Railways income : ರೈಲ್ವೆಗೆ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯ - Vistara News

ವಾಣಿಜ್ಯ

Railways income : ರೈಲ್ವೆಗೆ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯ

ರೈಲ್ವೆ ಇಲಾಖೆ 2022ರ ಮೊದಲ 10 ತಿಂಗಳುಗಳಲ್ಲಿ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸಿರುವುದು ಗಮನಾರ್ಹ. 2021ರ ಇದೇ ಅವಧಿಗೆ ಹೋಲಿಸಿದರೆ (Railways income) ಏರಿಕೆ ದಾಖಲಾಗಿದೆ.

VISTARANEWS.COM


on

railway
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತೀಯ ರೈಲ್ವೆ 2022-23ರಲ್ಲಿ ಮೊದಲ 10 ತಿಂಗಳುಗಳಲ್ಲಿ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ಇಲಾಖೆ ತಿಳಿಸಿದೆ. 2021-22ರ ಇದೇ ಅವಧಿಯ (Railways income) ಆದಾಯ ಗಳಿಕೆಯನ್ನು ಮೀರಿದೆ. 16% ಹೆಚ್ಚಳ ದಾಖಲಿಸಿದೆ. ೨೦೨೨ ಏಪ್ರಿಲ್‌ನಿಂದ 2023 ಜನವರಿ ನಡುವೆ 124 ಕೋಟಿ ಟನ್‌ ಸರಕು ಸಾಗಣೆಯಾಗಿದೆ. ರೈಲ್ವೆ 135,387 ಕೋಟಿ ರೂ. ಆದಾಯವನ್ನು ಗಳಿಸಿದೆ. ಇದಕ್ಕೂ ಹಿಂದಿನ ಸಾಲಿನ ಇದೇ ಅವಧಿಯಲ್ಲಿ 117212 ಕೋಟಿ ರೂ. ಆದಾಯ ಗಳಿಸಿತ್ತು ಎಂದು ರೈಲ್ವೆ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ರೈಲ್ವೆ ಕಳೆದ 2022 ಏಪ್ರಿಲ್-ಡಿಸೆಂಬರ್‌ ಅವಧಿಯಲ್ಲಿ ಅನ್‌ ರಿಸರ್ವಡ್‌ ಪ್ಯಾಸೆಂಜರ್‌ ವಿಭಾಗದಲ್ಲಿ 10430 ಕೋಟಿ ರೂ. ಆದಾಯ ಗಳಿಸಿತ್ತು. 2021ರ ಇದೇ ಅವಧಿಗೆ ಹೋಲಿಸಿದರೆ 381% ಹೆಚ್ಚು. ಆಗ 2169 ಕೋಟಿ ರೂ. ಆದಾಯ ಗಳಿಸಿತ್ತು.

೨೦೨೩-೨೪ರ ಬಜೆಟ್‌ ನಲ್ಲಿ ರೈಲ್ವೆ ಬಜೆಟ್‌ಗೆ 2.4 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಇದು ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ. ರೈಲ್ವೆಗೆ ಸರ್ಕಾರದ ಬಂಡವಾಳ ವೆಚ್ಚ ಗಣನೀಯ ಏರಿಕೆಯಾಗಿರುವುದನ್ನು ಇದು ಬಿಂಬಿಸಿದೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆ ಗಣನೀಯ ಪಾತ್ರ ವಹಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿಯೊಂದೇ ಅಲ್ಲ! ಹೀಗೆ ಮಾಡಿಯೂ ಸಮೃದ್ಧಿ ಹೊಂದಬಹುದು!

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ. ಅಕ್ಷಯ ತೃತೀಯ ದಿನ ಆಚರಿಬಹುದಾದ ಹಲವು ಸಂಪ್ರದಾಯಗಳಿವೆ. ಈ ಬಗ್ಗೆ ಅರಿತುಕೊಂಡು ನೀವು, ಕುಟುಂಬದೊಂದಿಗೆ ಅಕ್ಷಯ ತೃತಿಯವನ್ನು (Akshaya Tritiya 2024) ಆಚರಿಸಿ.

