LIC IPO: ಷೇರು ಲಭಿಸಿರುವುದನ್ನು ಖಾತರಿಪಡಿಸುವುದು ಹೇಗೆ? - Vistara News

LIC ಐಪಿಓ

LIC IPO: ಷೇರು ಲಭಿಸಿರುವುದನ್ನು ಖಾತರಿಪಡಿಸುವುದು ಹೇಗೆ?

ಎಲ್‌ಐಸಿಯ ಐಪಿಒದಲ್ಲಿ ಬಿಡ್‌ ಸಲ್ಲಿಸಿದವರು ತಮಗೆ ಷೇರು ಲಭಿಸಿದೆಯೇ ಇಲ್ಲವೇ ಎಂಬುದನ್ನು ಹೀಗೆ ತಿಳಿದುಕೊಳ್ಳಬಹುದು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ (LIC IPO): ಎಲ್‌ ಐಸಿಯ ಐಪಿಒ ಮುಕ್ತಾಯವಾಗಿದ್ದು, ಮೇ 12ರಂದು (ಗುರುವಾರ) ಷೇರುಗಳು ಮಂಜೂರಾಗುತ್ತಿವೆ. ಬಂಡವಾಳ ಹಿಂತೆಗೆತ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.

ಎಲ್‌ಐಸಿಯು ಮೇ೪ರಿಂದ ೯ರ ತನಕ ನಡೆಸಿದ ಐಪಿಒದಲ್ಲಿ 20,557 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ. ಪ್ರತಿ ಷೇರಿನ ಬಿಡ್‌ ದರದ ಶ್ರೇಣಿ 902ರೂ.ಗಳಿಂದ 949 ರೂ. ತನಕ ಇತ್ತು. ಅರ್ಹ ಪಾಲಿಸಿದಾರರು ಒಂದು ಷೇರಿಗೆ 60 ರೂ. ರಿಯಾಯಿತಿ ಪಡೆದಿದ್ದಾರೆ. ರಿಟೇಲ್‌ ಹೂಡಿಕೆದಾರರು 45 ರೂ. ರಿಯಾಯಿತಿ ಗಳಿಸಿದ್ದಾರೆ.

ಐಪಿಒದಲ್ಲಿ ಒಟ್ಟಾರೆಯಾಗಿ 2.95 ಪಟ್ಟು ಬಿಡ್‌ ಸಲ್ಲಿಕೆಯಾಗಿದೆ. ಪಾಲಿಸಿದಾರರು 6.12 ಪಟ್ಟು ಮತ್ತು ಉದ್ಯೋಗಿಗಳು 4.4 ಪಟ್ಟು ಬಿಡ್‌ ಸಲ್ಲಿಸಿದ್ದಾರೆ.

ಐಪಿಒದಲ್ಲಿ ಬಿಡ್‌ ಸಲ್ಲಿಸಿದವರು ತಮಗೆ ಷೇರು ಮಂಜೂರಾಗಿದೆಯೇ ಇಲ್ಲವೇ ಎಂಬುದನ್ನು ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಖಾತರಿಪಡಿಸಿಕೊಳ್ಳಬಹುದು.

  1. ಬಿಎಸ್‌ಇಯ ಈ ವೆಬ್‌ಸೈಟ್‌ ತೆರೆಯಿರಿ-https:www.bseindia.com/investors/investors/appli_check.aspx
  2. Issue type ವಿಭಾಗದಲ್ಲಿ Equity ಅನ್ನು ಕ್ಲಿಕ್‌ ಮಾಡಿ.
  3. Issue name ವಿಭಾಗದಲ್ಲಿ ಎಲ್‌ಐಸಿಯನ್ನು ಸೆಲೆಕ್ಟ್‌ ಮಾಡಿ.
  4. ಅಪ್ಲಿಕೇಷನ್‌ ನಂಬರ್‌ ಬರೆಯಿರಿ.
  5. ಪ್ಯಾನ್‌ ಕಾರ್ಡ್‌ ಐಡಿ ಸೇರಿಸಿ.
  6. ” Iam not a Robot’ ಮೇಲೆ ಕ್ಲಿಕ್ ಮಾಡಿ ಸಬ್‌ಮಿಟ್‌ ಒತ್ತಿ. ಬಳಿಕ ಎಲ್‌ಐಸಿ ಷೇರು ಮಂಜೂರಾತಿಯ ಸ್ಥಿತಿಗತಿ ವಿವರ ಸಿಗುತ್ತದೆ.

ಷೇರು ಸಿಗದವರಿಗೆ ಕಟ್ಟಿದ ಹಣ ವಾಪಸ್‌

ಎಲ್‌ಐಸಿ ಐಪಿಒದಲ್ಲಿ ಷೇರುಗಳು ಮಂಜೂರಾಗದಿದ್ದವರಿಗೆ ಅವರು ಬಿಡ್‌ ಸಲುವಾಗಿ ಕಟ್ಟಿದ ಹಣ ಮೇ 13 ರಂದು ಸಿಗಲಿದೆ. ಬ್ಯಾಂಕ್‌ಗಳು ಅವರ ಖಾತೆಗೆ ಜಮೆ ಮಾಡಲಿದೆ. ಮೇ 17ರಂದು ಎಲ್‌ಐಸಿಯ ಷೇರುಗಳು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

Loksabha Election 2024: ಕೆ ಅಣ್ಣಾಮಲೈ ಗೆಲುವು ಸಾಧಿಸಬಹುದೆ? ಪ್ರಬಲ ಪೈಪೋಟಿಗೆ ಸಾಕ್ಷಿಯಾಗಲಿದೆ ಕೊಯಮತ್ತೂರು

Loksabha Election 2024: ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸ್ಥಾನವನ್ನಾದರೂ ಗೆಲ್ಲುವ ನಿರೀಕ್ಷೆಯಾದರೆ ಡಿಎಂಕೆಗೆ ತನ್ನ ಕ್ಷೇತ್ರವನ್ನು ಉಳಿಸುವ ಹಂಬಲ. ಹೀಗಾಗಿ ತಮಿಳುನಾಡು ಲೋಕಸಭಾ ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಅದರಲ್ಲೂ ಕೊಯಮತ್ತೂರು ಕ್ಷೇತ್ರ ಎಲ್ಲರ ಗಮನ ಸೆಳೆದಿರುವುದು ಯಾಕೆ ಗೊತ್ತೇ? ಈ ವಿಶೇಷ ವರದಿ ಓದಿ.

