ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು - Vistara News

ಅಂಕಣ

ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

ರಾಜಮಾರ್ಗ ಅಂಕಣ: ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ alphe hevett
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆತ ಗೆದ್ದಿರುವುದು ಬರೋಬ್ಬರಿ 30 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಗ್ರಾನ್‌ಸ್ಲಾಂ ಟೆನ್ನಿಸ್ ಕೂಟಗಳಲ್ಲಿ ವಿಂಬಲ್ಡನ್ನಿಗೆ ಅದರದ್ದೇ ಆದ ಘನತೆಯು ಇದೆ. ಜಗತ್ತಿನ ಮಹಾ ಟೆನ್ನಿಸ್ ದೈತ್ಯರು ಸೆಣಸುವ ಮಹತ್ವದ ಕೂಟ ಅದು. ಆ ಟೆನಿಸ್ ಕೂಟದ ಸೆಂಟರ್ ಕೋರ್ಟಿನಲ್ಲಿ ನಡೆಯುವ ಪ್ರತೀ ಪಂದ್ಯವೂ ರೋಚಕವೇ ಹೌದು. ಅದೇ ಹೊತ್ತಿಗೆ ಬೇರೆ ಬೇರೆ ಸಮಾನಾಂತರ ಕೋರ್ಟುಗಳಲ್ಲಿ, ಬೇರೆ ಬೇರೆ ಹೊತ್ತಲ್ಲಿ ನಡೆಯುವ ಇನ್ನೂ ಹಲವು ಸ್ಪರ್ಧೆಗಳು ಅಷ್ಟಾಗಿ ಪ್ರಚಾರ ಪಡೆಯುವುದಿಲ್ಲ. ಮಾಧ್ಯಮಗಳೂ ಆ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಅಲ್ಲಿನ ಸ್ಪರ್ಧೆಯು ಜೋರಾಗಿಯೇ ಇರುತ್ತದೆ. ಅವುಗಳಲ್ಲಿ ಒಂದು ವಿಭಾಗವೆಂದರೆ ವೀಲ್ ಚೇರ್ ಟೆನ್ನಿಸ್ ಕೂಟ! ಜಗತ್ತಿನ ಮೂಲೆ ಮೂಲೆಯಿಂದ ಬರುವ ನೂರಾರು ವೀಲ್ ಚೇರ್ ಟೆನ್ನಿಸ್ ಆಟಗಾರರು ಅಲ್ಲಿ ಪ್ರಶಸ್ತಿಗಾಗಿ ಗುದ್ದಾಡುತ್ತಾರೆ!

ಈ ಬಾರಿ ವಿಂಬಲ್ಡನ್ ಕೂಟದ ವೀಲ್ ಚೇರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಇದೇ ಆಲ್ಫಿ ಹೆವೆಟ್ಟ್ (ALFI HEVETT).

ಆಲ್ಫಿ ಹೆವೆಟ್ಟ್ – ಈಗ ವಿಶ್ವದ ನಂಬರ್ 1 ಆಟಗಾರ!

ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ. ಇಂದು ಅವನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ವಿಶ್ವದ ನಂಬರ್ 1 ಆಟಗಾರ ಎಂದರೆ ನಾವು, ನೀವು ನಂಬಲೇ ಬೇಕು. ಕಾಲುಗಳಲ್ಲಿ ಇಲ್ಲದ ತ್ರಾಣವನ್ನು ಆತನು ತನ್ನ ಅಗಲವಾದ ಭುಜಗಳಲ್ಲಿ ಬಸಿದು ರಾಕೆಟ್ ಬೀಸುವ ಆತನ ದೈತ್ಯ ಶಕ್ತಿಗೆ ನೀವು ಖಂಡಿತವಾಗಿ ಬೆರಗಾಗುತ್ತೀರಿ!

ಬಾಲ್ಯದಲ್ಲಿ ಕಾಡಿದ ವಿಚಿತ್ರ ಹೆಸರಿನ ಕಾಯಿಲೆ

1997ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಆಲ್ಫಿ ಆಗ ಆರೋಗ್ಯಪೂರ್ಣವಾಗಿ ಇದ್ದವನು. ಮುಂದೆ ಆರು ವರ್ಷ ಪ್ರಾಯದಲ್ಲಿ Congential Heart defect ಎಂಬ ವಿಚಿತ್ರ ಕಾಯಿಲೆಯು ಆತನ ಉತ್ಸಾಹವನ್ನು ಖಾಲಿ ಮಾಡಿತು. ಆರು ತಿಂಗಳ ನಂತರ ಸರ್ಜರಿ ಕೂಡ ನಡೆಯಿತು. ಪರಿಣಾಮವಾಗಿ ಆತನ ಎರಡೂ ಕಾಲುಗಳ ಶಕ್ತಿ ಉಡುಗಿ ಹೋಗಿ ಆತನು ವೀಲ್ ಚೇರ್ ಮೇಲೆ ಓಡಾಡಬೇಕಾಯಿತು. ಆರಂಭದಲ್ಲಿ ಆಲ್ಫಿ ಸ್ವಲ್ಪ ಮಟ್ಟದಲ್ಲಿ ವಿಚಲಿತರಾದನು. ಆದರೆ ಅದಮ್ಯವಾದ ಜೀವನೋತ್ಸಾಹ ಅವನನ್ನು ಟೆನ್ನಿಸ್ ಕೋರ್ಟಿಗೆ ಎಳೆದು ತಂದಿತು. ವೀಲ್ ಚೇರ್ ಮೇಲೆ ಇಡೀ ಕೋರ್ಟ್ ಓಡಾಡುತ್ತಾ ರಾಕೆಟ್ ಬೀಸುವುದು ಸುಲಭ ಅಲ್ಲ. ಅದಕ್ಕೆ ತುಂಬಾ ಏಕಾಗ್ರತೆ, ದೇಹದ ಬ್ಯಾಲೆನ್ಸ್, ರಟ್ಟೆಗಳ ತ್ರಾಣ, ಆತ್ಮವಿಶ್ವಾಸ ಎಲ್ಲವೂ ಬೇಕು. ಸತತವಾದ ಪರಿಶ್ರಮದಿಂದ ಆಲ್ಫಿ ಈ ಎಲ್ಲ ಸವಾಲುಗಳನ್ನು ಗೆಲ್ಲುತ್ತಾ ಹೋದರು.

ಗೆದ್ದದ್ದು 30 ಗ್ರಾನ್‌ಸ್ಲಾಮ್ ಟ್ರೋಫಿಗಳನ್ನು!

2015ರಿಂದ ಇಂದಿನವರೆಗೂ ತಾನು ಆಡಿದ ಪ್ರತೀಯೊಂದು ಗ್ರಾನಸ್ಲಾಮ್ ಕೂಟಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ 30 ವಿಶ್ವಮಟ್ಟದ ಪ್ರಶಸ್ತಿಗಳನ್ನು ಆತ ಗೆದ್ದಿದ್ದಾನೆ ಎಂದರೆ ನೀವು ಮೂಗಿನ ಮೇಲೆ ಬೆರಳು ಇಡುತ್ತೀರಿ! ಅದರಲ್ಲಿ 9 ಸಿಂಗಲ್ಸ್ ಪ್ರಶಸ್ತಿಗಳು. 21 ಡಬಲ್ಸ್ ಪ್ರಶಸ್ತಿಗಳು!

ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ, ಒಂದು ಬಾರಿ ಆಸ್ಟ್ರೇಲಿಯನ್ ಒಪನ್, ಒಂದು ಬಾರಿ ವಿಂಬಲ್ಡನ್, ನಾಲ್ಕು ಬಾರಿ ಯು ಎಸ್ ಓಪನ್, ಮೂರು ಬಾರಿ ಮಾಸ್ಟರ್ಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಆತನು ಗೆದ್ದಾಗಿದೆ.

ಡಬಲ್ಸ್ ಸ್ಪರ್ಧೆಯಲ್ಲಿ ಆತನಿಗೆ ಆತನೇ ಉಪಮೆ!

