ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ: ಏನು, ಯಾಕೆ, ಹೇಗೆ? - Vistara News

ಪ್ರಮುಖ ಸುದ್ದಿ

ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ: ಏನು, ಯಾಕೆ, ಹೇಗೆ?

ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ (Uniform civil code) ಜಾರಿಗೆ ಮುಂದಾಗಿದೆ. ವಿಧೇಯಕದ ಅಂತಿಮ ಕರಡನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ಸಂಹಿತೆಯ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

indian people
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರ ಸಚಿವ ಸಂಪುಟ ಏಕರೂಪ ನಾಗರಿಕ ಸಂಹಿತೆಯ (Uniform Civil Code- ಯುಸಿಸಿ) ಕರಡನ್ನು ಅಂತಿಮಗೊಳಿಸಿದ್ದು, ವಿಧಾನಸಭೆಯಲ್ಲಿ ವಿಧೇಯಕವಾಗಿ ಮಂಡಿಸುತ್ತಿದೆ. ಇದು ಅಂಗೀಕಾರಗೊಂಡರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ ಎನಿಸಲಿದೆ.

ಏಕರೂಪ ಅಥವಾ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತ ಮಾತು ನಮ್ಮ ದೇಶದಲ್ಲಿ ಆಗಾಗ ಕೇಳಿಬರುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಹೆಜ್ಜೆಯಿಡುವ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಪರವಾಗಿ ಬ್ಯಾಟ್ ಬೀಸಿದ್ದರು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು.

ಹಾಗಿದ್ದರೆ ಏನಿದು ಏಕರೂಪ ಅಥವಾ ಸಮಾನ ನಾಗರಿಕ ಸಂಹಿತೆ? ಇದರ ಅಗತ್ಯವೇನು? ಇದು ಇಲ್ಲದಿದ್ದರೆ ಏನು ತೊಂದರೆ? ಯಾರು ಇದನ್ನು ಪ್ರತಿಪಾದಿಸಿದವರು?

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯವಾಗುವ, ಅವರ ಧರ್ಮವನ್ನು ಲೆಕ್ಕಿಸದೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಒಂದು ಗುಂಪಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಕಲ್ಪಿಸಲಾಗಿದೆ. ಈಗ ಅಸ್ತಿತ್ವದಲ್ಲಿರುವ ವೈವಿಧ್ಯಮಯ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಗುರಿ ಇದರದು.

ವೈಯಕ್ತಿಕ ಕಾನೂನಿನ ಭಿನ್ನತೆ

ಭಾರತದಲ್ಲಿ ಮತದ ಆಧಾರದ ಹಲವು ವೈಯಕ್ತಿಕ ಅಧಿಕಾರ, ಸ್ವಾಮ್ಯ ಇತ್ಯಾದಿಗಳು ಭಿನ್ನವಾಗಿವೆ. ಮುಖ್ಯವಾಗಿ ಮಹಿಳೆಯರ ಉತ್ತರಾಧಿಕಾರದ ಹಕ್ಕು. 1956ರ ಹಿಂದೂ ಉತ್ತರಾಧಿಕಾರ ಕಾಯಿದೆಯಡಿಯಲ್ಲಿ, (ಇದು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರ ಹಕ್ಕುಗಳನ್ನು ನಿಯಂತ್ರಿಸುತ್ತದೆ) ಹಿಂದೂ ಮಹಿಳೆಯರು ತಮ್ಮ ಪೋಷಕರ ಆಸ್ತಿಗೆ ಗಂಡು ಮಕ್ಕಳಷ್ಟೇ ಸಮಾನ ಹಕ್ಕುದಾರರು. ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳ ಹಕ್ಕುಗಳು ಸಮಾನವಾಗಿರುತ್ತವೆ. ಪೂರ್ವಜರ ಆಸ್ತಿ ವಿಭಜನೆ ಸಂದರ್ಭ ಮಹಿಳೆಯರನ್ನು ಸಮಾನ ಉತ್ತರಾಧಿಕಾರಿಯಗಿಯೇ ಪರಿಗಣಿಸಲಾಗುತ್ತದೆ.

ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಮುಸ್ಲಿಂ ಮಹಿಳೆಯರು ತಮ್ಮ ಗಂಡನ ಆಸ್ತಿಯಲ್ಲಿ 1/8ನೇ ಅಥವಾ 1/4 ಭಾಗದಷ್ಟು ಪಾಲು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ. ಇದು ಕೂಡ ಮಕ್ಕಳ ಉಪಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದರೆ, ಇದರಲ್ಲೂ ಪುತ್ರಿಯರ ಪಾಲು ಪುತ್ರರ ಪಾಲಿನ ಅರ್ಧದಷ್ಟು.

ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಯಹೂದಿಗಳಿಗೆ 1925ರ ಭಾರತೀಯ ಉತ್ತರಾಧಿಕಾರ ಕಾಯಿದೆ ಅನ್ವಯಿಸುತ್ತದೆ. ಮಕ್ಕಳು ಅಥವಾ ಇತರ ಸಂಬಂಧಿಕರ ಉಪಸ್ಥಿತಿಯ ಆಧಾರದ ಮೇಲೆ ಕ್ರಿಶ್ಚಿಯನ್ ಮಹಿಳೆಯರು ಪಾಲನ್ನು ಪಡೆಯುತ್ತಾರೆ. ಪಾರ್ಸಿ ವಿಧವೆಯರು ತಮ್ಮ ಮಕ್ಕಳಂತೆ ಸಮಾನ ಪಾಲನ್ನು ಪಡೆಯುತ್ತಾರೆ. ಮೃತರ ಪೋಷಕರು ಜೀವಂತವಾಗಿದ್ದರೆ, ಮೃತರ ಮಗು ಪಡೆಯುವ ಆಸ್ತಿಯ ಅರ್ಧದಷ್ಟು ಪಾಲು ಸತ್ತವರ ಪೋಷಕರಿಗೆ ಹೋಗುತ್ತದೆ.

ಇವೆಲ್ಲವೂ ಭಾರತದಲ್ಲಿ ಗೊಂದಲ- ಗೋಜಲು ಸೃಷ್ಟಿಸಿವೆ. ಅಂತರ್‌ಮತೀಯ- ಅಂತರ್‌ಜಾತೀಯ ಮದುವೆಗಳಾದಾಗ ಆಸ್ತಿ ಹಕ್ಕಿನ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಭಾರತೀಯ ಸಂವಿಧಾನ ʼಎಲ್ಲರಿಗೂ ಸಮಾನʼ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ನೀಡಿದೆಯಾದರೂ, ಆಸ್ತಿ ವಿಚಾರದಲ್ಲಿ ಬೇರೆ ಬೇರೆ ಧರ್ಮಗಳು ಬೇರೆ ಬೇರೆ ಕಾನೂನುಗಳನ್ನು ಹೊಂದಿರುವುದರಿಂದ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಇದನ್ನು ತೊಡೆಯುವ ಉದ್ದೇಶ ಯುಸಿಸಿಯದು.

