Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು? - Vistara News

ವಾಣಿಜ್ಯ

Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?

Gautam Adani: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್‌ ಅದಾನಿ ಅವರು ತಮ್ಮ ಅದಾನಿ ಗ್ರೂಪ್‌ಗೆ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಸ್ಪಷ್ಟೀಕರಣ ನೀಡಿದೆ. ಗೌತಮ್‌ ಅದಾನಿ ಹೇಳಿರುವ ವಿಚಾರಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅವರು ತಮ್ಮ ನಿವೃತ್ತಿಯ ದಿನಾಂಕವನ್ನು ಘೋಷಿಸಿಲ್ಲ ಎಂದು ತಿಳಿಸಿದೆ. ”ಅವರು ನಿವೃತ್ತಿಯ ಬಗ್ಗೆ ಯಾವುದೇ ದಿನಾಂಕ ಅಥವಾ ಸಮಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲʼʼ ಎಂದಿದೆ.

VISTARANEWS.COM


on

Gautam Adani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್‌ ಅದಾನಿ (Gautam Adani) ಅವರು ತಮ್ಮ ಅದಾನಿ ಗ್ರೂಪ್‌ಗೆ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ (Adani Enterprises) ಸ್ಪಷ್ಟೀಕರಣ ನೀಡಿದೆ. ಗೌತಮ್‌ ಅದಾನಿ ಹೇಳಿರುವ ವಿಚಾರಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅವರು ತಮ್ಮ ನಿವೃತ್ತಿಯ ದಿನಾಂಕವನ್ನು ಘೋಷಿಸಿಲ್ಲ ಎಂದು ತಿಳಿಸಿದೆ.

“ಇತ್ತೀಚಿನ ಸಂದರ್ಶನವೊಂದರಲ್ಲಿ ಗೌತಮ್ ಅದಾನಿ ಅವರು ವ್ಯವಹಾರದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಉತ್ತರಾಧಿಕಾರಿ ನೇಮಕದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಉತ್ತರಾಧಿಕಾರವು ಕೇವಲ ಒಂದು ಘಟನೆಯಲ್ಲ ಮತ್ತು ಒಂದು ದಿನದಲ್ಲಿ ನಡೆಯುವ ಬೆಳವಣಿಗೆಯಲ್ಲ. ಅದು ಒಂದು ನಿರಂತರ ಪ್ರಯಾಣ ಎಂದಷ್ಟೇ ಹೇಳಿದ್ದಾರೆ. ಅವರು ನಿವೃತ್ತಿಯ ಬಗ್ಗೆ ಯಾವುದೇ ದಿನಾಂಕ ಅಥವಾ ಸಮಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲʼʼ ಎಂದು ಅದಾನಿ ಎಂಟರ್‌ಪ್ರೈಸಸ್‌ ತಿಳಿಸಿದೆ.

“ಇದಲ್ಲದೆ ಕುಟುಂಬ ಟ್ರಸ್ಟ್‌ ಬಗ್ಗೆಯೂ ಗೌತಮ್‌ ಅದಾನಿ ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ತಮ್ಮ ವಿವಿಧ ಉದ್ಯಮಗಳನ್ನು ಇಬ್ಬರು ಪುತ್ರರು ಮತ್ತು ಸೋದರ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಷೇರು ಬೆಲೆಗಳು ಮಾರುಕಟ್ಟೆ ಆಧಾರದಲ್ಲಿ ನಿರ್ಧಾರವಾಗುತ್ತವೆ. ಕಂಪನಿಯ ಆಡಳಿತ ಮಂಡಳಿಗೆ ಇದರಲ್ಲಿ ಯಾವುದೇ ನಿಯಂತ್ರಣವಿಲ್ಲ. ಇತ್ತೀಚೆಗೆ ಕಂಡುಬಂದ ಷೇರುಗಳ ಬೆಲೆಯಲ್ಲಿನ ವ್ಯತ್ಯಾಸಕ್ಕೆ ಯಾವುದೇ ನಿರ್ದಿಷ್ಟ ಕಾರಣದ ಬಗ್ಗೆ ಮಾಹಿತಿ ಇಲ್ಲʼʼ ಎಂದು ಅದಾನಿ ಎಂಟರ್‌ಪ್ರೈಸಸ್‌ ಹೇಳಿದೆ.

