Gulbarga North Election Results: ಕಲಬುರಗಿ ಉತ್ತರ ಕ್ಷೇತ್ರ ಕೈ ವಶ, ಕನೀಝ್‌ ಫಾತಿಮಾ ಗೆಲುವು - Vistara News

Latest

Gulbarga North Election Results: ಕಲಬುರಗಿ ಉತ್ತರ ಕ್ಷೇತ್ರ ಕೈ ವಶ, ಕನೀಝ್‌ ಫಾತಿಮಾ ಗೆಲುವು

ದಶಕಗಳಿಂದ ಕಾಂಗ್ರೆಸ್‌ ವಶದ್ಲಲಿರುವ ಕಲಬುರಗಿ ಜಿಲ್ಲೆಯ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದ ಕನೀ‌ಝ್ ಫಾತಿಮಾ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.‌

VISTARANEWS.COM


on

kalaburagi central constituency winner kaniz fatima
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲಬುರಗಿ: ದಶಕಗಳಿಂದ ಕಾಂಗ್ರೆಸ್‌ ವಶದ್ಲಲಿರುವ ಕಲಬುರಗಿ ಜಿಲ್ಲೆಯ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದ ಕನೀ‌ಝ್ ಫಾತಿಮಾ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.‌

ಈ ಬಾರಿ ಇಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಾಸಿರ್‌ ಹುಸೇನ್‌ ಉಸ್ತಾದ್, ಆಪ್‌ನಿಂದ ಸಯ್ಯದ್‌ ಸಜ್ಜಾದ್‌ ಅಲಿ, ಬಿಜೆಪಿಯಿಂದ ಚಂದ್ರಕಾಂತ ಪಾಟೀಲ, ಕಾಂಗ್ರೆಸ್‌ನಿಂದ ಕನೀಝ್‌ ಫಾತಿಮಾ ಕಣದಲ್ಲಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಕನೀಝ್ ಫಾತಿಮಾ 64,311 ಮತ ಗಳಿಸಿ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಚಂದ್ರಕಾಂತ್ ಬಿ. ಪಾಟೀಲ 5,940 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಇಲ್ಲಿ ಇರುವ ಒಟ್ಟು ಮತಗಳು 276,959. ಪುರುಷರ ಸಂಖ್ಯೆ 140,459 ಹಾಗೂ ಸ್ತ್ರೀಯರು 136,402.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

IPL 2024: ಪಂದ್ಯದಲ್ಲಿ ಎಂಎಸ್ ಧೋನಿ, ಪಿಬಿಕೆಎಸ್ ವಿರುದ್ಧದ 19 ನೇ ಓವರ್​ನಲ್ಲಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪ್ರವೇಶಿಸಿದರು. ಆದರೆ, ಹರ್ಷಲ್ ಪಟೇಲ್ ಅವರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡಿದರು. ಹರ್ಷಲ್ ಪಟೇಲ್ ಅವರ ನಿಧಾನಗತಿಯ ಯಾರ್ಕರ್​​ ಎಸೆತಕ್ಕೆ ಧೋನಿ ಮೋಸಹೋದರು. ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವನ ಆಫ್-ಸ್ಟಂಪ್ ಗೆ ಅಪ್ಪಳಿಸಿತು.

VISTARANEWS.COM


on

IPL 2024
Koo

ಧರ್ಮಶಾಲಾ: ಇಲ್ಲಿ ಭಾನುವಾರ ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) 28 ರನ್​ಗಳ ನಿರ್ಣಾಯಕ ಗೆಲುವು ಸಾಧಿಸಿದೆ. ಚೆಪಾಕ್​​ನಲ್ಲಿ ಸಿಎಸ್​ಕೆ ವಿರುದ್ಧದ ಗೆಲುವು ಸೇರಿದಂತೆ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಪಿಬಿಕೆಎಸ್ ತನ್ನ ಆವೇಗವನ್ನು ಉಳಿಸಿಕೊಳ್ಳಲು ವಿಫಲವಾಯಿತು ಮತ್ತು 169/9 ಗುರಿಯನ್ನು ಬೆನ್ನಟ್ಟುವಾಗ 139/9 ಕ್ಕೆ ಸೀಮಿತಗೊಂಡಿತು.

ಪಂದ್ಯದಲ್ಲಿ ಎಂಎಸ್ ಧೋನಿ, ಪಿಬಿಕೆಎಸ್ ವಿರುದ್ಧದ 19 ನೇ ಓವರ್​ನಲ್ಲಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪ್ರವೇಶಿಸಿದರು. ಆದರೆ, ಹರ್ಷಲ್ ಪಟೇಲ್ ಅವರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡಿದರು. ಹರ್ಷಲ್ ಪಟೇಲ್ ಅವರ ನಿಧಾನಗತಿಯ ಯಾರ್ಕರ್​​ ಎಸೆತಕ್ಕೆ ಧೋನಿ ಮೋಸಹೋದರು. ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವನ ಆಫ್-ಸ್ಟಂಪ್ ಗೆ ಅಪ್ಪಳಿಸಿತು.