ಡಬಲ್ಸನಲ್ಲಿ ಐದು ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್, ಐದು ಬಾರಿ ಯು. ಎಸ್. ಓಪನ್ ಪ್ರಶಸ್ತಿಗಳನ್ನು ಆಲ್ಫಿ ಗೆದ್ದಿರುವುದು ಬಹಳ ದೊಡ್ಡ ಸಾಧನೆ. ಜಗತ್ತಿನ ಬೇರೆ ಯಾವ ಟೆನ್ನಿಸ್ ಆಟಗಾರ ಕೂಡ ಇಷ್ಟೊಂದು ಪ್ರಶಸ್ತಿಗಳ ಗೊಂಚಲು ಗೆದ್ದಿರುವ ನಿದರ್ಶನ ಇಲ್ಲ! ಪಾರಾ ಒಲಿಂಪಿಕ್ ಕೂಟದಲ್ಲಿ ಕೂಡ ಆತ ಬೆಳ್ಳಿಯ ಪದಕ ಗೆದ್ದಿದ್ದಾನೆ.

2024ರ ವಿಂಬಲ್ಡನ್ ಕೂಟದಲ್ಲಿ ಆತನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಕೂಡ ದಾಖಲೆಯೇ ಆಗಿದೆ. ಆತನ ಸರ್ವ್, ವಾಲಿ, ಏಸ್, ಮಿಂಚಿನ ಚಲನೆ ಮತ್ತು ಹಿಂಗೈ ಹೊಡೆತಗಳು ತುಂಬಾ ಬಲಿಷ್ಟವಾಗಿವೆ.

ಆರು ವರ್ಷದ ಪ್ರಾಯದಿಂದ ವೀಲ್ ಚೇರ್ ಮೇಲೆ ಅವಲಂಬಿತವಾಗಿರುವ ಆಲ್ಫಿ ಹೆವೆಟ್ಟ್ ನಾರ್ವಿಚ್ ನಗರದ ಸಿಟಿ ಕಾಲೇಜಿನಿಂದ ಪದವಿ ಕೂಡ ಪಡೆದಿದ್ದಾರೆ. 1.67 ಮೀಟರ್ ಎತ್ತರದ, ಇನ್ನೂ 27 ವರ್ಷ ಪ್ರಾಯದ ಆಲ್ಫಿ ರಟ್ಟೆಯಲ್ಲಿ ತ್ರಾಣ ಇರುವಷ್ಟು ವರ್ಷ ಟೆನ್ನಿಸ್ ಆಡುತ್ತೇನೆ ಎಂದು ಹೇಳಿದ್ದಾರೆ!

ಆತನ ದಾಖಲೆಗಳ ಎತ್ತರ ಎಲ್ಲಿಗೆ ತಲುಪುವುದೋ ಯಾರಿಗೆ ಗೊತ್ತು?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

ರಾಜಮಾರ್ಗ ಅಂಕಣ: ಸದಾನಂದ ಸುವರ್ಣ ಪ್ರತಿಷ್ಠಾನದ ಮೂಲಕ ಅವರು ಮತ್ತು ಅವರ ಅಭಿಮಾನಿಗಳು ಮುಂಬೈಯಲ್ಲಿ ಮಾಡಿದ ನೂರಾರು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳು ತುಂಬಾನೇ ಜನಪ್ರಿಯ ಆಗಿದ್ದವು. ತನ್ನ ಜೀವನದ ಅಷ್ಟೂ ವರ್ಷಗಳನ್ನು ರಂಗಭೂಮಿ ಎಂಬ ದೊಡ್ಡ ಆಯಾಮಕ್ಕೆ ಮುಡಿಪಾಗಿಟ್ಟ ಸದಾನಂದ ಸುವರ್ಣರು ನೇಪಥ್ಯಕ್ಕೆ ಸರಿದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ sadananda suvarna
Koo

ʼಗುಡ್ಡೆದ ಭೂತ’ದ ಮೂಲಕ ವಿಶ್ವ ಖ್ಯಾತಿ ಪಡೆದ ಸುವರ್ಣರು ಇನ್ನಿಲ್ಲ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕರಾವಳಿ ಮತ್ತು ಮುಂಬಯಿಯಲ್ಲಿ ರಂಗಭೂಮಿ, ಸಿನೆಮಾ, ಸಾಹಿತ್ಯ ಎಲ್ಲವನ್ನೂ ಬೆಸೆಯಲು ಕಾರಣವಾಗಿದ್ದ ಸದಾನಂದ ಸುವರ್ಣರು ನಮ್ಮನ್ನು ಅಗಲಿದ್ದಾರೆ. ಅವರಿಗೆ 93 ವರ್ಷ ಪ್ರಾಯವಾಗಿತ್ತು. ತನ್ನ ಇಳಿವಯಸ್ಸಿನಲ್ಲಿಯೂ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿದ್ದ ಒಂದು ಮೇರು ವ್ಯಕ್ತಿತ್ವವು ಇಂದು ನೇಪಥ್ಯಕ್ಕೆ ಸರಿದದ್ದು ತುಳು ಮತ್ತು ಕನ್ನಡ ರಂಗಭೂಮಿಗೆ ಆಗಿರುವ ದೊಡ್ಡ ನಷ್ಟ ಎಂದೇ ಹೇಳಬಹುದು.

ಬಾಲ್ಯದಲ್ಲಿ ಮೂಲ್ಕಿಯಿಂದ ಮುಂಬೈಗೆ

1931ರ ಡಿಸೆಂಬರ್ 24ರಂದು ದಕ್ಷಿಣಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದ ಸದಾನಂದ ಸುವರ್ಣರ ತಂದೆ ಬ್ಯಾಂಕ್ ಉದ್ಯೋಗಿ ಆಗಿದ್ದರು. ಮುಲ್ಕಿ ಬೋರ್ಡ್ ಶಾಲೆಯಲ್ಲಿ ಐದನೇ ತರಗತಿಯವರೆಗೆ ಓದಿ ಮುಂಬಯಿಗೆ ಬಂದಿಳಿದಾಗ ಅವರಿಗೆ ಕೇವಲ 10 ವರ್ಷ ಪ್ರಾಯ. ಆಗಲೇ ನಾಟಕಗಳ ಸೆಳೆತ ಆರಂಭ ಆಗಿತ್ತು. ಅಲ್ಲಿ ಮೊಗವೀರ ರಾತ್ರಿ ಶಾಲೆಯಲ್ಲಿ ಓದುತ್ತಾ ಹಗಲು ಹೊತ್ತು ನಾಟಕ ಶಿಕ್ಷಣ ಪಡೆದರು. ಅತ್ಯಂತ ಶ್ರೀಮಂತವಾದ ಮರಾಠಿ, ಇಂಗ್ಲೀಷ್ ಮತ್ತು ಗುಜರಾತಿ ರಂಗಭೂಮಿಗಳ ಆಳವಾದ ಅಧ್ಯಯನ ನಡೆಸಿ ಕನ್ನಡ ರಂಗಭೂಮಿ ಯಾಕೆ ಆ ಎತ್ತರಕ್ಕೆ ಬೆಳೆದಿಲ್ಲ? ಎಂದು ಯೋಚನೆ ಮಾಡಿದರು.

ತನ್ನ ಓರಗೆಯ ಹಲವು ಯುವ ಕಲಾವಿದರನ್ನು ಸೇರಿಸಿಕೊಂಡು ‘ಕುರುಡು ಸಂಗೀತ ‘ಎಂಬ ನಾಟಕವನ್ನು ಬರೆದು ನಿರ್ದೇಶನ ಮಾಡಿದರು. ಅದು ಅವರಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟಿತು. ಅದರ ಜೊತೆಗೆ ರಂಗಭೂಮಿಯ ಡಿಪ್ಲೊಮಾ ಕೂಡ ಪಡೆದರು.

