US Drone: ಅಮೆರಿಕದ ಡ್ರೋನ್​​ನ್ನು ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನ Vistara News
Connect with us

ವಿದೇಶ

US Drone: ಅಮೆರಿಕದ ಡ್ರೋನ್​​ನ್ನು ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನ

ಯುಎಸ್​ನ ಸ್ಟೇಟ್​ ಡಿಪಾರ್ಟ್​ಮೆಂಟ್​, ಯುಎಸ್​ನಲ್ಲಿರುವ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್​​ಗೆ ಸಮನ್ಸ್​ ನೀಡಿದೆ. ಯುರೋಪ್​ನ ರಾಜ್ಯ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್‌ಫ್ರೈಡ್ ಅವರನ್ನು ಭೇಟಿಯಾಗುವಂತೆ ತಿಳಿಸಿದೆ.

VISTARANEWS.COM


on

Russian Fighter Jet Collides With US Drone Over Black Sea
Koo

ಅಮೆರಿಕದ ಎಮ್​​ಕ್ಯೂ​​​-9 ಗುಪ್ತಚರ ಡ್ರೋನ್​​ನ್ನು (US Drone) ರಷ್ಯಾದ ಸುಖೋಯ್​-27 ಯುದ್ಧ ವಿಮಾನ (Russian Sukhoi-27 fighter jet)ವು ಹೊಡೆದು ಉರುಳಿಸಿದೆ. ಮಂಗಳವಾರ ಕಪ್ಪುಸಮುದ್ರದ ಮೇಲ್ಭಾಗ ಹಾರಾಡುತ್ತಿದ್ದ ಈ ಡ್ರೋನ್​​ ಮೇಲೆ ಮೊದಲು ಇಂಧನವನ್ನು ಸುರಿದ ರಷ್ಯಾ ಯುದ್ಧವಿಮಾನ ಬಳಿಕ ಅದಕ್ಕೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಅಮೆರಿಕ ಸೇನೆ ಮಾಹಿತಿ ನೀಡಿದೆ. ‘ರಷ್ಯಾ ಯುದ್ಧ ವಿಮಾನ ನಮ್ಮ ಡ್ರೋನ್​​ನ್ನು ಕುತಂತ್ರದಿಂದ ಮತ್ತು ಅಜಾಗರೂಕತೆಯಿಂದ ಹೊಡೆದು ಹಾಕಿದೆ. ಎಮ್​ಕ್ಯೂ-9 ಡ್ರೋನ್​ ಎದುರು ಹಲವು ಬಾರಿ ಹಾರಾಡಿದ ಸುಖೋಯ್​-27, ಅದರ ಮೇಲೆ ಇಂಧನವನ್ನು ಹಾಕಿತು. ಇಂಧನ ಹಾಕಿದರೂ ಡ್ರೋನ್​ ಕೆಳಗೆ ಬೀಳದೆ ಇದ್ದಾಗ, ಅದಕ್ಕೆ ಡಿಕ್ಕಿ ಹೊಡೆಯಿತು. ಇದು ವೃತ್ತಿಪರತೆಯೇ ಅಲ್ಲ’ ಎಂದು ಯುಎಸ್​ ಸೇನೆ ಹೇಳಿದೆ.

ಮತ್ತೊಂದೆಡೆ ರಷ್ಯಾ ಈ ಆಪಾದನೆಯನ್ನು ತಳ್ಳಿಹಾಕಿದೆ. ಡ್ರೋನ್​ ಅಪಘಾತದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳಿದೆ. ‘ಯುಎಸ್​ನ ಕಣ್ಗಾವಲು ಡ್ರೋನ್​ ಕಪ್ಪುಸಮುದ್ರದ ಮೇಲ್ಭಾಗದಲ್ಲಿ ತೀಕ್ಷ್ಣವಾಗಿ ಚಲಿಸಿದ ಪರಿಣಾಮ ಹಾರಾಟದಲ್ಲಿ ನಿಯಂತ್ರಣ ಕಳೆದುಕೊಂಡಿತು. ಹೀಗಾಗಿ ಅತ್ಯಂತ ಕೆಳಭಾಗಕ್ಕೆ ಬಂದು, ಸಮುದ್ರ ನೀರಿನ ಮೇಲ್ಮೈಗೆ ಅಪ್ಪಳಿಸಿ, ಕೆಳಗೆ ಬಿದ್ದಿದೆ’ ಎಂದು ರಷ್ಯಾ ರಕ್ಷಣಾ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Signature Bank : ಅಮೆರಿಕದಲ್ಲಿ 48 ಗಂಟೆಗಳಲ್ಲಿ ಎರಡನೇ ಪ್ರಮುಖ ಬ್ಯಾಂಕ್‌ ದಿವಾಳಿ, ಮುಂದಿನ ಸರದಿ ಯಾವುದು?

