ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು - Vistara News

ಅಂಕಣ

ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು

ಶ್ರೀರಾಮ ತೊರೆದ ಸೀತೆಯನ್ನು ಮುಖಾಮುಖಿಯಾದ ಕವಿ ವಾಲ್ಮೀಕಿಯನ್ನು ನೆನೆಯುತ್ತಾ ಹುಟ್ಟಿಕೊಂಡ ಕವಿತೆ ʼಶಿಶಿರದ ಪಾಡು.ʼ ರಾಮನ ಪಾಡು, ಅದನ್ನು ನೋಡಿ ಕರಗುವ ಸೀತೆಯ ಪಾಡಿನಿಂದ ಹುಟ್ಟಿಕೊಂಡ ಹಾಡು ʼರಾಮನವಮಿಯ ರಾತ್ರಿ.ʼ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿಯವರ ಎರಡು ಕವಿತೆಗಳ ಬಗ್ಗೆ ಇಲ್ಲಿದೆ ವಿಶ್ಲೇಷಣೆ.

VISTARANEWS.COM


on

sita and valmiki
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
salabhanjike logo

ಒಳ್ಳೆಯ ಪದ್ಯ ಎಂದರೆ ಮುಗಿದ ಮೇಲೂ ಓದುಗನ ಮನಸ್ಸಿನಲ್ಲಿ ಅದು ಬೆಳೆಯುತ್ತಿರಬೇಕು ಎಂಬ ಮಾತೇನೋ ಸತ್ಯವೇ. ಒಂದು ಒಳ್ಳೆಯ ಕವಿತೆಯನ್ನು ಓದುತ್ತಿರಬೇಕಾದರೆ ಓದುಗನ ಮನಸ್ಸಿನಲ್ಲೂ ಅದಕ್ಕೆ ಸಂವಾದಿಯಾದ ಒಂದು ಕವಿತೆ ಹುಟ್ಟಿಕೊಳ್ಳುತ್ತದೆ. ಕವಿ ತನ್ನ ಹಿನ್ನೆಲೆಯಲ್ಲಿ ಗ್ರಹಿಸಿ ಮೂಡಿಸಿದ ಭಾವದ್ರವ್ಯಕ್ಕೆ ಓದುಗ ತನ್ನ ಹಿನ್ನೆಲೆಯ ಗ್ರಹಿಕೆಗಳನ್ನು ಸೇರಿಸಿ ಓದುವಾಗ, ಓದುತ್ತಿರುವ ಕವಿತೆಗಿಂತ ಕೊಂಚ ಭಿನ್ನವಾದ ಈ ಕವಿತೆ ಪ್ರತಿ ಓದುಗನ ಓದೂ ವಿಭಿನ್ನವಾಗಿಸುತ್ತದೆ. ಮತ್ತು ಅದು ಎಷ್ಟು ಓದುಗನ ಹಿನ್ನೆಲೆಗೆ ಹತ್ತಿರವಾಗುತ್ತದೆ ಎಂಬುದರ ಆಧಾರದ ಮೇಲೆ ಅದು ಓದುಗನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಕೆಲವು ಕವಿತೆಗಳಿರುತ್ತವೆ. ಅವು ಓದುಗನ ಮನದಲ್ಲಷ್ಟೇ ಅಲ್ಲ, ಕವಿಯ ಮನಸ್ಸಿನಲ್ಲೂ ಮುಗಿದಿರದೆ ಬೆಳೆಯುತ್ತಲೇ ಇರುತ್ತವೆ. ಪದ್ಯ ಪ್ರಕಟವಾದ ನಂತರವೂ ಕವಿಯನ್ನು ಕಾಡುತ್ತಲೇ ಇರುತ್ತವೆ. (ಒಬ್ಬ ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದೇ ಕವಿತೆಯನ್ನು ಎಂಬ ಮಾತು ಇದೆಯಾದರೂ ಇದು ಆ ಕುರಿತ ಮಾತಲ್ಲ). ಆ ಕಾಡುವಿಕೆ ತೀವ್ರ ಸ್ವರೂಪದ್ದಾಗಿದ್ದರೆ ಮತ್ತೊಂದು ಅಷ್ಟೇ ಸಶಕ್ತ ಕವಿತೆ ಹುಟ್ಟಿಕೊಳ್ಳುತ್ತದೆ. ಅಂತಹಾ ಪದ್ಯಗಳಲ್ಲೊಂದು ಎಚ್. ಎಸ್. ವೆಂಕಟೇಶಮೂರ್ತಿಯವರ `ಶಿಶಿರದ ಪಾಡು’ ಎಂಬ ಪದ್ಯ.

ಪದ್ಯದ ಶೀರ್ಷಿಕೆ ಅದರ ಒಳಗನ್ನು ಬಹಳ ಸಮರ್ಥವಾಗಿ ಹೇಳುತ್ತದೆ. ಶಿಶಿರಕ್ಕೆ ಹಾಡಿಲ್ಲ, ಇರುವುದು ಪಾಡು ಮಾತ್ರ. ಏಕೆಂದರೆ ಅದು ತನ್ನದೆಲ್ಲವನ್ನೂ ಕಳೆದುಕೊಳ್ಳುವ ಹೊತ್ತು. ಅದರದು ತನ್ನನ್ನು ತಾನು ಕಳೆದುಕೊಳ್ಳುವ ಪಾಡು. ಆರಂಭದಲ್ಲೇ ಶಿಶಿರದ ಉದುರುವ ಎಲೆಗಳನ್ನು ಕವಿ ವಾಲ್ಮೀಕಿ ತನ್ನ ಕಣ್ಣ ಹನಿಗಳನ್ನೇ ಜಪಮಾಲೆಯಾಗಿಸಿ ನಡುಗುತ್ತಾ, ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದಾನೆ. ಎಚ್ಚೆಸ್ವಿಯವರು ವಾಲ್ಮೀಕಿಯನ್ನು ಋಷಿ ಎಂದಿಲ್ಲ. ಕವಿ ವಾಲ್ಮೀಕಿ ಎನ್ನುತ್ತಾ ಮುಂದೆ ನಡೆಯುವ ಘಟನೆಗಳ ಕುರಿತು ಆತನ ಪ್ರತಿಕ್ರಿಯೆಯ ಸ್ವರೂಪದ ಬಗ್ಗೆ ಓದುಗನ ಗಮನ ಸೆಳೆಯುತ್ತಾರೆ. ಋಷಿಯಾದರೆ ಸಂಯಮದ ಬಗ್ಗೆ ಪಾಠ ಹೇಳಿಯಾನು, ನಿರ್ಲಿಪ್ತನಾಗಿದ್ದಾನು. ಕವಿ ಹಾಗಿರಲು ಸಾಧ್ಯವೇ?

HSV
ಎಚ್‌ ಎಸ್‌ ವೆಂಕಟೇಶಮೂರ್ತಿ

ಗಂಗೆ ಹರಿವ, ಹಕ್ಕಿಯ ಕೂಗಿನ ಸದ್ದಿನ ನಡುವೆ ಯಾರೋ ಅತ್ತ ಸದ್ದು ಕೇಳುತ್ತದೆ ಕವಿಯ ಕಿವಿಗೆ. ಎದ್ದು ಬಂದ ವಾಲ್ಮೀಕಿ ಎದುರಿನಲ್ಲಿ ನೆಲದಲ್ಲಿ ಹೊರಳಿ ಅಳುತ್ತಿರುವ ಹೆಣ್ಣೊಬ್ಬಳನ್ನು ನೋಡಿ ಸಂಕಟದಿಂದ “ಯಾರಮ್ಮ ನೀನು? ನಾನು ಋಷಿ ವಾಲ್ಮೀಕಿ, ರಾಮಾಯಣ ಬರೆದವನು. ಹೆದರಬೇಡ ಹೇಳು” ಎಂದು ಸಂತೈಸುತ್ತಾನೆ. ಇಲ್ಲಿ ಋಷಿ ಎಂಬ ಪದವನ್ನು ಒಂಟಿ ಹೆಣ್ಣು ಹೆದರದಿರಲೆಂದು ಬಳಸುತ್ತಾರೆ ಕವಿ.

ಅವಳು ದುಃಖಿಸುತ್ತಲೇ ತಾನು ಜಾನಕಿ ದಾಶರಥಿಪ್ರಿಯಸತಿ ಎಂದು ಉತ್ತರಿಸಿದಾಗ ವಾಲ್ಮೀಕಿಗೆ ನಂಬಲಾಗುವುದಿಲ್ಲ. ಕವಿ ವಾಲ್ಮೀಕಿಯ ಪ್ರತಿಕ್ರಿಯೆ ನೋಡಿ:

ಹಾ ಎಂದು ಗರ ಹೊಡೆದು ತತ್ತರಿಸಿ ಹೋದ ಕವಿ
ತಾನು ಕೃತಿಯಲ್ಲಿ ಕಡೆದಿಟ್ಟ ಪಾತ್ರ
ಜೀವಂತವಾಗಿ ತನ್ನೆದುರೆ ಮೊಖ್ತ ಬಂದು
ಕಂಬನಿಯ ಮಿಡಿಯುತಿರೆ ಕುಡಿ ಬೆರಳಲಿ

ಹೇಗೆ ನಂಬಲಿ ಇದನು ಹೇಗೆ ನಂಬದೆ ಇರಲಿ
ಎದುರಿಗೇ ಇರುವಾಗ ಲೋಕಮಾತೆ
ಶ್ರೀರಾಮಪಟ್ಟಾಭಿಷೇಕ ಮುಗಿಸಿದ ಮೇಲೆ
ಹೀಗೆ ಎದುರಾಗುವುದೆ ತನ್ನ ಮಾತೆ?

ಕೃತಿಯ ಮುಗಿಸಿದ ತೃಪ್ತಿ ಮಣ್ಣಿನ ಹೊನ್ನನ್ನು
ರೂಪಾಂತರಿಸಿದ ತೃಪ್ತಿ ಶಾಂತಿಯೊಳಗೆ
ರಾಮ ನಾಮ ಧ್ಯಾನ ಏಕ ಶ್ರುತಿ ನಿಂತಾಗ
ಹೇಗೆ ಒಡೆಯಿತು ನೀಲಿ ಶಿಶಿರದೊಳಗೆ?

ಕಾಡು ದಾರಿಯ ಮುಗಿದು ಕೊನೆಗೆ ನಗರದ ನಡುವೆ
ಲಲಿತ ಮಹಲರಳಿ ಶ್ರೀರಾಮ ಸೀತೆ
ಒಂದಾಗಿ ಕೂಡಿರಲು ಕಂಟವನು ಕೆಳಗಿಟ್ಟೆ
ಹೀಗೇಕೆ ಬಂದೆಯೇ ಲೋಕ ಮಾತೆ?

ಕವಿ ಮನ ಕಂಗಾಲಾಗಿದೆ. ತಾನು ಜೊತೆಯಾಗಿಸಿ ಪಟ್ಟದ ಮೇಲೆ ಕೂಡಿಸಿ ಇನ್ನು ಕಥೆ ಮುಗಿಯಿತೆಂದು ಲೇಖನಿಯನ್ನು ಕೆಳಗಿಟ್ಟು ನೆಮ್ಮದಿಯಾಗಿರುವ ಹೊತ್ತಲ್ಲಿ ತನ್ನ ಕಾವ್ಯದ ನಾಯಕಿ ಹೀಗೆ ದೂಳಿನಲ್ಲಿ, ದುಃಖದಲ್ಲಿ ಹೊರಳಾಡಿ ಅಳುತ್ತಿರುವುದನ್ನು ನೋಡಿದರೂ ಅವನಿಗೆ ನಂಬಲಾಗುತ್ತಿಲ್ಲ. ಸಂಕಟವನ್ನು ತಾಳಲಾರದೆ ಮತ್ತೆ ಮತ್ತೆ ಕೇಳುತ್ತಿದ್ದಾನೆ. “ಹೇಳು ಮಗಳೇ ಹೇಳು, ಏಕಿಂಥ ಗತಿ ಬಂತು ಮತ್ತೆ ನಿನಗೆ?”

ರಾಮನಿರುವನಕ ರಾಮಾಯಣವು ಮುಗಿವುದೆ?
ಅಂತೆ ಸೀತೆಯ ಚಿಂತೆ ಸಾಯುವನಕ

ಸೀತೆ ವಿಷಾದದಿಂದ ಹೇಳುತ್ತಾ ಮುಂದುವರಿಸುತ್ತಾಳೆ…

ಅಧಿಕಾರದೊಳಗಿಟ್ಟು ಹೇಗೆ ಕಥೆ ಮುಗಿಸುವಿರಿ
ಆಗಲೇ ಆರಂಭ ಬದುಕಿನಣಕ

ಎಂತಹಾ ಉತ್ತರ! ವಾಲ್ಮೀಕಿಯ ಜೊತೆಗೆ ಓದುಗ ದಂಗುಬಡಿದು ಕೂರುತ್ತಾನೆ.

