ಯುವಕರೇ ಎಚ್ಚೆತ್ತುಕೊಳ್ಳಿ, ನಿಮ್ಮ ಅರಿವೇ ಇಲ್ಲದೆ ಆಗಿರಬಹುದು Heart Attack! - Vistara News

ಆರೋಗ್ಯ

ಯುವಕರೇ ಎಚ್ಚೆತ್ತುಕೊಳ್ಳಿ, ನಿಮ್ಮ ಅರಿವೇ ಇಲ್ಲದೆ ಆಗಿರಬಹುದು Heart Attack!

ಪುನೀತ್‌ ರಾಜ್‌ಕುಮಾರ್‌, ಕೆಕೆ, ಸಿದ್ಧಾರ್ಥ್‌ ಶುಕ್ಲಾ- Heart Attack ಕಾರಣ ಯುವಕರ ಸಾವುಗಳು ಒಂದೊಂದಾಗಿ ನಮ್ಮ ಸುತ್ತಮುತ್ತಲೂ ಸಂಭವಿಸುತ್ತಿವೆ. ಇದು ಎಚ್ಚೆತ್ತುಕೊಳ್ಳಬೇಕಾದ ಸಮಯ.

VISTARANEWS.COM


on

heart attack 61 year old man come from Kerala suffered heart attack in BMTC bus and death
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕನ್ನಡದ ಸುಪ್ರಸಿದ್ಧ ನಟ ಪುನೀತ್ ರಾಜ್‌ಕುಮಾರ್, ಹಿಂದಿ ಚಿತ್ರರಂಗದ ಸಿದ್ಧಾರ್ಥ್ ಶುಕ್ಲಾ ಮತ್ತು ಕೆಕೆ ಸೇರಿದಂತೆ ಇನ್ನೂ ಬಾಳಿ ಬದುಕಬೇಕಾದ ಅನೇಕರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ಗುರಿಯಾಗುತ್ತಿದ್ದಾರೆ. ಯಾಕೆ ಹೀಗೆ? ಆರೋಗ್ಯ ವ್ಯವಸ್ಥೆ, ಜೀವನಶೈಲಿ- ಎಲ್ಲಿ ತಪ್ಪಾಗಿದೆ?

ಇಲ್ಲೊಂದು ಘಟನೆ ನೋಡಿ- ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರ ಪತ್ರಕರ್ತರಾದ ಅಮಿತ್ ಕುಮಾರ್ ಕೇವಲ 29ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದರು. ಆದರೆ ಸಕಾಲಿಕ ಡಯಾಗ್ನೋಸಿಸ್‌ ಮತ್ತು ಚಿಕಿತ್ಸೆಯಿಂದಾಗಿ ಅಪಾಯದಿಂದ ಪಾರಾದರು.

ಕುಮಾರ್ ಅವರಿಗೆ ಭರ್ಜರಿ ಭೋಜನದ ಬಳಿಕ ಎದೆನೋವು ಕಾಣಿಸಿಕೊಂಡಿತು. ಇದು ಅಸಿಡಿಟಿ ಆಗಿರಬಹುದು ಎಂದು ಹಲವರಂತೆ ಅವರೂ ಭಾವಿಸಿದರು. ಕೆಲವು ಆಂಟಾಸಿಡ್‌ ಔಷಧಗಳನ್ನು ಸೇವಿಸಿದರು. ಆದರೆ ಗುಣ ಕಾಣಲಿಲ್ಲ. ಅವರ ಡಾಕ್ಟರ್‌ ಕೂಡ, ಅವರಿಗೆ ಹೃದಯದ ಸಮಸ್ಯೆ ಇರಬಹುದು ಎಂದು ಮೊದಲ ನೋಟದಲ್ಲೇ ನಿರ್ಣಯಿಸಲಿಲ್ಲ.

ಆದರೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್‌ನಲ್ಲಿ (ಇಸಿಜಿ) ಅಸಹಜತೆಯನ್ನು ಡಾಕ್ಟರ್‌ ಗಮನಿಸಿದರು. ತಕ್ಷಣ ಬೇರೊಂದು ಆಸ್ಪತ್ರೆಗೆ ಹೋಗುವಂತೆ ಕುಮಾರ್‌ಗೆ ಸಲಹೆ ನೀಡಿದರು.

ನಿರಂತರ ಮಧ್ಯಮ ಪ್ರಮಾಣದ ಎದೆನೋವಿನಿಂದ ಬಳಲುತ್ತಿದ್ದ ಕುಮಾರ್‌ಗೆ ಇದು ಅಚ್ಚರಿ, ಆಘಾತ. “ಇದು ಆಘಾತದ ಸಂಗತಿಯಾಗಿತ್ತು. ಅವರು ಹೇಳಿದ್ದನ್ನು ನಂಬಲು ಸಾಧ್ಯವಾಗಲಿಲ್ಲ. ಯಾಕೆಂದರೆ ನನಗಿನ್ನೂ 29 ವರ್ಷ. ಹೃದಯಾಘಾತದ ಸಂಭವನೀಯತೆ ನಂಬುವ ಸ್ಥಿತಿಯಲ್ಲಿ ಇರಲಿಲ್ಲʼʼ ಎಂದು ಕುಮಾರ್ ನೆನಪಿಸಿಕೊಳ್ಳುತ್ತಾರೆ.

ʼʼನಾನು ಹಾಸ್ಟೆಲ್‌ನಲ್ಲಿ ಧೂಮಪಾನ ಮಾಡುತ್ತಿದ್ದೆ ಮತ್ತು ಊಟ ಮಾಡುತ್ತಿದ್ದೆ. ಆದರೆ ಚಿಕ್ಕ ವಯಸ್ಸಿನವನಾಗಿದ್ದರಿಂದ ಮತ್ತು ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಎಲ್ಲರೂ ಮಾಡುವಂತೆ ನಡೆದುಕೊಳ್ಳುತ್ತಿದ್ದೆ. ಆದರೆ ವಾಸ್ತವ ಭಿನ್ನವಾಗಿತ್ತು. ಆ ಘಟನೆಯ ಬಳಿಕ ನನ್ನ ಜೀವನ ಮತ್ತು ಜೀವನಶೈಲಿ- ಎರಡೂ ಬದಲಾಗಿವೆ” ಎನ್ನುತ್ತಾರೆ ಕುಮಾರ್.

ಜನಪ್ರಿಯ ಗಾಯಕ ಕೆಕೆ ಅವರ ಹಠಾತ್‌ ಮರಣದ ನಂತರ ಹೆಚ್ಚುತ್ತಿರುವ ಹೃದಯ ಕಾಯಿಲೆಗಳು ಮತ್ತು ಹೃದಯ ಸ್ತಂಭನಗಳ ಕುರಿತು ಚರ್ಚೆಗಳು ತೀವ್ರವಾಗಿವೆ. ಈ ಹಿಂದೆ ಕನ್ನಡದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಟಿವಿ ನಟ ಸಿದ್ಧಾರ್ಥ್ ಶುಕ್ಲಾ ಮತ್ತು ನಿರ್ದೇಶಕ ರಾಜ್ ಕೌಶಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿಕ್ಕ ವಯಸ್ಸಿನಲ್ಲೇ ಹೃದಯ ಸ್ತಂಭನದಿಂದ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.

ಈ ಪ್ರವೃತ್ತಿ ಯುವ ಸೆಲೆಬ್ರಿಟಿಗಳಿಗೆ ಸೀಮಿತವಾಗಿಲ್ಲ. ಕುಮಾರ್ ಅವರಂತಹ ಸಾಮಾನ್ಯ ಜನರು ಕೂಡ ಸಾಕಷ್ಟು ಇದ್ದಾರೆ.

ವೈದ್ಯಕೀಯ ವಲಯದ ಅನುಭವ

ಇದೊಂದು ಉದಾಹರಣೆ ಮಾತ್ರ: ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 150-175 ಆಂಜಿಯೋಪ್ಲಾಸ್ಟಿ ನಡೆಸಲಾಗುತ್ತದೆ. ಆಂಜಿಯೋಪ್ಲಾಸ್ಟಿ ಎನ್ನುವುದು ಹೃದಯದ ಅಪಧಮನಿಯ ಒಳಭಾಗವನ್ನು ಹಿಗ್ಗಿಸಲು ಮತ್ತು ಹೃದಯದಲ್ಲಿ ರಕ್ತದ ಹರಿವನ್ನು ಸರಾಗಗೊಳಿಸಲು ಸಣ್ಣ ಲೋಹದ ಜಾಲರಿ ಟ್ಯೂಬ್ ಅನ್ನು ಸೇರಿಸುವ ಒಂದು ವಿಧಾನ.