62 ವರ್ಷದ ಗೌತಮ್ ಅದಾನಿ ಅವರು ತಮ್ಮ 70ನೇ ವಯಸ್ಸಿನಲ್ಲಿ ನಿವೃತ್ತರಾಗಲು ಚಿಂತನೆ ನಡೆಸಿದ್ದಾರೆ ಮತ್ತು 2030ರ ಆರಂಭದಲ್ಲಿ ವ್ಯವಹಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದ ಹಿನ್ನಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ʼʼಅದಾನಿ 70ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ. ತಮ್ಮ ಪುತ್ರರಾದ 37 ವರ್ಷದ ಕರಣ್‌ ಅದಾನಿ, 26ರ ಹರೆಯದ ಜೀತ್‌ ಅದಾನಿ ಹಾಗೂ ಅವರ ಸೋದರ ಸಂಬಂಧಿಗಳಾದ 45 ವರ್ಷದ ಪ್ರಣವ್‌ ಹಾಗೂ 30 ವರ್ಷದ ಸಾಗರ್‌ ಅವರು ಉತ್ತರಾಧಿಕಾರಿಗಳಾಗಿದ್ದು, ಕುಟುಂಬದ ಟ್ರಸ್ಟ್‌ನಲ್ಲಿ ಇದನ್ನು ಉಲ್ಲೇಖಿಸಲಾಗಿದೆʼʼ ಎಂದು ಬ್ಲೂಮ್‌ಬರ್ಗ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂದರ್ಶನವೊಂದರಲ್ಲಿ ಗೌತಮ್‌ ಅದಾನಿ, “ಅವರೆಲ್ಲರೂ (ಕರಣ್‌ ಅದಾನಿ, ಜೀತ್‌ ಅದಾನಿ, ಪ್ರಣವ್‌ ಹಾಗೂ ಸಾಗರ್‌) ಕಂಪನಿಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅವರು ಕಂಪನಿಯ ಬೆಳವಣಿಗೆಗಾಗಿ ಹಸಿದಿದ್ದಾರೆ ಎನ್ನುವ ವಿಚಾರವೇ ನನಗೆ ಸಂಸತವನ್ನು ತಂದಿದೆ. ಎರಡನೇ ಪೀಳಿಗೆಯಲ್ಲಿ ಇಂತಹ ತುಡಿತ ಕಂಡು ಬರುವುದು ಬಹಳ ಅಪರೂಪ. ಅವರು ಮುಂದೆ ಒಟ್ಟಾಗಿ ಕೆಲಸ ಮಾಡಬೇಕುʼʼ ಎಂದು ಹೇಳಿದ್ದರು.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಸದ್ಯ ಅದಾನಿ ಸಮೂಹ 111 ಬಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ್ದು, ಗೌತಮ್‌ ಅದಾನಿ ವಿಶ್ವದ 11ನೇ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. 109 ಬಿಲಿಯನ್‌ ಡಾಲರ್‌ ಆಸ್ತಿಯೊಂದಿಗೆ ಮುಕೇಶ್‌ ಅಂಬಾನಿ ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಇಂದೂ ಇಳಿಕೆಯಾದ ಚಿನ್ನದ ಬೆಲೆ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್‌ 7) ಚಿನ್ನದ ದರ ಇಳಿಕೆಯಾಗಿದೆ. ಕೆಲವು ದಿನಗಳಿಂದ ಸತತವಾಗಿ ಗಗನಮುಖಿಯಾಗಿದ್ದ ಚಿನ್ನದ ಇಳಿಯತ್ತ ಸಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿತ್ತಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 40 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 44 ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,350 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,927 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್‌ 7) ಚಿನ್ನದ ದರ ಇಳಿಕೆಯಾಗಿದೆ (Gold Rate Today). ಮಂಗಳವಾರವೂ ಬೆಲೆ ಕಡಿಮೆಯಾಗಿತ್ತು. ಕೆಲವು ದಿನಗಳಿಂದ ಸತತವಾಗಿ ಗಗನಮುಖಿಯಾಗಿದ್ದ ಚಿನ್ನದ ಇಳಿಕೆಯತ್ತ ಸಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 40 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 44 ಕಡಿಮೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,350 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,927 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 50,800 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 63,500 ಮತ್ತು ₹ 6,35,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 55,416 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,270 ಮತ್ತು ₹ 6,92,700 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,365 ₹ 6,942
ಮುಂಬೈ₹ 6,350 ₹ 6,927
ಬೆಂಗಳೂರು₹ 6,350 ₹ 6,927
ಚೆನ್ನೈ₹ 6,330 ₹ 6,906

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 81 ಹಾಗೂ 8 ಗ್ರಾಂಗೆ ₹ 648 ಇದೆ. 10 ಗ್ರಾಂ ₹ 810 ಹಾಗೂ 1 ಕಿಲೋಗ್ರಾಂ ₹ 81,000 ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

Continue Reading

ವಾಣಿಜ್ಯ

Mukesh Ambani Mobile: ಮುಕೇಶ್ ಅಂಬಾನಿ, ನೀತಾ ಅಂಬಾನಿ ಯಾವ ಮೊಬೈಲ್‌ ಬಳಸುತ್ತಾರೆ? ಅವುಗಳ ವೈಶಿಷ್ಟ್ಯ ಏನೇನು?

Mukesh Ambani Mobile: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಆಗಮಿಸಿದ್ದ ರಿಲಯನ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು ಬಳಸುತ್ತಿರುವ ಫೋನ್ ಎಲ್ಲರ ಗಮನ ಸೆಳೆಯಿತು. ಮುಕೇಶ್ ಅಂಬಾನಿ (Mukesh Ambani) ಬಳಸುತ್ತಿದ್ದ ಈ ಫೋನ್ ಅತ್ಯಂತ ದುಬಾರಿಯಾಗಿದೆ. ಇದಕ್ಕೆ ಕಾರಣವೂ ಇದೆ. ಅದು ಏನು ಎಂಬ ಮಾಹಿತಿ ಇಲ್ಲಿದೆ. ವಿಶೇಷ ಏನೆಂದರೆ, ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಒಂದೇ ಮಾಡೆಲ್‌ನ ಮೊಬೈಲ್‌ ಫೋನ್‌ ಬಳಸುತ್ತಾರೆ.

