Adhika Masa 2023 Know Significance of the Month and Rituals Performed DuringAdhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ! Vistara News

ಧಾರ್ಮಿಕ

Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!

ಜು.18 ರಿಂದ ಅಧಿಕ ಮಾಸ (Adhika Masa 2023) ಆರಂಭವಾಗುತ್ತಿದೆ. ಈ ಮಾಸದ ಮಹತ್ವವೇನು? ಯಾವೆಲ್ಲಾ ವ್ರತಗಳನ್ನು ಮಾಡಬೇಕು? ಯಾವ ಕೆಲಸಗಳನ್ನು ಮಾಡಬಾರದು? ನಿತ್ಯ ಯಾವ ಮಂತ್ರ ಜಪಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

VISTARANEWS.COM


on

adhika masa 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೋಭಕೃತ್‌ ನಾಮ ಸಂವತ್ಸರದಲ್ಲಿ 12 ಮಾಸಗಳಿಗೆ ಬದಲಾಗಿ 13 ಮಾಸವಿದೆ. ಹೌದು ಈ ಸಂವತ್ಸರ ಅಧಿಕ ಮಾಸವಿರುವ ಸಂವತ್ಸರ. ಹೀಗಾಗಿಯೇ ಹಬ್ಬ-ಹರಿದಿನಗಳ ಮಾಸ ಎಂದೇ ಹೆಸರು ಪಡೆದಿರುವ ಶ್ರಾವಣ ಮಾಸವು ಎರಡು ಇರಲಿದೆ. ಒಂದು ಅಧಿಕ ಮಾಸವಾದರೆ ಮತ್ತೊಂದು ನಿಜ ಶ್ರಾವಣ. ನಿಜ ಶ್ರಾವಣದಲ್ಲಿ ಎಂದಿನಂತೆ ಹಬ್ಬಗಳು, ವ್ರತಾಚರಣೆ ನಡೆಯಲಿದೆ. ಅಧಿಕ ಶ್ರಾವಣದಲ್ಲಿ ಕೆಲ ಆಚರಣೆಗಳಿಗೆ ನಿಷೇಧವಿದೆ. ಜು.18 ರಿಂದ ಅಧಿಕ ಶ್ರಾವಣ (Adhika Masa 2023) ಆರಂಭವಾಗುತ್ತಿದೆ.

ಚಾಂದ್ರೆ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕೀರ್ತಿತಃ| ಸ್ಮೃತಿಮುಕ್ತಾವಳಿಯ ವಾಕ್ಯದಂತೆ
ಯಾವ ಚಾಂದ್ರಮಾಸದಲ್ಲಿ ಒಂದೂ ಸಂಕ್ರಮಣವೂ ಸಂಭವಿಸುವುದಿಲ್ಲವೋ ಅದಕ್ಕೆ ಅಧಿಕಮಾಸ ಅಥವಾ ಮಲಮಾಸ ಎಂದು ಹೆಸರು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ. ಅಧಿಕ ಮಾಸವನ್ನು ಮಲ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ.

ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿ ದ್ವಯಮೇವ ವಾ |
ಮಲಮಾಸಕ್ಷಯೌ ಜ್ಞೇಯೌ ಸರ್ವಧರ್ಮ ವಿವರ್ಜಿತೌ ||

ಯಾವ ತಿಂಗಳಿನಲ್ಲಿ ರವಿಸಂಕ್ರಾಂತಿ ಇರುವುದಿಲ್ಲವೋ ಅದು ಅಧಿಕಮಾಸ; ಎರಡು ರವಿ ಸಂಕ್ರಮಣಗಳು ಬಂದರೆ ಅದು ಕ್ಷಯಮಾಸ ಎಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಲಾಗಿದೆ.

ಪವಿತ್ರವಾದ ಮಾಸ

ಸರಾಸರಿ 33 ತಿಂಗಳಿಗೊಮ್ಮೆ ಬರುವ ಅಧಿಕಮಾಸವು ಬಹಳ ಮಹತ್ವವಾದುದು ಮತ್ತು ಪವಿತ್ರವಾದ ಮಾಸವಾಗಿದ್ದು, ದೇವರ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ. ಪುರುಷೋತ್ತಮರೂಪಿ ಪರಮಾತ್ಮನು ಈ ಮಾಸದ ನಿಯಾಮಕನಾದುದರಿಂದ ಪುರುಷೋತ್ತಮ ಮಾಸ ಎಂದೂ, ಅನೇಕ ಮಂಗಳಕಾರ್ಯಗಳಿಗೆ ನಿಷಿದ್ಧವಾದ ಈ ಮಾಸವು ಮಲಮಾಸವೆಂದು ಕರೆಯಲ್ಪಡುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ಅಧಿಕ ಮಾಸವು ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಸೌರ ವರ್ಷದಲ್ಲಿ 365 ದಿನ ಮತ್ತು 6 ಗಂಟೆಗಳಿರುತ್ತವೆ. ಅದೇ ಚಂದ್ರ ವರ್ಷದಲ್ಲಿ 354 ದಿನಗಳಿರುತ್ತದೆ. ಎರಡು ವರ್ಷಗಳ ನಡುವೆ ಹನ್ನೊಂದು ದಿನಗಳ ವ್ಯತ್ಯಾಸ ಬರಲಿದೆ. ಹಾಗಾಗಿ ಈ ಅಂತರವನ್ನು ಸರಿದೂಗಿಸುವ ಸಲುವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಎಲ್ಲಿಯವರೆಗೆ ಅಧಿಕ ಮಾಸ?