VISTARANEWS.COM


on

By

Akshaya Tritiya 2024
Koo

ಪವಿತ್ರ ಯುಗ ಮತ್ತು ಸತ್ಯ ಯುಗದ ಆರಂಭವನ್ನು ಸೂಚಿಸುವ ಅಕ್ಷಯ ತೃತೀಯ (Akshaya Tritiya 2024) ವೈಶಾಖ ಮಾಸದ ಮೂರನೇ ಚಂದ್ರನ ದಿನ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನವು ಹಿಂದೂ (hindu) ಸಂಸ್ಕೃತಿಯಲ್ಲಿ (culture) ಬಹಳ ಮಹತ್ವವನ್ನು ಹೊಂದಿದೆ. ಹೀಗಾಗಿ ಈ ದಿನ ಹೊಸ ಉದ್ಯಮಗಳನ್ನು ಪ್ರಾರಂಭಿಸಲು, ಹೂಡಿಕೆ ಮಾಡಲು, ಚಿನ್ನ (gold) ಅಥವಾ ಆಸ್ತಿಯನ್ನು (property) ಖರೀದಿಸಲು, ಮದುವೆ ಅಥವಾ ಇತರ ಶುಭ ಸಂದರ್ಭಗಳಿಗೆ ಉತ್ತಮ ಸಮಯ ಎಂದೇ ಪರಿಗಣಿಸಲಾಗಿದೆ.

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ.

ಅಕ್ಷಯ ತೃತಿಯವನ್ನು ಪವಿತ್ರ ನದಿಗಳಲ್ಲಿ ವಿಶೇಷವಾಗಿ ಗಂಗಾದಲ್ಲಿ ಸ್ನಾನ ಮಾಡಲು ಮತ್ತು ಸಮೃದ್ಧಿ ಹಾಗೂ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಪಡೆಯಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ 2024 ಅನ್ನು ಮೇ 10 ರಂದು ಶುಕ್ರವಾರ ಆಚರಿಸಲಾಗುತ್ತಿದೆ.

ಅಕ್ಷಯ ತೃತೀಯವನ್ನು ಸರಿಯಾದ ರೀತಿಯಲ್ಲಿ ಆಚರಿಸಲು ಅನುಸರಿಸಬೇಕಾದ ಕೆಲವು ಪ್ರಮುಖ ಆಚರಣೆಗಳಿವೆ. ಅವುಗಳ ಪರಿಚಯ ಇಲ್ಲಿದೆ.


ಚಿನ್ನ ಖರೀದಿಸಿ

ಅಕ್ಷಯ ತೃತೀಯದಲ್ಲಿ ಹೆಚ್ಚಿನ ಜನರು ಅನುಸರಿಸುವ ಪ್ರಮುಖ ಸಂಪ್ರದಾಯವೆಂದರೆ ಚಿನ್ನ ಖರೀದಿ. ಈ ದಿನದಂದು ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ಸ್ವಾಗತಿಸುತ್ತದೆ ಎಂಬ ನಂಬಿಕೆ ಇದೆ. ಜನರು ಈ ದಿನದಂದು ಚಿನ್ನದ ಆಭರಣಗಳು, ನಾಣ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ.


ಚಾರಿಟಿ

ಅಕ್ಷಯ ತೃತೀಯದ ಪ್ರಮುಖ ಅಂಶವೆಂದರೆ ದಾನ. ಈ ದಿನದಂದು ಅಗತ್ಯವಿರುವವರಿಗೆ ದಾನ ನೀಡುವುದು ಆಶೀರ್ವಾದ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅನೇಕ ಜನರು ಆಹಾರ, ಬಟ್ಟೆ, ಹಣ ಅಥವಾ ಇತರ ರೀತಿಯ ದಾನವನ್ನು ಹಿಂದುಳಿದವರಿಗೆ ದಾನ ಮಾಡುತ್ತಾರೆ. ಈ ಅಭ್ಯಾಸವು ನಿರ್ಗತಿಕರಿಗೆ ಸಹಾಯ ಮಾಡುವುದಲ್ಲದೆ ಸಹಾನುಭೂತಿ ಮತ್ತು ಸಹಾನುಭೂತಿಯ ಭಾವವನ್ನು ಬೆಳೆಸುತ್ತದೆ.


