ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ - Vistara News

ಶ್ರದ್ಧಾಂಜಲಿ

ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ

ತಮ್ಮ ಬದುಕಲ್ಲಿ ಅಪರಿಮಿತ ಸಾಹಸ, ಛಲ ಮತ್ತು ದೇಶಭಕ್ತಿಯಿಂದ ಹೋರಾಡಿ ದೇಶಕ್ಕಾಗಿ ಬಲಿದಾನಿಯಾದವರು ಕ್ಯಾಪ್ಟನ್ ವಿಕ್ರಂ ಬಾತ್ರಾ. ವಿಕ್ರಂ ಬಾತ್ರಾರವರ ತಂಡ ವಶಪಡಿಸಿಕೊಂಡ ಪಾಯಿಂಟ್ 4875 ಕಾರ್ಗಿಲ್‍ನಲ್ಲಿ “ಬಾತ್ರಾ ಟಾಪ್” ಎಂದೇ ಪ್ರಸಿದ್ಧವಾಗಿದೆ.

VISTARANEWS.COM


on

vikram batra captain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
mayuralakshmi

ಜುಲೈ 26, 1999, ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ಅಪ್ರತಿಮ ಐತಿಹಾಸಿಕ ದಿನ.
ಅದು ಕಾರ್ಗಿಲ್ ಯುದ್ಧದ ವಿಜಯ ದಿನ!
ಶ್ರೀನಗರದಿಂದ 205 ಕಿಲೋ ಮೀಟರ್ ದೂರದಲ್ಲಿರುವ “ಕಾರ್ಗಿಲ್” ಜಿಲ್ಲೆ.
ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯ ಉತ್ತರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-1ರ ಕಡೆಗೆ ಪಾಪಿ ಪಾಕಿಸ್ತಾನ್ ಸೈನಿಕರು ನುಸುಳಿದ್ದರು.
ಇದನ್ನು ಕಂಡು ಅಲ್ಲಿನ ದನಗಾಹಿಗಳು ನಮ್ಮ ಸೈನಿಕರ ಗಮನಕ್ಕೆ ತಂದ ನಂತರ ಆರಂಭವಾದ ಸಶಸ್ತ್ರ ಯುದ್ಧವೇ “ಕಾರ್ಗಿಲ್ ಯುದ್ಧ”!

ಮೇ 3, 1999ರಿಂದ ಆರಂಭವಾಗಿ ಜುಲೈ ತಿಂಗಳ 26ರರವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ಭಾರತಾಂಬೆಯ ಮಡಿಲಲ್ಲಿ ವೀರಸ್ವರ್ಗ ಪಡೆದ ಕಾರ್ಗಿಲ್ ಯುದ್ಧದ ವಿಜಯ ದಿನವನ್ನು ಇಡೀ ದೇಶ ವಿಝ್ರಂಭಿಸಿತು.
ಇಪ್ಪತ್ತು ವರ್ಷಗಳ ಹಿಂದೆ ಕಾರ್ಗಿಲ್ ಕದನದಲ್ಲಿ ನಮ್ಮ ಯೋಧರು ಹಗಲಿರುಳೆನ್ನದೆ ಧೈರ್ಯ, ಸಾಹಸ ಮತ್ತು ಬಲಿದಾನಗಳ ಕುರುಹಾಗಿ ಇಂದಿಗೂ ಅತ್ಯಂತ ರೋಚಕ ಯುದ್ಧದ ನೆನಪುಗಳು ಹಸಿರಾಗಿವೆ.

ಹಿಮಾಚಲ ಪ್ರದೇಶದ ಪಾಲಂಪುರ್‍ನಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿದ್ದ ಗಿರಿಧಾರಿ ಲಾಲ್ ಬಾತ್ರಾ ಮತ್ತು ಕಮಲ್ ಕಾಂತಾ ಬಾತ್ರಾ ಅವರಿಗೆ ಸೆಪ್ಟೆಂಬರ್ 9, 1974ರಂದು ಇಬ್ಬರು ಅವಳಿ ಮಕ್ಕಳು ಜನಿಸಿದರು. ಅವರ ಹೆಸರುಗಳು ವಿಕ್ರಂ ಮತ್ತು ವಿಶಾಲ್ ಪ್ರೀತಿಯಿಂದ ಪೋಷಕರು ಅವರನ್ನು ಲವ ಮತ್ತು ಕುಶ ಎಂದು ಕರೆಯುತ್ತಿದ್ದರು.
ಇಬ್ಬರಿಗೂ ಭಾರತೀಯ ಸೇನೆ ಸೇರಬೇಕೆಂಬ ಹಂಬಲವಿತ್ತು. ವಿಶಾಲ್ ಬಾತ್ರಾ ಸತತ ಮೂರು ಬಾರಿ ಪ್ರಯತಿಸಿದರೂ ಸಫಲರಾಗಲಿಲ್ಲ.

ವಿಕ್ರಂ ಬಾತ್ರಾ ತನ್ನ ಮೊದಲನೇ ಪ್ರಯತ್ನದಲ್ಲೇ ಸಫಲರಾಗಿ ಸರ್ವಿಸ್ ಸೆಲೆಕ್ಷನ್ ಬೋರ್ಡ್‍ನಿಂದ ಆಯ್ಕೆಯಾದರು.
ಬಾಲ್ಯದಿಂದಲೂ ಅಪ್ರತಿಮ ಸಾಹಸಿಯಾಗಿದ್ದ ವಿಕ್ರಂ ಪಾಲಂಪುರದ ಡಿಏವಿ ಪಬ್ಲಿಕ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ನಂತರ ಅಲ್ಲಿನ ಸೆಂಟ್ರಲ್ ಶಾಲೆಯಲ್ಲಿ ಓದಿದರು. ಮುಂದೆ ಚಂದಿಗಢದ ಡಿಏವಿ ಕಾಲೇಜಲ್ಲಿ ಬಿಎಸ್‍ಸಿ ಓದುವಾಗಲೇ ಅತ್ಯುತ್ತಮ ಎನ್‍ಸಿಸಿ ಕ್ಯಾಡೇಟ್ ಎನಿಸಿಕೊಂಡರು. ಮೊದಲಿಗೆ 1006ರಲ್ಲಿ ಭಾರತೀಯ ಸೇನೆಯ ದೆಹರಾದೂನ್‍ನಲ್ಲಿ ಸೇರ್ಪಡೆಯಾಗಿ ನಂತರ ಮಾಣಿಕ್ ಶಾ ಬೆಟಾಲಿಯನ್‍ನ ಜೆಸ್ಸೋರ ಕಂಪನಿಯಲ್ಲಿ ಸೇರಿದರು.
13-ಜಮ್ಮು-ಕಾಶ್ಮೀರ್ ರೈಫಲ್ಸ್‍ಗೆ ಲೆಫ್ಟಿನೆಂಟ್ ಆಗಿ ಕಳುಹಿಸಲ್ಪಟ್ಟರು.

