Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ - Vistara News

ವಾಣಿಜ್ಯ

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

Stock Market: ಭಾರತೀಯ ಷೇರು ಮಾರುಕಟ್ಟೆ ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ. ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ.

VISTARANEWS.COM


on

Stock Market
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market) ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ಇಂದು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ (Sensex) 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ (Nifty) ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ.

ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್‌ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಗರಿಷ್ಠ ಲಾಭ ಗಳಿಸಿದ್ದು, 1,791.90 ರೂ.ಗೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್‌ ಮತ್ತು ಎಂ & ಎಂ ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್‌ ನಷ್ಟ ಅನುಭವಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 52 ವಾರಗಳ ಗರಿಷ್ಠ ಬೆಲೆ

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಸುಮಾರು 52 ವಾರಗಳ ಬಳಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಇಂದು 60ಕ್ಕೂ ಹೆಚ್ಚು ರೂ. ಅಥವಾ ಶೇ. 3ಕ್ಕೂ ಅಧಿಕ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ʼʼಇಂದು ಮಾರುಕಟ್ಟೆ ಚಟುವಟಿಕೆಯ ಕೇಂದ್ರಬಿಂದು ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದ್ದು, ತನ್ನ ಮೇಲ್ಮುಖ ಚಲನೆಯನ್ನು ಮುಂದುವರಿಸಿದೆ. ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಮರ್ಥ್ಯ ಹೊಂದಿದೆʼʼ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಬುಧವಾರ ಬೆಳಿಗ್ಗೆ ಧನಾತ್ಮಕ ಪ್ರದರ್ಶನ ತೋರಿದವು.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. ಐಟಿ ಕಂಪನಿಗಳ ಲಾಭ ಮತ್ತು ಯುಎಸ್ ಫೆಡರಲ್ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬಡ್ಡಿದರ ಕಡಿತದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು ಈ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.

ಹಿಂದಿನ ಸೆಷನ್‌ನಲ್ಲಿ ಶೇ. 2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿದ್ದವು. ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ಕಂಡವು. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕ್ರಮವಾಗಿ ಶೇ. 0.4 ಮತ್ತು ಶೇ. 0.2 ಹೆಚ್ಚಳ ಕಂಡವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

ಆರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಾಗ ಅವರ ಕಪಾಟಿನಲ್ಲಿದ್ದ ವಸ್ತುಗಳನ್ನು ತೆಗೆಯಲು ಕೇವಲ ಅರ್ಧ ಗಂಟೆ ಸಾಕಾಯಿತು. ಏಕೆಂದರೆ ಅವರ ಬಳಿ ಕೇವಲ 8-10 ಸೀರೆಗಳು ಮಾತ್ರ ಇದ್ದವು. ನನ್ನ ಅಜ್ಜಿ 32 ವರ್ಷಗಳ ಹಿಂದೆ ನಿಧನರಾದಾಗ ಅವರ ಬಳಿ ಕೇವಲ ನಾಲ್ಕು ಸೀರೆಗಳು ಇದ್ದವು. ಇವೆಲ್ಲ ನನ್ನ ಮೇಲೆ ಪರಿಣಾಮ ಬೀರಿವೆ ಎಂದು ಸುಧಾ ಮೂರ್ತಿ (Sudha Murty) ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

VISTARANEWS.COM


on

By

Sudha Murty
Koo

ತಮ್ಮ ಸರಳತೆಯಿಂದಲೇ ಸುದ್ದಿಯಲ್ಲಿರುವ ರಾಜ್ಯಸಭೆಯ ನೂತನ (Rajya Sabha) ಸದಸ್ಯೆ (MP), ಲೇಖಕಿ, ಇನ್ಫೋಸಿಸ್‌ನ ಸಂಸ್ಥಾಪಕ (Infosys chairman) ನಾರಾಯಣ ಮೂರ್ತಿ (Narayana Murthy) ಅವರ ಪತ್ನಿ ಸುಧಾ ಮೂರ್ತಿ (Sudha Murty) ಅವರು ಕಳೆದ 30 ವರ್ಷಗಳಿಂದ ಒಂದೇ ಒಂದು ಸೀರೆಯನ್ನೂ ಖರೀದಿ ಮಾಡಿಲ್ಲವಂತೆ! ಇತ್ತೀಚಿಗೆ ಅವರು ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಕಾಶಿಗೆ ಪ್ರವಾಸ ಮಾಡಿರುವುದು ಎಂಬುದಾಗಿ ಅವರು ತಿಳಿಸಿದ್ದಾರೆ! ಅಪಾರ ಸಂಪತ್ತು ಇದ್ದರೂ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸರಳವಾದ ಉಡುಗೆ ತೊಡುಗೆಗಳಿಂದ, ಸಾಮಾನ್ಯ ಜೀವನ ಶೈಲಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ದಿ ವಾಯ್ಸ್ ಆಫ್ ಫ್ಯಾಶನ್‌ಗೆ ನೀಡಿದ ಸಂದರ್ಶನದಲ್ಲಿ ಸುಧಾ ಮೂರ್ತಿ ಅವರು ಈ ವಿಚಾರವನ್ನು ಹೀಗೆ ಹಂಚಿಕೊಂಡಿದ್ದಾರೆ: ಕಾಶಿಗೆ ಹೋದಾಗ ನೀವು ತುಂಬಾ ಇಷ್ಟಪಡುವ ಯಾವುದಾದರೂ ಒಂದನ್ನು ತ್ಯಜಿಸಬೇಕು ಎಂದು ಹೇಳಲಾಗುತ್ತದೆ. ನಾನು ಶಾಪಿಂಗ್ ಮಾಡಲು ಇಷ್ಟಪಡುತ್ತೇನೆ. ಆದ್ದರಿಂದ ಗಂಗೆಗೆ ನಾನು ಭರವಸೆ ನೀಡಿದೆ. ಈ ಜೀವಿತಾವಧಿಯಲ್ಲಿ ಶಾಪಿಂಗ್ ಅನ್ನು ತ್ಯಜಿಸುತ್ತೇನೆ!

