ಸಿನಿಮಾ
Movie Review | ಕಣ್ಣಾಮುಚ್ಚಾಲೆ ಆಟದಂತಿರುವ ʼ 21 ಅವರ್ಸ್ ʼ
21 ಅವರ್ಸ್ ಚಿತ್ರ ಒಂದು ಫುಲ್ ಪ್ಯಾಕೇಜ್ ಸಸ್ಪೆನ್ಸ್ ಸಿನಿಮಾ. ಒಂದು ಘಟನೆಯ ಸುತ್ತಲೂ ತಿರುಗುವ ಕಣ್ಣಾಮುಚ್ಚಾಲೆ ಆಟದಂತೆ ಕಾಣುವ ಚಿತ್ರ. ಸಿನಿಮಾದ ವಿಮರ್ಶೆ ಇಲ್ಲಿದೆ.
ಚಿತ್ರ: 21 ಅವರ್ಸ್
ನಿರ್ದೇಶನ: ಜಯಶಂಕರ್ ಪಂಡಿತ್
ನಿರ್ಮಾಪಕ: ಬಾಲಕೃಷ್ಣ, ಸುನೀಲ್ ರಾಮೇ ಗೌಡ, ಮಹಾದೇವ್ ಪ್ರವೀಣ್, ಅಭಿಷೇಕ್ ತುಮಕೂರ್
ಬ್ಯಾನರ್: ಅಹಂ ಕಾನ್ಸೆಪ್ಟಂ
ಸಂಗೀತ: ರುಪರ್ಟ್ ಫರ್ನಾಂಡಿಸ್
ಛಾಯಗ್ರಹಣ: ಎಸ್. ತಿರ್ರು
ತಾರಾಗಣ: ಡಾಲಿ ಧನಂಜಯ್, ದುರ್ಗಾ ಕೃಷ್ಣ, ರಾಹುಲ್ ಮಾಧವ್, ಸುದೇವ್ ನಾಯರ್, ದಿನೇಶ್ ಬಾಬು ಇತರರು
ರೇಟಿಂಗ್: 3/5
21 ಅವರ್ಸ್ ಸಸ್ಪೆನಸ್/ಥ್ರಿಲ್ಲರ್ ಜಾನರ್ ಸಿನಿಮಾ. ಸಸ್ಪೆನ್ಸ್ ಸಿನಿಮಾ ಮಾಡುವಾಗ ಎರಡು ವಿಷಯ ಮುಖ್ಯವಾಗಿ ಗಮನದಿಲ್ಲಡಬೇಕಾಗಿತ್ತದೆ. 1. ಸಿನಿಮಾದಲ್ಲಿ ಕೊನೆವರೆಗೂ ಕುತೂಹಲವನ್ನು ಕಾಪಾಡಬೇಕು. 2. ಸಸ್ಪೆನ್ಸ್ ಕಾಪಾಡಿಕೊಳ್ಳುವ ಧಾವಂತದಲ್ಲಿ ಚಿತ್ರ ಬೋರ್ ಆಗಬಾರದು. ಈ ಎರಡು ವಿಷಯವನ್ನೂ ನಿರ್ದೇಶಕ ಮನದಲ್ಲಿಟ್ಟುಕೊಂಡು ಕತೆಯನ್ನು ಹೆಣೆದಿರುವುದು 21 ಅವರ್ಸ್ ಚಿತ್ರದಲ್ಲಿ ಕಾಣುತ್ತದೆ.
ಗಮನ ಸೆಳೆಯುವ ಕಥೆ!
ಚಿತ್ರವು ಮಾಧುರಿ ಎಂಬ ಹುಡುಗಿ ನಾಪತ್ತೆ ಆದ ದೃಶ್ಯದಿಂದ ಆರಂಭವಾತ್ತದೆ. ರೋಚಕವಾಗಿ ಆರಂಭವಾಗುವ ಸಿನಿಮಾ ಆ ಹುಡುಗಿಯನ್ನು ಪತ್ತೆ ಮಾಡುವ ಸುತ್ತ ಕಥೆ ಸಾಗುತ್ತದೆ. 21 ಗಂಟೆಗಳಲ್ಲಿ ನಡೆಯುವ ಒಂದು ರೋಚಕ ಪತ್ತದಾರಿ ಕಥೆ ಇದಾಗಿದೆ. ಮಾಧುರಿ ನಾಪತ್ತೆ ಆಗಿದ್ದು ಹೇಗೆ? ಎಲ್ಲಿ ಹೋಗುತ್ತಾಳೆ? ಅವಳು ನಾಪತ್ತೆ ಆಗಲು ಕಾರಣ ಯಾರು? ಈ ಬಗ್ಗೆ ಒಬ್ಬ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಾರೆ.
