Adhika Masa 2023 how adhika masa is calculated and its importance in kannada Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು? Vistara News

ಧಾರ್ಮಿಕ

Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು?

ನಾಳೆಯಿಂದ (ಜು.18) ಅಧಿಕ ಮಾಸ (Adhika Masa 2023) ಆರಂಭವಾಗುತ್ತಿದೆ. ಈ ಸಲದ ಅಧಿಕ ಮಾಸ ಬಂದಿರುವುದು ಶ್ರಾವಣ ಮಾಸದಲ್ಲಿ. ಮೂವತ್ಮೂರು ತಿಂಗಳಿಗೊಮ್ಮೆ ಬರುವ ಅಧಿಕಮಾಸದ ಲೆಕ್ಕಾಚಾರ ಹೇಗೆ ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

adhika masa calculation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
narayana yaji

ನಾರಾಯಣ ಯಾಜಿ
ಪ್ರತೀ ಮೂರು ವರುಷಗಳಿಗೊಮ್ಮೆ ಪಂಚಾಂಗದಲ್ಲಿ ಬರುವ ಅಧಿಕ ಮಾಸದ (Adhika Masa 2023) ಕುರಿತು ಎಲ್ಲರಿಗೂ ಗೊತ್ತು. ಈ ಮಾಸವನ್ನು ಪುರುಷೋತ್ತಮ ಮಾಸವೆಂದೂ ಸಹ ಕರೆಯುತ್ತಾರೆ. ಈ ತಿಂಗಳಿನಲ್ಲಿ ಯಾವುದೇ ಶುಭಕಾರ್ಯವನ್ನು ನಡೆಸಕೂಡದು ಎನ್ನುವ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಇಡೀ ತಿಂಗಳು ಕಳೆದು ಹೋಗಿಬಿಡುತ್ತದೆ.

ಗ್ರೆಗೋರಿಯನ್ ಕ್ಯಾಲೇಂಡಿರನ ಪ್ರಕಾರ ನಾಲ್ಕು ವರ್ಷಗಳಿಗೊಮ್ಮೆ ಬರುವ Year Leap ಕುರಿತು ಎಲ್ಲರಿಗೂ ಅರಿವಿದೆ. ವರ್ಷವನ್ನು ನಾಲ್ಕರಿಂದ ಸಂಪೂರ್ಣವಾಗಿ ಭಾಗಿಸಿದಾಗ ಬರುವ ಇಸವಿಯ ಫೆಬ್ರುವರಿ ತಿಂಗಳಲ್ಲಿ ಇಪ್ಪತ್ತೊಂಬತ್ತು ದಿನಗಳು ಬರುತ್ತವೆ. ಉದಾಹರಣೆಗೆ 1996, 2000 ಹಾಗೇ ಮುಂದಿನ ವರ್ಷ, 2024 ರ ಫೆಬ್ರುವರಿ ತಿಂಗಳು ಅಧಿಕ ವರ್ಷದ ದಿನಗಳು. ಇನ್ನುಳಿದ ಇಸವಿಯಲ್ಲಿ ಈ ತಿಂಗಳಿಗೆ ಇಪ್ಪತ್ತೆಂಟೇ ದಿನಗಳು. ಆದರೆ ಹಿಂದೂ ಪಂಚಾಂಗದ ಪ್ರಕಾರ ಬರುವ ಅಧಿಕ ಮಾಸಕ್ಕೆ ನಿರ್ದಿಷ್ಟ ತಿಂಗಳೇನೂ ಇಲ್ಲ; ಯಾವುದೋ ತಿಂಗಳಲ್ಲಿಯೋ ಬಂದು ಹೋಗುತ್ತವೆ.

ಇದು ಹೀಗೇಕೆ ಎನ್ನುವುದರ ಹಿಂದೆ ಭಾರತೀಯರ ಖಗೋಳ ಶಾಸ್ತ್ರದ ಜ್ಞಾನಪರಂಪರೆಯೇ ಇದೆ ಎನ್ನುವುದು ಹೆಚ್ಚಿನವರಿಗೆ ಅರಿವಿಲ್ಲ. ಗ್ರಹಗಳ ಚಲನೆ ಅದರ ವಕ್ರಗತಿಯನ್ನು ಮತ್ತು ಕಣ್ಣಿಗೆ ಕಾಣುವ ಗ್ರಹಣಗಳ ಅವಧಿಯನ್ನು ನಿಖರವಾಗಿ ಲೆಕ್ಕೆಹಾಕಿದ ನಮ್ಮ ಸನಾತನಿಗಳಿಗೆ ಪಂಚಾಂಗವೆಂದರೆ ಮೂಗು ಮುಚ್ಚಿ ಕುಳಿತು ದೇವರ ಧ್ಯಾನಮಾಡುವ ಒಂದು ಸಾಧನವಲ್ಲ. ಅದು ಕಾಲದ ನಿಖರವಾದ ಅಳತೆ. ಇದನ್ನು ಅರಿಯಬೇಕಾದರೆ ಮೊದಲು ಪಂಚಾಂಗದ ಕುರಿತು ಸ್ಥೂಲವಾಗಿ ತಿಳಿದುಕೊಳ್ಳಬೇಕು.

ವಾರ, ತಿಥಿ, ನಕ್ಷತ್ರ, ಕರಣ ಮತ್ತು ಯೋಗ ಈ ಐದು ಅಂಗಗಳ ಕುರಿತು ಸ್ಪಷ್ಟವಾಗಿ ತಿಳಿಸುವುದೇ ಪಂಚಾಂಗ. ಆಧುನಿಕವಾಗಿ ಕಾಲವನ್ನು ವರ್ಷ, ತಿಂಗಳು, ಪಕ್ಷ, ವಾರ, ಘಂಟೆ, ನಿಮಿಷ, ಸೆಕೆಂಡು ಮತ್ತು ಸೆಕೆಂಡನ್ನು ವಿಭಜನೆಮಾಡುವ ವಿಧಾನದಲ್ಲಿ ಅಳೆಯುತ್ತಾರೆ. ಋಷಿಗಳು ಕಾಲವನ್ನು ಪರಮಾಣು ಅಂದರೆ ಯಾವುದನ್ನು ವಿಭಜಿಸಲಾಗದೋ ಅಲ್ಲಿಂದ ಎನ್ನುವ ಮಾನದಿಂದ ಪ್ರಾರಂಭಿಸಿ ಪರಮ ಮಹತ್ತು ಎನ್ನುವ ಕಾಲಬೇಧಗಳಿಲ್ಲದ ಸ್ಥಿತಿಯತನಕ ಅಳೆದಿರುವ ಮಾನವನ್ನು ಭಾಗವತ ವರ್ಣಿಸುತ್ತದೆ. ವಿಜ್ಞಾನ ಇದನ್ನು Infinite ಅನಂತವೆಂದು ಹೇಳಿದೆ.

