Uttarkashi Tunnel Rescue: ಕುಸಿದ ಸುರಂಗದೊಳಗೆ ಕಳೆದ ಆ 17 ದಿನಗಳು! - Vistara News

ದೇಶ

Uttarkashi Tunnel Rescue: ಕುಸಿದ ಸುರಂಗದೊಳಗೆ ಕಳೆದ ಆ 17 ದಿನಗಳು!

ಕುಸಿದ ಸುರಂಗದಲ್ಲಿ, ಉಸಿರುಗಟ್ಟಿಸುವ, ಬೆಳಕಿಲ್ಲದ ಆ ಭೂಗರ್ಭದಲ್ಲಿ 17 ದಿನಗಳ ಕಾಲ ಕಾರ್ಮಿಕರು ಹೇಗೆ ದಿನ ಕಳೆದರು? (Uttarkashi Tunnel Rescue) ಕ್ಷಣಕ್ಷಣದ ಡಿಟೇಲ್ಸ್‌ ಇಲ್ಲಿದೆ.

VISTARANEWS.COM


on

uttarkashi tunnel rescue labours
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ (Uttarkashi Tunnel Rescue) ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಹಾಕಿಕೊಂಡ 41 ಕಾರ್ಮಿಕರು ಮುಂದಿನ 17 ದಿನಗಳ ಕಾಲ ಉಸಿರುಗಟ್ಟಿಸುವ, ಬೆಳಕಿಲ್ಲದ ಆ ಭೂಗರ್ಭದಲ್ಲಿ ಹೇಗೆ ದಿನ ಕಳೆದರು? ಕ್ಷಣಕ್ಷಣದ ಡಿಟೇಲ್ಸ್‌ ಇಲ್ಲಿದೆ.

ನವೆಂಬರ್ 11ರಂದು ರಾತ್ರಿ 8 ಗಂಟೆಗೆ ಈ ಕಾರ್ಮಿಕರು ನೈಟ್‌ಶಿಫ್ಟ್‌ಗಾಗಿ ಸುರಂಗ ಪ್ರವೇಶಿಸಿದ್ದರು. ರಾತ್ರಿಯಿಡೀ ಕೆಲಸ ಮಾಡಿ, ಮರುದಿನ ಬೆಳಿಗ್ಗೆ ಹೊರಬಿದ್ದು, ದೀಪಾವಳಿ ಹಬ್ಬ ಅಚರಿಸೋಣ ಎಂಬುದು ಅವರ ಇರಾದೆಯಾಗಿತ್ತು. ಆದರೆ ಮರುದಿನ ಬೆಳಿಗ್ಗೆ 5.30ರ ಹೊತ್ತಿಗೆ ಸುತ್ತಲಿನ ಭೂಮಿ ಒಮ್ಮೆಗೇ ನಡುಗಿತು. ಹಿಮಾಲಯ ಪರ್ವತ ತನ್ನ ಅನಿರೀಕ್ಷಿತ ಗುಣವನ್ನು ತೋರಿಸಿತು. ಸ್ವಲ್ಪ ಸಮಯದವರೆಗೆ ಕಾರ್ಮಿಕರಿಗೆ ಯಾವ ಅಪಾಯದ ಅರಿವೂ ಆಗಲಿಲ್ಲ. ಆದರೆ ಮುಂದಿನ ಅರ್ಧ ಘಂಟೆಯವರೆಗೆ ಅವರು ನಡೆದುಬಂದ ದಾರಿಗೆ ಮೇಲಿನಿಂದ ಗುಡ್ಡದ ಶಿಲಾಖಂಡರಾಶಿ ಕುಸಿಯುತ್ತಾ ಹೋಯಿತು.

ತಾವು ಸಿಕ್ಕಿಬಿದ್ದೆವು ಎಂಬುದು ಕಾರ್ಮಿಕರಿಗೆ ಗೊತ್ತಾಗಿಹೋಯಿತು. ಅವರು ಹೊರಹೋಗುವ ದಾರಿ ಸಂಪೂರ್ಣ ಬಂದ್‌ ಆಯಿತು. ಅವರು ಮೊದಲಿಗೆ ಅವಶೇಷ ಕೆರೆದು ತೆಗೆಯಲು ಪ್ರಯತ್ನಿಸಿದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಕಾರ್ಮಿಕರು ಕೆಲಸ ನಿಲ್ಲಿಸಿ ಕುಳಿತರು. ಒಳಗಿದ್ದ ಕಾರ್ಮಿಕರ ನಾಯಕ ಬಿಸ್ವೇಶ್ವರ್ ನಾಯಕ್ ಅವರು ಬೆಳಿಗ್ಗೆ 8 ಗಂಟೆಗೆ ಮೊಬೈಲ್ ಫೋನ್ ನೋಡಿದರು. “ಆ ಹೊತ್ತಿಗೆ, ನಾವು ಸಿಕ್ಕಿಬಿದ್ದಿದ್ದೇವೆ ಎಂದು ನಮಗೆ ತಿಳಿದಿತ್ತು. ನಮಗೆ ಭಯವಾಯಿತು, ಹೆಂಡತಿ ಮಕ್ಕಳ ನೆನಪಾಯಿತುʼʼ ಎಂದು ನಾಯಕ್ ಹೇಳುತ್ತಾರೆ.

ಮುಂದಿನ 17 ದಿನಗಳು!

ತಾವು ಅಲ್ಲೇ ಅದೇ ಪರಿಸ್ಥಿತಿಯಲ್ಲಿ ಮುಂದಿನ 17 ದಿನಗಳವರೆಗೆ ಇರಬೇಕಾಗಬಹುದು ಎಂಬ ಯಾವ ಕಲ್ಪನೆಯೂ ಆ ಕಾರ್ಮಿಕರಿಗೆ ಇರಲಿಲ್ಲ. ಆದರೆ ಅಷ್ಟೂ ದಿನ ಆ ಸುರಂಗವೇ ಅವರ ಮನೆಯಾಯಿತು. ವರು ಭರವಸೆ ಹೊಂದಿದ್ದರು, ಭರವಸೆ ಕಳೆದುಕೊಂಡರು, ಮತ್ತೆ ಗಳಿಸಿದರು; ರಕ್ಷಣಾ ಕಾರ್ಯಾಚರಣೆಗಳು ವಿಫಲವಾದಾಗ ಆತಂಕ ಅನುಭವಿಸಿದರು. ಎಲ್ಲವನ್ನೂ ಜೊತೆಗೇ ಅನುಭವಿಸಿದರು. ಇರುವ ಕನಿಷ್ಠವನ್ನು ಬಳಸಿಕೊಂಡು ಬದುಕಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡರು.

ಒಡಿಶಾದ 40 ವರ್ಷದ ನಾಯಕ್, ನಾಲ್ಕೂವರೆ ವರ್ಷಗಳಿಂದ ಪರ್ವತಗಳಲ್ಲಿ ಸುರಂಗ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 12ರ ಬೆಳಿಗ್ಗೆ 5.30ಕ್ಕೆ ಭೂಕುಸಿತದ ಶಬ್ದಗಳು ಮೊದಲು ಪ್ರಾರಂಭವಾದಾಗ, ಅದು ಗಂಭೀರವಾಗಿರಲಿಕ್ಕಿಲ್ಲ ಎಂದು ಮೊದಲು ನಂಬಿದ್ದರು. ಉತ್ತರಾಖಂಡದಲ್ಲಿ ನಾಲ್ಕು ವರ್ಷಗಳಲ್ಲಿ ಕನಿಷ್ಠ ನಾಲ್ಕು ಭೂಕಂಪಗಳು ಸಂಭವಿಸಿವೆ. ಈ ರೀತಿಯ ಘಟನೆ ಸಂಭವಿಸಿರಲಿಲ್ಲ. ಬಂಡೆಗಳು ಬೀಳುತ್ತಲೇ ಇದ್ದವು. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಅವಶೇಷಗಳು 70 ಮೀಟರ್‌ಗಳಷ್ಟು ದಪ್ಪವಾಗಿದ್ದವು.

