ವಯೊಲೆನ್ಸ್‌, ವಯೊಲೆನ್ಸ್, ವಯೊಲೆನ್ಸ್:‌ ಎಲ್ಲರ ಗಮನ ಸೆಳೀತಿದೆ ಈ ಹಾಲಿವುಡ್‌ ವಿಚಾರಣೆ ‌ Vistara News
Connect with us

ಸಿನಿಮಾ

ವಯೊಲೆನ್ಸ್‌, ವಯೊಲೆನ್ಸ್, ವಯೊಲೆನ್ಸ್:‌ ಎಲ್ಲರ ಗಮನ ಸೆಳೀತಿದೆ ಈ ಹಾಲಿವುಡ್‌ ವಿಚಾರಣೆ ‌

ಪೈರೇಟ್ಸ್‌ ಆಫ್‌ ದಿ ಕೆರೀಬಿಯನ್‌ ಸಿನಿಮಾ ನಟ ಜಾನಿ ಡೆಪ್‌ ಮತ್ತು ನಟಿ ಆಂಬರ್‌ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ವಿಚಾರಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ.

VISTARANEWS.COM


on

Koo

ಸದ್ಯ ಹಾಲಿವುಡ್‌ನಲ್ಲಿ ಯಾವುದೇ ಫಿಲಂಗಳಿಗಿಂತ ಅತ್ಯಧಿಕ ಸದ್ದು ಮಾಡುತ್ತಾ ಓಡುತ್ತಿರುವುದು ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ ಎಂಬ ಇಬ್ಬರು ಹೈ ಪ್ರೊಫೈಲ್‌ ನಟರ ಮುರಿದ ದಾಂಪತ್ಯದ, ನಂತರದ ಮಾನನಷ್ಟ ಮೊಕದ್ದಮೆಯ ಕೋರ್ಟ್‌ ವಿಚಾರಣೆಯ ಪ್ರಕರಣ. ಯೂಟ್ಯೂಬ್‌ಗೆ ಹೋದರೆ ಖುದ್ದು ಕೋರ್ಟ್‌ ಟ್ರಯಲ್‌ನ ವಿಡಿಯೋಗಳನ್ನೂ ನೀವು ನೋಡಬಹುದು.

ಅದಿರಲಿ. ನೀವು ಈ ಕೇಸ್‌ನ ಆದ್ಯಂತ ತಿಳಿದುಕೊಳ್ಳಬೇಕಿದ್ದರೆ ಈ ಕತೆಯನ್ನು ಆರಂಭದಿಂದಲೇ ಶುರು ಮಾಡಬೇಕು.

ಜಾನಿ ಡೆಪ್‌, ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಸೀರೀಸ್‌ ಸಿನಿಮಾಗಳಿಂದಾಗಿ ಜಗದ್ವಿಖ್ಯಾತ. ಅವನ ಕಡಲುಗಳ್ಳ ಭೂತದ ಪಾತ್ರ ಮಕ್ಕಳಿಗೂ ಚಿರಪರಿಚಿತ. ಇನ್ನು ಆಂಬರ್‌ ಹರ್ಡ್‌, ಈಕೆ ʼಗೋನ್‌ ಗರ್ಲ್‌ʼ ಫಿಲಂನ ಲೀಡ್‌ ಕ್ಯಾರೆಕ್ಟರ್‌ ಆಗಿ ಹೆಸರು ಮಾಡಿದಳು. ಇಬ್ಬರ ಬುಟ್ಟಿಯಲ್ಲೂ ಹತ್ತಾರು ಫೀಲಂಗಳೂ ಕೆಲವಷ್ಟು ಡೇಟಿಂಗ್-‌ ಪ್ರೇಮ- ಮದುವೆ- ಪ್ರೇಮಭಂಗ- ಇತ್ಯಾದಿಗಳೂ ಇವೆ.

ಇವರಿಬ್ಬರ ರೊಮ್ಯಾನ್ಸ್‌ ಶುರುವಾದುದು 2009ರಲ್ಲಿ. ದಿ ರನ್‌ ಡೈರಿ ಫಿಲಂನಲ್ಲಿ ನಟಿಸುತ್ತಾ ಇದ್ದಾಗ ಇವರಿಬ್ಬರಿಗೂ ಗೆಳೆತನ. ಶವರ್‌ನಲ್ಲಿ ನಿಂತು ಕಿಸ್‌ ಮಾಡುವ ಸೀನ್‌ನಿಂದಲೇ ಅವರಿಬ್ಬರಿಗೂ ಓಹೋ ನಮ್ಮಿಬ್ಬರ ನಡುವೆ ಏನೋ ಇದೆ ಅನ್ನಿಸಲು ಶುರುವಾದದ್ದು. ಅದಕ್ಕೂ ಮುನ್ನ ಇಬ್ಬರೂ ಬೇರೆ ಮದುವೆಯಾಗಿದ್ದರು. 2012ರಲ್ಲಿ ತಮ್ಮ ಹಳೆಯ ಸಂಗಾತಿಗಳಿಂದ ಬೇರೆಯಾದರು. ʼʼಅವಳು ಕಾಳಜಿ ವಹಿಸುತ್ತಾಳೆ, ಪ್ರೀತಿಸುತ್ತಾಳೆ, ಅವಳು ಸ್ಮಾರ್ಟ್‌, ಫನ್ನಿ, ಅರ್ಥ ಮಾಡಿಕೊಳ್ಳುತ್ತಾಳೆ. ನಮ್ಮಿಬ್ಬರ ನಡುವೆ ತುಂಬಾ ಸಂಗತಿಗಳು ಕಾಮನ್‌ ಆಗಿವೆ..ʼʼ ಎಂದೆಲ್ಲ ಆಕೆಯ ಬಗೆಗೆ ಜಾನಿ ಹೇಳಿದ್ದು ಇತ್ತು.