ಸರಳವಾದ ಕಥೆಯಂತೆ ಕಂಡರೂ ಚಿತ್ರವು ಸಾಗುವ ರೀತಿಯಿಂದಾಗಿ ಅಲುಗಾಡದಂತೆ ಕುಳಿತು ನೋಡುವಂತೆ ಮಾಡಿದೆ. ನಿರ್ದೇಶಕ ಜಯಶಂಕರ್ ಪಂಡಿತ್ ಹಂತ ಹಂತಕ್ಕೂ ಒಂದು ತಿರುವು ನೀಡಿ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದಾರೆ. ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಈ ಹಿಂದೆ ಟ್ರೇಲರ್ ಬಿಡುಗಡೆಯಾದಾಗ ಒಳ್ಳೆಯ ಸಸ್ಪೆನ್ಸ್ ಸಿನಿಮಾ ಎಂಬ ಭರವಸೆ ಮೂಡಿಸಿತ್ತು.
ಪರದೆ ಮೇಲೆ ಮೆರೆದ ಡಾಲಿ!
ಡಾಲಿ ಧನಂಜಯ್ ಇತ್ತೀಚೆಗೆ ಅನೇಕ ವಿಭಿನ್ನ ಪಾತ್ರಗಳ ಸಿನಿಮಾ ಮಾಡುತ್ತಿರುವುದ ಗಮನಾರ್ಹ. ಈ ಸಿನಿಮಾದಲ್ಲಿ ಕೂಡ ಡಾಲಿ ಧನಂಜಯ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ತನಿಖೆ ನಡೆಸುವ ಶ್ರೀಕಾಂತ್ ಪಾತ್ರದಲ್ಲಿ ಧನಂಜಯ್ ಅಭಿನಯ ಗಮನ ಸೆಳೆಯುತ್ತದೆ. ಒಬ್ಬ ವಿಕೆಡ್ ಪೊಲೀಸ್ ಅಧಿಕಾರಿಯ ರೀತಿಯಲ್ಲಿ ಅಭಿನಯಿಸಿದ್ದಾರೆ. ಅವರ ಡೈಲಾಗ್ ಶೈಲಿ, ಕೆಲವೊಮ್ಮೆ ರಾಕ್ಷಸನಂತೆ ಹಾಗೂ ಕೆಲವೊಮ್ಮೆ ತೋರುವ ಕುಹಕ ನಗು ರೋಮಾಂಚನಗೊಳಿಸುತ್ತದೆ.
ಹೀರೊ ಹಾಗೂ ವಿಲ್ಲನ್ ಮಿಶ್ರಿತವಾದ ಅವರ ಪಾತ್ರದ ಅಭಿನಯ ಈ ಚಿತ್ರದ ಸಿಗ್ನೇಚರ್.
ಮಾಧುರಿ ಪಾತ್ರದಲ್ಲಿ ಕಾಣಿಸಿಕೊಂಡ ದುರ್ಗಾ ಕೃಷ್ಣ ಅವರ ಅಭಿನಯ ಹಾಗೂ ರೆಂಜಿತ್ ಮೆನನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದೇವ್ ನಾಯರ್ ಅವರ ಅಭಿನಯ ಸಾಮಾನ್ಯ. ಈ ಇಬ್ಬರ ಅಭಿನಯಕ್ಕೆ ಹೋಲಿಸಿದರೆ ರಾಹುಲ್ ಮಾಧವ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಈ ಚಿತ್ರದಲ್ಲಿ ವಿಶೇಷ ಲವ್ ಸ್ಟೋರಿ ಹಾಗೂ ಡಿಸ್ಟರ್ಬ್ ಮಾಡುವ ರೀತಿಯಲ್ಲಿ ಹಾಡುಗಳು ಇಲ್ಲಿಲ್ಲ. ಈ ಸಿನಿಮಾದ ಹಿನ್ನೆಲೆ ಸಂಗೀತ ಅತ್ಯತ್ತಮಾಗಿದೆ. ರುಪೆರ್ಟ್ ಫರ್ನಾಂಡಿಸ್ ನೀಡಿದ ಸಂಗೀತ ಸಿನಿಮಾದ ಶ್ರೀಮಂತಿಕೆ.