2023ರ ಜುಲೈ 18ರಂದು ಅಧಿಕ ಮಾಸ ಆರಂಭವಾಗಲಿದ್ದು, ಆಗಸ್ಟ್ 16ಕ್ಕೆ ಮುಕ್ತಾಯಗೊಳ್ಳಲಿದೆ. ಅಧಿಕ ಮಾಸವು ವಿಷ್ಣುವಿನ ಆರಾಧನೆಗೆ ಅತ್ಯಂತ ಶ್ರೇಷ್ಠ ಮಾಸವಾಗಿದೆ.

ಅಧಿಕ ಮಾಸವು ದೇವರ ಪೂಜೆ, ಭಜನೆ, ಕೀರ್ತನೆ, ಪಾರಾಯಣಗಳಿಗೆ ಪ್ರಶಸ್ತವಾದ ಮಾಸವಾಗಿದೆ. ಧಾರ್ಮಿಕ ಕಾರ್ಯಗಳಿಗೆ ಈ ಮಾಸದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಅಧಿಕ ಮಾಸದಲ್ಲಿ ಮಾಡಿದ ದೇವರ ಕಾರ್ಯಗಳು ಮೋಕ್ಷಕ್ಕೆ ದಾರಿ ಮಾಡಿಕೊಡಲಿದೆ. ಹಾಗಾಗಿ ಈ ಮಾಸದಲ್ಲಿ ಹೆಚ್ಚಿನ ದೈವೋಪಾಸನೆ ಮಾಡುವುದು ಒಳಿತು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಅಧಿಕಮಾಸದಲ್ಲಿ ಈ ವ್ರತಗಳನ್ನು ಆಚರಿಸಬಹುದು;
1) ಉಪವಾಸ ವ್ರತ, ಏಕಭುಕ್ತ, ನಕ್ತಭೋಜನ, ಅಯಾಚಿತ, ಧಾರಣ ಪಾರಣ ಈ ಪ್ರಕಾರ ಐದು ವ್ರತಗಳಲ್ಲಿ ಒಂದೊಂದನ್ನು ಒಂದು ತಿಂಗಳು ಪೂರ್ತಿ ಮಾಡುವುದರಿಂದ ವಿಶೇಷ ಪುಣ್ಯಪ್ರಾಪ್ತಿ ಇದೆ.
2) ಒಂದು ತಿಂಗಳು ಪ್ರತಿದಿನ ತಾಂಬೂಲದಾನದಿಂದ ಸೌಭಾಗ್ಯಪ್ರಾಪ್ತಿಯಾಗಲಿದೆ.
3) ಒಂದು ತಿಂಗಳು ಪ್ರತಿದಿನ ದೇವರ ಹಾಗು ಗುರುಗಳ ಸನ್ನಿಧಿಯಲ್ಲಿ ಅಖಂಡದೀಪದಾನದಿಂದ ಲಕ್ಷ್ಮೀ ಪ್ರಾಪ್ತಿಯಾಗಲಿದೆ.
4) ಪ್ರತೀದಿನ ಗಂಗಾ ಮೊದಲಾದ ಮಹಾನದಿಗಳಲ್ಲಿ ಪ್ರಾತಃಸ್ನಾನದಿಂದ ಸರ್ವಪಾಪನಿವೃತ್ತಿಯಾಗಲಿದೆ.
5) ಒಂದು ತಿಂಗಳು ಪ್ರತಿದಿನ 33 ಅಪೂಪ (ಅತಿರಸ) ದಾನದಿಂದ ಅನಿಷ್ಠ ತೊಲಗಿ ಇಷ್ಟಾರ್ಥಸಿದ್ಧಿಯಾಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಶುಭ ಕಾರ್ಯಗಳನ್ನು ಮಾಡುವಂತಿಲ್ಲ!

ಅಧಿಕ ಮಾಸದಲ್ಲಿ ಅರಿವಿದ್ದೋ, ಅರಿವಿಲ್ಲದೆಯೋ ಮಾಡುವ ಕೆಲವು ಕೆಲಸಗಳಿಂದ ಗಳಿಸಿದ ಪುಣ್ಯ ನಾಶವಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಅಧಿಕ ಮಾಸದಲ್ಲಿ ದೈನಂದಿನ ಕಾರ್ಯಗಳ ಜೊತೆಗೆ ದೇವರ ಆರಾಧನೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಮಂಗಳ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ.

