Russian Coup: ರಷ್ಯಾ ಸೇನೆಗೆ ತಿರುಗಿಬಿದ್ದ ಬಾಡಿಗೆ ಹಂತಕರ ಪಡೆ, ಪುಟಿನ್‌ಗೆ ಸೇನಾ ದಂಗೆ ಸವಾಲು Vistara News

ಪ್ರಮುಖ ಸುದ್ದಿ

Russian Coup: ರಷ್ಯಾ ಸೇನೆಗೆ ತಿರುಗಿಬಿದ್ದ ಬಾಡಿಗೆ ಹಂತಕರ ಪಡೆ, ಪುಟಿನ್‌ಗೆ ಸೇನಾ ದಂಗೆ ಸವಾಲು

ರಷ್ಯಾದ (Russia) ದಕ್ಷಿಣ ಮಿಲಿಟರಿ ಕೇಂದ್ರವಾದ ರಾಸ್ತಾವಾನ್‌ ಡಾನ್‌ ಪಟ್ಟಣವನ್ನು ಬಾಡಿಗೆ ಸೈನ್ಯ ವಶಪಡಿಸಿಕೊಂಡಿದ್ದು, ಮಾಸ್ಕೋ ಕಡೆಗೆ ಧಾವಿಸುತ್ತಿದೆ. ಇದು ರಷ್ಯದ ದೇಶದ ಸೈನ್ಯಕ್ಕೂ ಬಾಡಿಗೆ ಕೊಲೆಗಡುಕರ ಸೈನ್ಯಕ್ಕೂ ನಡುವೆ ನಡೆಯುತ್ತಿರುವ ಸಮರ.

VISTARANEWS.COM


on

russian tanks
Follow us on
Koo

ಮಾಸ್ಕೋ: ಉಕ್ರೇನ್‌ (Ukraine) ಮೇಲೆ ದಾಳಿ ಮಾಡಲು ಹೋಗಿ ತದುಕಿಸಿಕೊಡಿರುವ ರಷ್ಯಾದ (Russia) ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ (Vladimir Putin) ಇನ್ನೊಂದು ಸಂಕಷ್ಟ ಎದುರಾಗಿದೆ. ಇದೀಗ ಅವರು ಸಾಕಿದ ಬಾಡಿಗೆ ಕೊಲೆಗಡುಕರ ಸೈನ್ಯವೇ ಅವರಿಗೆ ತಿರುಗಿಬಿದ್ದಿದೆ.

ರಷ್ಯಾದ ದಕ್ಷಿಣ ಮಿಲಿಟರಿ ಕೇಂದ್ರವಾದ ರಾಸ್ತಾವಾನ್‌ ಡಾನ್‌ ಪಟ್ಟಣವನ್ನು ಬಾಡಿಗೆ ಸೈನ್ಯ ವಶಪಡಿಸಿಕೊಂಡಿದ್ದು, ಮಾಸ್ಕೋ ಕಡೆಗೆ ಧಾವಿಸುತ್ತಿದೆ ಎನ್ನಲಾಗಿದೆ. ಇದು ರಷ್ಯದ ದೇಶದ ಸೈನ್ಯಕ್ಕೂ ಬಾಡಿಗೆ ಕೊಲೆಗಡುಕರ ಸೈನ್ಯಕ್ಕೂ ನಡುವೆ ನಡೆಯುತ್ತಿರುವ ಸಮರ. ʼವ್ಯಾಗ್ನರ್ ಗ್ರೂಪ್‌ʼ (Wagner Group) ಎಂಬ ಬಾಡಿಗೆ ಸೈನ್ಯದ ಮುಖ್ಯಸ್ಥ, 62 ವರ್ಷದ ಯೆವ್ಗೆನಿ ಪ್ರಿಗೋಜಿನ್ (Yevgeni Prigoschin) , ʼಅಡ್ಡಗಾಲು ಹಾಕುವ ಎಲ್ಲವನ್ನೂ ನಾಶ ಮಾಡುತ್ತೇನೆʼ ಎಂದು ಗುಡುಗಿದ್ದಾನೆ. ಈತ ಉಕ್ರೇನ್‌ ಮೇಲಿನ ರಷ್ಯಾದ ದಾಳಿಯ ಬಹುಭಾಗವನ್ನು ಮುನ್ನಡೆಸಿದ್ದ. ಇದೀಗ ರಷ್ಯಾದ ಮಿಲಿಟರಿಯ ವಿರುದ್ಧವೇ ದಂಗೆ ಎದ್ದಿದ್ದಾನೆ. ರಷ್ಯಾದ ಸೇನಾಪಡೆ ತನ್ನ ಸೈನ್ಯದ ಮೇಲೆ ಮಾರಣಾಂತಿಕ ದಾಳಿ ಮಾಡಿದೆ ಎಂಬುದು ಆತನ ಆರೋಪವಾಗಿದೆ.

yevgeny-prigozhin putin aide
ಬಾಡಿಗೆ ಹಂತಕರ ಸೈನ್ಯದ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್