ನಂತರ ಜಬಲ್‍ಪುರ, ಮಧ್ಯಪ್ರದೇಶದಲ್ಲಿ ಡಿಸೆಂಬರ್ 1997ರಿಂದ ಜನವರಿ 1998ವರೆಗೆ ತರಬೇತಿ.
ಜಮ್ಮು ಕಾಶ್ಮೀರದ ಬಾರಮುಲ್ಲಾದಲ್ಲಿ ತೀವ್ರ ಆತಂಕವಾದಿಗಳ ಚಟುವಟಿಕೆಗಳು ನಡೆಯುತ್ತಿದ್ದ ಸಮಯ, ಸೋಪೋರ್ ಮತ್ತು ಕಾಶ್ಮೀರದದಲ್ಲಿ ಆಫೀಸರ್ ತರಬೇತಿ ಪಡೆದರು. ಪ್ರಶಿಕ್ಷಣ ಮುಗಿದ ನಂತರ ಮತ್ತೆ ಸೋಪೋರ್‍ಗೆ ಹಿಂತಿರುಗಿ ತೀವ್ರವಾದಿಗಳೊಂದಿಗೆ ಹೋರಾಡಿದರು. ಜನವರಿ 1999ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಕಮಾಂಡೋ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ಊರಾದ ಪಾಲಂಪುರಕ್ಕೆ ರಜೆಗಾಗಿ ತೆರಳಿದ್ದ ಸಮಯದಲ್ಲಿ ತಮ್ಮ ಸ್ನೇಹಿತನ ಬಳಿ ಅವರು ಹೇಳಿದ್ದು: “ಯುದ್ಧದ ಸಂದರ್ಭ ಎದುರಾದಲ್ಲಿ ನಾನು ನನ್ನ ದೇಶದ ಧ್ವಜವನ್ನು ಹಾರಿಸುತ್ತೇನೆ ಅಥವಾ ಧ್ವಜವನ್ನೇ ಹೊದೆದ ನನ್ನ ದೇಹ ಹಿಂತಿರುಗುತ್ತದೆ” ಎಂದು.

ಅವರ ನುಡಿ ನಿಜವಾಗುವ ಸಮಯ ಬಹು ಬೇಗ ಅವರ ಬದುಕಲ್ಲಿ ಎದುರಾಯಿತು. ಸೋಪೋರ್‍ನ 13-ಜೆ-ಕೆ ರೈಫಲ್ಸ್‍ನಲ್ಲಿದ್ದಾಗ ಉತ್ತರ ಪ್ರದೇಶದ ಶಾಹಜಾನ್‍ಪುರಕ್ಕೆ ತೆರಳಲು ಸೂಚನೆ ಬಂದಿತು. ನಂತರ ಕಾರ್ಗಿಲ್ ಯುದ್ಧಾರಂಭದ ಸೂಚನೆಯ ಮೇರೆಗೆ ಅಲ್ಲಿಂದ ಜಮ್ಮು-ಕಾಶ್ಮೀರದ ಡ್ರಾಸ್‍ಗೆ ಹೊರಡಲು ಆದೇಶ ಬಂದಿತು.
ತನ್ನ ತಂದೆ-ತಾಯಿಗೆ ತಾನು ಕ್ಷೇಮವಾಗಿರುತ್ತೇನೆ ಮತ್ತು ಪ್ರತಿ ಹತ್ತು ದಿನಗಳಿಗೊಮ್ಮೆ ಕರೆ ಮಾಡುವುದಾಗಿ ತಿಳಿಸಿ ಹೊರಟರು.

1999, ಜೂನ್ 6..
ರಾಜಪುತಾನಾ ರೈಫಲ್ಸ್ ಯೋಧರು ಡ್ರಾಸ್‍ನಿಂದ ಹೊರಟು ಟೋಲೋಲಿಂಗ್ ಪರ್ವತವನ್ನು ಜೂನ್ 13ಕ್ಕೆ ತಲುಪಿದರು. ಅವರ ತಂಡದ 18 ಗ್ರೆನೇಡಿಯರ್ಸ್ ಅಲ್ಲಿದ್ದ ಪಾಕ್ ಸೈನಿಕರ ಮೇಲೆ ದಾಳಿ ಮಾಡಿದರು. ನಾಲ್ಕು ದಿನಗಳಲ್ಲಿ ಪಾಯಿಂಟ್ 5100, 4700, ಶಿಖರವನ್ನು ಸುತ್ತುವರಿದಿದ್ದ ಮೂರು ಪ್ರಮುಖ ಕಾಂಪ್ಲೆಕ್ಸ್‍ಗಳನ್ನು ವಶಪಡಿಸಿಕೊಂಡರು. ಜೂನ್ 17ಕ್ಕೆ ಲೆಫ್ಟಿನೆಂಟ್ ಕರ್ನಲ್ ಯೋಗೇಶ್ ಕುಮಾರ್ ಜೋಶಿ ನೇತೃತ್ವದಲ್ಲಿ 13-ಜೆ-ಕೆ ರೈಫಲ್ಸ್ ಪಡೆ ಟೋಲೋಲಿಂಗ್ ಪರ್ವವನ್ನೇರಿದರು. ಪಾಯಿಂಟ್ 5140 ಬಳಿ ಬೃಹತ್ ಬಂಡೆಯನ್ನು ವಶಪಡಿಸಿಕೊಂಡ ನಂತರ ಶತೃಗಳೊಡನೆ ತೀವ್ರ ಹೋರಾಟ ನಡೆಯಿತು. ಅಲ್ಲಿ ಶತೃ ಪಡೆಯ ಏಳು ಸಂಗಾರ್‍ಗಳನ್ನು ಕರ್ನಲ್ ಜೋಶಿ, ಸಂಜೀವ್ ಜಮ್ವಾಲ್ ಮತ್ತು ವಿಕ್ರಂ ಬಾತ್ರಾರೊಡನೆ ಎದುರಿಸಿದರು.

