ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ - Vistara News

ಅಂಕಣ

ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

ರಾಜಮಾರ್ಗ ಅಂಕಣ: ಅನಾಥಾಶ್ರಮದಲ್ಲಿ ಇದ್ದ ಹುಡುಗ, ಪೇಪರ್‌ ಹಂಚುತ್ತಿದ್ದ ಬಾಲಕ, ಕಠಿಣ ಪರಿಶ್ರಮದಿಂದ ಬೆಳೆದು ಜಿಲ್ಲಾಧಿಕಾರಿ ಆದ ಕಥೆ ಎಂಥವರಿಗೂ ಸ್ಫೂರ್ತಿ.

VISTARANEWS.COM


on

ರಾಜಮಾರ್ಗ ಅಂಕಣ abudal nasar ias
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇರಳದ ಅಬ್ದುಲ್ ನಾಸರ್ ಬದುಕಿನ ಯಶೋಗಾಥೆ ಅದ್ಭುತ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಆತ ತನ್ನ ಐದನೇ ವರ್ಷಕ್ಕೆ ಸರಿಯಾಗಿ ತನ್ನ ಅಪ್ಪನನ್ನು ಕಳೆದುಕೊಂಡಿದ್ದರು. ಅವರಿಗೆ ಐದು ಜನ ಸೋದರ, ಸೋದರಿಯರು. ಅವರನ್ನೆಲ್ಲ ಸಾಕಲು ಅವರ ಅಮ್ಮ ಯಾರ್ಯಾರದೋ ಮನೆಯಲ್ಲಿ ಪಾತ್ರೆ ಪಗಡಿಗಳನ್ನು ತೊಳೆಯಬೇಕಾಯಿತು. ಹಸಿವು ಮತ್ತು ಅಪಮಾನ ಬದುಕಿನ ಪಾಠ ಕಲಿಸಿತು.

13 ವರ್ಷ ಅನಾಥಾಶ್ರಮದಲ್ಲಿ ಕಳೆದವರು ನಾಸರ್

ಅಮ್ಮನಿಗೆ ಅವರನ್ನು ಸಾಕುವುದು ಕಷ್ಟ ಆದಾಗ ಮಗನನ್ನು ಒಂದು ಅನಾಥಾಶ್ರಮದಲ್ಲಿ ತಂದು ಬಿಟ್ಟರು. ಅಲ್ಲಿನ ಅರೆಹೊಟ್ಟೆಯ ಊಟ, ಅನಾರೋಗ್ಯಕರ ವಾತಾವರಣ ಮತ್ತು ಬೆವರು ಹರಿಸುವ ದುಡಿಮೆ ಅವರ ಸಂಗಾತಿಗಳು ಆದದ್ದು ಆಗ. ಅಲ್ಲಿನ ಹಿಂಸೆಯು ಅತಿಯಾದಾಗ ಅನಾಥಾಶ್ರಮ ಬಿಟ್ಟು ಓಡಿ ಹೋಗುವ ನೆನಪು ಅವರಿಗೆ ಆದದ್ದು ಉಂಟು. ರಾಗಿಂಗ್ ಕೂಡ ಜೋರಾಗಿತ್ತು. ಓಡಿ ಹೋಗೋಣ ಎಂದು ಅನ್ನಿಸಿದಾಗಲೆಲ್ಲ ಅಮ್ಮನ ಅಸಹಾಯಕತೆಯು ಕಣ್ಣ ಮುಂದೆ ಬಂದು ಕಣ್ಣೀರು ಗಲ್ಲವನ್ನು ತೋಯಿಸುತ್ತಿತ್ತು. ಆಗ ತನ್ನ ಶಿಕ್ಷಣದ ಖರ್ಚು ತಾನೇ ಭರಿಸಲು ಅವರು ನಿರ್ಧಾರ ಮಾಡುತ್ತಾರೆ.

ಹೊಟ್ಟೆಪಾಡಿಗಾಗಿ ಹಲವೆಡೆಗಳಲ್ಲಿ ದುಡಿಮೆ

ಬಿಡುವಿನ ಅವಧಿಯಲ್ಲಿ ಪೇಪರ್ ಹಂಚುವ, ಬಸ್ಸುಗಳಲ್ಲಿ ಕ್ಲೀನರ್ ಆಗಿ ದುಡಿಯುವ, ಹೋಟೆಲುಗಳಲ್ಲಿ ಸಪ್ಲಾಯರ್ ಆಗಿ ದುಡಿಯುವ ಅವಕಾಶ ಅವರಿಗೆ ಒದಗಿತು. ತಲಸ್ಸೇರಿಯ ಪದವಿ ಕಾಲೇಜಿನಲ್ಲಿ ಓದುವಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಶನ್ ಕೊಡುವುದು, ಫೋನ್ ಆಪರೇಟರ್ ಮೊದಲಾದ ಉದ್ಯೋಗವನ್ನು ಮಾಡಿದರು.

ಕಲಿಕೆಯಲ್ಲಿ ಸಾಧಾರಣ ವಿದ್ಯಾರ್ಥಿ

ಅಬ್ದುಲ್ ನಾಸರ್ ಹೇಳುವ ಪ್ರಕಾರ ಅವರೊಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿ. ಹೈಸ್ಕೂಲ್, ಪಿಯುಸಿ, ಪದವಿ ಎಲ್ಲ ಕಡೆಯೂ ಅವರಿಗೆ ದೊರೆತದ್ದು ಕೇವಲ ದ್ವಿತೀಯ ದರ್ಜೆ ಮಾತ್ರ. ಆದರೆ MSW ಮಾಡುವಾಗ ಅವರ ಅದ್ಭುತವಾದ ಪ್ರತಿಭೆ ಹೊರಬಂದಿತು. ಅದರಲ್ಲಿ ಅವರಿಗೆ ಅತ್ಯುನ್ನತ ಶ್ರೇಣಿ ಫಲಿತಾಂಶ ಬಂದಿತು. 1994ರಲ್ಲಿ ಕೇರಳ ಸರಕಾರದ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ ಆಗಿ ಕೆಲಸಕ್ಕೆ ಸೇರಿದರು.

ಓದುವ ಹಸಿವು ಕಡಿಮೆ ಆಗಲೇ ಇಲ್ಲ

ಸರಕಾರಿ ಉದ್ಯೋಗಕ್ಕೆ ಸೇರಿದ ಕೂಡಲೇ ಅವರು ತನ್ನ ಅಮ್ಮನನ್ನು ಮನೆಕೆಲಸವನ್ನು ಬಿಡಿಸಿ ತನ್ನ ಕ್ವಾರ್ಟರ್ಸಗೆ ಕರೆದುಕೊಂಡು ಬಂದರು. ಅಲ್ಲಿ ಅವರಿಗೆ ನೆಮ್ಮದಿಯ ಬದುಕು ದೊರೆಯಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಿಕೊಟ್ಟರು.

ವರ್ಷಕ್ಕೆ ಎರಡೆರಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾ ಸಾಗಿದರು

ಈ ಕಡೆ ಅವರ ಓದುವ ಅಭ್ಯಾಸವು ತೀವ್ರವಾಗಿ ಹೆಚ್ಚಾಯಿತು. ರಸ್ತೆ ಬದಿಯಲ್ಲಿ ಅರ್ಧ ಬೆಲೆಗೆ ಮಾರಾಟ ಆಗುತ್ತಿದ್ದ ಪುಸ್ತಕಗಳನ್ನು ಆಯ್ದು ತಂದು ಓದಿದರು. ನಂತರ ಅವುಗಳನ್ನು ಅದೇ ರೇಟಿಗೆ ತನ್ನ ಗೆಳೆಯರಿಗೆ ಮಾರಿದರು. ವರ್ಷಕ್ಕೆ ಎರಡೆರಡು ಪರೀಕ್ಷೆಗಳನ್ನು ಬರೆದು ಭಡ್ತಿ ಪಡೆಯುತ್ತಾ ಮುಂದೆ ಹೋದರು. ಸಮರ್ಪಣಾ ಭಾವದಿಂದ ದುಡಿದು ಸರಕಾರದ ಮನ್ನಣೆ ಪಡೆದರು. 2015ರಲ್ಲಿ ಅವರು ಸ್ವಂತ ಸಾಮರ್ಥ್ಯದ ಮೇಲೆ ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ಏರಿದರು. 2019ರಲ್ಲಿ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಕೂಡ ಆಯ್ಕೆ ಆದರು. ಭ್ರಷ್ಟಾಚಾರ ಇಲ್ಲದ ಶುದ್ಧಾಂಗ ಅಧಿಕಾರವನ್ನು ಉಪಯೋಗ ಮಾಡಿ ಗೆದ್ದರು.

ತನ್ನ ಹುದ್ದೆಯನ್ನು ಪ್ರಭಾವಯುತವಾಗಿ ಬಳಕೆ ಮಾಡಿಕೊಂಡು ಜನರ ಸೇವೆ ಮಾಡಿದರು. ತನ್ನನ್ನು ಜನಸೇವೆಗೆ ಮುಡಿಪಾಗಿಟ್ಟರು. ಅಬ್ದುಲ್ ನಾಸರ್ ಅವರ ಹೋರಾಟದ ಬದುಕು ಯಾರಿಗಾದರೂ ಸ್ಫೂರ್ತಿದಾಯಕ ಆಗಬಹುದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೆನಪಾದಳು ಅರುಣಾ ಶಾನುಭಾಗ್!‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ನೆನಪಾದಳು ಅರುಣಾ ಶಾನುಭಾಗ್!‌

ರಾಜಮಾರ್ಗ ಅಂಂಕಣ: ಕೋಲ್ಕತಾದಲ್ಲಿ ನಡೆದ ವೈದ್ಯೆಯ ಬರ್ಬರ ಅತ್ಯಾಚಾರ ಹಾಗೂ ಕೊಲೆಯ ಘಟನೆ ಸುದ್ದಿಯಾಗುತ್ತಿರುವಂತೆಯೇ ನನಪಾಗುತ್ತಿರುವವಳು ಅಂಥದೇ ಒಂದು ಕೃತ್ಯಕ್ಕೆ ಬಲಿಯಾಗಿ ಜೀವಂತ ಶವವಾಗಿ ನರಳಿದ ಅರುಣಾ ಶಾನುಭಾಗ್.

VISTARANEWS.COM


on

ರಾಜಮಾರ್ಗ ಅಂಕಣ aruna shanubhag
Koo

41 ವರ್ಷ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ನರಳಿದ ಅತ್ಯಾಚಾರ ಸಂತ್ರಸ್ತೆಯ ಕಥೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕೋಲ್ಕತ್ತಾದಲ್ಲಿ (Kolkata horror) ಮೊನ್ನೆ ಓರ್ವ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯ (Physical abuse) ಪ್ರಕರಣದ ಸುದ್ದಿಯು ಸ್ಫೋಟವಾಗಿ ಇಡೀ ಭಾರತ ನ್ಯಾಯಕ್ಕಾಗಿ ಹೋರಾಡಿ ಬೀದಿಗೆ ಇಳಿದ ಘಟನೆ ನಡೆಯಿತು. ಅದೇ ರೀತಿಯಾಗಿ, ಅದಕ್ಕಿಂತ ಬರ್ಬರವಾದ ಒಂದು ಅತ್ಯಾಚಾರದ ಘಟನೆಯು 50 ವರ್ಷಗಳ ಹಿಂದೆ ಮುಂಬಯಿಯಲ್ಲಿ (Aruna Shanbhag) ನಡೆದಿತ್ತು. ಅದಕ್ಕೆ ಬಲಿಯಾದವರು ಬಹಳ ದೊಡ್ಡ ಕನಸು ಹೊತ್ತಿದ್ದ ಓರ್ವ ಸ್ಟಾಫ್ ನರ್ಸ್.

