EPF passbook service is again unavailable, users panicEPF e-passbook : ಇಪಿಎಫ್‌ ಪಾಸ್‌ಬುಕ್‌ ಸೇವೆ ಮತ್ತೆ ಅಲಭ್ಯ, ಬಳಕೆದಾರರ ಪರದಾಟ - Vistara News EPF e-passbook : ಇಪಿಎಫ್‌ ಪಾಸ್‌ಬುಕ್‌ ಸೇವೆ ಮತ್ತೆ ಅಲಭ್ಯ, ಬಳಕೆದಾರರ ಪರದಾಟ EPF e-passbook : ಇಪಿಎಫ್‌ ಪಾಸ್‌ಬುಕ್‌ ಸೇವೆ ಮತ್ತೆ ಅಲಭ್ಯ, ಬಳಕೆದಾರರ ಪರದಾಟ EPF e-passbook : ಇಪಿಎಫ್‌ ಪಾಸ್‌ಬುಕ್‌ ಸೇವೆ ಮತ್ತೆ ಅಲಭ್ಯ, ಬಳಕೆದಾರರ ಪರದಾಟ EPF e-passbook : ಇಪಿಎಫ್‌ ಪಾಸ್‌ಬುಕ್‌ ಸೇವೆ ಮತ್ತೆ ಅಲಭ್ಯ, ಬಳಕೆದಾರರ ಪರದಾಟ

ವಾಣಿಜ್ಯ

EPF e-passbook : ಇಪಿಎಫ್‌ ಪಾಸ್‌ಬುಕ್‌ ಸೇವೆ ಮತ್ತೆ ಅಲಭ್ಯ, ಬಳಕೆದಾರರ ಪರದಾಟ

ಇಪಿಎಫ್‌ಒ ಸಂಸ್ಥೆಯ ಇ-ಪಾಸ್‌ಬುಕ್‌ ಸೇವೆಯು ಕಳೆದ ಕೆಲವು ದಿನಗಳಿಂದ ಮತ್ತೆ ತಾಂತ್ರಿಕ ಅಡಚಣೆಯಿಂದಾಗಿ ಬಳಕೆದಾರರಿಗೆ (EPF e-passbook) ಅಲಭ್ಯವಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಇಪಿಎಫ್‌ಒ ಆಶ್ವಾಸನೆ ನೀಡಿದೆ.

VISTARANEWS.COM


on

After RBI EPFO also blocks Paytm Payments Bank
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಇ-ಪಾಸ್‌ಬುಕ್‌ ಸೇವೆ ಕಳೆದ ಕೆಲವು ದಿನಗಳಿಂದ (EPF e-passbook) ಮತ್ತೆ ಸಿಗುತ್ತಿಲ್ಲ. ಇದು ಪಿಎಫ್‌ದಾರರನ್ನು ಚಿಂತೆಗೀಡು ಮಾಡಿದೆ. ಇಪಿಎಫ್‌ಒ ಸಂಸ್ಥೆಯ ವೆಬ್‌ಸೈಟ್‌ ಅಥವಾ ಉಮಾಂಗ್‌ ಆ್ಯಪ್‌ನಲ್ಲಿ (Umang app) ಸದಸ್ಯರು ಇ-ಪಾಸ್‌ಬುಕ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಪಿಎಫ್‌ದ ಸದಸ್ಯರಲ್ಲಿ ಕೆಲವರು ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ಗಳನ್ನು ಶೇರ್‌ ಮಾಡಿದ್ದಾರೆ. ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇಪಿಎಫ್‌ಒ ಮಂಡಳಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಹುತೇಕ ಟ್ವೀಟ್‌ಗಳಿಗೆ ಇಪಿಎಫ್‌ಒ ನೀಡಿರುವ ಉತ್ತರದಲ್ಲಿ, ಅಡಚಣೆಗಾಗಿ ಕ್ಷಮಿಸಿ, ಸಂಬಂಧಪಟ್ಟ ತಂಡ ಪ್ರಕರಣದ ಬಗ್ಗೆ ಪರಿಶೀಲಿಸಲಿದೆ. ಸ್ವಲ್ಪ ಕಾಲಾವಕಾಶ ನೀಡಿ, ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದಿದೆ. ಇಪಿಎಫ್‌ಒ ಸದಸ್ಯರು ಕಳೆದ ಕೆಲವು ತಿಂಗಳುಗಳಿಂದ ಇದೇ ಸಮಸ್ಯೆಯನ್ನು ಆಗಿಂದಾಗ್ಗೆ ಎದುರಿಸುತ್ತಿದ್ದಾರೆ.

ಉದ್ಯೋಗಿಗಳ ನಿವೃತ್ತಿನಿಧಿ ಮಂಡಳಿ ಇಪಿಎಫ್‌ಒ ಪಿಎಫ್‌ ಸದಸ್ಯರಿಗೆ, ಆನ್‌ಲೈನ್‌ ಮೂಲಕ ವಂಚಿಸುವ ದುಷ್ಕರ್ಮಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಇಪಿಎಫ್‌ಒ ಪಿಎಫ್‌ ಸದಸ್ಯರು ಆನ್‌ಲೈನ್‌ ಮಾಧ್ಯಮಗಳ ಮೂಲಕ ವಂಚಿಸಲು ಯತ್ನಿಸುತ್ತಾರೆ. ಆದ್ದರಿಂದ ವಾಟ್ಸ್‌ ಆ್ಯಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ (ವಿಸ್ತಾರ Money Guide | EPFO Alert ) ಯಾವುದೇ ಹಣವನ್ನು ಪಿಎಫ್‌ ಹೆಸರಿನಲ್ಲಿ ಠೇವಣಿ ಇಡುವುದು ಬೇಡ ಎಂದು ಎಚ್ಚರಿಸಿದೆ.