ಎಂ.ಎಸ್.ಧೋನಿ ಗೋಲ್ಡನ್ ಡಕ್ ಔಟ್ ಆದ ನಂತರ, ಧರ್ಮಶಾಲಾದಲ್ಲಿ ಪ್ರೇಕ್ಷಕರು ಮೌನವಾದರು. ಆದಾಗ್ಯೂ, ಪಿಬಿಕೆಎಸ್ ಸಹ ಮಾಲೀಕರಾದ ಪ್ರೀತಿ ಜಿಂಟಾ ಸ್ಟ್ಯಾಂಡ್​ಗಳಲ್ಲಿ ಕುಳಿತು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಅವರು ಮುಗುಳ್ನಕ್ಕು ಹರ್ಷಲ್ ಅವರ ಪ್ರಯತ್ನಗಳಿಗೆ ಚಪ್ಪಾಳೆ ತಟ್ಟಿದರು.

ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

ಧರ್ಮಶಾಲಾ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಭಾನುವಾರ ನಡೆದ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ 28 ರನ್​ಗಳ ಗೆಲುವು ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಮೊದಲ ಎಸೆತದಲ್ಲೇ ಕ್ಲೀನ್​ ಬೌಲ್ಡ್​ ಆಗಿ ಗೋಲ್ಡನ್​ ಡಕ್​(Dhoni golden duck) ಸಂಕಟಕ್ಕೆ ಸಿಲುಕಿದರು. ಇದನ್ನು ಕಂಡು ಅವರ ಅಭಿಮಾನಿಗಳು ಭಾರೀ ನಿರಾಸೆಗೊಂಡರು. ಇದರ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ: Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಶೂನ್ಯಕ್ಕೆ ಔಟ್​ ಆಗುವ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಧೋನಿ ಔಟಾಗುತ್ತಿದ್ದಂತೆ ಅವರ ಅಭಿಮಾನಿಗಳು ಬೇಸರದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತರ. ಈ ವಿಡಿಯೊ ವೈರಲ್​ ಆಗುತ್ತಿದೆ.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ 19ನೇ ಓವರ್​ನಲ್ಲಿ ಧೋನಿ ಅವರು ಹರ್ಷಲ್​ ಪಟೇಲ್​ ಎಸೆದ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಆದರೆ ಕೀಪಿಂಗ್​ನಲ್ಲಿ ಧೋನಿ ಒಂದು ಸೊಗಸಾದ ಕ್ಯಾಚ್​ ಹಿಡಿದು ಮಿಂಚಿದರು. ಜಿತೇಶ್​ ಶರ್ಮ ಅವರ ಕ್ಯಾಚ್​ ಇದಾಗಿತ್ತು.

Continue Reading

ದೇಶ

Lok Sabha Election 2024: ಗುಜರಾತ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಮುಸ್ಲಿಮರಿದ್ದರೂ ಕಾಂಗ್ರೆಸ್ ಒಬ್ಬ ಮುಸ್ಲಿಮನಿಗೂ ಟಿಕೆಟ್‌ ಕೊಟ್ಟಿಲ್ಲ!

ಗುಜರಾತ್‌ನಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಣಕ್ಕೆ ಇಳಿಸಿಲ್ಲ. ಬಿಎಸ್‌ಪಿ ಮಾತ್ರ ಇಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಈ ಕುರಿತ ವಿಶ್ಲೇಷಣಾತ್ಮಕ ವರದಿ ಇಲ್ಲಿದೆ.