ಸಿನಿಮಾದಲ್ಲಿ ಕಾಣುವ ದೋಷಗಳು!
ಅನೇಕ ಗುಣಾತ್ಮಕ ವಿಷಯಗಳನ್ನು ಒಳಗೊಂಡಿರುವ ಸಿನಿಮಾದಲ್ಲಿ ಕೆಲವು ದೋಷಗಳು ಕಾಣುತ್ತವೆ.
- ಮೊದಲಾರ್ಧದಲ್ಲಿ ಒಂದು ಹಿತವಾದ ಪೇಸ್ನಲ್ಲಿ ಸಾಗಿ, ಒಳ್ಳೆಯ ಕುತೂಹಲ ಮೂಡಿಸಿದ ಕಥೆ, ಎರಡನೇ ಭಾಗದಲ್ಲಿ ಕೆಲವು ಗಡಿಬಿಡಿಯಲ್ಲಿ ಸಾಗಿದಂತೆ ತೋರುತ್ತದೆ.
- ಚಿತ್ರದಲ್ಲಿ ಭಾಷೆಯ ತೊಡಕು ಕಾಣುತ್ತದೆ. ಮೊದಲಾರ್ಧದಲ್ಲಿ ಬಹುತೇಕ ಪಾತ್ರಗಳು ಮಲಯಾಳಂ ಮಿಶ್ರಿತ ಕನ್ನಡ ಮಾತನಾಡುವುದರಿಂದ ಸ್ಪಷ್ಟತೆ ಕಳೆದುಕೊಂಡಿದೆ. ಅಲ್ಲದೆ, ಚಿತ್ರದುದ್ದಕ್ಕೂ ಇಂಗ್ಲಿಷ್ ಭಾಷೆಯ ಬಳಕೆ ಪ್ರಮುಖವಾಗಿದ್ದು ಪ್ರೇಕ್ಷಕನಿಗೆ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ.
- ಡಾಲಿ ಧನಂಜಯ್ ಹೊರತು ಪಡಿಸಿ ಉಳಿದವರ ಅಭಿನಯ ಸಾಮಾನ್ಯ. ಈ ಚಿತ್ರದಲ್ಲಿ ʼವಾವ್ʼ ಎನ್ನಿಸುವ ದೃಶ್ಯವಾಗಲಿ ಅಥವಾ ಚಿತ್ರ ಮುಗಿದಮೇಲೂ ನೆನಪಿನಲ್ಲಿ ಉಳಿಯುಂತಹ ದೃಶ್ಯವಾಗಲಿ ಇಲ್ಲ.
ಈ ಚಿತ್ರವು ನಿರ್ದೇಶಕ ಜಯಶಂಕರ್ ಪಂಡಿತ್ ಅವರ ಅದ್ಭುತ ಪ್ರಯೋಗ. ಮುಂದೆಯೂ ಅವರಿಂದ ಈ ರೀತಿ ವಿಶೇಷ ಸಿನಿಮಾಗಳನ್ನು ನಿರೀಕ್ಷಿಸಬಹುದು. ಚಿತ್ರದ ಪ್ರಮೋಷನ್ ಮಾಡುವಲ್ಲಿಯೂ ಚಿತ್ರತಂಡ ಗೆದ್ದಿಲ್ಲ. ಅನೇಕರಿಗೆ ಈ ಸಿನಿಮಾದ ಬಗ್ಗೆ ತಿಳಿದಿಲ್ಲ. ಎಷ್ಟೇ ಅದ್ಭುತ ಸಿನಿಮಾ ಮಾಡಿದರೂ ಒಂದು ಮಟ್ಟದ ಪ್ರಮೋಷನ್ ಮಾಡದಿದ್ದರೆ ಚಿತ್ರವು ಯಶಸ್ವಿಯಾಗಲು ವಿಫಲವಾಗುತ್ತದೆ.
