Food Guide: ಬೆಂಗಳೂರಿನ ತಿಂಡಿಪೋತರಿಗೆ 10 ತಿಂಡಿ ಅಡ್ಡಾಗಳು! - Vistara News

ಆಹಾರ/ಅಡುಗೆ

Food Guide: ಬೆಂಗಳೂರಿನ ತಿಂಡಿಪೋತರಿಗೆ 10 ತಿಂಡಿ ಅಡ್ಡಾಗಳು!

ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.

VISTARANEWS.COM


on

food bangalore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು, ಅದೂ ಸಂಜೆಮಳೆ ಸುರಿದು ನಿಂತು ತಂಪಾದ ಗಾಳಿ ಬೀಸುತ್ತಿರಲು, ಮನೆಯೊಳಗೆ ಬಂಧಿಯಾಗಿ ಕೂರಲು ಯಾರಿಗೆ ತಾನೇ ಮನಸ್ಸಾದೀತು. ತಣ್ಣಗಿನ ಗಾಳಿಗೆ ಮೈಯೊಡ್ಡಿ ಸಂಜೆ ಗಲ್ಲಿಯೊಂದರಲ್ಲಿ ಇಷ್ಟದ್ದನ್ನು ಇಷ್ಟಪಟ್ಟವರೊಡನೆ ಕೂತು ತಿಂದರೆ ಮನಸ್ಸು ಹಗುರ, ಹೊಟ್ಟೆ ಭಾರ.

ಹಾಗಾದರೆ ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಹೆಸರಿಸುವ ಕಷ್ಟ ಯಾರಿಗೂ ಬೇಡ. ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಒಂದೊಂದು ಏರಿಯಾದಲ್ಲೇ ಕನಿಷ್ಟ ಐದಾರು ಪ್ರಸಿದ್ಧ ತಿಂಡಿ ಅಡ್ಡಾಗಳು ಖಂಡಿತ ಇದ್ದೇ ಇರುತ್ತದೆ. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.

1. ವಿವಿ ಪುರಂ ತಿಂಡಿಬೀದಿ: ಈ ಹೆಸರು ಕೇಳದವರು ಬೆಂಗಳೂರಿನಲ್ಲಿ ಇದ್ದರೆ ಅವರದ್ದೂ ಒಂದು ಜನ್ಮವಾ ಎಂದು ತಿಂಡಿಪ್ರಿಯರು ಬಾಯಿ ಬಡಕೊಂಡಾರು. ದಶಕಗಳಿಂದ ವಿವಿ ಪುರಂಗೆ ಅಂಥ ಹೆಸರು. ಜೇಬಿನಲ್ಲಿ ದುಡ್ಡಿಲ್ಲದಿದ್ರೂ, ಚಿಲ್ಲರೆ ಕಾಸು ಎಣಿಸಿಕೊಂಡು ಇಲ್ಲಿ ಬಂದರೂ ಹೊಟ್ಟೆ ಬಿರಿಯುವಷ್ಟು ತಿಂದುಕೊಂಡು ಹೋಗಬಹುದು. ಇಲ್ಲಿನ ಪೊಟೇಟೋ ಟ್ವಿಸ್ಟರ್‌, ಸಿಹಿ ಬೇಳೆ ಹೋಳಿಗೆ, ಮಸಾಲೆ ದೋಸೆ, ಶಿವಣ್ಣ ಗುಲ್ಕಂದ್‌ ಸೆಂಟರಿನ ರೋಸ್‌ ಗುಲ್ಕಂದ್‌ ಮಾತ್ರ ಮರೆಯದೆ ತಿನ್ನಲೇಬೇಕು.