ಕಾಲ ನಿರ್ಣಯಕ್ಕೆ ಸೂರ್ಯನೇ ಮೂಲ

ಭಾಗಿಸಲಾರದ ಮತ್ತು ಭಾಗಕಾರಕ್ಕೆ ಸಿಕ್ಕದೆ ನಡುವಿನ Space-ಆಕಾಶವನ್ನು ಅಳತೆಮಾಡುವ ಕ್ರಿಯೆಗೆ ಕಾಲವೆನ್ನುತ್ತಾರೆ. ಸಂಧ್ಯಾವಂದನೆಯಲ್ಲಿ ಪ್ರತೀ ನಿತ್ಯವೂ ದಿನಗಳನ್ನು ಪರಾರ್ಧದಿಂದ ತೆಗೆದುಕೊಳ್ಳುತ್ತೇವೆ. ಪರಮ ಮಹತ್ತು ಎನ್ನುವುದಕ್ಕಿಂತ ಹಿಂದಿನ ಅಳತೆ ಇದು. ನಾವು ಲೆಕ್ಕಹಾಕುವಾಗ ಎಲ್ಲಿಂದ ಮುಂದೆ ಎಣಿಕೆ ಸಾಧ್ಯವಾಗುವುದಿಲ್ಲವೋ ಅದನ್ನು “ಪರಾರ್ಧ” ಎನ್ನುತ್ತಾರೆ. ಈಗ ನಡೆಯುತ್ತಿರುವ ಕಾಲ ಬ್ರಹ್ಮನ ಹಗಲಿನ ಎರಡನೆಯ ಭಾಗ. ಈ ಕಾಲಮಾನವನ್ನು ನಮ್ಮ ಪರಿಮಿತಿಯಲ್ಲಿ ಅಳೆಯಬೇಕಾದರೆ ಅದಕ್ಕೆ ಲಭ್ಯತೆ ಇರುವ ವಸ್ತು ಬೇಕು. ಈ ವಸ್ತು ತನ್ನ ಪಥದಲ್ಲಿ ವ್ಯತ್ಯಾಸ ಮಾಡಿಕೊಳ್ಳಕೂಡದು. ಅದಕ್ಕೆ ಸಿಕ್ಕ ವಸ್ತುವೇ ‘ಸೂರ್ಯ’.

ಸೂರ್ಯ ದಿನ ರಾತ್ರಿಗಳನ್ನು ಒಂದು ನಿರ್ದಿಷ್ಟ ಸಮಯಕ್ಕೆ ಉಂಟುಮಾಡುತ್ತಾನೆ. ಅದನ್ನು ಅರ್ಥಮಾಡಿಕೊಂಡ ಋಷಿಮುನಿಗಳು ಆತನನ್ನು ಕೇಂದ್ರವನ್ನಾಗಿಸಿಕೊಂಡರು. ಎರಡನೆಯ ಬಾನಿನ ಕೌತುಕವೇ ಚಂದ್ರ. ಮತ್ತೆ ನಕ್ಷತ್ರ, ಹನ್ನೆರೆಡು ರಾಶಿಗಳು… ಹೀಗೆ ಹಲವಾರು ವಿಧಾನಗಳು ಇದ್ದರೂ ಮುಖ್ಯವಾಗಿ ಕಣ್ಣಿಗೆ ಕಾಣುವ ಸೂರ್ಯ ಮತ್ತು ಚಂದ್ರನ ಚಲನೆಯನ್ನು ಅನುಸರಿಸಿ ವಾರ/ದಿನಗಳಿಂದ ಪ್ರಾರಂಭಿಸಿ ವರ್ಷಗಳ ವರೆಗೆ ಅಳೆತೆಮಾಡುವ ವಿಧಾನವನ್ನು ಸೌರಮಾನ ಮತ್ತು ಚಾಂದ್ರಮಾನ ಎನ್ನುವ ರೀತಿಯಲ್ಲಿ ವಿಭಾಗಿಸಲಾಗಿದೆ.

ಭೂಮಿ ಸೂರ್ಯನತ್ತ ತಿರುಗಲು ತೆಗೆದುಕೊಳ್ಳುವ ಅವಧಿ 365 ದಿವಸ 5 ತಾಸು 59 ನಿಮಿಷ 16 ಸೆಕೆಂಡುಗಳು. ಇದನ್ನು 365.25 ದಿವಸ ಎಂದು ಇಟ್ಟುಕೊಂಡರು. ಒಂದು ವರುಷಕ್ಕೆ ಸುಮಾರು ಆರು ಗಂಟೆಯಂತೆ ನಾಲ್ಕು ವರ್ಷಗಳಾದಾಗ ಒಂದು ದಿನಗಳ ವ್ಯತ್ಯಾಸವಾಗಿಬಿಡುತ್ತದೆ. ಅದನ್ನು ಸರಿದೂಗಿಸಲು ಗ್ರೆಗೋರಿಯನ್ ಪಂಚಾಂಗದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕಮಾಸವಾಗಿ ಒಂದು ದಿನವನ್ನು ಹೆಚ್ಚಿಗೆ ಮಾಡಿದರು. ಈ ಲೆಕ್ಕಾಚಾರದ ಹಿಂದೆ ರೋಚಕ ಇತಿಹಾಸವೇ ಇದೆ. ಇಂದು ನಾವು ಕಾಣುತ್ತಿರುವ ಕ್ಯಾಲೆಂಡರಿನ ಸೂತ್ರಕ್ಕೆ ಹದಿನಾರನೇಯ ಶತಮಾನದವರೆಗೆ ಕಾಯಬೇಕಾಯಿತು.

ಪೋಪ್ ಗ್ರೆಗೋರಿಯನ್ ಪೋಪರಿಗಿರುವ ವಿಶೇಷ ಪರಮಾಧಿಕಾರ “ಪಾಪಲ್ ಬುಲ್ಲ್” (Papal bull)ದ ಮೂಲಕ 1582ನೆಯ ಇಸ್ವಿ ಫೆಬ್ರವರಿ 24ರಂದು ಪರಮಾಯಿಶಿಯನ್ನು ಹೊರಡಿಸಿ ರೂಢಿಗೆ ತಂದಿರುವುದೆನ್ನುವುದನ್ನು ಗಮನಿಸಬೇಕು. ವರ್ಷಗಳನ್ನು ಅಳೆಯಲು ಸೌರಮಾನ ಪದ್ಧತಿ ಸುಲಭವಾದರೆ ತಿಂಗಳನ್ನು ಅಳೆಯಲು ನಮಗೆ ಸಿಗುವ ಸಾಧನ ಚಂದ್ರ. ಪ್ರತೀ ತಿಂಗಳೂ ಕಣ್ಣಿಗೆ ಕಾಣುವಂತೆ ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಆಗುತ್ತಲೇ ಇರುತ್ತವೆ. ಮತ್ತು ಪ್ರತಿ ದಿನವೂ ಆತ ಬೇರೆ ಬೇರೆ ಸಮಯಕ್ಕೆ ಉದಯಿಸಿ ಅಸ್ತಮಿಸುತ್ತಾನೆ. (ಭಾರತೀಯ ಕಾಲಗಣನೆಯಲ್ಲಿ ಸೂರ್ಯನ ಸುತ್ತಲೇ ಎಲ್ಲವೂ ಸುತ್ತುತ್ತವೆ ಎನ್ನುವ ಸ್ಪಷ್ಟವಾದ ಉಲ್ಲೇಖಗಳಿವೆ. ಆದರೆ ಲೆಕ್ಕಾಚಾರಕ್ಕೆ ಅನುಕೂಲವಾಗಲು ಸೂರ್ಯನ ಚಲನೆಯನ್ನು ಭೂಮಿಯ ಜಾಗದಲ್ಲಿಟ್ಟರು ಅಷ್ಟೆ.) ಹೀಗೆ ಲೆಕ್ಕಹಾಕುವಾಗ ಸುಮಾರು ಮೂವತ್ತು ದಿನಗಳಿಗೆ ಚಂದ್ರ ಒಂದು ಸುತ್ತು ಬರುತ್ತಾನೆ ಎನ್ನುವುದನ್ನು ಕಂಡುಕೊಂಡರು.