ನಾಯಕ್‌ ಕೂಡಲೇ ಕಾರ್ಮಿಕರ ತಲೆ ಎಣಿಕೆ ಮಾಡಿದರು. ಒಳಗೆ 41 ಮಂದಿ ಇದ್ದರು. ಬಂಡೆಗಳು ಬೀಳುವುದನ್ನು ನಿಲ್ಲಿಸಿದ್ದವು. ಎಲ್ಲ ಸ್ತಬ್ಧವಾಗಿತ್ತು. ಭಯಾನಕ ಶಾಂತಿ ಆವರಿಸಿತ್ತು. ಜೊತೆಗೆ ಅವರ ಮೊಬೈಲ್ ಫೋನ್‌ಗಳಿದ್ದವು. ಆದರೆ ಸುರಂಗದೊಳಗೆ ಯಾವುದೇ ನೆಟ್‌ವರ್ಕ್ ಇರಲಿಲ್ಲ. ಅವರ ವಾಕಿ-ಟಾಕಿ ಹ್ಯಾಂಡ್‌ಸೆಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಮೊದಲ ನಾಲ್ಕು ಗಂಟೆಗಳು ಭಯಾನಕವಾಗಿದ್ದವು.

ಹೊರಜಗತ್ತಿಗೆ ಸಂದೇಶ

ಅವರು ಮಾಡಬೇಕಾಗಿದ್ದ ಮೊದಲ ಕೆಲಸವೆಂದರೆ ತಾವು ಜೀವಂತವಾಗಿದ್ದೇವೆ ಎಂದು ಹೊರಜಗತ್ತಿಗೆ ತಿಳಿಸುವುದು. ಈ ಸುರಂಗ ರಚನೆ ಮಾಡುತ್ತಾ ಎರಡು ಪೈಪ್‌ಗಳನ್ನು ಜೋಡಿಸಲಾಗಿತ್ತು. 3 ಮತ್ತು 4 ಇಂಚು ವ್ಯಾಸದ ಪೈಪ್‌ಗಳು. ಅವು ಯಂತ್ರಗಳನ್ನು ತಂಪಾಗಿಸಲು ಹೊರಗಿನಿಂದ ನೀರನ್ನು ಸಾಗಿಸಲು ಮತ್ತು ಬಂಡೆಯಿಂದ ನಿರ್ಮಾಣ ಸ್ಥಳಕ್ಕೆ ಹರಿಯುವ ನೀರನ್ನು ಹೊರಹಾಕಲು ಬಳಸಲಾಗುತ್ತಿತ್ತು. ಅವುಗಳ ಮೂಲಕ, ಅವರದೇ ಆದ ಒಂದು ರೀತಿಯ ಮೋರ್ಸ್ ಕೋಡ್‌ನಲ್ಲಿ, ಪ್ರತಿ ಐದು ನಿಮಿಷಗಳಿಗೊಮ್ಮೆ ಪೈಪ್‌ನಲ್ಲಿ ನೀರನ್ನು ನಿರ್ಬಂಧಿಸುತ್ತಾ, ತಾವು ತೊಂದರೆಯಲ್ಲಿದ್ದೇವೆ ಎಂಬ ಸಂದೇಶವನ್ನು ಹೊರಗಿದ್ದ ಇಂಜಿನಿಯರ್‌ಗಳಿಗೆ ಕಳಿಸಿದರು.

ಒಳಗೆ ವಿದ್ಯುತ್ ಮತ್ತು ಬೆಳಕು ಇತ್ತು. ಆದರೆ ಆಮ್ಲಜನಕ ಬೇಗನೆ ಖಾಲಿಯಾಗಬಹುದು ಎಂಬ ಭಯವಿತ್ತು. ಕೆಲವು ಗಂಟೆಗಳ ನಂತರ ಇಂಜಿನಿಯರ್‌ಗಳು ಇವರ ಸಂದೇಶವನ್ನು ಗಮನಿಸಿದರು ಮತ್ತು ಅವರು ಕೂಡ ಪೈಪ್‌ಗಳನ್ನು ಬಳಸಿ ಒಳಗಿದ್ದವರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಹೊರಗಿದ್ದ ರಕ್ಷಕರಿಂದ ʼನೀವು ಓಕೇನಾ?ʼ ಎಂಬ ಪ್ರಶ್ನೆ. “ಓಕೆʼ ಎಂಬ ಉತ್ತರ ಒಳಗಿನಿಂದ. ಈಗ ಪರಸ್ಪರ ಸಂದೇಶ ಕಳಿಸಬಹುದು ಎಂಬುದೇ ದೊಡ್ಡ ಭರವಸೆಯಾಗಿತ್ತು.

ಆಹಾರ, ಆಮ್ಲಜನಕ

ಮೊದಲ ಕೆಲವು ದಿನಗಳು 4 ಇಂಚಿನ ಪೈಪೇ ಅವರ ಜೀವಸೆಲೆಯಾಯಿತು. ಮೊದಲ ಎರಡು ದಿನಗಳಲ್ಲಿ, ಪ್ಯಾಕೆಟ್‌ಗಳ ಮೂಲಕ ಆಮ್ಲಜನಕ ಮತ್ತು ಒಣ ಆಹಾರವನ್ನು ಪೈಪ್‌ನಲ್ಲಿ ಕಳಿಸಲಾಯಿತು. ಪಫ್ಡ್ ರೈಸ್, ಗೋಡಂಬಿ, ಒಣದ್ರಾಕ್ಷಿ ಕಳಿಸಲಾಯಿತು. ಆದರೆ ಎರಡು ದಿನ ಅದನ್ನು ಯಾರೂ ಸೇವಿಸಲಿಲ್ಲ. ಎಲ್ಲರೂ ಚಿಂತೆಯಿಂದ ಅಸ್ವಸ್ಥರಾಗಿದ್ದರು. ಮೂರನೇ ದಿನ, ತುಂಬಾ ಹಸಿದ ಬಳಿಕ ಎಲ್ಲರೂ ತಿನ್ನಲು ಪ್ರಾರಂಭಿಸಿದರು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವೆಲ್ಲವೂ ಪಫ್ಡ್‌ ರೈಸ್.‌

ಆಮ್ಲಜನಕ ಮುಖ್ಯವಾಗಿತ್ತು. ಮೊದಲ ಒಂದೂವರೆ ದಿನ ಉಸಿರಾಟದ ತೊಂದರೆ ಇರಲಿಲ್ಲ. ಸುರಂಗದ 2 ಕಿಮೀ ತ್ರಿಜ್ಯವು ಗಾಳಿಯನ್ನು ಒದಗಿಸಿತು. ಬಳಿಕ ಅದೂ ಹಳತಾಗಲು ಪ್ರಾರಂಭಿಸಿತು. ಕೆಲವರು ಉಸಿರಾಟದ ತೊಂದರೆ ಎದುರಿಸಲು ಪ್ರಾರಂಭಿಸಿದರು. ಹದಿನೆಂಟು ಗಂಟೆಗಳ ನಂತರ, ಹೊರಗಿನಿಂದ ಸಣ್ಣ ಪೈಪ್‌ಲೈನ್ ಮೂಲಕ ಆಮ್ಲಜನಕವನ್ನು ಪಂಪ್ ಮಾಡಲು ಪ್ರಾರಂಭಿಸಿದರು. ಅದು ಜೀವಚೈತನ್ಯ ತುಂಬಿತು. ವಾಕರಿಕೆ ಮತ್ತು ಅಜೀರ್ಣದಂತಹ ಕೆಲವು ಸಮಸ್ಯೆ ಕೆಲವರಿಗೆ ಕಂಡುಬಂದವು. ಅದೃಷ್ಟವಶಾತ್‌ ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಕಾಡಲಿಲ್ಲ. “ಪ್ರತಿದಿನ ಒಂದೇ ರೀತಿಯ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ನಾವು ತಿನ್ನದೆ ಉಳಿಸಿದ ಒಣ ಹಣ್ಣುಗಳ ಪ್ಯಾಕೆಟ್‌ಗಳು ಒಳಗೆ ಹಾಗೇ ಇವೆ” ಎಂದು ಬಿಹಾರದ ಅರಾದಿಂದ ಬಂದ 34 ವರ್ಷದ ಸಬಾ ಅಹ್ಮದ್ ಹೇಳುತ್ತಾರೆ.