ಪ್ರತಿ ಮಾಸದಲ್ಲೂ ಸೂರ್ಯನ ಸಂಕ್ರಮಣ ಪ್ರತ್ಯೇಕ ರಾಶಿಯಲ್ಲಿ ಆಗುತ್ತದೆ, ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲ. ಹಾಗಾದಾಗ ಸೂರ್ಯ ಮತ್ತು ಚಂದ್ರನ ವೇಗದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಾತಾವರಣ ದಲ್ಲಿ ಏರುಪೇರಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ರೋಗ-ರುಜಿನಗಳ ಬಾಧೆ ಹೆಚ್ಚಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಸಂಭವ ಅಧಿಕವಾಗಿರುತ್ತದೆ. ಹಾಗಾಗಿ ಪುಣ್ಯ ಕಾರ್ಯಗಳನ್ನು ಮಾತ್ರ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಶುಭ ಕಾರ್ಯಗಳಾದ ಮದುವೆ, ಮುಂಜಿ ಮತ್ತು ಚೌಲ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ. ಮಗುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವುದು, ಪಟ್ಟಾಭಿಷೇಕ, ಅನ್ನ ಪ್ರಾಶನ ಕೂಡ ಮಾಡಬಾರದು.

ಪ್ರತಿನಿತ್ಯ ಈ ಮಂತ್ರ ಜಪಿಸಿ!
ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ |
ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ ||

ಅಧಿಕಮಾಸದಲ್ಲಿ ಪ್ರತಿನಿತ್ಯ 33 ಬಾರಿ ಈ ಸ್ತೋತ್ರವನ್ನು ಹೇಳಬೇಕೆಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಹೊಸ ವ್ಯಾಪಾರ ಆರಂಭಿಸಬೇಡಿ

ಅಧಿಕ ಮಾಸದಲ್ಲಿ ಹೊಸತಾಗಿ ವ್ಯಾಪಾರ, ಉದ್ಯೋಗ ಮುಂತಾದವುಗಳನ್ನು ಆರಂಭಿಸಿದರೆ ಉತ್ತಮವಲ್ಲ, ಜೊತೆಗೆ ಅಂದುಕೊಂಡ ಯಶಸ್ಸು ದೊರಕುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಈ ಮಾಸದಲ್ಲಿ ಯಾವುದೇ ಅಂಗಡಿ, ಮಳಿಗೆ, ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಆರಂಭಿಸಬಾರದು. ಹೊಸ ಯೋಜನೆಗಳು, ಹೊಸ ಉದ್ಯೋಗಾವಕಾಶಗಳು ಅಥವಾ ಪ್ರಮುಖ ಹೂಡಿಕೆಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ನಿವೇಶನ ಖರೀದಿ ಬೇಡ

ಅಧಿಕ ಮಾಸದಲ್ಲಿ ಹೊಸ ಯೋಜನೆಗಳನ್ನು, ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡುವುದು ಉತ್ತಮವಲ್ಲ. ಜೊತೆಗೆ ನಿವೇಶನಗಳ ಖರೀದಿಗೆ ಮತ್ತು ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಅಧಿಕ ಮಾಸದಲ್ಲಿ ಆರಂಭಿಸುವುದು ಒಳಿತಲ್ಲವೆಂದು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು?

ಅಧಿಕಮಾಸವು ಬಂದಾಗ ತೀರ್ಥಯಾತ್ರೆ ಪಿತೃಕಾರ್ಯ, ತೀರ್ಥಶ್ರಾದ್ಧ, ವಿವಾಹ ಕಾಮ್ಯವ್ರತ, ಕಾಮ್ಯ ಉಪವಾಸ ಮೊದಲದುವುಗಳನ್ನು ಮಾಡಬಾರದು ಎಂದು ಬೃಹನ್ನಾರದೀಯ ಪುರಾಣದಲ್ಲಿ ಹೇಳಲಾಗಿದೆ. ಉದ್ಯೋಗದಲ್ಲಿ ಹೊಸತನ್ನೇನಾದರೂ ಮಾಡುವುದಿದ್ದರೆ ಈ ಮಾಸದಲ್ಲಿ ಮಾಡದಿರುವುದು ಒಳಿತಂತೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

Vastu Tips: ಮನೆಯ ಪ್ರತಿಯೊಂದು ಕೋಣೆ ಯಾವ ರೀತಿ ಪ್ರಕಾಶ ಹೊಂದಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ.