VISTARANEWS.COM


on

By

Loksabha election-2024
Koo

ಕೊಯಮತ್ತೂರು: ಲೋಕಸಭಾ ಚುನಾವಣೆಯಲ್ಲಿ (Loksabha election 2024) ಈ ಬಾರಿ ದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ತಮಿಳುನಾಡಿನ (tamilnadu) ಎಲ್ಲಾ 39 ಸ್ಥಾನಗಳಿಗೆ ಏಪ್ರಿಲ್ 19ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಈ ಬಾರಿ ಇಲ್ಲಿ ಬಿಜೆಪಿ (BJP), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK)ಯು ಡಿಎಂಕೆಗೆ (DMK) ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

ತಮಿಳುನಾಡಿನ ಕೊಯಮತ್ತೂರು (coimbatore) ಕ್ಷೇತ್ರದಲ್ಲಿ ಡಿಎಂಕೆ ನಾಯಕ ಗಣಪತಿ ಪಿ. ರಾಜ್ ಕುಮಾರ್ (Ganapathy P. Raj Kumar) ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (K. Annamalai), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ (Singhai Ramachandran) ಕಣಕ್ಕೆ ಇಳಿದಿದ್ದು, ಈ ಕ್ಷೇತ್ರ ಭಾರೀ ಪೈಪೋಟಿಗೆ ಸಾಕ್ಷಿಯಾಗಲಿದೆ.

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕೆ ಇಳಿದಿದ್ದರೂ ಗೆಲವು ಸಾಧಿಸಿಲ್ಲ. ಭಾರಿ ಮತಗಳ ಅಂತರದಿಂದ ಸೋಲು ಅನುಭವಿಸಿದೆ. ಆದರೆ ಈ ಬಾರಿ ಗೆಲುವಿನ ನಿರೀಕ್ಷೆ ಮೂಡಿಸಿರುವುದು ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಅಣ್ಣಾಮಲೈ. ಆದರೂ ಇಲ್ಲಿ ಗೆಲುವು ಅಷ್ಟು ಸುಲಭವೇನಲ್ಲ. ಯಾಕೆಂದರೆ ಡಿಎಂಕೆ, ಎಐಎಡಿಎಂಕೆಯಿಂದ ಪ್ರಬಲ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: Lok Sabha Election 2024: ಇಂದು ಪ್ರಹ್ಲಾದ್‌ ಜೋಶಿ, ಅಣ್ಣಾಸಾಹೇಬ್‌ ಜೊಲ್ಲೆ, ಗೀತಾ ಶಿವರಾಜ್‌ಕುಮಾರ್‌ ನಾಮಪತ್ರ

ಬಿಜೆಪಿಗೆ ಸತತ ಸೋಲು

2014 ಮತ್ತು 2019ರ ಎರಡು ಲೋಕಸಭಾ ಚುನಾವಣೆಗಳಲ್ಲಿ ಕೊಯಮತ್ತೂರಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸತತ ಸೋಲು ಅನುಭವಿಸಿದ್ದರು.
2014ರಲ್ಲಿ ಎಐಎಡಿಎಂಕೆಯ ಪಿ. ನಾಗರಾಜನ್ ಅವರು ಸಿ.ಪಿ. ರಾಧಾಕೃಷ್ಣನ್ ಅವರನ್ನು ಸೋಲಿಸಿ 42,016 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

2019ರಲ್ಲಿ ಸಿ.ಪಿ. ರಾಧಾಕೃಷ್ಣನ್ ಅವರ ವಿರುದ್ಧ ಕಣಕ್ಕೆ ಇಳಿದಿದ್ದ ಸಿಪಿಐ (ಎಂ) ಸಂಸದ ಪಿ.ಆರ್. ನಟರಾಜನ್ ಅವರು 1,79,143 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಸಿ.ಪಿ.ರಾಧಾಕೃಷ್ಣನ್ ಅವರು ಶೇ. 31.3. ಹಾಗೂ ಪಿ.ಆರ್.ನಟರಾಜನ್ ಶೇ.45.7ರಷ್ಟು ಮತಗಳನ್ನು ಪಡೆದಿದ್ದರು.


ಕೆ ಅಣ್ಣಾಮಲೈ ಪ್ರಬಲ ಸ್ಪರ್ಧೆ

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಕಳೆದ ಶುಕ್ರವಾರ ಲೋಕಸಭೆ ಚುನಾವಣೆಯ ಕೊಯಮತ್ತೂರು ಕ್ಷೇತ್ರದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೊಯಮತ್ತೂರು ನಗರದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಚೇರಿಗಳನ್ನು ಸ್ಥಾಪಿಸುವ ಭರವಸೆಗಳನ್ನು ನೀಡಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರಿನಲ್ಲಿ ದಿನದ 24 ಗಂಟೆಗಳ ಕಾಲ ಮೊಬೈಲ್ ಆಹಾರ ವ್ಯಾನ್‌ಗಳನ್ನು ಪರಿಚಯಿಸುವುದಾಗಿ ಬಿಜೆಪಿ ಘೋಷಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅಣ್ಣಾಮಲೈ ಅವರು, ಕೊಯಮತ್ತೂರು ಲೋಕಸಭಾ ಕ್ಷೇತ್ರವನ್ನು ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಭೂಪಟದಲ್ಲಿ ಪ್ರಮುಖ ಸ್ಥಾನವನ್ನಾಗಿ ಮಾಡುವ ಉದ್ದೇಶದ ಆಧಾರದ ಮೇಲೆ ನಾವು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ 100 ಭರವಸೆಗಳನ್ನು ನೀಡಿದ್ದೇವೆ. ನನ್ನ ಕನಸು ನಮ್ಮ ಕೊಯಮತ್ತೂರು ಎಂದು ಹೇಳಿದ್ದಾರೆ. ಯುವ ಮತದಾರರನ್ನು ಅಣ್ಣಾಮಲೈ ವಿಶೇಷವಾಗಿ ಸೆಳೆಯುತ್ತಿದ್ದಾರೆ. ಅಣ್ಣಾಮಲೈ ತಿಂಗಳ ಹಿಂದೆ ಯಾತ್ರೆ ನಡೆಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯ ಬಲವೃದ್ಧಿಗೆ ಪ್ರಯತ್ನಿಸಿದ್ದಾರೆ. ಅಣ್ಣಾಮಲೈ ಪ್ರಭಾವದಿಂದ ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಡಿಎಂಕೆ

ಡಿಎಂಕೆ ಅಭ್ಯರ್ಥಿ ಗಣಪತಿ ಪಿ. ರಾಜ್‌ಕುಮಾರ್ ಅವರು ಕೊಯಮತ್ತೂರಿನಲ್ಲಿ ಬಿಜೆಪಿ ಏನನ್ನೂ ಮಾಡಿಲ್ಲ. ಹೀಗಾಗಿ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾರೂಢ ತಮಿಳುನಾಡು ಪಕ್ಷಕ್ಕೆ ಕೊಯಮತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಾವು ಕ್ಷೇತ್ರದಲ್ಲಿದ್ದೇವೆ, ಜನರನ್ನು ಭೇಟಿಯಾಗುತ್ತೇವೆ. ನಾವು ತಳಮಟ್ಟಕ್ಕೆ ಹೋಗುತ್ತೇವೆ ಮತ್ತು ಸಿಎಂ ಎಂ.ಕೆ. ಸ್ಟಾಲಿನ್ ಅವರ ಯೋಜನೆ ಅವರಿಗೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೇಳಿದ್ದೇವೆ. ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆ. ಅಣ್ಣಾಮಲೈ ಜನರಿಗೆ ಏನು ಭರವಸೆ ನೀಡಿದರು ಮತ್ತು ಅವರು ಜನರಿಗೆ ಏನು ಮಾಡಿದ್ದಾರೆ ಎಂಬುದರ ಕುರಿತು ಅವರು ಏನು ಹೇಳುತ್ತಾರೆ, ಏನೂ ಇಲ್ಲ, ಎಂದು ಹೇಳಿದ್ದಾರೆ.


ಬಿಜೆಪಿ ಪ್ರಚಾರ

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿ ಕಳೆದ ತಿಂಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ನಡೆಸಿದರು. 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಸಂತ್ರಸ್ತರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ತಮಿಳುನಾಡಿನಲ್ಲಿ ಬಿಜೆಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಈ ವರ್ಷ ತಮಿಳುನಾಡಿಗೆ ಸಾಕಷ್ಟು ಭರವಸೆಗಳನ್ನು ಪ್ರಧಾನಿ ನರೇಂದ ಮೋದಿ ನೀಡಿದ್ದಾರೆ. ಅಲ್ಲದೇ ಹಲವಾರು ಯೋಜನೆಗಳಿಗೆ ಚಾಲನೆಯನ್ನು ಕೊಟ್ಟಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?

2019 ರ ಲೋಕ ಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಈ ಬಾರಿಯೂ ಅದೇ ದಾಖಲೆ ಬರೆಯುವ ಉತ್ಸಾಹದಲ್ಲಿದೆ.

Continue Reading

LIC ಐಪಿಓ

ಹೂಡಿಕೆದಾರರಿಗೆ ಎಲ್‌ಐಸಿ ಷೇರು ಕಲಿಸಿ‌ದ ಹೊಸ ಪಾಠ!

ಬಹುನಿರೀಕ್ಷಿತ ಎಲ್‌ ಐಸಿ ಐಪಿಒ ಮುಗಿದು ಷೇರುಗಳು ಈಗ ಸೆಕೆಂಡರಿ ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆ ಲಭ್ಯವಿದೆ. ಲಕ್ಷಾಂತರ ಹೊಸ ಹೂಡಿಕೆದಾರರಿಗೆ ಅನೂಹ್ಯ ಪಾಠಗಳನ್ನೂ ಕಲಿಸಿಕೊಟ್ಟಿದೆ! ಅದೇನು?

VISTARANEWS.COM


on

Koo

ಬೆಂಗಳೂರು: “ಹೂಡಿಕೆ ಸರಳ, ಆದರೆ ಸುಲಭವಲ್ಲʼ ಎನ್ನುತ್ತಾರೆ ಅಮೆರಿಕದ ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್‌ ಬಫೆಟ್‌!
ಅತ್ಯಂತ ಸ್ಮಾರ್ಟ್‌ ನಿರ್ಧಾರಗಳ ಮೂಲಕ ಷೇರು ಪೇಟೆಯಲ್ಲಿ ಹೂಡಿಕೆ ಮಾಡುತ್ತಾ 104 ಶತಕೋಟಿ ಡಾಲರ್‌ (ಅಂದಾಜು 8 ಲಕ್ಷ ಕೋಟಿ ರೂ.) ಸಂಪತ್ತು ಗಳಿಸಿದವರು ಬಫೆಟ್.‌ ಅವರ ಮಾತಿನ ಮರ್ಮವನ್ನು ಎಲ್‌ಐಸಿ ಐಪಿಒ ಹಂಗಾಮದ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳಬಹುದು.

ಎಲ್‌ಐಸಿ ಐಪಿಒದಲ್ಲಿ ಲಕ್ಷಾಂತರ ಪಾಲಿಸಿದಾರರು ಹಾಗೂ ರಿಟೇಲ್‌ ಹೂಡಿಕೆದಾರರು ಭಾಗವಹಿಸಿದ್ದಾರೆ. ಒಟ್ಟಾರೆ ಮೂರು ಪಟ್ಟು ಹೆಚ್ಚಿನ ಬಿಡ್‌ ಸಲ್ಲಿಕೆಯೂ ಆಗಿತ್ತು. ಅದರಲ್ಲೂ ಪಾಲಿಸಿದಾರರು ಎಲ್ಲರಿಗಿಂತ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೆ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಐಪಿಒ ದರಕ್ಕಿಂತಲೂ (949ರೂ.) ಕಡಿಮೆ ದರದಲ್ಲಿ (872ರೂ.) ವಹಿವಾಟು ಆರಂಭವಾಗಿ, ದಿನದ ಕೊನೆಗೆ ೮೭೫ ರೂ.ಗೆ ವಹಿವಾಟು ಮುಕ್ತಾಯಗೊಳಿಸಿತು. ಅಂದರೆ ದಿನದ ಕೊನೆಗೂ ಐಪಿಒ ದರಕ್ಕಿಂತ 74 ರೂ. ಕಡಿಮೆಯೇ ಇತ್ತು. ಹೀಗಾಗಿ ಅನೇಕ ಮಂದಿಗೆ ಎಲ್‌ ಐಸಿ ಷೇರು ಸೆಕೆಂಡರಿ ಮಾರುಕಟ್ಟೆಗೆ ಪ್ರವೇಶಿಸಿದ ದಿನ ನಷ್ಟವಾಯಿತು. ಆದ್ದರಿಂದ ಮೊದಲ ದಿನವೇ ಲಾಭ ಮಾಡಿಕೊಳ್ಳಬೇಕು. ಎಲ್‌ ಐಸಿ ಷೇರು ದರ ಕೂಡಲೇ ಜಿಗಿದು ತಕ್ಷವೇ ಲಾಭ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದವರಿಗೆ ನಿರಾಸೆ ಉಂಟಾಯಿತು.