ಸಾಲು ಸಾಲು ನಾಟಕಗಳು

ಮುಂದೆ ಸುವರ್ಣರು ತನ್ನ ಯೌವ್ವನದ ವರ್ಷಗಳನ್ನು ರಂಗಭೂಮಿಯ ಸೇವೆಗೆ ಮುಡಿಪಾಗಿಟ್ಟರು. ಹತ್ತಾರು ಕನ್ನಡ ಮತ್ತು ತುಳು ನಾಟಕಗಳನ್ನು ಬರೆದರು. ಅವರೇ ನಿರ್ದೇಶನ ಮಾಡಿ ಅಭಿನಯ ಕೂಡ ಮಾಡಿದರು. ಈಡಿಪಸ್, ಕುಬಿ ಮತ್ತು ಈಯಾಲ, ಕದಡಿದ ನೀರು, ಧರ್ಮ ಶಸ್ತ್ರ, ಯಾರು ನನ್ನವರು, ಸತ್ಯಂ ವಧ ಧರ್ಮಮ್ ಚರ ಇವುಗಳಲ್ಲಿ ಹೆಚ್ಚಿನವು ಪ್ರಯೋಗಾತ್ಮಕ ನಾಟಕಗಳು. ಇದು ಯುನಿವರ್ಸಿಟಿ, ಬಾಳೆ ಬಂಗಾರ, ಗೊಂದೋಳು ನಾಟಕಗಳು ಮುಂಬಯಿ ಮಹಾನಗರದಲ್ಲಿ ಭಾರೀ ದೊಡ್ಡ ಅಲೆಯನ್ನೇ ಉಂಟುಮಾಡಿದವು. ಗೊಂದೋಳು ಎಲ್ಲ ಕಡೆಗಳಲ್ಲಿಯೂ ಗೆಲ್ಲುತ್ತಾ ಹೋಯಿತು. ಅದಕ್ಕೆ ಅವರು ಬಳಕೆ ಮಾಡಿದ ಜಾನಪದ ಸಂಗೀತ ಮತ್ತು ಜಾನಪದ ಪರಿಕರಗಳು ಅನನ್ಯವಾಗಿ ಇದ್ದವು. ಸುವರ್ಣರು ಹತ್ತಾರು ಕಾದಂಬರಿ ಮತ್ತು ಕಥೆಗಳನ್ನು ಬರೆದರು.

‘ಗೋರೆಗಾಂವ್ ಕರ್ನಾಟಕ ಸಂಘ’ ಮತ್ತು ಮುಂಬಯಿಯ ಎಲ್ಲ ಕನ್ನಡ ಪರ ಸಂಘಟನೆಗಳು ಅವರ ಎಲ್ಲ ಪ್ರಯೋಗಗಳಿಗೆ ವೇದಿಕೆಯನ್ನು ಒದಗಿಸಿದವು. ಮುಂಬಯಿ ನಗರದಲ್ಲಿ ಸಂಸ್ಕೃತಿಯನ್ನು ಪ್ರೀತಿಸುವ ಮಂದಿಗೆ ಸುವರ್ಣರು ಅತ್ಯಂತ ಆಪ್ತರಾದರು. ಅವರ ನಾಟಕಗಳು ಅವರಿಗೆ ಸಾವಿರಾರು ಅಭಿಮಾನಿಗಳನ್ನು ತಂದು ಕೊಟ್ಟವು.

ಸುವರ್ಣರ ಮಾಸ್ಟರ್ ಪೀಸ್ ಸಿನೆಮಾ – ಘಟಶ್ರಾದ್ಧ

ಅನಂತಮೂರ್ತಿಯವರ ಮೇರು ಕತೆ ‘ಘಟಶ್ರಾದ್ಧ’ವನ್ನು ಅವರು ತಮ್ಮ ಸ್ನೇಹಿತ ಗಿರೀಶ್ ಕಾಸರವಳ್ಳಿಯು ಜೊತೆಗೆ ಸೇರಿ ತೆರೆಗೆ ತಂದರು. ಅದು ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ಮೊದಲ ಸಿನೆಮಾ ಆಗಿತ್ತು. ಆ ಸಿನೆಮಾ ರಾಷ್ಟ್ರಪ್ರಶಸ್ತಿ ಸಹಿತ 18 ಪ್ರಶಸ್ತಿಗಳನ್ನು ಗೆದ್ದಿತು. ಅದು ಇಂದಿಗೂ ಭಾರತದ ಟಾಪ್ 100 ಸಿನೆಮಾಗಳಲ್ಲಿ ಸ್ಥಾನ ಪಡೆದಿದೆ. ಅದು ಸುವರ್ಣರ ಬಹಳ ದೊಡ್ಡ ಕೊಡುಗೆ ಎಂದು ನನ್ನ ಭಾವನೆ. ಎಂಬತ್ತರ ದಶಕದಲ್ಲಿ ಸುವರ್ಣರು ತುಳು ಸಂಸ್ಕೃತಿಯ ಮೇಲಿನ ಪ್ರೀತಿಯಿಂದ ‘ಗುಡ್ಡೆದ ಭೂತ ‘ ಧಾರಾವಾಹಿಯನ್ನು ಸಾದರ ಪಡಿಸಿದರು. ಅದು ದೂರದರ್ಶನದಲ್ಲಿ ದೀರ್ಘ ಕಾಲ ಪ್ರಸಾರ ಆಯಿತು. ಕರಾವಳಿಯಲ್ಲಿ ಎಲೆಯ ಮರೆಯ ಕಾಯಿಯಂತೆ ಇದ್ದ ಪ್ರಕಾಶ್ ರೈ ಎಂಬ ನಟವನ್ನು ಮಹಾಸ್ಟಾರ್ ಮಾಡಿದ ಧಾರಾವಾಹಿ ಅದು. ಈಗಲೂ ಡೆನ್ನಾನ ಡೆನ್ನಾನ ಹಾಡು ಕಿವಿಯಲ್ಲಿ ಅನುರಣನ ಮಾಡುವ ಧಾರಾವಾಹಿ ಅದು. ಅದರ ಮೂಲಕ ಸದಾನಂದ ಸುವರ್ಣರು ಜಾಗತಿಕ ಮನ್ನಣೆ ಪಡೆದರು.

ಮತ್ತೆ ಕರಾವಳಿಯ ಮತ್ತು ಕಾರಂತರ ಸೆಳೆತ

ಹುಟ್ಟೂರು ಕರಾವಳಿಗೆ ಮತ್ತೆ ಹಿಂದಿರುಗಿ ಬಂದು ಅಧ್ಯಯನದಲ್ಲಿ ಮುಳುಗಿಬಿಟ್ಟರು. ಆ ಹೊತ್ತಿಗೆ ಕಾರಂತರ ಸಾಹಿತ್ಯ ಮತ್ತು ಪ್ರಯೋಗಗಳು ಅವರನ್ನು ತೀವ್ರವಾಗಿ ಸೆಳೆದವು. ಹಲವು ಕಂತುಗಳ ‘ಕಾರಂತ ದರ್ಶನ’ ಸಾಕ್ಷ್ಯ ಚಿತ್ರವನ್ನು ಸೊಗಸಾಗಿ ನಿರ್ದೇಶನ ಮಾಡಿದರು. ಅದರ ಬಗ್ಗೆ ದೂರದರ್ಶನವು ನಿರ್ಲಕ್ಷ್ಯ ಮಾಡಿದಾಗ ಸಿಡಿದು ನಿಂತು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಪತ್ರ ಬರೆದರು.ಕಾರಂತರ ಹಲವು ಯಕ್ಷಗಾನ ಬ್ಯಾಲೆ ಮತ್ತು ರೂಪಕಗಳು ಸದಾನಂದ ಸುವರ್ಣರ ಮೂಲಕ ಮುಂಬೈಯಲ್ಲಿ ಪ್ರದರ್ಶನ ಕಂಡವು. ಕಾರಂತ ಉತ್ಸವ ಭಾರೀ ಜನಪ್ರಿಯ ಆಯಿತು.

ಈ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಪ್ರತಿಷ್ಠಿತವಾದ ‘ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಕೂಡ ದೊರೆಯಿತು. ಆ ಸಂದರ್ಭ ಅವರನ್ನು ಒಮ್ಮೆ ಕೋಟದಲ್ಲಿ ಭೇಟಿಯಾಗಿ ಸ್ಫೂರ್ತಿ ಪಡೆದಿದ್ದೆ. ಇತ್ತೀಚೆಗೆ ‘ಕೋರ್ಟ್ ಮಾರ್ಷಲ್ ‘ ಎಂಬ ಪ್ರಯೋಗಾತ್ಮಕ ನಾಟಕವನ್ನು ಅವರು ನಿರೂಪಣೆ ಮಾಡಿದ್ದರು.

