Russia-Ukraine war | ಪುಟಿನ್‌ ಯುದ್ಧೋನ್ಮಾದಿ ಹೇಳಿಕೆ ಬೆನ್ನಲ್ಲೇ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದ ಉಕ್ರೇನ್ - Vistara News

ವಿದೇಶ

Russia-Ukraine war | ಪುಟಿನ್‌ ಯುದ್ಧೋನ್ಮಾದಿ ಹೇಳಿಕೆ ಬೆನ್ನಲ್ಲೇ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದ ಉಕ್ರೇನ್

ಉಕ್ರೇನ್ ಪಡೆಯು ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದ ಕ್ಲಿಮೋವ್ಸ್ಕಿ ಜಿಲ್ಲೆ ಮೇಲೆ ಡ್ರೋನ್ ದಾಳಿ (Russia-Ukraine war) ನಡೆಸಿದೆ. ಜನವರಿ 5ರಿಂದ ರಷ್ಯಾವು ಉಕ್ರೇನ್‌ ಮೇಲೆ ಸಂಘಟಿತ ಬಲದೊಂದಿಗೆ ಮುಗಿಬೀಳಲಿದೆ ಎಂದು ಅಧ್ಯಕ್ಷ ಪುಟಿನ್‌ ಹೇಳಿಕೆ ಬೆನ್ನಲ್ಲೇ ಉಕ್ರೇನ್‌ ಕಡೆಯಿಂದ ಡ್ರೋನ್‌ ಹಾರಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾಸ್ಕೋ: ರಷ್ಯಾದಿಂದ ಸತತ ದಾಳಿ ಎದುರಿಸಿರುವ ಉಕ್ರೇನ್ ಇದೀಗ ರಷ್ಯಾ (Russia-Ukraine war) ವಿರುದ್ಧ ತಿರುಗಿ ಬಿದ್ದಿದೆ. ತನ್ನ ಗಡಿ ಭಾಗದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದ ಮೇಲೆ ಸೋಮವಾರ ಮುಂಜಾನೆ ಡ್ರೋನ್ ಮೂಲಕ ದಾಳಿ ನಡೆಸಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬ್ರಿಯಾನ್ಸ್ಕ್ ನ ಗವರ್ನರ್ ಅಲೆಕ್ಸಾಂಡರ್ ಬೊಗೊಮ್ಯಾಜ್ ತಿಳಿಸಿದ್ದಾರೆ.

“ಉಕ್ರೇನ್‌ನ ದಕ್ಷಿಣ ಭಾಗದ ಗಡಿಯ ಬಳಿಯಿರುವ ಕ್ಲಿಮೋವ್ಸ್ಕಿ ಜಿಲ್ಲೆಯಲ್ಲಿ ಡ್ರೋನ್ ದಾಳಿ (Russia-Ukraine war) ನಡೆದಿದೆ. ವಿದ್ಯುತ್ ಸ್ಥಾವರಗಳಿಗೆ ಹಾನಿಯುಂಟಾಗಿರುವ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಳಿದಂತೆ ಬೇರೆ ತೊಂದರೆಗಳಾಗಿಲ್ಲ. ಎಲ್ಲ ರೀತಿಯ ತುರ್ತು ಸೇವೆಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ಅಲೆಕ್ಸಾಂಡರ್ ಬೊಗೊಮ್ಯಾಜ್ ಅವರು ಟೆಲಿಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ದಾಳಿಯ ಬಗ್ಗೆ ಉಕ್ರೇನ್ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ.

ಪುಟಿನ್‌ ಘೋಷಣೆ ಬೆನ್ನಿಗೇ ಉಕ್ರೇನ್‌ ಅಟ್ಯಾಕ್‌?
ಭಾನುವಾರ ಹೊಸ ವರ್ಷಾಚರಣೆ ವೇಳೆ ಮಾತನಾಡಿದ್ದ ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು,‌ ಉಕ್ರೇನ್‌ ವಿರುದ್ಧದ ಸೇನಾ ಸಂಘರ್ಷವನ್ನು ಹೆಚ್ಚಿಸುವ ಸುಳಿವನ್ನು ನೀಡಿದ್ದರು. ಜನವರಿ 5ರಿಂದ ಎಲ್ಲ ಸೇನೆಗಳನ್ನು ಸೇರಿಸಿ ದಾಳಿ ನಡೆಯಲಿದೆ ಎಂದಿದ್ದರು. ಇದರ ಬೆನ್ನಿಗೇ ಉಕ್ರೇನ್‌ ದಾಳಿಗೆ ಇಳಿದಿದೆ.