ಅಷ್ಟರಲ್ಲಾಗಲೇ ಯುಎಸ್​ನ ಸ್ಟೇಟ್​ ಡಿಪಾರ್ಟ್​ಮೆಂಟ್​, ಯುಎಸ್​ನಲ್ಲಿರುವ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್​​ಗೆ ಸಮನ್ಸ್​ ನೀಡಿದೆ. ಯುರೋಪ್​ನ ರಾಜ್ಯ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್‌ಫ್ರೈಡ್ ಅವರನ್ನು ಭೇಟಿಯಾಗುವಂತೆ ತಿಳಿಸಿದೆ. ಸಮನ್ಸ್​ ಪಡೆದ ರಷ್ಯಾ ರಾಯಭಾರಿ ಅನಾಟೊಲಿ ಪ್ರತಿಕ್ರಿಯೆ ನೀಡಿ ‘ನಾವು ಯುಎಸ್​ ಮತ್ತು ರಷ್ಯಾ ಮಧ್ಯೆ ಯಾವುದೇ ರೀತಿಯ ಸಂಘರ್ಷವನ್ನೂ ಬಯಸುವುದಿಲ್ಲ’ ಎಂದಿದ್ದಾರೆ.

ಮತ್ತೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್​ ಕಿರ್ಬಿ, ‘ಡ್ರೋನ್​ ಅಪಘಾತದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳುತ್ತಿರುವ ರಷ್ಯಾದ ಮಾತನ್ನು ನಾವು ಒಪ್ಪುವುದಿಲ್ಲ. ಕೆಳಗೆ ಬಿದ್ದಿರುವ ಡ್ರೋನ್​​​ ಪತ್ತೆಗೆ ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

President of World Bank: ಭಾರತೀಯ ಮೂಲದ ಅಜಯ್ ಬಂಗಾ ವರ್ಲ್ಡ್ ಬ್ಯಾಂಕ್ ಅಧ್ಯಕ್ಷರಾಗುವುದು ಪಕ್ಕಾ!

President of World Bank: ಭಾರತೀಯ ಮೂಲದ ಅಮೆರಿಕನ್ ಅಜಯ್ ಬಂಗಾ (Ajay Banga) ಅವರು ಅವಿರೋಧವಾಗಿ ವಿಶ್ವ ಬ್ಯಾಂಕಿನ ಅಧ್ಯಕ್ಷರಾಗುವುದು ಪಕ್ಕಾ ಆಗಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಬುಧವಾರ ಕೊನೆಯ ದಿನವಾಗಿತ್ತು. ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ತಮ್ಮ ಅಭ್ಯರ್ಥಿಯನ್ನು ಹೆಸರಿಸಿಲ್ಲ.

VISTARANEWS.COM


on

Edited by

Indian Origin Ajay Banga Set To Become World Bank President
Koo

ವಾಷಿಂಗ್ಟನ್, ಅಮೆರಿಕ: ಜಗತ್ತಿನಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಪಣತೊಟ್ಟಿರುವ ವಿಶ್ವಬ್ಯಾಂಕ್(President of World Bank)ನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಮೆರಿಕನ್ ಅಜಯ್ ಬಂಗಾ (Ajay Banga) ಅವರು ಅವಿರೋಧವಾಗಿ ಆಯ್ಕೆಯಾಗುವುದು ಪಕ್ಕಾ ಆಗಿದೆ. ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಬುಧವಾರ ಕೊನೆಯ ದಿನವಾಗಿತ್ತು. ಈ ಹುದ್ದೆಗೆ ಬೇರೆ ಯಾವುದೇ ರಾಷ್ಟ್ರವು ಅರ್ಜಿ ಸಲ್ಲಿಸಿಲ್ಲ. ಹಾಗಾಗಿ, ಅಜಯ್ ಬಂಗಾ ವರ್ಲ್ಡ್ ಬ್ಯಾಂಕ್ ಪ್ರೆಸಿಡೆಂಟ್ ಆಗಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬಂಗಾ ಅವರನ್ನು ಅಮೆರಿಕದ ಪರವಾಗಿ ನಾಮನಿರ್ದೇಶನ ಮಾಡಿದ್ದರು.

ಜಗತ್ತಿನ ಬಹುತೇಕ ಟೆಕ್ ಕಂಪನಿಗಳು, ಉತ್ಪಾದನಾ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳು ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗ ಈ ಸಾಲಿಗೆ ವರ್ಲ್ಡ್ ಬ್ಯಾಂಕ್ ಕೂಡಾ ಸೇರ್ಪಡೆಯಾಗಲಿದೆ.

ಮಾಸ್ಟರ್‌ಕಾರ್ಡ್ ಇಂಕ್‌ನ ಮಾಜಿ ಸಿಇಒ ಅಜಯ್ ಬಂಗಾ ಅವರನ್ನು ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು. ವರ್ಲ್ಡ್ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರ ಕಳೆದ ವರ್ಷ ವಿಶ್ವ ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತಿದೆ. ಈ ಸ್ಥಾನಕ್ಕೆ ಸದಸ್ಯ ರಾಷ್ಟ್ರಗಳು ವ್ಯಕ್ತಿಗಳನ್ನು ಸೂಚಿಸಬಹುದಾಗಿದೆ. ಆದರೆ, ಈವರೆಗೆ ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ತಮ್ಮ ವ್ಯಕ್ತಿಯನ್ನು ಹೆಸರಿಸಲಿಲ್ಲ. ಹಾಗಾಗಿ, ಅಜಯ್ ಬಂಗಾ ಅವರು ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಆಗಿದೆ.