ಕನ್ನಡಿಯ ಬಿಂಬವೇ ಮುಖವನಣಕಿಸುವಾಗ
ಅರಮನೆಯೆ ಸುಡುಗಾಡು ತವರು ಕಾಡು
ನೀನೆನ್ನ ಹೆತ್ತವನು ರಾಮಾಯಣದ ಹೊರಗೆ
ರಾಮ ಹಾಡಿದ್ದುಂಟು ಇಂಥ ಹಾಡು

ಸೀತೆಯ ನಿಟ್ಟುಸಿರ ತೀವ್ರತೆಗೆ ಕವಿಯ ಕೊರಳು ಕಂಪಿಸುವುದರೊಂದಿಗೆ ಕವಿತೆ ಕೊನೆಯಾಗುತ್ತದೆ. ಸೀತೆ ಕಾಡಿನಲ್ಲಿಯೂ ರಾಮನ ಜೊತೆ ಸುಖವಾಗಿಯೇ ಇದ್ದವಳು. ಕಾಡಿನಲ್ಲಿದ್ದಾಗಲೇ ರಾವಣ ಹೊತ್ತು ಒಯ್ದಿದ್ದು. ರಾಮ ಅವಳಿಗಾಗಿ ಹಗಲಿರುಳು ಪರಿತಪಿಸಿ ಸಾವಿರಾರು ಮೈಲಿ ಕ್ರಮಿಸಿ ಹೋರಾಡಿ ಮತ್ತೆ ಪಡೆದದ್ದು ಅವನು ಕಾಡುಪಾಲಾಗಿದ್ದಾಗ. ನೀವು ತಪ್ಪು ಜಾಗದಲ್ಲಿ ಕೂರಿಸಿ ಕಥೆ ಮುಗಿಸಿದಿರಿ ಎಂದು ಸೀತೆಯ ಬಾಯಲ್ಲಿ ನುಡಿಸುವ ಕವಿ ಏಕಕಾಲದಲ್ಲಿ ಸೀತೆಯನ್ನೂ, ರಾಮನನ್ನೂ, ಅಧಿಕಾರವನ್ನೂ ಅರ್ಥ ಮಾಡಿಸುತ್ತಾರೆ. ಸೀತೆಗೆ ರಾಮನ ಬಗ್ಗೆ ದೂರಿಲ್ಲ, ರಾಮನಿಗೆ ಸೀತೆಯನ್ನು ಉಳಿಸಿಕೊಳ್ಳುವ ಸ್ವತಂತ್ರವಿಲ್ಲ, ಅಧಿಕಾರಕ್ಕೆ ಆ ಖಾಸಗಿತನವಿಲ್ಲ. ಅದೇನೇ ಇದ್ದರೂ ಸೀತೆಯದು ಮಾತ್ರ ಈಗ ಶಿಶಿರದ ಪಾಡು.

ಇಲ್ಲಿಗೆ ಕವಿತೆ ಮುಗಿಯುತ್ತದೆ. ಪದ್ಯ ಬರೆದ ಕವಿಯ ಮನದ ತೊಳಲಾಟ ಮುಗಿಯುವುದಿಲ್ಲ. ದಶಕಗಟ್ಟಲೆ ಆ ಶಿಶಿರದ ಪಾಡು ಕವಿಯ ಮನಸ್ಸಿನಲ್ಲಿ ಒದ್ದಾಡುತ್ತಲೇ ಇರುತ್ತದೆ. ಮುಂದೇನಾಗಿರಬಹುದು ಸೀತೆಯ ಪಾಡು? ರಾಮನ ಪಾಡು? ಅಷ್ಟು ಪ್ರೀತಿಸುವ ಸೀತೆ ತೊರೆದ ಮೇಲೆ ರಾಮ ಹೇಗೆ ತಾನೇ ನೆಮ್ಮದಿಯಿಂದ ಇದ್ದಾನು? ಸೀತೆಗೆ ದೂರೇ ಇಲ್ಲವೇ ರಾಮನ ಕುರಿತು? ಅವತಾರ ಮುಗಿದ ನಂತರವಾದರೂ ಹೇಗೆ ಒಟ್ಟಿಗೆ ಇರುತ್ತಾರೆ? ಸಾಂಸಾರಿಕ ಕವಿ ಎಂದೇ ಹೆಸರುವಾಸಿಯಾದ ಎಚ್ಚೆಸ್ವಿಯವರನ್ನು ಈ ವಿಷಯ ಅದೆಷ್ಟು ನೋಯಿಸಿದೆ ಎಂದರೆ ದಶಕಗಳ ನಂತರ ಮತ್ತೊಂದು ಅಷ್ಟೇ ಸಶಕ್ತ ಕವಿತೆಯೊಂದು ಒಡಮೂಡುತ್ತದೆ. ಅದು ʻರಾಮನವಮಿಯ ರಾತ್ರಿʼ.

ಇದನ್ನೂ ಓದಿ: ಸಾಲಭಂಜಿಕೆ ಅಂಕಣ | ಅದೃಷ್ಟ ಬೇಕು ಪದ್ಯ ಓದಲು

ಈ ಕವಿತೆಯಲ್ಲಿ ಅವತಾರಗಳೆಲ್ಲ ಮುಗಿದು ಗುಡಿ ಕಟ್ಟಿಸಿಕೊಂಡ ರಾಮ ದೇವರಾಗಿದ್ದಾನೆ. ರಾಮನ ಗುಡಿ ಎಂದರೆ ಅಲ್ಲಿ ರಾಮನೊಬ್ಬನೇ ಇರುವುದಿಲ್ಲವಷ್ಟೆ. ಅವನ ಜೊತೆಗೆ ಸೀತೆ ಲಕ್ಷ್ಮಣ ಹನುಮಂತರೂ ಇದ್ದಾರೆ. ಪ್ರತಿದಿನ ಬೆಳಗಿನಲ್ಲಿ ಅರ್ಚಕರು ರಾಮಕಥೆಯನ್ನು ಒಪ್ಪಿಸುತ್ತಾರೆ. ಹಾಗೆ ಒಪ್ಪಿಸುವಾಗ ಸೀತಾ ಪರಿತ್ಯಾಗದ ಕುರಿತು ಹೇಳುತ್ತಾ ಅವರ ಮನಸ್ಸೂ ಕರಗುತ್ತದೆ. ಅವರೂ ನೋಯುತ್ತಲೇ ರಾಘವ ಸೀತಾ ಪರಿತ್ಯಾಗ ನಿನಗೆ ಸಮ್ಮತವೇ ಎನ್ನುತ್ತಲೇ ರಾಮನನ್ನು ಅರ್ಚಿಸುತ್ತಾರೆ. ಇದು ದಿನದ ಕಥೆಯಾಯಿತು. ಕವಿ ರಾಮನವಮಿಯ ರಾತ್ರಿ ಎಂದು ಪದ್ಯಕ್ಕೆ ಹೆಸರನ್ನಿಟ್ಟಿದ್ದಾರೆ. ಅಂದರೆ ನಿಜವಾದ ಕಥೆ ನಡೆಯುವುದು ರಾತ್ರಿಯಲ್ಲಿಯೇ ಎಂದಾಯಿತಲ್ಲ. ಹಗಲಲ್ಲಿ ಅರ್ಚಕರು ಹಾಗೆ ನೆನಪಿಸಿದಾಗ-

ಶ್ರೀಮುಖದಲಾಗ ಸಣ್ಣಗೆ ನೋವು ಸುಳಿಯುವುದು.
ಶಿಲ್ಪಕ್ಕೆ ತುಟಿಯುಂಟು; ಇಲ್ಲ ಮಾತು.
ಕರುಣಾರ್ದ್ರ ತಾಯಿ ನೋಡುವರು ರಾಘವನನ್ನ!
ಅಭಿಷೇಕಜಲ ಕಣ್ಣಲೊಸರುತಿಹುದು.

ರಾಮ ಈಗ ಕಲ್ಲಾದ ದೇವರು. ಕಲ್ಲಿನೊಳಗೆ ಪ್ರಾಣಪ್ರತಿಷ್ಠಾಪನೆಯಾಗಿರುವ ದೇವರು. ರಾಮನ ಮುಖದಲ್ಲಿ ನೋವು ಸುಳಿಯುತ್ತದೆ. ಆದರೆ ತುಟಿಯ ಕೆತ್ತನೆಯಿದ್ದರೂ ಅದಕ್ಕೆ ಮಾತನಾಡಲಾಗುವುದಿಲ್ಲ. ಎದೆ ತುಂಬಾ ದುಗುಡವಿದ್ದರೂ ಕಣ್ಣಲ್ಲಿ ನೀರೊಸರುವುದಿಲ್ಲ. ಸೀತೆ ರಾಮನ ಕಡೆ ನೋಡುವಾಗ ಅರ್ಚಕನ ಅಭಿಷೇಕದ ಜಲ ಕಣ್ಣಲ್ಲಿ… ಸೀತೆ ವ್ಯಂಗ್ಯವಾಗಿ ನೋಡುವುದಿಲ್ಲ, ನನ್ನನ್ನು ಅಂದು ಕಾಡಿಗಟ್ಟಿದೆಯಲ್ಲ, ಇಂದು ನಿನ್ನ ಪಾಡು ಹೀಗಿದೆ ಎಂದು ಹಂಗಿಸುವ ನೋಟವೂ ಅದಲ್ಲ. ಕರುಣಾರ್ದ್ರ ತಾಯಿ ಎಂದು ಹೇಳುವ ಮೂಲಕ ಕವಿ ಆ ಇಡೀ ಸನ್ನಿವೇಶದ ಮನಸ್ಥಿತಿಯನ್ನು ಕಟ್ಟಿಕೊಡುತ್ತಾರೆ.

ಲಕ್ಷ್ಮಣಗೆ ಕಸಿವಿಸಿ. ತಲೆ ತಗ್ಗಿಸಿದ ಹನುಮ.
ತಾಯಿ ಮತ್ತೇನನ್ನೊ ಧ್ಯಾನಿಸುವಳು.
ಇರುಳು ಭಕ್ತರು ಹೋದಮೇಲೆ ರಾಮನು ಇಲ್ಲಿ
ಇರುವ ಬಗೆ ಹೇಗೆಂದು ಚಿಂತಿಸುವಳು.

ಅಂದು ಸೀತೆಯನ್ನು ಅಣ್ಣನ ಅಣತಿಯಂತೆ ಕಾಡಿಗೆ ಬಿಟ್ಟವನು ಲಕ್ಷ್ಮಣ. ಆ ಕಥೆಯಲ್ಲಿ ಅವನ ಪಾತ್ರವೂ ಇತ್ತಲ್ಲ… ಹನುಮಂತ ಸಾಗರವನ್ನೇ ದಾಟಿ ಸೀತೆಯನ್ನು ಹುಡುಕಿದವನು. ಇವರ್ಯಾರೂ ಆ ಸಂದರ್ಭದಲ್ಲಿ ಸೀತೆಯ ಬೆನ್ನಿಗೆ ನಿಂತವರಲ್ಲ. ಸೀತಾ ಪರಿತ್ಯಾಗವನ್ನು ವಿರೋಧಿಸಿ ಜಗಳವಾಡಿದರೂ, ಬೇಡಿಕೊಂಡರೂ ಕೊನೆಗೆ ರಾಮನ ಜೊತೆಗೇ ನಿಂತವರು. ಒಬ್ಬಂಟಿಯಾದವಳು ಸೀತೆ. ಕಾಡಿನಲ್ಲಿ ಕಾಲ ಹಾಕಿದವಳು ಸೀತೆಯೊಬ್ಬಳೇ. ಈಗ ಅರ್ಚಕರು ಆ ಕಥೆಯನ್ನೆಲ್ಲ ಮತ್ತೆ ಮತ್ತೆ ಬಿಚ್ಚಿಡುತ್ತಿದ್ದಾರೆ. ಇವರ ತಪ್ಪುಗಳೆಲ್ಲ ಮತ್ತೆ ಮತ್ತೆ ಎದುರು ಬಂದು ನಿಲ್ಲುತ್ತಿದೆ, ಅದೂ ಸೀತೆಯೆದುರಿಗೇ… ಯಾರಿಗೂ ಸೀತೆಯನ್ನು ತಲೆ ಎತ್ತಿ ದಿಟ್ಟಿಸುವ ಧೈರ್ಯವಿಲ್ಲ. ಎಲ್ಲರ ಮನದಲ್ಲೂ ದುಗುಡ. ಭಕ್ತರೆಲ್ಲ ಹಿಂತಿರುಗಿದ ಮೇಲೆ ರಾತ್ರಿ ಗುಡಿಯ ಬಾಗಿಲನ್ನು ಅರ್ಚಕರು ಮುಚ್ಚಿ ಹೊರಟ ನಂತರ ಏಕಾಂತದಲ್ಲಿ ರಾಮ ಇಲ್ಲಿ ಹೇಗಿರುತ್ತಾನೆ? ಮುಖವೆತ್ತಲಾಗದೆ… ದಿಟ್ಟಿಸಿ ನೋಡಲಾಗದೆ… ಅದನ್ನು ಹೇಗೆ ಸಹಿಸುವುದು ಎಂಬ ಚಿಂತೆ ರಾಮನದಲ್ಲ, ಸೀತೆಯದು.

ಇದನ್ನೂ ಓದಿ: ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಅರ್ಚಕರು ಮುಂಜಾನೆ ಮತ್ತದೇ ಕಥೆಯನ್ನು
ಹೇಳಿದರೆ ಕೇಳದೆಯೆ ಇರಲಿ ಹೇಗೆ?