Uttarakhand tunnel rescue
Uttarkashi Tunnel Rescue

ಮೊದಲ ಕೆಲವು ದಿನಗಳವರೆಗೆ ಮೊಬೈಲ್ ಫೋನ್ ಚಾರ್ಜರ್‌ಗಳು ಇರಲಿಲ್ಲ. ಮನರಂಜನೆಗೆ ಏನೂ ಇರಲಿಲ್ಲ. ಅವರು ಮಕ್ಕಳಾಟಗಳನ್ನು ಆಡಿದರು. ರಾಜಾ, ರಾಣಿ, ಚೋರ್, ಸಿಪಾಹಿ; ಕಾಗದದ ಚೀಟಿಗಳಲ್ಲಿ ಆಡುವ ಆಟಗಳು ಇತ್ಯಾದಿ. ಸಮಯವನ್ನು ತಿಳಿಯಲು ಮಾತ್ರ ಫೋನ್‌ಗಳನ್ನು ಆನ್ ಮಾಡುತ್ತಿದ್ದರು.

9ನೇ ದಿನ ಒಂದು ಪ್ರಗತಿ ಕಂಡುಬಂತು. ಶಿಲಾಖಂಡರಾಶಿಗಳ ಮಧ್ಯದಿಂದ ಆರು ಇಂಚಿನ ಪೈಪ್‌ಲೈನ್ ಹೊರಹೊಮ್ಮಲು ಪ್ರಾರಂಭಿಸಿತು. ಇದು ಮನುಷ್ಯನನ್ನು ಸಾಗಿಸಲು ಸಾಕಾಗುವಂತಿರಲಿಲ್ಲ. ಆದರೆ ಬೇಯಿಸಿದ ಆಹಾರ, ನೀರು, ಮೊಬೈಲ್ ಫೋನ್ ಚಾರ್ಜರ್‌ಗಳು ಮತ್ತು ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ವಿನಿಮಯ ಮಾಡಲು ಸಾಕಾಗುವಂತಿತ್ತು. ಕಾರ್ಮಿಕರು ಬದುಕಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಅಲ್ಲಿಗೆ ತಲುಪಿದ ಕ್ಯಾಮೆರಾ ಜಗತ್ತಿಗೆ ತಿಳಿಸಿತು. ಕಾರ್ಮಿಕರಿಗೆ ಹೊಸ ಭರವಸೆ ನೀಡಿತು.

41 ಕಾರ್ಮಿಕರಲ್ಲಿ 51 ವರ್ಷದ ಗುಲಾಬ್ ಸಿಂಗ್ ನೇಗಿ ಮತ್ತು 34 ವರ್ಷದ ಸಾಬಾ ಅಹ್ಮದ್ ಎಂಬ ಇಬ್ಬರು ಫೋರ್‌ಮನ್‌ಗಳಿದ್ದರು. ಅವರು ದಿನಚರಿ ಪಟ್ಟಿ ಮಾಡುವ ಜವಾಬ್ದಾರಿ ವಹಿಸಿಕೊಂಡರು. “ಪ್ರತಿದಿನ ಬೆಳಿಗ್ಗೆ ನಾವು ಎಚ್ಚರಗೊಂಡ ಬಳಿಕ 2 ಕಿಮೀ ವಿಸ್ತಾರದಲ್ಲಿ ವಾಕ್ ಮಾಡಿದೆವು. ಪ್ರತಿಯೊಬ್ಬರಿಗೂ ಯೋಗ ಮಾಡುವಂತೆ ಪ್ರೇರೇಪಿಸಿದೆವು. ನಂತರ ಉಪಹಾರ ಸೇವನೆ. ಆರಂಭದಲ್ಲಿ ಅನ್ನ ಮತ್ತು ಡ್ರೈ ಫ್ರೂಟ್ಸ್ ಮಾತ್ರ. ಆರು ಇಂಚಿನ ಪೈಪ್ ಹಾಕಿದ ನಂತರ ಖಿಚಡಿ, ಬ್ರೆಡ್, ಮೊಟ್ಟೆ, ಜಾಮ್ ಮತ್ತು ಹಣ್ಣುಗಳು ಸಿಕ್ಕಿದವು. ನಮಗೆ ಬೇಕಾದುದನ್ನು ನಾವು ಸಂವಹನ ಮಾಡಿದ ನಂತರ ಅಂತಿಮವಾಗಿ ಫೋನ್ ಚಾರ್ಜರ್‌ಗಳನ್ನು ಕಳುಹಿಸಲಾಯಿತು. ನಂತರ ಕಾರ್ಮಿಕರು ತಮ್ಮ ಫೋನ್‌ನಲ್ಲಿ ಆಡತೊಡಗಿದರು. ಉದಾಹರಣೆಗೆ, ನಾನು ನನ್ನ ಫೋನ್‌ನಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡಿದ್ದೇನೆ” ಎಂದು ಸಾಬಾ ಅಹ್ಮದ್ ಹೇಳಿದರು.

Uttarkashi tunnel
Uttarkashi Tunnel Rescue

ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದ ಸುರಂಗವು ಬಿಸಿಯಾಗಿಯೂ ಇರಲಿಲ್ಲ, ಅಥವಾ ತೀರಾ ತಂಪಾಗಿಯೂ ಇರಲಿಲ್ಲ. ಆದರೆ ನೀರಿನ ಸಮಸ್ಯೆ ಇದ್ದೇ ಇತ್ತು. ಸುರಂಗದ ಒಳಗೆ, ನೀರು ಬಂಡೆಗಳಿಂದ ಕೆಳಕ್ಕೆ ಇಳಿಯುತ್ತದೆ. ಮೊದಲ ಒಂಬತ್ತು ದಿನಗಳು, ಆರು ಇಂಚಿನ ಪೈಪ್ ಅನ್ನು ಕಳಿಸುವವರೆಗೆ ಅವರೆಲ್ಲಾ ಆ ಜಿನುಗುವ ನೀರನ್ನೇ ಸೇವಿಸಿದರು.

ಸ್ನಾನ, ಟಾಯ್ಲೆಟ್‌ ಹೀಗಿತ್ತು!

ಆರಂಭಿಕ ದಿನಗಳಲ್ಲಿ ನೀರಿನ ಕೊರತೆಯಿಂದಾಗಿ ಮಲಬದ್ಧತೆ ಕಾಡಿತು. ಯಾರೂ ನವೆಂಬರ್ 11ರ ನಂತರ ಸ್ನಾನ ಮಾಡಿರಲಿಲ್ಲ. ಬಂಡೆಗಳಿಂದ ಬೀಳುವ ನೀರಿನಲ್ಲಿ ರಾಸಾಯನಿಕಗಳಿರುತ್ತವೆ. ಏಕೆಂದರೆ ಸುರಂಗ ನಿರ್ಮಾಣದ ಸಮಯದಲ್ಲಿ ಶಾಟ್‌ಕ್ರೀಟ್ ವಿಧಾನವನ್ನು ಬಳಸಲಾಗುತ್ತದೆ. ಹೀಗಾಗಿ ಆ ನೀರು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಆತಂಕವಿತ್ತು.