ಸಿನಿಮಾ ನೋಡುವವರಿಗೆ ಒಂದು ಕಿವಿಮಾತು: ಚಿತ್ರಕ್ಕೆ u/a ಪ್ರಮಾಣ ಪತ್ರ ನೀಡಲಾಗಿದ್ದರೂ, ತೀರಾ ಸಣ್ಣ ವಯಸ್ಸಿನ ಮಕ್ಕಳನ್ನು ಕರೆದುಕೊಂಡು ಹೋಗದಿರುವುದು ಉತ್ತಮ.
ಇದನ್ನೂ ಓದಿ: Movie Review |ಸಿಂಪಲ್ಲಾಗಿಲ್ಲʼಅವತಾರ ಪುರುಷʼ
ಕರ್ನಾಟಕ
Abhishek Ambareesh Reception: ಅಭಿ- ಅವಿವಾ ಅದ್ಧೂರಿ ಆರತಕ್ಷತೆ; ಲೈವ್ ವಿಡಿಯೊ ಇಲ್ಲಿದೆ
Abhishek Ambareesh Reception: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ಗಣ್ಯರು, ಪ್ರಮುಖ ರಾಜಕೀಯ ನಾಯಕರು ಆಗಮಿಸಿ ದಂಪತಿಗೆ ಶುಭ ಕೋರಿದ್ದಾರೆ.
South Cinema
Jr NTR: ಜ್ಯೂನಿಯರ್ ಎನ್ಟಿಆರ್ ಜತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್? ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್!
Jr NTR: ಈಗಾಗಲೇ ಜ್ಯೂನಿಯರ್ ಎನ್ಟಿಆರ್ ʻದೇವರʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ NTR 31 ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಬೆಂಗಳೂರು: ಈಗಾಗಲೇ ಜ್ಯೂನಿಯರ್ ಎನ್ಟಿಆರ್ ʻದೇವರʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ NTR 31 ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಅವರ ಜನ್ಮದಿನಕ್ಕೆ ಶುಭಹಾರೈಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಜ್ಯೂನಿಯರ್ ಎನ್ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರ ನಿರ್ಮಾಣ ಸಂಸ್ಥೆಯಾಗಿರುವ ಎನ್ ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.
ಜ್ಯೂನಿಯರ್ ಎನ್ಟಿಆರ್ NTR 31 ಚಿತ್ರದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಜೋನಸ್ ಅವರನ್ನು ಸಂಪರ್ಕಿಸಲಾಗಿದೆ ಎಂಬುದು ಇತ್ತೀಚಿನ ಸುದ್ದಿ. ಜ್ಯೂನಿಯರ್ ಎನ್ಟಿಆರ್ ಜತೆ ಪಿಗ್ಗಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. NTR 31 2024ರಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಅವರು ಸಿಟಾಡೆಲ್ನಲ್ಲಿ ಈಗಾಗಲೇ ಆ್ಯಕ್ಷನ್ ಸಿಕ್ವೆನ್ಸ್ಗಳಲ್ಲಿ ನಟಿಸಿದ್ದಾರೆ. NTR 31 ಸಿನಿಮಾ ಕೂಡ ಆ್ಯಕ್ಷನ್ ಸಿನಿಮಾ ಆಗಿದ್ದು. ಪಾತ್ರಗಳು ಕೂಡ ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಪ್ರಶಾಂತ್ ನೀಲ್ ಚಿತ್ರವು ಭಾರತ-ಪಾಕಿಸ್ತಾನ ಗಡಿಯ ಸುತ್ತ ಸುತ್ತುವ ಆ್ಯಕ್ಷನ್ ಎಂಟರ್ಟೈನರ್ ಸಿನಿಮಾವಾಗಿದೆ. ಜೂನ್ 4ರಂದು ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬದ ಕೆಲವು ದಿನಗಳ ನಂತರ ಜೂನ್ 6 ರಂದು ಪ್ರಿಯಾಂಕಾ ಚೋಪ್ರಾ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದರು ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ಚಿತ್ರ ನಿರ್ಮಾಪಕರು ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.