ಸದಾನಂದ ಸುವರ್ಣ ಪ್ರತಿಷ್ಠಾನದ ಮೂಲಕ ಅವರು ಮತ್ತು ಅವರ ಅಭಿಮಾನಿಗಳು ಮುಂಬೈಯಲ್ಲಿ ಮಾಡಿದ ನೂರಾರು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳು ತುಂಬಾನೇ ಜನಪ್ರಿಯ ಆಗಿದ್ದವು. ತನ್ನ ಜೀವನದ ಅಷ್ಟೂ ವರ್ಷಗಳನ್ನು ರಂಗಭೂಮಿ ಎಂಬ ದೊಡ್ಡ ಆಯಾಮಕ್ಕೆ ಮುಡಿಪಾಗಿಟ್ಟ ಸದಾನಂದ ಸುವರ್ಣರು ನೇಪಥ್ಯಕ್ಕೆ ಸರಿದಿದ್ದಾರೆ.

ಅವರಿಗೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!

ರಾಜಮಾರ್ಗ ಅಂಕಣ: 11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

VISTARANEWS.COM


on

world emoji day ರಾಜಮಾರ್ಗ ಅಂಕಣ
Koo

ಜುಲೈ 17 ವಿಶ್ವ ಇಮೋಜಿ ದಿನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ʻಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ’ ಎನ್ನುತ್ತದೆ ಚೈನೀಸ್ (Chinese) ಭಾಷೆ. ನಾವು, ನೀವೆಲ್ಲ ವಾಟ್ಸ್ಯಾಪ್ (WhatsApp), ಫೇಸ್ ಬುಕ್ (Facebook), ಟ್ವಿಟರ್ (Twitter) ಎಲ್ಲ ಕಡೆಗಳಲ್ಲಿ ಮೆಸೇಜ್ (Message) ರವಾನೆ ಮಾಡುವಾಗ, ಸ್ವೀಕಾರ ಮಾಡುವಾಗ ಈ ಚಂದ ಚಂದವಾದ ಎಮೋಜಿಗಳನ್ನು (Emojis) ಬಳಕೆ ಮಾಡಿಯೇ ಮಾಡಿರುತ್ತೇವೆ. ಉದ್ದುದ್ದ ಮೆಸೇಜ್ ಟೈಪಿಸಲು ಆಸಕ್ತಿ ಇಲ್ಲದೆ ಹೋದಾಗ, ಸಮಯದ ಕೊರತೆ ಇದ್ದಾಗ ಒಂದು ಎಮೋಜಿ ಹಾಕಿ ಭಾವನೆಗಳನ್ನು ವ್ಯಕ್ತಪಡಿಸಿದ್ದು ಇದೆ. ಈ ಎಮೋಜಿಗಳು ಉಂಟುಮಾಡುತ್ತಿರುವ ಮೂಡ್ ಇದೆಯಲ್ಲ ಅದು ವರ್ಣನಾತೀತ ಮತ್ತು ಭಾವನಾತೀತ.

ಈ ಎಮೋಜಿಗಳು ಇಂದು ಜಾಗತಿಕ ಭಾಷೆಯೇ ಆಗಿಬಿಟ್ಟಿವೆ!

ಈ ಎಮೋಜಿಗಳಿಗೂ ಒಂದು ಇತಿಹಾಸ ಇದೆ ಎಂದರೆ ನಮಗೆ ನಂಬುವುದು ಕಷ್ಟ ಆಗಬಹುದು. ಜಪಾನ್ ಭಾಷೆಯಲ್ಲಿ ಎ ಅಂದರೆ ಚಿತ್ರ. ಮೋಜಿ ಅಂದರೆ ಅಕ್ಷರ. ಒಟ್ಟಿನಲ್ಲಿ ಎಮೋಜಿ ಅಂದರೆ ಚಿತ್ರಾಕ್ಷರ ಎಂದರ್ಥ.

ಈ ಎಮೋಜಿಗಳು ಜನಿಸಿದ್ದು ಜಪಾನನಲ್ಲಿ. 1999ರಲ್ಲಿ ಜಪಾನ್ ದೇಶದ ಒಬ್ಬ ಸಾಮಾನ್ಯ ತಂತ್ರಜ್ಞ, ಆತನ ಹೆಸರು ಶಿಗೆತರ ಕುರಿತ, ಡೊಕೊಮೊ ಮೊಬೈಲ್ ಕಂಪೆನಿಗಾಗಿ ಈ ರೀತಿಯ 176 ಎಮೋಜಿಗಳನ್ನು ಡಿಸೈನ್ ಮಾಡಿ ಕೊಟ್ಟರು. ಅದರಲ್ಲಿ ನಗುವ, ಅಳುವ, ಸಿಟ್ಟು ತೋರುವ, ಕೊಂಕು ನುಡಿಯುವ, ಬೇಸರ ವ್ಯಕ್ತಪಡಿಸುವ, ಆನಂದ ಬಾಷ್ಪ ಸುರಿಸುವ, ಕೆಣಕುವ, ಸಿಡಿಯುವ….ಹೀಗೆ ನವರಸಗಳನ್ನು ಸ್ಫುರಿಸುವ ಎಮೋಜಿಗಳೂ ಇದ್ದವು. ಅವುಗಳು ಬಹುಬೇಗ ಜನಪ್ರಿಯ ಆದವು.

ಮುಂದೆ ಎಲ್ಲ ಮೊಬೈಲ್ ಕಂಪೆನಿಗಳು ಮುಗಿಬಿದ್ದು ಸಾವಿರಾರು ಎಮೋಜಿಗಳನ್ನು ತಮ್ಮ ಸಾಫ್ಟ್ ವೇರಗಳಲ್ಲಿ ಸಂಗ್ರಹ ಮಾಡಿ ಮಾರ್ಕೆಟ್ ಮಾಡಿದವು.

ಅದರಲ್ಲೂ ಆನಂದ ಭಾಷ್ಪ ಸುರಿಸುವ ಒಂದು ಎಮೋಜಿಯನ್ನು ನಾವು ಹೆಚ್ಚು ಬಳಕೆ ಮಾಡುತ್ತೇವೆ. ಅದನ್ನು 2015ರಲ್ಲಿ ಆಕ್ಸ್ಫರ್ಡ್ ವಿವಿಯು ‘ ವರ್ಷದ ಪದ’ ( ವರ್ಡ್ ಆಫ್ ದ ಇಯರ್) ಎಂದು ಪ್ರಶಸ್ತಿ ಕೊಟ್ಟು ಗೌರವಿಸಿತು. ಹಲವು ಮೊಬೈಲ್ ಕಂಪೆನಿಗಳು ಎಮೋಜಿಗಳನ್ನು ಜನಪ್ರಿಯ ಮಾಡಲು ಕೇವಲ ಅವುಗಳನ್ನು ಬಳಸಿ ಪ್ರೇಮಪತ್ರಗಳನ್ನು ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿದವು! ಚಿತ್ರಕಲಾ ಸ್ಪರ್ಧೆಗಳೂ ಹಲವೆಡೆ ನಡೆದವು.

emoji1

ಆಪಲ್ ಮೊಬೈಲ್ ಕಂಪೆನಿ ಇನ್ನಷ್ಟು ಮುಂದೆ ಹೋಗಿ ಜೆನ್ ಮೋಜಿ ಎಂಬ ಹೆಸರಿನ ಅಪಡೆಟೆಡ್ ವರ್ಷನನ್ನು ಡೆವಲಪ್ ಮಾಡಿತು. ಈ ಚಿತ್ರಾಕ್ಷರದ ಸಂಕೇತಗಳು ಬಹುಬೇಗ ಜನಪ್ರಿಯ ಆದವು ಮತ್ತು ಜಗತ್ತಿನಾದ್ಯಂತ ತಲುಪಿದವು. ಒಂದರ್ಥದಲ್ಲಿ ಈ ಎಮೋಜಿಗಳು ಭಾಷೆಗಳ ಹಂಗನ್ನು ಮೀರಿ ಬೆಳೆದವು. ಇನ್ನೂ ಕೆಲವು ಮೊಬೈಲ್ ಕಂಪೆನಿಗಳು ತಮ್ಮ ಆಯ್ಕೆಯ ಎಮೋಜಿಗಳನ್ನು ಡಿಸೈನ್ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿ ಉದಾರತೆ ಮೆರೆದವು.