ಮತ್ತೊಂದು ಕಡೆ ಷೇರುಪೇಟೆಯ ತಜ್ಞರು, “ನಿರಾಸೆಪಡಬೇಕಿಲ್ಲ, ಎಲ್‌ ಐಸಿ ಸುಭದ್ರ ಅಡಿಪಾಯ ಇರುವ, 5ನೇ ಅತಿ ದೊಡ್ಡ ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ. ಆದ್ದರಿಂದ ಒಳ್ಳೆಯ ದಿನಗಳು ಬರಲಿದೆ, ಷೇರು ದರ ಭವಿಷ್ಯದಲ್ಲಿ ವೃದ್ಧಿಸಿ ಲಾಭದಾಯಕವಾಗಲಿದೆ ʼʼ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.


ಹೀಗಿದ್ದರೂ, ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರಿಗೆ ಅನುಕ್ರಮವಾಗಿ 60 ರೂ. ಹಾಗೂ 45 ರೂ.ಗಳ ಡಿಸ್ಕೌಂಟ್‌ ಇತ್ತು. ಜತೆಗೆ ಮಧ್ಯಂತರ ಅವಧಿಯಲ್ಲಿ ಒಂದು ಹಂತದಲ್ಲಿ ಎಲ್‌ ಐಸಿ ಷೇರು 918ರೂ. ತನಕವೂ ದರ ಏರಿಸಿಕೊಂಡಿತ್ತು. ಇದರ ಪ್ರಯೋಜನ ಪಡೆದು ಷೇರನ್ನು ಮಾರಾಟ ಮಾಡಿ ಲಾಭ ಮಾಡಿಕೊಂಡವರೂ ಇದ್ದರು!
ಎಲ್‌ಐಸಿ ಐಪಿಒದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾರಿ ಸ್ಪಂದಿಸಿದ್ದರೂ, ವಿದೇಶಿ ಹೂಡಿಕೆದಾರರು ಅಂಥ ಆಸಕ್ತಿಯನ್ನು ವ್ಯಕ್ತಪಡಿಸಿರಲಿಲ್ಲ. ಹೀಗಿದ್ದರೂ, ಮಾರುಕಟ್ಟೆಯ ಸದ್ಯದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಎಲ್‌ಐಸಿ ಐಪಿಒ ಇಡೀ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬಿದೆ ಎಂದರೆ ಅತಿಶಯವಲ್ಲ.

10 ಲಕ್ಷಕ್ಕೂ ಹೆಚ್ಚು ಹೊಸ ಹೂಡಿಕೆದಾರರು
ಎಲ್‌ಐಸಿ ಐಪಿಒದಲ್ಲಿ ಎಲ್ಲ ಕೆಟಗರಿಯಿಂದ ಒಟ್ಟು 73 ಲಕ್ಷ ಹೂಡಿಕೆದಾರರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 10.85 ಲಕ್ಷ ಮಂದಿ ಹೊಸ ಹೂಡಿಕೆದಾರರು ಇದ್ದರು. ಈ ಪೈಕಿ 7 ಲಕ್ಷ ಮಂದಿಗೆ ಷೇರುಗಳು ಮಂಜೂರಾಗಿದೆ. ಆದ್ದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು, ಆದಾಯ ಗಳಿಸಬೇಕು, ಸಂಪತ್ತನ್ನು ವೃದ್ಧಿಸಬೇಕು ಎಂಬ ಪ್ರೇರಣೆಗೆ ಎಲ್‌ಐಸಿ ಐಪಿಒ ಪ್ರೇರಣೆ ನೀಡಿರುವುದು ಸ್ವಾಗತಾರ್ಹ. ಆದರೆ ಹೂಡಿಕೆಯ ಜತೆಗೆ ಅದಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಮುಖ್ಯ ಎಂಬ ಪಾಠವನ್ನು ಎಲ್‌ಐಸಿ ಐಪಿಒ ಕಲಿಸಿಕೊಟ್ಟಿದೆ.

