ಸಣ್ಣ ಕಥೆ | ಕಾಲ ವಟಿ - Vistara News

ಕಲೆ/ಸಾಹಿತ್ಯ

ಸಣ್ಣ ಕಥೆ | ಕಾಲ ವಟಿ

ಭೂತ ಭವಿಷ್ಯದ ಭಾರದಿಂದ ಮುಕ್ತವಾಗಿ ಮಾಡುವ ಆ ಅಪರೂಪದ ಔಷಧ ಕೈಲಾಜಿಗೆ ಸಿಕ್ಕಿತು. ಆದರೆ ಅದರ ಹಿಂದಿನ ಕಥೆ? ಆ ಸುಂದರಿಯೂ ಅದರ ಹಿಂದಿದ್ದಾಳೆಯೇ? ಓದಿ, ಡಾ.ಅಜಿತ್‌ ಹರೀಶಿ ಬರೆದ ಸಣ್ಣ ಕಥೆ.

VISTARANEWS.COM


on

short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ajith harishi

| ಡಾ. ಅಜಿತ್ ಹರೀಶಿ

‘ರಾತ್ರಿಯಿಡೀ ಒಂದು ಹನಿ ಕಣ್ಣು ಮುಚ್ಚಲಿಲ್ಲ. ಅರಮನೆ, ಐಶ್ವರ್ಯ ಕೊಡಿ ಅಂತೇನೂ ನಾನು ನಿಮಗೆ ಕೇಳಲಿಲ್ಲ. ಒಂದು ನೆಮ್ಮದಿಯ ನಿದ್ದೆಯನ್ನು ಕೇಳಿ ಪಡೆದು ಬಂದಿಲ್ಲ ನಾನು ಈ ಮನೆಗೆ. ಬೆಳಿಗ್ಗೆ ಏನೂ ಮಾಡಿ ಹಾಕುವ ವಶ ಸಾ ಇರಲಿಲ್ಲ ನಂಗೆ. ಆದರೆ ದುಡಿಯೋ ಗಂಡಸಿಗೆ ಕೈಲಾಗಿದ್ದು ಬೇಯಿಸಿ ಹಾಕಬೇಕು ಅನ್ನುವಷ್ಟು ಸಂಸ್ಕಾರ ನಮ್ಮಮ್ಮ ನನಗೆ ಕೊಟ್ಟಿದ್ದಾರೆ.’ ಹೆಂಡತಿ ಮಾಡಿದ ಬಿಸಿ ಒಗ್ಗರಣೆ ಅವಲಕ್ಕಿಯ ತುತ್ತು ಗಂಟಲಿನಲ್ಲಿ ಇಳಿಯದೇ ಒದ್ದಾಡುತ್ತಿದ್ದ ಕೈಲಾಜಿ, ಅವಳಿಗೆ ಗೊತ್ತಾಗದಂತೆ ಪ್ಲೇಟಿನಲ್ಲಿದ್ದ ಅವಲಕ್ಕಿಯನ್ನು ಚೆಲ್ಲಲು ಹೋಗಿ ಮತ್ತಷ್ಟು ಅವಾಂತರ ಮಾಡಿಕೊಂಡಿದ್ದ. ನಿಜಕ್ಕೂ ಆತನಿಗೆ ಅವಲಕ್ಕಿ ಎಂದರೆ ಅಲರ್ಜಿಯಾಗಿತ್ತು. ಅದನ್ನು ಬೆಳಿಗ್ಗೆ ತಿಂದರೆ ಹೊಟ್ಟೆ ನಿಬ್ಬರ, ಗ್ಯಾಸು ಆಗುತ್ತಿತ್ತು. ಆದರೆ ಹಿಂದಿನ ದಿನ ಮಾಡಿದ ತಪ್ಪಿಗಾಗಿ ಆತ ಸುಮ್ಮನೆ ತಿಂದು ಎದ್ದು ಹೋಗಿದ್ದರೆ ಒಳಿತಾಗುತ್ತಿತ್ತು. ಒಳಿತು- ಪದವನ್ನು ಭಗವಂತ ತನ್ನ ಬದುಕಿನ ನಿಘಂಟಿನಿಂದ ಎಗುರಿಸಿ ಯಾವುದೋ ಕಾಲವಾಯಿತು ಎಂಬ ಯೋಚನೆ ಒಮ್ಮೆ ಕೈಲಾಜಿಯ ಮನಸ್ಸಿನಲ್ಲಿ ಸುಳಿದು ಹೋಯಿತು.

ʻಏನೋ… ಸಂಸಾರ ಎಂದಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಆಹಾರದ ಮೇಲೆ, ಅದರಲ್ಲಿಯೂ ಸುಧಾಮನ, ಕೃಷ್ಣನ ಪ್ರೀತಿಯ ಅವಲಕ್ಕಿ ಮೇಲ್ಯಾಕೆ ಸಿಟ್ಟು ತೀರಿಸ್ತೀರಿ? ನಿನ್ನೆ ರಾತ್ರಿನೂ ನಾನು ಬೈತಾ ಇದ್ದೆ. ಗ್ಲಾಸಿನಲ್ಲಿದ್ದ ನಿಮ್ಮ ಪರಮಾತ್ಮನ್ನ ಚೆಲ್ಲಿ ಬರಬಹುದಿತ್ತಲ್ವಾ? ಸಿಟ್ಟು ಬಂದರೆ ಮೂಡಾಫ್ ಆದರೆ ಅದು ಒಳಕ್ಕೆ, ಇದು ಹೊರಕ್ಕೆ ಯಾಕೋ? ಒಟ್ನಲ್ಲಿ ನಮ್ ಪ್ರಾಣ ತಿಂತೀರ. ನಂಗಂತೂ ಸಾಕಾಯ್ತು ಬದುಕು. ಮಕ್ಕಳ ಮುಖ ನೋಡ್ಕೊಂಡು ಬದುಕಿದೀನಿ.’ ಮರುದಿನ ಅವಳ ಮಾತು ಕೇಳುವಾಗಲೆಲ್ಲ ಕೈಲಾಶ್ ಕೈಲಾಜಿಗೆ ಇನ್ನೆಂದೂ ಕುಡಿಯಬಾರದು ಅನ್ಸುತ್ತಿತ್ತು. ಆದರೆ ಸದ್ಯದ ತನ್ನ ಪರಿಸ್ಥಿತಿ ಹಾಗಿದೆ ಎಂಬ ಸಮರ್ಥನೆಯೂ ಸೆಲ್ಫ್ ಡಿಫೆನ್ಸ್‌ಗೆ ಬರುತ್ತಿತ್ತು. ಮಾತಿಗೆ ಮಾತು ಎಂದೂ ಮುಗಿಯದ್ದು ಎಂದುಕೊಳ್ಳುತ್ತಾ ಎದ್ದು ಹೋದ. ‘ಟಿಫನ್ ಕ್ಯಾರಿಯರ್ ಟೇಬಲ್ ಮೇಲಿದೆ. ಬರ್ತಾ ಕೊತ್ತಂಬರಿ ಸೊಪ್ಪು ತರಲು ಮರೆಯಬೇಡಿ. ಈ ಜಗತ್ತಿನಲ್ಲಿ ನೀವೊಬ್ಬರೇ ಬ್ಯಾಂಕ್ ಕೆಲಸ ಮಾಡೋದು ಅಂತ ಕಾಣುತ್ತೆ’ ಧ್ವನಿ ದೂರವಾಗಲು ಆತ ಬೈಕಿನ ಕಿಕ್ ಹೊಡೆದು, ಎಕ್ಸಲರೇಟರ್ ಮತ್ತಷ್ಟು ತಿರುಪಿ ಕ್ಲಚ್ ಬಿಟ್ಟ.