ಜುಲೈ 17 ಎಮೋಜಿ ದಿನ ಯಾಕೆ?

11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಈಗ ಜನಪ್ರಿಯವಾಗುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ನ ಭಾಗವಾಗಿ ಕೂಡ ಈ ಎಮೋಜಿಗಳು ಉಂಟುಮಾಡುತ್ತಿರುವ ಪ್ರಭಾವವನ್ನು ಮತ್ತು ಸಂತೋಷವನ್ನು ನಾನು ಮತ್ತೆ ಬರೆಯುವ ಅಗತ್ಯವೇ ಇಲ್ಲ.

ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ.

VISTARANEWS.COM


on

goa ನನ್ನ ದೇಶ ನನ್ನ ದನಿ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ದೇಶದ ಗತ-ಇತಿಹಾಸವೇ (History of India) ಹಾಗೆ. ನಂಬಲು ಅಸಾಧ್ಯವಾದ ಸಂಗತಿಗಳೇ ಅಧಿಕಾಧಿಕ. ಗೋವಾ (Goa) ಎಂದರೆ ಭೂಮಿಯ ಮೇಲಿನ ಸ್ವರ್ಗ ಎಂಬ ಅಪವ್ಯಾಖ್ಯಾನವಿದೆ. ಮದ್ಯಪಾನ (Liquor consuming) ಇತ್ಯಾದಿಗಳನ್ನು ವೈಭವೀಕರಿಸಿ, ಪ್ರವಾಸಿಗರನ್ನು (Tourists) ಆಕರ್ಷಿಸುವ ದೋಚುವ ಹುನ್ನಾರ ನಡೆದೇ ಇದೆ. ತತ್ಸಂಬಂಧೀ ಆದಾಯವೇ ಪ್ರಮುಖವಾಗಿ ಹೋಗಿ ಆ ರಾಜ್ಯಕ್ಕೆ ಮುಕ್ತಿಯೇ ಇಲ್ಲವಾಗಿದೆ. ಹಿಂದಿನ ಗೋಮಾಂತಕದ (Gomanthaka) ದೇವಾಲಯಗಳ (Temples) ಬಗೆಗೆ, ವಿಭಿನ್ನ-ವಿಶಿಷ್ಟ ಸಂಸ್ಕೃತಿಯ ಬಗೆಗೆ ಕೇಳುವವರೇ ಇಲ್ಲ. ಮತಾಂತರೀ ಕ್ರೈಸ್ತರ (Conversion) ಭಯಂಕರ ಹಿಂಸಾಪರ್ವಕ್ಕೆ (Violence) ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುತ್ತಾದವರು ಗೋವಾದ ಹಿಂದೂಗಳು.

ಆದರೂ, ಸೇಂಟ್ (ಖಂಡಿತಾ ಆತ ಸಂತನೂ ಅಲ್ಲ, ಸಜ್ಜನನೂ ಅಲ್ಲ) ಫ್ರಾನ್ಸಿಸ್ ಕ್ಸಾವಿಯರ್ (ಸಾಮಾನ್ಯ ಯುಗದ 16ನೆಯ ಶತಮಾನ)ನನ್ನೇ ಸಾಲಾಗಿ ನಿಂತು ನಮಸ್ಕರಿಸಿ ಬರುವ ಮೂರ್ಖ ಹಿಂದೂಗಳು ನಾವಾಗಿದ್ದೇವೆ. ಈತ ತನ್ನ ಕಿಂಗ್-ಗೆ ಪತ್ರ ಬರೆದು ಗೋವಾದಲ್ಲಿ Inquisition ಅತ್ಯಂತ ಆವಶ್ಯಕ ಎಂದು ಒತ್ತಾಯಿಸಿದ್ದ. ಈ ಹಿಂಸೆಗೆ ಬಲಿಯಾದವರ ಅಧಿಕೃತ ಸಂಖ್ಯೆಯೇ 16202. ಇದರಲ್ಲಿ 4012 ಮಂದಿ ಮಹಿಳೆಯರೇ ಇದ್ದರು. ಪೋರ್ತುಗೀಸರ ಎಲ್ಲ ವಸಾಹತುಗಳಲ್ಲಿಯೂ ಯಾತನಾ ಶಿಬಿರಗಳಿದ್ದವು (Concentration Camps). ಹಿಂದೂಗಳ ಮೇಲೆ ಇವರದ್ದು “ಅಚ್ಚುಕಟ್ಟಾದ ಹಿಂಸಾವಿಧಾನ”. ಜರ್ಮನಿಯ ನಾಜಿಗಳನ್ನು ನೆನಪಿಸುವಂತಹುದು. ವಿಚಾರಣೆಯ ಅವಧಿಯಲ್ಲಿ ದುರದೃಷ್ಟಶಾಲಿ ಹಿಂದೂಗಳು ಮಾಡುವ ಚೀತ್ಕಾರ, ವಿಸರ್ಜನೆಗಳ ಬಗೆಗೆ ಗುಮಾಸ್ತರು ವಿವರವಾಗಿ ಬರೆದಿಡುತ್ತಿದ್ದರು. ಕಾಲಿಗೆ ಭಾರ ಕಟ್ಟಿ ಹಿಂಭಾಗದಿಂದ ಕೈಗಳಿಗೆ ಹಗ್ಗ ಕಟ್ಟಿ ಆಪಾದಿತನನ್ನು ಮೇಲೆಳೆಯುತ್ತಿದ್ದರು. ಹೆಬ್ಬೆರಳಿನ ಉಗುರಿನ ಕಣ್ಣುಗಳಿಗೆ ಸೂಜಿಗಳಿಂದ ಚುಚ್ಚುತ್ತಿದ್ದರು. ಬಿಸಿ ಎಣ್ಣೆ, ಸುಣ್ಣದ ನೀರು, ಉರಿಯುವ ಗಂಧಕ ಇವೆಲ್ಲವನ್ನೂ ಹಿಂಸೆಗೆ ಧಾರಾಳವಾಗಿ ಬಳಸುತ್ತಿದ್ದರು. ಉರಿಯುವ ಕೊಳ್ಳಿಗಳಿಂದ ಕಂಕುಳಿಗೆ ತಿವಿಯುತ್ತಿದ್ದರು. ದೊಡ್ಡ ರಾಟೆಯ ಮೇಲೆ ಆಪಾದಿತರನ್ನು ಹಿಗ್ಗಿಸಿ ಸಾಯಿಸುತ್ತಿದ್ದರು. ಹಿಂದೂ ಸಂಪ್ರದಾಯ, ಆಚರಣೆಗಳನ್ನು ಅನುಸರಿಸಿಕೊಂಡು ಬಂದುದೇ ಇವರ ಅಪರಾಧ!

ಪೋರ್ತುಗೀಸರ ದುರಾಡಳಿತದ ಗೋವಾದ್ದು ಭಯಂಕರ ಇತಿಹಾಸ. ಇವರ ಅಮಾನುಷ ಹಿಂಸಾಚಾರದ ಘಟನಾವಳಿ ಬಹಳ ದೊಡ್ಡದೇ ಇದೆ. ಕೆಲವಂತೂ ತೀರ ವಿಚಿತ್ರ ಎನ್ನಿಸುವಂತಿವೆ. ಇಸ್ಲಾಮೀ ಆಕ್ರಮಣಕಾರಿಗಳ ದುರಾಡಳಿತ ಕಾಲದ “ಜಿಜಿಯಾ” ತೆರಿಗೆಯನ್ನು ಹೋಲುವ ಈ ಪೋರ್ತುಗೀಸ್ ಕ್ರೂರಿಗಳ ಅನೇಕ ತೆರಿಗೆಗಳು ಮಾನವ ಸಮಾಜವೇ ತಲೆ ತಗ್ಗಿಸುವಂತಹುವು. ಅದರಲ್ಲೊಂದು ಈ ಜುಟ್ಟಿನ ತೆರಿಗೆ. ಹೀಗೊಂದು ತೆರಿಗೆಯಿತ್ತೆಂಬುದೇ ನಮ್ಮಲ್ಲಿ ಬಹಳ ಜನರಿಗೆ ತಿಳಿಯದು.

