Navratri Special: ಸಂಪತ್ತು ನೆಮ್ಮದಿ ಪ್ರಾಪ್ತಿಗಾಗಿ ನವರಾತ್ರಿಯ ವಿಶೇಷ ಆಚರಣೆಗಳು - Vistara News

ಧಾರ್ಮಿಕ

Navratri Special: ಸಂಪತ್ತು ನೆಮ್ಮದಿ ಪ್ರಾಪ್ತಿಗಾಗಿ ನವರಾತ್ರಿಯ ವಿಶೇಷ ಆಚರಣೆಗಳು

ನವರಾತ್ರಿಯ ಒಂದೊಂದು ದಿನವೂ ಒಂದೊಂದು ವಿಶೇಷ (Navratri Special) ಆಚರಣೆಗಳಿಂದ ಕೂಡಿದೆ. ಭಕ್ತಿಯಿಂದ ಇವುಗಳನ್ನು ಆಚರಿಸುವ ಮೂಲಕ ಸಂಪತ್ತು ನೆಮ್ಮದಿ ಆನಂದಗಳನ್ನು ಹೊಂದಬಹುದಾಗಿದೆ.

VISTARANEWS.COM


on

durgadevi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Raghavendra Tirtha Sri Raghavendra Swami Vardhanti celebration

:: ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಆಶ್ವಯುಜ ಮಾಸದ ನಿಯಾಮಕನು ಯಜ್ಞಾ-ಪದ್ಮನಾಭ. ಆಶ್ವಯುಜ ಅಥವಾ ಆಶ್ವಿಜಮಾಸದ ಶುಕ್ಲಪ್ರತಿಪತ್ ನಿಂದ ನವಮೀಯ ವರೆಗೂ ನವರಾತ್ರಿ ಉತ್ಸವವಿರುತ್ತದೆ. ಈ ನವರಾತ್ರಿಯ ಒಂದೊಂದು ದಿನವೂ ಒಂದೊಂದು ವಿಶೇಷ ಆಚರಣೆಗಳಿಂದ ಕೂಡಿದೆ. ಈ ಒಂಬತ್ತು ದಿನಗಳಲ್ಲಿ ವಿಶೇಷ ದೀಪಾರಾಧನೆ, ಘಟ್ಟಸ್ಥಾಪನೆ, ಶ್ರೀಶ್ರೀನಿವಾಸನ ಪೂಜೆ, ಶ್ರೀವೇದವ್ಯಾಸ ಹಾಗು ಸರಸ್ವತಿಪೂಜೆ, ದುರ್ಗಾಪೂಜೆ, ವೆಂಕಟೇಶ ಮಾಹಾತ್ಮ್ಯೆ ಪಾರಾಯಣ ಹಾಗೂ ಶ್ರವಣ, ನಿತ್ಯದಲ್ಲಿಯೂ ಸಚ್ಛಾಸ್ತ್ರದ ಪಾರಾಯಣ, ಬ್ರಾಹ್ಮಣಸುವಾಸಿನಿಯರಿಗೆ ಭೋಜನಾದಿಗಳನ್ನು ಮಾಡಿಸುವುದು ಹೀಗೆ ನವರಾತ್ರೋತ್ಸವದಲ್ಲಿ ಅನೇಕ ಪೂಜೆ ಆಚರಣೆಗಳನ್ನು ವಿಧಿಸಿದ್ದಾರೆ.

ನವರಾತ್ರಿ

ನವದಿನಗಳು ಎಂದು ಕರೆಯುವ ಬದಲು “ನವರಾತ್ರಿ” ಎಂದೇ ಕರೆಯುವದಕ್ಕೆ ವಿಶೇಷಕಾರಣವಿದೆ. ಆಶ್ವಯುಜಮಾಸದ ಶರತ್ ಋತುವಿನ ಈ ವಿಶೇಷದಿನಗಳಲ್ಲಿ ರಾತ್ರಿಯ ಸ್ವಚ್ಛವಾತಾವರಣ ಹಾಗೂ ಚಂದ್ರಮನ ಚಂದ್ರಿಕೆಯು ವಿಶೇಷತೆಯನ್ನು ಪಡೆದಿದೆ. ಈ ದಿನಗಳಲ್ಲಿ ದುಷ್ಟರ ನಾಶವನ್ನು ಮಾಡುವ ದುರ್ಗೆಯಪೂಜೆ ಇರುತ್ತದೆ. ಹಗಲಿಗಿಂತಲೂ ರಾತ್ರಿಯಲ್ಲಿ ದುಷ್ಟರಬಾಧೆ ಬಹಳ. ಅನ್ಯಾಯ ಅನಾಚಾರಗಳು ರಾತ್ರಿಯಲ್ಲಿಯೇ ಅಧಿಕವಾಗಿರುತ್ತವೆ. ಆದ್ದರಿಂದ ಇಂತಹ ಅನಾಚಾರಿಗಳಾದ ರಾಕ್ಷಸರಿಗೆ ನಕ್ತಂಚರರೆಂದೇ ಹೆಸರು. ರಾಕ್ಷಸರಿಗೆ ಬಲವು ರಾತ್ರಿಯಲ್ಲಿಯೇ ಅಧಿಕವಾಗುತ್ತದೆ. ಆದ್ದರಿಂದಲೇ ಇಂತಹ ನಕ್ತಂಚರರಾದ ರಾಕ್ಷಸರ ಸಂಹರಿಸುವ ದುರ್ಗೆಯ ಆರಾಧನೆ. ಆದ್ದರಿಂದ ಇದು ನವರಾತ್ರಿ.

ಶ್ರೀನಿವಾಸದೇವರ ನವರಾತ್ರಿ

ಯಾವ ಸಂಪ್ರದಾಯಗಳಲ್ಲಿ ಶ್ರೀನಿವಾಸದೇವರು ಕುಲದೈವರಾಗಿರುವರೋ ಅವರ ಮನೆಗಳಲ್ಲಿ ವೇಂಕಟೇಶದೇವರ ನವರಾತ್ರಿ ಇರುತ್ತದೆ. ನಿತ್ಯದಲ್ಲಿಯೂ ಶ್ರೀದೇವಿ ಭೂದೇವಿಸಹಿತ ಶ್ರೀವೇಂಕಟೇಶದೇವರ ಪೂಜೆ ನಡೆಯುತ್ತದೆ. ನಿತ್ಯದಲ್ಲಿಯೂ ಬೇಳೆ ಹೂರಣದಿಂದ ವೇಂಕಟೇಶದೇವರಿಗೆ ಆರತಿ ನೈವೇದ್ಯಗಳು ನಿರಂತರ ಒಂಬತ್ತು ದಿನಗಳ ವರೆಗೂ ನಡೆಯುತ್ತದೆ. ಸಾಯಂಕಾಲದಲ್ಲಿಯೂ ಸಹ ಹಣ್ಣು ತೆಂಗಿನಕಾಯಿ ಇತ್ಯಾದಿಗಳನ್ನು ನಿವೇದಿಸಿ ಮಂಗಳಾರತಿ ನೀರಾಜನಾದಿಗಳನ್ನು ಮಾಡಬೇಕು. ಶ್ರೀನಿವಾಸನ ನವರಾತ್ರಿ ಇದ್ದವರ ಸಂಪ್ರದಾಯಗಳಲ್ಲಿ ಮನೆಯ ಹಿರಿಯ ಪುರುಷರು ಅಥವಾ ಉಪನೀತ ಬಾಲಕರು ಒಂಬತ್ತುದಿನವೂ ಬಿಡದೇ ಬ್ರಾಹ್ಮಣರ ಮನೆಗಳಿಗೆ ಗೋಪಾಳಕ್ಕೆ ಹೋಗುತ್ತಾರೆ. ಹೀಗೆ ಗೋಪಾಳದಿಂದ ಬಂದ ಅಕ್ಕಿ ಬೇಳೆ ಬೆಲ್ಲ ಮುಂತಾದವುಗಳನ್ನು ಬಳಸಿ ದೇವರಿಗೆ ನಿವೇದಿಸುವುದು ವಿಶೇಷ ಪದ್ಧತಿ. ಪ್ರತಿಪತ್ ತಿಥಿಯಿಂದ ದಶಮೀವರೆಗೂ ಪ್ರತಿನಿತ್ಯ ಸಾಯಂಕಾಲ ಶ್ರೀವೆಂಕಟೇಶಕಲ್ಯಾಣ ಶ್ರವಣ ಹಾಗೂ ಪಾರಾಯಣವನ್ನು ಮಾಡಬೇಕು. ಈ ಸಮಯದಲ್ಲಿ ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣಹೃದಯದ ಸಂಪುಟೀಕರಣವಾಗಿ ಪಾರಾಯಣ ಮಾಡುವುದು ಬಹಳ ವಿಶೇಷ.

