಇರುವಾಗಲೇ ಗೇಟ್ ಅಳವಡಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ನೀರು ಇರುವಾಗ ಶಟರ್‌ಗಳನ್ನು ಹೇಗೆ ಸೆಟ್ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿರುವ ಕನ್ನಯ್ಯ ನಾಯ್ಡು ಆ್ಯಂಡ್ ಟೀಂ 20 ಅಡಿ ಅಗಲ, 12 ಅಡಿ ಉದ್ದದ ಕಟ್ ಮಾಡಿ ರೆಡಿ ಇರಿಸಿಕೊಂಡಿದೆ. ಈಗ ಗೇಟ್ ಮುಚ್ಚಿದರೆ ಜಲಾಶಯದಲ್ಲಿ ಸಾಕಷ್ಟು ನೀರು ಉಳಿಸಿಕೊಳ್ಳಬಹುದು. ಇಲ್ಲವಾದರೆ ಸುಮಾರು 60 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಹರಿದುಹೋಗಲಿದೆ.

ಕನ್ನಯ್ಯ ನಾಯ್ಡು ಅವರ ಪ್ರಯತ್ನದಿಂದ ನೀರು ಉಳಿಯುವ ಭರವಸೆ ಮೂಡಿದೆ. ಪರಿಣಿತರಾದ ಕನ್ನಯ್ಯ ನಾಯ್ಡು ಅವರಿಂದ ನೀರು ಉಳಿಸುವ ಪ್ರಯತ್ನ ನಡೆದಿದ್ದು, ಬಳ್ಳಾರಿಯ ಜಿಂದಾಲ್‌ನಿಂದ ಬೃಹತ್‌ ಯಂತ್ರಗಳು ಬಂದಿವೆ. ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್, ಹೊಸಳ್ಳಿಯ ಹಮೀದ್ ಎಂಜನಿಯರ್ಸ್‌ಗಳಲ್ಲಿ ಗೇಟ್‌ ರೆಡಿ ಮಾಡಲಾಗಿದೆ.

ಕನ್ನಯ್ಯ ನಾಯ್ಡು ಹೇಳಿದ್ದೇನು?

ಕ್ರೆಸ್ಟ್‌ ಪರಿಣತ ಎಂದೇ ಖ್ಯಾತಿ ಪಡೆದಿರುವ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಸ್ಥಳದಲ್ಲಿದ್ದು, ಒಟ್ಟಾರೆ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಸಿಎಂ ಆಗಮನಕ್ಕೂ ಮುನ್ನವೇ ಜಲಾಶಯಕ್ಕೆ ಆಗಮಿಸಿದ್ದ ಕನ್ನಯ್ಯ ನೇತೃತ್ವದ ತಜ್ಞರ ತಂಡ ಅದರ ಪರಿಶೀಲನೆ ನಡೆಸಿತ್ತು.

ಕ್ರೆಸ್ಟ್ ತಜ್ಞ ಅಂತಲೇ ಪ್ರಖ್ಯಾತಿ ಹೊಂದಿರೋ ಕನ್ಹಯ್ಯ ನಾಯ್ಡು ಹೇಳಿರುವ ಪ್ರಕಾರ, ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿಗೆ ಇಳಿಸುವುದು ಕಷ್ಟ. ಒಟ್ಟು ಐವತ್ತು ಟನ್ ಭಾರದ ಕಬ್ಬಿಣದ ಗೇಟ್‌ನಲ್ಲಿ ಐದು ಪೀಸ್‌ಗಳನ್ನು ಒಂದೊಂದಾಗಿ ಇಳಿಸಬೇಕು. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗುತ್ತಿದೆ.

ನಾಳೆಯಿಂದ ಒಂದೊಂದೇ ಪೀಸ್‌ಗಳನ್ನು ಕೂರಿಸುತ್ತೇವೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡುತ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಗೇಟ್ ಆಯುಷ್ಯ ಸುಮಾರು 40 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಉತ್ತಮವಾಗಿ ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ. ನೀರು ಕಡಿಮೆಯಾದ ಮೇಲೆ ‌ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಕನ್ನಯ್ಯ ನಿನ್ನೆ ತಿಳಿಸಿದ್ದರು.

ಸಿಎಂ ಹೇಳಿದ್ದೇನು?

“70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೇಟ್ ಒಡೆದಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ. ಇದನ್ನು ಆಗಲೇ ತಯಾರು ಮಾಡಲಾಗ್ತಿದೆ. ನಾಳೆಯಿಂದ ಗೇಟ್ ಕೂಡಿಸೋ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ಬಹಳ ಅನುಭವಿ ಅವರು, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಕೂಡಿಸಲಾಗ್ತದೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ಭೇಟಿಯ ಬಳಿಕ ಹೇಳಿದ್ದರು.

ಇದನ್ನೂ ಓದಿ: CM Siddaramaiah: ಬೆಂಗಳೂರಿನಲ್ಲಿ ಸಿಎಂ‌ ಸಿದ್ದರಾಮಯ್ಯಗೆ ಟೆನ್ಷನ್; ದೆಹಲಿಯಲ್ಲಿ ಡಿಕೆ‌ ಶಿವಕುಮಾರ್ ಲಾಬಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Maharaja Trophy: ನಾಳೆಯಿಂದ ಮಹಾರಾಜ ಟ್ರೋಫಿ ಆರಂಭ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Maharaja Trophy: ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಇವುಗಳೆಂದರೆ, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್.

VISTARANEWS.COM


on

Maharaja Trophy
Koo

ಬೆಂಗಳೂರು: ಬಹುನಿರೀಕ್ಷಿತ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಕ್ರಿಕೆಟ್ ಟೂರ್ನಿ ನಾಳೆ(ಆಗಸ್ಟ್​ 15, ಗುರುವಾರ)ಯಿಂದ ಆರಂಭವಾಗಲಿದೆ. ಟೂರ್ನಿ ಸೆಪ್ಟೆಂಬರ್​ 1ರ ತನಕ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಮುಖಾಮುಖಿಯಾಗಲಿವೆ. ಈ ಬಾರಿ ರಾಜ್ಯದ ವಿವಿಧೆಡೆ ಮಳೆ ಭೀತಿ ಇರುವುದರಿಂದ ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್‌ ಏರ್‌ ಸಿಸ್ಟಮ್‌ ಇರುವ ಕಾರಣ ಮಳೆ ಬಂದರೂ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ.

ತಂಡಗಳು

ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಇವುಗಳೆಂದರೆ, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್.

ವೇಳಾಪಟ್ಟಿ

ಗುರುವಾರ, ಆಗಸ್ಟ್ 15, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 16, 2024 : ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 16, 2024 : ಮಂಗಳೂರು ಡ್ರ್ಯಾಗನ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 16, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಶನಿವಾರ, ಆಗಸ್ಟ್ 17, 2024 : ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00

ಶನಿವಾರ, ಆಗಸ್ಟ್ 17, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಭಾನುವಾರ, ಆಗಸ್ಟ್ 18, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಭಾನುವಾರ, ಆಗಸ್ಟ್ 18, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಸೋಮವಾರ, ಆಗಸ್ಟ್ 19, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಸೋಮವಾರ, ಆಗಸ್ಟ್ 19, 2024 : ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಮಂಗಳವಾರ, ಆಗಸ್ಟ್ 20, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಇದನ್ನೂ ಓದಿ Maharaja Trophy 2024: ಮಹಾರಾಜ ಟಿ20 ಕ್ರಿಕೆಟ್​ ಟೂರ್ನಿ ಆರಂಭಕ್ಕೆ ಒಂದು ದಿನ ಬಾಕಿ; ತಂಡಗಳ ವಿವರ ಹೀಗಿದೆ

ಮಂಗಳವಾರ, ಆಗಸ್ಟ್ 20, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಬುಧವಾರ, ಆಗಸ್ಟ್ 21, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00

ಬುಧವಾರ, ಆಗಸ್ಟ್ 21, 2024 : ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಗುರುವಾರ, ಆಗಸ್ಟ್ 22, 2024 : ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00

ಗುರುವಾರ, ಆಗಸ್ಟ್ 22, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 23, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 23, 2024 : ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7:00

ಶನಿವಾರ, ಆಗಸ್ಟ್ 24, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಶನಿವಾರ, ಆಗಸ್ಟ್ 24, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಭಾನುವಾರ, ಆಗಸ್ಟ್ 25, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಭಾನುವಾರ, ಆಗಸ್ಟ್ 25, 2024 : ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಸೋಮವಾರ, ಆಗಸ್ಟ್ 26, 2024 : ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಸೋಮವಾರ, ಆಗಸ್ಟ್ 26, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7:00

ಮಂಗಳವಾರ, ಆಗಸ್ಟ್ 27, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00

ಮಂಗಳವಾರ, ಆಗಸ್ಟ್ 27, 2024 : ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಬುಧವಾರ, ಆಗಸ್ಟ್ 28, 2024 : ಮಂಗಳೂರು ಡ್ರಾಗನ್ಸ್​ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಬುಧವಾರ, ಆಗಸ್ಟ್ 28, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಗುರುವಾರ, ಆಗಸ್ಟ್ 29, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00

ಗುರುವಾರ, ಆಗಸ್ಟ್ 29, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 30, 2024 : ಸೆಮಿಫೈನಲ್ 1 (1 vs 4), ಸಂಜೆ 7:00

ಶನಿವಾರ, ಆಗಸ್ಟ್ 31, 2024 : ಸೆಮಿಫೈನಲ್ 2 (2 vs 3), ಸಂಜೆ 7:00

ಭಾನುವಾರ, ಸೆಪ್ಟೆಂಬರ್ 1, 2024 : ಫೈನಲ್, ಸಂಜೆ 7:00

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮವಿಲಾಪಕ್ಕೆ ಲಕ್ಷ್ಮಣೋಪಶಮನ

ಧವಳ ಧಾರಿಣಿ ಅಂಕಣ: ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ.

VISTARANEWS.COM


on

rama laxmana ಧವಳ ಧಾರಿಣಿ ಅಂಕಣ
Koo

ವಿಯೋಗದಿಂದ ಕದಡಿದ ಮನಸ್ಸಿಗೆ ಪೂರ್ವಸ್ಮೃತಿಯನ್ನು ತಂದುಕೊಡುವ ಸನ್ನಿವೇಶ

dhavala dharini by Narayana yaji

:: ನಾರಾಯಣ ಯಾಜಿ

ತ್ಯಜತ್ವಾಂ ಕಾಮವೃತ್ತತ್ತ್ವಂ ಶೋಕಂ ಸಂನ್ಯಸ್ಯ ಪೃಷತಃ I
ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ II ಕಿ. 1.123 II

ಸೀತಾವಿಯೋಗದಿಂದುಂಟಾಗಿರುವ ಶೋಕವನ್ನು ಬಿಡು. ಮನ್ಮಥವಿಕಾರವನ್ನು ತ್ಯಜಸು! ನೀನು ಮಹಾತ್ಮನೆಂಬುದನ್ನೂ , ಕೃತಾತ್ಮನೆನ್ನುವುದನ್ನೂ ಮರೆತುಬಿಟ್ಟಿರುವೆ.