ಈಗ ವಿಶ್ವ ಬ್ಯಾಂಕಿನ ಅಧ್ಯಕ್ಷ ಹುದ್ದೆಯನ್ನು ತೊರೆಯುತ್ತಿರುವ ಡೇವಿಡ್ ಮಾಲ್ಪಾಸ್ ಅವರನ್ನು 2019ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ನಾಮನಿರ್ದೇಶನ ಮಾಡಿದ್ದರು. ಡೇವಿಡ್ ಮಾಲ್ಪಾಸ್ ಅವರೂ ಅವಿರೋಧವಾಗಿಯೇ ಆಯ್ಕೆಯಾಗಿದ್ದರು. ವರ್ಲ್ಡ್ ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯವಾಗಿ ಅಮೆರಿಕ ಪ್ರಜೆಗಳೇ ನಿರ್ವಹಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿದಿದೆ.

ಅಮೆರಿಕದ ಹೊರತಾಗಿ ಯಾವುದೇ ದೇಶಗಳು ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ವಿಶ್ವ ಬ್ಯಾಂಕ್ ನಿಯಮಗಳು ಸದಸ್ಯ ರಾಷ್ಟ್ರಗಳಿಗೆ ಬುಧವಾರ ಕೊನೆಯಾಗುವ ಗುಡುವಿನೊಳಗೇ ನಾಮನಿರ್ದೇಶನಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತವೆ. ಬಂಗಾ ಅವರು ಖಾಸಗಿ ವಲಯದಲ್ಲಿ, ವಿಶೇಷವಾಗಿ ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ ಸುದೀರ್ಘ ವೃತ್ತಿಜೀವನವನ್ನು ಸವೆಸಿದ್ದಾರೆ. ಕ್ಲೈಮೇಟ್ ಸೈನ್ಸ್ ಕಡೆಗೆ ತಮ್ಮ ಬದ್ಧತೆಯನ್ನುಪ್ರದರ್ಶಿಸಿರುವ ಬಂಗಾ ಅವರ ಪ್ರಕಾರ, ಬಡತನ ಮತ್ತು ಪರಿಸರ ಸಮಸ್ಯೆಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

63 ವರ್ಷದ ಬಂಗಾ ಅವರು ತಮ್ಮ ಪರವಾಗಿ ಬೆಂಬಲವನ್ನು ಕ್ರೋಡೀಕರಿಸಲು ಹೆಚ್ಚಿನ ಸಮಯವನ್ನು ಜಾಗತಿಕ ಪ್ರವಾಸದಲ್ಲಿ ಕಳೆದಿದ್ದಾರೆ. ಅವರು ಸಾಲದಾತ ಹಾಗೂ ಸಾಲ ಪಡೆಯುವ ರಾಷ್ಟ್ರಗಳನ್ನು ಪ್ರವಾಸ ಕೈಗೊಂಡು ಬೆಂಬಲ ಕೋರಿದ್ದಾರೆ. ಈ ಪೈಕಿ ಚೀನಾ, ಕೆನ್ಯಾ ಮತ್ತು ಐವೋರಿ ಕೋಸ್ಟ್, ಇಂಗ್ಲೆಂಡ್, ಬೆಲ್ಜಿಯಂ, ಪನಾಮಾ ಹಾಗೂ ಭಾರತ ಪ್ರಮುಖ ರಾಷ್ಟ್ರಗಳಾಗಿವೆ.

ಇದನ್ನೂ ಓದಿ: Ajay Banga : ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆಗೆ ಅಜಯ್‌ ಬಾಂಗಾ ಅಮೆರಿಕ ಅಭ್ಯರ್ಥಿ, ಚೀನಾ ಆಕ್ಷೇಪ

ವಾಷಿಂಗ್ಟನ್‌ ಮೂಲದ ವರ್ಲ್ಡ್ ಬ್ಯಾಂಕ್, ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ನಾಮನಿರ್ದೇಶನಕ್ಕಿರುವ ಗಡುವ ಮುಕ್ತಾಯವಾದ ಬಳಿಕ, ಸ್ಪರ್ಧಾಳಗಳನ್ನು ಬ್ಯಾಂಕ್ ಮಂಡಳಿಯು ಸಂದರ್ಶನ ಮಾಡುತ್ತದೆ. ಈ ಪ್ರಕ್ರಿಯೆ ಮೇ ತಿಂಗಳ ಆರಂಭದ ಹೊತ್ತಿಗೆ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ.