VISTARANEWS.COM


on

By

Mukesh Ambani Mobile
Koo

ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕ ಮತ್ತು ಭಾರತದ ಶ್ರೀಮಂತ ವ್ಯಕ್ತಿ (India’s richest man) ಮುಕೇಶ್ ಅಂಬಾನಿ (Mukesh Ambani) ಅವರು ಧರಿಸುವ, ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪತ್ನಿ ನೀತಾ ಅಂಬಾನಿ (nita ambani) ಅವರೊಂದಿಗೆ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಅವರ ಕೈಯಲ್ಲಿದ್ದ ಫೋನ್ (Mukesh Ambani Mobile) ಎಲ್ಲರ ಗಮನ ಸೆಳೆದಿತ್ತು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ಸುಮಾರು ಎಂಟು ತಿಂಗಳಾಗುತ್ತ ಬಂದರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲೆಬ್ರಿಟಿಗಳು, ವಿಐಪಿಗಳು ಎಲ್ಲರ ಗಮನ ಸೆಳೆದಿರುವುದು ಇನ್ನೂ ಚರ್ಚೆಯಾಗುತ್ತಲೇ ಇದೆ. ಮುಕೇಶ್ ಅಂಬಾನಿ ಕೂಡ ತಮ್ಮ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ಬಳಸುತ್ತಿದ್ದ ಫೋನ್.

ಅದ್ಧೂರಿ ಸಮಾರಂಭದಲ್ಲಿ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಕಾಣಿಸಿಕೊಂಡರು. ಅವರ ಕೈಯಲ್ಲಿದ್ದ ಸ್ಮಾರ್ಟ್ ಫೋನ್ ಎಲ್ಲರ ಗಮನ ಸೆಳೆಯಲು ಹಲವು ಕಾರಣಗಳಿವೆ. ಮುಕೇಶ್ ಅಂಬಾನಿ ಇತ್ತೀಚಿನ ಆಪಲ್ ಐಫೋನ್ ಅನ್ನು ಬಳಸುತ್ತಿದ್ದಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಕೇವಲ ಸಾಮಾನ್ಯ ಐಫೋನ್ ಅಲ್ಲ. ಇದು ಐಫೋನ್ 15 ಸರಣಿಯ ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಫೋನ್‌ನ 256 GB ಮಾದರಿಯು ಸುಮಾರು 1.50 ಲಕ್ಷ ರೂ. ನದ್ದಾಗಿದೆ. 1 ಟಿಬಿ ಸ್ಟೋರೇಜ್ ರೂಪಾಂತರದ ಬೆಲೆ ಅಂದಾಜು 2 ಲಕ್ಷ ರೂ.

Mukesh Ambani
Mukesh Ambani


ನೀತಾ ಅಂಬಾನಿ ಫೋನ್

ನೀತಾ ಅಂಬಾನಿ ಕೂಡ ಅದೇ ಮಾದರಿಯ ಐಫೋನ್ ಅನ್ನು ಬಳಸುತ್ತಿದ್ದಾರೆ. ಅನೇಕ ಇತರ ಪ್ರಮುಖ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಈ ಫೋನ್ ಅನ್ನು ಅದರ ಅಸಾಧಾರಣ ವೈಶಿಷ್ಟ್ಯಗಳಿಗಾಗಿ ಆದ್ಯತೆ ನೀಡುತ್ತಾರೆ. ಐಫೋನ್ 15 ಪ್ರೊ ಮ್ಯಾಕ್ಸ್ ಅತ್ಯುತ್ತಮ ಕೆಮರಾ, ನೀರಿನ ಪ್ರತಿರೋಧ ಮತ್ತು ಅತ್ಯಂತ ಗಟ್ಟಿಮುಟ್ಟಾದ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಉನ್ನತ ದರ್ಜೆಯದ್ದಾಗಿದ್ದು, ಪ್ರೀಮಿಯಂ ನೋಟ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪ್ರತಿಯೊಂದು ಅಂಶದಲ್ಲೂ ಈ ಫೋನ್ ಮಾರುಕಟ್ಟೆಯಲ್ಲಿನ ಇತರ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುತ್ತದೆ.

Mukesh Ambani
Mukesh Ambani


ಐಫೋನ್ 15 ಪ್ರೊ ಮ್ಯಾಕ್ಸ್ ನ ವೈಶಿಷ್ಟ್ಯಗಳು ಏನೇನು?

ಐಫೋನ್ 15 ಪ್ರೊ ಮ್ಯಾಕ್ಸ್ ಅಸಾಧಾರಣವಾದ ಫೋಟೋ ಮತ್ತು ವಿಡಿಯೋ ಗುಣಮಟ್ಟವನ್ನು ನೀಡುವ ಉನ್ನತ ಆಫ್ ಲೈನ್ ಕೆಮೆರಾವನ್ನು ಒಳಗೊಂಡಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಈ ಫೋನ್ ಜಲ ನಿರೋಧಕವಾಗಿದೆ (ವಾಟರ್‌ ಪ್ರೂಫ್‌) ಮತ್ತು ಬಲಿಷ್ಠ ಸಾಮಗ್ರಿಗಳಿಂದ ನಿರ್ಮಿಸಲಾಗಿದೆ. ಇದು ಯಾವುದೇ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುತ್ತದೆ.