ಕೈಲಾಶ್ ಕೈಲಾಜಿ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಹುದ್ದೆಗೆ ಸೇರಿ ಹತ್ತಾರು ಕಡೆ ನೌಕರಿ ಮಾಡಿ, ಮುಂಬಡ್ತಿ ಪಡೆದು ಮ್ಯಾನೇಜರ್ ಆಗಿದ್ದ. ಮೊದಮೊದಲು ಸಣ್ಣ ಹಳ್ಳಿಗಳಲ್ಲಿ ಕೆಲಸ ಮಾಡಿದ್ದ ಆತನಿಗೆ ಒಳ್ಳೆಯ ಹೆಸರಿತ್ತು. ಹೋದಲ್ಲೆಲ್ಲಾ ಹೊಸಬರನ್ನು ಬೇಗ ಪರಿಚಯ ಮಾಡಿಕೊಳ್ಳುತ್ತಿದ್ದ. ಬ್ಯಾಂಕಿನಲ್ಲಿ ಜನರನ್ನು ಕಾಯಿಸುತ್ತಿರಲಿಲ್ಲ. ಹಳ್ಳಿಗಳಲ್ಲಿ ಬ್ಯಾಂಕುಗಳು ಆಗಷ್ಟೇ ಸ್ಥಾಪಿತವಾಗುತ್ತಿದ್ದವು. ಶಿಕ್ಷಕರು, ವೈದ್ಯರ ಜೊತೆಗೆ ಊರವರು ಇವರಿಗೂ ವಿಶೇಷ ಗೌರವ ಕೊಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕರೆಯ ಬರುತ್ತಿತ್ತು. ಮಧ್ಯಾಹ್ನ ಆಗದಿದ್ದರೆ ಸಂಜೆ ಆದರೂ ಬನ್ನಿ ಎಂದಾಗ ಅದರ ಗಮ್ಮತ್ತು ಕೈಲಾಜಿಗೆ ತಿಳಿಯಿತು. ಆಮೇಲೆ ಆತ ಮಧ್ಯಾಹ್ನ ಊಟಕ್ಕೆ ಹೋಗುವುದು ಕಡಿಮೆಯಾಯಿತು. ಮೂತ್ರಪಿಂಡದಲ್ಲಿ ಕಲ್ಲಿನ ಫಾರ್ಮೇಶನ್ ಆಗುವ ಬಗೆಯಂತೆ, ಊಟಕ್ಕೆ ಹಿಂದೆ ಮುಂದೆ ತೀರ್ಥ ಮತ್ತು ಇಸ್ಪೀಟಾಟಗಳು ಸೇರಿಕೊಂಡವು. ರಾತ್ರಿ ಅವಕ್ಕೆ ಕೈಲಾಜಿ ಬರುತ್ತಾನೆಂಬ ಸೂಟು ಸಿಕ್ಕ ಕೂಡಲೇ ಸಾಲ ಮಂಜೂರಾತಿ ಪಡೆಯುವವರ ಮನೆಯಲ್ಲಿ ದೇವಕಾರ್ಯಗಳು ಯೋಜಿತಗೊಳ್ಳತೊಡಗಿದವು. ಅದು ಶಾಕಾಹಾರಿ ಕೈಲಾಜಿಯನ್ನು ಆರಿದ್ರಾ ಮಳೆಯ ಹಬ್ಬದ ಬೋನಿನವರೆಗೂ ತಂದುಬಿಟ್ಟಿತ್ತು. ಕ್ರಮೇಣ ಆತ ವರ್ಷಾಂತ್ಯದಲ್ಲಿ ಲೋನ್ ರಿನೀವಲ್ ಮಾಡಿಕೊಟ್ಟು ಬಡ್ಡಿ ಪೀಕುವ ಮಾಫಿಯಾ ಹೆಗಲ ಮೇಲೆ ಕೈಯಿಟ್ಟ. ಪ್ರತಿ ವ್ಯವಸ್ಥೆಯೂ ಸಣ್ಣದೋ, ದೊಡ್ಡದೋ ರೂಪದಲ್ಲಿ ಸರ್ವಾಂತರ್ಯಾಮಿ ಎಂಬ ಸತ್ಯ ಕೈಲಾಜಿಗೆ ಅರಿವಾಗತೊಡಗಿತ್ತು. ಮದುವೆಯಾದ ಮೇಲೆ, ಹತ್ತಿರದ ಪೇಟೆಯಲ್ಲಿ ಸಂಸಾರ ಹೂಡಿದ್ದು, ಹೆಂಡತಿಗೆ ಪ್ರೆಸ್ಟೀಜೂ, ಕೈಲಾಜಿಯ ಕಾರುಬಾರಿಗೆ ನಿರ್ವಿಘ್ನವೂ ಆಗಿತ್ತು. ವಾರಕ್ಕೊಮ್ಮೆ ಪೇಟೆಗೆ ಹೋದರಾಗಿತ್ತು. ಮಕ್ಕಳು, ವಿದ್ಯಾಭ್ಯಾಸ ಅಂತ ಅವನ ಖರ್ಚು ಏರತೊಡಗಿತ್ತು. ಅವನ ವ್ಯಾಪ್ತಿಯೂ ವಿಸ್ತರಿಸುತ್ತಾ, ಕೆಲಸ ಮಾಡಿದ ಬ್ರಾಂಚುಗಳ ವಿಶೇಷ ಕಸ್ಟಮರುಗಳೆಲ್ಲಾ ಆಗಾಗ ಕರೆಯ ಕಳಿಸುತ್ತಿದ್ದರು. ಸಂಬಳವನ್ನು ಬಿಟ್ಟು ಬೇರೆ ಆಮದನಿ ಹುಡುಕಿಕೊಳ್ಳುವುದು ಕೈಲಾಜಿಗೆ ಅನಿವಾರ್ಯವಾಗತೊಡಗಿತು. ಆತ ಪಳಗತೊಡಗಿದ. ಬಾಹುಗಳು ವಿಸ್ತಾರವಾದವು. ಸ್ವಲ್ಪ ಮುಂಚೆಯೇ ಮ್ಯಾನೇಜರ್ ಆಗಿ ಭಡ್ತಿ ಪಡೆದುಕೊಂಡ. ಸ್ವತಃ ಒಂದು ಹಂತದ ಲೋನ್ ಸ್ಯಾಂಕ್ಷನ್ ಮಾಡುವ ಪವರ್ ಬಂತು. ಹೆಡ್ಡಾಫೀಸಿನ ಲೋನ್ ಸ್ಯಾಂಕ್ಷನ್ ವಿಭಾಗದ ಜೊತೆ ಬೈಠಕ್ ಕನೆಕ್ಷನ್ ಆದಮೇಲೆ ಎಲ್ಲವೂ ಸರಾಗವಾಗಿತ್ತು. ಬಹುಶಃ ಆ ದಿನಗಳು ಕೈಲಾಜಿಯ ಬದುಕಿನ ಸುವರ್ಣ ಯುಗವಾಗಿತ್ತು.

ಕೈಲಾಜಿಯು ಕೈಗೆ ಮದರಂಗಿ ಹಚ್ಚಿಕೊಂಡಿದ್ದು ಎಂದು ಭಾವಿಸಿದ್ದು ಇಡೀ ದೇಹಕ್ಕೆ, ಬದುಕಿಗೆ ಮೆತ್ತಿಕೊಂಡ ಬಣ್ಣವಾಗಿತ್ತು. ಮೊದಮೊದಲು ಎದ್ದು ಕಾಣುತ್ತಿದ್ದ ಗಾಢವಾದ ವರ್ಣಗಳು ಕಪ್ಪುಗೂಡತೊಡಗಿದ್ದವು. ರಂಜನೆಗೆ ಎಂದು ಶುರುವಾದ ಹವ್ಯಾಸಗಳು ಪ್ರಜ್ಞಾಪರಾಧದ ಬೇಗುದಿಗೆ ಸಿಕ್ಕು, ಅದೇ ಮರೆಯುವ ಮತ್ತಾಗಿದ್ದು ಆತನ ಗಮನಕ್ಕೆ ಬಂದಿರಲಿಲ್ಲ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದವನೊಬ್ಬ ಇದೇ ವೇಳೆಗೆ ಮಂದ ಬೆಳಕಿನಲ್ಲಿ ಭೇಟಿಯಾದ ಹೊಸ ಸ್ನೇಹಿತನಾಗಿದ್ದ. ಕೈಲಾಜಿಯ ಬ್ಯಾಂಕಿನ ಬ್ರಾಂಚಿದ್ದ ಊರಿನ ಹತ್ತಿರವೇ ಉದ್ಯಮಿಯ ಜಮೀನಿತ್ತು. ಆದರೆ ಆತನಿಗೆ ಬೇಕಾಗಿದ್ದು ಅದರ ಹತ್ತುಪಟ್ಟು ಮೊತ್ತ. ಅದನ್ನು ಮಂಜೂರಾತಿ ಪಡೆಯುವವರೆಗಿನ ಖರ್ಚುವೆಚ್ಚಗಳನ್ನು ಮತ್ತು ಕೈಲಾಜಿಗೆ ದೊಡ್ಡ ಮೊತ್ತದ ಕಮಿಷನ್ ನೀಡುವ ಆಮಿಷವನ್ನು ಅವನು ನೀಡಿದ್ದ. ಬೆಂಗಳೂರಿನ ಫೈನಾನ್ಸ್ ಫಂಟರುಗಳನ್ನು ಹ್ಯಾಂಡಲ್ ಮಾಡಿದ್ದ ಹುಲಿ ಅವನು. ಆದರೆ ಮಂಜೂರಾತಿ ವಿಭಾಗದಲ್ಲಿ ಯಾಕೋ ಫೈಲ್ ಮೂವ್ ಆಗಿರಲಿಲ್ಲ. ಉದ್ಯಮಿಯ ಸಿಬಿಲ್ ಸ್ಕೋರ್ ಗೋತಾ ಹೊಡೆದಿತ್ತು. ಅದರ ವಿವರ ತೆಗೆಯಲಾಗಿ ಕ್ರೆಡಿಟ್ ಕಾರ್ಡ್ ರೀಪೇಮೆಂಟ್ ಬಾಕಿ ಉಳಿದಿತ್ತು. ಕೈಲಾಜಿ ಅವನಿಗೆ ವಿಷಯ ತಿಳಿಸಿದಾಗ ‘ನೀವು ಅದೊಂದು ತುಂಬಿ, ರೆಡಿ ಮಾಡಿ ಪ್ಲೀಸ್. ನಂದೊಂದು ಪ್ರಾಪರ್ಟಿ ಡೀಲ್ ಆದರೆ ನಿಮಗೊಂದು ಸೈಟ್ ಫ್ರೀ ಕೊಡೋಣ. ನಿಮ್ಮ ಕೈಗುಣ ಚೆನ್ನಾಗಿದೆ ಅಂತ ಜನ ಹೇಳ್ತಾರೆ, ಹಾಗಾಗಲಿ. ಸದ್ಯ ನಿಮ್ಮ ಬಾಯಿಗೆ ಬೆಲ್ಲ ಹಾಕಿಸುವ ಬನ್ನಿ.’