ಶ್ರೀ ವೆಂಕಟೇಶ ಕಲ್ಯಾಣ ಶ್ರವಣ

ಆಶ್ವಯುಜ ಮಾಸದ ಪಾಡ್ಯದಿಂದ ಆರಂಭಿಸಿ ದಶಮಿತಿಥಿಯ ವರೆಗೂ ಶ್ರೀವೆಂಕಟೇಶಕಲ್ಯಾಣದ ವಿಶೇಷ ಶ್ರವಣವನ್ನು ಮಾಡಬೇಕು. ವೈಶಾಖಶುದ್ಧ ಪ್ರತಿಪತ್ ನಿಂದ ದಶಮೀವರೆಗೂ ಸಹ ವೆಂಕಟೇಶಕಲ್ಯಾಣ ಪಾರಾಯಣ ಹಾಗೂ ಪ್ರವಚನಗಳು ನಡೆಯುತ್ತವೆ. ಏಕೆಂದರೆ, ವೈಶಾಖಶುದ್ಧ ದಶಮೀದಿನದಂದೇ ಶ್ರೀನಿವಾಸನು ಶ್ರೀಪದ್ಮಾವತಿಯನ್ನು ವಿವಾಹವಾದನು. ವಿವಾಹದ ನಂತರದಲ್ಲಿ ನೂತನ ದಂಪತಿಗಳು ಆರು ತಿಂಗಳ ವರೆಗೂ ಬೆಟ್ಟವನ್ನು ಹತ್ತಲಿಲ್ಲ. ವೈಶಾಖದಿಂದ ಆಶ್ವಯುಜ ಮಾಸದ ವರೆಗೂ ಅಲ್ಲಲ್ಲಿ ವಿಹರಿಸಿ ನಂತರ ಆಶ್ವಯುಜದಲ್ಲಿ ಬೆಟ್ಟವನ್ನು ಹತ್ತುತ್ತಾರೆ. ಹೀಗೆ ವಿವಾಹದ ಆರುತಿಂಗಳ ನಂತರ ಬೆಟ್ಟಕ್ಕೆ ಆಗಮಿಸಿದ ಶ್ರೀನಿವಾಸ ಪದ್ಮಾವತಿಯರನ್ನು ಬ್ರಹ್ಮದೇವರು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಿಂದ ಸ್ವಾಗತಿಸಿದರು. ಇದೇ ”ಬ್ರಹ್ಮೋತ್ಸವ” ಅಥವಾ ”ಬ್ರಹ್ಮರಥೋತ್ಸವ” ಎಂದು ಪ್ರಸಿದ್ಧವಾಗಿದೆ. ಆದ್ದರಿಂದ ಈ ಆಶ್ವಿಜ ಶುದ್ಧ ಪ್ರತಿಪತ್ ತಿಥಿಯಿಂದ ದಶಮೀತಿಥಿಯವರೆಗೆ ಶ್ರೀನಿವಾಸ ಕಲ್ಯಾಣ ಪಾರಾಯಣ ಹಾಗು ಪ್ರವಚನಗಳನ್ನು ಮಾಡುವುದು ವಿಶೇಷವಾಗಿ ಕಲ್ಯಾಣಪ್ರದವಾಗಿದೆ. ಹೀಗೆ ವೈಶಾಖಮಾಸ ಹಾಗೂ ಆಶ್ವಿಜಮಾಸಗಳಲ್ಲಿ ಪ್ರತಿವರುಷವು ಎರಡು ಬಾರಿ ಶ್ರೀವೇಂಕಟೇಶಕಲ್ಯಾಣದ ಶ್ರವಣ ಮಾಡಬೇಕು.

ಶರನ್ನವರಾತ್ರಿ

ಆಶ್ವಿಜಮಾಸದ ಈ ನವರಾತ್ರೋತ್ಸವ ಶರದ್ ಋತುವಿನಲ್ಲಿಯೇ ಆಚರಿಸುವದರಿಂದ ಶರನ್ನವರಾತ್ರಿ ಎಂದು ಕರೆಯುತ್ತಾರೆ. ಈ ಒಂಬತ್ತು ದಿನಗಳಲ್ಲಿ ದೇವಿಯ ಪೂಜೆ ಬಹಳ ಮಹತ್ತ್ವವನ್ನು ಪಡೆದಿದೆ. ಶರತ್ ಋತುವು ಸ್ವಚ್ಛವಾದ ಆಕಾಶದಲ್ಲಿ ಬೆಳಗುವ ಚಂದ್ರ-ನಕ್ಷತ್ರಗಳಿಂದ ಕೂಡಿರುತ್ತದೆ. ಆಹ್ಲಾದಕರವಾದ ಆಕಾಶವು ಹೇಗೆ ಪ್ರಸನ್ನತೆಯಿಂದ ಕೂಡಿರುತ್ತದೆಯೋ, ಮನಸ್ಸೂ ಸಹ ಪ್ರಸನ್ನತೆಯಿಂದ ಕೂಡಿರುತ್ತದೆ. ಆದ್ದರಿಂದ ಪೂಜೆ ಉಪಾಸನೆ ಪಾರಾಯಣಾದಿಗಳಿಗೆ ಈ ಕಾಲವು ಅತ್ಯಂತ ಪ್ರಶಸ್ತವಾಗಿದೆ. ಕೆಲವು ಬಾರಿ ತಿಥಿಯು ವೃದ್ಧಿಯಾದಾಗ ಅಥವಾ ಹ್ರಾಸವಾದಾಗ ಒಂಬತ್ತುರಾತ್ರಿಗಳು ಲಭಿಸುವುದಿಲ್ಲ. ಆದರೂ ಸಹ ಅದು ”ನವರಾತ್ರಿ” ಎಂದೇ ಪರಿಗಣಿತವಾಗಿದೆ. ಹೀಗೆ ಈ ಶರದೃತುವಿನಲ್ಲಿ ದೇವಿಯ ಪೂಜೆಯನ್ನು ಮಾಡಿದವನಿಗೆ ಎಲ್ಲ ಶೋಕಗಳು ಕಷ್ಟಗಳು ಪರಿಹಾರವಾಗುತ್ತವೆ. ದೇವಿಯು ಶತೃವಿನ ಬಾಧೆಯನ್ನು ನಿವಾರಿಸಿ ಅಭಯವನ್ನು ನೀಡುತ್ತಾಳೆ.

ನವರಾತ್ರಿಯ ನವದುರ್ಗಾ ಪೂಜೆ

ನವರಾತ್ರಿಯಲ್ಲಿ ಭಗವಂತನ ವಿಶೇಷಸನ್ನಿಧಾನವನ್ನು ಹೊಂದಿದ ದುರ್ಗಾದೇವಿಯ ಪೂಜೆಯನ್ನು ಮಾಡಲಾಗುತ್ತದೆ. ದುರ್ಗಾದೇವಿಯನ್ನು ಮೊದಲ ಮೂರು ದಿನಗಳಲ್ಲಿ ”ಮಹಾಕಾಳಿ” ಎಂದು ದೇವಿಯನ್ನು ಪೂಜಿಸುವುದು. ಮಧ್ಯದ ಮೂರುದಿನಗಳಲ್ಲಿ ಮಹಿಷಾಸುರನನ್ನು ಸಂಹರಿಸಿದ ದುರ್ಗೆಯನ್ನು ”ಮಹಾಲಕ್ಷ್ಮೀ” ಎಂಬ ಅನುಸಂಧಾನದಿಂದ ಪೂಜಿಸಬೇಕು. ಕೊನೆಯ ಮೂರುದಿನಗಳಲ್ಲಿ ಬ್ರಹ್ಮಜ್ಞಾನಪ್ರಚೋದಕಳಾದ, ಜ್ಞಾನಪ್ರಚಾರದ ಕಾರ್ಯವನ್ನು ಮಾಡುವ ಮತ್ತು ಮಾಡಿಸುವ ”ಸರಸ್ವತೀದೇವಿ”ಯನ್ನು ಪೂಜಿಸುವುದು.