ಈ ಕುರಿತು ಆತ ಒಂದು ಧ್ವನಿಸಂದೇಶ ಬಿಡುಗಡೆ ಮಾಡಿದ್ದಾನೆ. ʼʼನನ್ನ ಪಡೆಗಳು ನಮ್ಮ ದಾರಿಯಲ್ಲಿ ಅಡ್ಡವಾಗಿ ನಿಂತಿರುವ ಎಲ್ಲವನ್ನೂ ನಾಶಮಾಡಲಿವೆ. ಇದು ಮಿಲಿಟರಿ ದಂಗೆಯಲ್ಲ, ನ್ಯಾಯಕ್ಕಾಗಿ ಹಕ್ಕೊತ್ತಾಯʼʼ ಎಂದು ಹೇಳಿದ್ದಾನೆ. ತನ್ನ ಪಡೆಗಳ ವಿರುದ್ಧ ಕೆಲಸ ಮಾಡದಿರುವಂತೆ, ತನ್ನೊಂದಿಗೆ ಸೇರಿಕೊಳ್ಳುವಂತೆ ರಷ್ಯನ್ನರಿಗೆ ಆತ ಎಚ್ಚರಿಕೆ ನೀಡಿದ್ದಾನೆ. ಹಲವು ತಿಂಗಳುಗಳಿಂದ ರಷ್ಯ ಮಿಲಿಟರಿ ಹಾಗೂ ವ್ಯಾಗ್ನರ್‌ ಗ್ರೂಪ್‌ ನಡುವೆ ಮುಂದುವರಿದಿರುವ ಶೀತಲ ಸಮರದ ಪರಿಣಾಮ ಇದಾಗಿದೆ.

ದಕ್ಷಿಣ ಮಿಲಿಟರಿ ಜಿಲ್ಲೆ ಸಮಪೂರ್ಣವಾಗಿ ತನ್ನ ಸೈನ್ಯದ ವಶದಲ್ಲಿದೆ ಎಂದು ಯೆವ್ಗೆನಿ ಹೇಳಿದ್ದಾನೆ. ಇಲ್ಲಿನ ರಾಸ್ತಾವಾನ್‌ ಡಾನ್‌ ಪಟ್ಟಣ ಹಾಗೂ ಅಲ್ಲಿನ ಮಿಲಿಟರ ಕೇಂದ್ರ ನೆಲೆ ಈತನ ವಶದಲ್ಲಿದೆ. ಇಡೀ ಉಕ್ರೇನ್‌ನ ಮೇಲೆ ನಡೆದ ದಾಳಿಯನ್ನು ಇಲ್ಲಿಂದಲೇ ಸಂಘಟಿಸಲಾಗಿತ್ತು. ಉಕ್ರೇನ್‌ ಮೇಲಿನ ದಾಳಿಯ ಸಂದರ್ಭದಲ್ಲಿ ತನ್ನ ಸೈನ್ಯಕ್ಕೆ ಸೇರಿದ ನೂರಾರು ಸೈನಿಕರನ್ನು ರಷ್ಯನ್‌ ಮಿಲಿಟರಿಯ ಸೂತ್ರಧಾರರು ಕೊಲ್ಲಿಸಿದ್ದಾರೆ ಎಂಬುದು ಪ್ರಿಗೋಜಿನ್‌ನ ಆರೋಪವಾಗಿದೆ.

ಸುಮಾರು 25,000 ಬಾಡಿಗೆ ಸೈನಿಕರು ಈತನ ಸೈನ್ಯದಲ್ಲಿದ್ದು, ಭಾರಿ ಪ್ರಮಾಣದ ಟ್ಯಾಂಕ್‌, ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾನೆ. ʼʼರಷ್ಯದ ಸೈನ್ಯದ ಅರ್ಧ ಭಾಗ ಸೈನಿಕರು ನನ್ನೊಂದಿಗೆ ಬರಲು ಸಜ್ಜಾಗಿದ್ದಾರೆʼʼ ಎಂದು ಈತ ಘೋಷಿಸಿದ್ದಾನೆ.

ಪ್ರಿಗೋಜಿನ್ ಹೇಳಿಕೆಯ ನಂತರ ಮಾಸ್ಕೋದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ನಿರ್ಣಾಯಕ ತಾಣಗಳನ್ನು ಇನ್ನಷ್ಟು ರಕ್ಷಣೆಯಲ್ಲಿ ಇರಿಸಲಾಗಿದೆ. ರಷ್ಯಾದ ಪ್ರಮುಖ ಜನರಲ್‌ಗಳು ಹಿಂದೆ ಸರಿಯುವಂತೆ ವ್ಯಾಗ್ನರ್‌ ಸೇನಾನಾಯಕನನ್ನು ಒತ್ತಾಯಿಸಿದ್ದಾರೆ. ಈ ನಡುವೆ ರಶಿಯಾ ಸೇನೆಯ ಚೀಫ್ ಆಫ್ ಜನರಲ್ ಸ್ಟಾಫ್ ವ್ಯಾಲೆರಿ ಗೆರಾಸಿಮೊವ್ ರೋಸ್ಟೊವ್ ಸೈನ್ಯದ ಪ್ರಧಾನ ಕಚೇರಿಯಿಂದ ಓಡಿಹೋಗಿದ್ದಾನೆ ಹಾಗೂ ಸ್ನೇಹಿತರ ಮನೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಉಕ್ರೇನ್‌ ಮೇಲಿನ ದಾಳಿಯ ಲಾಭ ಪಡೆಯಲು ಈ ಇಬ್ಬರ ನಡುವೆ ಶೀತಲ ಸಮರ ನಡೆದಿತ್ತು.

ಈ ನಡುವೆ ಮಾಸ್ಕೋದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ಮೇಲೆ ಉಕ್ರೇನ್ ನಿಗಾ ಇಟ್ಟಿದ್ದು, ʼʼರಷ್ಯಾದ ಪ್ರತಿಸ್ಪರ್ಧಿ ಬಣಗಳು ಅಧಿಕಾರಕ್ಕಾಗಿ ಪರಸ್ಪರ ಹೊಡೆದಾಡಿಕೊಂಡು ನಾಶವಾಗಲಿವೆʼʼ ಎಂದಿದೆ.