ಎರಡು ವರ್ಷಗಳ ಡೇಟಿಂಗ್‌ ಬಳಿಕ ಅವರಿಬ್ಬರೂ 2014ರಲ್ಲಿ ಮದುವೆಯಾದರು. ಅದೂ ಕೂಡ ಜಾನಿ ಡೆಪ್‌ನ ಖಾಸಗಿ ದ್ವೀಪದಲ್ಲಿ.

ಆದರೆ ಆರಂಭದಿಂದಲೇ ಈ ದಾಂಪತ್ಯ ಮುರಿಯಲಿರುವ ಹಡಗು ಎಂಬುದು ಅರಿವಿಗೆ ಬಂತು. ಅದೂ ಮದುವೆಯಾದ ಮೊದಲ ದಿನದಿಂದಲೇ. ಮದುವೆಯಾದ ಕೆಲವೇ ಗಂಟೆಗಳ ಬಳಿಕ ʼʼನಾನೀಗ ಆಕೆಗೆ ಹೊಡೆಯಬಹುದುʼʼ ಎಂದು ತನ್ನ ಆಪ್ತನಿಗೆ ಡೆಪ್‌ ಹೇಳಿದ್ದು ದಾಖಲಾಗಿತ್ತು.

ಡೆಪ್‌ ಕೈಯಲ್ಲಿದ್ದ ಒಂದು ಟ್ಯಾಟೂ ಬಗ್ಗೆ ಹರ್ಡ್‌ ಕ್ಯಾಶುಯಲ್ಲಾಗಿ ಪ್ರಶ್ನಿಸಿದಾಗ ಡೆಪ್‌ ಮೊದಲ ಬಾರಿಗೆ ಆಕೆಯ ಕಪಾಲಕ್ಕೆ ಬಾರಿಸಿದ. ಆಕೆ ಶಾಕ್‌ಗೆ ಒಳಗಾದಳು. ಅಂದಿನಿಂದ ಆಕೆಯ ಬದುಕು ಬದಲಾಯಿತು. ನಂತರ ಎಂದೂ ದಾಂಪತ್ಯ ಹಳಿಗೆ ಮರಳಲೇ ಇಲ್ಲ.

ಮದುವೆಯಾಗಿ ಹದಿನೈದು ತಿಂಗಳಲ್ಲಿ ಹರ್ಡ್‌ ಡೈವೋರ್ಸ್‌ಗೆ ಅರ್ಜಿ ಹಾಕಿದಳು. ಇವರಿಬ್ಬರ ದಾಂಪತ್ಯದಲ್ಲಿ ನಡೆದ ಹೀನಾತಿಹೀನ ಜಗಳಗಳ ವಿವರಗಳು ಹೊರಬಿದ್ದವು. ಇಬ್ಬರೂ ಪರಸ್ಪರ ಹಿಂಸಾತ್ಮಕವಾಗಿ ಕಿತ್ತಾಡಿಕೊಳ್ಳುತ್ತಿದ್ದರು. ಹೊಡೆದುಕೊಳ್ಳುತ್ತಿದ್ದರು. ಡೆಪ್‌ ಬಿಯರ್‌ ಬಾಟಲ್‌ಗಳಿಂದ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ನಿನಗೆ ಇನ್ಯಾರ ಜೊತೆಗೋ ಸಂಬಂಧ ಇದೆ ಎಂದು ಸಂಶಯಿಸಿ ಆಕೆಯ ತಲೆಕೂದಲು ಹಿಡಿದು ಕೀಳುತ್ತಿದ್ದ. ಮುಖಮೈಥುನಕ್ಕೆ ಬಲಾತ್ಕರಿಸುತ್ತಿದ್ದ. ಕುಡಿದು ಚಿತ್‌ ಆದಾಗ, ಕೊಕೇನ್‌ ಸೇವಿಸಿ ಹೈ ಆದಾಗ, ಲಿಕ್ಕರ್ ಕ್ಯಾಬಿನೆಟ್‌ಗಳನ್ನು ಮುರಿದುಹಾಕುತ್ತಿದ್ದ.

ಹರ್ಡ್‌ ಹಿಂಸೆ ತಾಳಿಕೊಳ್ಳಲಾಗದೆ ಪ್ರತಿಹಿಂಸೆ ನಡೆಸುತ್ತಿದ್ದಳು. ಡೆಪ್‌ ಹೇಳುವ ಪ್ರಕಾರ ಅವಳು ಆತನ ಹಾಸಿಗೆಯಲ್ಲಿ ಮಲ ವಿಸರ್ಜನೆ ಮಾಡಿದ್ದು ಇತ್ತು. ಅಂತೂ ಇಬ್ಬರೂ ಡ್ರಗ್ಸ್‌ ಸೇವಿಸಿದಾಗ ಮನುಷ್ಯರಂತೆ ವರ್ತಿಸುತ್ತಲೇ ಇರಲಿಲ್ಲ ಎನ್ನಬಹುದು. ಮೃಗಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು.

ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಹೊರಬರುತ್ತಿರುವ ಒಂದೊಂದು ಹಿಂಸೆ, ಕಿತ್ತಾಟದ ವಿವರಗಳೂ ಭೀಭತ್ಸವಾಗಿವೆ.

ಕೊನೆಗೂ ಎಂಟು ದಶಲಕ್ಷ ಡಾಲರ್‌ ಕೊಟ್ಟು ಡೆಪ್‌, ಹರ್ಡ್‌ಗೆ ಡೈವೋರ್ಸ್‌ ನೀಡಿ ಸೆಟಲ್‌ ಮಾಡಿಕೊಂಡ.

2018ರಲ್ಲಿ ಹರ್ಡ್‌ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಒಂದು ಲೇಖನ ಬರೆದಳು. ಅದರಲ್ಲಿ ʼʼನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆʼʼ ಎಂದು ಬರೆದುಕೊಂಡಳು. ಇದನ್ನು ನೋಡಿ ಡೆಪ್‌ಗೆ ರೇಗಿತು. ಆತ ಆಕೆಯ ಮೇಲೆ 50 ಲಕ್ಷ ಡಾಲರ್‌ನ ಮಾನನಷ್ಟ ಕೇಸ್‌ ಹಾಕಿದ. ಪ್ರತಿಯಾಗಿ ಹರ್ಡ್‌ ಕೂಡ ಡೆಪ್‌ ಮೇಲೆ ಡೊಮೆಸ್ಟಿಕ್‌ ವಯೊಲೆನ್ಸ್‌ನ ಕೇಸ್‌ ಹಾಕಿದಳು. ಅದೇ ಈಗ ವಿಚಾರಣೆಯಲ್ಲಿದೆ.

ಇದನ್ನೂ ಓದಿ: ಹಾಲಿವುಡ್‌ ನಟನ ಸಂಸಾರದಲ್ಲೂ ಮೂಗು ತೂರಿಸಿದರೇ ಎಲಾನ್‌ ಮಸ್ಕ್?‌

ಈ ನಡುವೆ ಹರ್ಡ್‌ ಒಬ್ಬಳು ಹೆಣ್ಣುಮಗಳನ್ನು ಸರೊಗಸಿಯ ಮೂಲಕ ಪಡೆದಳು. ಅದರ ತಾಯಿಯೂ ತಂದೆಯೂ ತಾನೇ ಎಂದು ಹೇಳಿಕೊಂಡಳು.

ಈ ನಡುವೆ ಇನ್ನೊಂದು ಅಸಹ್ಯಕರ ಸಂಗತಿ ಹೊರಬಿತ್ತು. ನಮ್ಮ ದಾಂಪತ್ಯ ನಡೆದಿದ್ದಾಗಲೇ ಆಂಬರ್‌ ಹರ್ಡ್‌ ಮತ್ತು ಕಾರಾ ಡೆವಿಯನೆ ಎಂಬ ಇನ್ನೊಬ್ಬ ನಟಿಯ ಜೊತೆಗೆ ಉದ್ಯಮಿ ಎಲಾನ್‌ ಮಸ್ಕ್‌ ತ್ರೀಸಮ್‌ ನಡೆಸಿದ್ದ ಎಂದು ಕೂಡ ಜಾನಿ ಡೆಪ್‌ ಆರೋಪಿಸಿದ್ದ. ಮಸ್ಕ್‌ ಇದನ್ನು ಅಲ್ಲಗಳೆದ. ಹರ್ಡ್-‌ ಡೆಪ್‌ ಡೈವೋರ್ಸ್‌ ಆದ ಬಳಿಕವೇ ನಾನು ಹರ್ಡ್‌ ಜೊತೆ ಸಾಂಗತ್ಯ ಬೆಳೆಸಿದ್ದು ಎಂದು ಹೇಳಿದ. ಕಾರಾ ನನಗೆ ಗೆಳತಿ ಮಾತ್ರ ಎಂದ.

ಹೀಗೆ ಕೋರ್ಟಡ್‌ ವಿಚಾರಣೆ ಹೊಸ ಹೊಸ ಸತ್ಯಗಳನ್ನು ಹೊರಗೆಡಹುತ್ತಲೇ ನಡೆದಿದೆ. ಸೆಲೆಬ್ರಿಟಿ ದಾಂಪತ್ಯಗಳ ಬಗ್ಗೆ ಕಣ್ಣು ತೆರೆಸುವುದು, ಅವುಗಳ ಕತ್ತಲೆ ಕೋಣೆಗಳ ಅಸಹ್ಯ ಮಗ್ಗುಲುಗಳ ಮೇಲೆ ಬೆಳಕು ಚೆಲ್ಲುವುದಂತೂ ಇದರಿಂದ ಆಗಿದೆ. ಎಲ್ಲಿ ಹೋಗಿ ನಿಲ್ಲುತ್ತದೋ ತಿಳಿಯದು.

ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹೇಗೆ ಸಹಾಯ ಮಾಡಬೇಕು?: ಇಲ್ಲಿವೆ ಪ್ರಮುಖ ಟಿಪ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

South Cinema

Telugu star Naresh: ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ನರೇಶ್‌, ಪವಿತ್ರಾ ಲೋಕೇಶ್‌ ಹೇಳಿದ್ದೇನು?

Telugu star Naresh: ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ.

VISTARANEWS.COM


on

Edited by

naresh and pavitra lokesh Live in Relationship
Koo

ಬೆಂಗಳೂರು: ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ (Telugu star Naresh) ಅಭಿನಯದ ‘ಮಳ್ಳಿ ಪೆಳ್ಳಿ’ ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನರೇಶ್- ಪವಿತ್ರಾ ಲವ್‌ಸ್ಟೋರಿಯಲ್ಲಿ ನಿರ್ದೇಶಕ ಎಂ. ಎಸ್ ರಾಜು ತೆರೆಗೆ ತಂದಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ಇದೀಗ ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ.

ಯೂಟ್ಯೂಬ್‌ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ನಿಮಗೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದೆಯಾ? ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್‌ ಮಾತನಾಡಿ ʻʻಸಾಕಷ್ಟು ಮಕ್ಕಳಿಗೆ ಪ್ರಪಂಚದಲ್ಲಿ ತಂದೆ ತಾಯಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮಕ್ಕಳನ್ನು ಪಡೆಯುವ, ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ? ಎಂದಿದ್ದಾರೆ. ನಾವು ಜೋಡಿಯಾಗಿ ಮಾಡೋಕೆ ಸಾಕಷ್ಟು ವಿಷಯಗಳಿವೆʼʼಎಂದರು.

ನರೇಶ್‌ ಮಾತನಾಡಿ ʻʻರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಬಹಳ ದೊಡ್ಡದು. ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಮಗು ಪಡೆಯಲು ನಾವು ದೈಹಿಕವಾಗಿ ಅರ್ಹರಾಗಿದ್ದೇವೆ. ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ನನಗೆ ಪವಿತ್ರಾ ದೇವತೆಯಂತೆ, ತಾಯಿಯಂತೆ, ಮಡದಿಯಂತೆ, ಮಗಳಂತೆ, ಸ್ನೇಹಿತೆಯಂತೆ ಕಾಣಿಸುತ್ತಾರೆ. ಆಕೆ ಬಂದ ಮೇಲೆ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆʼʼ ಎಂದರು.

ಇದನ್ನೂ ಓದಿ: Pavitra Naresh: ನನ್ನ ತಾಯಿಯ ಬಳಿಕ ಇನ್ನೊಬ್ಬ ತಾಯಿಯನ್ನು ಭೇಟಿಯಾದೆ: ನರೇಶ್‌ ಭಾವುಕ!

ಮೇ 26ಕ್ಕೆ ʻಮಳ್ಳಿ ಪೆಳ್ಳಿʼ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಂಡಿದೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.‌

Continue Reading

South Cinema

IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

IIFA 2023 Winners Full List: ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ, ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು.

VISTARANEWS.COM


on

Edited by

IIFA 2023 Winners Hrithik Roshan and anil Kapoor
Koo

ಬೆಂಗಳೂರು: ಅಬುಧಾಬಿಯಲ್ಲಿ ಮೇ 27ರಂದು ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2023)ರಲ್ಲಿ (IIFA 2023 Winners Full List) ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಸೈಫ್ ಅಲಿ ಖಾನ್ ನಟಿಸಿದ ವಿಕ್ರಮ್ ವೇದಾದಲ್ಲಿ ಅವರ ಸಾಹಸಮಯ ಅಭಿನಯಕ್ಕಾಗಿ ಟ್ರೋಫಿಯನ್ನು ಪಡೆದರು. ಅಷ್ಟೇ ಅಲ್ಲದೇ ʻಗಂಗೂಬಾಯಿ ಕಥಿಯಾವಾಡಿʼಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ʻಗಂಗೂಬಾಯಿ ಕಥಿಯಾವಾಡಿ ಸಿನಿಮಾಗೆ ಹಲವು ಪ್ರಶಸ್ತಿಗಳು ಸಂದಿವೆ.

ಹಿರಿಯ ನಟ ಅನಿಲ್ ಕಪೂರ್ ಅವರು IIFA 2023ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರು. ʻಜಗ್‌ಜಗ್ ಜೀಯೋದಲ್ಲಿʼನ ಅವರ ಪಾತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು.

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಕಮಲ್ ಹಾಸನ್‌ಗೆ ಪ್ರಶಸ್ತಿ

ಹಿರಿಯ ನಟ ಕಮಲ್ ಹಾಸನ್ ಅವರು ಐಐಎಫ್‌ಎ 2023ರಲ್ಲಿ (IIFA 2023) ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿದಾಗ ಭಾರೀ ಕರತಾಡನದ ಪಡೆದರು. ಗಾಯಕ ಮತ್ತು ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಕಮಲ್‌ ಹಾಸನ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಮಲ್ ಹಾಸನ್ ಟ್ರೋಫಿ ಸ್ವೀಕರಿಸಿದ ತಕ್ಷಣ, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ತಮ್ಮ ಸ್ಥಾನದಿಂದ ಎದ್ದು ನಿಂತು ನಟನನ್ನು ಶ್ಲಾಘಿಸಿದರು.