ಆನೆಗಾತ್ರದ ಕಾರನ್ನು ನಿಲ್ಲಿಸುತ್ತಾ ಉದ್ಯಮಿ ಕೇಳಿದ ‘ನೀವು ಕಲ್ಯಾಣಿ ನೋಡಿದ್ದೀರಾ?’
‘ಈ ಊರಿನಲ್ಲಿ ಕಲ್ಯಾಣಿಯಾ ಇಲ್ವಲ್ಲ?’
‘ಆ ಕಲ್ಯಾಣಿಯಲ್ಲ. ಅವಳು… ಅವಳು… ಬಕ್ಕೆ ಕಲ್ಯಾಣಿ, ಗೊತ್ತಿಲ್ವಾ?’

‘ಓಹ್! ಕೇಳಿದ್ದೇನೆ ಅಷ್ಟೇ. ಅವತ್ತೊಬ್ಬ ರೈತ ಕಾಡಿನಿಂದ ಹಲಸಿನ ಹಣ್ಣು ತಂದುಕೊಟ್ಟಿದ್ದ. ಮನೆಗೆ ಒಯ್ದಿದ್ದೆ. ಒಳ್ಳೆಯ ಚಂದ್ರಬಕ್ಕೆ. ಅದರ ತೊಳೆಗಳ ಕಲರ್ ಬಣ್ಣಿಸೋದು ಕಷ್ಟ. ಕವಿಯಾಗಿರಬೇಕಿತ್ತು ಅಂತ ಅನ್ನಿಸಿಬಿಡ್ತು. ಬಿಳಿಯಾ? ಬಿಳಿಯಲ್ಲ! ಮುಟ್ಟಿದರೆ ಕೆಂಪಾಗಿ ಬಿಡಬಹುದು ಅನ್ನಿಸಿತು. ಕಿತ್ತಳೆ ಅನ್ನೊದು ಕಷ್ಟ. ಜೇನು ತುಪ್ಪದಲ್ಲಿ ಅದ್ದಿ ಬಾಯಿಗಿಟ್ಟರೆ ಎಂತಹ ರುಚಿ ಅಂತೀರಾ! ಆಮೇಲೆ ಒಂದು ದಿನ ಮತ್ತೆ ತಿನ್ನಬೇಕೆಂಬ ಆಸೆಯಾಗಿ, ಸ್ನೇಹಿತರೊಬ್ಬರಿಗೆ ಕೇಳ್ದೆ. ಅವರು ನಗಲಿಕ್ಕೇ ಶುರುಮಾಡಿದರು. ಬೇಣದಲ್ಲಿ ಒಂಟಿಯಾಗಿರುವ ಆ ಮರವನ್ನು ಹತ್ತಿ, ಯಾರು ಬೇಕಾದರೂ ತಿನ್ನಬಹುದು. ಹಾಗೇ ಈ ಊರಿನಲ್ಲಿ ಇರುವ ಕಲ್ಯಾಣಿ ಎಂಬ ಹೆಂಗಸನ್ನೂ… ಎಂದರು. ಅಷ್ಟು ಮಾತ್ರ ಗೊತ್ತು’

‘ಅವೆಲ್ಲ ಪೂರ್ತಿ ನಿಜವಲ್ಲ ಕೈಲಾಜಿ ಸಾಹೇಬ್ರೇ. ಕಲ್ಯಾಣಿ ಹಾಗೆಲ್ಲ ಅಡ್ನಾಡಿಗಳಿಗೆ ಆಹಾರವಾದವಳಲ್ಲ. ಅವರು ಹೊಟ್ಟೆಕಿಚ್ಚಿನಿಂದ ಹೇಳೋದು ಅದು. ಅವಳು ಸೆಲೆಕ್ಟಿವ್ ಮತ್ತು ಕಾಸ್ಟ್ಲೀ. ಇನ್ನು ಅವಳನ್ನು ವರ್ಣಿಸೋದು, ನೀವು ಹೇಳಿದ ಹಣ್ಣಿನ ವರ್ಣನೆಯ ಹಾಗೆ. ಬನ್ನಿ ಬನ್ನಿ…’ ಆತ ಡೋರ್ ತೆಗೆದು ಇಳಿದ.

ಕಲ್ಯಾಣಿಯ ಮನೆಯ ಬಾಗಿಲು ತೆರೆದುಕೊಂಡೇ ಇತ್ತು. ಡೋರ್ ಲಾಕ್ ಸದ್ದು ಕೇಳಿ ಅವಳು ಹೊರಗೆ ಬಂದಿದ್ದಳು. ಅವನನ್ನು ನೋಡಿ ನಕ್ಕು ಕೈಲಾಜಿಗೆ ನಮಸ್ಕಾರ ಮಾಡಿದಳು. ʻʻಇವರು ಕೈಲಾಜಿ ಸಾಹೇಬ್ರು. ಬ್ಯಾಂಕ್ ಮ್ಯಾನೇಜರ್. ಬ್ಯಾಂಕ್ ಕೆಲಸ ಟೆನ್ಶನ್ ನೋಡು, ರಿಲಾಕ್ಸ್ ಆಗೋಕೆ ಸಮಯವೇ ಇರುವುದಿಲ್ಲ. ಕಲ್ಯಾಣಿ ಬಕ್ಕೆ ರಾಶಿ ಇಷ್ಟ ಆಯ್ತಂತೆ. ಕೊಡು ಅವ್ರಿಗೆ’ʼ

ʻʻನಾನು ಬ್ಯಾಂಕಿಗೆ ಹೋಗೋದು ಕಮ್ಮಿ, ಆದರೂ ಇವರನ್ನು ನೋಡಿದ್ದೆ. ಸಾಹೇಬರು ಈ ಬಡವಿಯನ್ನು ನೋಡಿಲ್ಲ. ಕ್ಯಾಶ್ ಕೌಂಟರ್‌ನಲ್ಲಿ ಕೆಲಸ ಅಷ್ಟೇ ಅಲ್ಲವ್ರಾ ನಮಿಗೆ! ಬನ್ನಿ ದೊರೆ ಒಳಗೆ.’ ಕೈಲಾಜಿ ಕಲ್ಯಾಣಿಯನ್ನು ಹಿಂಬಾಲಿಸಿದ.

ಉದ್ಯಮಿ ಫೋನ್ ಬಂದ ನೆವದಲ್ಲಿ ಹೊರಗೆ ಹೋದ. ಹಲಸಿನ ಹಣ್ಣು ಹೊರಗಿನಿಂದ ಆಕರ್ಷಕವಾಗಿಯೇನೂ ಕಾಣಲಿಲ್ಲ ಕೈಲಾಜಿಗೆ. ಬಲಿತಿದ್ದು, ಸೀಳಿದ ಯಾಂತ್ರಿಕವಾಗಿ. ತಿನ್ನಬೇಕು ಅನ್ನಿಸಲಿಲ್ಲ. ಒಂದು ತೊಳೆಯನ್ನು ತಿಂದರೂ ಮೇಣ ಕೈಗೆ ಅಂಟಿತ್ತು. ರುಚಿಯನ್ನು ರಸನೇಂದ್ರಿಯ ಗ್ರಹಿಸಲಿಲ್ಲವೋ, ಮೆದುಳಿಗೆ ರವಾನಿಸಲಿಲ್ಲವೋ ತಿಳಿಯದಾಯಿತು. ಎಣ್ಣೆ ಹಚ್ಚಿಕೊಳ್ಳಬೇಕಿತ್ತು, ತಿನ್ನದೆಯೂ ಇರಬಹುದಿತ್ತು ಎಂದೆಲ್ಲಾ ಅನ್ನಿಸಿತ್ತು. ಕ್ರಿಯೆ ಯಾಂತ್ರಿಕವಾಗಿತ್ತು. ಕಲ್ಯಾಣಿ ಗ್ರಹಿಸಿದ್ದಳು, ಜೇನುತುಪ್ಪದ ಪ್ರಯೋಗ ಮಾಡಿದ್ದಳು. ‘ಪ್ರೀತಿ ಹುಟ್ಟಿದವರು ಕಲಾ ಅಂತ ಕರೆಯಬಹುದು’ ಕಲ್ಯಾಣಿ ಹೇಳುತ್ತಿದ್ದಾಗ, ಕೈಲಾಜಿಗೆ ಫೋನ್ ಕರೆ ಬಂದು ಬಚಾವಾದೆ ಎಂದುಕೊಂಡು, ಅವಳಿಗೆ ಬೈ ಎಂದು ಸನ್ನೆ ಮಾಡುತ್ತಾ ಕಾರಿನ ಬಳಿ ಬಂದಿದ್ದ. ‘ಬೇಗ ಬಂದ್ರಿ, ಈಗಲೇ ಹೀಗೆ ಆಕೆ. ಇಪ್ಪತ್ತು ವರ್ಷಗಳ ಹಿಂದೆ ಹೇಗಿರಬೇಡ. ಜನರಿಗೆ ಅಸೂಯೆ ಅವಳ ಬಗ್ಗೆ” ಆತನ ಪ್ರವರಕ್ಕೆ ಗಮನ ಕೊಡದೇ ವಾಹನ ಚಲಾಯಿಸಲು ಸಿಗ್ನಲ್ ಮಾಡಿ, ಕೈಲಾಜಿ ಇನ್ನೊಂದು ಕರೆ ಸ್ವೀಕರಿಸಿದ. ‘ಪೇಟೆಯ ಕ್ಲಬ್ಬಿನಲ್ಲಿ ಎಲೆ ಹಿಡಿಯುವ ಬನ್ನಿ’ ಉದ್ಯಮಿ ಪಟ್ಟು ಸಡಿಲಿಸಲಿಲ್ಲ.