ಸಾಮಾನ್ಯ ಯುಗದ 17ನೆಯ ಶತಮಾನದ ಆದ್ಯಂತ ಗೋವಾದ ಪೋರ್ತುಗೀಸ್ ಆಳರಸರಿಗೆ ಹಣದ ಅಭಾವವಿತ್ತು, ಭ್ರಷ್ಟಾಚಾರ ಮಿತಿ ಮೀರಿತ್ತು. ಹೇಗೆಲ್ಲಾ ಜನರ ತಲೆ ಒಡೆದು ಹಣ – ತೆರಿಗೆ ದೋಚಬಹುದು, ಎಂದೇ ಯೋಚಿಸುತ್ತಿದ್ದರು. ಚರ್ಚಿನ ದಂಡಾಧಿಕಾರದ ಮತ್ತು ಪರಮತ ಹಿಂಸೆಯ ಉದ್ದೇಶದ (Inquisition) ವಿಕೃತ ಶಿಕ್ಷಾವಿಧಾನಗಳು ಅಲ್ಲಿದ್ದ ಹಿಂದುಗಳಲ್ಲಿ ಅಸುರಕ್ಷತೆಯನ್ನು ಹುಟ್ಟುಹಾಕಿದ್ದವು. ವ್ಯಾಪಾರ, ವ್ಯವಹಾರ, ಕೃಷಿ ಇತ್ಯಾದಿಗಳು ಅತಂತ್ರವಾಗಿದ್ದವು. 1704ರ ಅಕ್ಟೋಬರ್ ತಿಂಗಳ 12ರಂದು ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಸಭೆಯಲ್ಲಿ ಹೇಗೆಲ್ಲಾ ಗೋವಾದ ಹಿಂದುಗಳನ್ನು ದೋಚಬಹುದು, ತೆರಿಗೆ ಹೆಸರಿನಲ್ಲಿ ಲೂಟಿ ಮಾಡಬಹುದು ಎಂದು ಸಮಾಲೋಚಿಸಲಾಯಿತು. ಪಕ್ಕದಲ್ಲಿದ್ದ ಬಿಜಾಪುರದ ಆದಿಲ್ ಶಾಹೀ ಮತ್ತು ಮೊಘಲರ ಆಡಳಿತದ ಜಿಜಿಯಾ ರೀತಿಯ ತೆರಿಗೆಯನ್ನು ಯಾವ ರೀತಿ ವಿಧಿಸಬಹುದು, ಎಂಬ ಚರ್ಚೆಯೂ ಆಯಿತು.

ಪಣಜಿಯಲ್ಲಿ 1972ರಲ್ಲಿ ಪ್ರಕಟವಾದ ವಿ.ಟಿ.ಗುಣೆ ಅವರ “a Detailed Subject-Index and a Table of Contents in Brief” ಕೃತಿಯು ವಿಶದಪಡಿಸುವಂತೆ, ಬಹುಪಾಲು ಹಿಂದೂಗಳು ಜುಟ್ಟು ಬಿಡುವುದರಿಂದ ಈ “ಜುಟ್ಟಿನ ತೆರಿಗೆ” ವಿಧಿಸಲು ತೀರ್ಮಾನಿಸಲಾಯಿತು. ಕ್ರೈಸ್ತೇತರರು ಮಾತ್ರ ಈ ತೆರಿಗೆಯನ್ನು ತೆರಬೇಕಾಗಿತ್ತು. ಸಣ್ಣ ವ್ಯಾಪಾರಿಗಳು, ಅಕ್ಕಸಾಲಿಗರು ಮೂರು ಕ್ಸೆರಾಫಿನ್ (ಗೋವಾ ಪೋರ್ತುಗೀಸರ ನಾಣ್ಯ) ತೆರಬೇಕು; ಸಗಟು ವ್ಯಾಪಾರಿಗಳು ಐದು ಕ್ಸೆರಾಫಿನ್ ಮತ್ತು ಉಳಿದವರು ಎರಡು ಕ್ಸೆರಾಫಿನ್ ತೆರಿಗೆ ಕಟ್ಟಬೇಕು, ಎಂದು ತೀರ್ಮಾನಿಸಲಾಯಿತು. ಈ ಜುಟ್ಟಿನ ತೆರಿಗೆ ದೋಚಲು ನಿಗದಿತವಾದ ಪಡೆಯು, ತೆರಿಗೆದಾರರ ಪಟ್ಟಿ ಸಿದ್ಧಪಡಿಸಿಕೊಂಡು ಗೋವಾದ ಹಿಂದೂಗಳ ಭರ್ತ್ಸನೆಯಲ್ಲಿ ಹಿಂಸೆಯಲ್ಲಿ ನಿರತವಾಯಿತು. ಅಕ್ಷರಶಃ ನಿಯಂತ್ರಣವೇ ಇರಲಿಲ್ಲ. ಕೆಲವೆಡೆ ಐವತ್ತು, ನೂರು ಕ್ಸೆರಾಫಿನ್ ಗಳಷ್ಟು ಹಣ ಕಿತ್ತುಕೊಂಡ ಉದಾಹರಣೆಗಳೂ ಇದ್ದವು.

goa ನನ್ನ ದೇಶ ನನ್ನ ದನಿ

ತುಂಬಾ ಹಿಂದೆ ಅಂದರೆ, 1567ರಲ್ಲಿಯೇ ಗೋವಾದಲ್ಲಿ ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಮೊದಲ ಸಭೆಯಲ್ಲಿ ಹಿಂದೂಗಳ ವಿಗ್ರಹಾರಾಧನೆ, ಸಂಪ್ರದಾಯಗಳು, ಪೂಜೆಗಳು, ಆಚಾರ ವಿಚಾರಗಳು, ಮೈಮೇಲೆ ಗಂಧವನ್ನು ಲೇಪಿಸಿಕೊಳ್ಳುವುದು, ತುಳಸೀ ಪೂಜೆ ಮಾಡುವುದು ಇತ್ಯಾದಿ ಎಲ್ಲವನ್ನೂ ಟೀಕಿಸಲಾಯಿತು, ನಿಷೇಧಿಸಲಾಯಿತು. ಜನಿವಾರ ಹಾಕುವ ಸಮುದಾಯಗಳು ಜನಿವಾರವನ್ನು ಅಡಗಿಸಿಕೊಳ್ಳಬೇಕಿತ್ತು. ಜುಟ್ಟು ಬಿಟ್ಟವರ ಮೇಲೆಯೂ ದಾಳಿ ಹೆಚ್ಚಾಗುತ್ತಹೋಯಿತು. 1868ರಲ್ಲಿ ಲಿಸ್ಬೋವಾದಲ್ಲಿ ಪ್ರಕಟವಾದ ಪೋರ್ತುಗೀಸ್ ಭಾಷೆಯ “Subsidios para a Historia da India Portuguesa” (ಲೇಖಕ: ಆರ್.ಜೆ.ಡೇ ಲಿಮಾ ಫೆಲ್ನರ್ : ಪುಟಗಳು 58, 62 ಇತ್ಯಾದಿ) ಗ್ರಂಥದಲ್ಲಿ ಗೋವಾ ಹಿಂದೂಗಳ ಮೇಲಾಗುತ್ತಿದ್ದ ಬೀಭತ್ಸ ಹಿಂಸೆಯ ವಿವರಗಳಿವೆ.