ಐಫೋನ್ 15 ಪ್ರೊ ಮ್ಯಾಕ್ಸ್ ನ ನಯವಾದ ಮತ್ತು ಪ್ರೀಮಿಯಂ ವಿನ್ಯಾಸವು ಅದನ್ನು ಸೊಗಸಾದ ಆಯ್ಕೆಯನ್ನಾಗಿ ಮಾಡುತ್ತದೆ. ಹಲವು ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. 256ಜಿಬಿ ಮತ್ತು 1 ಟಿಬಿ ಸೇರಿದಂತೆ ಮಲ್ಟಿ ಸ್ಟೋರೇಜ್‌ ರೂಪಾಂತರಗಳಲ್ಲಿ ಇದು ಲಭ್ಯವಿದೆ.

Continue Reading

ಮನಿ-ಗೈಡ್

Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

Money Guide: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಜನಪ್ರಿಯವಾಗುತ್ತಿದೆ. ಆದರೆ ಕೆಲವೊಮ್ಮೆ ಈ ಹೆಸರಿನಲ್ಲಿ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತದೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ (Online shopping) ಜನಪ್ರಿಯವಾಗುತ್ತಿದೆ. ಒಂದೇ ಕಡೆ ಹಲವು ಆಯ್ಕೆ, ಕಡಿಮೆ ಬೆಲೆ ಮತ್ತು ಸಮಯದ ಉಳಿತಾಯ ಹೀಗೆ ನಾನಾ ಕಾರಣಗಳಿಂದ ಇದು ಗ್ರಾಹಕರ ಮನ ಗೆದ್ದಿದೆ. ಇದಕ್ಕಾಗಿಯೇ ಇರುವ ನಾನಾ ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಕೊಡುಗೆ ಪ್ರಕಟಿಸಿ ಇನ್ನಷ್ಟು ಆಕರ್ಷಿಸುತ್ತದೆ. ಇದರ ಜತೆಗೆ ಕೆಲವೊಮ್ಮೆ ವಂಚನೆಯೂ ನಡೆಯುತ್ತದೆ. ಆರ್ಡರ್‌ ಮಾಡಿದ ಬೆಲೆ ಬಾಳುವ ವಸ್ತುವಿನ ಬದಲು ಕಲ್ಲು, ಮರದ ತುಂಡು, ಸೋಪು ಅಷ್ಟೇ ಏಕೆ ಹಾವು ಕೂಡ ಪಾರ್ಸೆಲ್‌ ಮೂಲಕ ಬರುತ್ತದೆ! ಕೆಲವೊಂದು ಫೇಕ್‌ ವೆಬ್‌ಸೈಟ್‌ಗಳು ಆರ್ಡರ್‌ ಮಾಡಿದ ಬಳಿಕ ಉತ್ಪನ್ನಗಳನ್ನು ಕಳುಹಿಸದೆ ಮೋಸ ಎಸಗುತ್ತವೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿದ್ದರೆ ಯಾಮಾರುವುದು ಖಂಡಿತ. ಇಂದಿನ ಮನಿಗೈಡ್‌ (Money Guide)ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.

ಮಾರಾಟಗಾರರ ಹಿನ್ನಲೆ

ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಖರೀದಿಸುವ ಮುನ್ನ ಮಾರಾಟಗಾರರ ಹಿನ್ನಲೆ ಪರಿಶೀಲಿಸಿ. ಕೆಲವೊಮ್ಮೆ ಸೋಷಿಯಲ್‌ ಮೀಡಿಯಾಗಳಲ್ಲಿ ಆಕರ್ಷಕ ಕೊಡುಗೆ ಪ್ರಕಟಿಸಿ ಫೇಕ್‌ ವೆಬ್‌ಸೈಟ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಇವರು ಕ್ಯಾಷ್‌ ಆನ್‌ ಡೆಲಿವರಿ ಆಯ್ಕೆಯನ್ನು ಹೊಂದಿರುವುದಿಲ್ಲ. ನೀವು ಆರ್ಡರ್‌ ಮಾಡುವಾಗಲೇ ಹಣ ಪಾವತಿಸಬೇಕಾಗುತ್ತದೆ. ಒಮ್ಮೆ ನೀವು ಹಣ ಪಾವತಿಸಿದರೆ ಬಳಿಕ ಸಂಪರ್ಕಕ್ಕೇ ಸಿಗುವುದಿಲ್ಲ. ಜತೆಗೆ ನೀವು ಆರ್ಡರ್‌ ಮಾಡಿದ ಉತ್ಪನ್ನವೂ ನಿಮ್ಮನ್ನು ತಲುಪುವುದಿಲ್ಲ. ಇನ್ನು ಕೆಲವೊಮ್ಮೆ ಇಂತಹ ಅನಧಿಕೃತ ವೆಬ್‌ಸೈಟ್‌ಗಳು ಕಳಪೆ ಉತ್ಪನ್ನಗಳನ್ನು ಕಳುಹಿಸುತ್ತವೆ. ಆಕರ್ಷಕ ಫೋಟೊ ತೋರಿಸಿ ಹಾಳಾದ ಉತ್ಪನ್ನ ಅಥವಾ ಬೇರೆಯದೇ ಪ್ರಾಡಕ್ಟ್‌ ಕಳುಹಿಸುತ್ತವೆ. ಹೀಗಾಗಿ ವೆಬ್‌ಸೈಟ್‌ ಅಧಿಕೃತವೇ ಎನ್ನುವುದನ್ನು ಮೊದಲೇ ದೃಢಪಡಿಸಿಕೊಳ್ಳಿ. ವೆಬ್‌ಸೈಟ್‌ ಸುರಕ್ಷಿತ ಪಾವತಿ ವಿಧಾನ, ಸೂಕ್ತ ರಿಟರ್ನ್ ಪಾಲಿಸಿಗಳು ಹೊಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಗ್ರಾಹಕ ರಿವ್ಯೂ ಕೂಡ ಗಮನಿಸಿ.