ಪೋಷಕರು ಮತ್ತು ಅಜ್ಜಿಯರು ಕನಿಷ್ಠ ಆಸ್ತಿಯೊಂದಿಗೆ ಮಿತವ್ಯಯದ ಜೀವನವನ್ನು ನಡೆಸುತ್ತಿದ್ದರು. ಅವರ ಬದ್ಧತೆಯು ನನ್ನ ಜೀವನದ ಮೇಲೆ ಆಳವಾಗಿ ಪರಿಣಾಮ ಬೀರಿದೆ ಎಂದು 73 ವರ್ಷದ ಸುಧಾ ಮೂರ್ತಿ ಅವರು ಹೇಳಿದರು.

ಆರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಾಗ ಅವರ ಕಪಾಟಿನಲ್ಲಿದ್ದ ವಸ್ತುಗಳನ್ನು ನೀಡಲು ಕೇವಲ ಅರ್ಧ ಗಂಟೆ ತೆಗೆದುಕೊಂಡಿತು. ಏಕೆಂದರೆ ಅವರು ಅದರಲ್ಲಿ ಕೇವಲ 8- 10 ಸೀರೆಗಳನ್ನು ಮಾತ್ರ ಹೊಂದಿದ್ದರು. ನನ್ನ ಅಜ್ಜಿ 32 ವರ್ಷಗಳ ಹಿಂದೆ ನಿಧನರಾದಾಗ, ಅವರ ಬಳಿ ಕೇವಲ ನಾಲ್ಕು ಸೀರೆಗಳು ಇದ್ದವು ಎಂದು ಸುಧಾ ಮೂರ್ತಿ ಅವರು ನೆನಪಿಸಿಕೊಂಡಿದ್ದಾರೆ.


ಎರಡು ದಶಕಗಳಿಂದ ಸುಧಾ ಮೂರ್ತಿ ಅವರು ತಮ್ಮ ಸಹೋದರಿಯರು, ಆಪ್ತ ಸ್ನೇಹಿತರು ಮತ್ತು ಸಾಂದರ್ಭಿಕವಾಗಿ ಅವರು ಕೆಲಸ ಮಾಡುವ ಎನ್‌ಜಿಒಗಳು ಉಡುಗೊರೆಯಾಗಿ ನೀಡಿದ ಸೀರೆಗಳನ್ನು ಧರಿಸುತ್ತಿದ್ದಾರೆ. ಅವರ ಬಳಿ ಇರುವ ಅತ್ಯಮೂಲ್ಯವಾದ ಅಸ್ತಿ ಎಂದರೆ ಇನ್ಫೋಸಿಸ್ ಫೌಂಡೇಶನ್‌ನೊಂದಿಗಿನ ತಮ್ಮ ಕೆಲಸದ ಮೂಲಕ ತಮ್ಮ ಜೀವನವನ್ನು ಪರಿವರ್ತಿಸಲು ಸಹಾಯ ಮಾಡಿದ ಮಹಿಳೆಯರ ಗುಂಪಿನಿಂದ ನೀಡಿರುವ ಎರಡು ಕಸೂತಿ ಸೀರೆಗಳಾಗಿವೆ ಎಂದು ಸುಧಾ ಮೂರ್ತಿ ಅವರು ಹೇಳಿದರು.

ಸಹೋದರಿಯರು ಆರಂಭದಲ್ಲಿ ಪ್ರತಿ ವರ್ಷ ಒಂದೆರಡು ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ನನ್ನ ಸಂಗ್ರಹದಲ್ಲಿ ಬೆಳೆಯುತ್ತಿರುವ ಸೀರೆಗಳನ್ನು ನಿಭಾಯಿಸುವುದು ಕಷ್ಟ ಎಂದು ಅನಿಸಿದ ಮೇಲೆ ಅವರಿಗೆ ಈ ಉಡುಗೊರೆ ಬೇಡ, ನನ್ನ ಬಳಿ ಈಗಾಗಲೇ ತುಂಬಾ ಇದೆ ಎಂದು ಹೇಳಲು ಪ್ರಾರಂಭಿಸಿದ್ದಾಗಿ ಸುಧಾ ಮೂರ್ತಿ ತಿಳಿಸಿದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಈಗ ಕನ್ನಡ ಮೇಷ್ಟ್ರು; ಶಾಲೆಗೆ ಭೇಟಿ ನೀಡಿ ವ್ಯಾಕರಣ ಪಾಠ ಮಾಡಿದ ಸಿಎಂ!

ನಾನು ಈಗ ಐವತ್ತು ವರ್ಷಗಳಿಂದ ಸೀರೆಗಳನ್ನು ಧರಿಸುತ್ತಿದ್ದೇನೆ. ಅವುಗಳನ್ನು ಧರಿಸಿದ ಬಳಿಕ ಒಗೆದು, ಇಸ್ತ್ರಿ ಮಾಡಿ ಇಡುತ್ತೇನೆ. ನನ್ನ ಸೀರೆಗಳನ್ನು ನೆಲವನ್ನು ಗುಡಿಸುವಂತೆ ನಾನು ಧರಿಸುವುದಿಲ್ಲ. ಆದ್ದರಿಂದ ಅದು ಕೊಳಕಾಗುವುದಿಲ್ಲ ಮತ್ತು ದೀರ್ಘ ಬಾಳಿಕೆ ಬರುತ್ತದೆ ಎಂದು ಅವರು ಹೇಳಿದರು.