ವಾಟ್ಸ್‌ ಆ್ಯಪ್ ಮೂಲಕ ಇಪಿಎಫ್‌ಒ ಬ್ಯಾಂಕ್‌ ಖಾತೆ ವಿವರ ಕೇಳುವುದಿಲ್ಲ

ಇಪಿಎಫ್‌ಒ (Employees Provident Fund organisation-EPFO) ಯಾವತ್ತೂ ಆಧಾರ್‌, ಪ್ಯಾನ್‌, ಯುಎಎನ್‌, ಬ್ಯಾಂಕ್‌ ಖಾತೆ, ಒಟಿಪಿ ಇತ್ಯಾದಿಗಳನ್ನು ಫೋನ್‌, ಸಾಮಾಜಿಕ ಜಾಲತಾಣ, ವಾಟ್ಸ್‌ ಆ್ಯಪ್ ಮೂಲಕ ಕೇಳುವುದಿಲ್ಲ.

ಯಾರಾದರೂ ಫೋನ್‌ ಅಥವಾ ವಾಟ್ಸ್‌ ಆ್ಯಪ್ ಮೂಲಕ ಮೇಲ್ಕಂಡ ವಿವರಗಳನ್ನು ಕೇಳಿದರೆ, ವಿವರಗಳನ್ನು ಕೊಡುವುದು ಬೇಡ ಎಂದು ಇಪಿಎಫ್‌ಒ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Money Guide: ಉದ್ಯೋಗಿಗಳ ಉಳಿತಾಯ ಮನೋಭಾವವನ್ನು ಉತ್ತೇಜಿಸಲು ನೌಕರರ ಭವಿಷ್ಯ ನಿಧಿ (ಇಪಿಎಫ್‌) ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ನಿಮ್ಮ ಜತೆಗೆ ನಿಮ್ಮ ಉದ್ಯೋಗದಾತ ಸಂಸ್ಥೆಯೂ ಕೊಡುಗೆ ನೀಡುತ್ತದೆ. ಇದರ ಬ್ಯಾಲನ್ಸ್‌ ಅನ್ನು ನೀವು ಮೊಬೈಲ್‌ನಲ್ಲಿಯೇ ಆನ್‌ಲೈನ್‌ / ಆಫ್‌ಲೈನ್‌ ಮೂಲಕ ಪರಿಶೀಲಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

money guide
Koo

ಬೆಂಗಳೂರು: ನೌಕರರ ಭವಿಷ್ಯ ನಿಧಿ (Employees’ Provident Fund) ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಉತ್ತೇಜಿಸಲಾಗುತ್ತದೆ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಇದು ನಿಮ್ಮ ಸಂಬಳದಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ. ಇನ್ನೊಂದು ಮುಖ್ಯ ಅನುಕೂಲ ಎಂದರೆ ತುರ್ತು ಪರಿಸ್ಥಿತಿಯಲ್ಲಿ ಈ ಅಕೌಂಟ್‌ನಿಂದ ಒಂದಷ್ಟು ಹಣವನ್ನು ಹಿಂಪಡೆಯಬಹುದು. ಇದಕ್ಕಾಗಿ ನಿವೃತ್ತಿವರೆಗೆ ಕಾಯಬೇಕಾಗಿಲ್ಲ. ಇಂದಿನ ಮನಿಗೈಡ್‌ (Money Guide)ನಲ್ಲಿ ನಿಮ್ಮ ಇಪಿಎಫ್‌ ಬ್ಯಾಲನ್ಸ್‌ ಅನ್ನು ಮೊಬೈಲ್‌ನಲ್ಲೇ ಹೇಗೆ ನೋಡಬಹುದು ಎನ್ನುವ ವಿವರವಿದೆ.

ಎಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಬ್ಯಾಲನ್ಸ್‌ ಪರಿಶೀಲಿಸುವುದು ಹೇಗೆ?

ವೆಬ್‌ಸೈಟ್‌

  • ಇಪಿಎಫ್ಒ ವೆಬ್‌ಸೈಟ್‌  www.epfindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. 
  • ಬಳಿಕ ‘Our Services’ ಆಯ್ಕೆಯ ಒಳಗೆ ಬರುವ ‘For Employees’ ಅನ್ನು ಸೆಲೆಕ್ಟ್‌ ಮಾಡಿ.
  • ನಂತರ ‘Services’ ಆಯ್ಕೆ ಕ್ಲಿಕ್‌ ಮಾಡಿ
  • ‘Member Passbook’ ಸೆಲೆಕ್ಟ್‌ ಮಾಡಿ.
  • ಈಗ ಯುಎಎನ್‌ ನಂಬರ್‌, ಪಾಸ್‌ವರ್ಡ್‌, ಕ್ಯಾಪ್ಚಾ ನಮೂದಿಸಿದರೆ ವಿವರ ಲಭ್ಯವಾಗುತ್ತದೆ.