ಆಕೆ ಅರುಣಾ ಶಾನುಭೋಗ

ಹುಟ್ಟಿದ ಊರು ಉತ್ತರ ಕನ್ನಡದ ಹಲ್ಡೀಪುರ (1948). ಸ್ವಾಭಿಮಾನದ ಸಾರಸ್ವತ ಕುಟುಂಬ ಆಕೆಯದ್ದು. ಮಾತೃಭಾಷೆ ಕೊಂಕಣಿ. ನರ್ಸ್ ಆಗಿ ಸೇವೆ ಸಲ್ಲಿಸಬೇಕು ಎಂದು ಕನಸು ಹೊತ್ತು ನರ್ಸಿಂಗ್ ಕೋರ್ಸ್ ಮಾಡಿದಾಕೆ ಅರುಣಾ. ಮುಂದೆ ಆಕೆ ಕೆಲಸಕ್ಕೆ ಸೇರಿದ್ದು ಮುಂಬಯಿಯ ಪರೆಲ್ ಎಂಬಲ್ಲಿ ಇದ್ದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ. ಕೆಲವೇ ದಿನಗಳಲ್ಲಿ ಆಕೆಯ ಪರಿಚಯ ಆಸ್ಪತ್ರೆಯ ಎಲ್ಲರಿಗೂ ಆಗಿತ್ತು ಅಂದರೆ ಅದಕ್ಕೆ ಕಾರಣ ಆಕೆಯ ಸೇವಾ ಮನೋಭಾವ, ಸೌಂದರ್ಯ ಮತ್ತು ಚುರುಕುತನ. ಆಕೆಯ ಗೆಜ್ಜೆಯ ಘಲ್ ಎಂಬ ಶಬ್ದ ಕೇಳಿದರೆ ರೋಗಿಗಳ ಮುಖದಲ್ಲಿ ನಗು ಚಿಮ್ಮುತ್ತಿತ್ತು. ಅಂತಹ ಅರುಣಾ ಬದುಕಿನಲ್ಲಿಯೂ ಒಂದು ಕರಾಳ ದಿನ ಬಂದೇ ಬಿಟ್ಟಿತು.

27 ನವೆಂಬರ್, 1973ರ ರಾತ್ರಿ!

ಎಂದಿನಂತೆಯೇ ತನ್ನ ಡ್ಯೂಟಿ ಮುಗಿಸಿ ಆಸ್ಪತ್ರೆಯ ನೆಲ ಅಂತಸ್ತಿನ ತನ್ನ ಖಾಸಗಿ ಕೊಠಡಿಯಲ್ಲಿ ಡ್ರೆಸ್ ಬದಲಾವಣೆ ಮಾಡುತ್ತಿದ್ದ ಅರುಣಾ ಮೇಲೆ ಮಸುಕು ಕತ್ತಲೆಯಲ್ಲಿ ತೋಳದಂತೆ ಎರಗಿದ್ದ ಅದೇ ಆಸ್ಪತ್ರೆಯ ಓರ್ವ ಸ್ವೀಪರ್ ಸೋಹನ್ ಲಾಲ್! ಆಕೆ ಪ್ರತಿಭಟನೆ ಮಾಡಿದಾಗ ಆಕೆಯ ಧ್ವನಿ ಅಡಗಿಸಲು ನಾಯಿಯ ಗಟ್ಟಿಯಾದ ಸಂಕಲೆಯನ್ನು ಕುತ್ತಿಗೆಗೆ ಬಿಗಿದು ಕ್ರೂರವಾಗಿ ಅತ್ಯಾಚಾರ ಮಾಡಿಬಿಟ್ಟಿದ್ದ. ಆಗ ಆಕೆಯ ವಯಸ್ಸು ಕೇವಲ 25.
ದುರಂತ ಏನಾಯ್ತು ಎಂದರೆ ಆ ಬಲವಾದ ಕಬ್ಬಿಣದ ಸಂಕಲೆ ಕುತ್ತಿಗೆಗೆ ಬಿಗಿದ ಕಾರಣ ಮೆದುಳಿಗೆ ರಕ್ತ ಸಂಚಾರ ನಿಂತು ಹೋಯಿತು. ಬೆಳಿಗ್ಗಿನತನಕ ಆಕೆ ನರಳಲೂ ತ್ರಾಣ ಇಲ್ಲದೆ ಅರೆಪ್ರಜ್ಞಾವಸ್ಥೆಯಲ್ಲಿ ಅಲ್ಲಿಯೇ ಬಿದ್ದುಕೊಂಡಿದ್ದಳು! ಮರುದಿನ ಬೆಳಿಗ್ಗೆ ಕಸಗುಡಿಸಲು ಬಂದ ಓರ್ವ ಮಹಿಳೆ ಬೊಬ್ಬೆ ಹೊಡೆದು ಜನ ಸೇರಿಸಿ ಆಕೆಯನ್ನು ತುರ್ತುಚಿಕಿತ್ಸಾ ವಿಭಾಗಕ್ಕೆ ಸೇರಿಸಿದರು. ಆಗ ಆಕೆಯ ದೇಹದಲ್ಲಿ ಉಸಿರು ಇತ್ತು ಆದರೆ ಯಾವುದೇ ಸಂವೇದನೆ, ಭಾವನೆ ಇರಲಿಲ್ಲ. ಕಣ್ಣು ತೆರೆದು ಮರದ ಕೊರಡಿನ ಹಾಗೆ ಮಲಗಿದ್ದಳು.

ಪರ್ಸಿಸ್ಟೆಂಟ್ ವೇಜಿಟೆಟಿವ್ ಸ್ಟೇಟ್!

ಮೆದುಳಿನ ಒಂದು ಭಾಗಕ್ಕೆ ತೀವ್ರವಾದ ಆಘಾತವಾದಾಗ ಉಂಟಾಗುವ ಆರೋಗ್ಯ ಸಮಸ್ಯೆ ಇದು. ಅರ್ಧ ಜೀವ, ಅರ್ಧ ಶವ ಅನ್ನುವ ದೈನೇಸಿ ಸ್ಥಿತಿ. ನಿಧಾನ ಉಸಿರಾಟ, ನಾಡಿ ಮಿಡಿತ, ಹೃದಯ ಬಡಿತ ಬಿಟ್ಟರೆ ಬೇರೆ ಯಾವ ಬದುಕಿನ ಲಕ್ಷಣಗಳೂ ಇಲ್ಲ. ಶೂನ್ಯದ ಕಡೆಗೆ ನೆಟ್ಟ ದೃಷ್ಟಿ ನೋಟ, ಭಾವನೆಗಳೇ ಇಲ್ಲದ ಮುಖ, ಸಂವೇದನೆಗಳೇ ಇಲ್ಲದ ದೇಹ, ದೇಹದ ಯಾವ ಭಾಗದಲ್ಲಿಯೂ ಚಲನೆ ಇಲ್ಲದ ಸ್ಥಿತಿ ಆಕೆಯದ್ದು. ಆಕೆ ಅದೇ ಸ್ಥಿತಿಯಲ್ಲಿ, ಅದೇ ಆಸ್ಪತ್ರೆಯ, ಅದೇ ಹಾಸಿಗೆಯಲ್ಲಿ 41 ವರ್ಷಗಳನ್ನು ಹಾಗೆಯೇ ಕಳೆದರು ಅಂದರೆ ಅದು ಎಷ್ಟೊಂದು ಹೃದಯವಿದ್ರಾವಕ ಎಂದು ಊಹೆ ಮಾಡಿಕೊಳ್ಳಿ.

ರಾಜಮಾರ್ಗ ಅಂಕಣ aruna shanubhag
ರಾಜಮಾರ್ಗ ಅಂಕಣ aruna shanubhag

ಆಸ್ಪತ್ರೆಯ ನರ್ಸುಗಳು ಆಕೆಯ ಸೇವೆಗೆ ನಿಂತರು!

ಆಕೆಯ ಊರಿನ ಅಥವಾ ಸಂಬಂಧಿಕರ ಸಂಪರ್ಕವೇ ಇಲ್ಲದ ಸಂದರ್ಭ ಅದೇ ಎಡ್ವರ್ಡ್ ಆಸ್ಪತ್ರೆಯ ನರ್ಸುಗಳು ಆಕೆಯನ್ನು ಪುಟ್ಟ ಮಗುವಿನ ಹಾಗೆ ನೋಡಿಕೊಂಡರು. ಹಲವಾರು ಜನ ಸೇರಿ ಚಿಕಿತ್ಸೆಯ ವೆಚ್ಚವನ್ನು ಭರಿಸಿದರು. ಪ್ರತೀ ದಿನವೂ ಆಕೆಯನ್ನು ಖುಷಿಯಾಗಿಡುವ ಎಲ್ಲ ಪ್ರಯತ್ನವನ್ನೂ ಮಾಡಿದರು. ವರ್ಷವೂ ಆಕೆಯ ಹುಟ್ಟುಹಬ್ಬ ಆಚರಣೆ ಮಾಡಿದರು. ಅದೇ ಹೊತ್ತಿನಲ್ಲಿ ದೇಶದಾದ್ಯಂತ ದಯಾಮರಣದ ಬಗ್ಗೆ ಚರ್ಚೆ ಆಗಿ ಅದನ್ನು ಸುಪ್ರೀಂ ಕೋರ್ಟ್ ಕೈಗೆ ಎತ್ತಿಕೊಂಡರೂ ಆ ನರ್ಸುಗಳು ಆಕೆಯನ್ನು ಜೀವಂತವಾಗಿ ಇಡುವ ಎಲ್ಲಾ ಪ್ರಯತ್ನವನ್ನೂ ಮಾಡಿದರು ಅನ್ನೋದು ಮಾನವೀಯತೆಯ ವಿಶ್ವರೂಪ ಎಂದು ನನ್ನ ಭಾವನೆ.

ಕೊಲೆಗಡುಕನಿಗೆ ಶಿಕ್ಷೆ ಆಯಿತಾ?