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾ ಮೂರ್ತಿ ಅವರು ರಾಜ್ಯಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ, ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮದ ಕುರಿತು ಮಾತನಾಡಿದ್ದರು. ಅಲ್ಲದೇ ಅವರು 57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸುವಂತೆ ಸಲಹೆ ನೀಡಿದ್ದರು.

Continue Reading

ವಾಣಿಜ್ಯ

Stock Market: 1 ಲಕ್ಷ ಪಾಯಿಂಟ್‌ ಮೈಲಿಗಲ್ಲಿನತ್ತ ಸೆನ್ಸೆಕ್ಸ್‌; ಅಂಕಿ-ಅಂಶ ಹೇಳೋದೇನು?

Stock Market: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು ಸದ್ದು ಜೋರಾಗಿ ಕೇಳಿ ಬರುತ್ತಿದೆ. ಸೆನ್ಸೆಕ್ಸ್‌ ಐತಿಹಾಸಿಕ 1 ಲಕ್ಷದ ಗಡಿಯನ್ನು ಯಾವಾಗ ಮುಟ್ಟಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ಬಿಎಸ್ಇ ಸೆನ್ಸೆಕ್ಸ್ 7 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 70,000ದಿಂದ 80,000ಕ್ಕೆ ಜಿಗಿದಿದೆ. ಅಂದರೆ ಸುಮಾರು 10 ಸಾವಿರ ಪಾಯಿಂಟ್‌ ವೃದ್ಧಿಸಿದೆ. ಜತೆಗೆ ಸೆನ್ಸೆಕ್ಸ್‌ ಕಳೆದ 45 ವರ್ಷಗಳಲ್ಲಿ ಶೇ. 15.9ರಷ್ಟು ಸಮಗ್ರ ವಾರ್ಷಿಕ ಅಭಿವೃದ್ಧಿ ಪ್ರಮಾಣ ಹೊಂದಿದೆ. ಹೀಗಾಗಿ 2025ರ ಡಿಸೆಂಬರ್ ವೇಳೆಗೆ 1 ಲಕ್ಷದ ಮೈಲಿಗಲ್ಲನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ.

VISTARANEWS.COM


on

Stock Market
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market)ಯಲ್ಲಿ ಗೂಳಿಯ ಗುಟುರು ಸದ್ದು ಜೋರಾಗಿ ಕೇಳಿ ಬರುತ್ತಿದೆ. ಗುರುವಾರ (ಜುಲೈ 4) ಸೆನ್ಸೆಕ್ಸ್ (Sensex) ನೂತನ ದಾಖಲೆ ಬರೆದು 80 ಸಾವಿರ ಪಾಯಿಂಟ್‌ ದಾಟಿ ಸಾರ್ವಕಾಲಿಕ 80,323.30 ಗಡಿ ತಲುಪಿತ್ತು. ಹೀಗಾಗಿ ಈಗ ಸೆನ್ಸೆಕ್ಸ್‌ ಐತಿಹಾಸಿಕ 1 ಲಕ್ಷದ ಗಡಿಯನ್ನು ಯಾವಾಗ ಮುಟ್ಟಲಿದೆ ಎನ್ನುವ ಚರ್ಚೆ ಆರಂಭವಾಗಿದೆ.

ಬಿಎಸ್ಇ ಸೆನ್ಸೆಕ್ಸ್ 7 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 70,000ದಿಂದ 80,000ಕ್ಕೆ ಜಿಗಿದಿದೆ. ಅಂದರೆ ಸುಮಾರು 10 ಸಾವಿರ ಪಾಯಿಂಟ್‌ ವೃದ್ಧಿಸಿದೆ. ಜತೆಗೆ ಸೆನ್ಸೆಕ್ಸ್‌ ಕಳೆದ 45 ವರ್ಷಗಳಲ್ಲಿ ಶೇ. 15.9ರಷ್ಟು ಸಮಗ್ರ ವಾರ್ಷಿಕ ಅಭಿವೃದ್ಧಿ ಪ್ರಮಾಣ ಹೊಂದಿದೆ. ಹೀಗಾಗಿ 2025ರ ಡಿಸೆಂಬರ್ ವೇಳೆಗೆ 1 ಲಕ್ಷದ ಮೈಲಿಗಲ್ಲನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ.

”1980ರ ದಶಕದಲ್ಲಿ ಪ್ರಾರಂಭವಾದ ಸೆನ್ಸೆಕ್ಸ್‌ನ ಮೂಲ ಮೌಲ್ಯ 100 ಅನ್ನು ಪರಿಗಣಿಸಿ ಶೇ. 15.9ರ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಲೆಕ್ಕ ಹಾಕುವುದಾದರೆ 45 ವರ್ಷಗಳಲ್ಲಿ 800 ಪಟ್ಟು ಹೆಚ್ಚಾಗಿದೆ. ಸೆನ್ಸೆಕ್ಸ್ ಇದೇ ರೀತಿ ವಾರ್ಷಿಕ ಶೇ. 15.9ರಷ್ಟು ಬೆಳವಣಿಗೆಯನ್ನು ಮುಂದುವರಿಸಿದರೆ, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ನಾವು 1 ಲಕ್ಷದ ಹೆಗ್ಗುರುತು ತಲುಪಲಿದ್ದೇವೆʼʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೆನ್ಸೆಕ್ಸ್‌ ಪ್ರತಿ 5 ವರ್ಷಕ್ಕೆ ದ್ವಿಗುಣ ಆಗುತ್ತ ಇರುವ ಲೆಕ್ಕಾಚಾರ ಪರಿಗಣಿಸಿದರೆ 2029ರ ವೇಳೆಗೆ ಸೂಚ್ಯಂಕ ಮತ್ತೊಂದು ಸಾರ್ವಕಾಲಿಕ ಮಟ್ಟವಾದ 1.50 ಲಕ್ಷ ಅಂಕಗಳನ್ನು ಮುಟ್ಟಲಿದೆ ಎಂದೂ ಅವರು ತಿಳಿಸಿದ್ದಾರೆ.