ಮುಸ್ಲಿಮ್‌ ಕಾನೂನುಗಳು ಷರಿಯಾ ಆಧರಿತವಾಗಿವೆ. ಹೀಗಾಗಿ ವಿವಾಹ, ಉತ್ತರಾಧಿಕಾರ, ಆಸ್ತಿ ಹಂಚಿಕೆ, ವಿಚ್ಛೇದನ, ಜೀವನಾಂಶ ಮುಂತಾದ ವಿಚಾರಗಳಲ್ಲಿ ಗಣನೀಯವಾದ ಭೇದಗಳಿವೆ. ಇದು ಒಂದೇ ದೇಶದ ಪ್ರಜೆಗಳಲ್ಲಿ ಭೇದವನ್ನು ಸೃಷ್ಟಿಸಿದೆ. ʼʼಸೆಕ್ಯುಲರ್‌ ಆಗಿರುವ ಒಂದು ದೇಶದಲ್ಲಿ ಕಾನೂನುಗಳು ಬೇರೆ ಬೇರೆಯಾಗಿರಲು ಹೇಗೆ ಸಾಧ್ಯ?ʼʼ ಎಂದು ಗೃಹ ಸಚಿವರು ಹಿಂದೆ ಪ್ರಶ್ನಿಸಿದ್ದರು.

ಸಂವಿಧಾನ ಏನು ಹೇಳಿದೆ?

constitution

ಸಂವಿಧಾನದ ʼರಾಜ್ಯ ನೀತಿ ನಿರ್ದೇಶಕ ತತ್ವʼಗಳಲ್ಲಿ ಒಂದಾದ ಸಂವಿಧಾನದ 44ನೇ ವಿಧಿಯು ʼʼಭಾರತದ ಭೂಪ್ರದೇಶದಾದ್ಯಂತ ಜನರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸರ್ಕಾರ ಪ್ರಯತ್ನಿಸಬೇಕುʼʼ ಎಂದು ಹೇಳಿದೆ. ಆದರೆ, ಆರ್ಟಿಕಲ್ 37 ಹೇಳುವಂತೆ, ನಿರ್ದೇಶಕ ತತ್ವಗಳು ಸರ್ಕಾರಿ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆ ಅಷ್ಟೇ. ಇವುಗಳನ್ನು ನ್ಯಾಯಾಲಯದ ಮೂಲಕ ಪಟ್ಟು ಹಿಡಿದು ಜಾರಿಗೊಳಿಸಲಾಗುವುದಿಲ್ಲ.

ಯುಸಿಸಿ ಬೆಂಬಲಿಸುವ ವಾದಗಳು

ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು, ಯುಸಿಸಿ ಜಾರಿ ಅಪೇಕ್ಷಣೀಯ ಎಂದು ಅಭಿಪ್ರಾಯಪಟ್ಟರು. ಆದರೆ ಸಂವಿಧಾನ ಸಭೆಯಲ್ಲಿ ಈ ಬಗ್ಗೆ ಒಮ್ಮತ ಮೂಡಲಿಲ್ಲ. ಹಾಗಾಗಿ ಅದು ಐಚ್ಛಿಕವಾಗಿ ಉಳಿಯಲಿ ಎಂದು ವಿಚಾರ ಪ್ರಸ್ತಾಪಿಸಿದರು.

“ಭವಿಷ್ಯದಲ್ಲಿ ಸಂಸತ್ತು ಈ ಬಗ್ಗೆ ಆರಂಭಿಕ ಹೆಜ್ಜೆ ಇಡಬಹುದು. ಹಾಗೆ ಮಾಡುವಾಗ ಮೊದಲ ಹಂತದಲ್ಲಿ ಈ ಸಂಹಿತೆಯನ್ನು ಐಚ್ಛಿಕವಾಗಿ, ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳುವ ಅವಕಾಶ ಸೃಷ್ಟಿಸಬೇಕು” ಎಂದು ಕೂಡ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಹೇಳಿದ್ದರು. ನಂತರ ಸಂವಿಧಾನ ಸಭೆಯು ಇದನ್ನು ನಿರ್ದೇಶಕ ತತ್ವವಾಗಿ ಹಾಕಲು ಒಪ್ಪಿಕೊಂಡಿತು.

ನ್ಯಾಯಪೀಠಗಳ ಒತ್ತು

ನಂತರದ ವರ್ಷಗಳಲ್ಲಿ ಆಗಾಗ ಶಾಸಕಾಂಗ ಹಾಗೂ ನ್ಯಾಯಾಂಗಗಳು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಥವಾ ಏಕರೂಪದ ನಾಗರಿಕ ಸಂಹಿತೆಯನ್ನು ತರುವ ವಿಷಯ ಪ್ರಸ್ತಾಪಿಸುತ್ತಾ ಬಂದಿವೆ. ಈ ವಿಚಾರದಲ್ಲಿ ಗಮನ ಸೆಳೆಯುವ ಟಿಪ್ಪಣಿ ಹೊಂದಿದ್ದ ಗಮನಾರ್ಹ ತೀರ್ಪುಗಳು ಶಾಬಾನೋ ಪ್ರಕರಣ, ಸರಳಾ ಮುದ್ಗಲ್‌ ಮುಂತಾದ ಪ್ರಕರಣಗಳಲ್ಲಿ ನ್ಯಾಯಪೀಠಗಳಿಂದ ಬಂದಿವೆ.

ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪಂಚಸದಸ್ಯ ನ್ಯಾಯಪೀಠ ಈ ರೀತಿ ಟಿಪ್ಪಣಿ ನೀಡಿತು:

ʼʼನಮ್ಮ ಸಂವಿಧಾನದ 44ನೇ ವಿಧಿ ಸತ್ತಂತೆ ಆಗಿದೆ ಎಂಬುದು ವಿಷಾದಕರ. ಈ ದೇಶಕ್ಕೆ ಒಂದು ಏಕರೂಪ ನಾಗರಿಕ ಸಂಹಿತೆ ತರುವ ಬಗ್ಗೆ ಯಾವುದೇ ಅಧಿಕೃತ ಚಟುವಟಿಕೆ ಇದುವರೆಗೂ ನಡೆದಿರುವುದಕ್ಕೆ ಸಾಕ್ಷಿಯಿಲ್ಲ. ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತರಬೇಕಿರುವುದರಿಂದ, ಈ ವಿಷಯದಲ್ಲಿ ಮುಸ್ಲಿಂ ಸಮುದಾಯ ಮುಂದುವರಿಯಬೇಕಿದೆ ಎಂದು ಬಹಳ ಮಂದಿ ನಂಬಿರುವಂತೆ ಕಾಣಿಸುತ್ತಿದೆ. ಕಾನೂನುಗಳಿಗೆ ವಿಭಿನ್ನ ಪ್ರತಿಕ್ರಿಯೆ, ಗೊಂದಲಗಳು, ಸಿದ್ಧಾಂತಗಳ ತಿಕ್ಕಾಟಗಳನ್ನು ನಿವಾರಿಸುವಲ್ಲಿ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಏಕರೂಪ ನಾಗರಿಕ ಸಂಹಿತೆ ನೆರವಾಗಬಹುದು. ಯಾವುದೇ ಸಮುದಾಯ ಈ ವಿಷಯದಲ್ಲಿ ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧವಾಗುತ್ತಿರುವಂತಿಲ್ಲ. ಈ ದೇಶದ ಪ್ರಜೆಗಳ ಹಿತರಕ್ಷಣೆಗಾಗಿ ಸ್ವತಃ ಸರ್ಕಾರವೇ ಆ ಕೆಲಸಕ್ಕೆ ಬದ್ಧವಾಗಬೇಕಿದೆ. ಹಾಗೆ ಮಾಡಲು ಅದಕ್ಕೆ ಶಾಸನಾತ್ಮಕವಾದ ಅಧಿಕಾರವೂ ಇದೆ. ಇದಕ್ಕೆ ಶಾಸನಾತ್ಮಕ ಸ್ಪರ್ಧಾತ್ಮಕತೆ ಈ ವಿಷಯದಲ್ಲಿ ಎಷ್ಟು ಮುಖ್ಯವೋ, ರಾಜಕೀಯ ಧೈರ್ಯವೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಡಬೇಕಾಗುತ್ತದೆ. ವಿಭಿನ್ನ ನಂಬಿಕೆಗಳ ಸಮುದಾಯಗಳನ್ನು ವ್ಯಕ್ತಿಗಳನ್ನು ಈ ವಿಚಾರದಲ್ಲಿ ಒಟ್ಟಿಗೆ ತರುವಲ್ಲಿ ಇರುವ ಸಂಕಷ್ಟಗಳು ನಮಗೆ ಗೊತ್ತಿವೆ. ಆದರೆ ಸಂವಿಧಾನ ಅರ್ಥ ಉಳಿಸಿಕೊಳ್ಳಬೇಕಾದರೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡುವುದು ಅತ್ಯಗತ್ಯ.ʼʼ