ವಿಕ್ರಮ್ ವೇದಾ ತಮಿಳು ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಹೃತಿಕ್‌ ಹಾಗೂ ಸೈಫ್‌ ನಟಿಸಿದ್ದರು.

ಇದನ್ನೂ ಓದಿ: Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್‌ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್​

ಬ್ರಹ್ಮಾಸ್ತ್ರ ಮತ್ತು ಗಂಗೂಬಾಯಿ ಕಾಠಿಯಾವಾಡಿಗೆ ದೊಡ್ಡ ಗೆಲುವು

ಬಾಲಿವುಡ್ ಫ್ಯಾಂಟಸಿ ಚಿತ್ರ ಬ್ರಹ್ಮಾಸ್ತ್ರ: ಭಾಗ ಒಂದು – ಶಿವ, ಮತ್ತು ಜೀವನಚರಿತ್ರೆ ಗಂಗೂಬಾಯಿ ಕಾಠಿಯಾವಾಡಿ ಈ ವರ್ಷದ IIFAನಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶ್ರೇಯಾ ಘೋಷಾಲ್ ಮತ್ತು ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕಿ, ಗಾಯಕಿ ವಿಭಾಗ, ಹಾಗೆಯೇ ಮೌನಿ ರಾಯ್‌ ಅತ್ಯುತ್ತಮ ಪೋಷಕ ನಟಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಮಗ, ಬಾಬಿಲ್ ಖಾನ್, ʻಕಾಲಾʼ ಚಿತ್ರಕ್ಕಾಗಿ ಬೆಸ್ಟ್‌ ಡೆಬ್ಯೂಟ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್ ಬೆಸ್‌ ಡೆಬ್ಯೂಟ್‌ ಫಿಮೇಲ್‌ ಅವಾರ್ಡ್‌ ಪಡೆದುಕೊಂಡರು.

ಗಂಗೂಬಾಯಿ ಕಾಠಿಯಾವಾ ಡಿಸಿನಿಮಾದ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಛಾಯಾಗ್ರಹಣ, ಚಿತ್ರಕಥೆ ಮತ್ತು ಸಂಭಾಷಣೆಗಾಗಿ ಟ್ರೋಫಿಗಳನ್ನು ಗೆದ್ದುಕೊಂಡಿತು. ಈ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದರು.

ಇದನ್ನೂ ಓದಿ: Pavan Wadeyar: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್‌ಗೆ ದುಬೈನಲ್ಲಿ ಸನ್ಮಾನ

ಪ್ರಶಸ್ತಿಗಳ ವಿವರ ಇಲ್ಲಿದೆ!