VISTARANEWS.COM


on

By

Lok Sabha Election-2024
Koo

ಗುಜರಾತ್‌ನಲ್ಲಿ (gujarat) ಲೋಕಸಭೆ ಚುನಾವಣೆಗೆ (Lok Sabha Election 2024) ಮುಸ್ಲಿಂ (muslim) ಅಭ್ಯರ್ಥಿಯನ್ನು (candidate) ಕಣಕ್ಕಿಳಿಸಿದ ಏಕೈಕ ರಾಷ್ಟ್ರೀಯ ಪಕ್ಷ ಬಿಎಸ್‌ಪಿ (BSP). ಕಾಂಗ್ರೆಸ್‌ನಿಂದ (congress) ಯಾವುದೇ ಮುಸ್ಲಿಂ ಅಭ್ಯರ್ಥಿ ಗುಜರಾತ್‌ನಲ್ಲಿ ಕಣಕ್ಕೆ ಇಳಿದಿಲ್ಲ. ಮೇ 7ರಂದು ಮತದಾನ ನಡೆಯಲಿರುವ ರಾಜ್ಯದಲ್ಲಿ ಒಟ್ಟು 266 ಅಭ್ಯರ್ಥಿಗಳ ಪೈಕಿ ಕೇವಲ 32 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇಲ್ಲಿ ಹೆಚ್ಚಿನ ಮುಸ್ಲಿಂ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಕೆಲವರು ಖೇಡಾ, ಲಾಗ್ ಪಾರ್ಟಿ, ರೈಟ್ ಟು ರೀಕಾಲ್ ಪಾರ್ಟಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಭಾರತೀಯ ಜನನಾಯಕ್ ಪಕ್ಷದಂತಹ ಸಣ್ಣ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಗಾಂಧಿನಗರದಲ್ಲಿ ಅತೀ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಮತ್ತು ಸೋನಾಲ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇದರ ನಂತರ ಭರೂಚ್ ಮತ್ತು ಪಟಾನ್ ನಲ್ಲಿ ತಲಾ ನಾಲ್ಕು ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಗುಜರಾತ್‌ನ ಜನಸಂಖ್ಯೆಯಲ್ಲಿ ಸುಮಾರು ಶೇ. 10ರಷ್ಟು ಮುಸ್ಲಿಮರು ಎಂದು ಅಂದಾಜಿಸಲಾಗಿದೆ. ಕಚ್, ಜಾಮ್‌ನಗರ, ಜುನಾಗಢ್, ಭರೂಚ್, ಭಾವನಗರ, ಸುರೇಂದ್ರನಗರ, ಪಟಾನ್, ಬನಸ್ಕಾಂತ, ಸಬರ್ಕಾಂತ, ಅಹಮದಾಬಾದ್ ಪಶ್ಚಿಮ, ಅಹಮದಾಬಾದ್ ಪೂರ್ವ, ಗಾಂಧಿನಗರ, ನವಸಾರಿ, ಪಂಚಮಹಲ್‌ಗಳು ಮತ್ತು ಆನಂದ್ ಸೇರಿದಂತೆ ಕನಿಷ್ಠ 15 ಸ್ಥಾನಗಳಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹಿಂದಿನ ಚುನಾವಣೆ

2019, 2009 ಮತ್ತು 2004ರಲ್ಲಿ ಕಾಂಗ್ರೆಸ್ ಭರೂಚ್‌ನಿಂದ ತಲಾ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದು ಹಿರಿಯ ನಾಯಕ ಅಹ್ಮದ್ ಪಟೇಲ್‌ ಅವರ ಭದ್ರಕೋಟೆಯಾಗಿತ್ತು. ಬಳಿಕ ಶೇರ್ಖಾನ್ ಪಠಾಣ್, ಅಜೀಜ್ ಟಂಕರ್ವಿ ಮತ್ತು ಮೊಹಮ್ಮದ್ ಪಟೇಲ್ ನಾಮನಿರ್ದೇಶನಗೊಂಡರು. ಈ ಬಾರಿ ಆಮ್ ಆದ್ಮಿ ಪಕ್ಷವು ಇಂಡಿಯಾ ಬ್ಲಾಕ್ ಪ್ರತಿನಿಧಿಯಾಗಿ ಭರೂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಪಕ್ಷವು ತನ್ನ ಶಾಸಕ ಚೈತಾರ್ ವಾಸವ ಅವರನ್ನು ಇಲ್ಲಿ ಕಣಕ್ಕಿಳಿಸಿದೆ.

2014 ರಲ್ಲಿ ಕಾಂಗ್ರೆಸ್ ಭರೂಚ್‌ನಿಂದ ಜಯೇಶ್ ಪಟೇಲ್ ಅವರನ್ನು ಕಣಕ್ಕಿಳಿಸಿತು. ಆದರೆ ನವಸಾರಿಯಲ್ಲಿ ಬಿಜೆಪಿಯ ಸಿ.ಆರ್. ಪಾಟೀಲ್ ಅವರನ್ನು ಎದುರಿಸಲು ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತು.


ಬಿಜೆಪಿಯ ಭದ್ರಕೋಟೆ

ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಗುಜರಾತ್‌ನ ಎಲ್ಲಾ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ 25 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆಯಲಿದ್ದು, ಸೂರತ್‌ನಲ್ಲಿ ಬಿಜೆಪಿ ಅವಿರೋಧವಾಗಿ ಗೆಲುವು ಸಾಧಿಸಿದೆ.

ಏಕೈಕ ಮುಸ್ಲಿಂ ಶಾಸಕ

ಪ್ರಸ್ತುತ ಗುಜರಾತ್ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಏಕೈಕ ಮುಸ್ಲಿಂ ಶಾಸಕ ಇಮ್ರಾನ್ ಖೇಡವಾಲಾ ಅವರು ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಶೇ.10ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದರೂ ಕಾಂಗ್ರೆಸ್‌ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬ ಬಗ್ಗೆ ಇವರು ಸ್ಪಷ್ಟ ವಿವರಣೆ ನೀಡಲು ವಿಫಲರಾಗಿದ್ದಾರೆ.

ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು

1957ರಲ್ಲಿ ಭರೂಚ್ ಲೋಕಸಭಾ ಸ್ಥಾನವು 1984ರವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1977 ಮತ್ತು 1984ರ ನಡುವೆ ಅಹ್ಮದ್ ಪಟೇಲ್ ಮೂರು ಬಾರಿ ಗೆದಿದ್ದರು. ಇವರು ಈ ಸ್ಥಾನದಿಂದ ಗೆದ್ದ ಕೊನೆಯ ಕಾಂಗ್ರೆಸ್ ಸಂಸದರಾಗಿದ್ದರು. 1989ರಲ್ಲಿ ಅವರನ್ನು ಸೋಲಿಸಿದ ಬಿಜೆಪಿಯ ಚಂದುಭಾಯಿ ದೇಶಮುಖ್, ಬಳಿಕ ಮನ್ಸುಖ್ ವಾಸವಾ ಮರು ಚುನಾಯಿಸಲ್ಪಟ್ಟರು. ಈ ವರ್ಷ ಮನ್ಸುಖ್ ಈ ಕ್ಷೇತ್ರದಿಂದ ಏಳನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

ಅಹ್ಮದ್ ಪಟೇಲ್ ಅವರ ಮಕ್ಕಳಾದ ಫೈಸಲ್ ಮತ್ತು ಮುಮ್ತಾಜ್ ಅವರು ಭರೂಚ್‌ನಿಂದ ಟಿಕೆಟ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಇಮ್ರಾನ್‌ ಖೇಡಾವಾಲಾ, ಅವರು ಅಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಸುಮಾರು ಮೂರು ಲಕ್ಷ ಮುಸ್ಲಿಂ ಮತಗಳಿವೆ. ಅವರೆಲ್ಲರೂ ಮತ ಹಾಕಿದರೂ ಸಾಕಾಗುವುದಿಲ್ಲ. ಕೇವಲ ಮುಸ್ಲಿಂ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ. ಹಿಂದೂ ಮತಗಳನ್ನು ಪಡೆಯಬೇಕು ಎನ್ನುತ್ತಾರೆ.

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಮತ್ತು ಇಸ್ಲಾಮಿಕ್ ಹೂಡಿಕೆ ಸಲಹಾ ಸೇವೆಗಳ ಪ್ಲಾಟ್‌ಫಾರ್ಮ್ ಪಾರ್ಸೋಲಿ ಕಾರ್ಪೊರೇಷನ್ ಮಾಲೀಕ ಜಾಫರ್ ಸರೇಶ್‌ವಾಲಾ, ಯಾವುದೇ ರಾಷ್ಟ್ರೀಯ ಪಕ್ಷವು ಮುಸ್ಲಿಮರನ್ನು ಕಣಕ್ಕಿಳಿಸಿಲ್ಲ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ಗುಜರಾತ್‌ನಲ್ಲಿ ಮುಸ್ಲಿಮರ ಬಗ್ಗೆ ಹೆಮ್ಮೆಪಡಲು ಸಾಕಷ್ಟು ವಿಷಯಗಳಿವೆ. 2002ರ ಅನಂತರ ಮುಸ್ಲಿಮರು ಶಿಕ್ಷಣ, ಉದ್ಯಮಶೀಲತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎನ್ನುತ್ತಾರೆ ಸುರೇಶ್ ವಾಲಾ.

ಗುಜರಾತ್‌ನಲ್ಲಿ ಬಿಜೆಪಿ 30 ವರ್ಷಗಳಿಂದ ಅಧಿಕಾರದಲ್ಲಿದೆ. 2022ರವರೆಗೂ ಮೂವರು ಶಾಸಕರಾದ ಗಯಾಸುದ್ದೀನ್ (ಶೇಖ್), ಜಾವೇದ್ ಪೀರ್ಜಾದಾ ಮತ್ತು ನಾನು ಇದ್ದೆವು. ಈಗ ನಾನು ಒಬ್ಬನೇ ರಾಜ್ಯಾದ್ಯಂತ ಇರುವ ಎಲ್ಲಾ ಮುಸ್ಲಿಂ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ ಎನ್ನುತ್ತಾರೆ ಶಾಸಕ ಇಮ್ರಾನ್ ಖೇಡವಾಲಾ.