ಇದನ್ನೂ ಓದಿ: Alexander Lukashenko: ಬೆಲಾರಸ್ ಅಧ್ಯಕ್ಷನಿಗೆ ರಷ್ಯಾದಲ್ಲಿ ವಿಷಪ್ರಾಶನ? ಪುಟಿನ್ ಭೇಟಿ ಬಳಿಕ ಅಸ್ವಸ್ಥರಾದ ಲುಕಾಶೆಂಕೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya
Koo

ಚಂದ್ರನು ಮಂಗಳವಾರ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನಾ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುವಿರಿ. ಮಿಥುನ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರಗಳಲ್ಲಿ ಅಂದುಕೊಂಡಂತೆ ಲಾಭ ಸಿಗುವುದಿಲ್ಲ, ಎಚ್ಚರವಹಿಸಿ ಮುಂದುವರಿಯಿರಿ. ಕಟಕ ರಾಶಿಯ ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಮಕರ ರಾಶಿಯ ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (4-10-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ.
ತಿಥಿ:
ಷಷ್ಠಿ 29:40 ವಾರ: ಬುಧವಾರ
ನಕ್ಷತ್ರ: ರೋಹಿಣಿ 18:28 ಯೋಗ: ಸಿದ್ಧಿ 06:41
ಕರಣ: ಗರಜ 17:30 ಅಮೃತಕಾಲ : ಮಧ್ಯಾಹ್ನ 03:14 ರಿಂದ 04:51ರವರೆಗೆ
ದಿನದ ವಿಶೇಷ: ವಿಶ್ವ ಕರ್ಮ ಪೂಜೆ

ಸೂರ್ಯೋದಯ : 06:20  ಸೂರ್ಯಾಸ್ತ : 07:19

ರಾಹುಕಾಲ: ಮಧ್ಯಾಹ್ನ 12:08 ರಿಂದ 01:38
ಗುಳಿಕಕಾಲ: ಬೆಳಗ್ಗೆ 10:38 ರಿಂದ 12:08
ಯಮಗಂಡಕಾಲ: ಬೆಳಗ್ಗೆ 07:39
ರಿಂದ 09:09

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆತ್ಮ ವಿಶ್ವಾಸದಿಂದ ಮಾಡಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರಲಿದೆ. ನೀವು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುವಿರಿ. ವೃತ್ತಿಪರ ಗುರಿಗಳನ್ನು ಸಾಧಿಸಲು ನಿಮ್ಮ ಚೈತನ್ಯವನ್ನು ಹೊಂದಿಸಲು ಇದು ಸರಿಯಾದ ಸಮಯವಾಗಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಇಂದು ಉತ್ಸಾಹ ತುಂಬಿದ ದಿನ. ನೀವು ಯಾವುದೇ ಕೆಲಸದಲ್ಲಿ ನಿರತರಾಗಿದ್ದರೆ ಖಂಡಿತಾ ಯಶಸ್ಸು ಸಿದ್ಧಿಸಲಿದೆ. ಆರ್ಥಿಕವಾಗಿ ಸದೃಢ ಇರಲಿದೆ. ದಿನದ ಕೊನೆಯಲ್ಲಿ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಸ್ನೇಹಿತರಿಂದ ಸಹಾಯ ಕೋರಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಅಂದುಕೊಂಡಂತೆ ಲಾಭವಿಲ್ಲ. ನಿಮ್ಮ ಸಿಟ್ಟನ್ನು ಕುಟುಂಬದ ಮೇಲೆ ಹಾಕಿ ಮನಸ್ಸು ಹಾಳು ಮಾಡಿಕೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕಟಕ: ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕೊಂಚ ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ವಿವಿಧ ಮೂಲಗಳಿಂದ ಆರ್ಥಿಕವಾಗಿ ಲಾಭ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಮಾನಸಿಕ ಆರೋಗ್ಯ ಸದೃಢವಾಗಿರಲಿದೆ. ಅತಿ ಅವಶ್ಯಕ ಕೆಲಸದ ಕಾರಣ ದೈಹಿಕ ಶ್ರಮಪಡುವಿರಿ. ಉದ್ಯೋಗಿಗಳಿಗೆ ಸಹಕಾರಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕ ಕಲಹಗಳಿಗೆ ಧ್ವನಿ ಆಗುವುದು ಬೇಡ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:2

Horoscope Today

ಕನ್ಯಾ: ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಪ್ರಯಾಣ ಮಾಡಬಹುದು. ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ. ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಒತ್ತಡದಿಂದ ಕೂಡಿದ ವಾತಾವರಣ ನಿರ್ಮಾಣವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಉದ್ಯೋಗಿಗಳಿಗೆ ಒತ್ತಡದ ನಡುವೆಯೂ ಕಾರ್ಯ ಸ್ಥಳದಲ್ಲಿ ನಿಮಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮಗೊಳ್ಳಲಿದೆ. ಆಲಸ್ಯದಿಂದ ಕಾಲ ಹರಣ ಮಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಪ್ರಮುಖ ಕಾರ್ಯಗಳಲ್ಲಿ ಹಿನ್ನಡೆ ಆಗಲಿದೆ. ಅಗತ್ಯ ವಸ್ತುಗಳ ಖರೀದಿಯಿಂದಾಗಿ ಖರ್ಚು ಹೆಚ್ಚಾಗಲಿದೆ. ಉದ್ಯೋಗದ ಸ್ಥಳದಲ್ಲಿ ಯಾರೊಂದಿಗೂ ದ್ವೇಷ, ಮತ್ಸರ ಪಡುವುದು ಬೇಡ, ಇದರಿಂದ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಆರೋಗ್ಯದ ಕುರಿತು ಕೊಂಚ ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:5