durga
durga

ದುರ್ಗಾದೇವಿಯು ಮಧು-ಕೈಟಭರನ್ನು, ಮಹಿಷಾಸುರ, ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ ಇವರನ್ನೆಲ್ಲ ಅನೇಕ ರೂಪಗಳಿಂದ ಸಂಹರಿಸಿದ್ದಾಳೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಧು-ಕೈಟಭರು ಭಗವಂತನ ಕಿವಿಯ ಕಿಟ್ಟದಿಂದ ಜನಿಸಿದರೆಂದು ಪುರಾಣಗಳು ತಿಳಿಸಿವೆ. ಭಗವಂತನ ಸಚ್ಚಿದಾನಂದಾತ್ಮಕ ದೇಹದಲ್ಲಿ ಬೇಡದ ಪದಾರ್ಥ ಅಥವಾ ಅಶುದ್ಧವಸ್ತುವಿಗೆ ಸ್ಥಾನವೇ ಇಲ್ಲ. ಆದರೂ ಇದೆಲ್ಲ ಭಗವಂತನ ಲೀಲೆಯ ಭಾಗವಷ್ಟೇ. ಭಗವಂತನ ಸಂಕಲ್ಪದಂತೆ ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಳು. ಅಜ್ಞಾನವೆಂಬ ಕಲ್ಮಷದಿಂದ ಸಂಶಯ ಮತ್ತು ವಿಪರೀತಜ್ಞಾನವು ಹುಟ್ಟಿದಂತೆ ಈ ಮಧು-ಕೈಟಭರ ಜನನದ ಸಂಕೇತ. ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಂತೆ ಎಲ್ಲರ ಅಜ್ಞಾನಗಳ ನಾಶವನ್ನು ಮಾಡಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ರೂಪದ ಪೂಜೆ.

ಶುಂಭ-ನಿಶುಂಭರು ಕಾಮ-ಕ್ರೋಧಗಳ ಸಂಕೇತರು. ದುರ್ಗಾದೇವಿಯು ಶುಂಭ-ನಿಶುಂಭರನ್ನು ಸಂಹರಿಸಿದಂತೆ ನಮ್ಮ ದೇಹದಲ್ಲಿರುವ ಕಾಮ-ಕ್ರೋಧಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ಪೂಜೆಯನ್ನು ಮಾಡಬೇಕು.

ಈ ಶುಂಭ-ನಿಶುಂಭರ ಶಿಷ್ಯರೇ ಚಂಡ-ಮುಂಡರು. ಕಾಮ-ಕ್ರೋಧಗಳನ್ನು ಅನುಸರಿಸಿ ಮದ-ಮಾತ್ಸ್ಯರ್ಯಗಳಿದ್ದಂತೆ ಈ ಚಂಡ-ಮುಂಡರು. ಇಂತಹ ಅಸುರರನ್ನು ಸಂಹರಿಸಿದ ದೇವಿಯು ನಮ್ಮಲ್ಲಿರುವ ಮದ-ಮಾತ್ಸರ್ಯಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಶುಂಭ-ನಿಶುಂಭರ ಮತ್ತೊಬ್ಬ ಅಸುರ ಶಿಷ್ಯ ರಕ್ತಬೀಜಾಸುರ. ಅವನಿಗೆ ಬ್ರಹ್ಮದೇವರು ಕೊಟ್ಟ ಒಂದು ವರವಿತ್ತು. ಒಂದು ಹನಿ ರಕ್ತವೂ ಅವನ ದೇಹದಿಂದ ಭೂಮಿಯ ಮೇಲೆ ಬಿದ್ದರೆ ಮತ್ತೊಬ್ಬ ರಕ್ತಬೀಜಾಸುರನ ಜನ್ಮವಾಗುತ್ತದೆ ಎಂದು. ಆದ್ದರಿಂದಲೇ ಅವನು ರಕ್ತಬೀಜಾಸುರ. ಕಾಮ-ಕ್ರೋಧಗಳು ಹೇಗೆ ಲೋಭಕ್ಕೆ ಜನ್ಮನೀಡುತ್ತವೋ, ಅಂತಹ ಲೋಭವು ಮತ್ತೆ ಮತ್ತೆ ಹುಟ್ಟತ್ತಲೇ ಹೋಗುತ್ತದೆಯೇ ಹೊರತು ಕೊನೆಕೊಳ್ಳುವುದೇ ಇಲ್ಲ. ಇಂತಹ ಲೋಭಸ್ವರೂಪಿಯಾದ ರಕ್ತಬೀಜಾಸುರನನ್ನು ದುರ್ಗಾದೇವಿಯು ಕಾಳಿಯ ರೂಪದಿಂದ ಸಂಹರಿಸಿದಳು. ಮನುಷ್ಯನ ಸಾಂಸಾರಿಕಲೋಭವನ್ನು ದೇವಿಯು ನಿತ್ಯದಲ್ಲಿ ಸಂಹರಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಮಹಿಷಾಸುರನೆಂಬ ಒಬ್ಬ ಅಸುರ. ಮಹಿಷಾಸುರ ಎಂದರೆ ಎಮ್ಮೆಯ ರೂಪದಲ್ಲಿರುವ ರಾಕ್ಷಸ. ಮಹಿಷಾಸುರನು ಇಂದ್ರಾದಿಗಳಿಗೆ ಅತಿಯಾದ ತೊಂದರೆ ಕೋಟ್ಟಾಗ ಭಗವಂತನ ಆಜ್ಞೆಯಂತೆ ದುರ್ಗಾದೇವಿಯು ಸಿಂಹವಾಹಿನಿಯಾಗಿ ತ್ರಿಶೂಲದಿಂದ ಮಹಿಷಾಸುರನ ವಧೆಯನ್ನು ಮಾಡುತ್ತಾಳೆ. ಆಗ ದುರ್ಗಾದೇವಿಯು ”ಮಹಿಷಾಸುರಮರ್ದಿನಿ” ”ಸಿಂಹವಾಹಿನೀ” ಎಂದು ಪ್ರಸಿದ್ಧಳಾದಳು. ಎಮ್ಮೆ ಎಂಬುದು ಅಹಂಕಾರದ ಪ್ರತೀಕ. ಎಲ್ಲಿಯ ವರೆಗೂ ಅಹಂಕಾರವಿರುವುದೋ ಅಲ್ಲಿಯ ವರೆಗೂ ಬುದ್ಧಿ-ಮನಸ್ಸುಗಳು ದೇವರೆಡೆಗೆ ಸಾಗುವದೇ ಇಲ್ಲ. ನಮ್ಮಲ್ಲಿರುವ ಅಂತಹ ಮಹಿಷರೂಪದ ಅಹಂಕಾರವನ್ನು ಈ ಸಿಂಹವಾಹಿನಿ ದುರ್ಗೆಯು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ಈ ಪೂಜೆಯನ್ನು ಮಾಡಬೇಕು.