ಸೌರಮಾನ – ಚಂದ್ರಮಾನ

ಸೂರ್ಯ(ಭೂಮಿ) ಖಗೋಲದ ಹನ್ನೆರಡು ರಾಶಿಗಳಲ್ಲಿ ತಿರುಗುವ ಅವಧಿಯನ್ನು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ತಿಂಗಳಾಗಿ ವಿಭಾಗಿಸಿದೆ. (ಇದು ಪ್ರಾಚೀನ ರೋಮನ್ನಿನಲ್ಲಿಯೂ ಇತ್ತು). ಇದನ್ನು ಸೌರಮಾನ ಪದ್ಧತಿ ಎನ್ನುತ್ತಾರೆ. ಅದೇ ರೀತಿ ಚಂದ್ರ ಸಹ ಹನ್ನೆರಡು ತಿಂಗಳಲ್ಲಿ ಸುತ್ತಿಬರುವ ತಿಂಗಳನ್ನು ಚೈತ್ರ ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತೀಕ, ಮಾರ್ಗಶೀರ್ಷ, ಪುಷ್ಯ. ಮಾಘ ಮತ್ತು ಪಾಲ್ಗುಣಗಳೆನ್ನುವ ಹನ್ನೆರಡು ಮಾಸಗಳನ್ನಾಗಿ ಹೆಸರಿಸಲಾಯಿತು. ಇದು ಚಾಂದ್ರಮಾನ ಪದ್ಧತಿ. ಇವು ಅಮಾವಾಸ್ಯೆಯಿಂದ ಆರಂಭಿಸಿ ಅಮಾವಾಸ್ಯೆಯತನಕದ ದಿನಗಳು.

ತುಂಬಾ ಮಹತ್ವದ ಅಂಶವೆಂದರೆ ಕಾಲ ಗಣನೆಯಲ್ಲಿ ಭಾರತೀಯ ಪದ್ಧತಿ ಇರುವುದು ಸೂರ್ಯೋದಯದಿಂದ ಸೂರ್ಯೋದಯದ ತನಕ. ಪಾಶ್ಚಿಮಾತ್ಯರು ಕಾಲವನ್ನು ಮಧ್ಯರಾತ್ರಿಯಿಂದ ಮಧ್ಯರಾತ್ರಿಯ ತನಕ ಗಣಿಸುತ್ತಾರೆ. ಭೂಮಿಯ ದೀರ್ಘ ವೃತ್ತಾಕಾರದ ಪರಿಧಿಯ ಕಾರಣದಿಂದ ಋತುಮಾನಗಳುಂಟಾಗುತ್ತವೆ. ಹಾಗಾಗಿ ಪ್ರತೀ ದಿನವೂ ಅಕ್ಷಾಂಶ ಮತ್ತು ರೇಖಾಂಶಕ್ಕನುಗುಣವಾಗಿ ಸೂರ್ಯ ಮೂಡುವ ಸಮಯದಲ್ಲಿಯೂ ಬದಲಾವಣೆಯಾಗುತ್ತಿರುತ್ತದೆ. ಅದೇ ಕಾಲಕ್ಕೆ ಚಂದ್ರನೂ ಸಹ ಮೂಡುವ ಸಮಯದಲ್ಲಿ ಆಗುವ ಸಮಯದ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು ಅದನ್ನು ಮೂವತ್ತು ದಿನಗಳಿಗೊಂದರಂತೆ ಮೂವತ್ತು ತಿಥಿಗಳನ್ನಾಗಿ ವಿಭಾಗಿಸಲಾಯಿತು. ಸೂರ್ಯ ಚಂದ್ರರು ಮೂಡುವ ರೇಖಾಂಶದ ವ್ಯತ್ಯಾಸವನ್ನು ತಿಥಿಯೆನ್ನುತ್ತಾರೆ.

ಒಂದು ನಿರ್ದಿಷ್ಟ ಸ್ಠಳದಲ್ಲಿ ಯಾವ ತಿಥಿ ಬರುತ್ತದೆ ಎನ್ನುವುದನ್ನು ಆಯಾ ಪ್ರದೇಶದ ಸೂರ್ಯ ಮತ್ತು ಚಂದ್ರರ ರೇಖಾಂಶದ ವ್ಯತ್ಯಾಸವನ್ನು 12 ಡಿಗ್ರಿಯಿಂದ ಭಾಗಿಸುವ ಮೂಲಕ ಗುರುತಿಸುತ್ತಾರೆ. ಸರಳವಾಗಿ ಹೇಳಬೇಕೆಂದರೆ ಚಂದ್ರ ಸೂರ್ಯನಿಂದ ಎಷ್ಟು ಡಿಗ್ರಿಯಷ್ಟು ದೂರದಲ್ಲಿದ್ದಾನೆ ಎನ್ನುವುದನ್ನು ಆಯಾ ದಿನದ/ಹೊತ್ತಿನ ತಿಥಿ ತಿಳಿಸುತ್ತದೆ. (ಇವು ಕೇವಲ ಸ್ಥೂಲ ಪರಿಚಯ; ಲೆಕ್ಕಾಚಾರವನ್ನು ಇಲ್ಲಿ ಕೊಟ್ಟಿಲ್ಲ) ಚಂದ್ರನ ತಿರುಗುವ ಗತಿ ಸೂರ್ಯನಿಂದಲೂ ತುಂಬಾ ವೇಗವಾಗಿರುವ ಕಾರಣ ಆತ ಪರಿಭ್ರಮಣ ಮಾಡುವಾಗ ಸೂರ್ಯನ ಸಂಗಡ ಅಥವಾ ಆತನಿಂದ 180 ಡಿಗ್ರಿ ದೂರದಲ್ಲಿಯ ತನಕ ಇರುತ್ತಾನೆ. ಜೊತೆಯಲ್ಲಿದ್ದಾಗ ಅಮಾವಾಸ್ಯೆ ಮತ್ತು ದೂರದಲ್ಲಿ ಇದ್ದಾಗ ಹುಣ್ಣಿಮೆ ಆಗುತ್ತದೆ. ಉಳಿದ ತಿಥಿಗಳು ಈ ನಡುವಿನ ದಿನಗಳಲ್ಲಿ ಬರುತ್ತವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಚಾಂದ್ರಮಾನ ತಿಂಗಳ ಲೆಕ್ಕಾಚಾರ ಹೇಗೆ?

ಚಂದ್ರ ಭೂಮಿಯನ್ನು ಸುತ್ತಲು ತೆಗೆದುಕೊಳ್ಳುವ ಅವಧಿ 29.5306 ದಿನಗಳು; ಇದನ್ನು ಮೂವತ್ತು ತಿಥಿಗಳನ್ನಾಗಿ ವಿಭಜಿಸಲಾಯಿತು.
ಚಾಂದ್ರಮಾನ ವರ್ಷ :- 29.5306 X 12 = 354.3672 ದಿನಗಳು.
ಇಲ್ಲಿಗೆ ಸೌರಮಾನ ವರ್ಷಕ್ಕೂ ಮತ್ತು ಚಾಂದ್ರಮಾನ ವರ್ಷಕ್ಕೂ ಪ್ರತೀ ವರ್ಷದಲ್ಲಿಸುಮಾರು ಹನ್ನೊಂದು ದಿನಗಳ ಅಂತರವಿದೆ. ಕಾಲಮಾನದ ನಿಖರ ಅಧ್ಯಯನಕ್ಕೆ ಸೂರ್ಯ ಅಗತ್ಯವಿರುವ ಕಾರಣದಿಂದಾಗಿ ಮೂರು ವರ್ಷಗಳಿಗೊಮ್ಮೆ ಒಂದು ತಿಂಗಳನ್ನು ಪಂಚಾಂಗದಲ್ಲಿ ಹೆಚ್ಚಿಗೆ ಸೇರಿಸಿ ಅದನ್ನು ಅಧಿಕಮಾಸವೆಂದು ಕರೆಯುವ ವಿಧಾನವನ್ನು ಅನುಸರಿಸಿದರು.