ವಿಕ್ರಂ ಬಾತ್ರಾ ಎದುರಾಗುತ್ತಿದ್ದ ಶತೃಗಳನ್ನು ನೋಡಿ “ಯೇ ದಿಲ್ ಮಾಂಗೇ ಮೋರ್” ಇನ್ನಷ್ಟು ಶತೃಗಳು ಬರಲಿ ಸದೆಬಡಿಯುವೆ ಎಂದು ಘರ್ಜಿಸಿ ತಮ್ಮವರನ್ನು ಹುರಿದುಂಬಿಸುತ್ತಾ ಹೋರಾಡುತ್ತಿದ್ದರು. ಭಾರತೀಯ ಯೋಧರಿಗೆ ಯಾವುದೇ ಸಾವು-ನೋವುಗಳಾಗದೇ ಪಾಯಿಂಟ್ 5140 ವಶಪಡಿಸಿಕೊಂಡರು. ಬ್ರಿಗೇಡ್ ಹೆಡ್‍ಕ್ವಾರ್ಟ್ಸ್‍ಗೆ ಸುದ್ದಿ ತಲುಪಿತು. ಅಂದಿನ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಸ್ವತ: ಬಾತ್ರಾರವರಿಗೆ ಕರೆ ಮಾಡಿ ಶುಭಾಶಯ ಕೋರಿದರು. ಅವರಿಗೆ ಕೂಡಲೇ ಕ್ಯಾಪ್ಟನ್ ಹುದ್ದೆಗೆ ಭಡ್ತಿ ನೀಡಲಾಯಿತು.

ಪಾಯಿಂಟ್ 4875 ವಶ:

26 ಜೂನ್, 13-ಜೆ-ಕೆ ರೈಫಲ್ಸ್ ಪಡೆ ಡ್ರಾಸ್‍ನಿಂದ ಘುಮರಿಗೆ ವಿಶ್ರಮಿಸಲು ತೆರಳಿತು. ಅಲ್ಲಿಂದ ಜೂನ್ 39ರಂದು ಪಯಣಿಸಿ ಮುಷೋಕ್ ಕಣಿವೆ ತಲುಪಿದರು. 79 ಪರ್ವತ ಬ್ರಿಗೇಡ್‍ನ ಕಮಾಂಡ್‍ನಲ್ಲಿ ಚಟುವಟಿಕೆಗಳು ಮತ್ತಿ ಆರಂಭವಾಯಿತು. ಶತೃಗಳು ಮುಷೋಕ್ ಕಣಿವೆಯನ್ನು ಸುತ್ತುವರೆದಿದ್ದು ಅಲ್ಲಿನ ಬಹು ಮುಖ್ಯ ಶಿಖರ ತುದಿ ಪಾಯಿಂಟ್ 4875 ವಶಪಡಿಸಿಕೊಂಡಿದ್ದರು. “ಪಾಯಿಂಟ್ 4875” ಡ್ರಾಸ್‍ನಿಂದ ಮಾತಯಾನ್‍ವರೆಗೆ ನ್ಯಾಶನಲ್ ಹೈವೇ 1 ಸರಹದ್ದಿಗೆ ಬಹು ಸಮೀಪ. ಮುಂದೆ ಶತೃಗಳು ಮುಂದುವರೆದರೆ ಇನ್ನಷ್ಟು ಅಪಾಯ.

ಆದ್ದರಿಂದ ಭಾರತೀಯ ಸೇನೆ ಅದನ್ನು ಮರಳಿ ಪಡೆಯುವುದು ಅವಶ್ಯಕವಾಗಿತ್ತು. ಜುಲೈ 1 ಮೇಜರ್ ವಿಜಯ ಭಾಸ್ಕರ್, ಕರ್ನಲ್ ಜೋಶಿ ತಂಡ ಶತೃಗಳ ಮೇಲೆ ದಾಳಿ ನಡೆಸಲು ಯೋಚಿಸಿ ಹೆಡ್‍ಕ್ವಾರ್ಟಸ್ ಬಳಿ ತೆರಳಿದರು.
ಅದೇ ಸಮಯದಲ್ಲಿ “13-ಜೆ-ಕೆ ರೈಫಲ್ಸ್” ಪಡೆ ಸಪೋರ್ಟ್ ಬೇಸ್ ಬಳಿ ಬಂದಾಗಿತ್ತು. ಅದು ಪಾಯಿಂಟ್ 4875ನಿಂದ 1500 ಮೀಟರ್ ಅಂತರದಲ್ಲಿತ್ತು. “13-ಜೆ-ಕೆ ರೈಫಲ್ಸ್” ಜುಲೈ 2 ಮತ್ತು 3ರಂದು “28-ರಾಷ್ಟ್ರೀಯ ರೈಫಲ್ಸ್” ಜೊತೆಗೂಡಿ ಆಯುಧಗಳೊಡನೆ ಸಜ್ಜಾದರು. ಜುಲೈ 3ರಂದು ಸಂಜೆ 6 ಗಂಟೆಯ ಸುಮಾರು ಶತೃಗಳು ದಾಳಿ ಆರಂಭಿಸಿದರು.
ಮರುದಿನವೂ ದಾಳಿ ತೀವ್ರವಾಯಿತು. ಭಾರತದ ಎರಡೂ ಪಡೆಗಳು ಅಂದು ರಾತ್ರಿಯೆಲ್ಲಾ ಪಾಕ್ ಸೈನಿಕರ ಮೇಲೆ ಬೋಫರ್ಸ್ ಹೊವಿಟ್ಸರ್ಸ್ ಮತ್ತು ಫೀಲ್ಡ್ ಗನ್‍ಗಳೊಡನೆ ಆಕ್ರಮಣ ಮಾಡಿದರು.