Continue Reading

ವಿಜ್ಞಾನ

Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

ಇಲಿಗಳ ರಕ್ತದಲ್ಲಿ ವಯಸ್ಸನ್ನು ನಿಯಂತ್ರಿಸುವ ಅಂಶವನ್ನು ಚೀನಾದ ವಿಜ್ಞಾನಿಗಳು (Chinese Scientists) ಪತ್ತೆ ಮಾಡಿದ್ದು, ಇದು ಮಾನವನ ವಯಸ್ಸನ್ನು ಸುಮಾರು 120-130 ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Chinese Scientists
Koo

ಚೀನಾದ ವಿಜ್ಞಾನಿಗಳು (Chinese Scientists) ಇಲಿಗಳ (mouse) ರಕ್ತದಲ್ಲಿ ವಯಸ್ಸನ್ನು ನಿಯಂತ್ರಿಸುವ (anti-ageing) ಅಂಶವನ್ನು ಪತ್ತೆ ಮಾಡಿರುವುದಾಗಿ ಹೇಳಿದ್ದು, ಅವರ ಸಂಶೋಧನೆಯ ಪ್ರಕಾರ ಇಲಿಯು 1,266 ದಿನಗಳವರೆಗೆ ಜೀವಿಸುತ್ತದೆ. ಇಲಿಗಳಲ್ಲಿರುವ ವಯಸ್ಸನ್ನು ನಿಯಂತ್ರಿಸುವ ಗುಣವನ್ನು ಮಾನವನ ದೇಹಕ್ಕೆ ಸೇರಿಸಿದರೆ ಮಾನವನ ವಯಸ್ಸನ್ನು ಸುಮಾರು 120-130 ವರ್ಷಗಳವರೆಗೆ ವಿಸ್ತರಿಸಬಹುದು ಎನ್ನುತ್ತಾರೆ ಅವರು.

ನೇಚರ್ ಏಜಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನದ ಪ್ರಕಾರ, 840 ದಿನಗಳ ಸರಾಸರಿ ಜೀವಿತಾವಧಿ ಹೊಂದಿರುವ 20 ತಿಂಗಳ ವಯಸ್ಸಿನ ಗಂಡು ಇಲಿಗಳು ವಯಸ್ಸನ್ನು ನಿಯಂತ್ರಿಸುವ ರಕ್ತದ ಅಂಶದ ಸಾಪ್ತಾಹಿಕ ಚುಚ್ಚುಮದ್ದನ್ನು ಸ್ವೀಕರಿಸಿದವು. 1,031 ದಿನಗಳ ಸರಾಸರಿ ಶೇ. 22.7ರಷ್ಟು ಏರಿಕೆಯಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಅಧ್ಯಯನದ ಸಹ-ಮುಖ್ಯಸ್ಥ ಜಾಂಗ್ ಚೆನ್ಯು ಪ್ರಕಾರ, ಚುಚ್ಚುಮದ್ದುಗಳು ಹಳೆಯ ಇಲಿಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಕ್ರಿಯಾತ್ಮಕ ಕ್ಷೀಣಿಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ ಎಂದು ತಿಳಿಸಿದ್ದಾರೆ.

ಚಿಕಿತ್ಸೆ ಅಭಿವೃದ್ಧಿಗೆ ಸಹಾಯಕ

ಈ ಚಿಕಿತ್ಸೆಯನ್ನು ಎಂದಾದರೂ ಪ್ರಾರಂಭಿಸಿದರೆ ಅದನ್ನು ಔಷಧಗಳ ಮೂಲಕ ನೀಡಲಾಗುತ್ತದೆ ಮತ್ತು ನೇರ ಪ್ಲಾಸ್ಮಾ ವಿನಿಮಯದ ಮೂಲಕ ಅಲ್ಲ ಎಂದವರು ಸ್ಪಷ್ಟಪಡಿಸಿದರು. ಇದು ಸುಲಭವಾದ ಉದ್ದೇಶಿತ ಚಿಕಿತ್ಸೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು.