ಇದರಲ್ಲಿ, 55-60ಕ್ಕಿಂತ ಹೆಚ್ಚು ರೋಗಿಗಳು ಪ್ರಾಥಮಿಕ ಆಂಜಿಯೋಪ್ಲಾಸ್ಟಿ ವರ್ಗಕ್ಕೆ ಬರುತ್ತಾರೆ, ಅಂದರೆ ಇವರು ಹೃದಯಾಘಾತ ಅನುಭವಿಸಿದ ರೋಗಿಗಳು.

ಇದನ್ನೂ ಓದಿ: ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗೆ ಬೊಜ್ಜು

“ನಮ್ಮ ರೋಗಿಗಳಲ್ಲಿ ಪರಿಧಮನಿಯ ಕಾಯಿಲೆ (ಸಿಎಡಿ) ಬೆಳವಣಿಗೆಯನ್ನು ಇದು ತೋರಿಸುತ್ತದೆ” ಎನ್ನುತ್ತಾರೆ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪಿ.ಕಾಮತ್. “ಈ 60 ರೋಗಿಗಳಲ್ಲಿ, 40-45%ಕ್ಕಿಂತ ಹೆಚ್ಚು ಜನರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ಯುವಕರಲ್ಲಿನ ಸಮಸ್ಯೆಯ ಅಗಾಧತೆಯನ್ನು ಮತ್ತೊಮ್ಮೆ ಬಿಂಬಿಸಿದೆ.”

ಇದರಲ್ಲಿ, 55-60ಕ್ಕಿಂತ ಹೆಚ್ಚು ರೋಗಿಗಳು ಪ್ರಾಥಮಿಕ ಆಂಜಿಯೋಪ್ಲ್ಯಾಸ್ಟಿ ವರ್ಗಕ್ಕೆ ಬರುತ್ತಾರೆ, ಅಂದರೆ ಇವರು ಹೃದಯಾಘಾತದಿಂದ ಬಳಲುತ್ತಿರುವ ರೋಗಿಗಳು.

“ಇದು ಕೇವಲ ನಮ್ಮ ರೋಗಿಗಳಲ್ಲಿ ಪರಿಧಮನಿಯ ಕಾಯಿಲೆ (ಸಿಎಡಿ) ಸಂಭವಿಸುವಿಕೆಯ ಬೆಳವಣಿಗೆಯನ್ನು ತೋರಿಸುತ್ತದೆ” ಎಂದು ಕೆಎಂಸಿ ಆಸ್ಪತ್ರೆಯ ಮಧ್ಯಸ್ಥಿಕೆಯ ಹೃದ್ರೋಗ ತಜ್ಞ ಡಾ.ಪಿ.ಕಾಮತ್. “ಈ 60 ರೋಗಿಗಳಲ್ಲಿ, 40-45% ಕ್ಕಿಂತ ಹೆಚ್ಚು ಜನರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ, ಇದು ಯುವಕರಲ್ಲಿನ ಸಮಸ್ಯೆಯ ಅಗಾಧತೆಯನ್ನು ಮತ್ತೊಮ್ಮೆ ತೋರಿಸುತ್ತದೆ” ಎನ್ನುತ್ತಾರೆ.

ಬೆಂಗಳೂರಿನ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ದೀಪಕ್ ಕೃಷ್ಣಮೂರ್ತಿ ಅವರ ಪ್ರಕಾರ, ಅವರ ರೋಗಿಗಳಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇವರನ್ನು ʼಹೃದ್ರೋಗಗಳನ್ನು ಹೊಂದಿರುವ ಯುವ ರೋಗಿಗಳುʼ ಎಂದು ಕರೆಯಬಹುದು.

ʼʼನನ್ನ ಒಟ್ಟು ರೋಗಿಗಳಲ್ಲಿ, ಶೇ. 30-40ರಷ್ಟು ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರಲ್ಲಿ ಕನಿಷ್ಠ 25-30%ರಷ್ಟು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು” ಎನ್ನುತ್ತಾರೆ ಅವರು. ತಮ್ಮಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಪಡೆದ ಅತ್ಯಂತ ಕಿರಿಯ ಹೃದ್ರೋಗಿ ಎಂದರೆ, ಮಧುಮೇಹದ ಇತಿಹಾಸ ಹೊಂದಿರುವ 19 ವರ್ಷದ ಬೊಜ್ಜಿನ ಸಮಸ್ಯೆಯ ಹುಡುಗನಾಗಿದ್ದ ಎನ್ನುತ್ತಾರೆ.

ʼʼಇನ್ನೊಂದು ಕೇಸ್ ಎಂದರೆ- ಧೂಮಪಾನದ ಚಟವಿದ್ದ 23 ವರ್ಷದ ಹುಡುಗಿ. ಆಕೆ ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಟ್ರಿಪಲ್ ವೆಸೆಲ್ ಕಾಯಿಲೆಯಿಂದ ಬಳಲುತ್ತಿದ್ದಳು. ಅವಳಿಗೆ ಒಂದು ಪ್ರಮುಖ ಬೈ-ಪಾಸ್ ಸರ್ಜರಿ ಮಾಡಲಾಯಿತು.”

ಪಟ್ಟಿ ಹೀಗೆಯೇ ಬೆಳೆಯುತ್ತದೆ.

ಎಲ್ಲಿ ತಪ್ಪಾಗಿದೆ?

ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಪರಿಧಮನಿಯ ಹೃದಯ ಕಾಯಿಲೆಯ ಸಾವುಗಳು 1990ರಿಂದ ದ್ವಿಗುಣಗೊಂಡಿವೆ. 2030ರ ವೇಳೆಗೆ ಇನ್ನೂ 50%ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2017ರಲ್ಲಿ ಸುಮಾರು 26.3 ಲಕ್ಷ ಭಾರತೀಯರು ಹೃದಯ ರಕ್ತನಾಳದ ಕಾಯಿಲೆಯಿಂದ (ಸಿವಿಡಿ) ಸಾವನ್ನಪ್ಪಿದ್ದಾರೆ. ಇದು ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ ಏರಲು ಪ್ರಮುಖ ಕಾರಣ.

ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

heart attack

ಏನೇನು ಕಾರಣಗಳು?

ಹೃದ್ರೋಗಕ್ಕೆ ಕಾರಣವಾಗುವ ಹಲವಾರು ಅಂಶಗಳಿವೆ. ಟೈಪ್-2 ಮಧುಮೇಹ, ಇನ್ಸುಲಿನ್ ಪ್ರತಿರೋಧ ಮತ್ತು ಚಯಾಪಚಯ ಅಡಚಣೆಗಳು ಕಾರಣವಿರಬಹುದು. ಇದು ಯುರೋಪಿಯನ್ನರಿಗಿಂತಲೂ ಭಾರತೀಯ ಏಷ್ಯನ್ನರಲ್ಲಿ ಹೆಚ್ಚು ಪ್ರಚಲಿತವಾಗಿವೆ. ಭಾರತೀಯ ಏಷ್ಯನ್ನರಲ್ಲಿ ಹೆಚ್ಚಿನ ಸಿಎಚ್‌ಡಿ ಅಪಾಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ ಇವು.

ಅಮೆರಿಕದ ಮೆಸಾಚುಸೆಟ್ಸ್ ಜನರಲ್ ಆಸ್ಪತ್ರೆಯ ಸಂಶೋಧಕರು ನಡೆಸಿದ ಹೊಸ ಅಧ್ಯಯನದ ಪ್ರಕಾರ, ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರು ಸೇರಿ ದಕ್ಷಿಣ ಏಷ್ಯಾದವರಿಗೆ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ.

ದಕ್ಷಿಣ ಏಷ್ಯಾದವರಲ್ಲಿ ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹೃದಯ ರಕ್ತನಾಳದ ಕಾಯಿಲೆಯ ಬೆಳವಣಿಗೆಯ ದರಗಳನ್ನು ಸಂಶೋಧಕರು ಯುರೋಪಿಯನ್ನರಿಗೆ ಹೋಲಿಸಿ ಅಧ್ಯಯನ ಮಾಡಿದ್ದಾರೆ.

ಸಮೀಕ್ಷೆಯಲ್ಲಿ ಭಾಗಿಯಾದ ದಕ್ಷಿಣ ಏಷ್ಯಾದವರಲ್ಲಿ 6.8%ರಷ್ಟು ಮಂದಿ ಹೃದಯ ರಕ್ತನಾಳದ ಕಾಯಿಲೆ ಹೊಂದಿದ್ದಾರೆ. ಯುರೋಪಿಯನ್ನರಲ್ಲಿ ಈ ಪ್ರಮಾಣ 4.4%. ಇತರ ಅಂಕಿಅಂಶಗಳು ಕೂಡ ಯುವ ಭಾರತೀಯರು ಹೃದಯ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ ಎಂಬ ಚಿತ್ರವನ್ನು ಸ್ಪಷ್ಟವಾಗಿ ತೋರಿಸುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಪ್ರಕಾರ, ವಿಶ್ವಾದ್ಯಂತ ಸಾಂಕ್ರಾಮಿಕವಲ್ಲದ ರೋಗಗಳಿಗೆ (ಎನ್‌ಸಿಡಿ) ಸಂಬಂಧಿತ ಸಾವುಗಳಲ್ಲಿ ಭಾರತದ ಪಾಲು ಐದನೇ ಒಂದು ಭಾಗದಷ್ಟಿದೆ. ಈ ಸಾವುಗಳಲ್ಲಿ ಹೆಚ್ಚಿನವು ಯುವ ಜನರಲ್ಲೇ ಸಂಭವಿಸುತ್ತವೆ.