Continue Reading

ಗ್ಯಾಜೆಟ್ಸ್

Twitter: ಟ್ವಿಟರ್ ಜಾಹೀರಾತು ಆದಾಯದಲ್ಲಿ ಶೇ.89 ಕುಸಿತ! ಎಲಾನ್ ಮಸ್ಕ್‌ಗೆ ಆತಂಕ

Twitter: ಜಗತ್ತಿನ ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ಟ್ವಿಟರ್ ವೇದಿಕೆಯನ್ನು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ ಖರೀದಿಸಿದ್ದರು. ಆ ಬಳಿಕ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದರು. ಆದರೆ, ಆದಾಯದಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಕಂಡಿಲ್ಲ.

VISTARANEWS.COM


on

Edited by

Twitter Ad Revenue Drops 89
Koo

ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ 44 ಶತಕೋಟಿ ಡಾಲರ್ ‌ತೆತ್ತು ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ (Twitter) ಖರೀದಿಸಿ, ಸಂಪೂರ್ಣವಾಗಿ ಬದಲಾಯಿಸಿದ್ದರು. ಅರ್ಧಕರ್ಧ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು. ಚಂದಾದಾರಿಕೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದ ಟ್ವಿಟರ್‌ಗೆ ಏನಾದರೂ ಲಾಭವಾಯಿತೇ? ಗೊತ್ತಿಲ್ಲ, ಆದರೆ, ಟ್ವಿಟರ್ ಆದಾಯದಲ್ಲಿ ಮಾತ್ರ ಕುಂಠಿತವಾಗಿದೆ. ವರದಿಗಳ ಪ್ರಕಾರ, ಟ್ವಿಟರ್‌ಗೆ ಜಾಹೀರಾತು ಆದಾಯದಲ್ಲಿ ಶೇ.89ರಷ್ಟು ಕುಸಿತವಾಗಿದೆ(Ad Revenue). ಇದು ಎಲಾನ್ ಮಸ್ಕ್ ಅವರ ಚಿಂತೆಗೆ ಕಾರಣವಾಗಿದೆ.

ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಮೇಲೆ, ಅದರ ದೈನಿಂದನ ಬಳಕೆದಾರರಲ್ಲಿ ಹೆಚ್ಚಳವಾಗಿದೆ. ಆದರೆ, ಕಳೆದ ಅಕ್ಟೋಬರ್‌ನಿಂದ ಕಂಪನಿಯ ಆದಾಯದಲ್ಲಿ ಮಾತ್ರ ಭಾರೀ ಕುಸಿತವಾಗಿದೆ. ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಜಾಹೀರಾತು ಆದಾಯದ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಎಚ್‌ಬಿಒ, ಅಮೆಜಾನ್, ಐಬಿಎಂ ಮತ್ತು ಕೊಕೊಕೋಲಾ ಟ್ವಿಟರ್‌ನ ಪ್ರಮುಖ ಜಾಹೀರಾತು ಗ್ರಾಹಕರಾಗಿದ್ದರು. ಕಳೆದ ಫೆಬ್ರವರಿಯವರೆಗೆ, ಮಾಂಡೆಲೆಜ್ ಇಂಟರ್‌ನ್ಯಾಷನಲ್ ಇಂಕ್, ಕೊಕೊಕೋಲಾ ಕಂಪನಿ, ಮೆರ್ಕ್ ಆ್ಯಂಡ್ ಕಂಪನಿ ಮತ್ತು ಹಿಲ್ಟನ್ ವರ್ಲ್ಡ್‌ವೈಡ್ ಹೋಲ್ಡಿಂಗ್ಸ್ ಇಂಕ್, ಎಟಿ ಆ್ಯಟಿ ಇಂಕ್ ಸೇರಿದಂತೆ ಅನೇಕ ಕಂಪನಿಗಳು ಇನ್ನೂ ಟ್ವಿಟರ್‌ನಲ್ಲಿ ಜಾಹೀರಾತಿಗಾಗಿ ವೆಚ್ಚ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ.

ಇದರ ಮಧ್ಯೆಯೇ ಎಲಾನ್ ಮಸ್ಕ್ ಅವರು ಜಾಹೀರಾತುದಾರರಿಗೆ ಧೈರ್ಯ ತುಂಬಲು ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವು ನಿಯಂತ್ರಣಗಳನ್ನು ಪರಿಚಯಿಸುವ ಮೂಲಕ ಟ್ವಿಟರ್ ಜಾಹೀರಾತು ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಇದು ನಿರ್ದಿಷ್ಟ ಕೀವರ್ಡ್‌ಗಳು ಅಥವಾ ಚಿತ್ರಗಳನ್ನು ಹೊಂದಿರುವ ಟ್ವೀಟ್‌ಗಳ ಜೊತೆಗೆ ತಮ್ಮ ಜಾಹೀರಾತುಗಳು ಕಾಣಿಸಿಕೊಳ್ಳುವುದನ್ನು ತಡೆಯಲು ಮಾರಾಟಗಾರರಿಗೆ ಅವಕಾಶ ನೀಡುತ್ತದೆ. ಕಳೆದ ವರ್ಷ, ಟ್ವಿಟರ್ ಜಾಹೀರಾತುದಾರರಿಗೆ ಗಮನಾರ್ಹ ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿತು. ಇಷ್ಟಾಗಿಯೂ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ಟ್ವಿಟರ್ ವಿಫಲವಾಗಿದೆ.