Team #NTR31 wishes the Sensational Director #PrashanthNeel a very Happy Birthday 🔥
— Mythri Movie Makers (@MythriOfficial) June 4, 2023
Can't wait for the world to see your MASSive vision for #NTR31 💥💥#HBDPrashanthNeel 🔥@tarak9999 @NANDAMURIKALYAN @NTRArtsOfficial pic.twitter.com/ol9WcZydSM
ಇದನ್ನೂ ಓದಿ: Devara Movie: ಜ್ಯೂನಿಯರ್ ಎನ್ಟಿಆರ್ ʻದೇವರʼ ಸಿನಿಮಾದಲ್ಲಿ ಕನ್ನಡಿಗ ತಾರಕ್ ಪೊನ್ನಪ್ಪ
ದೇವರ ಚಿತ್ರೀಕರಣದಲ್ಲಿ ಜ್ಯೂನಿಯರ್ ಎನ್ಟಿಆರ್
ಜೂನಿಯರ್ ಎನ್ಟಿಆರ್ ಸದ್ಯ ಜಾಹ್ನವಿ ಕಪೂರ್ ಅವರೊಂದಿಗೆ ಕೊರಟಾಲ ಶಿವ ನಿರ್ದೇಶನದ ದೇವರ ಚಿತ್ರೀಕರಣದಲ್ಲಿದ್ದಾರೆ. ಹೃತಿಕ್ ರೋಷನ್ ಅವರ ವಾರ್ -2 ಸಿನಿಮಾವನ್ನೂ ಹೊಂದಿದ್ದಾರೆ. ಜ್ಯೂ.ಎನ್ಟಿಆರ್ ಅಭಿನಯದ ಈ ದೇವರ ಸಿನಿಮಾವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ. ಇದೀಗ ‘ದೇವರ’ ಮೂಲಕ ಒಂದಾಗಿದ್ದಾರೆ.
ಇನ್ನು ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಈ ಸಿನಿಮಾ 2024ರ ಏಪ್ರಿಲ್ 5ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ 5, 2024 ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಪ್ರತಿಸ್ಪರ್ಧಿಯಾಗಿ ನಟಿಸಿದ್ದಾರೆ.
ಕಿರುತೆರೆ
Chaitra Hallikeri: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಹಳ್ಳಿಕೇರಿ
Chaitra Hallikeri: ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಚೈತ್ರಾ ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಬರುತ್ತಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada) ಒಟಿಟಿ ರಿಯಾಲಿಟಿ ಶೋನಲ್ಲಿ ಮನೆಮಾತಾಗಿದ್ದ ಚೈತ್ರಾ ಹಳ್ಳಿಕೇರಿ (Chaitra Hallikeri) ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಚೈತ್ರಾ ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಬರುತ್ತಿದ್ದಾರೆ. ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಂತರಪಟ’ ಧಾರಾವಾಹಿಯಲ್ಲಿ ಬ್ಯುಸಿನೆಸ್ ವುಮೆನ್ ಚಾಂದಿನಿ ಪಾತ್ರದ ಮೂಲಕ ಚೈತ್ರಾ ಹಳ್ಳಿಕೇರಿ ಕಮ್ ಬ್ಯಾಕ್ ಆಗಿದ್ದಾರೆ.
ಚೈತ್ರಾ ಹಳ್ಳಿಕೇರಿ ಈ ಧಾರಾವಾಹಿಯಲ್ಲಿ ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜತೆಗೆ “ಅಂತರಪಟ” ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ.
ಸದ್ಯಕ್ಕೆ ‘ನಾಗಪಂಚಮಿ’ ಎಂಬ ತೆಲುಗು ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿರುವ ಚೈತ್ರಾ ಹಳ್ಳಿಕೇರಿ ಇದೀಗ ಕನ್ನಡಕ್ಕೆ ಮತ್ತೆ ವಾಪಸ್ ಆಗಿರುವುದು ಪ್ರೇಕ್ಷಕರಿಗಂತೂ ಖುಷಿ ತಂದಿದೆ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚೈತ್ರಾಗೆ ಕನ್ನಡದ ಧಾರಾವಾಹಿಯಲ್ಲಿ ನಟಿಸಬೇಕೆಂಬ ಆಸೆ ಬಹುದಿನಗಳಿಂದೂ ಇತ್ತು. ಗೌಡ್ರು, ಖುಷಿ, ಶಿಷ್ಯ, ಗುನ್ನ, ಪಾರ್ಥ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದಲೇ ದೂರವಾದರು.
ಇದನ್ನೂ ಓದಿ: Viral News: Deepika Das: ಕಿರುತೆರೆಗೆ ಎಂಟ್ರಿ ಕೊಟ್ಟ ದೀಪಿಕಾ ದಾಸ್, ‘ಅಂತರಪಟ’ದಲ್ಲಿ ಏನಿದೆ?