ರಾಮಾಯಣದಲ್ಲಿ ಕಿಷ್ಕಿಂಧಾ ಕಾಂಡದ ಬಹುಮುಖ್ಯವಾದ ಘಟನೆಯೇ ಪತ್ನಿಯ ವಿರಹದಿಂದ ಅಪಾರ ದುಃಖಕ್ಕೆ ಒಳಗಾದ ರಾಮನನ್ನು ಲಕ್ಷ್ಮಣ ಸಮಾಧಾನಪಡಿಸುವುದು. ಕಿಷ್ಕಿಂಧಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಲಕ್ಷ್ಮಣ ಎಂಟು ಶ್ಲೋಕದಲ್ಲಿ ರಾಮನು ಸುಗ್ರೀವನಲ್ಲಿಗೆ ಶರಣು ಹೊಂದಲು ಬಂದಿದ್ದಾನೆ ಎನ್ನುವ ಮಾತುಗಳನ್ನು ಹೇಳಿದ್ದಾನೆ ಎನ್ನುವುದನ್ನು ನೋಡಿದ್ದೇವೆ. ಆರು ಬಗೆಯಲ್ಲಿ ಎಂಟು ಶ್ಲೋಕಗಳಲ್ಲಿ (ರಾಮಶ್ಚ ಸುಗ್ರೀವಂ ಶರಣಂ ಗತೌ ಮುಂತಾಗಿ) ಲಕ್ಷ್ಮಣನು ಹನುಮಂತನ ಹತ್ತಿರ ಕೇಳಿಕೊಳ್ಳುವ ಭಾಗ ರಾಮನ ವ್ಯಕ್ತಿತ್ವಕ್ಕೆ ಒಂದು ಕಪ್ಪುಚುಕ್ಕೆ ಎಂದು ಕೆಲ ಟೀಕಾಕಾರರು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಲಕ್ಷ್ಮಣ ಹಾಗೆ ಹೇಳಲಿಕ್ಕೆ ಕಾರಣವಾಗಿರುವ ಸಂಗತಿಯನ್ನು ಕಿಷ್ಕಿಂಧಾ ಕಾಂಡದ ಮೊದಲ ಭಾಗದಲ್ಲಿ ವಿವರವಾಗಿ ವಿವೇಚಿಸಲಾಗಿದೆ. ಸಮಗ್ರ ಭೂಮಂಡಲದ ಚಕ್ರವರ್ತಿಗಳಾದ ರಘುವಂಶೀಯ ರಾಮ ತನ್ನ ಸಿಂಹಾಸನದ ಘನತೆ ಗೌರವವನ್ನೆಲ್ಲಾ ಬಿಟ್ಟು ಸುಗ್ರೀವನಲ್ಲಿ ಆಶ್ರಯ ಕೋರಿ ಬಂದಿದ್ದಾನೆ. ಸೀತೆಯನ್ನು ಕಳೆದುಕೊಂಡ ರಾಮನಿಗೆ ಬುದ್ಧಿ ವಿಸ್ಮೃತಿಯಾಗಿತ್ತು. ವಿರಹದಿಂದಲಾಗಿ ರಾಮ ಗೋದಾವರಿ ನದಿಯನ್ನು ಬತ್ತಿಸಿಬಿಡುವೆ, ವಿಂದ್ಯಪರ್ವತವನ್ನೇ ಕೆಡಹಿಬಿಡುವೆ ಎಂದು ಕೂಗಾಡುವುದು ನಂತರ ಪಂಪಾಸರೋವರದಲ್ಲಿದ್ದ ಕಮಲವನ್ನೇ ತಿಂಗಳ ಬೆಳಕಿನಲ್ಲಿ ಕಮಲಮುಖಿ ಸೀತೆ ಎಂದು ಭ್ರಮಿಸಿ ಸರೋವರಕ್ಕೆ ಧುಮುಕಲು ಹೋಗುವುದು, ಹೀಗೆ ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ. ರಾಮ ತನ್ನ ತಂದೆ ತಾಯಿಯರಿಗೆ, ಸುಮಂತ್ರನಿಗೆ, ಗುಹನಿಗೆ ವಶಿಷ್ಠರು, ಜಾಬಾಲಿ ಮತ್ತು ಭರತನಿಗೆ ತನ್ನ ವನವಾಸ ದೀಕ್ಷೆಯ ಕುರಿತು ತಿಳಿಹೇಳುವ ಮಾತುಗಳು ಬಲು ಪ್ರಸಿದ್ಧ. ಪ್ರಸ್ತುತ ಸಂದರ್ಭದಲ್ಲಿ ಸೀತಾಪಹರಣವೆನ್ನುವುದು ಆತನ ಬುದ್ಧಿಯನ್ನು ವಿಭ್ರಣೆಗೊಳಿಸಿಬಿಟ್ಟಿದೆ. ಆತನಿಗೆ ಆ ದಟ್ಟ ಅರಣ್ಯದಲ್ಲಿ ಬುದ್ಧಿ ಹೇಳುವವರು ಯಾರೂ ಇಲ್ಲ. ಆ ಕೆಲಸವನ್ನು ಇಲ್ಲಿ ಲಕ್ಷ್ಮಣ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಹಾಗೇ ವಿವೇಕವನ್ನು ಹೇಳುವಾಗ ಲಕ್ಷ್ಮಣನಿಗೆ ತನ್ನ ಮಿತಿಯ ಅರಿವಿದೆ. ಆಜ್ಞಾಪೂರ್ವಕವಾಗಿ ಹೇಳುವಂತಿಲ್ಲ. ಉಪದೇಶವೂ ಆಗಕೂಡದು, ಹೇಳುವ ವಿಧಾನದಲ್ಲಿ ಹಿರಿಯನ ಗೌರವವಕ್ಕೆ ಚ್ಯುತಿಬರಬಾರದು.

ವಾಲ್ಮೀಕಿ ಇಲ್ಲಿ ಲಕ್ಷ್ಮಣನಿಂದ ಅಣ್ಣನಿಗೆ ವಿವೇಕವನ್ನು ಹೇಳುವ ವಿವರ ಬಲು ಆಸಕ್ತಿದಾಯಕವಾಗಿದೆ. ಮಹಾಕಾವ್ಯವನ್ನು ಬರೆಯಲು ವಾಲ್ಮೀಕಿಯಲ್ಲಿ ಅದೆಷ್ಟು ಲೋಕಾನುಭವ ಮತ್ತು ಶಾಸ್ತ್ರದ ಅಧ್ಯಯನ ಇರಬಹುದೆನ್ನುವುದಕ್ಕೆ ಇದೊಂದು ನಿದರ್ಶನ. ಆತ ರಾಮನಿಗೆ ಹೀಗೆ ಮಾಡಿ ಎಂದು ಹೇಳುವುದಿಲ್ಲ. ಚಿಕ್ಕವ ಹಿರಿಯರ ಹತ್ತಿರ ತನಗೆ ತಿಳಿಯದ ವಿಷಯವನ್ನು ಕಲಿಸಿಕೊಡು ಎನ್ನುವ ರೀತಿಯಲ್ಲಿ ಇದೇಕೆ ಹೀಗೆ ಎನ್ನುವ ಅನೇಕ ಪ್ರಶ್ನೆಗಳ ಮೂಲಕ ರಾಮನಲ್ಲಿ ಪ್ರಶ್ನೆ ಮಾಡುತ್ತಾನೆ. ರಾವಣನು ಪಾತಾಳಕ್ಕೆ ಹೊಕ್ಕರೂ. ಅಲ್ಲಿಂದ ಮುಂದೆ ಇನ್ನೋ ಗಹನವಾದ ಸ್ಥಳ ಹೊಕ್ಕರೂ ಆತ ಉಳಿಯಲಾರನು. ದಿತಿಯ ಗರ್ಭವನ್ನು ಹೊಕ್ಕರೂ ಮೈಥಿಲಿಯನ್ನು ತಂದೊಪ್ಪಿಸದಿದ್ದಲ್ಲಿ ಗರ್ಭವನ್ನು ಪ್ರವೇಶಿಸಿಯಾದರೂ ನಾನು ಅವನನ್ನು ಸಂಹರಿಸುತ್ತೇನೆ. ನೀನು ಉತ್ಸಾಹವನ್ನು ಕಳೆದುಕೊಂಡು ಹೀಗೆ ಯಾಕೆ ಇರುವೆ ಎನ್ನುವ ಮಾತುಗಳಲ್ಲಿ ನೀನು ಭ್ರಮಿತನಾಗಿದ್ದೀಯಾ ಎಂದು ನೇರವಾಗಿ ಹೇಳುವುದಿಲ್ಲ; ನೀನು ಉತ್ಸಾಹವನ್ನು ಕಳೆದುಕೊಳ್ಳಬೇಡ, ನೀನು ಹೀಗೆಲ್ಲಾ ಇರುವವಂತವನಲ್ಲ ವ್ಯಕ್ತಿಯಲ್ಲ ಎನ್ನುವ ಭಾವ ಪ್ರತೀ ಮಾತಿನಲ್ಲಿಯೂ ವ್ಯಕ್ತವಾಗುತ್ತದೆ.