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದ ಪ್ರಕಾರ, ಭಾರತದಲ್ಲಿ ಹೃದಯ ರಕ್ತನಾಳದ ಕಾಯಿಲೆಯ ಸಾವಿನ ಪ್ರಮಾಣವು 1,00,000ಕ್ಕೆ 272 ಇದೆ. ಇದು ಜಾಗತಿಕ ಸರಾಸರಿ 235ಕ್ಕಿಂತ ಗಮನಾರ್ಹವಾಗಿ ಹೆಚ್ಚು.

ಹೃದಯಾಘಾತದ ರಾಜಧಾನಿಯಾಗಬಹುದು

ಅಧ್ಯಯನದ ಫಲಿತಾಂಶಗಳನ್ನು ವೈದ್ಯರು ಒಪ್ಪುತ್ತಾರೆ. “ಇತರ ದೇಶಗಳಿಗೆ ಹೋಲಿಸಿದರೆ ವಂಶೀಯವಾಗಿ ಭಾರತೀಯರಲ್ಲಿ ಕಿರಿಯ ವಯಸ್ಸಿನವರು ಹೆಚ್ಚು ಹೆಚ್ಚು ಹೃದ್ರೋಗಕ್ಕೆ ಒಳಗಾಗುತ್ತಾರೆ” ಎಂದು ಕೃಷ್ಣಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ಹೆಚ್ಚೆಚ್ಚು ಸ್ತ್ರೀಯರನ್ನು ಕೊಲ್ಲುತ್ತಿದೆ ಹಾರ್ಟ್‌ಫೇಲ್, ಈಗಲೇ ಎಚ್ಚೆತ್ತುಕೊಳ್ಳಿ

“ದಕ್ಷಿಣ ಏಷ್ಯಾದ ಜನರು ಇತರ ದೇಶಗಳ ಅದೇ ವಯಸ್ಸಿನವರಿಗೆ ಹೋಲಿಸಿದರೆ ಕನಿಷ್ಠ 10 ವರ್ಷಗಳ ಮೊದಲು ಹೃದಯ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಭಾರತವು ಈಗಾಗಲೇ ವಿಶ್ವದ ಮಧುಮೇಹ ರಾಜಧಾನಿಯಾಗಿದೆ. ಶೀಘ್ರದಲ್ಲೇ ಹೃದಯಾಘಾತದ ರಾಜಧಾನಿಯೂ ಆಗಬಹುದು” ಎಂದು ಅವರು ಭವಿಷ್ಯ ನುಡಿದಿದ್ದಾರೆ.

40 ವರ್ಷಕ್ಕಿಂತ ಮೊದಲೇ ಪುರುಷರಲ್ಲಿ ಹೃದ್ರೋಗ ಹೆಚ್ಚು ಸಾಮಾನ್ಯವಾಗುತ್ತಿದೆ ಎಂದು ಡಾ. ಕಾಮತ್ ತಿಳಿಸುತ್ತಾರೆ. ಇದಕ್ಕೆ ಧೂಮಪಾನ, ಒತ್ತಡ ಮತ್ತು ಜೀನ್‌ಗಳು ಸೇರಿದಂತೆ ಬಹು ಅಂಶಗಳು ಕಾರಣಗಳಾಗಿರಬಹುದು. “40ರ ನಂತರ, ಮಹಿಳೆ- ಪುರುಷರ ಈ ಅಂತರ ಕಡಿಮೆಯಾಗುತ್ತದೆ. 50 ವರ್ಷಗಳ ನಂತರ ಋತುಬಂಧಕ್ಕೊಳಗಾದ ಮಹಿಳೆಯರು ಮತ್ತು ಪುರುಷರಲ್ಲಿ ಈ ಸಂಭವನೀಯತೆ ಸಮಾನವಾಗಿರುತ್ತದೆ.”

ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಸುನಿಲ್ ದ್ವಿವೇದಿ ಅವರ ಪ್ರಕಾರ, ನಿಯಮಿತ ಆರೋಗ್ಯ ತಪಾಸಣೆ ಮತ್ತು ದೈಹಿಕ ಚಟುವಟಿಕೆಯ ಬಗ್ಗೆ ಅರಿವಿನ ಕೊರತೆಯಿಂದಾಗಿ, ಜನರು ಮಧ್ಯವಯಸ್ಸಿನಲ್ಲಿ ಅರಿವಿಗೇ ಬರದ ಹೃದಯದ ತೊಂದರೆಗೆ ಒಳಗಾಗುತ್ತಾರೆ. “ನಂತರ ಇದ್ದಕ್ಕಿದ್ದಂತೆ ತೂಕ ಕಡಿಮೆ ಮಾಡಲು, ಫಿಟ್ನೆಸ್ ಪಡೆಯಲು ಭಾರಿ ದೈಹಿಕ ಚಟುವಟಿಕೆ ಮಾಡಲು ಪ್ರಾರಂಭಿಸುತ್ತಾರೆ. ಅಂಥವರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಿರುತ್ತದೆ.ʼʼ

ಅಂತಹ ಅವಧಿಗಳಲ್ಲಿ, ಒತ್ತಡದ ಹಾರ್ಮೋನುಗಳು ಹೃದಯ ರಕ್ತ ಪೂರೈಕೆಯಲ್ಲಿ ಕೊಲೆಸ್ಟ್ರಾಲ್ ಕಣಗಳ ಹಠಾತ್ ಸ್ಫೋಟವನ್ನು ಉಂಟುಮಾಡಬಹುದು. ರಕ್ತ ಪೂರೈಕೆಯಲ್ಲಿ ಹಠಾತ್ ಹೆಪ್ಪುಗಟ್ಟುವಿಕೆ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಆರಂಭಿಕ ಡಯಾಗ್ನೋಸಿಸ್‌ ಬಗ್ಗೆ ಜಾಗೃತಿ

ಆರಂಭಿಕ ಡಯಾಗ್ನೋಸಿಸ್‌ ಮತ್ತು ಸಮಯೋಚಿತ ವೈದ್ಯಕೀಯ ನೆರವು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. 2018ರಲ್ಲಿ ಪ್ರಕಟವಾದ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, 2001 ಮತ್ತು 2013ರ ನಡುವೆ ಮೊದಲೇ ಇದ್ದಂತಹ ಹೃದಯ ಕಾಯಿಲೆಯ ಪತ್ತೆಯೊಂದಿಗೆ ಪರಿಧಮನಿಯ ಹೃದಯ ಕಾಯಿಲೆಯಿಂದ ಸಾಯುತ್ತಿರುವವರ ಪ್ರಮಾಣವೂ ಏರಿದೆ ಎಂಬುದನ್ನು ತೋರಿಸಿದೆ. ಆದರೂ ಈ ವ್ಯಕ್ತಿಗಳಲ್ಲಿ ಅರ್ಧದಷ್ಟು ಜನ ಯಾವುದೇ ನಿಯಮಿತ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ.

ಇದು ಬಡತನ, ಅಜ್ಞಾನ ಮತ್ತು ಉತ್ತಮ ವೈದ್ಯಕೀಯ ಸಲಹೆಯ ಕೊರತೆಯ ಕಾರಣದಿಂದ ಆಗಿರಬಹುದು ಎಂದು ಲ್ಯಾನ್ಸೆಟ್ ಅಧ್ಯಯನ ಹೇಳಿದೆ.

“ನಾವು ಹೃದ್ರೋಗದ ಆರಂಭಿಕ ಚಿಹ್ನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಮತ್ತು ತಡೆಗಟ್ಟಲು ಒತ್ತು ನೀಡಬೇಕು” ಎಂದು ಕಾಮತ್ ಹೇಳುತ್ತಾರೆ. ಕಳೆದ ಐದು ವರ್ಷಗಳಿಂದ ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ಸ್ (ಸಿಎಡಿ) ಎಂಬ ಎನ್‌ಜಿಒ ನಡೆಸುತ್ತಿರುವ ಅವರು, ಕರ್ನಾಟಕದಾದ್ಯಂತ 700 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ್ದಾರೆ.