shah bano case

1995ರಲ್ಲಿನ ಸರಳಾ ಮುದ್ಗಲ್‌ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಇನ್ನಷ್ಟು ಸ್ಪಷ್ಟವಾಗಿ ಯುಸಿಸಿ ಜಾರಿಯ ಅಗತ್ಯವನ್ನು ಪ್ರತಿಪಾದಿಸಿತು. ʼʼದೇಶದಲ್ಲಿನ 80% ನಾಗರಿಕರು ಒಂದೇ ವೈಯಕ್ತಿಕ ಕಾನೂನಿನ ಆಡಳಿತಕ್ಕೆ ಒಳಪಟ್ಟಿರುವಾಗ, ಇನ್ನೂ ಯುಸಿಸಿ ಜಾರಿಗೆ ಮೀನ ಮೇಷ ಎಣಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲʼʼ ಎಂದು ಕೋರ್ಟ್‌ ಹೇಳಿತು. 2003ರ ಜಾನ್‌ ವಲ್ಲಮೊತ್ತಮ್‌ ಪ್ರಕರಣದಲ್ಲೂ ಈ ಮಾತನ್ನು ಪುನರುಚ್ಚರಿಸಿತು.

ಆದರೆ ನಂತರ, ಯುಸಿಸಿ ಜಾರಿಗೆ ಸಂಬಂಧಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತು. ʼʼಯುಸಿಸಿ ಜಾರಿಗೆ ಸಂಬಂಧಿಸಿ ಈ ಕೋರ್ಟ್‌ಗೆ ಆಗಮಿಸುವುದು ತಪ್ಪು ಮಾರ್ಗ. ಅದು ಸಂಸತ್ತಿನ ಕಾರ್ಯಕ್ಷೇತ್ರಕ್ಕೆ ಸೇರಿದುದು.ʼʼ ಎಂದಿತು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಉತ್ತರಾಖಂಡ ಸಂಪುಟ ಗ್ರೀನ್‌ ಸಿಗ್ನಲ್;‌ ಜಾರಿಯೊಂದೇ ಬಾಕಿ

UCC ವಿರುದ್ಧವೂ ವಾದಗಳಿವೆ

21ನೇ ಕಾನೂನು ಆಯೋಗವು 2018ರ ಆಗಸ್ಟ್‌ನಲ್ಲಿ “ಕುಟುಂಬ ಕಾನೂನಿನ ಸುಧಾರಣೆ” ಕುರಿತು ವರದಿ ಮಂಡಿಸಿತು. ಅದರಲ್ಲಿ ʼʼಯುಸಿಸಿ ಈ ಹಂತದಲ್ಲಿ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ” ಎಂದು ಹೇಳಿತು. ಆದರೆ, ವೈಯಕ್ತಿಕ ಕಾನೂನುಗಳಲ್ಲಿನ ತಾರತಮ್ಯ ಮತ್ತು ಅಸಮಾನತೆಯನ್ನು ನಿಭಾಯಿಸಲು ಈ ಕೌಟುಂಬಿಕ ಕಾನೂನುಗಳ ಸುಧಾರಣೆಗೆ ಶಿಫಾರಸು ಮಾಡಿತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಎಸ್ ಚೌಹಾಣ್ ನೇತೃತ್ವದ ಕಾನೂನು ಆಯೋಗ ಹೀಗೆ ಹೇಳಿತು: “ಕಾಯಿದೆಗಳ ಏಕರೂಪತೆಗೆ ನಾವು ಹಠ ಹಿಡಿದು ಅದು ದೇಶದ ಸಾಂಸ್ಕೃತಿಕ ವೈವಿಧ್ಯತೆಗೂ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೂ ಬೆದರಿಕೆಗೆ ಕಾರಣವಾಗಬಾರದು.ʼʼ

ಕಾಂಗ್ರೆಸ್‌, ಮುಸ್ಲಿಂ ಲೀಗ್‌ ಮುಂತಾದ ಪಕ್ಷಗಳು ನೀತಿಸಂಹಿತೆ ಜಾರಿಯನ್ನು ವಿರೋಧಿಸಿವೆ. ಮುಸ್ಲಿಮರ ಹಕ್ಕುಗಳಿಗೆ ಇದರಿಂದ ಧಕ್ಕೆ ಒದಗುತ್ತದೆ ಎಂಬುದು ಮುಸ್ಲಿಂ ಲೀಗ್‌ ವಾದ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಮುಹೂರ್ತ ಫಿಕ್ಸ್; ವಿಧೇಯಕ ಕೂಡ ರೆಡಿ

ಬಿಜೆಪಿ, ಆರೆಸ್ಸೆಸ್‌ ಬೆಂಬಲ

ಭಾರತೀಯ ಜನತಾ ಪಾರ್ಟಿ ಹಾಗೂ ಆರೆಸ್ಸೆಸ್‌, ದೀನ್‌ದಯಾಳ ಉಪಾಧ್ಯಾಯರ ಕಾಲದಿಂದಲೇ ಯುಸಿಸಿ ಜಾರಿಯ ಬಗ್ಗೆ ಒತ್ತಿ ಹೇಳುತ್ತ ಬಂದಿದೆ. ಜವಾಹರ್‌ಲಾಲ್‌ ನೆಹರೂ, ಡಾ.ಬಿ.ಆರ್‌.ಅಂಬೇಡ್ಕರ್‌ರಂಥ ದೊಡ್ಡ ನಾಯಕರು ಕೂಡ ಇದನ್ನು ಬೆಂಬಲಿಸಿದ್ದರು.

ಯುಸಿಸಿ ಜಾರಿಯ ಲಾಭವೇನು?