ವಾಶಿಷ್ಠ ಸಿದ್ಧಾಂತದ ಪ್ರಕಾರ ಅಧಿಕ ಮಾಸವು ಪ್ರತೀ 32 ತಿಂಗಳು 16 ದಿವಸ 8 ಘಟಿಯ ಅಂತರದಲ್ಲಿ ಬರುತ್ತದೆ. ಒಂದು ತಾಸಿಗೆ 2.5 ಘಟಿ. ಒಂದು ದಿನಕ್ಕೆ ಅರವತ್ತು ಘಟಿಗಳು. ಹಿಂದಿನ ಅಧಿಕ ಮಾಸ 2020 ರಲ್ಲಿ ಆಶ್ವೀಜ ಮಾಸದಲ್ಲಿ ( 18 ಸೆಪ್ಟೆಂಬರ್ 2020 ರಿಂದ ಪ್ರಾರಂಬವಾಗಿ 16 ಅಕ್ಟೋಬರ್ 2020 ರತನಕ) ಬಂದಿತ್ತು ಈ ಸಂವತ್ಸರದಲ್ಲಿ ಶ್ರಾವಣ ಮಾಸವನ್ನು ಅಧಿಕ ಮಾಸವೆಂದು ಕರೆಯಲಾಗಿದೆ. ಈ ವೆತ್ಯಾಸ ಯಾಕೆ, ನಮ್ಮಲ್ಲಿಯೂ ನಿರ್ಧಿಷ್ಟ ತಿಂಗಳನ್ನು ಅಧಿಕಮಾಸವೆಂದು ಯಾಕೆ ಗುರುತಿಸಿಲ್ಲ ವೆನ್ನುವುದಕ್ಕೆ ಖಗೋಲ ಶಾಸ್ತ್ರದ ಲೆಕ್ಕಾಚಾರದ ಹಿನ್ನೆಲೆಯಿದೆ.

ಕಾಲ ಗಣನೆಯಲ್ಲಿ ಅನುಕೂಲವಾಗಲಿ ಎಂದು ಚಂದ್ರನ ಗತಿಯನ್ನು ಅನುಸರಿಸಿ ತಿಥಿ ವಾರ ನಕ್ಷತ್ರಗಳನ್ನು ಅನುಸರಿಸಿದರೂ ಅಂತಿಮವಾಗಿ ಇವೆಲ್ಲ ಸೂರ್ಯನ ಚಲನೆಗೆ ಹೊಂದಿಸಿಕೊಳ್ಳುವುದನ್ನು ಈಗಾಗಲೇ ತಿಳಿದಿದ್ದೀವೆ. ಹಾಗಾಗಿ ಪಂಚಾಂಗದಲ್ಲಿ ಚಂದ್ರಮಾನದ ತಿಂಗಳಾದ ಚೈತ್ರ, ವೈಶಾಖಗಳಂತೆ ಸೌರಮಾನದ ತಿಂಗಳಾದ ಮೇಷ ವೃಷಭ ಮಾಸಗಳನ್ನೂ ಅನುಸರಿಸುತ್ತಾರೆ. ಈ ಕಾರಣದಿಂದಲೇ ಯುಗಾದಿ ಆಚರಣೆಯಲ್ಲಿ ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎನ್ನುವ ಎರಡು ಆಚರಣೆಗಳನ್ನು ಗಮನಿಸಬಹುದು.

ಅಮಾವಾಸ್ಯೆಯಿಂದ ಅಮಾವಾಸ್ಯೆಯ ತನಕ ಹೇಗೆ ಚಂದ್ರಮಾನ ತಿಂಗಳವೋ ಅದೇ ರೀತಿ ಸಂಕ್ರಾಂತಿಯಿಂದ ಸಂಕ್ರಾಂತಿಯ ತನಕ ಸೌರಮಾನದ ತಿಂಗಳು ಬರುತ್ತವೆ. (ಈ ವರ್ಷ ಚಾಂದ್ರಮಾನ ಯುಗಾದಿ ಮಾರ್ಚ್ 22 ಕ್ಕೆ ಬಂದರೆ ಸೌರಮಾನ ಯುಗಾದಿ ಎಪ್ರಿಲ್ 15 ಕ್ಕೆ ಬಂದಿದೆ). ಭೂಮಿಯನ್ನು ಪ್ರಮುಖವಾಗಿ ಮೇಷದಿಂದ ಮೀನದ ತನಕ ಹನ್ನೆರಡು ಅಕ್ಷಾಂಶಗಳನ್ನಾಗಿ ವಿಭಜಿಸಿದ್ದಾರೆ. ಪೃಥ್ವಿಯ ದೀರ್ಘ ವೃತ್ತಾಕಾರದ ಚಲನೆಯಿಂದಾಗಿ ಋತುಗಳ ಬದಲಾವಣೆಯಾಗುತ್ತದೆ ಎನ್ನುವ ವಿಷಯ ತಿಳಿದಿದೆ. ಸೂರ್ಯ ತಿಂಗಳಿಗೊಮ್ಮೆ ಒಂದು ರಾಶಿಯನ್ನು ಬದಲಿಸುತ್ತಾನೆ. ಇದಕ್ಕೇ ಸಂಕ್ರಾಂತಿ ಎಂದು ಹೆಸರು. ಹೀಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳು ಆಗುತ್ತವೆ.

ಚೈತ್ರ ಮಾಸದಿಂದ ಫಾಲ್ಗುಣ ಮಾಸದವರೆಗೆ ಪ್ರತಿಯೊಂದು ಮಾಸದಲ್ಲಿ ಒಂದು ಸಂಕ್ರಮಣ ಇರುತ್ತದೆ. ಆದರೆ 32.5 ತಿಂಗಳಾದ ಮೇಲೆ 36ನೆಯ ತಿಂಗಳೊಳಗೆ ಬರುವ ಯಾವುದೋ ಮಾಸದಲ್ಲಿ ಸಂಕ್ರಾಂತಿಯೇ ಇರುವುದಿಲ್ಲ. ಹಿಂದಿನ ತಿಂಗಳಲ್ಲಿ ಅಮಾವಾಸ್ಯೆಯ ದಿನ ಸಂಕ್ರಾಂತಿ ಇರುತ್ತದೆ. ಮತ್ತು ಮುಂದಿನ ತಿಂಗಳಲ್ಲಿ ಪ್ರತಿಪದೆಗೆ ಸಂಕ್ರಾಂತಿ ಇರುತ್ತದೆ. ಯಾವ ತಿಂಗಳಲ್ಲಿ ಸಂಕ್ರಾಂತಿ ಇರುವುದಿಲ್ಲವೋ ಆ ತಿಂಗಳನ್ನು ಅಧಿಕ ಮಾಸವೆಂದು ಕರೆಯುತ್ತಾರೆ. ಈ ವರ್ಷ ಆಷಾಢ ಕಳೆದಮೇಲೆ ಬರುವ ಪ್ರತಿಪದೆಯಿಂದ ಅಮಾವಾಸ್ಯೆಯ(ತಾ. 18/07/2023 ರಿಂದ 17/08/2023) ನಡುವೆ ಸಂಕ್ರಾಂತಿ ಇಲ್ಲ. ಅದು ಶ್ರಾವಣ ಮಾಸದ ಹಿಂದಿನ ಮಾಸವಾಗಿರುವುದರಿಂದ ಅದನ್ನು ಅಧಿಕ ಶ್ರಾವಣವೆಂದು ಕರೆದಿದ್ದಾರೆ. ಅದಕ್ಕೂ ಮುಂದಿನ ತಿಂಗಳನ್ನು ನಿಜ ಶ್ರಾವಣವೆಂದು ಕರೆದಿದ್ದಾರೆ. ಮಹತ್ವದ ಸಂಗತಿಯೆಂದರೆ ಈ ಅಧಿಕ ಮಾಸವು ಮಾರ್ಗಶೀರ್ಷದಿಂದ ಮಾಘ ಮಾಸದ ತನಕ ಬರುವುದಿಲ್ಲ. ಕಾರ್ತೀಕ ಮಾಸವನ್ನೂ ಇದಕ್ಕೆ ಸೇರಿಸಬಹುದು. ಸುಮಾರು 250 ವರ್ಷಗಳಿಗೊಮ್ಮೆ ಕಾರ್ತೀಕ ಮಾಸದಲ್ಲಿ ಅಧಿಕಮಾಸ ಬರುತ್ತದೆ. 1963 ರಲ್ಲಿಯೊಮ್ಮೆ ಕಾರ್ತೀಕಮಾಸದಲ್ಲಿ ಅಧಿಕ ಮಾಸವಿತ್ತು.