ಹೀಗೆ ಭಗವಂತನ ವಿಶೇಷ ಸನ್ನಿಧಾನವನ್ನು ಹೊಂದಿ ದುರ್ಗಾದೇವಿಯು ಅನೇಕ ರೂಪಗಳನ್ನು ಧರಿಸಿ ಎಲ್ಲ ದುಷ್ಟ ಅಸುರರ ಸಂಹಾರವನ್ನು ಮಾಡುತ್ತಾಳೆ. ಚಕ್ರವನ್ನು ಕೈಯಲ್ಲಿ ಹಿಡಿದಿರುವ ದುರ್ಗಾದೇವಿಯು ಸಂಸಾರವನ್ನು ಭೇದಿಸಿ ಮೋಕ್ಷಪ್ರದವಾದ ಜ್ಞಾನವನ್ನು ಕೊಡುವುದರ ಸಂಕೇತ. ದುರ್ಗೆಯು ಶಂಖವನ್ನು ಧರಿಸಿರುವುದು ವಿಜಯದ ಸಂಕೇತ. ಶಂಖನಾದ ವಿಜಯದ ಪ್ರತೀಕ. ಸತ್ಕಾರ್ಯಗಳಲ್ಲಿ ಸಜ್ಜನರಿಗೆ ಸದಾ ವಿಜಯವನ್ನು ದಯಪಾಲಿಸುವುಳು. ಅಜ್ಞಾನ ಮತ್ತು ಅಧರ್ಮಗಳನ್ನು ಕತ್ತರಿಸಿ ಸುಜ್ಞಾನವನ್ನು ನೀಡುವದರ ಮೂಲಕ ಧರ್ಮವನ್ನು ಸ್ಥಾಪಿಸುವಳು ಎಂಬುದು ಪರಶುಧಾರಿಯಾದ ದುರ್ಗೆಯ ಸಂಕೇತ. ವಿಪರೀತ ಜ್ಞಾನ ಮತ್ತು ಸಂಶಯಗಳನ್ನು ಹೋಗಲಾಡಿಸುವುದೇ ದುರ್ಗೆ ಧರಿಸಿರುವ ಬಿಲ್ಲು ಬಾಣಗಳ ಸಂಕೇತ. ದುರ್ಗಾದೇವಿಯು ಅಷ್ಟಭುಜಗಳನ್ನು ಹೊಂದಿರುವಳು. ಎಂಟು ಭುಜಗಳೆಂದೆರೆ ಪಂಚಭೂತಗಳು, ಮನಸ್ಸು, ಅಹಂಕಾರ, ಮಹತ್ತತ್ವ ಇವುಗಳ ಸಂಕೇತ. ಭಗವಂತನ ವಿಶೇಷ ಅನುಗ್ರಹದಿಂದ ದುರ್ಗಾದೇವಿಯು ಈ ಎಂಟೂ ತತ್ವಗಳಿಗೆ ನಿಯಾಮಕಳಾಗಿರುವಳು.

ಸ್ತ್ರೀದೇವತೆಗಳಾದ ದುರ್ಗಾ, ಅಂಬಾಭವಾನಿಯ ನವರಾತ್ರಿಯನ್ನು ಆಚರಿಸುವವರು ನವರಾತ್ರಿಯಲ್ಲಿ ದೇವಿಯ ಅನುಗ್ರಹಕ್ಕಾಗಿ ಉಪವಾಸವನ್ನು ಮಾಡುತ್ತಾರೆ. ಪ್ರತಿಪತ್ ತಿಥಿಯಿಂದ ಅಷ್ಟಮೀ ವರೆಗು ಉಪವಾಸವನ್ನು ಮಾಡಿ ಮಹಾನವಮಿಯದಿನ ಪಾರಣೆಯನ್ನು ಮಾಡುವ ಸಂಪ್ರದಾಯವೂ ಕೆಲವರಲ್ಲಿ ಇದೆ. ಇಲ್ಲಿ ಉಪವಾಸವೆಂದರೆ ಏಕಾದಶಿಯಂತೆ ನಿರ್ಜಲ ಉಪವಾಸವಲ್ಲ. ಕಿಂತು ಫಲಾಹಾರವನ್ನು ಸ್ವೀಕರಿಸಿ ಮಾಡುವುದು.

ಕುಮಾರಿಕಾ ಪೂಜೆ

ನವರಾತ್ರಿಯಲ್ಲಿ ಪ್ರತಿನಿತ್ಯವೂ ಕುಮಾರಿಯರ ಪೂಜೆಯನ್ನು ಮಾಡಬೇಕು. ಕುಮಾರಿಯರು ಎಂದರೆ ಎರಡು ವರ್ಷದಿಂದ ಹತ್ತು ವರುಷದ ವರೆಗಿನ ಬಾಲಕಿಯರು. ಕನ್ಯೆ ಎಂದರೆ ರಜಸ್ವಲೆಯರಾಗದಿರುವ ಬಾಲಕಿಯರು. ”ದ್ವಿವರ್ಷಕನ್ಯಾಮಾರಭ್ಯ ದಶವರ್ಷಾವಧಿ ಕ್ರಮಾತ್ ಪೂಜಯೇತ್” ಎಂದು. ಕುಮಾರಿ, ತ್ರಿಮೂರ್ತಿನೀ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂದು ಒಂಬತ್ತು ದುರ್ಗೆಯ ರೂಪಗಳನ್ನು ಕುಮಾರಿಯರಲ್ಲಿ ಆವಾಹಿಸಿ ಪೂಜಿಸಬೇಕು. ಕುಮಾರಿಯರಿಗೆ ನೂತನವಸ್ತ್ರ, ಅಲಂಕಾರವಸ್ತುಗಳು, ಮತ್ತು ಅನೇಕ ಸಿಹಿ ತಿನಿಸುಗಳನ್ನು ದಾನವಾಗಿ ಕೊಡಬೇಕು. ಇದರಿಂದ ಆಯುಷ್ಯಾಭಿವೃದ್ಧಿಯಾಗುತ್ತದೆ. ಈ ಪೂಜೆದಾನಾದಿಗಳಿಂದ ಅಷ್ಟ ವಸುಗಳು ಮತ್ತು ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಒಂಬತ್ತುದಿನಗಳು ಕುಮಾರಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ, ನವರಾತ್ರಿಯಲ್ಲಿ ಒಂದು ದಿನವಾದರೂ ಒಬ್ಬ ಕನ್ಯೆಯನ್ನು ಪೂಜಿಸಿ ದಾನವನ್ನು ಮಾಡಿ ಭೋಜನವನ್ನು ಮಾಡಿಸಬೇಕು.

ದುಃಖದಾರಿದ್ರ್ಯನಾಶಾಯ ಶತ್ರೂಣಾಂ ನಾಶಹೇತವೇ |
ಆಯುಷ್ಯಬಲವೃದ್ಧ್ಯರ್ಥಂ ಕುಮಾರೀಂ ಪೂಜಯೇನ್ನರಃ||

ಎರಡು ವರ್ಷದ ಕುಮಾರಿಪೂಜೆಯಿಂದ ಆಯುಷ್ಯಾಭಿವೃದ್ಧಿ.
ಮೂರು ವರ್ಷದ ಕುಮಾರಿಪೂಜೆಯಿಂದ ಅಪಮೃತ್ಯುಪರಿಹಾರ.
ನಾಲ್ಕು ವರುಷದ ಕುಮಾರಿಪೂಜೆಯಿಂದ ಆರೋಗ್ಯ, ಪುತ್ರಪ್ರಾಪ್ತಿ, ಧನ-ಧಾನ್ಯಾಭಿವೃದ್ಧಿ.
ಐದು ವರುಷದ ಕುಮಾರಿಪೂಜೆಯಿಂದ ಧನ ಮತ್ತು ಕೀರ್ತಿಯ ಪ್ರಾಪ್ತಿ.
ಆರು ವರ್ಷದ ಕುಮಾರಿಪೂಜೆಯಿಂದ ವಿದ್ಯಾಪ್ರಾಪ್ತಿ ಮತ್ತು ಜಯಲಾಭ.
ಏಳು ವರುಷದ ಕುಮಾರಿಪೂಜೆಯಿಂದ ಯುದ್ಧದಲ್ಲಿ ಜಯಪ್ರಾಪ್ತಿ.
ಎಂಟು ವರುಷದ ಕುಮಾರಿಪೂಜೆಯಿಂದ ಎಲ್ಲ ಮಹಾಪಾಪಗಳ ನಾಶ ಮತ್ತು ಶತೃಭಯನಾಶ.
ಒಂಬತ್ತು ವರುಷದ ಕುಮಾರಿಪೂಜೆಯಿಂದ ಸರ್ವದುಃಖಗಳು ನಾಶವಾಗುತ್ತವೆ.
ಹತ್ತು ವರುಷದ ಕುಮಾರಿಪೂಜೆಯಿಂದ ಸರ್ವವಿಧ ಇಹ-ಪರ ಸೌಖ್ಯಪ್ರಾಪ್ತಿ.

SWR TO RUN SPECIAL TRAINS FOR Dasara FESTIVAL

ಹೀಗೆ ನವರಾತ್ರಿಯ ಒಂಬತ್ತು ದಿನಗಳು ಅನುಸಂಧಾನಪೂರ್ವಕವಾಗಿ ಕುಮಾರಿ ಪೂಜೆಯನ್ನು ಮಾಡಬೇಕು.

