ವಿಸ್ತಾರ Money Guide : ನಿಮ್ಮ ಹಣವನ್ನು ತಪ್ಪಾಗಿ ಬೇರೆಯವರ ಖಾತೆಗೆ ಹಾಕಿದ್ದೀರಾ? ಮರಳಿ ಪಡೆಯುವುದು ಹೇಗೆ? Vistara News
Connect with us

ಪ್ರಮುಖ ಸುದ್ದಿ

ವಿಸ್ತಾರ Money Guide : ನಿಮ್ಮ ಹಣವನ್ನು ತಪ್ಪಾಗಿ ಬೇರೆಯವರ ಖಾತೆಗೆ ಹಾಕಿದ್ದೀರಾ? ಮರಳಿ ಪಡೆಯುವುದು ಹೇಗೆ?

ವಿಸ್ತಾರ Money Guide ನಿಮ್ಮ ಹಣವನ್ನು ತಪ್ಪಾಗಿ ಬೇರೆ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರೆ ಅದನ್ನು ಮರಳಿ ಪಡೆಯಲು ಯತ್ನಿಸಿದ್ದೀರಾ? ಬ್ಯಾಂಕ್‌ಗಳು ಇದಕ್ಕೆ ಏನೆನ್ನುತ್ತವೆ? ಇಲ್ಲಿದೆ ವಿವರ.

VISTARANEWS.COM


on

cash
Koo

ನೀವು ನಿಮ್ಮ ಹಣವನ್ನು ಪ್ರಮಾದವಶಾತ್‌ ಬೇರೆಯವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದೀರಿ ಎಂದು ಇಟ್ಟುಕೊಳ್ಳೋಣ. ಅಂಥ ಸಂದರ್ಭದಲ್ಲಿ ಹಣವನ್ನು ಮರಳಿ ಪಡೆಯುವುದು ಹೇಗೆ? ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಈ ಬಗ್ಗೆ ವಿವರವಾಗಿ ತಿಳಿಸಿದೆ. ಈಗ ವಿವರಗಳನ್ನು ನೋಡೋಣ. (ವಿಸ್ತಾರ Money Guide) ಎಸ್‌ಬಿಐನ ಗ್ರಾಹಕರೊಬ್ಬರು ಇಂಥ ಪ್ರಸಂಗವನ್ನು ಎದುರಿಸಿದ್ದರು. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೂರಿದ್ದರು.

ಎಸ್‌ಬಿಐ ಗ್ರಾಹಕರು ದೂರಿದ್ದೇನು? ನಾನು ಪ್ರಮಾದವಶಾತ್‌ ಬೇರೆಯವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದೇನೆ. ವಿವರಗಳನ್ನು ಬ್ಯಾಂಕ್‌ ಶಾಖೆಗೆ ಹೆಲ್ಪ್‌ ಲೈನ್‌ ಮೂಲಕ ಸಲ್ಲಿಸಿದ್ದರೂ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಹಕರು ಟ್ವಿಟರ್‌ನಲ್ಲಿ ದೂರಿದ್ದರು. ಇದಕ್ಕೆ ಎಸ್‌ಬಿಐ ಕೂಡ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ನೀವು ತಪ್ಪಾಗಿ ಬೇರೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಿದ್ದರೆ, ಬ್ಯಾಂಕಿನ ಹೋಮ್‌ ಬ್ರ್ಯಾಂಚ್‌ ಅನ್ನು ಸಂಪರ್ಕಿಸಬೇಕು. ಹೋಮ್‌ ಬ್ರ್ಯಾಂಚ್‌ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಗ್ರಾಹಕರು ತಪ್ಪಾಗಿ ಕಳುಹಿಸಿದ ಹಣಕ್ಕೆ ಬ್ಯಾಂಕ್‌ ಹೊಣೆ ವಹಿಸುವುದಿಲ್ಲ. ಹೀಗಿದ್ದರೂ, ಪ್ರಕರಣ ಇತ್ಯರ್ಥವಾಗದಿದ್ದರೆ ಗ್ರಾಹಕರು ಬ್ಯಾಂಕ್‌ಗೆ ದೂರು ನೀಡಬಹುದು. ಆರ್‌ಬಿಐ ಒಂಬುಡ್ಸ್‌ಮನ್‌ಗೆ ಕೂಡ ದೂರು ಸಲ್ಲಿಸಬಹುದು.

ಹಣ ವರ್ಗಾಯಿಸುವಾಗ ಫಲಾನುಭವಿಯ ಅಕೌಂಟ್‌ ವಿವರ ಪರಿಶೀಲಿಸಿ:

ಗ್ರಾಹಕರು ತಮ್ಮ ಖಾತೆಯಿಂದ ಬೇರೊಂದು ಖಾತೆಗೆ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸುವಾಗ ಫಲಾನುಭವಿಯ ಬ್ಯಾಂಕ್‌ ಅಕೌಂಟ್ ವಿವರಗಳನ್ನು ನಿಖರವಾಗಿ ಪರಿಶೀಲಿಸಬೇಕು. ಹಣಕಾಸು ವರ್ಗಾವಣೆಗಳಲ್ಲಿ ಸರಿಯಾದ ವಿವರಗಳನ್ನು ನಮೂದಿಸುವುದು ಗ್ರಾಹಕರ ಜವಾಬ್ದಾರಿಯಾಗಿದೆ. ಫಲಾನುಭವಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಇದನ್ನೇ ಹೇಳಿದೆ. ಅಕೌಂಟ್‌ ನಂಬರ್‌ ಇದರಲ್ಲಿ ನಿರ್ಣಾಯಕ ಭಾಗ ಆಗಿರುವುದರಿಂದ ಸಮರ್ಪಕವಾಗಿ ಉಲ್ಲೇಖಿಸುವುದು ಮುಖ್ಯ. ಆನ್‌ಲೈನ್/‌ ಇಂಟರ್‌ನೆಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಅರಿತುಕೊಂಡು ಜಾಗರೂಕತೆಯಿಂದ ಹಣವನ್ನು ವರ್ಗಾಯಿಸಬೇಕು.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2021-22ರ ವರದಿಯಲ್ಲಿ, ಡಿಜಿಟಲ್‌ ಪೇಮೆಂಟ್‌ ಮತ್ತು ವರ್ಗಾವಣೆಗಳಿಗೆ ಸಂಬಂಧಿಸಿದ ದೂರುಗಳನ್ನು ಗಣನೀಯ ಸಂಖ್ಯೆಯಲ್ಲಿ ಸ್ವೀಕರಿಸಿರುವುದಾಗಿ ತಿಳಿಸಿದೆ. ಹೀಗಿದ್ದರೂ, ಇಂಥ ಪ್ರಕರಣಗಳಲ್ಲಿ ಗ್ರಾಹಕರಿಗೆ ಹಣ ಮರಳಿ ಬರದಿರುವ ಪ್ರಕರಣಗಳು 6.01% ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Milage Scooters in India : ಪೆಟ್ರೋಲ್​ ಉಳಿತಾಯ ಮಾಡುವ ಕೆಲವು ಸ್ಕೂಟರ್​​ಗಳು

ಬ್ಯಾಂಕ್‌ ಆಫ್‌ ಬರೋಡಾ ನೀಡಿರುವ ಹೇಳಿಕೆ ಪ್ರಕಾರ ಒಂದು ವೇಳೆ ಗ್ರಾಹಕರು ತಪ್ಪಾಗಿ ಬೇರೆ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾಯಿಸಿದರೆ, ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕ್‌ ಆಫ್‌ ಬರೋಡಾ ವಿವರಗಳನ್ನು ತಿಳಿಸಿ, ಹಣವನ್ನು ಮತ್ತೆ ಹಿಂತಿರುಗಿಸಲು ಮನವಿ ಮಾಡುತ್ತದೆ. ಬೇರೆ ಬ್ಯಾಂಕ್‌ ಆಗಿದ್ದರೆ ಪ್ರಕ್ರಿಯೆಗೆ ಸಹಕರಿಸುತ್ತದೆ. ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ಖುದ್ದಾಗಿ ಹೋಗಿ ಮ್ಯಾನೇಜರ್‌ರನ್ನು ಸಂಪರ್ಕಿಸಿ ಮನವಿ ಸಲ್ಲಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

Vivek Ramaswamy: ರಿಪಬ್ಲಿಕ್ ಪಕ್ಷದ ಸದಸ್ಯರಾಗಿರುವ ವಿವೇಕ್ ರಾಮಸ್ವಾಮಿ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗುವ ಮುಂಚೂಣಿ ವ್ಯಕ್ತಿಯಾಗಿದ್ದಾರೆ.

VISTARANEWS.COM


on

Edited by

Vivek Ramaswamy offering rs 80 lakh to nanny Says media report
ಹೆಂಡತಿ ಮತ್ತು ಮಕ್ಕಳೊಂದಿಗೆ ವಿವೇಕ್ ರಾಮಸ್ವಾಮಿ.
Koo

ನವದೆಹಲಿ: ಅಮೆರಿಕ ಅಧ್ಯಕ್ಷ (US President Election) ಚುನಾವಣೆಗೆ ರಿಪಬ್ಲಿಕ್ ಪಕ್ಷದ (Republic Party) ಅಭ್ಯರ್ಥಿಯಾಗಲು ಹೊರಟಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು (Nanny) ಹುಡುಕುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರು ಆಫರ್ ಮಾಡುತ್ತಿರುವ ಸಂಬಳದ ಮೊತ್ತ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಿ. ವಿವೇಕ್ ರಾಮಸ್ವಾಮಿ ದಾದಿ(ಆಯಾ) ಕೆಲಸಕ್ಕೆ 80 ಲಕ್ಷ ರೂ. ಸಂಬಳ ನೀಡಲು ಮುಂದಾಗಿದ್ದಾರೆ. ಅವರು ಭಾರತೀಯ ಕೋಟ್ಯಧಿಪತಿ ಅಪೂರ್ವ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ತಮ್ಮ ಮಕ್ಕಳನ್ನು ನೋಡಿಕೊಳ್ಳಲು ನ್ಯಾನಿ(ದಾದಿ) ಬೇಕಾಗಿದ್ದಾರೆ ಎಂದು ರಾಮಸ್ವಾಮಿ ಅವರು ಎಸ್ಟೇಟ್‌ಜಾಬ್ಸ್ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದಾರೆ. ಕುತೂಹಲ, ಸಾಹಸ ಮತ್ತು ನಿರಂತರ ಚಲನೆಯು ಕುಟುಂಬದ ಜೀವನಶೈಲಿಯನ್ನು ವ್ಯಾಖ್ಯಾನಿಸುತ್ತದೆ. ಇದು ಉನ್ನತ-ಪ್ರೊಫೈಲ್ ಕುಟುಂಬವನ್ನು ಸೇರಲು ಒಂದು ಅಸಾಧಾರಣ ಅವಕಾಶವಾಗಿದೆ, ಅನನ್ಯ ಕೌಟುಂಬಿಕ ಸಾಹಸಗಳಲ್ಲಿ ಭಾಗವಹಿಸುವಾಗ ಅವರ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಎಸ್ಟೇಟ್‌ಜಾಬ್ಸ್ ಡಾಟ್ ಕಾಮ್ ಈ ಜಾಹೀರಾತಿನಲ್ಲಿ ಬರೆದುಕೊಂಡಿದೆ.