ತಮ್ಮ 9 ನಿಮಿಷಗಳ ಹೊಸ ವರ್ಷದ ಆಚರಣೆಯ ಭಾಷಣದಲ್ಲಿ ಪುಟಿನ್‌, ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಾಶಪಡಿಸುವುದಕ್ಕೋಸ್ಕರ ಉಕ್ರೇನ್‌ ಅನ್ನು ದಾಳದಂತೆ ಪ್ರಯೋಗಿಸುತ್ತಿವೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದರು. ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಕಾರಣ ಪಶ್ಚಿಮದ ರಾಷ್ಟ್ರಗಳಾಗಿವೆ. ಶಾಂತಿಯ ಹೆಸರಿನಲ್ಲಿ ಅವುಗಳು ಭಯೋತ್ಪಾದನೆಯನ್ನೇ ನಡೆಸಿವೆ ಎಂದು ಗುಡುಗಿದ್ದರು ಪುಟಿನ್‌.

ಎಂಟು ವರ್ಷಗಳಿಂದಲೇ ಸಂಘರ್ಷ
ರಷ್ಯಾ ೨೦೧೪ರಿಂದಲೇ ಉಕ್ರೇನ್‌ನ ಮೇಲೆ ನಿರಂತರ ಹುನ್ನಾರ ನಡೆಸುತ್ತಿದೆ. ಉಕ್ರೇನ್‌ಗೆ ಸೇರಿದ ಕೆಲವು ಪ್ರಾಂತ್ಯಗಳಿಗೆ ತಾನೇ ಸ್ವಾಯತ್ತೆ ಘೋಷಣೆ ಮಾಡಿ ಪ್ರತ್ಯೇಕವಾಗಿ ವ್ಯವಹಾರ ಶುರು ಮಾಡಿತ್ತು. ಇದರಿಂದ ಕೆರಳಿದ ಉಕ್ರೇನ್‌ ರಕ್ಷಣಾಕ್ರಮವಾಗಿ ನ್ಯಾಟೋವನ್ನು ಸೇರಲು ಮುಂದಾದದ್ದು ರಷ್ಯಾಕ್ಕೆ ಬೆಂಕಿ ಹಚ್ಚಿದಂತಾಯಿತು.

ಹೀಗಾಗಿ ಕಳೆದ 2022ರ ಫೆಬ್ರವರಿ ತಿಂಗಳಿನಿಂದ ತನ್ನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಅದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಮೇಲೆ ಹಲವು ದಾಳಿಗಳನ್ನು ನಡೆಸಿದೆ. ಈ ಯುದ್ಧದಲ್ಲಿ (Russia-Ukraine war) ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: Russia-Ukraine war | ಹೊಸ ವರ್ಷ ಉಕ್ರೇನ್‌ ವಿರುದ್ಧ ಸಂಘರ್ಷ ತೀವ್ರಗೊಳಿಸುವ ಸಂಕಲ್ಪ ಮಾಡಿದ ಪುಟಿನ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

ಮೂರು ವರ್ಷದ ಮಗನನ್ನು ಶೂಟ್ ಮಾಡಿ ಕೊಂದು ಮಹಿಳೆಯೊಬ್ಬಳು ತಾನು ಆತ್ಮಹತ್ಯೆ ಮಾಡಿಕೊಂಡ (Self Harming) ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ. ಇದಕ್ಕೂ ಮೊದಲು ಆಕೆ ತನ್ನ ಮಾಜಿ ಪತಿಗೆ ಸಂದೇಶವನ್ನು ಕಳುಹಿಸಿದ್ದಳು.

VISTARANEWS.COM


on

By

Self Harming
Koo

ಟೆಕ್ಸಾಸ್: ಮಗುವಿನಿಂದ ತಂದೆಗೆ ವಿದಾಯ ಹೇಳಿಸಿದ ಬಳಿಕ ಮಹಿಳೆಯೊಬ್ಬಳು ಮಗುವನ್ನು ಗುಂಡಿಕ್ಕಿ (shot) ಕೊಂದು ತಾನು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ನ್ಯೂಯಾರ್ಕ್ ನ (New York) ಟೆಕ್ಸಾಸ್ ನ (Texas) ಸ್ಯಾನ್ ಆಂಟೋನಿಯೊದ ಉದ್ಯಾನವನದಲ್ಲಿ ಮಾರ್ಚ್ 19ರಂದು ನಡೆದಿದೆ. ಸವನ್ನಾ ಕ್ರಿಗರ್ (32) ಮತ್ತು ಆಕೆಯ ಮಗ ಕೈಡೆನ್ (3) ಮೃತರು.