ಚೀನೀ ತಂಡದ ಪ್ರಕಾರ, ಈ ಅಧ್ಯಯನವು ಏಳು ವರ್ಷಗಳ ಕಾಲ ನಡೆದಿದೆ. ನೂರಾರು ಇಲಿಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. ಸಂಶೋಧಕರ ಪ್ರಕಾರ, ಎಲ್ಲಾ ಜೀವಕೋಶದ ಪ್ರಕಾರಗಳಿಂದ ಸಕ್ರಿಯವಾಗಿ ಬಿಡುಗಡೆಯಾಗುವ ಮತ್ತು ರಕ್ತ ಸೇರಿದಂತೆ ಅನೇಕ ದೈಹಿಕ ದ್ರವಗಳಲ್ಲಿ ಕಂಡುಬರುವ ಸಣ್ಣ ಬಾಹ್ಯಕೋಶೀಯ ಕೋಶಕಗಳು ( (sEV), ವಯಸ್ಸಾದ ಇಲಿಗಳಲ್ಲಿನ ವಯಸ್ಸಿಗೆ ಸಂಬಂಧಿಸಿದ ಕ್ಷೀಣಗೊಳ್ಳುವ ಬದಲಾವಣೆಗಳನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಣ್ಣ ಬಾಹ್ಯಕೋಶೀಯ ಕೋಶಕಗಳು ಜೀವಕೋಶಗಳಾದ್ಯಂತ ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ಪ್ರೋಟೀನ್‌ಗಳನ್ನು ಸಾಗಿಸುತ್ತವೆ. ಇದು ಮಾಹಿತಿ ಪ್ರಸರಣವನ್ನು ಸಕ್ರಿಯಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಗುರುತಿಸುವ ಮತ್ತು ಬಳಸುವ ಮೂಲಕ ಪ್ರಾಣಿಗಳ ಮೇಲಿನ ಹಿಂದಿನ ಅಧ್ಯಯನಗಳಿಗಿಂತ ಹೆಚ್ಚಿನ ಬದುಕುಳಿಯುವ ಅವಧಿಗಳನ್ನು ವೀಕ್ಷಿಸಲು ಸಾಧ್ಯವಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ಆಯುಷ್ಯದಲ್ಲಿ ಶೇ. 22.7ರಷ್ಟು ಹೆಚ್ಚಳ

ಆಯುಷ್ಯದಲ್ಲಿ ಶೇ. 22.7ರಷ್ಟು ಹೆಚ್ಚಳವಾದರೆ ವಿಶ್ವ ದಾಖಲೆಯಾಗುವುದು ಎಂದು ಹೇಳಿರುವ ಚೆನ್, ಸಂಶೋಧನೆಯು ಕೇವಲ ಪ್ರಾರಂಭವಾಗಿದೆ. ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ಮೌಲ್ಯಮಾಪನ ಮಾಡುವ ಮೊದಲು ಮತ್ತು ಔಷಧವಾಗಿ ಅಭಿವೃದ್ಧಿಪಡಿಸುವ ಮೊದಲು ಇನ್ನೂ ಅನೇಕ ವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಯಾವುದೇ ನಿರೀಕ್ಷಿತ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಮೊದಲು ಮಾನವರಿಗೆ ಹೆಚ್ಚು ಹೋಲುವ ದೊಡ್ಡ ಸಸ್ತನಿಗಳಲ್ಲಿ ಪ್ರಯೋಗಗಳನ್ನು ನಡೆಸಬೇಕು ಎಂದು ಹೇಳಿದರು

Continue Reading

ಲೈಫ್‌ಸ್ಟೈಲ್

Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಅಕ್ಷಯ ತೃತೀಯವನ್ನು ಈ ಬಾರಿ ಮೇ 10ರಂದು ಆಚರಿಸಲಾಗುತ್ತಿದ್ದು, ಈ ದಿನ ಮನೆಮನೆಯಲ್ಲಿ ಸಮೃದ್ಧಿ (Akshaya Tritiya 2024) ತುಂಬ ಬೇಕಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳಿವೆ. ಅವುಗಳು ಯಾವುದು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Akshaya Tritiya-2024
Koo

ಸಮೃದ್ಧಿಯ ಸಂಕೇತ ಅಕ್ಷಯ ತೃತೀಯವನ್ನು (Akshaya Tritiya 2024) ಮಂಗಳಕರ ದಿನವೆಂದು ಕರೆಯಲಾಗುತ್ತದೆ. ಈ ದಿನ ಏನೇ ಖರೀದಿ ಮಾಡಿದರೂ ಅದು ದ್ವಿಗುಣವಾಗುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ಮೇ 10ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಮಾಡಬೇಕಾದ (dos) ಮತ್ತು ಮಾಡಬಾರದ (dont) ಕೆಲವು ಸಂಗತಿಗಳಿವೆ. ಈ ಬಗ್ಗೆ ತಿಳಿದುಕೊಂಡು ಅನುಸರಿಸಿದರೆ ಮನೆಮನೆಯಲ್ಲೂ ಸುಖ ಶಾಂತಿ ಸಮೃದ್ಧಿಯನ್ನು ತುಂಬಿಸಿಕೊಳ್ಳಬಹುದು.

ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಆಚರಿಸುತ್ತಾರೆ. ಇದು ‘ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ’ ಎಂದು ನಂಬಲಾಗುತ್ತದೆ.