1996ರಿಂದ ಸೆನ್ಸೆಕ್ಸ್‌ನಲ್ಲಿ 6 ಬಾರಿ ಮಾತ್ರ ನಕಾರಾತ್ಮಕ ಪರಿಣಾಮ ಕಂಡು ಬಂದಿದೆ. ಅದರಲ್ಲಿಯೂ ಕಳೆದ 5 ವರ್ಷಗಳಲ್ಲಿ ಸುಮಾರು 40,000 ಅಂಕಗಳ ಮೂಲಕ ಮೌಲ್ಯವನ್ನು ದ್ವಿಗುಣಗೊಳಿಸಿದೆ. ದಲಾಲ್ ಸ್ಟ್ರೀಟ್‌ನ ಅನುಭವಿ ಮತ್ತು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಸಹ-ಸಂಸ್ಥಾಪಕ ರಾಮ್‌ದೇವ್‌ ಅಗರ್ವಾಲ್ ಈ ಬಗ್ಗೆ ಮಾತನಾಡಿ, ”ಕಳೆದ ಮೂರು ದಶಕಗಳಲ್ಲಿ ಭಾರತದ ಕಾರ್ಪೊರೇಟ್ ವಲಯದ ಲಾಭವು ಸುಮಾರು ಶೇ. 17ರಷ್ಟು ಹೆಚ್ಚಾಗಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2029ರ ಸುಮಾರಿಗೆ ಸೆನ್ಸೆಕ್ಸ್ ಮಟ್ಟವು 1,50,000 ಗಡಿ ತಲುಪಲಿದೆʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ 10 ವರ್ಷಗಳಲ್ಲಿ ಸೂಚ್ಯಂಕವು ಇದೇ ವೇಗದಲ್ಲಿ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ಹೂಡಿಕೆದಾರ ಮಾರ್ಕ್ ಮೊಬಿಯಸ್ ಅಭಿಪ್ರಾಯಪಟ್ಟಿದ್ದಾರೆ. “ನಾವು ಇನ್ನೂ ಮೇಲ್ಮುಖ ಹಾದಿಯಲ್ಲಿದ್ದೇವೆ. 1 ಲಕ್ಷ ಅಂಕದತ್ತ ಸಾಗುತ್ತಿದ್ದೇವೆ. ಶೀಘ್ರದಲ್ಲೇ ಈ ಮೈಲಿಗಲ್ಲು ದಾಟುತ್ತೇವೆʼʼ ಎಂದಿದ್ದಾರೆ.

ದಿನಾಂತ್ಯಕ್ಕೆ ಕುಸಿತ

ಸೆನ್ಸೆಕ್ಸ್‌ ಗುರುವಾರ ಆರಂಭದಲ್ಲಿ 80,323.30 ಅಂಕಗಳ ಐತಿಹಾಸಿಕ ಮಟ್ಟ ತಲುಪಿ, ಬಳಿಕ 79,986 ಅಂಕಕ್ಕೆ ದಿನದ ವಹಿವಾಟು ಅಂತ್ಯಗೊಳಿಸಿತ್ತು. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾದ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟವಾದ 24,286ಕ್ಕೆ ತಲುಪಿತ್ತು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

Continue Reading

ಬೆಂಗಳೂರು

HDFC Life: ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್

HDFC Life: ಭಾರತದಲ್ಲಿನ ಪ್ರಮುಖ ಜೀವ ವಿಮಾ ಸಂಸ್ಥೆಯಾಗಿರುವ ಎಚ್‌ಡಿಎಫ್‌ಸಿ ಲೈಫ್, ಗ್ರೇಟ್ ಪ್ಲೇಸ್ ಟು ವರ್ಕ್‌ ಸಂಸ್ಥೆಯಿಂದ 2024ರಲ್ಲಿ ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ ಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಕಂಪನಿಯು ಒಟ್ಟಾರೆಯಾಗಿ 11ನೇ ಸ್ಥಾನವನ್ನು ಪಡೆದಿದೆ ಮತ್ತು ‘ಜೀವ ವಿಮೆಯಲ್ಲಿ ಉದ್ಯಮದಲ್ಲಿಯೇ ಅತ್ಯುತ್ತಮ ಕಂಪನಿ’ ಎಂದು ಗೌರವಿಸಲ್ಪಟ್ಟಿದೆ.

VISTARANEWS.COM


on

HDFC Life certified as one of Indias Best Companies to Work For in 2024
Koo

ಬೆಂಗಳೂರು: ಭಾರತದಲ್ಲಿನ ಪ್ರಮುಖ ಜೀವ ವಿಮಾ ಸಂಸ್ಥೆಯಾಗಿರುವ ಎಚ್‌ಡಿಎಫ್‌ಸಿ ಲೈಫ್ (HDFC Life), ಗ್ರೇಟ್ ಪ್ಲೇಸ್ ಟು ವರ್ಕ್‌ ಸಂಸ್ಥೆಯಿಂದ 2024ರಲ್ಲಿ ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ ಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಕಂಪನಿಯು ಒಟ್ಟಾರೆಯಾಗಿ 11ನೇ ಸ್ಥಾನವನ್ನು ಪಡೆದಿದೆ ಮತ್ತು ‘ಜೀವ ವಿಮೆಯಲ್ಲಿ ಉದ್ಯಮದಲ್ಲಿಯೇ ಅತ್ಯುತ್ತಮ ಕಂಪನಿ’ ಎಂದು ಗೌರವಿಸಲ್ಪಟ್ಟಿದೆ. ಕಂಪನಿಯು ದಶಕದ ಕಾಲ ಮನ್ನಣೆಯನ್ನು ಪಡೆದಿದ್ದು, ಪ್ರತಿಷ್ಠಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.