ಕ್ಷಯಮಾಸವೂ ಉಂಟು!

ಅಧಿಕ ಮಾಸವಿರುವಂತೆಯೇ ಒಮ್ಮೆಮ್ಮೆ ಕ್ಷಯಮಾಸವೂ ಬರುತ್ತದೆ. ಅಂದರೆ ಯಾವ ತಿಂಗಳಲ್ಲಿಯಾದರೂ ಎರಡು ಅಮಾವಾಸ್ಯೆಯ ನಡುವೆ ಎರಡು ಸಂಕ್ರಾಂತಿ ಬರುವುದುಂಟು. ಸಂಕ್ರಾಂತಿಯ ಬಿಂದು ಬರುವ ಸ್ವಲ್ಪ ಮೊದಲು ಅಮಾವಾಸ್ಯೆ ಮುಕ್ತಾಯವಾದರೆ ಆ ತಿಂಗಳನ್ನು ಕ್ಷಯಮಾಸವೆನ್ನುತ್ತಾರೆ.

ಕಾರ್ತೀಕ ಮಾಸದಿಂದ ಮಾಘಮಾಸಗಳಲ್ಲಿ ಸೌರ ಮಾಸವು (ನವಂಬರದಿಂದ ಫೆಬ್ರುವರಿಯ ತನಕ) ಚಾಂದ್ರಮಾನಕ್ಕಿಂತ ಸ್ವಲ್ಪ ಕಡಿಮೆ ಅವಧಿಯದಾಗಿರುತ್ತದೆ. ಅದಕ್ಕಾಗಿಯೇ ಅಧಿಕಮಾಸಗಳು ಈ ತಿಂಗಳಲ್ಲಿ ಬರುವುದಿಲ್ಲ. ಸುಮಾರು 141 ವರ್ಷಗಳಿಗೊಮ್ಮೆ ಕ್ಷಯಮಾಸವು ಬರುತ್ತದೆ. ಕೊನೆಯದಾಗಿ 1982-83 ರಲ್ಲಿ ಮಾಘ ಮಾಸದಲ್ಲಿ ಕ್ಷಯ ಮಾಸ ಬಂದಿತ್ತು. ಅಂತಹ ವರ್ಷದಲ್ಲಿ ಎರಡು ಅಧಿಕ ಮಾಸಗಳು ಬರುತ್ತವೆ. ಮೊದಲನೆಯದು ಕ್ಷಯಮಾಸಕ್ಕಿಂತ ಎರಡು ಮೂರು ತಿಂಗಳು ಮೊದಲು, ಅದನ್ನು ಸಂಸರ್ಪ ಮಾಸವೆನ್ನುತ್ತಾರೆ. ಇನ್ನೊಂದನ್ನು ಮಲಿಮ್ಲಚ ಮಾಸವೆನ್ನುತ್ತಾರೆ.

ಇದನ್ನೂ ಓದಿ : ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು

1982 ರ ಆಶ್ವೀಜ ಮಾಸ ಮೊದಲ ಅಧಿಕ ಮಾಸವಾದರೆ ಇನ್ನೊಂದು ಪಾಲ್ಗುಣ ಮಾಸ ಅಧಿಕಮಾಸವಾಗಿತ್ತು. ಸಂಕ್ಷಿಪ್ತವಾಗಿ ವಿವರಿಸಬೇಕೆಂದರೆ ಅಧಿಕ ಮಾಸವೆಂದರೆ ಸಂಕಾಂತಿ ರಹಿತ ಚಾಂದ್ರಮಾನ ಮಾಸ. ಕ್ಷಯ ಮಾಸವೆಂದರೆ ಎರಡು ಸಂಕ್ರಾಂತಿಗಳು ಒಂದು ಚಾಂದ್ರಮಾನ ಮಾಸದಲ್ಲಿ ಬರುವುದು.

ಅಧಿಕ ಮಾಸದಲ್ಲಿ ದೇವರ ಆರಾಧನೆಯ ಜೊತೆಗೆ ನಮ್ಮ ಪ್ರಾಚೀನ ಋಷಿಗಳ ಖಗೋಳ ಜ್ಞಾನಕ್ಕೂ ಗೌರವವನ್ನು ಸಲ್ಲಿಸೋಣ.

– ಲೇಖಕರು ಯಕ್ಷಗಾನ ಅರ್ಥಧಾರಿ ಮತ್ತು ವಿಮರ್ಶಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

VISTARANEWS.COM


on

Shri Ram Janmabhoomi Mandir carvings are wonderful
Koo

ಅಯೋಧ್ಯೆ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಜನವರಿ 22ರಂದು ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ನಡುವೆ ರಾಮ ಮಂದಿರ ಗರ್ಭಗಡಿ (Sanctum Sanctorum) ಹಾಗೂ ದೇವಾಲಯ ಒಳಗಿರುವ ಅದ್ಭುತ, ಮನಮೋಹಕ ಕಲಾಕೃತಿಗಳ (carvings) ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಲೀಸ್ ಮಾಡಿದೆ.

ಅದ್ಭುತ ಕೆತ್ತನೆಗಳನ್ನು ಹೊಂದಿರುವ ಮಂದಿರ ಒಳಾಂಗಣ ಫೋಟೋಗಳು ಭಾರೀ ವೈರಲ್ ಆಗಿವೆ. ಸುಂದರ ಕಲಾಕೃತಿಗಳನ್ನು ಮಂದಿರದೊಳಗೆ ಕಾಣಬಹುದಾಗಿದೆ. ನಿನ್ನೆಯಷ್ಟೇ ರಾಮ ಮಂದಿರದ ಗರ್ಭಗಡಿಯು ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಮಂತ್ರಣ ನೀಡಲಾಗಿದೆ. ಸುಮಾರು 10 ಸಾವಿರದಿಂದ 15 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮನಮೋಹಕ ರಾಮ ಮಂದಿರ ಗರ್ಭ ಗುಡಿ

ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.

ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.

ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: ಮನಮೋಹಕ ರಾಮ ಮಂದಿರ ಗರ್ಭ ಗುಡಿ! ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರು

Continue Reading

ದೇಶ

Kashi Vishwanath Temple : ಭಕ್ತರ ಭೇಟಿಯಲ್ಲಿ ದಾಖಲೆ ನಿರ್ಮಿಸಿದ ಕಾಶಿ ವಿಶ್ವನಾಥ ಮಂದಿರ

Kashi Vishwanath Temple :2021ರ ಡಿಸೆಂಬರ್​ 13ರಂದು ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದರು.

VISTARANEWS.COM


on

Kashi Temple
Koo

ವಾರಾಣಸಿ: ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾ ಸ್ಥಳವಾಗಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ (Kashi Vishwanath Temple) ಎರಡು ವರ್ಷಗಳಲ್ಲಿ ದಾಖಲೆಯ 12.92 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಈ ಮೂಲಕ ಮಂದಿರವು ಭಕ್ತರ ಭೇಟಿಯಲ್ಲಿ ಹೊಸ ದಾಖಲೆ ಬರೆದಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುವ ಮೂಲಕ ಭಾರತದ ಪ್ರಮುಖ ಯಾತ್ರಾ ಸ್ಥಳ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್​ನಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅನ್ನು ಉದ್ಘಾಟಿಸಿದ್ದರು. ಅಂದಿನಿಂದ ವಿಶ್ವನಾಥನ ಭೇಟಿಗೆ ಬರುತ್ತಿರುವ ಭಕ್ತರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಗುಲದ ಆವರಣ ದೊಡ್ಡದಾಗಿರುವುದು ಹಾಗೂ ಭಕ್ತರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಯಾತ್ರೆಯನ್ನು ಹೆಚ್ಚು ಸರಳ ಹಾಗೂ ಪಾವನಗೊಳಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋದಿ ಕಾರಿಡಾರ್​ ಉದ್ಘಾಟಿಸಿದ ಬಳಿಕ ಹೆಚ್ಚಿನ ಭಕ್ತರು

ಶ್ರೀ ಕಾಶಿ ವಿಶ್ವನಾಥ ಧಾಮವನ್ನು 2021 ರ ಡಿಸೆಂಬರ್ 13 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಅಂದಿನಿಂದ 2023 ರ ಡಿಸೆಂಬರ್ 6 ರವರೆಗೆ, 12 ಕೋಟಿ 92 ಲಕ್ಷ 24 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಅವರ ದರ್ಶನ ಪಡೆದಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಸಂಖ್ಯೆ 13 ಕೋಟಿ ದಾಟುವ ನಿರೀಕ್ಷೆಯಿದೆ ಎಂದು ದೇವಾಲಯದ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ವರ್ಮಾ ಹೇಳಿದ್ದಾರೆ.