ಉಮಾಂಗ್ ಆ್ಯಪ್‌

ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ‘UMANG’ ಆ್ಯಪ್‌ ಡೌನ್‌ಲೋಡ್‌ ಮಾಡಿ. ಬಳಿಕ ನಿಮ್ಮ ಹೆಸರು ನೋಂದಾಯಿಸಿ. ‘Service’ ಆಯ್ಕೆ ಕ್ಲಿಕ್‌ ಮಾಡಿ. ನಂತರ ‘View Passbook’ ಕ್ಲಿಕ್‌ ಮಾಡಿ. ಅದಾದ ಬಳಿಕ ‘Employee-centric service’ ಆಪ್ಶನ್‌ ಆಯ್ಕೆ ಮಾಡಿ. ಮುಂದಿನ ಹಂತದಲ್ಲಿ ಮತ್ತೊಂದು ಹೊಸ ಪುಟ ತೆರೆಯುತ್ತದೆ. ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗಿದೆ ಎಂಬ ಸಂದೇಶ ಇದರಲ್ಲಿ ಮೂಡುತ್ತದೆ. ಒಮ್ಮೆ ನೀವು ಒಟಿಪಿಯನ್ನು ನಮೂದಿಸಿ ಮತ್ತು ‘OK’ ಬಟನ್ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಇಪಿಎಫ್ ಪಾಸ್‌ಬುಕ್‌ ಅನ್ನು ನೋಡಬಹುದು ಮತ್ತು ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.

ಎಸ್‌ಎಂಎಸ್‌

ನಿಮ್ಮ ಮೊಬೈಲ್‌ ನಂಬರ್‌ ಯುಎಎನ್ ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿದ್ದರೆ, 7738299899 ಎಸ್ಎಂಎಸ್ ಕಳುಹಿಸುವ ಮೂಲಕ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ನೀವು ಪಡೆಯಬಹುದು. 7738299899 ನಂಬರ್‌ಗೆ EPFOHO UAN ENG ಎಂದು ಸಂದೇಶ ಕಳುಹಿಸಿ.

ಮಿಸ್ಡ್ ಕಾಲ್

ಮಿಸ್ಡ್ ಕಾಲ್ ಕೊಡುವ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕಾಗಿ ನೀವು 011-22901406 ನಂಬರ್‌ಗೆ ನೋಂದಾಯಿಸಿದ ಮೊಬೈಲ್‌ ನಂಬರ್‌ನಿಂದ ಮಿಸ್ಡ್ ಕಾಲ್ ಕೊಡಿ.

ಇದನ್ನೂ ಓದಿ: Money Guide: ಎನ್‌ಪಿಎಸ್‌ನಲ್ಲಿ ಸಿಪ್‌; ನಿವೃತ್ತಿ ಜೀವನಕ್ಕೆ ಉತ್ತಮ ಕೊಡುಗೆ; ನೋಂದಣಿಯ ಸಂಪೂರ್ಣ ವಿವರ ಇಲ್ಲಿದೆ

Continue Reading

ಪ್ರಮುಖ ಸುದ್ದಿ

LIC News: ಎಲ್‌ಐಸಿ ಈಗ ನಂಬರ್‌ ಒನ್‌ ಜಾಗತಿಕ ವಿಮೆ ಬ್ರಾಂಡ್!‌

LIC ಬ್ರಾಂಡ್ ಮೌಲ್ಯವು 9.8 ಶತಕೋಟಿ ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜೊತೆಗೆ ಬ್ರಾಂಡ್ ಸಾಮರ್ಥ್ಯದ ಸೂಚ್ಯಂಕ ಸ್ಕೋರ್ 88.3ರಲ್ಲಿದ್ದು, AAA ಬ್ರಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ ಎಂದು ವರದಿ ಹೇಳಿದೆ.

VISTARANEWS.COM


on

LIC
Koo

ಹೊಸದಿಲ್ಲಿ: ಭಾರತದ ಬೃಹತ್‌ ಜೀವವಿಮೆ ಸಂಸ್ಥೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation- ಎಲ್‌ಐಸಿ) ಜಾಗತಿಕವಾಗಿ ಪ್ರಬಲ ವಿಮಾ ಬ್ರಾಂಡ್ (insurance brand) ಆಗಿ ಹೊರಹೊಮ್ಮಿದೆ. ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ (Brand Finance Insurance) ಸಂಸ್ಥೆಯ 2024ರ ವರದಿ ಇದನ್ನು ತಿಳಿಸಿದೆ.

LICಯ ಬ್ರಾಂಡ್ ಮೌಲ್ಯವು 9.8 ಶತಕೋಟಿ ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜೊತೆಗೆ ಬ್ರಾಂಡ್ ಸಾಮರ್ಥ್ಯದ ಸೂಚ್ಯಂಕ ಸ್ಕೋರ್ 88.3ರಲ್ಲಿದ್ದು, AAA ಬ್ರಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ ಎಂದು ವರದಿ ಹೇಳಿದೆ.

LIC ನಂತರದ ಶ್ರೇಯಾಂಕಗಳ ಪ್ರಕಾರ ಕ್ಯಾಥೆ ಲೈಫ್ ಇನ್ಶುರೆನ್ಸ್ ಎರಡನೇ ಪ್ರಬಲ ಬ್ರಾಂಡ್ ಆಗಿದೆಯಂತೆ. ಇದು ಬ್ರಾಂಡ್ ಮೌಲ್ಯದಲ್ಲಿ 4.9 ಶತಕೋಟಿ ಡಾಲರ್‌ ಇದ್ದು, 9 ಶೇಕಡಾ ಹೆಚ್ಚಳ ಕಂಡಿದೆ. NRMA ಇನ್ಶುರೆನ್ಸ್ ನಂತರದ ಸ್ಥಾನದಲ್ಲಿದ್ದು, 82 ಸೂಚ್ಯಂಕ ಹಾಗೂ 1.3 ಶತಕೋಟಿ ಡಾಲರ್‌ ಬ್ರಾಂಡ್ ಮೌಲ್ಯ ಹೊಂದಿದೆ.