*

ಆ ಕೋಟಿ ವ್ಯವಹಾರದ ಕೇಸಿನಲ್ಲಿ ಕೈಲಾಜಿ ಸಿಕ್ಕಿಬಿದ್ದ, ರಿಯಲ್ ಎಸ್ಟೇಟ್ ಕುಳ ಕೈಯೆತ್ತಿ ಬಿಟ್ಟ. ಅತ್ತ ಲೋನ್ ಕಂತುಗಳು ಹಾಗೆ ಉಳಿದವು, ಅದು ಸಾಯಲಿ, ಕೈಲಾಜಿಯ ಸ್ವಂತ ದುಡ್ಡೂ ಕೈಬಿಟ್ಟಿತ್ತು. ಅಲ್ಲಿಂದ ಶುರುವಾದ ಸಣ್ಣ ಹೊಂಡ ಮುಚ್ಚುವ ಕೆಲಸ, ಕೈಲಾಜಿಗೆ ಬದುಕಿನ ಕಂದಾಯ ಕಟ್ಟುವಂತೆ ಮಾಡಿತ್ತು. ಆತನ ಹಣಕಾಸಿನ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಸಾಲ ಸಾಗರದಷ್ಟಾಗಿತ್ತು. ಹಾರಲು ಹತ್ತಿರ ಕಡಲೂ ಇರಲಿಲ್ಲ. ಮೇಲಧಿಕಾರಿಗಳಿಗೆ ದೂರು ಹೋಗತೊಡಗಿದವು. ಒಂದು ದಿನ ಬಂದು ಕುಳಿತ ಅವರು ಎಲ್ಲ ಲೆಕ್ಕ ತೆಗೆದು ಡಿಸ್ಮಿಸ್ ಮಾಡುವುದು ಅನಿವಾರ್ಯವಾಗುತ್ತದೆ. ಯಪರಾತಪರಾ ಆದ ಹಣವನ್ನು ಸೈಲೆಂಟ್ ಆಗಿ ಕಟ್ಟಿ ಬಿಟ್ಟುಹೋಗಿ. ರಿಸೈನ್ ಮಾಡಿದೆ, ಬ್ಯುಸಿನೆಸ್ ಮಾಡುವೆ ಅಂತ ಹೇಳಿಕೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದರು. ಒಂದಿಷ್ಟು ಆತ್ಮೀಯರು ತಾತ್ಪೂರ್ತಿಕ ಸಮಸ್ಯೆ ಬಗೆಹರಿಸಿದರು. ಕೈಲಾಜಿ ಬ್ಯಾಂಕಿನಿಂದ ಬಿಡುಗಡೆಯಾದ. ಆದರೆ ಮನೆಯಲ್ಲಿ ಹೇಳಲಿಲ್ಲ, ಧಗೆಯನ್ನು ಮುಚ್ಚಿಟ್ಟ. ಸಂಭಾವ್ಯ ದಾರಿಗಳನ್ನು ಹುಡುಕತೊಡಗಿದ. ಸಾಯುವುದೇ ಮೇಲು ಎಂದು ಅನ್ನಿಸತೊಡಗಿದಾಗ, ಅವನಿಗೆ ಗೆಳೆಯರ ಬಳಗದ ಅದ್ಯಾರೋ ಸೂಚಿಸಿದ್ದು ಕುಂಟ ಪಂಡಿತರ ಹೆಸರನ್ನ!

*

ಕುಂಟ ಪಂಡಿತರು ಪೇಟೆಯ ಹೊರವಲಯದ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದರು. ಅವರು ಪಾರಂಪರಿಕ ಔಷಧಿಗಳನ್ನು ತಯಾರಿಸಿ ಕೊಡುತ್ತಿದ್ದರು. ಇದು ತಲೆತಲಾಂತರದಿಂದ ಬಂದ ವೃತ್ತಿ. ಜೊತೆಗೆ ಜಾತಕ, ಹಸ್ತ ಸಾಮುದ್ರಿಕಾಶಾಸ್ತ್ರದ ಜ್ಞಾನವಿತ್ತು. ಅವತ್ತು ಹೆಂಡತಿಯ ಏರು ಧ್ವನಿಯಿಂದ ದೂರವಾಗುತ್ತ ಹೊರಟ ಕೈಲಾಜಿ ಬಂದು ತಲುಪಿದ್ದು ಇವರ ಧನ್ವಂತರಿ ದವಾಖಾನೆಗೆ. ಅಷ್ಟು ಮುಂಚೆ ಸಾಮಾನ್ಯವಾಗಿ ಪಂಡಿತರ ದವಾಖಾನೆಯ ಮುಂದೆ ಜನರು ಇರುತ್ತಿರಲಿಲ್ಲ. ಹಾಗಾಗಿ ಅವರಿಗೆ ಕೈಲಾಜಿಯೊಂದಿಗೆ ಪ್ರತಿಸ್ಪಂದನಕ್ಕೆ ಹೆಚ್ಚು ಸಮಯ ದೊರಕಿತು. ಅವರು ಒಂದು ಮಣೆಯ ಮೇಲೆ ಕುಳಿತಿದ್ದರು. ಮುಖ್ಯವಾದ ಔಷಧಿಗಳನ್ನು ಅವರು ಕೈಗೆಟುಕುವ ದೂರದಲ್ಲಿ ಇಟ್ಟುಕೊಂಡಿದ್ದರು. ಬಿಳಿಯಾದ ಉದ್ದನೆಯ ಕೂದಲನ್ನು ಗಂಟುಕಟ್ಟಿ ಸ್ವಲ್ಪ ಇಳಿಬಿಟ್ಟಿದ್ದರು. ಮೀಸೆಯು ತುಟಿಗಳನ್ನು ಆವರಿಸಿತ್ತು ಮತ್ತು ಗಡ್ಡವನ್ನು ಹಣಿಗೆಯಲ್ಲಿ ಬಾಚಿ ಕೆಳಗೆ ಬಿಟ್ಟಂತೆ ನೀಟಾಗಿತ್ತು. ಆ ಗಡ್ಡದ ಕೆಲವು ಕೂದಲುಗಳ ತುದಿ ಚಕ್ರಾಸನ ಹಾಕಿ ಕುಳಿತ ಸ್ಥಿತಿಯಲ್ಲಿ ತೊಡೆಗೆ ತಾಗುತ್ತಿತ್ತು.