ಟೆಕ್ಸಾಸ್ ನಲ್ಲಿ ಮಗು ಕೈಡೆನ್ ಜೊತೆ ವಾಸವಿದ್ದ ಸವಾನ್ನಾ ಕ್ರಿಗರ್ ಇದಕ್ಕೂ ಮೊದಲು ತನ್ನ ಮದುವೆಯ ಫೋಟೋಗಳನ್ನು ಚಿತ್ರೀಕರಿಸುವುದು, ಮಾಜಿ ಗಂಡನ ನಿವಾಸವನ್ನು ಧ್ವಂಸಗೊಳಿಸುವುದು, ವೀಡಿಯೊಗಳು ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿ ಮಾಜಿ ಗಂಡನಿಗೆ ಬೆದರಿಕೆ ಒಡ್ಡಿದ್ದಳು.

ಮಾರ್ಚ್ 18ರ ಮಧ್ಯಾಹ್ನ ಕ್ರಿಗರ್ ಕೆಲಸ ತೊರೆದು ತನ್ನ ಮಾಜಿ ಗಂಡನ ಮನೆಗೆ ಹೋಗಿದ್ದು, ಆತ ಕೆಲಸಕ್ಕೆ ಹೋಗಿದ್ದ. ಬಳಿಕ ಆಕೆ ಅವರ ನಿವಾಸಕ್ಕೆ ಹಾನಿ ಮಾಡಿದ್ದಳು.

ಬಳಿಕ ತನ್ನ ಮನೆಗೆ ಮರಳಿ ತನ್ನ ಮದುವೆಯ ಉಡುಪು ಮತ್ತು ಭಾವಚಿತ್ರಗಳನ್ನು ಹಾಸಿಗೆಯ ಮೇಲೆ ಜೋಡಿಸಿದಳು. ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಒಂದು ಸಂದೇಶದಲ್ಲಿ, ಆಕೆ ನೀನು ಈಗ ಮನೆಗೆ ಹೋಗಲು ಏನೂ ಇಲ್ಲ. ನೀವು ನಿಜವಾಗಿಯೂ ಇಲ್ಲ. ದಿನದ ಕೊನೆಯಲ್ಲಿ ನೀವು ಏನನ್ನೂ ಹೊಂದಿರುವುದಿಲ್ಲ ಎಂದು ಕ್ರಿಗರ್ ಹೇಳಿದ್ದು, ಮಾಜಿ ಪತಿಗೆ ಕಳುಹಿಸಿದ ಕೊನೆಯ ಸಂದೇಶದಲಿ ನಿಮ್ಮ ಮಗನಿಗೆ ವಿದಾಯ ಹೇಳಿ ಎಂದು ಬರೆದಿದ್ದಳು.

ಇದನ್ನು ನೋಡಿ ಆಕೆಯ ಮಾಜಿ ಪತಿ ಕೂಡಲೇ ಧಾವಿಸಿ ಬಂದಾಗ ಕ್ರಿಗರ್ ಮತ್ತು ಆಕೆಯ ಮಗನ ಮೃತದೇಹ ಉದ್ಯಾನವನದ ಕಂದಕದಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

ಸಾಲಬಾಧೆಯಿಂದ ಗೃಹಿಣಿ ಆತ್ಮಹತ್ಯೆ

ಸಾಲಬಾಧೆ ತಾಳಲಾರದೇ ಗೃಹಿಣಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅರಳಗುಪ್ಪೆಯಲ್ಲಿ ಇತ್ತೀಚೆಗೆ ನಡೆದಿತ್ತು. ಭಾಗ್ಯಮ್ಮ (50) ಮೃತರು.
ಭಾಗ್ಯಮ್ಮ ಮೈಕ್ರೋ ಫೈನಾನ್ಸ್ ಕಂಪೆನಿಯಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತೀವ್ರ ಬರಗಾಲ ಹಿನ್ನೆಲೆಯಲ್ಲಿ ಹಣ ಕಟ್ಟಲು ಸಾಧ್ಯವಾಗದೇ ಅವರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. ಈ ಕುರಿತು ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

ಮುಂಬಯಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ – IIT) 115 ವಿದ್ಯಾರ್ಥಿಗಳು 2005ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇವುಗಳಲ್ಲಿ 98 ಕ್ಯಾಂಪಸ್‌ ಆವರಣದಲ್ಲಿ 17 ಕ್ಯಾಂಪಸ್‌ನಿಂದ ಹೊರಗೆ ಮೃತಪಟ್ಟಿದ್ದಾರೆ. 56 ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಕಳವಳಕಾರಿ ಅಂಶ ಇತ್ತೀಚಿಗೆ ಬಹಿರಂಗವಾಗಿದೆ.

ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಮತ್ತು ಗ್ಲೋಬಲ್ ಐಐಟಿ ಅಲುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಸಿಂಗ್ ಅವರು ಕೇಳಿದ ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಯ ಮೂಲಕ ಸ್ವೀಕರಿಸಿದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

Continue Reading

ದೇಶ

Covishield Vaccine: ಕೋವಿಶೀಲ್ಡ್‌ ಲಸಿಕೆ ಹಿಂಪಡೆಯುವುದಾಗಿ ಅಸ್ಟ್ರಾಜೆನೆಕಾ ಘೋಷಣೆ

Covishield Vaccine: ಅಸ್ಟ್ರಾಜೆನೆಕಾ ಕಂಪನಿ ಪ್ರಕಟಣೆ ಹೊರಡಿಸಿದ್ದು, ಇನ್ನು ಮುಂದೆ ಕೋವಿಶೀಲ್ಡ್‌ ಲಸಿಕೆ ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಇನ್ನು ಕೋವಿಶೀಲ್ಡ್‌ ಲಸಿಕೆಯನ್ನು ಹಿಂಪಡೆಯುವ ಉದ್ದೇಶ ಸಂಪೂರ್ಣವಾಗಿ ಗೌಪ್ಯವಾದ ವಿಚಾರ. ಅದೂ ಅಲ್ಲದೇ ಈ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವುದಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲಎಂದು ಹೇಳಿದೆ

VISTARANEWS.COM


on

Covishield Vaccine
Koo

ನವದೆಹಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca)ನ ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಈ ಕಂಪನಿಯೂ ಇದೀಗ ವ್ಯಾಪಾರ ಉದ್ದೇಶದಿಂದ ಎಲ್ಲಾ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ಈ ಬಗ್ಗೆ ಸ್ವತಃ ಅಸ್ಟ್ರಾಜೆನೆಕಾ ಕಂಪನಿ ಪ್ರಕಟಣೆ ಹೊರಡಿಸಿದ್ದು, ಇನ್ನು ಮುಂದೆ ಕೋವಿಶೀಲ್ಡ್‌ ಲಸಿಕೆ ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಇನ್ನು ಕೋವಿಶೀಲ್ಡ್‌ ಲಸಿಕೆಯನ್ನು ಹಿಂಪಡೆಯುವ ಉದ್ದೇಶ ಸಂಪೂರ್ಣವಾಗಿ ಗೌಪ್ಯವಾದ ವಿಚಾರ. ಅದೂ ಅಲ್ಲದೇ ಈ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವುದಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನು ಕಂಪನಿ ಸ್ವಯಂ ಪ್ರೇರಿತವಾಗಿ ತನ್ನ ಈ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ. ಮಾ.5ರಂದೇ ಇದಕ್ಕಾಗಿ ಯುರೋಪಿಯನ್‌ ಒಕ್ಕೂಟದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇನ್ನು ಶೀಘ್ರದಲ್ಲೇ ಇಂಗ್ಲೆಂಡ್‌ ಮತ್ತಿ ಇತರೇ ರಾಷ್ಟ್ರಗಳಲ್ಲಿ ಲಸಿಕೆ ಹಿಂಪಡೆಯಲು ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿದೆ.