ಶ್ರಾವಣ ತಿಂಗಳೊಂದರಲ್ಲೇ 1.6 ಕೋಟಿಗೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜುಲೈನಲ್ಲಿ 72 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರೆ, ಆಗಸ್ಟ್​​ನಲ್ಲಿ ಈ ಸಂಖ್ಯೆ 95.6 ಲಕ್ಷದಷ್ಟಿತ್ತು. ಜನವರಿ 2023ರಿಂದ ಡಿಸೆಂಬರ್ ವರೆಗೆ ದೇವಾಲಯದಲ್ಲಿ 5.3 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ, ಕಾಶಿ ವಿಶ್ವನಾಥ ಟ್ರಸ್ಟ್ ಪ್ರವಾಸಿಗರು ಮತ್ತು ಭಕ್ತರಿಗೆ ನೀಡುವ ಸೌಲಭ್ಯಗಳನ್ನು ಹೆಚ್ಚಿಸಿದೆ. ಅಂತಹ ಬದಲಾವಣೆಗಳು ಭಕ್ತರ ಭೇಟಿಯನ್ನು ಸರಳಗೊಳಿಸುತ್ತಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ವ್ಯಾಪ್ತಿ ವಿಸ್ತರಣೆಯಿಂದ ಅನುಕೂಲ

ಈ ಮೊದಲು ದೇವಾಲಯದ ವಿಸ್ತೀರ್ಣ ಕೇವಲ 3000 ಚದರ ಅಡಿಗಳಷ್ಟಿತ್ತು. 2021 ರಲ್ಲಿ, ಇದನ್ನು ಸುಮಾರು 5 ಲಕ್ಷ ಚದರ ಅಡಿಗೆ ವಿಸ್ತರಿಸಲಾಯಿತು. ಇದು ದೇವಾಲಯದ ಆವರಣದಲ್ಲಿ ಏಕಕಾಲಕ್ಕೆ 50,000 ರಿಂದ 75,000 ಭಕ್ತರಿಗೆ ಪ್ರವೇಶ ಪಡೆಯಲು ಅವಕಾಶ ನೀಡಿದೆ. ಬೇಸಿಗೆಯಲ್ಲಿ ಸುಡುವ ಬಿಸಿಲು, ಚಳಿ ಮತ್ತು ಮಳೆಯಿಂದ ರಕ್ಷಿಸಲು ಜರ್ಮನ್ ಹ್ಯಾಂಗರ್ ಗಳು, ಚಾಪೆಗಳು, ಕೂಲರ್ ಗಳು, ಕುಡಿಯುವ ನೀರು, ಗಾಲಿಕುರ್ಚಿಗಳು, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇತರ ವ್ಯವಸ್ಥೆಗಳಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಲಾದ ಇತರ ಸೌಲಭ್ಯಗಳಲ್ಲಿ ಸೇರಿವೆ.

Continue Reading

ಅಂಕಣ

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ.

VISTARANEWS.COM


on

kaivara tatayya
Koo
jayaram-column

ಕೈವಾರದ ತಾತಯ್ಯನವರು ಮಾನವ ಜನ್ಮದ ಶ್ರೇಷ್ಠತೆಯನ್ನು ಹಲವಾರು ಬೋಧನೆಗಳಲ್ಲಿ ಎತ್ತಿಹಿಡಿದಿದ್ದಾರೆ. ನರಜನ್ಮದಲ್ಲಿ ಮಾತ್ರ ಮೋಕ್ಷವನ್ನು ಕಂಡುಕೊಳ್ಳಲು ಸಾಧ್ಯವಿದೆ. ನಿನ್ನನ್ನು ನೀನು ತಿಳಿದು ಆತ್ಮಜ್ಞಾನಿಯಾಗು. ಮತಿಹೀನನಾಗಿ ವರ್ತಿಸುತ್ತಾ, ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಅಧ್ಯಾತ್ಮವಿದ್ಯೆ ಅಂಟುವುದಿಲ್ಲ. ಹೀಗೆ ಹಲವಾರು ಮಹತ್ವದ ವಿಷಯಗಳನ್ನು ತಾತಯ್ಯನವರು ಸರಳವಾದ ಮಾತುಗಳಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬೋಧಿಸಿದ್ದಾರೆ.

ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಜೀವಿಗೂ ಮರಣವಿದೆ. ಇದು ಸತ್ಯ. ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮರಣದ ನಂತರ ಹುಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ. ಈ ಚಿಂತನೆಯನ್ನು ತಾತಯ್ಯನವರು ಮುಂದಿಡುತ್ತಿದ್ದಾರೆ.

ಯೆಂತ ಕಾಲಮೈನ ಯೆರುಕ ಲೇಕನು ಜೀವಿ
ಚಚ್ಚಿ ಪುಟ್ಟುಚುನುಂಡು ಸಹಜಮಿದಿಯು

ತಾತಯ್ಯನವರು ಈ ಪದ್ಯದಲ್ಲಿ ಮಾನವರಿಗೆ ನೇರವಾಗಿ ತತ್ವಬೋಧೆಯನ್ನು ಮಾಡಿದ್ದಾರೆ. ಎಷ್ಟೇ ಕಾಲ ಕಳೆದರೂ ಅಜ್ಞಾನದಿಂದ ಕೂಡಿರುವ ಜೀವಿಯು ಮತ್ತೆ ಮತ್ತೆ ಸತ್ತು ಹುಟ್ಟುತ್ತಿರುತ್ತಾನೆ. ಇದು ಸಹಜವಾದ ಪ್ರಕ್ರಿಯೆ. ಕಾರಣವೆಂದರೇ ಅಜ್ಞಾನ. ಯಾರಿಗಾದರೇ ಕೇವಲ ಪ್ರಾಪಂಚಿಕವಾದ ವ್ಯವಹಾರದಲ್ಲಿ ಮಾತ್ರ ಆಸಕ್ತಿ ಇರುತ್ತದೋ ಅವರು ಅಜ್ಞಾನಿಗಳು. ಮಾನವಜನ್ಮದಲ್ಲಿ ಹುಟ್ಟಿದ ಮೇಲೆ ಪರಲೋಕದ ಚಿಂತನೆಯನ್ನು ಮಾಡುತ್ತಿರಬೇಕು. ಅಜ್ಞಾನಿಯಾಗದೇ ಆತ್ಮಜ್ಞಾನಿಯಾಗಿ ಈ ಸಹಜಸ್ಥಿತಿಯಿಂದ ತಪ್ಪಿಸಿಕೊಂಡು ಪಾರಾಗು ಎನ್ನುತ್ತಿದ್ದಾರೆ ತಾತಯ್ಯನವರು.

ಜನನ ಮರಣಮುಲೆನ್ನೋ..