ಮೊದಲ ನೋಟಕ್ಕೆ ಗೌರವ ಭಾವನೆ ಕೈಲಾಜಿಗೆ ಉಂಟಾಯಿತು. ಸೋತು ಸೊರಗಿದಾಗ ಹೀಗಾಗಬಹುದು ಎಂದುಕೊಂಡ. ಇಂತಹವರ ಬಳಿ ಹೆಚ್ಚು ಬಾಯಿಬಿಡಬಾರದು ಎಂದುಕೊಂಡ. ಅವರು ‘ಏನಾಯ್ತು ತಮ್ಮಾ’ ಎಂದು ಕೇಳಿದಾಗಲೂ, ‘ಸ್ವಲ್ಪ ನಿದ್ದೆ ಬರ್ತಿಲ್ಲ. ವಿಚಿತ್ರ ಯೋಚನೆಗಳು ಕಾಡುತ್ತವೆ. ಹೀಗಾದಾಗ ಬೆಳಿಗ್ಗೆ ಕೆಲಸಕ್ಕೆ ಹೋಗಲು ತೊಂದರೆ ಆಗುತ್ತದೆ’ ಅಂದ. ಅವರು ಇವನನ್ನೇ ದಿಟ್ಟಿಸಿ ನೋಡುತ್ತಾ ಇದ್ದರು. ಮುಂದೆ ಆತನಿಗೆ ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ಆಗಲಿಲ್ಲ. ಎಲ್ಲವನ್ನೂ ಕಾರಿದ, ಬಿಕ್ಕಿ ಬಿಕ್ಕಿ ಅತ್ತ, ಕುಸಿದು ಕುಳಿತ. ಪಂಡಿತರು ಅವರ ತಲೆಯನ್ನು ನೇವರಿಸಿದರು. ಹಣೆಯನ್ನು ಹೆಬ್ಬೆಟ್ಟಿನ ತುದಿಯಿಂದ ಒತ್ತಿ ಏನನ್ನೋ ಗುನುಗುನಿಸಿದರು. ‘ಸಮಾಧಾನ’ ಎನ್ನುತ್ತಾ ಎದ್ದು ಒಳಗಡೆ ಹೋಗಿ ಬಂದರು. ಜನ ಹೇಳುವಷ್ಟು ತೀರಾ ಕುಂಟರಲ್ಲ ಅವರು ಎಂಬುದನ್ನು ಕೈಲಾಜಿ ಗಮನಿಸಿದ್ದ. ‘ಕುಂಟ ಅಂದರೆ ಕುಂಟ ಅಂತಲ್ಲ ಅರ್ಥ! ನಡಿಗೆ ಸರಿಯಿಲ್ಲ ಎಂಬರ್ಥವೂ ಇರಬಹುದು. ಸಾಮಾನ್ಯವಾಗಿ ಸಮಾಜಕ್ಕೆ ನ್ಯೂನತೆಯನ್ನು ಹುಡುಕುವ ಚಪಲ. ಅದಕ್ಕೆ ಅನುಕಂಪ ವ್ಯಕ್ತಪಡಿಸುವ ಹಂಬಲ, ಕೊನೆಗೆ ಹಂಗಿಸುವ ಮನೋಭಾವ’ ಇವನ ನೋಟವನ್ನು ಗಮನಿಸಿ ಪಂಡಿತರು ಹೇಳಿದ್ದರು.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಕೈಯಲ್ಲಿ ಕಾಕೆಹಣ್ಣಿನ ಬಣ್ಣದ, ಗುಲಗಂಜಿ ಗಾತ್ರದ ಗುಳಿಗೆಗಳನ್ನು ಹಿಡಿದುಕೊಂಡು ಬಂದು, ಒಂದು ಕಾಗದದಲ್ಲಿ ಹಾಕಿ, ಮಡಚಿ ಪಟ್ಟಲ ಮಾಡಿ ಕೊಡುತ್ತಾ ಪಂಡಿತರು ‘ಇದರಲ್ಲಿನ ಎರಡು ಮಾತ್ರೆಗಳನ್ನು ವಿಶ್ರಾಂತಿ ಮಾಡಬಹುದಾದ ಸ್ಥಳದಲ್ಲಿ ಸೇವಿಸು. ಸದ್ಯಕ್ಕೆ ನಿನ್ನ ಮಾನಸಿಕ ಪರಿಸ್ಥಿತಿಗೆ ಮೂರು ಹೊತ್ತು ತೆಗೆದುಕೊಳ್ಳಬೇಕು. ನಂತರ ಎರಡು ಬಾರಿ, ಆಮೇಲೆ ದಿನಕ್ಕೆ ಒಂದು ಬಾರಿ ಮಾಡುತ್ತಾ, ಎರಡರಿಂದ ಒಂದು ಮಾತ್ರೆಗೆ ತರೋಣ. ಇದಕ್ಕೆ ಆರೆಂಟು ತಿಂಗಳು ಬೇಕಾಗಬಹುದು’ ಎಂದರು. ‘ಗುರುಗಳೇ…’ ಅಯಾಚಿತವಾಗಿ ಕೈಲಾಜಿಯ ಬಾಯಿಯಿಂದ ಈ ಶಬ್ದ ಅವನ ಊಹೆಗೂ ಮೀರಿ ಬಂದಿತ್ತು. ‘ನಾನು ಮನೆಗಾಗಲಿ, ಬ್ಯಾಂಕಿಗಾಗಲಿ ಹೋಗುವಂತಿಲ್ಲ. ಬೇರೆ ಸ್ಥಳವಿಲ್ಲ!’

‘ಸರಿ ಹಾಗಾದರೆ, ಅಡುಗೆ ಮನೆಯಲ್ಲಿ ಕೊಡದಲ್ಲಿ ನೀರಿದೆ ನೋಡು, ಮಾತ್ರೆ ಸೇವಿಸಿ, ಹಿಂಬದಿ ಪಕ್ಕದಲ್ಲಿರುವ ಕೋಣೆಗೆ ಹೋಗಿ ವಿಶ್ರಾಂತಿ ಪಡೆ. ಆಮೇಲೆ ನೋಡೋಣ’ ಪಂಡಿತರು ಪರಿಹಾರ ತೋರಿದರು. ನಿಧಾನವಾಗಿ ಬೇರೆ ಬೇರೆ ಸಮಸ್ಯೆ ಇದ್ದವರು, ಅಲ್ಲಿಗೆ ಬರಲು ಆರಂಭಿಸಿದ್ದರು. ಕೈಲಾಜಿ ಮಾತ್ರೆ ಸೇವಿಸಿ, ಒಳಗೆ ಕೋಣೆಯಲ್ಲಿದ್ದ ಚಾಪೆ ಹಾಸಿ ಮಲಗಿದ. ಅರೆನಿದ್ರಾವಸ್ಥೆ ಅಥವಾ ಕನಸಿನ ಸ್ಥಿತಿಯಲ್ಲಿ ಅವನ ಬದುಕು, ಸಿನಿಮಾ ದೃಶ್ಯಗಳಂತೆ ಒಂದಿಷ್ಟು ಚಲಿಸಿ, ರೀಲ್ ಕಟ್ ಆದಂತಾಗಿ ಗಾಢಾಂಧಕಾರ ಆವರಿಸಿತು. ಮತ್ತೆ ಎಷ್ಟು ಕಣ್ಣು ಮುಚ್ಚಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವು ಸಮಯದ ನಂತರ ಪಂಡಿತರು ಬಂದು ಕೇಳಿದರು. ತನಗಾದ ಅನುಭವವನ್ನು ಕೈಲಾಜಿ ಹೇಳಿದ. ‘ಮನೆಯ ಹಿಂದುಗಡೆ ಒಂದಿಷ್ಟು ಬೇರುಗಳಿವೆ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಲು ಬರುತ್ತದಾ?’ ಎಂದು ಪಂಡಿತರು ಕೇಳಿದಾಗ, ಹೂಂ ಎಂದು ತಲೆಯಾಡಿಸಿದ. ಮಧ್ಯಾಹ್ನ ಊಟವನ್ನು ಒಟ್ಟಿಗೆ ಮಾಡುತ್ತಾ ‘ಅಡಿಗೆ ಮಾಡಲು ಬರುತ್ತದೆಯೇ?’ ಎಂದು ಕೇಳಿದರು. ‘ಮದುವೆಗಿಂತ ಮುಂಚೆ ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದೆ. ನಾಳೆಯಿಂದ ನಾನೇ ಮಾಡ್ಲಾ?’ ಕೊನೆಯ ಸಾಲು ಹೆಚ್ಚಾಯಿತು ಅಂತ ತುಟಿ ಕಚ್ಚಿಕೊಂಡ ಕೈಲಾಜಿ. ‘ಹಾಗೇ ಮಾಡು’ ಕೊನೆಯಲ್ಲಿ ಉಳಿದ ಮಜ್ಜಿಗೆ ಸುರಿಯುತ್ತಾ ಪಂಡಿತರು ಹೇಳಿದ್ದರು. ಊಟವಾದ ಮೇಲೆ ಮತ್ತೆರಡು ಮಾತ್ರೆಗಳನ್ನು ನುಂಗಿದರೂ ಕೈಲಾಜಿಗೆ ಪರಿಣಾಮ ಕಾಣಲಿಲ್ಲ. ಬ್ಯಾಂಕ್ ಬಿಡುವ ಸಮಯಕ್ಕೆ ಮನೆಗೆ ಹೊರಟ ಕೈಲಾಜಿಗೆ ಪಂಡಿತರು ಕೇಳಿದ್ದರು ‘ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮನದಲ್ಲಿ ಸುಳಿಯುತ್ತಿದೆಯೇ?’. ಕೈಲಾಜಿ ತಲೆತಗ್ಗಿಸಿದ್ದ. ‘ಆಗುವುದು ಆಗಿಹೋಯಿತು, ಬದುಕಿದ್ದರೆ ಸಂಸಾರ ದಡ ಸೇರುತ್ತದೆ. ಇಲ್ಲಾಂದ್ರೆ ನೀನು ಹೋಗುವುದರ ಜೊತೆಗೆ ಆ ಹೆಣ್ಣುಮಗಳು, ಹಸುಳೆಗಳನ್ನು ಮುಳುಗಿಸಿ ಹೋಗುತ್ತಿ. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಬದುಕು. ದುಡಿದು ದುಡಿದು ಪರಿಹಾರ ಕಂಡುಕೋ. ನಿನ್ನ ಸಮಸ್ಯೆ ಹೆಚ್ಚೆಂದರೆ ಐದು ವರ್ಷಗಳಲ್ಲಿ ಬಗೆಹರಿಯುತ್ತದೆ. ನಿಧಾನವಾಗಿ ಕುಟುಂಬಕ್ಕೆ ಸತ್ಯ ಹೇಳು. ಜಗತ್ತನ್ನು ಎದುರಿಸು. ನಾಳೆ ಬಾ. ದೃಢವಾಗಿ ಸಾಯುವುದಿಲ್ಲ ಎಂದು ನಿರ್ಧರಿಸಿ ಬಾ.’

