ugadi horoscope 2023 shobhakruth nama samvatsara rashi phala in kannadaUgadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ? - Vistara News

ಪ್ರಮುಖ ಸುದ್ದಿ

Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?

Ugadi Horoscope 2023 : ಹೊಸ ಸಂವತ್ಸರ ಬಂದಿದೆ. ಈ ಶೋಭಕೃತು ನಾಮ ಸಂವತ್ಸರದಲ್ಲಿ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ನಿಮ್ಮ ರಾಶಿಗಿರುವ ಶುಭಾಶುಭ ಫಲಗಳೇನು? ತಿಳಿಯಲು ಇಲ್ಲಿ ಓದಿ.

VISTARANEWS.COM


on

ugadi horoscope 2023 shobhakruth nama samvatsara rashi phala in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೋಭಕೃತು ನಾಮ ಸಂವತ್ಸರ ಆರಂಭವಾಗಿದೆ (Ugadi Horoscope 2023). ಮುಂದಿನ ವರ್ಷದ ಅಂದರೆ 2024ರ ಏಪ್ರಿಲ್ 8ರ ವರೆಗೆ ಈ ಸಂವತ್ಸರ ಇರಲಿದೆ. ಈ ನವ ಸಂವತ್ಸರದಲ್ಲಿ ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಈಗಿರುವ ಕುಂಭ ರಾಶಿಯಲ್ಲಿಯೇ ಸಂಚಾರ ಮುಂದುವರಿಸಲಿದೆ. ಇನ್ನು ಗುರು ಗ್ರಹವು ಇದೇ ಏಪ್ರಿಲ್ 22 ತನಕ ಮೀನ ರಾಶಿಯಲ್ಲಿದ್ದು, ಏಪ್ರಿಲ್ 22 ನಂತರ ಈ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದೆ.

ಯುಗಾದಿ ಆರಂಭದಿಂದ ಅಕ್ಟೋಬರ್ 30ರವರೆಗೆ ರಾಹು ಮೇಷದಲ್ಲಿ, ತುಲಾದಲ್ಲಿ ಕೇತು ಇದ್ದು, ಅಕ್ಟೋಬರ್ 30 ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹು, ಕನ್ಯಾದಲ್ಲಿ ಕೇತು ಸಂಚಾರ ನಡೆಸಲಿವೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿರುತ್ತದೆ ಎಂಬುದನ್ನು ನೋಡೋಣ;

ಮೇಷ: ಸ್ವತಂತ್ರ ಗುರುವಿನಿಂದ ರಕ್ಷಣೆ

ugadi horoscope 2023
ugadi horoscope 2023

ಮೇಷ ರಾಶಿಯವರಿಗೆ ಗುರು ದ್ವಾದಶದಲ್ಲಿದ್ದು, ಏಕಾದಶ ಶನಿ ಇದ್ದಾನೆ. ಏಪ್ರಿಲ್ 21ನಂತರ ಗುರು ವೃಷಭಕ್ಕೆ ಹೋದಾಗ ಬೃಹಸ್ಪತಿ ಸಂಧಿ (ರಾಹು ದಶೆಯು ಮುಗಿದು ಗುರು ದಶೆಯು ಶುರುವಾಗಿದ್ದರಿಂದ ರಾಹು- ಬೃಹಸ್ಪತಿ ಸಂಧಿ) ಸಂಭವಿಸುತ್ತದೆ. ಈ ಸಂದರ್ಭದಲ್ಲಿ ನೀವು ಎಚ್ಚರ ವಹಿಸದಿದ್ದರೆ ಕಾರ್ಯದಲ್ಲಿ ಅಲ್ಪ ತೊಡಕು, ವಿಘ್ನ ಉಂಟಾಗುವ ಸಾಧ್ಯತೆ ಇರುತ್ತದೆ. ಮೇ15ರವರೆಗೂ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಸ್ವತಂತ್ರ ಗುರುವು ನಿಮ್ಮನ್ನು ಸಂರಕ್ಷಣೆ ಮಾಡುತ್ತಾನೆ. ಮಾತಿನಲ್ಲಿ ಎಚ್ಚರ ಇರಲಿ. ಗುರು -ರಾಹುವಿಗಾಗಿ ನಾಡಿನ ಅತ್ಯಂತ ಪ್ರಸಿದ್ಧ ದೇವರಾದ ಕುಕ್ಕೆ ಸುಬ್ರಹ್ಮಣ್ಯನನ್ನು ಆರಾಧಿಸಿ ಬನ್ನಿ. ಈ ಸಂವತ್ಸರದಲ್ಲಿ ನೀವು ಸಮನಾದ ಶುಭ-ಅಶುಭ ಫಲಗಳನ್ನು ಪಡೆಯುತ್ತೀರಿ.

ವೃಷಭ: ಆರೋಗ್ಯದ ಕಡೆ ಗಮನ ನೀಡಿ

ugadi horoscope 2023
ugadi horoscope 2023

ಹತ್ತನೇಯ ಮನೆಯಲ್ಲಿ ಶನಿ ಇದ್ದಾನೆ. ದ್ವಾದಶಕ್ಕೆ ಗುರು ಏಪ್ರಿಲ್ 21ರಿಂದ ಬರುತ್ತಾನೆ. ಈ ಸಂದರ್ಭದಲ್ಲಿ ಸುಲಭ ನಡೆ ಇಲ್ಲ. ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಗುರುವಿನ ಗುಲಾಮರಾಗದೇ ನಿಮಗೆ ತೊಂದರೆ ತಪ್ಪದು. ಗುರು ಸಮಾನರಾದ ಮಾತಾಪಿತೃ ಹಾಗೂ ಗುರವರ್ಯರನ್ನು ಪೂಜಿಸಿ, ಅವರ ಮಾರ್ಗದರ್ಶನವನ್ನು ಅನುಸರಿಸಿ ನಡೆದರೆ ಒಳ್ಳೆಯದು. ದುರ್ಗೆಯನ್ನು ಪೂಜಿಸಿದರೆ ಸಮಾಧಾನವಾಗಿ ನಿಮ್ಮೆಲ್ಲ ಕಷ್ಟಗಳು ದೂರವಾಗುತ್ತವೆ. ಈ ಸಂವತ್ಸರದಲ್ಲಿ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ದುಷ್ಟರಿಂದ ದೂರವಿರಿ. ಹನ್ನೆರಡರಲ್ಲಿ ಸಂಚರಿಸುವ ರಾಹು, ಆರನೇ ಮನೆಯಲ್ಲಿ ಕೇತು ಆದಾಯ- ವ್ಯಯದ ವಿಷಯದಲ್ಲಿ ನಿಮ್ಮ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದು. ಕೊಲ್ಲೂರು ಮೂಕಾಂಬಿಕೆ, ಶೃಂಗೇರಿಯ ಶಾರದೆಯ ದರ್ಶನ ಮಾಡಿ, ಒಳ್ಳೆಯ ಫಲಗಳನ್ನು ಪಡೆಯಬಹುದು.

ಮಿಥುನ : ಸುಬ್ರಹ್ಮಣ್ಯನನ್ನು ಅನನ್ಯವಾಗಿ ಪ್ರಾರ್ಥಿಸಿ

ugadi horoscope 2023
ugadi horoscope 2023

ಎಂಟನೇ ಮನೆಯಲ್ಲಿ ಶನಿ ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರವಿರುತ್ತದೆ. ಏಕಾದಶದ ಗುರುವಿಗೆ ರಾಹು ಸಂಪರ್ಕವಿರುವುದರಿಂದ ಸದಾಕಲಾ ಸುಬ್ರಹ್ಮಣ್ಯನನ್ನು ಪ್ರಾರ್ಥಿಸುವುದರಿಂದ, ನಿಮ್ಮ ಬುದ್ಧಿಯನ್ನು ನೆಟ್ಟಗಿಟ್ಟು, ಆತನೇ ನಿಮಗೆ ಮಾರ್ಗದರ್ಶನ ನೀಡುತ್ತಾನೆ. ನಿಮ್ಮ ಕಷ್ಟಗಳನ್ನು ದೂರಮಾಡುತ್ತಾನೆ. ಹಾನಿಯುಂಟು ಮಾಡದ ವಿಷಯಗಳಲ್ಲಿ ಅನಾವಶ್ಯಕವಾಗಿ ನಿಮ್ಮ ತಲೆ ತೂರಿಸಲು ಹೋಗಬೇಡಿ. ನಿಮ್ಮೆಲ್ಲಾ ಕೆಲಸಗಳು ನಡೆಯ ಬೇಕಾದರೆ 11ರ ರಾಹುವಿಗಾಗಿ ಚಂಡಿಕಾ ಪರಮೇಶ್ವರಿಯನ್ನು ಪೂಜಿಸಿ. ಶತ್ರು ಕಾಟ ತಪ್ಪಿಸಲು ಭಗಳಮುಖಿ ಸಂದರ್ಶಿಸಿ. ಅಕ್ಟೋಬರ್ ತಿಂಗಳ ನಂತರದಲ್ಲಿ ರಾಹು ಹತ್ತನೇ ಮನೆಗೆ, ಕೇತು ನಾಲ್ಕನೇ ಮನೆಗೆ ಬರುತ್ತಾರೆ. ಆ ನಂತರ ಉದ್ಯೋಗದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಿ.