ಮಾನವನಾಗಿ ಹುಟ್ಟುವುದಕ್ಕೆ ಮೊದಲು ಏನಾಗಿದ್ದೇವೋ? ಯಾರಿಗೂ ಗೊತ್ತಿಲ್ಲ. ಮಾನವ ಜನ್ಮದಲ್ಲಿರುವ ಆತ್ಮ ಹಿಂದೆ ಯಾವ ಯಾವ ಜೀವರಾಶಿಗಳಲ್ಲಿ ಸೇರಿಕೊಂಡು ಜೀವಿಸಿತ್ತೋ? ಯಾರಿಗೂ ಗೊತ್ತಿಲ್ಲ. ಇದರ ಮನವರಿಕೆಯನ್ನು ತಾತಯ್ಯನವರು ಮಾಡಿಕೊಡುತ್ತಿದ್ದಾರೆ.

ಜನನಮರಣಮುಲೆನ್ನೊ ಜಾತುಲೆನ್ನಾಯೆನೋ
ತಲಿದಂಡ್ರುಲೆಂದರೋ ತನುವುಲೆನ್ನೋ
ಇಪ್ಪುಡು ಧರಲೋನ ಯಿಟುವಂಟಿ ಮಾನವ
ದೇಹಂಬು ನಿರ್ಮಿಂಚೆ ಮಾಧವುಂಡು||

ಈವರೆಗೆ ಅದೆಷ್ಟು ಸಲ ಜನನ ಮರಣಗಳಾದವೋ, ಅದೆಷ್ಟು ಜಾತಿಗಳಾದವೋ, ಅದೆಷ್ಟು ಮಂದಿ ತಾಯಿತಂದೆಗಳನ್ನು ಪಡೆದದ್ದಾಯಿತೋ, ಅದಕ್ಕೆ ಲೆಕ್ಕವೇ ಇಲ್ಲ. ಎಷ್ಟೆಷ್ಟು ಶರೀರಗಳನ್ನು ಪಡೆದು ಮಣ್ಣುಗೂಡಿಸಿದ್ದಾಯಿತೋ, ಲೆಕ್ಕವಿಲ್ಲ. ಹಿಂದಿನ ಜನ್ಮಗಳು ಏನೇ ಇರಲಿ, ಕಳೆದು ಹೋಯಿತು. ಚಿಂತೆ ಮಾಡಬೇಡ. ಈಗಲಾದರೂ, ಜ್ಞಾನ ಸಂಪಾದನೆಗೆ ಅವಕಾಶವಿರುವ ವಿವೇಕದಿಂದ ಕೂಡಿರುವ ಮಾನವಜನ್ಮ ಬಂದಿದೆ. ಲೋಕೇಶ್ವರನಾದ ಮಾಧವನು ಇಂತಹ ಶ್ರೇಷ್ಠವಾದ ಮಾನವದೇಹವನ್ನು ಕೊಟ್ಟಿದ್ದಾನೆ, ಹಾಳುಮಾಡಿಕೊಳ್ಳಬೇಡ ಎಂದು ಎಚ್ಚರಿಸುತ್ತಿದ್ದಾರೆ ತಾತಯ್ಯನವರು.

ಭೂಮಿಯಲ್ಲಿ ಇಂತಹ ಮಾನವದೇಹವನ್ನು ಪಡೆದ ಮೇಲೆ ಮಾಡಬೇಕಾದ ಕರ್ತವ್ಯವೇನು? ಅದರ ಫಲಶ್ರುತಿಯೇನು? ಪದ್ಯದ ಕೊನೆಯಲ್ಲಿ ಈ ರೀತಿಯಾಗಿ ಬೋಧಿಸುತ್ತಿದ್ದಾರೆ ತಾತಯ್ಯನವರು.
ಹಿಂದೆ ಮಾಡಿದ ತಪ್ಪನ್ನು ಮಾಡದಿರು..

ನಮ್ಮ ಕಣ್ಣ ಮುಂದೆಯೇ ಮಾನವ ದೇಹವಿಲ್ಲದ ಅದೆಷ್ಟೋ ಜಂತುಗಳಿವೆ. ಆದರೆ ಈ ಜಂತುಗಳಿಗೆ ಮಾನವನಿಗಿರುವಷ್ಟು ಜ್ಞಾನವಿಲ್ಲ, ಅನುಕೂಲಗಳಿಲ್ಲ. ಆ ಜಂತುಗಳು ಪರಮಾತ್ಮನಾದ ಜಗದೀಶ್ವರನ ಸ್ಮರಣೆ ಮಾಡುವುದಿಲ್ಲ. ಮಾನವನಾಗಿ ಹುಟ್ಟಿದ ಮೇಲೆ ನೀನು ಪರಮಾತ್ಮನ ಸ್ಮರಣೆಯನ್ನು ಮಾಡದಿದ್ದರೆ ಏನು ಪ್ರಯೋಜನ? ಮಾನವಜನ್ಮದ ಸಾರ್ಥಕವೇನು? ಆ ಜಂತುವಿಗೂ ಮಾನವರಿಗೂ ಇರುವ ವ್ಯತ್ಯಾಸವೇನು? ತಾತಯ್ಯನವರು ಹೀಗೆ ಬೋಧಿಸಿದ್ದಾರೆ.

ಮುನುಪಟಿ ವಿಧಂಬುನ ಮೂರ್ಖುಡೈ ಪೋವಲದು
ಜಗದೀಶ್ವರುನಿ ಜಪಮು ಚೇಸಿ ನೀವು
ಪಟ್ಟು ವದಲಕ ಪರಮಂದೆ ದೃಷ್ಟಿವುಂಚಿ
ಚಾವು-ಪುಟ್ಟು ಲೇನಿ ಸೌಖ್ಯಸಂಪದಲನುಂಡು||

kaivara tatayya2

ಹಿಂದಿನ ಜನ್ಮಗಳಲ್ಲಿ ಮಾಡಿದದಂತೆ ಈ ಸಲವೂ ಮೂರ್ಖನಾಗಿ ಹೊರಡುವವನಾಗಬೇಡ. ಮಾನವಜನ್ಮವನ್ನು ಎಷ್ಟೋ ಪೂರ್ವಜನ್ಮಗಳ ಪುಣ್ಯದಿಂದ ಪಡೆದಿದ್ದೀಯ. ಈ ಸದಾವಕಾಶವನ್ನು ಕಳೆದುಕೊಳ್ಳಬೇಡ. ಪರಮಾತ್ಮನಾದ ಜಗದೀಶ್ವರನ ಜಪಸ್ಮರಣೆಯನ್ನು ಮಾಡು. ಪಟ್ಟು ಬಿಡದೆ ಪರಮಲಕ್ಷ್ಯವಾಗಿರುವ ಮೋಕ್ಷದಲ್ಲೇ ದೃಷ್ಟಿಯನ್ನಿಟ್ಟು, ಸಾವು-ಹುಟ್ಟುಗಳಿಲ್ಲದ ಸೌಖ್ಯ ಸಂಪತ್ತುಗಳನ್ನು ಅನುಭವಿಸು ಎನ್ನುತ್ತಿದ್ದಾರೆ ತಾತಯ್ಯನವರು.