ನವ ದೆಹಲಿ ಮೂಲದ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ನಿರ್ದೇಶಕ ಡಾ ಆನಂದ್ ಕುಮಾರ್ ಪಾಂಡೆ ಇದೇ ಅಂಶಗಳನ್ನು ಪ್ರತಿಧ್ವನಿಸುತ್ತಾರೆ. ಹೃದಯಾಘಾತ ಅಥವಾ ಹೃದಯ ಸ್ತಂಭನದ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಇದರಿಂದ ಸಮಯಕ್ಕೆ ಸರಿಯಾಗಿ ಜೀವಹಾನಿ ತಡೆಗಟ್ಟಬಹುದು ಎನ್ನುತ್ತಾರೆ.

ಉದಾಹರಣೆಗೆ: ಅತಿಯಾಗಿ ಬೆವರುವುದು ಹೃದಯಾಘಾತದ ಸಂಕೇತವಾಗಿರಬಹುದು. “ಹೃದಯಾಘಾತದ ಸಮಯದಲ್ಲಿ, ನಿಮ್ಮ ಹೃದಯವು ನಿಧಾನಗೊಳ್ಳುತ್ತದೆ ಮತ್ತು ದೇಹಕ್ಕೆ ರಕ್ತವನ್ನು ಪರಿಚಲನೆ ಮಾಡುವುದು ಅದಕ್ಕೆ ಕಷ್ಟವಾಗುತ್ತದೆ. ಅಪಧಮನಿಯಲ್ಲಿ ತಡೆ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಇದು ನಿಮ್ಮ ಹೃದಯ ಸ್ನಾಯುಗಳಿಗೆ ಆಮ್ಲಜನಕ-ಸಮೃದ್ಧ ರಕ್ತದ ಪೂರೈಕೆಯನ್ನು ತಡೆಯುತ್ತದೆ. ಆದ್ದರಿಂದ, ದೇಹವು ರಕ್ತವನ್ನು ಪಂಪ್ ಮಾಡಲು ಮತ್ತು ಸ್ವತಃ ತಂಪಾಗಿಸಲು ಹೆಚ್ಚುವರಿ ಶಕ್ತಿಯನ್ನು ಬಳಸುತ್ತದೆ, ಅದು ನಿಮ್ಮನ್ನು ಹೆಚ್ಚು ಬೆವರುವಂತೆ ಮಾಡುತ್ತದೆ. ವಿಶೇಷವಾಗಿ ವ್ಯಾಯಾಮ ಮಾಡದಿರುವಾಗ ಅಥವಾ ನಿಷ್ಕ್ರಿಯವಾಗಿರುವಾಗಲೂ ಸಾಮಾನ್ಯ ದಿನಗಳಿಗಿಂತ ಹೆಚ್ಚು ಬೆವರುವುದು, ಹೃದಯ ಕಾಯಿಲೆಗಳ ಎಚ್ಚರಿಕೆಯ ಸಂಕೇತವಾಗಿದೆ.

ಭಾರತದಲ್ಲಿ ತಿಳಿವಳಿಕೆ ಕೊರತೆ

ಭಾರತದಲ್ಲಿ, ಆರೋಗ್ಯಕರ ಹೃದಯದ ಪರಿಕಲ್ಪನೆಯು ಕಾಣೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಹೃದ್ರೋಗಕ್ಕೆ ತುತ್ತಾಗುವ ಆನುವಂಶಿಕ ರಚನೆಯ ಹೊರತಾಗಿಯೂ ಯೌವನ ಅಥವಾ ಮಧ್ಯವಯಸ್ಸಿನಲ್ಲಿ ಕೆಲವೇ ಜನರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುತ್ತಾರೆ.

ಭಾರತೀಯ ಆಹಾರವು ವಿಟಮಿನ್ ಡಿ, ಒಮೆಗಾ 3, ಒಮೆಗಾ 6 ಸೇರಿದಂತೆ ಅಗತ್ಯವಾದ ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಹೊಂದಿಲ್ಲ. ಇದು ಆರೋಗ್ಯಕರ ಹೃದಯ ಕಾಪಾಡಿಕೊಳ್ಳಲು, ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಅವಶ್ಯಕ. ಇದಕ್ಕೆ ತದ್ವಿರುದ್ಧವಾಗಿ, ಸಕ್ಕರೆ ಮತ್ತು ಉಪ್ಪಿನ ಸೇವನೆ ಅಧಿಕವಾಗಿದೆ. ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ಇವುಗಳ ಸೇವನೆ ಒಳ್ಳೆಯದಲ್ಲ.

ಆರೋಗ್ಯಕರ ಹೃದಯವನ್ನು ಹೊಂದಲು ಕೇವಲ ವ್ಯಾಯಾಮ ಮತ್ತು ದೇಹರಚನೆ ಮಾತ್ರ ಸಾಕಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ವೃತ್ತಿ, ವೃತ್ತಿಜೀವನ ಮತ್ತು ಜೀವನಶೈಲಿಯಿಂದಾಗಿ ಹೆಚ್ಚುತ್ತಿರುವ ಒತ್ತಡವು ಪ್ರಮುಖ ಪಾತ್ರ ವಹಿಸುತ್ತದೆ.

“ಈ ಯುವ ರೋಗಿಗಳಲ್ಲಿ ಪ್ರಮುಖ ಅಪಾಯಕಾರಿ ಅಂಶವೆಂದರೆ ಒತ್ತಡ” ಎಂದು ಲಕ್ನೋದ ಮೆಡಾಂತದ ಹೃದ್ರೋಗ ತಜ್ಞ ಡಾ. ಅವಿನಾಶ್ ಸಿಂಗ್ ಹೇಳಿದ್ದಾರೆ. “ನಮ್ಮ ಮೆದುಳು ಮತ್ತು ದೇಹದ ಮೇಲೆ ಉಂಟಾಗುವ ಒತ್ತಡಗಳನ್ನು ತಗ್ಗಿಸುವುದು ಇಂತಹ ಮಾರಣಾಂತಿಕ ಘಟನೆಗಳನ್ನು ತಡೆಗಟ್ಟುವ ಪ್ರಮುಖ ವಿಧಾನಗಳಲ್ಲಿ ಒಂದು. ನಮ್ಮ ದೇಹವನ್ನು ಒತ್ತಡದಿಂದ ಹೊರಗಿಡಲು ನಾವು ಕಲಿಯಬೇಕು. ಜತೆಗೆ ಜೀವನಶೈಲಿಯ ಬದಲಾವಣೆಯೂ ಅಗತ್ಯ.ʼʼ

ʼʼದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅತಿಮುಖ್ಯ. ಸೆಲೆಬ್ರಿಟಿಗಳು ಸಾಕಷ್ಟು ಮಾನಸಿಕ ಏರಿಳಿತಗಳಿಗೆ ಒಳಗಾಗುತ್ತಾರೆ. ಅದು ಅವರ ಹೃದಯದ ಆರೋಗ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ” ಎಂದು ಕೆಎಂಸಿಯ ಕಾಮತ್ ತಿಳಿಸುತ್ತಾರೆ. ಡಾ. ದ್ವಿವೇದಿ ಅವರ ಪ್ರಕಾರ, “30ರ ದಶಕದ ಆರಂಭದಿಂದ ನಿಯಮಿತ ವೈದ್ಯರ ಮಾರ್ಗದರ್ಶನ, ಆರೋಗ್ಯ ತಪಾಸಣೆ, ಆರೋಗ್ಯಕರ ಜೀವನಶೈಲಿ ಮತ್ತು ಔಷಧಿಗಳನ್ನು ಅನುಸರಿಸಬೇಕು.”

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Period Pain Relief Food: ಪೀರಿಯಡ್‌ನ ನೋವು ನಿವಾರಣೆಗೆ ಈ ಆಹಾರಗಳು ಸೂಕ್ತ

ಋತುಚಕ್ರದ ಸಂದರ್ಭದಲ್ಲಿ ಕೈಕಾಲುಗಳಲ್ಲಿ ಸೆಳೆತ, ನೋವು, ಮೈಗ್ರೇನ್‌, ತಲೆಸುತ್ತು, ವಾಂತಿ, ಹೊಟ್ಟೆನೋವು ಇತ್ಯಾದಿಗಳು ಸಾಮಾನ್ಯ. ಕೆಲವು ನಿತ್ಯಜೀವನದ ಹಾಗೂ ಆಹಾರದ ಬದಲಾವಣೆಗಳು ಇಂಥ ಸಮಸ್ಯೆಯನ್ನು ಹತೋಟಿಗೆ ತರುತ್ತವೆ. ನೀವು ಕೆಲಸ ಮಾಡುವ ಮಹಿಳೆಯರಾದರೆ, ಈ ಸಂದರ್ಭ ನಿಮ್ಮಲ್ಲಿ ಹಲವರು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಒದ್ದಾಡುತ್ತಾರೆ. ಈ ಸಂದರ್ಭ ನಮ್ಮ ಅರೋಗ್ಯವನ್ನು ಕಾಪಾಡುವ ಇಂತಹ ನೋವಿನಿಂದ ಆರಾಮ ನೀಡುವ ಕೆಲವು ಆಹಾರಗಳನ್ನು (Period Pain Relief Food) ಸೇವಿಸುವ ಮೂಲಕ ಸಮಸ್ಯೆಯನ್ನು ಕೊಂಚ ಹತೋಟಿಯಲ್ಲಿಡಬಹುದು.