ಇನ್ನೊಂದು ಸಮಸ್ಯೆಯೆಂದರೆ ಟಾಯ್ಲೆಟ್‌ನದು. ಇದಕ್ಕಾಗಿ ಕಾರ್ಮಿಕರು ಸುರಂಗದ ಇನ್ನೊಂದು ತುದಿಯಲ್ಲಿ ಬಾರ್ಕೋಟ್ ಬದಿಯಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿದರು. ಒಳಗಿನ 2 ಕಿಮೀ ವಿಸ್ತಾರದ ಒಂದು ಮೂಲೆಯಲ್ಲಿ, ಅವರ ಬಳಿಯಿದ್ದ ಪೊಕ್ಲೇನ್ ಯಂತ್ರದ ಮೂಲಕ 50ರಿಂದ 60 ಹೊಂಡಗಳನ್ನು ಅಗೆದು, ಅದನ್ನು ಮಲವಿಸರ್ಜನೆಗೆ ಬಳಸಿದರು. ನಂತರ ಹೊಂಡಗಳನ್ನು ಮಣ್ಣಿನಿಂದ ಮುಚ್ಚಿದರು.

ಮಲಗಲು ಕಾರ್ಮಿಕರು ಬೆಡ್‌ಶೀಟ್‌ಗಳು ಮತ್ತು ಹೊದಿಕೆಗಳಾಗಿ ಜಿಯೋಟೆಕ್ಸ್ಟೈಲ್ ಶೀಟ್‌ಗಳನ್ನು ಬಳಸಿದರು. ಇವು ಪಾಲಿಯೆಸ್ಟರ್‌ನಿಂದ ಮಾಡಲ್ಪಟ್ಟಿವೆ. ಇವು ಮಣ್ಣನ್ನು ಬೇರ್ಪಡಿಸಲು, ಫಿಲ್ಟರ್ ಮಾಡಲು, ಬಲಪಡಿಸಲು ಬಳಸಲಾಗುತ್ತದೆ. ಆದರೆ ಆಗಾಗ್ಗೆ ನಿದ್ರೆಗೆ ತೊಂದರೆಯಾಗುತ್ತಿತ್ತು. “ಸಾವು ನಿಮ್ಮ ಮುಂದೆಯೇ ಇದ್ದಾಗ ಯಾರೂ ನೆಮ್ಮದಿಯಾಗಿ ಮಲಗಲು ಅಥವಾ ತಿನ್ನಲು ಸಾಧ್ಯವಿಲ್ಲ. 4 ಅಥವಾ 5 ಗಂಟೆ ಮಲಗುತ್ತಿದ್ದರು. ನಂತರ ಎಚ್ಚರವಾಗುತ್ತಿತ್ತು. ಬೆಳಗ್ಗೆ 8ರ ಹೊತ್ತಿಗೆ, ಪೈಪ್‌ನ ಇನ್ನೊಂದು ತುದಿಯಿಂದ ರಕ್ಷಕಕರು ಇವರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಿದ್ದರು. ರಾತ್ರಿ 10ರಿಂದ 11 ಗಂಟೆಯ ನಡುವೆ, ಮಲಗುವ ಮೊದಲು, ಎಲ್ಲರೂ ಒಟ್ಟಾಗಿ ಪ್ರಾರ್ಥಿಸಲು ಸೇರುತ್ತಿದ್ದರು.

Uttarkashi Tunnel Rescue
Uttarkashi Tunnel Rescue

ಎಚ್ಚರವಾಗಿದ್ದಾಗ, 6 ಇಂಚಿನ ಪೈಪ್ ಹಾಕಿದ ನಂತರ, ಬೇಸರವನ್ನು ದೂರವಿರಿಸಲು ಅವರು ತಮ್ಮ ಫೋನ್‌ಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸಿದರು. ಎರಡು ವಾರಗಳಲ್ಲಿ BSNL ಲ್ಯಾಂಡ್‌ಲೈನ್ ಾನ್ನು ಕಳುಹಿಸಲಾಯಿತು. ಎಲ್ಲರೂ ಅವರವರ ಕುಟುಂಬದೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಸುರಂಗ ಕಾರ್ಯಾಚರಣೆಯ ಹೀರೋ, ರ‍್ಯಾಟ್‌ ಹೋಲ್ ಮೈನರ್‌ ಮುನ್ನಾ ಖುರೇಷಿ ಯಾರು?

ಗ್ರೇಟ್‌ ಎಸ್ಕೇಪ್‌

ಎಂಡೋಸ್ಕೋಪಿಕ್ ಕ್ಯಾಮೆರಾ ಅಥವಾ BSNL ಲ್ಯಾಂಡ್‌ಲೈನ್‌ಗೆ ಲಗತ್ತಿಸಲಾದ ಮೈಕ್ರೊಫೋನ್‌ನಲ್ಲಿ ಈವರಿಗೆ ಪ್ರೋತ್ಸಾಹ ಹರಿದುಬರುತ್ತಿತ್ತು. 41 ಕಾರ್ಮಿಕರು ತಮ್ಮ ಕುಟುಂಬಗಳು, ಸಹೋದ್ಯೋಗಿಗಳು, ವೈದ್ಯರು, ಮನೋವೈದ್ಯರು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರೊಂದಿಗೆ ಮಾತನಾಡಿದರು.

ಪ್ರತಿದಿನ, ರಕ್ಷಕರು ಎಷ್ಟು ದೂರ ಬಂದಿದ್ದಾರೆಂದು ಅವರಿಗೆ ತಿಳಿಸಲಾಯಿತು. ಶೀಘ್ರದಲ್ಲೇ ಹೊರಬರುತ್ತೀರಿ ಎಂಬ ಭರವಸೆ ನೀಡಲಾಯಿತು. ನವೆಂಬರ್ 28 ಮಧ್ಯಾಹ್ನದ ಹೊತ್ತಿಗೆ, ಮೈಕ್ರೊಫೋನ್‌ನ ಇನ್ನೊಂದು ತುದಿಯಲ್ಲಿರುವ ಧ್ವನಿಯು, ರಕ್ಷಕರು 55 ಮೀಟರ್ ಶಿಲಾಖಂಡರಾಶಿಗಳನ್ನು ಕೊರೆದು ತೆಗೆದಿದ್ದಾರೆ ಎಂದರು. ಆದರೆ ಕಾರ್ಮಿಕರತ್ತ ಪೈಪ್ ಬಂದಿರಲಿಲ್ಲ. ಒಳಗಿದ್ದವರು ಗಾಬರಿಗೊಂಡರು. ಪೈಪ್ ಬೇರೆ ದಿಕ್ಕಿನಲ್ಲಿ ಹೋಗಿರಬಹುದು ಎಂದು ಭಾವಿಸಿದರು. ಇನ್ನೂ 5 ಮೀಟರ್ ಮುಂದೆ ತಳ್ಳುವಂತೆ ಮನವಿ ಮಾಡಿದರು.

ಮಧ್ಯಾಹ್ನ 1.30ಕ್ಕೆ ಕಾರ್ಮಿಕರು ಉಸಿರು ಬಿಗಿಹಿಡಿದು ನೋಡುತ್ತಿದ್ದಂತೆಯೇ ಅವಶೇಷಗಳು ಉದುರಲಾರಂಭಿಸಿದವು. ಐದೂವರೆ ಗಂಟೆಗಳ ನಂತರ ಇವರನ್ನು ಸ್ಥಳಾಂತರಿಸುವ ಪೈಪ್ ಅನ್ನು ನೋಡಿದರು. ಕುಸಿದ ಸುರಂಗದ ಸುತ್ತಲೂ “ಭಾರತ್ ಮಾತಾ ಕಿ ಜೈ” ಘೋಷಣೆ ಪ್ರತಿಧ್ವನಿಸಿತು. ರಾತ್ರಿ 9 ಗಂಟೆಯ ಹೊತ್ತಿಗೆ, ಕೆಲವರು ತಾತ್ಕಾಲಿಕ ಟ್ರಾಲಿಗಳಲ್ಲಿ, ಮತ್ತು ಕೆಲವರು ತೆವಳುತ್ತ ಹೊರಹೊಮ್ಮಿದರು. ಪರ್ವತದಿಂದ ಘಾಸಿಗೊಂಡಿದ್ದ ಅವರು ತಮ್ಮ ದಿಟ್ಟತನದ ಕಥೆಯನ್ನು ಹೇಳಲು ಬದುಕುಳಿದಿದ್ದರು.