ಅದು ರಾತ್ರಿಗೆ ಮುಗಿಯುವುದೂ ಇಲ್ಲ. ಮರುದಿನ ಬೆಳಗಿನಲ್ಲಿ ಮತ್ತೆ ಅರ್ಚಕರು ಗುಡಿಯ ಬಾಗಿಲನ್ನು ತೆರೆಯುತ್ತಾರೆ, ಪೂಜಿಸುತ್ತಾರೆ… ಅದರೊಟ್ಟಿಗೆ ಅದೇ ಕಥೆಯನ್ನು ಮತ್ತೆ ಹೇಳುತ್ತಾರೆ. ಅನುದಿನವೂ ಅದನ್ನು ಕೇಳಬೇಕಲ್ಲಾ ಎಂಬ ಸಂಕಟ. ತಲೆ ಎತ್ತಲು ಸಾಧ್ಯವೇ ಇಲ್ಲದ ಪರಿಸ್ಥಿತಿ, ಮನಸ್ಥಿತಿ… ಅದು ಕಾಡುವುದು ಕೇವಲ ರಾಮನನ್ನು ಮಾತ್ರವಲ್ಲ, ಸೀತೆಯನ್ನೂ. ಅವಳಿಗೆ ಆ ಕಥೆ ಅವಳ ಸಂಕಷ್ಟಗಳನ್ನು ನೆನಪಿಸಿಕೊಡುತ್ತಿಲ್ಲ, ರಾಮನ ಅಸಹಾಯಕತೆಯನ್ನು ನೆನಪಿಸಿಕೊಡುತ್ತಿದೆ. ಆ ಕಾರ್ಯವನ್ನು ರಾಮ ಎಷ್ಟು ಒತ್ತಡದಲ್ಲಿ ಮಾಡಿದ್ದಾನೆ ಎಂಬುದೂ, ಲಕ್ಷ್ಮಣ, ಹನುಮಂತರ ನಿಸ್ಸಹಾಯಕ ಸ್ಥಿತಿಯೂ ಅವಳಿಗೆ ಅರಿವಿದೆ. ಇದರಾಚೆಗೂ ಸೀತೆ ಯೋಚಿಸುತ್ತಿರುವುದು ಕಲ್ಲಾಗಿ ನಿಂತ ವಿಗ್ರಹಗಳ ನಿರಾಳ ರಾತ್ರಿಯ ಬಗ್ಗೆ.

ನಿಂತರೂ ನಡೆದವರ ನಡೆದ ನಡೆ ಕಾಡುವುದು
ಮುಗಿದಿರುವ ಹಾಡ ಪಲ್ಲವಿಯ ಹಾಗೆ.

ನಡೆಗಳು ಮುಗಿದುಹೋದ ನಂತರವೂ ನಿಂತವರನ್ನು ನಡೆದ ನಡೆಗಳ ಗುರುತು ಕಾಡದೆ ಬಿಡುವುದಿಲ್ಲ. ನಿಂತವರನ್ನು ಅಷ್ಟೇ ಅಲ್ಲ, ನಿಂತವರ ನಡೆಗಳನ್ನು ಪಠಿಸುವವರಿಗೂ ಅವು ಕಾಡುತ್ತವೆ. ಆ ನಡೆ ಅಸಹಾಯಕತೆಯಲ್ಲಿಯೇ ಬಂದಿದ್ದರೂ, ಅನಿವಾರ್ಯವೇ ಆಗಿದ್ದರೂ ಅದಕ್ಕೆ ಕ್ಷಮೆಯಿದ್ದರೂ, ಅವು ಮುಗಿದೇ ಹೋಗಿದ್ದರೂ ಆ ನಡೆಗಳು ಎಂದಿಗೂ ಜೀವಂತ. ಸಾಂಸಾರಿಕ ಕವಿ, ಹೆಣ್ಣು ಮನದ ಕವಿ ಇದನ್ನು ಬಿಚ್ಚಿಡುವುದು ಹೀಗೆ. ನೀನು ದೇವರೇ ಆದರೂ ಈ ಕೃತ್ಯ ನಿನ್ನನ್ನೂ ಕಾಡದೆ ಬಿಡುವುದಿಲ್ಲ. ನಿನ್ನನ್ನು ಕಾಡಿದಷ್ಟೇ, ಆ ಕಾಡುತ್ತಿರುವ ನಿನ್ನ ಸಂಕಟ ನಿನ್ನವರನ್ನೂ ಕಾಡುವ ಸಂಕಟವಾಗಿ ಪರಿಣಮಿಸುತ್ತದೆ ಎಂಬ ನಿಲುವು ಅದು.

ಎಂದೋ ಹುಟ್ಟಿದ ಶಿಶಿರದ ಪಾಡು. ರಾಮನ ಪಾಡಿನಲ್ಲಿ, ಅದನ್ನು ನೋಡಿ ಕರಗುವ ಸೀತೆಯ ಪಾಡಿನಲ್ಲಿ ಹೀಗೆ ಮುಗಿಯುತ್ತದೆ. ಒಂದು ಕವಿತೆ ಹುಟ್ಟಿ ಮತ್ತೊಂದು ಕವಿತೆಯಲ್ಲಿ ಮುಗಿಯುವ ಬಗೆಯಿದು… ಮುಗಿಯದ ಭಾವದ ಕವಿತೆ.

ಇದನ್ನೂ ಓದಿ: ಸಾಲಭಂಜಿಕೆ ಅಂಕಣ| ಬಳೆಗಾರನಿಗೇಕೆ ಹಾಡುವ ಪಾಡು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

ರಾಜಮಾರ್ಗ ಅಂಕಣ: ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಬೋಳ ಅಕ್ಷತಾ ಪೂಜಾರಿಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು.

VISTARANEWS.COM


on

ರಾಜಮಾರ್ಗ ಅಂಕಣ bola akshta pujari
Koo

ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ವಿಭಾಗದಲ್ಲಿ ಮತ್ತೆ ಆಕೆಯಿಂದ ವಿಶ್ವವಿಕ್ರಮ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಶನಿವಾರ ದಕ್ಷಿಣ ಆಫ್ರಿಕಾದ ಫೊಚೇಫಸ್ಟಮ್ ನಗರದಲ್ಲಿ ನಡೆದ ಏಷಿಯಾ ಪೆಸಿಫಿಕ್ ಆಫ್ರಿಕನ್ (ಅಂದರೆ ಎರಡು ಖಂಡಗಳ ಮಟ್ಟದ) ಪವರ್ ಲಿಫ್ಟಿಂಗ್ (power lifting) ಮತ್ತು ಬೆಂಚ್ ಪ್ರೆಸ್ (bench press) ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಬೋಳ ಅಕ್ಷತಾ ಪೂಜಾರಿ (Bola Akshata Pujrai ಈ ಬಾರಿಯೂ ಚಿನ್ನದ ಪದಕ (gold medal) ಗೆದ್ದಿದ್ದಾರೆ! ಆಕೆ ನನ್ನೂರು ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದವರು ಅನ್ನೋದು ನಮಗೆಲ್ಲ ಹೆಮ್ಮೆ. ನಾನು ಬಾಲ್ಯದಿಂದಲೂ ಆಕೆಯ ಬೆಳವಣಿಗೆಯನ್ನು ಗಮನಿಸಿದ್ದೇನೆ ಅನ್ನುವುದು ನನಗೆ ಅಭಿಮಾನ.

ಈ ಬಾರಿ ಆಕೆ ಸ್ಪರ್ಧೆ ಮಾಡಿದ್ದು 52 ಕೆಜಿ ದೇಹತೂಕದ ಸೀನಿಯರ್ ವಿಭಾಗದಲ್ಲಿ. ಅಲ್ಲಿ ಸ್ಪರ್ಧೆ ತುಂಬಾ ಕಠಿಣ ಆಗಿದ್ದು 18 ಮಂದಿ ವಿದೇಶದ ಸ್ಪರ್ಧಿಗಳು ಇದ್ದರು! ಅಲ್ಲಿ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ್ದಾರೆ ಅಂದರೆ ಅದು ಎಷ್ಟೊಂದು ದೊಡ್ಡ ಸಾಧನೆ!

ಆಕೆ ವಿಶ್ವಮಟ್ಟದ ಪದಕ ಗೆದ್ದಿರುವುದು ಇದೇ ಮೊದಲಲ್ಲ!

ಆಕೆಯ ಯಶೋಗಾಥೆಯು ಆರಂಭ ಆದದ್ದು 2011ರಲ್ಲಿ. ಅಂದು ಆಕೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಭಾಗವಹಿಸಿ 8 ಚಿನ್ನದ ಪದಕ ಪಡೆದಿದ್ದರು! ಅದರ ಮುಂದಿನ ವರ್ಷ (2012) ಮತ್ತೆ ಏಷಿಯನ್ ಕೂಟದಲ್ಲಿ ಗೋಲ್ಡ್! ಮತ್ತೆ 2014ರಲ್ಲಿ ವರ್ಲ್ಡ್ ಚಾಂಪಿಯನಶಿಪನಲ್ಲಿ ಗೋಲ್ಡ್! 2018ರಲ್ಲಿ ಏಷಿಯನ್ ದುಬಾಯಿ ಕೂಟದ ಗೋಲ್ಡ್! 2022ರಲ್ಲಿ ಕಝಾಕ್ ಸ್ಥಾನ ಕೂಟದಲ್ಲಿ ಸಿಲ್ವರ್ ಮೆಡಲ್! ಮತ್ತು ಈ ಬಾರಿ ಸೌಥ್ ಆಫ್ರಿಕಾ ಕೂಟದಲ್ಲಿ ಗೋಲ್ಡ್ ಮೆಡಲ್!

ಒಬ್ಬಳು ಹಳ್ಳಿಯ ಸಾಮಾನ್ಯ ಕೃಷಿಕ ಕುಟುಂಬದಿಂದ ಬಂದ ಓರ್ವ ಸೀದಾಸಾದಾ ಹುಡುಗಿ ಇಷ್ಟೊಂದು ವಿದೇಶದ ಕೂಟಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸುವುದೇ ದೊಡ್ಡ ಅಚ್ಚರಿ ಆಗಿರುವಾಗ ಈಕೆ ಹೋದಲ್ಲೆಲ್ಲ ಪದಕಗಳ ಗೊಂಚಲನ್ನು ಗೆದ್ದು ತರುತ್ತಿರುವುದು ನಿಜಕ್ಕೂ ವಿಸ್ಮಯವೇ ಸರಿ. ಅದರ ಜೊತೆಗೆ ಕಳೆದ 14 ವರ್ಷಗಳಲ್ಲಿ ಆಕೆ ಭಾರತದಲ್ಲಿ ಬೇರೆ ಬೇರೆ ನಗರಗಳಲ್ಲಿ ನಡೆದ ಪವರ್ ಲಿಫ್ಟಿಂಗ್ ಕೂಟಗಳಲ್ಲಿ ಭಾಗವಹಿಸಿ ಹೋದಲ್ಲೆಲ್ಲ ಪದಕಗಳನ್ನು ಗೆದ್ದಿದ್ದಾರೆ! ಆಕೆಯ ಬೋಳದ ಮನೆಯ ಶೋಕೇಸಿನಲ್ಲಿ ಮಿಂಚುತ್ತಿರುವ ಹೊಳೆಯುವ ಪದಕಗಳು ಯಾರಿಗಾದರೂ ಸ್ಫೂರ್ತಿಯ ಚಿಲುಮೆ ಆಗುವುದು ಖಂಡಿತ!

ಅಕ್ಷತಾ ಬಾಲ್ಯದಿಂದಲೂ ಗಟ್ಟಿಗಿತ್ತಿ!

ಅಕ್ಷತಾ ಬೋಳ ಗ್ರಾಮದ ಕೃಷಿ ಸಂಸ್ಕೃತಿಯ ಕೆಳಮಧ್ಯಮ ಕುಟುಂಬದಿಂದ ಬಂದವರು. ಅವರ ಮನೆಯಲ್ಲಿ ಯಾರೂ ಹೆಚ್ಚು ಓದಿದವರು ಇರಲಿಲ್ಲ. ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಆಕೆ 6-7 ಕಿಮೀ ದೂರದ ಬೆಳ್ಮಣ್ ಜ್ಯೂ. ಕಾಲೇಜಿಗೆ ಬೆಳಿಗ್ಗೆ ಮತ್ತು ಸಂಜೆ ನಡೆದುಕೊಂಡು ಬರುತ್ತಿದ್ದರು! ಹಸಿವು ಆಕೆಗೆ ಅಭ್ಯಾಸ ಆಗಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಆಕೆಗೆ ಹೇಗೆ ಬಂತು ಎನ್ನುವುದು ಆಕೆಗೇ ಗೊತ್ತಿಲ್ಲ. ಮುಂದೆ ಪದವಿಯ ಶಿಕ್ಷಣಕ್ಕಾಗಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಸೇರಿದ್ದು ಆಕೆಯ ಬದುಕಿನಲ್ಲಿ ಮಹತ್ವದ ತಿರುವು ಆಯಿತು. ಅಲ್ಲಿ ಆಕೆಗೆ ಪವರ್ ಲಿಫ್ಟಿಂಗ್ ಆರಿಸಿಕೊಳ್ಳಲು ಸಲಹೆ ದೊರೆಯಿತು ಮತ್ತು ಒಳ್ಳೆಯ ಕೋಚ್ ದೊರಕಿದರು. ಅಲ್ಲಿ ಅಕ್ಷತಾ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 4 ಘಂಟೆ ಜಿಮ್ ನಲ್ಲಿ ಬೆವರು ಬಸಿಯುತ್ತಿದ್ದರು. ಸಾಧನೆಯ ಹಸಿವು ಕಿಡಿ ಆಗಿದ್ದು ನಿಟ್ಟೆಯಲ್ಲೇ ಎಂದು ಹೇಳಬಹುದು. ʼಪವರ್ ಲಿಫ್ಟಿಂಗ್ ಇಂಡಿಯಾ’ ಎಂಬ ರಾಷ್ಟ್ರಮಟ್ಟದ ಸಂಸ್ಥೆಯು ಆಕೆಗೆ ಇಷ್ಟೊಂದು ಅವಕಾಶಗಳನ್ನು ಮಾಡಿಕೊಟ್ಟಿತು ಮತ್ತು ಇದೇ ವಿಭಾಗದಲ್ಲಿ ಮಿಂಚುತ್ತಿದ್ದ ವಿಜಯ್ ಕಾಂಚನ್ ಎಂಬ ಸಾಧಕರು ಆಕೆಗೆ ಗುರುವಾಗಿ ಸಿಕ್ಕರು.