ಎಸ್.ಜೆ.ಸೆಬಾಸ್ಟಿಯೋ ಫರ್ನಾಂಡಿಸ್ ಎಂಬವನು ಬರೆದ ಪತ್ರವೊಂದರಲ್ಲಿ ಕೆಲವು ಭಯಾನಕ ವಿವರಗಳಿವೆ: “ಹಿಂಸೆ ತಾಳಲಾರದೆ ಹಿಂದೂವೊಬ್ಬ ಕೊನೆಗೊಮ್ಮೆ ಬಲವಂತದ ಮತಾಂತರಕ್ಕೆ ಒಪ್ಪಿದರೆ, ಬ್ಯಾಪ್ಟೈಸಾಗಲು ಸಿದ್ಧನಾದರೆ ಜೆಸ್ಯೂಟ್ ಬ್ರದರ್ ಒಬ್ಬ ತಕ್ಷಣವೇ ಅವನ ಜುಟ್ಟು ಕತ್ತರಿಸುತ್ತಾನೆ. ಮರವೊಂದಕ್ಕೆ ಆ ಜುಟ್ಟನ್ನು ನೇತುಹಾಕಲಾಗುತ್ತದೆ. ಅಲ್ಲಿ ಸೇರಿದ ಕ್ರೈಸ್ತ ಯುವಕರೆಲ್ಲಾ ಆ ಜುಟ್ಟಿಗೆ ಉಗಿಯುತ್ತಾರೆ, ಆ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾರೆ, ಕುಣಿದು ಸಂಭ್ರಮಿಸುತ್ತಾರೆ. ಎಲ್ಲ ಸೇರಿ ಹಿಂದೂ ದೇವತೆಗಳಿಗೆ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾರೆ, ಬೈಯುತ್ತಾರೆ. ಮುಗ್ಧರಾದ ನಾವು ಇಂತಹುದನ್ನು ನಂಬುವುದು ಕಷ್ಟ. ಪೋರ್ತುಗಲ್ ನ ಕಿಂಗ್-ಗೆ, ಅಂದಿನ ಗೋವಾದ ಚೀಫ್ ರೆವಿನ್ಯೂ ಕಮ್ ಟ್ರೋಲರ್ (Comptroller) ಆಗಿದ್ದ ಸಿಮಾವ್ ಬೊಟೆಲ್ಹೋ ಬರೆದ ಪತ್ರದಲ್ಲಿಯೂ ಇಂತಹ ಅಮಾನುಷ ರಾಕ್ಷಸೀ ವ್ಯವಹಾರಗಳ ಚಿತ್ರಣವಿದೆ. “ಅವಹೇಳನ, ಶಿಕ್ಷೆ, ಹಿಂಸೆಗಳಿಗೆ ಸಾಕಾಗಿಹೋದ ಹಿಂದೂಗಳು ಬ್ಯಾಪ್ಟೈಸಾಗಲು ಒಪ್ಪಿದ ಕೂಡಲೇ, ಅವರೆಲ್ಲರ ತಲೆಯನ್ನು ಬೋಳಿಸಲಾಗುತ್ತದೆ. ವಿಗ್ರಹಾರಾಧನೆಯ ಅಪರಾಧಕ್ಕೆ ಆ ಎಲ್ಲ ಹಿಂದೂಗಳಿಗೆ ಗೋಮಾಂಸವನ್ನು ಒತ್ತಾಯಪೂರ್ವಕವಾಗಿ ತಿನ್ನಿಸಲಾಗುತ್ತದೆ” ಎಂಬ ವಿವರಗಳು ಈ ಪತ್ರದಲ್ಲಿವೆ.

ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ. ಹೀಗಿದ್ದೂ ನಮ್ಮಲ್ಲಿ ಎಂತಹ ದೇಶದ್ರೋಹಿಗಳು, ವಂಚಕರು, ಸಮಯಸಾಧಕರು ಇದ್ದಾರೆ ಎಂದರೆ, 1998ರಲ್ಲಿ ಈ ವಾಸ್ಕೋ ಡ ಗಾಮಾನ ಭಾರತ ಭೇಟಿಯ 500 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿತ್ತು. ಜನರು ಥೂ ಎಂದು ಹೀನಾಮಾನವಾಗಿ ಉಗಿದ ಮೇಲೆ, ಈ “ಆಚರಣೆ” ರದ್ದಾಯಿತು. ನಾವು ಸ್ವಾಭಿಮಾನ ಶೂನ್ಯರಾದರೆ, ನಮ್ಮ ಅಸ್ಮಿತೆಯನ್ನೇ ಮರೆತರೆ, ಶತ್ರುಗಳನ್ನು – ಆಕ್ರಮಣಕಾರಿ ರಿಲಿಜನ್ನಿನವರನ್ನೇ ಆರಾಧಿಸಲು ತೊಡಗಿದರೆ, ಭಾರತ-ಶತ್ರುಗಳನ್ನು ಅರ್ಥ ಮಾಡಿಕೊಳ್ಳದೇಹೋದರೆ, ಮತ್ತೆ ಪರಾಕ್ರಾಂತರಾಗುತ್ತೇವೆ. ಎಚ್ಚೆತ್ತುಕೊಳ್ಳದೇ ಹೋದರೆ ಈ ಬಾರಿ ಹೇಳಹೆಸರಿಲ್ಲದಂತಾಗುತ್ತೇವೆ.

ಎಚ್ಚರ, ಜಾಗೃತಿ, ಸ್ವರಕ್ಷಣೆಗಳು ನಮ್ಮ ಕಣ್ಣು ತೆರೆಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…

ರಾಜಮಾರ್ಗ ಅಂಕಣ: ಅಕ್ಕ ಇದ್ದದ್ದೇ ಹಾಗೆ! ಅದೇ ಪಾಸಿಟಿವ್ ಸೌಲ್. ಯಾವ ನೋವಿದ್ದರೂ ನಗು ಮತ್ತು ನಗು ಮಾತ್ರ. ಬಿಗ್ ಬಾಸ್ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಅದು ನಿಮಗೆ ಸೂಟ್ ಆಗೋದಿಲ್ಲ ಅಕ್ಕ ಎಂದು ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು ಒಂದು ನಗುವ ಇಮೋಜಿ ಹಾಕಿದ್ದರು.

VISTARANEWS.COM


on

ರಾಜಮಾರ್ಗ ಅಂಕಣ Anchor Aparna
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕನ್ನಡದ ನಿರೂಪಣಾ ಕ್ಷೇತ್ರದ ಲೆಜೆಂಡ್ ಇವತ್ತು ನಮ್ಮನ್ನೆಲ್ಲ ದುಃಖದ ಕಡಲಲ್ಲಿ ಮುಳುಗಿಸಿ ನಿರ್ಗಮಿಸಿದ್ದಾರೆ. ಅಲ್ಪ ಕಾಲದ ಅನಾರೋಗ್ಯ ಅವರನ್ನು ಸೆಳೆದುಕೊಂಡು ಹೋಗಿದೆ ಎಂದರೆ ನನಗೆ ನಂಬಲು ಕಷ್ಟವಾಗುತ್ತಿದೆ.

1983ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ʼಮಸಣದ ಹೂವು’ ಸಿನೆಮಾದ ಕಥಾನಾಯಕಿ ಆಗಿ ಅವರು ನಾಡಿಗೆ ಪರಿಚಿತರಾದರು. ಮುಂದೆ ಹಲವಾರು ಸಿನೆಮಾಗಳಲ್ಲಿ ಅವರ ಪ್ರತಿಭೆ ಪ್ರಕಾಶನಕ್ಕೆ ಬಂದಿತು. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ಅನಂತನಾಗ್ ಮಗಳಾಗಿ ಅಪರ್ಣಾ ಭಾರೀ ಮಿಂಚಿದರು.