ಉತ್ಪನ್ನದ ರಿವ್ಯೂ ಗಮನಿಸಿ

ರಿಯಾಯಿತಿ ಇದೆ ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿ ಯಾವುದೇ ಉತ್ಪನ್ನಗಳನ್ನು ಕೊಂಡುಕೊಳ್ಳಬೇಡಿ. ಖರೀದಿಸುವ ಮುನ್ನ ಆ ಉತ್ಪನ್ನಕ್ಕೆ ಗ್ರಾಹಕರು ಕೊಟ್ಟಿರುವ ರಿವ್ಯೂ ಪರಿಶೀಲಿಸಿ. ಜಾಹೀರಾತು, ಮಾರಾಟಗಾರರ ಮಾತನ್ನು ಪೂರ್ಣವಾಗಿ ನಂಬಬೇಡಿ. ಗ್ರಾಹಕ ರಿವ್ಯೂ ಗಮನಿಸಿ ಅಲ್ಲಿ ಸಕಾರಾತ್ಮಕ ಪ್ರಕ್ರಿಯೆಗಿಂತ ನಕಾರಾತ್ಮಕ ಅಭಿಮತವೇ ಹೆಚ್ಚಿದ್ದರೆ ಖರೀದಿಸಬೇಡಿ.

ಶಿಪ್ಪಿಂಗ್‌ ಚಾರ್ಜ್‌ ಮತ್ತು ಸಮಯ

ನೀವು ಖರೀದಿಸಲು ಬಯಸುವ ಉತ್ಪನ್ನಕ್ಕೆ ವಿಧಿಸುವ ಶಿಪ್ಪಿಂಗ್‌ ಜಾರ್ಜ್‌ ಅನ್ನು ಗಮನಿಸಿ. ಜತೆಗೆ ಅದು ಯಾವಾಗ ತಲುಪುತ್ತದೆ ಎನ್ನುವುದನ್ನೂ ಪರಿಶೀಲಿಸಿ. ಕೆಲವೊಂದು ಆನ್‌ಲೈನ್‌ ಅಪ್ಲಿಕೇಷನ್‌ಗಳು ಶಿಪ್ಪಿಂಗ್‌ ಜಾರ್ಜ್‌ ಇಲ್ಲದೆ ಡೆಲಿವರಿ ಮಾಡುತ್ತವೆ. ಆದರೆ ಉತ್ಪನ್ನ ತಲುಪಲು ಹೆಚ್ಚಿನ ಸಮಯ ತಗಲುತ್ತದೆ. ಹೀಗಾಗಿ ಈ ಅಂಶದ ಬಗ್ಗೆ ಗಮನ ಹರಿಸಿ. ಜತೆಗೆ ಶಿಪ್ಪಿಂಗ್‌ ಜಾರ್ಜ್‌ ಮತ್ತು ಪ್ರಾಡಕ್ಟ್‌ ನಿಮ್ಮ ಕೈ ಸೇರಲಿರುವ ದಿನಗಳನ್ನು ಬೇರೆ ಆ್ಯಪ್‌ಗಳೊಂದಿಗೆ ಹೋಲಿಸಿ ನೋಡಿ. ವಿದೇಶಗಳಿಂದ ನೀವು ಉತ್ಪನ್ನ ಖರೀದಿಸುತ್ತಿದ್ದರೆ ಇದರ ಮೇಲೆ ವಿಧಿಸುವ ತೆರಿಗೆಯೂ ನಿಮ್ಮ ಗಮನದಲ್ಲಿರಲಿ.

ರಿಟರ್ನ್‌ ಪಾಲಿಸಿ ಅರ್ಥ ಮಾಡಿಕೊಳ್ಳಿ

ಆನ್‌ಲೈನ್‌ ಮೂಲಕ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದರ ರಿಟರ್ನ್‌ ಪಾಲಿಸಿಯನ್ನು. ಹೆಚ್ಚಿನ ಅಪ್ಲಿಕೇಷನ್‌ಗಳು ಉತ್ಪನ್ನಗಳನ್ನು ಹಿಂದಿರುಗಿಸಲು 20-30 ದಿನಗಳ ಕಾಲಾವಕಾಶ ನೀಡುತ್ತವೆ. ಕೆಲವೊಮ್ಮೆ ಉತ್ಪನ್ನ, ಮಾರಾಟಗಾರರನ್ನು ಹೊಂದಿಕೊಂಡು ಈ ನಿಯಮದಲ್ಲಿ ವ್ಯತ್ಯಾಸಗಳಿರುತ್ತವೆ. ಜತೆಗೆ ರಿಟರ್ನ್‌ ಮಾಡುವಾಗ ಶಿಪ್ಪಿಂಗ್‌ ಚಾರ್ಜ್‌ ಇದೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಸಮರ್ಪಕ ರಿಟರ್ನ್‌ ಪಾಲಿಸಿಯಿಂದ ನಿಮ್ಮ ಹಣ ವ್ಯರ್ಥವಾಗುವುದನ್ನು ತಡೆಯಬಹುದು.

ಬೆಲೆ ಹೋಲಿಕೆ ಮಾಡಿ

ನಾವು ಅಂಗಡಿಗೆ ತೆರಳಿ ಶಾಪಿಂಗ್‌ ಮಾಡುವಾಗ ವಿವಿಧ ಕಡೆಗಳ ಬೆಲೆ ಹೋಲಿಸಿ ನೋಡುವಂತೆ ವಿವಿಧ ಅಪ್ಲಿಕೇಷನ್‌, ವೆಬ್‌ಸೈಟ್‌ಗಳಲ್ಲಿನ ಬೆಲೆಯನ್ನು ಪರಿಶೀಲಿಸಿ. ಇದರಿಂದ ಸಾಕಷ್ಟು ಹಣವನ್ನು ಉಳಿಸಬಹುದು. ಜತೆಗೆ ಹಲವು ಆ್ಯಪ್‌ಗಳು ವಿಶೇಷ ಸಂದರ್ಭಗಳಲ್ಲಿ ಪ್ರಕಟಿಸುವ ವಿಶೇಷ ಕೊಡುಗೆ, ರಿಯಾಯಿತಿಗಳ ಪ್ರಯೋಜನ ಪಡೆದುಕೊಳ್ಳಿ. ಕೆಲವೊಮ್ಮೆ ಕೂಪನ್‌ಗಳೂ ಲಭ್ಯ. ಇದರ ಲಾಭ ಪಡೆಯಿರಿ.

ಪಾವತಿ ವಿಧಾನ ಚೆಕ್‌ ಮಾಡಿ

ಹಲವು ಆನ್‌ಲೈನ್‌ ಸ್ಟೋರ್‌ಗಳು ಪಾವತಿಗಾಗಿ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಕೆಲವೊಮ್ಮೆ ಎಲ್ಲ ರೀತಿಯ ಪಾವತಿಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಆರ್ಡರ್‌ ಮಾಡುವ ಮುನ್ನ ನಿಮಗೆ ಅನುಕೂಲವಾಗುವ ಪಾವತಿ ವಿಧಾನ ಇದೆಯೇ ಎನ್ನುವುದನ್ನು ಚೆಕ್‌ ಮಾಡಿ. ನಿಮ್ಮ ಪಾವತಿಯ ಸುರಕ್ಷತೆಯನ್ನು ಗಮನಿಸಲು ಮರೆಯಬೇಡಿ. ಜತೆಗೆ ನಿಮ್ಮ ವೈಯಕ್ತಿಕ ಮಾಹಿತಿ ಎಲ್ಲಿಯೂ ಸೋರಿಕೆಯಾಗುತ್ತಿಲ್ಲ ಎನ್ನುವುದನ್ನೂ ಖಚಿತಪಡಿಸಿ.

ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಮುನ್ನ

ಲ್ಯಾಪ್‌ಟಾಪ್‌, ಟಿವಿ, ಮೊಬೈಲ್‌ ಫೋನ್‌ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಾಗ ಆದಷ್ಟು ಕ್ಯಾಷ್‌ ಆನ್‌ ಡೆಲಿವರಿ (Cash on delivery)ಯನ್ನೇ ಆಯ್ಕೆ ಮಾಡಿ. ಜತೆಗೆ ಉತ್ಪನ್ನ ಬಂದಾಗ ಡೆಲಿವರಿ ಬಾಯ್‌ ಎದುರಿನಲ್ಲೇ ಓಪನ್‌ ಮಾಡಿ. ಒಂದು ವೇಳೆ ಇದೂ ಆಗಿಲ್ಲ ಎಂದಾದರೆ ಪಾರ್ಸೆಲ್‌ ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

Continue Reading

ವಾಣಿಜ್ಯ

Stock Market: ಮಹಾ ಕುಸಿತದಿಂದ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ; ಸೆನ್ಸೆಕ್ಸ್‌ 921, ನಿಫ್ಟಿ 285 ಪಾಯಿಂಟ್‌ ಜಿಗಿತ

Stock Market: ಸೋಮವಾರದ ಮಹಾಕುಸಿತದಿಂದ ಭಾರತೀಯ ಷೇರುಪೇಟೆ ಚೇತರಿಸಿಕೊಳ್ಳುತ್ತಿದೆ. ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ (Sensex) 921 ಪಾಯಿಂಟ್ಸ್ ಅಥವಾ ಶೇ. 1.23ರಷ್ಟು ಏರಿಕೆ ಕಂಡು 79,680ಕ್ಕೆ ತಲುಪಿದರೆ ನಿಫ್ಟಿ 50 (Nifty) ಶೇ. 1.09ರಷ್ಟು ಅಥವಾ 262 ಪಾಯಿಂಟ್ಸ್ ಏರಿಕೆ ಕಂಡು 24,318 ಅಂಕಗಳ ಗಡಿ ದಾಟಿದೆ.

VISTARANEWS.COM


on

Stock Market
Koo

ಮುಂಬೈ: ಅಮೆರಿಕದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಸೋಮವಾರ (ಆಗಸ್ಟ್‌ 5) ಪಾತಾಳಕ್ಕೆ ಕುಸಿದಿದ್ದ ಭಾರತೀಯ ಷೇರುಪೇಟೆ (Stock Market) ಇಂದು (ಆಗಸ್ಟ್‌ 6) ಚೇತರಿಸಿಕೊಂಡಿದ್ದು ಮತ್ತೆ ಏರುಗತಿಯಲ್ಲಿದೆ. ಜಾಗತಿಕ ಮಾರುಕಟ್ಟೆಗಳ ಒತ್ತಡದಿಂದ ಕುಸಿದಿದ್ದ ಷೇರು ಮಾರುಕಟ್ಟೆಯಲ್ಲಿ ಲವಲವಿಕೆ ಕಂಡು ಬಂದಿದೆ. ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ (Sensex) 921 ಪಾಯಿಂಟ್ಸ್ ಅಥವಾ ಶೇ. 1.23ರಷ್ಟು ಏರಿಕೆ ಕಂಡು 79,680ಕ್ಕೆ ತಲುಪಿದರೆ ನಿಫ್ಟಿ 50 (Nifty) ಶೇ. 1.09ರಷ್ಟು ಅಥವಾ 262 ಪಾಯಿಂಟ್ಸ್ ಏರಿಕೆ ಕಂಡು 24,318 ಅಂಕಗಳ ಗಡಿ ದಾಟಿದೆ.

ಎನ್ಎಸ್ಇ (NSE)ಯಲ್ಲಿ ಟಾಟಾ ಮೋಟಾರ್ಸ್, ಲಾರ್ಸೆನ್ ಮತ್ತು ಟೂಬ್ರೊ (L&T) ಹಾಗೂ ಒಎನ್‌ಜಿಸಿ ಲಾಭ ಗಳಿಸಿದರೆ, ಎಸ್‌ಬಿಐ ಲೈಫ್, ಅಪೊಲೊ ಆಸ್ಪತ್ರೆ ಮತ್ತು ನೆಸ್ಲೆ ಇಂಡಿಯಾ ನಷ್ಟದತ್ತ ಮುಖ ಮಾಡಿದವು. ಬಿಎಸ್ಇ (BSE)ಯಲ್ಲಿ ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್ ಮತ್ತು ಎಲ್ & ಟಿ ಶೇ. 3ರಷ್ಟು ಏರಿಕೆ ಕಂಡರೆ, ಮಾರುತಿ, ಟಾಟಾ ಸ್ಟೀಲ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಮೌಲ್ಯ ತಲಾ ಶೇ. 2ರಷ್ಟು ಏರಿಕೆಯಾಗಿದೆ.

ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿ ರೂ. ಹೆಚ್ಚಳ

ಮುಂಬೈ ಷೇರುಪೇಟೆ ಬಿಎಸ್‌ಇ ಸೆನ್ಸೆಕ್ಸ್ ಮಾರುಕಟ್ಟೆ ಕ್ಯಾಪ್ ಬರೋಬ್ಬರಿ 449 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಹೂಡಿಕೆದಾರರು ಅರ್ಧ ಗಂಟೆಯಲ್ಲಿ 7 ಲಕ್ಷ ಕೋಟಿ ರೂ. ಸಂಪಾದಿಸಿದ್ದಾರೆ. ಕಳೆದ ವಹಿವಾಟಿನಲ್ಲಿ ಇದರ ಮೌಲ್ಯ 442 ಲಕ್ಷ ಕೋಟಿ ರೂಪಾಯಿ ಆಗಿತ್ತು. ಈ ಮಧ್ಯೆ ಇಂದು ರೂಪಾಯಿಯ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದು, ಡಾಲರ್‌ ವಿರುದ್ಧ 83.8950ಕ್ಕೆ ತಲುಪಿದೆ.

ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿಯೂ ಚೇತರಿಕೆ

ಇತ್ತ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳಲ್ಲಿಯೂ ಚೇತರಿಕೆ ಕಂಡು ಬಂತು. ಜಪಾನ್‌ನ ಮಾರುಕಟ್ಟೆಗಳು ಅತಿ ಹೆಚ್ಚಿನ ಪ್ರಗತಿ ಸಾಧಿಸಿವೆ. ನಿಕ್ಕಿ 225 (Nikkei 225) ಶೇ. 9.87ರಷ್ಟು ಮತ್ತು ಬ್ರಾಡ್ ಬೇಸ್ಡ್ ಟೋಪಿಕ್ಸ್ (Topix) ಶೇ. 9.95ರಷ್ಟು ಏರಿಕೆಯಾಗಿದೆ. ಹಿಂದಿನ ವಹಿವಾಟಿನಲ್ಲಿ ನಿಕ್ಕಿ 225 ಮತ್ತು ಟೋಪಿಕ್ಸ್ ಶೇ. 12ಕ್ಕಿಂತ ಹೆಚ್ಚು ಕುಸಿದಿದ್ದವು. ಇಂದು ಭರ್ಜರಿಯಾಗಿ ಕಂಬ್ಯಾಕ್‌ ಮಾಡಿದ ಜಪಾನ್ ಷೇರುಗಳು ತೀವ್ರವಾಗಿ ಚೇತರಿಸಿಕೊಂಡವು. ಇತ್ತ ಅಮೆರಿಕಾದ ಸ್ಟಾಕ್ ಫ್ಯೂಚರ್ಸ್‌ ಶೇ. 1ರಷ್ಟು ಏರಿಕೆಗೊಂಡಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಸೋಮವಾರದ ಮಹಾ ಕುಸಿತದಿಂದ ಚೇತರಿಕೆ