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

ಮರುದಿನದಿಂದ ಅಡುಗೆ, ದಿನನಿತ್ಯದ ಕೆಲಸ, ಔಷಧ ತಯಾರಿಕೆಯಲ್ಲಿ ಪಂಡಿತರಿಗೆ ಕೈಲಾಜಿ ಸಹಾಯ ಮಾಡತೊಡಗಿದ್ದ. ಆನಂತರ ಅವನಿಗೆ ಕ್ರಮೇಣವಾಗಿ ಔಷಧಿ ಕೆಲಸ ಮಾಡತೊಡಗಿತು. ಅವನಿಗೆ, ಕಾಲದಿಂದ ಮುಂದಕ್ಕೆ ಹೋಗಿ ತನ್ನ ಜೀವನವನ್ನು ಕಾಣುವ ಅಪರೂಪದ ಶಕ್ತಿ ಪ್ರಾಪ್ತವಾಯಿತು. ದಿನಾಲೂ ಅಷ್ಟಷ್ಟೇ ಮುಂದಿನ ದಿನಮಾನಗಳು ಕಣ್ಮುಂದೆ ಬರಲಾರಂಭಿಸಿದವು. ಆ ದೃಶ್ಯಗಳಲ್ಲಿ ಆತ ನಿಧಾನವಾಗಿ ಸಹಜ ಸ್ಥಿತಿಗೆ ಬರಲಾರಂಭಿಸಿದ್ದ. ಸಂಸಾರದಲ್ಲಿ ಸಾಮರಸ್ಯ ಸಾಧ್ಯವಾಗಿತ್ತು. ಬ್ಯಾಂಕ್ ಬಿಟ್ಟು ಪಂಡಿತರ ಜೊತೆ ಔಷಧ ತಯಾರಿಕೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೆಂಡತಿಗೆ ಹೇಳಿದ. ಆಕೆ ಒಂದೆರಡು ದಿನ ಅಸಮಾಧಾನ ವ್ಯಕ್ತಪಡಿಸಿದಳು. ನಂತರ ಬದಲಾದ ಕೈಲಾಜಿಯ ಮನಸ್ಥಿತಿ ಆಕೆಯನ್ನು ಒಲಿಸಿತು. ಮುಂದೊಂದು ದಿನ ಆಕೆಗೆ ನಿಜವಾದ ವಿಷಯವನ್ನು ಅರುಹಿದಾಗಲೂ ಅದನ್ನು ಆಕೆ ಸಮಾಧಾನ ಚಿತ್ತದಿಂದಲೇ ಸ್ವೀಕರಿಸಿದಳು.

ನಿಧಾನವಾಗಿ ಪಂಡಿತರು ಗುಳಿಗೆಯ ಅವಧಿಯನ್ನು ಇಳಿಸಿದರು. ಪ್ರತಿ ಹಂತದಲ್ಲೂ ಕೈಲಾಜಿ ಅವರ ವಿಶ್ವಾಸ ಗಳಿಸಿದ್ದ. ‘ಗುರುಗಳೇ ಈ ಗುಳಿಗೆಯ ಹೆಸರೇನು?’

ʻಇಲ್ಲಿಯವರೆಗೆ ಬಹಳ ಕಡಿಮೆ ಜನರಿಗೆ ಈ ಔಷಧ ಕೊಟ್ಟಿದ್ದೇನೆ. ಇದರ ಹೆಸರನ್ನು ಯಾರೂ ಕೇಳಲಿಲ್ಲ. ಕೇಳಿದ್ದರೆ ಹೇಳುತ್ತಿದ್ದೆನೋ, ಇಲ್ಲವೋ. ಎಷ್ಟು ಹೇಳುತ್ತಿದ್ದೆನೋ ಗೊತ್ತಿಲ್ಲ! ಕೇಳು ಇವತ್ತು ಎಲ್ಲ ಹೇಳಿಬಿಡುತ್ತೇನೆ.’ ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೇಳಿದ್ದರು. ದವಾಖಾನೆ ಮುಚ್ಚಿ, ಒಳಬಂದು ದೇವರ ಕೋಣೆಯಲ್ಲಿ ಜಮಖಾನ ಹಾಸಿ ಕುಳಿತುಕೊಂಡು, ಕೈಲಾಜಿಗೆ ಕುಳಿತುಕೊಳ್ಳಲು ಹೇಳಿದರು.

ʻಐವತ್ತು ವರ್ಷಗಳ ಹಿಂದೆ ನಾನು ಹೀಗೆ ಸೋತು ಬಂದು ನಿನ್ನ ಹಾಗೆ ನನ್ನ ಗುರುಗಳ ಎದುರು ಕುಳಿತಿದ್ದೆ. ನಾನು ಅವತ್ತಿನ ಕಾಲದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದವ. ಬಿಸಿರಕ್ತದ ಯುವಕ, ಏನೋ ಸಾಹಸ ಮಾಡಲು ಹೋಗಿ ಇನ್ನೇನೋ ಆಗಿತ್ತು. ಅವಿಭಕ್ತ ಕುಟುಂಬ, ಮನೆಯಿಂದ ಹೊರಗೆ ಹಾಕಿದರು. ಅವೆಲ್ಲ ಒಂದು ದೊಡ್ಡ ಕಥೆ, ಅದು ಬಿಡು. ಗುರುಗಳು ಕಲಿಸಿದ್ದು ಕಲಿಯುತ್ತಾ ಹೋದೆ. ಒಂದು ದಿನ ಅವರ ಬಳಿಯಿದ್ದ ಗ್ರಂಥದಲ್ಲಿ ಒಂದು ಅಪರೂಪದ ವಟಿಯ ವಿವರಣೆ ಇತ್ತು. ಅದನ್ನು ಆ ಗ್ರಂಥದಲ್ಲಿ ವಯ ವಟಿ ಎಂದು ಕರೆದಿದ್ದರು. ನಾನು ಅದರಲ್ಲಿ ಹೇಳಿದ್ದ ಗಿಡಮೂಲಿಕೆಗಳನ್ನು ಗುರುಗಳ ಸಹಾಯದಿಂದ ತಿಳಿದು, ಈ ವಟಿಯನ್ನು ತಯಾರಿಸಿದೆ. ನನ್ನ ಮೇಲೆಯೇ ಪ್ರಯೋಗಿಸಿಕೊಂಡೆ. ಅದು ಕಾಲವನ್ನು ಮುಂದೆ ಹೋಗಿ ನೋಡುವ ವಿಶಿಷ್ಟ ಅನುಭವವನ್ನು ನೀಡಿತ್ತು. ಅದನ್ನು ತಯಾರಿಸಿ, ಪ್ರಯೋಗಿಸಿದಾಗ ನನಗೆ ಒಂದು ಭ್ರಮೆ ಆವರಿಸಿತು. ಏನೋ ಆಗುತ್ತದೆ ಅನ್ನಿಸುತ್ತಿತ್ತು, ಹುಚ್ಚು ಹಿಡಿದ ಹಾಗೆ! ಅಪರೂಪದ್ದು ಸಿದ್ಧಿಸುವಾಗ ಹೀಗಾಗುತ್ತದೆ ಎಂದು ಗುರುಗಳು ಧೈರ್ಯ ತುಂಬಿದರು. ಆದರೂ ಏನೋ ಹಸಿವು, ಅರ್ಥವಾಗದ ಕ್ಷೋಭೆ. ಏನು ಮಾಡಲಿ, ಏನು ಬಿಡಲಿ, ಎನ್ನುವಾಗ ಗುರುಗಳನ್ನು ಹುಡುಕಿಕೊಂಡು ಒಂದು ಸುಂದರ ತರುಣಿ ಬಂದಿದ್ದಳು. ಎಂತಹ ಚೆಂದವದು ಎಂದು ಬಾಯಿಮಾತಿನಲ್ಲಿ ಹೇಳಲಾಗದು. ಅಧ್ಯಯನ ಮಾಡುತ್ತಿದ್ದವನ ಮನಸ್ಸು ಚಂಚಲವಾಯಿತು. ಅವಳನ್ನು ಹೊಂದುವುದು ಪರಮ ಗುರಿಯಾಯಿತು. ಅವಳಿಗೆ ಏನೂ ತಿಳಿಯದ ವಯಸ್ಸು. ನಾನು ಕಾಮಿಸಿದೆ. ಅವಳು ಆರಾಧಿಸಿದಳು. ಗುರುಗಳು ಸಾಕು ಬಿಡು ಎಂದು ಎಚ್ಚರಿಸುವವರೆಗೂ ಮುಂದುವರೆದಿತ್ತು. ಅವಳನ್ನು ಮುಂದೆಂದೂ ಭೇಟಿಯಾಗಲಿಲ್ಲ. ಆಕೆ ಮತ್ತೆ ಇಲ್ಲಿ ಬರದಿದ್ದುದು ಅಚ್ಚರಿ ಮೂಡಿಸಿತ್ತು. ಅದನ್ನು ಮರೆಯಲೆಂಬಂತೆ ಈ ಅಪರೂಪದ ವಟಿಯ ಮೇಲೆ ಮತ್ತಷ್ಟು ಪ್ರಯೋಗ ನಡೆಸಿದೆ. ಗುರುಗಳ ಸಹಾಯದಿಂದ ರಸೌಷಧ ಸೇರಿಸಿದೆ. ಈ ಕಾರಣದಿಂದಾಗಿ, ಇನ್ನೊಂದಿಷ್ಟು ಹೆಚ್ಚಿನ ಪ್ರಯೋಜನ ಈ ವಟಿಯಿಂದ ಜನರಿಗೆ ಸಿಗುವ ಹಾಗಾಯಿತು. ಗ್ರಂಥದಿಂದ ಹೊರತಾಗಿ ಇದನ್ನು ತಯಾರಿಸಿದ್ದರಿಂದ ಬೇರೆಯದೇ ಹೆಸರಿಡುವಂತೆ ಗುರುಗಳು ಸೂಚಿಸಿದರು. ಬಹಳ ಆಲೋಚನೆ ಮಾಡಿದೆ. ಆ ತರುಣಿಯ ಮೋಹ ಕೆಲಸ ಮಾಡಿತೋ, ಪಶ್ಚಾತ್ತಾಪದಿಂದ ಆಯಿತೋ ಒಂದು ನಾಮವನ್ನು- ಕಲಾ ವಟಿ- ನಿದ್ದೆಯಲ್ಲಿ ಉಚ್ಛರಿಸಿದ್ದೆ ಎಂದು ಗುರುಗಳು ಹೇಳಿದ್ದರು’ ಒಮ್ಮೆ ಪಂಡಿತರು ಮೌನ ತಾಳಿದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