ಕಟಕ: ದೇವತಾನುಗ್ರಹದಿಂದ ಮಾತ್ರ ಕಷ್ಟ ದೂರ

ugadi horoscope 2023
ugadi horoscope 2023

ಶನಿಯು ಎಂಟನೇ ಮನೆಯಲ್ಲಿ ಸಂಚರಿಸುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ. ಅಕ್ಟೋಬರ್ ತನಕ ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ಕೂಡ ನೀವು ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂಸಾರದಲ್ಲಿ ಒಡಹುಟ್ಟಿದವರೊಂದಿಗೆ ಅಸಮಾಧನ ಉಂಟಾಗಲಿದೆ. ಇದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸವನ್ನು ಕೊಡಲಿದೆ. ನಿಮ್ಮ ದೇವತಾನುಗ್ರಹದಿಂದ ನೀವು ನಿಮ್ಮೆಲ್ಲ ಕಷ್ಟಗಳಿಂದ ಪಾರಾಗಬಹುದು. ಒಂಬತ್ತರ ಗುರುವು ದಶಮಕ್ಕೆ ಬರುತ್ತಾನೆ. ಗುರು ಬಲವು ತಪ್ಪಿದ ಸಂದರ್ಭ ಇದಾಗಿದೆ. ಸಾಕ್ಷಾತ್‌ ಪಾರ್ವತಿ ಪರಮೇಶ್ವರರೇ ಗುರುವೆಂದು ಭಾವಿಸಿ, ಅವರನ್ನು ಪೂಜಿಸದೇ, ಹಿರಿಯರನ್ನು, ಮನೆಯ ಯಜಮಾನರನ್ನು ಕೇಳದೇ ಯಾವ ಕೆಲಸವನ್ನೂ ಮಾಡಬೇಡಿ. ಈ ಸಂವತ್ಸರದಲ್ಲಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಿ. ಸಂವತ್ಸರ ದೇವತೆಯಾದ ಕರ್ಕಾಟಕ ರಾಶಿಯಲ್ಲಿ ಜನಿಸಿದ ಶ್ರೀ ರಾಮಚಂದ್ರನನ್ನು ಪೂಜಿಸಿ, ಒಂದು ಸಂವತ್ಸರದ ಕಾಲ ಸುಂದರಕಾಂಡವನ್ನು ಪಾರಾಯಣ ಮಾಡಿ. ಜೀವನವನ್ನು ಜಯಿಸಿ, ಗುರುವು ಏಕದಶಕ್ಕೆ ಬಂದಾಗ ನಿಮ್ಮೆಲ್ಲ ಕೋರಿಕೆ ಈಡೇರಲಿದೆ.

ಸಿಂಹ: ಒಳ್ಳೆಯ ಹೆಸರು ಮಾಡುವ ಸಮಯ

ugadi horoscope 2023
ugadi horoscope 2023

ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ನಿಮ್ಮ ಜೀವನವನ್ನು ದೇವರೇ ಪರೀಕ್ಷಿಸುತ್ತಿದ್ದಾನೆ ಎಂದು ಭಾವಿಸಬೇಕು. ಮಕ್ಕಳು ಪರೀಕ್ಷೆಗೆ ಓದುವಾಗ ಪಾಠವನ್ನು ಅರ್ಥೈಸಿಕೊಳ್ಳುವಂತೆ, ನೀವು ಜೀವನ ಪಾಠವನ್ನು ಅರ್ಥೈಸಿಕೊಂಡು, ಸನ್ನಿವೇಶ, ಸಂದರ್ಭಗಳಿಗೆ ತಕ್ಕಂತೆ, ವಿಚಾರ ಧಾರೆಗಳನ್ನು ಬದಲಾಯಿಸಿಕೊಂಡು, ಯಾರಿಗೂ ಹಾನಿಯಾಗದಂತೆ, ಯಾರ ಮನಸ್ಸಿಗೂ ನೋವುಂಟಾಗದಂತೆ ಮುನ್ನೆಡೆಯಬೇಕು. ಒಂಬತ್ತರ ಗುರುವು ಬಾಗಿಲು ತಟ್ಟಿ ಬಂದು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಒಂಬತ್ತನೇ ಮನೆಯಲ್ಲಿರುವ ರಾಹು ಮತ್ತು ಮೂರನೇ ಮನೆಯಲ್ಲಿರುವ ಕೇತು ಅಕ್ಟೋಬರ್‌ 30ರ ನಂತರ ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ತರುತ್ತಾರೆ. ನೀವು ಒಳ್ಳೆಯ ಹೆಸರು ಸಂಪಾದನೆ ಮಾಡುವ ಕಾಲ ಈ ಸಂವತ್ಸರ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ. ನಿತ್ಯವೂ ಸರಸ್ವತಿ ಪೂಜೆ, ಆರೋಗ್ಯಕ್ಕಾಗಿ ಶನಿ ಪ್ರಾರ್ಥನೆ ಇರಲಿ.

ಕನ್ಯಾ : ಶನಿಯಿಂದ ಸಂಪತ್ತು, ಸೌಕರ್ಯ ಲಭ್ಯ

ugadi horoscope 2023
ugadi horoscope 2023

ಇದೇ ಏಪ್ರಿಲ್‌ನಲ್ಲಿ ಅಷ್ಟಮಕ್ಕೆ ಬರುವ ಗುರುವು ರಾಹುವಿನ ಜತೆಗೂಡಿ, ನೀವು ಇದುವರೆಗೆ ಮಾಡಿದ ಪುಣ್ಯ-ಪಾಪಗಳಿಗೆ ತಕ್ಕ ಪ್ರತಿಫಲ ನೀಡುತ್ತಾರೆ. ʻಗುರುದ್ರೋಹಂ ಕುಲ ನಾಶನಂʼ ಎಂಬ ಮಾತಿನಂತೆ ನೀವು ಗುರುಗಳಿಗೆ ದ್ರೋಹ ಮಾಡಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆರನೇ ಮನೆಯಲ್ಲಿರುವ ಶನಿಯು ನಿಮಗೆ ಈ ಸಂವತ್ಸರದಲ್ಲಿ ಸಾಕಷ್ಟು ಸಂಪತ್ತು, ಸೌಕಯರ್ಯಗಳನ್ನು ಒದಗಿಸುತ್ತಾನೆ. ಆದರೆ ನಿಮಗೆ ಶಾಶ್ವತವಾಗಿ ಇವೆಲ್ಲವೂ ದೊರೆಯಬೇಕಾದರೆ ಗುರು ವೊಬ್ಬನೇ ಕಾರಣಕರ್ತನು. ಅವನ ಕೃಪೆ ಇರಲೇಬೇಕು. ಗುರು ರಾಹು ಸಂಪರ್ಕದಿಂದ ಜಟರದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಸೂಕ್ತ ವೈದ್ಯರ ಮಾರ್ಗದರ್ಶನ ಪಡೆದು ಮುಂದುವರಿಯಿರಿ. ಅಷ್ಟಮ ಗುರುವು ಆರೋಗ್ಯ ದೃಷ್ಟಿಯಿಂದ ಹಿತಕರ ಸೂಚನೆ ಕೊಡುವುದಿಲ್ಲ. ಹೀಗಾಗಿ ಶ್ರೀ ಗುರು ದತ್ತಾತ್ರೇಯನನ್ನು, ನಂಜನ ಗೂಡಿನ ಶ್ರೀ ನಂಜುಂಡೇಶ್ವರನನ್ನು ಅನನ್ಯವಾಗಿ ಪೂಜಿಸಿ.

