Uttarkashi Tunnel Rescue: ಕುಸಿದ ಸುರಂಗದೊಳಗೆ ಕಳೆದ ಆ 17 ದಿನಗಳು! - Vistara News

ದೇಶ

Uttarkashi Tunnel Rescue: ಕುಸಿದ ಸುರಂಗದೊಳಗೆ ಕಳೆದ ಆ 17 ದಿನಗಳು!

ಕುಸಿದ ಸುರಂಗದಲ್ಲಿ, ಉಸಿರುಗಟ್ಟಿಸುವ, ಬೆಳಕಿಲ್ಲದ ಆ ಭೂಗರ್ಭದಲ್ಲಿ 17 ದಿನಗಳ ಕಾಲ ಕಾರ್ಮಿಕರು ಹೇಗೆ ದಿನ ಕಳೆದರು? (Uttarkashi Tunnel Rescue) ಕ್ಷಣಕ್ಷಣದ ಡಿಟೇಲ್ಸ್‌ ಇಲ್ಲಿದೆ.

VISTARANEWS.COM


on

uttarkashi tunnel rescue labours
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ (Uttarkashi Tunnel Rescue) ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಹಾಕಿಕೊಂಡ 41 ಕಾರ್ಮಿಕರು ಮುಂದಿನ 17 ದಿನಗಳ ಕಾಲ ಉಸಿರುಗಟ್ಟಿಸುವ, ಬೆಳಕಿಲ್ಲದ ಆ ಭೂಗರ್ಭದಲ್ಲಿ ಹೇಗೆ ದಿನ ಕಳೆದರು? ಕ್ಷಣಕ್ಷಣದ ಡಿಟೇಲ್ಸ್‌ ಇಲ್ಲಿದೆ.

ನವೆಂಬರ್ 11ರಂದು ರಾತ್ರಿ 8 ಗಂಟೆಗೆ ಈ ಕಾರ್ಮಿಕರು ನೈಟ್‌ಶಿಫ್ಟ್‌ಗಾಗಿ ಸುರಂಗ ಪ್ರವೇಶಿಸಿದ್ದರು. ರಾತ್ರಿಯಿಡೀ ಕೆಲಸ ಮಾಡಿ, ಮರುದಿನ ಬೆಳಿಗ್ಗೆ ಹೊರಬಿದ್ದು, ದೀಪಾವಳಿ ಹಬ್ಬ ಅಚರಿಸೋಣ ಎಂಬುದು ಅವರ ಇರಾದೆಯಾಗಿತ್ತು. ಆದರೆ ಮರುದಿನ ಬೆಳಿಗ್ಗೆ 5.30ರ ಹೊತ್ತಿಗೆ ಸುತ್ತಲಿನ ಭೂಮಿ ಒಮ್ಮೆಗೇ ನಡುಗಿತು. ಹಿಮಾಲಯ ಪರ್ವತ ತನ್ನ ಅನಿರೀಕ್ಷಿತ ಗುಣವನ್ನು ತೋರಿಸಿತು. ಸ್ವಲ್ಪ ಸಮಯದವರೆಗೆ ಕಾರ್ಮಿಕರಿಗೆ ಯಾವ ಅಪಾಯದ ಅರಿವೂ ಆಗಲಿಲ್ಲ. ಆದರೆ ಮುಂದಿನ ಅರ್ಧ ಘಂಟೆಯವರೆಗೆ ಅವರು ನಡೆದುಬಂದ ದಾರಿಗೆ ಮೇಲಿನಿಂದ ಗುಡ್ಡದ ಶಿಲಾಖಂಡರಾಶಿ ಕುಸಿಯುತ್ತಾ ಹೋಯಿತು.

ತಾವು ಸಿಕ್ಕಿಬಿದ್ದೆವು ಎಂಬುದು ಕಾರ್ಮಿಕರಿಗೆ ಗೊತ್ತಾಗಿಹೋಯಿತು. ಅವರು ಹೊರಹೋಗುವ ದಾರಿ ಸಂಪೂರ್ಣ ಬಂದ್‌ ಆಯಿತು. ಅವರು ಮೊದಲಿಗೆ ಅವಶೇಷ ಕೆರೆದು ತೆಗೆಯಲು ಪ್ರಯತ್ನಿಸಿದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಕಾರ್ಮಿಕರು ಕೆಲಸ ನಿಲ್ಲಿಸಿ ಕುಳಿತರು. ಒಳಗಿದ್ದ ಕಾರ್ಮಿಕರ ನಾಯಕ ಬಿಸ್ವೇಶ್ವರ್ ನಾಯಕ್ ಅವರು ಬೆಳಿಗ್ಗೆ 8 ಗಂಟೆಗೆ ಮೊಬೈಲ್ ಫೋನ್ ನೋಡಿದರು. “ಆ ಹೊತ್ತಿಗೆ, ನಾವು ಸಿಕ್ಕಿಬಿದ್ದಿದ್ದೇವೆ ಎಂದು ನಮಗೆ ತಿಳಿದಿತ್ತು. ನಮಗೆ ಭಯವಾಯಿತು, ಹೆಂಡತಿ ಮಕ್ಕಳ ನೆನಪಾಯಿತುʼʼ ಎಂದು ನಾಯಕ್ ಹೇಳುತ್ತಾರೆ.

ಮುಂದಿನ 17 ದಿನಗಳು!

ತಾವು ಅಲ್ಲೇ ಅದೇ ಪರಿಸ್ಥಿತಿಯಲ್ಲಿ ಮುಂದಿನ 17 ದಿನಗಳವರೆಗೆ ಇರಬೇಕಾಗಬಹುದು ಎಂಬ ಯಾವ ಕಲ್ಪನೆಯೂ ಆ ಕಾರ್ಮಿಕರಿಗೆ ಇರಲಿಲ್ಲ. ಆದರೆ ಅಷ್ಟೂ ದಿನ ಆ ಸುರಂಗವೇ ಅವರ ಮನೆಯಾಯಿತು. ವರು ಭರವಸೆ ಹೊಂದಿದ್ದರು, ಭರವಸೆ ಕಳೆದುಕೊಂಡರು, ಮತ್ತೆ ಗಳಿಸಿದರು; ರಕ್ಷಣಾ ಕಾರ್ಯಾಚರಣೆಗಳು ವಿಫಲವಾದಾಗ ಆತಂಕ ಅನುಭವಿಸಿದರು. ಎಲ್ಲವನ್ನೂ ಜೊತೆಗೇ ಅನುಭವಿಸಿದರು. ಇರುವ ಕನಿಷ್ಠವನ್ನು ಬಳಸಿಕೊಂಡು ಬದುಕಲು ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡರು.