ಈ ದಿನವನ್ನು ತಮ್ಮನ್ನು ತೊರೆದ ಪ್ರೀತಿಪಾತ್ರರನ್ನು ನೆನಪಿಸಲಾಗುತ್ತದೆ. ಉಪವಾಸ, ದಾನ ಮತ್ತು ಪರಸ್ಪರ ಸಹಾಯ ಮಾಡುವ ಮೂಲಕ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಹೊಸ ಉದ್ಯಮ, ಮದುವೆಗಳು, ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಅಕ್ಷಯ ತೃತೀಯವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಅಕ್ಷಯ ತೃತೀಯದ ಮಹತ್ವ

ಅಕ್ಷಯ ತೃತೀಯವು ಕೆಲವು ಪ್ರದೇಶದ ಮಹಿಳೆಯರಿಗೆ ತಮ್ಮ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಮದುವೆಯಾಗುವ ಪುರುಷರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವ ಹಬ್ಬವಾಗಿದೆ.

ಈ ದಿನ ದ್ರೌಪದಿಗೆ ಅಕ್ಷಯ ಪಾತ್ರೆ ಎಂಬ ಮಾಂತ್ರಿಕ ಬಟ್ಟಲನ್ನು ಕೃಷ್ಣ ನೀಡಿದ ಎನ್ನುವ ಕಥೆ ಇದೆ. ಅವಳು ತನ್ನ ಪತಿಯರೊಂದಿಗೆ ವನವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರ ಮನೆಗೆ ಅತಿಥಿಯಾಗಿ ಕೋಪಕ್ಕೆ ಹೆಸರುವಾಸಿಯಾದ ದೂರ್ವಾಸ ಋಷಿ ತಮ್ಮ ಶಿಷ್ಯರೊಂದಿಗೆ ಆಗಮಿಸುತ್ತಾರೆ. ಆಗ ದ್ರೌಪದಿಯ ಬಳಿ ಅವರಿಗೆ ನೀಡಲು ಏನೂ ಇರುವುದಿಲ್ಲ. ಕೃಷ್ಣ ಅಲ್ಲಿಗೆ ಬಂದು ಅವರ ಬಟ್ಟಲಿನಲ್ಲಿದ್ದ ಒಂದು ಅಗುಳು ಅನ್ನವನ್ನು ತಿಂದು ಋಷಿ ಮುನಿಗಳೆಲ್ಲ ಸಂತೃಪ್ತರಾಗುವಂತೆ ಮಾಡಿದ. ಅಲ್ಲದೇ ಋಷಿಯು ಪಾಂಡವರನ್ನು ಶಪಿಸದಂತೆ ತಡೆದ. ಈ ದಿನವು ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮದಿನವೆಂದೂ ನಂಬಲಾಗಿದೆ. ಈ ಬಾರಿ ಅಕ್ಷಯ ತೃತೀಯವನ್ನು ಮೇ 10ರಂದು ಆಚರಿಸಲಾಗುತ್ತಿದ್ದು, ಮನೆಯಲ್ಲಿ ಸಮೃದ್ಧಿ ತುಂಬ ಬೇಕಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳಿವೆ.


ಏನು ಮಾಡಬಹುದು?

ಚಿನ್ನವನ್ನು ಖರೀದಿಸಿ

ಅಕ್ಷಯ ತೃತೀಯದ ಪವಿತ್ರ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಬಹುದು. ಯಾಕೆಂದರೆ ಅದು ನಿಮ್ಮನ್ನು ಶ್ರೀಮಂತಗೊಳಿಸುತ್ತದೆ ಅಥವಾ ನಿಮ್ಮ ಬಳಿ ಇರುವ ಹಣವನ್ನು ದುಪ್ಪಟ್ಟು ಮಾಡಲು ಸಹಾಯ ಮಾಡುತ್ತದೆ.

ಹೊಸ ವ್ಯವಹಾರ ಪ್ರಾರಂಭ

ಅಕ್ಷಯ ತೃತೀಯ ಹೊಸ ಉದ್ಯಮವನ್ನು ಪ್ರಾರಂಭಿಸಲು ಒಳ್ಳೆಯ ದಿನ ಎಂದು ನಂಬಲಾಗಿದೆ. ಉದಾಹರಣೆಗೆ ಹೊಸ ವ್ಯಾಪಾರವನ್ನು ಪ್ರಾರಂಭಿಸುವುದು ಅಥವಾ ಕಾರು ಖರೀದಿಸುವುದನ್ನು ಈ ದಿನ ಮಾಡಬಹುದು.

ಹೂಡಿಕೆ

ಅಕ್ಷಯ ತೃತೀಯದಂದು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಮಂಗಳಕರ ದಿನವಾಗಿದೆ. ಯಾಕೆಂದರೆ ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಆಧ್ಯಾತ್ಮಿಕ ಚಟುವಟಿಕೆ

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಪ್ರಾರ್ಥನೆ, ಧ್ಯಾನ ಮತ್ತು ಯಜ್ಞದಂತಹ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಬೇಕು.