Uniform Civil Code Bill In Monsoon Session
Uniform Civil Code bill to be tabled in Parliament monsoon session: Sources Say

ಸಮಾನ ನಾಗರಿಕ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಈ ಕಾನೂನು ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತದೆ. ಅನೇಕ ವೈಯಕ್ತಿಕ ಕಾನೂನುಗಳು ಮಹಿಳೆಯರ ಹಕ್ಕುಗಳು, ವೈವಾಹಿಕ ನಿರ್ಬಂಧಗಳು, ಆಸ್ತಿ ಹಕ್ಕುಗಳಲ್ಲಿ ತಾರತಮ್ಯಪೂರಿತವಾಗಿವೆ. ಅಂತರ್‌ಧರ್ಮೀಯ ವಿವಾಹ ಮುಂತಾದ ಪ್ರಗತಿಪರ ವಿಚಾರಗಳನ್ನು ಇವು ಪ್ರೋತ್ಸಾಹಿಸುವುದಿಲ್ಲ. ಹಿಂದೂ ವಿವಾಹ ಕಾಯ್ದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ. ಯುಸಿಸಿಯ ಮೂಲಕ ಇದೆಲ್ಲದಕ್ಕೂ ಒಂದು ಸಮಾನ ಪಾತಳಿ ಕಲ್ಪಿತವಾಗಲಿದೆ. ದೇಶದ ಎಲ್ಲ ಪ್ರಜೆಗಳು ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತದೆ.

ಗೋವಾದಲ್ಲಿರುವ ನಾಗರಿಕ ಸಂಹಿತೆ ಏನು?

ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವವರು ಗೋವಾದಲ್ಲಿ ಈಗ ಜಾರಿಯಲ್ಲಿರುವ ಏಕರೂಪ ಸಂಹಿತೆಯನ್ನು ತೋರಿಸುತ್ತಾರೆ. ಇದೊಂದು ಗಮನಾರ್ಹ ನೀತಿಸಂಹಿತೆ. 1867ರಲ್ಲಿ ಇದು ಪೋರ್ಚುಗಲ್‌ನಲ್ಲಿ ನಂತರ 1869ರಲ್ಲಿ ಗೋವಾವನ್ನೂ ಸೇರಿ ಪೋರ್ಚುಗೀಸರು ಆಡಳಿತದಲ್ಲಿದ್ದ ಎಲ್ಲ ಪ್ರಾಂತ್ಯಗಳಲ್ಲಿ ಇದು ಜಾರಿಗೆ ಬಂತು.

ಈ ಕಾನೂನಿನ ಪ್ರಕಾರ ಯಾವುದೇ ಧರ್ಮದವರ ವಿವಾಹ ನಾಗರಿಕ ಪ್ರಾಧಿಕಾರದ ಮುಂದೆ ಕಡ್ಡಾಯವಾಗಿ ನೋಂದಾವಣೆಯಾಗಬೇಕು. ಹೆಂಡತಿಯು ಗಂಡನ ಆಸ್ತಿಗೆ ಸಮಾನ ಉತ್ತರಾಧಿಕಾರಿಯಾಗಿರುತ್ತಾಳೆ. ವಿಚ್ಛೇದನದ ಸಂದರ್ಭದಲ್ಲಿ ಆಕೆ ತನ್ನ ಪತಿ ಆನುವಂಶಿಕವಾಗಿ ಪಡೆಯುವ ಸಾಮಾನ್ಯ ಸ್ವತ್ತುಗಳ ಅರ್ಧ ಪಾಲಿಗೆ ಅರ್ಹಳಾಗಿರುತ್ತಾಳೆ. ಪೋಷಕರು ಕಡ್ಡಾಯವಾಗಿ ತಮ್ಮ ಆಸ್ತಿಯಲ್ಲಿ ಅರ್ಧ ಭಾಗವನ್ನು ಹೆಣ್ಣುಮಕ್ಕಳಿಗೂ ಸೇರಿಸಿ ಹಂಚಿಕೊಳ್ಳಬೇಕು. ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಈ ನೀತಿಸಂಹಿತೆ ತುಂಬಾ ಆಧುನಿಕವಾಗಿದೆ. ಆದರೆ ವಿವಾಹ ಮತ್ತು ದತ್ತು ಕಾಯಿದೆಗಳು ಇನ್ನಷ್ಟು ಸುಧಾರಿತಗೊಳ್ಳಬೇಕಿವೆ.

ಗೋವಾ ಸ್ವತಂತ್ರಗೊಂಡ ಮೇಲೂ ಈ ಕಾಯಿದೆ ಹೇಗೆ ಉಳಿಯಿತು? ʼಗೋವಾ, ದಮನ್ ಮತ್ತು ದಿಯು ಆಡಳಿತ ಕಾಯಿದೆ- 1962ʼರ ಸೆಕ್ಷನ್ 5(1) ರ ಪ್ರಕಾರ ಭಾರತ ಸರ್ಕಾರದ ಬದ್ಧತೆಯಂತೆ, ಇವು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳ್ಳುವ ಮುನ್ನ ಹೊಂದಿದ್ದ ಎಲ್ಲಾ ಕಾನೂನುಗಳು ಹಾಗೇ ಮುಂದುವರಿದವು. ಇಲ್ಲಿ ಶಾಸಕಾಂಗವು ಹಳೆಯ ಕಾನೂನು ರದ್ದುಪಡಿಸುವವರೆಗೆ ಅಥವಾ ನೂತನ ಕಾಯಿದೆ ಜಾರಿಗೆ ತರುವವರೆಗೆ ಅದು ಹಾಗೇ ಮುಂದುವರಿಯುತ್ತದೆ.

ಇದನ್ನೂ ಓದಿ: ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ ಚರ್ಚೆಯ ಕಿಡಿ ಹಾರಿಸಿದ್ದೇ ಆ ಕೇಸ್!‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

IPL 2024 : ನನ್ನ ನಿದ್ದೆಗೆಡಿಸಿದ್ದ ರೋಹಿತ್​ ಶರ್ಮಾ; ಗಂಭೀರ್​ ಹೀಗೆ ಹೇಳಲು ಕಾರಣವೇನು?

IPL 2024: ಗಂಭೀರ್, ರೋಹಿತ್ ತಾವು ಹೆಚ್ಚು ಹೆದರುವ ಬ್ಯಾ ಟರ್​ ಎಂದು ಹೇಳಿದರು. ರೋಹಿತ್ ಒಂದು ಹೆಜ್ಜೆ ಮುಂದೆ ಇಟ್ಟರೆ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದರು. ಆದ್ದರಿಂದ ಅವರ ದಾಳಿ ತಡೆಯಲು ತಂಡವು ಅನೇಕ ಬ್ಯಾಕಪ್ ಯೋಜನೆಗಳನ್ನು ತರುತ್ತಿದ್ದೆವು . ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಅನೇಕ ಸ್ಫೋಟಕ ಬ್ಯಾಟರ್​ಗಳ ಹೊರತಾಗಿಯೂ ಗಂಭೀರ್ ನೆಮ್ಮದಿ ಕೆಡಿಸಿದ್ದ ರೋಹಿತ್​ ಎಂಬುದು ವಿಶೇಷ.