  • ಅತ್ಯುತ್ತಮ ಚಿತ್ರ: ದೃಶ್ಯಂ 2
  • ಅತ್ಯುತ್ತಮ ನಿರ್ದೇಶಕ: ಆರ್ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್
  • ಅತ್ಯುತ್ತಮ ನಟಿ : ಗಂಗೂಬಾಯಿ ಕಾಠಿಯಾವಾಡಿಗಾಗಿ ಆಲಿಯಾ ಭಟ್
  • ಅತ್ಯುತ್ತಮ ನಟ : ವಿಕ್ರಮ್ ವೇದಕ್ಕಾಗಿ ಹೃತಿಕ್ ರೋಷನ್
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಬ್ರಹ್ಮಾಸ್ತ್ರ ಸಿನಿಮಾದ ಮೌನಿ ರಾಯ್: ಭಾಗ ಒಂದು – ಶಿವ
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ : ಜಗ್ ಜಗ್ ಜೀಯೋಗಾಗಿ ಅನಿಲ್ ಕಪೂರ್
  • ಫ್ಯಾಷನ್‌ ವಿಭಾಗ : ಮನೀಶ್ ಮಲ್ಹೋತ್ರಾ
  • ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಕಮಲ್ ಹಾಸನ್
  • ಅತ್ಯುತ್ತಮ ಅಡಾಪ್ಟೆಡ್ ಸ್ಟೋರಿ : ಆಮಿಲ್ ಕೀಯಾನ್ ಖಾನ್ ಮತ್ತು ಅಭಿಷೇಕ್ ಪಾಠಕ್ ದೃಶ್ಯಂ 2
  • ಅತ್ಯುತ್ತಮ ಮೂಲ ಕಥೆ: ಡಾರ್ಲಿಂಗ್ಸ್‌ಗಾಗಿ ಪರ್ವೀಜ್ ಶೇಖ್ ಮತ್ತು ಜಸ್ಮೀತ್ ರೀನ್
  • ಪ್ರಾದೇಶಿಕ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ: ರಿತೇಶ್ ದೇಶಮುಖ್ ನಿರ್ದೇಶನದ ಮರಾಠಿ ಚಲನಚಿತ್ರ ವೇದ್
  • ಬೆಸ್ಟ್‌ ಡೆಬ್ಯೂಟ್‌ ಅವಾರ್ಡ್‌ (ಪುರುಷರ ವಿಭಾಗ): ಗಂಗೂಬಾಯಿ ಕಾಠಿಯಾವಾಡಿಗಾಗಿ ಶಾಂತನು ಮಹೇಶ್ವರಿ ಮತ್ತು ಕ್ಲಾಗಾಗಿ ಬಾಬಿಲ್ ಖಾನ್
  • ಬೆಸ್ಟ್‌ ಡೆಬ್ಯೂಟ್‌ ಅವಾರ್ಡ್‌ (ಮಹಿಳೆಯ ವಿಭಾಗ): ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್
  • ಅತ್ಯುತ್ತಮ ಹಿನ್ನೆಲೆ ಗಾಯಕಿ : ಬ್ರಹ್ಮಾಸ್ತ್ರ, ಶ್ರೇಯಾ ಘೋಷಾಲ್
  • ಅತ್ಯುತ್ತಮ ಹಿನ್ನೆಲೆ ಗಾಯಕ: ಬ್ರಹ್ಮಾಸ್ತ್ರದ ಕೇಸರಿಯಾ ಹಾಡಿಗೆ ಅರಿಜಿತ್ ಸಿಂಗ್
  • ಅತ್ಯುತ್ತಮ ಸಂಗೀತ ನಿರ್ದೇಶನ: ಬ್ರಹ್ಮಾಸ್ತ್ರಕ್ಕಾಗಿ ಪ್ರೀತಮ್
  • ಅತ್ಯುತ್ತಮ ಗೀತರಚನೆಕಾರ: ಅಮಿತಾಭ್ ಭಟ್ಟಾಚಾರ್ಯ ಬ್ರಹ್ಮಾಸ್ತ್ರದ ಕೇಸರಿಯಾ
  • ಅತ್ಯುತ್ತಮ ಛಾಯಾಗ್ರಹಣ: ಗಂಗೂಬಾಯಿ ಕಾಠಿಯಾವಾಡಿ
  • ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಠಿಯಾವಾಡಿ
  • ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ
  • ಶೀರ್ಷಿಕೆ ಗೀತೆಗಾಗಿ ಅತ್ಯುತ್ತಮ ನೃತ್ಯ ಸಂಯೋಜನೆ: ಭೂಲ್ ಭುಲೈಯಾ 2
  • ಅತ್ಯುತ್ತಮ ಧ್ವನಿ ವಿನ್ಯಾಸ: ಭೂಲ್ ಭುಲೈಯಾ 2
  • ಅತ್ಯುತ್ತಮ ಸಂಕಲನ: ದೃಶ್ಯಂ 2
  • ಅತ್ಯುತ್ತಮ ಹಿನ್ನೆಲೆ ಸಂಗೀತ: ವಿಕ್ರಮ್ ವೇದಾ
  • ಸೌಂಡ್‌ ಮಿಕ್ಸಿಂಗ್‌: ಮೋನಿಕಾ ಓ ಮೈ ಡಾರ್ಲಿಂಗ್
Continue Reading

ಕ್ರಿಕೆಟ್

ಸೋಶಿಯಲ್​ ಮೀಡಿಯಾಗಳಲ್ಲಿ ಪರಸ್ಪರ ಅನ್​ಫಾಲೊ ಮಾಡಿಕೊಂಡ ಶುಭ್​​ಮನ್​, ಸಾರಾ! ಏನಾಯಿತು ಅವರಿಗೆ?

ಶುಭ್​ಮನ್​ ಮತ್ತು ಸಾರಾ ಅಲಿ ಖಾನ್​ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್​ಫಾಲೊ ಮಾಡುವ ಮೂಲಕ ಬೇರ್ಪಟ್ಟಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.

VISTARANEWS.COM


on

Sara ali khan
Koo

ಮುಂಬಯಿ: ಶುಭ್​ಮನ್​ ಗಿಲ್​ ಹಾಗೂ ಸಾರಾ ಅಲಿ ಖಾನ್ ನಡುವಿನ ಹೆಸರು ಕಳೆದ ಕೆಲವು ತಿಂಗಳಿಂದ ವದಂತಿಯ ವಿಷಯವಾಗಿದೆ. ಅವರು ಆಗಾಗ ಅಲ್ಲಿಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದೆ ಅದಕ್ಕೆ ಕಾರಣ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದರೂ. ಅವರು ತಮ್ಮ ಸಂಬಧವನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಅಥವಾ ನಿರಾಕರಿಸಿರಲಿಲ್ಲ. ಅದೇನೇ ಇದ್ದರೂ, ಇತ್ತೀಚಿನ ವರದಿಗಳ ಪ್ರಕಾರ ಶುಬ್ಮನ್ ಮತ್ತು ಸಾರಾ ಪ್ರತ್ಯೇಕಗೊಂಡಿದ್ದಾರೆ. ಅದೇ ರೀತಿ ಅವರು ಸೋಶಿಯಲ್​ ಮೀಡಿಯಾಗಳಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿದೆ.