ಒಡಿಶಾದ 40 ವರ್ಷದ ನಾಯಕ್, ನಾಲ್ಕೂವರೆ ವರ್ಷಗಳಿಂದ ಪರ್ವತಗಳಲ್ಲಿ ಸುರಂಗ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 12ರ ಬೆಳಿಗ್ಗೆ 5.30ಕ್ಕೆ ಭೂಕುಸಿತದ ಶಬ್ದಗಳು ಮೊದಲು ಪ್ರಾರಂಭವಾದಾಗ, ಅದು ಗಂಭೀರವಾಗಿರಲಿಕ್ಕಿಲ್ಲ ಎಂದು ಮೊದಲು ನಂಬಿದ್ದರು. ಉತ್ತರಾಖಂಡದಲ್ಲಿ ನಾಲ್ಕು ವರ್ಷಗಳಲ್ಲಿ ಕನಿಷ್ಠ ನಾಲ್ಕು ಭೂಕಂಪಗಳು ಸಂಭವಿಸಿವೆ. ಈ ರೀತಿಯ ಘಟನೆ ಸಂಭವಿಸಿರಲಿಲ್ಲ. ಬಂಡೆಗಳು ಬೀಳುತ್ತಲೇ ಇದ್ದವು. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಅವಶೇಷಗಳು 70 ಮೀಟರ್‌ಗಳಷ್ಟು ದಪ್ಪವಾಗಿದ್ದವು.

ನಾಯಕ್‌ ಕೂಡಲೇ ಕಾರ್ಮಿಕರ ತಲೆ ಎಣಿಕೆ ಮಾಡಿದರು. ಒಳಗೆ 41 ಮಂದಿ ಇದ್ದರು. ಬಂಡೆಗಳು ಬೀಳುವುದನ್ನು ನಿಲ್ಲಿಸಿದ್ದವು. ಎಲ್ಲ ಸ್ತಬ್ಧವಾಗಿತ್ತು. ಭಯಾನಕ ಶಾಂತಿ ಆವರಿಸಿತ್ತು. ಜೊತೆಗೆ ಅವರ ಮೊಬೈಲ್ ಫೋನ್‌ಗಳಿದ್ದವು. ಆದರೆ ಸುರಂಗದೊಳಗೆ ಯಾವುದೇ ನೆಟ್‌ವರ್ಕ್ ಇರಲಿಲ್ಲ. ಅವರ ವಾಕಿ-ಟಾಕಿ ಹ್ಯಾಂಡ್‌ಸೆಟ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಮೊದಲ ನಾಲ್ಕು ಗಂಟೆಗಳು ಭಯಾನಕವಾಗಿದ್ದವು.

ಹೊರಜಗತ್ತಿಗೆ ಸಂದೇಶ

ಅವರು ಮಾಡಬೇಕಾಗಿದ್ದ ಮೊದಲ ಕೆಲಸವೆಂದರೆ ತಾವು ಜೀವಂತವಾಗಿದ್ದೇವೆ ಎಂದು ಹೊರಜಗತ್ತಿಗೆ ತಿಳಿಸುವುದು. ಈ ಸುರಂಗ ರಚನೆ ಮಾಡುತ್ತಾ ಎರಡು ಪೈಪ್‌ಗಳನ್ನು ಜೋಡಿಸಲಾಗಿತ್ತು. 3 ಮತ್ತು 4 ಇಂಚು ವ್ಯಾಸದ ಪೈಪ್‌ಗಳು. ಅವು ಯಂತ್ರಗಳನ್ನು ತಂಪಾಗಿಸಲು ಹೊರಗಿನಿಂದ ನೀರನ್ನು ಸಾಗಿಸಲು ಮತ್ತು ಬಂಡೆಯಿಂದ ನಿರ್ಮಾಣ ಸ್ಥಳಕ್ಕೆ ಹರಿಯುವ ನೀರನ್ನು ಹೊರಹಾಕಲು ಬಳಸಲಾಗುತ್ತಿತ್ತು. ಅವುಗಳ ಮೂಲಕ, ಅವರದೇ ಆದ ಒಂದು ರೀತಿಯ ಮೋರ್ಸ್ ಕೋಡ್‌ನಲ್ಲಿ, ಪ್ರತಿ ಐದು ನಿಮಿಷಗಳಿಗೊಮ್ಮೆ ಪೈಪ್‌ನಲ್ಲಿ ನೀರನ್ನು ನಿರ್ಬಂಧಿಸುತ್ತಾ, ತಾವು ತೊಂದರೆಯಲ್ಲಿದ್ದೇವೆ ಎಂಬ ಸಂದೇಶವನ್ನು ಹೊರಗಿದ್ದ ಇಂಜಿನಿಯರ್‌ಗಳಿಗೆ ಕಳಿಸಿದರು.

ಒಳಗೆ ವಿದ್ಯುತ್ ಮತ್ತು ಬೆಳಕು ಇತ್ತು. ಆದರೆ ಆಮ್ಲಜನಕ ಬೇಗನೆ ಖಾಲಿಯಾಗಬಹುದು ಎಂಬ ಭಯವಿತ್ತು. ಕೆಲವು ಗಂಟೆಗಳ ನಂತರ ಇಂಜಿನಿಯರ್‌ಗಳು ಇವರ ಸಂದೇಶವನ್ನು ಗಮನಿಸಿದರು ಮತ್ತು ಅವರು ಕೂಡ ಪೈಪ್‌ಗಳನ್ನು ಬಳಸಿ ಒಳಗಿದ್ದವರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಹೊರಗಿದ್ದ ರಕ್ಷಕರಿಂದ ʼನೀವು ಓಕೇನಾ?ʼ ಎಂಬ ಪ್ರಶ್ನೆ. “ಓಕೆʼ ಎಂಬ ಉತ್ತರ ಒಳಗಿನಿಂದ. ಈಗ ಪರಸ್ಪರ ಸಂದೇಶ ಕಳಿಸಬಹುದು ಎಂಬುದೇ ದೊಡ್ಡ ಭರವಸೆಯಾಗಿತ್ತು.