ಅದು ಸೋಷಿಯಲ್ ಮೀಡಿಯಾ ಕಾಲ ಅಲ್ಲ. ಕ್ಯಾಂಡಲ್ ಮಾರ್ಚ್, ಪ್ರತಿಭಟನೆ ಯಾವುದೂ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಆದರೂ ಅತ್ಯಾಚಾರಿ ಸೋಹನ್ ಲಾಲ್ ಬಂಧನ ಆಯಿತು. ಕೋರ್ಟಿನಲ್ಲಿ ವಾದ, ಪ್ರತಿವಾದ ಜೋರಾಗಿಯೇ ನಡೆದವು. ಆದರೆ ಸಾಕ್ಷಿಗಳ ಕೊರತೆ ಒಂದೆಡೆ ಆದರೆ ಎಡ್ವರ್ಡ್ ಆಸ್ಪತ್ರೆಯ ಅಸಹಕಾರ (ಅವರು ತಮ್ಮ ಆಸ್ಪತ್ರೆಯ ರೆಪ್ಯೂಟೇಶನ್ ಬಗ್ಗೆ ಹೆದರಿರಬೇಕು)ಗಳಿಂದ ಅತ್ಯಾಚಾರ ಕೇಸ್ ಬಿಗು ಆಗಲೇ ಇಲ್ಲ. ಅವನು ನಮ್ಮ ಸಿಬ್ಬಂದಿಯೇ ಅಲ್ಲ ಎಂದಿತು ಆಸ್ಪತ್ರೆ! ಪರಿಣಾಮವಾಗಿ ಅವನಿಗೆ ಏಳು ವರ್ಷಗಳ ಲಘುವಾದ ಶಿಕ್ಷೆ ಆಯಿತು. ಆತನು ಆ ಶಿಕ್ಷೆಯನ್ನು ಮುಗಿಸಿ ರಾಜಾರೋಷವಾಗಿ ಹೊರಗೆ ಬಂದು ಉತ್ತರಪ್ರದೇಶದ ಒಂದು ಹಳ್ಳಿಗೆ ಹೋಗಿ, ಅಲ್ಲಿ ಮದುವೆಯಾಗಿ ನೆಮ್ಮದಿಯಿಂದ ಬದುಕಿದನು ಎಂದು ಮುಂದೆ ಮಾಧ್ಯಮಗಳು ವರದಿ ಮಾಡಿದವು. ಪಿಂಕಿ ವಿರಾನಿ ಎಂಬ ಪತ್ರಕರ್ತೆಯು ಅರುಣಾಗೆ ನ್ಯಾಯ ಕೊಡಿಸಲು ಎಷ್ಟೋ ಪ್ರಯತ್ನಗಳನ್ನು ಮಾಡಿದರೂ ಸಫಲವಾಗಲಿಲ್ಲ ಅನ್ನೋದು ದುರಂತ!

ಅರುಣಾ ಏನಾದಳು?

42 ವರ್ಷಗಳ ಜೀವನ್ಮರಣದ ಹೋರಾಟದಲ್ಲಿ ನಲುಗಿದ ಅರುಣಾ 2015ರಲ್ಲಿ ನ್ಯುಮೋನಿಯಾ ಕಾಯಿಲೆಯಿಂದ ನಿಧನ ಹೊಂದಿದಳು. ಆಗ ಆಕೆಗೆ 66 ವರ್ಷ. ಅದೇ ನರ್ಸುಗಳು ಆಕೆಯ ಅಂತ್ಯಕ್ರಿಯೆ ಪೂರ್ತಿ ಮಾಡಿದರು. ಮುಂದೆ ಅದೇ ಪಿಂಕಿ ವಿರಾನಿ ಆಕೆಯ ಬದುಕಿನ ಬಗ್ಗೆ ‘ದ ಸ್ಟೋರಿ ಆಫ್ ಅರುಣಾ ‘ ಪುಸ್ತಕವನ್ನು ಬರೆದರು. ಅದು ಭಾರೀ ಜನಪ್ರಿಯ ಆಯಿತು. ‘ಕಥಾ ಅರುಣಾಚೀ ‘ ಎಂಬ ಮರಾಠಿ ನಾಟಕವೂ ವೇದಿಕೆಗೆ ಬಂದು ಕಣ್ಣೀರು ತರಿಸಿತು. ಗುಜರಾತಿ ಭಾಷೆಯಲ್ಲಿ ‘ಜಡ ಚೇತನ ‘ಎಂಬ ಕಾದಂಬರಿ ಬಂದು ಪ್ರಶಸ್ತಿಯನ್ನು ಪಡೆಯಿತು. ಮಲಯಾಳಿ ಭಾಷೆಯಲ್ಲಿ ‘ಮರಂ ಪೇಯ್ಯಂಬೋಲ್’ ಎಂಬ ಸಿನಿಮಾ ಆಕೆಯ ಬದುಕನ್ನು ಆಧರಿಸಿ ಬಂದು ಬೆಳ್ಳಿತೆರೆಯನ್ನು ಏರಿತು.

ಅರುಣಾ ಅಮರತ್ವ ಪಡೆದಳು, ತನ್ನ ಸಾವಿಗೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ಉಳಿಸಿಕೊಂಡು…

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತನ ಬದುಕು ಆತನ ಸಿನೆಮಾ ಕಥೆಗಳಿಗಿಂತ ರೋಚಕ!

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಆತನ ಬದುಕು ಆತನ ಸಿನೆಮಾ ಕಥೆಗಳಿಗಿಂತ ರೋಚಕ!

ರಾಜಮಾರ್ಗ ಅಂಕಣ: ಕಳೆದ 30 ವರ್ಷಗಳಿಂದ ತಮಿಳು, ತೆಲುಗು, ಮಲಯಾಳಂ ಭಾಷೆಗಳ ನೂರಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಆತನಿಗೆ ಈಗ 58 ವರ್ಷ ತುಂಬಿದೆ! ಆತನ ಯಶಸ್ಸಿನ ಗ್ರಾಫ್ ಇಂದಿಗೂ ಏರುಗತಿಯಲ್ಲಿ ಇದೆ. ಆತನಷ್ಟು ವೈವಿಧ್ಯಮಯ ಪಾತ್ರಗಳನ್ನು ಭಾರತದ ಬೇರೆ ಯಾವ ನಟನೂ ಮಾಡಿಲ್ಲ ಎನ್ನುವುದು ವಿಕ್ರಮ್ ಹೆಚ್ಚುಗಾರಿಕೆ!

VISTARANEWS.COM


on

vikram ರಾಜಮಾರ್ಗ ಅಂಕಣ
Koo

ತಮಿಳು ಸೂಪರ್ ಸ್ಟಾರ್ ಚೀಯಾನ್ ವಿಕ್ರಮ್ ಬದುಕೇ ಒಂದು ಹೋರಾಟ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಈ ತಮಿಳು ಸಿನೆಮಾ ನಟನ (Tamil Cinema Actor) ಬದುಕೇ ಒಂದು ಅದ್ಭುತವಾದ ಹೋರಾಟ. ತನ್ನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡು ಸತತವಾದ ಸೋಲು, ಹತಾಶೆ, ನೋವು, ಸವಾಲುಗಳು ಎಲ್ಲವನ್ನೂ ಗೆದ್ದುಬಂದಿರುವ ಚಿಯಾನ್ ವಿಕ್ರಮ್ (chiyaan vikram) ಅವರ ಬದುಕಿನಿಂದ ನಾವು ಕಲಿಯುವುದು ಬೆಟ್ಟದಷ್ಟು ಇದೆ!

ಆತನಿಗೆ ಹೆತ್ತವರು ಇಟ್ಟ ಉದ್ದವಾದ ಹೆಸರು ಜಾನ್ ಕೆನ್ನೆಡಿ ವಿನೋದ್ ರಾಜ್ ಎಂದು! ಆತನ ತಂದೆ ವಿಕ್ಟರ್ ಕೂಡ ಸಿನೆಮಾ ನಟ ಆಗುವ ಹುಚ್ಚನ್ನು ತಲೆಗೇರಿಸಿಕೊಂಡು ಮನೆ ಬಿಟ್ಟು ಓಡಿ ಹೋದವರು. ಅದರಿಂದಾಗಿ ಈ ಮಗನಿಗೂ ಚಿಕ್ಕಂದಿನಿಂದ ಹೀರೋ ಆಗುವ ಕನಸು! ‘ಓದಿನ ಕಡೆ ಹೆಚ್ಚು ಗಮನ ಕೊಡು’ ಎಂದು ಅಪ್ಪ ಎಷ್ಟೇ ಬೈದರೂ ಸಿನೆಮಾದ ಹುಚ್ಚು ಬಿಡಲಿಲ್ಲ.

ಸೇಲಂ ಕಾಲೇಜಿನಲ್ಲಿ ಓದುವಾಗ ಅಸಂಗತ ನಾಟಕಗಳನ್ನು ಮಾಡಿ ಹುಡುಗ ಹಲವಾರು ಬಹುಮಾನ ಗೆದ್ದಿದ್ದ ವಿಕ್ರಂ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ, MBA ಮುಗಿಸಿದರೂ ಕೂಡ ಅವನ ಮನಸ್ಸು ಬೆಳ್ಳಿ ಪರದೆಯ ಕಡೆಗೆ ಇತ್ತು. ಆದರೆ ಅವನ ದುರದೃಷ್ಟವು ಅವನಿಗಿಂತ ಮುಂದೆ ಇತ್ತು!

ಬದುಕಿನ ಗತಿಯನ್ನೇ ಬದಲಿಸಿದ ಬೈಕ್ ಅಪಘಾತ!

ಒಮ್ಮೆ ನಾಟಕವನ್ನು ಮುಗಿಸಿ ರಾತ್ರಿ ಬೈಕಲ್ಲಿ ಮನೆಗೆ ಬರುತ್ತಿದ್ದಾಗ ಭೀಕರವಾದ ಅಪಘಾತ. ಲಾರಿ ಬಂದು ಡಿಕ್ಕಿ ಹೊಡೆದು ಅವನ ಬೈಕನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು! ದೇಹದಲ್ಲಿ ನೂರಾರು ಗಾಯಗಳು. ಬಲಗಾಲು ಪೂರ್ತಿ ಹುಡಿ ಹುಡಿ ಆಗಿತ್ತು! ವೈದ್ಯರು ಕಾಲು ಕತ್ತರಿಸಲೇ ಬೇಕು, ಇಲ್ಲವಾದರೆ ಜೀವಕ್ಕೆ ಅಪಾಯ ಅಂದರು!

ಆದರೆ ಅರೆಪ್ರಜ್ಞೆಯ ಕೋಮಾ ಅವಸ್ಥೆಯಲ್ಲಿ ಕೂಡ ಆತ ಚೀರಿ ಹೇಳಿದ್ದ ‘ನನಗೆ ಹೀರೋ ಆಗಲೇ ಬೇಕು. ಎಷ್ಟು ನೋವು ಬೇಕಾದರೂ ಸಹಿಸಿಕೊಳ್ಳಲು ನಾನು ರೆಡಿ. ಆದರೆ ಕಾಲು ಕತ್ತರಿಸುವುದು ಬೇಡ!’

ಅವನ ಕೆಟ್ಟ ಹಟದ ಮುಂದೆ ವೈದ್ಯಕೀಯ ವಿಜ್ಞಾನವೇ ಸೋತಿತು!

ಆತನ ದೇಹದಾದ್ಯಂತ 23 ಸಂಕೀರ್ಣ ಶಸ್ತ್ರಚಿಕಿತ್ಸೆಗಳು ನಡೆದವು. ಅಸಾಧ್ಯವಾದ ನೋವು ಸಹಿಸಿಕೊಂಡು ಆತ ಮೂರು ವರ್ಷ ಆಸ್ಪತ್ರೆಯ ಹಾಸಿಗೆಯಲ್ಲಿ ಶವದ ಹಾಗೆ ಬಿದ್ದುಕೊಂಡಿದ್ದ!