VISTARANEWS.COM


on

home
Koo

ಬೆಂಗಳೂರು: ಮನೆ ನಿರ್ಮಾಣ ಎನ್ನುವುದು ಬಹುತೇಕರ ಎಷ್ಟೋ ವರ್ಷದ ಕನಸಾಗಿರುತ್ತದೆ. ಅಂತಹ ಮನೆಯಲ್ಲಿ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಜೀವನ ಕಳೆಯುವಂತಿರಬೇಕು. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ನೆಮ್ಮದಿ, ಸಮೃದ್ಧಿ ಹೊಂದಿದ ಮನೆಗಾಗಿ ಕೆಲವೊಂದು ವಿಚಾರಗಳನ್ನು ಪ್ರಸ್ತಾವಿಸಿದೆ. ಯಾವ ರೂಮ್‌ ಹೇಗಿರಬೇಕು, ಅಲ್ಲಿ ಯಾವ ರೀತಿಯ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಆ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಹಾಲ್‌

ಇದು ಮನೆಯ ಮುಖ್ಯ ಭಾಗ. ಇಲ್ಲಿ ಗರಿಷ್ಠ ಬೆಳಕು ಇರುವುದು ಮುಖ್ಯ. ಹಾಲ್‌ನ ನೈಋತ್ಯ ಭಾಗದಲ್ಲಿ ಗೋಡೆ ಇದ್ದರೆ ಕುಟುಂಬದ ಸದಸ್ಯರಿಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲು ಪ್ರಕಾಶಮಾನವಾದ ಸ್ಪಾಟ್ ಲೈಟ್ ಅಳವಡಿಸಿ. ಜತೆಗೆ ಕುಟುಂಬದ ಭಾವಚಿತ್ರವನ್ನು ಅಲ್ಲಿಡಬಹುದು. ಕಲಾಕೃತಿಗಳು ಅಥವಾ ಸಸ್ಯಗಳಿದ್ದರೆ ಅವುಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸುವುದು ಉತ್ತಮ.

ಬೆಡ್‌ ರೂಮ್‌

ಇಡೀ ದಿನದ ಆಯಾಸ ಕಳೆದು ನೆಮ್ಮದಿಯಿಂದ, ಬೆಚ್ಚಗೆ ವಿಶ್ರಾಂತಿ ಪಡೆಯಲಿರುವ ಜಾಗ ಬೆಡ್‌ ರೂಮ್‌. ನಾವು ಇಲ್ಲಿ ಹೆಚ್ಚಿನ ಸಮಯ ಕಳೆಯುತ್ತೇವೆ. ಇಲ್ಲಿ ಓದುವುದು, ಸಿನಿಮಾ ನೋಡುವುದು, ನಿದ್ದೆ ಮಾಡುವುದು ಸೇರಿದಂತೆ ನಮ್ಮಿಷ್ಟದ ಚಟುವಟಿಕೆಗಳಲ್ಲಿ ನಿರತರಾಗಿರುತ್ತೇವೆ. ಹೀಗಾಗಿ ಈ ಕೋಣೆಯ ಬಗ್ಗೆ ಮುತುವರ್ಜಿ ವಹಿಸುವುದು ಅಗತ್ಯ. ಛಾಯಾಚಿತ್ರಗಳು ಅಥವಾ ವರ್ಣಚಿತ್ರಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸಿ. ಮಲಗುವ ಕೋಣೆಯಲ್ಲಿ ಹಿತಕರ ಬೆಳಕು ಸೂಸುವ ದೀಪ ಬಳಸಿ. ಟೇಬಲ್ ಲ್ಯಾಂಪ್‌ಗಳನ್ನು ಇರಿಸುವುದು ಸೂಕ್ತ.

ಡೈನಿಂಗ್‌ ರೂಮ್‌

ಇಲ್ಲಿ ಸ್ಫಟಿಕದ ಶಾಂಡ್ಲಿಯರ್ ದೀಪಗಳನ್ನು ಅಳವಡಿಸಿಕೊಳ್ಳಬಹುದು. ಇದು ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲಂಕಾರಿಕ ಹೋಲ್ಡರ್‌ಗಳಲ್ಲಿ ಕ್ಯಾಂಡಲ್‌ ಇರಿಸಬಹುದು. ಇದು ಡೈನಿಂಗ್‌ ರೂಮ್‌ ಅನ್ನು ಆಕರ್ಷಕವಾಗಿಸುತ್ತದೆ. ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಬೀರುವ ಬಲ್ಬ್‌ ಅಳವಡಿಸಿ. ಊಟ ಮಾಡುವಾಗ ಮಬ್ಬು ಇರಬಾರದು.

ಅಡುಗೆ ಕೋಣೆ

ಕುಟುಂಬ ಸದಸ್ಯರು ಒಟ್ಟಿಗೆ ಸೇರುವ ಮತ್ತು ತಮಗಾಗಿ ಆಹಾರ ಸಿದ್ಧಪಡಿಸುವ ಸ್ಥಳ ಅಡುಗೆ ಕೋಣೆ. ಇದು ಮನೆಯ ಇನ್ನೊಂದು ಬಹಳ ಮುಖ್ಯವಾದ ಸ್ಥಳವಾಗಿದ್ದು, ಇದನ್ನು ಸಮರ್ಪಕವಾಗಿ ಬೆಳಗಿಸಬೇಕು. ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ನಿರ್ದಿಷ್ಟ ಕಡೆಗಳಲ್ಲಿ ಲೈಟ್‌ ಅಳವಡಿಸಬೇಕು. ಇಲ್ಲಿ ಬೆಳಕು ಮತ್ತು ನೆರಳು ಸಮಾನವಾಗಿ ಹಂಚಿಕೆಯಾಗಬೇಕು. ಇಲ್ಲಿ ಟ್ಯೂಬ್‌ಲೈಟ್‌ಗಳನ್ನು ಬಳಸಬಹುದು. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾಸ್ತಾನು ಇರಿಸುವ ಜಾಗ ಪ್ರಕಾಶಮಾನವಾಗಿರಲಿ.