ವಾರಕ್ಕೆ 84 ರಿಂದ 96 ಗಂಟೆಗಳ ಕೆಲಸದ ಅಗತ್ಯವಿದೆ, ನಂತರ ಇಡೀ ವಾರದ ರಜೆ ಇರುತ್ತದೆ. ಮಕ್ಕಳಿಗೆ ತಡೆರಹಿತ ದೈನಂದಿನ ದಿನಚರಿಯನ್ನು ಒದಗಿಸುವ ಸಲುವಾಗಿ ದಾದಿಯು, ಒಬ್ಬ ಬಾಣಸಿಗ, ಸಹಾಯಕಿಯರು, ಹೌಸ್‌ಕೀಪರ್ ಮತ್ತು ಖಾಸಗಿ ಭದ್ರತೆಯನ್ನು ಒಳಗೊಂಡಂತೆ ಮೀಸಲಾದ ತಂಡದೊಂದಿಗೆ ವ್ಯವಹರಿಸಬೇಕಾಗುತ್ತದೆ. ಈ ತಂಡದೊಂದಿಗೆ ಸಮನ್ವಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಜತೆಗೆ, ಹುಡುಗರ ಆಟದ ಪ್ರದೇಶಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಉತ್ತೇಜಿಸುವ ಮತ್ತು ಸಂಘಟಿತ ವಾತಾವರಣವನ್ನು ಬೆಳೆಸಲು ಕ್ಯುರೇಟ್ ಮಾಡುವುದೂ ಕೂಡ ಜವಾಬ್ದಾರಿಯಾಗಿರುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಹಾಗೆ ನೋಡಿದರೆ, ಎಸ್ಟೇಟ್‌ಜಾಬ್ಸ್ ಡಾಟ್ ಕಾಮ್‍‌ನಲ್ಲಿ ನೀಡಿರುವ ಜಾಹೀರಾತಿನಲ್ಲಿ ಕ್ಲೈಂಟ್ ಹೆಸರು ಎಲ್ಲೂ ನಮೂದಿಸಿಲ್ಲ. ಆದರೂ, ವಿವರಗಳನ್ನು ವಿಶ್ಲೇಷಿಸಿದರೆ ಖಂಡಿತವಾಗಿಯೂ ಅದು ವಿವೇಕ ರಾಮಸ್ವಾಮಿ ಅವರ ಕುಟುಂಬದತ್ತ ಬೆರಳು ಮಾಡುತ್ತದೆ ಎಂದು ಬಿಸಿನೆಸ್‌ ಇನ್‌ಸೈಡರ್ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್‌ ರಾಮಸ್ವಾಮಿಯನ್ನು ಹೊಗಳಿದ ಎಲಾನ್‌ ಮಸ್ಕ್

ರಾಮಸ್ವಾಮಿ ಅವರ ಪ್ರಚಾರದ ವಕ್ತಾರರಾದ ಟ್ರಿಸಿಯಾ ಮೆಕ್‌ಲಾಫ್ಲಿನ್ ಅವರು ಈ ಹಿಂದೆ ಸುದ್ದಿ ಪೋರ್ಟಲ್‌ ಮಾಹಿತಿ ನೀಡಿ, ಲಿವ್-ಇನ್ ದಾದಿಯರ ಕಲ್ಪನೆಯೊಂದಿಗೆ ಕುಟುಂಬವು ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದ್ದರು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ವಿವೇಕ್ ರಾಮಸ್ವಾಮಿ ಅವರು ತಯಾರಿ ನಡೆಸಿದ್ದಾರೆ.

ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿಯನ್ನು(ವಿವೇಕ್ ರಾಮಸ್ವಾಮಿ) ಒಮ್ಮೆ ಟೈಮ್ ಮ್ಯಾಗಜೀನ್ “ಟ್ರಂಪ್ ಅವರ ಸ್ಪಷ್ಟ ಉತ್ತರಾಧಿಕಾರಿ” ಎಂದು ಕರೆದಿತ್ತು. ಆಗಸ್ಟ್ 23 ರಂದು ನಡೆದ ಅವರ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯ ನಂತರ ಅವರು ಅಮೆರಿಕದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ.