ಪ್ರಾರಂಭದಲ್ಲಿ ಹೇಳಿದ ತ್ಯಜತ್ವಾಂ… ಎನ್ನುವ ಶ್ಲೋಕವನ್ನು ಗಮನಿಸಿ. ಅದರಲ್ಲಿ ಎರಡನೆಯ ಸಾಲಿನಲ್ಲಿ ಬರುವ “ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ” ಎನ್ನುವದರಲ್ಲಿ ಪ್ರಯೋಗಿಸಿದ “ಮಹಾತ್ಮ ಮತ್ತು ಕೃತಾತ್ಮಾ” ಎನ್ನುವುದು ರಾಮನ ಪೂರ್ವದ ಮೂಲಸ್ವರೂಪವಾದ ಮಹಾವಿಷ್ಣುವನ್ನು ಹೇಳುತ್ತದೆ. ಮಹಾತ್ಮಾ ಎಂದರೆ ಶ್ರೇಷ್ಠ, ಯಾರ ಶರೀರವು ಇತರರಿಗೆ ಶ್ರೇಷ್ಠವಾಗಿ ಕಾಣುವುದೋ; ಯಾವಾತನಿಗೆ ರಜಸ್ತಮಗಳೆನ್ನುವ ಮಲಿನತೆ ಇರುವುದಿಲ್ಲವೋ ಆತ ಮಹಾತ್ಮನು, ಸತ್ತ್ವಸ್ವರೂಪನು ಎಂದು ಆರ್ಥವಾಗುತ್ತದೆ. ಮತ್ತೊಂದು ಕೃತಾತ್ಮಾ-ಶುದ್ಧವಾದ ಆತ್ಮವುಳ್ಳವನು. ಶಾಶ್ತ್ರಗಳಿಂದ ಪರಿಶುದ್ಧವಾದ ಹೃದಯವುಳ್ಳವನು. ಶ್ರುತಿ ಸ್ಮೃತಿಗಳಲ್ಲಿ ಸ್ಮರಿಸಲ್ಪಟ್ಟವ ಎಂದಾಗುತ್ತದೆ. ಈ ಕಾರಣದಿಂದ ನೀನು “ತ್ಯಜತಾಂ ಕಾಮವೃತ್ತತ್ತ್ವಂ- ಕಾಮವಿಕಾರವೆನ್ನುವುದು ನಿನಗಲ್ಲ ಎನ್ನುತ್ತಾನೆ. ರಾಮನ ಮೂಲ ಯಾವುದು ಎನ್ನುವುದನ್ನು ಇಲ್ಲಿ ಲಕ್ಷ್ಮಣ ಈ ರೀತಿಯಲ್ಲಿ ಸೂಚಿಸುತ್ತಾನೆ. ಆತನ ಅವತಾರದ ಉದ್ಧೇಶವು ರಾವಣನನ್ನು ಸಂಹರಿಸುವ ಸಲುವಾಗಿಯೇ ಆಗಿದೆ. ಎಲ್ಲ ಕಡೆಯೂ ಮಾನವರಂತೆ ವ್ಯವಹರಿಸುವ ರಾಮ ಜಟಾಯುವಿನ ಪ್ರಕರಣದಲ್ಲಿ ಪರೋಕ್ಷವಾಗಿ, ಶಬರಿಯ ವಿಷಯದಲ್ಲಿ ಸ್ವ-ಸ್ವರೂಪದ ಪ್ರಜ್ಞೆಯಲ್ಲಿಯೇ ಅವರವರಿಗೆ ಮೋಕ್ಷವನ್ನು ಅನುಗ್ರಹಿಸಿದ್ದಾನೆ. ರಾಮಾಯಣದಲ್ಲಿ ರಾಮ ತನ್ನ ಮೂಲ ಸ್ವರೂಪವನ್ನು ಪ್ರಕಟಮಾಡುವ ಅಪರೂಪದ ಸಂದರ್ಭಗಳು ಇವು.

ಅಣ್ಣನಿಗೆ “ನೀನು ಪುರುಷೋತ್ತಮ” ಎನ್ನುತ್ತಾ ರಾಮನೆನ್ನುವ ದಶರಥನ ಮಗ ಯತಾರ್ಥದಲ್ಲಿ ವಿರಜಾಸ್ವರೂಪನಾದವ (ಪರತತ್ತ್ವ ಸ್ವರೂಪನಾದವ) ಇದೀಗ ಕಾರ್ಯಕಾರಣ ಸಂಬಂಧದಿಂದಾಗಿ ಸಂಸಾರಿಮಂಡಲಕ್ಕೆ ಅಭಿಮುಖನಾಗಿದ್ದಾನೆ. ಅದಕ್ಕೆ ಕಾರಣವಾದ ಅಂಶವನ್ನು ಸ್ಮರಣೆಗೆ ತಂದುಕೊಳ್ಳಬೇಕು. ರಾಮನ ಈ ದುಃಖವೆಲ್ಲವೂ ಅಭಿನಯವೇ ಹೊರತು ಅನುಭವಿಸಿ ಅದರಲ್ಲಿಯೇ ಮುಳುಗಿಹೋಗುವುದಲ್ಲ ಎನ್ನುವ ಅನೇಕ ಅರ್ಥವನ್ನು ಇಲ್ಲಿ ಕೊಡುತ್ತದೆ. ಕಿರಿಯರು ಹಿರಿಯರಿಗೆ ವಿವೇಕವನ್ನು ಹೇಳುವುದಲ್ಲ; ಅದರ ಕುರಿತಾದ ಅರಿವನ್ನು ಅವರ ಸ್ಮರಣೆಗೆ ತಂದುಕೊಡುವುದು ಎನ್ನುವುದು ಇಲ್ಲಿ ಲಕ್ಷ್ಮಣನ ವಿನಂತಿಯಲ್ಲಿ ಸ್ಪಷ್ಟವಾಗುತ್ತದೆ. ಹಿರಿಯರು ಉಪದೇಶವನ್ನು ನೀಡುತ್ತಾರೆ, ಸಮವಯಸ್ಕರು ಸಲಹೆಯನ್ನು ನೀಡುತ್ತಾರೆ (ಮಿತ್ರವಾಕ್ಯ), ಕಿರಿಯರು ತಮಗೆ ಗೊತ್ತಿದೆ ಎಂದು ಹಿರಿಯರನ್ನು ಯಾವ ಸಂದರ್ಭದಲ್ಲಿಯೂ ಅತಿಕ್ರಮಿಸಬಾರದು. ಇದೇಕೆ ಹೀಗೆ ಎನ್ನುತ್ತಲೇ ಹೇಳಬೇಕಾದುದನ್ನು ಹೇಳಬೇಕೆನ್ನುವುದಕ್ಕೆ ಇಲ್ಲಿ ಲಕ್ಷ್ಮಣನ ಮಾತುಗಳು ಸಾಕ್ಷಿ. ಈ ಭಾಗದಲ್ಲಿ ಲಕ್ಷ್ಮಣನನ್ನು ಮದಿಸಿದ ಮದ್ದಾನೆಗೆ ಕವಿ ಹೋಲಿಸಿದ್ದಾನೆ.

ತಂ ಮತ್ತಮಾತಙ್ಗವಿಲಾಸಗಾಮೀ ಗಚ್ಛನ್ತಮವ್ಯಗ್ರಮನಾ ಮಹಾತ್ಮಾ.
ಸ ಲಕ್ಷ್ಮಣೋ ರಾಘವಮಪ್ರಮತ್ತೋ ರರಕ್ಷ ಧರ್ಮೇಣ ಬಲೇನ ಚೈವ৷৷ಕಿ.1.127৷৷

ಮದಿಸಿದ ಆನೆಯಂತೆ ಒಯ್ಯಾರದಿಂದ ಹೆಜ್ಜೆಯಿಡುತ್ತಿದ್ದ ಅಣ್ಣನ ಸೇವೆಯಲ್ಲಿಯೇ ಏಕಾಗ್ರವಾದ ಮನಸ್ಸಿನಿಂದ ಕೂಡಿದ ಮಹಾತ್ಮನಾದ ಲಕ್ಷ್ಮಣನಾದರೋ, “ರರಕ್ಷ ಧರ್ಮೇಣ ಬಲೇನ ಚೈವ- ಧರ್ಮದಿಂದಲೂ ಬಲದಿಂದಲೂ ರಾಘವನ ದುಃಖವು ಕಡಿಮೆಯಾಗುವಂತೆ ಮಾಡಿದನು”. ರರಕ್ಷ- ಎನ್ನುವುದಕ್ಕೆ ದುಃಖರಹಿತನನ್ನಾಗಿ ಮಾಡಿದನು ಎನ್ನುವ ಅರ್ಥಬರುತ್ತದೆ(ನಿರ್ಧುಃಖಮಕರೋತ್). ರಾಮನಿಗೆ ಆತನ ಪೂರ್ವಸ್ಮರಣೆಯನ್ನು ತಂದುಕೊಡುವ ಸನ್ನಿವೇಶ ಇದು. ರಾಮನಿಗೆ ಅವನ ಮೂಲವನ್ನು ನೆನಪಿಸಿ ಆತ ಪರಂಧಾಮಕ್ಕೆ ಮರಳುವಂತೆ ಮಾಡುವವನು ಕಾಲಪುರುಷ. ಅದೂ ರಾಮಾಯಣದ ಅವತಾರದ ಉದ್ಧೇಶವಎಲ್ಲವೂ ಸಫಲವಾದ ಮೇಲೆ. ಇಲ್ಲಿ ಲಕ್ಷ್ಮಣನಿಗೆ ರಾಮನಿಗುಂಟಾದ ಬುದ್ಧಿವಿಸ್ಮೃತಿಯಿಂದ ಹೊರತರಬೇಕಾಗಿದೆ. ಇಲ್ಲಿ ಬರುವ “ಧರ್ಮೇಣ” ಅಂದರೆ ಸದಾಕಾಲವೂ ರಾಮನಿಗೆ ವಿಧೇಯನಾಗಿರುವ ಆತ ಆತನಿಗೆ ವಿವೇಕವನ್ನು ಹೇಳುವ ಸಂಧರ್ಭದಲ್ಲಿಯೂ ರಾಮಸೇವಕರೂಪದ ತನ್ನ ಸ್ವಭಾವಕ್ಕೆ ಕಿಂಚಿತ್ ಭಂಗ ಬಾರದಿರುವ ರೀತಿಯಲ್ಲಿ ವಿಷಯವನ್ನು ತಿಳಿಸುತ್ತಿದ್ದಾನೆ. ಇನ್ನು “ಬಲೇನಚೈವ” ಎನ್ನುವುದಕ್ಕೆ ಲಕ್ಷ್ಮಣ ಸೀತೆಯನ್ನು ರಾವಣ ಕದ್ದೊಯ್ದಿದ್ದಾನೆ ಎನ್ನುವುದು ಅವರಿಗೆ ತಿಳಿದಿದೆ. ಆದರೆ ರಾವಣ ಎಲ್ಲಿರಬಹುದು ಎನ್ನುವುದರ ಸುಳಿವು ಸಿಕ್ಕಿಲ್ಲ. ಇಲ್ಲಿ ದುಃಖಿಸುತ್ತಾ ಕುಳಿತರೆ ಕಾರ್ಯಸಾಧಿಸುವುದಿಲ್ಲ. ರಾವಣ ಎಲ್ಲಿದ್ದಾನೆ ಎನ್ನುವುದನ್ನು ಮೊದಲು ತಿಳಿಯಬೇಕು. ಆತ ಪಾತಾಳದಲ್ಲಿ ಇದ್ದರೂ, ಅಲ್ಲಿಂದ ಮುಂದೆ ಇನೂ ಗಹನವಾದ ಸ್ಥಳವನ್ನು ಹೊಕ್ಕರೂ ಪಾಪಿಷ್ಟನಾದ ಆತನನ್ನು ಹುಡುಕೋಣ ಎಂದು ಸಮಾಧಾನ ಹೇಳುತ್ತಾನೆ.