ಮರಗಳನ್ನು ನೆಡುವುದು

ಇದು ಪ್ರಕೃತಿಗೆ ಮರಳಿ ನೀಡುವ ಮತ್ತು ಗ್ರಹಕ್ಕೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸುವ ಒಂದು ಮಾರ್ಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜನರು ಪರಿಸರ ಸುಸ್ಥಿರತೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಕ್ಷಯ ತೃತೀಯವು ಹೆಚ್ಚು ಮರಗಳನ್ನು ನೆಡಲು ಮತ್ತು ಹಸಿರು ವಾತಾವರಣವನ್ನು ನಿರ್ಮಿಸಲು ಉತ್ತಮ ಅವಕಾಶವಾಗಿದೆ. ಮರಗಳನ್ನು ನೆಡುವ ಮೂಲಕ ನಾವು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು ತಡೆಯಬಹುದು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಉಪವಾಸ

ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಇತರ ಪ್ರಮುಖ ಆಚರಣೆಗಳು ಉಪವಾಸ, ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಪೂಜೆಗಳು ಮತ್ತು ಪ್ರಾರ್ಥನೆಗಳನ್ನು ಮಾಡುತ್ತೇವೆ. ಸ್ವೀಕರಿಸಿದ ಎಲ್ಲಾ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಿರಂತರ ಮಾರ್ಗದರ್ಶನ ಮತ್ತು ರಕ್ಷಣೆಯನ್ನು ಪಡೆಯಲು ಈ ದಿನ ಸೂಕ್ತವಾಗಿದೆ. ಅನೇಕ ಜನರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಮನೆಯಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಹೀಗೆ ಮಾಡುವ ಮೂಲಕವೂ ಜೀವನದಲ್ಲಿ ಸಮೃದ್ಧಿ, ನೆಮ್ಮದಿ ಹೊಂದಬಹುದು.

Continue Reading

ವಾಣಿಜ್ಯ

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Ujjivan Small Finance Bank: ನೌಟಿಯಾಲ್ ಅವರು ಎಸ್‌ಬಿಐನ ಮಾಜಿ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು. ಅಲ್ಲದೆ ಹಿಂದೆ ಎಸ್‌ಬಿಐ ಲೈಫ್‌ನಲ್ಲಿ ಎರಡು ವರ್ಷಗಳ ಕಾಲ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ವೃತ್ತಿಜೀವನದಲ್ಲಿ ಅವರಿಗೆ 36 ವರ್ಷಗಳ ಅನುಭವವಿದೆ.

VISTARANEWS.COM


on

Ujjivan Small Finance Bank
Koo

ಬೆಂಗಳೂರು, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (Ujjivan Small Finance Bank) ಜುಲೈ 1, 2024 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಸಂಜೀವ್ ನೌಟಿಯಾಲ್ ಅವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಿದೆ. ಈ ನೇಮಕಕ್ಕೆ ಆರ್‌ಬಿಐ ಅನುಮೋದನೆ ನೀಡಿದೆ ಎಂದು ಬ್ಯಾಂಕ್​ನ ಪ್ರಕಟಣೆ ತಿಳಿಸಿದೆ. ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚಿತವಾಗಿಯೇ ಅವರು ಉಜ್ಜೀವನ್ ಬ್ಯಾಂಕ್​​ಗೆ ಸೇರುತ್ತಾರೆ ಈ ಸಮಯದಲ್ಲಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ.