ಬ್ಟಿರಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಳ್ಳುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಇದನ್ನೂ ಓದಿ: EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

ಇನ್ನು ಜನರನ್ನು ಆತಂಕಕ್ಕೀಡು ಮಾಡಿರುವ ಈ ವಿಚಾರದ ಬಗ್ಗೆ ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಕೊರೊನಾ ವೈರಸ್‌ಎದುರಿಸಲು ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಿದ್ದಾರೆ. ಮೊದಲ ಡೋಸ್ ಅನ್ನು ಪಡೆದಾಗ ಅಡ್ಡ ಪರಿಣಾಮದ ರಿಸ್ಕ್‌ ಅತ್ಯಧಿಕವಾಗಿರುತ್ತದೆ. ಆದರೆ ಎರಡನೇ ಡೋಸ್‌ನೊಂದಿಗೆ ಕಡಿಮೆಯಾಗುತ್ತದೆ; ಮೂರನೆಯದರೊಂದಿಗೆ ಮತ್ತೂ ಕಡಿಮೆಯಾಗುತ್ತದೆ. ಅಡ್ಡ ಪರಿಣಾಮ ಸಂಭವಿಸುವುದಾದಲ್ಲಿ, ಲಸಿಕೆ ಪಡೆದ ಎರಡು ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ” ಎಂದು ಗಂಗಾಖೇಡ್ಕರ್ ತಿಳಿಸಿದ್ದರು.

Continue Reading

ದೇಶ

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Nirav Modi: ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿ ನೀರವ್‌ ಮೋದಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

VISTARANEWS.COM


on

Nirav modi
Koo

ಲಂಡನ್‌: ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ (Nirav Modi) ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ನೀರವ್‌ ಮೋದಿಯು ಹಿಸ್‌ ಮೆಜೆಸ್ಟೀಸ್‌ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ. ನೀರವ್‌ ಮೋದಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಲಂಡನ್‌ನಲ್ಲಿರುವ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ (Westminster Magistrates Court) ನಿರಾಕರಿಸಿತು. ಇದರೊಂದಿಗೆ ಸತತ ಐದನೇ ಬಾರಿಯೂ ನೀರವ್‌ ಮೋದಿ ಜಾಮೀನು ಅರ್ಜಿಯು ತಿರಸ್ಕೃತಗೊಂಡಂತಾಗಿದೆ.

ನೀರವ್‌ ಮೋದಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ಜಾನ್‌ ಜಾನಿ ಕೈಗೆತ್ತಿಕೊಂಡರು. “ನೀರವ್‌ ಮೋದಿಗೆ ಜಾಮೀನು ನೀಡಿದರೆ ಅವರು ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹಾಗೆಯೇ, ಪ್ರಭಾವಿಯಾಗಿರುವ ಕಾರಣ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ. ಹಾಗಾಗಿ, ನೀರವ್‌ ಮೋದಿಗೆ ಯಾರೂ ಜಾಮೀನು ನೀಡಲು ಸಾಧ್ಯವಿಲ್ಲ. ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ತಿಳಿಸಿದರು. ಇದು ನೀರವ್‌ ಮೋದಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿರುವ ನೀರವ್‌ ಮೋದಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರ ವಿರುದ್ಧ ಸಿಬಿಐ ಹಾಗೂ ಇ.ಡಿ ತನಿಖೆ ನಡೆಸುತ್ತಿದ್ದು, ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರವು ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ. ಇವರನ್ನು ಭಾರತವು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಭಾರತದ ಮನವಿ ಮೇರೆಗೆ 2019ರಲ್ಲಿ ನೀರವ್‌ ಮೋದಿ ಅವರನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದೆ. ಅಂದಿನಿಂದ ಇದುವರೆಗೆ ನೀರವ್‌ ಮೋದಿಯು ಜೈಲಿನಲ್ಲೇ ಇದ್ದಾರೆ. ಇದಕ್ಕೂ ಮೊದಲು ಅವರನ್ನು ವಿಂಡ್ಸ್‌ವರ್ತ್‌ ಜೈಲಿನಲ್ಲಿ ಇರಿಸಲಾಗಿತ್ತು.

ನೀರವ್‌ ಮೋದಿಯು ಹಾಂಕಾಂಗ್‌ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 253.62 ಕೋಟಿ ರೂಪಾಯಿ, ವಿವಿಧ ಬಗೆಯ ರತ್ನಗಳು, ಆಭರಣಗಳನ್ನು ಇಡಿ ಜಪ್ತಿಮಾಡಿದೆ. ಹಾಗೆಯೇ, ದೇಶಭ್ರಷ್ಟ ಆರ್ಥಿಕ ಅಪರಾಧಿಯನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಲ್ಲಿಯವರೆಗೆ ದೇಶ-ವಿದೇಶ ಸೇರಿ ನೀರವ್‌ ಮೋದಿಯ 2,396.45ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ನೀರವ್‌ ಬ್ಯಾಂಕ್‌ ಅಕೌಂಟ್‌ಗಳನ್ನೂ ಸೀಲ್‌ ಮಾಡಲಾಗಿದೆ. 