Horoscope Today

ಧನಸ್ಸು: ಕಾರ್ಯದಲ್ಲಿ ನಿಧಾನಗತಿ ಇರಲಿದೆ. ಉದ್ಯೋಗಿಗಳಿಗೆ ದಿನಕ್ಕಿಂತ ಹೆಚ್ಚಿನ ಒತ್ತಡ ಇರಲಿದೆ. ನಿಮ್ಮ ಸಿಟ್ಟನ್ನು ಇತರರ ಮೇಲೆ ಹಾಕಿ ಮನೆಯ ವಾತಾವರಣ ಕದಡುವುದು ಬೇಡ. ಆರ್ಥಿಕ ಪ್ರಗತಿ ಉತ್ತಮವಾಗಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

Horoscope Today

ಮಕರ: ದೈಹಿಕವಾಗಿ ಮಾನಸಿಕವಾಗಿ ಹೇಳಿಕೊಳ್ಳುವ ವಾತಾವರಣ ಇಲ್ಲ, ಇದರಿಂದ ಮನೋಸ್ಥೈರ್ಯ ಕುಗ್ಗಲಿದೆ. ಮಾತಿಗೆ ಮಾತು ಬೆಳೆಸುವ ಪ್ರಯತ್ನ ಮಾಡಬೇಡಿ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಸಕಾರತ್ಮಕ ಆಲೋಚನೆ ಇರಲಿ. ಮನೆಯ ಹಿರಿಯರೊಂದಿಗೆ ಮಾತಿಗೆ ಮಾತು ಬೆಳೆಸಿ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಆದಷ್ಟು ಮಾತಿಗೆ ವಿರಾಮ ನೀಡಿ. ಉದ್ಯೋಗಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಯಾವುದೇ ಆತಂಕ ಬೇಡ. ಆರೋಗ್ಯದ ಕುರಿತು ಕೊಂಚ ಕಾಳಜಿ ವಹಿಸುವುದು ಸೂಕ್ತ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಆಶಾದಾಯಕ ಬೆಳವಣಿಗೆ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

Continue Reading

ಪ್ರಮುಖ ಸುದ್ದಿ

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

Vivek Ramaswamy: ರಿಪಬ್ಲಿಕ್ ಪಕ್ಷದ ಸದಸ್ಯರಾಗಿರುವ ವಿವೇಕ್ ರಾಮಸ್ವಾಮಿ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗುವ ಮುಂಚೂಣಿ ವ್ಯಕ್ತಿಯಾಗಿದ್ದಾರೆ.

VISTARANEWS.COM


on

Vivek Ramaswamy offering rs 80 lakh to nanny Says media report
ಹೆಂಡತಿ ಮತ್ತು ಮಕ್ಕಳೊಂದಿಗೆ ವಿವೇಕ್ ರಾಮಸ್ವಾಮಿ.
Koo

ನವದೆಹಲಿ: ಅಮೆರಿಕ ಅಧ್ಯಕ್ಷ (US President Election) ಚುನಾವಣೆಗೆ ರಿಪಬ್ಲಿಕ್ ಪಕ್ಷದ (Republic Party) ಅಭ್ಯರ್ಥಿಯಾಗಲು ಹೊರಟಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು (Nanny) ಹುಡುಕುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರು ಆಫರ್ ಮಾಡುತ್ತಿರುವ ಸಂಬಳದ ಮೊತ್ತ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಿ. ವಿವೇಕ್ ರಾಮಸ್ವಾಮಿ ದಾದಿ(ಆಯಾ) ಕೆಲಸಕ್ಕೆ 80 ಲಕ್ಷ ರೂ. ಸಂಬಳ ನೀಡಲು ಮುಂದಾಗಿದ್ದಾರೆ. ಅವರು ಭಾರತೀಯ ಕೋಟ್ಯಧಿಪತಿ ಅಪೂರ್ವ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ತಮ್ಮ ಮಕ್ಕಳನ್ನು ನೋಡಿಕೊಳ್ಳಲು ನ್ಯಾನಿ(ದಾದಿ) ಬೇಕಾಗಿದ್ದಾರೆ ಎಂದು ರಾಮಸ್ವಾಮಿ ಅವರು ಎಸ್ಟೇಟ್‌ಜಾಬ್ಸ್ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದಾರೆ. ಕುತೂಹಲ, ಸಾಹಸ ಮತ್ತು ನಿರಂತರ ಚಲನೆಯು ಕುಟುಂಬದ ಜೀವನಶೈಲಿಯನ್ನು ವ್ಯಾಖ್ಯಾನಿಸುತ್ತದೆ. ಇದು ಉನ್ನತ-ಪ್ರೊಫೈಲ್ ಕುಟುಂಬವನ್ನು ಸೇರಲು ಒಂದು ಅಸಾಧಾರಣ ಅವಕಾಶವಾಗಿದೆ, ಅನನ್ಯ ಕೌಟುಂಬಿಕ ಸಾಹಸಗಳಲ್ಲಿ ಭಾಗವಹಿಸುವಾಗ ಅವರ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಎಸ್ಟೇಟ್‌ಜಾಬ್ಸ್ ಡಾಟ್ ಕಾಮ್ ಈ ಜಾಹೀರಾತಿನಲ್ಲಿ ಬರೆದುಕೊಂಡಿದೆ.