ನೌಟಿಯಾಲ್ ಅವರು ಎಸ್‌ಬಿಐನ ಮಾಜಿ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು. ಅಲ್ಲದೆ ಹಿಂದೆ ಎಸ್‌ಬಿಐ ಲೈಫ್‌ನಲ್ಲಿ ಎರಡು ವರ್ಷಗಳ ಕಾಲ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ವೃತ್ತಿಜೀವನದಲ್ಲಿ ಅವರಿಗೆ 36 ವರ್ಷಗಳ ಅನುಭವವಿದೆ. ನೌಟಿಯಾಲ್ ಅವರ ನೇಮಕವು ಬ್ಯಾಂಕಿನ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಗೆ ಒಳಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಜ್ಜೀವನ್ ಎಸ್‌ಎಫ್‌ಬಿ ಅಧ್ಯಕ್ಷರಾದ ಬಾಣಾವರ ಅನಂತರಾಮಯ್ಯ ಪ್ರಭಾಕರ್ ಮಾತನಾಡಿ “ಆರ್‌ಬಿಐ, ನೌಟಿಯಾಲ್ ಅವರ ನೇಮಕವನ್ನು ಅನುಮೋದಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಅವರನ್ನು ಉಜ್ಜೀವನ್ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಅವರೊಬ್ಬ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸರ್ವತೋಮುಖ ಅನುಭವವನ್ನು ಹೊಂದಿರುವ ಮಹತ್ವದ ರೀಟೇಲ್ ಬ್ಯಾಂಕರ್. ಅವರಿಗೆ ಬ್ಯಾಂಕಿಂಗ್ ನ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಅನುಭವವಿದೆ. ಗ್ರಾಹಕರೇ ಕೇಂದ್ರವಾಗಿರುವಂತಹ, ಬಲವಾದ ಸಂಸ್ಥೆಗಳನ್ನು ಕಟ್ಟುವಲ್ಲಿ ಮತ್ತು ಪೋಷಿಸುವಲ್ಲಿ ಪರಿಣತರು. ಅವರ ಅರ್ಹತೆಗಳು ಉಜ್ಜೀವನ್ ಅನ್ನು ಮುನ್ನಡೆಸಲು ಸಹಜ ಆಯ್ಕೆಯನ್ನಾಗಿಸಿವೆ. ಈ ಪ್ರಯಾಣ, ಅವರಿಗೆ ಶುಭಕರವಾಗಲಿ ಮತ್ತು ಅತ್ಯುತ್ತಮ ಯಶಸ್ಸನ್ನು ತರಲಿ ಎಂದು ನಾನೂ ಮತ್ತು 22,000+ ’ಉಜ್ಜೀವನ್​ ಶಾಖೆಗಳು ಹಾರೈಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಅವರು ನಿರ್ಗಮಿತ ಸಿಇಒ ಇಟ್ಟೀರ ಡೇವಿಸ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಮೂಲ ಅವಧಿ ಮುಗಿಯುವ ಕೆಲವು ತಿಂಗಳುಗಳ ಮೊದಲೇ ಸೇವೆಯಿಂದ ಬಿಡುಗಡೆ ಹೊಂದಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದರು ಮತ್ತು ಮಂಡಳಿಯು ಅವರ ಆಶಯಗಳನ್ನು ಗೌರವಿಸಿದೆ.

ಇದನ್ನೂ ಓದಿ: IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

ಸಂಜೀವ್ ನೌಟಿಯಾಲ್ ಪ್ರತಿಕ್ರಿಯಿಸಿ “ಉಜ್ಜೀವನ್‌ಗೆ ಸೇರುತ್ತಿರುವುದು ನಿಜಕ್ಕೂ ಒಂದು ಗೌರವವೇ ಸರಿ. ಉಜ್ಜೀವನ್ ಒಂದು ಪ್ರಮುಖ ಸಮೂಹ ಮಾರುಕಟ್ಟೆ ಬ್ಯಾಂಕ್. ಇದು, ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ಕಟ್ಟಿಕೊಡಬೇಕೆಂಬ ಉನ್ನತವಾದ ಉದ್ದೇಶ ಹೊಂದಿದೆ. ಉಜ್ಜೀವನ್, ಎನ್‌ಬಿಎಫ್‌ಸಿ-ಎಂಎಫ್‌ಐ ನಿಂದ ಒಂದು ಅತ್ಯಂತ ಯಶಸ್ವಿ ಬ್ಯಾಂಕಾಗಿ ಪರಿವರ್ತನೆಗೊಂಡಿದೆ. ಈಗ ಅದು ಹಣಕಾಸು ಮತ್ತು ಡಿಜಿಟಲ್ ಸೇರ್ಪಡೆಯ ಹೊಸ ಗಡಿಗಳನ್ನು ದಾಟಲು ಸಿದ್ಧ. ಟೀಮ್ ಉಜ್ಜೀವನ್ ಮತ್ತು ಎಲ್ಲ ಹಿತಾಸಕ್ತರೊಂದಿಗೆ ಸೇರಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ನೌಟಿಯಾಲ್ ಅವರು ಈ ಹಿಂದೆ ಉಪ-ವ್ಯವಸ್ಥಾಪಕ ನಿರ್ದೇಶಕರಾಗಿ (ಹಣಕಾಸು ಸೇರ್ಪಡೆ ಮತ್ತು ಮೈಕ್ರೋ ಮಾರ್ಕೆಟ್ಸ್), ಎಸ್‌ಬಿಐ ಮತ್ತು ಎಸ್‌ಬಿಐ ಲೈಫ್ ಇನ್ಶೂರೆನ್ಸ್‌ ನ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಭಾರತೀಯ ಜೀವ ವಿಮಾ ನಿಗಮದ (ಎಲ್.ಐ.ಸಿ ಯ) ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಹಲವಾರು ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಟಿಯಾಲ್ ಅವರು ಆರ್ಟ್ಸ್ ವಿಭಾಗದಲ್ಲಿ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ.