ಭಾರತದಲ್ಲಿ Twitter Blue ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.!

ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ ತನ್ನ ಬ್ಲೂ ಸಬ್‌ಸ್ಕ್ರಿಪ್ಷನ್ (Twitter Blue) ಸೇವೆಯನ್ನು ಭಾರತದಲ್ಲೂ ಆರಂಭಿಸಿದೆ. ಈ ಸೇವೆ, ವೆಬ್ (Web) ಸೇರಿದಂತೆ ಐಒಎಸ್ (iOS) ಮತ್ತು ಆಂಡ್ರಾಯ್ಡ್‌ (Android) ಎರಡೂ ಸಾಧನಗಳಲ್ಲಿ ದೊರೆಯಲಿದೆ. ಟ್ವಿಟರ್ ಬ್ಲೂ ಚಂದಾದಾರರಿಗೆ ಅವರ ಪ್ರೊಫೈಲ್‌ನಲ್ಲಿ ಕೆಲವು ಇತರ ವೈಶಿಷ್ಟ್ಯಗಳೊಂದಿಗೆ ಪರಿಶೀಲಿಸಿದ ನೀಲಿ ಟಿಕ್ ಮಾರ್ಕ್ ನೀಡಲಾಗುತ್ತದೆ. ಈ ಟಿಕ್‌ ಮಾರ್ಕ್‌ ಪಡೆದ ಪ್ರೊಫೈಲ್‌ಗಳಿಗೆ ಅಧಿಕೃತೆ ಲಭ್ಯವಾಗುತ್ತದೆ.

ಒಂದು ವೇಳೆ ನೀವು, ಮೊಬೈಲ್‌ನಲ್ಲಿ ಮಾಸಿಕ ಟ್ವಿಟರ್ ಸಬ್‌ಸ್ಕ್ರಿಪ್ಷನ್ ಸೇವೆ ಆಯ್ಕೆ ಮಾಡಿಕೊಂಡರೆ, 900 ರೂ. ನೀಡಬೇಕಾಗುತ್ತದೆ. ಇದೇ ವೇಳೆ, ವೆಬ್‌ನಲ್ಲಿ ಪ್ರತಿ ತಿಂಗಳಿಗೆ 650 ರೂ. ಆಗಲಿದೆ. ಮಾಸಿಕ ಮಾತ್ರವಲ್ಲದೇ ವಾರ್ಷಿಕ ಚಂದಾದಾರಿಕೆಯನ್ನು ಭಾರತದಲ್ಲಿ ಟ್ವಿಟರ್ ನೀಡುತ್ತಿದೆ. ಅದರನ್ವಯ, ವಾರ್ಷಿಕ 6800 ರೂ. ಪಾವತಿಸಬೇಕಾಗುತ್ತದೆ. ಆಗ, ಮಾಸಿಕ ಅಂದಾಜು 566 ರೂ. ಆಗುತ್ತದೆ.

ಬ್ಲೂ ಟಿಕ್‌ನಿಂದ ಏನೇನು ಲಾಭ?

ಎಡಿಟ್ ಟ್ವೀಟ್ ಬಟನ್ ಸೌಲಭ್ಯ ದೊರೆಯಲಿದೆ
ಟ್ವೀಟ್ ಅನ್ ಡು ಮಾಡಬಹುದು
ದೀರ್ಘ ಮತ್ತು ಗುಣಾತ್ಮಕ ವಿಡಿಯೋ ಪೋಸ್ಟ್ ಮಾಡಬಹುದು
ಸಂಭಾಷಣೆಯಲ್ಲಿ ಆದ್ಯತೆ ದೊರೆಯುತ್ತದೆ
ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ, ಚಂದಾದಾರರಿಗೆ ಕಡಿಮೆ ಜಾಹೀರಾತು ಪ್ರದರ್ಶನ
ಆ್ಯಪ್ ಐಕಾನ್ ಕಸ್ಟಮೈಸ್ ಮಾಡಿಕೊಳ್ಳಬಹುದು
ಎನ್ಎಫ್‌ಟಿ ಪ್ರೊಫೈಲ್ ಪಿಕ್ಚರ್, ಥೀಮ್ಸ್
ನ್ಯಾವಿಗೇಷನ್ ಆಯ್ಕೆ ಕಸ್ಟಮೈಸ್ ಮಾಡಬಹುದು
ಸ್ಪೇಸ್ ಟ್ಯಾಬ್ ಅಕ್ಸೆಸ್, ಇದರಿಂದ ಟ್ವೀಟ್ ಅನ್ ಡು ಮಾಡಬಹುದು
ಅನ್‌ಲಿಮಿಟಿಡ್ ಬುಕ್ ಮಾರ್ಕ್ಸ್, ಫೋಲ್ಡರ್ ಕೂಡ ಬುಕ್ ಮಾರ್ಕ್ ಮಾಡಬಹುದು