VISTARANEWS.COM


on

Period Pain Relief Food
Koo

ಹಲವು ಮಂದಿಗೆ ಪೀರಿಯಡ್‌ ಅಥವಾ ಋತುಚಕ್ರದ ಸಂದರ್ಭ ಕೈಕಾಲುಗಳಲ್ಲಿ ಸೆಳೆತ, ನೋವು, ಮೈಗ್ರೇನ್‌, ತಲೆಸುತ್ತು, ವಾಂತಿ, ಹೊಟ್ಟೆನೋವು ಇತ್ಯಾದಿಗಳು ಸಾಮಾನ್ಯ. ಕೆಲವು ನಿತ್ಯಜೀವನದ ಹಾಗೂ ಆಹಾರದ ಬದಲಾವಣೆಗಳು ಇಂಥ ಸಮಸ್ಯೆಯನ್ನು ಹತೋಟಿಗೆ ತರುತ್ತವೆ. ನೀವು ಕೆಲಸ ಮಾಡುವ ಮಹಿಳೆಯರಾದರೆ, ಈ ಸಂದರ್ಭ ನಿಮ್ಮಲ್ಲಿ ಹಲವರು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಒದ್ದಾಡುತ್ತಾರೆ. ಈ ಸಂದರ್ಭ ನಮ್ಮ ಅರೋಗ್ಯವನ್ನು ಕಾಪಾಡುವ ಇಂತಹ ನೋವಿನಿಂದ ಆರಾಮ ನೀಡುವ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಸಮಸ್ಯೆಯನ್ನು ಕೊಂಚ ಹತೋಟಿಯಲ್ಲಿಡಬಹುದು ಎಂಬುದನ್ನು ನೆನಪಿಡಿ. ನೈಸರ್ಗಿಕವಾದ ಉಪಾಯಗಳು ಎಂದಿಗೂ ವ್ಯತಿರಿಕ್ತ ಸಮಸ್ಯೆಗಳನ್ನು ಆಹ್ವಾನಿಸದು. ಬನ್ನಿ, ಯಾವೆಲ್ಲ ಆಹಾರಗಳು (Period Pain Relief Food) ಪೀರಿಯಡ್‌ ನೋವಿನಿಂದ, ಕೆಟ್ಟ ಮೂಡ್‌ನಿಂದ ನಿಮ್ಮನ್ನು ಬಚಾವು ಮಾಡುತ್ತವೆ ಎಂಬುದನ್ನು ನೋಡೋಣ.

raisins

ಒಣದ್ರಾಕ್ಷಿ ಸೇವಿಸಿ

ನಿಮ್ಮ ಋತುಚಕ್ರಕ್ಕೆ ಇನ್ನೊಂದು ವಾರವಿದೆ ಎನ್ನುವಾಗಲೇ, ಪ್ರತಿದಿನ ಬೆಳಗ್ಗೆ ನೆನೆಸಿದ ಒಣದ್ರಾಕ್ಷಿಯೊಂದಿಗೆ ಕೇಸರಿಯನ್ನು ಸೇವಿಸಲು ಆರಂಭಿಸಿ. ನಿಮ್ಮ ಪೀರಿಯಡ್‌ ಮುಗಿಯುವವರೆಗೂ ಇದನ್ನು ತಿನ್ನಿ.

fresh Sprouted matki in bowl , Sprouted moth

ಮೊಳಕೆ ಕಾಳು ಸೇವಿಸಿ

ನಿತ್ಯವೂ ಮೊಳಕೆ ಕಾಳುಗಳನ್ನು ಒಂದು ಹೊತ್ತು ತಿನ್ನಲು ಅಭ್ಯಾಸ ಮಾಡಿ. ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿದ್ದರೆ ಹಸಿಯಾಗಿ ತಿನ್ನಬಹುದು. ಇಲ್ಲವಾದರೆ, ಕೊಂಚ ಬೇಯಿಸಿ ಮೊಳಕೆ ಕಾಳುಗಳನ್ನು ತಿನ್ನಿ. ಊಟದ ಜೊತೆಗೆ ಒಂದು ಭಾಗ ಮೊಳಕೆ ಕಾಳು ಇರಲಿ.

Tuber yam

ಗಡ್ಡೆಗೆಣಸುಗಳು ಸೂಕ್ತ

ಗಡ್ಡೆಗೆಣಸುಗಳನ್ನು ನಿತ್ಯಾಹಾರದಲ್ಲಿ ಸೇರಿಸಿ. ಒಂದೇ ಬಗೆಯ ತರಕಾರಿಗಳನ್ನು ತಿನ್ನುವುದರ ಬದಲಾಗಿ ಬಗೆಬಗೆಯ ತರಕಾರಿಗಳನ್ನು ನಿತ್ಯವೂ ತಿನ್ನಿ. ಸಿಹಿಗೆಣಸು, ಸುವರ್ಣಗೆಡ್ಡೆ, ಕೆಸುವಿನ ಗೆಡ್ಡೆ ಇತ್ಯಾದಿಗಳು ಅತ್ಯಂತ ಒಳ್ಳೆಯದು. ಆಗಾಗ ಇವು ನಿಮ್ಮ ಹೊಟ್ಟೆಗೆ ಸೇರುವಂತೆ ನೋಡಿಕೊಳ್ಳಿ.

ಕ್ಯಾಲ್ಶಿಯಂ ಮಾತ್ರೆ

ರಾತ್ರಿ ಮಲಗುವ ಮುನ್ನ ಕ್ಯಾಲ್ಶಿಯಂ ಮಾತ್ರೆಯನ್ನು ಸೇವಿಸಿ. ಪೀರಿಯಡ್‌ ಸಮಸ್ಯೆಯಿರುವ ಮಂದಿಗೆ ಕ್ಯಾಲ್ಶಿಯಂ ಬೇಕು. ಇದರ ಸಂಬಂಧವಾಘಿ ನಿಮ್ಮ ವೈದ್ಯರಲ್ಲೊಮ್ಮೆ ಸಲಹೆ ಪಡೆದುಕೊಂಡು ಮುಂದುವರಿಯಿರಿ. ಕ್ಯಾಲ್ಶಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

It is rich in good fats Ghee Benefits

ತುಪ್ಪ ಸೇವಿಸಿ

ಪ್ರತಿ ದಿನ ಮಧ್ಯಾಹ್ನದೂಟದ ಸಂದರ್ಭ ಒಂದು ಚಮಚ ತುಪ್ಪವನ್ನು ಹಾಕಿ ಕಲಸಿಕೊಂಡು ಉಣ್ಣುವ ಅಭ್ಯಾಸ ಮಾಡಿಕೊಳ್ಳಿ. ಮಧ್ಯಾಹ್ನದೂಟ ಸಾಧ್ಯವಾಗದಿದ್ದರೆ, ಯಾವುದಾದರೊಂದು ಹೊತ್ತಿನಲ್ಲಿ ನಿತ್ಯವೂ ಒಂದು ಚಮಚ ತುಪ್ಪ ತಿನ್ನಿ. ತೂಕ ಹೆಚ್ಚಾಗುವ ಭಯ ಬೇಡ. ಒಂದು ಚಮಚ ತುಪ್ಪದಿಂದ ನಿಮ್ಮ ತೂಕ ಹೆಚ್ಚಾಗದು. ಬದಲಾಗಿ ಆರೋಗ್ಯ ವೃದ್ಧಿಸುತ್ತದೆ. ಪೀರಿಯಡ್‌ನ ಸಂದರ್ಭ ಆಗುವ ನೋವಿನಿಂದ ಆರಾಮವೂ ಸಿಗುತ್ತದೆ. ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳೂ, ಒಳ್ಳೆಯ ಕೊಬ್ಬೂ ಇದರಲ್ಲಿರುವುದರಿಂದ ತುಪ್ಪವನ್ನು ನಿಮ್ಮ ನಿತ್ಯಾಹಾರದಿಂದ ಯಾವತ್ತೂ ದೂರವಿರಿಸಬೇಡಿ. ಆದರೆ, ಅತಿಯಾಗದಿರಲಿ.