VISTARANEWS.COM


on

IPL 2024
Koo

ಮುಂಬಯಿ: ಗೌತಮ್ ಗಂಭೀರ್ (Gautam Gambhir) ಐಪಿಎಲ್​ನಲ್ಲಿ ಕೋಲ್ಕೊತಾ ನೈಟ್​​ ರೈಡರ್ಸ್​​ ತಂಡ ನಾಯಕರಾಗಿದ್ದ ಸಮಯವನ್ನು ಇತ್ತೀಚೆಗೆ ಸ್ಮರಿಸಿಕೊಂಡಿದ್ದಾರೆ. ಈ ವೇಳೆ ಅವರು ರೋಹಿತ್ ಶರ್ಮಾ (Rohit Sharma) ತಮ್ಮ ನಿದ್ದೆಗೆಡಿಸಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ಶುಕ್ರವಾರ ಐಪಿಎಲ್​17ನೇ ಆವೃತ್ತಿಯ (IPL 2024) ಮುಂಬೈ ಇಂಡಿಯನ್ಸ್ ವಿರುದ್ಧದ ಕೆಕೆಆರ್ ಪಂದ್ಯಕ್ಕೆ ಮುಂಚಿತವಾಗಿ ಮಾತನಾಡಿದ ಗಂಭೀರ್​ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಸ್ಫೋಟಕ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಅವರನ್ನು ಶ್ಲಾಘಿಸಿದರು.

ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ಮಾತನಾಡಿದ ಗಂಭೀರ್, ರೋಹಿತ್ ತಾವು ಹೆಚ್ಚು ಹೆದರುವ ಬ್ಯಾ ಟರ್​ ಎಂದು ಹೇಳಿದರು. ರೋಹಿತ್ ಒಂದು ಹೆಜ್ಜೆ ಮುಂದೆ ಇಟ್ಟರೆ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದರು. ಆದ್ದರಿಂದ ಅವರ ದಾಳಿ ತಡೆಯಲು ತಂಡವು ಅನೇಕ ಬ್ಯಾಕಪ್ ಯೋಜನೆಗಳನ್ನು ತರುತ್ತಿದ್ದೆವು . ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಅನೇಕ ಸ್ಫೋಟಕ ಬ್ಯಾಟರ್​ಗಳ ಹೊರತಾಗಿಯೂ ಗಂಭೀರ್ ನೆಮ್ಮದಿ ಕೆಡಿಸಿದ್ದ ರೋಹಿತ್​ ಎಂಬುದು ವಿಶೇಷ.

“ನಾಯಕನಾಗಿ ನನ್ನ ಇಡೀ ಐಪಿಎಲ್ ವೃತ್ತಿಜೀವನದಲ್ಲಿ, ನನಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡಿದ ಏಕೈಕ ಆಟಗಾರ ಇದ್ದರೆ ಅದು ರೋಹಿತ್ ಶರ್ಮಾ. ಐಪಿಎಲ್​ನಲ್ಲಿ ನಾನು ಹೆದರಿದ ಏಕೈಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ನನಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಕೊಟ್ಟ ಏಕೈಕ ಆಟಗಾರ ಅವರು. ಕ್ರಿಸ್ ಗೇಲ್ ಅಲ್ಲ, ಎಬಿ ಡಿವಿಲಿಯರ್ಸ್ ಅಲ್ಲ , ಮತ್ಯಾರೂ ಇಲ್ಲ , ರೋಹಿತ್ ಶರ್ಮಾ ಮಾತ್ರ. ಏಕೆಂದರೆ ಅವರಿಗಾಗಿ ನಾನು ಪ್ಲಾನ್ ಎ ಅಥವಾ ಪ್ಲಾನ್ ಬಿ ಹೊಂದಿರಬೇಕಿತ್ತು, ಬಹುಶಃ ಪ್ಲಾನ್ ಸಿ ಕೂಡ. ಏಕೆಂದರೆ ರೋಹಿತ್ ಅವರನ್ನು ನಿಯಂತ್ರಿಸುವುದು ಕಷ್ಟ, “ಎಂದು ಗಂಭೀರ್ ಹೇಳಿದರು.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ 12 ವರ್ಷಗಳ ಸುದೀರ್ಘ ದಾಖಲೆಯನ್ನು ಮುರಿಯಲು ಎದುರು ನೋಡುತ್ತಿದೆ. ಕೆಕೆಆರ್ ಕೇವಲ 9 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 23 ಪಂದ್ಯಗಳನ್ನು ಗೆದ್ದಿದೆ.

ಇದನ್ನೂ ಓದಿ: IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

ರೋಹಿತ್ ಗಾಗಿ ಸಾಕಷ್ಟು ಯೋಜನೆಗಳು ನಡೆಯುತ್ತಿದ್ದವು ಎಂದು ಗಂಭೀರ್ ಬಹಿರಂಗಪಡಿಸಿದರು. ರೋಹಿತ್ ಒಂದು ಓವರ್​​ನಲ್ಲಿ 30 ಕ್ಕೂ ಹೆಚ್ಚು ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಅವರಿಗಾಗಿ ಯೋಜನೆ ರೂಪಿಸಬೇಕಿತ್ತು

“ಐಪಿಎಲ್​​ನಲ್ಲಿ ರೋಹಿತ್ ಶರ್ಮಾ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್​ಗಾಗಿ ಹೆಚ್ಚ ಯೋಜನೆ ಹಾಕಿಕೊಂಡಿಲ್ಲ. ಪಂದ್ಯದಕ್ಕೆ ಮೊದಲ ದಿನ ರಾತ್ರಿ ನಾನು ಅವರು ಆಡುವ ದೃಶ್ಯಗಳನ್ನು ನೋಡುತ್ತಿದ್ದೆ. ಪ್ಲಾನ್ ಎ ಉತ್ತಮವಾರಿ ಸಿದ್ದಪಡಿಸುತ್ತಿದ್ದೆ. ಅದು ಕೆಲಸ ಮಾಡದಿದ್ದರೆ, ನಾನು ಮತ್ತೊಂದು ಯೋಜನೆ ಮಾಡಬೇಕಿತ್ತು. ಸುನಿಲ್ ನರೈನ್​ ತನ್ನ ನಾಲ್ಕು ಓವರ್​ಗಳನ್ನು ಎಸೆದರೆ, ಮುಂದಿನ 16 ಓವರ್​ಗಳನ್ನು ಯಾರು ಎಸೆಯುತ್ತಾರೆ? ನಾನು ಸುನಿಲ್ ಸ್ಪೆಲ್​ ಬೇಗ ಮುಗಿಸಿದರೆ ಮತ್ತು ರೋಹಿತ್ ಇದ್ದರೆ, ಅವರು ಒಂದೇ ಓವರ್​ನಲ್ಲಿ 30 ರನ್ ಗಳಿಸಬಹುದು. ಬಹುಶಃ ನಾಯಕನಾಗಿ ನಾನು ಹೆದರುತ್ತಿದ್ದ ಏಕೈಕ ಬ್ಯಾಟ್ಸ್ಮನ್,” ಎಂದು ಗಂಭೀರ್ ಹೇಳಿದರು.

ಕೆಕೆಆರ್​​ 26 ಪಂದ್ಯಗಳನ್ನಾಡಿರುವ ರೋಹಿತ್ 130.32ರ ಸ್ಟ್ರೈಕ್ ರೇಟ್​ನಲ್ಲಿ ಅಜೇಯ ಶತಕ ಸೇರಿದಂತೆ 924 ರನ್ ಗಳಿಸಿದ್ದಾರೆ.