Continue Reading

ಫ್ಯಾಷನ್

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024 ರಲ್ಲಿ (Met Gala 2024) ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್ ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.

VISTARANEWS.COM


on

By

Met Gala 2024
Koo

ಮೆಟ್ ಗಾಲಾ 2024ರಲ್ಲಿ (Met Gala 2024) 180 ಕ್ಯಾರಟ್ ಡೈಮಂಡ್ ನೆಕ್ಲೇಸ್‌ನೊಂದಿಗೆ (diamond necklace) 200 ಕ್ಯಾರಟ್ ವಜ್ರಗಳನ್ನು ಧರಿಸಿದ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್ (billionaire) ಸುಧಾ ರೆಡ್ಡಿ ( Sudha Reddy) ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅತ್ಯಾಕರ್ಷಕ ಉಡುಗೆಗಳು ಮೆಟ್ ಗಾಲಾದಲ್ಲಿ ನೆರೆದಿದ್ದ ಎಲ್ಲರ ದೃಷ್ಟಿ ಅವರತ್ತ ನೋಡುವಂತೆ ಮಾಡಿತ್ತು.

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024ರಲ್ಲಿ ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್‌ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.


ಅವರು ಧರಿಸಿದ್ದ ನೆಕ್‌ಪೀಸ್ ನಲ್ಲಿ 25 ಕ್ಯಾರಟ್ ಹೃದಯದ ಆಕಾರದ ವಜ್ರ ಮತ್ತು ಮೂರು 20 ಕ್ಯಾರಟ್‌ನ ಹೃದಯ ಆಕಾರದ ವಜ್ರಗಳಿದ್ದವು. ಇದು ಅವರ ಪತಿ ಮತ್ತು ಇಬ್ಬರು ಮಕ್ಕಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
ಈ ನೆಕ್ಲೇಸ್ ಅನ್ನು 23 ಕ್ಯಾರಟ್ ಡೈಮಂಡ್ ಸಾಲಿಟೇರ್ ರಿಂಗ್ ಮತ್ತು ಮತ್ತೊಂದು 20 ಕ್ಯಾರಟ್ ಡೈಮಂಡ್ ಸಾಲಿಟೇರ್ ಉಂಗುರದೊಂದಿಗೆ ಜೋಡಿಸಿದ್ದು, ಇದು 20 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ.

ಸುಧಾ ರೆಡ್ಡಿ ಯಾರು?

ಕೃಷ್ಣಾ ರೆಡ್ಡಿಯವರ ಪತ್ನಿ ಸುಧಾ ರೆಡ್ಡಿ MEIL ನಲ್ಲಿ ನಿರ್ದೇಶಕರಾಗಿದ್ದಾರೆ. ಇವರಿಗೆ ಮಾನಸ್ ಮತ್ತು ಪ್ರಣವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಧಾ ರೆಡ್ಡಿ ಫೌಂಡೇಶನ್‌ನ ಮುಖ್ಯಸ್ಥರಾಗಿರುವ ಅವರು ಕಂಪೆನಿಯ ದತ್ತಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಮೂಲತಃ ವಿಜಯವಾಡದವರಾದ ಅವರು 19 ವರ್ಷದವರಾಗಿದ್ದಾಗ ಕೃಷ್ಣಾ ರೆಡ್ಡಿ ಅವರನ್ನು ವಿವಾಹವಾದರು. ಅವರಿಬ್ಬರೂ ಒಟ್ಟಿಗೆ ಬೆಳೆದಿರುವ ಕಾರಣ ಸಾಧನೆ ಮಾಡುವುದು ಸಾಧ್ಯವಾಯಿತು ಎಂಬುದು ಅವರ ನಂಬಿಕೆ.
ಹೈದರಾಬಾದ್ ರಾಣಿ ಜೇನುನೊಣ ಎಂದೇ ಪ್ರಶಂಸಿಸಲ್ಪಡುವ ಸುಧಾ ರೆಡ್ಡಿ 2021ರಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು.