ಅವರಿಬ್ಬರು ಯಾಕೆ ಅನ್​ಫಾಲೊ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಊಹಾಪೋಹ ಸುದ್ದಿಗಳ ಪ್ರಕಾರ ಅವರಿಬ್ಬರೂ ಬ್ರೇಕ್​ಅಪ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರಾ ಎಂಬ ಹೆಸರು ಶುಭ್​ಮನ್​ ಗಿಲ್​ ಹೆಸರಿನ ಜತೆ ತಳುಕು ಹಾಕಿಕೊಂಡಿತತ್ತು. ಅವರು ಐಪಿಎಲ್​ ಪಂದ್ಯವಾಡುವ ವೇಳೆ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಮೈದಾನಕ್ಕೆ ಇಳಿಯುವ ಸಂದರ್ಭದಲ್ಲಿ ಪ್ರೆಕ್ಷಕರು ಸಾರಾ, ಸಾರ ಎಂದು ಕೂಗುವ ಮೂಲಕ ಹುರಿದುಂಬಿಸುತ್ತಿದ್ದರು.

ಸಾರಾ ಅಲಿಖಾನ್​ ಮತ್ತು ಗಿಲ್ ಎಂದಿಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಮಾಷೆಗಳಲ್ಲಿ ಭಾಗಿಯಾಗುವುದು ಅಥವಾ ಪ್ರತಿಕ್ರಿಯಿಸುವು ನಡೆದಿರಲಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪರಸ್ಪರ ಅನುಸರಿಸುತ್ತಿದ್ದರು. ಇದೀಗ ಅವರಿಬ್ಬರ ಪಾಯೋಯರ್​ಗಳ ಪಟ್ಟಿಯಲ್ಲಿ ಪರಸ್ಪರ ಹೆಸರುಗಳು ಕಾಣಿಸುತ್ತಿಲ್ಲ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬುದಾಗಿ ಅಭಿಮಾನಿಗಳು ಊಹಿಸುತ್ತಿದ್ದಾರೆ.

ಸಾರಾ ಅಲಿ ಖಾಣ್​ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಶುಬ್ಮನ್ ಗಿಲ್ ಅಥವಾ ಬೇರೆ ಯಾರೊಂದಿಗಾದರೂ ತನ್ನ ಸಂಬಂಧದ ಕುರಿತು ನಟಿ ಎಂದಿಗೂ ಪ್ರತಿಕ್ರಿಯೆ ಕೊಟ್ಟಿಲ್ಲ. ಮತ್ತೊಂದೆಡೆ, ಗಿಲ್ ತಮ್ಮ ತಂಡ ಗುಜರಾತ್ ಟೈಟನ್ಸ್ ಪರ ಐಪಿಎಲ್ ಪಂದ್ಯಗಳಲ್ಲಿ ಒಂದರ ನಂತರ ಒಂದರಂತೆ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗ ಸಂಖ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ.

ಸುಳಿವು ಕೊಟ್ಟಿದ್ದ ಗಿಲ್​

ಶುಭ್​ಮನ್​ ಗಿಲ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದವರು. ಬಳಿಕ ಅವರಿಬ್ಬರೂ ಬೇರ್ಪಟ್ಟಿದ್ದರು ಎನ್ನಲಾಗಿದೆ. ಇದಾದ ಬಳಿಕ ನಟಿ ಸಾರಾ ಅಲಿ ಖಾನ್ ಜತೆ ಡಿನ್ನರ್​ಗೆ ಶುಭ್​ಮನ್ ಹೋಗಿದ್ದು ಸುದ್ದಿಯಾಗಿತ್ತು. ಜತೆಗೆ ವಿಮಾನವೊಂದರಲ್ಲಿ ಜತೆಯಾಗಿ ಪ್ರಯಾಣ ಮಾಡಿದ್ದರ ವಿಡಿಯೊಗಳು ಬೆಳಕಿಗೆ ಬಂದಿದ್ದವು.

ಕೆಲವು ತಿಂಗಳ ಹಿಂದೆ, ಸೋನಮ್ ಬಜ್ವಾ ಅವರೊಂದಿಗಿನ ಸಂದರ್ಶನದ ಸಮಯದಲ್ಲಿ ಮಾತನಾಡಿದ ಗಿಲ್, ಸಾರಾ ಜತೆಗಿನ ಡೇಟಿಂಗ್ ಸತ್ಯವೂ ಇರಬಹುದು, ಇಲ್ಲದೆಯೂ ಇರಬಹುದು ಎಂದು ಹೇಳಿದ್ದರು. ಈ ಮೇಲೆ ಅಭಿಮಾನಿಗಳ ಅನುಮಾನ ಹೆಚ್ಚಾಗಿತ್ತು.

ಇದನ್ನೂ ಓದಿ : Shubhman Gill | ಶುಭ್​ಮನ್​ ಗೆಳತಿ ಯಾರು? ಸಾರಾ ಅಲಿಖಾನ್ ಅಥವಾ ಸಾರಾ ತೆಂಡೂಲ್ಕರ್​?

“ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ?” ಸೋನಮ್ ಬಾಜ್ವಾ, ಶುಭ್​ಮನ್​ ಗಿಲ್ ಅವರನ್ನು ಕೇಳಿದ್ದರು. ಅದಕ್ಕೆ ಗಿಲ್​ ನಾಚಿಕೆಪಟ್ಟು “ಇರಬಹುದು, ಇಲ್ಲದಿರಬಹುದು” ಎಂದು ಉತ್ತರಿಸಿದ್ದರು.

ಆದರೆ ಸಾರಾ ಯಾರೆಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ತೆಂಡೂಲ್ಕರ್ ಅವರ ಮಗಳು ಸಾರಾ ಅಥವಾ ಪಟೌಡಿ ರಾಜಕುಮಾರಿ ಸಾರಾ ಎಂಬುದಾಗಿ ಅವರು ಹೇಳಿರಲಿಲ್ಲ.