ಈ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಾಂತಿ, “ನಮ್ಮ ಗ್ರಾಹಕರ ಅಗತ್ಯಗಳ ಬಗ್ಗೆ ನಾವು ಜಾಗೃತರಾಗಿದ್ದೇವೆ. ಅವರ ವಿಮೆ ಮತ್ತು ಹೂಡಿಕೆಯ ಅಗತ್ಯಗಳನ್ನು ಪೂರೈಸಲು ನಾವು ನಿರಂತರವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಗ್ರಾಹಕರ ಸೇವೆಯತ್ತ ತೀವ್ರವಾಗಿ ಗಮನಹರಿಸುತ್ತೇವೆ ಮತ್ತು ಎಲ್ಲರಿಗೂ ಮೌಲ್ಯವರ್ಧಿತ ಸೇವೆಯನ್ನು ನೀಡುತ್ತೇವೆ” ಎಂದಿದ್ದಾರೆ.

2024ರ ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್-100 ವರದಿಯಲ್ಲಿ ಪ್ರಬಲ ವಿಮಾ ಬ್ರಾಂಡ್‌ಗಳ ಪಟ್ಟಿಯಲ್ಲಿ ನಂ.1ನೇ ಸ್ಥಾನವನ್ನು ಗಳಿಸುತ್ತಿರುವುದು ಹೆಮ್ಮೆ. ಇದು ಕಂಪನಿಯ ಮೇಲಿನ ಜನರ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ.

ಚೀನಾದ ವಿಮಾ ಬ್ರಾಂಡ್‌ಗಳು ಜಾಗತಿಕ ಶ್ರೇಯಾಂಕದಲ್ಲಿ ಪ್ರಾಬಲ್ಯವನ್ನು ಕಾಯ್ದುಕೊಂಡಿವೆ. ಪಿಂಗ್ ಆನ್ ಬ್ರಾಂಡ್ ಮೌಲ್ಯದಲ್ಲಿ 4 ಶೇಕಡಾ ಹೆಚ್ಚಳದೊಂದಿಗೆ USD 33.6 ಶತಕೋಟಿಗೆ ಮುನ್ನಡೆ ಸಾಧಿಸಿದೆ. ನಂತರ ಚೀನಾ ಲೈಫ್ ಇನ್ಶುರೆನ್ಸ್ ಮತ್ತು CPIC ಅನುಕ್ರಮವಾಗಿ 3ನೇ ಮತ್ತು 5ನೇ ಸ್ಥಾನಗಳನ್ನು ಉಳಿಸಿಕೊಂಡಿವೆ.

ಜರ್ಮನಿಯ ಅಲಿಯಾನ್ಸ್ ಮತ್ತು ಫ್ರಾನ್ಸ್‌ನ ಎಎಕ್ಸ್‌ಎ 2 ಮತ್ತು 4ನೇ ಸ್ಥಾನಗಳಲ್ಲಿ ಅಗ್ರ 5 ಅನ್ನು ಪೂರ್ಣಗೊಳಿಸಲು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ.

ಬ್ರಾಂಡ್ ಮೌಲ್ಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಅನುಭವಿಸುತ್ತಿರುವ ಸಂಸ್ಥೆಗಳಲ್ಲಿ, ಆಸ್ಟ್ರೇಲಿಯಾದ NRMA ವಿಮೆಯು 82 ಶೇಕಡಾ ಹೆಚ್ಚಳದೊಂದಿಗೆ USD 1.3 ಶತಕೋಟಿ ಮೌಲ್ಯವನ್ನು ಕಾಣಿಸಿದೆ. ಜೊತೆಗೆ ಡೆನ್ಮಾರ್ಕ್‌ನ Tryg ಜೊತೆಗೆ USD 1.6 ಶತಕೋಟಿಗೆ 66ರಷ್ಟು ಏರಿಕೆ ಕಂಡಿದೆ.

LIC ಇಂಡಿಯಾ FY23ರಲ್ಲಿ 39,090 ಕೋಟಿ ರೂಪಾಯಿಗಳ ಮೊದಲ ವರ್ಷದ ಪ್ರೀಮಿಯಂ ಸಂಗ್ರಹವನ್ನು ಸಾಧಿಸಿದೆ. ಆದರೆ SBI ಲೈಫ್ ಇನ್ಶುರೆನ್ಸ್ ಮತ್ತು HDFC ಲೈಫ್ ಇನ್ಶುರೆನ್ಸ್ ಕ್ರಮವಾಗಿ 15,197 ಕೋಟಿ ಮತ್ತು 10,970 ಕೋಟಿ ರೂಪಾಯಿಗಳ ಹೊಸ ವ್ಯವಹಾರ ಪ್ರೀಮಿಯಂ ಸಂಗ್ರಹಗಳೊಂದಿಗೆ ಖಾಸಗಿ ವಲಯವನ್ನು ಮುನ್ನಡೆಸಿದೆ.