ತರುಣ್ ತಹಿಲಿಯಾನಿ ಸಿದ್ಧಪಡಿಸಿದ ಉಡುಗೆ

ಎರಡನೇ ಬಾರಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸುಧಾ ರೆಡ್ಡಿ ಅವರು ತರುಣ್ ತಹಿಲಿಯಾನಿ ಅವರ ಆಫ್-ಶೋಲ್ಡರ್ ಗೌನ್ ಮತ್ತು ತಮ್ಮ ಸಂಗ್ರಹದ ಕೋಟಿಗಟ್ಟಲೆ ಮೌಲ್ಯದ ನೆಕ್ಲೇಸ್‌ ಧರಿಸಿ ಭಾಗವಹಿಸಿದ್ದರು.

ರೀವೇಕನಿಂಗ್ ಫ್ಯಾಶನ್ ಎಂಬ ಶೀರ್ಷಿಕೆಯ ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಐವರಿ ಸಿಲ್ಕ್ ಗೌನ್ ಅನ್ನು 4,500 ಗಂಟೆಗಳ ಅವಧಿಯಲ್ಲಿ 80 ಕುಶಲಕರ್ಮಿಗಳ ತಂಡ ಸಿದ್ಧಪಡಿಸಿದೆ. ವಿನ್ಯಾಸಕಾರರ ಪ್ರಕಾರ ಈ ಧಿರಿಸು ಹಳೆಯ ಮೊಘಲ್ ಉದ್ಯಾನಗಳಿಂದ ಪ್ರೇರಿತವಾಗಿದೆ. ಕಾರ್ಸೆಟ್ ಅನ್ನು ತಹಿಲಿಯಾನಿಯ ಸಿಗ್ನೇಚರ್ ಮ್ಯೂಟ್, ಬೀಜ್-ಗೋಲ್ಡ್ ಬಣ್ಣದ ಪ್ಯಾಲೆಟ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಮೆಟ್ ಗಾಲಾ ಥೀಮ್‌ಗೆ ಅನುಗುಣವಾಗಿ ರಚಿಸಲಾಗಿದೆ. ಗೌತಮ್ ಕಲ್ರಾ ಅವರ ಶೈಲಿಯಲ್ಲಿ ರೆಡ್ಡಿ ಅವರು ಮಿಯೋಡ್ರಾಗ್ ಗುಬೆರಿನಿಕ್ ವಿನ್ಯಾಸಗೊಳಿಸಿದ ಸ್ಫಟಿಕ ಪರಿಕರವನ್ನು ಇದರೊಂದಿಗೆ ಸೇರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

180 ಕ್ಯಾರಟ್‌ ನ ನೆಕ್ಲೆಸ್

ಸುಧಾ ರೆಡ್ಡಿ ಅವರು ಕೇವಲ ಧಿರಸಿನಿಂದ ಮಾತ್ರವಲ್ಲ ಪ್ರತಿಷ್ಠಿತ ಆಭರಣದಿಂದ ಗಮನ ಸೆಳೆದರು. ‘ಅಮೋರ್ ಎಟರ್ನೊ’ ನೆಕ್ಲೇಸ್ 25 ಸಾಲಿಟೇರ್‌ಗಳನ್ನು ಒಳಗೊಂಡಿದ್ದು ಇದು ಒಟ್ಟು 180 ಕ್ಯಾರೆಟ್‌ಗಳು. ಇದನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸಲು ರೆಡ್ಡಿ ಕುಟುಂಬದ ಪರಂಪರೆಯ ಗುರುತಾಗಿ ರಚಿಸಲಾಗಿದೆ.