Spicy foods Foods To Avoid Eating With Tea

ಮಸಾಲೆಯುಕ್ತ ಆಹಾರ ಬೇಡ

ಪೀರಿಯಡ್‌ ಸಂದರ್ಭ ಹೆಚ್ಚು ಮಸಾಲೆಯುಕ್ತ ಆಹಾರಗಳ ಮೊರೆ ಹೋಗಬೇಡಿ. ದೇಹಕ್ಕೆ ಆದಷ್ಟೂ ಸರಳವಾದ ಪೋಷಕಾಂಶಯುಕ್ತ ಆಹಾರ ದೊರಕಲಿ. ಮೊಸರನ್ನದಂತಹ ಆಹಾರವಾದರೆ ಉತ್ತಮ. ಮೊಸರನ್ನು ಮಾಡುವಾಗ ಒಂದಿಷ್ಟು ಮೊಳಕೆ ಕಾಳುಗಳು, ಸೌತೆಕಾಯಿ, ಈರುಳ್ಳಿ, ಶುಂಠಿ, ದಾಳಿಂಬೆ ಇತ್ಯಾದಿಗಳನ್ನು ಸೇರಿಸಿ. ಒಗ್ಗರಣೆ ಹಾಕಿ. ರುಚಿಯಷ್ಟೇ ಅಲ್ಲ, ದೇಹ ತಂಪಾಗಿಯೂ ಇರುತ್ತದೆ. ಪೀರಿಯಡ್‌ ನೋವು ಹೆಚ್ಚಾಗಿ ಬಾಧಿಸುವುದಿಲ್ಲ. ಜೊತೆಗೆ ಯಾವ ಬಗೆಯ ಕೆಟ್ಟ ಪರಿಣಾಮವನ್ನೂ ಇದು ಉಂಟುಮಾಡದು.

ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಬೀಜಗಳು ಸೂಕ್ತ

ಪೀರಿಯಡ್‌ ಸಮಯದಲ್ಲಿ ನೋವು ಆರಂಭವಾದರೆ, ನೀವು ಒಂದಿಷ್ಟು ಬೀಜಗಳನ್ನು ಟ್ರೈ ಮಾಡಬಹುದು. ಆಫೀಸಿಗೆ ಹಗುವಾಗ ಅಥವಾ ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಜೊತೆ ಒಂದು ಡಬ್ಬದಲ್ಲಿ ಒಂದಿಷ್ಟು ನೆಲಗಡಲೆ ಅಥವಾ ಗೋಡಂಬಿ ಇಟ್ಟುಕೊಳ್ಳಿ, ಸ್ನ್ಯಾಕ್‌ ಟೈಮ್‌ ಅಥವಾ ಊಟದ ಮಧ್ಯದ ಬ್ರೇಕ್‌ನಲ್ಲಿ, ಹಸಿವಾದಾಗ ಇವನ್ನು ತಿನ್ನಿ. ಇದರ ಜೊತೆಗೆ ಒಂದು ತುಂಡು ಬೆಲ್ಲವನ್ನೂ ತಿನ್ನಿ. ಇದು ನಿಮ್ಮ ಕೆಟ್ಟ ಮೂಡನ್ನೂ ಸರಿ ಮಾಡುತ್ತವೆ. ಸಿಹಿ ತಿನ್ನಬೇಕೆಂಬ ಆಸೆಯನ್ನೂ ಹತ್ತಿಕ್ಕುತ್ತದೆ.

ಖಿಚಡಿ ಅಥವಾ ರಾಗಿ

ಮೊಸರನ್ನ ಬಿಟ್ಟರೆ ಖಿಚಡಿ ಅಥವಾ ರಾಗಿಯೂ ಒಳ್ಳೆಯೂ ಒಳ್ಳೆಯದು. ರಾಗಿ ದೋಸೆ, ರಾಗಿ ರೊಟ್ಟಿ, ಹೆಸರು ಬೇಳೆ ದೋಸೆ ಇತ್ಯಾದಿಗಳನ್ನು ಮಾಡಬಹುದು. ಖಿಚಡಿಯನ್ನೂ ಮಾಡಿಕೊಂಡು ತಿನ್ನಬಹುದು.

Continue Reading

ಆರೋಗ್ಯ

Betel Leaves Health Benefits: ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮ

ನಮ್ಮ ಹಿರಿಯರು ಊಟದ ಬಳಿಕ ವೀಳ್ಯದೆಲೆ, ಅಡಿಕೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ಆದರೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎನ್ನುವುದನ್ನು ಆಯುರ್ವೇದ ಹೇಳುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಬಹುಮಾನ್ಯತೆ ಪಡೆದಿರುವ ವೀಳ್ಯದೆಯನ್ನು (Betel Leaves Health Benefits) ರಾತ್ರಿ ಊಟದ ಬಳಿಕ ಸೇವಿಸುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

VISTARANEWS.COM


on

By

Betel leaves health benefits
Koo

ಭಾರತೀಯ ಸಂಸ್ಕೃತಿಯಲ್ಲಿ (Indian culture) ವೀಳ್ಯದೆಲೆಗೆ (betel leaves) ಬಹುಮಾನ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಶಾಸ್ತ್ರ, ಸಂಪ್ರದಾಯಗಳಲ್ಲಿ ವೀಳ್ಯದೆಲೆ ಅಡಿಕೆಯನ್ನು ನೀಡಿ ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಆಯುರ್ವೇದದಲ್ಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರಾತ್ರಿ ಭೋಜನದ (dinner) ಬಳಿಕ ವೀಳ್ಯದೆಲೆ (Betel Leaves Health Benefits) ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಊಟದ ಬಳಿಕ ವೀಳ್ಯದೆಲೆ, ಅಡಿಕೆ ಜಗಿಯುವ ನಮ್ಮ ಹಿರಿಯರ ಅಭ್ಯಾಸವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಾಗಿ ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಈಗ ಇದು ಕಡಿಮೆಯಾಗಿ ವಿವಿಧ ಮಸಾಲೆಗಳನ್ನು ಸೇರಿಸಿ ತಯಾರಿಸುವ ಪಾನ್ ಹೆಚ್ಚು ಜನಪ್ರಿಯತೆ ಪಡೆದಿದೆ.

ವೀಳ್ಯದೆಲೆಗಳು ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತೇಜಿಸುವುದು, ಬಾಯಿಯ ನೈರ್ಮಲ್ಯ, ಕರುಳಿನ ಆರೋಗ್ಯವನ್ನೂ ಕಾಪಾಡುತ್ತದೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕಾರಿ ಸಮಸ್ಯೆಗಳಿಂದ ಬಳಲುವವರು ಉತ್ತಮ ಜೀರ್ಣಕ್ರಿಯೆಗಾಗಿ ರಾತ್ರಿಯ ಆಹಾರದ ಬಳಿಕ ಒಂದು ವೀಳ್ಯದೆಲೆಯನ್ನು ಜಗಿಯುವ ಅಭ್ಯಾಸ ಒಳ್ಳೆಯದು. ಇದರಲ್ಲಿರುವ ರಸ ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಉತ್ತೇಜನ ಸಿಗುತ್ತದೆ. ಹೊಟ್ಟೆ ಉಬ್ಬರ, ಅಸಿಡಿಟಿ ತೊಂದರೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬಾಯಿಯ ಅರೋಗ್ಯ ಕಾಪಾಡುತ್ತದೆ

ವೀಳ್ಯದೆಲೆಗಳು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣವನ್ನು ಹೊಂದಿದೆ. ಇದು ಬಾಯಿಯ ಸೋಂಕುಗಳನ್ನು ಎದುರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ಬಾಯಿ ಸ್ವಚ್ಛತೆ

ಆಯುರ್ವೇದದ ಪ್ರಕಾರ ಭೋಜನದ ಬಳಿಕ ವೀಳ್ಯದೆಲೆ ಜಗಿಯುವುದು ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಲ್ಲಿನಲ್ಲಿ ಕುಳಿಗಳಾಗುವುದು, ಒಸಡು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಒತ್ತಡ, ಆತಂಕ ನಿವಾರಣೆ

ಒತ್ತಡ, ಆತಂಕದ ಸಮಸ್ಯೆ ಇದ್ದಾರೆ ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಒಳ್ಳೆಯದು. ಆಯುರ್ವೇದದ ಪ್ರಕಾರ ವೀಳ್ಯದೆಲೆಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಪರಿಣಾಮಗಳನ್ನು ಬೀರುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಇದು ನರಮಂಡಲಕ್ಕೆ ವಿಶ್ರಾಂತಿಯನ್ನು ನೀಡಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


ದೇಹದಿಂದ ವಿಷವನ್ನು ಹೊರಹಾಕುತ್ತದೆ

ಆಯುರ್ವೇದದಲ್ಲಿ ವೀಳ್ಯದೆಲೆಗಳು ವಿಷ ಹೊರತೆಗೆಯುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವನೆ ನೈಸರ್ಗಿಕವಾಗಿ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಉಸಿರಾಟ ಸಮಸ್ಯೆ ನಿವಾರಿಸುತ್ತದೆ

ವೀಳ್ಯದೆಲೆಗಳು ಉಸಿರಾಟ ತೊಂದರೆಯನ್ನು ನಿವಾರಿಸುತ್ತದೆ. ಉಸಿರಾಟದ ತೊಂದರೆ ಉಂಟು ಮಾಡುವ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತದೆ.