ತುಲಾ: ಮಾತಿನ ಮೇಲೆ ಹಿಡಿತವಿರಲಿ

ugadi horoscope 2023
ugadi horoscope 2023

ರಾಶಿಯವರಿಗೆ ಸಪ್ತಮದಲ್ಲಿ ಗುರು ಹಾಗೂ ಪಂಚಮದಲ್ಲಿ ಶನಿ ಇರುತ್ತಾರೆ. ಸ್ವಕ್ಷೇತ್ರದಲ್ಲಿ ಶನಿ ಇದ್ದಾನೆ. ತುಲಾ ರಾಶಿಯ ಅಧಿಪತಿಯ ಕಾರಣಕ್ಕೆ ಆತ ಕಷ್ಟಕಾರ್ಪಣ್ಯಗಳನ್ನು ನೀಡುವುದಿಲ್ಲ. ಸಂತೋಷವನ್ನು, ಅದ್ಭುತವಾದ ವಿಚಾರಗಳಲ್ಲಿ ಜಯವನ್ನು ಹಾಗೂ ಅದ್ದೂರಿಯಾದ ಜೀವನವನ್ನು ಕೊಟ್ಟು ಸಹಕರಿಸುತ್ತಾನೆ. ಜನ್ಮ ರಾಶಿಯಲ್ಲಿಯೇ ಕೇತು ಇರುವುದರಿಂದ ನಿಮ್ಮ ಮಾತು ಹರಿತವಾದ ಚಾಕುವಿನಂತಹ ಆಯುಧವಾಗದಿರಲಿ. ಮಾತಿನ ಮೇಲೆ ಹಿಡಿತವಿರಲಿ. ಸೌಮ್ಯತೆಯಿಂದ ಕೂಡಿರಲಿ. ಮಾತಿನಿಂದ ಯಾರನ್ನೂ ಗೆಲ್ಲಬಹುದು. ಅದೇ ನಿಮ್ಮ ಜೀವನದ ಅಡಿಪಾಯವಾಗಿರಲಿ. ಗುರುವು ಕನ್ಯಾ ರಾಶಿಗೆ ಹೋದ ಮೇಲೆ ಸ್ವತಂತ್ರ ಗುರುವು ನಿಮ್ಮ ಜೀವನದಲ್ಲಿ ಮತ್ತಷ್ಟು ಶೋಭೆಯನ್ನು, ಲಾಭವನ್ನು, ಧೈರ್ಯವನ್ನು, ಕೀರ್ತಿಯನ್ನು ತಂದುಕೊಂಡುತ್ತಾನೆ. ನೆನಪಿರಲಿ ನಿಮ್ಮದು ತಕ್ಕಡಿಯ ರಾಶಿ. ನಿಮ್ಮ ತುಲಭಾರ ಮಾಡುವವರು ಪರಮಾತ್ಮನ ಸ್ವರೂಪಿಯಾದ ನಿಮ್ಮ ತಂದೆ-ತಾಯಿಯರು. ಅವರನ್ನು ಅನುಗ್ರಹವನ್ನು, ಆಶೀರ್ವಾದವನ್ನು ಪಡೆದರೆ, ಜಗತ್ತನ್ನೇ ಗೆದ್ದು, ಕೀರ್ತಿವಂತರಾಗಿ ಬದುಕಬಹುದು. ಕೋರ್ಟ್‌, ಕಚೇರಿ, ವ್ಯವಹಾರ, ಸಂಧಾನ ಎಲ್ಲದರಲ್ಲಿಯೂ ನಿಮಗೆ ಜಯ ಸಿಗುತ್ತದೆ.

ವೃಶ್ಚಿಕ : ಭಕ್ತಿಯಿಂದ ಜೀವನ ಗೆಲ್ಲಿ!

ugadi horoscope 2023
ugadi horoscope 2023

ಈ ಸಂವತ್ಸರದಲ್ಲಿ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ಹಾಗೆಯೇ ಸಂವತ್ಸರದ ಆರಂಭದಲ್ಲಿ ಗುರು ಬಲವು ಸಂಪೂರ್ಣವಾಗಿದ್ದು, ಅದೃಷ್ಟವನ್ನು ನೀಡುತ್ತಾನೆ. ಸರಿಯಾದ ಪ್ರಯತ್ನವನ್ನು ಮಾಡಿದಲ್ಲಿ, ಸರಿಯಾದ ಮಾರ್ಗದಲ್ಲಿ ಹೋದರೆ ಏನನ್ನು ಬೇಕಾದರೂ ಸಾಧಿಸಬಹುದು. ಪರಮಾತ್ಮನು ಕಣ್ಣು ಬಿಟ್ಟರೆ ಒಂದೇ ಕ್ಷಣದಲ್ಲಿ ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಯನ್ನಾದರೂ ತರಬಲ್ಲನು. ಭಕ್ತಿಯೊಂದಿದ್ದರೆ ಜೀವನವನ್ನೇ ಗೆಲ್ಲಬಹುದು. ಶತ್ರುಗಳನ್ನು ಕೂಡ ಗೆದ್ದು ಯಶಸ್ಸಿನ ಮೆಟ್ಟಿಲೇರಹುದು. ಏಪ್ರಿಲ್‌ 21 ರ ನಂತರ ಗುರುವು ಆರನೇ ಮನೆಯಲ್ಲಿ ಸಂಚಾರ ನಡೆಸಲಿದ್ದು, ಈ ಸಂದರ್ಭದಲ್ಲಿ ಉದ್ಯೋಗದಲ್ಲಿ, ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕಿರುತ್ತದೆ. ಹನ್ನೆರಡನೇ ಮನೆ ಕೇತು ವ್ಯಯಕ್ಕೆ ಕಾರಣನಾದರೂ ದೈವ ಭಕ್ತಿಯನ್ನು ಮೂಡಿಸುತ್ತಾನೆ. ನಾಲ್ಕನೆ ಮನೆಯ ಶನಿ ಸಂಚಾರದಿಂದಾಗಿ ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಆದರೆ ಶುದ್ಧ ಮನಸ್ಸು ನೀಡುತ್ತಾನೆ. ಒಟ್ಟಾರೆಯಾಗಿ ಈ ಸಂವತ್ಸರದಲ್ಲಿ ಈ ರಾಶಿಯವರಿಗೆ ಶೇ. 50 ರಷ್ಟು ಶುಭ ಫಲವಿದ್ದರೆ, ಶೇ. 50ರಷ್ಟು ಅಶುಭ ಫಲಗಳನ್ನು ಕಾಣಬಹುದು.

ಧನಸ್ಸು: ಸುಖ ಸಂತೋಷದ ಸಮಯ

ugadi horoscope 2023
ugadi horoscope 2023

ಏಳೂವರೆ ವರ್ಷ ನಿಮ್ಮನ್ನು ಕಾಡಿದ ಸಾಡೇಸಾತ್ ಶನಿ ದೋಷವು ಸಂಪೂರ್ಣವಾಗಿ ನಿಮ್ಮಿಂದ ದೂರವಾಗುವ ಸಮಯ ಇದು. ಈ ಸಂವತ್ಸರದಲ್ಲಿ ಮೂರನೇ ರಾಶಿಯಲ್ಲಿ ಶನಿ ಸಂಚಾರ ಇರಲಿದೆ. ಹೀಗಾಗಿ ಆರ್ಥಿಕವಾಗಿ ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳಬಹುದು. ಹೊಸ ವ್ಯಾಪಾರ-ವ್ಯವಹಾರ ಶುರು ಮಾಡಬಹುದು. ಗುರುವು ಸಂವತ್ಸರದ ಮೊದಲ ಒಂದು ತಿಂಗಳು, ಮೀನಾ ರಾಶಿಯಲ್ಲಿರುವಾಗ ಮನೆ ಕಟ್ಟುವ, ವಾಹನ ಕೊಳ್ಳುವ ಯೋಗವಿದೆ. ಏಪ್ರಿಲ್‌ನಲ್ಲಿ ಗುರುವು ಐದನೇ ಮನೆಗೆ ಹೋಗುತ್ತಾನೆ. ಆಗಲೂ ನಿಮಗೆ ಲಾಭದ ಸಂದರ್ಭವಿದೆ. ಈ ಸಂವತ್ಸರದಲ್ಲಿ ನೀವು ಸುಖ-ಸಂತೋಷವನ್ನು ಕಾಣಬಹುದು. ನಿಮಗೆ ಅಕಸ್ಮಿಕವಾಗಿ ಧನಲಾಭವಾದರೆ ಆರ್ಥಿಕ ವಿಷಯದಲ್ಲಿ ಮಿಂಚಿನಂತೆ ಓಡುವ ಕಾಲವಿದು.