ಜುಲೈ 5ರಂದು ಪಾಯಿಂಟ್ 4875 ಆರೋಹಣ ಆರಂಭಸಿದರು. ಒಂದೆಡೆ ಕರ್ನಲ್ ಜೋಶಿಯವರ ಆದೇಶದಂತೆ ಸೈನಿಕರು ಮುನ್ನುಗ್ಗುತ್ತಿದ್ದರು. ಮತ್ತೊಂದೆಡೆ ವಿಕ್ರಂ ಬಾತ್ರಾ ಮುಷೋಕ್‍ನುಲ್ಲಾ ಬಳಿ ತೀವ್ರ ಜ್ವರ ಮತ್ತು ಆಯಾಸದಿಂದಾಗಿ ತಮ್ಮ ಟಂಟ್‍ನ ಬಳಿ ಸ್ಲೀಪಿಂಗ್ ಬ್ಯಾಗ್‍ನಲ್ಲಿ ವಿಶ್ರಮಿಸುತ್ತಿದ್ದರು. ಮುಂಜಾವು ಬೆಳಕು ಹರಿಯತೊಡಗಿತು. ಪಾಕಿಸ್ತಾನಿ ಸೈನಿಕರಿಗೆ ಸುಲಭವಾಗಿ ಭಾರತೀಯ ಪಡೆ ಕಾಣುವಂತಹ ಅಪಾಯಕರ ಸ್ಥಿತಿ.
ಶತೃಗಳು ಎಡಬಿಡದೆ ಫೈರಿಂಗ್ ನಡೆಸಿ ಭಾರತೀಯ ಪಡೆಯನ್ನು ತಡೆ ಹಿಡಿದರು. ಜುಲೈ 6ರಂದು ಭಾರತದ ಸೈನಿಕರು ಪಾಯಿಂಟ್ 4875 ಪಡೆಯುವ ಪ್ರಯತ್ನವನ್ನು ಅಲ್ಪವಾಗಿ ತಡೆಹಿಡಿದರೂ ದಾಳಿ ಮುಂದುವರೆದಿತ್ತು.13-ಜೆ-ಕೆ ರೈಫಲ್ಸ್ ಯೋಧರು ಮುಖ್ಯವಾದ ಏರಿಯಾ ಫ್ಲಾಟ್ ಟಾಪ್ ವಶಪಡಿಸಿಕೊಂಡರು.

ಕ್ಷಣಗಳಲ್ಲೇ ಪಾಕಿಸ್ತಾನಿ ಸೇನೆ ಕೌಂಟರ್ ಅಟ್ಯಾಕ್ ನಡೆಸಿತು. ಎರಡೂ ಬದಿಯಿಂದ ಮರುದಿನದವರೆಗೂ ಆಕ್ರಮಣ ನಡೆಯಿತು. ಮರುದಿನ ಮುಂಜಾನೆ ಪಾಕ್ ಸೈನಿಕರು ಗ್ರೆನೇಡ್ ದಾಳಿ ಮಾಡಿದರು. ಅಲ್ಲಿಂದ ಹಾರಿ ಬಂದ ಷೆಲ್ ಶಿಖರದ ತುದಿಯಲ್ಲಿದ್ದ ಕರ್ನಾಟಕ ಮೂಲದ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರ ಕಾಲ ಬಳಿ ಬಿತ್ತು. ಅದನ್ನು ಪುನ: ದೂರಕ್ಕೆ ಎಸೆಯುವ ಪ್ರಯತ್ನ ವಿಫಲವಾಗಿ ನವೀನ್ ಅವರ ಹತ್ತಿರದಲ್ಲೇ ಸಿಡಿದು ಅವರನ್ನು ತೀವ್ರವಾಗಿ ಗಾಯಗೊಳಿಸಿತು. ಕೂಡಲೇ ಶತೃಗಳು ಮುಂದುವರೆಯತೊಡಗಿದರು. ವಿಕ್ರಂ ಬಾತ್ರಾ ತಾವಿದ್ದ ಸಪೋರ್ಟ್ ಬೇಸ್‍ನಿಂದ ಗಮನಿಸುತ್ತಿದ್ದರು. ತಮ್ಮ ಅನಾರೋಗ್ಯ ಸ್ಥಿತಿಯಲ್ಲಿ ಮುಂದುವರೆಯುವುದು ಬೇಡ ಎಂದು ಕರ್ನಲ್ ಜೋಶಿ ಹೇಳಿದರು. ಆದರೆ ವಿಕ್ರಂ ಬಾತ್ರಾ ಹಠದಿಂದ ಶತೃಗಳನ್ನು ಸದೆಬಡೆಯಲು ಮುಂದಾದರು.

ಅದೇ ದಿನ ಪಾಕ್ ಸೈನಿಕರು ಎರಡನೆಯ ಬಾರಿ ಪ್ರತಿದಾಳಿ ನಡೆಸತೊಡಗಿದರು. ಚಿಂತಾಜನಕ ಸ್ಥಿತಿಯಲ್ಲಿ ಗಾಯಗೊಂಡಿದ್ದ ನವೀನ್ ನಾಗಪ್ಪ ಅವರನ್ನು ಕೂಡಲೇ ತುರ್ತು ಚಿಕಿತ್ಸೆಗಾಗಿ ಕಳುಹಿಸಿದರು. ಬಾತ್ರಾರವರ ಅಚಲಿತ ನಿರ್ಧಾರ ಕಂಡು ಉಳಿದ ಸೈನಿಕರೂ ಅವರೊಡನೆ ಹೊರಟರು. 25 “ಡಿ ಕಾಯ್” ಯೋಧರೊಡನೆ ಬಾತ್ರಾ ದುರ್ಗಾ ಮಾತಾ ಗುಡಿಯಲ್ಲಿ ಪ್ರಾರ್ಥಿಸಿ ಶಿಖರವೇರತೊಡಗಿದರು. ಪಾಕಿಸ್ತಾನದವರು ತಮ್ಮವರಿಗೆ “ಷೇರ್‍ಶಾಹ” ಅಂದರೆ ವಿಕ್ರಂ ಬಾತ್ರಾ ಬರುತ್ತಿರುವುದಾಗಿ ವಯರ್‍ಲೆಸ್ ಮೆಸೇಜ್ ನೀಡಿದರು. ಜುಲೈ 6-7 ಎರಡೂ ಪಡೆಗಳ ನಡುವೆ ಫೈರಿಂಗ್ ನಡೆಯುತ್ತಿತ್ತು. ಭಾರತೀಯ ಸೇನೆಯ ಕೆಲವು ಬಂಕರ್‍ಗಳು ನಾಶವಾಗಿದ್ದವು.