ಆದರೆ ಮುಂದೆ ಅವರಾಗಿ ಆರಿಸಿಕೊಂಡದ್ದು ನಿರೂಪಣಾ ಕ್ಷೇತ್ರವನ್ನು. ಯಾವುದೇ ವೇದಿಕೆಯ ಕಾರ್ಯಕ್ರಮದ ನಿರೂಪಣೆಗೆ ಅಪರ್ಣಾ ಇದ್ದಾರೆ ಎಂದರೆ ಯಶಸ್ಸು ನೂರಕ್ಕೆ ನೂರು ನಿಶ್ಚಿತ ಅನ್ನುವ ನಂಬಿಕೆಯು ಎಂದಿಗೂ ಸುಳ್ಳಾದ ನಿದರ್ಶನವೇ ಇಲ್ಲ ಎನ್ನಬಹುದು. ಅದು ರಾಜಕೀಯ, ಧಾರ್ಮಿಕ, ಸಾಹಿತ್ಯಿಕ, ಪುಸ್ತಕ ಬಿಡುಗಡೆ, ಭಾವಗೀತೆಗಳ ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಅಪರ್ಣಾ ಇರಲೇ ಬೇಕು ಎನ್ನುವ ಮಾತು ಜನಜನಿತ ಆಗಿತ್ತು. ಪ್ರತೀಯೊಂದು ಕಾರ್ಯಕ್ರಮಕ್ಕೂ ಆಕೆಯು ಚಂದವಾದ ಸಿದ್ಧತೆ ಮಾಡದೇ ವೇದಿಕೆ ಏರುತ್ತಲೇ ಇರಲಿಲ್ಲ.

ನವಿರಾದ ಮತ್ತು ಸಾಹಿತ್ಯಿಕವಾದ ಕನ್ನಡ, ಪ್ರೌಢವಾದ ಮತ್ತು ಸುಲಲಿತ ಭಾಷೆ, ಸ್ಪಷ್ಟವಾದ ಉಚ್ಛಾರ ಸಮೀಚೀನ ಪದಗಳ ಬಳಕೆ, ಆಳವಾದ ಧ್ವನಿ, ನಿರರ್ಗಳತೆ ಮತ್ತು ಭಾವನಾತ್ಮಕ ಟಚ್ ಇವುಗಳು ಕೇವಲ ಅಪರ್ಣಾ ಅವರ ಬ್ರ್ಯಾಂಡ್‌ಗಳು. ನಿರಂತರವಾಗಿ 12 ಘಂಟೆಗಳ ಒಂದು ವೇದಿಕೆಯ ಕಾರ್ಯಕ್ರಮವನ್ನು ವಿರಾಮವೇ ಇಲ್ಲದೆ ನಿರೂಪಣೆ ಮಾಡಿದ ದಾಖಲೆಯು ಅವರ ಹೆಸರಲ್ಲಿ ಇದೆ.

ದೂರದರ್ಶನದ ಸಾವಿರಾರು ಕಾರ್ಯಕ್ರಮಗಳ ನಿರೂಪಣೆ, ವಾಯ್ಸ್ ಒವರ್ ಗಳು, ಸ್ಕ್ರಿಪ್ಟಗಳು ಅವರ ಅಗಾಧವಾದ ಪ್ರತಿಭೆಯ ಎರಕಗಳೇ ಆಗಿವೆ. ಅವರು ತುಂಬಾ ಪುಸ್ತಕ ಓದುತ್ತಿದ್ದರು. ಓದುವ ಅಭ್ಯಾಸ ಅಪ್ಪನ ಮೂಲಕ ಬಂದಿತು ಎಂದು ಅವರು ಹೇಳುತ್ತಿದ್ದರು.

ಅವರ ಜೊತೆಗೆ ಹಲವಾರು ವೇದಿಕೆಯ ನಿರೂಪಣೆಯ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಹಂಚಿಕೊಂಡ ಭಾಗ್ಯ ನನ್ನದು. ನಾನವರನ್ನು ಅಕ್ಕಾ ಎಂದೇ ಕರೆಯುವುದು. ಅವರು ತಮ್ಮ ಎಂದು ನನ್ನನ್ನು ಕರೆದರೆ ನನಗೆ ಖುಷಿ.

ನಾಲ್ಕು ವರ್ಷಗಳ ಹಿಂದೆ ಅವರ ಬಗ್ಗೆ ‘ಇಂದಿನ ಐಕಾನ್’ ಸರಣಿಯಲ್ಲಿ ಲೇಖನ ಬರೆದಿದ್ದೆ. ಅದು ಯಾರೋ ಅವರ ಗೆಳೆಯರ ಮೂಲಕ ಅವರಿಗೆ ತಲುಪಿತ್ತು. ಆಗ ಅವರೇ ಫೋನ್ ಮಾಡಿ ಮೆಚ್ಚುಗೆ ಹೇಳಿ ಥ್ಯಾಂಕ್ಸ್ ಎಂದಿದ್ದರು. ಅದರ ನಂತರವೂ ನನ್ನ ಹಲವಾರು ಲೇಖನ ವಾಟ್ಸಾಪ್ ಮೂಲಕ ಅವರಿಗೆ ತಲುಪಿದಾಗ ತುಂಬಾ ಚಂದ ಬರಿತೀರಿ ಎಂದೆಲ್ಲ ಬೆನ್ನು ತಟ್ಟುವ ಮಾತು.

ಅಕ್ಕ ಇದ್ದದ್ದೇ ಹಾಗೆ! ಅದೇ ಪಾಸಿಟಿವ್ ಸೌಲ್. ಯಾವ ನೋವಿದ್ದರೂ ನಗು ಮತ್ತು ನಗು ಮಾತ್ರ. ಬಿಗ್ ಬಾಸ್ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಅದು ನಿಮಗೆ ಸೂಟ್ ಆಗೋದಿಲ್ಲ ಅಕ್ಕ ಎಂದು ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು ಒಂದು ನಗುವ ಇಮೋಜಿ ಹಾಕಿದ್ದರು.

ಅಪರ್ಣಾ ಅಕ್ಕ ಇಂದು ನಿರ್ಗಮಿಸಿದ ಸುದ್ದಿ ಬಂದಿದೆ. ಇಡೀ ನಾಡಿಗೆ ಅದು ಶಾಕಿಂಗ್. ಯಾಕೆಂದರೆ ನಿರೂಪಣೆಯ ಕ್ಷೇತ್ರಕ್ಕೆ ಆಕೆ ಒಂದು ಲೆಜೆಂಡ್. ಈ ಸುದ್ದಿಯು ಸುಳ್ಳಾಗಲಿ ದೇವರೇ ಎಂದು ಈಗಲೂ ಒಳಮನಸ್ಸು ಹೇಳುತ್ತ ಇದೆ.

ಅಪರ್ಣ ಒಳ್ಳೆಯ ಅಕ್ಕ. ಹೋಗಿ ಬನ್ನಿ ಅಕ್ಕ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿವಾಹ ವಿಚ್ಛೇದನ ಮತ್ತು ಭಾರತೀಯ ಸಮಾಜ

Continue Reading
Advertisement
Paris Olympics
ಕ್ರೀಡೆ9 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

bangladesh protests dhaka
ಪ್ರಮುಖ ಸುದ್ದಿ16 mins ago

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Music Composer Hamsalekha Ask Apology To Jain Community controversial
ಸಿನಿಮಾ20 mins ago

Music Composer Hamsalekha : ಜೈನ ಫಿಲಾಸಫಿ ಬುಲ್‌‌ಶಿಟ್ ಎಂದು ಅವಮಾನಿಸಿದ ಹಂಸಲೇಖ ಈಗ ಕ್ಷಮಿಸಿ ಅಂತಿದ್ದಾರೆ!

road accident savadatti belagavi news
ಬೆಳಗಾವಿ59 mins ago

Road Accident: ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಇಬ್ಬರು ಗಂಭೀರ

road rage bangalore
ಬೆಂಗಳೂರು1 hour ago

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

Pets in Designer Outfits
Latest1 hour ago

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

dengue fever death davanagere
ಪ್ರಮುಖ ಸುದ್ದಿ2 hours ago

Dengue fever: ಶಂಕಿತ ಡೆಂಗ್ಯು ಜ್ವರಕ್ಕೆ ಯುವತಿ ಸಾವು, ರಾಜ್ಯದಲ್ಲಿ ಡೆಂಗ್ಯು ಸಾವು 9ಕ್ಕೆ ಏರಿಕೆ

ರಾಜಮಾರ್ಗ ಅಂಕಣ alphe hevett
ಅಂಕಣ2 hours ago

ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

karnataka weather Forecast
ಮಳೆ2 hours ago

Karnataka Weather : ಗಾಳಿ ಸಹಿತ ಜೋರು ಮಳೆ; 11 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ರಾಜಮಾರ್ಗ ಅಂಕಣ sadananda suvarna
ಅಂಕಣ2 hours ago

ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ20 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ20 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