2. ಶ್ರೀಸಾಗರ್-ಸಿಟಿಆರ್‌, ಮಲ್ಲೇಶ್ವರಂ: ಬಾಯಲ್ಲಿ ನೀರೂರಿಸುವ ಕ್ರಿಸ್ಪಿ ಬೆಣ್ಣೆ ಮಸಾಲೆ ದೋಸೆ ತಿನ್ನಬೇಕೆಂದರೆ ಸಿಟಿಆರ್‌ಗೆ ಭೇಟಿ ಕೊಡಲೇಬೇಕು. ಆರು ದಶಕಗಳಿಂದ ದೋಸೆಗೆ ಹೆಸರುವಾಸಿಯಾಗಿರುವ ಇಲ್ಲಿ ಇಡ್ಲಿ ವಡೆ, ಕೇಸರಿಭಾತ್‌, ಪೂರಿ ಸಾಗು ಕೂಡಾ ಚೆನ್ನಾಗಿರುತ್ತದೆ.

food bangalore

3. ಹರಿ ಸೂಪರ್‌ ಸ್ಯಾಂಡ್‌ವಿಚ್, ಜಯನಗರ: ಜಯನಗರದಲ್ಲಿ ಆ ತುದಿಯಿಂದ ಈ ತುದಿಗೆ ಅಡ್ಡಾಡಿದರೆ ತಿನ್ನಲು ಎಷ್ಟೆಲ್ಲ ಅವಕಾಶಗಳಿವೆ! ಜಯನಗರ ಮೂರನೇ ಬ್ಲಾಕಿನ ಹರಿ ಸೂಪರ್‌ ಸ್ಯಾಂಡ್‌ವಿಚ್‌ ಕೂಡಾ ಅಂಥದ್ದೇ ಒಂದು. ಇಲ್ಲಿ ಬಗೆಬಗೆಯ ಸ್ಯಾಂಡ್‌ವಿಚ್‌ಗಳೂ, ಚಾಟ್‌ಗಳೂ ದೊರೆಯುತ್ತವೆ.

4. ಖಾನ್‌ ಸಾಹೇಬ್‌ ಗ್ರಿಲ್ಸ್‌ ಅಂಡ್‌ ರೋಲ್ಸ್‌, ಇಂದಿರಾನಗರ: ಕ್ರಂಚೀ ರೋಲ್‌ಗಳು ಹಾಗೂ ಗ್ರಿಲ್‌ಗಳಲ್ಲಿ ವೈರೈಟಿ ತಿನ್ನಬೇಕಾದಲ್ಲಿ ಇಂದಿರಾನಗರ ಎರಡನೇ ಹಂತದಲ್ಲಿರುವ ಖಾನ್‌ ಸಾಹೇಬರಲ್ಲಿಗೆ ಭೇಟಿ ಕೊಡಬೇಕು. ಇಲ್ಲಿನ ಕಟಿ ರೋಲ್ಸ್‌, ಚಿಕನ್‌ ಸೀಖ್‌ ರೋಲ್‌ ಅದ್ಭುತ.

5.ಪುಚ್ಕಾಸ್‌, ಮಾರತ್‌ಹಳ್ಳಿ: ಮಾರತ್‌ ಹಳ್ಳಿಯ ಸಿಲ್ವರ್‌ ಸ್ಪ್ರಿಂಗ್‌ ಲೇಔಟ್‌ನ ಪುಚ್ಕಾಸ್‌ ಪಾನಿಪುರಿಗೆ ಹೇಳಿ ಮಾಡಿಸಿದ್ದು. ಇಲ್ಲಿನ ಪಾನಿಪುರಿಯ ಜೊತೆಗೆ ಬಿಸಿಬಿಸಿ ಜಿಲೇಬಿ ಕೂಡಾ ಎಲ್ಲರ ಹಾಟ್‌ ಫೇವರಿಟ್.‌

6. ಚಟರ್‌ ಪಟರ್‌, ಬನಶಂಕರಿ: ಚಾಟ್‌ನಲ್ಲೂ ವೆರೈಟಿ ಬೇಕೆಂದರೆ ಇಲ್ಲಿಗೆ ಬರಬೇಕು. ಬೇಲ್‌ಪುರಿ, ದಬೇಲಿ, ಬಗೆಬಗೆಯ ಫ್ಲೇವರ್ಡ್‌ ಪಾನಿಪುರಿಗಳು, ಬ್ಲ್ಯಾಕ್‌ಕರೆಂಟ್‌ ಗಪಾಗಪ್‌ ಸೇರಿದಂತೆ ತರಹೇವಾರಿ ಹೆಸರಿನ ಚಾಟ್‌ಗಳು ಇಲ್ಲಿ ಲಭ್ಯ. ಹೆಸರಿಗೆ ತಕ್ಕಂತೆ ಚಟರ್‌ ಪಟರ್!‌