ವಾರಕ್ಕೆ 84 ರಿಂದ 96 ಗಂಟೆಗಳ ಕೆಲಸದ ಅಗತ್ಯವಿದೆ, ನಂತರ ಇಡೀ ವಾರದ ರಜೆ ಇರುತ್ತದೆ. ಮಕ್ಕಳಿಗೆ ತಡೆರಹಿತ ದೈನಂದಿನ ದಿನಚರಿಯನ್ನು ಒದಗಿಸುವ ಸಲುವಾಗಿ ದಾದಿಯು, ಒಬ್ಬ ಬಾಣಸಿಗ, ಸಹಾಯಕಿಯರು, ಹೌಸ್‌ಕೀಪರ್ ಮತ್ತು ಖಾಸಗಿ ಭದ್ರತೆಯನ್ನು ಒಳಗೊಂಡಂತೆ ಮೀಸಲಾದ ತಂಡದೊಂದಿಗೆ ವ್ಯವಹರಿಸಬೇಕಾಗುತ್ತದೆ. ಈ ತಂಡದೊಂದಿಗೆ ಸಮನ್ವಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಜತೆಗೆ, ಹುಡುಗರ ಆಟದ ಪ್ರದೇಶಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಉತ್ತೇಜಿಸುವ ಮತ್ತು ಸಂಘಟಿತ ವಾತಾವರಣವನ್ನು ಬೆಳೆಸಲು ಕ್ಯುರೇಟ್ ಮಾಡುವುದೂ ಕೂಡ ಜವಾಬ್ದಾರಿಯಾಗಿರುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಹಾಗೆ ನೋಡಿದರೆ, ಎಸ್ಟೇಟ್‌ಜಾಬ್ಸ್ ಡಾಟ್ ಕಾಮ್‍‌ನಲ್ಲಿ ನೀಡಿರುವ ಜಾಹೀರಾತಿನಲ್ಲಿ ಕ್ಲೈಂಟ್ ಹೆಸರು ಎಲ್ಲೂ ನಮೂದಿಸಿಲ್ಲ. ಆದರೂ, ವಿವರಗಳನ್ನು ವಿಶ್ಲೇಷಿಸಿದರೆ ಖಂಡಿತವಾಗಿಯೂ ಅದು ವಿವೇಕ ರಾಮಸ್ವಾಮಿ ಅವರ ಕುಟುಂಬದತ್ತ ಬೆರಳು ಮಾಡುತ್ತದೆ ಎಂದು ಬಿಸಿನೆಸ್‌ ಇನ್‌ಸೈಡರ್ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್‌ ರಾಮಸ್ವಾಮಿಯನ್ನು ಹೊಗಳಿದ ಎಲಾನ್‌ ಮಸ್ಕ್

ರಾಮಸ್ವಾಮಿ ಅವರ ಪ್ರಚಾರದ ವಕ್ತಾರರಾದ ಟ್ರಿಸಿಯಾ ಮೆಕ್‌ಲಾಫ್ಲಿನ್ ಅವರು ಈ ಹಿಂದೆ ಸುದ್ದಿ ಪೋರ್ಟಲ್‌ ಮಾಹಿತಿ ನೀಡಿ, ಲಿವ್-ಇನ್ ದಾದಿಯರ ಕಲ್ಪನೆಯೊಂದಿಗೆ ಕುಟುಂಬವು ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದ್ದರು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ವಿವೇಕ್ ರಾಮಸ್ವಾಮಿ ಅವರು ತಯಾರಿ ನಡೆಸಿದ್ದಾರೆ.

ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿಯನ್ನು(ವಿವೇಕ್ ರಾಮಸ್ವಾಮಿ) ಒಮ್ಮೆ ಟೈಮ್ ಮ್ಯಾಗಜೀನ್ “ಟ್ರಂಪ್ ಅವರ ಸ್ಪಷ್ಟ ಉತ್ತರಾಧಿಕಾರಿ” ಎಂದು ಕರೆದಿತ್ತು. ಆಗಸ್ಟ್ 23 ರಂದು ನಡೆದ ಅವರ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯ ನಂತರ ಅವರು ಅಮೆರಿಕದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ.

VISTARANEWS.COM


on

Justin Trudeau
Koo

ಟೊರೊಂಟೊ, ಕೆನಡಾ: ಸದ್ಯ ಕೆನಡಾವು ಭಾರತದೊಂದಿಗೆ (Canada and India Relations) ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಹಾಗಿದ್ದೂ, ರಚನಾತ್ಮಕ ಸಂಬಂಧವನ್ನು (Constructive Relations) ಮುಂದುರಿಸುತ್ತಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರು ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಟ್ರೂಡೊ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ(India Canada Row).

ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು, ಭಾರತದಲ್ಲಿ ಕೆನಾಡ ರಾಜತಾಂತ್ರಿಕರನ್ನು ಹೊಂದಿರುವುದು ಮಹತ್ವದ್ದಾಗಿದೆ ಎಂದು ಹೇಳಿದರು. ದಿಲ್ಲಿಯ ಕೆನಡಾ ರಾಜತಾಂತ್ರಿಕ ಕಚೇರಿಯಲ್ಲಿರುವ 62 ಸಿಬ್ಬಂದಿಯ ಪೈಕಿ 41 ಜನರನ್ನು ವಾಪಸ್ ಕೆನಡಾಗೆ ಕರೆಯಿಸಿಕೊಳ್ಳುವಂತೆ ಭಾರತ ಸರ್ಕಾರವು ಹೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರೂಡೋ ಅವರು ಹೇಳಿಕೆಯನ್ನು ನೀಡಿದ್ದಾರೆ.

ನಿಸ್ಸಂಶಯವಾಗಿ, ನಾವು ಇದೀಗ ಭಾರತದೊಂದಿಗೆ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ ಪ್ರಧಾನಿ ಟ್ರೂಡೋ ಅವರು, ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ದಿಲ್ಲಿ ಹೇಳಿದೆ ಎಂಬ ಮಾಧ್ಯಮ ವರದಿಯ ಬಗ್ಗೆ ಯಾವುದೇ ಟಿಪ್ಪಣಿಯನ್ನು ಅವರು ಮಾಡಲಿಲ್ಲ.