ನಂತರ ಒಂದು ವರ್ಷ ಕ್ಲಚಸ್ ಹಿಡಿದುಕೊಂಡು ನಡೆಯಲು ಅಭ್ಯಾಸ ಮಾಡಿದ್ದ! ನಂತರ ಗೋಡೆ ಹಿಡಿದು ನಡೆಯುವ ಅಭ್ಯಾಸ. ಸ್ವಂತ ಕಾಲಿನ ಮೇಲೆ ನಿಂತು ನಡೆಯಲು ಆತನಿಗೆ ನಾಲ್ಕು ವರ್ಷಗಳೇ ಬೇಕಾದವು! ಹೀಗೆ ನಾಲ್ಕು ವರ್ಷಗಳ ಕಾಲ ಜಿದ್ದಿಗೆ ಬಿದ್ದು ಕಾಲು ಉಳಿಸಿಕೊಂಡು ಆತ ಮತ್ತೆ ಸಿನೆಮಾದ ಕಡೆಗೆ ಮುಖ ಮಾಡಿದ್ದ. ಆತನ ಸಂಕಲ್ಪ ಶಕ್ತಿಯ ಮುಂದೆ ದುರದೃಷ್ಟವು ಕೂಡ ಸೋತಿತ್ತು!

ಅಪ್ನಾ ಟೈಮ್ ಆಯೆಗಾ…

ಮುಂದೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಆತ ಸೂಕ್ತ ಪಾತ್ರಕ್ಕಾಗಿ ಕಾದು ಕೂತ. ಸಣ್ಣ ಪುಟ್ಟ ಪಾತ್ರಗಳು, ಪೋಷಕ ಪಾತ್ರಗಳು, ಧಾರಾವಾಹಿಗಳು ಎಲ್ಲವನ್ನೂ ಮಾಡಿದ. ಜಾಹೀರಾತುಗಳನ್ನು ಕೂಡ ಮಾಡಬೇಕಾಯಿತು. ತುಂಬಾ ನಿರೀಕ್ಷೆ ಇರಿಸಿದ್ದ ಎನ್ ಕಾದಲ್ ಕಣ್ಮಣಿ ಮತ್ತು ಮೀರಾ ಎಂಬ ಎರಡು ಸಿನೆಮಾಗಳು ಸೋತು ಹೋದವು. ಖಾಲಿ ಕಿಸೆ ಮತ್ತು ಹಸಿವಿನ ತೀವ್ರತೆಗಳು ಆತನಿಂದ ಡಬ್ಬಿಂಗ್ ಕೆಲಸವನ್ನು ಮಾಡಿಸಿತು! ಆದರೂ ಬೇಸರ ಮಾಡಿಕೊಳ್ಳದೆ ತಾಳ್ಮೆಯಿಂದ ಕಾದು ಕೂತ! ಮಾಡೆಲಿಂಗ್ ಕೂಡ ಮಾಡಿದ.

1999ರ ಹೊತ್ತಿಗೆ ತಮಿಳಲ್ಲಿ ‘ಸೇತು’ ಎಂಬ ಕಡಿಮೆ ಬಜೆಟಿನ ಸಿನೆಮಾ ಆರಂಭವಾಯಿತು. ವಿಕ್ರಮ್ ಆ ಸಿನೆಮಾದಲ್ಲಿ ಭಾರೀ ಸವಾಲಿನ ಪಾತ್ರವನ್ನು ಮಾಡಬೇಕಾಗಿತ್ತು. ಶೂಟಿಂಗ್ ಎರಡು ವರ್ಷಗಳಷ್ಟು ದೀರ್ಘ ಕಾಲ ನಡೆಯಿತು. ವಿಕ್ರಮ್ ತನ್ನ ಪಾತ್ರಕ್ಕಾಗಿ ತಲೆಯನ್ನು ನುಣ್ಣನೆ ಬೋಳಿಸಿಕೊಂಡ. ಉದ್ದುದ್ದ ಉಗುರುಗಳನ್ನು ಬಿಟ್ಟ. ಕೇವಲ ಬೀಟ್ರೂಟ್ ರಸ, ಒಂದು ಚಪಾತಿ, ಮೊಟ್ಟೆಯ ಬಿಳಿ ತಿರುಳು ತಿಂದು ದೇಹದ ತೂಕವನ್ನು ಹದಿನಾರು ಕೆಜಿಯಷ್ಟು ಇಳಿಸಿಕೊಂಡ! ಎರಡು ವರ್ಷ ಬೇರೆ ಯಾವ ಸಿನೆಮಾ ಕೂಡ ಒಪ್ಪಿಕೊಳ್ಳದೆ ಆ ಪಾತ್ರದಲ್ಲಿ ಮುಳುಗಿಬಿಟ್ಟ! ಸೇತು ಸಿನೆಮಾ ಸೂಪರ್ ಹಿಟ್ ಆಯ್ತು! ಅಲ್ಲಿಂದ ಮುಂದೆ ವಿಕ್ರಮ್ ಸೂಪರ್ ಸ್ಟಾರ್ ಆದ! ಜನ ಅವನನ್ನು ಚಿಯಾನ್ (ಸೇತು ಸಿನೆಮಾದಲ್ಲಿ ವಿಕ್ರಂ ಮಾಡಿದ ಪಾತ್ರದ ಅಡ್ಡ ಹೆಸರದು) ವಿಕ್ರಮ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು. ಮುಂದೆ ಸೇತು ಸಿನೆಮಾವು ಭಾರತದ ಹಲವು ಭಾಷೆಗೆ ರೀಮೇಕ್ ಆಯಿತು. (ಕನ್ನಡದಲ್ಲಿ ಸುದೀಪ್ ಅಭಿನಯದ ಹುಚ್ಚ ಸಿನೆಮಾ).

ವಿಕ್ರಂ ಮಾಡಿದ ಪಾತ್ರಗಳು ಒಂದರ ಹಾಗೆ ಇನ್ನೊಂದಿಲ್ಲ.

ಮುಂದೆ ಸಾಲಾಗಿ ಕಠಿಣ ಸವಾಲಿನ ಪಾತ್ರಗಳು! ಹುಚ್ಚ, ತಲೆ ಹಿಡುಕ, ರೌಡಿ, ಡಾನ್, ಬುದ್ದಿಮಾಂದ್ಯ, ಕುಡುಕ, ಪೋಲಿಸ್, ಪಿಂಪ್, ವಕೀಲ, ಸೀರಿಯಲ್ ಕಿಲ್ಲರ್, ವೃದ್ಧ, ಪತ್ತೇದಾರ, ಆದಿವಾಸಿ, ಕಾಲೇಜ್ ಲವರ್, ಮಾಡೆಲ್ ಮೊದಲಾದ ಸಂಕೀರ್ಣವಾದ ಪಾತ್ರಗಳನ್ನು ಗೆಲ್ಲಿಸಿದ ಚಿಯಾನ್!

ಕಳೆದ 30 ವರ್ಷಗಳಿಂದ ತಮಿಳು, ತೆಲುಗು, ಮಲಯಾಳಂ ಭಾಷೆಗಳ ನೂರಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಆತನಿಗೆ ಈಗ 58 ವರ್ಷ ತುಂಬಿದೆ! ಆತನ ಯಶಸ್ಸಿನ ಗ್ರಾಫ್ ಇಂದಿಗೂ ಏರುಗತಿಯಲ್ಲಿ ಇದೆ. ಆತನಷ್ಟು ವೈವಿಧ್ಯಮಯ ಪಾತ್ರಗಳನ್ನು ಭಾರತದ ಬೇರೆ ಯಾವ ನಟನೂ ಮಾಡಿಲ್ಲ ಎನ್ನುವುದು ವಿಕ್ರಮ್ ಹೆಚ್ಚುಗಾರಿಕೆ!

ಆತನ ಸಿನೆಮಾಗಳನ್ನು ಬೇರೆ ಭಾಷೆಗೆ ರಿಮೇಕ್ ಮಾಡುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಮಾಡಿದರೂ ಸಕ್ಸೆಸ್ ಆದ ಉದಾಹರಣೆ ಕಡಿಮೆ. ಯಾಕೆಂದರೆ ವಿಕ್ರಮ್ ಪ್ರತೀ ಒಂದು ಪಾತ್ರಕ್ಕೂ ಬೇರೆ ಬೇರೆ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾನೆ. ಅವನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ನಡಿಗೆ, ನಗು, ಹಾವಭಾವ ಬೇರೆ ಬೇರೆ ಪಾತ್ರಕ್ಕೆ ಬೇರೆ ಬೇರೆ ರೀತಿ ಆಗಿರುತ್ತದೆ. ವಿಕ್ರಮ್ ಅಭಿನಯವನ್ನು ಯಾರಿಂದಲೂ ಕಾಪಿ ಮಾಡಲು ಸಾಧ್ಯವೇ ಇಲ್ಲ!

ಆತನ ಪಿತಾಮಗನ್, ಐ, ದಿಲ್, ಜೆಮಿನಿ, ಅರುಲ್, ಸಾಮಿ, ಆನಿಯನ್, ರಾವಣ್, ಕಿಂಗ್, ಧೂಳ್, ಕಾಸಿ, ಕಾಂತಾ, ಪೊನ್ನಿಯನ್ ಸೆಲ್ವಂ, ಕೋಬ್ರಾ, ತಿರುಮಗಲ್……..ಮೊದಲಾದ ಸಿನೆಮಾಗಳನ್ನು ನೋಡಿದರೆ ವಿಕ್ರಮ್ ಎಷ್ಟು ಅದ್ಭುತ ನಟ ಎಂಬ ಅರಿವಾಗುತ್ತದೆ. ಆತನಿಗೆ ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳು, ಮೂರು ಬಾರಿ ರಾಜ್ಯಪ್ರಶಸ್ತಿ, ಪಿತಾಮಗನ್ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ, ತಮಿಳುನಾಡಿನಲ್ಲಿ ಮಹಾನ್ ಕಲಾವಿದರಿಗೆ ಮಾತ್ರ ನೀಡುವ ಕಲೈಮಾಮಣಿ ಪ್ರಶಸ್ತಿ, ಎಲ್ಲವೂ ಈಗಾಗಲೇ ದೊರೆತಿವೆ!

ತಾನೇ ಸ್ಥಾಪನೆ ಮಾಡಿರುವ ವಿಕ್ರಮ್ ಫೌಂಡೇಶನಿನ ಮೂಲಕ ಆತ ನಡೆಸುವ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳು, ಉಚಿತ ಹೃದಯದ ಸರ್ಜರಿಗಳು, ಹಲವು ವಿಶೇಷ ಮಕ್ಕಳ ಶಾಲೆ, ನೇತ್ರದಾನ ಸಂಕಲ್ಪ ಶಿಬಿರಗಳು…….ಇವುಗಳ ಬಗ್ಗೆ ಬರೆಯುತ್ತ ಹೋದಂತೆ ವಿಕ್ರಮ್ ನನಗೆ ವಿಶ್ವಮಾನವರಾಗಿ ಕಾಣುತ್ತಾರೆ.

ವಿಕ್ರಮ್ ಬಹುಮುಖಿ ಪ್ರತಿಭೆಯ ‘ತಂಗಲಾನ್ ‘ ಬಂದಿದೆ.

ವಿಕ್ರಮ್ ಅಭಿನಯಿಸಿದ ತಂಗಲಾನ್ ಸಿನೆಮಾ ಈ ವಾರ ಜಗತ್ತಿನಾದ್ಯಂತ ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಆದರೆ ವಿಕ್ರಮ್ ಅಭಿನಯವು ಮತ್ತೆ ಅದ್ಭುತವಾಗಿ ಮೂಡಿಬಂದಿದೆ. ಆ ಸಿನೆಮಾವನ್ನು ಒಮ್ಮೆ ನೋಡಿ ವಿಕ್ರಮ್ ಪ್ರತಿಭೆಗೆ ಜೈ ಎಂದು ಹೇಳೋಣ ಅಲ್ಲವೇ?