ಆಹಾರ, ಆಮ್ಲಜನಕ

ಮೊದಲ ಕೆಲವು ದಿನಗಳು 4 ಇಂಚಿನ ಪೈಪೇ ಅವರ ಜೀವಸೆಲೆಯಾಯಿತು. ಮೊದಲ ಎರಡು ದಿನಗಳಲ್ಲಿ, ಪ್ಯಾಕೆಟ್‌ಗಳ ಮೂಲಕ ಆಮ್ಲಜನಕ ಮತ್ತು ಒಣ ಆಹಾರವನ್ನು ಪೈಪ್‌ನಲ್ಲಿ ಕಳಿಸಲಾಯಿತು. ಪಫ್ಡ್ ರೈಸ್, ಗೋಡಂಬಿ, ಒಣದ್ರಾಕ್ಷಿ ಕಳಿಸಲಾಯಿತು. ಆದರೆ ಎರಡು ದಿನ ಅದನ್ನು ಯಾರೂ ಸೇವಿಸಲಿಲ್ಲ. ಎಲ್ಲರೂ ಚಿಂತೆಯಿಂದ ಅಸ್ವಸ್ಥರಾಗಿದ್ದರು. ಮೂರನೇ ದಿನ, ತುಂಬಾ ಹಸಿದ ಬಳಿಕ ಎಲ್ಲರೂ ತಿನ್ನಲು ಪ್ರಾರಂಭಿಸಿದರು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವೆಲ್ಲವೂ ಪಫ್ಡ್‌ ರೈಸ್.‌

ಆಮ್ಲಜನಕ ಮುಖ್ಯವಾಗಿತ್ತು. ಮೊದಲ ಒಂದೂವರೆ ದಿನ ಉಸಿರಾಟದ ತೊಂದರೆ ಇರಲಿಲ್ಲ. ಸುರಂಗದ 2 ಕಿಮೀ ತ್ರಿಜ್ಯವು ಗಾಳಿಯನ್ನು ಒದಗಿಸಿತು. ಬಳಿಕ ಅದೂ ಹಳತಾಗಲು ಪ್ರಾರಂಭಿಸಿತು. ಕೆಲವರು ಉಸಿರಾಟದ ತೊಂದರೆ ಎದುರಿಸಲು ಪ್ರಾರಂಭಿಸಿದರು. ಹದಿನೆಂಟು ಗಂಟೆಗಳ ನಂತರ, ಹೊರಗಿನಿಂದ ಸಣ್ಣ ಪೈಪ್‌ಲೈನ್ ಮೂಲಕ ಆಮ್ಲಜನಕವನ್ನು ಪಂಪ್ ಮಾಡಲು ಪ್ರಾರಂಭಿಸಿದರು. ಅದು ಜೀವಚೈತನ್ಯ ತುಂಬಿತು. ವಾಕರಿಕೆ ಮತ್ತು ಅಜೀರ್ಣದಂತಹ ಕೆಲವು ಸಮಸ್ಯೆ ಕೆಲವರಿಗೆ ಕಂಡುಬಂದವು. ಅದೃಷ್ಟವಶಾತ್‌ ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಕಾಡಲಿಲ್ಲ. “ಪ್ರತಿದಿನ ಒಂದೇ ರೀತಿಯ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ನಾವು ತಿನ್ನದೆ ಉಳಿಸಿದ ಒಣ ಹಣ್ಣುಗಳ ಪ್ಯಾಕೆಟ್‌ಗಳು ಒಳಗೆ ಹಾಗೇ ಇವೆ” ಎಂದು ಬಿಹಾರದ ಅರಾದಿಂದ ಬಂದ 34 ವರ್ಷದ ಸಬಾ ಅಹ್ಮದ್ ಹೇಳುತ್ತಾರೆ.

Uttarakhand tunnel rescue

ಮೊದಲ ಕೆಲವು ದಿನಗಳವರೆಗೆ ಮೊಬೈಲ್ ಫೋನ್ ಚಾರ್ಜರ್‌ಗಳು ಇರಲಿಲ್ಲ. ಮನರಂಜನೆಗೆ ಏನೂ ಇರಲಿಲ್ಲ. ಅವರು ಮಕ್ಕಳಾಟಗಳನ್ನು ಆಡಿದರು. ರಾಜಾ, ರಾಣಿ, ಚೋರ್, ಸಿಪಾಹಿ; ಕಾಗದದ ಚೀಟಿಗಳಲ್ಲಿ ಆಡುವ ಆಟಗಳು ಇತ್ಯಾದಿ. ಸಮಯವನ್ನು ತಿಳಿಯಲು ಮಾತ್ರ ಫೋನ್‌ಗಳನ್ನು ಆನ್ ಮಾಡುತ್ತಿದ್ದರು.

9ನೇ ದಿನ ಒಂದು ಪ್ರಗತಿ ಕಂಡುಬಂತು. ಶಿಲಾಖಂಡರಾಶಿಗಳ ಮಧ್ಯದಿಂದ ಆರು ಇಂಚಿನ ಪೈಪ್‌ಲೈನ್ ಹೊರಹೊಮ್ಮಲು ಪ್ರಾರಂಭಿಸಿತು. ಇದು ಮನುಷ್ಯನನ್ನು ಸಾಗಿಸಲು ಸಾಕಾಗುವಂತಿರಲಿಲ್ಲ. ಆದರೆ ಬೇಯಿಸಿದ ಆಹಾರ, ನೀರು, ಮೊಬೈಲ್ ಫೋನ್ ಚಾರ್ಜರ್‌ಗಳು ಮತ್ತು ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ವಿನಿಮಯ ಮಾಡಲು ಸಾಕಾಗುವಂತಿತ್ತು. ಕಾರ್ಮಿಕರು ಬದುಕಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಅಲ್ಲಿಗೆ ತಲುಪಿದ ಕ್ಯಾಮೆರಾ ಜಗತ್ತಿಗೆ ತಿಳಿಸಿತು. ಕಾರ್ಮಿಕರಿಗೆ ಹೊಸ ಭರವಸೆ ನೀಡಿತು.

41 ಕಾರ್ಮಿಕರಲ್ಲಿ 51 ವರ್ಷದ ಗುಲಾಬ್ ಸಿಂಗ್ ನೇಗಿ ಮತ್ತು 34 ವರ್ಷದ ಸಾಬಾ ಅಹ್ಮದ್ ಎಂಬ ಇಬ್ಬರು ಫೋರ್‌ಮನ್‌ಗಳಿದ್ದರು. ಅವರು ದಿನಚರಿ ಪಟ್ಟಿ ಮಾಡುವ ಜವಾಬ್ದಾರಿ ವಹಿಸಿಕೊಂಡರು. “ಪ್ರತಿದಿನ ಬೆಳಿಗ್ಗೆ ನಾವು ಎಚ್ಚರಗೊಂಡ ಬಳಿಕ 2 ಕಿಮೀ ವಿಸ್ತಾರದಲ್ಲಿ ವಾಕ್ ಮಾಡಿದೆವು. ಪ್ರತಿಯೊಬ್ಬರಿಗೂ ಯೋಗ ಮಾಡುವಂತೆ ಪ್ರೇರೇಪಿಸಿದೆವು. ನಂತರ ಉಪಹಾರ ಸೇವನೆ. ಆರಂಭದಲ್ಲಿ ಅನ್ನ ಮತ್ತು ಡ್ರೈ ಫ್ರೂಟ್ಸ್ ಮಾತ್ರ. ಆರು ಇಂಚಿನ ಪೈಪ್ ಹಾಕಿದ ನಂತರ ಖಿಚಡಿ, ಬ್ರೆಡ್, ಮೊಟ್ಟೆ, ಜಾಮ್ ಮತ್ತು ಹಣ್ಣುಗಳು ಸಿಕ್ಕಿದವು. ನಮಗೆ ಬೇಕಾದುದನ್ನು ನಾವು ಸಂವಹನ ಮಾಡಿದ ನಂತರ ಅಂತಿಮವಾಗಿ ಫೋನ್ ಚಾರ್ಜರ್‌ಗಳನ್ನು ಕಳುಹಿಸಲಾಯಿತು. ನಂತರ ಕಾರ್ಮಿಕರು ತಮ್ಮ ಫೋನ್‌ನಲ್ಲಿ ಆಡತೊಡಗಿದರು. ಉದಾಹರಣೆಗೆ, ನಾನು ನನ್ನ ಫೋನ್‌ನಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡಿದ್ದೇನೆ” ಎಂದು ಸಾಬಾ ಅಹ್ಮದ್ ಹೇಳಿದರು.