ವಿಕ್ರಂ ಬಾತ್ರಾ ತಾವಿದ್ದ ಪಾಯಿಂಟ್ 5410ರಿಂದ ಗಾಯಗೊಂಡಿದ್ದ ತಮ್ಮ ಕೆಲವು ಸೈನಿಕರ ಬಳಿ ತೆರಳಿದರು.
ಕತ್ತಲಾಗತೊಡಗಿತ್ತು. ಮಂಜು ಮುಸುಕಿದ್ದ ಕಾರಣ ಪರ್ವತವೇರುವುದು ಕಷ್ಟವಾಗತೊಡಗಿತ್ತು. ಜೊತೆಗೆ ಹಿಮ ಸುರಿಯಲಾರಂಭಿಸಿತು. ಮೇಲೆ ಹತ್ತುತ್ತಿದ್ದಾಗ, ತಮ್ಮ ಸೈನಿಕರತ್ತ ಪಾಕಿಸ್ತಾನೀ ಮೆಷೀನ್ ಗನ್ ಗುರಿಯನ್ನು ಕಂಡು ಕೂಡಲೇ ಬಂಡೆಯ ಹಿಂದೆ ಅವಿತುಕೊಂಡು ಗುರಿಯಿಟ್ಟು ಒಂದು ಗ್ರೆನೇಡ್ ಸಿಡಿಸಿ ಮೆಷೀನ್ ಗನ್ ಸಿಡಿಸಿದರು. ತಮ್ಮನ್ನು ಹಿಂಬಾಲಿಸಲು ತಮ್ಮವರಿಗೆ ಮೆಲುದನಿಯಲ್ಲಿ ಹೇಳಿದರು. ಹದಿನಾರು ಸಾವಿರ ಅಡಿಗಳ ಎತ್ತರದಲ್ಲಿ ಉಸಿರಾಡಲೂ ಕಷ್ಟವಾಗಿದ್ದ ಸ್ಥಿತಿಯಲ್ಲಿ ಕಾಳಗ ನಡೆಯುತ್ತಿತ್ತು.

ಇನ್ನು ಎಡ-ಬಲದಿಂದ ಎದುರಿಸಿ ಪ್ರಯೋಜನವಿಲ್ಲ ಎಂದು ಅರಿತು ವಿಕ್ರಂ ಬಾತ್ರಾ ನೇರವಾಗಿ ಎದುರಿಸಲು ನಿರ್ಧರಿಸಿದರು. ಶತೃಗಳನ್ನೆದುರಿಸಲು ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಮುಂದುವರೆಯಲು ಪಣ ತೊಟ್ಟರು. ತಮ್ಮ ರೆಜಿಮೆಂಟ್ ಯೋಧರನ್ನು ಹುರಿದುಂಬಿಸುತ್ತಾ “ದುರ್ಗಾ ಮಾತಾ ಕೀ ಜೈ” ಎಂದು ಘೀಳಿಡುತ್ತಾ ಮುಂದುವರೆದರು. ಶತೃಗಳು ಎದುರು ನೋಡದ ರೀತಿಯಲ್ಲಿ ದಾಳಿ ನಡೆಸಿ ಐದು ಪಾಕಿಸ್ತಾನೀ ಸೈನಿಕರನ್ನು ತಮ್ಮ ಏಕೆ-47ನಿಂದ ಸಂಗಾರ್ ಫೈರಿಂಗ್ ನಡೆಸಿ ಕೊಂದರು.

ನಡೆದ ಆಕ್ರಮಣದಿಂದ ಅವರಿಗೆ ತೀವ್ರ ಗಾಯಗಳಾದರೂ ಲೆಕ್ಖಿಸದೆ ಮುನ್ನುಗ್ಗಿದರು. ಎದುರಲ್ಲಿ ಬಂದ ಪಾಕ್ ಸೈನಿಕನ ಮೇಲೆ ಆಕ್ರಮಣ ಮಾಡಿ ಹಿಡಿದು ಮೂಗಿನ ಮೇಲೆ ಪ್ರಹಾರ ಮಾಡಿದರು. ಹಿಂದಿನಿಂದ ಬಂದ ಮತ್ತೊಬ್ಬ ಪಾಕ್ ಸೈನಿಕ ಅವರನ್ನು ಬಲವಾಗಿ ಹಿಡಿದ. ಅವನನ್ನೂ ಎದುರಿಸಿ ತಮ್ಮೊಂದಿಗಿದ್ದ ತಮ್ಮ ಪಡೆಯ ಯೋಧನೊಬ್ಬನೊಡನೆ ಇನ್ನೂ ಏಳು ಶತೃಗಳನ್ನು ಸದೆಬಡಿದರು. ಇನ್ನಷ್ಟು ಶತೃಗಳು ಬರತೊಡಗಿದರು. ತಮ್ಮ ಯೋಧ ಸುಬೇದಾರ್ ರಘುನಾಥ್ ಸಿಂಗ್ ಅವರ ಗುಂಡಿಗೆ ಬಲಿಯಾದನು. ತಮ್ಮ ಮೇಲೆ ಸತತವಾಗಿ ನಡೆಯುತ್ತಿದ್ದ ಫೈರಿಂಗ್ ನಡುವೆ ಅವರನ್ನು ಸುರಕ್ಷಿತ ಸ್ಥಳದಲ್ಲಿರಿಸಿ ಅವರ ಜೀವ ಉಳಿಸಿ ಮತ್ತೆ ದಾಳಿ ಮಾಡಲು ಅನುವಾದರು.