“ಪಟ್ಟು ವದಲಕ ಮರಮಂದೆ ದೃಷ್ಠಿವುಂಚಿ” ತಾತಯ್ಯನವರು ಮಾನವರಿಗೆ ನೀಡುತ್ತಿರುವ ಎಚ್ಚರಿಕೆ ಇದು. ಪರಮಾತ್ಮನ ಸ್ಮರಣೆ ಮಾಡು, ಇದು ತಾತಯ್ಯನವರು ಬೋಧಿಸುತ್ತಿರುವ ಉಪದೇಶ. ದೃಢ ಸಂಕಲ್ಪದಿಂದ, ಹಿಡಿದ ಪಟ್ಟು ಬಿಡದೆ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು ಎನ್ನುತ್ತಿದ್ದಾರೆ. ಉದಾಸೀನದ ಸ್ಮರಣೆಯಿಂದ ಪ್ರಯೋಜನವಿಲ್ಲ. ಆದುದರಿಂದ ಜಪಸ್ಮರಣೆಯಲ್ಲಿ ಸಡಿಲವಾಗದೆ ಬಿಗಿಯಾದ, ದೃಢವಾದ ಹಿಡಿತವಿರಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ನವರಾತ್ರಿ ವಿಶೇಷ: ಅಖಿಲಾಂಡೇಶ್ವರಿಯ ವರ್ಣನೆ

ಪರದಲ್ಲಿ ದೃಷ್ಠಿ ಇರಿಸಬೇಕೆಂದು ಹೇಳಿದ್ದಾರೆ. ಇದು ಬಹಳ ಮುಖ್ಯವಾದುದು. ಲೌಕಿಕ ಭೋಗಗಳನ್ನು ಬಯಸಿ ಮಾಡುವ ಅನೇಕ ಜಪಗಳು ಶಾಶ್ವತವಾದ ಸುಖಗಳನ್ನು ನೀಡುವುದಿಲ್ಲ. ಅಜ್ಞಾನಿ ಜನರು ಧನಕನಕ ಭೋಗಗಳೆಂಬ ಅಲ್ಪಲಾಭಕ್ಕೆ ಮರುಳಾಗಿ ಅದನ್ನೇ ಸುಖವೆಂದು ಭ್ರಮಿಸುತ್ತಾರೆ. ಆದರೆ ಸ್ವಲ್ಪವೇ ಕಾಲದ ನಂತರ ಭೋಗವು ರೋಗವಾಗಿ ಪರಿಣಮಿಸುತ್ತದೆ. ಕೊನೆಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನೀನು ಹಾಗಾಗಬೇಡ, ಜ್ಞಾನಿಯಾಗಿ ಹುಟ್ಟುಸಾವುಗಳಿಲ್ಲದ ಭಗವಂತನ ಸಾನ್ನಿಧ್ಯವನ್ನು ಸೌಖ್ಯ ಸಂಪದವೆಂದು ಅರಿತುಕೋ. ಲೋಕದ ಇನ್ನಿತರ ಅಲ್ಪವಸ್ತುಗಳಿಗೆ ಆಸೆಪಡದೆ ಮೋಕ್ಷತತ್ವದಲ್ಲಿ ಮನಸ್ಸಿಟ್ಟು ಸ್ಮರಿಸು, ಆಗ ಜಗದೀಶ್ವರನು ನಿನ್ನನ್ನು ತನ್ನ ಲೋಕಕ್ಕೆ ಕರೆದುಕೊಂಡು ತನ್ನ ಬಳಿ ಇರಿಸಿಕೊಳ್ಳುತ್ತಾನೆ. ಇದು ಮೋಕ್ಷಪದವಿ. ಇಲ್ಲಿಗೆ ಹೋದಮೇಲೆ ಪುನ: ಈ ಲೋಕಕ್ಕೆ ಹಿಂತಿರುಗಿ ಬರಬೇಕಾಗಿಲ್ಲ. ಹುಟ್ಟುಸಾವುಗಳ ತಂಟೆ ಇರುವುದಿಲ್ಲ. ಇದೇ ನಿಜವಾದ ಆನಂದ. ಭಗವಂತನ ನಾಮಜಪದ ಸ್ಮರಣೆಯಿಂದ ಈ ಮೋಕ್ಷಸಾಧನೆಯನ್ನು ಮಾಡು, ಹಿಂದಿನ ಜನ್ಮಗಳಲ್ಲಿ ಮೂರ್ಖತನದಿಂದ ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೋ ಎನ್ನುತ್ತಿದ್ದಾರೆ ತಾತಯ್ಯನವರು.

ಹುಟ್ಟು ಸಾವುಗಳಿಲ್ಲದ ಮೋಕ್ಷ ಪಡೆಯಲು ಈ ಮಾನವದೇಹದಲ್ಲಿಯೇ ಸಾಧನೆ ಮಾಡಬೇಕು. ಈ ಸಾಧನೆಗೆ ಪರಮಾತ್ಮನ ನಿರಂತರ ಸ್ಮರಣೆಯೇ ಉತ್ತಮವಾದ ಸಾಧನ ವಿಧಾನವಾಗಿದೆ. ಮಾನವಜನ್ಮ ಲಭಿಸಿರುವ ಈ ಸಮಯದಲ್ಲೂ ಮೋಕ್ಷ ಸಾಧನೆಗಾಗಿ ಭಗವಂತನ ಸ್ಮರಣೆಮಾಡದೆ, ಇಹಭೋಗಗಳಿಗೆ ಆಸೆಪಟ್ಟರೇ ಯಮಪಾಶಕ್ಕೆ ತುತ್ತಾಗಬೇಕಾಗುತ್ತದೆ. ಭಕ್ತನಾಗು, ಭಜನೆ ಮಾಡು, ಹುಟ್ಟುಸಾವುಗಳಿಲ್ಲದ ಸೌಖ್ಯಸಂಪತ್ತನ್ನು ಅನುಭವಿಸು ಎಂದು ತಾತಯ್ಯನವರು ಮಾನವರನ್ನು ಈ ಬೋಧನೆಯ ಮೂಲಕ ಜಾಗೃತಗೊಳಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ

Continue Reading

ದೇಶ

ಮನಮೋಹಕ ರಾಮ ಮಂದಿರ ಗರ್ಭ ಗುಡಿ! ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರು

Ayodhya Ram Mandir: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

beautiful Ayodhya ram mandir Temple's Sanctum Sanctorum
Koo

ನವದೆಹಲಿ: ಮುಂದಿನ ತಿಂಗಳು ಲೋಕಾರ್ಪಣೆಯಾಗಲಿರುವ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.

ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.

ವಿಗ್ರಹವನ್ನು ನೆಲ ಮಹಡಿಯಲ್ಲಿರುವ ‘ಗ್ರಹಗೃಹ’ದಲ್ಲಿ ಪ್ರತಿಷ್ಠಾಪಿಸಲಾಗುವುದು. ದೇವಾಲಯದ ನೆಲ ಮಹಡಿ ಬಹುತೇಕ ಸಿದ್ಧವಾಗಿದೆ. ಹಾಗಾಗಿ ‘ಪ್ರಾಣ-ಪ್ರತಿಷ್ಠಾ’ (ಪ್ರತಿಷ್ಠಾಪನಾ ಸಮಾರಂಭ)ಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಚಂಪತ್ ರಾಯ್ ಅವರು ತಿಳಿಸಿದ್ದಾರೆ. ಮುಂದಿನ ತಿಂಗಳು ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ.

ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

Continue Reading
Advertisement
Congress Mp old tweet resurfaces about black money
ದೇಶ12 mins ago

ಇಷ್ಟೊಂದು ಕಪ್ಪು ಹಣ ಎಲ್ಲಿಡುತ್ತಾರೋ ಎಂದು ಕೇಳಿದ್ದ ಕೈ ಸಂಸದನ ಬಳಿ 300 ಕೋಟಿ ರೂ. ಬ್ಲ್ಯಾಕ್ ಮನಿ!

pro kabaddi
ಕ್ರೀಡೆ16 mins ago

Pro Kabaddi: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್​, ಹರ್ಯಾಣಗೆ ಒಲಿದ ಗೆಲುವು

Nagamurthy Swamy
ಕರ್ನಾಟಕ39 mins ago

Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ತೆರಳಿದ ಗದಗದ ಯುವ ಶಿಲ್ಪಿ

Saika Ishaque ran through the England middle order
ಕ್ರಿಕೆಟ್52 mins ago

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

CLAT Result 2024 announced
ದೇಶ54 mins ago

CLAT Result 2024: ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ ರಿಸಲ್ಟ್ ಪ್ರಕಟ

girl students fall ill
ಕರ್ನಾಟಕ1 hour ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್2 hours ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್2 hours ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ2 hours ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ3 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ8 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ11 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