Continue Reading

ವಿದೇಶ

Indian Cultural Centre: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

Indian Cultural Centre: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಕಾರ್ಯಕಾರಿ ಸಮಿತಿಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಅವಧಿಗೆ ಇವರು ಮುಂದುವರಿಯುತ್ತಿದ್ದಾರೆ. ಐಸಿಸಿ ಅಂಗಸಂಸ್ಥೆಗಳ ಅಡಿಯಲ್ಲಿ ನೋಂದಣಿಯಾಗಿರುವ ಕತಾರ್‌ನ ಕರ್ನಾಟಕ ಸಂಘದ ಪ್ರತಿನಿಧಿಯಾಗಿ ಇವರು ಚುನಾಯಿತರಾಗಿದ್ದಾರೆ.

VISTARANEWS.COM


on

Edited by

subramanya hebbagelu elected vice president of Indian Cultural Centre in Qatar for the second time in a row
Koo

ದೊಹಾ (ಕತಾರ್): ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ನೂತನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕರ್ನಾಟಕದ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಅವರು ಕತಾರ್‌ನ ಐಸಿಸಿ (Indian Cultural Centre) ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ 2023-2025 ಅವಧಿಗೆ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಂಗಸಂಸ್ಥೆಗಳ ಅಡಿಯಲ್ಲಿ ನೋಂದಣಿಯಾಗಿರುವ ಕತಾರ್‌ನ ಕರ್ನಾಟಕ ಸಂಘದ ಪ್ರತಿನಿಧಿಯಾಗಿ ಇವರು ಚುನಾಯಿತರಾಗಿದ್ದಾರೆ.

ಐಸಿಸಿ ಆಡಳಿತ ಸಮಿತಿಯ ರಚನೆಗಾಗಿ ನಡೆದ ಚುನಾವಣೆಯಲ್ಲಿ ಸಾವಿರಾರು ಸದಸ್ಯರು ಆನ್‌ಲೈನ್‌ “ಡಿಜಿಪೋಲ್“ ತಂತ್ರಾಂಶದ ಮೂಲಕ ತಮ್ಮ ಮತವನ್ನು ಚಲಾಯಿಸಿದ್ದರು. ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸುಬ್ರಹ್ಮಣ್ಯ ಅವರು ಜನರ ಸೇವೆಗೆ ಹೆಸರುವಾಸಿಯಾಗಿ ಈ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್‌ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!

ಒಂದೂವರೆ ದಶಕದಿಂದ ಕತಾರ್‌ನಲ್ಲಿ ಕಾರ್ಯನಿಮಿತ್ತ ನೆಲೆಸಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಳೆದ ಒಂದು ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕೊರೊನಾ ಕಾಲದಲ್ಲಿ ಜನರಿಗೆ ಆಹಾರದ ಸಾಮಗ್ರಿ ಹಾಗೂ ಊಟದ ವ್ಯವಸ್ಥೆ, ಒಂದೇ ಭಾರತ್ ಅಡಿಯಲ್ಲಿ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂದಿರುಗಲು ವಿಮಾನ ಸೇವೆ ಕಲ್ಪಿಸಿ ಕೊಡುವುದಕ್ಕೆ ಸಹಾಯ ಮಾಡಿದ್ದರು. ಹಾಗೆಯೇ ರಕ್ತದಾನ ಶಿಬಿರ, ಪರಿಸರ ದಿನಾಚರಣೆಗೆ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇನ್ನು ವಿವಿಧ ಕಾರಣಗಳಿಂದ ನಿಧನರಾಗುವ ಭಾರತೀಯರ ಮೃತದೇಹವನ್ನು ಕತಾರ್‌ನಿಂದ ಮಾತೃಭೂಮಿಗೆ ತ್ವರಿತ ಗತಿಯಲ್ಲಿ ತಲುಪಿಸುವುದರಲ್ಲಿ ಇವರ ಕೊಡುಗೆ ಅಪಾರ. ಕಳೆದ ಆರು ವರ್ಷಗಳಲ್ಲಿ ಇಂತಹ ನೂರಾರು ಸೇವಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಕರ್ನಾಟಕ ಸಂಘ ಕತಾರ್, ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ಐ.ಸಿ.ಸಿ) ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ | Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

ಭಾರತೀಯ ದೂತವಾಸದ ಅಧಿಕಾರಿಗಳು ಹಾಗೂ ರಾಯಭಾರಿಗಳು ಇವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ರಾಯಭಾರಿಗಳಾದ ದೀಪಕ್ ಮಿತ್ತಲ್ ಹಾಗೂ ನಿಕಟ ಪೂರ್ವ ರಾಯಭಾರಿ ಕುಮರನ್ ಅವರು ಸುಬ್ರಹ್ಮಣ್ಯ ಅವರ ಸೇವೆಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದ್ದಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಿಂದ ಇವರನ್ನು ಗೌರವಿಸಿ ಸನ್ಮಾನಿಸಿದೆ.