ಅನಿರೀಕ್ಷಿತ ಫಲಿತಾಂಶ ಸಹಜ
ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ 20,500 ಕೋಟಿ ರೂ. ಮೆಗಾ ಗಾತ್ರದ ಐಪಿಒ ನಡೆದಿರಲಿಲ್ಲ. ಎಲ್‌ ಐಸಿಯಂತೂ ಮನೆಮಾತಾಗಿದೆ. ಆದ್ದರಿಂದ ಪಾಲಿಸಿದಾರರು, ರಿಟೇಲ್‌ ಹೂಡಿಕೆದಾರರು ಹಾಗೂ ಸ್ವತಃ ಎಲ್‌ ಐಸಿಯ ಉದ್ಯೋಗಿಗಳು ಅತ್ಯುತ್ಸಾಹದಿಂದ ಐಪಿಒದಲ್ಲಿ ಭಾಗವಹಿಸಿದ್ದರು. ಎಲ್ಲವೂ ಅಂದುಕೊಂಡಂತೆ ಇರುತ್ತಿದ್ದರೆ ಈಗ ಎಲ್‌ಐಸಿ ಷೇರು ದರ ಲಾಭದಲ್ಲಿ ಇರಬೇಕಿತ್ತು. ಆದರೆ ಷೇರು ಪೇಟೆಯಲ್ಲಿ ಅನಿರೀಕ್ಷಿತ ಫಲಿತಾಂಶಗಳನ್ನು ನಿರೀಕ್ಷಿಸಬಹುದು! ಅದಕ್ಕೆ ಸಜ್ಜಾಗಿರಬೇಕು. ಎಷ್ಟೇ ದೊಡ್ಡ ಮಾರುಕಟ್ಟೆ ಮೌಲ್ಯ, ಗ್ರಾಹಕರ ವಿಶ್ವಾಸ, ದೊಡ್ಡ ಜಾಲ ಎಲ್ಲವೂ ಇರಬಹುದು. ಆದರೆ ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯ. ಆದರೆ ಒಳ್ಳೆಯ ಬುನಾದಿ, ವ್ಯವಹಾರ ನಡೆಸುವ ಕಂಪನಿಗಳ ಷೇರು ಖರೀದಿಯಿಂದ ಲಾಭದಾಯಕವಾಗುತ್ತದೆ ಎಂಬುದೂ ನಿಜ! ಆದ್ದರಿಂದ ನಿರಾಸೆ ಅನಗತ್ಯ.

ಹೂಡಿಕೆದಾರರಿಗೆ ಆತುರ ಸಲ್ಲದು
ವಾಸ್ತವವಾಗಿ ಕೆಲ ಷೇರು ದಲ್ಲಾಳಿಗಳು ತಮ್ಮ ಗ್ರಾಹಕರಿಗೆ ಎಲ್‌ಐಸಿ ಐಪಿಒ ಬದಲಿಗೆ ಬಿಎಸ್‌ಇ, ಎನ್‌ಎಸ್‌ಇನಲ್ಲಿ ನೋಂದಣಿಯಾದ ಬಳಿಕ ದರವನ್ನು ನೀಡಿ ಖರೀದಿಸುವಂತೆ ಸಲಹೆ ನೀಡಿದ್ದರು. ಆದರೆ ಲಕ್ಷಾಂತರ ಮಂದಿ ಐಪಿಒ ಮೇಲೆ ಭರವಸೆ ಇಟ್ಟಿದ್ದರು. ಜತೆಗೆ ಹೂಡಿಕೆ ಮಾಡುವುದು ಸರಳ. ಈಗಂತೂ ಸ್ಮಾರ್ಟ್‌ ಫೋನ್‌, ಇಂಟರ್‌ ನೆಟ್‌ ಇದ್ದರೆ ಬೆರಳ ತುದಿಯಲ್ಲೇ ಹೂಡಿಕೆ ಮಾಡಬಹುದು. ಖಾತೆಯಲ್ಲಿ ಹಣ ಇದ್ದರೆ ಸಾಕು. ಈಗಲೂ ನಿರಾಸೆ ಬೇಡ. ಎಲ್‌ಐಸಿ ಷೇರುಗಳು ಕಾಲಾಂತರದಲ್ಲಿ ಉತ್ತಮ ಪ್ರತಿಫಲ ನೀಡಬಹುದು. ಆಗ ಷೇರುಗಳನ್ನು ಮಾರಾಟ ಮಾಡಬಹುದು. ಆದರೆ ಮನುಷ್ಯರಿಗೆ ಆದಷ್ಟು ಬೇಗ ಲಾಭ ಮಾಡಬೇಕು, ಅನುಭವಿಸಬೇಕು ಎಂಬ ಆತುರ ಸಹಜ. ಅದು ಕೆಲವೊಮ್ಮೆ ಸವಾಲಾಗುತ್ತದೆ. ಷೇರು ವ್ಯವಹಾರದಲ್ಲಿ ತಾಳ್ಮೆ, ಚತುರ ನಡೆ, ದೀರ್ಘಕಾಲೀನ ಶಿಸ್ತು ಅವಶ್ಯಕ. ಈ ಮಹತ್ವದ ಪಾಠವನ್ನು ಎಲ್‌ಐಸಿ ಐಪಿಒ ಲಕ್ಷಾಂತರ ಹೊಸ ಹೂಡಿಕೆದಾರರಿಗೆ ಕಲಿಸಿಕೊಟ್ಟಿದೆ!

ಹೂಡಿಕೆ ಅಭ್ಯಾಸವಾದರೆ ಕಷ್ಟವೇನಲ್ಲ
ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು ಆರಂಭಿಕ ಹಂತದಲ್ಲಿ ಆಸೆ-ನಿರಾಸೆ ತಂದರೂ, ನಿಯಮಿತವಾಗಿ ಹೂಡಿಕೆಯ ಶಿಸ್ತನ್ನು ರೂಢಿಸಿದರೆ ಬಳಿಕ ಕಷ್ಟವಾಗುವುದಿಲ್ಲ. ಸಹಜ ಸ್ವಭಾವವಾಗಿ ಒಲಿಯುತ್ತದೆ. ಜೀವನದ ಭಾಗವಾಗುತ್ತದೆ. ಆದರೆ ಗುರಿ ಸ್ಪಷ್ಟವಾಗಿರಬೇಕು. ಸ್ವಂತ ಮನೆ, ಆಸ್ತಿ ಖರೀದಿ, ಮಕ್ಕಳ ಉನ್ನತ ಶಿಕ್ಷಣ, ವಿವಾಹ, ವಿದೇಶ ಪ್ರವಾಸ, ಾರೋಗ್ಯ ವೆಚ್ಚ, ನಿವೃತ್ತಿಯ ನಂತರದ ಬದುಕಿನ ಆರ್ಥಿಕ ಭದ್ರತೆ ಇತ್ಯಾದಿ ಪ್ರಮುಖ ಗುರಿಗಳಿಗೆ ಹೂಡಿಕೆ ಅಗತ್ಯ. ಹೂಡಿಕೆ ಇಲ್ಲದೆ ಇವುಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಕಷ್ಟ.