VISTARANEWS.COM


on

Edited by

Justin Trudeau
Koo

ಟೊರೊಂಟೊ, ಕೆನಡಾ: ಸದ್ಯ ಕೆನಡಾವು ಭಾರತದೊಂದಿಗೆ (Canada and India Relations) ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಹಾಗಿದ್ದೂ, ರಚನಾತ್ಮಕ ಸಂಬಂಧವನ್ನು (Constructive Relations) ಮುಂದುರಿಸುತ್ತಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರು ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಟ್ರೂಡೊ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ(India Canada Row).

ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು, ಭಾರತದಲ್ಲಿ ಕೆನಾಡ ರಾಜತಾಂತ್ರಿಕರನ್ನು ಹೊಂದಿರುವುದು ಮಹತ್ವದ್ದಾಗಿದೆ ಎಂದು ಹೇಳಿದರು. ದಿಲ್ಲಿಯ ಕೆನಡಾ ರಾಜತಾಂತ್ರಿಕ ಕಚೇರಿಯಲ್ಲಿರುವ 62 ಸಿಬ್ಬಂದಿಯ ಪೈಕಿ 41 ಜನರನ್ನು ವಾಪಸ್ ಕೆನಡಾಗೆ ಕರೆಯಿಸಿಕೊಳ್ಳುವಂತೆ ಭಾರತ ಸರ್ಕಾರವು ಹೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರೂಡೋ ಅವರು ಹೇಳಿಕೆಯನ್ನು ನೀಡಿದ್ದಾರೆ.

ನಿಸ್ಸಂಶಯವಾಗಿ, ನಾವು ಇದೀಗ ಭಾರತದೊಂದಿಗೆ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ ಪ್ರಧಾನಿ ಟ್ರೂಡೋ ಅವರು, ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ದಿಲ್ಲಿ ಹೇಳಿದೆ ಎಂಬ ಮಾಧ್ಯಮ ವರದಿಯ ಬಗ್ಗೆ ಯಾವುದೇ ಟಿಪ್ಪಣಿಯನ್ನು ಅವರು ಮಾಡಲಿಲ್ಲ.

ಈ ಸುದ್ದಿಯನ್ನೂ ಓದಿ: India Canada Row: ʼಇಷ್ಟು ರಾಜತಾಂತ್ರಿಕರು ಇಲ್ಲಿ ಬೇಕಿಲ್ಲ, ವಾಪಸ್‌ ಕರೆಸಿಕೊಳ್ಳಿ!ʼ ಕೆನಡಾಕ್ಕೆ ಮತ್ತೆ ಭಾರತ ತಪರಾಕಿ

ದಿಲ್ಲಿಯ ಕ್ರಮಕ್ಕೆ ಪ್ರತಿಯಾಗಿ ಕೆನಡಾ ಸರ್ಕಾರವು, ಭಾರತೀಯ ರಾಜತಾಂತ್ರಿಕರನ್ನು ಕಿತ್ತು ಹಾಕಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಹೇಳಿದಂತೆ ನಾವು ಸಮಸ್ಯೆಯನ್ನು ಹೆಚ್ಚಿಸಲು ಹೋಗುವುದಿಲ್ಲ. ಈ ಅತ್ಯಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಕ್ರಿಕೆಟ್

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

ನೆದರ್ಲ್ಯಾಂಡ್ಸ್ ತನ್ನ ವಿಶ್ವಕಪ್ ಅಭಿಯಾನವನ್ನು (ICC World Cup 2023 ) ಅಕ್ಟೋಬರ್ 6ರಂದು ರಾಜೀವ್ ಗಾಂಧಿ ಅಂತಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಪ್ರಾರಂಭಿಸಲಿದೆ.

VISTARANEWS.COM


on

Netherlands cricket team
Koo

2023ರ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇದೆ. ತಂಡಗಳು ಈಗಾಗಲೇ ತಮ್ಮ ವಿಶ್ವಕಪ್ ಪಂದ್ಯಾವಳಿಗೆ ತಮ್ಮ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ ನೀಡುತ್ತಿವೆ. ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ರಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಯುಎಸ್ಎ, ಒಮಾನ್ ಮತ್ತು ನೇಪಾಳವನ್ನು ಸೋಲಿಸಿದ ನೆದರ್ಲ್ಯಾಂಡ್ಸ್ ಭಾರತದಲ್ಲಿ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆದಿದೆ. ಒಟ್ಟಾರೆ 50 ಓವರ್​ಗಳ ದಾಖಲೆಗೆ ಹೋಲಿಸಿದರೆ ಮೆನ್ ಇನ್ ಆರೆಂಜ್ ಹಾಲಿ ವರ್ಷಗಳ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

27 ವರ್ಷಗಳ ಏಕದಿನ ಇತಿಹಾಸದಲ್ಲಿ ಈ ತಂಡ ಕೇವಲ 40 ಪಂದ್ಯಗಳನ್ನು ಗೆದ್ದಿದ್ದಾರೆ. 35.08% ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಆದಾಗ್ಯೂ, ಡಚ್ ಈ ವರ್ಷ ಆಡಿದ 14 ಏಕದಿನ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ ಮತ್ತು ಅವರ ಗೆಲುವಿನ ಶೇಕಡಾವಾರು 42.85 ಕ್ಕೆ ಏರಿಕೆಯಾಗಿದೆ.