ಬಾತ್‌ ರೂಮ್‌

ಬಾತ್‌ ರೂಮ್‌ನ ಎಲ್ಲ ಕಡೆ ಬೆಳಕು ಹರಡುವಂತಿರಬೇಕು. ಮಂದ ಬೆಳಕು ಬೀರಲು ಕಡಿಮೆ ವ್ಯಾಟ್‌ನ ಬಲ್ಬ್ ಬಳಸಬಹುದು. ಸೋಪ್‌, ಪೇಸ್ಟ್‌, ಬ್ರಷ್‌ ಮುಂತಾದ ವಸ್ತುಗಳನ್ನು ಇರಿಸುವ ಸ್ಥಳಗಳ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಿ. ಅಪಾಯಗಳನ್ನು ತಪ್ಪಿಸಲು ಟಬ್ ಅಥವಾ ಶವರ್ ಮೇಲಿನ ಲೈಟ್‌ಗಳು ನೀರು ಮತ್ತು ಆವಿ-ನಿರೋಧಕ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ವಾಸ್ತು ಪ್ರಕಾರ ಲೈಟ್‌ ಅಳವಡಿಕೆಯ ಸಾಮಾನ್ಯ ನಿಯಮಗಳು

  • ಲೈಟ್‌ ಉತ್ತರ ಮತ್ತು ಪೂರ್ವ ಗೋಡೆಗಳ ಮೇಲಿರಿಸುವುದು ಸಕಾರಾತ್ಮಕತೆಯ ಸಂಕೇತ.
  • ಯಾವುದೇ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಲೈಟ್‌ ಅಳವಡಿಸಬೇಡಿ. ಇದನ್ನು ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.
  • ದಕ್ಷಿಣ ಭಾಗದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಇರಿಸಿ. ಇದರಿಂದ ವೃತ್ತಿ ಜೀವನದಲ್ಲಿ ಏಳಿಗೆ ಕಾಣಬಹುದು.
  • ದೇವರ ಕೋಣೆ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಬಿಳಿ ಬಣ್ಣದ ಬೆಳಕನ್ನು ಬಳಸಿ
  • ಮುಖ್ಯ ಬಾಗಿಲಿಗೆ ಹೋಗುವ ದಾರಿ ಸಾಕಷ್ಟು ಪ್ರಕಾಶಮಾನವಾಗಿರಬೇಕು.
  • ಮೆಟ್ಟಿಲು ಇಳಿಯುವ ಸ್ಥಳದಲ್ಲಿಯೂ ಪ್ರಕಾಶಮಾನವಾದ ದೀಪಗಳನ್ನು ಅಳವಡಿಸಿ. ಇದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಅದೃಷ್ಟದ ಬಾಗಿಲು ತೆರೆಯಲು ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ

Continue Reading

ದೇಶ

Ram Mandir: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಸಿದ್ಧ; 6 ಸಾವಿರ ಗಣ್ಯರಿಗೆ ಆಮಂತ್ರಣ

Ram Mandir: ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

VISTARANEWS.COM


on

Ram Mandir Invitations
Koo

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿಯು ಕೊನೆಯ ಹಂತಕ್ಕೆ ಬಂದಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳು ಸಿದ್ಧವಾಗಿದ್ದು, 6 ಸಾವಿರ ಗಣ್ಯರಿಗೆ ರವಾನಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ದೇಶಾದ್ಯಂತ ಇರುವ 6 ಸಾವಿರ ಗಣ್ಯರಿಗೆ ಟ್ರಸ್ಟ್‌ನಿಂದ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆಮಂತ್ರಣ ಪತ್ರಿಕೆಗಳ ಫೋಟೊಗಳು ಕೂಡ ಲಭ್ಯವಾಗಿವೆ. ದೇಶದ ಪ್ರಮುಖ ರಾಜಕಾರಣಿಗಳು, ಹಿಂದು ಸಂಘಟನೆಗಳ ಮುಖಂಡರು, ಸಾಧು-ಸಂತರಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಅಯೋಧ್ಯೆ ವಿಮಾನ ನಿಲ್ದಾಣವೂ ಸಿದ್ಧ