dhavala dharini king dasharatha
rama laxmana ಧವಳ ಧಾರಿಣಿ ಅಂಕಣ

ಅಯೋಧ್ಯಾ ಕಾಂಡದಲ್ಲಿ ಮುಂಗೋಪಿಯಾಗಿ ಲಕ್ಷ್ಮಣ ಕಾಣಿಸಿಕೊಳ್ಳುತ್ತಾನೆ. ತಂದೆಯಾದ ದಶರಥನನ್ನು ಬಂಧಿಸಿ ಸೆರೆಯಲ್ಲಿಟ್ಟು ರಾಜ್ಯವನ್ನು ಗೆದ್ದು ಅಣ್ಣನಾದ ರಾಮನಿಗೆ ಕೊಡುವೆ ಎಂದು ಅಬ್ಬರಿಸುತ್ತಾನೆ. ರಾಮನ ವಿವೇಕದ ಮಾತಿಗೆ ಅನಿವಾರ್ಯತೆಯಿಂದ ಸುಮ್ಮನಾಗುತ್ತಾನೆ. ಮುಂದೆ ಭರತ ರಾಮನನ್ನು ಕರೆತರಲು ಚಿತ್ರಕೂಟಕ್ಕೆ ಬರುವಾಗ ಆತನನ್ನು ನೋಡಿ, ತಮ್ಮಮೇಲೆ ಆಕ್ರಮಣಮಾಡಲು ಬಂದಿರಬಹುದೆನ್ನುವ ಸಂಶಯದಿಂದ ಭರತನನ್ನು ಎದುರಿಸುವೆ ಎನ್ನುವ ವೀರಾವೇಶದ ಮಾತುಗಳನ್ನು ಆಡುತ್ತಿದ್ದ ಲಕ್ಷ್ಮಣನ ಮೂಲ ಸ್ವಭಾವ ದುಡುಕಿನದ್ದಲ್ಲ. ರಾಮ ಗುಹನ ಆತಿಥ್ಯದಲ್ಲಿ ಗಂಗಾ ನದಿಯ ದಡದ ಮೇಲೆ ಮಲಗಿರುವಾಗ ಆತನ ಸ್ಥಿತಿಯನ್ನು ನೋಡಿ ಗುಹನ ಹತ್ತಿರ ಲಕ್ಷ್ಮಣ ಮರುಗುವುದು ಕರಳು ಚುರುಕ್ಕೆನ್ನುತ್ತದೆ. ಸದಾ ಹಂಸತೂಲಿಕಾತಲ್ಪದಲ್ಲಿ ಮಲಗುವ ತನ್ನ ಅಣ್ಣ ಇಂದು ಹೀಗೆ ಕೈಯನ್ನೇ ತಲೆದಿಂಬನ್ನಾಗಿಸಿಕೊಂಡು ಮಲಗಿರುವುದನ್ನು ನೋಡಲು ಆತನಿಗೆ ಸಾಧ್ಯವಾಗುವುದಿಲ್ಲ. ಲಕ್ಷ್ಮಣನದ್ದು ಹೆಂಗರಳು. ರಾಮನ ವಿಷಯದಲ್ಲಿ ಮಾತ್ರ ಕರುಣೆ ತೋರುವುದಲ್ಲ.

ಜನಸ್ಥಾನದಲ್ಲಿ ಅವರು ವಾಸಮಾಡುವಾಗ ನಡೆದ ಘಟನೆ. ವನವಾಸದ ಹದಿಮೂರನೆಯ ವರ್ಷದಲ್ಲಿ ಅವರು ಇದ್ದಾರೆ. ಆ ವರ್ಷದ ಹೇಮಂತ ಋತುವಿನಲ್ಲಿ ಅಸಾಧ್ಯವಾದ ಚಳಿಯಿದೆ. ಕಾಡಾನೆಗಳ ಹಿಂಡು ಬಾಯಾರಿಕೆಯಿಂದ ನೀರುಕುಡಿಯಲು ನದಿಗೆ ಬರುತ್ತಿದ್ದವಂತೆ ಆದರೆ ಹೇಮಂತದ ಚಳಿಯನ್ನು ತಾಳಲಾರದೇ ಸೊಂಡಿಲನ್ನು ನೀರಿಗೆ ಚಾಚಿ ನೀರು ಕುಡಿಯಲು ಯತ್ನಿಸಿದರೆ ಅವುಗಳಿಗೆ ತಣ್ಣನೆಯ ನೀರಿನ ಛಳಿಯನ್ನು ತಾಳಿಕೊಳ್ಳಲಾಗುವುದಿಲ್ಲ, ಮೈಕೊರೆವ ಚಳಿಗೆ ಅಂಜಿ ನೀರನ್ನು ಕುಡಿಯದೇ ಬಾಯಾರಿಕೆಯನ್ನು ಸಹಿಸಿಕೊಂಡು ಕಾಡಿಗೆ ಮರಳುತ್ತಿದ್ದವು. ಸದಾ ನೀರಿನಲ್ಲಿಯೇ ಇರುವ ಹಂಸಪಕ್ಷಿಗಳು ಸಹ ಚಳಿಗೆ ಹೆದರಿ ನೀರಿಗಿಳಿಯದೇ ದಡದಲ್ಲಿಯೇ ಸಾಲಾಗಿ ಕುಳಿತುಕೊಂಡಿದ್ದವು. ಅದನ್ನು ನೋಡಿದ ಲಕ್ಷ್ಮಣನಿಗೆ ನಂದಿಗ್ರಾಮದಲ್ಲಿ ಭರತನೂ ತಮ್ಮಂತೆ ವೃತಧಾರಿಯಾಗಿ ಗಡ್ಡೆ ಗಣಸು ತಿನ್ನುತ್ತಾ, ಜಟಾಧಾರಿಯಾಗಿ ನೆಲದಮೇಲೆ ಮಲಗುತ್ತಿದ್ದಾನೆ ಎನ್ನುವುದು ನೆನಪಾಯಿತು. ಸ್ವತಃ ತಾವು ಅಂತಹ ಚಳಿಯಲ್ಲಿ ನಡುಗುತ್ತಿದ್ದರೂ ಲಕ್ಷ್ಮಣನ ಮನಸ್ಸು ಇಲ್ಲಿ ಭರತನಿಗಾಗಿ ಮರುಗುತ್ತದೆ.

ಅತ್ಯನ್ತಸುಖಸಂವೃದ್ಧಸ್ಸುಕುಮಾರಸ್ಸುಖೋಚಿತಃ.
ಕಥಂ ನ್ವಪರರಾತ್ರೇಷು ಸರಯೂಮವಗಾಹತೇ৷৷ಅ.16.30৷৷

ಸುಖದಲ್ಲಿ ಬೆಳೆದ ಭರತ ಚಳಿಯಿಂದ ಕೂಡಿದ ಈ ಅಪರಾತ್ರಿಯಲ್ಲಿ ಸರಯೂ ನದಿಯಲ್ಲಿ ಹೇಗೆ ಸ್ನಾನ ಮಾಡಿಯಾನು ಎಂದು ಭರತನ ಕುರಿತು ಕಳವಳವನ್ನು ವ್ಯಕ್ತಪಡುತ್ತಾನೆ. ಅಪರಾತ್ರಿಯೆಂದರೆ ಮುಂಜಾನೆ ಬ್ರಾಹ್ಮೀ ಮುಹೂರ್ತಕ್ಕೆ ಮುನ್ನವೇ ಎದ್ದು ಸ್ನಾನಗಳನ್ನು ಪೂರೈಸಿ ನಿತ್ಯಕರ್ಮಾನುಷ್ಠಾನಗಳನ್ನು ಮಾಡಿ ಪ್ರಜೆಗಳ ಯೋಗಕ್ಷೇಮಗಳನ್ನು ನೋಡಲು ಪ್ರಾತಃಕಾಲದಲ್ಲಿ ಸಿದ್ಧನಾಗುತ್ತಿದ್ದ. ತಮಗಾದರೋ ವನವಾಸದ ದೀಕ್ಷೆಯಿದೆ. ಆದರೆ ಭರತ ಸುಖವಾಗಿ ಇರಬಹುದಾಗಿದ್ದರೂ ತಮ್ಮಂತೆ ವನವಾಸೀ ದೀಕ್ಷೆಯನ್ನು ಕೈಗೊಂಡು ರಾಜ್ಯವನ್ನು ನಡೆಸುತ್ತಿದ್ದಾನೆ. ರಾಜ್ಯವನ್ನು ರಾಮನ ಪ್ರತಿನಿಧಿಯಾಗಿ ನಿರ್ವಹಿಸುವ ಆತ ಅದಕ್ಕೆ ಚ್ಯುತಿಬಾರದ ರೀತಿಯಲ್ಲಿ ಚಳಿಗಾಲವನ್ನು ಲೆಕ್ಕಿಸದೇ ಕರ್ತವ್ಯಪರಾಯಣನಾಗಿದ್ದಾನೆ. ಚಳಿಗಾಲದ ವರ್ಣನೆ ಮತ್ತು ಭರತನ ಕುರಿತು ಲಕ್ಷ್ಮಣನ ಕಾಳಜಿ ಎರಡನ್ನೂ ಅನೇಕ ಉಪಮೆಗಳೊಂದಿಗೆ ವಾಲ್ಮೀಕಿ ಕಟ್ಟಿಕೊಟ್ಟಿದ್ದಾರೆ. ಧರ್ಮದ ಮೂಲಕವಾಗಿ ರಾಮನನ್ನು ಸಮಾಧಾನ ಮಾಡಿದ ಜೊತೆಗೆ ಬಲದ ಪ್ರದರ್ಶನದ ಮೂಲಕವೂ ರಾಮನನ್ನು ಸಮಾಧಾನಿಸಿದ ಎನ್ನುವುದಕ್ಕೆ ಲಕ್ಷ್ಮಣ ರಾಮನಲ್ಲಿ ”ಮೊದಲು ರಾವಣನನ್ನು ಹುಡುಕೋಣ. ಆತನಲ್ಲಿ ತಮ್ಮ ಪರಾಕ್ರಮವೆಷ್ಟು ಎನ್ನುವುದನ್ನು ತೋರಿಸಿ ಆತ ಸೀತೆಯನ್ನು ಬಿಟ್ಟುಕೊಡುವಂತೆ ಎಚ್ಚರಿಸೋಣ. ಅದಕ್ಕೂ ಆತ ಬಗ್ಗದಿದ್ದರೆ ಆತ ದಿತಿಯ ಗರ್ಭದಲ್ಲಿದ್ದರೂ ಆತನನ್ನು ಸಂಹರಿಸುವೆ” ಎನ್ನುವ ಮೂಲಕ ಬಲದಿಂದಲೂ ರಾಮನನ್ನು ಸಮಾಧಾನಿಸುತ್ತಾನೆ.