ಇದನ್ನೂ ಓದಿ: ಸುರಂಗ ಕಾರ್ಯಾಚರಣೆ; ತಪ್ಪಿದ್ದು ಎಲ್ಲಿ, ಯಶಸ್ವಿಯಾದದ್ದು ಹೇಗೆ? ಕ್ಷಣಕ್ಷಣದ ಡೀಟೇಲ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

Bengaluru Murder : ವೈಯಾಲಿಕಾವಲ್ ಮಹಿಳೆಯ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

VISTARANEWS.COM


on

By

Murder case
Koo

ಬೆಂಗಳೂರು: ಬೆಂಗಳೂರಿನ (Bengaluru Murder) ವೈಯಾಲಿಕಾವಲ್ ಮಹಾಲಕ್ಷ್ಮೀ ಮರ್ಡರ್ ಕೇಸ್‌ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮಹಿಳೆಯನ್ನು ಕೊಲೆ ಮಾಡಿದವನು ತನ್ನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಪೊಲೀಸರ ಮುಂದೆ ಪ್ರಶ್ನೆಗಳ ಸರಮಾಲೆಯೇ ಇದೆ. ಮಹಾಲಕ್ಷ್ಮಿಯನ್ನು ಕೊಂದ ಕೊಲೆಗಾರನನ್ನು ಟ್ರೇಸ್‌ ಮಾಡಿ ಇನ್ನೇನು ಹಿಡಿಬೇಕು ಎನ್ನುವಾಗಲೇ ಕೊಲೆ ಆರೋಪಿ ಮುಕ್ತಿರಂಜನ್ ಎಂಬಾತ ಒಡಿಶಾದಲ್ಲಿ ನಿನ್ನೆ (ಸೆ.25) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಹಾಲಕ್ಷ್ಮೀ ಮರ್ಡರ್ ಕೇಸ್ ಪೊಲೀಸರ ಮುಂದೆ ಹಲವು ಸವಾಲುಗಳನ್ನಿಟ್ಟಿದೆ‌. ಆರೋಪಿ ಅರೆಸ್ಟ್ ಆದಮೇಲೆ ಪ್ರಕರಣಕ್ಕೆ ಒಂದು ಫುಲ್ ಸ್ಟಾಪ್ ಇಡಬಹುದಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿ ಮುಕ್ತಿ ರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ತನಿಖಾಧಿಕಾರಿಗಳಿಗೆ ಮುಂದಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ. ಪ್ರಕರಣದ ಆರೋಪಿಯಾಗಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ನಿನ್ನೆ ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿಯ ಭೀಕರ ಹತ್ಯೆಗೆ ಕಾರಣವೇನು? ಆರೋಪಿ ಹತ್ಯೆಗೈದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

ಮದುವೆ ಆಗುವಂತೆ ಒತ್ತಾಯಿಸಿದ್ದಳು ಮಹಾಲಕ್ಷ್ಮಿ

ಇನ್ನು ತನಿಖೆ ವೇಳೆ ಒಂದಷ್ಟು ಸ್ಫೋಟಕ ವಿಚಾರಗಳು ಹೊರ ಬಿದ್ದಿದ್ದು, ಮದುವೆಯಾಗುವಂತೆ ಮುಕ್ತಿ ರಂಜನ್‌ನ ಮಹಾಲಕ್ಷ್ಮಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗಿ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿದೆ. ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್‌ ಇಬ್ಬರು ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರ ಮಧ್ಯೆ ಸ್ನೇಹ, ಸಲುಗೆ ಬೆಳದಿತ್ತು.

ಮುಕ್ತಿರಂಜನ್‌ನನ್ನು ತುಂಬಾ ಹಚ್ಡಿಕೊಂಡಿದ್ದ ಮಹಾಲಕ್ಷ್ಮಿ ಆತನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಕೆಲಸ ಮಾಡುತ್ತಿದ್ದ ಸ್ಟೋರ್‌ನಲ್ಲಿ ಬೇರೆ ಹುಡುಗೀಯರ ಜತೆ ಮುಕ್ತಿರಂಜನ್‌ ಮಾತನಾಡಿದರೆ ಮಹಾಲಕ್ಷ್ಮಿ ಸ್ವಲ್ಪವೂ ಸಹಿಸುತ್ತಿರಲಿಲ್ಲ. ಕೂಡಲೇ ಆ ಯುವತಿಯರಿಗೆ ವಾರ್ನ್ ಮಾಡುತ್ತಿದ್ದಳು. ಇನ್ನು ಮುಕ್ತಿರಂಜನ್ ಸಹ ಸ್ವತಃ ಹಠಮಾರಿ ಸ್ವಭಾವದವನಾಗಿದ್ದ ಎಂಬುದು ಇದುವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಸೆಪ್ಟೆಂಬರ್ 1ರಂದು ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಎರಡನೇ ತಾರೀಖು ಇಬ್ಬರೂ ರಜೆ ಹಾಕಿ ವೈಯಾಲಿಕಾವಲ್ ಮನೆಗೆ ಹೋಗಿದ್ದರಂತೆ. ಈ ವೇಳೆ ಜಗಳ ಆಗಿ, ಕೊಲೆ ಮಾಡಿ ಮುಕ್ತಿರಂಜನ್‌ ಎಸ್ಕೇಪ್ ಆಗಿರಬಹುದು ಎನ್ನಲಾಗಿದೆ.

ಮನೆಯಲ್ಲಿ ಎಲ್ಲೂ ರಕ್ತ ಹರಿದಿಲ್ಲ; ಮೂವರ ಫಿಂಗರ್‌ ಪ್ರಿಂಟ್‌ ಪತ್ತೆ

ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವ ಬಗ್ಗೆಯಂತೂ ಪೊಲೀಸರಿಗೆ ಅನುಮಾನಗಳ ಮೇಲೆ ಅನುಮಾನ ಹುಟ್ಟಿಸಿದೆ. ದೇಹ ಕತ್ತರಿಸುವ ರೀತಿ, ಮನೆಯಲ್ಲಿ ರಕ್ತ ಎಲ್ಲಿಯೂ ಸಹ ಸಿಡಿಯದಂತೆ ಮೃತದೇಹ ಕತ್ತರಿಸಲಾಗಿದೆ. ಹತ್ಯೆಗೈದು ಮೃತದೇಹದ ರಕ್ತ ಹರಿದ ನಂತರ ಕತ್ತರಿಸಲಾಗಿತ್ತಾ ಅನ್ನೋ ಪ್ರಶ್ನೆ ಮುಂದಿವೆ. ಅಲ್ಲದೇ ಮನೆಯಲ್ಲಿ ಇಬ್ಬರಿಂದ ಮೂರು ಜನರ ಫಿಂಗರ್ ಪ್ರಿಂಟ್‌ಗಳು ಪತ್ತೆಯಾಗಿದ್ದು, ಆರೋಪಿಯ ಕೃತ್ಯಕ್ಕೆ ಬೇರೆ ಯಾರಾದರೂ ಸಾಥ್ ನೀಡಿದ್ದರಾ? ಹತ್ಯೆಗೈದು ಇಷ್ಟು ದಿನ ಆರೋಪಿ ತಲೆಮರೆಸಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತಲೆ ಕೆಡಿಸಿದೆ.