ಇದ್ದಕ್ಕಿದ್ದಂತೆಯೇ ಶತೃಗಳ ಸ್ನಿಪರ್‍ನಿಂದ ಕ್ಲೋಸ್ ರೇಂಜ್‍ನಿಂದ ಗುಂಡು ನೇರವಾಗಿ ಹಾರಿ ಬಂದು ಅವರ ಎದೆಯನ್ನು ಹೊಕ್ಕಿತು. ಮತ್ತೊಂದು ಅವರ ಶಿರಕ್ಕೆ ತಗುಲಿತು. ಕೂಡಲೇ ತಾವು ಸುರಕ್ಷಿತಗೊಳಿಸಿದ ಸೈನಿಕನ ಸ್ವಲ್ಪ ಅಂತರದಲ್ಲಿ ವಿಕ್ರಂ ಬಾತ್ರಾ ಕುಸಿದರು. ತಾಯಿ ಭಾರತಾಂಬೆಯ ಮಡಿಲಲ್ಲಿ ವೀರ ಯೋಧನೊಬ್ಬ ಅಸ್ತಂಗತನಾದ. ನವೀನ್ ನಾಗಪ್ಪ ಅವರನ್ನು ಶ್ರೀನಗರದಿಂದ ದೆಹಲಿಗೆ ಏರ್ ಲಿಫ್ಟ್ ಮಾಡಿ ಸಾಗಿಸುತ್ತಿದ್ದಾಗ ಪಾಯಿಂಟ್ 4875ನ ಮೇಲೆ ಹಾರುತ್ತಿದ್ದ ಭಾರತದ ಧ್ವಜವನ್ನು ನೋಡಿ ಅಗಲಿದ ತಮ್ಮ ಹಿರಿಯ ಯೋಧ ಕ್ಯಾಪ್ಟನ್ ವಿಕ್ರಂ ಬಾತ್ರಾರವರನ್ನು ನೆನೆದು ತಮ್ಮ ನೋವಿನ ನಡುವೆ ದು:ಖಿಸಿದರು.

ಅವರು ವಿಕ್ರಂ ಬಾತ್ರಾರ ಸಾಹಸ ಗಾಥೆಯನ್ನು ಇಂದಿಗೂ ನೆನೆದು ಕಣ್ಣೀರಿಡುತ್ತಾರೆ. ಬೀಸುವ ಗಾಳಿಗೆ ಪ್ರತಿಸ್ಪಂದಿಸುತ್ತಾ ಹಾರುವ ನಮ್ಮ ದೇಶದ ಧ್ವಜ ಕೊನೆಯ ಉಸಿರಿರುವ ತನಕ ತನ್ನನ್ನು ಕಾಪಾಡಿದ ಸೈನಿಕನ ಸಾರ್ಥಕತೆಯನ್ನು ಹೆಮ್ಮೆಯಿಂದ ಸಾರುವುದು. ತಮ್ಮ ಬದುಕಲ್ಲಿ ಅಪರಿಮಿತ ಸಾಹಸ, ಛಲ ಮತ್ತು ದೇಶಭಕ್ತಿಯಿಂದ ಹೋರಾಡಿ ದೇಶಕ್ಕಾಗಿ ಬಲಿದಾನಿಯಾದವರು ಕ್ಯಾಪ್ಟನ್ ವಿಕ್ರಂ ಬಾತ್ರಾ. ವಿಕ್ರಂ ಬಾತ್ರಾರವರ ತಂಡ ವಶಪಡಿಸಿಕೊಂಡ ಪಾಯಿಂಟ್ 4875 ಕಾರ್ಗಿಲ್‍ನಲ್ಲಿ “ಬಾತ್ರಾ ಟಾಪ್” ಎಂದೇ ಪ್ರಸಿದ್ಧವಾಗಿದೆ. ಷೇರ್‍ಶಾಹ ಕ್ಯಾಪ್ಟನ್ ವಿಕ್ರಂ ಬಾತ್ರಾರವರಿಗೆ ಮರಣೋತ್ತರವಾಗಿ ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ ಪರಮ ವೀರ ಚಕ್ರವನ್ನು ನೀಡಿ ಭಾರತೀಯ ಸೇನೆ ಅವರನ್ನು ಗೌರವಿಸಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Jayashree Gurannavar: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅನಾರೋಗ್ಯದಿಂದ ನಿಧನ

Jayashree Gurannavar: ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡುತ್ತಾ ಗುರುತಿಸಿಕೊಂಡಿದ್ದ ಜಯಶ್ರೀ ಗುರನ್ನವರ್ ಅವರು, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟದ ಮೂಲಕ ಗಮನ ಸೆಳೆದಿದ್ದರು.

VISTARANEWS.COM


on

Jayashree Gurannavar
Koo

ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್(40) ಅವರು ಅನಾರೋಗ್ಯದಿಂದ ಬುಧವಾರ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹೋರಾಟಗಾರ್ತಿ(Jayashree Gurannavar), ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡುತ್ತಾ ಗುರುತಿಸಿಕೊಂಡಿದ್ದ ಜಯಶ್ರೀ ಅವರು, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟದ ಮೂಲಕ ಗಮನ ಸೆಳೆದಿದ್ದರು. ಇವರಿಗೆ ಒಬ್ಬ ಮಗ ಇದ್ದಾನೆ.

ಇದನ್ನೂ ಓದಿ | Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

ಕಬ್ಬಿನ ಬಾಕಿ ಬಿಲ್‌ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗುವ ಮೂಲಕ ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಈ ವೇಳೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಜಯಶ್ರೀ ಕುರಿತು ಹಗುರವಾಗಿ ಮಾತನಾಡಿ ಟೀಕೆಗೆ ಒಳಗಾಗಿದ್ದರು. ಬಳಿಕ ಜಯಶ್ರೀ ಅವರು ರಾಜ್ಯಾದ್ಯಂತ ಸಂಚಾರ ಮಾಡಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಯಲ್ಲಿ ರೈತ ಸಂಘಟನೆಯಲ್ಲಿ ಸೇರ್ಪಡೆ ಮಾಡಲು ಶ್ರಮಿಸಿದ್ದರು.

ಕಲಬುರಗಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಇನ್ನಿಲ್ಲ

Iqbal Ahmed Saradgi

ಕಲಬುರಗಿ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) (EX MP Iqbal Ahmed Saradgi) ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಇವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಹಾಗೂ ಮಾಜಿ ಸಿಎಂ ದಿ. ಧರ್ಮ ಸಿಂಗ್ (Dharm Singh) ಪರಮಾಪ್ತರಲ್ಲಿ ಒಬ್ಬರಾಗಿದ್ದರು.

ಕಲಬುರಗಿ (kalaburagi) ನಗರದಲ್ಲಿ 1944 ಜೂನ್ 5ರಂದು ಜನಿಸಿದ ಸರಡಗಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎಎಲ್ಎಲ್‌ಬಿ ಪದವಿ ಪಡೆದು, ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಗುಲ್ಬರ್ಗ ಸಾಮಾನ್ಯ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದರು. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೇಂದ್ರ ಹಜ್‌ ಸಮಿತಿ, ವಕ್ಫ್‌ ಮಂಡಳಿಗಳ ಸದಸ್ಯರೂ ಆಗಿದ್ದರು, ಕಳೆದ ಎರಡು ವರ್ಷದಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.