ಈ ಸುದ್ದಿಯನ್ನೂ ಓದಿ: India Canada Row: ʼಇಷ್ಟು ರಾಜತಾಂತ್ರಿಕರು ಇಲ್ಲಿ ಬೇಕಿಲ್ಲ, ವಾಪಸ್‌ ಕರೆಸಿಕೊಳ್ಳಿ!ʼ ಕೆನಡಾಕ್ಕೆ ಮತ್ತೆ ಭಾರತ ತಪರಾಕಿ

ದಿಲ್ಲಿಯ ಕ್ರಮಕ್ಕೆ ಪ್ರತಿಯಾಗಿ ಕೆನಡಾ ಸರ್ಕಾರವು, ಭಾರತೀಯ ರಾಜತಾಂತ್ರಿಕರನ್ನು ಕಿತ್ತು ಹಾಕಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಹೇಳಿದಂತೆ ನಾವು ಸಮಸ್ಯೆಯನ್ನು ಹೆಚ್ಚಿಸಲು ಹೋಗುವುದಿಲ್ಲ. ಈ ಅತ್ಯಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಕ್ರಿಕೆಟ್

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

ನೆದರ್ಲ್ಯಾಂಡ್ಸ್ ತನ್ನ ವಿಶ್ವಕಪ್ ಅಭಿಯಾನವನ್ನು (ICC World Cup 2023 ) ಅಕ್ಟೋಬರ್ 6ರಂದು ರಾಜೀವ್ ಗಾಂಧಿ ಅಂತಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಪ್ರಾರಂಭಿಸಲಿದೆ.

VISTARANEWS.COM


on

Netherlands cricket team
Koo

2023ರ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇದೆ. ತಂಡಗಳು ಈಗಾಗಲೇ ತಮ್ಮ ವಿಶ್ವಕಪ್ ಪಂದ್ಯಾವಳಿಗೆ ತಮ್ಮ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ ನೀಡುತ್ತಿವೆ. ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ರಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಯುಎಸ್ಎ, ಒಮಾನ್ ಮತ್ತು ನೇಪಾಳವನ್ನು ಸೋಲಿಸಿದ ನೆದರ್ಲ್ಯಾಂಡ್ಸ್ ಭಾರತದಲ್ಲಿ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆದಿದೆ. ಒಟ್ಟಾರೆ 50 ಓವರ್​ಗಳ ದಾಖಲೆಗೆ ಹೋಲಿಸಿದರೆ ಮೆನ್ ಇನ್ ಆರೆಂಜ್ ಹಾಲಿ ವರ್ಷಗಳ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

27 ವರ್ಷಗಳ ಏಕದಿನ ಇತಿಹಾಸದಲ್ಲಿ ಈ ತಂಡ ಕೇವಲ 40 ಪಂದ್ಯಗಳನ್ನು ಗೆದ್ದಿದ್ದಾರೆ. 35.08% ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಆದಾಗ್ಯೂ, ಡಚ್ ಈ ವರ್ಷ ಆಡಿದ 14 ಏಕದಿನ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ ಮತ್ತು ಅವರ ಗೆಲುವಿನ ಶೇಕಡಾವಾರು 42.85 ಕ್ಕೆ ಏರಿಕೆಯಾಗಿದೆ.

ಏಕದಿನ ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ಅತ್ಯುತ್ತಮ ಪ್ರದರ್ಶನ

2007ರ ಏಕದಿನ ವಿಶ್ವಕಪ್​ನಲ್ಲಿ ಮೆನ್ ಇನ್ ಆರೆಂಜ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2007ರಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿದ ನೆದರ್ಲೆಂಡ್ಸ್​​ ತಂಡ 157 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತ್ತು. ಅವರು 2007 ರ ವಿಶ್ವಕಪ್ ಅನ್ನು 33.33% ಗೆಲುವಿನ ಶೇಕಡಾವಾರು ಹೊಂದಿದ್ದರು. ನಂತರದ ಆತ ತಂಡದ ಅತ್ಯುತ್ತಮ ಪ್ರದರ್ಶನವು 2003ರಲ್ಲಿ ಬಂದಿತು. ಅಲ್ಲಿ ತಮ್ಮ 6 ಪಂದ್ಯಗಳಲ್ಲಿ ಕೇವಲ 1 ಅನ್ನು ಗೆಲ್ಲಲು ಶಕ್ತಗೊಂಡಿತ್ತು.

ಇದನ್ನೂ ಓದಿ : ICC World Cup 2023 : ಕ್ರಿಕೆಟ್​ ದೇವರು ಸಚಿನ್​ಗೆ ಕ್ರಿಕೆಟ್​​ ವಿಶ್ವಕಪ್​ನ ವಿಶೇಷ ಗೌರವ

2019ರ ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ಪ್ರದರ್ಶನ

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಕೊನೆಯ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲು ನೆದರ್ಲ್ಯಾಂಡ್ಸ್ ವಿಫಲವಾಗಿತ್ತು.