ಭಾರತದ ಮೊದಲ ಖಾಸಗಿ ಜೀವ ವಿಮಾದಾರರಲ್ಲಿ ಒಬ್ಬರಾದ ಎಚ್‌ಡಿಎಫ್‌ಸಿ ಲೈಫ್ 32,000 ಉದ್ಯೋಗಿಗಳನ್ನು ಹೊಂದಿದೆ. ಉತ್ಕೃಷ್ಟತೆ, ಜನರ ತೊಡಗಿಸಿಕೊಳ್ಳುವಿಕೆ, ಸಮಗ್ರತೆ, ಗ್ರಾಹಕ ಕೇಂದ್ರಿತತೆ ಮತ್ತು ಸಹಯೋಗದ ಮೌಲ್ಯಗಳ ಮೇಲೆ ಸ್ಥಾಪಿಸಲಾಗಿರುವ ಈ ಸಂಸ್ಥೆಯು ಸಾಂಸ್ಥಿಕ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ.

ಇದನ್ನೂ ಓದಿ: Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

ಈ ಪ್ರಮಾಣೀಕರಣವು ಕಂಪನಿಯ ಮೌಲ್ಯಾಧರಿತ ಸಂಸ್ಕೃತಿಯನ್ನು ಮತ್ತು ಎಲ್ಲಾ ಪಾಲುದಾರರಿಗೆ ಮೌಲ್ಯವನ್ನು ತಲುಪಿಸುವ ಕಂಪನಿಯ ಬದ್ಧತೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Edu Guide: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: IDFC FIRST ಬ್ಯಾಂಕ್‌ನಿಂದ 2 ಲಕ್ಷ ರೂ. ಸ್ಕಾಲರ್‌ಶಿಪ್‌; ಹೀಗೆ ಅಪ್ಲೈ ಮಾಡಿ

ಈ ಕುರಿತು ಎಚ್‌ಡಿಎಫ್‌ಸಿ ಲೈಫ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ವಿಭಾಷ್ ನಾಯಕ್ ಮಾತನಾಡಿ, “2024ರಲ್ಲಿ ‘ಕೆಲಸ ಮಾಡಲು ಅತ್ಯುತ್ತಮವಾಗಿರುವ ಭಾರತದ ಕಂಪನಿ’ ಗಳಲ್ಲಿ ಒಂದು ಮತ್ತು ‘ಜೀವ ವಿಮೆಯಲ್ಲಿ ಉದ್ಯಮದಲ್ಲಿಯೇ ಅತ್ಯುತ್ತಮ ಕಂಪನಿ’ ಎಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ. ನಮ್ಮ ತಂಡಗಳ ಶ್ರದ್ಧೆ ಮತ್ತು ಬದ್ಧತೆ ನಮ್ಮ ಯಶಸ್ಸಿಗೆ ಕಾರಣವಾಗಿದೆ. ನಾವು ಅವರ ಬೆಳವಣಿಗೆಗೆ ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳಲು ಬದ್ಧರಾಗಿದ್ದೇವೆ. ಎಲ್ಲಾ ಭಾರತೀಯರಿಗೆ ಆರ್ಥಿಕ ಭದ್ರತೆ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ ಮತ್ತು 2047ರ ವೇಳೆಗೆ ‘ಎಲ್ಲರಿಗೂ ವಿಮೆ’ ಎಂಬ ನಮ್ಮ ಗುರಿಯನ್ನು ಸಾಧಿಸುವತ್ತ ಗಮನಹರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

Continue Reading

ಮನಿ-ಗೈಡ್

Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಮ್ಯೂಚುಯಲ್ ಫಂಡ್ ಹೂಡಿಕೆಯು ಭಾರತದಲ್ಲಿ ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದನ್ನು ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಒಂದು ವೇಳೆ ನಿವೃತ್ತಿ ಬಗ್ಗೆ ಯೋಜನೆ (Retirement Planning) ರೂಪಿಸುತ್ತಿದ್ದರೆ ಎಸ್ ಐಪಿ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿದರೆ ನಿವೃತ್ತಿ ಜೀವನವನ್ನು ಆರ್ಥಿಕ ಹೊರೆ ಇಲ್ಲದೆ ಕಳೆಯಬಹುದು. ದೊಡ್ಡ ಮೊತ್ತದ ನಿವೃತ್ತಿ ಪಡೆಯುವ ವಿಧಾನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Retirement Panning
Koo

ನಿವೃತ್ತಿ ಯೋಜನೆ (Retirement Planning) ಮಾಡುತ್ತಿದ್ದೀರಾ. ಹಾಗಿದ್ದರೆ ಎಸ್‌ಐಪಿ ಬಗ್ಗೆ ತಿಳಿದುಕೊಳ್ಳಿ.. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಮ್ಯೂಚುಯಲ್ ಫಂಡ್ (Mutual fund) ಹೂಡಿಕೆಯು ಭಾರತದಲ್ಲಿ (India) ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ ಎಂಬುದನ್ನು ಭಾರತದಲ್ಲಿ ಕಳೆದ ಒಂದು ವರ್ಷದ ಮ್ಯೂಚುಯಲ್ ಫಂಡ್‌ಗಳ ಅಸೋಸಿಯೇಷನ್ ​​ಡೇಟಾ ಹೇಳುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣ 100 ರೂ. ನ ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಜನಸಾಮಾನ್ಯರೂ ಪ್ರಾರಂಭಿಸಬಹುದು.