ಇತ್ತೀಚಿನ ಬೆಳವಣಿಗೆಗಳಲ್ಲಿ, LIC ಉದ್ಯೋಗಿಗಳಿಗೆ 17 ಪ್ರತಿಶತ ವೇತನ ಪರಿಷ್ಕರಣೆಯನ್ನು ಸರ್ಕಾರವು ಅನುಮೋದಿಸಿದೆ. ಇದು 110,000 ಉದ್ಯೋಗಿಗಳಿಗೆ ಪ್ರಯೋಜನವಾಗಿದೆ. LICಯ ಷೇರುಗಳು ಇತ್ತೀಚೆಗೆ ರೂ. 1,175ರ ಸಾರ್ವಕಾಲಿಕ ಎತ್ತರವನ್ನು ತಲುಪಿದವು. ಇದು ಭಾರತದ ಅತ್ಯಂತ ಮೌಲ್ಯಯುತವಾದ PSU ಕಂಪನಿಯಾಗಿ ಮತ್ತು ಐದನೇ ಅತ್ಯಂತ ಮೌಲ್ಯಯುತವಾದ ಭಾರತೀಯ ಲಿಸ್ಟೆಡ್ ಕಂಪನಿಯಾಗಿ ಅದರ ಸ್ಥಾನಮಾನವನ್ನು ಮರಳಿ ಪಡೆದುಕೊಂಡಿದ್ದು, ಮಾರುಕಟ್ಟೆ ಮೌಲ್ಯಮಾಪನದಲ್ಲಿ SBI ಅನ್ನು ಮೀರಿಸಿದೆ.

ಇದನ್ನೂ ಓದಿ: LIC Employees: ಎಲ್‌ಐಸಿ ನೌಕರರಿಗೆ ಕೇಂದ್ರ ಗುಡ್‌ನ್ಯೂಸ್;‌ ಇಷ್ಟು ಪರ್ಸೆಂಟ್‌ ಸಂಬಳ ಹೆಚ್ಚಳ

Continue Reading

ಮನಿ-ಗೈಡ್

Money Guide: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್‌ ಮಾಡಿ

Money Guide: ನಿರ್ದಿಷ್ಟ ಆದಾಯದ ಸ್ಲ್ಯಾಬ್‌ಗಿಂತ ಹೆಚ್ಚಿನ ವೇತನವನ್ನು ಹೊಂದಿರುವ ಪ್ರತಿಯೊಬ್ಬರೂ ವಾರ್ಷಿಕವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸುವುದು ಕಡ್ಡಾಯ. ಇದಕ್ಕಾಗಿ ವಿವಿಧ ಫಾರ್ಮ್‌ಗಳು ಲಭ್ಯ. ನೀವು ಯಾವ ಫಾರ್ಮ್‌ ಸಲ್ಲಿಸಬೇಕು ಎನ್ನುವ ಗೊಂದಲ ಇದ್ದರೆ ಇಲ್ಲಿದೆ ಪರಿಹಾರ.

VISTARANEWS.COM


on

money guide
Koo

ಬೆಂಗಳೂರು: ನಿರ್ದಿಷ್ಟ ಆದಾಯದ ಸ್ಲ್ಯಾಬ್‌ಗಿಂತ ಹೆಚ್ಚಿನ ವೇತನವನ್ನು ಹೊಂದಿರುವ ಪ್ರತಿಯೊಬ್ಬರೂ ವಾರ್ಷಿಕವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಿಗೆ ಅನುಗುಣವಾಗಿ ಇದನ್ನು ಫೈಲ್ ಮಾಡಬೇಕಾಗುತ್ತದೆ. ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಮಾಡಬೇಕು. ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ಇದರಿಂದ ಭವಿಷ್ಯದಲ್ಲಿ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಪೈಕಿ ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸುವ ಲಾಭಕ್ಕೆ ಸರಿಹೊಂದಿಸುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಅವಧಿ ಮುಗಿಯುವ ಮೋದಲೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಬಗ್ಗೆ ಹೆಚ್ಚಿನ ವಿವರ ಮನಿಗೈಡ್‌ (Money Guide) ನೀಡಲಿದೆ.

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇದೆ ವಿವಿಧ ಮಾರ್ಗ

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿವಿಧ ಫಾರ್ಮ್‌ಗಳು ಲಭ್ಯ. ITR-1, ITR-2, ITR-3, ITR-4, ITR-5, ITR-6 ಮತ್ತು ITR-7 ಫಾರ್ಮ್​ಗಳ ಪೈಕಿ ನಿಮ್ಮ ಆದಾಯದ ಮೂಲಗಳು, ಗಳಿಸಿದ ಮೊತ್ತ ಮತ್ತು ನೀವು ಯಾವ ವರ್ಗಕ್ಕೆ ಸೇರಿದ್ದೀರಿ ಎಂಬುದರ ಆಧಾರದ ಮೇಲೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆದಾಯ ತೆರಿಗೆ ರಿಟರ್ನ್ ಫಾರ್ಮ್ ಅನ್ನು ಹಣಕಾಸು ವರ್ಷದ ಕೊನೆಯ ತಿಂಗಳುಗಳಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಯಾವ ಫಾರ್ಮ್‌ ಯಾವ ವಿಭಾಗಕ್ಕೆ?

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ತೆರಿಗೆ ಇಲಾಖೆ ಸೂಚಿಸಿದ 7 ಫಾರ್ಮ್‌ಗಳ ಪೈಕಿ ಯಾವ ವಿಭಾಗಕ್ಕೆ ಯಾವುದು ಎನ್ನುವ ವಿವರ ಇಲ್ಲಿದೆ.