ಆತನ ಬದುಕಿನ ಕಥೆಯು ಆತನ ಸಿನೆಮಾಗಳ ಕಥೆಗಿಂತ ಹೆಚ್ಚು ರೋಚಕವಾಗಿದೆ ಎಂದು ನನಗೆ ಅನಿಸುತ್ತದೆ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಹೇಗಿದ್ದವನು ಹೇಗಾಗಿ ಹೋದ ಕ್ರಿಕೆಟರ್ ವಿನೋದ್ ಕಾಂಬ್ಳಿ?

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಇಂದು ಬಾಂಗ್ಲಾದೇಶದ ಹಿಂದೂ ಉಳಿದರೆ, ನಾಳೆ ಹಿಂದೂ-ಭಾರತ ಉಳಿದೀತು!

ನನ್ನ ದೇಶ ನನ್ನ ದನಿ ಅಂಕಣ: ಬಾಂಗ್ಲಾದೇಶದ (Bangladesha) ಹಿಂದೂಗಳ (Hindus) ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ bangladesh hindus
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

:: ಅಜ್ಜಂಪುರ ಮಂಜುನಾಥ

ನನ್ನ ದೇಶ ನನ್ನ ದನಿ ಅಂಕಣ: ಇದು 1948ರ ಮಾತು. ಶ್ರೀಪ್ರಕಾಶರು ಪಾಕಿಸ್ತಾನದಲ್ಲಿ (Pakistan) ಭಾರತದ (India) ಹೈಕಮಿಷನರ್ (ರಾಯಭಾರಿ) ಆಗಿದ್ದರು. ಪಾಕಿಸ್ತಾನವು ಅದಾಗಲೇ ಇಸ್ಲಾಮೀ ಪ್ರಭುತ್ವವೆಂದು (Islamic country) ಘೋಷಿಸಿಕೊಂಡಾಗಿತ್ತು. ಹಿಂದೂಗಳ ಮೇಲೆ, ಸಿಖ್ಖರ ಮೇಲೆ ದಾಳಿ, ಅತ್ಯಾಚಾರ, ಹತ್ಯಾಕಾಂಡ, ಅಂಗಡಿ ಮನೆಗಳಿಗೆ – ದೇವಾಲಯಗಳಿಗೆ – ಗುರುದ್ವಾರಗಳಿಗೆ ಬೆಂಕಿ ಹಚ್ಚುವುದು ಆ ಭೂಪ್ರದೇಶದಲ್ಲಿ ಬಹಳ ಕಾಲದಿಂದಲೂ ನಡೆದೇ ಇತ್ತು. ಆದರೆ, 1948ರ ವೇಳೆಗೆ ಒಂದಿಷ್ಟು ಕಡಿಮೆ ಆಗಿತ್ತು. ಪ್ರಾಯಶಃ ದಾಳಿಮಾಡಲು ಮುಸ್ಲಿಮೇತರರೇ ಸಿಕ್ಕುತ್ತಿರಲಿಲ್ಲವೆಂದು ಕಾಣುತ್ತದೆ. ಒಂದು ದಿನ ಹಿಂದೂ ದೇವಾಲಯವೊಂದರ (Hindu Temple) ಮೇಲೆ ದಾಳಿಯಾದ ಸುದ್ದಿ ಬಂದಿತು. ಅಲ್ಲಿದ್ದ ಕೆಲವು ವಸ್ತುಗಳು ಕಳವು ಆದ ಮತ್ತು ದೇವಾಲಯಕ್ಕೆ ಹಾನಿಯಾದ ಸುದ್ದಿ ಬಂದಿತು. ಶ್ರೀಪ್ರಕಾಶರು ಪೊಲೀಸರನ್ನು ಮತ್ತು ಉಳಿದ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸಂಪರ್ಕಿಸಿದರು. ಅದ್ಭುತವಾದ ಉತ್ತರ ಬಂದಿತು: “ಇದು ಇಸ್ಲಾಮೀ ಪ್ರಭುತ್ವ. ಇಲ್ಲಿ ಕಳ್ಳತನ ಇತ್ಯಾದಿ ಜರುಗುವುದೇ ಇಲ್ಲ. ಏನೂ ಆಗಿಯೇ ಇಲ್ಲ”. ಶ್ರೀಪ್ರಕಾಶರು ವಿಚಾರಿಸಿದಾಗ, ಪೊಲೀಸರು ಯಾವುದೇ ದೂರು ಸಹ ಸ್ವೀಕರಿಸಿರಲಿಲ್ಲ. FIR ಸಹ ಹಾಕಿರಲಿಲ್ಲ ಎಂಬುದು ತಿಳಿದುಬಂದಿತು. ಶ್ರೀಪ್ರಕಾಶರಿಗೆ ದಿಗ್ಭ್ರಮೆಯಾಯಿತು. ಇಸ್ಲಾಮೀ ಪ್ರಭುತ್ವಗಳು ಹೇಗಿರುತ್ತವೆ, ಅಲ್ಲಿ ಮುಸ್ಲಿಮೇತರರ ಪಾಡೇನು ಎಂಬುದು ಅವರಿಗೇನೋ ತಿಳಿಯಿತು. ಆದರೆ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿದ ಭಾರತದ ಇಲ್ಲಿನ ಸರ್ಕಾರಕ್ಕೆ, ಪಕ್ಷಕ್ಕೆ, ಅಧಿಕಾರಾರೂಢರಿಗೆ ಅರ್ಥವಾಗಲೇ ಇಲ್ಲ. ಅವರು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. 76 ವರ್ಷಗಳ ಅನಂತರವೂ ಇಂದಿಗೂ, ಪರಿಸ್ಥಿತಿಯಲ್ಲಿ ತುಂಬ ಬದಲಾವಣೆಯೇನೂ ಆಗಿಲ್ಲ.

ನಾನು ದಾವಣಗೆರೆಯಲ್ಲಿದ್ದೆ. ಕಾರ್ಗಿಲ್ (Kargil War) ಮೇಲೆ ಪಾಕ್ ದಾಳಿ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಆಯೋಜಿತವಾದ ಕಾರ್ಯಕ್ರಮವೊಂದರಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಮಾತನಾಡುತ್ತಿದ್ದರು ಮತ್ತು ಬಹಳ ಮಹತ್ತ್ವದ ಮಾತನ್ನೂ ಹೇಳಿದರು. “ನೋಡಿ, ಇಲ್ಲಿ ನೀವು ಇದು ಪಾಕಿಸ್ತಾನದ 4ನೆಯ ಆಕ್ರಮಣ ಎಂದು ಹೇಳುತ್ತಿದ್ದೀರಿ. ನಾನೊಬ್ಬ ನಿವೃತ್ತ ಸೇನಾಧಿಕಾರಿ. ಗಡಿಯಲ್ಲಿ ಇದ್ದೆ ಮತ್ತು ಯುದ್ಧಗಳಲ್ಲಿ ಸ್ವತಃ ಭಾಗವಹಿಸಿದ್ದೇನೆ. ಪಾಕಿಸ್ತಾನದ ಆಕ್ರಮಣವು 1947ರಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಬೇರೆಬೇರೆ ರೂಪದಲ್ಲಿ, ದಾಳಿ ನಡೆಯುತ್ತಲೇ ಇದೆ. ಇಂದಿಗೂ ನಿಂತೇ ಇಲ್ಲ, ಒಮ್ಮೆಯೂ ನಿಂತಿಲ್ಲ”. ನಾವೆಲ್ಲ ಅವಾಕ್ಕಾದೆವು. ನಿಜ. ಪಾಕಿಸ್ತಾನವೇ ಅನೇಕ ಬಾರಿ ಘೋಷಿಸಿರುವಂತೆ ಅದು, ಎಂದೆಂದಿಗೂ ಮುಗಿಯದ ಇಸ್ಲಾಮೀ ಆಕ್ರಮಣ. ಆದರೆ, ನಮಗೆ, ಭಾರತೀಯರಿಗೆ ಅದು ಅರ್ಥವಾಗಿಯೇ ಇಲ್ಲ.

    1947ರ ದೇಶವಿಭಜನೆಗೆ (Partition) ಮೊದಲು ಮತ್ತು ಅನಂತರ, ಬಂಗಾಳದಲ್ಲಿ ಆದ – ಆಗುತ್ತಿರುವ ಅತ್ಯಾಚಾರ, ದಾಳಿ, ವಿಧ್ವಂಸಗಳಿಗೆ ಕೊನೆ ಮೊದಲಿಲ್ಲ. 1971ರ ಬಾಂಗ್ಲಾ ದೇಶದ ವಿಮೋಚನೆಗೆ ಮೊದಲು ಹಿಂದೂಗಳ ಮೇಲೆ, ಬೌದ್ಧರ ಮೇಲೆ ಆದ ನರಮೇಧ, ಅತ್ಯಾಚಾರಗಳು ಅನೂಹ್ಯ ಪ್ರಮಾಣದವು. ವಿಮೋಚನೆಯ ಅನಂತರ ಕೆಲಕಾಲ ಸ್ವಲ್ಪ ಕಡಿಮೆಯಾಗಿತ್ತು, ಎನ್ನಬಹುದು, ಅಷ್ಟೇ. ಜಿಯಾಉರ್ ರೆಹಮಾನ್, ಖಲೀದಾ ಜಿಯಾ ಅವರ ಅವಧಿಯಲ್ಲಿ ಈ ಹಿಂಸೆ ಕಿರುಕುಳಗಳು ಮತ್ತೆ ಮಿತಿ ಮೀರಿದವು. “ದುರದೃಷ್ಟವಶಾತ್” ನಮ್ಮ ಪತ್ರಕರ್ತರು, ಲೇಖಕರು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಾದ ಭೀಕರ ಹಿಂಸಾಚಾರಗಳನ್ನು ವರದಿ ಮಾಡಲೂ ಇಲ್ಲ, ಪುಸ್ತಕ ಬರೆಯಲೂ ಇಲ್ಲ. ಈ ಕಾರಣಕ್ಕೆ, ಅವಿಭಜಿತ ಬಂಗಾಳ ಎನ್ನಲಾಗುತ್ತಿದ್ದ ಆ ಪ್ರದೇಶದಲ್ಲಿ ಕಳೆದ ಎಂಟು ದಶಕಗಳಲ್ಲಿ ನಡೆದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಸಮರ್ಪಕವಾದ ಮತ್ತು ಸಮಗ್ರವಾದ ದಾಖಲೆಗಳೇ ಸಿಕ್ಕುವುದಿಲ್ಲ. ಸಹಸ್ರ ಸಹಸ್ರ ವರ್ಷಗಳ ಖ್ಯಾತಿಯ ಸಂಸ್ಕೃತಿ, ಸಂಗೀತ, ಸಾಹಿತ್ಯ, ನೃತ್ಯ, ವಿದ್ವತ್ತುಗಳ ಅತ್ಯದ್ಭುತವಾದ ಬಂಗಾಳವು ಈಗಲೂ ನಿರಂತರವಾಗಿ ನಾಶವಾಗುತ್ತಲೇ ಇದೆ. ಕ್ರಾಂತಿಕಾರಿಗಳ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಅವರ, ರಾಮಕೃಷ್ಣ ಪರಮಹಂಸ – ವಿವೇಕಾನಂದರ, ಬಂಕಿಮಚಂದ್ರರ, ಸತ್ಯಜಿತ್ ರಾಯ್ ಅವರ ಪ್ರತಿಭಾನ್ವಿತ ಬಂಗಾಳವು ಅನಿಯಂತ್ರಿತ ಮತಾಂತರದ ಪರಿಪ್ರೇಕ್ಷ್ಯದಲ್ಲಿ ಜಿಹಾದೀ ಪಶುಗಳ ಕೊಂಪೆಯಾಗಿಹೋಗಿದೆ.