ಸಾತ್ವಿಕ ಆಹಾರ

ಈ ದಿನ ವಿಷ್ಣುವನ್ನು ಪೂಜಿಸುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೆ ಶುದ್ಧ ಸಾತ್ವಿಕ ಆಹಾರವನ್ನೇ ದೇವರಿಗೆ ಅರ್ಪಿಸಿ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಇಂದು ಖರೀದಿಗೆ ಮುನ್ನ ದರದ ಜೊತೆಗೆ ಇದು ತಿಳಿದಿರಲಿ

ಏನು ಮಾಡಬಾರದು?
ಕತ್ತಲೆ ದೂರ ಮಾಡಿ

ಅಕ್ಷಯ ತೃತೀಯದಂದು ಮನೆಯ ಕೋಣೆಯನ್ನು ಕತ್ತಲೆ ಮಾಡಬೇಡಿ. ಈ ಅದೃಷ್ಟದ ದಿನದಂದು ಅದೃಷ್ಟದ ಬೆಳಕು ನಿಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ಬೆಳಗಿಸಲಿ ಮತ್ತು ಯಾವುದೇ ಕೋಣೆ ಕತ್ತಲೆಯಾಗದಂತೆ ನೋಡಿಕೊಳ್ಳಿ.

ಒಟ್ಟಿಗೆ ಪೂಜಿಸಿ

ಗಣೇಶ ಮತ್ತು ಲಕ್ಷ್ಮಿ ದೇವರನ್ನು ಪ್ರತ್ಯೇಕವಾಗಿ ಪೂಜಿಸಬೇಡಿ. ಈ ದಿನ ಈ ಎರಡೂ ದೇವರನ್ನು ಒಟ್ಟಿಗೆ ಪ್ರಾರ್ಥಿಸುವುದು ಹೆಚ್ಚು ಸಮೃದ್ಧಿಯನ್ನು ತರುತ್ತದೆ.

ಬರಿಗೈಯಲ್ಲಿ ಬರಬೇಡಿ

ಅಕ್ಷಯ ತೃತೀಯದಂದು ಶಾಪಿಂಗ್ ಮಾಡಲು ಹೋದಾಗ ಏನನ್ನಾದರೂ ಖರೀದಿಸಿ. ಚಿನ್ನ ಅಥವಾ ಬೆಳ್ಳಿ ಅಲ್ಲದಿದ್ದರೂ, ಲೋಹದ ಆಭರಣವನ್ನು ಪಡೆಯುವುದು ನಿಮ್ಮ ಮನೆಗೆ ಸಂಪತ್ತನ್ನು ತರುತ್ತದೆ.

ಪವಿತ್ರ ದಾರ

ಅಕ್ಷಯ ತೃತೀಯದಂದು ಹೆಚ್ಚು ಹೊತ್ತು ಪವಿತ್ರ ದಾರವನ್ನು ಧರಿಸುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ.

Continue Reading
Advertisement
Anand Mahindra
ಪ್ರಮುಖ ಸುದ್ದಿ30 seconds ago

Anand Mahindra: ತಂದೆ ಸಾವಿನ ಬಳಿಕ ಕಷ್ಟದಲ್ಲಿದ್ದ ಬಾಲಕನ ಶಿಕ್ಷಣಕ್ಕೆ ಆನಂದ್‌ ಮಹೀಂದ್ರಾ ನೆರವು!

Asha Sobhana
ಕ್ರೀಡೆ10 mins ago

Asha Sobhana : ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ಸಿಬಿ ಆಟಗಾರ್ತಿ

Lok Sabha Election-2024
ಕರ್ನಾಟಕ36 mins ago

ನಾಳೆ ಎರಡನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 hour ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

IPL 2024
ಕ್ರೀಡೆ1 hour ago

IPL 2024 : ಪೃಥ್ವಿ ಶಾ ಗರ್ಲ್​​ ಫ್ರೆಂಡ್​​​ ನಿಧಿಯನ್ನು ತಬ್ಬಿ ಅಭಿನಂದಿಸಿದ ಶಾರುಖ್​ ಖಾನ್​​

CM Siddaramaiah
ಪ್ರಮುಖ ಸುದ್ದಿ1 hour ago

CM Siddaramaiah: ಚುನಾವಣೆಯಲ್ಲಿ ʼಕೈʼ ಬಲಪಡಿಸಿ; ನಾಡಿನ ಮಹಿಳೆಯರಿಗೆ ಸಿಎಂ ಬಹಿರಂಗ ಪತ್ರ

Arvind Kejriwal
ದೇಶ2 hours ago

Arvind Kejriwal: ಖಲಿಸ್ತಾನಿ ಉಗ್ರರಿಂದ ದೇಣಿಗೆ; ಕೇಜ್ರಿವಾಲ್‌ ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು!

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Female foeticide
ಪ್ರಮುಖ ಸುದ್ದಿ2 hours ago

Female Foeticide: ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 hour ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