ಹೂಡಿಕೆ ಕುರಿತ ಮಾಹಿತಿ ಸುಲಭ ಲಭ್ಯ
ಷೇರು ಮಾರುಕಟ್ಟೆ, ಮ್ಯೂಚುವಲ್‌ ಫಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳುವುದು ಈಗ ಸುಲಭ. ಇಂಟರ್‌ನೆಟ್‌ನಲ್ಲಿ ಹುಡುಕಾಡಿದರೆ ಸಾವಿರಾರು ಬ್ಲಾಗ್‌ ಗಳು, ವೆಬ್‌ ಸೈಟ್‌ಗಳು, ಯೂಟ್ಯೂಬ್‌ ನಲ್ಲಿ ಅಸಂಖ್ಯಾತ ವಿಡಿಯೊಗಳು ಹೂಡಿಕೆ ಬಗ್ಗೆ ಮಾಹಿತಿ ನೀಡುತ್ತವೆ. ಪತ್ರಿಕೆ, ಟಿವಿ ವಾಹಿನಿಗಳೂ ವಿವರ ಒದಗಿಸುತ್ತವೆ. ಎಲ್‌ ಐಸಿ ಐಪಿಒ ಬಗ್ಗೆಯೂ ಈ ರೀತಿಯಲ್ಲಿ ಜನರಿಗೆ ಮಾಧ್ಯಮಗಳ ಮೂಲಕ ಮಾಹಿತಿಗಳು ಲಭಿಸಿತ್ತು. ಆದರೆ ಎಲ್ಲರಿಗೂ, ಅಥವಾ ಯಾರೊಬ್ಬರಿಗೂ ರಾತ್ರೋರಾತ್ರಿ ಆರ್ಥಿಕ ತಜ್ಞರಾಗಲು ಸಾಧ್ಯವಾಗುವುದಿಲ್ಲ. ವರ್ಷಗಟ್ಟಲೆ ಅಧ್ಯಯನ, ಅವಲೋಕನಗಳಿಂದ, ಚಿಂತನ-ಮಂಥನ ಹಾಗೂ ಪ್ರಾಯೋಗಿಕ ಹೂಡಿಕೆಯಿಂದ ಮಾತ್ರ ಅರಿವು ಸಾಧ್ಯ. ಇದು ಎಲ್‌ಐಸಿ ಐಪಿಒ ಕಲಿಸಿದ ಮತ್ತೊಂದು ಅಮೂಲ್ಯವಾದ ಪಾಠ.

ಇದನ್ನೂ ಓದಿ: ಎಲ್‌ಐಸಿ ಷೇರು 872 ರೂ.ಗೆ ವಹಿವಾಟು ಶುರು

Continue Reading

LIC ಐಪಿಓ

LIC ಷೇರುಗಳು ದೀರ್ಘಾವಧಿಯ ಹೂಡಿಕೆಗೆ ಒಳ್ಳೆಯದೇ?

ಎಲ್‌ಐಸಿಯ ಷೇರುಗಳು ದೀರ್ಘಕಾಲೀನ ಹೂಡಿಕೆಗೆ ಲಾಭದಾಯಕವೇ ಅಥವಾ ಮಾರಾಟ ಮಾಡಬಹುದೇ ಎಂಬ ಪ್ರಶ್ನೆಗೆ, ʼವಿಸ್ತಾರ ಡಿಜಿಟಲ್‌ ನ್ಯೂಸ್‌ ʼಗೆ ತಜ್ಞ ನರಸಿಂಹ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

VISTARANEWS.COM


on

Koo

ಮುಂಬಯಿ: ಹೀಗೊಂದು ಪ್ರಶ್ನೆ ಇದೀಗ ಕಾಡುತ್ತಿದೆ. ಐಪಿಒ ಬಳಿಕ ಎಲ್‌ಐಸಿ ಷೇರು ಮಾರುಕಟ್ಟೆಯಲ್ಲಿ ದುರ್ಬಲವಾಗಿ ಮಂಗಳವಾರ ನೋಂದಣಿಯಾಗಿದೆ. ಇದರ ಪರಿಣಾಮ ರಿಟೇಲ್‌ ಹೂಡಿಕೆದಾರರು, ಎಲ್‌ ಐಸಿಯ ಉದ್ಯೋಗಿಗಳು, ಪಾಲಿಸಿದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ನಿರೀಕ್ಷಿತ ಲಾಭವನ್ನು ನೀಡಿಲ್ಲ. ಐಪಿಒದಲ್ಲಿ ಷೇರು ಖರೀದಿಸಿವರೀಗ, ಸ್ವಲ್ಪ ತಡೆದು ಖರೀದಿಸಬಹುದಿತ್ತು ಎಂದುಕೊಂಡರೆ ಅಚ್ಚರಿ ಇಲ್ಲ. ಹಾಗಾದರೆ ದೀರ್ಘಾವಧಿಗೆ ಎಲ್‌ ಐಸಿ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೇ?

ಬಿಎಸ್‌ಇನಲ್ಲಿ ಮಂಗಳವಾರ ಬೆಳಗ್ಗೆ 867ರೂ.ಗೆ ಎಲ್‌ಐಸಿ ಷೇರು ತನ್ನ ವಹಿವಾಟು ಆರಂಭಿಸಿತ್ತು. ಐಪಿಒದಲ್ಲಿ 949 ರೂ. ನಿಗದಿಯಾಗಿತ್ತು. ಹೀಗಾಗಿ 82 ರೂ. ಅಥವಾ ಶೇ.8.67ರ ನಷ್ಟದೊಂದಿಗೆ ವಹಿವಾಟು ಆರಂಭವಾಯಿತು. ಐಪಿಒದಲ್ಲಿ ಭಾಗವಹಿಸಿದ್ದ ಎಲ್ಲ ವರ್ಗದ ಹೂಡಿಕೆದಾರರಿಗೆ ನಷ್ಟವಾಯಿತು. ಆದರೆ ನಷ್ಟದ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಮುಖ್ಯವಾಗಿ ಸಾಂಸ್ಥಿಕ ಹೂಡಿಕೆದಾರರಿಗೆ ಹೆಚ್ಚು ನಷ್ಟವಾಗಿದೆ. ಪಾಲಿಸಿದಾರರಿಗೆ ಪ್ರತಿ ಷೇರಿನಲ್ಲಿ 60 ರೂ. ಹಾಗೂ ರಿಟೇಲ್‌ ಷೇರುದಾರರಿಗೆ ಪ್ರತಿ ಷೇರಿಗೆ 45 ರೂ. ಡಿಸ್ಕೌಂಟ್‌ ನೀಡಿದ್ದರಿಂದ ಹಾಗೂ ಮಂಗಳವಾರ ಷೇರು ಮಾರುಕಟ್ಟೆ ಸೂಚ್ಯಂಕ ಚೇತರಿಸಿದ್ದರಿಂದ ನಷ್ಟದ ಪ್ರಮಾಣ ಕಡಿಮೆಯಾಯಿತು.