ITR-1

ಭಾರತದಲ್ಲಿ ನೆಲೆಸಿರುವ ಸಾಮಾನ್ಯ ನಾಗರಿಕರು ಮತ್ತು 50 ಲಕ್ಷ ರೂ. ಆದಾಯವನ್ನು ಹೊಂದಿರುವವರು ಐಟಿಆರ್-1 ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ. ಸಂಬಳ, ಮನೆಯಿಂದ ಬರುವ ಆದಾಯ, ಇತರ ಮೂಲಗಳಿಂದ ಬರುವ ಆದಾಯ, ಸಂಗಾತಿ ಅಥವಾ ಮಕ್ಕಳಿಂದ ಬರುವ ಆದಾಯ ಸೇರಿ ಎಲ್ಲವೂ 50 ಲಕ್ಷ ರೂ. ಇದ್ದರೆ ಐಟಿಆರ್-1ರ ಅಡಿ ರಿಟರ್ನ್ಸ್​ ಸಲ್ಲಿಸಬೇಕು.

ITR-2

50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿ, ಕಂಪೆನಿಯ ನಿರ್ದೇಶಕರು, ಈಕ್ವಿಟಿ ಷೇರುಗಳನ್ನು ಹೊಂದಿರುವವರು ಈ ಐಟಿಆರ್ ಫಾರ್ಮ್-2 ಅನ್ನು ಸಲ್ಲಿಸಬೇಕು. ಜತೆಗೆ ಮಾಸಿಕ ಸಂಬಳ ಹೊಂದಿರುವವರು, ಬಂಡವಾಳ ಲಾಭಗಳು, ವಿದೇಶಗಳಲ್ಲಿ ಆಸ್ತಿಗಳು ಮತ್ತು ಆದಾಯದ ಮಾರ್ಗಗಳನ್ನು ಹೊಂದಿರುವವರೂ ಇದೇ ವರ್ಗಕ್ಕೆ ಬರುತ್ತಾರೆ.

ITR-3

ವೃತ್ತಿ, ವ್ಯಾಪಾರ ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಮತ್ತು ಲಾಭ ಗಳಿಸುವ ವ್ಯಕ್ತಿಗಳು 50 ಲಕ್ಷ ರೂ. ವರಮಾನ ಹೊಂದಿದ್ದರೆ ಈ ಫಾರ್ಮ್​ (ಐಟಿಆರ್-3) ಸಲ್ಲಿಸಬೇಕು.

ITR-4

50 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಸಂಸ್ಥೆಗಳು, ವೃತ್ತಿ ಮತ್ತು ವ್ಯವಹಾರದ ಮೂಲಕ ಆದಾಯ ಗಳಿಸುವ ವ್ಯಕ್ತಿಗಳು ಐಟಿಆರ್-4 ಅನ್ನು ಸಲ್ಲಿಸಬೇಕು.

ITR-5

ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಕಂಪೆನಿಗಳು, ಇತರ ರೀತಿಯಲ್ಲಿ 50 ಲಕ್ಷ ರೂ.ವರೆಗೆ ಆದಾಯವನ್ನು ಗಳಿಸುವವರು ಈ ಐಟಿಆರ್-5 ಫಾರ್ಮ್ ಅನ್ನು ಸಲ್ಲಿಸಬೇಕು.

ITR-6

ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿ ಪಡೆಯುವ ಕಂಪೆನಿಗಳನ್ನು ಹೊರತುಪಡಿಸಿ ಇತರ ಕಂಪನಿಗಳು ಐಟಿಆರ್-6 ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.

ITR-7

ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 139(4ಎ) ಅಥವಾ 139(4ಬಿ) ಅಥವಾ 139(4ಸಿ) ಅಥವಾ 139(4ಡಿ) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸುವ ವ್ಯಕ್ತಿಗಳು ಮತ್ತು ಕಂಪೆನಿಗಳು ಇದನ್ನು ಸಲ್ಲಿಸಬೇಕಾಗುತ್ತದೆ. ವ್ಯಕ್ತಿಗಳು, ದತ್ತಿ ಸಂಸ್ಥೆಗಳು, ಧಾರ್ಮಿಕ ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ವೈಜ್ಞಾನಿಕ ಸಂಶೋಧನಾ ಸಂಘಗಳು, ಸುದ್ದಿ ಸಂಸ್ಥೆಗಳು, ಆಸ್ಪತ್ರೆಗಳು, ಟ್ರೇಡ್ ಯೂನಿಯನ್‌ಗಳು, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಎನ್‌ಜಿಒಗಳು ಅಥವಾ ಅಂತಹ ಇತರ ಸಂಸ್ಥೆಗಳೂ ಈ ವ್ಯಾಪ್ತಿಗೆ ಒಳಪಡುತ್ತವೆ.