‘ಆ ತರುಣಿಯ ಹೆಸರು ಕಲಾ ಎಂದಾಗಿತ್ತೆ?’ ಕೈಲಾಜಿ ಕುತೂಹಲ ತಡೆಯಲಾಗದೆ ಕೇಳಿದ್ದ. ‘ಅವಳ ಹೆಸರನ್ನು ಹೇಳುವುದು ತಪ್ಪಾಗುತ್ತದೆ. ಅದು ಅವಳ ಹೆಸರಲ್ಲ. ನಾನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.’ ಕೈಲಾಜಿ ಒಮ್ಮೆ ನಡುಗಿಹೋದ. ಅವತ್ತು ರಾತ್ರಿ ಅವನಿಗೆ ವಿಪರೀತ ಜ್ವರ ಬಂದಿತ್ತು. ಆತ ಜ್ವರ ಏರಿ ಏನೇನೋ ಬಡಬಡಿಸಿದ್ದ ಎಂದು ಮರುದಿನ ಬೆಳಿಗ್ಗೆ ಅವನ ಹೆಂಡತಿ ಹೇಳಿದ್ದಳು.

ಮರುದಿನ ಊಟ ಮಾಡುವಾಗ ಕೈಲಾಜಿ, ಪಂಡಿತರ ಬಳಿ ಕೇಳಿದ, `ಹಾಗಾದರೆ ಈ ಮಾತ್ರೆಯನ್ನು ಕಲಾ ವಟಿ ಎಂದು ಕರೆಯಬೇಕೇ?’

ಗಡ್ಡವನ್ನು ಎಡಗೈಯಿಂದ ನೀವುತ್ತಾ ಪಂಡಿತರು ಹೇಳಿದ್ದರು ‘ಇಲ್ಲ, ಗುರುಗಳು ತಿದ್ದಿದ್ದರು. ಕಾಲ ವಟಿ ಅಂತ. ಆಂಗ್ಲ ಭಾಷೆಯಲ್ಲಿ ಅದನ್ನು ಬರೆದು ನೋಡು, ಎಲ್ಲಾ ಒಂದೇ! ಆಮೇಲೆ ನಾನು ಅದನ್ನೆಂದೂ ಉಪಯೋಗಿಸಲಿಲ್ಲ. ನಿನಗೆ ಪ್ರಯೋಜನ ತಂದಿತಲ್ಲ. ಅಷ್ಟು ಸಾಕು. ಇನ್ನೊಂದು ವಿಶೇಷವೆಂದರೆ ಇದು, ಈಗಿನ ಹೊಸ ತಲೆಮಾರಿಗೆ ಬೇರೆಯದೇ ಪರಿಣಾಮ ಬೀರುತ್ತಿದೆ ಎಂದು ತಿಳಿಯಿತು, ಕೆಲವು ಯುವಕರಿಗೆ ಕೊಟ್ಟಾಗ. ಅದು ಅವರನ್ನು ವರ್ತಮಾನದಲ್ಲಿ ಮಾತ್ರ ಇಡುತ್ತದೆ. ಭೂತ, ಭವಿಷ್ಯದ ಭಾರದಿಂದ ಮುಕ್ತರಾಗಿ, ತುಂಬಾ ಉತ್ಸಾಹದಿಂದ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ. ಇವಿಷ್ಟು ನಾನು ಹೇಳಬೇಕಿತ್ತು. ಇನ್ನು ಕೊನೆಯ ದಿನ ನೀನು ಈ ಮಾತ್ರೆ ಸೇವಿಸಬೇಕು. ಅಲ್ಲಿಗೆ ಈ ಚಿಕಿತ್ಸೆ ನಿನಗೆ ಕೊನೆಗೊಳ್ಳುತ್ತದೆ. ಸ್ವಾರ್ಥಕ್ಕೆ ಸೇವಿಸಿದರೆ ಇನ್ನೆಂದೂ, ಈ ವಿದ್ಯೆ ಒಲಿಯದು.’ ಎಂದು ಹೇಳುತ್ತಾ ದೇವರ ಮುಂದೆ ಪ್ರಮಾಣ ಮಾಡಿಸಿ, ತಯಾರಿಯ ವಿಧಾನವನ್ನು ಕೈಲಾಜಿಗೆ ಧಾರೆ ಎರೆದಿದ್ದರು. ಮೊದಲ ಬಾರಿಗೆ ಕೈಲಾಶ್ ಕೈಲಾಜಿಗೆ ಕಾಲ ವಟಿ ಸೇವಿಸದೆಯೂ, ತನ್ನ ಭವಿಷ್ಯ ಕಣ್ಮುಂದೆ ಗೋಚರಿಸತೊಡಗಿತ್ತು….. ಎಲ್ಲಿದ್ದೇನೆ ಎಂದು ಅರೆಕ್ಷಣ ಯೋಚಿಸುವಂತಾಯಿತು. ಒಮ್ಮೆಲೇ ಕೈಲಾಜಿಗೆ ಪತ್ನಿಯು ಕೊತ್ತಂಬರಿ ಸೊಪ್ಪು ತರಲು ಹೇಳಿದ್ದು ನೆನಪಾಯಿತು. ಆದರೆ ಯಾವಾಗ ಹೇಳಿದ್ದು ಎಂಬುದು ಮರೆತುಹೋಗಿತ್ತು. ಯಾವುದಕ್ಕೂ ಇರಲಿ, ಒಂದು ಕಟ್ಟು ಕೊತ್ತಂಬರಿ ಸೊಪ್ಪು ಒಯ್ದರೆ ಗಂಟೇನೂ ಹೋಗುವುದಿಲ್ಲ ಎಂದು ತಲೆ ಕೆರೆದುಕೊಳ್ಳುತ್ತಾ, ಕೈಲಾಜಿ ಮುಂದೆ ಹೆಜ್ಜೆ ಹಾಕತೊಡಗಿದ.

(ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಮತ್ತು ಕೃತಿಕರ್ಷ (ವಿಮರ್ಶಾ ಕೃತಿ) ಪ್ರಕಟಗೊಂಡಿವೆ.)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Mysore News: ಮೈಸೂರಿನಲ್ಲಿ ಗಾಯಕ ಎಚ್ ಎಸ್ ನಾಗರಾಜ್ ಗೆ ಶ್ರೀ ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ

Mysore News: ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆ ಜರುಗಿತು. ಈ ವೇಳೆ ವಿದ್ವಾನ್ ಶೃಂಗೇರಿ ನಾಗರಾಜ್ ರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

VISTARANEWS.COM


on

Mysore Vasudevacharya Memorial Music utsav Vidwat Sabha and award ceremony
Koo

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹಾಮಹಿಮರಾದ ಮೈಸೂರು ವಾಸುದೇವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಶಿವಮೊಗ್ಗದ ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ (Mysore News) ಹೇಳಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆಯಲ್ಲಿ ಅವರು ಪ್ರತಿಷ್ಠಿತ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಮೈಸೂರು ವಾಸುದೇವಾಚಾರ್ಯ ಮನೆ ಮೈಸೂರಿನಲ್ಲಿ ಸಂಗೀತಕ್ಕೆ ಮಹೋನ್ನತ ವೇದಿಕೆಯಾಗಿ ರೂಪುಗೊಂಡಿದೆ. ಅಲ್ಲಿ ಹಾಡಿದವರ ಧನ್ಯತೆಯೇ ವಿಶೇಷವಾಗಿದ್ದು ಎಂದು ಅವರು ಸ್ಮರಿಸಿದರು.