ದೀಪಾರಾಧನೆ ಹಾಗೂ ಘಟ್ಟಸ್ಥಾಪನೆ

ಶ್ರೀ-ಭೂ-ದುರ್ಗಾ ಹೀಗೆ ಮೂರು ರೂಪಗಳಿಂದ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವ ಸಂಪ್ರದಾಯವು ನವರಾತ್ರಿಯಲ್ಲುಂಟು. ದೀಪವು ಜ್ಞಾನದ ಪ್ರತೀಕ. ಶ್ರೀರೂಪದ ಲಕ್ಷ್ಮೀದೇವಿಯು ಜ್ಞಾನಕ್ಕೆ ಅಭಿಮಾನಿನೀ. ಆದ್ದರಿಂದ ಎರಡು ದೀಪಗಳನ್ನು ಪ್ರಜ್ವಲಿಸಬೇಕು. ಒಂದು ಘೃತದೀಪ. ಇನ್ನೊಂದು ತೈಲದೀಪ (ಎಳ್ಳೆಣ್ಣೆದೀಪ.). ಇವುಗಳನ್ನು ನಂದಾದೀಪ ಅಥವಾ ಅಖಂಡದೀಪ ಎಂದು ಕರೆಯುತ್ತಾರೆ. ದೀಪದ ಸ್ತಂಭಗಳಿಗೆ ಕೆಮ್ಮಣ್ಣು, ಸುಣ್ಣವನ್ನು ಲೇಪಿಸಬೇಕು. ದೇವರ ಬಲಭಾಗದಲ್ಲಿ ದೀಪಸ್ತಂಭಗಳನ್ನು ಸ್ಥಾಪಿಸಬೇಕು. ಮಂತ್ರಗಳಿಂದ ದೀಪಗಳಲ್ಲಿ ದೇವತೆಗಳನ್ನು ಆವಾಹಿಸಿ ಹೂವಿನಿಂದ ಅಲಂಕರಿಸಿ ಗೆಜ್ಜೆವಸ್ತ್ರ, ಅರಿಷಿನ ಕುಂಕುಮಗಳಿಂದ ಪೂಜಿಸಬೇಕು. ದೀಪಸ್ತಂಭದ ಅಗ್ರದಲ್ಲಿ ಸಪ್ತವಿಂಶತಿ (ಇಪ್ಪತ್ತೇಳು) ಕೃತ್ತಿಕಾದಿ ನಕ್ಷತ್ರದೇವತೆಗಳ, ದೀಪಪ್ರಜ್ವಲಿಸುವ ನಾಲೆಯಲ್ಲಿ ವಾಸುಕಿದೇವತೆ, ದೀಪಸ್ತಂಭ ಪಾದದಲ್ಲಿ ಚಂದ್ರಾರ್ಕಾದಿ ದೇವತೆಗಳ ಸನ್ನಿಧಾನವಿರುತ್ತದೆ ಎಂದು ಚಿಂತಿಸಿ ಪೂಜಿಸಬೇಕು. ನಂತರದಲ್ಲಿ ದೀಪಪ್ರಜ್ವಾಲನೆಯನ್ನು ಮಾಡಬೇಕು. ಪ್ರಾತಃ ಮಧ್ಯಾಹ್ನ ಸಾಯಂಕಾಲ ಹೀಗೆ ಮೂರು ಸಮಯದಲ್ಲಿಯೂ ದೀಪಗಳಿಗೆ ಎಣ್ಣೆ ತುಪ್ಪಗಳನ್ನು ಹಾಕುತ್ತಿರಬೇಕು. ದೀಪವನ್ನು ಮಡಿಯಿಂದಲೇ ಮುಟ್ಟಬೇಕು. ದೀಪಗಳನ್ನು ಮುಟ್ಟುವವರು ಬಹಳ ಅನುಷ್ಠಾನವನ್ನು, ನಿಯಮಗಳನ್ನು ಪಾಲಿಸಬೇಕು. ಒಂಬತ್ತು ದಿನಗಳು ಬ್ರಹ್ಮಚರ್ಯದಿಂದ ಇರಬೇಕು. ಹೊರಗಡೆಗೆ ಎಲ್ಲಿಯೂ ಯಾವುದೇ ಆಹಾರವನ್ನು ಸ್ವೀಕರಿಸಬಾರದು. ಹಾಸಿಗೆ ಅಥವಾ ಮಂಚವನ್ನು ತ್ಯಜಿಸಿ ಚಾಪೆಯ ಮೇಲೆ ಮಲಗಬೇಕು. ಈ ಒಂಬತ್ತು ದಿನಗಳಲ್ಲಿ ಪಾದರಕ್ಷೆಗಳನ್ನು ಧರಿಸಬಾರದು. ಶಕ್ತಿ ಇದ್ದವರು ಅವರ ಅನೂಲಕ್ಕೆ ತಕ್ಕಂತೆ ಮತ್ತು ಆರೋಗ್ಯಕ್ಕೆ ತಕ್ಕಂತೆ ನಿಯಮಗಳನ್ನು ಪಾಲಿಸಬೇಕು.

ಆಶ್ವಯುಜ ಮಾಸದ ಪ್ರತಿಪತ್ ತಿಥಿಯಿಂದ ನವಮೀವರೆಗು ಮಾಡುವ ಪೂಜೆಯನ್ನು ”ನವರಾತ್ರೋತ್ಸವ” ಎಂದು ಕರೆಯುತ್ತಾರೆ. ತೃತೀಯಾದಿಂದ ನವಮೀವರೆಗಿನ ಆಚರಣೆಗೆ ”ಸಪ್ತರಾತ್ರೋತ್ಸವ” ಎನ್ನುತ್ತಾರೆ. ಪಂಚಮೀಯಿಂದ ನವಮೀವರೆಗಿನ ಆಚರಿಸುವ ಉತ್ಸವವನ್ನು ”ಪಂಚರಾತ್ರೋತ್ಸವ”ವೆಂದು ಕರೆಯುತ್ತಾರೆ. ಹಾಗೆಯೇ ಸಪ್ತಮೀ ಅಷ್ಟಮೀ ನವಮೀ ಈ ಮೂರದಿನಗಳ ಕಾಲ ಮಾಡುವ ಉತ್ಸವವನ್ನು ”ತ್ರಿರಾತ್ರೋತ್ಸವ”ವೆಂದು ಕರೆಯುತ್ತಾರೆ.