ಏಕದಿನ ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ಅತ್ಯುತ್ತಮ ಪ್ರದರ್ಶನ

2007ರ ಏಕದಿನ ವಿಶ್ವಕಪ್​ನಲ್ಲಿ ಮೆನ್ ಇನ್ ಆರೆಂಜ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2007ರಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿದ ನೆದರ್ಲೆಂಡ್ಸ್​​ ತಂಡ 157 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತ್ತು. ಅವರು 2007 ರ ವಿಶ್ವಕಪ್ ಅನ್ನು 33.33% ಗೆಲುವಿನ ಶೇಕಡಾವಾರು ಹೊಂದಿದ್ದರು. ನಂತರದ ಆತ ತಂಡದ ಅತ್ಯುತ್ತಮ ಪ್ರದರ್ಶನವು 2003ರಲ್ಲಿ ಬಂದಿತು. ಅಲ್ಲಿ ತಮ್ಮ 6 ಪಂದ್ಯಗಳಲ್ಲಿ ಕೇವಲ 1 ಅನ್ನು ಗೆಲ್ಲಲು ಶಕ್ತಗೊಂಡಿತ್ತು.

ಇದನ್ನೂ ಓದಿ : ICC World Cup 2023 : ಕ್ರಿಕೆಟ್​ ದೇವರು ಸಚಿನ್​ಗೆ ಕ್ರಿಕೆಟ್​​ ವಿಶ್ವಕಪ್​ನ ವಿಶೇಷ ಗೌರವ

2019ರ ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ಪ್ರದರ್ಶನ

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಕೊನೆಯ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲು ನೆದರ್ಲ್ಯಾಂಡ್ಸ್ ವಿಫಲವಾಗಿತ್ತು.

2023ರ ವಿಶ್ವಕಪ್ ಟೂರ್ನಿಗೆ ನೆದರ್ಲ್ಯಾಂಡ್ಸ್ ವೇಳಾಪಟ್ಟಿ

ನೆದರ್ಲ್ಯಾಂಡ್ಸ್ ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 6 ರಂದು ಹೈದರಾಬಾದ್​​ನಲ್ಲಿ ಪಾಕಿಸ್ತಾನ ವಿರುದ್ಧ ಪ್ರಾರಂಭಿಸಲಿದೆ. ದಕ್ಷಿಣ ಆಫ್ರಿಕಾವನ್ನು (ಅಕ್ಟೋಬರ್ 17) ಎದುರಿಸಲು ಧರ್ಮಶಾಲಾಗೆ ಪ್ರಯಾಣಿಸುವ ಮೊದಲು ಮೆನ್ ಇನ್ ಆರೆಂಜ್ ಕಳೆದ ವರ್ಷದ ಫೈನಲಿಸ್ಟ್ ನ್ಯೂಜಿಲೆಂಡ್ (ಅಕ್ಟೋಬರ್ 9) ಅನ್ನು ಅದೇ ಸ್ಥಳದಲ್ಲಿ ಎದುರಿಸಲಿದೆ. ಅಂದಿನಿಂದ, ಡಚ್ ಪ್ರತಿ ಪಂದ್ಯದ ನಡುವೆ ಮೂರು ದಿನಗಳ ಅಂತರದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಡಲಿದೆ.

ನವೆಂಬರ್ 8ರಂದು ಪುಣೆಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ನವೆಂಬರ್ 12 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೌಂಡ್ ರಾಬಿನ್ ನ 45ನೇ ಮತ್ತು ಕೊನೆಯ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ.