rama laxmana ಧವಳ ಧಾರಿಣಿ ಅಂಕಣ
rama laxmana ಧವಳ ಧಾರಿಣಿ ಅಂಕಣ

ಕಾವ್ಯದಲ್ಲಿ ನಾಟಕೀಯತೆಯ ಸನ್ನಿವೇಶ ಹೇಗೆ ಬರಬೇಕೆನ್ನುವುದಕ್ಕೆ ಇಲ್ಲಿನ ವರ್ಣನೆ ಸಾಕ್ಷಿ. ಲಕ್ಷ್ಮಣ ಪರಾಕ್ರಮದಲ್ಲಿ ಯಾರಿಗೂ ಕಡಿಮೆ ಇಲ್ಲದವನು. ಆನೆಯಷ್ಟು ಬಲ ಆತನಲ್ಲಿದೆ. ಮದಿಸಿದ ಆನೆ ತನ್ನ ಮಾವುತನ ಮೇಲೆ ಅಪಾರಪ್ರೀತಿಯನ್ನು ತೋರುತ್ತದೆ. ತನ್ನ ಮಾವುತ ವ್ಯಾಕುಲತೆಯಿಂದ ಕುಳಿತರೆ ಆತನನ್ನು ರಮಿಸಿ ತನ್ನೊಂದಿಗೆ ಕರೆದೊಯ್ಯುವ ಸ್ವಭಾವ ಅದಕ್ಕಿರುತ್ತದೆ ಇಂತಹ ದೃಶ್ಯವನ್ನು ಅನೇಕ ಕಡೆ ನೋಡಬಹುದಾಗಿದೆ. ಸುಮಾರು 70ರ ಉತ್ತರಾರ್ಧದಶಕದಲ್ಲಿ ರಾಜೇಶ ಖನ್ನಾ ಅಭಿನಯಿಸಿದ “ಹಾಥಿ ಮೇರಾ ಸಾಥಿ” ಸಿನೇಮಾವನ್ನು ನೋಡಿದ್ದರೆ ಅದು ಅರ್ಥವಾದೀತು. ರಾಮನೆನ್ನುವ ಸೋದರತ್ವದ ಒಲವಿನಲ್ಲಿ ಬಂಧಿತನಾದ ಲಕ್ಷ್ಮಣ ಅಥವಾ ತನ್ನ ತಾಯಿಯಾದ ಸುಮಿತ್ರೆಯ ಹತ್ತಿರ ಲಕ್ಷ್ಮಣ ಕಾಡಿಗೆ ಅಣ್ಣನನ್ನು ಅನುಸರಿಸಿಕೊಂಡು ಹೋಗುತ್ತೇನೆ ಎಂದು ಆಶೀರ್ವಾದವನ್ನು ಕೇಳಿದಾಗ ಆಕೆ ಮಗನಿಗೆ “ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್..” ರಾಮನನ್ನು ದಶರಥನೆಂದೆ ತಿಳಿದು ಗೌರವಿಸು, ನನ್ನನ್ನು ಹೇಗೆ ಗೌರವಿಸುತ್ತೀಯೋ ಅದೇ ರೀತಿ ಸೀತೆಗೆ ಗೌರವವನ್ನು ನೀಡು , ಅಡವಿಯನ್ನೇ ಅಯೋಧ್ಯೆಯೆಂದು ಭಾವಿಸು” ಎಂದು ಹರಸಿಕಳುಹಿಸಿದ್ದಳು. ಸಹಜವಾಗಿಯೂ ರಾಮನಲ್ಲಿ ಭಯಭಕ್ತಿಯುಳ್ಳ ಮತ್ತು ಅತನೇ ತನ್ನ ರಾಜನೆಂದು ತಿಳಿದು ತ್ರಿಕರಣಪೂರ್ವಕವಾಗಿ ಅನುಸರಿಸಿಕೊಂಡು ಬಂದವ ಲಕ್ಷ್ಮಣ. ಹಾಗಾಗಿ ಇಲ್ಲಿ ರಾಮನೆನ್ನುವ ಮಾವುತನನ್ನು ಮದಿಸಿದ ಆನೆಯಂತಿರುವ ಲಕ್ಷ್ಮಣ ಒಯ್ಯಾರದಿಂದ ಕರೆದುಕೊಂಡು ಬಂದ ಎನ್ನುವ ಉಪಮೆ ಸುಂದರವಾಗಿ ಮೂಡಿಬಂದಿದೆ.

ರಾಮನಿಗೆ ಸೀತೆಯನ್ನು ಕಳೆದುಕೊಂಡ ದುಃಖ ತಡೆಯಲಾರದೇ ವಿಸ್ಮೃತಿಗೊಳಗಾದ ವಿಷಯವನ್ನು ವಾಲ್ಮೀಕಿ ರಾಮಾಯಣದಲ್ಲಿ ವಿವರವಾಗಿ ಬಂದರೂ ಸ್ಕಾಂದಪುರಾಣದಲ್ಲಿ ಇನ್ನಷ್ಟು ವಿವರವಾಗಿ ವರ್ಣಿಸಲಾಗಿದೆ. ರಾಮನಿಗೆ ಅರಣ್ಯದಲ್ಲಿ ಸೀತೆಯ ವಿರಹದಿಂದ ಕಾಮೋದ್ದೀಪಕವಾಯಿತು. ಕಾಡಿನಲ್ಲಿರುವ ಭ್ರಮರವೇ ಮೊದಲಾದವುಗಳು ಸ್ವಂಚ್ಛಂದದಿಂದ ಹಾರಾಡುತ್ತಾ ಸಂಪಿಗೆಯ ಹೂವಿನ ಮಕರಂದವನ್ನು ಹೀರುತ್ತಿದ್ದವು. ಮಂದಮಾರುತ ಬೀಸುತ್ತಿತ್ತು. ಚಕ್ರವಾಕ ಪಕ್ಷಿಜೋಡಿಗಳು ಹಗಲಿನಲ್ಲಿ ಪರಸ್ಪರ ಮುದ್ದಾಡುತ್ತಿದ್ದವು. ವಿರಹಿಯಾದ ರಾಮ ಅದನ್ನು ನೋಡಿ ಕೋಪಗೊಂಡನಂತೆ. ತನ್ನ ವಿರಹದುಃಖವನ್ನು ನೋಡಿಯೂ ಕರುಣೆತೋರದೇ ಸಂತಸದಿಂದ ಇರುವ ಅವುಗಳನ್ನು ನೋಡಿ

ವೈಮುಖ್ಯಂ ಗಂಧಫಲ್ಯಾಸ್ತು ಭ್ರಮರಾಶಪತ್ಪ್ರಭುಃ I
ಕೋಕಾನ್ನಿಶಿಧೇ ವಿಶ್ಲೇಷಂ ಪಿಕಮನ್ಯವಿವರ್ಧನಮ್I
ಚಂದನಂ ಸರ್ಪ ನಿಲಯಂ ವಾಯುಂ ಸರ್ಪಾಶನಂ ತಥಾ I
ಜ್ಯೋತ್ಸ್ನಾಂ ಕಳಂಕಸಛನ್ನಾಂ ಶಶಾಪ ರಘುನಂದನಃ II II

ಸಂಪಗೆಯನ್ನು ಮುಟ್ಟದಂತೆ ಭ್ರಮರಗಳಿಗೂ, ರಾತ್ರಿಯಲ್ಲಿ ವಿಯೋಗವನ್ನು ಹೊಂದುವಂತೆ ಚಕ್ರವಾಕ ಜೋಡಿಗಳಿಗೂ, ಇತರಪಕ್ಷಿಗಳ ಪೋಷಣೆಗೊಳಗಾಗುವಂತೆ ಕೋಗಿಲೆಗಳಿಗೂ (ಪರಪುಟ್ಟ), ಕ್ರೂರಸರ್ಪಗಳಿಗೆ ಆಶ್ರಯತಾಣವಾಗುವಂತೆ ಚಂದನವೃಕ್ಷಕ್ಕೂ, ಹಾವುಗಳಿಗೆ ಆಹಾರವಾಗುವಂತೆ ಗಾಳಿಗೂ, ಕಳಂಕವಿಶಿಷ್ಟ (ಕಲೆಗಳಿಂದ ಕೂಡಿರುವಂತೆ) ಚಂದ್ರಕಾಂತಿಗೂ ಶಾಪಕೊಟ್ಟ ಎನ್ನುವ ವರ್ಣನೆ ಬರುತ್ತದೆ.

ಸೀತೆಯ ವಿಯೋಗ ರಾಮನಿಗೆ ಎರಡು ರೀತಿಯಿಂದ ಕಾಡುತ್ತಿತ್ತು. ಮೊದಲನೆಯದು ತನ್ನ ಪ್ರಿಯ ಮಡದಿಯನ್ನು ಕಳೆದುಕೊಂಡಿರುವುದು. ಎರಡನೆಯದು ರಾವಣ ಸೀತೆಯನ್ನು ಕದ್ದೊಯ್ಯುವ ಮೂಲಕ ರಾಮನ ಪುರುಷತ್ವಕ್ಕೆ ಸವಾಲನ್ನು ಎಸೆದಿದ್ದ. ಇದು ಸ್ಕಂಧಪುರಾಣದ ಮೇಲಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ನೊಂದಿದ್ದ ರಾಮನನ್ನು ಲಕ್ಷ್ಮಣ ಸಮಾಧಾನ ಪಡಿಸಿ ಆತನ ಸ್ಮೃತಿಯನ್ನು ವಾಸ್ತವಕ್ಕೆ ಕರೆತರುತ್ತಾನೆ. ಆತನ ದುಃಖವನ್ನು ಶಮನಮಡುತ್ತಾನೆ. ಈಗ ಆತನಿಗೆ ಸೀತೆಯನ್ನು ಹುಡುಕುವ ಸಲುವಾಗಿ ಕಬಂಧ ಹೇಳಿದಂತೆ ಸುಗ್ರೀವನ ಸಖ್ಯ ಅನಿವಾರ್ಯವೆನ್ನುವುದು ನೆನಪಾಗುತ್ತದೆ. ಆ ಕಾರಣದಿಂದ ಹನುಮಂತನ ಹತ್ತಿರ ಲಕ್ಷ್ಮಣ ರಘುಕುಲದ ಶ್ರೇಷ್ಠನಾದ ರಾಮನೇ ಸುಗ್ರೀವನಲ್ಲಿ ಆಶ್ರಯವನ್ನು ಕೋರಿ ಬಂದಿದ್ದಾನೆ. ಆತನಲ್ಲಿ ಶರಣಾಗಲು ಬಂದಿದ್ದಾನೆ. ಎನ್ನುವ ಮಾತುಗಳನ್ನು ಲಕ್ಷ್ಮಣ ಆಡುವುದು.

ಸುಗ್ರೀವನ ಸ್ಥಿತಿ ಮತ್ತು ಇನ್ನಷ್ಟು ರೋಚಕ ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ಸ್ – ಭಾರತದ ಸಾಧನೆ ಕಳಪೆಯೇ?