ಶ್ರೀ ವೇದವ್ಯಾಸ ಹಾಗೂ ಸರಸ್ವತೀಪೂಜೆ

ನವರಾತ್ರಿಯ ಕಾಲದಲ್ಲಿ ಮೂಲಾನಕ್ಷತ್ರವಿರುವ ದಿನದಂದು ಶ್ರೀವೇದವ್ಯಾಸ ದೇವರ ಮತ್ತು ಸರಸ್ವತ್ಯಾದಿ ದೇವತೆಗಳನ್ನು ಪೂಜಿಸಬೇಕು. ಪೀಠದ ಮೇಲೆ ಸಚ್ಛಾಸ್ತ್ರಗ್ರಂಥಗಳನ್ನಿಟ್ಟು ಸಾಲಿಗ್ರಾಮ ಪ್ರತಿಮಾದಿಳನ್ನಿಟ್ಟು ಜ್ಞಾನಾಭಿಮಾನಿಯಾದ ಸರಸ್ವತಿಯನ್ನು ಪೂಜಿಸಬೇಕು. ಸ್ಥಾಪಿಸಿದ ಗ್ರಂಥಗಳಲ್ಲಿ ಶ್ರೀಕಪಿಲ, ದತ್ತಾತ್ರೇಯ, ಹಯಗ್ರೀವ, ರಾಮ, ಕೃಷ್ಣ, ಪರಶುರಾಮ, ನರಸಿಂಹ, ನಾರಾಯಣ, ಶ್ರೀವೇದವ್ಯಾಸ ಹೀಗೆ ಭಗದ್ರೂಪಗಳನ್ನು ಧ್ಯಾನಾವಾಹನಾದಿಗಳಿಂದ ಪೂಜಿಸಬೇಕು. ನಂತರ ಶ್ರೀ ಭೂ ದುರ್ಗೆಯ ರೂಪಗಳನ್ನು ಆವಾಹಿಸಬೇಕು. ನಂತರ ಮುಖ್ಯಪ್ರಾಣದೇವರನ್ನು, ನಂತರ ಸರಸ್ವತಿ ಭಾರತಿಯರನ್ನು, ಆವಾಹಿಸಬೇಕು. ತದನಂತರ ಶೇಷ, ರುದ್ರ, ಗೌರಿ, ವಿನಾಯಕ ಈ ದೇವತೆಗಳನ್ನು ಆವಾಹನೆ ಮಾಡಿ ಪೂಜಿಸಬೇಕು. ಶ್ರೀಮನ್ಮಧ್ವಾಚಾರ್ಯರು, ಪದ್ಮನಾಭತೀರ್ಥರು, ಶ್ರೀಮಜ್ಜಯತೀರ್ಥರು, ಶ್ರೀವ್ಯಾಸರಾಜರು, ಶ್ರೀರಾಘವೇಂದ್ರತೀರ್ಥರು ಇವರೇ ಮುಂತಾದ ಗುರುಗಳನ್ನು ಗ್ರಂಥಗಳಲ್ಲಿ ಆವಾಹಿಸಿ ಪೂಜಿಸಬೇಕು. ಸರಸ್ವತೀ ಆವಾಹನೆ ದಿನದಿಂದ ಪ್ರತಿನಿತ್ಯ ಸಾಯಂಕಾಲವೂ ಸಹ ಪಂಚೋಪಚಾರಪೂಜೆಯನ್ನು ಸಮರ್ಪಿಸಬೇಕು. ಈ ಸಂದರ್ಭದಲ್ಲಿ ಶಾಸ್ತ್ರಪಾಠ ವ್ಯಾಖ್ಯಾನಗಳನ್ನು ಮಾಡದೇ ಕೇವಲ ಜಪ ಹಾಗೂ ಪಾರಾಯಣವನ್ನು ಮಾತ್ರ ವಿಷೇವಾಗಿ ಮಾಡಬೇಕು.

ಈ ದಿನಗಳಲ್ಲಿ ಬ್ರಹ್ಮಾದಿಗಳೂ ಸಹ ಜ್ಞಾನಪ್ರದನಾದ, ಮುಖ್ಯಪ್ರಾಣನಿಗೂ ಈಶನಾದ, ಸತ್ಯಾ, ಈಶಾನ, ಅನುಗ್ರಹಾ ಎಂಬ ಭಗವಂತನ ಶಕ್ತಿಗಳೇ ”ಸರಸ್ವತೀ” ಎನಿಸಿವೆ. ಮಾನವರು ತಾವೇ ಸರ್ವೋತ್ತಮರೆಂಬ ಅಹಂಕಾರದಿಂದ ಅಜ್ಞಾನವನ್ನು ಹೊಂದಿ ಅಸತ್ಯಮಾರ್ಗವನ್ನು ಅವಲಂಬಿಸುತ್ತಿರುವರು. ”ಸರಸ್ವತೀ”ಶಬ್ದವಾಚ್ಯವಾದ ಭಗವಂತನ ಈ ಮೂರು ಶಕ್ತಿಗಳ ಪೂಜೆಯಿಂದ ಎಲ್ಲರ ಅಹಂಕಾರ ಅಜ್ಞಾನ ವಿಪರೀತಜ್ಞಾನಗಳು ನಷ್ಟವಾಗಿ ದೇವರ ಸರ್ವೋತ್ತಮತ್ವದ ಸುಜ್ಞಾನವು ಲಭಿಸುತ್ತದೆ. ರಾತ್ರೀದೇವತೆಯ ಜ್ಞಾನ ಕಿರಣಗಳಿಂದ ಅಜ್ಞಾನವು ನಾಶವಾಗುತ್ತದೆ ಎಂದು ರಾತ್ರಿಸೂಕ್ತವು ವರ್ಣಿಸುತ್ತದೆ. ”ಪಾವಕಾನಃ ಸರಸ್ವತೀ ಎಂದು ಸರಸ್ವತೀಸೂಕ್ತವು ವರ್ಣಿಸುತ್ತದೆ. ಸರಸ್ವತೀ ಎಂಬ ಶಕ್ತಿಯು ನಮ್ಮ ಅಜ್ಞಾವನ್ನು ಕಳೆದು ಪವಿತ್ರರನ್ನಾಗಿ ಮಾಡಿ ಸುಜ್ಞಾನದ ಪ್ರಚೋದನೆಯನ್ನು ಮಾಡುತ್ತಾ ಮತಿಪ್ರೇರಕಳಾಗಿರುವಳು. ”ಚೋದಯಿತ್ರೀ ಸೂನೃತಾನಾಂ ಚೇತಂತೀ ಸುಮತೀನಾಂ”.
ಶ್ರವಣಾ ನಕ್ಷತ್ರದಂದು ಸ್ಥಾಪಿತ ಶ್ರೀವೇದವ್ಯಾಸ ಹಾಗೂ ಸಕಲ ದೇವತೆಗಳನ್ನು ವಿಸರ್ಜಿಸಬೇಕು.

ನವರಾತ್ರಿಯ ವಿಶೇಷ ಪಾರಾಯಣಗಳು

ನವರಾತ್ರಿಯಲ್ಲಿ ಚತುರ್ವೇದ ಪಾರಾಯಣಕ್ಕೆ ವಿಶೇಷಫಲವಿದೆ. ಚತುರ್ವೇದ ಪಾರಾಯಣ ಅಶಕ್ಯವಾದಾಗ ವೇದಸಮಾನವಾದ ಭಾಗವತ ಪಾರಾಯಣವನ್ನಾದರೂ ಮಾಡಬೇಕು. ಶ್ರೀಸೂಕ್ತ, ರಾತ್ರೀಸೂಕ್ತ, ಸರಸ್ವತೀಸೂಕ್ತ, ದುರ್ಗಾಸ್ತೋತ್ರ, ಚಂಡೀಶತಕ, ದುರ್ಗಾಸಪ್ತಶತೀ ಇವುಗಳ ಪಾರಾಯಣವಿಶೇಷವಾಗಿ ಮಾಡಬೇಕು. ಶ್ರೀವೆಂಕಟೇಶ ಕಲ್ಯಾಣದ ಪಾರಾಯಣ ಬಹಳ ವಿಶೇಷ ಮತ್ತು ಎಲ್ಲರೂ ಮಾಡಲೇಬೇಕಾದ ಪಾರಾಯಣ. ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣ ಹೃದಯದ ಸಂಪುಟೀ ಕರಣ ಪಾರಾಯಣ ಮಾಡಬೇಕು. ಮೊದಲನೇ ದಿನದಿಂದ ಆರಂಭಿಸಿ ಮುಂದಿನ ದಿನಗಳಲ್ಲಿ ಪಾರಾಯಣದ ಸಂಖ್ಯೆಯನ್ನು ದಿನಗಳ ಸಂಖ್ಯೆಗೆ ಅನುಗುಣವಾಗಿ ವರ್ಧಿಸಬೇಕು. ಮೊದಲನೇ ದಿಂದಂದು ಒಂದು ಬಾರಿಸಂಪುಟೀಕರಣ, ಎರಡನೇ ದಿನದಂದು ಎರಡು ಬಾರಿ ಸಂಪುಟೀಕರಣ ಹೀಗೆ ದಶಮೀಯ ವರೆಗೆ ಹತ್ತು ಬಾರಿ ಸಂಪುಟೀಕರಣಪಾರಾಯಣಮಾಡಿ ದೇವರಿಗೆ ಅರ್ಪಿಸಬೇಕು. ಈ ಪಾರಾಯಣದಿಂದ ವಿಶೇಷವಾಗಿ ಸಂಪತ್ತು ಅಭಿವೃದ್ಧಿಯಾಗುತ್ತದೆ ಎಂದು ಪಂಚರಾತ್ರಾಗಮದಲ್ಲಿ ತಿಳಿಸಲಾಗಿದೆ. ಸ್ತ್ರೀಯರು ವಿಶೇಷವಾಗಿ ಶ್ರೀವೇಂಕಟೇಶಪಾರಿಜಾತ ಮತ್ತು ಶ್ರೀಲಕ್ಷ್ಮೀಶೋಭಾನದ ಪಾರಾಯಣ ಮಾಡುವದರಿಂದ ವಿಶೇಷ ಸೌಭಾಗ್ಯ ಸಂಪತ್ತು ಪ್ರಾಪ್ತಿಯಾಗುವುದು. ಸ್ರ್ತೀಯರು ಶ್ರೀವಾದಿರಾಜರು ರಚಿಸಿದ ಲಕ್ಷ್ಮೀಹೃದಯನ್ನು, ಶ್ರೀವಿಜಯದಾಸ ವಿರಚಿತ ದುರ್ಗಾಸುಳಾದಿಯನ್ನು ವಿಶೇಷವಾಗಿ ಪಠಿಸಬೇಕು. ಶ್ರೀವೇಂಕಟೇಶಸ್ತೋತ್ರವನ್ನು ಆಬಾಲವೃದ್ಧರು ಪಠಿಸಬೇಕು.