ಎಸ್‌ಐಪಿ ಹೂಡಿಕೆಯು ರೂಪಾಯಿ ವೆಚ್ಚ ಸರಾಸರಿ ಮತ್ತು ಸಂಯುಕ್ತ ಬೆಳವಣಿಗೆಯನ್ನು ಒದಗಿಸುತ್ತದೆ. ಸಂಯುಕ್ತ ಬೆಳವಣಿಗೆಯ ಪ್ರಯೋಜನವೆಂದರೆ ಒಂದು ಸಣ್ಣ ಮಾಸಿಕ ಎಸ್ ಐ ಪಿ ಕೊಡುಗೆಯು ದೀರ್ಘಾವಧಿಯವರೆಗೆ ಹೂಡಿಕೆಯಲ್ಲಿ ಉಳಿದಿದ್ದರೆ ದೊಡ್ಡ ನಿವೃತ್ತಿ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ.

ಮಾಸಿಕ 5,000 ರೂ.ಗಳ ಎಸ್ ಐ ಪಿನೊಂದಿಗೆ ಪ್ರಾರಂಭಿಸಿ ಅದನ್ನು 30 ವರ್ಷಗಳವರೆಗೆ ಇರಿಸಿದರೆ ದೊಡ್ಡ ಮೊತ್ತವನ್ನು ನಿರ್ಮಿಸಬಹುದು. ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ಪಾವತಿಸಿದ ಅನಂತರ ಆ ಹಣವನ್ನು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ (ಎಸ್‌ಡಬ್ಲ್ಯೂಪಿ) ಹೂಡಿಕೆ ಮಾಡಿದರೆ ಅಲ್ಲಿ ಶೇ. 7ರಷ್ಟು ಆದಾಯವನ್ನು ಪಡೆಯಬಹುದು. ಅಂದರೆ ಮುಂದಿನ 30 ವರ್ಷಗಳವರೆಗೆ ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು.

ಎಸ್ ಐ ಪಿಯಲ್ಲಿ ಹೂಡಿಕೆ ಮಾಡುವ ಮುನ್ನ ಎಸ್ ಐ ಪಿ ಮತ್ತು ಎಸ್ ಡಬ್ಲ್ಯೂ ಪಿ ನಡುವಿನ ವ್ಯತ್ಯಾಸ ತಿಳಿಯಿರಿ.


ಎಸ್ ಐ ಪಿ ಎಂದರೇನು?

ಎಸ್ ಐ ಪಿ ಎನ್ನುವುದು ಮ್ಯೂಚುಯಲ್ ಫಂಡ್ ಹೂಡಿಕೆಯ ಒಂದು ವಿಧಾನವಾಗಿದೆ. ಒಟ್ಟು ಮೊತ್ತದ ವಿಧಾನಕ್ಕಿಂತ ಭಿನ್ನವಾಗಿ ಒಬ್ಬರು ಒಂದು ಬಾರಿ ಮೊತ್ತವನ್ನು ಠೇವಣಿ ಮಾಡುತ್ತಾರೆ. ಅವರು ದೈನಂದಿನ, ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಎಸ್ ಐಪಿ ಮೂಲಕ ಪೂರ್ವ-ನಿಶ್ಚಿತ ಮೊತ್ತದಲ್ಲಿ ಹೂಡಿಕೆ ಮಾಡುತ್ತಾರೆ.

ಕೆಲವು ಮ್ಯೂಚುವಲ್ ಫಂಡ್ ಯೋಜನೆಗಳು ಎಸ್ ಐ ಪಿಗಳನ್ನು 100 ರೂ.ಗೆ ಪ್ರಾರಂಭಿಸಬಹುದು. ಮ್ಯೂಚುವಲ್ ಫಂಡ್ ಸ್ಕೀಮ್‌ನ ಕಾರ್ಯಕ್ಷಮತೆಯೊಂದಿಗೆ ಸಿಂಕ್ ಮಾಡುವ ಮೂಲಕ ಎನ್‌ಎವಿಯ ಬೆಲೆಯು ಪ್ರತಿ ತಿಂಗಳು ಬದಲಾಗುತ್ತಲೇ ಇರುವುದರಿಂದ ಎಸ್‌ಐಪಿ ರೂಪಾಯಿ ವೆಚ್ಚದ ಸರಾಸರಿಯನ್ನು ಒದಗಿಸುತ್ತದೆ. ಮಾರುಕಟ್ಟೆ ಮತ್ತು ಎನ್ ಎವಿ ದರಗಳು ಕಡಿಮೆಯಾದಾಗ ಹೂಡಿಕೆದಾರರು ಹೆಚ್ಚಿನ ಎನ್ ಎವಿ ಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ದರ ಹೆಚ್ಚಾದಾಗ ಮತ್ತು ಎನ್‌ಎವಿ ದರವೂ ಹೆಚ್ಚಿರುವಾಗ, ಹೂಡಿಕೆದಾರರು ಕಡಿಮೆ ಎನ್‌ಎವಿಗಳನ್ನು ಖರೀದಿಸುತ್ತಾರೆ.