Uttarkashi tunnel

ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದ ಸುರಂಗವು ಬಿಸಿಯಾಗಿಯೂ ಇರಲಿಲ್ಲ, ಅಥವಾ ತೀರಾ ತಂಪಾಗಿಯೂ ಇರಲಿಲ್ಲ. ಆದರೆ ನೀರಿನ ಸಮಸ್ಯೆ ಇದ್ದೇ ಇತ್ತು. ಸುರಂಗದ ಒಳಗೆ, ನೀರು ಬಂಡೆಗಳಿಂದ ಕೆಳಕ್ಕೆ ಇಳಿಯುತ್ತದೆ. ಮೊದಲ ಒಂಬತ್ತು ದಿನಗಳು, ಆರು ಇಂಚಿನ ಪೈಪ್ ಅನ್ನು ಕಳಿಸುವವರೆಗೆ ಅವರೆಲ್ಲಾ ಆ ಜಿನುಗುವ ನೀರನ್ನೇ ಸೇವಿಸಿದರು.

ಸ್ನಾನ, ಟಾಯ್ಲೆಟ್‌ ಹೀಗಿತ್ತು!

ಆರಂಭಿಕ ದಿನಗಳಲ್ಲಿ ನೀರಿನ ಕೊರತೆಯಿಂದಾಗಿ ಮಲಬದ್ಧತೆ ಕಾಡಿತು. ಯಾರೂ ನವೆಂಬರ್ 11ರ ನಂತರ ಸ್ನಾನ ಮಾಡಿರಲಿಲ್ಲ. ಬಂಡೆಗಳಿಂದ ಬೀಳುವ ನೀರಿನಲ್ಲಿ ರಾಸಾಯನಿಕಗಳಿರುತ್ತವೆ. ಏಕೆಂದರೆ ಸುರಂಗ ನಿರ್ಮಾಣದ ಸಮಯದಲ್ಲಿ ಶಾಟ್‌ಕ್ರೀಟ್ ವಿಧಾನವನ್ನು ಬಳಸಲಾಗುತ್ತದೆ. ಹೀಗಾಗಿ ಆ ನೀರು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಆತಂಕವಿತ್ತು.

ಇನ್ನೊಂದು ಸಮಸ್ಯೆಯೆಂದರೆ ಟಾಯ್ಲೆಟ್‌ನದು. ಇದಕ್ಕಾಗಿ ಕಾರ್ಮಿಕರು ಸುರಂಗದ ಇನ್ನೊಂದು ತುದಿಯಲ್ಲಿ ಬಾರ್ಕೋಟ್ ಬದಿಯಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿದರು. ಒಳಗಿನ 2 ಕಿಮೀ ವಿಸ್ತಾರದ ಒಂದು ಮೂಲೆಯಲ್ಲಿ, ಅವರ ಬಳಿಯಿದ್ದ ಪೊಕ್ಲೇನ್ ಯಂತ್ರದ ಮೂಲಕ 50ರಿಂದ 60 ಹೊಂಡಗಳನ್ನು ಅಗೆದು, ಅದನ್ನು ಮಲವಿಸರ್ಜನೆಗೆ ಬಳಸಿದರು. ನಂತರ ಹೊಂಡಗಳನ್ನು ಮಣ್ಣಿನಿಂದ ಮುಚ್ಚಿದರು.

ಮಲಗಲು ಕಾರ್ಮಿಕರು ಬೆಡ್‌ಶೀಟ್‌ಗಳು ಮತ್ತು ಹೊದಿಕೆಗಳಾಗಿ ಜಿಯೋಟೆಕ್ಸ್ಟೈಲ್ ಶೀಟ್‌ಗಳನ್ನು ಬಳಸಿದರು. ಇವು ಪಾಲಿಯೆಸ್ಟರ್‌ನಿಂದ ಮಾಡಲ್ಪಟ್ಟಿವೆ. ಇವು ಮಣ್ಣನ್ನು ಬೇರ್ಪಡಿಸಲು, ಫಿಲ್ಟರ್ ಮಾಡಲು, ಬಲಪಡಿಸಲು ಬಳಸಲಾಗುತ್ತದೆ. ಆದರೆ ಆಗಾಗ್ಗೆ ನಿದ್ರೆಗೆ ತೊಂದರೆಯಾಗುತ್ತಿತ್ತು. “ಸಾವು ನಿಮ್ಮ ಮುಂದೆಯೇ ಇದ್ದಾಗ ಯಾರೂ ನೆಮ್ಮದಿಯಾಗಿ ಮಲಗಲು ಅಥವಾ ತಿನ್ನಲು ಸಾಧ್ಯವಿಲ್ಲ. 4 ಅಥವಾ 5 ಗಂಟೆ ಮಲಗುತ್ತಿದ್ದರು. ನಂತರ ಎಚ್ಚರವಾಗುತ್ತಿತ್ತು. ಬೆಳಗ್ಗೆ 8ರ ಹೊತ್ತಿಗೆ, ಪೈಪ್‌ನ ಇನ್ನೊಂದು ತುದಿಯಿಂದ ರಕ್ಷಕಕರು ಇವರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಿದ್ದರು. ರಾತ್ರಿ 10ರಿಂದ 11 ಗಂಟೆಯ ನಡುವೆ, ಮಲಗುವ ಮೊದಲು, ಎಲ್ಲರೂ ಒಟ್ಟಾಗಿ ಪ್ರಾರ್ಥಿಸಲು ಸೇರುತ್ತಿದ್ದರು.