ರಾಮಮಂದಿರ ಲೋಕಾರ್ಪಣೆಗೆ ಮೊದಲೇ ಅಯೋಧ್ಯೆ ವಿಮಾನ ನಿಲ್ದಾಣವು ಸಿದ್ಧವಾಗಿರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ. “ಡಿಸೆಂಬರ್‌ 15ರ ವೇಳೆಗೆ ವಿಮಾನ ನಿಲ್ದಾಣ ಸಿದ್ಧವಾಗಿರಲಿದೆ. ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ಮುಗಿಯಲಿದ್ದು, ವಿಮಾನಗಳ ಹಾರಾಟ ಶುರುವಾಗಲಿದೆ. ಇದಾದ ಬಳಿಕ ಹಂತ ಹಂತವಾಗಿ ಬೃಹತ್‌ ವಿಮಾಣ ನಿಲ್ದಾಣ ನಿರ್ಮಿಸಲಾಗುವುದು” ಎಂದು ಯೋಗಿ ಆದಿತ್ಯನಾಥ್‌ ಮಾಹಿತಿ ನೀಡಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಎಂಬುದಾಗಿ ಹೆಸರಿಡಲು ತೀರ್ಮಾನಿಸಲಾಗಿದೆ.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Vastu Tips: ವಾಸ್ತು ಪ್ರಕಾರ ನಿಮ್ಮ ಬಾಲ್ಕನಿ ಹೇಗಿರಬೇಕು? ಇಲ್ಲಿದೆ ಸಲಹೆ

Vastu Tips: ಮನೆಯಲ್ಲಿ ಹಲವರ ನೆಚ್ಚಿನ ಜಾಗ ಬಾಲ್ಕನಿ. ವಾಸ್ತು ಪ್ರಕಾರ ಬಾಲ್ಕನಿ ಹೇಗಿರಬೇಕು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

home balcony
Koo

ಬೆಂಗಳೂರು: ಮನೆಯ ಬಾಲ್ಕನಿ (Balcony) ಎನ್ನುವುದು ಬಹುತೇಕರ ನೆಚ್ಚಿನ ಸ್ಥಳ. ಬೆಳಗ್ಗೆ ಎದ್ದ ಕೂಡಲೇ ಬಾಲ್ಕನಿಗೆ ಬಂದು ಸ್ವಚ್ಛ ಗಾಳಿಯನ್ನು ಉಸಿರಾಡುತ್ತ ಚಾ/ಕಾಫಿ ಕುಡಿಯುವುದು ಬಹುತೇಕರ ದಿನಚರಿಯ ಭಾಗವೇ ಆಗಿದೆ. ಫ್ರೀ ಸಮಯ ಕಳೆಯಲು, ಸ್ನೇಹಿತರೊಂದಿಗೆ ಹರಟೆ ಹೊಡೆಯಲು, ಯೋಗ, ಧ್ಯಾನ ಮಾಡಲು, ವ್ಯಾಯಾಮ ಮಾಡಲು, ಸಿನಿಮಾ ನೋಡಲು ಬಾಲ್ಕನಿಗಿಂತ ಉತ್ತಮ ಜಾಗ ಇನ್ನೊಂದಿಲ್ಲ. ಇಂತಹ ನಿಮ್ಮ ನೆಚ್ಚಿನ ಬಾಲ್ಕನಿಯನ್ನು ವಾಸ್ತು ಪ್ರಕಾರ ಹೇಗೆ ಇನ್ನಷ್ಟು ಉತ್ತಮಗೊಳಿಸಬಹುದು? ಬಾಲ್ಕನಿಯಲ್ಲಿ ಯಾವ ಅಂಶಗಳತ್ತ ಗಮನ ಹರಿಸಬೇಕು? ಎನ್ನುವುದರ ವಿವರ ಇಂದಿನ ವಾಸ್ತುಟಿಪ್ಸ್‌ (Vastu Tips)ನಲ್ಲಿದೆ.

ದಿಕ್ಕು

ಮನೆಯಲ್ಲಿ ಬಾಲ್ಕನಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದು ಗರಿಷ್ಠ ಪ್ರಮಾಣದ ಸೂರ್ಯನ ಬೆಳಕನ್ನು ಪಡೆಯುವ ಪ್ರದೇಶವಾಗಿರುವುದರಿಂದ ಇದು ಆದರ್ಶ ದಿಕ್ಕು. ಬಾಲ್ಕನಿ ನಿರ್ಮಿಸಲು ದಕ್ಷಿಣ ಅಥವಾ ಪಶ್ಚಿಮವನ್ನು ನಕಾರಾತ್ಮಕ ದಿಕ್ಕುಗಳು ಎಂದು ಪರಿಗಣಿಸಲಾಗುತ್ತದೆ.