Continue Reading

ಕ್ರೀಡೆ

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

IPL 2024: ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

VISTARANEWS.COM


on

IPL 2024
Koo

ಚೆನ್ನೈ: ರಾಷ್ಟ್ರೀಯ ಬದ್ಧತೆಯ ಕಾರಣಕ್ಕೆ ಬಾಂಗ್ಲಾದೇಶದ ಬೌಲರ್​ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ತೊರೆದಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಶಿಬಿರ ಬಿಟ್ಟಿದ್ದಾರೆ. ಹೀಗೆ ಐಪಿಎಲ್ 2024 ಗೆ (IPL 2024 ) ವಿದಾಯ ಹೇಳುವ ಮೊದಲು ಮುಸ್ತಾಫಿಜುರ್ ರೆಹಮಾನ್ (Mustafizur Rahman) ಲೆಜೆಂಡ್​ ಕ್ರಿಕೆಟಿಗ ಎಂಎಸ್ ಧೋನಿಯಿಂದ ಸಹಿ ಮಾಡಿದ ಜೆರ್ಸಿ ಸ್ವೀಕರಿಸಿದರು. ಬಾಂಗ್ಲಾದೇಶ (Bangladesh Cricket Team) ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಕಾಣಿಸಿಕೊಳ್ಳಬೇಕಾಗಿರುವ ಕಾರಣ ವೇಗಿ ಮೇ 1, 2024 ರ ನಂತರ ಸಿಎಸ್ಕೆಗೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ತಿಳಿಸಲಾಗಿತ್ತು.

ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

“ಎಲ್ಲದಕ್ಕೂ ಧನ್ಯವಾದಗಳು ಮಹಿ ಭಾಯ್. ನಿಮ್ಮಂತಹ ದಂತಕಥೆಯೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುವುದು ವಿಶೇಷ ಭಾವನೆ. ಪ್ರತಿ ಬಾರಿಯೂ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅಮೂಲ್ಯ ಸಲಹೆಗಳನ್ನು ಸ್ಮರಿಸುತ್ತೇನೆ. ನಾನು ಹೇಳಿದ ವಿಷಯಗಳನ್ನು ನೆನಪಿಸಿಕೊಳ್ಳುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಭೇಟಿಯಾಗಲು ಮತ್ತು ಆಡಲು ಎದುರು ನೋಡುತ್ತಿದ್ದೇನೆ, “ಎಂದು ಮುಸ್ತಾಫಿಜುರ್ ಬರೆದುಕೊಂಡಿದ್ದಾರೆ.

ಟಿ 20 ಐ ಸರಣಿಗಾಗಿ ಮುಸ್ತಾಫಿಜುರ್ ತಮ್ಮ ದೇಶಕ್ಕೆ ಮರಳಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಏಪ್ರಿಲ್ 30 ರ ಗಡುವು ನಿಗದಿಪಡಿಸಿತ್ತು. ಆದರೆ, ಮೇ 1 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಪಿಬಿಕೆಎಸ್ ವಿರುದ್ಧ ಸಿಎಸ್ಕೆ ಪಂದ್ಯದ ಕಾರಣ ಗಡುವನ್ನು ವಿಸ್ತರಿಸಲಾಯಿತು. ಚೆನ್ನೈ ತಂಡ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ಮಂಡಳಿಯು ಗಡುವನ್ನು ವಿಸ್ತರಿಸಿತು.

“ನಾವು ಮುಸ್ತಾಫಿಜುರ್​ಗೆ ಏಪ್ರಿಲ್ 30 ರವರೆಗೆ ಐಪಿಎಲ್​ನಲ್ಲಿ ಆಡಲು ರಜೆ ನೀಡಿದ್ದೆವು, ಆದರೆ ಮೇ 1 ರಂದು ಚೆನ್ನೈನಲ್ಲಿ ಪಂದ್ಯ ಇರುವುದರಿಂದ, ಚೆನ್ನೈ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ನಾವು ಅವರ ರಜೆಯನ್ನು ಒಂದು ದಿನ ವಿಸ್ತರಿಸಿದ್ದೇವೆ” ಎಂದು ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೇಯ ಕ್ರಿಕೆಟ್ ಕಾರ್ಯಾಚರಣೆಗಳ ಉಪ ವ್ಯವಸ್ಥಾಪಕ ಶಹರಿಯಾರ್ ನಫೀಸ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ಪರ್ಪಲ್ ಕ್ಯಾಪ್ ಗೆಲ್ಲುವ ಸ್ಪರ್ಧೆಯಲ್ಲಿದ್ದ ಮುಸ್ತಾಫಿಜುರ್ ಐಪಿಎಲ್ 2024 ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನ ಪಡೆದರು. 9 ಪಂದ್ಯಗಳನ್ನಾಡಿರುವ ವೇಗಿ 9.26ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ.

ಪಿಬಿಕೆಎಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಸೋತಿದ್ದ ಸಿಎಸ್ಕೆಗೆ ರೆಹಮಾನ್ ಅಲಭ್ಯತೆ ಕಾಡಲಿದೆ. ಯಾಕೆಂದರೆ ಸ್ಟ್ರೈಕ್ ಬೌಲರ್​ , ದೀಪಕ್ ಚಹರ್ ಗಾಯಗೊಂಡ ನಂತರ ಮೈದಾನ ತೊರೆದಿದ್ದರು.

Continue Reading

ವೈರಲ್ ನ್ಯೂಸ್

Viral Video: ಪ್ರಿನ್ಸಿಪಾಲ್ ಆದರೇನು, ಟೀಚರ್ ಆದರೇನು? ಹೆಂಗಸರ ಬಡಿದಾಟ ಇರೋದೇ ಹೀಗೆ! ವಿಡಿಯೊ ನೋಡಿ

Viral Video: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ, “ನನ್ನ ನೀನು ಗೆಲ್ಲಲಾರೆ” ಎಂಬ ಧೋರಣೆಯಲ್ಲಿ ನುಗ್ಗಿದ ಪ್ರಾಂಶುಪಾಲೆಯು, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಇದಕ್ಕೆ ಶಿಕ್ಷಕಿಯೂ, “ನಾ ನಿನ್ನ ಬಿಡಲಾರೆ” ಎಂಬಂತೆ ಅವರ ಬಟ್ಟೆ ಎಳೆದು ಸೇಡು ತೀರಿಸಿಕೊಂಡಿದ್ದಾರೆ. ಶಾಲೆಯಲ್ಲಿಯೇ ಶಿಕ್ಷಕಿಯರು ಹೀಗೆ ಬಡಿದಾಡಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral Video
Koo