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಆದರೆ ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು.

VISTARANEWS.COM


on

ರಾಜಮಾರ್ಗ ಅಂಕಣ Paris Olympics
Koo

ಭಾರತದಲ್ಲಿ ಯಾಕೆ ಶ್ರೇಷ್ಠ ಕ್ರೀಡಾ ಪ್ರತಿಭೆಗಳು ಅರಳುತ್ತಿಲ್ಲ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಬಹಳ ನಿರೀಕ್ಷೆಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕೂಟಕ್ಕೆ ತೆರೆಬಿದ್ದಾಗಿದೆ. ಭಾರತಕ್ಕೆ (India) ದೊರಕಿದ್ದು 5 ಕಂಚಿನ ಪದಕಗಳು (Bronze medal) ಮತ್ತು ಒಂದು ಬೆಳ್ಳಿಯ ಪದಕ (Silver Meadl). ಒಲಿಂಪಿಕ್ ಗ್ರಾಮದಲ್ಲಿ ಒಮ್ಮೆ ಕೂಡ ಭಾರತದ ರಾಷ್ಟ್ರಗೀತೆ ಮೊಳಗಲೇ ಇಲ್ಲ ಎಂಬ ದುಃಖ ನಮಗೆ. ಭಾರತಕ್ಕೆ ದೊರಕಿದ್ದು 71ನೇ ಸ್ಥಾನ. ಈ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ (Gold Medal) ಸೇರಿ ಏಳು ಪದಕಗಳು ದೊರೆತಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಭಾರತ ಸ್ವಲ್ಪ ಹಿಂದೆ ಬಿದ್ದಿದೆ.

ನಮಗೆ ಈ ಬಾರಿ 7-8 ಪದಕಗಳು ಕೂದಲೆಳೆಯ ಅಂತರದಲ್ಲಿ ಮಿಸ್ ಆದವು!

ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು. ದೇಶದ 6 ಮಂದಿ ಕ್ರೀಡಾಪಟುಗಳು ಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಪದಕವಂಚಿತರಾದರು. ಅರ್ಜುನ್ ಬಬುತಾ, ಅಂಕಿತ ಧೀರಜ್, ಮನು ಭಾಕರ್ (Manu Bhaker – ಮೂರನೇ ಪದಕ), ಅನಂತ್ ಜೀತ್, ಮಹೇಶ್ವರಿ, ಲಕ್ಷ್ಯ ಸೇನ್, ಮೀರಾಬಾಯಿ ಚಾನು ಇವರು ನಾಲ್ಕನೇ ಸ್ಥಾನಿಗಳಾಗಿ ಸ್ಪರ್ಧೆಯನ್ನು ಮುಗಿಸಿದವರು. ಹಾಗೆಯೇ ವಿನೇಶ್ ಫೊಗಟ್ (Vinesh Phogat), ನಿಶಾ ದಹಿಯ, ರಿತಿಕ ಹೂಡ ಮೊದಲಾದ ಕುಸ್ತಿ ಪಟುಗಳು ಒಲಿಂಪಿಕ್‌ನ ಕರಾಳ ನಿಯಮಕ್ಕೆ ಬಲಿಯಾಗಿ ಪದಕ ಮಿಸ್ ಮಾಡಿಕೊಂಡರು ಅನ್ನೋದು ನಮ್ಮ ನೋವು. ಇವರೆಲ್ಲರೂ ಪದಕ ಪಡೆದಿದ್ದರೆ ಭಾರತದ ಟೋಟಲ್ ಪದಕಗಳ ಸಂಖ್ಯೆ 15 ದಾಟುತ್ತಿತ್ತು ಅಲ್ಲವೇ? ಕೆಲವೊಮ್ಮೆ ಪ್ರತಿಭೆ, ಸಾಮರ್ಥ್ಯಗಳು ಇದ್ದರೆ ಸಾಕಾಗುವುದಿಲ್ಲ, ಅದೃಷ್ಟವೂ ಜೊತೆಗೆ ಇರಬೇಕು ಎಂಬ ಸಿದ್ಧಾಂತವನ್ನು ನಾವು ಈ ಬಾರಿ ಒಪ್ಪಿಕೊಳ್ಳಲೇಬೇಕಾಯಿತು.

130 ಕೋಟಿ ಜನಸಂಖ್ಯೆ ಇರುವ, ಅದರಲ್ಲಿ 60%ಕ್ಕಿಂತ ಅಧಿಕ ಯುವಜನತೆ (Below 40) ಇರುವ ದೇಶವಾದ ಭಾರತದಲ್ಲಿ ಶ್ರೇಷ್ಠ ಕ್ರೀಡಾಪ್ರತಿಭೆಗಳು ಯಾಕೆ ಅರಳುತ್ತಿಲ್ಲ ಅನ್ನುವುದು ಹಲವರು ಕೇಳುವ ಪ್ರಶ್ನೆ. ಭಾರತಕ್ಕೆ ಈಗ ಅದರದ್ದೇ ಆದ ಕ್ರೀಡಾನೀತಿ ಇದೆ. ಒಳ್ಳೆಯ ಬಜೆಟ್ ಇದೆ. ವಿದೇಶದ ಕೋಚುಗಳ ನೇಮಕ ಆಗಿದೆ. ಸ್ವತಃ ಕ್ರೀಡಾಪಟು ಆಗಿದ್ದ ಪಿಟಿ ಉಷಾ ಅಧ್ಯಕ್ಷೆಯಾಗಿರುವ ಬಲಿಷ್ಠವಾದ ಒಲಿಂಪಿಕ್ ಸಮಿತಿ ಇದೆ. ಆದರೂ ಅದಕ್ಕೆ ಅನುಗುಣವಾದ ಫಲಿತಾಂಶ ಈ ಬಾರಿ ದೊರೆತಿಲ್ಲ. ಯಾಕೆ?

ಎಲ್ಲರೂ ಉತ್ತರಿಸಲೇ ಬೇಕಾದ ಪ್ರಶ್ನೆಗಳು

1) ಅಮೇರಿಕಾ, ಚೀನಾದಂತಹ ದೇಶಗಳಲ್ಲಿ ಬಾಲ್ಯದಲ್ಲಿಯೇ ಮಗುವಿನ ಕ್ರೀಡಾಪ್ರತಿಭೆಗಳನ್ನು ಹುಡುಕಿ ತರಬೇತು ಆರಂಭ ಮಾಡುತ್ತಾರೆ. ಆದರೆ ನಮ್ಮಲ್ಲಿ ಬಾಲ್ಯದಲ್ಲಿ ಮಗು ಮೈದಾನಕ್ಕೆ ಇಳಿಯುವುದನ್ನು ಹೆತ್ತವರು ಇಷ್ಟ ಪಡುವುದಿಲ್ಲ. ಕ್ರೀಡೆಯ ಮೂಲಕ ಮಗುವಿನ ಭವಿಷ್ಯ ಕಟ್ಟುವ ಭರವಸೆ ಭಾರತದ ಹೆಚ್ಚಿನ ಪೋಷಕರಿಗೆ ಇಲ್ಲ.

2) ಒಳ್ಳೆಯ ಕ್ರೀಡಾಪಟು ರೂಪುಗೊಳ್ಳಬೇಕು ಅಂತಾದರೆ ಪರಿಣತ ಕೋಚ್, ತರಬೇತುದಾರ ಬೇಕು. ಭಾರತವು ಇನ್ನೂ ಉತ್ತಮ ಕೋಚುಗಳನ್ನು ಬೆಳೆಸಿಲ್ಲ. ಕ್ರೀಡಾ ಸಲಕರಣೆಗಳು, ಜಿಮ್ ಗಳು ಮಕ್ಕಳಿಗೆ ಹತ್ತಿರದಲ್ಲಿ ದೊರೆಯುತ್ತಿಲ್ಲ. ವಿದೇಶದ ಕೋಚಗಳನ್ನು ನೇಮಕ ಮಾಡುವಷ್ಟು ಭಾರತದ ಗ್ರಾಮಾಂತರ, ಮಧ್ಯಮವರ್ಗದ ಪೋಷಕರು ಶ್ರೀಮಂತರಾಗಿಲ್ಲ.

Neeraj Chopra
Paris Olympics

3) ಒಬ್ಬ ಒಳ್ಳೆಯ ಕ್ರೀಡಾಪಟುವು ಅರಳಬೇಕಾದರೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್)ಯು ತುಂಬಾನೆ ಪ್ರಾಮುಖ್ಯ. ಅಂದರೆ ಸಣ್ಣ ಪ್ರಾಯದಲ್ಲಿ ಪೌಷ್ಟಿಕ ಆಹಾರ, ವಿಟಮಿನಗಳು ದೊರೆಯಬೇಕು. ಆ ಮಗು ಬೆವರು ಬಸಿದು ಕೆಲಸ ಮಾಡಬೇಕು. ಜಿಮ್, ಟೆನಿಸ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟು ಹತ್ತಿರದಲ್ಲಿ ಇರಬೇಕು. ಇದೆಲ್ಲ ಸಾಧ್ಯ ಆಗ್ತಾ ಇದೆಯಾ?

4) ಯಾವುದೇ ರಾಜ್ಯದಲ್ಲಿ ಕ್ರೀಡೆಗೆ ಪ್ರತ್ಯೇಕ ಸಚಿವಾಲಯ ಬೇಕು. ಒಳ್ಳೆಯ ಬಜೆಟ್ ಬೇಕು. ಆದರೆ ನಮ್ಮಲ್ಲಿ ಕ್ರೀಡಾ ಇಲಾಖೆಯು ಯುವಜನ ಸೇವಾ ಇಲಾಖೆಯ ಜೊತೆಗೆ ಇದೆ. ಬಜೆಟ್ ಕೇಳಿದರೆ ನೀವು ಖಂಡಿತವಾಗಿ ನಗುತ್ತೀರಿ. ಇನ್ನು ಪದಕ ನಿರೀಕ್ಷೆ ಮಾಡುವುದು ಹೇಗೆ?

5) ನಮ್ಮ ಶೈಕ್ಷಣಿಕ ವರ್ಷವು ಆರಂಭವಾಗುವುದೇ ಮಳೆಗಾಲದಲ್ಲಿ. ಮೊದಲ ನಾಲ್ಕು ತಿಂಗಳ ಒಳಗೆ ಎಲ್ಲ ಪಂದ್ಯಾಟಗಳು, ಕ್ರೀಡಾಕೂಟಗಳು ಮುಗಿಯಬೇಕು. ಅಂದರೆ ನಮ್ಮ ಪುಟ್ಟ ಮಕ್ಕಳು ಮಳೆಗೆ ತಲೆಕೊಟ್ಟು, ಜಾರುವ ಮೈದಾನದಲ್ಲಿ ಓಡಬೇಕು. ಮಳೆಗಾಲದ ಹೊತ್ತಲ್ಲಿ ತರಬೇತಿ ಪಡೆಯುವುದು ಯಾವಾಗ? ಒಳಾಂಗಣ ಕ್ರೀಡಾಂಗಣಗಳು ಎಷ್ಟು ಕಡೆ ಇವೆ? ಇದು ಕ್ರೀಡೆಗೆ ಪೂರಕವೇ?