Continue Reading

ವಿದೇಶ

Philippine Ferry Fire: ಸಾಗರದ ಮಧ್ಯೆ ಬೆಂಕಿಯಿಂದ ಹೊತ್ತಿ ಉರಿದ ದೋಣಿ; 31 ಪ್ರಯಾಣಿಕರ ದುರ್ಮರಣ

ಅನೇಕ ಪ್ರಯಾಣಿಕರು ಕತ್ತಲಲ್ಲೇ ನೀರಿಗೆ ಹಾರಿ, ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರಿಗೆ ಮೈಯಿಗೆಲ್ಲ ಬೆಂಕಿ ಹೊತ್ತಿಕೊಂಡು, ಉರಿ ತಾಳಲಾರದೆ ನೀರಿಗೆ ಧುಮುಕಿದ್ದಾರೆ. ಅವರನ್ನೆಲ್ಲ ರಕ್ಷಣೆ ಮಾಡಲಾಗಿದೆ.

VISTARANEWS.COM


on

Edited by

Philippine ferry fire 31 died and over 200 people rescued
Koo

ಫಿಲಿಪೈನ್ಸ್​ ದೇಶದ ದಕ್ಷಿಣ ಭಾಗದ ಸಾಗರದಲ್ಲಿ ಸಂಚಾರ ಮಾಡುತ್ತಿದ್ದ, 250 ಕ್ಕೂ ಹೆಚ್ಚು ಪ್ರಯಾಣಿಕರನ್ನೊಳಗೊಂಡ ದೋಣಿ ಬೆಂಕಿ (Philippine Ferry Fire)ಯಿಂದ ಹೊತ್ತಿ ಉರಿದು, ಸುಮಾರು 31 ಮಂದಿ ಮೃತಪಟ್ಟಿದ್ದಾರೆ. ರಾತ್ರಿ ವೇಳೆ ದುರ್ಘಟನೆ ನಡೆದಿದ್ದು, ಅನೇಕ ಪ್ರಯಾಣಿಕರು ಕತ್ತಲಲ್ಲೇ ನೀರಿಗೆ ಹಾರಿ, ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರಿಗೆ ಮೈಯಿಗೆಲ್ಲ ಬೆಂಕಿ ಹೊತ್ತಿಕೊಂಡು, ಉರಿ ತಾಳಲಾರದೆ ನೀರಿಗೆ ಧುಮುಕಿದ್ದಾರೆ. ಹೀಗೆ ನೀರಿಗೆ ಜಂಪ್​ ಮಾಡಿದವರನ್ನು, ಅಲ್ಲಿನ ನೌಕಾಪಡೆ ಸಿಬ್ಬಂದಿ, ಕರಾವಳಿ ರಕ್ಷಕ ಪಡೆ ಸಿಬ್ಬಂದಿ, ಸ್ಥಳೀಯ ಮೀನುಗಾರರು ಎಲ್ಲ ಸೇರಿ ರಕ್ಷಣೆ ಮಾಡಿದ್ದಾರೆ. ಸುಮಾರು 200 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ದೋಣಿ ಲೇಡಿ ಮೇರಿ ಜಾಯ್ -3 (Lady Mary Joy 3) ಜಾಂಬೊಂಗಾ ನಗರದ ಮಿಂಡಾನೋ ದ್ವೀಪದಿಂದ, ಸುಲು ಪ್ರಾಂತ್ಯದಲ್ಲಿರುವ ಜೋಲೋ ದ್ವೀಪಕ್ಕೆ ಸಂಚಾರ ಮಾಡುತ್ತಿತ್ತು. ಇದರಲ್ಲಿ 36 ಮಂದಿ ದೋಣಿ ನಿರ್ವಹಣಾ ಸಿಬ್ಬಂದಿಯೇ ಇದ್ದರು. ಮೊದಲ ದೊಡ್ಡದಾಗಿ ಸ್ಫೋಟವುಂಟಾಯಿತು. ಬಳಿಕ ಬೆಂಕಿ ಧಗಧಗನೆ ಹೊತ್ತಿ ಉರಿಯಿತು. 35ಕ್ಕೂ ಹೆಚ್ಚು ಮಂದಿ ತಕ್ಷಣವೇ ನೀರಿಗೆ ಧುಮುಕಿದರು. ರಾತ್ರಿ 11ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದರಿಂದ, ಆ ಸಮಯದಲ್ಲಿ ಪ್ರಯಾಣಿಕರೆಲ್ಲ ನಿದ್ರಿಸುತ್ತಿದ್ದರು. ಕೆಲವರು ಆಗ ತಾನೇ ಮಲಗಿದ್ದರು. ಒಮ್ಮೆಲೇ ಏನಾಯಿತು ಎಂದು ಗೊತ್ತಾಗದೆ ದಿಗಿಲು ಬಿದ್ದರು ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿ ನಿಕ್ಸನ್ ಅಲೋಂಜೊ ತಿಳಿಸಿದ್ದಾರೆ. ಹಾಗೇ, ರಕ್ಷಣಾ ಕಾರ್ಯಾಚರಣೆ ಶುರು ಮಾಡಿದಾಗ 18 ಶವಗಳು ಸಿಕ್ಕಿದ್ದವು, ಅದೀಗ ದ್ವಿಗುಣಗೊಂಡಿದೆ. ಬಹುತೇಕ ಮೃತದೇಹಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Boat tragedy | ಗಂಗಾ ನದಿಯಲ್ಲಿ ದೋಣಿ ಮಗುಚಿ ದುರಂತ, 10 ಮಂದಿ ಕಾರ್ಮಿಕರು ನಾಪತ್ತೆ