Continue Reading

South Cinema

V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್

V manohar: ಜೂನ್ 9ರಂದು ಚಿತ್ರಮಂದಿರಗಳಲ್ಲಿ ದರ್ಬಾರ್‌ ಸಿನಿಮಾ ಬಿಡುಗಡೆಯಾಗಲಿದೆ. 80 ರಿಂದ 100 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

VISTARANEWS.COM


on

Edited by

Darbar Film
Koo

ಬೆಂಗಳೂರು: 23 ವರ್ಷಗಳ ನಂತರ ವಿ.ಮನೋಹರ್ (V Manohar) ನಿರ್ದೇಶನಕ್ಕೆ ಇಳಿದಿದ್ದಾರೆ. ಜೂನ್ 9ರಂದು ಚಿತ್ರಮಂದಿರಗಳಲ್ಲಿ `ದರ್ಬಾರ್‌’ ಸಿನಿಮಾ ಬಿಡುಗಡೆಯಾಗಲಿದೆ. 80 ರಿಂದ 100 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಈ ಕುರಿತಂತೆ ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, “ಸುಮಾರು 23 ವರ್ಷಗಳ ನಂತರ ನಾನು ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಕಾರಣ ಈ ಸಿನಿಮಾದ ನಟ ಸತೀಶ್‌. ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ರಾಜಕೀಯ ವಿಡಂಬನೆಯ ಕಥೆಯನ್ನು “ದರ್ಬಾರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆʼʼ ಎಂದರು.

Darbar Film kannada Press Meet

ʻʻದರ್ಬಾರ್’ ಸಿನಿಮಾ ಶುರುವಾದ ನಂತರ ಕೋವಿಡ್ ಹಚ್ಚಾಯಿತು, ಆ ಭಯದಲ್ಲಿಯೇ ಸಿನಿಮಾದ ಶೂಟಿಂಗ್‌ ಮುಗಿಸಿದ್ದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಬಹುತೇಕ ಶೂಟಿಂಗ್‌ ನಡೆಸಲಾಗಿದೆ. ಈ ಚಿತ್ರದಲ್ಲಿ ಹಲವಾರು ಕಲಾ ಬಳಗ ಹಾಗೂ ರಂಗ ಕಲಾವಿದರ ತಂಡ ಇದೆʼʼಎಂದು ನಿರ್ಮಾಪಕ ಸತೀಶ್‌ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: Manoj Bajpayee: ಹೊಸ ದಾಖಲೆ ಬರೆದ ಮನೋಜ್​ ಬಾಜಪೇಯಿ ಸಿನಿಮಾ!

3.5 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮದ್ದೂರು ತಾಲೂಕಿನ ಮಾರದೇವನಹಳ್ಳಿ, ಚನ್ನಸಂದ್ರ, ಆತಗೂರು ತೈಲೂರು, ನಿಡಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

Continue Reading
Advertisement
french open novak djokovic
ಕ್ರೀಡೆ11 mins ago

French Open 2023: ಇಂದಿನಿಂದ ಫ್ರೆಂಚ್‌ ಓಪನ್‌; ನಡಾಲ್‌ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ

Shah Rukh Khan And Akshay kumar Voice Over to New parliament building Video
ದೇಶ17 mins ago

ಪ್ರಧಾನಿ ಮೋದಿ ಮನವಿಗೆ ಸ್ಪಂದನೆ; ಸಂಸತ್​ ಭವನದ ವಿಡಿಯೊಕ್ಕೆ ಧ್ವನಿ ಕೊಟ್ಟ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​

naresh and pavitra lokesh Live in Relationship
South Cinema27 mins ago

Telugu star Naresh: ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ನರೇಶ್‌, ಪವಿತ್ರಾ ಲೋಕೇಶ್‌ ಹೇಳಿದ್ದೇನು?

IIFA 2023 Winners Hrithik Roshan and anil Kapoor
South Cinema30 mins ago

IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

new Parliament building and coffin box
ದೇಶ34 mins ago

New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

ipl records gill
ಕ್ರಿಕೆಟ್47 mins ago

IPL 2023: ಕೊಹ್ಲಿ ದಾಖಲೆ ಮುರಿಯುವರೇ ಶುಭಮನ್​ ಗಿಲ್​?

aditya ranjan ias
ಅಂಕಣ58 mins ago

ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS

New Parliament building inauguration Live Video Here
ದೇಶ1 hour ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

Tokyo Olympics Champion Risako Kawai
ಕ್ರೀಡೆ2 hours ago

Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

RTI Activist Harish Halli Died
ಕರ್ನಾಟಕ2 hours ago

ದಾವಣಗೆರೆಯಲ್ಲಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಆರ್​ಟಿಐ ಕಾರ್ಯಕರ್ತ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

New Parliament building inauguration Live Video Here
ದೇಶ1 hour ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

horoscope today
ಪ್ರಮುಖ ಸುದ್ದಿ7 hours ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Laxmi Hebbalkar oath taking as a minister
ಕರ್ನಾಟಕ18 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ2 days ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ2 days ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ3 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

ಟ್ರೆಂಡಿಂಗ್‌

error: Content is protected !!