ವೇಳಾಪಟ್ಟಿ ಇಂತಿದೆ

  • ಅಕ್ಟೋಬರ್ 6: ಪಾಕಿಸ್ತಾನ v/s ನೆದರ್ಲ್ಯಾಂಡ್ಸ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್ ಮಧ್ಯಾಹ್ನ 2.00
  • 6 ಅಕ್ಟೋಬರ್ 9 ನ್ಯೂಜಿಲೆಂಡ್ v/s ನೆದರ್ಲ್ಯಾಂಡ್ಸ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದರಾಬಾದ್ ಮಧ್ಯಾಹ್ನ 2:00
  • 16 ಅಕ್ಟೋಬರ್ 17 ದಕ್ಷಿಣ ಆಫ್ರಿಕಾ v/s ನೆದರ್ಲ್ಯಾಂಡ್ಸ್ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣ ಧರ್ಮಶಾಲಾ ಮಧ್ಯಾಹ್ನ 2:00
  • 21 ಅಕ್ಟೋಬರ್ 21 ಶ್ರೀಲಂಕಾ v/s ನೆದರ್ಲ್ಯಾಂಡ್ಸ್ ಎಕಾನಾ ಕ್ರೀಡಾಂಗಣ ಲಕ್ನೋ ಬೆಳಿಗ್ಗೆ 10:30
  • 27 ಅಕ್ಟೋಬರ್ 25 ಆಸ್ಟ್ರೇಲಿಯಾ v/s ನೆದರ್ಲ್ಯಾಂಡ್ಸ್ ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿ ಮಧ್ಯಾಹ್ನ 2:00
  • 32 ಅಕ್ಟೋಬರ್ 28 ಬಾಂಗ್ಲಾದೇಶ v/s ನೆದರ್ಲ್ಯಾಂಡ್ಸ್ ಈಡನ್ ಗಾರ್ಡನ್ಸ್ ಕೋಲ್ಕತಾ ಮಧ್ಯಾಹ್ನ 2:00
  • 35 ನವೆಂಬರ್ 3 ಅಫ್ಘಾನಿಸ್ತಾನ v/s ನೆದರ್ಲ್ಯಾಂಡ್ಸ್ ಎಕಾನಾ ಕ್ರೀಡಾಂಗಣ ಲಕ್ನೋ ಮಧ್ಯಾಹ್ನ 2:00
  • 40 ನವೆಂಬರ್ 8 ಇಂಗ್ಲೆಂಡ್ v/s ನೆದರ್ಲ್ಯಾಂಡ್ಸ್ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಪುಣೆ: ಮಧ್ಯಾಹ್ನ 2:00
  • 43 ನವೆಂಬರ್ 12 ಭಾರತ v/s ನೆದರ್ಲ್ಯಾಂಡ್ಸ್ ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಮಧ್ಯಾಹ್ನ 2:00

ತಂಡದ ಬಲಾಬಲವೇನು?

ಸಾಮರ್ಥ್ಯ : ವಿಶ್ವಕಪ್​​ನಲ್ಲಿ ನೆದರ್ಲ್ಯಾಂಡ್ಸ್ ಪ್ಲೇಯಿಂಗ್ ಇಲೆವೆನ್​​ನಲ್ಲಿ ಅತಿದೊಡ್ಡ ಶಕ್ತಿ ಅವರ ಆಲ್​​ರೌಂಡರ್​ಗಳು ಬಾಸ್ ಡಿ ಲೀಡ್, ತೇಜಾ ನಿಡಮನೂರು ಮತ್ತು ಮ್ಯಾಕ್ಸ್ ಒಡಿ ಡಚ್ಚರ ತಂಡಕ್ಕೆ ವರ. ಈ ಮೂವರನ್ನು ಹೊರತುಪಡಿಸಿ, ಅವರು ಕಾಲಿನ್ ಆಕರ್ಮ್ಯಾನ್, ಶರೀಜ್ ಅಹ್ಮದ್ ಮತ್ತು ರೋಲೊಫ್ ವ್ಯಾನ್ ಡೆರ್ ಮೆರ್ವೆ ಇದ್ದಾರೆ. ಅವರು ಆಲ್​ರೌಂಡರ್​ಗಳು. ವಿಕ್ರಮ್​ಜಿತ್​ ಸಿಂಗ್ (ಬೌಲಿಂಗ್​) ಮತ್ತು ಲೋಗನ್ ವ್ಯಾನ್ ಬೀಕ್ (ಬ್ಯಾಟ್) ಸಹ ಅರೆಕಾಲಿಕ ಆಯ್ಕೆಗಳಾಗಿ ತಂಡಕ್ಕೆ ನೆರವಾಗುತ್ತಾರೆ.

ಇದನ್ನೂ ಓದಿ : World Cup History: 2011ರ ವಿಶ್ವಕಪ್‌; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…

ದೌರ್ಬಲ್ಯ

ನೆದರ್ಲ್ಯಾಂಡ್ಸ್ ಚೆಂಡು ಮತ್ತು ಬ್ಯಾಟ್ ಎರಡರಲ್ಲೂ ಸ್ಪಿನ್ ಪಿಚ್​ಗೆ ಸೂಕ್ತವಲ್ಲ. ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ರಲ್ಲಿ, ಮೆನ್ ಇನ್ ಆರೆಂಜ್ ಶ್ರೀಲಂಕಾದ ಸ್ಪಿನ್ನರ್​ಗಳ ವಿರುದ್ಧ ಹೆಚ್ಚು ಹೆಣಗಾಡಿತ್ತು. ತಮ್ಮ 20 ವಿಕೆಟ್​ಗಳಲ್ಲಿ 11 ವಿಕೆಟ್​ಗಳನ್ನು ವನಿಂದು ಹಸರಂಗ ಮತ್ತು ಮಹೇಶ್ ತಿಕ್ಷಣಾ ಅವರಿಗೆ ಒಪ್ಪಿಸಿದ್ದರು. ವಿಶ್ವಕಪ್ ಸ್ಪಿನ್ ಸ್ನೇಹಿ ಭಾರತೀಯ ಪಿಚ್​ನಲ್ಲಿ ನಡೆಯಲಿರುವುದರಿಂದ ಡಚ್ ಬ್ಯಾಟರ್​ಗಳಿಗೆ ಯಶಸ್ಸು ಸಿಗುವ ಸಾಧ್ಯತೆಗಳು ಕಡಿಮೆ. ಆ ತಂಡದಲ್ಲಿ ಸ್ಪಿನ್ ಬೌಲಿಂಗ್ ಆಯ್ಕೆಯಾಗಿ ಇರುವುದು ಆರ್ಯನ್ ದತ್​​ ಒಬ್ಬರೇ.