2023ರ ವಿಶ್ವಕಪ್ ಟೂರ್ನಿಗೆ ನೆದರ್ಲ್ಯಾಂಡ್ಸ್ ವೇಳಾಪಟ್ಟಿ

ನೆದರ್ಲ್ಯಾಂಡ್ಸ್ ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 6 ರಂದು ಹೈದರಾಬಾದ್​​ನಲ್ಲಿ ಪಾಕಿಸ್ತಾನ ವಿರುದ್ಧ ಪ್ರಾರಂಭಿಸಲಿದೆ. ದಕ್ಷಿಣ ಆಫ್ರಿಕಾವನ್ನು (ಅಕ್ಟೋಬರ್ 17) ಎದುರಿಸಲು ಧರ್ಮಶಾಲಾಗೆ ಪ್ರಯಾಣಿಸುವ ಮೊದಲು ಮೆನ್ ಇನ್ ಆರೆಂಜ್ ಕಳೆದ ವರ್ಷದ ಫೈನಲಿಸ್ಟ್ ನ್ಯೂಜಿಲೆಂಡ್ (ಅಕ್ಟೋಬರ್ 9) ಅನ್ನು ಅದೇ ಸ್ಥಳದಲ್ಲಿ ಎದುರಿಸಲಿದೆ. ಅಂದಿನಿಂದ, ಡಚ್ ಪ್ರತಿ ಪಂದ್ಯದ ನಡುವೆ ಮೂರು ದಿನಗಳ ಅಂತರದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಡಲಿದೆ.

ನವೆಂಬರ್ 8ರಂದು ಪುಣೆಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ನವೆಂಬರ್ 12 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೌಂಡ್ ರಾಬಿನ್ ನ 45ನೇ ಮತ್ತು ಕೊನೆಯ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ.

ವೇಳಾಪಟ್ಟಿ ಇಂತಿದೆ

  • ಅಕ್ಟೋಬರ್ 6: ಪಾಕಿಸ್ತಾನ v/s ನೆದರ್ಲ್ಯಾಂಡ್ಸ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್ ಮಧ್ಯಾಹ್ನ 2.00
  • 6 ಅಕ್ಟೋಬರ್ 9 ನ್ಯೂಜಿಲೆಂಡ್ v/s ನೆದರ್ಲ್ಯಾಂಡ್ಸ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದರಾಬಾದ್ ಮಧ್ಯಾಹ್ನ 2:00
  • 16 ಅಕ್ಟೋಬರ್ 17 ದಕ್ಷಿಣ ಆಫ್ರಿಕಾ v/s ನೆದರ್ಲ್ಯಾಂಡ್ಸ್ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣ ಧರ್ಮಶಾಲಾ ಮಧ್ಯಾಹ್ನ 2:00
  • 21 ಅಕ್ಟೋಬರ್ 21 ಶ್ರೀಲಂಕಾ v/s ನೆದರ್ಲ್ಯಾಂಡ್ಸ್ ಎಕಾನಾ ಕ್ರೀಡಾಂಗಣ ಲಕ್ನೋ ಬೆಳಿಗ್ಗೆ 10:30
  • 27 ಅಕ್ಟೋಬರ್ 25 ಆಸ್ಟ್ರೇಲಿಯಾ v/s ನೆದರ್ಲ್ಯಾಂಡ್ಸ್ ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿ ಮಧ್ಯಾಹ್ನ 2:00
  • 32 ಅಕ್ಟೋಬರ್ 28 ಬಾಂಗ್ಲಾದೇಶ v/s ನೆದರ್ಲ್ಯಾಂಡ್ಸ್ ಈಡನ್ ಗಾರ್ಡನ್ಸ್ ಕೋಲ್ಕತಾ ಮಧ್ಯಾಹ್ನ 2:00
  • 35 ನವೆಂಬರ್ 3 ಅಫ್ಘಾನಿಸ್ತಾನ v/s ನೆದರ್ಲ್ಯಾಂಡ್ಸ್ ಎಕಾನಾ ಕ್ರೀಡಾಂಗಣ ಲಕ್ನೋ ಮಧ್ಯಾಹ್ನ 2:00
  • 40 ನವೆಂಬರ್ 8 ಇಂಗ್ಲೆಂಡ್ v/s ನೆದರ್ಲ್ಯಾಂಡ್ಸ್ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಪುಣೆ: ಮಧ್ಯಾಹ್ನ 2:00
  • 43 ನವೆಂಬರ್ 12 ಭಾರತ v/s ನೆದರ್ಲ್ಯಾಂಡ್ಸ್ ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಮಧ್ಯಾಹ್ನ 2:00

ತಂಡದ ಬಲಾಬಲವೇನು?

ಸಾಮರ್ಥ್ಯ : ವಿಶ್ವಕಪ್​​ನಲ್ಲಿ ನೆದರ್ಲ್ಯಾಂಡ್ಸ್ ಪ್ಲೇಯಿಂಗ್ ಇಲೆವೆನ್​​ನಲ್ಲಿ ಅತಿದೊಡ್ಡ ಶಕ್ತಿ ಅವರ ಆಲ್​​ರೌಂಡರ್​ಗಳು ಬಾಸ್ ಡಿ ಲೀಡ್, ತೇಜಾ ನಿಡಮನೂರು ಮತ್ತು ಮ್ಯಾಕ್ಸ್ ಒಡಿ ಡಚ್ಚರ ತಂಡಕ್ಕೆ ವರ. ಈ ಮೂವರನ್ನು ಹೊರತುಪಡಿಸಿ, ಅವರು ಕಾಲಿನ್ ಆಕರ್ಮ್ಯಾನ್, ಶರೀಜ್ ಅಹ್ಮದ್ ಮತ್ತು ರೋಲೊಫ್ ವ್ಯಾನ್ ಡೆರ್ ಮೆರ್ವೆ ಇದ್ದಾರೆ. ಅವರು ಆಲ್​ರೌಂಡರ್​ಗಳು. ವಿಕ್ರಮ್​ಜಿತ್​ ಸಿಂಗ್ (ಬೌಲಿಂಗ್​) ಮತ್ತು ಲೋಗನ್ ವ್ಯಾನ್ ಬೀಕ್ (ಬ್ಯಾಟ್) ಸಹ ಅರೆಕಾಲಿಕ ಆಯ್ಕೆಗಳಾಗಿ ತಂಡಕ್ಕೆ ನೆರವಾಗುತ್ತಾರೆ.