ನವರಾತ್ರಿಯಲ್ಲಿ ಸ್ತ್ರೀಯರು ಮಾಡುವ ದಾನಗಳು

ನವರಾತ್ರಿಯಲ್ಲಿ ಸ್ತ್ರೀಯರು ಮುತ್ತೈದೆಯರಿಗೆ ಅಲಂಕಾರದ ವಸ್ತುಗಳು, ಕೇಶಾಲಂಕಾರದ ವಸ್ತುಗಾಳು, ಮಾಂಗಲ್ಯ, ಕಾಲುಂಗುರ, ನೂತನವಸ್ತ್ರ, ಮತ್ತು ತುಳಸೀಸಸಿ ಇವಗಳ ದಾನವನ್ನು ಮಾಡಬೇಕು. ”ನಾರಿಕೇಲಫಲಾದೀನಿ ನವಕಂ ನವಕಂ ಪ್ರಿಯೇ”- ನಿತ್ಯದಲ್ಲಿಯೂ ಒಂಬತ್ತು ತೆಂಗಿನಕಾಯಿಗಳನ್ನು ಬ್ರಾಹ್ಮಣರಿಗೆ ದಾನಕೊಡಬೇಕು. ನಿತ್ಯವೂ ಒಂಬತ್ತು ತೆಂಗಿನಕಾಯಿಯನ್ನು ಕೊಡಲು ಅಶಕ್ಯವಾದರೆ ಒಂಬತ್ತು ಕದಲೀಫಲ(ಬಾಳೆಹಣ್ಣು)ಗಳನ್ನು ದಾನಕೊಡಬೇಕು. ಹೀಗೆ ಈ ಅಲಂಕಾರಿಕ ವಸ್ತುಗಳು ಮತ್ತು ನಾರಿಕೇಲದಾನದಿಂದ ವಿಶೇಷ ಸೌಮಾಂಗಲ್ಯ ಮತ್ತು ಸೌಖ್ಯಪ್ರಾಪ್ತಿಯನ್ನು ತಿಳಿಸಿದ್ದಾರೆ.

Sita Navami 2023: Puja Rituals, Story and Significance in kannada

ಮಹಾನವಮೀ

ನವರಾತ್ರಿಯ ಒಂಬತ್ತನೇ ದಿನವಾದ ನವಮೀಯನ್ನು ಮಹಾನವಮೀ ಅಥವಾ ಮಾರನವಮೀ ಎಂದು ಕರೆಯುತ್ತಾರೆ. ಅಂದು ಆಯುಧಪೂಜೆಯನ್ನು ಮಾಡಬೇಕು. ಆನೆ, ಕುದುರೆ, ವಾಹನ, ಯಂತ್ರಗಳು, ಶಸ್ತ್ರಾಸ್ತ್ರ ಎಲ್ಲದರ ಪೂಜೆಯನ್ನು ಮಾಡಬೇಕು. ಅಷ್ಟೇ ಅಲ್ಲದೇ ತರಕಾರಿ ಹೆಚ್ಚುವ ಇಳಿಗೆ ಮಣೆ, ಕತ್ತಿ, ಚಾಕು, ಹಾರಿ, ಮೊದಲಾದವುಗಳನ್ನೂ ಪೂಜಿಸಬೇಕು.

ದ್ವಾಪರಯುಗದಲ್ಲಿ ಹನ್ನೆರಡು ವರುಷ ವನವಾಸ ಮುಗಿಸಿ ಅಜ್ಞಾತವಾಸಕ್ಕೆ ತೆರಳುವ ಮುನ್ನ ಪಾಂಡವರು ತಮ್ಮ ಆಯುಧಗಳನ್ನು ಶಮೀವೃಕ್ಷ(ಬನ್ನಿವೃಕ್ಷ)ದ ಮೇಲೆ ಇರಿಸಿ ತೆರಳಿದ್ದರು. ಅಜ್ಞಾತವಾಸವನ್ನು ಮುಗಿಸಿ ಬಂದ ನಂತರ ಶಮೀವೃಕ್ಷದ ಮೇಲಿಟ್ಟಿರುವ ಆಯುಧಗಳನ್ನು ಇದೇ ನವಮಿಯಂದು ಇಳಿಸಿ ಪೂಜಿಸಿದರು. ಆದ್ದರಿಂದ ಅಂದಿನ ದಿನ ಆಯುಧಪೂಜೆಯನ್ನು ಮಾಡುವ ಸಂಪ್ರದಾಯವು ನಡೆದು ಬಂದಿದೆ.

ಈ ದಿನದ ಇನ್ನೊಂದು ಪೌರಾಣಿಕ ಹಿನ್ನೆಲೆ- ದುರ್ಗಾದೇವಿಯು ಚಾಮುಂಡಿಯಾಗಿ ಅಷ್ಟಭುಜಧಾರಿಣೀ ಎನಿಸಿ ಮಹಿಷಾಸುರನನ್ನು ಸಂಹರಿಸುತ್ತಾಳೆ. ಸಂಹರಿಲು ಬಳಸಿದ ಆಯುಧಗಳನ್ನೆಲ್ಲ ಭೂಮಿಯ ಮೇಲೆಯೇ ಬಿಟ್ಟು ಅದೃಶ್ಯಳಾಗುತ್ತಾಳೆ. ದುಷ್ಟರನ್ನು ಸಂಹರಿಸಿದ ಆಯುಧಗಳನ್ನು ಭಕ್ತರು ಪೂಜಿಸಿದರು. ಅದೇ ಮುಂದೆ ಆಯುಧಪೂಜೆಯ ದಿನವೆನಿಸಿತು.

ವಿಜಯದಶಮೀ

ಅಧರ್ಮದ ವಿರುದ್ಧ ಧರ್ಮದ ಜಯ. ದೈತ್ಯರ ವಿರುದ್ಧ ದೇವತೆಗಳ ಜಯ. ಇದರ ಸಾಂಕೇತಿಕ ದಿನವೇ ವಿಜಯದಶಮೀ.

ಶ್ರೀರಾಮನ ವಿಜಯ

ಸೀತಾಮಾತೆಯನ್ನು ರಾವಣನ ಲಂಕೆಯಿಂದ ಬಿಡಿಸಿಕೊಂಡು ಬರಲು ನಡೆದ ಘೋರಯುದ್ಧದಲ್ಲಿ ಶ್ರೀರಾಮಚಂದ್ರನು ರಾವಣನನ್ನು ಸಂಹರಿಸುತ್ತಾನೆ. ಕಾಮುಕನ ಮೇಲೆ ಮರ್ಯಾದಾ ಪುರುಷೋತ್ತಮನ ಜಯವನ್ನು ಬಿಂಬಿಸುವುದೇ ವಿಜಯದಶಮೀ. ಶ್ರೀರಾಮಚಂದ್ರನ ವಿಜಯದ ದ್ಯೋತಕವಾಗಿ ಇಂದಿಗೂ ಎಲ್ಲೆಡೆ ವಿಜಯದಶಮಿಯಂದು ರಾವಣನ ಪ್ರತಿಕೃತಿಯನ್ನು ದಹಿಸುತ್ತಾರೆ. ದಶಶಿರನನ್ನು ರಾಮನು ಸಂಹರಿಸಿದ ದಿನ ”ದಶ-ಹರ” ಅಥವಾ ”ದಸರಾ” ಎಂದು ಕರೆಯಲ್ಪಟ್ಟಿತು.