ಮನೆಯಂಗಳದಲ್ಲಿ ಬಾವಿಯನ್ನು ಕೊರೆದರು

ಅಕ್ಷತಾ ಸಾಧನೆಯ ಹಾದಿಯು ಸುಲಭದ್ದು ಆಗಿರಲಿಲ್ಲ. ತನಗಾದ ಕಿರುಕುಳ, ಅಪಮಾನ, ನೋವು ಎಲ್ಲವೂ ಆಕೆಯನ್ನು ಗಟ್ಟಿ ಮಾಡಿತು ಎಂದು ನನ್ನ ಭಾವನೆ. ತನ್ನದೇ ಮನೆಯಂಗಳದಲ್ಲಿ ಆಕೆ ತನ್ನ ಕುಟುಂಬದ ಸದಸ್ಯರ ಜೊತೆ ಸೇರಿಕೊಂಡು ಒಂದು ಆಳವಾದ ಬಾವಿ ಕೊರೆದದ್ದು ಬಹಳ ದೊಡ್ಡ ಸುದ್ದಿ ಆಗಿತ್ತು. ಕೊರೋನಾ ಸಮಯದಲ್ಲಿ ಕೂಡ ಆಕೆ ತನ್ನ ತರಬೇತಿಯನ್ನು ನಿಲ್ಲಿಸಲಿಲ್ಲ ಅನ್ನುವುದು ನಿಜಕ್ಕೂ ಗ್ರೇಟ್!

ನನಗೆ ಅದಕ್ಕಿಂತ ಕಠಿಣ ಅನ್ನಿಸಿದ್ದು ಆಕೆ ಉದ್ಯೋಗ ಪಡೆಯಲು ಮಾಡಿದ ಸ್ವಾಭಿಮಾನಿ ಹೋರಾಟ. ತನ್ನ ಚಿನ್ನದ ಪದಕಗಳನ್ನು ಆಕೆ ತೆಗೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುವ ದೃಶ್ಯ ನನಗೆ ಭಾರೀ ನೋವು ಕೊಡುತ್ತಿತ್ತು. ಆಗ ನಿಟ್ಟೆಯ ಒಂದು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ (ಈಗ ಮಾಜಿ) ಬಂದಿದ್ದಾಗ ನಾನು ಆಕೆಯನ್ನು ಕರೆದುಕೊಂಡು ಫೈಲ್ ಮುಂದಿಟ್ಟು ಸರಕಾರಿ ನೌಕರಿ ನೀಡಲು ವಿನಂತಿ ಮಾಡಿದ್ದೆ. ಆಗ ಆ ಸಿಎಂ ನಿರುತ್ಸಾಹ ತೋರಿಸಿ ‘ಏನಮ್ಮಾ, ಪವರ್ ಲಿಫ್ಟಿಂಗಿಗೆ ಮಾನ್ಯತೆ ಇದೆಯಾ? ಅದು ಒಲಿಂಪಿಕ್ಸ್ ಕೂಟದಲ್ಲಿ ಬರ್ತದಾ?’ ಎಂದೆಲ್ಲ ಕೇಳಿದ್ದರು.

ಈ ಪ್ರಶ್ನೆಯನ್ನು ಅಕ್ಷತಾ ಹಲವು ಬಾರಿ ಎದುರಿಸಿದ್ದಾರೆ. ಆದರೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಆಕೆ 8 ಪದಕಗಳನ್ನು ಗೆದ್ದದ್ದು, ವರ್ಲ್ಡ್ ಚಾಂಪಿಯನಶಿಪ್ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದದ್ದು ಭಾರತವನ್ನು ಪ್ರತಿನಿಧಿಸಿ ಎನ್ನುವುದನ್ನು ಎಲ್ಲರೂ ಮರೆಯುತ್ತಾರೆ! ಇದು ನಿಜವಾಗಿಯೂ ಕ್ರೀಡಾಲೋಕದ ದುರಂತ ಅಲ್ಲವೇ?

ಇದಕ್ಕಿಂತ ದೊಡ್ಡ ದುರಂತ ಎಂದರೆ…

ಆಕೆ ಪ್ರತೀ ಬಾರಿ ವಿದೇಶದ ಲಿಫ್ಟಿಂಗ್ ಕೂಟಗಳಿಗೆ ಹಾಜರಾಗುವಾಗ ‘ಪವರ್ ಲಿಫ್ಟಿಂಗ್ ಇಂಡಿಯಾ’ ಸಂಸ್ಥೆಯು ಅನುಮತಿ ಮತ್ತು ಮಾರ್ಗದರ್ಶನ ಮಾಡುತ್ತದೆ. ಆದರೆ ಆಕೆಯ ಪ್ರಯಾಣದ ಮತ್ತು ಇತರ ಖರ್ಚುಗಳಿಗೆ ಸರಕಾರದ ಅನುದಾನ ಇಲ್ಲ, ನೀವೇ ಹೊಂದಿಸಿಕೊಳ್ಳಬೇಕು ಎನ್ನುವ ಪತ್ರ ಬರೆಯುತ್ತದೆ. ಆಗೆಲ್ಲ ಅಕ್ಷತಾ ನೆರವಿಗೆ ಬರುವುದು ಆಕೆಯ ಅಭಿಮಾನಿಗಳು, ಗೆಳೆಯರು ಮತ್ತು ಒಂದಿಷ್ಟು ಕ್ರೀಡಾಭಿಮಾಮಾನಿ ಸಂಘಟನೆಗಳು ಅಂದರೆ ನೀವು ನಂಬಲೇಬೇಕು. ಸ್ವಾಭಿಮಾನಿ ಅಕ್ಷತಾ ಅವರಿಗೆ ಇದು ತುಂಬಾ ನೋವು ಕೊಡುವ ಸಂಗತಿ. ಈ ಬಾರಿ ಕೂಡ ಆಕೆ ತನ್ನ ಆಫ್ರಿಕಾ ಪ್ರಯಾಣಕ್ಕೆ ಒಂದು ಲಕ್ಷ ಮೂವತ್ತು ಸಾವಿರ ದುಡ್ಡು ಹೊಂದಿಸಬೇಕಾಯಿತು! ಇದನ್ನೆಲ್ಲ ಗಮನಿಸಿದಾಗ ಆಕೆಯ ಕ್ರೀಡಾ ಸಾಧನೆ ನಮಗೆ ಇನ್ನಷ್ಟು ಹೊಳೆದು ಕಾಣುತ್ತದೆ. ಸರಕಾರದ ಕ್ರೀಡಾ ಇಲಾಖೆ, ಕ್ರೀಡಾಭಿಮಾನಿ ಸಂಘಟನೆಗಳು, ಜನಪ್ರತಿನಿಧಿಗಳು ಅಕ್ಷತಾ ಅವರಂತಹ ಕ್ರೀಡಾ ಸಾಧಕರ ನೆರವಿಗೆ ನಿಲ್ಲದೆ ಹೋದರೆ ನೂರಾರು ಕ್ರೀಡಾ ಪ್ರತಿಭೆಗಳು ನಲುಗಿ ಹೋಗುವ ಅಪಾಯ ಇದೆ. ಅಂದಹಾಗೆ ಅಕ್ಷತಾಗೆ ಆಫ್ರಿಕಾದಲ್ಲಿ ಬೆಸ್ಟ್ ಲಿಫ್ಟರ್ ಆಫ್ ದ ಟೂರ್ನಿ ಪ್ರಶಸ್ತಿ ಕೂಡ ದೊರೆತಿದೆ.

ಭರತವಾಕ್ಯ

ಏನಿದ್ದರೂ ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಆಕೆಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು. ಆಕೆಯ ಬದುಕಿನ ಕಥೆಯು ಹೈಸ್ಕೂಲಿನ ಕನ್ನಡ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು. ಏನಂತೀರಿ?

ಅಭಿನಂದನೆಗಳು ಅಕ್ಷತಾ. ಯು ಮೇಡ್ ಅಸ್ ಪ್ರೌಡ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಧವಳ ಧಾರಿಣಿ ಅಂಕಣ: ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ.

VISTARANEWS.COM


on

ಧವಳ ಧಾರಿಣಿ ಅಂಕಣ rama and sugreeva
Koo

ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಕೋರಿದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸರ್ವಲೋಕಸ್ಯ ಧರ್ಮಾತ್ಮಾ ಶರಣ್ಯಃ ಶರಣಂ ಪುರಾ.
ಗುರುರ್ಮೇ ರಾಘವಃ ಸೋSಯಂ ಸುಗ್ರೀವಂ ಶರಣಂ ಗತಃ৷৷ಕಿ. ಕಾಂ.4.20৷৷

ಧರ್ಮಾತ್ಮನಾದ (ಶ್ರೀರಾಮನು) ಈ ಹಿಂದೆ ಹೇಗೆ ಸಕಲ ಲೋಕಗಳಿಗೆ ರಕ್ಷಕನಾಗಿದ್ದನೋ, ಎಲ್ಲರಿಗೂ ಆಶ್ರಯಭೂತನಾಗಿದ್ದನೋ, ನನ್ನ ಗುರುವಾದ ಈ ರಘುವರನು ಇಂದು ಸುಗ್ರೀವನನ್ನು ಆಶ್ರಯಿಸಲು ಬಂದಿರುವನು.

ಪಂಪಾನದಿಯ ತೀರದಲ್ಲಿ ಹನುಮಂತ ರಾಮ ಲಕ್ಷ್ಮಣರನ್ನು ಪರೀಕ್ಷಿಸಲು ಭಿಕ್ಷುವಿನ ವೇಷ ಧರಿಸಿ ಅವರೆದುರು ನಿಂತು ಅವರ ಪರಿಚಯ ಕೇಳಿದಾಗ ಲಕ್ಷ್ಮಣ ತಾವು ಸುಗ್ರೀವನಲ್ಲಿ ಶರಣಾಗಲು/ ಆಶ್ರಯ ಕೋರಲು ಬಂದಿದ್ದೇವೆ ಎಂದು ಹೇಳುತ್ತಾನೆ.

ಕಿಷ್ಕಿಂಡಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಬರುವ ಈ ರೀತಿಯ ಎಂಟು ಶ್ಲೋಕಗಳನ್ನು ಓದುತ್ತಾ ಹೋದಂತೆ ಒಮ್ಮೆಲೇ ರಾಮನ ಕುರಿತಾದ ನಮ್ಮ ಭಾವನೆಗಳೆಲ್ಲವುದಕ್ಕೂ ವಿರುದ್ಧವಾದ “ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಬಯಸಿ ಬಂದಿದ್ದಾನೆ” ಎನ್ನುವ ಮಾತುಗಳು ನೋಡಿ ಆಶ್ಚರ್ಯ ಮೂಡುತ್ತದೆ. ಕೆಲ ಕಾಲ ನಾವು ಓದುತ್ತಿರುವುದು ವಾಲ್ಮೀಕಿ ಬರೆದ ರಾಮಾಯಣವೋ ಅಥವಾ ಇನ್ಯಾರದೋ ಎನ್ನುವ ಸಂಶಯಕ್ಕೆ ಒಳಗಾಗುತ್ತೇವೆ. ರಾಮನ ಹದಿನಾರು ಗುಣಗಳಲ್ಲಿ ಒಂದಾದ “ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ- ಸಿಟ್ಟುಗೊಂಡು ರಾಮನೇನಾದರೂ ಯುದ್ಧಕ್ಕೆ ನಿಂತರೆ ದೇವತೆಗಳೂ ಸಹ ಅಂಜುವರು” ಎನ್ನುವ ಪರಾಕ್ರಮಗಳನ್ನು ವರ್ಣಿಸಿದ ಕವಿ ಇಲ್ಲಿ ಎಲ್ಲವನ್ನೂ ಕಳೆದುಕೊಂಡು ದೀನನಾಗಿ ಮುಳುಗುವವನಿಗೆ ಹುಲ್ಲುಕಡ್ಡಿಯಾದರೂ ಆಗಬಹುದು ಎನ್ನುವ ರೀತಿಯಲ್ಲಿ ನಿಂತಿದ್ದಾನೆ. ಲಕ್ಷ್ಮಣ ಹನುಮಂತನ ಹತ್ತಿರ ಒಮ್ಮೆ ಸುಗ್ರೀವನನ್ನು ಭೆಟ್ಟಿ ಮಾಡಿಸು ಎಂದು ಯಾಚಿಸುವಾಗ ಉಪಯೋಗಿಸುವ ಶಬ್ದಗಳನ್ನು ಗಮನಿಸಿ:

  1. ರಾಮಶ್ಚ ಸುಗ್ರೀವಂ ಶರಣಂ ಗತೌ
  2. ಸುಗ್ರೀವಂ ನಾಥಮಿಚ್ಛತಿ
  3. ಸುಗ್ರೀವಂ ಶರಣಂ ಗತಃ
  4. ಶರಣ್ಯಶ್ಶರಣಂ ಪುರಾ…. ಸುಗ್ರೀವಂ ಶರಣಂ ಗತಃ
  5. ಸುಗ್ರೀವಂ ವಾನರೇನ್ದ್ರಂ ತು ರಾಮಶ್ಶರಣಮಾಗತಃ
  6. ಶರಣಂ ಗತೇ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಕಣ್ಣೀರು ತುಂಬಿಕೊಂಡು ಕೇಳಿಕೊಳ್ಳುವುದು

  1. ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ.