6) ಕೆಲವು ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲು ಕೋಟಾ ಇದೆ. ಕೃಪಾಂಕದ ವ್ಯವಸ್ಥೆ ಇದೆ. ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ?

7) ಬಾಲ್ಯದಿಂದ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವ, ಅದೇ ಕನಸುಗಳನ್ನು ಮಗುವಿನ ತಲೆಗೆ ತುಂಬುವ ಹೆತ್ತವರು ಮಕ್ಕಳು ಮೈದಾನಕ್ಕೆ ಇಳಿಯುವುದನ್ನು ಇಷ್ಟ ಪಡುವುದೇ ಇಲ್ಲ. ಕ್ರೀಡೆಗಳಲ್ಲಿ ಸಾಧನೆ ಮಾಡಬೇಕಾದರೆ ಮಗು ತರಗತಿ ಪಾಠ, ಪರೀಕ್ಷೆಗಳು ಇತ್ಯಾದಿಗಳಲ್ಲಿ ರಿಯಾಯಿತಿ ಪಡೆಯಬೇಕು. ಆಗ್ತಾ ಇದೆಯಾ?

8) ಎಷ್ಟೋ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಪದವಿಪೂರ್ವ ಕಾಲೇಜುಗಳ ಹಂತಕ್ಕೆ ಬಂದರೆ 50% ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದೊಡ್ಡ ದೊಡ್ಡ ಶಾಲೆಗಳ ಕಟ್ಟಡಗಳನ್ನು ಕಟ್ಟುವ ಕಾಲೇಜುಗಳು ಗ್ರೌಂಡ್ ಇಲ್ಲದೆ ಕೂಡ ಕ್ಲಾಸ್ ನಡೆಸುತ್ತವೆ ಎಂದರೆ ನೀವು ನಂಬಲೇಬೇಕು.

9) ಶೂಟಿಂಗ್, ಗಾಲ್ಫ್, ಜಿಮ್ನಾಸ್ಟಿಕ್ ಉಪಕರಣಗಳು ತುಂಬಾ ದುಬಾರಿ. ಸರಕಾರಿ ಬ್ಯಾಡ್ಮಿಂಟನ್ ಕೋರ್ಟು, ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಇರುವುದು ತಾಲೂಕಿಗೆ ಒಂದೇ! ಎಷ್ಟೋ ಕಡೆಗಳಲ್ಲಿ ಅದೂ ಇಲ್ಲ. ಖಾಸಗಿಯವರು ಹೆಚ್ಚು ಫೀಸ್ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಕ್ರೀಡಾಪ್ರತಿಭೆಗಳು ತರಬೇತು ಪಡೆಯಲು ತುಂಬಾ ದೂರಕ್ಕೆ ಹೋಗಬೇಕು. ಹಾಗಿರುವಾಗ ಪ್ರತಿಭೆಗಳು ಅರಳುವುದು ಹೇಗೆ?

10) ಸ್ಥಳೀಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಅದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅನುದಾನದ ಬೆಂಬಲ ತುಂಬ ಕಡಿಮೆ. ಹೆತ್ತವರು ಅಥವಾ ಶಿಕ್ಷಕರೇ ಖರ್ಚು ಮಾಡಬೇಕು ಅಂತಾದಾಗ ಸಹಜವಾಗಿ ಎಲ್ಲರ ಆಸಕ್ತಿ ಕಡಿಮೆ ಆಗುತ್ತದೆ.

Paris Olympics
Paris Olympics

11) ಏಷಿಯಾಡ್, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಮೊದಲಾದ ಕೂಟಗಳಲ್ಲಿ ಅರ್ಹತೆಯನ್ನು ಪಡೆಯಬೇಕಾದರೆ ಒಬ್ಬ ಕ್ರೀಡಾಪಟು ದಿನಕ್ಕೆ ಕನಿಷ್ಟ 10-12 ಘಂಟೆ ಮೈದಾನದಲ್ಲಿ ಕಠಿಣ ಪರಿಶ್ರಮಪಡಬೇಕು. ಬೆವರು ಸುರಿಸಬೇಕು. ಒಳ್ಳೆಯ ತರಬೇತುದಾರರು ಸಿಗಬೇಕು. ಸರಕಾರಗಳು ಅಂತಹ ಕ್ರೀಡಾ ಪ್ರತಿಭೆಗಳನ್ನು ದತ್ತುಸ್ವೀಕಾರ ಮಾಡಬೇಕು. ಒಳ್ಳೆಯ ಸೌಲಭ್ಯಗಳನ್ನು ಖಾತರಿ ಪಡಿಸಬೇಕು. ಪೌಷ್ಟಿಕವಾದ ಆಹಾರದ ವ್ಯವಸ್ಥೆ ಮಾಡಬೇಕು. ನೀನು ಕ್ರೀಡೆಯಲ್ಲಿ ಗಮನ ಕೊಡು, ನಾನಿದ್ದೇನೆ ಎಂದು ಭರವಸೆಯನ್ನು ತುಂಬಬೇಕು. ಇದು ಆಗ್ತಾ ಇದೆಯಾ?

12) ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಕ್ರೀಡಾತಾರೆಗಳನ್ನು ನ್ಯಾಶನಲ್ ಹೀರೋಗಳಾಗಿ ಘೋಷಣೆ ಮಾಡಬೇಕು. ಅವರ ಬದುಕಿನ ಕಥೆಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕದಲ್ಲಿ ಇರಬೇಕು. ಕ್ರಿಕೆಟ್ ನಮ್ಮ ಧರ್ಮ ಆಗಿರುವ, ಕ್ರಿಕೆಟರಗಳು ನಮಗೆ ದೇವರಾಗಿರುವ ಈ ದೇಶದಲ್ಲಿ ಕ್ರೀಡಾಪಟುಗಳಿಗೆ ಸ್ಟಾರ್ ವ್ಯಾಲ್ಯೂ ತರುವುದು ಸಾಧ್ಯ ಆಗಿದೆಯಾ?

ಎಲ್ಲಕ್ಕಿಂತ ಹೆಚ್ಚಾಗಿ ಹೆತ್ತವರ ಮೈಂಡ್ ಸೆಟ್ ಬದಲಾಗಬೇಕು. ಇಲ್ಲಾಂದರೆ ನಾವು ಭಾರತದ ಕ್ರೀಡಾ ಸಾಧನೆಯನ್ನು ಕಳಪೆ ಎಂದು ದೂರುವುದನ್ನು ಬಿಡಬೇಕು.

ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Continue Reading

ದೇಶ

Kamikaze Drones : ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆ ಸ್ವದೇಶಿ ನಿರ್ಮಿತ ಬಾಂಬರ್​​ ಡ್ರೋನ್​ ಸಿದ್ಧಪಡಿಸಿದ ಭಾರತ

Kamikaze Drones :

VISTARANEWS.COM


on

Kamikaze Drones
Koo

ನವದೆಹಲಿ: ಭಾರತ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಸಿದ್ಧಗೊಳ್ಳುತ್ತಿದೆ. ಇದೇ ವೇಳೆ ಭಾರತ ತನ್ನ ರಕ್ಷಣಾ ವಲಯದಲ್ಲಿ ಅತ್ಯುತ್ತಮ ಸಾಧನೆಯೊಂದನ್ನು ಮಾಡಿದೆ. ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ಎಎಲ್) ಸ್ವದೇಶಿ ನಿರ್ಮಿತ ಕಮಿಕಾಜೆ ಡ್ರೋನ್​ಗಳನ್ನು (ಸ್ಫೋಟಗೊಳ್ಳುವ ಡ್ರೋನ್​ಗಳು) ನಿರ್ಮಿಸಿದೆ (Kamikaze Drones). ಇದು ಅತ್ಯಂತ ಅಪಾಯಕಾರಿ ಡ್ರೋನ್ ಆಗಿದ್ದು ಎದುರಾಳಿಯನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡು ಸ್ಫೋಟಗೊಳ್ಳುವ ಆತ್ಮಾಹುತಿ ಬಾಂಬರ್ ಆಗಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಇಂಥ ಡ್ರೋನ್​ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇಂಥ ಡ್ರೋನ್​ಗಳು ಇನ್ನು ಭಾರತದ ಸೇನೆಯನ್ನೂ ಸೇರಲಿದೆ. ಹೆಚ್ಚು ಶಕ್ತಿಯುತವಾದ ಈ ಯುದ್ದ ಉಪಕರಣದ ಸೇರ್ಪಡೆಯುವ ಭಾರತದ ಶಕ್ತಿಯನ್ನು ಹೆಚ್ಚಿಸಲಿದೆ.

ಇದನ್ನೂ ಓದಿ : ಸೆಬಿ ಅಧ್ಯಕ್ಷರ ವಜಾಗೆ ಆಗ್ರಹಿಸಿದ ಕಾಂಗ್ರೆಸ್​ನಿಂದ ಆಗಸ್ಟ್​​ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ

ಕಮಿಕಾಜೆ ಮಾನವರಹಿತ ವೈಮಾನಿಕ ಡ್ರೊನ್​​ಗಳನ್ನು ರಷ್ಯಾದ ಸೈನಿಕರು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಗುರಿಯಾಗಿಸಿ ಉಕ್ರೇನಿಯನ್ನರು ಈಗ ಬಳಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಉಕ್ರೇನ್​ ಪಡೆ ಈ ರೀತಿಯ ದಾಳಿಯನ್ನು ಮಾಡಿರುವುದು ವರದಿಯಾಗಿದೆ. ಈ ಡ್ರೋನ್​ ಗುರಿಯನ್ನು ಹುಡುಕಿಕೊಂಡು ಹೆಚ್ಚು ಹೊತ್ತು ಅಲೆದಾಡುತ್ತದೆ. ಸ್ಫೋಟಕಗಳನ್ನು ಒತ್ತೊಯ್ಯುವ ಈ ಡ್ರೋನ್​ ದೂರದಲ್ಲಿ ಕುಳಿತಿರುವ ನಿಯಂತ್ರಕರಿಂದ ಆದೇಶ ಪಡೆದು ಆತ್ಮಾಹುತಿ ದಾಳಿಕೋರನಾಗುತ್ತದೆ. ಇಂಥ ಡ್ರೋನ್​​ಗಳನ್ನು ಹಿಂಡುಗಳಂತೆಯೂ ಕಳುಹಿಸಬಹುದು. ಇದರ ಲಾಭವೇನೆಂದರೆ ಅನೇಕ ಡ್ರೋನ್​ಗಳು ಏಕಾಕಾಲಕ್ಕೆ ದಾಳಿ ಮಾಡುವಾಗ ಶತ್ರು ಪಡೆಯ ರಾಡಾರ್​ಗಳ ಕಣ್ತಪ್ಪಿಸಬಹುದು. ಇಂಥ ಡ್ರೋನ್​ಗಳಿಗೂ ಪ್ರತ್ಯಸ್ತ್ರವನ್ನೂ ಇಸ್ರೇಲ್​ನಂಥ ದೇಶಗಳು ಹೊಂದಿವೆ. ಆದಾಗ್ಯೂ ತಪ್ಪಿಸಿಕೊಂಡ ಕೆಲವು ಶತ್ರುಗಳ ಸಾಮರ್ಥ್ಯ ಕುಗ್ಗಿಸಬಹುದು.