ಡಿವಿಡೆಂಡ್‌, ಮೌಲ್ಯ ಗಳಿಕೆ ನಿರೀಕ್ಷೆ
“ಕೋವಿಡ್‌-19 ಬಿಕ್ಕಟ್ಟು ಕಾಣಿಸಿದ ಆರಂಭದ ದಿನಗಳಲ್ಲಿ ವಿಮೆ ಕಂಪನಿಗಳ ಷೇರುಗಳು ಜಿಗಿದಿತ್ತು. ಏಕೆಂದರೆ ಆಗ ವಿಮೆ ಖರೀದಿಯ ಭರಾಟೆಯೂ ಇತ್ತು. ಆದರೆ ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ತಗ್ಗಿದೆ. ಜತೆಗೆ ವಿಮೆ ಕಂಪನಿಗಳ ಷೇರು ದರಗಳೂ ಇಳಿದಿವೆ ” ಎಂದು “ವಿಸ್ತಾರ ಡಿಜಿಟಲ್‌ ನ್ಯೂಸ್‌ʼಗೆ ಬೆಂಗಳೂರಿನ ಷೇರು ಮಾರುಕಟ್ಟೆ ತಜ್ಞ ನರಸಿಂಹ ಕುಮಾರ್‌ ಎಂ ತಿಳಿಸಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕ ವಲಯದ ಕಂಪನಿಗಳು, ಬ್ಯಾಂಕ್‌ ಗಳು ಷೇರುದಾರರಿಗೆ ಉತ್ತಮ ಮೊತ್ತದ ಡಿವಿಡೆಂಡ್‌ ನೀಡುತ್ತವೆ. ಈ ದೃಷ್ಟಿಯಿಂದ ಎಲ್‌ ಐಸಿ ಷೇರುಗಳು ಆಗಬಹುದು. ಆದರೆ ಅಲ್ಪಕಾಲೀನವಾಗಿ ಲಾಭ ಮಾಡಬೇಕು ಎಂದರೆ ಎಲ್‌ ಐಸಿ ಷೇರುಗಳು ಸೂಕ್ತವಲ್ಲ. ಹೀಗಿದ್ದರೂ, ಉತ್ತಮ ಬುನಾದಿ ಹೊಂದಿರುವ ಸಂಸ್ಥೆಯಾದ್ದರಿಂದ ಷೇರುಗಳಿಗೆ ಭವಿಷ್ಯದ ದಿನಗಳಲ್ಲಿ ಒಳ್ಳೆಯ ಮೌಲ್ಯ ಸಿಗಬಹುದು ಎನ್ನುತ್ತಾರೆ ಅವರು.

ಖಾಸಗಿ ವಲಯದ ವಿಮೆ ಕಂಪನಿಗಳ ಸ್ಪರ್ಧೆಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಎಲ್‌ ಐಸಿ ಈ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎಂಬುದೂ ಷೇರುಗಳ ದರದ ಮೇಲೆ ಪ್ರಭಾವ ಬೀರಲಿದೆ.
ವಿಮೆ ಕಂಪನಿಗಳ ಷೇರುಗಳು ಆಟೊಮೊಬೈಲ್‌, ಎಫ್‌ಎಂಸಿಜಿ ಇತ್ಯಾದಿ ಕಂಪನಿಗಳ ಷೇರುಗಳಂತೆ ಅಲ್ಲ. ವಿಮೆ ಕಂಪನಿಯ ಪ್ರೀಮಿಯಂ ಸಂಗ್ರಹ ದೊಡ್ಡ ಮೊತ್ತದಲ್ಲಿ ಇರಬಹುದು. ಉದಾಹರಣೆಗೆ 2021-22 ರ ಮೊದಲ 6 ತಿಂಗಳುಗಳಲ್ಲಿ ಎಲ್‌ಐಸಿ 1,437 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಎಲ್‌ಐಸಿ ಟಾಪ್‌ 5 ಷೇರು ಮಾರುಕಟ್ಟೆ ಬಂಡವಾಳದ ಕಂಪನಿಗಳಲ್ಲಿ ಇದೆ. ಆದರೆ ಟಾಪ್‌ 5ನಲ್ಲಿ ಇರುವ ಇನ್ಫೋಸಿಸ್‌ 2021ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ 5,809 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಷೇರುಗಳ ದರ ಏರಿಕೆಯಲ್ಲಿ ಕಂಪನಿಯ ನಿವ್ವಳ ಲಾಭ ನಿರ್ಣಾಯಕವಾಗಿರುತ್ತದೆ ಎನ್ನುತ್ತಾರೆ ತಜ್ಞರು.

ಷೇರುದಾರರು ಏನು ಮಾಡಬಹುದು?

  • ಐಪಿಒ ದರವಾದ 949 ರೂ.ಕ್ಕಿಂತಲೂ ಇಳಿಕೆಯಾಗಿದೆ ಎಂದು ಆತಂಕಪಡಬೇಕಿಲ್ಲ.
  • ಎಲ್‌ಐಸಿ ಬೃಹತ್‌ ಮಾರುಕಟ್ಟೆ ಮೌಲ್ಯ ಇರುವ ಸಂಸ್ಥೆಯಾದ್ದರಿಂದ ಕುಸಿತದ ಪ್ರಮಾಣ ಸೀಮಿತವಾಗಿರುತ್ತದೆ.
  • ಪ್ರತಿ ವರ್ಷ ಡಿವಿಡೆಂಡ್‌ ಆದಾಯ ಲಭ್ಯ
  • ಮಾರುಕಟ್ಟೆಯ ಪರಿಸ್ಥಿತಿ ಗಮನಿಸಿಕೊಂಡು ಷೇರು ದರ ಚೇತರಿಸಿದಾಗ ಮಾರಾಟ ಮಾಡಬಹುದು.