ಪೀಠೋಪಕರಣಗಳ ಸ್ಥಾನ

ಪೀಠೋಪಕರಣಗಳು ಬಾಲ್ಕನಿಯ ಪ್ರಮುಖ ಭಾಗ. ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ವಿವಿಧ ರೀತಿಯ ಪೀಠೋಪಕರಣಗಳನ್ನು ಇಲ್ಲಿ ಜೋಡಿಸಿಡುತ್ತೇವೆ. ಹೀಗಾಗಿ ನಿಮ್ಮ ಬಾಲ್ಕನಿಗೆ ಸೂಕ್ತವಾದ ಪೀಠೋಪಕರಣಗಳು ಯಾವುವು ಎನ್ನುವುದರತ್ತ ಗಮನ ಹರಿಸಬೇಕು. ಕುರ್ಚಿಗಳು, ಸ್ಟೂಲ್‌ಗಳು ಮತ್ತು ಟೇಬಲ್‌ಗಳಂತಹ ಭಾರವಾದ ಪೀಠೋಪಕರಣಗಳನ್ನು ಬಾಲ್ಕನಿಯ ನೈಋತ್ಯ ಮೂಲೆಯಲ್ಲಿ ಇಡಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಚಾವಣಿ ಹೀಗಿರಲಿ

ನಿಮ್ಮ ಬಾಲ್ಕನಿಯ ಚಾವಣಿ ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಜಾರಾಗಿರಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ಅಥವಾ ಪಶ್ಚಿಮದ ಕಡೆಗೆ ಅಲ್ಲ. ಚಾವಣಿಯ ಎತ್ತರವು ಮುಖ್ಯ ಕಟ್ಟಡದ ಛಾವಣಿಗಿಂತ ಕಡಿಮೆ ಇರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಲ್ಲದೆ ನಿಮ್ಮ ಬಾಲ್ಕನಿಯ ಚಾವಣಿಗೆ ಟಿನ್ ಬಳಕೆ ಬೇಡ.

ಅಲಂಕಾರ

ಬಾಲ್ಕನಿಯಲ್ಲಿ ಸಣ್ಣ ಹೂವಿನ ಕುಂಡಗಳನ್ನು ಇರಿಸಲು ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಯಾಕೆಂದರೆ ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ತುಂಬಾ ದೊಡ್ಡ ಸಸ್ಯಗಳನ್ನು ಇಡುವುದನ್ನು ತಪ್ಪಿಸಿ. ಅಲ್ಲದೆ ನಿಮ್ಮ ಬಾಲ್ಕನಿಗೆ ವರ್ಣರಂಜಿತ ಹೂವಿನ ಗಿಡಗಳನ್ನು ಆರಿಸಿ ಮತ್ತು ಬಳ್ಳಿಗಳನ್ನು ಎಂದಿಗೂ ಇಡಬೇಡಿ. ಇವು ಸೂರ್ಯನ ಬೆಳಕನ್ನು ತಡೆಯುತ್ತವೆ. ನಿಮ್ಮ ಬಾಲ್ಕನಿಯ ಪಶ್ಚಿಮ, ದಕ್ಷಿಣ ಅಥವಾ ನೈಋತ್ಯ ಭಾಗದಲ್ಲಿ ಯಾವಾಗಲೂ ಹೂವಿನ ಕುಂಡಗಳನ್ನು ಇರಿಸಿ. ಮಧ್ಯ ಭಾಗ ಖಾಲಿಯಾಗಿರಲಿ.

ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ

ಸೂಕ್ತ ಲೈಟ್‌ಗಳು

ಕತ್ತಲೆ ಅಥವಾ ತುಂಬಾ ಮಂದ ಬೆಳಕಿನ ಬಾಲ್ಕನಿಯಲ್ಲಿ ಕುಳಿತುಕೊಳ್ಳುವುದು ನಕಾರಾತ್ಮಕತೆಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ನಿಮ್ಮ ಬಾಲ್ಕನಿಗೆ ತುಂಬಾ ತೀಕ್ಷ್ಣ ಬೆಳಕನ್ನು ನೀಡದ ಲೈಟ್‌ಗಳನ್ನು ಆರಿಸಿ.

ಯಾವ ಬಣ್ಣ ಸೂಕ್ತ?

ಬಾಲ್ಕನಿ ಮನೆಯ ಒಂದು ಪ್ರಮುಖ ಸ್ಥಳವಾಗಿ ಪರಿಗಣಿಸಲ್ಪಡುತ್ತದೆ. ಅಲ್ಲಿ ನಿಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಬಯಸುತ್ತದೆ. ಬಾಲ್ಕನಿ ದಣಿದ ದೇಹಕ್ಕೆ ನೆಮ್ಮದಿ ಒದಗಿಸುತ್ತದೆ. ಹೀಗಾಗಿ ಗೋಡೆಗಳಿಗೆ ಮೇಲೆ ಗಾಢ ಬಣ್ಣವನ್ನು ಬಳಿಯಬೇಡಿ. ವಾಸ್ತು ಪ್ರಕಾರ, ಬಿಳಿ, ನೀಲಿ ಮತ್ತು ತಿಳಿ ಗುಲಾಬಿಯಂತಹ ಶಾಂತ ಬಣ್ಣಗಳು ನಿಮ್ಮ ಬಾಲ್ಕನಿಗೆ ಸೂಕ್ತ.