ಸದ್ಯ ಒಡಿಶಾದಲ್ಲಿ ಬೀಡುಬಿಟ್ಟಿರುವ ಬೆಂಗಳೂರು ಪೊಲೀಸರು, ಆರೋಪಿಯ ಕುಟುಂಬಸ್ಥರಿಂದ ಮಾಹಿತಿ ಪಡಿತಿದೆ. ಈಗಾಗಲೇ ರಾಜ್ಯ ಪೊಲೀಸರ ಎರಡು ತಂಡಗಳು ಒಡಿಶಾದಲ್ಲಿರುವುದರಿಂದ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮತ್ತೊಂದು ಕಡೆ ಮಹಿಳೆ ಮೊಬೈಲ್ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Special Trains : ಹಬ್ಬಗಳ ಸೀಸನ್‌; ವಿಶೇಷ ರೈಲುಗಳ ಸೇವೆ ತಿಂಗಳಾಂತ್ಯದವರೆಗೆ ವಿಸ್ತರಣೆ

Special Trains : ಹಬ್ಬಗಳ ಸೀಸನ್‌ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಸೇವೆ ತಿಂಗಳಾಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ.

VISTARANEWS.COM


on

By

Service of special trains extended till month-end to compensate for heavy traffic during festive season
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಬ್ಬದ ಋತುವಿನಲ್ಲಿ ಹೆಚ್ಚಿನ ದಟ್ಟಣೆಯನ್ನು ಸರಿದೂಗಿಸಲು, ದಕ್ಷಿಣ ರೈಲ್ವೆಯು (Special Trains) ಈಗಾಗಲೇ ಎರ್ನಾಕುಲಂ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಓಡಿಸಲಾಗುತ್ತಿದ್ದ ವಿಶೇಷ ರೈಲುಗಳ ಸೇವೆಯನ್ನು ಹೆಚ್ಚುವರಿ ನಾಲ್ಕು ಟ್ರಿಪ್ಗಳಿಗೆ ವಿಸ್ತರಿಸಲು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ.

  1. 1) ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಈ ಹಿಂದೆ ಸೆಪ್ಟೆಂಬರ್ 18 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳೊಂದಿಗೆ ಸಪ್ಟೆಂಬರ್ 22 ರಿಂದ 29, 2024 ರವರೆಗೆ ವಿಸ್ತರಿಸಲಾಗಿದೆ.
  2. 2) ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲುನ್ನು ಈ ಹಿಂದೆ ಸೆಪ್ಟೆಂಬರ್ 19 ರವರೆಗೆ ಓಡಿಸಲು ಸೂಚಿಸಲಾಗಿತ್ತು, ಈಗ ನಾಲ್ಕು ಹೆಚ್ಚುವರಿ ಟ್ರಿಪ್ಗಳಿಗಾಗಿ ಸೆಪ್ಟೆಂಬರ್ 23 ರಿಂದ 30 ರವರೆಗೆ ವಿಸ್ತರಿಸಲಾಗಿದೆ.

ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳ ಪ್ರಕಾರ ಈ ರೈಲುಗಳು ಚಲಿಸುವುದನ್ನು ಮುಂದುವರಿಸಲಾಗಿದೆ.

ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

ಬೆಂಗಳೂರು: ದಸರಾ ಹಬ್ಬದ (Dasara 2024) ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ, ನೈರುತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.

1)ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್‌
2) ಅಕ್ಟೋಬರ್ 1 ರಿಂದ 12 ರವರೆಗೆ ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್‌ (17302)
3) ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್‌ಪ್ರೆಸ್‌ (06233/06234)
4) ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಬಾಗಲಕೋಟ ಬಸವ ಎಕ್ಸ್‌ಪ್ರೆಸ್‌ (17307)
5) ಅಕ್ಟೋಬರ್ 3 ರಿಂದ 14 ರವರೆಗೆ ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್‌ (17308)
6) ಅಕ್ಟೋಬರ್ 1 ರಿಂದ 12 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್‌ (16591)
7) ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್‌ (16592)
8) ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16535)
9) ಅಕ್ಟೋಬರ್ 3 ರಿಂದ 14 ರವರೆಗೆ ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16536)

ಈ ಎಲ್ಲ ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. ಅಕ್ಟೋಬರ್ 3 ರಿಂದ 12 ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ ಮತ್ತು ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ (16228) ರೈಲುಗಳಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

ಪ್ಯಾಸೆಂಜರ್‌ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಜೋಡಣೆ

ಅಕ್ಟೋಬರ್ 4 ರಿಂದ 13 ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್, ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ (16221), ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌, ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06273/06274), ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06581/06582), ಅಕ್ಟೋಬರ್ 3 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06213), ಅಕ್ಟೋಬರ್ 5 ರಿಂದ 14 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06214), ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ (16225), ಅಕ್ಟೋಬರ್ 5 ರಿಂದ 14 ರವರೆಗೆ ಶಿವಮೊಗ್ಗ ಟೌನ್-ಮೈಸೂರು ಎಕ್ಸ್‌ಪ್ರೆಸ್‌ (16226), ಅಕ್ಟೋಬರ್ 3 ರಿಂದ 12 ರವರೆಗೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್ (07365), ಅಕ್ಟೋಬರ್ 5 ರಿಂದ 14 ರವರೆಗೆ ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (07366), ಅಕ್ಟೋಬರ್ 4 ರಿಂದ 13 ರವರೆಗೆ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ (16239/16240), ಅಕ್ಟೋಬರ್ 1 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06267), ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06268), ಅಕ್ಟೋಬರ್ 1 ರಿಂದ 12 ರವರೆಗೆ ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269), ಅಕ್ಟೋಬರ್ 3 ರಿಂದ 14 ರವರೆಗೆ ಎಸ್ಎಂವಿಟಿ ಬೆಂಗಳೂರು-ಮೈಸೂರು (06270), ಅಕ್ಟೋಬರ್ 2 ರಿಂದ 13 ರವರೆಗೆ ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್‌ಪ್ರೆಸ್‌ (16529) ಮತ್ತು ಅಕ್ಟೋಬರ್ 3 ರಿಂದ 14 ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bengaluru News : ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದ ನಾರ್ಥಿ ಲೇಡಿ; ʻತೊಲಗ್ರೋ ಮೊದಲುʼಎಂದು ಅಭಿಯಾನ ಶುರು

Bengaluru News : ಇತ್ತೀಚೆಗೆ ಹೊರರಾಜ್ಯದಿಂದ ಬಂದವರು ಬೆಂಗಳೂರು ಹಾಗೂ ಬೆಂಗಳೂರಿಗರ ಕುರಿತು ಹಾಗೂ ಕನ್ನಡ ಭಾಷೆಯ ಸಂಬಂಧ ಕೀಳಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದು ಲೇವಡಿ ಮಾಡಿ ಮಾತನಾಡಿದ ನಾರ್ಥಿ ಲೇಡಿಗೆ ನೆಟ್ಟಿಗರು ಬಿಸಿಮುಟ್ಟಿಸುತ್ತಿದ್ದಾರೆ. ʻತೊಲಗ್ರೋ ಮೊದಲುʼಎಂದು ಅಭಿಯಾನ ಕೂಡ ಶುರುವಾಗಿದೆ.