ಒಟ್ಟು ಮೊತ್ತದ ಹೂಡಿಕೆಗಳಂತೆ ಎಸ್‌ಐಪಿ ಹೂಡಿಕೆಗಳು ಕೂಡ ಸಂಯುಕ್ತ ಬೆಳವಣಿಗೆಯನ್ನು ನೀಡುತ್ತವೆ. ಆದ್ದರಿಂದ ನೀವು 1,000 ರೂ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೂ ಸಹ 40 ವರ್ಷಗಳವರೆಗೆ ಹೂಡಿಕೆ ಮಾಡುವುದನ್ನು ಮುಂದುವರಿಸಿ ಮತ್ತು ಅದರ ಮೇಲೆ ಶೇ. 12ರಷ್ಟು ಪ್ರತಿಶತ ವಾರ್ಷಿಕ ಸಂಯುಕ್ತ ಬೆಳವಣಿಗೆಯನ್ನು ಪಡೆದರೆ 4.80 ಲಕ್ಷ ರೂ. ವರೆಗೆ ಹೂಡಿಕೆಯು ಬೆಳೆಯಬಹುದು. ಆ ಕಾಲಮಿತಿಯಲ್ಲಿ 1,18,82,420 ರೂ. ನಿವೃತ್ತಿ ಮೊತ್ತವನ್ನು ನಿರ್ಮಿಸಲು ಎಸ್ ಐಪಿ ಅನ್ನು ಸಾಧನವಾಗಿ ಪರಿಗಣಿಸುವ ಯಾರಾದರೂ ದೀರ್ಘಾವಧಿಯ ಹೂಡಿಕೆಯನ್ನು ಆಯ್ಕೆ ಮಾಡಬಹುದು.

ಎಸ್‌ಡಬ್ಲ್ಯೂಪಿ ಎಂದರೇನು?

ಎಸ್ಐಪಿನಲ್ಲಿ ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಿದರೆ ಎಸ್‌ಡಬ್ಲ್ಯೂಪಿ ಯೋಜನೆಯ ಮ್ಯೂಚುವಲ್ ಫಂಡ್ ಯೋಜನೆಯಿಂದ ಪ್ರತಿ ತಿಂಗಳು ಹಣವನ್ನು ಹಿಂಪಡೆಯುತ್ತೀರಿ.

ಮ್ಯೂಚುಯಲ್ ಫಂಡ್‌ನಲ್ಲಿ ಒಟ್ಟು ಮೊತ್ತವನ್ನು ಹೂಡಿಕೆ ಮಾಡುವವರು ಎಸ್‌ಡಬ್ಲ್ಯೂಪಿ ಅನ್ನು ಆಯ್ಕೆ ಮಾಡುತ್ತಾರೆ ಮತ್ತು ನಿಗದಿತ ಮೊತ್ತವನ್ನು ಹಿಂಪಡೆಯುತ್ತಾರೆ. ಆ ಹಣವನ್ನು ನಿಮಗೆ ನೀಡಲು ಫಂಡ್ ಹೌಸ್ ಪ್ರತಿ ತಿಂಗಳು ಎನ್‌ಎವಿಗಳನ್ನು ಮಾರಾಟ ಮಾಡುತ್ತದೆ.

ಠೇವಣಿಗಳ ಮೇಲೆ ಆದಾಯವನ್ನು ಪಡೆಯುವುದರಿಂದ ಮಾಸಿಕ ಪಿಂಚಣಿ ಪಡೆದರೂ ಸಹ ಹೂಡಿಕೆಯಲ್ಲಿರುವ ಮೊತ್ತವು ಅವರಿಗೆ ಬಹು ವರ್ಷಗಳವರೆಗೆ ಮಾಸಿಕ ಆದಾಯವನ್ನು ನೀಡುತ್ತದೆ.

ವಾಪಸಾತಿ ದರವು ರಿಟರ್ನ್ ದರಕ್ಕಿಂತ ತುಂಬಾ ಕಡಿಮೆಯಿದ್ದರೆ ಅದು ಹಲವು ದಶಕಗಳವರೆಗೆ ಮಾಸಿಕ ಆದಾಯವನ್ನು ಒದಗಿಸುತ್ತದೆ.

ಎಸ್‌ಡಬ್ಲ್ಯೂಪಿ ಸಹ ರೂಪಾಯಿ ವೆಚ್ಚದ ಸರಾಸರಿಯನ್ನು ನೀಡುತ್ತದೆ. ಅಲ್ಲಿ ದರವು ಕಡಿಮೆಯಾದಾಗ ನಿಧಿಯು ಹೆಚ್ಚು ಎನ್ ಎವಿ ಗಳನ್ನು ಮಾರಾಟ ಮಾಡುತ್ತದೆ ಮತ್ತು ಎನ್ ಎವಿ ದರವು ಹೆಚ್ಚಾದಾಗ ಮಾರಾಟ ಕಡಿಮೆಯಾಗಿದೆ.

ಎಸ್‌ಐಪಿನಿಂದ 1 ಲಕ್ಷ ಪಿಂಚಣಿ ಹೇಗೆ ಪಡೆಯುವುದು?

30ನೇ ವಯಸ್ಸಿನಲ್ಲಿ 5,000 ಎಸ್‌ಐಪಿ ಅನ್ನು ಪ್ರಾರಂಭಿಸಿದರೆ ಅದನ್ನು 30 ವರ್ಷಗಳವರೆಗೆ ಮುಂದುವರಿಸಿ. ಆ ಅವಧಿಯಲ್ಲಿ ನಿಮ್ಮ ಒಟ್ಟು ಕೊಡುಗೆಗಳು 18,00,000 ರೂ. ಆಗಿರುತ್ತದೆ. ದೀರ್ಘಾವಧಿಯ ಬಂಡವಾಳ ಲಾಭಗಳು 1,58,49,569 ರೂ. ಆಗಿರುತ್ತದೆ ಮತ್ತು ಮೆಚ್ಯೂರಿಟಿ ಮೊತ್ತವು 1,76,49,569 ರೂ. ಆಗಿರುತ್ತದೆ. ಬಂಡವಾಳದ ಲಾಭವು ಹೂಡಿಕೆಗಿಂತ ಸುಮಾರು 10 ಪಟ್ಟು ಹೆಚ್ಚು. ಇದು ಸಂಯುಕ್ತ ಬೆಳವಣಿಗೆಯಿಂದಾಗಿ ಮಾತ್ರ. 60ನೇ ವಯಸ್ಸಿನಲ್ಲಿ ಇದು ನಿಮ್ಮ ನಿವೃತ್ತಿ ವೇತನವಾಗುತ್ತದೆ.