food bangalore

7. ದಾದರ್‌ ವಡಾಪಾವ್, ಇಂದಿರಾನಗರ:‌ ಹೆಸರೇ ಹೇಳುವಂತೆ ಮುಂಬೈ ಶೈಲಿಯ ವಡಾಪಾವ್‌ ತಿನ್ನಬೇಕೆನಿಸಿದರೆ ಇದು ಹೇಳಿ ಮಾಡಿಸಿದ ಜಾಗ. ಇಲ್ಲಿ ಸೆಝ್ವಾನ್‌, ಆಲೂ, ಪನೀರ್‌ ಮತ್ತಿತರ ಹಲವು ಬಗೆಯ ವಡಾಪಾವ್‌ ಇವೆ. ಇಲ್ಲಿನ ಚಟ್‌ ಪಟಾ ವಡಾಪಾವ್‌, ಚಟ್ನಿ ಗ್ರಿಲ್ಡ್‌ ಸ್ಯಾಂಡ್‌ವಿಚ್‌ ಎಲ್ಲರ ಹಾಟ್‌ ಫೇವರಿಟ್.

ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್‌ ಬಗ್ಗೆ ಆನಂದ್‌ ಮಹೀಂದ್ರ ಟ್ವೀಟ್

8. ಶಾಹಿ ದರ್ಬಾರ್‌, ಯಶವಂತಪುರ: ಮತ್ತೀಕೆರೆಯ ಎಂ ಎಸ್‌ ರಾಮಯ್ಯ ಮೈದಾನದ ಪಕ್ಕದಲ್ಲೇ ಇರುವ ಶಾಹಿ ದರ್ಬಾರ್‌ ಬಗೆಬಗೆಯ ರೋಲ್‌ಗಳಿಗೆ ಫೇಮಸ್ಸು. ಎಗ್‌ ರೋಲ್‌, ವೆಜ್‌ ರೋಲ್‌, ಪನೀರ್‌ ರೋಲ್‌, ಚಿಕನ್‌ ರೋಲ್‌ ಇಲ್ಲಿನ ಕೆಲವು ತಿನ್ನಲೇಬೇಕಾದ ವೆರೈಟಿಗಳು.

9. ಆರ್‌ ಆರ್ಸ್‌ ಬ್ಲೂ ಮೌಂಟ್‌ ಅಂಡ್‌ ಬಾಂಬೆ ಸ್ಯಾಂಡ್‌ವಿಚ್, ವಸಂತನಗರ: ವಸಂತನಗರದ ಎಂಟನೇ ಮುಖ್ಯರಸ್ತೆಯಲ್ಲಿರುವ ಈ ಅಂಗಡಿಯ ಸುತ್ತಮುತ್ತ ಹಲವಾರು ಇಂಥದ್ದೇ ಬಗೆಯ ಅಂಗಡಿಗಳಿರುವುದರಿಂದ ಈ ಏರಿಯಾವನ್ನೇ ಲೋಫರ್ಸ್‌ ಲೇನ್‌ ಎಂದೂ ಕರೆಯುತ್ತಾರಂತೆ. ಇಲ್ಲಿನ ಚಿಕನ್‌ ಬೋಟ್‌, ಮೆಕ್ಸಿಕನ್‌ ಚಾಟ್‌ ಬಹಳ ರುಚಿ.