ಲಖನೌ: ”ಎರಡು ಜಡೆಗಳು ಒಟ್ಟಿಗೆ ಸೇರಲ್ಲ” ಎಂಬ ಮಾತಿದೆ. ಇನ್ನು ಸರ್ಕಾರಿ ಬಸ್‌ಗಳು, ಅಕ್ಕಪಕ್ಕದ ಮನೆಗಳಲ್ಲಿ ಹೆಣ್ಣುಮಕ್ಕಳು ಬಡಿದಾಡಿಕೊಳ್ಳುವ, ಹಿಗ್ಗಾಮುಗ್ಗ ಬೈದು ಜಗಳವಾಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ವೈಷಮ್ಯ, ಜಗಳ, ಸುತ್ತಮುತ್ತಲಿನವರ ಬಗ್ಗೆ ಗಾಸಿಪ್‌ ಮಾಡುವ ಕಾರಣಕ್ಕಾಗಿಯೇ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ಚಾಲ್ತಿಗೆ ಬಂದಿರಬೇಕು. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿರುವ (Agra) ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿ ಮಧ್ಯೆ ಶಾಲೆಯಲ್ಲಿಯೇ ಮಾರಾಮಾರಿ ನಡೆದಿದೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿಯು ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಿದ್ದಾರೆ. ಅಷ್ಟೇ ಅಲ್ಲ, ಪ್ರಾಂಶುಪಾಲೆಯು, ನಾನು ಯಾವುದಕ್ಕೂ ಏನು ಕಡಿಮೆ ಇಲ್ಲ ಎಂಬಂತೆ, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಶಿಕ್ಷಕಿಯೂ ರೊಚ್ಚಿಗೆದ್ದು, ಪ್ರಾಂಶುಪಾಲೆಯ ಬಟ್ಟೆ ಹಿಡಿದು ಎಳೆದಿದ್ದಾರೆ. ಇಬ್ಬರ ನಡುವಿನ ಈ ಜಂಗಿಕುಸ್ತಿಯು ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಾನು ಇವಳನ್ನು ಬಿಡಲ್ಲ ಎಂಬ ರೀತಿ ಪ್ರಾಂಶುಪಾಲೆ ಮುನ್ನುಗ್ಗಿದರೆ, ಕುರ್ಚಿ ಮೇಲೆಯೇ ಕುಳಿತ ಶಿಕ್ಷಕಿಯು ತಿರುಗೇಟು ನೀಡಿದ್ದಾರೆ. ಇವರ ಸಹೋದ್ಯೋಗಿಗಳು ಎಷ್ಟು ಜಗಳ ಬಿಡಿಸಿದರೂ ಇಬ್ಬರ ನಟುವಿನ ಜಟಾಪಟಿ ಮಾತ್ರ ನಿಂತಿಲ್ಲ. ನಿಮ್ಮಿಬ್ಬರದ್ದು ಇದೇ ಆಯಿತು, ವಿಡಿಯೊ ಮಾಡಿ ಅಪ್‌ಲೋಡ್‌ ಮಾಡುತ್ತೇನೆ, ನಿಮ್ಮ ಘನತೆಗೆ ತಕ್ಕಂತೆ ನೀವು ವರ್ತಿಸುತ್ತಿಲ್ಲ ಎಂಬುದಾಗಿ ವಿಡಿಯೊ ಮಾಡುವವರು ಹೇಳಿದರೂ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯು ಪಟ್ಟಿಗೆ ಬಿದ್ದು ಜಗಳವಾಡಿದ್ದಾರೆ.

“ಶಾಲೆಯಲ್ಲಿ ಹೇಗೆ ವರ್ತಿಸಬೇಕು ಎಂಬುದೇ ಗೊತ್ತಿರದ ಇವರು, ಮಕ್ಕಳಿಗೆ ಯಾವ ಶಿಕ್ಷಣ ನೀಡುತ್ತಾರೆ? ಇಬ್ಬರನ್ನೂ ವಜಾಗೊಳಿಸಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು, “ಇಂತಹ ಶಿಕ್ಷಕರ ಕೈಯಲ್ಲಿ ಕಲಿತ ಮಕ್ಕಳು ಕೂಡ ಹಾಳಾಗುತ್ತಾರೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯದ ಬಗ್ಗೆ ಮರುಕವಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ, ನೂರಾರು ಜನ ಪ್ರತಿಕ್ರಿಯಿಸಿ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇವರ ವಿರುದ್ಧ ಕ್ರಮ ತೆಗೆದುಕೊಂಡಿರುವ ಕುರಿತು, ನೋಟಿಸ್‌ ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಇದನ್ನೂ ಓದಿ: Asaduddin Owaisi: ಅಸಾದುದ್ದೀನ್‌ ಓವೈಸಿಯ ಭರ್ಜರಿ ಬೈಕ್‌ ರೈಡ್‌;ವಿಡಿಯೋ ವೈರಲ್‌

Continue Reading

ಪ್ರಮುಖ ಸುದ್ದಿ

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Rohit Sharma : ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Rohit Sharma
Koo

ಬೆಂಗಳೂರು: ಹಾಲಿ ಆವೃತ್ತಿಯಲ್ಲಿ ಐಪಿಎಲ್​ನಲ್ಲಿ (IPL 2024) ಮುಂಬೈ ಇಂಡಿಯನ್ಸ್ (Mumbai Indian’s) ತಂಡದ ಆರಂಭಿಕ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಮಿಂಚುತ್ತಿಲ್ಲ. ಅವರು ಕನಿಷ್ಠ ಮೊತ್ತಗಳಿಗೆ ಔಟ್​ ಆಗುತ್ತಿದ್ದಾರೆ. ಬಲಗೈ ಬ್ಯಾಟರ್​​ ಕಳೆದ ತಿಂಗಳು ಸಿಎಸ್ಕೆ (CSK) ವಿರುದ್ಧ ಶತಕ ಬಾರಿಸಿದರೂ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಿಲ್ಲ. ಅಂತೆಯೇ ಕಳೆದ ಮೂರು ಇನಿಂಗ್ಸ್​ಗಳಲ್ಲಿ ರೋಹಿತ್ ಎರಡಂಕಿ ಮೊತ್ತವನ್ನು ಮುಟ್ಟಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ, ಅವರು ಈ ಋತುವಿನಲ್ಲಿ ಇಲ್ಲಿಯವರೆಗೆ 10 ಇನಿಂಗ್ಸ್​​ಗಳಲ್ಲಿ 35 ಸರಾಸರಿ ಮತ್ತು 158.29 ಸ್ಟ್ರೈಕ್ ರೇಟ್​ನೊಂದಿಗೆ 315 ರನ್ ಗಳಿಸಿದ್ದಾರೆ.