ಗಮನಿಸಿ

ಮೊದಲ ಬಾರಿಗೆ ನೀವು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುತ್ತಿದ್ದರೆ ನಿಮ್ಮ ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಮತ್ತು ಮೊಬೈಲ್‌ ಸಂಖ್ಯೆ ಸಿದ್ಧವಾಗಿಟ್ಟುಕೊಳ್ಳಬೇಕು. ಬಳಿಕ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ eportal.incometax.gov.inಗೆ ಭೇಟಿ ನೀಡಿ. ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡುವವರು ನೀವಾಗಿದ್ದರೆ ತಮ್ಮ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ರಚಿಸಿ. ನಿಮ್ಮ ಪಾನ್‌ ಕಾರ್ಡ್‌ ಯೂಸರ್‌ ಐಡಿಯಾಗಿರುತ್ತದೆ. ಬಳಿಕ ನಿಮ್ಮ ಸ್ವಂತ ಪಾಸ್‌ವರ್ಡ್‌ ರಚಿಸಿಕೊಳ್ಳಬಹುದು.

ಇದನ್ನೂ ಓದಿ: Money Guide: ಸೈಬರ್‌ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್‌ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ

Continue Reading

ಮನಿ-ಗೈಡ್

Money Guide: ಎನ್‌ಪಿಎಸ್‌ನಲ್ಲಿ ಸಿಪ್‌; ನಿವೃತ್ತಿ ಜೀವನಕ್ಕೆ ಉತ್ತಮ ಕೊಡುಗೆ; ನೋಂದಣಿಯ ಸಂಪೂರ್ಣ ವಿವರ ಇಲ್ಲಿದೆ

Money Guide: ನಿವೃತ್ತಿ ಜೀವನಕ್ಕೆ ಈಗಲೇ ಯೋಜನೆ ರೂಪಿಸಿದ್ದೀರಾ? ಹಾಗಾದರೆ ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆಗಳತ್ತ ಗಮನ ಹರಿಸುವುದು ಒಳಿತು. ಈ ವಿಧಾನದಲ್ಲಿ ದೊರೆಯುವ ಅನುಕೂಲಗಳು, ನೋಂದಣಿ ಹೇಗೆ ಮುಂತಾದ ವಿವರ ಇಲ್ಲಿದೆ.

VISTARANEWS.COM


on

nps
Koo

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System)ಯಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆಗಳು (Systematic Investment Plans) ಚಂದಾದಾರರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತವೆ. ಮ್ಯೂಚುವಲ್ ಫಂಡ್‌ನಂತೆ ಇದು ಕೂಡ ಸರಾಸರಿ ಲಾಭ ಒದಗಿಸುತ್ತದೆ. ಹೀಗಾಗಿ ನಿವೃತ್ತಿ ಜೀವನದ ಆದಾಯದ ಬಗ್ಗೆ ಯೋಚಿಸುವವರು ಇದರತ್ತ ಗಮನ ಹರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ. ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2004ರಲ್ಲಿ ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ಇದಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ (Money Guide).

ಕಾರ್ಯ ನಿರ್ವಹಣೆ ಹೇಗೆ?

ಎನ್‌ಪಿಎಸ್‌ ನಿರ್ದಿಷ್ಟ ಕೊಡುಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಚಂದಾದಾರರು ತಮ್ಮ ಎನ್‌ಪಿಎಸ್‌ ಖಾತೆಗೆ ನಿಯಮಿತವಾಗಿ ಕೊಡುಗೆ ನೀಡುತ್ತಾರೆ. ಈ ಕೊಡುಗೆಗಳನ್ನು ಈಕ್ವಿಟಿಗಳು, ಸರ್ಕಾರಿ ಸೆಕ್ಯುರಿಟಿಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಪರ್ಯಾಯ ಸ್ವತ್ತುಗಳಂತಹ ವಿವಿಧ ಹಣಕಾಸು ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ನಿವೃತ್ತಿಯ ನಂತರ ಚಂದಾದಾರರು ಸಂಗ್ರಹವಾದ ಕಾರ್ಪಸ್‌ನ ಒಂದು ಭಾಗವನ್ನು ಒಟ್ಟು ಮೊತ್ತವಾಗಿ ಹಿಂಪಡೆಯಬಹುದು. ಉಳಿದ ಮೊತ್ತವನ್ನು ನಿಯಮಿತ ಪಿಂಚಣಿ ಆದಾಯವನ್ನು ಒದಗಿಸಲು ವಿನಿಯೋಗಿಸಲಾಗುತ್ತದೆ. ಎನ್‌ಪಿಎಸ್‌ ತೆರಿಗೆ ಪ್ರಯೋಜನಗಳು ಮತ್ತು ಹೂಡಿಕೆ ಆಯ್ಕೆಗಳಲ್ಲಿ ನೀಡುವ ಮೂಲಕ ಭಾರತದಲ್ಲಿ ಜನಪ್ರಿಯವಾಗಿದೆ.

ಎನ್‌ಪಿಎಸ್‌ನಲ್ಲಿ ಸಿಪ್‌ ನೋಂದಣಿ ಹೇಗೆ?