ಅವಕಾಶಗಳು

ಸ್ಕಾಟ್ ಎಡ್ವರ್ಡ್ಸ್, ಲೋಗನ್ ವ್ಯಾನ್ ಬೀಕ್ ಮತ್ತು ತೇಜಾ ನಿಡಮನೂರು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆರ್ಯನ್ ದತ್, ವಿಕ್ರಮ್ಜಿತ್ ಸಿಂಗ್ ಮತ್ತು ಬಾಸ್ ಡಿ ಲೀಡ್ ಡಚ್ ತಂಡದ ಹೆಚ್ಚು ಅನುಭವಿ ಆಟಗಾರರು.

ವಿಶ್ವ ಕಪ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಅಪಾಯ

ನೆದರ್ಲ್ಯಾಂಡ್ಸ್ ತಂಡ ಸೋತರೆ ಕಳೆದುಕೊಳ್ಳಲು ಏನೂ ಇಲ್ಲ. ಅವರು ಯಶಸ್ವಿಯಾಗುತ್ತಾರೆ ಎಂಬ ಯಾವುದೇ ನಿರೀಕ್ಷೆಗಳಿಲ್ಲದೆ, ಅವರು ದುರ್ಬಲ ಪ್ರದರ್ಶನ ನೀಡಬಹುದು ಅಥವಾ ದೈತ್ಯ ಸಂಹಾರಿಯೂ ಆಗಬಹುದು. ತಮ್ಮ ಆಟಗಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಅವರು ಆಟದ ದಿನದಂದು ಎದುರಾಳಿ ತಂಡಕ್ಕೆ ಆಘಾತ ಕೊಡಬಹುದು. .

ಪ್ರಮುಖ ಆಟಗಾರರು

ನಾಯಕ ಸ್ಕಾಟ್ ಎಡ್ವರ್ಡ್ಸ್ ತಮ್ಮ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಲಿದ್ದಾರೆ. ವಿಕೆಟ್​ಕೀಪರ್ ಆಗಿ ಪರಿಸ್ಥಿತಿಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಬಾಸ್ ಡಿ ಲೀಡ್ ಅವರು ಬ್ಯಾಟ್ ಮತ್ತು ಬೌಲ್ ಎರಡರಲ್ಲೂ ಮಿಂಚಬಲ್ಲರು. ಯುವ ಲೆಗ್ ಸ್ಪಿನ್ನರ್ ಆರ್ಯನ್ ದತ್ ಸ್ಪಿನ್ ಸ್ನೇಹಿ ಭಾರತೀಯ ಪಿಚ್​ಗಳಲ್ಲಿ ಮೆರೆದಾಡಬಹುದು.

ನೆದರ್ಲ್ಯಾಂಡ್ಸ್ ತಂಡ ಪ್ರಕಟ

ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡ್, ವಿಕ್ರಮ್ಜಿತ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಆಕರ್ಮ್ಯಾನ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬಾರೆಸಿ (ವಿಕೆಟ್ ಕೀಪರ್), ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗೆಲ್ಬ್ರೆಕ್ಟ್.

Continue Reading

ದೇಶ

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

PM Narendra Modi: 2020ರ ಡಿಸೆಂಬರ್‌ನಲ್ಲಿ ಕೆಸಿಆರ್‌ ಅವರು ಎನ್‌ಡಿಎ ಕೂಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

VISTARANEWS.COM


on

Edited by

Modi and KTR
Koo

ನಿಜಮಾಬಾದ್: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣ (Telangana Assembly Election) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (CM KCR) ಅವರು 2020ರ ಡಿಸೆಂಬರ್‌ನಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ (NDA) ಸೇರುವ ಮನವಿ ಮಾಡಿಕೊಂಡಿದ್ದರು. ಆದರೆ, ನಾನು ಅವರ ಮನವಿಯನ್ನು ತಿರಸ್ಕರಿಸಿದೆ. ಎನ್‌ಡಿಎಗೆ ಬಿಆರ್‌ಎಸ್ (BRS) ಸೇರಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಈ ಮಧ್ಯೆ, ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಸಿಆರ್ ಅವರ ಪುತ್ರರೂ ಆಗಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್ (KT Rama Rao) ಅವರು, ಎನ್‌ಡಿಎ ಸೇರಲು ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ (Mad Dog) ಎಂದು ತಿರುಗೇಟು ನೀಡಿದ್ದಾರೆ.

ನಿಜಮಾಬಾದ್‌ನ ಗಿರಿರಾಜ್ ಕಾಲೇಜ್‌ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇವತ್ತು ಮಹತ್ವದ ರಹಸ್ಯವೊಂದನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು. 2020ರ ಡಿಸೆಂಬರ್ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು ಮತ್ತು ಯಾವುದೇ ಪಕ್ಷವು ನಿಗಮವನ್ನು ವಶಪಡಿಸಿಕೊಳ್ಳಲು ಸಂಪೂರ್ಣ ಬಹುಮತವನ್ನು ಪಡೆದಿದಿರಲಿಲ್ಲ. ಆಗ ಚುನಾವಣೆ ಮುಗಿದ ಕೂಡಲೇ ಕೆಸಿಆರ್ ನಮ್ಮ ಬೆಂಬಲ ಪಡೆಯಲು ದೆಹಲಿಗೆ ಬಂದಿದ್ದರು ಎಂದು ಹೇಳಿದರು.