ಪಾಂಡವರ ವನವಾಸ ಅಂತ್ಯ

ಹನ್ನೆರಡು ವರುಷ ವನವಾಸ ಹಾಗು ಒಂದು ವರುಷ ಅಜ್ಞಾತವಾಸವನ್ನು ಮುಗಿಸಿ ನವಮೀ ದಿನ ತಮ್ಮ ಶಸ್ತ್ರಗಳನ್ನೆಲ್ಲ ಶಮೀವೃಕ್ಷದಿಂದ ಇಳಿಸಿಕೊಂಡು, ದಶಮಿಯ ದಿನ ವನವಾಸಾಂತ್ಯಗೊಳಿಸಿ ಮರಳಿದರು. ದುರ್ಯೋಧನಾದಿಗಳು ವಿರಾಟ್ ರಾಜನ ಗೋವುಗಳನ್ನು ಕಟ್ಟಿಹಾಕುತ್ತಾರೆ. ಪಾಂಡವರು ತಾವು ದುರ್ಯೋಧನಾದಿಗಳನ್ನು ಜಯಿಸಿ ಗೋವುಗಳನ್ನು ಬಿಡಿಸಿ ವಿರಾಟ್ ರಾಜನಗೆ ಮರಳಿಸುತ್ತಾರೆ. ಅಂದಿನ ದಿನವೇ ವಿಜಯದಶಮೀ ದಿನ ಎಂದು ಆಚರಿಸಲಾಗುತ್ತಿದೆ. ಹೀಗೆ ಇದು ಶ್ರೀಕೃಷ್ಣನ ಪ್ರಿಯರಾದ ಪಾಂಡವರ ವಿಜಯದ ದಿನ. ಅಂದಿನ ದಿನ ಶಮೀವೃಕ್ಷದ ಅಂತರ್ಯಾಮಿಯಾದ ಶ್ರೀಲಕ್ಷ್ಮೀನರಸಿಂಹದೇವರನ್ನು ಪೂಜಿಸಬೇಕು. ಗುರುಹಿರಿಯರಿಗೆ ಬನ್ನಿಯ ಪತ್ರಗಳನ್ನು ಸಮರ್ಪಿಸಿ ಆಶೀರ್ವಾದಪಡೆಯಬೇಕು. ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಳ್ಳಬೇಕು.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ|
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ||

ಎಂಬ ಶ್ಲೋಕವನ್ನು ಹೇಳಿ ಬನ್ನಿಯನ್ನು ವಿನಿಮಯ ಮಾಡಬೇಕು.

ಶ್ರೀ ಮಧ್ವ ಜಯಂತೀ

ಶ್ರೀರಾಮನ ಸೇವಕರಾದ ಹನುಮಂತದೇವರು, ಶ್ರೀಕೃಷ್ಣನ ಭಕ್ತರಾದ ಭೀಮಸೇನದೇವರು ನಂತರದಲ್ಲಿ ಶ್ರೀವೇದವ್ಯಾಸರ ಶಿಷ್ಯರಾಗಿ ದ್ವೈತದುಂಧುಭಿ ಮೊಳಗಿಸಿದ ಶ್ರೀಮನ್ಮಧ್ವಾಚಾರ್ಯರ ಅವತರಾದ ದಿನವೇ ವಿಜಯದಶಮೀ. ಕುಮತಗಳ ಭಂಜಿಸಿ ಸುಮತವನ್ನು ಸ್ಥಾಪಿಸಿ ವಿಜಯಿಗಳಾದ ಶ್ರೀಮನ್ಮಧ್ವಾಚಾರ್ಯರ ಜಯಂತಿಯ ದಿನ.

ಇದನ್ನೂ ಓದಿ: Navaratri Saffron Colour Outfit Tips: ನವರಾತ್ರಿ ಮೊದಲ ದಿನ ಕೇಸರಿ ಎಥ್ನಿಕ್‌ವೇರ್‌ ಧರಿಸುತ್ತಿದ್ದೀರಾ? ಇಲ್ಲಿದೆ ಸ್ಟೈಲಿಂಗ್‌ ಐಡಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರಮುಖ ಸುದ್ದಿ

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

PM Narendra Modi: ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

pm narendra modi basava jayanti 2024
Koo

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Continue Reading

ಪ್ರಮುಖ ಸುದ್ದಿ

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024: ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

VISTARANEWS.COM


on

Akshaya Tritiya 2024
Koo

ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.

ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?

ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Continue Reading
Advertisement
SSLC Result
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

Kangana Ranaut
ಪ್ರಮುಖ ಸುದ್ದಿ3 hours ago

Kangana Ranaut : ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​ ಬಳಿ ಇರುವ ಆಸ್ತಿ ಎಷ್ಟು? ಇಲ್ಲಿದೆ ಎಲ್ಲ ಮಾಹಿತಿ

heavy wind and rain damaged tree and electricity poles In Jholada Gudde village
ಶಿವಮೊಗ್ಗ3 hours ago

Karnataka Weather: ಭಾರೀ ಗಾಳಿ ಮಳೆಗೆ ಧರೆಗುರುಳಿದ ಬೃಹತ್‌ ಮರ, ವಿದ್ಯುತ್‌ ಕಂಬ

ಪ್ರಮುಖ ಸುದ್ದಿ3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಸಾಧಕರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ಘೋಷಿಸಿದ ಸಿಎಂ, ಡಿಸಿಎಂ

IPL 2024
ಕ್ರಿಕೆಟ್3 hours ago

IPL 2024 : ಲಕ್ನೊ ವಿರುದ್ಧ 19 ರನ್ ವಿಜಯ, ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಮುಗಿಸಿದ ಡೆಲ್ಲಿ

Team India
ಪ್ರಮುಖ ಸುದ್ದಿ4 hours ago

Team India : ದ್ರಾವಿಡ್​ ಬಳಿಕ ಇವರೇ ಆಗ್ತಾರೆ ಭಾರತ ತಂಡದ ಕೋಚ್​​

Victoria Hospital
ಕರ್ನಾಟಕ4 hours ago

Victoria Hospital: ವಿಕ್ಟೋರಿಯಾ ಆಸ್ಪತ್ರೆಯಿಂದ ವಜಾಗೊಂಡಿದ್ದ 55 ಸಿಬ್ಬಂದಿ ಮರು ನೇಮಕ

KL Rahul
ಕ್ರೀಡೆ4 hours ago

KL Rahul : ಗಲಾಟೆ ಚಾಪ್ಟರ್ ಕ್ಲೋಸ್​​; ಕೆ. ಎಲ್​ ರಾಹುಲ್​ ಹಿಡಿದ ಕ್ಯಾಚ್​ಗೆ ಮೆಚ್ಚಿ ಚಪ್ಪಾಳೆ ತಟ್ಟಿದ ಗೋಯೆಂಕಾ

Prajwal Revanna Case
ಕರ್ನಾಟಕ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ನಾಳೆಯೇ ಜರ್ಮನಿಯಿಂದ ಭಾರತಕ್ಕೆ?; ವಿಸ್ತಾರ ನ್ಯೂಸ್‌ಗೆ ಮಹತ್ವದ ದಾಖಲೆ ಲಭ್ಯ

Bank Loan Fraud
ಪ್ರಮುಖ ಸುದ್ದಿ5 hours ago

Bank Loan Fraud : 34,000 ಕೋಟಿ ರೂ. ಬ್ಯಾಂಕ್​​ ವಂಚನೆ, ಡಿಎಚ್​​ಎಫ್ಎಲ್​​​ ಮಾಜಿ ನಿರ್ದೇಶಕನ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ನಾಳೆಯೇ ಜರ್ಮನಿಯಿಂದ ಭಾರತಕ್ಕೆ?; ವಿಸ್ತಾರ ನ್ಯೂಸ್‌ಗೆ ಮಹತ್ವದ ದಾಖಲೆ ಲಭ್ಯ

HD Revanna Released first reaction after release will be acquitted of all charges
ರಾಜಕೀಯ7 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202410 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202413 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ14 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು15 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ22 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

ಟ್ರೆಂಡಿಂಗ್‌