ಇದನ್ನೂ ಓದಿ: IPL 2024 : ಆರ್​ಸಿಬಿ ತಂಡಕ್ಕೆ ಸವಾಲೆಸೆದ ವಿಜಯ್​ ಮಲ್ಯ; ಏನದು ಚಾಲೆಂಜ್​​?

Continue Reading

ಫ್ಯಾಷನ್

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024 ರಲ್ಲಿ (Met Gala 2024) ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್ ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.

VISTARANEWS.COM


on

By

Met Gala 2024
Koo

ಮೆಟ್ ಗಾಲಾ 2024ರಲ್ಲಿ (Met Gala 2024) 180 ಕ್ಯಾರಟ್ ಡೈಮಂಡ್ ನೆಕ್ಲೇಸ್‌ನೊಂದಿಗೆ (diamond necklace) 200 ಕ್ಯಾರಟ್ ವಜ್ರಗಳನ್ನು ಧರಿಸಿದ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್ (billionaire) ಸುಧಾ ರೆಡ್ಡಿ ( Sudha Reddy) ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅತ್ಯಾಕರ್ಷಕ ಉಡುಗೆಗಳು ಮೆಟ್ ಗಾಲಾದಲ್ಲಿ ನೆರೆದಿದ್ದ ಎಲ್ಲರ ದೃಷ್ಟಿ ಅವರತ್ತ ನೋಡುವಂತೆ ಮಾಡಿತ್ತು.

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024ರಲ್ಲಿ ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್‌ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.


ಅವರು ಧರಿಸಿದ್ದ ನೆಕ್‌ಪೀಸ್ ನಲ್ಲಿ 25 ಕ್ಯಾರಟ್ ಹೃದಯದ ಆಕಾರದ ವಜ್ರ ಮತ್ತು ಮೂರು 20 ಕ್ಯಾರಟ್‌ನ ಹೃದಯ ಆಕಾರದ ವಜ್ರಗಳಿದ್ದವು. ಇದು ಅವರ ಪತಿ ಮತ್ತು ಇಬ್ಬರು ಮಕ್ಕಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
ಈ ನೆಕ್ಲೇಸ್ ಅನ್ನು 23 ಕ್ಯಾರಟ್ ಡೈಮಂಡ್ ಸಾಲಿಟೇರ್ ರಿಂಗ್ ಮತ್ತು ಮತ್ತೊಂದು 20 ಕ್ಯಾರಟ್ ಡೈಮಂಡ್ ಸಾಲಿಟೇರ್ ಉಂಗುರದೊಂದಿಗೆ ಜೋಡಿಸಿದ್ದು, ಇದು 20 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ.

ಸುಧಾ ರೆಡ್ಡಿ ಯಾರು?

ಕೃಷ್ಣಾ ರೆಡ್ಡಿಯವರ ಪತ್ನಿ ಸುಧಾ ರೆಡ್ಡಿ MEIL ನಲ್ಲಿ ನಿರ್ದೇಶಕರಾಗಿದ್ದಾರೆ. ಇವರಿಗೆ ಮಾನಸ್ ಮತ್ತು ಪ್ರಣವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಧಾ ರೆಡ್ಡಿ ಫೌಂಡೇಶನ್‌ನ ಮುಖ್ಯಸ್ಥರಾಗಿರುವ ಅವರು ಕಂಪೆನಿಯ ದತ್ತಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಮೂಲತಃ ವಿಜಯವಾಡದವರಾದ ಅವರು 19 ವರ್ಷದವರಾಗಿದ್ದಾಗ ಕೃಷ್ಣಾ ರೆಡ್ಡಿ ಅವರನ್ನು ವಿವಾಹವಾದರು. ಅವರಿಬ್ಬರೂ ಒಟ್ಟಿಗೆ ಬೆಳೆದಿರುವ ಕಾರಣ ಸಾಧನೆ ಮಾಡುವುದು ಸಾಧ್ಯವಾಯಿತು ಎಂಬುದು ಅವರ ನಂಬಿಕೆ.
ಹೈದರಾಬಾದ್ ರಾಣಿ ಜೇನುನೊಣ ಎಂದೇ ಪ್ರಶಂಸಿಸಲ್ಪಡುವ ಸುಧಾ ರೆಡ್ಡಿ 2021ರಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು.