ಮಕರ: ಪಾಪ-ಪುಣ್ಯಗಳಿಗೆ ತಕ್ಕ ಫಲ

ugadi horoscope 2023
ugadi horoscope 2023

ಈ ಸಂವತ್ಸರದಲ್ಲಿ ಕುಂಭದಲ್ಲಿನ ಶನಿ ಎರಡನೇ ಮನೆಯಲ್ಲಿ ಹಾಗೂ ಯುಗಾದಿಯಿಂದ ಒಂದು ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು ಆ ನಂತರ ಸಂವತ್ಸರದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿವೆ. ಸಾಡೇಸಾತಿ ಶನಿ ಸಂಚಾರವು ಕೊನೆಯ ಹಂತದಲ್ಲಿದ್ದು, ನಿಮ್ಮನ್ನು ಬಿಡುವ ಕಾಲ ಇದು. ನಾವು ಮಾಡಿದ ಪಾಪ-ಪುಣ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯುತ್ತೇವೆ. ನೀವು ವ್ಯಾಕುಲ ಬುದ್ಧಿಯನ್ನು ಬಿಟ್ಟು, ಮನಸ್ಸನ್ನು ಬಿಗಿಯಾಗಿ ಹತೋಟಿಯಲ್ಲಿಟ್ಟುಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ನಾಲ್ಕನೇ ಮನೆಯಲ್ಲಿ ಗುರುವಿನೊಂದಿಗೆ ರಾಹು ಕೂಡ ಇರುವುದು ಅಷ್ಟು ಶುಭಕರವಲ್ಲ. ಹೀಗಾಗಿ ಗುರು ದಕ್ಷಿಣಾಮೂರ್ತಿಯನ್ನು ಪೂಜಿಸಿ. ಪ್ರತಿ ಗುರುವಾರ ಕಡಲೆಬೆಳೆಯನ್ನು ದಾನ ಮಾಡಿ. ಸಾಧ್ಯವಾಗದೇ ಇದ್ದರೆ, ಕಡಲೆಬೆಳೆಯ ಕೋಸಂಬರಿ ಮಾಡಿ ದೇವರಿಗೆ ನೈವೇದ್ಯ ಮಾಡಿ, ಸುಖವನ್ನು ಕಾಣಬಹುದು. ನೀವು ಕಷ್ಟಪಡುತ್ತಿರುವ ಕೆಲವು ಕೆಲಸಗಳು ತನ್ನಿಂದ ತಾನೇ ವೇಗವನ್ನು ಪಡೆದು, ಮುಕ್ತಾಯದ ಹಂತಕ್ಕೆ ಬರುತ್ತವೆ. ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗ, ವ್ಯಾಪಾರ, ವಹಿವಾಟುಗಳಲ್ಲಿ ನೀವು ನಿರೀಕ್ಷೆ ಮಾಡಿರಿದ ತಿರುವುಗಳನ್ನು ಎದುರಿಸಬೇಕಾಗಿ ಬರಬಹುದು.

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ಕುಂಭ : ಗುರು ಚರಿತ್ರೆಯ ಪಾರಾಯಣ ಮಾಡಿ

ugadi horoscope 2023
ugadi horoscope 2023

ಈ ಸಂವತ್ಸರದಲ್ಲಿ ದ್ವಾದಶದಿಂದ ಜನ್ಮ ರಾಶಿಗೆ, ಸ್ವಕ್ಷೇತ್ರಕ್ಕೆ ಶನಿ ಗ್ರಹವು ಬಂದಿರುವುದರಿಂದ ಸಾಡೇಸಾತ್ ಎರಡನೇ ಹಂತವು ಆರಂಭ ಆಗುತ್ತದೆ. ಎರಡರಲ್ಲಿರುವ ಗುರು ಶನಿಯ ಈ ಸಂಚಾರದಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನಿಮ್ಮನ್ನು ಸಂರಕ್ಷಿಸಿದ್ದಾನೆ. ಏಪ್ರಿಲ್‌ನಲ್ಲಿ ಗುರುವು ಮೂರನೇ ಮನೆಗೆ ಸಂಚಾರ ನಡೆಸಿ, ಅಲ್ಲಿ ರಾಹು ಸಂಪರ್ಕಕ್ಕೆ ಬಂದನಂತರ ನಿಮಗೆ ಗುರುಬಲವು ತನ್ನಿಂದ ತಾನೇ ಕುಗ್ಗುತ್ತದೆ. ಈ ಸಂವತ್ಸರದಲ್ಲಿ ನೀವು ಗುರು ಚರಿತ್ರೆಯ 14 ಮತ್ತು 18 ನೇ ಅಧ್ಯಯನವನ್ನು ನಿತ್ಯ ಪರಾಯಣ ಮಾಡುವುದರಿಂದ ಶನಿಯ ಅವಕೃಪೆಯಿಂದ ಪಾರಾಗಬಹದು ಹಾಗೂ ದೈವಕೃಪೆಯೂ ದೊರೆಯುತ್ತದೆ. ನಿಮಗೆ ರಕ್ಷಣೆ ದೊರೆಯುತ್ತದೆ. ಅಧಿಕವಾದ ವೆಚ್ಚಗಳನ್ನು ಮಾಡಿ, ಮನೆ ಇತ್ಯಾದಿ ವ್ಯಪಾರಗಳಲ್ಲಿ ಹಣವನ್ನು ಹೂಡದೇ ಜೋಪಾನವಾಗಿ ಸಾಗಿರಿ. ಒಂಬತ್ತರ ಕೇತುವಿನಿಂದಾಗಿ ಅಕ್ಟೋಬರ್ ನಂತರದಲ್ಲಿ ಎಷ್ಟೇ ಹಣ ಬಂದರೂ ಉಳಿತಾಯ ಮಾಡಲಾಗದು. ಇಡೀ ಸಂವತ್ಸರದಲ್ಲಿ ಆಂಜನೇಯನನ್ನು ಪೂಜಿಸಿ.

ಮೀನ: ಮೊಂಡುತನ ಬಿಟ್ಟರೆ ಗೆಲ್ಲಬಹುದು!