ಇದನ್ನೂ ಓದಿ: Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

ಹಾರದ ಮಧ್ಯಭಾಗದಲ್ಲಿ ನಾಲ್ಕು ದೊಡ್ಡ ಹೃದಯದ ಆಕಾರದ ವಜ್ರಗಳಿಂದ ರಚಿಸಲಾದ ಸಾಂಕೇತಿಕವಾಗಿ ಕುಟುಂಬದ ಮರವನ್ನು ಇಡಲಾಗಿದೆ. ಅತಿದೊಡ್ಡ ವಜ್ರ, 25 ಕ್ಯಾರೆಟ್ ಕಿಂಗ್ ಆಫ್ ಹಾರ್ಟ್ಸ್, ರೆಡ್ಡಿಯ ಪತಿ ಕೃಷ್ಣನನ್ನು ಗೌರವಿಸುತ್ತದೆ. ಆದರೆ ಹೃದಯದ ರಾಣಿ 20 ಕ್ಯಾರೆಟ್ ಹೃದಯದ ವಜ್ರವು ಸುಧಾ ರೆಡ್ಡಿಯನ್ನು ಸಂಕೇತಿಸುತ್ತದೆ. ಜ್ಞಾನದ ರಾಜಕುಮಾರ ಮತ್ತು ಸಂಪತ್ತಿನ ರಾಜಕುಮಾರ ಎಂದು ಕರೆಯಲ್ಪಡುವ ಎರಡು ಹೆಚ್ಚುವರಿ 20 ಕ್ಯಾರಟ್ ಹೃದಯಗಳು ಅವರ ಪುತ್ರರಾದ ಪ್ರಣವ್ ಮತ್ತು ಮಾನಸ್ ಅವರನ್ನು ಪ್ರತಿನಿಧಿಸುತ್ತವೆ.

ಈ ನೆಕ್ಲೇಸ್ ಅನ್ನು ಪೂರ್ಣಗೊಳಿಸುವುದು 21 ಹೊಳೆಯುವ ಸುತ್ತಿನ ವಜ್ರಗಳು. ಇದು ಸುಧಾ ಮತ್ತು ಕೃಷ್ಣರ ಪ್ರೇಮಕಥೆಯ ಹಂಚಿಕೊಂಡ ಅನುಭವಗಳು ಮತ್ತು ಪಾಲಿಸಬೇಕಾದ ಕ್ಷಣಗಳನ್ನು ಸಂಕೇತಿಸುತ್ತದೆ. 20 ಕ್ಯಾರೆಟ್ ಹೃದಯದ ಆಕಾರದ ವಜ್ರದ ಉಂಗುರ ಮತ್ತು 23 ಕ್ಯಾರೆಟ್ ಹಳದಿ ಡೈಮಂಡ್ ರಿಂಗ್ ಇದನ್ನು ಪೂರ್ಣಗೊಳಿಸುತ್ತದೆ. ಇದನ್ನು ರಚಿಸಲು 100 ಗಂಟೆಗಳು ಬೇಕಾಗಿತ್ತು.

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಯಾವುದೇ ಸಂದರ್ಭ ಇರಲಿ ದಿನದಲ್ಲಿ ಶುಭ ಸಮಯ ನೋಡಿ ಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು (Akshaya Tritiya 2024) ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Akshaya Tritiya 2024
Koo

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲ್ಪಡುವ ಹಬ್ಬ ಅಕ್ಷಯ ತೃತೀಯ (Akshaya Tritiya 2024) ಅಥವಾ ಅಕ್ಷಯ ತದಿಗೆ. ಈ ದಿನ ಕೃತ ಯುಗದ ಆರಂಭದ ದಿನ. ವಿಷ್ಣುವಿನ (vishnu) ದಶಾವತಾರಗಳಲ್ಲಿ ಆರನೇ ಅವತಾರವಾದ ಪರಶುರಾಮನ (parasuram) ಹಾಗೂ ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ (basaweshwara) ಜನ್ಮ ದಿನ. ಭಗೀರಥನ (bhagiratha) ಪ್ರಯತ್ನದಿಂದ ಗಂಗೆ (ganga) ಭೂಮಿಗೆ ಬಂದ ದಿನವೂ ಹೌದು. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನವೆಂದು ನಂಬಲಾಗುತ್ತದೆ.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯ ವರ್ಷದ ಮೂರೂವರೆ ಶುಭದಿನಗಳಾದ ವಿಜಯದಶಮಿ (vijayadashami), ದೀಪಾವಳಿ (deepavali) ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಹೀಗಾಗಿ ಈ ದಿನ ಯಾವುದೇ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಅಲ್ಲದೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಒಳ್ಳೆಯ ದಿನ ಎಂದೇ ನಂಬಲಾಗುತ್ತದೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಈ ದಿನ ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ.