ತರುಣ್ ತಹಿಲಿಯಾನಿ ಸಿದ್ಧಪಡಿಸಿದ ಉಡುಗೆ

ಎರಡನೇ ಬಾರಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸುಧಾ ರೆಡ್ಡಿ ಅವರು ತರುಣ್ ತಹಿಲಿಯಾನಿ ಅವರ ಆಫ್-ಶೋಲ್ಡರ್ ಗೌನ್ ಮತ್ತು ತಮ್ಮ ಸಂಗ್ರಹದ ಕೋಟಿಗಟ್ಟಲೆ ಮೌಲ್ಯದ ನೆಕ್ಲೇಸ್‌ ಧರಿಸಿ ಭಾಗವಹಿಸಿದ್ದರು.

ರೀವೇಕನಿಂಗ್ ಫ್ಯಾಶನ್ ಎಂಬ ಶೀರ್ಷಿಕೆಯ ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಐವರಿ ಸಿಲ್ಕ್ ಗೌನ್ ಅನ್ನು 4,500 ಗಂಟೆಗಳ ಅವಧಿಯಲ್ಲಿ 80 ಕುಶಲಕರ್ಮಿಗಳ ತಂಡ ಸಿದ್ಧಪಡಿಸಿದೆ. ವಿನ್ಯಾಸಕಾರರ ಪ್ರಕಾರ ಈ ಧಿರಿಸು ಹಳೆಯ ಮೊಘಲ್ ಉದ್ಯಾನಗಳಿಂದ ಪ್ರೇರಿತವಾಗಿದೆ. ಕಾರ್ಸೆಟ್ ಅನ್ನು ತಹಿಲಿಯಾನಿಯ ಸಿಗ್ನೇಚರ್ ಮ್ಯೂಟ್, ಬೀಜ್-ಗೋಲ್ಡ್ ಬಣ್ಣದ ಪ್ಯಾಲೆಟ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಮೆಟ್ ಗಾಲಾ ಥೀಮ್‌ಗೆ ಅನುಗುಣವಾಗಿ ರಚಿಸಲಾಗಿದೆ. ಗೌತಮ್ ಕಲ್ರಾ ಅವರ ಶೈಲಿಯಲ್ಲಿ ರೆಡ್ಡಿ ಅವರು ಮಿಯೋಡ್ರಾಗ್ ಗುಬೆರಿನಿಕ್ ವಿನ್ಯಾಸಗೊಳಿಸಿದ ಸ್ಫಟಿಕ ಪರಿಕರವನ್ನು ಇದರೊಂದಿಗೆ ಸೇರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

180 ಕ್ಯಾರಟ್‌ ನ ನೆಕ್ಲೆಸ್

ಸುಧಾ ರೆಡ್ಡಿ ಅವರು ಕೇವಲ ಧಿರಸಿನಿಂದ ಮಾತ್ರವಲ್ಲ ಪ್ರತಿಷ್ಠಿತ ಆಭರಣದಿಂದ ಗಮನ ಸೆಳೆದರು. ‘ಅಮೋರ್ ಎಟರ್ನೊ’ ನೆಕ್ಲೇಸ್ 25 ಸಾಲಿಟೇರ್‌ಗಳನ್ನು ಒಳಗೊಂಡಿದ್ದು ಇದು ಒಟ್ಟು 180 ಕ್ಯಾರೆಟ್‌ಗಳು. ಇದನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸಲು ರೆಡ್ಡಿ ಕುಟುಂಬದ ಪರಂಪರೆಯ ಗುರುತಾಗಿ ರಚಿಸಲಾಗಿದೆ.