ugadi horoscope 2023
ugadi horoscope 2023

ಶನಿ ಸಂಚಾರ ನಿಮ್ಮ ವ್ಯಯ ಸ್ಥಾನದಲ್ಲಿ, ಅಂದರೆ ಹನ್ನೆರಡನೇ ಮನೆಯಲ್ಲಿ ಇರಲಿದೆ. ಸಂವತ್ಸರದ ಮೊದಲ ಒಂದು ತಿಂಗಳ ನಂತರ ಗುರುವು ದ್ವಿತೀಯಕ್ಕೆ ಬರುತ್ತಾನೆ. ಆ ನಂತರ ನಿಮಗೆ ಗುರುಬಲವು ಚೆನ್ನಾಗಿದ್ದರೂ, ನಿಮ್ಮ ಕೆಟ್ಟ ಸ್ವಭಾವ, ಮೊಂಡುತನವನ್ನು ಬಿಡಬೇಕು. ನಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು ಎಂಬುದನ್ನು ಬಿಟ್ಟು ಎಲ್ಲರ ಅಭಿಪ್ರಾಯಗಳಿಗೆ ಗೌರವ ನೀಡಿದರೆ ಗುರುವು ನಿಮ್ಮನ್ನು ಮುನ್ನೆಡೆಸುತ್ತಾನೆ. ಗುರುವಿಗೆ ರಾಹುವಿನಿಂದ ಗ್ರಹಣ ಉಂಟಾಗಿ, ರಾಹು-ಬೃಹಸ್ಪತಿ ಸಂಧಿಕಾಲದಲ್ಲಿ ಸಿಕ್ಕಿಹಾಕಿಕೊಂಡು ಪರಿಪೂರ್ಣವಾದ ಯಾವ ಕೆಲಸವನ್ನೂ ಮಾಡುವುದಿಲ್ಲ. ಆರೋಗ್ಯಕ್ಕೂ ತೊಂದರೆ ಇಲ್ಲ. ಆದರೆ ವಿಶಾಲವಾದ ಮನಸ್ಸಿರಬೇಕು, ದೇವತಾರಾಧನೆಯಿರಬೇಕು, ನೀವು ಈವರೆಗೆ ಮಾಡಿದ ತಪ್ಪುಗಳನ್ನು ತಿದ್ದುಕೊಂಡಲ್ಲಿ ಎರಡನೇ ಗುರುವು ನಿಮ್ಮನ್ನು ಇಡೀ ಸಂವತ್ಸರ ಸಂರಕ್ಷಿಸುತ್ತಾನೆ. ರಾಹುಗೆ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ಗುರು ಮೇಷರಾಶಿಯಲ್ಲಿರುವುದರಿಂದ ಈಶ್ವರನ ಪುತ್ರನಾದ ಷಣ್ಮುಖನನ್ನು ಪ್ರಾರ್ಥಿಸಿದರೆ ಎಲ್ಲವೂ ಕೈ ಸೇರಿ ಸಂತೋಷ ಉಂಟಾಗುತ್ತದೆ.

ನಮ್ಮ ಆರಾಧ್ಯದೈವ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ, ಶ್ರೀ ಗುರು ದತ್ತತ್ರೇಯ ದೇವರಿಗೆ ನಮಿಸಿ, ನಮ್ಮ ಕುಲಗುರುಗಳಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಗೆ ವಂದಿಸಿ ಈ ರಾಶಿ ಫಲವನ್ನು ಇಲ್ಲಿ ದಾಖಲಿಸಿದ್ದೇನೆ.

ಎಲ್ಲರಿಗೂ ಈ ನವ ಸಂತ್ಸರವು ಶುಭವನ್ನು, ಸುಖವನ್ನು, ಸಂಭ್ರಮವನ್ನು ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Kaveri Aarti: ನಾಡಿನ ಪುಣ್ಯನದಿ ಕಾವೇರಮ್ಮನಿಗೆ ಕಾವೇರಿ ಆರತಿ ಮಾಡುವ ಯೋಜನೆ ಬಗ್ಗೆ ಸರ್ಕಾರದಿಂದ ಚಿಂತನೆ ನಡೆದಿದ್ದು, ಕಾವೇರಿ ಆರತಿಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಸಮಿತಿ ರಚಿಸಿದೆ.

VISTARANEWS.COM


on

kaveri aarti
Koo

ಬೆಂಗಳೂರು: ಹಿಮಾಲಯದ (Himalayas) ತಪ್ಪಲು ಪುಣ್ಯಕ್ಷೇತ್ರಗಳಾದ ಹರಿದ್ವಾರ, ಹೃಷಿಕೇಶ, ಕಾಶಿಯಲ್ಲಿ ನಡೆಯುವ ಮನಮೋಹಕ ಗಂಗಾರತಿ (Ganga Aarti) ಮಾದರಿಯಲ್ಲಿ ಕರ್ನಾಟಕದಲ್ಲಿಯೂ ʼಕಾವೇರಿ ಆರತಿʼ (Kaveri Aarti) ಏರ್ಪಡಿಸಲು ರಾಜ್ಯ ಸರಕಾರ (Karnataka Govt) ಸಜ್ಜಾಗಿದ್ದು, ಮುಂದಿನ ದಸರಾ (Dussehra) ಅವಧಿಯ ಹೊತ್ತಿಗೆ ಅದನ್ನು ಕಾರ್ಯಗತಗೊಳಿಸಲು ಚಿಂತಿಸಿದೆ.

ನಾಡಿನ ಪುಣ್ಯನದಿ ಕಾವೇರಮ್ಮನಿಗೆ ಕಾವೇರಿ ಆರತಿ ಮಾಡುವ ಯೋಜನೆ ಬಗ್ಗೆ ಸರ್ಕಾರದಿಂದ ಚಿಂತನೆ ನಡೆದಿದ್ದು, ಕಾವೇರಿ ಆರತಿಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಸಮಿತಿ ರಚಿಸಿದೆ.

ಆಗಸ್ಟ್ ಮೊದಲ ವಾರ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲಿರುವ ಸಮಿತಿ, ವಾರಾಣಸಿ, ಹೃಷಿಕೇಶ ಮತ್ತು ಗಯಾಕ್ಕೆ ತೆರಳಿ ಅಲ್ಲಿ ಮಾಡಲಾಗುವ ಆರತಿ ಸಂಪ್ರದಾಯಗಳನ್ನು ವೀಕ್ಷಿಸಿ‌ ವರದಿ‌ ನೀಡಲಿದೆ. ಸಮಿತಿಯಲ್ಲಿ ಶಾಸಕರಾದ ರವಿ ಗಾಣಿಗ, ದಿನೇಶ್ ಗೂಳಿಗೌಡ ಸೇರಿದಂತೆ 10ಕ್ಕೂ ಹೆಚ್ಚಿನ ಶಾಸಕರು ಇದ್ದಾರೆ.

ಮುಂದಿನ ದಸರಾ ಹಬ್ಬದ ಸಂದರ್ಭದಲ್ಲಿ ಕಾವೇರಿ ಆರತಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಿತಿಯ ಅಧ್ಯಯನ ಪ್ರವಾಸದ ಅಂತಿಮ ಹಂತದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸಮಿತಿಯೊಂದಿಗೆ ಸೇರುವ ಸಾಧ್ಯತೆ ಇದೆ.

ಕಾವೇರಿ ಆರತಿ ಆಯೋಜನೆಗೆ ಕೆಆರ್‌ಎಸ್ ಜಲಾಶಯ ಸೂಕ್ತ ಎನ್ನಲಾಗಿತ್ತು. ಆದರೆ ಅಲ್ಲಿ ಸ್ಥಳಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ತಲಕಾಡು ಅಥವಾ ಸಂಗಮದಲ್ಲಿ ಕಾವೇರಿ ಆರತಿ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಇನ್ನೊಂದು ಕಡೆಯಿಂದ, ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲದಲ್ಲಿಯೇ ಆರತಿ ನಡೆಸಬೇಕು ಎಂಬ ಸಲಹೆಯೂ ಬಂದಿದೆ.

ಚಲುವರಾಯಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿದ ನಂತರ ಜಾಗ ಅಂತಿಮವಾಗಲಿದೆ. ಕಾವೇರಿ ಆರತಿ ಆಯೋಜನೆಗೂ ಮುನ್ನ ಕಾವೇರಿ ತಾಯಿಗೆ ದೇವಸ್ಥಾನ ನಿರ್ಮಾಣ ಮಾಡುವ ಚಿಂತನೆಯಿದೆ. ಕಾವೇರಿ ಆರತಿಯ ವರದಿ ಪಡೆಯುವುದು, ಕಾರ್ಯಕ್ರಮ ಆಯೋಜನೆ ಹೊಣೆ ಜಲಸಂಪನ್ಮೂಲ ಇಲಾಖೆಯದ್ದಾಗಿರಲಿದೆ. ಧಾರ್ಮಿಕ ದತ್ತಿ, ಲೋಕೋಪಯೋಗಿ ಇಲಾಖೆಗಳು ಸಹಕಾರ ನೀಡಲಿವೆ.

ಕಾವೇರಿ ಆರತಿಯನ್ನು ಪ್ರವಾಸಿಗರ ಕಣ್ಮನ ಸೆಳೆಯುವ ಬೃಹತ್ ಕಾರ್ಯಕ್ರಮವನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ 5ರಿಂದ 6 ಸಾವಿರ ಜನರು ಸೇರುವಂತೆ ಮಾಡುವುದು ಉದ್ದೇಶ. ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆಯೋಜಿಸಲು ಚಿಂತಿಸಲಾಗಿದೆ. ಆರಂಭದಲ್ಲಿ ವಾರಕ್ಕೆ ಒಂದು ಬಾರಿ, ನಂತರ ಎರಡು ಬಾರಿ, ಮೂರು ಬಾರಿ ಹೀಗೆ ಹೆಚ್ಚಿಸುತ್ತ ಹೋಗುವ ಬಗ್ಗೆ ಚಿಂತಿಸಲಾಗಿದೆ.