Uttarkashi Tunnel Rescue

ಎಚ್ಚರವಾಗಿದ್ದಾಗ, 6 ಇಂಚಿನ ಪೈಪ್ ಹಾಕಿದ ನಂತರ, ಬೇಸರವನ್ನು ದೂರವಿರಿಸಲು ಅವರು ತಮ್ಮ ಫೋನ್‌ಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸಿದರು. ಎರಡು ವಾರಗಳಲ್ಲಿ BSNL ಲ್ಯಾಂಡ್‌ಲೈನ್ ಾನ್ನು ಕಳುಹಿಸಲಾಯಿತು. ಎಲ್ಲರೂ ಅವರವರ ಕುಟುಂಬದೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಸುರಂಗ ಕಾರ್ಯಾಚರಣೆಯ ಹೀರೋ, ರ‍್ಯಾಟ್‌ ಹೋಲ್ ಮೈನರ್‌ ಮುನ್ನಾ ಖುರೇಷಿ ಯಾರು?

ಗ್ರೇಟ್‌ ಎಸ್ಕೇಪ್‌

ಎಂಡೋಸ್ಕೋಪಿಕ್ ಕ್ಯಾಮೆರಾ ಅಥವಾ BSNL ಲ್ಯಾಂಡ್‌ಲೈನ್‌ಗೆ ಲಗತ್ತಿಸಲಾದ ಮೈಕ್ರೊಫೋನ್‌ನಲ್ಲಿ ಈವರಿಗೆ ಪ್ರೋತ್ಸಾಹ ಹರಿದುಬರುತ್ತಿತ್ತು. 41 ಕಾರ್ಮಿಕರು ತಮ್ಮ ಕುಟುಂಬಗಳು, ಸಹೋದ್ಯೋಗಿಗಳು, ವೈದ್ಯರು, ಮನೋವೈದ್ಯರು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರೊಂದಿಗೆ ಮಾತನಾಡಿದರು.

ಪ್ರತಿದಿನ, ರಕ್ಷಕರು ಎಷ್ಟು ದೂರ ಬಂದಿದ್ದಾರೆಂದು ಅವರಿಗೆ ತಿಳಿಸಲಾಯಿತು. ಶೀಘ್ರದಲ್ಲೇ ಹೊರಬರುತ್ತೀರಿ ಎಂಬ ಭರವಸೆ ನೀಡಲಾಯಿತು. ನವೆಂಬರ್ 28 ಮಧ್ಯಾಹ್ನದ ಹೊತ್ತಿಗೆ, ಮೈಕ್ರೊಫೋನ್‌ನ ಇನ್ನೊಂದು ತುದಿಯಲ್ಲಿರುವ ಧ್ವನಿಯು, ರಕ್ಷಕರು 55 ಮೀಟರ್ ಶಿಲಾಖಂಡರಾಶಿಗಳನ್ನು ಕೊರೆದು ತೆಗೆದಿದ್ದಾರೆ ಎಂದರು. ಆದರೆ ಕಾರ್ಮಿಕರತ್ತ ಪೈಪ್ ಬಂದಿರಲಿಲ್ಲ. ಒಳಗಿದ್ದವರು ಗಾಬರಿಗೊಂಡರು. ಪೈಪ್ ಬೇರೆ ದಿಕ್ಕಿನಲ್ಲಿ ಹೋಗಿರಬಹುದು ಎಂದು ಭಾವಿಸಿದರು. ಇನ್ನೂ 5 ಮೀಟರ್ ಮುಂದೆ ತಳ್ಳುವಂತೆ ಮನವಿ ಮಾಡಿದರು.

ಮಧ್ಯಾಹ್ನ 1.30ಕ್ಕೆ ಕಾರ್ಮಿಕರು ಉಸಿರು ಬಿಗಿಹಿಡಿದು ನೋಡುತ್ತಿದ್ದಂತೆಯೇ ಅವಶೇಷಗಳು ಉದುರಲಾರಂಭಿಸಿದವು. ಐದೂವರೆ ಗಂಟೆಗಳ ನಂತರ ಇವರನ್ನು ಸ್ಥಳಾಂತರಿಸುವ ಪೈಪ್ ಅನ್ನು ನೋಡಿದರು. ಕುಸಿದ ಸುರಂಗದ ಸುತ್ತಲೂ “ಭಾರತ್ ಮಾತಾ ಕಿ ಜೈ” ಘೋಷಣೆ ಪ್ರತಿಧ್ವನಿಸಿತು. ರಾತ್ರಿ 9 ಗಂಟೆಯ ಹೊತ್ತಿಗೆ, ಕೆಲವರು ತಾತ್ಕಾಲಿಕ ಟ್ರಾಲಿಗಳಲ್ಲಿ, ಮತ್ತು ಕೆಲವರು ತೆವಳುತ್ತ ಹೊರಹೊಮ್ಮಿದರು. ಪರ್ವತದಿಂದ ಘಾಸಿಗೊಂಡಿದ್ದ ಅವರು ತಮ್ಮ ದಿಟ್ಟತನದ ಕಥೆಯನ್ನು ಹೇಳಲು ಬದುಕುಳಿದಿದ್ದರು.

ಇದನ್ನೂ ಓದಿ: ಸುರಂಗ ಕಾರ್ಯಾಚರಣೆ; ತಪ್ಪಿದ್ದು ಎಲ್ಲಿ, ಯಶಸ್ವಿಯಾದದ್ದು ಹೇಗೆ? ಕ್ಷಣಕ್ಷಣದ ಡೀಟೇಲ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Hardeep Singh Nijjar: 2013ರಲ್ಲಿ ನಿಜ್ಜರ್ ಪಾಕಿಸ್ತಾನಕ್ಕೆ ತೆರಳಿ ತಾರಾ ಜತೆ ಕಾಲ ಕಳೆದಿದ್ದ. ಪಾಕಿಸ್ತಾನದ ಗುರುದ್ವಾರದ ಮೇಲ್ಭಾಗದಲ್ಲಿ ತಾರಾ ಜೊತೆ ನಿಜ್ಜರ್ ಕಾಣಿಸಿಕೊಂಡಿರುವ ಫೊಟೋಗಳು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿವೆ. ತಾರಾ, ತನ್ನ ನಂತರ KTF ಅನ್ನು ವಹಿಸಿಕೊಳ್ಳಲು ನಿಜ್ಜರ್‌ನನ್ನು ನೇಮಿಸಲು ಮುಂದಾಗಿದ್ದ. ಆದರೆ, ನಿಜ್ಜರ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದ. ವರದಿ ಹೇಳಿದೆ. ನಂತರ, 2015 ರಲ್ಲಿ, ಅವರು ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆಯ ಉಸ್ತುವಾರಿ ವಹಿಸುವಷ್ಟು ಬಲಿಷ್ಟವಾಗಿ ಬೆಳೆದಿದ್ದ.