‘ಅಂತರಪಟ’ ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ನಟಿಸಿದ್ದಾರೆ.
ಅಂತರಪಟ ಧಾರಾವಾಹಿಗೆ ನಾಯಕನಾಗಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಅವರ ಪತಿ ಚಂದನ್ ಅವರ ಎಂಟ್ರಿ ಕೂಡ ಆಗಿದೆ.
South Cinema
Dhoomam Film: ನಾಳೆ ಫಹಾದ್ ಫಾಸಿಲ್ ಅಭಿನಯದ ಧೂಮಂ ಸಿನಿಮಾದ ಟ್ರೈಲರ್ ರಿಲೀಸ್!
Dhoomam Film: ʻಧೂಮಂʼ ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ.
ಬೆಂಗಳೂರು: ಲೂಸಿಯಾ ಪವನ್ (Lucia Pawan) ನಿರ್ದೇಶನದ ʻಧೂಮಂʼ (Dhoomam Film) ಸಿನಿಮಾದ ಟ್ರೈಲರ್ ಜೂನ್ 8ರಂದು ಬಿಡುಗಡೆಗೊಳ್ಳಲಿದೆ. ʻಧೂಮಂʼ ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಪವನ್ ಕುಮಾರ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಜೂನ್ 8ರ 12.59ಕ್ಕೆ ಮೊದಲ ಟ್ರೈಲರ್ (Trailer) ರಿಲೀಸ್ ಮಾಡುವುದಾಗಿ ಬರೆದುಕೊಂಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡು ಫಹಾದ್ ಫಾಸಿಲ್ ಲುಕ್ಗೆ (Fahadh Faasil) ಫ್ಯಾನ್ಸ್ ಫಿದಾ ಆಗಿದ್ದಾರೆ. ʻಬೆಂಕಿಯಿಲ್ಲದೆ ಹೊಗೆ ಇಲ್ಲʼ ಎಂಬ ಕ್ಯಾಪ್ಷನ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಫಸ್ಟ್ ಲುಕ್ ಹಂಚಿಕೊಂಡಿತ್ತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಪರ್ಣಾ ಬಾಲಮುರಳಿ ಜತೆಯಾಗಿದ್ದಾರೆ.
ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಮಾಲಿವುಡ್ ನಟ ಫಹಾದ್ ಮಲಯಾಳಂ ಹೊರತುಪಡಿಸಿ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಮ್ ಸಿನಿಮಾಗಳಲ್ಲಿ ಕೂಡ ಖ್ಯಾತಿ ಪಡೆದ ಫಹಾದ್ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ.
ಇದನ್ನೂ ಓದಿ: Fahadh Faasil: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʻಧೂಮಂʼ ಸಿನಿಮಾದ ಫಸ್ಟ್ ಲುಕ್ ಔಟ್! ಫ್ಯಾನ್ಸ್ ಏನಂದರು?
𝐖𝐞 𝐜𝐚𝐧 𝐚𝐬𝐬𝐮𝐫𝐞 𝐲𝐨𝐮 𝐢𝐭'𝐬 𝐠𝐨𝐢𝐧𝐠 𝐭𝐨 𝐛𝐞 𝐋𝐈𝐓 🔥#DhoomamTrailer on June 8th at 12:59 PM.#Dhoomam #FahadhFaasil @pawanfilms #VijayKiragandur @aparnabala2 @hombalefilms @HombaleGroup @Poornac38242912 #PreethaJayaraman @AneesNadodi @roshanmathew2… pic.twitter.com/dCNQXdzxga
— Hombale Films (@hombalefilms) June 6, 2023
ತಾರಾಗಣ
ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ.
ಹೊಂಬಾಳೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಹೀಗೆ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.
ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದು ಚಿತ್ರದ ಘೋಷಣೆ ಶೀಘ್ರದಲ್ಲೇ ಆಗಲಿದೆ. ಹಿಂದಿ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ10 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ12 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಕರ್ನಾಟಕ24 hours ago
Fraud Case: ಬೆಳದಿಂಗಳ ಬಾಲೆಯ ಮೋಹಕ್ಕೆ ಬಿದ್ದರೇ ಸ್ವಾಮೀಜಿ? 35 ಲಕ್ಷ ರೂಪಾಯಿ ದೋಖಾ!
-
ಅಂಕಣ23 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ20 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು