ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ - Vistara News

ವಾಣಿಜ್ಯ

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ

ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ಕೆಲವು ಪದಾರ್ಥಗಳ ದರ ಇಳಿದಿದೆ, ಕೆಲವು ಪದಾರ್ಥಗಳ ದರ ಹೆಚ್ಚಳವಾಗಿದೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

ದಿನಸಿ ಪೇಟೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

09/11/2022

ಸರಕು ದರ (ರೂಪಾಯಿ)
ಸಕ್ಕರೆ (50 ಕೆ.ಜಿ.)
1. ಉತ್ತಮ ದಪ್ಪ
2. ಮಧ್ಯಮ ಸಣ್ಣ

1880-1900
1850-1860
ಬೆಲ್ಲ
1. ಸಣ್ಣ ಅಚ್ಚು
2. ದಪ್ಪ ಅಚ್ಚು
3. ಉಂಡೆ [ಸೇಲಂ]
4. ಕೊಲ್ಲಾಪುರ

4600-4700
4200-4300
4700-4800
4500-5200
ತೊಗರಿಬೇಳೆ ಹೊಸದು 50 ಕೆ.ಜಿ.
1. ದೇಶಿ ಶಿವಲಿಂಗ (ಜಿಎಸ್ಟಿ)
2. ವಿದೇಶಿ ಶಿವಲಿಂಗ
5. ವಿದೇಶಿ ಮಧ್ಯಮ
3. ಗುಲ್ಬರ್ಗ ಪಟ್ಕ ಸಾರ್ಟೆಕ್ಸ್
4. ರೆಗ್ಯುಲರ್

5750- 5800
5100- 5150
4700- 4800
5600- 5650
5400- 5500
ಕಡ್ಲೆ ಬೇಳೆ 50 ಕೆ.ಜಿ.
1. ಲಕನ್
2. ತ್ರಿಶೂಲ್
3. ಮಹಾರಾಜಾ
4. ಅಕೋಲ

3430-3450
3400-3420
3200-3250
2900-3000
ಕಡಲೆಕಾಯಿ ಬೀಜ 40 ಕೆಜಿ
ಉತ್ತಮ ದಪ್ಪ
ಮಧ್ಯಮ

5600-5700
4800-4900
ಹುರಿಕಡ್ಲೆ 30 ಕೆ.ಜಿ.
1. ಫೈನ್
2. ಮೀಡಿಯಂ

2300 – 2320
2100 – 2150
ಉದ್ದಿನ ಬೇಳೆ 50 ಕೆ.ಜಿ.
1. ಡಬಲ್ ಹಾರ್ಸ್
2. ಹನುಮಾನ್
3. ವೈಟ್ ಗೋಲ್ಡ್
4. ಸೂರ್ಯ
4. ಮಧ್ಯಮ ದರ್ಜೆ
5. ಗೋಲಾ ಉತ್ತಮ
6. ಗೋಲಾ ಮಧ್ಯಮ

6900-6950
5750-5800
5600-5650
5550-5600
5300-5400
5900-6000
4600-4700
ಹೆಸರು ಬೇಳೆ 50 ಕೆ.ಜಿ.
1. ಸೋಂ ಪರಿ
2. ಮಧ್ಯಮ

4750-4800
4600-4700
ಹೆಸರು ಕಾಳು
1. ಉತ್ತಮ
2. ಮಧ್ಯಮ

4600-4700
3700-4000
ಅಲಸಂದೆ
1. ಉತ್ತಮ
2. ಮಧ್ಯಮ

3800-3900
3600-3650
ಅವರೆ ಕಾಳು
1. ಉತ್ತಮ
2. ಮಧ್ಯಮ

ಅವರೆ ಬೇಳೆ
1. ಉತ್ತಮ
2. ಮಧ್ಯಮ

ಹುರುಳಿ ಕಾಳು
1. ಉತ್ತಮ
2. ಮಧ್ಯಮ

5100-5200
4800-4900


5800-5900
4800-4900


3500-3600
3250-3300
ರಾಗಿ 100 ಕೆ.ಜಿ.
1. ಕ್ಲೀನ್ಡ್‌ ಉತ್ತಮ
2. ಮಧ್ಯಮ

3200-3300
2900-3000
ಅಕ್ಕಿ ಸೋನಾ ಮಸೂರಿ (100 ಕೆ. ಜಿ.)
1. ರಾ ರೈಸ್ ಅಕ್ಕಿ 2ವರ್ಷ ಹಳೇದು
2. ರಾ ರೈಸ್ ಅಕ್ಕಿ 1ವರ್ಷ ಹಳೇದು
3. ರಾ ರೈಸ್ ನುಚ್ಚು ಹಳೇದು
4. 1 ವರ್ಷ ಹಳೇದು
5. ಸ್ಟೀಮ್ ಉತ್ತಮ
6. ಸ್ಟೀಮ್ ಮಧ್ಯಮ
7. ಸ್ಟಿಮ್ ನುಚ್ಚು
8. ಆರ್ ಎನ್ ಆರ್ ಸ್ಟೀಮ್
9. ಹೆಚ್ ಎಂ ಟಿ ಸ್ಟಿಮ್
10. ಸೋನಾ ಬೈಡ್‌
11. ಐಆರ್ 8 (100 ಕೆ.ಜಿ)
12. ಇಡ್ಲಿಕಾರ್ (100 ಕೆ.ಜಿ)
13. ಕೆಂಪು ಕುಚಲಕ್ಕಿ ಉತ್ತಮ
14. ಕೆಂಪು ಕುಚಲಕ್ಕಿ ಮಧ್ಯಮ
15. ಐ ಆರ್8 (100 ಕೆಜಿ)
16. ಕಾವೇರಿ ಸೊ,ಮ

5200-5300
4500-4600
29000-3000
4550-4500
4300-4400
3900-4000
2500-2800
5200-5400
4900-5000
4700-4800
3300-3400
3300-3400
4900-5000
4000-4500
3000-3200
4200-4400
ಬೆಳ್ಳುಳ್ಳಿ ಎಂಪಿ 100 ಕೆ.ಜಿ.
1. ಎಂಪಿ ಲಡ್ಡು
2. ಎಂಪಿ ಗೋಲಾ
3. ಮಧ್ಯಮ
4. 30 ಕೆ.ಜಿ. ಬಾಕ್ಸ್

2500-3000
4000-4500
1200-1500
1500-1600
ಈರುಳ್ಳಿ
1. ಮಹಾರಾಷ್ಟ್ರ ದಪ್ಪ
2. ಮಧ್ಯಮ
3. ಕರ್ನಾಟಕ ದಪ್ಪ
4. ಮಧ್ಯಮ
5. ಗೋಲ್ಟಾ ಗೊಲ್ಟಿ

1400-1500
1000-1100
900-1000
600-700
600-800
ಆಲೂಗಡ್ಡೆ (50 ಕೆ.ಜಿ.)
1. ಚಿಪ್ಸ್‌ ದಪ್ಪ
2. ಚಿಪ್ಸ್‌ ಮಧ್ಯಮ
3. ಆಗ್ರಾ ದಪ್ಪ
5. ಹಾಸನ್ ದಪ್ಪ
6. ಮಧ್ಯಮ

1600- 1650
1300-1400
1300-1400
1300-1400
800-1000
ಹಸಿ ಶುಂಠಿ (60 ಕೆ.ಜಿ.)
1. ಹೈಟೆಕ್
2. ಮಧ್ಯಮ
3. ಮೋಳ್ಕೆ

2900-3000
1800-2000
1300-1400
ಪರಿಶುದ್ಧ ಅಡುಗೆ ಎಣ್ಣೆ
ಸೂರ್ಯಕಾಂತಿ ಎಣ್ಣೆ
1. ಸನ್‌ಪ್ಯೂರ್ 10 ಲೀ.
2. ಸನ್‌ಪ್ಯೂರ್ 15 ಕೆ.ಜಿ
3. ಗೋಲ್ಡ್‌ವಿನ್ನರ್ 10 ಲೀ.
4. ಗೋಲ್ಡ್‌ವಿನ್ನರ್ 15 ಕೆ.ಜಿ
4. ಫಾರ್ಚುನ್ 10 ಲೀ.
5. ಫಾರ್ಚುನ್ 15 ಕೆ.ಜಿ
6. ಜೆಮಿನಿ 10 ಲೀ.
7. ಜೆಮಿನಿ 15 ಕೆ.ಜಿ


1550
2550
1570
2600
1570
2570
1620
2640
ಕಡ್ಲೆ ಹಿಟ್ಟು
1. ಶಂಕರ್ 30 ಕೆ.ಜಿ
2. ಶಂಕರ್ 10 ಕೆ.ಜಿ
3. ಶಂಕರ್ 20 ಕೆಜಿ ಪ್ಯಾಕೆಟ್

2130
710
1610
ಬೆಳೆ ಕಾಳು
1. ದೇಸಿ ಶಿವಲಿಂಗ
2. ಪಟ್ಕ ಸಾರ್ಟೆಕ್ಸ್
3. ರೆಗ್ಯುಲರ್
4. ವಿದೇಶಿ ಶಿವಲಿಂಗ
5. ವಿದೇಶಿ ಮಧ್ಯಮ

5900-5950
5600-5650
5300-5350
5000-5100
4600-4700
ಕಡ್ಲೆಕಾಳು (50 ಕೆಜಿ)
1. ಕ್ಲಿನ್ ಬೋಲ್ಡ್
2. ಮಧ್ಯಮ

3000-3050
2950-3000
ಚಕ್ಕಿ ಅಟ್ಟ (50 ಕೆ.ಜಿ)
1. ಐಸ್
2. ಆರೆಂಜ್‌
3. ಸಿಲ್ವರ್ ಕಾಯಿನ್
4. ಇಂದೂರ್
5. ಕೇಸರಿ ಪೀಚ್
6. ಅಂಬೆ

1680-1690
1730-1740
1620-1630
1590-1600
1610-1620
1600-1610
ರೆಗ್ಯುಲರ್ ಅಟ್ಟ 50 ಕೆ.ಜಿ
1. ಆರೆಂಜ್
2. ರಾಕ್ಷಿ
3. ಸುನೀಲ್

1600-1610
1610-1620
1570-1580
ತಂದೂರಿ ಅಟ್ಟ ( 50 ಕೆ.ಜಿ)
1. ರಾಕ್ಷಿ
2. ಸಿಲ್ವರ್ ಕಾಯಿನ್
3. ಮೋಹಿನಿ

1730-1740
1720-1730
1700-1710
ಸಾದಾ ಸೂಜಿ (50 ಕೆ.ಜಿ)
1. ಆರೆಂಜ್
2. ರಾಕ್ಷಿ
3. ಹೀರೊ
4. ಸುನೀಲ್
5. ಕ್ಯಾಂಡಿ

1900-1910
1870-1880
1750-1760
1860-1870
1660-1670
ಚಿರೋಟಿ ಸೂಜಿ (50 ಕೆ.ಜಿ)
1. ಮೋಹಿನಿ
2. ಆರೆಂಜ್ 30 ಕೆ.ಜಿ
3. ತುಳಸಿ

1740-1750
1150
1700-1710
ಮೈದಾ (50 ಕೆ.ಜಿ)
1. ಐಸ್
2. ಸುನೀಲ್
3. ಆರೆಂಜ್
4. ಮೊಬೆಲ್
5. ಸಿಲ್ವರ್ ಕಾಯಿನ್
6. ಕೇಸರಿ ಪೀಚ್

1830-1840
1780-1790
1880-1890
1820-1830
1820-1830
1750-1760

ಮೀಡಿಯಂ ಕುಕಿಂಗ್ ಆಯಿಲ್ ೧ ಲೀಟರ್‌ನ ೧೦ ಪ್ಯಾಕೆಟ್

1. ಸನ್ ಪ್ರಿಯಾ
2. ಸನ್ ಪಾರ್ಕ್
3. ಸನ್ ಪವರ್
4. ಸೂರ್ಯ ಪವರ್
1150
1140
1120
1100
ದೀಪದೆಣ್ಣೆ 1 ಲೀ.ನ 10 ಪ್ಯಾಕೆಟ್
1. ಆನಂದಂ
2. ಅಂದo
3. ಅಕ್ಷಯ
4. ನಂದಿನಿ

1160
1150
1120
1130
ಕಡ್ಲೆಕಾಯಿ ಎಣ್ಣೆ
1. ಪ್ಯೂರ್ ನಟ್ 10 ಲೀ.
2. ಕೆ ಎನ್ ಜೆ 10 ಲೀ.
3. ನಟ್ ಗೋಲ್ಡ್ 10 ಲೀ.

1800
1650
1520
ಪಾಮ್ ಆಯಿಲ್ 1 ಲೀ.ನ 10 ಪ್ಯಾಕೆಟ್
1. ರುಚಿಗೋಲ್ಡ್ 10 ಲೀ.
2. ಲೀಡರ್ ಗೋಲ್ಡ್ 10 ಲೀ.
3. ರುಚಿಗೋಲ್ಡ್ 15 ಕೆ.ಜಿ

1050
1030
1850
ರಗ್ಯುಲರ್ ವನಸ್ಪತಿ
1. ರುಚಿ No1, 10 ಕೆ.ಜಿ
2. ರುಚಿ No1, 15 ಕೆ.ಜಿ
3. ಎಟೂಝೆಡ್ 15 ಕೆ.ಜಿ

950
1650
1750
ಬೇಕರಿ ಸ್ಪೆಷಲ್ ವನಸ್ಪತಿ 15 ಕೆ.ಜಿ ಬಾಕ್ಸ್
1. ಗ್ರೀನ್ ಗೋಲ್ಡ್
2. ಗ್ರೇಟ್ ಚೆಫ್
3. ಬೆಸ್ ಪಫ್
4. ಬೆಸ್ ಕ್ರೀಮ್
5. ಬೆಸ್ ಬಿಸ್ಕೆಟ್
6. ಬೇಕರ್ ಕಿಂಗ್

1850
1900
1750
1730
1700
1750
ಮೆಣಸಿನಕಾಯಿ 100 ಕೆ.ಜಿ.: ಪಿ.ಸಿ.ಎನ್. ಟ್ರೇಡರ್ಸ್ [ಎಪಿಎಮ್‌ಸಿ ಬೆಂಗಳೂರು]
1. ಬ್ಯಾಡಗಿ ಸ್ಟೆಮ್‌
2. ಬ್ಯಾಡಗಿ ಸ್ಟೆಮ್‌ ಲೆಸ್
3. ಗುಂಟೂರು ಸ್ಟೆಮ್‌
4. ಗುಂಟೂರು ಸ್ಟೆಮ್‌ಲೆಸ್
4. ಮಣ್‌ಕಟ್
ಕನಿಷ್ಠ ಗರಿಷ್ಠ
34,000 – 47,000
45,000 – 64,000
20,000 – 26,000
32,000 – 33,000
19,000 – 22,000
ಹುಣಸೆ ಹುಳಿ (100 ಕೆ.ಜಿ.)
1. ಸಿಲ್ವರ್‌
1. ರೌಂಡ್
2. ಪ್ಲವರ್
3. ಕರ್ಪುಳಿ
ಕನಿಷ್ಠ ಗರಿಷ್ಠ
18,000 – 25,000
6,000 – 12,000
4,000 – 10,000
11,000 – 16,500
ದನಿಯಾ (40 ಕೆ.ಜಿ.)
1. ಉತ್ತಮ ಹಸಿರು
2. ಮಧ್ಯಮ ಹಸಿರು
3. ಮಧ್ಯಮ
4. ಬ್ರೋಕನ್
ಕನಿಷ್ಠ ಗರಿಷ್ಠ
6,600 – 8,400
5,500 – 6,500
5,000 – 5,400
4,800 – 5,200
ಮಸಾಲ ದರ (1 ಕೆ.ಜಿ.)ಕನಿಷ್ಠಗರಿಷ್ಠ
ಅರಿಶಿಣ ಕೊಂಬು
1. ದಪ್ಪ
2. ಸಣ್ಣ
3. ಜೀರಿಗೆ ಸೂಪರ್ ಫೈನ್
4. ಜೀರಿಗೆ ಮೀಡಿಯಂ ಫೈನ್
5. ಜೀರಿಗೆ ಮೀಡಿಯಂ

130
90
340
270
240

135
110
345
275
245
ಗಸಗಸೆ
1. ಫೈನ್
2. ಮೀಡಿಯಂ
3. ಟರ್ಕಿ
4. ಇಂಡಿಯನ್

1400
1250
1450
1350

1450
1300
1510
1400
ಮೆಂತ್ಯೆ7080
ಸಾಸಿವೆ
1. ಸಾಸಿವೆ ಸಣ್ಣ
2. ಸಾಸಿವೆ ದಪ್ಪ

80
75

82
80
ಏಲಕ್ಕಿ
1. 8 ಎಂ.ಎಂ.
2. 7.5 ಎಂ.ಎಂ.
3. 7. ಎಂ.ಎಂ.
4. ಪಾನ್ ಬಹಾರ್‌

1450
1350
1250
980

1500
1400
1300
1000
ಲವಂಗ
1. ಮಡಗಾಸ್ಕರ್
2. ಲಾಲ್ ಪರಿ
3. ಚಕ್ಕೆ
4. ಮರಾಠಿ ಮೊಗ್ಗು ಒರಿಜಿನಲ್
5. ಅನಾನಸ್ ಹೂ
6. ಒಣ ಕೊಬ್ಬರಿ
7. ಮಧ್ಯಮ

710
770
280
1050
780
170
165

720
790
290
1100
850
175
168
ಕಾಳು ಮೆಣಸು
1. ಆಟೋಮ್
2. ಗಾರ್ಬಲ್ಡ್‌

550
530

560
540
ಗೋಡಂಬಿ
1. ಜೆ ಎಚ್
3. ಡಬ್ಲ್ಯೂ 240
4. ಡಬ್ಲ್ಯೂ 240 ಪಾನ್ ರೊಟ್ಟಿ

680
790
650

740
800
660
ಬಾದಾಮಿ640650
ಗೋಧಿ 50 ಕೆಜಿ
1. ವಿಕ್ಟೋರಿ ರಾಣಿ 50 ಕೆಜಿ
2. ಲಾಲ್ ಪರಿ 30 ಕೆಜಿ
3. ಕೊಹಿನೂರ್ 50 ಕೆಜಿ

1960
1860
1560
ದ್ರಾಕ್ಷಿ200240
ಎಳ್ಳು
1. ಕಪ್ಪು
2. ಬಿಳಿ
3. ನೈಲಾನ್

135
155
180

140
160
185

[ ಮೊಟ್ಟೆ (ಎನ್.ಇ.ಸಿ.ಸಿ) 100ಕ್ಕೆ 445 ರೂಪಾಯಿ]

ಎಪಿಎಂಸಿ ತರಕಾರಿ ಸಗಟು ದರ (1 ಕೆ. ಜಿ.ಗೆ) 30 ಸೆಪ್ಟೆಂಬರ್ 2022

ತರಕಾರಿಕನಿಷ್ಠಗರಿಷ್ಠ
ಟೊಮೇಟೊ1520
ಹುರುಳಿಕಾಯಿ ನಾಟಿ           4050
ಹ್ಯಾರಿಕೊಟ್‌ ಬೀನ್ಸ್    5060
ಬದನೆಕಾಯಿ ಬಿಳಿ     3040
ಬದನೆಕಾಯಿ ಗುಂಡು  2530
ಬೀಟ್‌ರೂಟ್‌             4045
ಹಾಗಲಕಾಯಿ            3540
ಸೀಮೆ ಬದನೆಕಾಯಿ      2025
ಸೌತೆಕಾಯಿ                  1015
ಗೊರಿಕಾಯಿ ಗೊಂಚಲು  3540
ಕ್ಯಾಪ್ಸಿಕಮ್‌ 3035
ಹಸಿ ಮೆಣಸಿನಕಾಯಿ     3035
ಸಣ್ಣ ಮೆಣಸಿನಕಾಯಿ   4050
ಬಜ್ಜಿ ಮೆಣಸಿನಕಾಯಿ2530
ಊಟಿ ಕ್ಯಾರೆಟ್           7080
ನಾಟಿ ಕ್ಯಾರೆಟ್              5055
ತೆಂಗಿನಕಾಯಿ               2025
ಎಲೆಕೋಸು                2025
ನವಿಲು ಕೋಸು2030
ಹೂ ಕೋಸು ಸಣ್ಣ     4050
ನುಗ್ಗೆಕಾಯಿ             120150
ಮೂಲಂಗಿ 2025
ಹಿರೇಕಾಯಿ3035
ಬೆಂಡೆಕಾಯಿ               2530
ಈರುಳ್ಳಿ                   2228
ಚಪ್ಪರವರೇಕಾಯಿ5060
ಬೆಳ್ಳುಳ್ಳಿ                   4050
ಆಲೂಗಡ್ಡೆ               3035
ತೊಂಡೆಕಾಯಿ 3040
ಸೋರೆಕಾಯಿ 3035
ಕಾರಮಣಿ5055

ಅಡಕೆ ಧಾರಣೆ: 28 ಜುಲೈ, 2022

ಕುಮಟಾಕನಿಷ್ಠಗರಿಷ್ಠ
1. ಕೋಕಾ
2. ಚಿಪ್ಪು
3. ಫ್ಯಾಕ್ಟರಿ
4. ಹಳೆ ಚಾಲಿ
5. ಹೊಸ ಚಾಲಿ
1.18089
2. 26089
3.10109
4. 43899
5. 36809
1. 29999
2. 31199
3. 19549
4. 46429
5. 39519
ಶಿರಸಿಕನಿಷ್ಠಗರಿಷ್ಠ
1. ಚಾಲಿ
2. ಬೆಟ್ಟೆ
3. ಬಿಳಿಗೋಟು
4. ರಾಶಿ
1. 33699
2.35196
3.21199
4. 40799
1. 39699
2.46518
3. 32289
4. 49899
ಚಿತ್ರದುರ್ಗಕನಿಷ್ಠಗರಿಷ್ಠ
1. ಅಪಿ
2. ಕೆಂಪುಗೋಟು
3. ಬೆಟ್ಟೆ
4. ರಾಶಿ
1.48922
2.29000
3. 38419
4. 48429
1. 49332
2. 29400
3.38859
4. 48869
ಶಿವಮೊಗ್ಗಕನಿಷ್ಠಗರಿಷ್ಠ
ಗೊರಬಲು
ಬೆಟ್ಟೆ
ರಾಶಿ
ಸರಕು
1. 17500
2. 49090
3. 47009
4. 57669
1. 37299
2.53486
3. 49459
4. 79596
ಸಾಗರಕನಿಷ್ಠಗರಿಷ್ಠ
ಕೆಂಪುಗೋಟು
ಕೋಕ
ಚಾಲಿ
ಬಿಳಿಗೋಟು
ರಾಶಿ
ಸಿಪ್ಪೆಗೋಟು
1. 22339
2.15022
3. 30000
4.20560
5. 37699
6. 13999
1. 37199
2. 34089
3. 37069
4. 27869
5. 49609
6. 21198

ಇದನ್ನೂ ಓದಿ | ದಿನಸಿ ಪೇಟೆ: ಸಗಟು ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳ ದರ ಹೀಗಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

Money Guide: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಕೆಲವೇ ದಿನ ಬಾಕಿ ಉಳಿದಿದೆ. ಜುಲೈ 31 ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈಗಲೇ ಫೈಲ್‌ ಮಾಡಿ. ಐಟಿಆರ್ ಫೈಲ್ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಎಲ್ಲ ತೆರಿಗೆದಾರರೇ ಗಮನಿಸಿ. ಆದಾಯ ತೆರಿಗೆ ರಿಟರ್ನ್ (Income Tax Returns) ಫೈಲ್ ಮಾಡಲು ಕೆಲವೇ ದಿನ ಬಾಕಿ ಉಳಿದಿದೆ. ಜುಲೈ 31 ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈಗಾಗಲೇ 5 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಸಲಾಗಿದೆ. ತೆರಿಗೆ ಪಾವತಿದಾರರು ಯಾವುದೇ ಗಡುವು ವಿಸ್ತರಣೆಗಾಗಿ ಕಾಯಬೇಡಿ ಮತ್ತು ಈಗಲೇ ಐಟಿಆರ್ ಸಲ್ಲಿಸಿ ಎನ್ನುವುದು ತಜ್ಞರ ಸಲಹೆ. ಐಟಿಆರ್ ಫೈಲ್ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

“ಈ ಹಣಕಾಸು ವರ್ಷದ ಐಟಿಆರ್ ಸಲ್ಲಿಸದೆ ಇರುವವರು ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ಆದಷ್ಟು ಬೇಗ ಫೈಲ್‌ ಮಾಡಿʼʼ ಎಂದು ಆದಾಯ ತೆರಿಗೆ ಇಲಾಖೆ ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. ಕಳೆದ ವರ್ಷದ ಜುಲೈ 27ಕ್ಕೆ ಹೋಲಿಸಿದರೆ ಈ ವರ್ಷ ಅತಿ ಹೆಚ್ಚು ಫೈಲಿಂಗ್‌ ಆಗಿದೆ. ಜುಲೈ 26ರವರೆಗೆ 5 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದೂ ಹೇಳಿದೆ.

ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ

ಗಡುವು ಮುಗಿಯುವ ದಿನ ಸಮೀಪಿಸುತ್ತಿರುವುದರಿಂದ ತೆರಿಗೆದಾರರು ಐಟಿಆರ್ ಸಲ್ಲಿಸಲು ಪ್ರಾರಂಭಿಸುವ ಮೊದಲು ತಮ್ಮ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಅಗತ್ಯವಿರುವ ದಾಖಲೆಗಳೆಂದರೆ: ನಿಮ್ಮ ಕಂಪನಿಯಿಂದ ದೊರೆಯುವ ಫಾರ್ಮ್ 16, ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಬಡ್ಡಿ ಪ್ರಮಾಣ ಪತ್ರಗಳು, ಟಿಡಿಎಸ್ ಪ್ರಮಾಣ ಪತ್ರಗಳು, ತೆರಿಗೆ ಕ್ರೆಡಿಟ್ ವಿವರಗಳಿಗಾಗಿ ಫಾರ್ಮ್ 26 ಎಎಸ್, ಟ್ಯಾಕ್ಸ್‌ ಡಿಡಕ್ಷನ್‌ಗಾಗಿ ತೆರಿಗೆ ಸೆಕ್ಷನ್‌ 80 ಸಿ, 80 ಡಿ ಇತ್ಯಾದಿಯಲ್ಲಿನ ಹೂಡಿಕೆಯ ಪುರಾವೆ.

ಫಾರ್ಮ್ 26 ಎಎಸ್‌ (Form 26AS) ಪರಿಶೀಲಿಸಿ

ಫಾರ್ಮ್ 26 ಎಎಸ್‌ನಲ್ಲಿನ ವಿವರಗಳು ನಿಮ್ಮ ಐಟಿಆರ್ ಫಾರ್ಮ್‌ನಲ್ಲಿರುವ ವಿವರಗಳೊಂದಿಗೆ ಹೊಂದಿಕೆಯಾಗುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಫಾರ್ಮ್ 26 ಎಎಸ್‌ ಕಡಿತಗೊಳಿಸಿದ ತೆರಿಗೆ, ಸಂಗ್ರಹಿಸಿದ ತೆರಿಗೆ ಮತ್ತು ಹಣಕಾಸು ವರ್ಷದಲ್ಲಿ ಪಾವತಿಸಿದ ಯಾವುದೇ ಮುಂಗಡ ತೆರಿಗೆಯ ವಿವರಗಳನ್ನು ಒದಗಿಸುತ್ತದೆ.

ಸೂಕ್ತ ಐಟಿಆರ್ ಫಾರ್ಮ್‌ ಆಯ್ಕೆ ಮಾಡಿ

ಸರಿಯಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡುವುದು ಕೂಡ ಮುಖ್ಯ. ಉದಾಹರಣೆಗೆ ವಾರ್ಷಿಕ ಆದಾಯ 50 ಲಕ್ಷ ರೂ. ವರೆಗಿನ ಸಂಬಳ ಪಡೆಯುವ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸಲು ಐಟಿಆರ್ ಫಾರ್ಮ್ 1 ಅನ್ನು ಬಳಸುತ್ತಾರೆ. 50 ಲಕ್ಷ ರೂ. ವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 5,000 ರೂ. ವರೆಗಿನ ಕೃಷಿ ಆದಾಯವೂ ಸೇರಿದೆ. ಗಮನಿಸಿ ತಪ್ಪು ಫಾರ್ಮ್ ಅನ್ನು ಬಳಸುವುದು ನಿಮ್ಮ ಐಟಿಆರ್ ತಿರಸ್ಕಾರಕ್ಕೆ ಕಾರಣವಾಗಬಹುದು.

ನಿಮ್ಮೆಲ್ಲ ಆದಾಯ ಮೂಲಗಳನ್ನು ಬಹಿರಂಗಪಡಿಸಿ

ಸಂಬಳ, ಬಡ್ಡಿ, ಬಾಡಿಗೆ ಆದಾಯ, ಬಂಡವಾಳ ಲಾಭಗಳು ಮತ್ತು ಇತರ ಯಾವುದೇ ಮೂಲಗಳು ಸೇರಿದಂತೆ ನಿಮ್ಮ ಎಲ್ಲ ಆದಾಯದ ಮೂಲಗಳನ್ನು ಬಹಿರಂಗಪಡಿಸಿ. ಬಹಿರಂಗಪಡಿಸದಿದ್ದರೆ ದಂಡ ಬೀಳುವ ಸಾಧ್ಯತೆ ಇದೆ.

ವಿನಾಯಿತಿಗಳು

ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಬರುವ ಎಲ್ಲ ಅರ್ಹ ಕಡಿತಗಳನ್ನು ಕ್ಲೈಮ್ ಮಾಡುವುದನ್ನು ಮರೆಯಬೇಡಿ. ಇದರಿಂದ ಗರಿಷ್ಠ ತೆರಿಗೆ ಉಳಿತಾಯ ಮಾಡಬಹುದು. ಲಭ್ಯವಿರುವ ಕಡಿತಗಳೆಂದರೆ:

ಸೆಕ್ಷನ್ 80 ಸಿ: ಪಿಪಿಎಫ್, ಎನ್ಎಸ್‌ಸಿ, ಇಎಲ್ಎಸ್ಎಸ್ ಇತ್ಯಾದಿಗಳಲ್ಲಿನ ಹೂಡಿಕೆ.
ಸೆಕ್ಷನ್ 80 ಡಿ: ಆರೋಗ್ಯ ವಿಮಾ ಪ್ರೀಮಿಯಂ.
ಸೆಕ್ಷನ್ 24 (ಬಿ): ಗೃಹ ಸಾಲದ ಮೇಲಿನ ಬಡ್ಡಿ- ಇವಕ್ಕೆ ಸಂಬಂಧಿಸಿ ದಾಖಲೆಗಳನ್ನು ಹೊಂದಿಸಿ.

ವಿನಾಯಿತಿ ಆದಾಯವನ್ನು ವರದಿ ಮಾಡಿ

    ಕೃಷಿ ಆದಾಯದಂತಹ ವಿನಾಯಿತಿ ಆದಾಯವನ್ನು ಐಟಿಆರ್‌ನಲ್ಲಿ ವರದಿ ಮಾಡಿ. ತೆರಿಗೆಗೆ ಒಳಪಡದಿದ್ದರೂ ಅದನ್ನು ನಮೂದಿಸಿಬೇಕು. ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಭವಿಷ್ಯದಲ್ಲಿ ಕಂಡುಬರಬಹುದಾದ ತೊಡಕುಗಳನ್ನು ತಪ್ಪಿಸುತ್ತದೆ.

    ನಿಮ್ಮ ಬ್ಯಾಂಕ್ ಖಾತೆ ಸಮರ್ಪಕವಾಗಿರಲಿ

    ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಪಾಸ್‌ಬುಕ್‌ಗಳು ಎಲ್ಲ ವಹಿವಾಟು (Transactions)ಗಳನ್ನು ನಿಖರವಾಗಿ ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸಿಕೊಳ್ಳಿ. ಎಲ್ಲ ತೆರಿಗೆ ಕಡಿತಗಳು ಮತ್ತು ಪಾವತಿಗಳನ್ನು ಲೆಕ್ಕ ಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಫಾರ್ಮ್ 26 ಎಎಸ್‌ನೊಂದಿಗೆ ಕ್ರಾಸ್ ಚೆಕ್ ಮಾಡಿ.

    ಈ ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ

    ತಪ್ಪಾದ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದು, ಬ್ಯಾಂಕ್ ಖಾತೆ ವಿವರಗಳಲ್ಲಿ ದೋಷಗಳು, ಆದಾಯವನ್ನು ತಪ್ಪಾಗಿ ವರದಿ ಮಾಡುವುದು ಅಥವಾ ಕೈಬಿಡುವುದು, ಒಟ್ಟು ಆದಾಯ ಮತ್ತು ತೆರಿಗೆ ಹೊಣೆಗಾರಿಕೆಯ ತಪ್ಪು ಲೆಕ್ಕಾಚಾರದಂತಹ ಸಾಮಾನ್ಯ ದೋಷಗಳ ಬಗ್ಗೆ ಜಾಗರೂಕರಾಗಿರಬೇಕು. ಭರ್ತಿ ಮಾಡಿದ ಬಳಿಕ ಮರುಪರಿಶೀಲಿಸಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಧಾರ್ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಲಭ್ಯವಿರುವ ಇತರ ವಿಧಾನಗಳ ಮೂಲಕ ಇ-ಪರಿಶೀಲನೆ ಆಯ್ಕೆಯನ್ನು ಬಳಸಿ.

    ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

    ತಜ್ಞರ ನೆರವು ಪಡೆದುಕೊಳ್ಳಿ

    ಐಟಿಆರ್ ಫೈಲಿಂಗ್ ಪ್ರಕ್ರಿಯೆಯ ವೇಳೆ ಯಾವುದೇ ಅನುಮಾನ, ಗೊಂದಲ ಮೂಡಿದರೆ ತಜ್ಞರ ನೆರವು ಪಡೆದುಕೊಳ್ಳಿ.

    ಕೊನೆಯ ಕ್ಷಣದವರೆಗೂ ಕಾಯಬೇಡಿ

    ಗಡುವು ವಿಸ್ತರಿಸುವ ನಿರೀಕ್ಷೆಗಳಿದ್ದರೂ ಅದಕ್ಕಾಗಿ ಕಾಯುವುದು ಸೂಕ್ತವಲ್ಲ. ಆದಾಯ ತೆರಿಗೆ ಇಲಾಖೆ ಅನೇಕ ಮಾಧ್ಯಮಗಳ ಮೂಲಕ ತೆರಿಗೆದಾರರಿಗೆ ಸಾಧ್ಯವಾದಷ್ಟು ಬೇಗ ರಿಟರ್ನ್ ಸಲ್ಲಿಸುವಂತೆ ನೆನಪಿಸುತ್ತದೆ. ಇದರಿಂದ ಕೊನೆಯ ಕ್ಷಣದ ಗೊಂದಲ ನಿವಾರಿಸಬಹುದು ಎನ್ನುವುದೇ ಇದಕ್ಕೆ ಮುಖ್ಯ ಕಾರಣ.

    Continue Reading

    ಪ್ರಮುಖ ಸುದ್ದಿ

    Tomato Price: ದಿಢೀರ್‌ ಕುಸಿದ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ತಳಮಳ

    Tomato Price: ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

    VISTARANEWS.COM


    on

    tomato price
    Koo

    ಕೋಲಾರ : ನಿಲ್ಲದ ಮಳೆಯ ಆರ್ಭಟದ (Karnataka Rain news) ಪರಿಣಾಮ ಕೋಲಾರದ ಕೆಂಪು ಸುಂದರಿ ಟೊಮೊಟೊ ಬೆಲೆ (Tomato Price) ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ.

    ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹದಿನೈದು ಕೆಜಿ ಬಾಕ್ಸ್ ಬೆಲೆ ಒಂದು ಸಾವಿರದ ನೂರ ಐವತ್ತರಿಂದ ಇನ್ನೂರರ ವರೆಗೆ ಮಾರಾಟವಾಗುತ್ತಿತ್ತು. ಆದರೆ ಎರಡು ದಿನಗಳಿಂದ ಟೊಮೊಟೊ ದಿಢೀರ್ ಎಂದು ಕುಸಿದಿದ್ದು 330ರಿಂದ 650 ರೂ.ಗೆ ಇಳಿದಿದೆ.

    ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಗೆ ಪ್ರತಿ ದಿನ ಎರಡು ಲಕ್ಷಕ್ಕೂ ಹೆಚ್ಚು ಟೊಮೊಟೊ ಬಾಕ್ಸ್ (Tomato Box) ಬರುತ್ತಿವೆ. ಹೊರಗಿನ ಬೇಡಿಕೆಯಷ್ಟೇ ಟೊಮೊಟೊ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಧಾರಣೆ ಮಾತ್ರ ಕುಸಿತ ಕಂಡಿದೆ.

    ಬೆಲೆ ಕುಸಿತಕ್ಕೆ ಕಾರಣವೇನು?

    ದೇಶದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಟೊಮೊಟೊ ಸಾಗಾಣಿಕೆಗೆ ತೊಂದರೆಯಾಗಿದೆ. ಭಾರಿ ಮಳೆಯ ಹೊಡೆತದಿಂದ ರಸ್ತೆ ಸಂಪರ್ಕವಿಲ್ಲದೆ ಸಾಗಾಣಿಕೆಯಾದ ಟೊಮೆಟೊ ಲಾರಿಗಳು ಎಲ್ಲೆಂದರೆ ಅಲ್ಲಿ ನಿಂತಿವೆ. ಮಳೆ ಅಡ್ಡಿಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ಟೊಮೊಟೊ ಧಾರಣೆ ಕುಸಿತವಾಗಿದೆ. ರೈತರು ಆತಂಕ ಪಡಬೇಕಿಲ್ಲ; ಮಳೆ ನಿಂತರೆ ಮತ್ತೆ ಟೊಮೆಟೊ ಧಾರಣೆ ಚೇತರಿಕೆಯಾಗಲಿದೆ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಕಿರಣ್ ಸ್ಪಷ್ಟಪಡಿಸಿದ್ದಾರೆ.

    ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ‌ ಹೆಗ್ಗಳಿಕೆ ಪಡೆದಿರುವ ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಯಲ್ಲಿ ಕಳೆದ ವಾರ ಟೊಮೆಟೊಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿತ್ತು. 15 ಕೆ.ಜಿಯ ಬಾಕ್ಸ್​​ಗೆ 900ರಿಂದ 1200 ರೂ.ಗಳಿಗೆ ಹರಾಜಾಗಿತ್ತು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

    ಕಳೆದ ವರ್ಷ ಇದೇ ಸಮಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಬಾಕ್ಸ್‌ಗೆ ಸುಮಾರು 2000ರಿಂದ 2700 ರೂ.ವರೆಗೂ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

    ಕೋಲಾರ ಮತ್ತು‌ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಸನ್‌ನಲ್ಲಿ ಅತಿ‌ ಹೆಚ್ಚು ಟೊಮೆಟೊವನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ತಾಪಮಾನ, ಮಳೆ ಮತ್ತು ವೈರಸ್ ಹಾವಳಿಯಿಂದ ಟೊಮೆಟೊ ಬೆಳೆಯಿಲ್ಲದೆ ಆವಕ ಕಡಿಮೆಯಾಗಿದೆ. ಜೊತೆಗೆ ಟೊಮೆಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಕಷ್ಟಪಟ್ಟು ಬೆಳೆದರೂ ಸಹ ಟೊಮೆಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತ ಇತ್ತೀಚಿಗೆ ಟೊಮೆಟೊ ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾನೆ.

    ಮೊದಲು ಆಂಧ್ರ, ತಮಿಳುನಾಡು, ಮಂಡ್ಯ, ಚಾಮರಾಜನಗರ, ‌ಮೈಸೂರು, ನೆಲಮಂಗಲ ಕಡೆಯಿಂದ ಟೊಮೆಟೊ ಬರುತ್ತಿತ್ತು.‌ ಆದರೆ ಈಗ ಬರುತ್ತಿಲ್ಲ. ಆಗಸ್ಟ್ ತಿಂಗಳವರೆಗೂ ಟೊಮೆಟೊ ಸೀಜನ್‌ ಇರುವುದರಿಂದ ಟೊಮೆಟೊ ಬೆಲೆ ಇನ್ನೂ ಏರಿಕೆಯಾಗುವ ಸಂಭವವಿದೆ. ಕೋಲಾರದ ಟೊಮೆಟೊಗೆ ದೆಹಲಿ, ಒರಿಸ್ಸಾ, ಗುಜರಾಜ್​, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ಕಡೆ ಹೆಚ್ಚಿನ ಬೇಡಿಕೆ ಇದೆ.

    ಇದನ್ನೂ ಓದಿ: Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

    Continue Reading

    ವಾಣಿಜ್ಯ

    Mukesh Ambani: ಬಜೆಟ್ ದಿನ 9,200 ಕೋಟಿ ರೂ. ಕಳೆದುಕೊಂಡಿದ್ದ ಮುಕೇಶ್ ಅಂಬಾನಿ!

    ಕೇಂದ್ರ ಬಜೆಟ್‌ ಮಂಡನೆಯಾದ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ, ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ಮುಕೇಶ್ ಅಂಬಾನಿ (Mukesh Ambani) ಸೇರಿದಂತೆ ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

    VISTARANEWS.COM


    on

    By

    Mukesh Ambani
    Koo

    ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು (Ananth Ambani and Radhika Merchant’s wedding) ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ (businessman Mukesh Ambani) 2024ರ ಕೇಂದ್ರ ಬಜೆಟ್ (Union Budget 2024) ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದಾಗಿ ಬರೋಬ್ಬರಿ 9,200 ಕೋಟಿ ರೂ. ಕಳೆದುಕೊಂಡಿದ್ದರು!

    ಕೇಂದ್ರ ಬಜೆಟ್‌ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಈ ಸಂದರ್ಭದಲ್ಲಿ ವಹಿವಾಟಿನಲ್ಲಿ ಗಮನಾರ್ಹವಾದ ಏರಿಳಿತಗಳು ಕಂಡುಬಂದವು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

    ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ಈ ದಿನ ಗಣನೀಯ ಇಳಿಕೆಯಾಗಿದೆ. ಬಜೆಟ್ ದಿನದಂದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುವ ನಿರೀಕ್ಷೆ ಇತ್ತು. ಇದರಿಂದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಿತು.

    ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅಂಬಾನಿ ಅವರ ನಿವ್ವಳ ಮೌಲ್ಯವು 1.10 ಬಿಲಿಯನ್ ಡಾಲರ್‌ ಅಂದರೆ ಸರಿಸುಮಾರು 9200 ಕೋಟಿ ರೂ. ಗಳಷ್ಟು ಕಡಿಮೆಯಾಗಿದೆ. ಈ ಕುಸಿತದ ಹೊರತಾಗಿಯೂ ಈ ವರ್ಷದ ಆರಂಭದಲ್ಲಿ ಅವರ ಸಂಪತ್ತು 16 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿತ್ತು.

    ಕಳೆದ ಕೆಲವು ದಿನಗಳಲ್ಲಿ ಅಂಬಾನಿ ಅವರ ನಿವ್ವಳ ಮೌಲ್ಯವು 7 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಜುಲೈ 19ರಂದು ಅವರ ನಿವ್ವಳ ಮೌಲ್ಯವು 119 ಶತಕೋಟಿ ಡಾಲರ್ ಆಗಿತ್ತು. ಆದರೆ ಅದು ಈಗ 112 ಶತಕೋಟಿ ಡಾಲರ್‌ಗೆ ಇಳಿದಿದೆ ಎನ್ನಲಾಗಿದೆ.

    ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇತ್ತೀಚೆಗೆ ಕುಸಿಯುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಕುಸಿತ ಉಂಟಾಗಬಹುದು ಎನ್ನಲಾಗಿದೆ.

    Mukesh Ambani
    Mukesh Ambani


    ಇದಕ್ಕೆ ವ್ಯತಿರಿಕ್ತವಾಗಿ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಹೆಚ್ಚಳವಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ನಿವ್ವಳ ಮೌಲ್ಯವು 751 ಮಿಲಿಯನ್ ಡಾಲರ್‌ಗಳು ಅಂದರೆ ಸರಿಸುಮಾರು 63 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅವರ ಸಂಪತ್ತು 102 ಬಿಲಿಯನ್ ಡಾಲರ್‌ ಗಳನ್ನು ತಲುಪಿದೆ. ಈ ವರ್ಷ ಅವರ ಸಂಪತ್ತು 17.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ.

    Continue Reading

    ಚಿನ್ನದ ದರ

    Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

    Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 27) ಏರಿಕೆಯಾಗಿದೆ. ಬಜೆಟ್‌ ಮಂಡನೆಯ ಬಳಿಕ ಸತತವಾಗಿ ಇಳಿದಿದ್ದ ದರ ಮೊದಲ ಬಾರಿ ಏರಿಕೆಯಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 25 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 27 ದುಬಾರಿಯಾಗಿದೆ.

    VISTARANEWS.COM


    on

    Gold Rate Today
    Koo

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 27) ಏರಿಕೆಯಾಗಿದೆ (Gold Rate Today). ಬಜೆಟ್‌ ಮಂಡನೆಯ ಬಳಿಕ ಸತತವಾಗಿ ಇಳಿದಿದ್ದ ದರ ಮೊದಲ ಬಾರಿ ಏರಿಕೆಯಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 25 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 27 ದುಬಾರಿಯಾಗಿದೆ.

    ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,325 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,900 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 50,600 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 63,250 ಮತ್ತು ₹ 6,32,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 55,200 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,000 ಮತ್ತು ₹ 6,90,000 ತಲುಪಿದೆ.

    ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
    ದಿಲ್ಲಿ₹ 6,340 ₹ 6,915
    ಮುಂಬೈ₹ 6,325 ₹ 6,900
    ಬೆಂಗಳೂರು₹ 6,325 ₹ 6,900
    ಚೆನ್ನೈ₹ 6,465 ₹ 7,053

    ಬೆಳ್ಳಿ ಧಾರಣೆ

    ಬೆಳ್ಳಿಯ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಒಂದು ಗ್ರಾಂಗೆ ₹ 84.25 ಹಾಗೂ 8 ಗ್ರಾಂಗೆ ₹ 674 ಇದೆ. 10 ಗ್ರಾಂ ₹ 842.50 ಹಾಗೂ 1 ಕಿಲೋಗ್ರಾಂ ₹ 84,250 ಬೆಲೆ ಬಾಳುತ್ತದೆ.

    ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

    ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

    ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

    ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

    ಚೀನಾದ ಪ್ರಭಾವ: ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

      ಇದಲ್ಲದೆ ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

      ಇದನ್ನೂ ಓದಿ: Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

      Continue Reading
      Advertisement
      Money Guide
      ಮನಿ-ಗೈಡ್4 mins ago

      Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

      Womens Asia Cup Final
      ಕ್ರೀಡೆ27 mins ago

      Womens Asia Cup Final: 8ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತ; ನಾಳೆ ಫೈನಲ್​

      dk shivakumar hd kumarswamy
      ಪ್ರಮುಖ ಸುದ್ದಿ30 mins ago

      DK Shivakumar: ನಮ್ಮ ಸರ್ವನಾಶವೇ ಕುಮಾರಸ್ವಾಮಿ ಅವರ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್

      karnataka high court
      ಪ್ರಮುಖ ಸುದ್ದಿ57 mins ago

      Karnataka High Court: ʼಚಿಲ್ಲರೆ ಅಂಗಡಿಯವರಲ್ಲೂ ಯುಪಿಐ ಇದೆ, ನಿಮ್ಮಲ್ಲೇಕಿಲ್ಲ?ʼ ಬೆಸ್ಕಾಂಗೆ ಹೈಕೋರ್ಟ್‌ ತರಾಟೆ

      Ghuspaithia Hindi movie release on August 9
      ಕರ್ನಾಟಕ1 hour ago

      Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

      2nd International Airport in Bengaluru Another round of discussion was held by Minister MB Patil
      ಕರ್ನಾಟಕ1 hour ago

      MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್‌ ಸಮಾಲೋಚನೆ

      Kanwar Yatra
      ದೇಶ1 hour ago

      Kanwar Yatra: ಕನ್ವರ್ ಯಾತ್ರೆ ಮಾರ್ಗದಲ್ಲಿನ ಮಸೀದಿ ಕಾಣದಂತೆ ಪರದೆ; ವ್ಯಾಪಕ ವಿರೋಧದ ಬಳಿಕ ತೆರವು

      ramanagara news
      ರಾಮನಗರ2 hours ago

      Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

      pramod mutalik dog meat
      ಪ್ರಮುಖ ಸುದ್ದಿ2 hours ago

      Dog Meat: 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ: ಪ್ರಮೋದ್‌ ಮುತಾಲಿಕ್‌ ಶಾಕಿಂಗ್‌ ಹೇಳಿಕೆ

      Shiva Rajkumar played the dupe for saikumar in film
      ಸ್ಯಾಂಡಲ್ ವುಡ್2 hours ago

      Shiva Rajkumar: ಸಾಯಿಕುಮಾರ್‌ಗೆ ಶಿವಣ್ಣ ಡ್ಯೂಪ್ ಆಗಿದ್ದ ಸಿನಿಮಾ ಯಾವುದು? ಆ ದೃಶ್ಯಕ್ಕೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ!

      Sharmitha Gowda in bikini
      ಕಿರುತೆರೆ10 months ago

      Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

      Kannada Serials
      ಕಿರುತೆರೆ10 months ago

      Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

      Bigg Boss- Saregamapa 20 average TRP
      ಕಿರುತೆರೆ9 months ago

      Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

      galipata neetu
      ಕಿರುತೆರೆ8 months ago

      Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

      Kannada Serials
      ಕಿರುತೆರೆ10 months ago

      Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

      Kannada Serials
      ಕಿರುತೆರೆ10 months ago

      Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

      Bigg Boss' dominates TRP; Sita Rama fell to the sixth position
      ಕಿರುತೆರೆ9 months ago

      Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

      geetha serial Dhanush gowda engagement
      ಕಿರುತೆರೆ7 months ago

      Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

      varun
      ಕಿರುತೆರೆ8 months ago

      Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

      Kannada Serials
      ಕಿರುತೆರೆ11 months ago

      Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

      ramanagara news
      ರಾಮನಗರ2 hours ago

      Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

      karnataka rain
      ಮಳೆ2 hours ago

      Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

      Ankola landslide
      ಉತ್ತರ ಕನ್ನಡ21 hours ago

      Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

      karnataka rain
      ಮಳೆ22 hours ago

      Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

      Karnataka Rain
      ಮಳೆ23 hours ago

      Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

      Karnataka rain
      ಮಳೆ24 hours ago

      Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

      karnataka Rain
      ಮಳೆ2 days ago

      Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

      Actor Darshan
      ಸ್ಯಾಂಡಲ್ ವುಡ್2 days ago

      Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

      Actor Darshan
      ಸಿನಿಮಾ2 days ago

      Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

      Actor Darshan
      ಸಿನಿಮಾ2 days ago

      Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

      ಟ್ರೆಂಡಿಂಗ್‌