VISTARANEWS.COM


on

Hardeep Singh Nijjar
Koo

ನವದೆಹಲಿ: ಖಲಿಸ್ತಾನಿ ಉಗ್ರ, ಖಲಿಸ್ತಾನಿ ಟೈಗರ್ ಫೋರ್ಸ್‌ನ (Khalistani Tiger Force) ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಗೀಡಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸಂಸತ್‌ನಲ್ಲಿಯೇ ಆತನಿಗೆ ‘ಮೌನಾಚರಣೆ’ ಮೂಲಕ ಗೌರವ ಸಲ್ಲಿಸಿದ ವಿಚಾರ ಪ್ರಪಂಚಾದ್ಯಂತ ಸುದ್ದಿಯಾಗಿತ್ತು. ಇದೀಗ ನಿಜ್ಜರ್‌ ಕುರಿತ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ವರದಿ ಪ್ರಕಾರ ನಿಜ್ಜರ್‌ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ ಪಾಕಿಸ್ತಾನಕ್ಕೆ ಆಗಾಗ ಭೇಟಿ ಕೊಡುತ್ತಿದ್ದ. ಅಲ್ಲದೇ ಅಲ್ಲಿನ ಖಲಿಸ್ತಾನಿ ಉಗ್ರರನ್ನು ಭೇಟಿಯಾಗಿ ಭಾರತದ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ಬಯಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಅವರು 1970ರಲ್ಲಿ ಪಂಜಾಬ್‌ನಲ್ಲಿ ಜನಿಸಿದ್ದ. ಆರಂಭದಲ್ಲಿ ಕಾನೂನಿನ ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಖಲಿಸ್ತಾನಿಗಳಿಗೆ ನಿಜ್ಜರ್‌ ಕುಟುಂಬ ಆಶ್ರಯ ಮತ್ತು ಆಹಾರವನ್ನು ನೀಡುತ್ತಿತ್ತು. ಅವರ ಒಡನಾಟದಿಂದಾಗಿ ನಿಜ್ಜರ್ ಖಲಿಸ್ತಾನಿ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತನಾಗಿದ್ದ ಮತ್ತು ಪ್ರತ್ಯೇಕ ಸಿಖ್ ರಾಷ್ಟ್ರವನ್ನು ಬೆಂಬಲಿಸಲು ಶುರು ಮಾಡುತ್ತಾನೆ.

1995ರಲ್ಲಿ ಪಂಜಾಬ್‌ನ ಆಗಿನ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದರು. ಖಲಿಸ್ತಾನಿ ಭಯೋತ್ಪಾದಕರು ಸಿಎಂ ಮತ್ತು ಇತರ 17 ಮಂದಿಯನ್ನು ಹತ್ಯೆ ಮಾಡಿದ ನಂತರ, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಹಿಡಿಯಲು ಕೇಂದ್ರ ಸರ್ಕಾರ ಬೆನ್ಹತ್ತಿತ್ತು. ಈ ಪ್ರಕರಣದಲ್ಲಿ ನಿಜ್ಜರ್‌ ಕೂಡ ಭಾಗಿಯಾಗಿದ್ದ. ಇದಾದ ಬಳಿಕ ಹಿಂದೂ ವ್ಯಕ್ತಿಯ ನಕಲಿ ಗುರುತನ್ನು ಬಳಸಿಕೊಂಡು ನಿಜ್ಜರ್ ಭಾರತವನ್ನು ತಪ್ಪಿಸಿಕೊಂಡು ಕೆನಡಾಕ್ಕೆ ಓಡಿಹೋಗಿದ್ದ. ಅವರ ಪಾಸ್‌ಪೋರ್ಟ್‌ನಲ್ಲಿ ರವಿ ಶರ್ಮಾ ಹೆಸರಿತ್ತು. ಹಿಂದೂ ವ್ಯಕ್ತಿಯಂತೆ ಕಾಣಲು ಮತ್ತು ಸಿಖ್ ಗುರುತನ್ನು ಮರೆಮಾಚಲು ಅವರು ತಮ್ಮ ಕೂದಲು ಮತ್ತು ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದ ಎಂದು ವರದಿಗಳು ಬಹಿರಂಗಪಡಿಸಿವೆ.

ಕೆನಡಾವನ್ನು ತಲುಪಿದ ನಂತರ, ಅವರು ಅಲ್ಲಿನ ಪೊಲೀಸರಿಂದ ಹಿಂಸಿಸಲ್ಪಟ್ಟಿದ್ದಾನೆ ಎಂದು ಹೇಳಿಕೊಂಡು ನಿರಾಶ್ರಿತರ ಸ್ಥಾನಮಾನವನ್ನು ಪಡೆಯಲು ಪ್ರಯತ್ನಿಸಿದ್ದ. ಬಳಿಕ ಆತ ಕೆನಡಾದಲ್ಲಿ ವಾಸಿಸುವುದನ್ನು ಮುಂದುವರೆಸಿದ್ದ. ಕೊನೆಗೆ ಅಲ್ಲಿನ ಪೌರತ್ವ ಪಡೆಯುವಲ್ಲಿ ಯಶಸ್ವಿ ಆಗಿದ್ದ. ಅಲ್ಲಿ ಕೆಲವು ಕಾಲ ಕಳೆದು ಅಲ್ಲಿ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ಭಯೋತ್ಪಾದನಾ ಗುಂಪನ್ನು ನಿರ್ವಹಿಸುತ್ತಿದ್ದ. 2013ರಲ್ಲಿ ನಿಜ್ಜರ್ ಪಾಕಿಸ್ತಾನಕ್ಕೆ ತೆರಳಿ ತಾರಾ ಜತೆ ಕಾಲ ಕಳೆದಿದ್ದ. ಪಾಕಿಸ್ತಾನದ ಗುರುದ್ವಾರದ ಮೇಲ್ಭಾಗದಲ್ಲಿ ತಾರಾ ಜೊತೆ ನಿಜ್ಜರ್ ಕಾಣಿಸಿಕೊಂಡಿರುವ ಫೊಟೋಗಳು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿವೆ.

ತಾರಾ, ತನ್ನ ನಂತರ KTF ಅನ್ನು ವಹಿಸಿಕೊಳ್ಳಲು ನಿಜ್ಜರ್‌ನನ್ನು ನೇಮಿಸಲು ಮುಂದಾಗಿದ್ದ. ಆದರೆ, ನಿಜ್ಜರ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದ. ವರದಿ ಹೇಳಿದೆ. ನಂತರ, 2015 ರಲ್ಲಿ, ಅವರು ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆಯ ಉಸ್ತುವಾರಿ ವಹಿಸುವಷ್ಟು ಬಲಿಷ್ಟವಾಗಿ ಬೆಳೆದಿದ್ದ.

ಪ್ರಕರಣದ ಹಿನ್ನೆಲೆ

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಅಲ್ಲದೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೂಡ ಎನ್‌ಐಎ ಘೋಷಿಸಿತ್ತು.