ಇದನ್ನೂ ಓದಿ: Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

ಹಾರದ ಮಧ್ಯಭಾಗದಲ್ಲಿ ನಾಲ್ಕು ದೊಡ್ಡ ಹೃದಯದ ಆಕಾರದ ವಜ್ರಗಳಿಂದ ರಚಿಸಲಾದ ಸಾಂಕೇತಿಕವಾಗಿ ಕುಟುಂಬದ ಮರವನ್ನು ಇಡಲಾಗಿದೆ. ಅತಿದೊಡ್ಡ ವಜ್ರ, 25 ಕ್ಯಾರೆಟ್ ಕಿಂಗ್ ಆಫ್ ಹಾರ್ಟ್ಸ್, ರೆಡ್ಡಿಯ ಪತಿ ಕೃಷ್ಣನನ್ನು ಗೌರವಿಸುತ್ತದೆ. ಆದರೆ ಹೃದಯದ ರಾಣಿ 20 ಕ್ಯಾರೆಟ್ ಹೃದಯದ ವಜ್ರವು ಸುಧಾ ರೆಡ್ಡಿಯನ್ನು ಸಂಕೇತಿಸುತ್ತದೆ. ಜ್ಞಾನದ ರಾಜಕುಮಾರ ಮತ್ತು ಸಂಪತ್ತಿನ ರಾಜಕುಮಾರ ಎಂದು ಕರೆಯಲ್ಪಡುವ ಎರಡು ಹೆಚ್ಚುವರಿ 20 ಕ್ಯಾರಟ್ ಹೃದಯಗಳು ಅವರ ಪುತ್ರರಾದ ಪ್ರಣವ್ ಮತ್ತು ಮಾನಸ್ ಅವರನ್ನು ಪ್ರತಿನಿಧಿಸುತ್ತವೆ.

ಈ ನೆಕ್ಲೇಸ್ ಅನ್ನು ಪೂರ್ಣಗೊಳಿಸುವುದು 21 ಹೊಳೆಯುವ ಸುತ್ತಿನ ವಜ್ರಗಳು. ಇದು ಸುಧಾ ಮತ್ತು ಕೃಷ್ಣರ ಪ್ರೇಮಕಥೆಯ ಹಂಚಿಕೊಂಡ ಅನುಭವಗಳು ಮತ್ತು ಪಾಲಿಸಬೇಕಾದ ಕ್ಷಣಗಳನ್ನು ಸಂಕೇತಿಸುತ್ತದೆ. 20 ಕ್ಯಾರೆಟ್ ಹೃದಯದ ಆಕಾರದ ವಜ್ರದ ಉಂಗುರ ಮತ್ತು 23 ಕ್ಯಾರೆಟ್ ಹಳದಿ ಡೈಮಂಡ್ ರಿಂಗ್ ಇದನ್ನು ಪೂರ್ಣಗೊಳಿಸುತ್ತದೆ. ಇದನ್ನು ರಚಿಸಲು 100 ಗಂಟೆಗಳು ಬೇಕಾಗಿತ್ತು.

Continue Reading
Advertisement
SSLC Exam Result 2024 to be declared tomorrow Here are the details
ಶಿಕ್ಷಣ5 mins ago

SSLC Exam Result 2024: ನಾಳೆ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Srinidhi Shetty Attends Daiva Kola Festivities in Mangalore
ಸ್ಯಾಂಡಲ್ ವುಡ್12 mins ago

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Pepper spray
ಕರ್ನಾಟಕ20 mins ago

Pepper Spray: ಪೆಪ್ಪರ್‌ ಸ್ಪ್ರೇ ಬಹಳ ಡೇಂಜರ್‌..ಅದನ್ನು ರಕ್ಷಣೆಗೆ ಬಳಸುವಂತಿಲ್ಲ- ಹೈಕೋರ್ಟ್‌

Prajwal Revanna Case Will resign says DK Shivakumar and slams HD Kumaraswamy
ರಾಜಕೀಯ22 mins ago

Prajwal Revanna Case: ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ; ಕೊಡ್ತೇನೆ ಅಂದ್ರ ಡಿಕೆಶಿ!

Sam Pitroda
ದೇಶ36 mins ago

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

World Red Cross Day
Latest41 mins ago

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

Palthady Rama krishna achar
ಕರ್ನಾಟಕ57 mins ago

Palthady Ramakrishna Achar: ತುಳು ಸಾಹಿತಿ, ವಿದ್ವಾಂಸ ಡಾ|ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

Actor Darshan devil starring making video release on may 10
ಸಿನಿಮಾ1 hour ago

Actor Darshan: ಮೇ 10ಕ್ಕೆ ಗುಡ್‌ನ್ಯೂಸ್‌ ಕೊಡ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! ಏನದು?

Prajwal Revanna Case SIT not issuing notice to Karthik HDK decides to approach Governor and Court
ರಾಜಕೀಯ1 hour ago

Prajwal Revanna Case: ಕಾರ್ತಿಕ್‌ಗೆ ನೋಟಿಸ್‌ ನೀಡದ SIT; ರಾಜ್ಯಪಾಲ, ಕೋರ್ಟ್‌ ಮೊರೆ ಹೋಗಲು ಎಚ್‌ಡಿಕೆ ನಿರ್ಧಾರ

Self Harming
ಕ್ರೈಂ1 hour ago

Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ17 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ20 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ22 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