ಟಿ 20 ವಿಶ್ವಕಪ್ 2024 ಸಮೀಪಿಸುತ್ತಿರುವುದರಿಂದ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಅವರು ಔಟಾಗುತ್ತಿರುವ ವಿಧಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನುಭವಿ ಆರಂಭಿಕ ಆಟಗಾರ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಎಡಗೈ ವೇಗಿಗಳಿಂದ ಆಗಾಗ್ಗೆ ತೊಂದರೆಗೀಡಾಗಿದ್ದಾರೆ. ಟ್ರೆಂಟ್ ಬೌಲ್ಟ್ ಎರಡು ಬಾರಿ ವಿಕೆಟ್ ಪಡೆದರೆ, ರೋಹಿತ್ ಶರ್ಮಾ ಅವರನ್ನು ಸ್ಯಾಮ್ ಕರ್ರನ್, ಖಲೀಲ್ ಅಹ್ಮದ್ ಮತ್ತು ಮೊಹ್ಸಿನ್ ಖಾನ್ ತಲಾ ಒಂದು ಬಾರಿ ಔಟ್ ಮಾಡಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಕೆಕೆಆರ್ ವಿರುದ್ಧದ ಮುಂಬೈ ಇಂಡಿಯನ್ಸ್ನ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ಬ್ಯಾಟ್ಸ್ಮನ್ ವಾಸಿಮ್ ಜಾಫರ್ ಎಡಗೈ ವೇಗದ ಬೌಲರ್​ಗಳ ವಿರುದ್ಧ ರೋಹಿತ್ ಶರ್ಮಾ ಯಾಕೆ ವೈಫಲ್ಯ ಹೊಂದುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಎಡಗೈ ವೇಗಿಗಳ ವಿರುದ್ಧ ಅವರು ಸಾಖಷ್ಟು ಸಮಸ್ಯೆ ಹೊಂದಿದ್ದಾರೆ. ಅವರು ತನ್ನ ಮುಂಭಾಗದ ಕಾಲನ್ನು ಇಡುವ ರೀತಿಯಿಂದಲೇ ತೊಂದರೆಯಾಗುತ್ತಿದೆ. ಎಲ್ಲರಿಗೂ ಅದು ಅರ್ಥವಾಗಿದೆ. ಬಲಗೈ ಬೌಲರ್​ಗಳ ಸಹ ಅವರನ್ನು ಔಟ್ ಮಾಡಲು ಒಂದು ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಎಡಗೈ ಆಟಗಾರರು ಕೋನವನ್ನು ಸೃಷ್ಟಿಸಿ ಬೌಲಿಂಗ್ ಮಾಡುತ್ತಾರೆ. ಅದು ಅವರಿಗೆ ಕಷ್ಟಕರವಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅವರು ಅವರ ಹಿಂದಕ್ಕೆ ಹೋಗಿ ಚೆಂಡನ್ನು ಎದುರಿಸುತ್ತಾರೆ. ಕೆಲವೊಮ್ಮೆ ಸ್ವಿಂಗ್ ಆಗುವುದನ್ನು ತಪ್ಪಿಸಲು ಮುಂದಕ್ಕೆ ನಡೆಯುತ್ತಾರೆ,” ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: Rohit Sharm : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

ರೋಹಿತ್​ಗೆ ತನ್ನದೇ ಆದ ಸಮಸ್ಯೆಗಳಿದ್ದವು. ಟ್ರೆಂಟ್ ಬೌಲ್ಟ್ ಅವರನ್ನು ಲಾಂಗ್ ಸ್ವಿಂಗ್​ನೊಂದಿಗೆ ಔಟ್ ಮಾಡುತ್ತಾರೆ. ಖಲೀಲ್ ವಿರುದ್ಧವೂ ತನ್ನ ಚಲನೆಯನ್ನು ತಪ್ಪಾಗಿ ಮಾಡಿದರು. ನಾನು ಇದನ್ನು ಯೋಜಿತ ವಿಕೆಟ್​ ಎಂದು ಕರೆಯುವುದಿಲ್ಲ. ಆದರೂ ಅವರ ಆಟದಲ್ಲಿ ಒಂದು ಲೋಪದೋಷವಿದೆ. ಅದು ರೋಹಿತ್​ಗೆ ತಿಳಿದಿದೆ. ಅವರು ಪ್ರತಿದಾಳಿ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಆಕ್ರಮಣಕಾರಿ ಕೌಶಲ್ಯದ ಮೂಲಕ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ, “ಎಂದು ಜಾಫರ್ ಹೇಳಿದ್ದಾರೆ.

ಸಲಹೆ ನೀಡಿದ ಜಾಫರ್​

ಇದೇ ವೇಳೆ ಜಾಫರ್​ ಬ್ಯಾಟಿಂಗ್ ಸಲಹೆಯನ್ನೂ ನೀಡಿದ್ದಾರೆ. ಆಕ್ರಮಣಕಾರಿ ಮಾರ್ಗವನ್ನು ತೆಗೆದುಕೊಳ್ಳಬಾರದು. ಬದಲಿಗೆ ಮೊದಲ ಎರಡು ಓವರ್​ಗಳಲ್ಲಿ ಚೆಂಡನ್ನು ಟೈಮಿಂಗ್ ಮಾಡುವತ್ತ ಗಮನ ಹರಿಸಬೇಕು ಎಂದು ಜಾಫರ್ ರೋಹಿತ್ಗೆ ಸಲಹೆ ನೀಡಿದರು.

ರೋಹಿತ್ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿಯೇ ಚೆಂಡನ್ನು ಬಾರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಚೆಂಡನ್ನು ತುಂಬಾ ಜೋರಾಇ ಹೊಡೆಯಲು ಪ್ರಯತ್ನಿಸುವ ಬದಲು ಒಂದೆರಡು ಓವರ್​ಗಳನ್ನು ತೆಗೆದುಕೊಳ್ಳಬಹುದು ಮತ್ತು ಸಮಯವನ್ನು ನೋಡಬಹುದು. “ಎಂದು ಅವರು ಹೇಳಿದರು.

Continue Reading
Advertisement
IPL 2024
Latest4 mins ago

IPL 2024 : ನನ್ನ ನಿದ್ದೆಗೆಡಿಸಿದ್ದ ರೋಹಿತ್​ ಶರ್ಮಾ; ಗಂಭೀರ್​ ಹೀಗೆ ಹೇಳಲು ಕಾರಣವೇನು?

Vidyashree HS
ಬೆಂಗಳೂರು12 mins ago

Vidyashree HS: ಬೆಂಗಳೂರಿನಲ್ಲಿ ಮೇ 4ರಂದು ವಿದ್ಯಾಶ್ರೀ ಎಚ್.ಎಸ್. ಭರತನಾಟ್ಯ ರಂಗಪ್ರವೇಶ

Prajwal Revanna Case
ಕರ್ನಾಟಕ42 mins ago

Prajwal Revanna Case: ರೇವಣ್ಣ ಮನೆ ಕೆಲಸದ ಮಹಿಳೆ ಕಿಡ್ನ್ಯಾಪ್‌ ಕೇಸ್; 2ನೇ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

Summer Fashion
ಫ್ಯಾಷನ್58 mins ago

Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

Summer Tour
ಪ್ರವಾಸ1 hour ago

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

IPL 2024
ಕ್ರೀಡೆ1 hour ago

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

Tips for bedroom corner
ಲೈಫ್‌ಸ್ಟೈಲ್1 hour ago

Tips for Bedroom Corner: ಮಲಗುವ ಕೋಣೆಯ ಮೂಲೆಗಳನ್ನು ಆಕರ್ಷಕವಾಗಿಸಲು ಕೆಲವು ಟಿಪ್ಸ್

Viral Video
ವೈರಲ್ ನ್ಯೂಸ್1 hour ago

Viral Video: ಪ್ರಿನ್ಸಿಪಾಲ್ ಆದರೇನು, ಟೀಚರ್ ಆದರೇನು? ಹೆಂಗಸರ ಬಡಿದಾಟ ಇರೋದೇ ಹೀಗೆ! ವಿಡಿಯೊ ನೋಡಿ

Rohit Sharma
ಪ್ರಮುಖ ಸುದ್ದಿ2 hours ago

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Prajwal Revanna Case face not visible in videos says HD Kumaraswamy
ಕ್ರೈಂ2 hours ago

Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ3 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ14 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