ಇದನ್ನೂ ಓದಿ: Manoj Kalyane: ಬಿಜೆಪಿ ಮುಖಂಡ, ಮಧ್ಯ ಪ್ರದೇಶ ಸಚಿವರ ಆಪ್ತನ ಹತ್ಯೆ; ಬೈಕ್‌ನಲ್ಲಿ ಬಂದು ಗುಂಡಿನ ಮಳೆಗೆರೆದ ದುಷ್ಕರ್ಮಿಗಳು

Continue Reading

ದೇಶ

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

JP Nadda: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಅವಧಿಯು ಇದೇ ತಿಂಗಳು ಮುಗಿಯಲಿದೆ. 2020ರಿಂದ ಬಿಜೆಪಿ ಅಧ್ಯಕ್ಷರಾಗಿರುವ ನಡ್ಡಾ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈಗ ಜೆ.ಪಿ. ನಡ್ಡಾ ಅವರ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ, ಯಾರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬ ಕುತೂಹಲ ಮೂಡಿದೆ.

VISTARANEWS.COM


on

JP Nadda
Koo

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಜೆ.ಪಿ.ನಡ್ಡಾ (JP Nadda) ಅವರು ರಾಜ್ಯಸಭೆಯ (Rajya Sabha) ಸದನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದುವರೆಗೆ ಪಿಯೂಷ್‌ ಗೋಯಲ್‌ (Piyush Goyal) ಅವರು ಮೇಲ್ಮನೆಯಲ್ಲಿ ಸದನ ನಾಯಕರಾಗದ್ದರು. ಈಗ ಅವರ ಬದಲಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಆಯ್ಕೆ ಮಾಡಲಾಗಿದೆ. ಪಿಯೂಷ್‌ ಗೋಯಲ್‌ ಅವರು ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಆಯ್ಕೆಯಾದ ಕಾರಣ ಜೆ.ಪಿ.ನಡ್ಡಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಿಯೂಷ್‌ ಗೋಯಲ್‌ ಅವರು 2010ರ ಜುಲೈ 5ರಂದು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರನ್ನು ರಾಜ್ಯಸಭೆ ಸದನ ನಾಯಕರನ್ನಾಗಿ 2021ರ ಜುಲೈ 14ರಂದು ಆಯ್ಕೆ ಮಾಡಲಾಗಿತ್ತು. ಜೂನ್‌ 24ರಂದು ಪಿಯೂಷ್‌ ಗೋಯಲ್‌ ಅವರು ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೆ.ಪಿ. ನಡ್ಡಾ ಅವರು ವರ್ಷದ ಆರಂಭದಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಸದ್ಯ, ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ.

BJP National President JP Nadda Election campaign in Surapura

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಅವಧಿಯು ಇದೇ ತಿಂಗಳು ಮುಗಿಯಲಿದೆ. 2020ರಿಂದ ಬಿಜೆಪಿ ಅಧ್ಯಕ್ಷರಾಗಿರುವ ನಡ್ಡಾ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈಗ ಜೆ.ಪಿ. ನಡ್ಡಾ ಅವರ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ, ಯಾರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬ ಕುತೂಹಲ ಮೂಡಿದೆ. ಜೆ.ಪಿ. ನಡ್ಡಾ ಅವರಿಗೆ ಆರೋಗ್ಯ ಖಾತೆ ಜತೆಗೆ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಗಳನ್ನೂ ನೀಡಲಾಗಿದೆ.

ಬಜೆಟ್‌ನಲ್ಲಿ ಹೊಸ ತೆರಿಗೆ ಸ್ಲ್ಯಾಬ್‌?

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Parliament Session 2024: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಎಚ್‌ಡಿಕೆ, ಶೋಭಾ ಕರಂದ್ಲಾಜೆ; Video ಇಲ್ಲಿದೆ

Continue Reading

ದೇಶ

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

AI Sex Dolls: ಚೀನಾದ ಶೆಂಝೆನ್‌ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್‌ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಸುದ್ದಿಸಂಸ್ಥೆಯು ವರದಿ ಮಾಡಿದೆ.

VISTARANEWS.COM


on

Sex Doll
Koo

ನವದೆಹಲಿ: ಭಾರತ ಸೇರಿ ಜಗತ್ತಿನೆಲ್ಲೆಡೆ ಪ್ರತಿಯೊಂದು ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನ ಕಾಲಿಟ್ಟಿದೆ. ಲವ್‌ ಲೆಟರ್‌ ಬರೆಯುವುದರಿಂದ ಹಿಡಿದು ಕೋಡ್‌ ರಚನೆವರೆಗೆ, ರೋಬೊಗಳು ಕುಳಿತಲ್ಲಿಗೆ ಬಂದು ಊಟ ಸರಬರಾಜು ಮಾಡುವವರೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪಸರಿಸಿದೆ. ಇದರ ಬೆನ್ನಲ್ಲೇ, ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸೆಕ್ಸ್‌ ಬೊಂಬೆಗಳನ್ನು (AI Powered Sex Dolls) ಅಥವಾ ಸೆಕ್ಸ್‌ ರೋಬೊಗಳನ್ನು ಅಭಿವೃದ್ಧಿಪಡಿಸಿದ್ದು, ಇವು ಮನುಷ್ಯರಿಗೆ ನೈಜ ಲೈಂಗಿಕ ಸುಖವನ್ನು ಅನುಭವಿಸಲು ಸಾಧ್ಯವಾಗಿಸುತ್ತವೆ ಎಂದು ತಿಳಿದುಬಂದಿದೆ.

ಹೌದು, ಚೀನಾದ ಶೆಂಝೆನ್‌ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್‌ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಸುದ್ದಿಸಂಸ್ಥೆಯು ವರದಿ ಮಾಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಪುರುಷರು, ಮಹಿಳೆಯರು ಸೇರಿ ಯಾರಿಗೇ ಆಗಲಿ ಲೈಂಗಿಕ ಸುಖ ಅನುಭವಿಸಲು ಬೇರೊಬ್ಬರ ಅವಶ್ಯಕತೆಯೇ ಇರುವುದಿಲ್ಲ. ಸೆಕ್ಸ್‌ ಡಾಲ್‌ಗಳ ಮೂಲಕವೇ ಸಂಭೋಗ ಸುಖ ಅನುಭವಿಸಬಹುದು ಎಂದು ಹೇಳಲಾಗುತ್ತಿದೆ.

ಇವುಗಳ ಕಾರ್ಯನಿರ್ವಹಣೆ ಹೇಗೆ?