ಇದನ್ನೂ ಓದಿ: ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ

Continue Reading

LIC ಐಪಿಓ

ಎಲ್‌ಐಸಿ ಷೇರುದಾರರಿಗೆ 42,500 ಕೋಟಿ ರೂ. ನಷ್ಟ

ಷೇರು ಪೇಟೆಯಲ್ಲಿ ಎಲ್‌ಐಸಿ ಷೇರು ಮಂಗಳವಾರ ನೋಂದಣಿಯಾಗಿದ್ದು, ಐಪಿಒ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಷೇರುದಾರರಿಗೆ ನಷ್ಟವಾಗಿದ್ದರೂ, 5 ನೇ ಮೌಲ್ಯಯುತ ಕಂಪನಿ ಆಗಿದೆ.

VISTARANEWS.COM


on

Koo

ಮುಂಬಯಿ: ಎಲ್‌ಐಸಿ ಷೇರುಗಳಲ್ಲಿ ಮಂಗಳವಾರ ಬೆಳಗ್ಗೆ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರಿಗೆ 42,500 ಕೋಟಿ ರೂ. ನಷ್ಟ ಸಂಭವಿಸಿತು.

ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗಳಿಂದ 5.52 ಲಕ್ಷ ಕೋಟಿ ರೂ.ಗೆ ಕುಸಿಯಿತು.
ಐಪಿಒ ದರದ ಪ್ರಕಾರ ಎಲ್‌ಐಸಿಯ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂ.ಗಳಾಗಿದೆ. ಇದು ಹಿಂದುಸ್ತಾನ್‌ ಯುನಿಲಿವರ್‌ (5.33 ಲಕ್ಷ ಕೋಟಿ ರೂ.) ಮತ್ತು ಐಸಿಐಸಿಐ ಬ್ಯಾಂಕ್‌ (4.85ಲಕ್ಷ ಕೋಟಿ ರೂ.)ಗಿಂತ ಹೆಚ್ಚು. ಇನ್ಫೋಸಿಸ್‌ಗಿಂತ (6.36 ಲಕ್ಷ ಕೋಟಿ ರೂ.) ಕಡಿಮೆ. ಹೀಗಿದ್ದರೂ, ಕೆಲವು ನಿಮಿಷಗಳಲ್ಲಿ ಎಲ್‌ ಐಸಿಯ ಷೇರು ಮಾರುಕಟ್ಟೆ ಮೌಲ್ಯ 5.52 ಲಕ್ಷ ಕೋಟಿ ರೂ.ಗೆ ಇಳಿಯಿತು. ಹೀಗಿದ್ದರೂ, ಮಾರುಕಟ್ಟೆ ಮೌಲ್ಯದಲ್ಲಿ ಟಾಪ್‌ 5 ಭಾರತೀಯ ಕಂಪನಿಗಳಲ್ಲಿ ಎಲ್‌ಐಸಿ ಕೂಡ ಒಂದಾಗಿದೆ.

ಷೇರು ಮಾರುಕಟ್ಟೆ ಮೌಲ್ಯದಲ್ಲಿ ಟಾಪ್‌ 5

ರಿಲಯನ್ಸ್‌ ಇಂಡಸ್ಟ್ರೀಸ್‌16.66 ಲಕ್ಷ ಕೋಟಿ ರೂ.
ಟಿಸಿಎಸ್‌ 12.34 ಲಕ್ಷ ಕೋಟಿ ರೂ.
ಎಚ್‌ಡಿಎಫ್‌ಸಿ ಬ್ಯಾಂಕ್‌7.21 ಲಕ್ಷ ಕೋಟಿ ರೂ.
ಇನ್ಫೋಸಿಸ್‌ 6.36 ಲಕ್ಷ ಕೋಟಿ ರೂ.
ಎಲ್‌ಐಸಿ 5.52 ಲಕ್ಷ ಕೋಟಿ ರೂ.

ಇದನ್ನೂ ಓದಿ: ಎಲ್‌ಐಸಿ ಷೇರು 867 ರೂ.ಗೆ ವಹಿವಾಟು ಶುರು

Continue Reading
Advertisement
Kannada New Movie Gumti new post
ಸ್ಯಾಂಡಲ್ ವುಡ್1 min ago

Kannada New Movie: ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಇದೀಗ `ಗುಂಮ್ಟಿ’ ಅವತಾರದಲ್ಲಿ!

Prajwal Revanna Case Will SIT team go abroad for arrest Prajwal
ಕ್ರೈಂ10 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Robert Vadra
ದೇಶ10 mins ago

Robert Vadra: “ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ…ಕೇಜ್ರಿವಾಲ್‌ ಅವಕಾಶವಾದಿ”-ರಾಬರ್ಟ್‌ ವಾದ್ರಾ ಅಚ್ಚರಿಯ ಹೇಳಿಕೆ

Gautam Gambhir
ಕ್ರೀಡೆ24 mins ago

Gautam Gambhir : ಟ್ರೋಫಿ ಗೆದ್ದ ಸಂಭ್ರಮ; ಗಂಭೀರ್​ಗೆ ಖಾಲಿ ಚೆಕ್​ ಕೊಟ್ಟರೇ ಶಾರುಖ್​ ಖಾನ್​ ?

Netraa Jadhav Out From Serial perform Yakshagana on the special occasion
ಕಿರುತೆರೆ38 mins ago

Netraa Jadhav: ಸೀರಿಯಲ್‌ನಿಂದ ಔಟ್‌ ಆಗುತ್ತಿದ್ದಂತೆ ʻಯಕ್ಷಗಾನʼದಲ್ಲಿ ಶಾರ್ವರಿ ಶೈನ್‌!

Pune Porsche accident
ದೇಶ57 mins ago

Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್‌

Chris Gayle
ಕ್ರಿಕೆಟ್57 mins ago

Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

Comedy Khiladigalu anchor anushree and Jaggesh Remembers Dogs
ಕಿರುತೆರೆ1 hour ago

Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!

kalaburagi illegal relationship
ಕ್ರೈಂ1 hour ago

Illegal Relationship:`ಅತ್ತಿಗೆಯಿಂದ ದೂರ ಇರುʼ ಎಂದ ಮೈದುನನ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

IPL 2024
ಕ್ರೀಡೆ1 hour ago

IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ18 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು18 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