    ಹಿಂದೂ-ಭಾರತ ಇನ್ನಾದರೂ ಕಣ್ಣುಬಿಡಬೇಕಾಗಿದೆ. ಬಂಗಾಳ, ಕೇರಳ, ಕಾಶ್ಮೀರಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ.

    ಇತಿಹಾಸಕಾರ, ಅಪರೂಪದ ಚಿಂತಕ, ಸೀತಾರಾಮ ಗೋಯಲ್ ಅವರು ಮಹತ್ತ್ವದ ದಾಖಲೆಗಳ ಮತ್ತು ಮಾಹಿತಿಗಳ ತಮ್ಮ “Hindu Temples : What Happened To Them” (Volume 1 – A preliminary Survey) ಗ್ರಂಥದಲ್ಲಿ ಬಹಳ ಮುಖ್ಯವಾದ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು (ಆ ಸಂದರ್ಭದ ರಾಜಕೀಯ ಲಾಭ ಪಡೆಯಲು) ರಾಮಜನ್ಮಭೂಮಿ ಆವರಣದಲ್ಲಿ ಶಿಲಾನ್ಯಾಸಕ್ಕೆ ಅನುಮತಿ ನೀಡಿದರು. ಆಗಿನ್ನೂ ಬಾಬ್ರಿ ಮಸೀದಿಯ ವಿವಾದಿತ ಕಟ್ಟಡ ಇತ್ತು (ಅದರ ಧ್ವಂಸ ಆಗಿದ್ದು 6ನೆಯ ಡಿಸೆಂಬರ್ 1992ರಲ್ಲಿ). ಇಷ್ಟಕ್ಕೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂ ಮಂದಿರಗಳ ಮೇಲೆ ದಾಳಿಗಳಾದವು, ಹಿಂದೂಗಳ ಮೇಲೆ ಅತ್ಯಾಚಾರ ನರಹತ್ಯೆಗಳು ಮುಗಿಬಿದ್ದವು. ಭಾರತದ ಹಿಂದೂಗಳ ಬೆಂಬಲದಿಂದ, ರಕ್ತ ಬೆವರುಗಳ ನೆರವಿನಿಂದ ಹುಟ್ಟಿಕೊಂಡ ಈ ಬಾಂಗ್ಲಾದೇಶದಲ್ಲಿ ಅಕ್ಷರಶಃ ನೂರಾರು ದೇವಾಲಯಗಳ ಧ್ವಂಸವಾಯಿತು, ಹಿಂದೂಗಳ ನರಮೇಧವಾಯಿತು, ಅಂಗಡಿ – ಮನೆಗಳನ್ನು ಸುಟ್ಟುಹಾಕಲಾಯಿತು. ಇನ್ನು ಮಹಿಳೆಯರ ಮೇಲೆ ಅನೂಹ್ಯ ಪ್ರಮಾಣದಲ್ಲಿ ಅತ್ಯಾಚಾರ ನಡೆಯಿತು. ಗೋಯಲ್ ಅವರು ಈ ಮಹತ್ತ್ವದ ಗ್ರಂಥದ 7ನೆಯ ಅಧ್ಯಾಯದಲ್ಲಿ ಈ ವಿಧ್ವಂಸದ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಪಾಪ, ಉಳಿದ ಅನೇಕ ಪತ್ರಕರ್ತರು, ಲೇಖಕರು ಪಟ್ಟಿ ಮಾಡುವುದಿರಲಿ, ಗ್ರಂಥರಚನೆಯಿರಲಿ, ಮಾತು ಸಹ ಆಡಲಿಲ್ಲ, ಖಂಡಿಸಲೂ ಇಲ್ಲ, ಪ್ರತಿಕ್ರಿಯಿಸಲೂ ಇಲ್ಲ.

    Bangladesh Unrest
    Bangladesh Unrest

    ಶಿಕಾಗೋ ಮೂಲದ ಡಾ|| ರಿಚರ್ಡ್ ಎಲ್. ಬೆನ್ ಕಿನ್ ದಾಖಲಿಸಿರುವ “A Quiet Case of Ethnic Cleansing” (ಮೊದಲ ಆವೃತ್ತಿ 2012) ಬಹಳ ಮಹತ್ತ್ವದ ಮತ್ತು ಅಪರೂಪದ ಗ್ರಂಥ. ಇಲ್ಲಿ ಬಂಗಾಳದ ಪ್ರದೇಶದ ಮತೀಯ ವಿಧ್ವಂಸ ಮತ್ತು ನರಹತ್ಯಾಕಾಂಡಗಳ ಬಗೆಗೆ ಅನೇಕ ಪ್ರಾತಿನಿಧಿಕ ದಾಖಲೆಗಳೇ ಇವೆ. ಈ ಗ್ರಂಥದ ಅನುಬಂಧ 1 ರಲ್ಲಿ ರಿಚರ್ಡ್ ಅವರು 2009 ಈ ಒಂದು ವರ್ಷದಲ್ಲಾದ ಹಲವು ಪ್ರಮುಖ ಭಯಾನಕ ಘಟನೆಗಳನ್ನು ಕೋಷ್ಟಕ (Table) ರೂಪದಲ್ಲಿ ನೀಡಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಒತ್ತೆಯಿಟ್ಟುಕೊಂಡು ಹಣ ಕೀಳುವುದು, ಅತ್ಯಾಚಾರ ಮಾಡುವುದು, ಬಲವಂತದ ಮತಾಂತರ ಮಾಡುವುದು, ಹತ್ಯೆ ಮಾಡುವುದು, ಅದೇರೀತಿ ಹಿಂದೂಗಳ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಹಿಂದೂಗಳ ನರಹತ್ಯೆ, ಮತಾಂತರ ಇತ್ಯಾದಿಗಳ ವಿವರಗಳಿಲ್ಲಿವೆ. ಈ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಇಸ್ಲಾಮೀ ಪ್ರಭುತ್ವದ ಪೊಲೀಸರು ದೂರುಗಳನ್ನು ಕೈಗೆ ಸ್ವೀಕರಿಸಲೂ ಇಲ್ಲ, ಸ್ವೀಕರಿಸಿದರೂ FIR ಹಾಕಲಿಲ್ಲ, ಇನ್ನು ಕ್ರಮ ತೆಗೆದುಕೊಳ್ಳುವುದಂತೂ ಇಲ್ಲವೇ ಇಲ್ಲ. ಇಸ್ಲಾಮೀ ಪ್ರಭುತ್ವದ ದೇಶಗಳು ಇರುವುದೇ ಹಾಗೆ, ಅಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವೂ ಇಲ್ಲ, ಕನಿಷ್ಠ ಮರ್ಯಾದೆಯೂ ಇಲ್ಲ, ಅಸ್ತಿತ್ವವೂ ಇಲ್ಲ.

    ಪ್ರಸ್ತುತ ಬಾಂಗ್ಲಾದೇಶದಲ್ಲಿ ಬೀಭತ್ಸ ಹಿಂಸಾಪರ್ವ ವಿಜೃಂಭಿಸುತ್ತಿದೆ. ಬೆಂಕಿ ಹಚ್ಚುವುದು, ದೇವಾಲಯಗಳ ನಾಶ, ನರಹತ್ಯೆಗಳಿರಲಿ, ಅಲ್ಲಿನ ಜಿಹಾದಿಗಳು ತಾವು ಹಿಂದೂ ಹೆಣ್ಣುಮಕ್ಕಳ ಮೇಲೆ ಎಸಗುತ್ತಿರುವ ಭಯಾನಕ ಅತ್ಯಾಚಾರದ ವೀಡಿಯೋಗಳನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಇದು ಬರಿಯ ಯುದ್ಧವಲ್ಲ, ಬರಿಯ ಆಕ್ರಮಣವಲ್ಲ, ಇದು ಅವೆಲ್ಲವುಗಳನ್ನು ಮೀರಿದ ಘನಘೋರವಾದ ಅಮಾನವೀಯ ಅತ್ಯಾಚಾರ, ಹಿಂಸಾಚಾರ. ಇಂತಹ ಈ ಜಿಹಾದೀ ದುಷ್ಟಜಂತುಗಳನ್ನು ಕ್ಷಣಮಾತ್ರವೂ ತಡ ಮಾಡದೇ ಕೊಂದುಹಾಕುವುದೇ ಸರಿಯಾದ ಕ್ರಮ. ಪ್ರಸಕ್ತ ಭಾರತದ ಆಶಾಕಿರಣ ಯೋಗಿ ಆದಿತ್ಯನಾಥರು. ಅವರು “ವಿಷಕ್ರಿಮಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕು, ಬೇರೆ ಯಾವುದೂ ಅವರಿಗೆ ಅರ್ಥ ಆಗುವುದಿಲ್ಲ” ಎನ್ನುತ್ತಿರುತ್ತಾರೆ. 20ನೆಯ ಶತಮಾನದ ಆರಂಭದಲ್ಲಿಯೇ ಪಾಕಿಸ್ತಾನದ ದುಷ್ಟ ಪರಿಕಲ್ಪನೆ ಹುಟ್ಟಿದ್ದೇ ಅಲಿಗಢ ವಿಶ್ವವಿದ್ಯಾಲಯದಲ್ಲಿ. ಮುಸ್ಲಿಂ ಬಾಹುಳ್ಯದ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಬಹಳ ಬಹಳ ಕಷ್ಟದ ಕೆಲಸ. ಎಲ್ಲ ರಾಜಕೀಯ ಪಕ್ಷಗಳೂ ಇಡೀ ದೇಶವನ್ನು, ಮುಖ್ಯವಾಗಿ ಉತ್ತರ ಪ್ರದೇಶವನ್ನು ಕಳೆದ ಏಳು ದಶಕಗಳಿಂದ ಕುಲಗೆಡಿಸುತ್ತಲೇ ಇವೆ. ಈ ಪರಿಪ್ರೇಕ್ಷ್ಯದಲ್ಲಿ ಅಭಿವೃದ್ಧಿಯ ಜೊತೆಯಲ್ಲಿ, ಅತ್ಯದ್ಭುತವಾದ ಕಾನೂನು ಮತ್ತು ಸುವ್ಯವಸ್ಥೆಗಳು ಸಾಧ್ಯವಾಗಿರುವುದು ಯೋಗಿಜೀ ಅವರ ಹೆಗ್ಗಳಿಕೆ. ಅವರಿಂದಾಗಿ ಬರೀ ಉತ್ತರ ಪ್ರದೇಶ ಮಾತ್ರವಲ್ಲ, ಪರೋಕ್ಷವಾಗಿ ಭಾರತವೂ ಉಳಿಯಲು ಸಾಧ್ಯವಾಗಿದೆ.

    ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಂತಹ ಇಸ್ಲಾಮೀ ಪ್ರಭುತ್ವಗಳಿಗೆ ಸಂದೇಶ ಕಳುಹಿಸುವುದು, ವಿನಂತಿ ಸಲ್ಲಿಸುವುದು, ಎಚ್ಚರಿಕೆ ನೀಡುವುದು, ಮಾತುಕತೆ – ಚರ್ಚೆ ಮಾಡುವುದು, ಯಾವುದೂ ಅರ್ಥವಾಗುವುದಿಲ್ಲ. ಅವೆಲ್ಲಾ ಸಂಪೂರ್ಣ ನಿಷ್ಪ್ರಯೋಜಕ. ಕೈಲಾಗದ ಹೇಡಿಗಳನ್ನು ನೋಡಿ ಜಿಹಾದಿಗಳು ಗಹಗಹಿಸಿ ನಗುವ ನೂರಾರು ವೀಡಿಯೋಗಳನ್ನು ನಾವೆಲ್ಲರೂ ನೋಡಿಯೇಇದ್ದೇವೆ.

    ಸೆಪ್ಟೆಂಬರ್ 2016ರಲ್ಲಿ ಭಾರತದ “ಸರ್ಜಿಕಲ್ ಸ್ಟ್ರೈಕ್” ಪಾಕಿಸ್ತಾನಕ್ಕೆ ಅರ್ಥವಾಯಿತು. ಬೇರೆ ಯಾವ ಭಾಷೆಯೂ ಇಂತಹವರಿಗೆ ಅರ್ಥ ಆಗುವುದಿಲ್ಲ, ಎನ್ನುವ ಮಾತೂ ರುಜುವಾತಾಯಿತು. ಈಗ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ಹೇಯ ಹಿಂಸೆ, ಅತ್ಯಾಚಾರಗಳಿಗೆ ಅಂತ್ಯ ಹಾಡಬೇಕಾದರೆ, ಪರಿಣಾಮಕಾರಿಯಾದ “ಸರ್ಜಿಕಲ್ ವಾರ್” ಆಗಬೇಕೆಂಬುದನ್ನು ಸೇನಾಧಿಕಾರಿಗಳಾಗಿದ್ದವರೇ ಹೇಳಿದ್ದಾರೆ. ಗೂಟದ ಕಾರುಗಳಲ್ಲಿ ಕುಳಿತವರು, ತಮಗೆ ಬೆಂಬಲ ನೀಡಿದ ಹಿಂದೂ-ಭಾರತವನ್ನು ಗೌರವಿಸಲಾದರೂ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

    ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

    Continue Reading

    ಅಂಕಣ

    ರಾಜಮಾರ್ಗ ಅಂಕಣ: ಹೇಗಿದ್ದವನು ಹೇಗಾಗಿ ಹೋದ ಕ್ರಿಕೆಟರ್ ವಿನೋದ್ ಕಾಂಬ್ಳಿ?

    ರಾಜಮಾರ್ಗ ಅಂಕಣ: ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!

    VISTARANEWS.COM


    on

    vinod-kambli-1 ರಾಜಮಾರ್ಗ ಅಂಕಣ
    Koo

    ಒಬ್ಬ ಚಾಂಪಿಯನ್ ಕ್ರಿಕೆಟರ್ ಈ ರೀತಿ ನೈತಿಕ ಅಧಃಪತನ ಹೊಂದಲು ಕಾರಣವೇನು?

    Rajendra-Bhat-Raja-Marga-Main-logo

    :: ರಾಜೇಂದ್ರ ಭಟ್ ಕೆ.

    ರಾಜಮಾರ್ಗ ಅಂಕಣ: ಭಾರತದ ಮಾಜಿ ಕ್ರಿಕೆಟರ್, ಬಲಿಷ್ಠ ಎಡಗೈ ದಾಂಡಿಗ ವಿನೋದ್ ಕಾಂಬ್ಳಿಗೆ (Vinod Kambli) ಸಂಬಂಧಪಟ್ಟ ಇತ್ತೀಚಿನ ಒಂದು ವಿಡಿಯೋ ನೋಡಿ ಕರುಳು ಕಿತ್ತು ಬಂತು! ಒಂದು ಬೈಕಿಗೆ ಸ್ಟ್ಯಾಂಡ್ ಹಾಕಲೂ ಆಗದೆ ದೇಹದ ಬ್ಯಾಲೆನ್ಸ್ ತಪ್ಪಿದಾಗ ಆತನನ್ನು ಕೆಲವು ದಾರಿಹೋಕರು ಎತ್ತಿಹಿಡಿದು ನಡೆಸಿಕೊಂಡು ಹೋಗುವ ವಿಡಿಯೋ ನಿಜವಾಗಿಯೂ ನೋವು ಕೊಟ್ಟಿತು.

    ಅದೇ ವಿನೋದ್ ಕಾಂಬ್ಳಿ ಕಳೆದ ವರ್ಷ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತಿದ್ದರು! ತೀರಾ ಹತಾಶೆ ತೋಡಿಕೊಂಡಿದ್ದರು!

    ನನ್ನ ಮನಸ್ಸು ಆಗ 38 ವರ್ಷಗಳ ಹಿಂದಕ್ಕೆ ಓಡಿತು.

    ಗೆಳೆಯರಿಬ್ಬರ ದಾಖಲೆಯ ಇನ್ನಿಂಗ್ಸ್!

    ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಮುಂಬೈಯ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಕಾಂಬ್ಳಿಯು ಸಚಿನಗಿಂತ ಎರಡು ವರ್ಷ ದೊಡ್ಡವನು.

    1988ರ ಒಂದು ದಿನ ಇಬ್ಬರೂ ಸೇರಿ ತಮ್ಮ ಶಾರದಾಶ್ರಮ ಶಾಲೆಯ ಪರವಾಗಿ ಒಂದು ಪಂದ್ಯದಲ್ಲಿ 664 ರನ್ನುಗಳ ಜೊತೆಯಾಟ ಮಾಡಿ ಇಡೀ ಭಾರತದ ಗಮನ ಸೆಳೆದಿದ್ದರು. ಅಂದು ಇಬ್ಬರದೂ ತ್ರಿಶತಕವು ದಾಖಲು ಆಗಿತ್ತು! ಆಗ ಸಚಿನಗೆ 14 ವರ್ಷ. ಕಾಂಬ್ಳಿಗೆ 16 ವರ್ಷ!

    ನಂತರ ಇಬ್ಬರೂ ತಮ್ಮ ಶಾಲೆಯನ್ನು ಬಿಟ್ಟು ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಆಚರೇಕರ್ ಅವರ ಕೋಚಿಂಗ್ ಕ್ಯಾಂಪ್ ಸೇರಿದರು. ಮಹಾಗುರುಗಳಾದ ಆಚರೇಕರ್ ಸರ್ ತಮ್ಮ ಇಬ್ಬರು ಶಿಷ್ಯರ ಬಗ್ಗೆ ಹೇಳಿದ ಮಾತು ತುಂಬಾ ಮುಖ್ಯ ಆದದ್ದು.

    “ಸಚಿನ್ ತುಂಬಾ ಬದ್ಧತೆಯ ಹುಡುಗ. ಹೇಳಿದ ಸಮಯಕ್ಕೆ ಮೊದಲೇ ಕ್ಯಾಂಪಿಗೆ ಬರುತ್ತಿದ್ದ. ನಾನು ಹೇಳಿದ್ದನ್ನು ಚಾಚೂ ತಪ್ಪದೇ ಗಮನಿಸುತ್ತಿದ್ದ. ಹೇಳಿದ್ದನ್ನು ಪೂರ್ತಿಯಾಗಿ ಕಲಿತು ಬರುತ್ತಿದ್ದ. ಅವನ ಶ್ರದ್ಧೆ ಮತ್ತು ನನ್ನ ಬಗ್ಗೆ ಇದ್ದ ಗೌರವಗಳು ಎರಡೂ ಅದ್ಭುತ ಆಗಿತ್ತು”

    “ಆದರೆ ಈ ವಿನೋದ್ ಕಾಂಬ್ಳಿ ಶಿಸ್ತಿಲ್ಲದ ಹುಡುಗ. ಆಗಲೇ ಶೋಕಿ ಮಾಡುವುದನ್ನು ಕಲಿತಿದ್ದ. ನನ್ನ ತರಗತಿಗೆ ತಡವಾಗಿ ಬರುತ್ತಿದ್ದ. ಕ್ಲಾಸು ಮುಗಿಯುವ ಮೊದಲೇ ಬೈಕನ್ನು ಏರಿ ವೇಗವಾಗಿ ಓಡುತ್ತಿದ್ದ. ಸಿಗರೇಟ್, ಕುಡಿತ ಎಲ್ಲ ಚಟಗಳನ್ನು ಕಲಿತಿದ್ದ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಪಡುತ್ತಿದ್ದ”

    ಸಚಿನ್ ತೆಂಡೂಲ್ಕರಗಿಂತ ಹೆಚ್ಚು ಬಲಿಷ್ಠ ಆಟಗಾರ

    “ಪ್ರತಿಭೆಯಲ್ಲಿ ಆತನು ಸಚಿನಗಿಂತ ಒಂದು ತೂಕ ಹೆಚ್ಚೇ ಇದ್ದನು. ಬಲಿಷ್ಠ ಎಡಗೈ ಆಟಗಾರ. ಹೆಚ್ಚು ಆಕ್ರಮಣಕಾರಿ ಆಟಗಾರ. ಆದರೆ ಬದ್ಧತೆ ಮತ್ತು ನಿರಂತರತೆ ಇಲ್ಲ. ಬಹಳ ಮುಖ್ಯವಾಗಿ ಫೋಕಸ್ ಇರಲಿಲ್ಲ. ನನ್ನ ಮಾತು ಕೇಳುತ್ತಲೇ ಇರಲಿಲ್ಲ. ಪರಿಣಾಮವಾಗಿ ಆತ ತನ್ನ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ!”

    ಮುಂದೆ ಗುರುಗಳು ಹೇಳಿದ ಭವಿಷ್ಯದ ಮಾತು ಅಷ್ಟೂ ನಿಜ ಆಯಿತು.

    ಕಾಂಬ್ಳಿ ಆರಂಭದ ಜೋರು ಅಬ್ಬರ!

    ಸಚಿನ್ ಮತ್ತು ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕಾಂಬ್ಳಿ ಆರಂಭದಲ್ಲಿ ಭಾರೀ ಅಬ್ಬರಿಸಿದ. ಸತತವಾಗಿ ನಾಲ್ಕು ಶತಕ ಸಿಡಿಸಿದ! ಅದರಲ್ಲಿ ಎರಡು ಡಬ್ಬಲ್ ಸೆಂಚುರಿಗಳು! ಕೇವಲ 14 ಇನ್ನಿಂಗ್ಸಗಳಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ! ಏಕದಿನ ಪಂದ್ಯದಲ್ಲಿ ಕೂಡ ದಾಖಲೆ ಮಾಡಿದ.

    ಆತನ ಆರಂಭಿಕ ಅಬ್ಬರ ನೋಡಿದಾಗ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಚಾಂಪಿಯನ್ ಆಟಗಾರ ಸಿಕ್ಕಿದ ಎಂದು ಲೀಡ್ ಪತ್ರಿಕೆಗಳು ಬರೆದವು!