ಕೆಸಿಆರ್ ಅವರ ನನಗೆ ಹೂಗುಚ್ಛಗಳನ್ನು ಮತ್ತು ಶಾಲುಗಳನ್ನು ನೀಡಿ ಅಭಿನಂದಿಸಿದರು. ಅವರು ನನ್ನ ಮೇಲೆ ತುಂಬಾ ಪ್ರೀತಿಯನ್ನು ತೋರಿಸಿದರು, ವಾಸ್ತವದಲ್ಲಿ ಅದು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ನಡವಳಿಕೆಯಾಗಿತ್ತು. ನನ್ನ ನಾಯಕತ್ವದಲ್ಲಿ ದೇಶವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು. ನಂತರ, ಅವರ ಪಕ್ಷವೂ(ಬಿಆರ್‌ಎಸ್) ಎನ್‌ಡಿಎ ಭಾಗವಾಗಲು ಬಯಸಿದೆ ಎಂದು ಹೇಳಿದರು. ”ಸರ್, ದಯವಿಟ್ಟು ನಮ್ಮನ್ನು ಎನ್‌ಡಿಎಗೆ ತೆಗೆದುಕೊಳ್ಳಿ ಅಂದ್ರು. ನನಗೆ ಆಶ್ಚರ್ಯವಾಯಿತು ಮತ್ತು ಕಾರಣವನ್ನು ಕೇಳಿದೆ. ಜಿಎಚ್‌ಎಂಸಿಯಲ್ಲಿ ಬಿಜೆಪಿಯ ಬೆಂಬಲವನ್ನು ಬಯಸುವುದಾಗಿ ಅವರು ಹೇಳಿದರು” ಪ್ರಧಾನಿ ತಿಳಿಸಿದ್ದಾರೆ.

ಆದರೆ, ನಾನು ಕೆಸಿಆರ್ ಅವರ ಮನವಿಯನ್ನು ತಿರಸ್ಕರಿಸಿದೆ. ಭಾರತೀಯ ಜನತಾ ಪಾರ್ಟಿ ಎಂದಿಗೂ ಬಿಆರ್‌ಎಸ್‌ನೊಂದಿಗೆ ಕೈ ಜೋಡಿಸುವುದಿಲ್ಲ. ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದರಲ್ಲಿ ಹಿಂಜರಿಕೆ ಇಲ್ಲ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಕಿರುಕುಳವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ತೆಲಂಗಾಣ ಜನರಿಗೆ ಮೋಸ ಮಾಡುವುದಿಲ್ಲ. ಆ 48 ಸ್ಥಾನಗಳೊಂದಿಗೆ ನಾವು ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ. ಬಿಆರ್‌ಎಸ್‌ಗೆ ಎನ್‌ಡಿಎಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಮತ್ತು ನಾವು ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!

ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ; ಕೆಟಿಆರ್

ಬಿಆರ್‌ಎಸ್ ಎನ್‌ಡಿಎ ಭಾಗವಾಗಲು ಮುಂದಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು, ಎನ್‌ಡಿಎ ಸೇರಲು ನಮಗೇನು ಹಚ್ಚು ನಾಯಿ ಕಚ್ಚಿದೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಅತಿ ದೊಡ್ಡ ಸುಳ್ಳಿನ ಪಕ್ಷ ಎಂದು ಹೇಳಿದ ಕೆಟಿಆರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾಟ್ಸಾಪ್‌ ವಿಶ್ವವಿದ್ಯಾಲಯ ಕುಲಪತಿಯಾಗಿದ್ದಾರೆ. ಪ್ರಧಾನಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮೊದಲು ಪ್ರದಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಹಣ ನೀಡಿತ್ತು ಎಂದು ಹೇಳಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿದ ಕೆಟಿಆರ್ ಅವರು, ಆ ಹೇಳಿಕೆಯಂತೆ ಕೆಸಿಆರ್ ಅವರು ಎನ್‌ಡಿಎ ಸೇರಲು ಮುಂದಾಗಿದ್ದರು ಎಂಬುದು ಸಂಪೂರ್ಣ ಸುಳ್ಳು ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ5 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು5 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ5 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್6 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ6 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ6 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ7 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

Top 10 news
ಟಾಪ್ 10 ನ್ಯೂಸ್7 hours ago

VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು

Agriculture Minister N Cheluvarayaswamy latest pressmeet at Kalaburagi
ಕರ್ನಾಟಕ7 hours ago

Kalaburagi News: ಮುಂದಿನ ವಾರ ರಾಜ್ಯಕ್ಕೆ ಬರ ಅಧ್ಯಯನ ತಂಡ : ಕೃಷಿ ಸಚಿವ ಚೆಲುವರಾಯಸ್ವಾಮಿ

PM Narenra Modi will stay advaita Ashram where Swami vivekand stayed in 1901
ದೇಶ7 hours ago

PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ13 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ14 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ24 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