ಪ್ರಶಸ್ತಿ ಪ್ರದಾನ

ವಿದ್ವಾನ್ ಶೃಂಗೇರಿ ನಾಗರಾಜ್ ಅವರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ. ನರಸಿಂಹಮೂರ್ತಿ ಅವರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ಅವರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ರಮಾ ಬೆಣ್ಣೂರು ಮಾತನಾಡಿ, ವಯೋಲಿನ್ ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ ಅವರು ಕಲಾ ಲೋಕಕ್ಕೆ ಅಹರ್ನಿಷಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಯುವಕರು ವಯಲಿನ್ ಹಿಡಿದು ಸಾಗುತ್ತಿದ್ದರೆ ಅವರು ಎಚ್.ಕೆ. ಎನ್. ಸ್ಟೂಡೆಂಟ್ ಎಂದು ಧೈರ್ಯವಾಗಿ ಹೇಳಬಹುದು. ಜೀವಮಾನದಲ್ಲಿ ಅವರು ಬಹುತೇಕ ಸಮಯವನ್ನು ಈ ವಾದ್ಯದ ನುಡಿಸಾಣಿಕೆ ಮತ್ತು ಪಾಠಕ್ಕಾಗಿ ಮೀಸಲಿಟ್ಟಿದ್ದಾರೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಿರುವುದು ಮಹತ್ತರ ಕಾರ್ಯ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ಖ್ಯಾತ ಸಂಗೀತ ವಿದ್ವಾಂಸ ಮತ್ತು ಟ್ರಸ್ಟಿ ಡಾ. ರಾ. ನಂದಕುಮಾರ್ ಮಾತನಾಡಿ, ಕನ್ನಡ ನಾಡಿನ ಖ್ಯಾತ, ವಿಖ್ಯಾತ ಸಂಗೀತ ವಿದ್ವಾಂಸರನ್ನು ಒಳಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ) ಕಳೆದ ಮೂರು ವರ್ಷಗಳಿಂದ ಕಲಾಕ್ಷೇತ್ರದ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದೆ. ಮುಂದೆ ನೂರಾರು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಮ್ಮಿಕೊಂಡು ಯುವ ಸಂಗೀತಗಾರರ ಏಳಿಗೆಗೆ ಶ್ರಮಿಸಲು ಸಂಕಲ್ಪ ಮಾಡಿದೆ. ಸಂಗೀತ ಲೋಕದ ದಿಗ್ಗಜರನ್ನು ಗುರುತಿಸಿ, ಗೌರವಿಸುವ ಸೇವೆಯನ್ನೂ ಟ್ರಸ್ಟ್ ಮಾಡುತ್ತಿದೆ. ಒಟ್ಟಾರೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹತ್ವ ಕಾಪಾಡಲು ನಮ್ಮ ಕೆಸಿಎಂಸಿ ಟ್ರಸ್ಟ್ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಹಿರಿಯ ವೀಣಾ ವಿದ್ವಾಂಸ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಿದ್ಧಿ ಪಡೆದ ಅನೇಕರು ಪ್ರಸಿದ್ಧಿಗೆ ಬರಲೇ ಇಲ್ಲ. ಅವರ ಸಾಲಿನಲ್ಲಿ ಮೈಸೂರು ವಾಸುದೇವಾಚಾರ್ಯರೂ ಒಬ್ಬರು. ಮೈಸೂರಿನಲ್ಲಿ ಅವರಿಗೆ ರಾಜಾಶ್ರಯ ಮಾತ್ರ ಇತ್ತು. ಆದರೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಇನ್ನಷ್ಟು ಮಾನ್ಯವಾಗಬೇಕಿತ್ತು. ಇಂದಿನ ಪೀಳಿಗೆ ಇಂಥ ಮಹಾನ್ ಕಲಾವಿದರ ರಚನೆಗಳನ್ನು ಶ್ರದ್ಧೆಯಿಂದ ಕಲಿತು ಹಾಡಬೇಕು. ಕೆಸಿಎಂಸಿ ಟ್ರಸ್ಟ್ ಈ ನಿಟ್ಟಿನಲ್ಲಿ ಸಾವಿರಾರು ಕೆಲಸಗಳನ್ನು ಮಾಡಲಿ ಎಂದು ಹಾರೈಸುವೆ ಎಂದು ತಿಳಿಸಿದರು.

ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ

ಇದೇ ವೇಳೆ ಖ್ಯಾತ ವೀಣಾ ವಿದುಷಿ ರೇವತಿ ಕಾಮತ್ ಅವರ ‘ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್’ ಅನ್ನು ವಿದ್ವಾನ್ ಆರ್. ವಿಶ್ವೇಶ್ವರನ್ ಅವರು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ, ಗ್ರಾಮೀಣ ಮಕ್ಕಳ ಶಿಕ್ಷಣ ಅಭಿವೃದ್ಧಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಪೋಷಣೆ ಮತ್ತು ಸಂವರ್ಧನೆಗೆ ಟ್ರಸ್ಟ್ ಸಂಕಲ್ಪ ಮಾಡಿದೆ ಎಂದು ರೇವತಿ ಕಾಮತ್ ತಿಳಿಸಿದರು.

ಈ ಸಂದರ್ಭದಲ್ಲಿ ಕಲಾಕ್ಷೇತ್ರದ ಹಿರಿಯ ಚೇತನ ವಿದ್ವಾನ್ ಡಾ.ರಾ. ವಿಶ್ವೇಶ್ವರನ್, ಲೇಖಕ ಮತ್ತು ಪತ್ರಕರ್ತ ಎ.ಆರ್. ರಘುರಾಮ, ಡಾ.ರಮಾ ಬೆಣ್ಣೂರು, ಭ್ರಮರಾ ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರಿ, ವಿದ್ವಾನ್ ಡಾ.ರಾ.ಸ.ನಂದಕುಮಾರ್ ಮತ್ತು ವೀಣಾ ವಿದ್ವಾಂಸ ಪ್ರಶಾಂತ ಅಯ್ಯಂಗಾರ್, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ (ಶಿವು) ಮತ್ತು ಪುಸ್ತಕಂ ರಮಾ ಉಪಸ್ಥಿತರಿದ್ದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

ಇದಕ್ಕೂ ಮುನ್ನ ವಾಸುದೇವಾಚಾರ್ಯರ ಕೃತಿಗಳ ಗೋಷ್ಠಿ ಗಾಯನ, ವಿದುಷಿ ಮೈಸೂರು ರಾಜಲಕ್ಷ್ಮೀ ಅವರ ವೀಣಾವಾದನ ನೂರಾರು ಪ್ರೇಕ್ಷಕರನ್ನು ರಂಜಿಸಿತು.

Continue Reading

ಪ್ರಮುಖ ಸುದ್ದಿ

ಗುರು ಸಕಲಮಾ ಆತ್ಮಕಥನ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಮುಖಪುಟ ಅನಾವರಣ

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ಅಧ್ಯಾತ್ಮದ ಹಾದಿಯಲ್ಲಿ ಪಯಣಿಸಬಹುದು. ತಂತ್ರಮಾರ್ಗದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ ಎಂದು ಗುರು ಸಕಲಮಾ ನುಡಿದರು. ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿಯ ಮುಖಪುಟವನ್ನು ಸಾಹಿತಿ ಜೋಗಿ ಅನಾವರಣಗೊಳಿಸಿದರು.

VISTARANEWS.COM


on

ಹಿಮಾಲಯ book cover page launch 2
Koo

ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ

ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್‌ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.

ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.

ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಹಿಮಾಲಯ book cover page launch 2

ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.

ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.

ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್‌ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್‌ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.

ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.

ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್‌ ಲಿಂಕ್- https://youtube.com/@gurusakalamaa?feature=shared

ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

Continue Reading

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading
Advertisement
cylinder blast in Bengaluru
ಕ್ರೈಂ1 min ago

Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

T20 World Cup 2007
ಕ್ರಿಕೆಟ್22 mins ago

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

Gold Rate Today
ಚಿನ್ನದ ದರ23 mins ago

Gold Rate Today: ತುಸು ಇಳಿಕೆ ಕಂಡ ಚಿನ್ನದ ಬೆಲೆ; ಇಲ್ಲಿದೆ ದರದ ವಿವರ

Munawar Faruqui second wife Mehzabeen Coatwala single mom and makeup artist
ಬಾಲಿವುಡ್24 mins ago

Munawar Faruqui:  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ ಎರಡನೇ ಪತ್ನಿ ಸಿಂಗಲ್‌ ಪೇರೆಂಟ್‌!

Lokayukta Raid
ಕ್ರೈಂ44 mins ago

Lokayukta Raid : ಲಂಚಕ್ಕೆ ಕೈವೊಡ್ಡಿದ ಕೆಆರ್‌ ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ

Illegal Bangla Immigrants
ಕ್ರೈಂ56 mins ago

Illegal Bangla Immigrants: ಸಿಸಿಬಿ ದಾಳಿ, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Viral News
ವೈರಲ್ ನ್ಯೂಸ್59 mins ago

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

PM Narendra Modi
ದೇಶ1 hour ago

PM Narendra Modi: ಮೋದಿ ಧ್ಯಾನ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯೆ? ಕಾನೂನು ತಜ್ಞರ ಅಭಿಪ್ರಾಯ ಹೀಗಿದೆ

Saanvi Sudeep New Tattoo Piku meaning
ಸ್ಯಾಂಡಲ್ ವುಡ್1 hour ago

Saanvi Sudeep: ಟ್ಯಾಟೂ ಹಾಕಿಸಿಕೊಂಡ ಕಿಚ್ಚ ಸುದೀಪ್‌ ಮುದ್ದಿನ ಮಗಳು: ʻPIKUʼ ಅರ್ಥ ಏನು?

Nandamuri Balakrishna Pushes Away Actress Anjali
ಟಾಲಿವುಡ್1 hour ago

Nandamuri Balakrishna: ಕುಡಿದು ಬಂದು ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ್ರಾ ಬಾಲಯ್ಯ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