1 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆದ ಅನಂತರ ನೀವು ಅದನ್ನು ಹಿಂತೆಗೆದುಕೊಂಡರೆ ಶೇ. 10ರಷ್ಟು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಿದರೆ ನಿಮ್ಮ ತೆರಿಗೆ ಮೊತ್ತವು 17,54,956.90 ರೂ. ತೆರಿಗೆ ಪಾವತಿಸಿದ ಅನಂತರ ಕೊನೆಯಲ್ಲಿ 1,58,94,612.10 ರೂ. ಉಳಿಯುತ್ತದೆ.

ಇದನ್ನೂ ಓದಿ: Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

ಮಾಸಿಕ ಪಿಂಚಣಿ ಪಡೆಯಲು ಹೂಡಿಕೆ ಮಾಡುವುದರಿಂದ ಸಾಲ ನಿಧಿಯನ್ನು ಸುರಕ್ಷಿತ ಆಯ್ಕೆ ಮಾಡಬಹುದು. ಅಲ್ಲಿ ನಿಮ್ಮ ಹೂಡಿಕೆಯ ಮೇಲೆ ಸಾಧಾರಣ ಶೇ. 7ರಷ್ಟು ಲಾಭವನ್ನು ಪಡೆಯಬಹುದು.

1,58,94,612.10 ರೂ.ಗಳನ್ನು ಡೆಟ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಶೇಕಡಾ ಏಳರಷ್ಟು ವಾರ್ಷಿಕ ಆದಾಯವನ್ನು ಪಡೆದರೆ 30 ವರ್ಷಗಳವರೆಗೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿಯನ್ನು ಸುಲಭವಾಗಿ ಡ್ರಾ ಮಾಡಬಹುದು ಮತ್ತು ಅದರ ಅನಂತರವೂ ನಿಮ್ಮ ಬಳಿ 62,99,829 ರೂ. ಮ್ಯೂಚುವಲ್ ಫಂಡ್ ಖಾತೆಯಲ್ಲಿ ಬಾಕಿ ಮೊತ್ತ ಉಳಿದಿರುತ್ತದೆ.

ಎಸ್‌ಐಪಿ ಈ ಯೋಜನೆಯ ಹೂಡಿಕೆ ಅವಧಿಯು 30 ವರ್ಷಗಳು ಮತ್ತು ಇದು ಸಾಕಷ್ಟು ದೀರ್ಘಾವಧಿಯದ್ದಾಗಿದೆ. ಆದರೆ ನಿವೃತ್ತಿ ಯೋಜನೆಯನ್ನು ಮೊದಲೇ ಪ್ರಾರಂಭಿಸಿದರೆ ಸುಲಭವಾಗುತ್ತದೆ. ಎಷ್ಟು ಬೇಗನೆ ಇದನ್ನು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚಿನ ನಿವೃತ್ತಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ.

Continue Reading
Advertisement
CM Siddaramaiah
ಕರ್ನಾಟಕ9 mins ago

CM Siddaramaiah: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ ಸಿದ್ದರಾಮಯ್ಯ

karnataka Weather Forecast
ಮಳೆ53 mins ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

district administration has made an innovative attempt for the first time in the state for the marriage of farmer youth and disabled people
ಕರ್ನಾಟಕ55 mins ago

Uttara Kannada News: ರೈತ ಯುವಕರು, ವಿಕಲಚೇತನರ ವಿವಾಹಕ್ಕೆ ಉ.ಕ ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ!

Bajaj Freedom 125
ಪ್ರಮುಖ ಸುದ್ದಿ57 mins ago

Bajaj Freedom 125 CNG : ಬಜಾಜ್​ ಕಂಪನಿಯ ಸಿಎನ್​ಜಿ ಬೈಕ್​ ಬಿಡುಗಡೆ; ಕೆ.ಜಿಗೆ 102 ಕಿಲೋ ಮೀಟರ್​​ ಮೈಲೇಜ್​

Keir Starmer
ಪ್ರಮುಖ ಸುದ್ದಿ1 hour ago

Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

Bikini Dress
Latest1 hour ago

Bikini Day: ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದ ಸುಂದರಿಯರಿವರು!

Narendra Modi
ಪ್ರಮುಖ ಸುದ್ದಿ1 hour ago

Narendra Modi : ಚಾಂಪಿಯನ್ನರ ಜತೆ ಸ್ಮರಣೀಯ ಸಂಭಾಷಣೆ; ಭಾರತ ಕ್ರಿಕೆಟ್ ತಂಡದ ಜತೆಗಿನ ಮಾತುಕತೆಯ ವಿಡಿಯೊ ಬಿಡುಗಡೆ ಮಾಡಿದ ಮೋದಿ

Monsoon Fashion
ಫ್ಯಾಷನ್1 hour ago

Monsoon Fashion: ಮಾನ್ಸೂನ್‌ಗೆ ರೀ ಎಂಟ್ರಿ ನೀಡಿದ ಪ್ರಿಂಟೆಡ್‌ ಕಲರ್‌ ನೆಕ್‌ ಕುರ್ತಾ ಫ್ಯಾಷನ್‌

BJP Karnataka
ಕರ್ನಾಟಕ1 hour ago

BJP Karnataka: ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

Sudha Murty
ಬೆಂಗಳೂರು2 hours ago

Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ53 mins ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ3 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ3 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ5 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ6 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು8 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು8 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ13 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