ದೋಣಿ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ

ಹೀಗೆ ಪ್ರಯಾಣಿಕರ ದೋಣಿಯಲ್ಲಿ ಸ್ಫೋಟವಾಗಿ, ಬೆಂಕಿ ಹೊತ್ತಿದ್ದು ಬಸಿಲಾನ್ ಎಂಬ ಪ್ರಾಂತ್ಯದಲ್ಲಿ. ತಕ್ಷಣವೇ ನೌಕಾಪಡೆ, ಕರಾವಳಿ ರಕ್ಷಕ ಪಡೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದ ಹಲವು ಫೋಟೋ, ವಿಡಿಯೊಗಳನ್ನು ಬಸಿಲಾನ್ ಪ್ರಾಂತ್ಯದ ಸರ್ಕಾರವೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ. ಹಾಗೇ, ಪ್ರಮುಖ ಮಾಧ್ಯಮಗಳಿಗೂ ನೀಡಿದೆ. ಇಲ್ಲಿ ದೋಣಿ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಬಸಿಲಾನ್ ಪ್ರಾಂತ್ಯದ ನಿವಾಸಿಗಳೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ದೋಣಿಯೂ ಸಂಪೂರ್ಣ ಸುಟ್ಟುಹೋಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಫಿಲಿಪೈನ್ಸ್​ನ ರಾಜಧಾನಿ ಮನಿಲಾದ ಪೂರ್ವ ಭಾಗದಲ್ಲಿ 134 ಪ್ರಯಾಣಿಕರನ್ನು ಒಳಗೊಂಡ ದೋಣಿಯೊಂದು ಬೆಂಕಿಗೆ ಆಹುತಿಯಾಗಿತ್ತು. ಅದರಲ್ಲಿ 7 ಮಂದಿ ಮೃತಪಟ್ಟಿದ್ದರು.

Continue Reading
Advertisement
IPL 2023: A special drone show will be staged at the IPL opening ceremony
ಕ್ರಿಕೆಟ್10 mins ago

IPL 2023: ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ಕಂಗೊಳಿಸಲಿದೆ ವಿಶೇಷ ಡ್ರೋನ್​​ ಶೋ

shoping
ಪ್ರಮುಖ ಸುದ್ದಿ12 mins ago

Price hike : ನಾಳೆಯಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?

bjp karnataka actor shashikumar meets cm basavaraj bommai
ಕರ್ನಾಟಕ17 mins ago

BJP Karnataka: ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ತೀವ್ರಗೊಳಿಸಿದ ಚಿತ್ರನಟ ಶಶಿಕುಮಾರ್‌

Gujarat high court imposes rs 25,000 penalty on delhi CM Kejriwal
ದೇಶ24 mins ago

Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!

Ram Navami Violence erupted in West Bengal and Gujarat, 24 detained
ದೇಶ24 mins ago

Ram Navami Violence: ಗುಜರಾತ್‌, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ

Dog Tries to eat Food Shown On TV Screen Viral Video
ವೈರಲ್ ನ್ಯೂಸ್26 mins ago

Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!

siddaramaiah may contest in kolar along with varuna
ಕರ್ನಾಟಕ26 mins ago

Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್‌ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?

Two riders killed on the spot after bike collides with truck
ಕರ್ನಾಟಕ34 mins ago

Bengaluru Murder Case: ಬೆಂಗಳೂರಲ್ಲಿ ನೇಪಾಳಿ ಯುವಕನ ಕೊಲೆಗೆ ಕಾರಣವಾಯ್ತು ಗಾಂಜಾ ನಶೆ; ಹಂತಕರ ಸೆರೆ

Suicide Case updates 21 year old woman commits suicide by hanging herself
ಕರ್ನಾಟಕ39 mins ago

Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ

IPL 2023: IPL fan park after three years; Opportunity in Karnataka too
ಕ್ರಿಕೆಟ್51 mins ago

IPL 2023: ಮೂರು ವರ್ಷಗಳ ಬಳಿಕ ಐಪಿಎಲ್​ ಫ್ಯಾನ್​ ಪಾರ್ಕ್​; ಕರ್ನಾಟಕದಲ್ಲಿಯೂ ಇರಲಿದೆ ಜೋಶ್​

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ11 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ4 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ22 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!