ಕೆಮ್ಮು ನಿವಾರಣೆ

ಕೆಮ್ಮಿಗೆ ವೀಳ್ಯದೆಲೆ ಅತ್ಯತ್ತಮ ಔಷಧ. ವೀಳ್ಯದೆಲೆಗಳು ಗಂಟಲು ಮತ್ತು ಉಸಿರಾಟದ ಹಾದಿಯಲ್ಲಿರುವ ತೊಂದರೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಆರೋಗ್ಯಕರ ಚಯಾಪಚಯಕ್ಕೆ ಉತ್ತೇಜನ

ದೇಹದ ತೂಕ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಚಯಾಪಚಯವು ನಿರ್ಣಾಯಕವಾಗಿದೆ. ವೀಳ್ಯದೆಲೆಯೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾತ್ರಿ ಊಟದ ಬಳಿಕ ವೀಳ್ಯದೆಲೆಗಳನ್ನು ಸೇವಿಸುವುದು ಚಯಾಪಚಯವನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ ಉತ್ತಮ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಶಕ್ತಿಯ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ.

ಮೂರು ದೋಷ ನಿವಾರಣೆ

ಆಯುರ್ವೇದದ ಪ್ರಕಾರ ಮೂರು ದೋಷಗಳಾದ ವಾತಾ, ಪಿತ್ತ ಮತ್ತು ಕಫದಲ್ಲಿನ ಅಸಮತೋಲನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿರುತ್ತದೆ. ರಾತ್ರಿಯಲ್ಲಿ ವೀಳ್ಯದೆಲೆ ಸೇವಿಸುವುದು ಈ ಮೂರು ಪ್ರಮುಖ ದೋಷಗಳನ್ನು ಸಮತೋಲನಗೊಳಿಸಲು ಮತ್ತು ದೇಹದೊಳಗೆ ಸಾಮರಸ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Continue Reading

ಆರೋಗ್ಯ

International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ 2024 ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವೆಂದರೆ ಧ್ಯಾನ. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು. ಧ್ಯಾನವೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಈ ಕುರಿತ (International Yoga Day) ವಿವರ ಇಲ್ಲಿದೆ.

VISTARANEWS.COM


on

International Yoga Day 2024
Koo

ಧ್ಯಾನ ಎನ್ನುತ್ತಿದ್ದಂತೆ ನಾನಾ (International Yoga Day) ಬಗೆಯ ಚಿತ್ರಗಳು ಮನಸ್ಸಿಗೆ ಬರುತ್ತವೆ. ಯಾರೋ ತಪಸ್ಸು ಮಾಡುವುದು, ಗಡ್ಡ ಬಿಟ್ಟುಕೊಂಡು ವೃಕ್ಷಾಸನದಲ್ಲಿ ನಿಂತಿರುವುದು, ಚಿನ್ಮುದ್ರೆ ಹಿಡಿದು ಕಣ್ಣು ಮುಚ್ಚಿ ಕೂತವರು… ಅವರವರ ಭಾವಕ್ಕೆ ತಕ್ಕಂತೆ ಭಿತ್ತಿಗಳು ಮೂಡುತ್ತವೆ. ಧ್ಯಾನ ಅಥವಾ ಮೆಡಿಟೇಶನ್‌ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ವ್ಯವಹಾರವನ್ನೆಲ್ಲ ಚಿಂತಿಸುವುದು ಹೆಚ್ಚಿನವರ ಕ್ರಮ! ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.

Why Yoga Day is celebrated internationally,
International Yoga Day

ಧ್ಯಾನವೆಂದರೆ ಏನು?

ಹಾಗೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಇದು ಋಷಿ-ಮುನಿಗಳಿಗೆ ಮಾತ್ರವೇ ಹೊಂದುವಂಥದ್ದು ಎಂಬ ತೀರ್ಮಾನಕ್ಕೆ ಈಗಲೇ ಬರಬೇಡಿ. ಸರಳವಾಗಿ ಹೇಳುವುದಾದರೆ, ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚರಿಸುವ ಕ್ರಿಯೆಯಿದು. ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ದೇಹಕ್ಕೆ ಆಹಾರ ನೀಡಿದಂತೆ ಮನಸ್ಸಿಗೂ ಗ್ರಾಸ ಬೇಡವೇ?

ಏಕೆ ಮಾಡಬೇಕು?

ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ? ಯಶಸ್ಸಿನ ಹಿಂದೆ ಓಡುವಾಗ ನಮ್ಮ ಕೈಗೆ ದೊರೆಯುತ್ತಿರುವುದೇನು ಎಂಬ ಗಮನವಾದರೂ ಇದೆಯೇ ನಮಗೆ? ಹಾಳಾಗುತ್ತಿರುವ ಆರೋಗ್ಯವನ್ನು ಮಾತ್ರೆಗಳು ಮಾತ್ರವೇ ಸರಿ ಮಾಡಿಯಾವೇ? ಇವಕ್ಕೆಲ್ಲ ಉತ್ತರ ಹುಡುಕಬೇಕೆಂದರೆ ಮೊದಲು ಮನಸ್ಸು ಶಾಂತವಾಗಬೇಕು. ಉದ್ರಿಕ್ತ ಮನದಿಂದ ಉತ್ತರ ಹುಡುಕಲು ಸಾಧ್ಯವಿಲ್ಲ. ಮೊದಲು ಮನಸ್ಸಿಗೆ ಸಮಾಧಾನ ದೊರೆತ ಮೇಲಷ್ಟೇ ಪ್ರಶ್ನೆಗಳಿಗೆ ಸಮಾಧಾನ ದೊರೆಯುವುದಕ್ಕೆ ಸಾಧ್ಯ. ಈಗ ನೀವೆ ಹೇಳಿ, ಧ್ಯಾನವನ್ನು ಏಕೆ ಮಾಡಬೇಕು?

ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಲಾಭಗಳೇನು?

  • ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು.
  • ಎರಡನೆಯ ಪ್ರಯೋಜನವೆಂದರೆ ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
  • ಮೂರನೆಯದಾಗಿ, ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು.
  • ಇವೆಲ್ಲ ಕಣ್ಣಮುಂದೆ ಕಾಣುವಂಥ ಪ್ರಯೋಜನಗಳು. ಅದಲ್ಲದೆ, ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗ್ರತೆಯಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. ಧ್ಯಾನಸ್ಥರಾಗಿ ಕೂರುವುದಕ್ಕೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ?
Continue Reading

ಆರೋಗ್ಯ

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು? ಈ ಕುರಿತ ಉಪಯುಕ್ತ (Allergic Asthma) ಮಾಹಿತಿ ಇಲ್ಲಿದೆ.

VISTARANEWS.COM


on

Allergic Asthma
Koo

ಡಾ. ಸಚಿನ್ ಡಿ, ಸಲಹೆಗಾರ – ಇಂಟರ್ವೆನ್ಷನಲ್ ಪಲ್ಮನಾಲಜಿ ಕ್ರಿಟಿಕಲ್ ಕೇರ್ & ಸ್ಲೀಪ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್

ಕೆಲವರನ್ನು ಬಿಟ್ಟೂ ಬಿಡದೆ ಕಾಡುವ ಕಾಯಿಲೆಗಳ ಪೈಕಿ ಈ ಅಸ್ತಮಾ ಕೂಡ ಒಂದು. ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು ಎಂಬುದರ ಬಗ್ಗೆ (Allergic Asthma) ಇಲ್ಲಿದೆ ಮಾಹಿತಿ.

Perfumes

ಸುಗಂಧ ದ್ರವ್ಯಗಳು

ಸಾಕಷ್ಟು ಜನರಿಗೆ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯ ಹಾಕದೇ ಹೊರ ಹೋಗುವುದಿಲ್ಲ. ಆದರೆ, ಇದು ಅಸ್ತಮಾ ಇರುವವರಿಗೆ ಇನ್ನಷ್ಟು ಅಲರ್ಜಿ ಹೆಚ್ಚಿಸುವ ಸಾಧ್ಯತೆ ಇದೆ. ಪರ್ಫ್ಯೂಮ್‌, ಸುಗಂಧಭರಿತ ಲೋಷನ್‌ಗಳು ಮತ್ತು ಏರ್ ಫ್ರೆಶ್‌ನರ್‌ಗಳು ಕೆಲವು ವ್ಯಕ್ತಿಗಳಿಗೆ ಆಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈ ಕೃತಕ ಸುಗಂಧ ದ್ರವ್ಯಗಳು ಒಲಟೈಲ್‌ ಆರ್ಗಾನಿಕ್‌ ಕಾಂಪೋನೆಂಟ್ಸ್‌ (VOCs)ಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಶ್ವಾಸನಾಳವು ಕೆರಳಿ, ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆ ಉಂಟು ಮಾಡಲಿದೆ.