ಕೊಡಗಿನಲ್ಲಿ ನಡೆಯುತ್ತಿದೆ

ಕೊಡಗಿನಲ್ಲಿ 2011ರಿಂದಲೇ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಮಾಮಿ ಕಾವೇರಿ ಎಂಬ ಸಂಘಟನೆ ಪ್ರತಿ ತಿಂಗಳು ಹುಣ್ಣಿಮೆಯಂದು ಕಾವೇರಿಗೆ ಆರತಿ ಕಾರ್ಯಕ್ರಮ ಮಾಡುತ್ತ ಬಂದಿದ್ದು, ಇತ್ತೀಚೆಗೆ 161 ನೇ ಕಾವೇರಿ ಆರತಿ ಕಾರ್ಯಕ್ರಮ ಕೊಡಗಿನ 14 ಕಡೆಗಳಲ್ಲಿ ಏಕಕಾಲದಲ್ಲಿ ನಡೆದಿದೆ. ಕಲುಷಿತಗೊಳ್ಳುತ್ತಿರುವ ಕಾವೇರಿ ನದಿ ಮೇಲೆ ಧಾರ್ಮಿಕ ಭಾವನೆ ಬರಲಿ, ಅದರ ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ಕಾಪಾಡುವಂತಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಈವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಸ್ವಾಮೀಜಿಗಳು, ತಮಿಳುನಾಡಿನ ಸ್ವಾಮೀಜಿಗಳೂ ಪಾಲ್ಗೊಂಡಿದ್ದಾರೆ. ಹಿಂದೊಮ್ಮೆ ಸರಕಾರದಿಂದಲೂ ‘ಕಾವೇರಿ ಉತ್ಸವ” ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ಅದ್ದೂರಿ ಆರತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಕ್ರೀಡಾ ಸ್ಫರ್ಧೆಗಳು; ಶೂಟಿಂಗ್​ನಲ್ಲಿ ಪದಕ ನಿರೀಕ್ಷೆ

Paris Olympics 2024: ಇಂದು ನಡೆಯುವ 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಸಂದೀಪ್​ ಸಿಂಗ್​-ಇಲವೆನಿಲ್​ ವಲರಿವನ್​ ಮತ್ತು ಅರ್ಜುನ್​ ಬಬುಟ-ರಮಿತಾ ಜಿಂದಾಲ್ ಕಣಕ್ಕಿಳಿಯಲಿದ್ದಾರೆ.

VISTARANEWS.COM


on

Paris Olympics 2024
Koo

ಪ್ಯಾರಿಸ್​: ಒಲಿಂಪಿಕ್ಸ್​ನಲ್ಲಿ(Paris Olympics 2024) ಪದಕ ಸ್ಪರ್ಧೆಗಳು ಇಂದಿನಿಂದ(ಶನಿವಾರ) ಆರಂಭವಾಗಲಿದೆ. ಭಾರತ ಇಂದು ಹಲವು ವಿಭಾಗದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿವೆ. ಈ ಪೈಕಿ ಶೂಟಿಂಗ್​ನಲ್ಲಿ ಭಾರತ ಒಂದು ಪದಕ್ಕೆ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆಯೊಂದನ್ನು ಇಡಲಾಗಿದೆ. 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಸಂದೀಪ್​ ಸಿಂಗ್​-ಇಲವೆನಿಲ್​ ವಲರಿವನ್​ ಮತ್ತು ಅರ್ಜುನ್​ ಬಬುಟ-ರಮಿತಾ ಜಿಂದಾಲ್ ಕಣಕ್ಕಿಳಿಯಲಿದ್ದಾರೆ. ಗೆದ್ದರೆ, ಶೂಟಿಂಗ್​ ವಿಭಾಗದಲ್ಲಿ 12 ವರ್ಷಗಳ ಪದಕ ಬರ ನೀಗಲಿದೆ. ಶೂಟಿಂಗ್​ ಸ್ಪರ್ಧೆ ಪ್ಯಾರಿಸ್​ನಿಂದ 272 ಕಿಲೋಮೀಟರ್​ ದೂರದಲ್ಲಿರುವ ಚಟೌರೊಕ್ಸ್​ನಲ್ಲಿ ನಡೆಯಲಿದೆ. ಭಾರತದ ಇಂದಿನ ಕ್ರೀಡಾ ಸ್ಪರ್ಧೆಗಳ ವೇಳಾಪ್ಟಟಿ ಹೀಗಿದೆ.

ಬ್ಯಾಡ್ಮಿಂಟನ್

ಪುರುಷರ ಸಿಂಗಲ್ಸ್ ಗುಂಪು ಹಂತ: ಎಚ್ ಎಸ್ ಪ್ರಣಯ್, ಲಕ್ಷ್ಯ ಸೇನ್.

ಮಹಿಳೆಯರ ಸಿಂಗಲ್ಸ್ ಗುಂಪು ಹಂತ: ಪಿ.ವಿ ಸಿಂಧು.

ಪುರುಷರ ಡಬಲ್ಸ್ ಗುಂಪು ಹಂತ: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.

ಮಹಿಳೆಯರ ಡಬಲ್ಸ್ ಗುಂಪು ಹಂತ: ತನೀಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ. (ಮಧ್ಯಾಹ್ನ 12 ಗಂಟೆಯಿಂದ)

ಇದನ್ನೂ ಓದಿ Paris Olympics Boxing Draw: ಒಲಿಂಪಿಕ್ಸ್​ ಬಾಕ್ಸಿಂಗ್​ ಡ್ರಾ ಪ್ರಕಟ; ಮೊದಲ ಸುತ್ತಿನಲ್ಲೇ ಭಾರತೀಯ ಬಾಕ್ಸರ್​ಗಳಿಗೆ ಕಠಿಣ ಸ್ಪರ್ಧಿಗಳ ಸವಾಲು

ರೋಯಿಂಗ್


ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್: ಬಾಲರಾಜ್ ಪನ್ವಾರ್. ಆರಂಭ ಮಧ್ಯಾಹ್ನ 12:30 ರಿಂದ

ಶೂಟಿಂಗ್

10 ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್, ಅರ್ಜುನ್ ಬಾಬುತಾ, ಎಲವೆನಿಲ್ ವಲರಿವನ್, ರಮಿತಾ ಜಿಂದಾಲ್. ಮಧ್ಯಾಹ್ನ 12:30

10ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ. (ಮಧ್ಯಾಹ್ನ 2 ಗಂಟೆ)

10ಮೀ ಏರ್ ರೈಫಲ್ ಮಿಶ್ರ ತಂಡ ಪದಕ ಸುತ್ತುಗಳು: (ಅರ್ಹತೆ ಪಡೆದರೆ) ಮಧ್ಯಾಹ್ನ 2 ಗಂಟೆ

10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ ಸುತ್ತು: ರಿದಮ್ ಸಾಂಗ್ವಾನ್, ಮನು ಭಾಕರ್. (ಸಂಜೆ 4 ಗಂಟೆಯಿಂದ)

ಟೆನಿಸ್; ಮೊದಲ ಸುತ್ತಿನ ಪಂದ್ಯಗಳು


ಪುರುಷರ ಸಿಂಗಲ್ಸ್: ಸುಮಿತ್ ನಗಾಲ್.

ಪುರುಷರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ. (ಮಧ್ಯಾಹ್ನ 3:30 ರಿಂದ)

ಟೇಬಲ್ ಟೆನ್ನಿಸ್


ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ

ಮಹಿಳೆಯರ ಸಿಂಗಲ್ಸ್: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ. (ಸಂಜೆ 6:30 ರಿಂದ)

ಬಾಕ್ಸಿಂಗ್

ಮಹಿಳೆಯರ 54 ಕೆಜಿ ವಿಭಾಗ: ಪ್ರೀತಿ ಪವಾರ್, 32ರ ಸುತ್ತು. (ಸಂಜೆ 7 ರಿಂದ)

ಹಾಕಿ


ಪುರುಷರ ಗುಂಪು ‘ಬಿ’: 
ಭಾರತ ಮತ್ತು ನ್ಯೂಜಿಲ್ಯಾಂಡ್​. (ರಾತ್ರಿ 9 ಗಂಟೆಗೆ)

Continue Reading

ಪ್ರಮುಖ ಸುದ್ದಿ

Students Night: ವಿದ್ಯಾರ್ಥಿಗಳು ಕುಡಿದು ಕುಪ್ಪಳಿಸಲು ʼಸ್ಟೂಡೆಂಟ್ಸ್‌ ನೈಟ್‌ʼ ಆಯೋಜಿಸಿದ ಬಾರ್‌ ಮಾಲಿಕ! ಕಾರ್ಯಕ್ರಮ ರದ್ದು

Students Night: ʼಸ್ಟೂಡೆಂಟ್ಸ್ ವೆಡ್‌ನೆಸ್‌ಡೇ ನೈಟ್ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನವನ್ನು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಲಿಕ್ಕರ್‌ ಲಾಂಜ್‌ ಎಂಬ ಬಾರ್‌ ನೀಡಿತ್ತು. ಈ ಬಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕಾರ್ಯಕ್ರಮವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಅಬಕಾರಿ ಇಲಾಖೆ ಲಿಕ್ಕರ್ ಲಾಂಜ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

VISTARANEWS.COM


on

students night
Koo

ಮಂಗಳೂರು: ವಿದ್ಯಾರ್ಥಿಗಳು ಕುಡಿದು ಕುಣಿದ ಕುಪ್ಪಳಿಸಲು ಬಾರ್‌ ನೈಟ್‌ (Students Night) ಕಾರ್ಯಕ್ರಮ ಆಯೋಜಿಸಿದ್ದ ಬಾರ್‌ ಮಾಲೀಕರ ಕಾರ್ಯಕ್ರಮವನ್ನು ಪೊಲೀಸರು (Mangalore police) ಬಂದ್‌ ಮಾಡಿಸಿದ್ದಾರೆ. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ʼಸ್ಟೂಡೆಂಟ್ಸ್ ವೆಡ್‌ನೆಸ್‌ಡೇ ನೈಟ್ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನವನ್ನು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಲಿಕ್ಕರ್‌ ಲಾಂಜ್‌ ಎಂಬ ಬಾರ್‌ ನೀಡಿತ್ತು. ಈ ಬಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕಾರ್ಯಕ್ರಮವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಅಬಕಾರಿ ಇಲಾಖೆ ಲಿಕ್ಕರ್ ಲಾಂಜ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಸಂಜೆ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಸಹಿತ ಪಾರ್ಟಿ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ಕೂಲ್ ಐಡಿ (ಗುರುತು ಕಾರ್ಡ್) ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು ಬಂದರೆ ಅವರಿಗೆ ಫ್ರೀ ಶೂಟರ್ಸ್ ಸ್ಪೆಷಲ್ ಆಫರ್ ನೀಡುವ ಭರವಸೆಯನ್ನು ನೀಡಲಾಗಿತ್ತು.

ಕೊಂಚಾಡಿಯ ಬಾರ್‌ನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾವೂರು ಪೊಲೀಸರು ಕಾರ್ಯಕ್ರಮವನ್ನೇ ರದ್ದುಮಾಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಾರ್‌ನ ಮಾಲೀಕರಿಗೆ ಕಾವೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಮಾತ್ರವಲ್ಲದೆ ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಗೆ ಪತ್ರ ಬರೆದು ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಪೊಲೀಸ್‌ ಮೂಲಗಳು ಸಲಹೆ ಕೇಳಿದ್ದಾರೆಂದು ತಿಳಿದು ಬಂದಿದೆ. ವಿದ್ಯಾರ್ಥಿಗಳನ್ನು ಬಾರ್‌ಗೆ ಆಹ್ವಾನಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿದ್ದಕ್ಕಾಗಿ ಅಬಕಾರಿ ಇಲಾಖೆ ಈಗಾಗಲೇ 7 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ ಬಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ.

ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪತ್ರ ಬರೆದಿದ್ದು, ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಮಾಹಿತಿ ಕೇಳಿದ್ದೇವೆ. ಅವರ ಉತ್ತರ ಬಂದ ಕೂಡಲೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Continue Reading

ಪ್ರಮುಖ ಸುದ್ದಿ

Uttara Kannada Landslide: ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಸಿಎಂ ಸಿದ್ದರಾಮಯ್ಯಗೆ ಪಿಣರಾಯಿ ಮೊರೆ

Uttara kannada landslide: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್‌ ಪತ್ತೆಗೆ ಹೆಚ್ಚಿನ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ಕೇರಳ‌ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ದಕ್ಷಿಣ ಮತ್ತು ಪೂರ್ವ ನೌಕಾ ಕಮಾಂಡ್‌ಗಳಿಂದ ಹೆಚ್ಚಿನ ಮುಳುಗು ತಜ್ಞರನ್ನು ನೇಮಿಸಲು, ರಿಮೋಟ್ ಚಾಲಿತ ವಾಹನಗಳು, ಆಧುನಿಕ ಉಪಕರಣಗಳನ್ನು ಶೋಧ ಕಾರ್ಯಕ್ಕೆ ನೀಡಲು ಅವರು ಮನವಿ ಮಾಡಿದ್ದಾರೆ.

VISTARANEWS.COM


on

uttara kannada landslide shirur
Koo

ಕಾರವಾರ: ಅಂಕೋಲಾ ಶಿರೂರು ಗುಡ್ಡಕುಸಿತ (Uttara Kannada Landslide, Ankola landslide) ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ (search Operation) 12ನೇ ದಿನಕ್ಕೆ ಕಾಲಿಟ್ಟಿದೆ. ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ 11 ಮಂದಿ ಪೈಕಿ 8 ಶವ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ನದಿಯಲ್ಲಿ ಶೋಧ ಮುಂದುವರಿದಿದೆ. ಕೇರಳದ ಡ್ರೈವರ್‌ ಶೋಧಕ್ಕಾಗಿ ಹೆಚ್ಚಿನ ಪ್ರಯತ್ನ ವಹಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Kerala CM Pinarayi Vijayan) ಮನವಿ ಮಾಡಿದ್ದಾರೆ.

ಈಗಾಗಲೇ ಹೆದ್ದಾರಿಯಲ್ಲಿ ಬಿದ್ದಿದ್ದ ಟನ್ನುಗಟ್ಟಲೆ ಮಣ್ಣನ್ನು ಅಲ್ಲಿಂದ ತೆರವು ಮಾಡಲಾಗಿದೆ. ಹೋಟೆಲ್‌ ಅವಶೇಷಗಳೂ ದೊರೆತಿವೆ. ಆದರೆ ಇನ್ನೂ ಮೂವರ ಶವಗಳು ಮಾತ್ರ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ದೆಹಲಿಯ ಎನ್‌ಡಿಆರ್‌ಎಫ್ ತಂಡ‌ ಡ್ರೋನ್ ಮೂಲಕ ಸ್ಕ್ಯಾನಿಂಗ್ ನಡೆಸಿದ್ದು, ನದಿಯಲ್ಲಿ ಸ್ಕ್ಯಾನಿಂಗ್ ಮೂಲಕ ಲಾರಿ ಇರುವ ಸ್ಥಳ ಗುರುತು ಮಾಡಲಾಗಿದೆ. ಆದರೆ ಡೈವಿಂಗ್ ಮಾಡಿ ಲಾರಿಯನ್ನು ಪರಿಶೀಲಿಸಲು ನದಿಯ ಹರಿವು ಅಡ್ಡಿಯಾಗಿದೆ. ಡೈವಿಂಗ್‌ಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಫ್ಲೋಟಿಂಗ್ ಫ್ಲಾಟ್‌ಫಾರಂ ತರಿಸುತ್ತಿದೆ. ಇಂದು ಫ್ಲೋಟಿಂಗ್ ಫ್ಲಾಟ್‌ಫಾರಂ ಬಳಸಿ ನದಿಯಲ್ಲಿರುವ ಲಾರಿಯ ಶೋಧಕ್ಕೆ ಪ್ರಯತ್ನಿಸಲಾಗುತ್ತದೆ.