ಸೋಮವಾರ ಬಿಎಸ್‌ಇ ಸೆನ್ಸೆಕ್ಸ್ 2,393 ಪಾಯಿಂಟ್ಸ್ ಕುಸಿದು 78,588ಕ್ಕೆ ತಲುಪಿದರೆ, ನಿಫ್ಟಿ 50 ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 405 ಪಾಯಿಂಟ್ಸ್ ಕುಸಿದು 24,302 ಮಟ್ಟಕ್ಕೆ ಬಂದು ಮುಟ್ಟಿತ್ತು. ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಸದ್ಯ ಈ ಮಹಾಕುಸಿತದಿಂದ ದೇಶಿಯ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು ಹೂಡಿಕೆದಾರರು ನಿರಾಳರಾಗಿದ್ದಾರೆ. ಭಾರತ ಮಾತ್ರವಲ್ಲ ಏಷ್ಯನ್ ಮಾರುಕಟ್ಟೆಯಲ್ಲಿಯೂ ಸೋಮವಾರ ಕುಸಿತ ಕಂಡುಬಂದಿತ್ತು. ಜಪಾನ್‌ನ ನಿಕ್ಕಿ ಶೇ. 4.63 ಮತ್ತು ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.58ರಷ್ಟು ಕುಸಿದಿತ್ತು. ಚೀನಾದ ಶಾಂಘೈ ಕಾಂಪೋಸಿಟ್ ಕೂಡ ಶೇ. 0.22ರಷ್ಟು ಇಳಿಕೆ ಕಂಡಿತ್ತು.

Continue Reading
Advertisement
Vinesh Phogat
ಪ್ರಮುಖ ಸುದ್ದಿ32 mins ago

Vinesh Phogat: ಒಲಿಂಪಿಕ್ಸ್​ ಫೈನಲ್​ನಿಂದ ವಿನೇಶ್​ ಫೋಗಟ್​ ಅನರ್ಹ; ಚಿನ್ನದ ಆಸೆ ನುಚ್ಚುನೂರು!

Niharika Konidela Nagendra Babu says Industry Is Not Our Father's Property
ಟಾಲಿವುಡ್42 mins ago

Niharika Konidela: ತೆಲುಗು ಚಿತ್ರರಂಗ ನನ್ನ ಅಪ್ಪನ ಆಸ್ತಿ ಅಲ್ಲ ಎಂದ ನಟ ಚಿರಂಜೀವಿ ಸಹೋದರ ನಾಗಬಾಬು!

Bangladesh Unrest
ದೇಶ58 mins ago

Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

Israel Palestine war
ವಿದೇಶ1 hour ago

Israel Palestine War: ಜೈಲಿನೊಳಗೇ ಪ್ಯಾಲೆಸ್ತೀನ್‌ ಕೈದಿಗಳ ಮೇಲೆ ಇಸ್ರೇಲಿ ಯೋಧರಿಂದ ಅತ್ಯಾಚಾರ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

nelamangala road accident
ಬೆಂಗಳೂರು1 hour ago

Road Accident: ಗರ್ಭಿಣಿಯ ಮೇಲೆ ಹರಿದ ಲಾರಿ, ಹೊಟ್ಟೆಯಿಂದ ಹೊರಬಂದ ಮಗು ಸಹಿತ ಅಪ್ಪಚ್ಚಿ

Rishabh Pant
ಕ್ರೀಡೆ1 hour ago

Rishabh Pant: ನೀರಜ್​ ಬಂಗಾರ ಗೆದ್ದರೆ ಅದೃಷ್ಟಶಾಲಿಗೆ ಪಂತ್​ ಕಡೆಯಿಂದ ಸಿಗಲಿದೆ ನಗದು ಬಹುಮಾನ

Akshay Kumar Riteish Fardeen recreate Heyy Babyy
ಬಾಲಿವುಡ್1 hour ago

Akshay Kumar: ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಹೊಸ ಟಚ್‌ ಕೊಟ್ಟ ʻಹೇ ಬೇಬಿʼ ಖ್ಯಾತಿಯ ರಿತೇಶ್, ಫರ್ದೀನ್ ಖಾನ್; ವಿಡಿಯೊ ವೈರಲ್‌!

Viral Video
Latest2 hours ago

Viral Video: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ ‘ಕಪಿ ಚೇಷ್ಟೆ’! ಪರಿಣಾಮ ಏನಾಯ್ತು ನೋಡಿ!

chemicals in food
ಬೆಂಗಳೂರು2 hours ago

Chemicals in Food: ಹೋಟೆಲ್‌, ಮಾಲ್‌ಗಳಲ್ಲಿ ಆಹಾರದಲ್ಲಿ ಕೆಮಿಕಲ್‌, ಕಲರ್‌ ಬಳಸಿದರೆ ಕ್ರಮ; ತರಕಾರಿ ಮಾರಾಟಗಾರರಿಗೂ ಲೈಸೆನ್ಸ್‌ ಕಡ್ಡಾಯ

Gold Rate Today
ಚಿನ್ನದ ದರ2 hours ago

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಇಂದೂ ಇಳಿಕೆಯಾದ ಚಿನ್ನದ ಬೆಲೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು19 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ20 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