ಗುಡುಗು ಸಹಿತ ಗಾಳಿಯಿಂದ ದೂರವಿರಿ

ಹೆಚ್ಚಿನ ಜನರು ಗುಡುಗು ಸಹಿತ ತಂಪಾದ ಗಾಳಿಯನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಚಂಡಮಾರುತದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ವಾತಾವರಣದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಜೊತೆಗೆ, ಗಾಳಿಯಲ್ಲಿನ ತೇವಾಂಶವು ಅಸ್ತಮಾ ಉಲ್ಬಣವನ್ನು ಪ್ರಚೋದಿಸಲಿದೆ. ಹೀಗಾಗಿ ಅಸ್ತಮಾ ರೋಗಿಗಳು ಈ ಗಾಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

Outdoor Exercise

ವ್ಯಾಯಾಮದಲ್ಲೂ ಇರಲಿ ಮಿತಿ

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ಆಸ್ತಮಾ ಹೊಂದಿರುವವರಿಗೆ ಕೆಲವು ವ್ಯಾಯಾಮಗಳು ಸಹ ಉಬ್ಬಸ ಬರುವಂತೆ ಮಾಡಬಹುದು ಎಚ್ಚರ. ಅಸ್ತಮಾ ರೋಗಿಗಳಿಗೆ ಅತಿಯಾಗಿ ಓಡುವುದು, ತೀವ್ರ ದೈಹಿಕ ಚಟುವಟಿಕೆಗಳು, ದೂಳು ಭರದ ಜಾಗದಲ್ಲಿ ದೈಹಿಕ ಚಟುವಟಿಕೆ ನಡೆಸುವುದು, ಉಸಿರುಗಟ್ಟಿಸುವ ವ್ಯಾಯಾಮಗಳು ನಿಶಿದ್ಧ. ಏಕೆಂದರೆ, ಈ ಎಲ್ಲಾ ದೈಹಿಕ ಚಟುವಟಿಕೆಗಳು ಉಸಿರಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ದೈಹಿಕ ಚಟುವಟಿಕೆ ಅವಶ್ಯಕತೆ ಇದ್ದಲ್ಲಿ ಮೊದಲು ಇನ್ಹೇಲರ್‌ ಬಳಸುವುದು ಉತ್ತಮ. ಇದಲ್ಲದೆ, ಸಾಮಾನ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಬಹುದು.

ಭಾವನಾತ್ಮಕ ಒತ್ತಡಕ್ಕೆ ಒಳಗಾಗದಿರಿ

ಆಸ್ತಮಾ ಕೇವಲ ದೈಹಿಕ ಸ್ಥಿತಿಯಲ್ಲದೆ, ಭಾವನಾತ್ಮಕ ಒತ್ತಡಕ್ಕೂ ಸಂಬಂಧ ಹೊಂದಿದೆ. ಅತಿಯಾದ ಸಂಕಟ, ಮಾನಸಿಕವಾಗಿ ನೋವು ಅನುಭವಿಸುವುದು, ಕೆಲವು ವಿಚಾರಗಳ ಬಗ್ಗೆ ಆಳವಾಗಿ ಯೋಚಿಸುವುದರಿಂದಲೂ ಸಹ ಹೈಪರ್ವೆನ್ಟಿಲೇಷನ್‌ಗೆ ಕಾರಣವಾಗಬಹುದು, ಇದರಿಂದ ಅಸ್ತಮಾ ರೋಗವು ಇನ್ನಷ್ಟು ಹದಗೆಡಬಹುದು.

Preservative food

ಪ್ರಿಜರ್‌ವೇಟಿವ್‌ ಆಹಾರ ಬಳಕೆ ಉತ್ತಮವಲ್ಲ

ಇನ್ನು, ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡುವ ಪ್ರಿಜರ್‌ವೇಟಿವ್‌ ಬಳಸಿರುವ ಆಹಾರ ಸೇವನೆಯೂ ಕೂಡ ಅಸ್ತಮಾ ರೋಗವನ್ನು ಕೆರಳಿಸಬಹುದು ಎನ್ನಲಾಗಿದೆ.
ಇನ್ನು, ಸಂಸ್ಕರಿತ ಆಹಾರಗಳು ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳಾಗಿ ಬಳಸಲಾಗುವ ಸಲ್ಫೈಟ್‌ಗಳು ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಆಸ್ತಮಾ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಹೀಗಾಗಿ ಆಸ್ತಮಾ ಹೊಂದಿರುವ ವ್ಯಕ್ತಿಗಳು ಆಹಾರದ ಲೇಬಲ್‌ಗಳನ್ನು ಓದುವುದು ಮತ್ತು ಸಲ್ಫೈಟ್-ಒಳಗೊಂಡಿರುವ ಉತ್ಪನ್ನಗಳನ್ನು ತಪ್ಪಿಸುವುದು ಒಳ್ಳೆಯದು

ಇದನ್ನೂ ಓದಿ: Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಕೆಲಸಗಳ ಆಯ್ಕೆಯಲ್ಲಿ ಇರಲಿ ಎಚ್ಚರ

ಇನ್ನು, ಕೆಲವರು ಅಸ್ತಮಾ ಹೊಂದಿರುವವರು ತಾವು ಮಾಡುವ ಕೆಲಸಗಳ ಬಗ್ಗೆಯೂ ಜಾಗೃತಿ ವಹಿಸುವುದು ಉತ್ತಮ. ಸಾಕುಪ್ರಾಣಿಗಳನ್ನು ಪೋಷಿಸುವ ಕೆಲಸ, ಕೃಷಿ, ಧೂಳು ಪ್ರದೂಷಣೆಗೆ ಒಡ್ಡುವ ಕೆಲಸಗಳು, ಹೊಗೆಯುಕ್ತ, ಹೆಚ್ಚು ಸುಂಗಂಧಭರಿತ ನಿರ್ಮಾಣದ ಕೆಲಸ ಸೇರಿದಂತೆ ನಿಮ್ಮ ಅಸ್ತಮಾವನ್ನು ಹೆಚ್ಚಿಸುವ ಕೆಲಸಗಳಿಂದ ದೂರವಿರಿ. ಕೆಲಸ ಜೀವನ ನಡೆಸಲು ಮುಖ್ಯವೆ ಆದರೂ, ಆರೋಗ್ಯ ದುಡಿಮೆಗಿಂತಲೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

Continue Reading
Advertisement
Teachers Transfer
ಪ್ರಮುಖ ಸುದ್ದಿ5 hours ago

Teachers Transfer: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

T20 World Cup 2024
T20 ವಿಶ್ವಕಪ್6 hours ago

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

Hiriya vidwamsa Sagri Raghavendra Upadhyaya passed away
ಶ್ರದ್ಧಾಂಜಲಿ8 hours ago

Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Government has no money to clean tankers no ability to provide clean drinking water says R Ashok
ಪ್ರಮುಖ ಸುದ್ದಿ8 hours ago

R Ashok: ಟ್ಯಾಂಕರ್ ಸ್ವಚ್ಛಗೊಳಿಸಲೂ ಸಿದ್ದು ಸರ್ಕಾರದ ಬಳಿ ಹಣವಿಲ್ಲ; ಆರ್. ಅಶೋಕ್‌ ಆಕ್ರೋಶ

Union Minister Pralhad Joshi statement about increase in petrol and diesel prices in the state
ಕರ್ನಾಟಕ8 hours ago

Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Bribe Case
ಕ್ರೈಂ8 hours ago

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

Minister dr G Parameshwar inaugurated the hasiru grama programme in Koratagere
ತುಮಕೂರು8 hours ago

Koratagere News: ಹಸಿರೇ ಉಸಿರು, ಹಸಿರಿದ್ದೆಡೆ ಮಾನವನ ಸರ್ವಾಂಗಿಣ ಪ್ರಗತಿ: ಸಚಿವ ಜಿ. ಪರಮೇಶ್ವರ್‌

Giorgia Meloni
ವಿದೇಶ8 hours ago

Giorgia Meloni: ಇಟಲಿ ಪ್ರಧಾನಿ ಮೆಲೋನಿ ಕಾರ್ಮಿಕ ಮಹಿಳೆಯ ಮಗಳು! ಅವರ ಕುರಿತ ಕುತೂಹಲಕರ ಸಂಗತಿಗಳಿವು

Sapthami Gowda
ಪ್ರಮುಖ ಸುದ್ದಿ8 hours ago

Sapthami Gowda: ಯುವ ಪತ್ನಿ ವಿರುದ್ಧ ಸಪ್ತಮಿಗೌಡ ಮಾನಹಾನಿ ಕೇಸ್; ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ

Gold Heist
ವಿದೇಶ8 hours ago

Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ15 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 day ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