ನದಿಯಲ್ಲಿ ಕೂಡ ಮಣ್ಣು ಸಂಗ್ರಹವಾಗಿದ್ದು, ಮಣ್ಣಿನಡಿ ನಾಪತ್ತೆಯಾಗಿರುವವರಿಗೆ ಶೋಧ ನಡೆಯಬೇಕಿದೆ. ಗುಡ್ಡಕುಸಿತದಿಂದ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಕಾರ್ಯ ಪೂರ್ಣವಾಗಿದ್ದು, ಹೆದ್ದಾರಿ ಸಂಚಾರ ಪುನರಾರಂಭಕ್ಕೆ ಜಿಯಾಲಾಜಿಸ್ಟ್ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರಕ್ಕೆ ಹೆದ್ದಾರಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡು ವಾಹನಗಳಿಗೆ ಅವಕಾಶ ಕೊಡಬೇಕಿದೆ.

ಪಿಣರಾಯಿ ವಿಜಯನ್ ಮೊರೆ

ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್‌ ಪತ್ತೆಗೆ ಹೆಚ್ಚಿನ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ಕೇರಳ‌ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ದಕ್ಷಿಣ ಮತ್ತು ಪೂರ್ವ ನೌಕಾ ಕಮಾಂಡ್‌ಗಳಿಂದ ಹೆಚ್ಚಿನ ಮುಳುಗು ತಜ್ಞರನ್ನು ನೇಮಿಸಲು, ರಿಮೋಟ್ ಚಾಲಿತ ವಾಹನಗಳು, ಆಧುನಿಕ ಉಪಕರಣಗಳನ್ನು ಶೋಧ ಕಾರ್ಯಕ್ಕೆ ನೀಡಲು ಅವರು ಮನವಿ ಮಾಡಿದ್ದಾರೆ.

ಜುಲೈ 16ರಂದು ನಡೆದಿದ್ದ ಗುಡ್ಡಕುಸಿತ ದುರಂತದಲ್ಲಿ ಕೇರಳ ಮೂಲದ ಲಾರಿ ನಾಪತ್ತೆಯಾಗಿತ್ತು. ಲಾರಿಯಲ್ಲಿದ್ದ ಚಾಲಕ ಅರ್ಜುನ ಸಹ ನಾಪತ್ತೆಯಾಗಿದ್ದರು. ಇದುವರೆಗೂ ನಾಪತ್ತೆಯಾಗಿರುವವರಿಗಾಗಿ ಶೋಧ ಮುಂದುವರಿದಿದೆ.

ಅರ್ಜುನ್‌ಗಾಗಿ ಇಡೀ ಕೇರಳ ಪ್ರಾರ್ಥಿಸುತ್ತಿದೆ: ಶಾಸಕ ಕೆ.ಎಂ.ಆಶ್ರಫ್

ಒಂದು ವಾರ ಕಳೆದರೂ ಅಲ್ಲಿದ್ದ ಹೋಟೆಲ್ ಆಗಲಿ ಅಥವಾ ಲಾರಿ ಡ್ರೈವರ್ ಅರ್ಜುನ್‌ನ ಸುಳಿವು ಸಿಕ್ಕಿರಲಿಲ್ಲ. ಮೊನ್ನೆ (ಗುರುವಾರ) ದೆಹಲಿ ತಂಡ ನಡೆಸಿದ ಡ್ರೋನ್ ಕಾರ್ಯಚರಣೆಯಲ್ಲಿ ನದಿಯಲ್ಲಿ ಲಾರಿ ಹಾಗೂ ಕ್ಯಾಬಿನ್ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ ನದಿಯ ಹರಿವು ಹೆಚ್ಚಾಗಿದ್ದ ಕಾರಣ ಶೋಧ ಕಾರ್ಯವನ್ನು ಮುಂದುವರೆಸಲು ಆಗಲಿಲ್ಲ. ಹೀಗಾಗಿ ಶುಕ್ರವಾರ ಎರಡು ಬೃಹತ್ ಹಿಟಾಚಿಗಳ ಮೂಲಕ ದಡದಲ್ಲಿನ ಮಣ್ಣು ತೆರವು ಕೆಲಸ ಮುಂದುವರಿಸಲಾಯಿತು. ಜತೆಗೆ ಇನ್ನುಳಿದ ಮೂವರಿಗಾಗಿ ಹೋಟೆಲ್ ಇದ್ದ ಜಾಗದಲ್ಲೇ ಪುನಃ ಹುಡುಕಾಟ ನಡೆದಿದೆ. ಸ್ಥಳೀಯ ಶಾಸಕ ಸತೀಶ್ ಸೈಲ್ ತಡರಾತ್ರಿಯವರೆಗೂ ಸ್ಥಳದಲ್ಲೇ ಹಾಜರಿದ್ದರು.

ಮಂಜೇಶ್ವರದ ಶಾಸಕ ಕೆ.ಎಂ. ಆಶ್ರಫ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಾಲಕ ಅರ್ಜುನಗಾಗಿ ಇಡೀ ಕೇರಳ ಜನತೆ ಪ್ರಾರ್ಥನೆ ಮಾಡುತ್ತಿದೆ. ಪ್ರತಿಕ್ಷಣವೂ ಅರ್ಜುನ ಜೀವಂತವಾಗಿ ಸಿಕ್ಕೇ ಸಿಗುತ್ತಾನೆ ಎನ್ನುವ ಭರವಸೆಯಲ್ಲಿದ್ದಾರೆ. ದೇಶವು ಇದಕ್ಕೂ ದೊಡ್ಡ ಸಮಸ್ಯೆಗಳನ್ನು ಎದುರಿಸಿದೆ, ನಾವು ಹಿಂಜರಿಯದೆ ಆದಷ್ಟು ಬೇಗ ಅರ್ಜುನ ಬಳಿಗೆ ತಲುಪಿ ಅವನನ್ನು ಮೇಲೇತ್ತುವ ಕೆಲಸ ಆಗಬೇಕು. ಇವತ್ತಿನ ಕಾರ್ಯಾಚರಣೆಯಲ್ಲಿ ಲಾರಿ ಸಿಗುವ ಭರವಸೆ ಇದೆ, ಇಲ್ಲವಾದರೆ ನಮ್ಮ ಹನ್ನೊಂದು ದಿನದ ಶ್ರಮ ವ್ಯರ್ಥವಾಗುತ್ತದೆ. ಹಾಗಾಗಿ ಶುಕ್ರವಾರ ಫಲಿತಾಂಶ ಬಂದೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದರು.

ಕೇರಳ ಲೋಕಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವ ರಿಯಾಜ್ ಅಹ್ಮದ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ದೆಹಲಿ ತಜ್ಞರ ತಂಡದಿಂದ ಲಾರಿ ಇರುಬಹುದಾಗಿದೆ ಎನ್ನುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾಡಳಿತ ಜತೆಗೆ ಸಭೆ ನಡೆಸಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸಚಿವರ ಜತೆಗೆ ಕೇರಳದ ಶಾಸಕರಾದ ಸಚ್ಚಿನ್ ದೇವ್, ಅಶ್ರಫ್ ಉಪಸ್ಥಿತರಿದ್ದು, ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲೆ ಸಭೆ ನಡೆಯಿತು. ಇದೇ ವೇಳೆ ಜಿಲ್ಲಾಡಳಿತ ಮೃತ ಗ್ಯಾಸ್ ಟ್ಯಾಂಕರ್ ಚಾಲಕ ಶರವಣ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ಕೇರಳ ಸಚಿವರ ಕೈಯಲ್ಲೇ ವಿತರಿಸಿದರು.

ಇದನ್ನೂ ಓದಿ: Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

Continue Reading
Advertisement
Paris Olympics
ಕ್ರೀಡೆ4 seconds ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ10 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ10 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ30 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ57 mins ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ

Champions Trophy 2025
ಕ್ರೀಡೆ60 mins ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ1 hour ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ1 hour ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Malaika Arora breakup rumours rushes past Arjun Kapoor
ಬಾಲಿವುಡ್1 hour ago

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Narendra Modi
ದೇಶ2 hours ago

Narendra Modi: ರಷ್ಯಾ ಬಳಿಕ ಮುಂದಿನ ತಿಂಗಳು ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ16 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ17 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ18 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ19 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