ಇದನ್ನೂ ಓದಿ | Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

ಕಳೆದ ಹಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಕಲಬುರಗಿಗೆ ಮರಳಿ ತಂದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ ಇರ್ಫಾನ್ ಅಹ್ಮದ್ ಸರಡಗಿ, ಪುತ್ರಿ ಡಾ.ಜಹೇರಾ ಸರಡಗಿ ಅವರನ್ನು ಅಗಲಿದ್ದಾರೆ.

Continue Reading

ಶ್ರದ್ಧಾಂಜಲಿ

Iqbal Ahmed Saradgi: ಕಲಬುರಗಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಇನ್ನಿಲ್ಲ

Iqbal Ahmed Saradgi: ಕಲಬುರಗಿಯ ಮಾಜಿ ಸಂಸದ ಕಳೆದ ಹಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

VISTARANEWS.COM


on

Iqbal Ahmed Saradgi
Koo

ಕಲಬುರಗಿ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) (EX MP Iqbal Ahmed Saradgi) ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಇವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಹಾಗೂ ಮಾಜಿ ಸಿಎಂ ದಿ. ಧರ್ಮ ಸಿಂಗ್ (Dharm Singh) ಪರಮಾಪ್ತರಲ್ಲಿ ಒಬ್ಬರಾಗಿದ್ದರು.

ಕಲಬುರಗಿ (kalaburagi) ನಗರದಲ್ಲಿ 1944 ಜೂನ್ 5ರಂದು ಜನಿಸಿದ ಸರಡಗಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎಎಲ್ಎಲ್‌ಬಿ ಪದವಿ ಪಡೆದು, ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಗುಲ್ಬರ್ಗ ಸಾಮಾನ್ಯ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದರು. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೇಂದ್ರ ಹಜ್‌ ಸಮಿತಿ, ವಕ್ಫ್‌ ಮಂಡಳಿಗಳ ಸದಸ್ಯರೂ ಆಗಿದ್ದರು, ಕಳೆದ ಎರಡು ವರ್ಷದಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.

ಕಳೆದ ಹಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಕಲಬುರಗಿಗೆ ಮರಳಿ ತಂದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ ಇರ್ಫಾನ್ ಅಹ್ಮದ್ ಸರಡಗಿ, ಪುತ್ರಿ ಡಾ.ಜಹೇರಾ ಸರಡಗಿ ಅವರನ್ನು ಅಗಲಿದ್ದಾರೆ.

ನಗರದ ಐವಾನ್- ಇ-ಶಾಹಿ ಪ್ರದೇಶದಲ್ಲಿರುವ ಸರಡಗಿ ನಿವಾಸದಲ್ಲಿ ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ಸಂಜೆ 5 ಗಂಟೆ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

ವಿಜಯನಗರ: ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಗಳ ದಿವ್ಯ ನಿರ್ಲಕ್ಷ್ಯದ ಪರಿಣಾಮ, ಹಂಪಿಯ ಸ್ಮಾರಕಗಳ ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.

ಹಂಪಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ವಿಜಯನಗರ ಸಾಮ್ರಾಜ್ಯದ ಕಾಲದ ಕಲ್ಲು ಮಂಟಪಗಳು ಇವಾಗಿದ್ದು, ಮಳೆಗೆ ಕುಸಿದುಬಿದ್ದಿವೆ. ಇವುಗಳನ್ನು ವಿಜಯನಗರ ಅರಸರು ನಿರ್ಮಿಸಿದ್ದರು. ಇವು ಪಂಪಾ ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತಿವೆ. ಇವು ಮೊದಲೇ ಶಿಥಿಲವಾಗಿದ್ದು, ದುರಸ್ತಿಯ ಅಗತ್ಯದಲ್ಲಿದ್ದವು.

ಹಂಪಿಯ ಸ್ಮಾರಕಗಳು ಯುನೆಸ್ಕೋ ಪಟ್ಟಿಗೆ ಸೇರಿವೆ. ಹೀಗಾಗಿಯೇ ಇವುಗಳನ್ನು ನೋಡಲು ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ ಪುರಾತತತ್ವ ಇಲಾಖೆ ಇವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಸ್ಮಾರಕಗಳ ರಕ್ಷಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಬರುತ್ತಿದ್ದರೂ, ಕೇಂದ್ರ ಪುರಾತತ್ವ ಇಲಾಖೆ ಇವುಗಳ ಸ್ಥಿತಿಗತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.

ಕಳೆದ ಒಂದು ವಾರದಿಂದ ವಿಜಯನಗರ ಜಿಲ್ಲಾದ್ಯಾಂತ ಉತ್ತಮ ಮಳೆಯಾಗುತ್ತಿದೆ. ಹಂಪಿಯಲ್ಲಿ ಇನ್ನಷ್ಟು ಶಿಥಿಲ ಸ್ಮಾರಕಗಳಿವೆ. ಸೂಕ್ತ ನಿರ್ವಹಣೆ ಇಲ್ಲದೇ ಇದ್ದಕ್ಕಿದ್ದಂತೆ ಉರುಳಿ ಬಿದ್ದಿರುವ ಸಾಲು ಮಂಟಪಗಳು, ಐತಿಹಾಸಿಕ ಹಂಪಿಯ ಸ್ಮಾರಕಗಳ ನಿರ್ವಹಣೆಯ ಸಮಸ್ಯೆಯತ್ತ ಬೆಟ್ಟು ಮಾಡಿವೆ.

ಇದನ್ನೂ ಓದಿ: Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

Continue Reading

ಶ್ರದ್ಧಾಂಜಲಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

ಲಕ್ಕೂರು ಆನಂದ ಅವರ ಶವ ಆಳಂದ‌ ತಾಲೂಕಿನ‌ ಕಡಗಂಚಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇವರು ಪಿಎಚ್‌ಡಿ ಮಾಡುತ್ತಿದ್ದರು. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

VISTARANEWS.COM


on

ಲಕ್ಕೂರು ಆನಂದ lakkuru Anand
Koo

ಕಲಬುರಗಿ: ಪ್ರತಿಭಾವಂತ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ (Central Sahitya Akademy) ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಕೂರು ಆನಂದ (Lakkuru Ananda) ಅವರು ಮೇ 20ರಂದು ನಿಧನ (Death news) ಹೊಂದಿದ್ದಾರೆ. ಪೊಲೀಸರು ಇದೊಂದು ಅನುಮಾನಾಸ್ಪದ ಸಾವು (UDR Case) ಎಂದು ‌ದೂರು ದಾಖಲಿಸಿಕೊಂಡಿದ್ದಾರೆ.