  • ಎನ್‌ಪಿಎಸ್‌ ವೆಬ್‌ಸೈಟ್‌ https://enps.nsdl.com/eNPS/NationalPensionSystem.htmlಗೆ ಭೇಟಿ ನೀಡಿ.
  • National Pension System ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • ‘Get Same day NAV’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಬಳಿಕ ‘Continue’ ಆಪ್ಶನ್‌ ಸೆಲೆಕ್ಟ್‌ ಮಾಡಿ.
  • ಪಿಆರ್‌ಎಎನ್‌ ನಂಬರ್‌ ಮತ್ತು ಡೇಟ್‌ ಆಫ್‌ ಬರ್ತ್‌ ನಮೂದಿಸಿ. ಬಳಿಕ ಇಮೇಲ್‌ ಐಡಿ ಅಥವಾ ಮೊಬೈಲ್‌ ಸಂಖ್ಯೆಯನ್ನು ನೀಡಿ. ಬಳಿಕ Submit OTP ಬಟನ್‌ ಕ್ಲಿಕ್‌ ಮಾಡಿ.
  • 6 ಅಂಕೆಯ ಒಟಿಪಿ ನಮೂದಿಸಿ ಬಳಿಕ Continue ಆಯ್ಕೆಯನ್ನು ಕ್ಲಿಕ್‌ ಮಾಡಿ.
  • New SIP Registration in NPS ಮತ್ತು Submit ಆಪ್ಸನ್‌ ಸೆಲೆಕ್ಟ್‌ ಮಾಡಿ.
  • ಎಸ್‌ಐಪಿ ಮೊತ್ತ, ಎಸ್ಐಪಿ ದಿನಾಂಕ, ಮುಕ್ತಾಯದ ತಿಂಗಳು ಮತ್ತು ವರ್ಷ ಇತ್ಯಾದಿ ವಿವರಗಳನ್ನು ನಮೂದಿಸಿ.
  • ಬಳಿಕ ಚಂದಾದಾರರು ಬ್ಯಾಂಕ್ ವಿವರಗಳನ್ನು ನಮೂದಿಸಬೇಕು. ಮೊತ್ತವನ್ನು ಅದೇ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.
  • ಪರಿಶೀಲನಾ ಪ್ರಕ್ರಿಯೆಗಾಗಿ ನಮೂದಿಸಿದ ವಿವರಗಳು ಸ್ಕ್ರೀನ್‌ ಮೇಲೆ ಮೂಡುತ್ತದೆ. ಪರಿಶೀಲನೆಯ ನಂತರ Continue ಬಟನ್‌ ಕ್ಲಿಕ್ ಮಾಡಿ.
  • ಎಸ್ಐಪಿಯ ನೋಂದಣಿಯನ್ನು ಅನುಮೋದನೆಗಾಗಿ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ. ದೃಢೀಕರಣ ಯಶಸ್ವಿಯಾದ ನಂತರ ಮೊತ್ತ ಚಂದಾದಾರರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.

ಸಿಪ್‌ನ ಪ್ರಯೋಜನಗಳು

  • ಎಸ್ಐಪಿ ಹೂಡಿಕೆಯ ವಿಧಾನ ಸರಳ.
  • ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲು ಬಯಸುವವವರಿಗೆ ಸೂಕ್ತ ವಿಧಾನ.
  • ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ಮತ್ತೆ ಎನ್‌ಪಿಎಸ್‌ ಖಾತೆಗೆ ದೊಡ್ಡ ಮೊತ್ತದ ಪಾವತಿಗಳನ್ನು ಮಾಡುವ ಅಗತ್ಯವಿಲ್ಲ.
  • ದೀರ್ಘಾವಧಿಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ‘ಪವರ್ ಆಫ್ ಕಂಪೌಂಡಿಂಗ್’ನ ಪ್ರಯೋಜನಗಳನ್ನು ಪಡೆಯಲು ಎಸ್ಐಪಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?

Continue Reading
Advertisement
narendra modi
ದೇಶ5 mins ago

ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

Varun Gandhi
ಪ್ರಮುಖ ಸುದ್ದಿ27 mins ago

Varun Gandhi: ಸಂಸದ ಅಲ್ಲದಿದ್ದರೂ ನಿಮ್ಮ ಮಗ; ಜನಕ್ಕೆ ಟಿಕೆಟ್‌ ವಂಚಿತ ವರುಣ್‌ ಗಾಂಧಿ ಭಾವುಕ ಪತ್ರ!

supreme court CJI DY chandrachud
ಪ್ರಮುಖ ಸುದ್ದಿ35 mins ago

CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

40 per cent commission advertisement against BJP and Summons to CM Siddaramaiah and DCM DK Shivakumar
ರಾಜಕೀಯ40 mins ago

40 percent commission: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು; ಸಿಎಂ, ಡಿಸಿಎಂಗೆ ಸಮನ್ಸ್‌

Murder case Family Dispute
ಬೆಂಗಳೂರು ಗ್ರಾಮಾಂತರ43 mins ago

Murder Case : ಮಚ್ಚಿನಿಂದ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ

Bengaluru News air pressure pipe
ಬೆಂಗಳೂರು2 hours ago

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20242 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Actor Darshan at Matinee Movie Team
ಸ್ಯಾಂಡಲ್ ವುಡ್2 hours ago

Actor Darshan: ಸತೀಶ್ ನೀನಾಸಂ-ರಚಿತಾ `ಮ್ಯಾಟ್ನಿ’ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್!

Drone Prathap prayag
ಸ್ಯಾಂಡಲ್ ವುಡ್2 hours ago

Drone Prathap: ಬಿಗ್ ಬಾಸ್ ಸ್ಪರ್ಧಿ ಪ್ರತಾಪನ ʻಡ್ರೋನ್‌ʼ ಇನ್ಮುಂದೆ ಹಾರಲ್ಲ! ಕಳ್ಳಾಟ ಬಯಲು!

Bhagwant Mann
ದೇಶ2 hours ago

Bhagwant Mann: 50ನೇ ವಯಸ್ಸಲ್ಲಿ ತಂದೆಯಾದ ಪಂಜಾಬ್‌ ಸಿಎಂ ಭಗವಂತ್ ಮಾನ್;!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20242 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20243 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ1 day ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ2 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