ಸ ರಾಮೋ ವಾನರೇನ್ದ್ರಸ್ಯ ಪ್ರಸಾದಮಭಿಕಾಙ್ಕ್ಷತೇ

ಯಾವನ ಪ್ರಸನ್ನತೆಯಿಂದ ಎಲ್ಲ ಪ್ರಜೆಗಳೂ ಸರ್ವದಾ ಪ್ರಸನ್ನಚಿತ್ತರಾಗಿರುತ್ತಿದ್ದರೋ ಅಂತಹ ಶ್ರೀರಾಮನೀಗ ವಾನರೇಂದ್ರನಾದ ಸುಗ್ರೀವನ ಅನುಗ್ರಹವನ್ನು ಬಯಸಿ ಬಂದಿದ್ದಾನೆ.

ಒಂದು ಕಡೆ ಮಹಾತೇಜಸ್ವಿಯಾದ, ಸರ್ವಗುಣ ಸಂಪನ್ನನಾದ, ವಶಿಷ್ಠ, ವಿಶ್ವಾಮಿತ್ರ, ಅತ್ರಿ, ಅಗಸ್ತ್ಯರಿಂದ ಅನುಗ್ರಹಿಸಲ್ಪಟ್ಟ, ನಾಲ್ಕು ಸಮುದ್ರಪರ್ಯಂತರವೂ ಧರ್ಮಸ್ಥಾಪನೆಗಾಗಿ ಇರುವ ಚಕ್ರವರ್ತಿಗಳ ಪೀಠ ಎಂದು ಕೀರ್ತಿಸಲ್ಪಟ್ಟ ರಾಮ ಲಕ್ಷ್ಮಣನ ಮಾತನ್ನು ಮೌನವಾಗಿ ಕೇಳುತ್ತಾ ನಿಂತಿದ್ದಾನೆ. ಅವರು ಆಶ್ರಯವನ್ನು ಕೇಳುವುದು ಯಾರಲ್ಲಿ ಅಂದರೆ, ಹೆಂಡತಿಯನ್ನೂ ಸೇರಿ, ತನ್ನದೆಲ್ಲವನ್ನೂ, ಕಳೆದುಕೊಂಡು ವಾಲಿಯ ಭಯದಿಂದ ಜೀವ ಉಳಿಸಿಕೊಳ್ಳಲು ಋಷ್ಯಮೂಕ ಪ್ರರ್ವತಶ್ರೇಣಿಯಲ್ಲಿ ನಾಲ್ವರೊಂದಿಗೆ ಇರುವ ಸುಗ್ರೀವನಲ್ಲಿ. ಲಕ್ಷ್ಮಣನಿಗೆ ಈ ಮಾತುಗಳನ್ನು ಹೇಳುವಾಗ ಹೊಟ್ಟೆಯಲ್ಲಿ ಸಂಕಟವಾಗಿರಬೇಕು. ಹೇಳಲೇ ಬೇಕಾದ ಅನಿವಾರ್ಯತೆಯಿಂದ ಹೇಳುವಾಗ ಆತ ದೀನನಾಗಿ ಕಣ್ಣೀರಧಾರೆಯನ್ನು ಹರಿಸುತ್ತಾ – “ಏವಂ ಬ್ರುವಾಣಂ ಸೌಮಿತ್ರಿಂ ಕರುಣಂ ಸಾಶ್ರುಲೋಚನಮ್” ಹನುಮಂತನಲ್ಲಿ ಯಾಚಿಸುತ್ತಿದ್ದ. ಈ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ತಾಳಮದ್ದಳೆಯಲ್ಲಿ ವಾಲಿ ರಾಮನಿಗೆ ಸುಗ್ರೀವನ ಸಹಾಯವನ್ನು ಕೇಳಿರುವುದರ ಕುರಿತು “ಇವನು ನಿನಗೆ ಸಹಾಯಿಯೇ ನೀ I ನೀನವನ ಬಲದಲಿ ನಿನ್ನ ವೈರಿಯIʼ ಎಂದು ಛೇಡಿಸುವ ಪದ್ಯಗಳಿವೆ. (ಪಾರ್ತಿಸುಬ್ಬನ ಪದ್ಯಗಳ ರಚನೆಯ ಕುರಿತು ಕನ್ನಡಸಾಹಿತ್ಯ ಲೋಕ ಚರ್ಚೆ ಮಾಡಬೇಕು. ಯಕ್ಷಗಾನ ಕವಿಗಳೆನ್ನುವ ಅಸಡ್ಡೆಯಿಂದ ಹೊರಬರಬೇಕಾಗಿದೆ). ವಾಲಿಯ ಪ್ರಮುಖವಾದ ಪ್ರಶ್ನೆಯೇ ರಾಮ ಸುಗ್ರೀವನಲ್ಲಿ ಶರಣು ಬಂದಿರುವುದು ಯಾಕೆ ಎನ್ನುವುದು. ಅದಕ್ಕೆ ಆಧಾರವಾಗಿ ಈ ಮೇಲಿನ ಶ್ಲೋಕವನ್ನು ಗಮನಿಸಬಹುದು.

ರಾಮಾಯಣದಲ್ಲಿ ಸುಗ್ರೀವನ ಕುರಿತು ತಿಳಿದಿರುವ ಅಂಶಗಳೆಂದರೆ ಆತುರಗೆಟ್ಟವ, ಸ್ತ್ರೀವ್ಯಾಮೋಹಿ, ಅಂಜುಕುಳಿ, ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದವ. ತನಗೇ ಒಂದು ನೆಲೆಯಿಲ್ಲದ ವಾನರನೋರ್ವನಲ್ಲಿ ರಾಮ ಅದು ಹೇಗೆ ಶರಣು ಬರಲು ಸಾಧ್ಯ, ವಾಲ್ಮೀಕಿ ಈ ಭಾಗವನ್ನು ಯಾಕೆ ಹೇಳಿರಬಹುದು ಎನ್ನುವುದನ್ನು ವಿವೇಚಿಸಲು ಅರಣ್ಯಕಾಂಡದೊಳಗೆ ಪ್ರವೇಶಿಸಬೇಕು.

ರಾಮಾಯಣದಲ್ಲಿ ಅರಣ್ಯಕಾಂಡ ಮತ್ತು ಕಿಷ್ಕಿಂಧಾ ಕಾಂಡಗಳಿಲ್ಲದಿದ್ದರೆ ಈ ಮಹಾಕಾವ್ಯವೇ ಹುಟ್ಟುತ್ತಿರಲಿಲ್ಲವೇನೋ. ರಾಮಾವತಾರದ ಉದ್ದೇಶವೇ ಅರಣ್ಯಕಾಂಡದಲ್ಲಿ ಅದೂ ಆತ ಚಿತ್ರಕೂಟಕ್ಕೆ ಬರುವಾಗಿನಿಂದ ಪ್ರಾರಂಭವಾಗುತ್ತದೆ. ರಾವಣವಧೆಗೆ ಯೋಜನೆಯನ್ನು ನಿರೂಪಿಸಿರುವುದು ಅಗಸ್ತ್ಯರ ಆಶ್ರಮದಲ್ಲಿ. ಇದಕ್ಕಿಂತಲೂ ರೋಚಕವಾದ ವಿಷಯವೆಂದರೆ ಕೈಕೇಯಿ ದಶರಥನ ಹತ್ತಿರ ಕೇಳುವ ವರ “ರಾಮ ವನವಾಸಕ್ಕೆ ಹೋಗಲಿ” ಎಂದು, ಆದರೆ ರಾಮನ ಹತ್ತಿರ “ದಶರಥ ನನಗೆ ವರವನ್ನು ಕೊಟ್ಟ ಪ್ರಕಾರ ನೀನು ದಂಡಕಾರಣ್ಯಕ್ಕೆ ಹೋಗಬೇಕು” ಎನ್ನುತ್ತಾಳೆ. ಬುದ್ಧಿವಂತೆಯಾದ ಕೈಕೇಯಿಗೆ ದಂಡಕಾರಣ್ಯದ ರಾಕ್ಷಸರ ವಿಷಯ ತಿಳಿದಿದೆ. ಹಿಂದೆ ದಶರಥ ಶಂಬರನ ಹತ್ತಿರ ಕಾಳಗ ಮಾಡಿದ್ದು ಇದೇ ದಂಡಕಾರಣ್ಯದಲ್ಲಿ. ಹಾಗಾಗಿ ರಾಕ್ಷಸರ ಕೈಯಲ್ಲಿ ರಾಮನಿಗೆ ಅಪಾಯವಾದರೆ ಆಗಲಿ ಎನ್ನುವ ಕುತ್ಸಿತ ಬುದ್ಧಿ ಅವಳದಾಗಿತ್ತು.

ರಾಮನಿಗೆ ಸೀತೆಯ ಮೇಲೆ ಅಪಾರವಾದ ಪ್ರೀತಿ ಇತ್ತು. ಸೀತಾಪಹರಣವೆನ್ನುವುದು ಆತ ನಿರೀಕ್ಷಿಸದ ಘಟನೆ. ಆಕೆಗೆ ರಾಕ್ಷಸರಿಂದ ತೊಂದರೆ ಆಗಬಹುದೆನ್ನುವ ಅನುಮಾನ ಇದ್ದೇ ಇತ್ತು. ಲಕ್ಷ್ಮಣ ಆಕೆಯನ್ನು ಬಿಟ್ಟು ತನ್ನನ್ನು ಹುಡುಕಲು ಬಂದಾಗಲೇ ಆತನಿಗೆ ಅನುಮಾನ ಕಾಡಿತ್ತು. “ಅವಳು ಏನೇ ಅಂದರೂ ಆಕೆಯನ್ನು ಒಂಟಿಯಾಗಿ ಬಿಟ್ಟು ನೀನು ಬರಬಾರದಿತ್ತು” ಎಂದು ಲಕ್ಷ್ಮಣನ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ. ಸೀತೆ ಬದುಕಿದ್ದಾಳೋ ಅಥವಾ ಅಪಹರಣಕ್ಕೊಳಗಾದಳೋ ಎನ್ನುವುದನ್ನು ತಿಳಿಯದೇ ದಿಗ್ಮೂಢನಾಗಿದ್ದ. ಅಡವಿಯಲ್ಲಿ ಇರುವ ಎಲ್ಲಾ ಗಿಡಗಳನ್ನೂ, ಮರಗಳನ್ನೂ ಆತ ಹುಚ್ಚನಂತೆ ಕೂಗಿ ಕೂಗಿ ತನ್ನ ಸೀತೆ ಎಲ್ಲಿ ಇದ್ದಾಳೆ ವಿಲಾಪಿಸುತ್ತಿದ್ದ. ವಿರಹದ ದುಃಖ ಎಲ್ಲಿಯವರೆಗೆ ತಿರುಗಿತು ಎಂದರೆ ಗೋದಾವರೀ ನದಿಯ ಹತ್ತಿರ ಸೀತೆಯ ವಿಷಯವನ್ನು ಕೇಳುತ್ತಾನೆ. ಪರ್ವತವನ್ನು ಪುಡಿಮಾಡಿಬಿಡುತ್ತೇನೆ ಎಂದು ಕೂಗಾಡುತ್ತಾನೆ.