VISTARANEWS.COM


on

By

Bad comment from North Indian woman on Bengaluru city Quit First campaign started
Koo

ಬೆಂಗಳೂರು: ಅತಿಥಿ ದೇವೋ ಭವ ಎಂಬ ಶಬ್ಧ ನಮ್ಮ ದೇಶದ ಘೋಷ ವಾಕ್ಯ . ಅದು ರಾಜ್ಯದ ಮಟ್ಟಕ್ಕೂ ಅನ್ವಯವಾಗುತ್ತದೆ. ಮೂಲ ನಿವಾಸಿಗಳಿಗೆ ಹೊರಗಿಂದ ಬಂದವರು ಗೌರವ ಕೊಡಬೇಕು. ಆದರೆ ಬೆಂಗಳೂರು ನಗರದಲ್ಲಿ (Bengaluru News) ಆ ತರಹ ವಾತಾವರಣ ಇಲ್ಲದಂತಾಗಿದೆ. ಮತ್ತೊಮ್ಮೆ ಉತ್ತರ ಭಾರತದ ಮಹಿಳೆ ಬೆಂಗಳೂರು ನಗರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ʻತೊಲಗ್ರೋ ಮೊದಲುʼ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಅಭಿಯಾನ ಶುರುವಾಗಿದೆ.

ಮೊದಲನೇದಾಗಿ ನಾರ್ತ್, ಸೌತ್‌, ಈಸ್ಟ್ , ವೆಸ್ಟ್ ಇಂಡಿಯಾ ಎಂಬುದೆಲ್ಲ ಗುರುತಿಗಾಗಿ ಅಷ್ಟೆ ಇರುವುದು. ಆದರೆ ಕೆಲ ವ್ಯಕ್ತಿಗಳು ಡಿವೈಡ್ ಮಾಡಿ ಕೀಳಾಗಿ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರಿನ ಬಗ್ಗೆ ರೀಲ್ಸ್ ಮಾಡಿ ಅವಮಾನ ಮಾಡುವಂತೆ ಮಾತನಾಡಿದ್ದಾಳೆ.

ಕಾಮೆಂಟ್‌ ಮೂಲಕವೇ ಬಿಸಿ ಮುಟ್ಟಿಸಿದ ಸ್ಯಾಂಡಲ್‌ವುಡ್‌

ಈ ಹಿಂದೆ ಆಟೋ ಚಾಲಕನ ಜತೆ ಕಿರಿಕ್ ಮಾಡಿಕೊಂಡಿದ್ದ ಮಹಿಳೆಯೊಬ್ಬಳು, ಬೆಂಗಳೂರಿನವರಿಗೆ ಡೀಸೆನ್ಸಿ ಇಲ್ಲ ಎಂದು ವಿಡಿಯೊ ಮಾಡಿದ್ದಳು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಾನು ಹಾಗೇ ಹೇಳಿಲ್ಲ, ಮಾತಿನಿಂದ ನೋವು ಆಗಿದ್ದರೆ ಕ್ಷಮಿಸಿ ಅಂತ ಸಮಜಾಯಿಷಿ ನೀಡಲು ಮುಂದಾಗಿದ್ದಳು. ಅದರ ಬೆನ್ನಲ್ಲೆ ಈಗ ಮತ್ತೊಬ್ಬ ಮಹಿಳೆ ತನ್ನ ಮನಸ್ಸಿನ ವಿಕಾರತೆಯನ್ನು ಹೊರಹಾಕಿದ್ದಾಳೆ.

ಮಹಿಳೆಯೊಬ್ಬಳು ವಿಡಿಯೋದಲ್ಲಿ ನಾವೆಲ್ಲ ನಾರ್ಥಿಗಳು ಬೆಂಗಳೂರು ಬಿಟ್ಟರೆ, ಎಲ್ಲ ನಗರದ ಪಿಜಿಗಳು ಖಾಲಿ ಖಾಲಿಯಾಗಿರುತ್ತದೆ. ಕೋರಮಂಗಲದ ಪಬ್‌ಗಳು ಬಿಕೋ ಎನ್ನುತ್ತಿರುತ್ತೆ ಎಂದು ವಿಡಿಯೋ ಮಾಡಿದ್ದಾಳೆ. ಅಂದರೆ ನಾರ್ಥ್‌ ಇಂಡಿಯನ್‌ಗಳಿಂದ ಮಾತ್ರ ಬೆಂಗಳೂರು ಉದ್ದಾರ ಆಗಿದೆ ಎಂಬ ಭ್ರಮೆಯಲ್ಲಿರುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನೂ ಈ ವಿಡಿಯೊಗೆ ಸಾರ್ವಜನಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ʻಪ್ಲೀಸ್ ಲೀವ್ʼ ಎಂದರೆ, ನಟಿ ಚೈತ್ರಾ ಆಚಾರ್ ಬೇಗ ಇಲ್ಲಿಂದ ಹೊರಡಿ ನಾವು ಡ್ಯಾನ್ಸರ್‌ಗಳಿಲ್ಲದ ಪಬ್‌ಗಳನ್ನು ನೋಡಬಹುದು . ಮೊದಲು ಇಲ್ಲಿಂದ ತೊಲಗಿ ಎಂಬರ್ಥದಲ್ಲಿ ಕಾಮೆಂಟ್‌ಗೆ ರಿಪ್ಲೇ ಕೊಟ್ಟಿದ್ದಾರೆ. ಅಷ್ಟೇಲ್ಲದೆ ನಿರೂಪಕಿ ಕಂ ನಟಿ ಅನುಪಮ ಗೌಡ , ರೂಪೇಶ್ ರಾಜಣ್ಣ ಸೇರಿ ಹಲವು ಮಂದಿ ಖಡಕ್ ಉತ್ತರ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಹ್ಯಾಷ್ ಟ್ಯಾಗ್ ಹಾಕಿ ತೊಲಗ್ರೋ ಬೇಗ ಎಂಬ ಅಭಿಯಾನವೂ ಶುರುವಾಗಿದೆ. ಬೆಂಗಳೂರಿನಲ್ಲಿದ್ದುಕೊಂಡು ಪದೆ ಪದೇ ನಗರವನ್ನು ತುಚ್ಛವಾಗಿ ಮಾತನಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ವಿಚಾರ ಕೈ ಮೀರಿ ಹೋಗುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Tirupati laddu Row : ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ

VISTARANEWS.COM


on

By

Also test the prasadam of the holy places of the state Pralhad Joshi urges state government
Koo

ನವದೆಹಲಿ: ತಿರುಪತಿ ಪ್ರಕರಣದ (Tirupati laddu Row) ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ತಿರುಪತಿ ಪ್ರಸಾದದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿದ ಕಾರಣ ರಾಜ್ಯದಲ್ಲಿನ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವುದು ಒಳಿತು ಎಂದು ಸಚಿವರು ಅಭಿಪ್ರಾಯಿಸಿದರು. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರುಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು!? ಎಂಬ ಸಂಗತಿ ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ ಎಂದು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರ ಅವಧಿಯಲ್ಲಿ ಈ ರೀತಿ ಹಲವು ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ತಿರುಮಲ ತಿರುಪತಿಯ ಟ್ರಸ್ಟ್ ನಲ್ಲಿ ಜಗನ್ ರೆಡ್ಡಿ ಅವರು ಹಿಂದೂಯೇತರರನ್ನೂ ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು ಎಂದು ಜೋಶಿ ಆರೋಪಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಮತ್ತೆ ಈ ರೀತಿಯ ವಿಚಾರಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ನೂತನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸದಾ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲೂ ಎಚ್ಚರ ವಹಿಸಿ: ಆಂಧ್ರಪ್ರದೇಶ ಪ್ರಕರಣದಿಂದ ಕರ್ನಾಟಕ ಸಹ ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನ ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಚಿವ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಧಾರ್ಮಿಕ ಟ್ರಸ್ಟ್ ಗೆ ಬೇಡ ಹಿಂದೂಯೇತರರ ನೇಮಕ: ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದು ಎಂದೂ ಸಚಿವ ಪ್ರಲ್ಹಾದ ಜೋಶಿ ಸರ್ಕಾರಕ್ಕೆ ಆಗ್ರಹಿದ್ದಾರೆ.

ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ- ತನಿಖೆಗೆ ಸಿಟಿ ರವಿ ಆಗ್ರಹ

ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಪ್ರಾಣಿ ಕೊಬ್ಬು ಬಳಕೆ ಆರೋಪದ ಕುರಿತು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ತಿರುಪತಿ ಕೋಟ್ಯಾಂತರ ಭಕ್ತರ ಶ್ರದ್ಧೆಯ ಧಾರ್ಮಿಕ ಸ್ಥಳವಾಗಿದೆ. ಸಾವಿರಾರು ವರ್ಷಗಳಿಂದ ಬಾಲಾಜಿ ಜತೆ ಅವಿನಾಭಾವ ಸಂಬಂಧವಿದೆ. ವಾರಕ್ಕೊಮ್ಮೆ ಬಾಲಾಜಿ ದರ್ಶನಕ್ಕೆ ಹೋಗುವವರು ಇದ್ದಾರೆ. ತಿರುಪತಿ ಲಡ್ಡು ಪ್ರಸಾದಕ್ಕೆ ಇರುವ ಭಾವನೆಯೇ ಬೇರೆ.

ಅದು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ ಭಕ್ತಿಯ ಪ್ರಸಾದವಾಗಿದೆ. ಇಂತಹ ಪ್ರಸಾದ ತಯಾರಿಸುವಾಗ ಧಾರ್ಮಿಕ ಸ್ಯಾಂಟಿಟಿ ಕಾಪಾಡಿಕೊಳ್ಳಬೇಕು. ಕರ್ನಾಟಕದಿಂದಲೇ ನಂದಿನಿ ತುಪ್ಪ ಅಲ್ಲಿಗೆ ಸರಬರಾಜಾಗುವುದನ್ನ ಕೇಳಿದ್ದೇನೆ. ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ ಎಂಬ ಮಾತು ಆಶ್ಚರ್ಯ-ಆಘಾತ ಎರಡೂ ಆಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ಮಾಡುವ ಯೋಚನೆಯಾದರೂ ಯಾರಿಗೆ ಬರುತ್ತೆ. ಯಾರಿಗೆ ಗುತ್ತಿಗೆ ನೀಡಿದ್ದರು ಎಲ್ಲವನ್ನು ಗಂಭೀರವಾಗಿ ತನಿಖೆ ನಡೆಸಬೇಕು. ಇದು ನಮ್ಮ ಭಾವನೆ, ನಂಬಿಕೆ, ಶ್ರದ್ಧೆಯ ಪ್ರಶ್ನೆ, ಅದಕ್ಕೆ ಧಕ್ಕೆಯಾಗುತ್ತೆ. ಸಮಗ್ರ ತನಿಖೆಯಾದರೆ ಭಕ್ತರ ಮನಸ್ಸಿಗೆ ಸ್ಪಷ್ಟತೆ ಬರಲಿದೆ ಎಂದರು.

ತಿರುಪತಿಗೆ 350 ಮೆಟ್ರಿಕ್ ಟನ್ ತುಪ್ಪ ರವಾನೆ

ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪಕ್ಕೂ, ‌ನಮ್ಮ ನಂದಿನಿಗೂ ಯಾವುದೇ ಸಂಬಂಧವಿಲ್ಲ. ಕಳೆದ ಕೆಲ ದಿನಗಳ ಹಿಂದೆ ಟಿಟಿಡಿ ಪ್ರೆಸ್ ಮೀಟ್ ಮಾಡಿದೆ. ನಂದಿನಿ ಹಾಲು ಹೊರಗಿಟ್ಟು ಬೇರೆ ಬೇರೆ ತುಪ್ಪ ತೆಗೆದುಕೊಂಡಿದ್ದಾರೆ. ಇದರ ಉದ್ದೇಶ ಏನು ಅಂತ ಟಿಟಿಡಿ ಅವರು ಕೇಳಿದ್ದಾರೆ. ಹಿಂದೆ ನಂದಿನಿ ತುಪ್ಪ ಏಕೆ ಬೇಡ ಅಂತ ಹೇಳಿದ್ದರು ಅನ್ನೋದು ನಮ್ಮಗೆ ಗೊತ್ತಿಲ್ಲ.

ಈಗ ಮತ್ತೆ ನಂದಿನಿ ಹಾಲು ಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ.ಈಗ ಮತ್ತೆ ಕಳೆದ ಒಂದು ತಿಂಗಳಿನಿಂದ 350 ಮೆಟ್ರಿಕ್ ಟನ್ ತುಪ್ಪ ಹೋಗುತ್ತಿದೆ. ಈಗ ಆರೋಪ ಅಷ್ಟೇ ಪ್ರಾಣಿ ಕೊಬ್ಬಿನ ಅಂಶ ಬಳಕೆ ಆಗ್ತಾಯಿತ್ತಾ ಅನ್ನೋ ವರದಿ ಬರಬೇಕು. ಒಂದೂ ವೇಳೆ ಬಳಕೆ ಆಗ್ತಾಯಿತ್ತು ಅಂದರೆ ದುರದೃಷ್ಟಕರ ವಿಚಾರ ಇದು. ಒಟ್ಟಾರೆ ಈಗ ನಾವು ನಂದಿನಿಯಿಂದ ತುಪ್ಪ ಕೊಡಲು ತಯಾರಿ ಇದ್ದೀವಿ ಅಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor darshan
ಪ್ರಮುಖ ಸುದ್ದಿ4 ಗಂಟೆಗಳು ago

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

KEA UGCET 2024
ಬೆಂಗಳೂರು5 ಗಂಟೆಗಳು ago

UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌

ಚಿಕ್ಕೋಡಿ5 ಗಂಟೆಗಳು ago

Physical Abuse: ಬಾಲಕಿಯನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರವೆಸಗಿ ಕೊಂದಿದ್ದ ನೀಚನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್‌

BBMP plans to make arrangements for food in areas where stray dogs do not get food
ಬೆಂಗಳೂರು6 ಗಂಟೆಗಳು ago

Street Dogs : ಬೀದಿನಾಯಿಗಳ ಹಸಿವು ನೀಗಿಸಲು ಮುಂದಾದ ಬಿಬಿಎಂಪಿ; ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ

Cm Siddaramaiah
ಬೆಂಗಳೂರು6 ಗಂಟೆಗಳು ago

CM Siddaramaiah : ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ

Mahalaya Amavasya on Gandhi Jayanti Poultry Association demands withdrawal of ban on sale of meat
ಬೆಂಗಳೂರು7 ಗಂಟೆಗಳು ago

Mahalaya Amavasya 2024: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ; ಮಾಂಸ ಮಾರಾಟ ನಿಷೇಧ ಹಿಂಪಡೆಯುವಂತೆ ಒತ್ತಾಯ

Road Accident
ಬೆಂಗಳೂರು8 ಗಂಟೆಗಳು ago

Road Accident : ಆಟೋಗೆ ಲೋಡ್‌ ತುಂಬಿದ್ದ ಲಾರಿ ಡಿಕ್ಕಿ; ಚಾಲಕನ ನಿದ್ರೆ ಮಂಪರಿಗೆ ಜೀವ ಬಿಟ್ಟಳು ಯುವತಿ

Techie robbery plans to delete her photo video from lovers mobile phone
ಬೆಂಗಳೂರು9 ಗಂಟೆಗಳು ago

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Hopcoms store loses charm in Bengaluru
ಬೆಂಗಳೂರು10 ಗಂಟೆಗಳು ago

HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ

fire accident
ಬೆಂಗಳೂರು ಗ್ರಾಮಾಂತರ11 ಗಂಟೆಗಳು ago

Fire Accident : ಹೊಸೂರು ಸಮೀಪದ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು ‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