ಕಮಿಕಾಜೆ ಆತ್ಮಹತ್ಯಾ ಕಾರ್ಯಾಚರಣೆಗಳನ್ನು ಮೊದಲ ಬಾರಿಗೆ ಎರಡನೇ ಮಹಾಯುದ್ಧದ ಕೊನೆಯಲ್ಲಿ ಪ್ರಯೋಗಗೊಂಡಿತು. ಜಪಾನಿನ ವಾಯುಪಡೆಯು ಪೈಲಟ್​ಗಳ ಸಂಖ್ಯೆ ಕಡಿಮೆಯಾದ ಬಳಿಕ ತಮ್ಮ ಯುದ್ಧ ವಿಮಾನಗಳನ್ನು ಶತ್ರು ರಾಷ್ಟ್ರಗಳ ವಿಮಾನಗಳು ಮತ್ತು ಹಡಗುಗಳ ಮೇಲೆ ಬೀಳಿಸಿ ಸ್ಫೋಟಿಸುವಂತೆ ಮಾಡುತ್ತಿದ್ದರು.

ಸ್ವದೇಶಿ ಕಮಿಕಾಜೆ ಡ್ರೋನ್​ ಸಂಶೋಧನೆಯ ನೇತೃತ್ವ ವಹಿಸಿರುವ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್​​ನ ನಿರ್ದೇಶಕ ಡಾ.ಅಭಯ್ ಪಾಶಿಲ್ಕರ್ ಮಾಹಿತಿ ನೀಡಿ “ಭಾರತವು ಈ ಸಂಪೂರ್ಣ ದೇಶೀಯ ಕಮಿಕಾಜೆ ಡ್ರೋನ್​​ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು 21 ನೇ ಶತಮಾನದ ಹೊಸ ಯುಗದ ಯುದ್ಧ ತಂತ್ರಕ್ಕೆ ಅಗತ್ಯವಾಗಿದೆ ” ಎಂದು ಹೇಳುತ್ತಾರೆ.

ಭಾರತದ ಡ್ರೋನ್ ಸಾಮರ್ಥ್ಯವೇನು?

ಭಾರತೀಯ ಕಮಿಕಾಜೆ ಡ್ರೋನ್ ಸುಮಾರು 2.8 ಮೀಟರ್ ಉದ್ದವಿರುತ್ತದೆ. 3.5 ಮೀಟರ್ ಅಗಲದ ರೆಕ್ಕೆಗಳನ್ನು ಹೊಂದಿದೆ. ಒಟ್ಟಾರೆ ಸುಮಾರು 120 ಕೆಜಿ ತೂಕ ಹೊಂದಿರುವ ಈ ಡ್ರೋನ್​ 25 ಕೆ.ಜಿ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದೆ.

ಸಂಶೋಧನಾ ತಂಡದ ಡಾ.ಪಾಶಿಲ್ಕರ್ ಮಾತನಾಡಿ, ಭಾರತದ ಈ ಅಲೆಮಾರಿ ಶಸ್ತ್ರಾಸ್ತ್ರಗಳು ಸುಮಾರು ಒಂಬತ್ತು ಗಂಟೆಗಳ ಹಾರಾಟ ಸಾಮರ್ಥ್ಯ ಹೊಂದಿರುತ್ತವೆ, ಅಂದರೆ ಒಮ್ಮೆ ಉಡಾವಣೆಯಾದ ನಂತರ ಅದು ಅಗತ್ಯವಾಗಿರು ಕ್ಷೇತ್ರದಲ್ಲಿ ನಿರಂತರವಾಗಿ ಹಾರಬಹುದು. ಗುರಿಯನ್ನು ಗುರುತಿಸಿದ ನಂತರ ನಿಯಂತ್ರಕ ಅನುಮತಿಯ ನಂತರ ‘ಡು ಆರ್​ ಡೈ ಡ್ರೋನ್ ಅನ್ನು ತನ್ನ ಆತ್ಮಹತ್ಯೆ ಕಾರ್ಯಾಚರಣೆ ಆರಂಭಿಸುತ್ತದೆ.

ಸಿಎಸ್ಐಆರ್-ಎನ್ಎಎಲ್ ಅನ್ನು ನೋಡಲ್ ಪ್ರಯೋಗಾಲಯವಾಗಿ ಮತ್ತು ಸಿಎಸ್ಐಆರ್​​ನ ಎಲ್ಲಾ ಪ್ರಮುಖ ಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ಕಮಿಕಾಜೆ ಡ್ರೋನ್​​ಗಳ ಯೋಜನೆ ಪ್ರಾರಂಭಿಸಲು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ತಾತ್ವಿಕ ಅನುಮೋದನೆ ನೀಡಿದೆ. ಈ ಸಾಮರ್ಥ್ಯವು ನಮ್ಮ ರಾಷ್ಟ್ರೀಯ ಭದ್ರತಾ ಅಗತ್ಯಗಳನ್ನು ಪೂರೈಸಲಿದೆ.

ಭಾರತೀಯ ಕಮಿಕಾಜೆ ಡ್ರೋನ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ 30-ಅಶ್ವಶಕ್ತಿಯ ವಾಂಕೆಲ್ ಎಂಜಿನ್ ಅನ್ನು ಬಳಸುತ್ತದೆ. ಇದು ಗಂಟೆಗೆ 180 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಾಗುತ್ತದೆ. 1,000 ಕಿಲೋಮೀಟರ್ ನಿರಂತರವಾಗಿ ಹಾರುವ ಸಾಮರ್ಥ್ಯ ಹೊಂದಿದೆ.

ಭಾರತೀಯ ಆವೃತ್ತಿಯು ಜಿಪಿಎಸ್ ಇಲ್ಲದ ಸನ್ನಿವೇಶಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಗುರಿಯನ್ನು ನ್ಯಾವಿಗೇಟ್ ಮಾಡಲು ಮತ್ತು ಹೋಮಿಂಗ್ ಮಾಡಲು ಭಾರತೀಯ ಎನ್ಎವಿಐಸಿಯನ್ನು (NAViC) ಬಳಸಬಹುದಾಗಿದೆ. “ಇತರ ದೇಶಗಳು ನಿಯೋಜಿಸಿದ ಇಂತಹ ಡ್ರೋನ್​​ಗಳು ಬೇರೆಡೆ ನಡೆಯುತ್ತಿರುವ ಆಧುನಿಕ ಯುದ್ಧಗಳಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶಿಸಿವೆ ” ಎಂದು ಡಾ.ಪಾಶಿಲ್ಕರ್ ಹೇಳಿದ್ದಾರೆ.

Continue Reading
Advertisement
Bangladesh Unrest
ವಿದೇಶ8 mins ago

Bangladesh Unrest: ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; ಮತ್ತೊಂದು ದೇಗುಲ, ಮನೆಗೆ ಬೆಂಕಿ

Viral Video
Latest13 mins ago

Viral Video: ಹಸ್ತಮೈಥುನ ಮಾಡಿಕೊಳ್ಳಲು 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ; ಆಕೆ ತಪ್ಪಿಸಿಕೊಂಡಾಗ ಮೇಕೆ ಮೇಲೆ ಅತ್ಯಾಚಾರ!

Golden Star Ganesh krishnam pranaya sakhi Fans show House Full
ಸ್ಯಾಂಡಲ್ ವುಡ್23 mins ago

Golden Star Ganesh: ಗಣೇಶ್​​ಗೆ ಶುರುವಾಗಿದೆ ಗೋಲ್ಡನ್ ಟೈಮ್:  ಫ್ಯಾನ್ಸ್ ಶೋ ಹೌಸ್ ಫುಲ್!

Independence day 2024 Nanna Deshavu Kannada Video Song Vijay Prakash
ಸಿನಿಮಾ53 mins ago

Independence day 2024: ವಿಜಯ್ ಪ್ರಕಾಶ್‌ ಹೊಸ ಸಾಂಗ್‌ ಔಟ್‌; ಭಾರತೀಯ ಸೇನೆಗೆ ಹಾಡನ್ನು ಅರ್ಪಿಸಿದ ಹೊಸಬರ ತಂಡ!

Viral News
ವೈರಲ್ ನ್ಯೂಸ್53 mins ago

Viral News: ಯೋಧನ ಮೇಲೆ ಪೊಲೀಸರ ದೌರ್ಜನ್ಯ; ನಗ್ನಗೊಳಿಸಿ ಹಿಗ್ಗಾಮುಗ್ಗಾ ಥಳಿತ

Manu Bhaker
ಕ್ರೀಡೆ56 mins ago

Manu Bhaker: ಭಾರೀ ಏರಿಕೆ ಕಂಡ ಮನು ಭಾಕರ್ ಬ್ರ್ಯಾಂಡ್​ ಮೌಲ್ಯ

Duleep Trophy
ಕ್ರೀಡೆ2 hours ago

Duleep Trophy 2024: ದುಲೀಪ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಕೊಹ್ಲಿ, ರೋಹಿತ್​ ಭಾಗವಹಿಸುವ ನಿರೀಕ್ಷೆ

viral video modi assault case
ವೈರಲ್ ನ್ಯೂಸ್2 hours ago

Viral Video: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

Kundapura Festival Kannada Habba On August 17 And 18 In Bengaluru Palace Ground
ಉಡುಪಿ2 hours ago

Kundapura Festival: ಬೆಂಗಳೂರಲ್ಲಿ 17, 18ರಂದು ʻಕುಂದಾಪ್ರ ಕನ್ನಡ ಹಬ್ಬʼ: ಇಲ್ಲಿದೆ ಕಾರ್ಯಕ್ರಮಗಳ ವಿವರ, ಹೋಯ್‌ ಬನಿಯೇ ಹಬ್ಬಕ್‌ ಹೋಪ!

Illicit Relationship
ಕ್ರೈಂ2 hours ago

ಅನೈತಿಕ ಸಂಬಂಧದ ಶಂಕೆಗೆ ಬಲಿಯಾಯ್ತು ಐವರ ಜೀವ; ಪತ್ನಿ, ತಾಯಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