ಸಕಲ ಪ್ರಪಂಚವನ್ನೇ ಸುಟ್ಟು ಪುಡಿಮಾಡುವೆ ಎಂದು ಬಿಲ್ಲಿನ ನಾಣನ್ನು ಬಿಗಿದು “ಕ್ಷುರವೆನ್ನುವ ಬಾಣವನ್ನು” ಹೂಡಿದಾಗ ಆತನ ಕ್ರೋಧವನ್ನು ಗಮನಿಸಿದ ಲಕ್ಷ್ಮಣ ಆತನನ್ನು ಸಮಾಧಾನ ಪಡಿಸುತ್ತಾನೆ. ಲಕ್ಷ್ಮಣ ರಾಮನಿಗೆ ಧರ್ಮದ ವಿವೇಕವನ್ನು ಹೇಳುವುದು ರಾಮಾಯಣದಲ್ಲಿ ಸೊಗಸಾಗಿ ವರ್ಣಿತವಾಗಿದೆ. ವಿಪತ್ತು ಎನ್ನುವುದು ಎಂತಹ ದೊಡ್ದ ಮನುಷ್ಯರಿಗೂ ಬರುತ್ತದೆ. ಆಗ ವಿವೇಕವನ್ನು ಕಳೆದುಕೊಳ್ಳಬಾರದು. ತಮ್ಮ ಕುಲಪುರೋಹಿತರಾದ ವಶಿಷ್ಠರ ನೂರುಮಂದಿ ಮಕ್ಕಳು ವಿಶ್ವಾಮಿತ್ರರಿಂದ ಹತರಾದರೂ ಅವರು ತಾಳ್ಮೆಯನ್ನು ತಂದು ಪ್ರತಿ ಶಾಪವನ್ನು ಕೊಡದಿರುವ ವಿಷಯವನ್ನು ತಿಳಿಸಿ ಸಮಾಧಾನ ಮಾಡುತ್ತಾನೆ. ಸಂಕಟ ಬಂದಾಗ ಧೃತಿಗೆಡದೇ ಅದನ್ನು ಪರಿಹರಿಸುವ ಉಪಾಯವನ್ನು ಹುಡಕಬೇಕೆಂದು ಹೇಳಿದಾಗ ರಾಮ ಸ್ವಲ್ಪಮಟ್ಟಿಗೆ ಸಮಾಧಾನಗೊಳ್ಳುತ್ತಾನೆ. ಅರಣ್ಯದಲ್ಲಿದ್ದ ಮೃಗಗಳ ಹತ್ತಿರ ವೈದೇಹಿಯ ಎಲ್ಲಿದ್ದಾಳೆ ಎಂದು ಕೇಳಿದಾಗ ಅವುಗಳು ದಕ್ಷಿಣ ದಿಕ್ಕಿಗೆ ಮುಖಮಾಡಿ ಆಕಾಶದ ಕಡೆಗೆ ನೋಡುತ್ತಿದ್ದವು. ಈ ಶಕುನದ ಲಕ್ಷಣದಂತೆ ಅವರು ಆಕಾಶಮಾರ್ಗದಲ್ಲಿ ದಕ್ಷಿಣದ ಕಡೆ ಹುಡುಕಲು ಪ್ರಾರಂಭಿಸುತ್ತಾರೆ.

ಅವರಿಗೆ ಮೊದಲು ಎದುರಾದ ಸವಾಲು ಸೀತೆಯನ್ನು ಯಾರು ಕದ್ದೊಯ್ದಿರಬಹುದೆನ್ನುವುದು. ಆಗ ಆತನಿಗೆ ಈ ವಿಷಯವನ್ನು ಹೇಳುವುದು ಜಟಾಯು. “ಪುತ್ರೋ ವಿಶ್ರವಸಃ ಸಾಕ್ಷಾದ್ಭಾತ್ರಾ ವಶ್ರವಣಸ್ಯ ಚ” ರಾವಣ ವಿಶ್ರವಸನ ಮಗ, ಕುಬೇರನ ಸಾಕ್ಷಾತ ಸಹೋದರ, ಎನ್ನುವ ಮೂಲಕ ಮೊತ್ತಮೊದಲ ಬಾರಿಗೆ ರಾವಣನೆನ್ನುವವನ ವಿಷಯವನ್ನು ರಾಮನಿಗೆ ತಿಳಿಸುತ್ತಾ ಮುಂದೆ ಹೇಳಲು ಸಾಧ್ಯವಾಗದೇ ಜೀವಬಿಡುತ್ತಾನೆ. ಅಲ್ಲಿಂದ ಮುಂದೆ ಆತನಿಗೆ ರಾವಣನ ಇರುವ ತಾಣವೆಲ್ಲಿ ಎನ್ನುವ ಸಂಶಯ ಉಂಟಾಗುತ್ತದೆ. ರಾಮಾಯಣದ ಪ್ರಕಾರ ಲಂಕೆಯೆನ್ನುವುದು ಒಂದು ಅಭೇದ್ಯವಾದ ಪ್ರದೇಶವಾಗಿತ್ತು. ರಾವಣ ಅಲ್ಲಿಂದ ಜಗತ್ತಿನ ಬೇರೆಕಡೆ ಹೋಗಿ ಆಕ್ರಮಣ ಮಾಡುತ್ತಿದ್ದ. ಸಮುದ್ರದ ಮದ್ಯದಲ್ಲಿರುವ ಈ ದ್ವೀಪ ಪುರಾಣದ ಕಾಲದಿಂದಲೂ ಹೊರಗಿನ ಪ್ರಪಂಚಕ್ಕೆ ತಿಳಿದಿರಲಿಲ್ಲ. ಮೊದಲು ಅದು ಗಂಧರ್ವರ, ಯಕ್ಷರ ವಾಸ ಸ್ಥಳವಾಗಿತ್ತು. ದೇವತೆಗಳು ವಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಕುಬೇರನಿಂದ ಲಂಕೆಯನ್ನು ರಾವಣ ವಶಪಡಿಸಿಕೊಂಡ ಮೇಲೆ ದೇವತೆಗಳಿಗೂ ಅದು ಅಪರಿಚಿತ ಪ್ರದೇಶವಾಯಿತು. ಲಂಕೆ ಇರುವ ಪ್ರದೇಶ ಯಾರಿಗೂ ಗೊತ್ತಿರಲಿಲ್ಲ.

ಅದನ್ನು ಮೊದಲು ತಿಳಿದುಕೊಳ್ಳಲು ದಕ್ಷಿಣದೆಡೆಗೆ ಹುಡುಕಲು ಹೊರಡುತ್ತಾರೆ. ಸತಿವಿಯೋಗದ ದುಃಖದಿಂದ ಭ್ರಮಿತನಾದ ರಾಮನಿಗೆ ಲಕ್ಷ್ಮಣನೇ ಮಾರ್ಗದರ್ಶನ ಮಾಡುತ್ತಾನೆ. ಇಲ್ಲಿ ಲಕ್ಷ್ಮಣನ ವಿವೇಕ ಮತ್ತು ಪ್ರಕೃತಿಯೊಡನೆ ಆತನಿಗಿರುವ ತಾದಾತ್ಯ್ಮ ಚನ್ನಾಗಿ ವ್ಯಕ್ತವಾಗುತ್ತದೆ. ತನ್ನ ವೈಪಲ್ಯದಿಂದ ಅಣ್ಣ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು ಎನ್ನುವ ಯಾವ ನೋವನ್ನು ಹೊರಗಡೆ ತೋರಿಸಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆತ ವಿವೇಚನೆಯನ್ನು ಮಾಡುತ್ತಿರುತ್ತಾನೆ. ಶೂರ್ಪನಖಿ, ಅಯೋಮುಖಿಯರಿಗೆ ಶಿಕ್ಷಿಸಿದ್ದು, ಇಂದ್ರಜಿತುವಿನ ವಧಾ ಪ್ರಕರಣ ಇಲ್ಲೆಲ್ಲ ಅದನ್ನು ಗಮನಿಸಬಹುದು. ಸುಮಿತ್ರೆ ಹೇಳಿದ ʼಇನ್ನು ಮುಂದೆ ಅರಣ್ಯವೇ ನಿನಗೆ ಅಯೋಧ್ಯೆ, ರಾಮನೇ ನಿನಗೆ ದಶರಥನಂತೆ, ಸೀತೆಯಲ್ಲಿ ತನ್ನನ್ನು ಕಾಣುʼ ಎನ್ನುವ ಮಾತುಗಳು ಅವನಲ್ಲಿ ಮನಮಾಡಿದ್ದವು. ಆತನಿಗೆ ಶಕುನಗಳ ಕುರಿತು ಅರಿವಿತ್ತು. ರಾಮನಿಗೆ ಸಮಾಧಾನ ಮಾಡುತ್ತಾ ಮುಂದೆ ಸೀತಾನ್ವೇಷಣೆಯ ಕರ್ತವ್ಯವನ್ನು ಸೂಚಿಸಿ ಅಡವಿಯಲ್ಲಿ ದಕ್ಷಿಣಕ್ಕೆ ನಡೆಯುವಂತೆ ಪ್ರೇರೇಪಿಸುತ್ತಾನೆ. ಆಗ ಇದ್ದಕ್ಕಿದ್ದಂತೆ ಅವನ ಎಡತೋಳು ಅದುರಿತು, ಅದು ಅನಿಷ್ಟಸೂಚಕವಾದ ಶಕುನ, ಆದರೆ ಅದರ ಬೆನ್ನಲ್ಲೇ ಮಂಜುಲಕವೆನ್ನುವ ಹೆಸರಿನ ಮಹಾಭಯಂಕರ ಪಕ್ಷಿಯ ಧ್ವನಿ ಕೇಳಿಸಿತು. ಆತ ರಾಮನಿಗೆ “ಸದ್ಯದಲ್ಲಿಯೇ ಭಯಂಕರವಾದ ಯುದ್ಧದ ಸನ್ನಿವೇಶ ತಮಗೆ ಎದುರಾಗುತ್ತದೆ. ಪಕ್ಷಿಯ ಧ್ವನಿ ಕೇಳಿಸಿರುವದರಿಂದ ಅದರಲ್ಲಿ ನಮ್ಮಿಬ್ಬರಿಗೂ ವಿಜಯವಾಗುತ್ತದೆ” ಎಂದು ಹೇಳುತ್ತಾನೆ.

ಇದ್ದಕ್ಕಿದ್ದಂತೆ ಯಾವುದೋ ವಿಶಾಲವಾದ ತೋಳುಗಳು ಅವರಿಬ್ಬರನ್ನೂ ಬಂಧಿಸಿಬಿಡುತ್ತವೆ. ಅದು ಕಬಂಧನೆನ್ನುವ ರಾಕ್ಷಸನದು. ಆತನಿಗೆ ತಲೆಯೇ ಇರಲಿಲ್ಲ, ಹೊಟ್ಟೆಯಲ್ಲಿ ಬಾಯಿ ಇತ್ತು. ಅರಣ್ಯದಲ್ಲಿರುವ ಮೃಗ ಪಕ್ಷಿ ಪ್ರಾಣಿಗಳನ್ನು ತನ್ನ ಬಾಹುಗಳಲ್ಲಿ ಹಿಡಿದು ತಿನ್ನುತ್ತಿದ್ದ. ರಾಮ ಲಕ್ಷ್ಮಣರಿಬ್ಬರನ್ನೂ ಒಂದೊಂದು ತೋಳಿನಲ್ಲಿ ಹಿಡಿದು ತಿನ್ನಲು ಬಯಸಿದಾಗ ಆತನಿಂದ ತಪ್ಪಿಸಿಕೊಳ್ಳಲು ಅವರಿಬ್ಬರೂ ಆತನ ತೋಳುಗಳನ್ನು ಕತ್ತರಿಸಿಬಿಡುತ್ತಾರೆ. ಯಾವಾಗ ಆತನ ಕೈ ಕತ್ತರಿಸಲ್ಪಟ್ಟಿತೋ ಆ ರಾಕ್ಷಸ ಆಶ್ವರ್ಯಚಕಿತನಾಗಿ ಅವರಿಬ್ಬರ ಪರಿಚಯವನ್ನು ಕೇಳುತ್ತಾನೆ. ರಾಮ ತಮ್ಮಿಬ್ಬರ ಪರಿಚಯವನ್ನು ಹೇಳಿದೊಡನೆಯೇ ಅತ ತನ್ನ ಪರಿಚಯವನ್ನು ಹೇಳಲುಪಕ್ರಮಿಸುತ್ತಾನೆ. ದನುವಿನ ಪುತ್ರನಾದ ಆತ ಗಂಧರ್ವನಾಗಿದ್ದ. ಸುಂದರನಾದ ರೂಪವನ್ನು ಹೊಂದಿದ್ದ, ಆದರೆ ಘೋರವಾದ ರೂಪವನ್ನು ಧರಿಸಿ ಅಡವಿಯಲ್ಲಿದ್ದ ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದ. ಒಮ್ಮೆ ಸ್ಥೂಲಶಿರಸನೆನ್ನುವ ಮುನಿಗೆ ಹೀಗೆ ಪೀಡಿಸಲು ಹೋದಾಗ ಮುನಿ, ನಿನಗೆ ಈ ಘೋರರೂಪವೇ ಶಾಶ್ವತವಾಗಿ ಉಳಿಯಲಿ ಎಂದು ಶಾಪವನ್ನು ಕೊಟ್ಟ ಕಾರಣದಿಂದ ಅರಣ್ಯದಲ್ಲಿ ರಾಕ್ಷಸನಾಗಿಬಿಟ್ಟ. ತನ್ನ ತಪ್ಪಿನ ಅರಿವಾಗಿ ಆತ ಋಷಿಯಲ್ಲಿ ಉಶ್ಶ್ಯಾಪವನ್ನು ಬೇಡಿದಾಗ, ಮುನಿ ”ರಾಮಲಕ್ಷ್ಮಣರು ಮುಂದೊಂದು ದಿನ ಅರಣ್ಯಕ್ಕೆ ಬಂದಾಗ ನಿನ್ನ ಎರಡೂ ತೋಳುಗಳನ್ನು ಕಡಿದು ಜೀವಂತವಾಗಿ ಸುಡುವರು. ಆಗ ಪುನಃ ನಿನ್ನ ಕಾಂತಿಯುತವಾದ ಶರೀರ ನಿನಗೆ ದೊರೆಯುವುದು” ಎಂದು ನುಡಿಯುತ್ತಾನೆ.