ಯಾವುದೇ ಸಂದರ್ಭ ಇರಲಿ. ದಿನದಲ್ಲಿ ಶುಭ ಸಮಯ ನೋಡಿಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


ಶುಭ ಮುಹೂರ್ತ ಯಾವಾಗ?

ಅಖ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯದ ಹಬ್ಬವನ್ನು ಮೇ 10ರಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಮಂಗಳಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ಮಹತ್ವದ ಧಾರ್ಮಿಕ ಆಚರಣೆಗಳು ಮತ್ತು ಚಟುವಟಿಕೆಗಳಿಂದ ಗುರುತಿಸಲ್ಪಡುತ್ತದೆ. ಈ ದಿನ ಚಿನ್ನದ ಖರೀದಿಯು ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ 2024ರ ಪೂಜೆ ಮುಹೂರ್ತವು ಮೇ 10ರಂದು ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. ತೃತೀಯ ತಿಥಿಯು ಮೇ 10ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 2.50ಕ್ಕೆ ಮುಕ್ತಾಯಗೊಳ್ಳುತ್ತದೆ.

ಚಿನ್ನ ಖರೀದಿಗೆ ಶುಭ ಸಮಯ

ಚಿನ್ನವನ್ನು ಖರೀದಿಸಲು ಮೇ 9ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗಿ ಮೇ 11ರಂದು ತೃತೀಯ ತಿಥಿ ಮುಗಿಯುವವರೆಗೆ ಇರುತ್ತದೆ. ನವದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಅಕ್ಷಯ ತೃತೀಯ 2024ರಂದು ಚಿನ್ನವನ್ನು ಖರೀದಿಸಲು ನಿರ್ದಿಷ್ಟ ಸಮಯದಲ್ಲಿ ಸ್ವಲ್ಪ ಬದಲಾಗುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಹೊಸ ದೆಹಲಿಯಲ್ಲಿ ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ, ಮುಂಬಯಿಯಲ್ಲಿ ಬೆಳಗ್ಗೆ 6.6ರಿಂದ ಮಧ್ಯಾಹ್ನ 12.35ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಗ್ಗೆ 5.56ರಿಂದ ಮಧ್ಯಾಹ್ನ 12.16ರವರೆಗೆ ಚಿನ್ನ ಖರೀದಿ ಮಾಡಲು ಶುಭ ಸಮಯವಾಗಿದೆ.

Continue Reading
Advertisement
Karnataka Weather
ಕರ್ನಾಟಕ18 mins ago

Karnataka Weather: ಇಂದು ಕೊಡಗು, ಹಾಸನ, ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!

Sam Pitroda
ಪ್ರಮುಖ ಸುದ್ದಿ27 mins ago

ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

dina bhavishya read your daily horoscope predictions for May 09 2024
ಪ್ರಮುಖ ಸುದ್ದಿ1 hour ago

Dina Bhavishya: 12 ರಾಶಿಗಳ ಇಂದಿನ ಭವಿಷ್ಯ ಏನು? ಯಾರಿಗೆ ಪ್ಲಸ್‌? ಯಾರಿಗೆ ಮೈನಸ್!?

Pune
ದೇಶ7 hours ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ7 hours ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Kulgam
ದೇಶ7 hours ago

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

ವಿಸ್ತಾರ ಗ್ರಾಮದನಿ Vistara Gramadaani
ಕರ್ನಾಟಕ7 hours ago

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

LSG vs SRH
ಕ್ರೀಡೆ8 hours ago

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

Hindu Girl
ದೇಶ8 hours ago

Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Monty Panesar
ಕ್ರಿಕೆಟ್8 hours ago

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