ಜಗತ್ತಿನಲ್ಲಿ ಇದುವರೆಗೆ ಕೃತಕವಾಗಿ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿರಲಿಲ್ಲ. ಆದರೆ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚೀನಾ ವಿಜ್ಞಾನಿಗಳು ನೈಜ ಸುಖ ಅನುಭವಿಸುವ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸೆಕ್ಸ್‌ ಡಾಲ್‌ಗಳು ಬ್ಯಾಟರಿ ಚಾಲಿತ ಆಗಿರುತ್ತವೆ. ಅವುಗಳ ಮಾಂಸಖಂಡಗಳು ಕೂಡ ಮನುಷ್ಯರ ಹಾಗೆ ಇರಲಿದ್ದು, ಫ್ಲೆಕ್ಸಿಬಲ್‌ ಕೂಡ ಆಗಿರಲಿವೆ. ಮನುಷ್ಯರ ಭಾವನೆಗಳಿಗೆ ಸ್ಪಂದಿಸಿ, ನಿಜವಾದ ಲೈಂಗಿಕ ಸುಖವನ್ನು ಅನುಭವಿಸಲು ಇವು ನೆರವಾಗಲಿವೆ ಎಂದು ಹೇಳಲಾಗುತ್ತಿದೆ. ಹಲವು ಸವಾಲುಗಳನ್ನು ಮೀರಿಯೂ ವಿಜ್ಞಾನಿಗಳು ಈ ಕನಸು ನನಸಾಗಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ರೇಟ್‌ ಎಷ್ಟಾಗಬಹುದು?

ವಿಜ್ಞಾನಿಗಳು ಈಗಾಗಲೇ ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 5.6 ಅಡಿಯ ರೋಬೊಗಳನ್ನು ತಯಾರಿಸುತ್ತಿದ್ದು, ಬಳಸುವವರಿಗೆ ಅನುಕೂಲವಾಗಲಿ ಎಂದು 29 ಕೆ.ಜಿ ತೂಕದ ಡಾಲ್‌ಗಳನ್ನು ತಯಾರಿಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಇವುಗಳನ್ನು ತಯಾರಿಸುವ ಕಾರಣ ಆರಂಭದಲ್ಲಿ ಇವುಗಳ ಬೆಲೆಯು 1.25 ಲಕ್ಷ ರೂ.ನಿಂದ 6 ಲಕ್ಷ ರೂ.ವೆರೆಗೆ ಇರಲಿವೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ ಸೆಕ್ಸ್‌ ರೋಬೊಗಳನ್ನು ತಯಾರಿಸುವುದರಿಂದ ಮನುಷ್ಯ ಮನುಷ್ಯನ ಸಂಬಂಧ, ಬಾಂಡಿಂಗ್‌ ಹಾಳಾಗುತ್ತದೆ ಎಂದು ಒಂದಷ್ಟು ಮಡಿವಂತರು ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Love Sex Dhoka: ಪ್ರೀತಿಸುವ ನಾಟಕವಾಡಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌; ಯುವಕನ ಬಂಧನಕ್ಕಾಗಿ ಪೊಲೀಸ್‌ ಠಾಣೆ ಮುಂದೆ ಯುವತಿ ಧರಣಿ

Continue Reading

ವಾಣಿಜ್ಯ

Union Budget 2024: ಬಜೆಟ್‌ನಲ್ಲಿ ಹೊಸ ಟ್ಯಾಕ್ಸ್‌ ಸ್ಲ್ಯಾಬ್‌ ಘೋಷಣೆ ಸಾಧ್ಯತೆ; ಯಾರಿಗೆಲ್ಲ ಅನುಕೂಲ?

Union Budget 2024: ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇನ್ನು, ಬಜೆಟ್‌ನಲ್ಲಿ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಹೊಸ ತೆರಿಗೆ ಸ್ಲ್ಯಾಬ್‌ಅನ್ನು ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಾದರೆ, ಎಷ್ಟು ಆದಾಯ ಇರುವವರಿಗೆ ಹೊಸ ತೆರಿಗೆ ಸ್ಲ್ಯಾಬ್‌ ಅನ್ವಯ ಲಾಭವಾಗುತ್ತದೆ? ಇಲ್ಲಿದೆ ಮಾಹಿತಿ.

VISTARANEWS.COM


on

Union Budget 2024
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದಿದ್ದು, ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ ಮಂಡಿಸಲು (Union Budget 2024) ಸಿದ್ಧತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಈ ಬಾರಿಯ ಬಜೆಟ್‌ನಲ್ಲಿ ಹೊಸ ಟ್ಯಾಕ್ಸ್‌ ಸ್ಲ್ಯಾಬ್‌ ಪರಿಚಯ ಮಾಡಲಾಗುತ್ತದೆ. ಇದರಿಂದ ಮಧ್ಯಮ ವರ್ಗದವರಿಗೆ ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ ಹೀಗೆ

ಆದಾಯವಿಧಿಸುವ ತೆರಿಗೆ
0-3 ಲಕ್ಷ ರೂ.ತೆರಿಗೆ ಇರಲ್ಲ
3-6 ಲಕ್ಷ ರೂ.5%
6-9 ಲಕ್ಷ ರೂ.10%
9-12 ಲಕ್ಷ ರೂ.15%
12-15 ಲಕ್ಷ ರೂ.20%
15 ಲಕ್ಷ ರೂ.ಗಿಂತ ಹೆಚ್ಚು30%

ದೇಶದಲ್ಲಿ ಈಗ ಹಳೆಯ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ಧತಿ ಚಾಲ್ತಿಯಲ್ಲಿವೆ. ಆದಾಯ ತೆರಿಗೆ ಪಾವತಿದಾರರು ಯಾವ ತೆರಿಗೆ ಪದ್ಧತಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದೆ. ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೆ 3 ಲಕ್ಷ ರೂ.ವರೆಗೆ ವಿನಾಯಿತಿ ಇದೆ. ಈಗ ಇದನ್ನು 5 ಲಕ್ಷ ರೂ.ಗೆ ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ, ಗರಿಷ್ಠ ತೆರಿಗೆ ಪ್ರಮಾಣವನ್ನು ಶೇ.30ರಿಂದ ಶೇ.25ಕ್ಕೆ ಇಳಿಸಬೇಕು ಎಂಬ ಒತ್ತಾಯವಿದ್ದು, ಇದನ್ನು ಈಡೇರಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಜುಲೈ 15ರಿಂದ 22ರ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ ಎಂದು ಹೇಳಲಾಗತ್ತಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಜುಲೈನಲ್ಲಿ ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Continue Reading
Advertisement
Divisional Level Progress Review Meeting of Revenue Department by Minister Krishna Byregowda
ಕಲಬುರಗಿ4 mins ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Hardeep Singh Nijjar
ದೇಶ11 mins ago

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Sleep After Lunch
ಲೈಫ್‌ಸ್ಟೈಲ್15 mins ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ22 mins ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest29 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ35 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ35 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್45 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್1 hour ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

tumkur Shoot out
ಕ್ರೈಂ1 hour ago

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