ಶಾಪದ ಕಾರಣ ರೂಪಿನೊಂದಿಗೆ ಸ್ವಭಾವವವೂ ರಾಕ್ಷಸತ್ವವೇ ಆಗಿ ಬದಲಾಗಿಬಿಡುತ್ತದೆ. ಶಾಪಗ್ರಸ್ತನಾದವ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ದೀರ್ಘಾಯುಷ್ಯವನ್ನು ಪಡೆಯುತ್ತಾನೆ. ವರದ ಮದದಿಂದ ಇಂದ್ರನನ್ನು ಎದುರಿಸಿದಾಗ ದೇವೇಂದ್ರ ಈತನ ತಲೆಯ ಮೇಲೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಪ್ರಹಾರಕ್ಕೆ ಕಬಂಧನ ತಲೆ ಕಾಲು ಎಲ್ಲ ಶರೀರದೊಳಗೆ ಸೇರಿ ಹೊಟ್ಟೆಯಲ್ಲಿ ಬಾಯಿ ಮೂಡಿತು. ಸೋತು ಸುಣ್ಣವಾದ ರಾಕ್ಷಸ ಇಂದ್ರನಿಗೆ ತನ್ನನ್ನು ರಕ್ಷಿಸೆಂದು ಕೇಳಲು, ಆತ “ನಿನ್ನ ತೋಳುಗಳು ಯೋಜನದಷ್ಟು ವಿಸ್ತೀರ್ಣವಾಗಲಿ, ಮುಂದೆ “ಯದಾ ರಾಮಃ ಸಲಕ್ಷ್ಮಣಃ I ಛೇತ್ಸತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯಸಿ II- ಲಕ್ಷ್ಮಣಸಹಿತನಾದ ರಾಮನು ನಿನ್ನ ಎರಡೂ ತೋಳುಗಳನ್ನು ಯಾವಾಗ ಕಡಿಯುವನೋ ಆಗ ನಿನ್ನ ಶಾಪವಿಮೋಚನೆಯಾಗುತ್ತದೆ” ಎಂದು ಹೇಳುತ್ತಾನೆ. ಇಷ್ಟು ಹೇಳಿ ಆತ ರಾಮನ ಹತ್ತಿರ ತನ್ನನ್ನು ಈಗಲೇ ಜೀವಂತವಾಗಿ ಸುಡು ಎಂದು ಹೇಳಿದಾಗ ರಾಮ ಒಪ್ಪುವುದಿಲ್ಲ. ಕಬಂಧನಿಗೆ ಸೀತೆಯನ್ನು ರಾವಣ ಕದ್ದೊಯ್ದಿರುವ ವಿಷಯ ತಿಳಿದಿದೆ. ಕುಳಿತಲ್ಲಿಯೇ ಆತ ಅದನ್ನು ಗಮನಿಸಿದ್ದಾನೆ. ರಾಮನಿಗೆ ಸೀತೆಯನ್ನು ರಾವಣ ಕದ್ದೊಯ್ದ ವಿಷಯ ತಿಳಿಸಿ ಅವನ ಲಂಕೆಯನ್ನು ಹುಡುಕಲು ಒಬ್ಬ ಒಳ್ಳೆಯ ಮಿತ್ರನನ್ನು ಹುಡುಕಿಕೊಡುವುದಾಗಿ ಹೇಳುತ್ತಾನೆ. ಹಾಗೆ ಹೇಳಬೇಕೆಂದರೆ ತನಗೆ ಮೊದಲಿನ ರೂಪ ಸಿಕ್ಕರೆ ಮಾತ್ರ ಸಾಧ್ಯವೆಂದು ಶರತ್ತು ಹಾಕುತ್ತಾನೆ. ರಾಮನಿಗೆ ರಾವಣ ಸೀತೆಯನ್ನು ಎಲ್ಲಿಟ್ಟರಬಹುದು, ಆತ ಹೇಗಿರಬಹುದು ಎನ್ನುವ ಸಂಗತಿಗಳ ಅರಿವಿಲ್ಲ. ರಾಕ್ಷಸನ ಹೆಸರು ಮಾತ್ರ ಆತನಿಗೆ ತಿಳಿದಿದೆ. ಆತ ಇರುವುದೆಲ್ಲಿ, ಹಾಗಾಗಿ ಕಬಂಧನ ಜೀವ ಇರುವಾಗಲೇ ಸುಡಲು ಒಪ್ಪುತ್ತಾನೆ.

ಈ ಮೊದಲು ವಿರಾಧನೆನ್ನುವ ರಾಕ್ಷಸ ರಾಮನಲ್ಲಿ ತನ್ನನ್ನು ಜೀವಂತವಾಗಿ ಹುಗಿಯಲು ಹೇಳಿದ್ದ. ಹಾಗೆ ಜೀವಂತ ಹುಗಿದಾಗ ಆತನ ಶಾಪವಿಮೋಚನೆಯಾಗಿತ್ತು. ಇದೀಗ ಕಬಂಧನನ್ನು ಸುಟ್ಟ ತಕ್ಷಣದಲ್ಲಿ ಆತ ಮೊದಲಿನ ಗಂಧರ್ವನಾಗಿ ರಾಮನಿಗೆ ಕಾಣಿಸಿಕೊಂಡು ಕೊಡುವ ಸಲಹೆಯೇ ಸುಗ್ರೀವ ಎನ್ನುವ ವಾನರ ಇಲ್ಲಿಯೇ ಋಷ್ಯಮೂಕ ಪರ್ವತದಲ್ಲಿದ್ದಾನೆ. ಆತ ಇಂದ್ರನ ಮಗ. ಆತನ ಅಣ್ಣನಾದ ವಾಲಿ ಸುಗ್ರೀವನನ್ನು ಕಾರಣಾಂತರದಿಂದ ರಾಜ್ಯಭ್ರಷ್ಟನನ್ನಾಗಿ ಮಾಡಿದ್ದಾನೆ, ಎನ್ನುತ್ತಾ ರಾವಣನಿರುವ ಸ್ಥಳವನ್ನು ತಿಳಿಸಲು ಸುಗ್ರೀವನೊಬ್ಬನಿಗೆ ಸಾಧ್ಯ ಎನ್ನುತ್ತಾನೆ. ಕಾರ್ಯಸಾಧನೆಗೆ ಆರು ಮಾರ್ಗಗಳನ್ನು ಅನುಸರಿಸಬೇಕು. ಅವುಗಳು ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯಗಳು. ಇದರಲ್ಲಿ ನಿನ್ನಂತೆ ಪತ್ನಿಯನ್ನು ಕಳೆದುಕೊಂಡ ಸುಗ್ರೀವನಿಗೆ ನಿನ್ನ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ಆತನಲ್ಲಿ ನೀನು ಸಮಾಶ್ರಯವನ್ನು ಕೋರಬಹುದು ಎನ್ನುತ್ತಾನೆ. ಆ ವಾನರನಲ್ಲಿ ಅಗ್ನಿಸಾಕ್ಷಿಯಾಗಿ ಮಿತ್ರತ್ವವನ್ನು ಮಾಡಿಕೋ ಎನ್ನುವುದನ್ನು ಒತ್ತಿ ಹೇಳುತ್ತಾನೆ. ಸುಗ್ರೀವನ ಸಂಪೂರ್ಣ ಪರಿಚಯವನ್ನು ಮೊದಲು ರಾಮನಿಗೆ ಮಾಡಿಕೊಡುವುದೇ ಕಬಂಧನ್ನುವ ರಾಕ್ಷಸ. ತಾಮಸೀ ವ್ಯಕ್ತಿತ್ವದ ರಾಕ್ಷಸನಿಗೆ ವಾಲಿಯ ಪರಿಚಯ ಇತ್ತು, ಆದರೆ ಆತ ವಾಲಿಗಿಂತ ಸುಗ್ರೀವನನ್ನೇ ಅಶ್ರಯ ಹೊಂದಲು ತಿಳಿಸುವ ಕಾರಣವೇ “ಕಷ್ಟದಲ್ಲಿರುವವರಿಗೆ ಕಷ್ಟದಲ್ಲಿರುವವರೇ ನೆರವಾಗುತ್ತಾರೆ” ಎನ್ನುವುದು.

ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ಇದು ಕಬಂಧನೇ ಹೇಳಿದಂತೆ ಹೆಂಡತಿಯ ವಿಯೋಗದಲ್ಲಿರುವ ಸುಗ್ರೀವನಿಗೆ ತನ್ನ ಕಷ್ಟ ಅರ್ಥವಾಗುತ್ತದೆ ಎನ್ನುವ ನಿಟ್ಟಿನಲ್ಲಿ. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ. ಸುಗ್ರೀವನ ಕುರಿತು ಪ್ರಚಲಿತದಲ್ಲಿದ್ದಂತೆ ಚಂಚಲ, ಅಂಜುಕುಳಿ ಸ್ವಭಾವ ಎನ್ನುವುದಕ್ಕೆ ವಿರುದ್ಧವಾದ ಸ್ವಭಾವ ಆತನದ್ದಾಗಿತ್ತು. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

Continue Reading

ಅಂಕಣ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು.

VISTARANEWS.COM


on

ರಾಜಮಾರ್ಗ ಅಂಕಣ captain pranjal shaurya award
Koo

ಕರ್ನಾಟಕದ ಸೈನಿಕನಿಗೆ ದೊರೆಯಿತು ರಾಷ್ಟ್ರದ ಗೌರವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕಳೆದ ವರ್ಷವಿಡೀ ಕನ್ನಡ ನಾಡಿನಲ್ಲಿ (Karnataka) ಮೊಳಗಿದ್ದು ಇದೇ ಸೈನಿಕನ (Soldier) ಯಶೋಗಾಥೆ! ಅದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿ ಮಾಡಿದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಅವರು ದೇಶಕ್ಕಾಗಿ ಹುತಾತ್ಮರಾದ (Martyr) ರೋಮಾಂಚಕ ಕಥೆ.

ನಾನು ಅಂದು ಬರೆದ ಹಾಗೆ ಪ್ರಾಂಜಲ್ ಅವರು ಆಗರ್ಭ ಶ್ರೀಮಂತ ಕುಟುಂಬದ ಒಬ್ಬನೇ ಮಗ ಆಗಿದ್ದರು. ಅವರ ತಂದೆ ವೆಂಕಟೇಶ್ ಅವರು ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ MRPL ಇದರ ಎಂಡಿ ಆಗಿ ನಿವೃತ್ತಿಯನ್ನು ಹೊಂದಿದ್ದರು. ಹಾಗಿದ್ದರೂ ಮಗ ಸ್ವ ಇಚ್ಛೆಯಿಂದ ಸೈನ್ಯಕ್ಕೆ ಹೊರಟು ನಿಂತಾಗ ವೆಂಕಟೇಶ್ ಅಥವಾ ಅವರ ಪತ್ನಿ ತಡೆಯಲಿಲ್ಲ ಅನ್ನುವುದು ಶ್ರೇಷ್ಠ ನಿದರ್ಶನ.

ಅಂತಿಮ ಸಂಸ್ಕಾರದ ಹೊತ್ತು ಮಿಡಿಯಿತು ವೆಂಕಟೇಶ್ ಕುಟುಂಬ

ಪ್ರೀತಿ ಮಾಡಿ ಮದುವೆಯಾದ ಪತ್ನಿ ಅದಿತಿ ಕೂಡ ಗಂಡನ ಉಜ್ವಲ ರಾಷ್ಟ್ರಪ್ರೇಮಕ್ಕೆ ನೆರಳಾಗಿ ನಿಂತರು. ಮುಂದೆ ಪ್ರಾಂಜಲ್ ಅವರು ಭಯೋತ್ಪಾದಕರ ಜೊತೆಗೆ ಕೊನೆಯ ಉಸಿರಿನವರೆಗೂ ಹೋರಾಡಿ ಉಸಿರು ಚೆಲ್ಲಿದ ಘಟನೆಯು ನಡೆದಾಗ, ತ್ರಿವರ್ಣ ಧ್ವಜ ಹೊದ್ದು ಮಲಗಿದ ಪ್ರಾಂಜಲ್ ಪಾರ್ಥಿವ ಶರೀರ ಮನೆಯ ಅಂಗಳಕ್ಕೆ ಬಂದಾಗ ಸೈನಿಕನ ಕುಟುಂಬವು ಒಮ್ಮೆ ನಡುಗಿದ್ದು ಹೌದು.

ಹುತಾತ್ಮ ಸೈನಿಕನ ಹೆಂಡತಿ ಹೊರಗೆ ಅಳಲಿಲ್ಲ

ಆದರೆ ತಕ್ಷಣ ಸಾವರಿಸಿಕೊಂಡ ಆ ರಾಷ್ಟ್ರಭಕ್ತ ಕುಟುಂಬ ಪ್ರಾಂಜಲ್ ಅಂತಿಮ ಸಂಸ್ಕಾರದ ಅವಧಿಯಲ್ಲಿ ತೋರಿದ್ದು ಸಾವಧಾನದ ಮತ್ತು ಭಾವನೆಗಳ ನಿಯಂತ್ರಣದ ಅನನ್ಯ ಮಾದರಿಯನ್ನು. ಅದರಲ್ಲಿಯೂ ಹುತಾತ್ಮ ಸೈನಿಕನ ಪತ್ನಿ ಅಳಬಾರದು ಎಂದು ಮನದಲ್ಲಿ ಸಂಕಲ್ಪಿಸಿ ಅದಿತಿ ಅಂದು ಕಲ್ಲುಬಂಡೆಯ ಹಾಗೆ ನಿಂತಿದ್ದರು. ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಕರ್ನಾಟಕದ ವೀರ ಸೇನಾನಿಯ ಅಂತ್ಯ ಇಡೀ ನಾಡನ್ನು ದುಃಖದ ಮಡುವಿನಲ್ಲಿ ದೂಡಿತ್ತು.