ಇದನ್ನೂ ಓದಿ : World Cup History: 2011ರ ವಿಶ್ವಕಪ್‌; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…

ದೌರ್ಬಲ್ಯ

ನೆದರ್ಲ್ಯಾಂಡ್ಸ್ ಚೆಂಡು ಮತ್ತು ಬ್ಯಾಟ್ ಎರಡರಲ್ಲೂ ಸ್ಪಿನ್ ಪಿಚ್​ಗೆ ಸೂಕ್ತವಲ್ಲ. ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ರಲ್ಲಿ, ಮೆನ್ ಇನ್ ಆರೆಂಜ್ ಶ್ರೀಲಂಕಾದ ಸ್ಪಿನ್ನರ್​ಗಳ ವಿರುದ್ಧ ಹೆಚ್ಚು ಹೆಣಗಾಡಿತ್ತು. ತಮ್ಮ 20 ವಿಕೆಟ್​ಗಳಲ್ಲಿ 11 ವಿಕೆಟ್​ಗಳನ್ನು ವನಿಂದು ಹಸರಂಗ ಮತ್ತು ಮಹೇಶ್ ತಿಕ್ಷಣಾ ಅವರಿಗೆ ಒಪ್ಪಿಸಿದ್ದರು. ವಿಶ್ವಕಪ್ ಸ್ಪಿನ್ ಸ್ನೇಹಿ ಭಾರತೀಯ ಪಿಚ್​ನಲ್ಲಿ ನಡೆಯಲಿರುವುದರಿಂದ ಡಚ್ ಬ್ಯಾಟರ್​ಗಳಿಗೆ ಯಶಸ್ಸು ಸಿಗುವ ಸಾಧ್ಯತೆಗಳು ಕಡಿಮೆ. ಆ ತಂಡದಲ್ಲಿ ಸ್ಪಿನ್ ಬೌಲಿಂಗ್ ಆಯ್ಕೆಯಾಗಿ ಇರುವುದು ಆರ್ಯನ್ ದತ್​​ ಒಬ್ಬರೇ.

ಅವಕಾಶಗಳು

ಸ್ಕಾಟ್ ಎಡ್ವರ್ಡ್ಸ್, ಲೋಗನ್ ವ್ಯಾನ್ ಬೀಕ್ ಮತ್ತು ತೇಜಾ ನಿಡಮನೂರು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆರ್ಯನ್ ದತ್, ವಿಕ್ರಮ್ಜಿತ್ ಸಿಂಗ್ ಮತ್ತು ಬಾಸ್ ಡಿ ಲೀಡ್ ಡಚ್ ತಂಡದ ಹೆಚ್ಚು ಅನುಭವಿ ಆಟಗಾರರು.

ವಿಶ್ವ ಕಪ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಅಪಾಯ

ನೆದರ್ಲ್ಯಾಂಡ್ಸ್ ತಂಡ ಸೋತರೆ ಕಳೆದುಕೊಳ್ಳಲು ಏನೂ ಇಲ್ಲ. ಅವರು ಯಶಸ್ವಿಯಾಗುತ್ತಾರೆ ಎಂಬ ಯಾವುದೇ ನಿರೀಕ್ಷೆಗಳಿಲ್ಲದೆ, ಅವರು ದುರ್ಬಲ ಪ್ರದರ್ಶನ ನೀಡಬಹುದು ಅಥವಾ ದೈತ್ಯ ಸಂಹಾರಿಯೂ ಆಗಬಹುದು. ತಮ್ಮ ಆಟಗಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಅವರು ಆಟದ ದಿನದಂದು ಎದುರಾಳಿ ತಂಡಕ್ಕೆ ಆಘಾತ ಕೊಡಬಹುದು. .

ಪ್ರಮುಖ ಆಟಗಾರರು

ನಾಯಕ ಸ್ಕಾಟ್ ಎಡ್ವರ್ಡ್ಸ್ ತಮ್ಮ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಲಿದ್ದಾರೆ. ವಿಕೆಟ್​ಕೀಪರ್ ಆಗಿ ಪರಿಸ್ಥಿತಿಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಬಾಸ್ ಡಿ ಲೀಡ್ ಅವರು ಬ್ಯಾಟ್ ಮತ್ತು ಬೌಲ್ ಎರಡರಲ್ಲೂ ಮಿಂಚಬಲ್ಲರು. ಯುವ ಲೆಗ್ ಸ್ಪಿನ್ನರ್ ಆರ್ಯನ್ ದತ್ ಸ್ಪಿನ್ ಸ್ನೇಹಿ ಭಾರತೀಯ ಪಿಚ್​ಗಳಲ್ಲಿ ಮೆರೆದಾಡಬಹುದು.

ನೆದರ್ಲ್ಯಾಂಡ್ಸ್ ತಂಡ ಪ್ರಕಟ

ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡ್, ವಿಕ್ರಮ್ಜಿತ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಆಕರ್ಮ್ಯಾನ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬಾರೆಸಿ (ವಿಕೆಟ್ ಕೀಪರ್), ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗೆಲ್ಬ್ರೆಕ್ಟ್.

Continue Reading
Advertisement
dina bhavishya
ಪ್ರಮುಖ ಸುದ್ದಿ7 mins ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Sphoorti Salu
ಸುವಚನ7 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ5 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು5 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ6 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್6 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ6 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ6 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ7 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

Top 10 news
ಟಾಪ್ 10 ನ್ಯೂಸ್7 hours ago

VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ7 mins ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

The maintenance train finally lifted Metro services as usual
ಕರ್ನಾಟಕ13 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ14 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ3 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

ಟ್ರೆಂಡಿಂಗ್‌