Continue Reading

ಕರ್ನಾಟಕ

Shabarimale Bus : ಶಬರಿಮಲೆ ಯಾತ್ರಿಕರಿಗೆ KSRTC ವಿಶೇಷ ಬಸ್‌ ಸೇವೆ, ಬುಕಿಂಗ್‌ ಹೇಗೆ?

Shabarimale Bus: ಬೆಂಗಳೂರಿನಿಂದ ಶಬರಿಮಲೆಗೆ ಡಿಸೆಂಬರ್‌ 11ರಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರ ಟೈಮಿಂಗ್ಸ್‌ ಮತ್ತು ಬುಕಿಂಗ್‌ ವಿವರ ಇಲ್ಲಿದೆ.

VISTARANEWS.COM


on

Shabarimale yatre KSRTC BUS
Koo

ಬೆಂಗಳೂರು: ಡಿಸೆಂಬರ್‌ ಆರಂಭವಾಗುತ್ತಿದ್ದಂತೆಯೇ ಕೇರಳದ ಪುಣ್ಯ ಕ್ಷೇತ್ರ ಶಬರಿಮಲೆಗೆ (Shabarimale yatre) ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಡಿಸೆಂಬರ್‌ 1ರಿಂದ ವಿಶೇಷ ಬಸ್‌ ಸೌಲಭ್ಯವನ್ನು (Special bus Service) ಒದಗಿಸಲಾಗುತ್ತಿದ್ದು, ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಿಕೊಳ್ಳಬಹುದು (Shabarimale Bus) ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಡಿಸೆಂಬರ್‌ 1ರಿಂದ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಮತ್ತು ರಾಜಹಂಸ ಬಸ್ ಸಂಚರಿಸಲಿದೆ ಎಂದು ತಿಳಿಸಿರುವ ಕೆ.ಎಸ್‌.ಆರ್‌.ಟಿ.ಸಿಯು ವೋಲ್ವೊ ಬಸ್​​ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ದರ ಎಷ್ಟು, ಯಾವ ಹೊತ್ತಿಗೆ ಹೊರಡುತ್ತದೆ?

ಕೆ.ಎಸ್‌.ಆರ್‌.ಟಿಸಿ ವೋಲ್ವೋ ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ವೋಲ್ವೋ ಬಸ್‌ನಲ್ಲಿ ಒಂದು ಟಿಕೆಟ್‌ನ ದರ 1600 ರೂ. ಆಗಿರುತ್ತದೆ.

ರಾಜಹಂಸ ಬಸ್ (ನಾನ್‌ಎಸಿ) ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.

ಡಿಸೆಂಬರ್‌ ತಿಂಗಳಲ್ಲಿ ಶಬರಿಮಲೆ ಸನ್ನಿಧಿಯಲ್ಲಿ ಮಂಡಲೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆ ಬಳಿಕ ಜನವರಿ 14ರಂದು ಮಕರ ವಿಳಕ್ಕು (ಮಕರ ಜ್ಯೋತಿ) ನಡೆಯುತ್ತದೆ. ಆ ಸಂದರ್ಭದಲ್ಲಿ 48 ದಿನಗಳ ಕಾಲ ಮಾಲಾ ಧಾರಣೆ ಮಾಡಿ ವ್ರತಧಾರಿಗಳಾದ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಹೊಸ ಬಸ್‌ ಸೇವೆ ಅನುಕೂಲಕರವಾಗಲಿದೆ.

ಇದನ್ನೂ ಓದಿ : Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಬಸ್​ ಟಿಕೆಟ್ ಬುಕಿಂಗ್ ಹೇಗೆ?

ಶಬರಿಮಲೆಗೆ ಹೋಗುವ ಬಸ್‌ಗಳ ಬುಕಿಂಗ್‌ನ್ನು ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ (www.ksrtc.in) ಮೂಲಕ ಮಾಡಬಹುದು. ಅದಲ್ಲದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಇವೆ.

Continue Reading
Advertisement
Assembly Election Results 2023
ದೇಶ15 mins ago

ಕಾಂಗ್ರೆಸ್‌ಗೆ ತೆಲಂಗಾಣ, 3 ರಾಜ್ಯಗಳಲ್ಲಿ ಬಿಜೆಪಿ ದಿಗ್ವಿಜಯ; ಫಲಿತಾಂಶದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Maratha Mahamela cannot be held Belagavi district administration denies permission for MES
ಕರ್ನಾಟಕ37 mins ago

Assembly Session: ಮರಾಠ ಮಹಾಮೇಳಾವ್‌ ನಡೆಸುವಂತಿಲ್ಲ; ಎಂಇಎಸ್‌ಗೆ ಟಕ್ಕರ್‌ ಕೊಟ್ಟ ಜಿಲ್ಲಾಡಳಿತ

Tulu Language
ಕರ್ನಾಟಕ39 mins ago

Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತಿನಿಧ್ಯ? ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

Rajastan Elections: 10 reasons for BJP Win
ದೇಶ54 mins ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ55 mins ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ1 hour ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್1 hour ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ2 hours ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ2 hours ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ9 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ21 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