    ಹಿಸ್ ಆಟಿಟ್ಯೂಡ್ ವಾಸ್ ರಾಂಗ್!

    ಆದರೆ ಆತ ಬಹುಬೇಗನೆ ತನ್ನ ಫೋಕಸನ್ನು ಕಳೆದುಕೊಂಡ. ಚಟಗಳು ಮುಂದುವರೆದವು. ಶೋಕಿಯು ಮಿತಿಮೀರಿತು. ಕುಡಿತ, ಜೂಜು, ಸಿಗರೇಟ್ ಎಲ್ಲವೂ ಆತನನ್ನು ಖಾಲಿ ಮಾಡಿದವು. ಪರಿಣಾಮವಾಗಿ ಆತನ ಚಾಪಿಯನ್ ಆಟ ತನ್ನ ಆಕರ್ಷಣೆ ಕಳೆದುಕೊಂಡಿತು! ಕೇವಲ 23ನೆಯ ವಯಸ್ಸಿನಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ! ಆಗ ಆತನ ಬ್ಯಾಟಿಂಗ್ ಸರಾಸರಿ ಭಾರತದಲ್ಲಿಯೇ ಅತಿ ಹೆಚ್ಚು (54)ಇತ್ತು! ಒಂದೆರಡು ವರ್ಷಗಳಲ್ಲಿ ಏಕದಿನದ ಅವಕಾಶಗಳು ಬರಿದಾದವು.

    ಆತ ಭಾರೀ ಜಗಳಗಂಟ. ಸಹ ಆಟಗಾರರ ಜೊತೆ, ಆಯ್ಕೆ ಸಮಿತಿಯವರ ಜೊತೆಗೆ, ಕೋಚ್ ಜೊತೆ, ಹೀಗೆ ಎಲ್ಲರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತ! ಅವನ ಮೇಲೆ ಎಲ್ಲರಿಗೂ ಇದ್ದ ಸಿಂಪತಿ ಖಾಲಿ ಆಯ್ತು! ಪರಿಣಾಮವಾಗಿ ತಂಡದಿಂದ ಮತ್ತೆ ಮತ್ತೆ ಹೊರಬಿದ್ದ!

    Vinod Kambli
    Vinod Kambli

    ಅದೇ ಹೊತ್ತಿಗೆ ಸಚಿನ್ ಹೇಗೆ ತನ್ನ ಕ್ರಿಕೆಟ್ ಕೆರಿಯರ್ ಗ್ರಾಫ್ ಏರಿಸಿದ, ಯಾವ ರೀತಿ ದಾಖಲೆಗಳ ಮೇಲೆ ದಾಖಲೆ ಬರೆದ, ಹೇಗೆ ಗಾಡ್ ಆಫ್ ಕ್ರಿಕೆಟ್ ಆದ? ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಆದರೆ ಅವನಿಗಿಂತ ಹೆಚ್ಚು ಪ್ರತಿಭೆ ಮತ್ತು ತಾಕತ್ತು ಹೊಂದಿದ್ದ ವಿನೋದ್ ಕಾಂಬ್ಳಿ ಹೇಗೆ ದಾರಿ ತಪ್ಪಿದ ಅನ್ನುವುದನ್ನು ಕೂಡ ಎಂದು ನಾವು ನೋಡಿದ್ದೇವೆ!

    ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

    ಖಾಸಗಿ ಜೀವನದಲ್ಲಿ ನೂರಾರು ಎಡವಟ್ಟುಗಳು

    ತನ್ನ ಖಾಸಗಿ ಜೀವನದಲ್ಲಿಯೂ ಕಾಂಬ್ಳಿ ಒಂದರ ಮೇಲೊಂದು ಎಡವಟ್ಟುಗಳನ್ನೇ ಮಾಡಿಕೊಂಡನು! ಹೋಟೆಲ್ ರಿಸೆಪ್ಶನಿಷ್ಟ ಒಬ್ಬಳನ್ನು ಹಾರಿಸಿಕೊಂಡು ಹೋಗಿ ಮದುವೆ ಆದ. ತಾನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ. ನಂತರ ಆಕೆಗೆ ಡೈವೋರ್ಸ್ ಕೊಟ್ಟು ಎರಡನೇ ಮದುವೆ ಆದ. ಕುಡಿತ, ಜೂಜು, ಸಿಗರೇಟ್ ಎಲ್ಲವೂ ನಿರಂತರವಾಗಿ ಮುಂದುವರೆದವು. ಚಟಕ್ಕೆ ಬಿದ್ದು ದೊಡ್ಡ ದೊಡ್ಡ ಬ್ಯಾಂಕ್ ಸಾಲ ಮಾಡಿದ. ಬ್ಯಾಂಕಿನವರು ಹುಡುಕಿಕೊಂಡು ಬಂದಾಗ ಅಡಗಿ ಕೂತ!

    ಒಂದು ಸಣ್ಣ ರಾಜಕೀಯ ಪಕ್ಷವನ್ನು ಸೇರಿ ಮುಂಬೈಯ ವಿಧಾನಸಭಾ ಚುನಾವಣೆಗೆ ನಿಂತ. ತುಂಬಾನೆ ಖರ್ಚು ಮಾಡಿದ. ಆದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋದ! ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಆಂಜಿಯೋಪ್ಲಾಸ್ಟಿ ಕೂಡ ಆಯ್ತು. ಇನ್ನೊಮ್ಮೆ ಕಾರು ಡ್ರೈವ್ ಮಾಡಿಕೊಂಡು ಹೋಗಿ ತೀವ್ರ ಆಕ್ಸಿಡೆಂಟ್ ಮಾಡಿಕೊಂಡ!

    ವೈದ್ಯರು ಇನ್ನು ಕುಡಿಯಲೇ ಬಾರದು. ಕುಡಿದರೆ ಆಸ್ಪತ್ರೆಗೆ ಅಡ್ಮಿಟ್ ಮಾಡುವುದಿಲ್ಲ ಎಂದು ಬೈದು ಕಳಿಸಿದರು! ಆತ ಕುಡಿಯುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಅಬ್ಬರಿಸಿ ಹೊರಬಂದ!

    ಎರಡು ಹಿಂದೀ, ಒಂದು ಕನ್ನಡ ಸಿನೆಮಾದಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದ. ಅಲ್ಲೂ ಹೆಸರು ಕೆಡಿಸಿಕೊಂಡ. ಇತ್ತೀಚೆಗೆ ಕ್ಯಾಮೆರಾದ ಮುಂದೆ ಬಂದು ನನಗೆ ಹೊಟ್ಟೆಪಾಡು ಕಷ್ಟ ಆಗ್ತಾ ಇದೆ ಎಂದು ಕಣ್ಣೀರು ಹಾಕಿದ್ದಾನೆ!
    ಅದಕ್ಕಿಂತ ಶೋಚನೀಯ ಎಂದರೆ ಇತ್ತೀಚಿನ ವಿಡಿಯೋ.

    ವಿನೋದ್ ಕಾಂಬ್ಳಿ – ದ ಲೋಸ್ಟ್ ಹೀರೋ!

    ಪತ್ರಕರ್ತ ಕುಣಾಲ್ ಪುರಂದರೆ ಅವರು ಬರೆದಿರುವ ಆತನ ಬದುಕಿನ ಕತೆಯ ಪುಸ್ತಕದ ಹೆಸರು ಅವನ ದುರಂತ ಬದುಕಿಗೆ ಅನ್ವರ್ಥ ಆಗಿದೆ. ಅದು THE LOST HERO!

    ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!

    ಇದನ್ನೂ ಓದಿ: ENG VS NZ: ವಿನೋದ್​ ಕಾಂಬ್ಳಿ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಹ್ಯಾರಿ ಬ್ರೂಕ್

    Continue Reading
    Advertisement
    Actor darshan
    ಸ್ಯಾಂಡಲ್ ವುಡ್4 mins ago

    Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

    Western Ghats
    ಕರ್ನಾಟಕ29 mins ago

    Western Ghats: ಭೂ ಕುಸಿತ ಹಿನ್ನೆಲೆ; ಪಶ್ಚಿಮ ಘಟ್ಟಗಳಲ್ಲಿನ ರೆಸಾರ್ಟ್, ಹೋಮ್ ಸ್ಟೇ, ತೋಟ, ಬಡಾವಣೆ ತೆರವಿಗೆ ಸರ್ಕಾರದ ಆದೇಶ

    Israel vs Hezbollah War
    ವಿದೇಶ47 mins ago

    Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

    Dhanya Ramkumar-Vicky Varun starrer Kaalapathar to release on September 13
    ಸಿನಿಮಾ1 hour ago

    Dhanya Ramkumar: ತೆರೆಗೆ ಸಿದ್ಧವಾಯ್ತು ಕಾಲಾಪತ್ಥರ್‌; ಸೆ.13ಕ್ಕೆ ಧನ್ಯಾ ರಾಮ್‌ಕುಮಾರ್- ವಿಕ್ಕಿ ವರುಣ್‌ ನಟನೆ ಮೋಡಿ

    Karkala Shocker
    ಕರ್ನಾಟಕ1 hour ago

    Karkala Shocker: ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಲ್ತಾಫ್‌ಗೆ ಕಠಿಣ ಶಿಕ್ಷೆಯಾಗಲಿ ಎಂದ ಮುಸ್ಲಿಂ ಒಕ್ಕೂಟ

    Pavel Durov Arrest
    ವಿದೇಶ1 hour ago

    Pavel Durov Arrest: ಟೆಲಿಗ್ರಾಂ ಸಿಇಒ ಪಾವೆಲ್‌‌ ಫ್ರಾನ್ಸ್‌‌ನಲ್ಲಿ ಬಂಧನ; ಕಾರಣ ಏನು?

    CBI Raid
    ದೇಶ2 hours ago

    CBI Raid: ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮೇಲೆ ಸಿಬಿಐ ದಾಳಿ

    Israel strike
    ವಿದೇಶ2 hours ago

    Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    Rohit Sharma
    ಕ್ರೀಡೆ3 hours ago

    Rohit Sharma: ಪಾರ್ಕ್​ನಲ್ಲಿ ಅಭ್ಯಾಸ ನಡೆಸಿದ ರೋಹಿತ್​; ವಿಡಿಯೊ ವೈರಲ್​

    Chain snatching Case
    ಕ್ರೈಂ3 hours ago

    Chain snatching Case: ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿದ; ಚೈನ್ ಸ್ನಾಚಿಂಗ್‌ಗೆ ಇಳಿದು ಸಿಕ್ಕಿಬಿದ್ದ

    Kannada Serials
    ಕಿರುತೆರೆ11 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Sharmitha Gowda in bikini
    ಕಿರುತೆರೆ11 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Bigg Boss- Saregamapa 20 average TRP
    ಕಿರುತೆರೆ10 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ11 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    galipata neetu
    ಕಿರುತೆರೆ9 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ11 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ8 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ12 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ9 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    ಮಳೆ21 hours ago

    Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

    karnataka Weather Forecast
    ಮಳೆ2 weeks ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ2 weeks ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ2 weeks ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು3 weeks ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ3 weeks ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ3 weeks ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    karnataka rain
    ಮಳೆ3 weeks ago

    Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

    karnataka Rain
    ಮಳೆ3 weeks ago

    Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

    Karnataka Rain
    ಮಳೆ3 weeks ago

    Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

    ಟ್ರೆಂಡಿಂಗ್‌