Family of Captain MV Pranjal ರಾಜಮಾರ್ಗ ಅಂಕಣ

ಕಲ್ಯಾ ಶಾಲೆಯಲ್ಲಿ ನಿರ್ಮಾಣವಾಯಿತು ಕ್ಯಾ. ಪ್ರಾಂಜಲ್ ಸ್ಮಾರಕ

ಇಡೀ ಕನ್ನಡ ನಾಡು ದುಃಖ ಮತ್ತು ಸೂತಕದ ಛಾಯೆಯಲ್ಲಿ ಮುಳುಗಿದ್ದಾಗ ನಾಡಿನಾದ್ಯಂತ ಶ್ರದ್ಧಾಂಜಲಿ ಸಭೆಗಳು ನಡೆದವು. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಶಾಲೆಯ ಅಂಗಳದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಿರ್ಮಿಸಿದರು. ಈ ವರ್ಷ ಜನವರಿ 26ರಂದು ಸಂಜೆ ನಡೆದ ಈ ಭಾವುಕ ಕಾರ್ಯಕ್ರಮದಲ್ಲಿ ಸೈನಿಕನ ತಂದೆ ವೆಂಕಟೇಶ್ ಮತ್ತು ತಾಯಿ ಇಬ್ಬರೂ ಭಾಗವಹಿಸಿದ್ದರು. ನಿವೃತ್ತ ಸೈನಿಕರ ವೇದಿಕೆಯು ಗೌರವಾರ್ಪಣೆ ಮಾಡಿತ್ತು. ಕಲ್ಯಾ ಎಂಬ ಪುಟ್ಟ ಗ್ರಾಮ, ಅಲ್ಲಿನ ಸರಕಾರಿ ಶಾಲೆ, ಅಧ್ಯಾಪಕರು, ಮಕ್ಕಳು, ಹೆತ್ತವರು, ನೂರಾರು ಸಂಖ್ಯೆಯ ಗ್ರಾಮಸ್ಥರು ಸೇರಿ ಕಂಬನಿ ಮಿಡಿದ ಅತ್ಯಪೂರ್ವ ಕಾರ್ಯಕ್ರಮ ಅದಾಗಿತ್ತು.

Raja Marga Column Captain MV Pranjal Memorial

ಅದೇ ವೀರ ಸೈನಿಕನಿಗೆ ಇಂದು ದೊರೆಯಿತು ರಾಷ್ಟ್ರದ ಗೌರವ

ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು. ಹುತಾತ್ಮ ಸೈನಿಕನ ಪತ್ನಿ ಅದಿತಿಯವರ ಅದೇ ಭಾವುಕ ಮುಖ, ಅಮ್ಮನ ಅಕ್ಕರೆ ತುಂಬಿದ ಆಳವಾದ ಕಣ್ಣುಗಳು, ಪ್ರಾಂಜಲ್ ಹೆಸರು ಮೊಳಗಿದಾಗ ದೃಢವಾದ ಹೆಜ್ಜೆಗಳೊಂದಿಗೆ ತಾಯಿ ಮತ್ತು ಪತ್ನಿ ಇಬ್ಬರೂ ವೇದಿಕೆಯೇರಿದ್ದು, ಎದೆಯಲ್ಲಿ ಜ್ವಾಲಾಮುಖಿ ಇದ್ದರೂ ತುಟಿಯಲ್ಲಿ ಅರಳಿದ ಹೂ ನಗು, ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಿದಾಗ ಅದಿತಿಯವರ ಕಣ್ಣಲ್ಲಿ ಒಮ್ಮೆ ಮಿಂಚಿ ಮರೆಯಾದ ಪ್ರೌಡ್ ಫೀಲಿಂಗ್.

ಈ ದೃಶ್ಯವು ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ರಕ್ತವನ್ನು ಬಿಸಿ ಮಾಡುವುದು ಖಂಡಿತ. ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

Continue Reading

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

ರಾಜಮಾರ್ಗ ಅಂಕಣ: ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

VISTARANEWS.COM


on

ರಾಜಮಾರ್ಗ ಅಂಕಣ virat kohli rohit sharma
Koo

ಚಾಂಪಿಯನ್ ಆಟಗಾರರು ಮತ್ತು ಟೀಮ್ ಇಂಡಿಯಾ ಗೆಲುವು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಭಾವುಕ ಕ್ಷಣಗಳನ್ನು ಭಾರತದ ಕೋಟಿ ಕೋಟಿ ಕ್ರಿಕೆಟ್ (Cricket) ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.

ಸೂರ್ಯಕುಮಾರ್ (Suryakumar yadav) ಹಿಡಿದ ಅದ್ಭುತವಾದ ಕ್ಯಾಚ್, ವಿರಾಟ್ ಕೊಹ್ಲಿಯ ಹೀರೋಯಿಕ್ ಇನ್ನಿಂಗ್ಸ್, ಬುಮ್ರಾ, ಹಾರ್ದಿಕ್, ಆರ್ಷದೀಪ್ ಬೌಲಿಂಗ್‌ನಲ್ಲಿ ತೋರಿದ ಮ್ಯಾಜಿಕ್, ರೋಹಿತ್ ಶರ್ಮಾ (Rohit Sharma) ತೋರಿಸಿದ ತಾಳ್ಮೆ, ಅಕ್ಷರ್ ಪಟೇಲ್ ಆಲ್ರೌಂಡ್ ಆಟ……ಇದ್ಯಾವುದೂ ನಮಗೆ ಮರೆತು ಹೋಗೋದಿಲ್ಲ.

ಭರವಸೆ ನಮ್ಮನ್ನು ಗೆಲ್ಲಿಸಿತು

ಚಾಂಪಿಯನ್ ಆಟಗಾರರ ಮೇಲೆ ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಟ್ಟ ಭರವಸೆ ನಿಜ ಆಗಿದೆ. ವಿಶ್ವಕಪ್ಪಿನ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಂಡಾಗ ಆತನಿಗೆ ವಿಶ್ರಾಂತಿ ಕೊಡಿ, ಆತನಿಗೆ ಓಪನಿಂಗ್ ಸ್ಲಾಟ್ ಬೇಡವೇ ಬೇಡ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಎಂದೆಲ್ಲ ಟ್ರೋಲ್ ಮಾಡಿದವರಿಗೆ ಈ ಬಾರಿ ಸರಿಯಾದ ಉತ್ತರ ದೊರೆತಿದೆ. ಚಾಂಪಿಯನ್ ಆಟಗಾರ ಯಾವತ್ತೂ ದೊಡ್ಡ ಮ್ಯಾಚಲ್ಲಿ ಮಿಂಚು ಹರಿಸುತ್ತಾನೆ.

ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು!

ಆತ ಸತತವಾಗಿ ಸೋತು ಅಳುತ್ತಾ ಕೂತಾಗ ರಾಹುಲ್ ದ್ರಾವಿಡ್ ಹೇಳಿದ ಮಾತನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.
‘ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು. ನಮಗೆ ನಂಬಿಕೆ ಇದೆ’ ಎಂದು. ಆತನ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಬದಲಾವಣೆ ಮಾಡದೆ ಆತನ ನೆರವಿಗೆ ನಿಂತವರು ಟೀಮ್ ಮ್ಯಾನೇಜ್ಮೆಂಟ್ ಮತ್ತು ಟೀಮ್ ಕೋಚ್ ರಾಹುಲ್ ದ್ರಾವಿಡ್. ಚಾಂಪಿಯನ್ ವಿರಾಟ್ ಕೊಹ್ಲಿ ಇಂದು ಆವರ
ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಹಾರ್ದಿಕ ಪಾಂಡ್ಯನನ್ನು ಟ್ರೋಲ್ ಮಾಡಿದವರಿಗೆ ಈ ಗೆಲುವು ಅರ್ಪಣೆ!

ಅದೇ ರೀತಿ ನಮ್ಮ ಹಾರ್ದಿಕ್ ಪಾಂಡ್ಯನ ಬಗ್ಗೆ ಗಮನಿಸಿ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಆತನು ಸತತವಾಗಿ ಬೈಗುಳ ತಿಂದ ಆಟಗಾರ. ಆತ ವಿಶ್ವಕಪ್ ತಂಡಕ್ಕೆ ಆಯ್ಕೆ ಆದಾಗ ಎಷ್ಟೊಂದು ಜನರು ರೊಚ್ಚಿಗೆದ್ದು ಬೈದವರಿದ್ದರು! ಆತನ ಖಾಸಗಿ ಜೀವನದ ಮೇಲೆ ಕೆಸರು ಎರಚುವ ಕೆಲಸ ಕೂಡ ಆಗಿತ್ತು. ಅಂತವನ ಕೈಗೆ ಪಂದ್ಯದ 20ನೇ ಓವರು ಕೊಡುವುದೆಂದರೆ? ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆತನ ಮೇಲಿಟ್ಟ ನಂಬಿಕೆಗೆ ಆತನು ಎಷ್ಟೊಂದು ಅದ್ಭುತವಾಗಿ ಉತ್ತರ ಕೊಟ್ಟು ಬಿಟ್ಟ ನೋಡಿ. ಚಾಂಪಿಯನ್ ಎಂದಿಗೂ ಚಾಂಪಿಯನ್ ಆಗಿರುತ್ತಾನೆ.

ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡಿದವರಿಗೆ, ಆತ ಸ್ವಾರ್ಥಿ ಎಂದು ಟೀಕೆ ಮಾಡಿವರಿಗೆ ಇಲ್ಲಿ ಸರಿಯಾದ ಉತ್ತರ ದೊರೆತಿದೆ. ಟೀಮ್ ಆಡಳಿತ ಯುವ ಆಟಗಾರರ ಮೇಲೆ ತೋರಿದ ಕಾಳಜಿಯಿಂದ ಶಿವಂ ದುಬೆ, ಆಕ್ಷರ್ ಪಟೇಲ್ ಮೊದಲಾದ ಯಂಗಸ್ಟರ್ಸ್ ಒಳ್ಳೆ ಆಟಗಾರರಾಗಿ ಮಿಂಚಲು ಸಾಧ್ಯವಾಯಿತು. ಅವರಿಗೆ ಖಚಿತವಾಗಿ ಒಳ್ಳೆಯ ಭವಿಷ್ಯವಿದೆ.

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ.

ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

ಕಂಗ್ರಾಚ್ಯುಲೇಶನ್ ರೋಹಿತ್ ಆಂಡ್ ಹುಡುಗರು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

Continue Reading
Advertisement
Mahanati Show bindu honnali not selected
ಕಿರುತೆರೆ1 min ago

Mahanati Show: ಫಿನಾಲೆಗೆ ಆಯ್ಕೆಯಾಗಿಲ್ಲ ದಾವಣಗೆರೆ ಟೀಚರ್; ಕೋಪಗೊಂಡ ನೆಟ್ಟಿಗರು!

PGET 2024 Online application for PGET can be submitted till July 10
ಶಿಕ್ಷಣ22 mins ago

PGET 2024 : ಪಿಜಿಇಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 10ರವರೆಗೆ ಅವಕಾಶ

Suryakumar Yadav
ಕ್ರೀಡೆ24 mins ago

Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

Rahul Gandhi
ದೇಶ30 mins ago

Rahul Gandhi: ಹಿಂದುಗಳಿಗೆ ಅವಮಾನ ಖಂಡಿಸಿ ದೇಗುಲದ ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಫೋಟೊ; ಇಲ್ಲಿದೆ Video

Manvita Kamath Honeymoon in baali
ಸ್ಯಾಂಡಲ್ ವುಡ್36 mins ago

Manvita Kamath: ಪತಿ ಅರುಣ್ ಜತೆ ಬಾಲಿಯಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ಮಾನ್ವಿತಾ ಕಾಮತ್!

NEET UG 2024
ದೇಶ48 mins ago

NEET UG 2024: ನೀಟ್‌ ಅಕ್ರಮ ಮೇಲ್ನೋಟಕ್ಕೆ ಸಾಬೀತು ಎಂದ ಸುಪ್ರೀಂ; ಎನ್‌ಟಿಎ, ಸಿಬಿಐಗೆ ಖಡಕ್ ಸೂಚನೆ!

OPS News
ಕರ್ನಾಟಕ49 mins ago

OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅರ್ಹರಿಗೆ ಒಪಿಎಸ್‌, ಪ್ರಸ್ತಾವನೆ ಸಲ್ಲಿಕೆಗೆ ಆದೇಶ

ಕ್ರೀಡೆ58 mins ago

Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

First Night Video
Latest1 hour ago

First Night Video: ಫಸ್ಟ್‌ ನೈಟ್‌ ವಿಡಿಯೊ ಹಂಚಿಕೊಂಡ ನವ ದಂಪತಿ! ಇನ್ನೇನು ಬಾಕಿ ಉಳಿದಿದೆ ಎಂದ ನೆಟ್ಟಿಗರು!

Ragging case in Bengaluru
ಬೆಂಗಳೂರು1 hour ago

Ragging Case : ಬೆಂಗಳೂರಲ್ಲಿ ನಿಲ್ಲದ ವ್ಹೀಲಿಂಗ್‌ ಆ್ಯಂಡ್‌ ರ‍್ಯಾಗಿಂಗ್‌ ಹಾವಳಿ; ಮಹಿಳೆ ಹಿಂದೆ ಬಿದ್ದ ಪೋಲಿ ಹುಡುಗರು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ2 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು6 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ21 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ24 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಟ್ರೆಂಡಿಂಗ್‌