44 ವರ್ಷ ಪ್ರಾಯದ ಲಕ್ಕೂರು ಸಿ. ಆನಂದ ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಆಗಿದ್ದರು. ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.

ಇತ್ತೀಚೆಗೆ ತೆಲುಗು ಭಾಷೆಯಿಂದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಆನಂದರಿಗೆ ಸಂದಿದೆ.

ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳು.

ಆನಂದ್ ಅವರ ಶವ ಆಳಂದ‌ ತಾಲೂಕಿನ‌ ಕಡಗಂಚಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇವರು ಪಿಎಚ್‌ಡಿ ಮಾಡುತ್ತಿದ್ದರು. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

Continue Reading

ಶ್ರದ್ಧಾಂಜಲಿ

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

Raghunandan Kamath: ರಘುನಂದನ್ ಅವರ ನ್ಯಾಚುರಲ್ ಐಸ್ಕ್ರೀಂ 135ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ವಾರ್ಷಿಕವಾಗಿ 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಇವರ ಕಂಪನಿ ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ.

VISTARANEWS.COM


on

naturals ic cream raghunandan kamath
Koo

ಮುಂಬಯಿ: ಜನಪ್ರಿಯ ನ್ಯಾಚುರಲ್ಸ್ ಬ್ರಾಂಡ್‌ ಐಸ್‌ಕ್ರೀಂ (Naturals Ice cream) ಔಟ್‌ಲೆಟ್‌ಗಳನ್ನು ದೇಶಾದ್ಯಂತ ಸ್ಥಾಪಿಸಿ ಖ್ಯಾತಿ ಗಳಿಸಿ ʼದೇಶದ ಐಸ್‌ಕ್ರೀಂ ಮ್ಯಾನ್ʼ (India’s Ice cream man) ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕದ ಮಂಗಳೂರು ಮೂಲದ ರಘುನಂದನ್ ಕಾಮತ್ (75) (Raghunandan Kamath) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಪತ್ನಿ, ಪುತ್ರರನ್ನು ಅಗಲಿದ್ದಾರೆ.

ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ವಿವಿಧ ಹಣ್ಣುಗಳ ವಿಶಿಷ್ಟತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದನ್ನು ವಿಶಿಷ್ಟ ರೀತಿಯಲ್ಲಿ ಐಸ್‌ಕ್ರೀಂನಲ್ಲಿ ಪ್ರಯೋಗಿಸಿದರು. ಇವರು ತಮ್ಮ 14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ಅಲ್ಲಿ ಸೋದರರ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ 1984ರಲ್ಲಿ ನ್ಯಾಚುರಲ್ ಐಸ್‌ಕ್ರೀಂ ಎಂಬ ಸಂಸ್ಥೆಯನ್ನು ಕೇವಲ 4 ಸಿಬ್ಬಂದಿಯೊಂದಿಗೆ ಆರಂಭಿಸಿದರು.

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪಾವ್ ಭಾಜಿ ಜೊತೆ ಐಸ್‌ಕ್ರೀಂ ಕೊಡಲು ಆರಂಭಿಸಿದರು. ಇದಾದ ಕೆಲವೇ ದಿನಗಳಲ್ಲಿ ಇವರ ಐಸ್‌ಕ್ರೀಂ ಜನಪ್ರಿಯತೆ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ನ್ಯಾಚುರಲ್‌ ಐಸ್ಕ್ರೀಂ ರಾರಾಜಿಸಲು ಆರಂಭಿಸಿತು. ಇದಾದ ಮೊದಲ ವಾರದಲ್ಲಿಯೇ ಮುಂಬಯಿಯ ಜುಹೂದಲ್ಲಿದ್ದ ಅಂಗಡಿ ಒಂದೇ ವರ್ಷದಲ್ಲಿ 5 ಲಕ್ಷ ರೂ. ವಹಿವಾಟು ದಾಖಲಿಸಿತು. ಪ್ರಸ್ತುತ ರಘುನಂದನ್ ಅವರ ನ್ಯಾಚುರಲ್ ಐಸ್ಕ್ರೀಂ 135ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ವಾರ್ಷಿಕವಾಗಿ 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಇವರ ಕಂಪನಿ ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Continue Reading
Advertisement
Viral Video
ವೈರಲ್ ನ್ಯೂಸ್6 mins ago

Viral Video: ಛೇ…ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಚೆನ್ನಾಗಿ ಥಳಿಸಿ ಯುವಕನ ಹತ್ಯೆ-ವಿಡಿಯೋ ನೋಡಿ

Indian 2
ಸಿನಿಮಾ19 mins ago

Indian 2: ಕಮಲ್‌ ಹಾಸನ್‌ ಅಭಿನಯದ ʼಇಂಡಿಯನ್‌ 2ʼ ಚಿತ್ರದ ಮೊದಲ ಹಾಡು ರಿಲೀಸ್‌; ಕುದುರೆ ಏರಿ ಬಂದ ಉಳಗನಾಯಗನ್‌

dhavala dharini column buddha ಧವಳ ಧಾರಿಣಿ
ಅಂಕಣ42 mins ago

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Karnataka Weather
ಕರ್ನಾಟಕ1 hour ago

Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Brain Tumour In Kids
ಆರೋಗ್ಯ1 hour ago

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

Buddha Purnima
ಧಾರ್ಮಿಕ2 hours ago

Buddha Purnima: ಇಂದು ಬುದ್ಧ ಪೂರ್ಣಿಮೆ; ಬುದ್ಧನ ಬೋಧನೆಯನ್ನು ಸ್ಮರಿಸಿಕೊಳ್ಳುವ ದಿನ

Health Benefits Of Okra
ಆರೋಗ್ಯ2 hours ago

Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

dina bhavishya read your daily horoscope predictions for May 23 2024
ಭವಿಷ್ಯ3 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

IPL 2024
ಕ್ರೀಡೆ8 hours ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ3 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