10. ಚೆಟ್ಟೀಸ್‌ ಕಾರ್ನರ್‌, ಕುಮಾರಪಾರ್ಕ್‌ ವೆಸ್ಟ್:‌ ನೀವು ಹೊಸ ತಲೆಮಾರಿನ ಸ್ಟ್ರೀಟ್‌ ಫುಡ್‌ ಪ್ರಿಯರಾದಲ್ಲಿ ಈ ಶಾಪ್‌ ನಿಮಗಾಗಿಯೇ ಇದೆ. ನಾನಾ ಪ್ರಯೋಗಗಳಿಗೆ ಸದಾ ತೆರೆದ ಮನಸ್ಸಿರುವ ಸಹೋದರರಿಬ್ಬರು ೧೯೯೭ರಲ್ಲಿ ಶುರುಮಾಡಿದ ಇದರಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯ ರುಚಿಗಳ ಸಂಗಮವಿದೆ. ಬೆಂಗಳೂರಿಗೆ ಮೊದಲ ಬಾರಿಗೆ ಪೊಟೇಟೋ ಟ್ವಿಸ್ಟರ್‌ ಪರಿಚಯಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಬನ್‌ ನಿಪ್ಪಟ್‌ ಮಸಾಲಾ, ಮಸಾಲಾ ಸೋಡಾ ಇಲ್ಲಿ ಬಲು ರುಚಿ.

ಇದನ್ನೂ ಓದಿ: Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಈ ಬಗ್ಗೆ ಜನ ಜಾಗೃತರಾಗುವುದು ಮುಖ್ಯ.

VISTARANEWS.COM


on

Steet Food
Koo

ಬೇಸಿಗೆಯ ಬಿಸಿಲಿನ ತೀವ್ರತೆ ಹಾಗೂ ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುತ್ತಿರುವಂತೆ, ಬೀದಿ ಬದಿಯ ಆಹಾರ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆಯಾಗುವ ಆಹಾರವನ್ನು ಸೇವಿಸಿ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಐಸ್ ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿದ್ದಾರೆ. ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು, ವಾಂತಿ- ಭೇದಿ ಶುರುವಾಗಿದೆ.

ಇಂಥ ಪ್ರಕರಣಗಳು ಹೆಚ್ಚುತ್ತಿವೆ; ಹೀಗಾಗಿಯೇ ಸ್ಥಳೀಯಾಡಳಿತಗಳು, ಸರ್ಕಾರದ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಿದೆ. ಬೇಸಿಗೆಯಲ್ಲಿ ಸಹಜವಾಗಿಯೇ ಹೊರಗೆ ಓಡಾಡುವವರಿಗೆ ದಾಹ ಹೆಚ್ಚು. ಈ ಸಲವಂತೂ ಧಗೆ ಇನ್ನಷ್ಟು ಹೆಚ್ಚಿದೆ. ತಣ್ಣಗೆ ಏನಾದರೂ ಸಿಕ್ಕರೆ ಕುಡಿದುಬಿಡೋಣ ಎನಿಸುತ್ತದೆ. ರಾಮನವಮಿ ಕೂಡ ಕಡುಬೇಸಿಗೆಯಲ್ಲಿ ಬರುತ್ತದೆ. ಸಾರ್ವಜನಿಕವಾಗಿ ಪಾನಕ- ಪನಿವಾರ ವಿತರಣೆ ನಡೆಯುತ್ತದೆ. ಹೆಚ್ಚಿನ ಭಕ್ತರು ಸ್ವಚ್ಛತೆಯ ಕಾಳಜಿ ವಹಿಸುತ್ತಾರಾದರೂ, ಕೆಲವೆಡೆ ಪ್ರಮಾದವಶಾತ್‌ ಅವಘಡಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಸಾರ್ವಜನಿಕವಾಗಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ವಿತರಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ಖಾಸಗಿ, ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಐಸ್‌ಕ್ರೀಮ್‌ನಂಥ ತಿಂಡಿತಿನಿಸುಗಳು ಸೇವಿಸುವಾಗ ಆಹಾ ಎನಿಸಿದರೂ, ಅದರ ಪರಿಣಾಮ ಆಮೇಲೆ ತಿಳಿಯುತ್ತದೆ. ತಣ್ಣಗೆ ಕೊರೆಯುವ ಐಸ್‌ಕ್ರೀಮ್‌ ಗಂಟಲಿನಲ್ಲಿ ಸೋಂಕು ಉಂಟುಮಾಡಬಲ್ಲದು. ಇದು ಎಲ್ಲ ಐಸ್‌ಕ್ರೀಮ್‌ಗಳಿಗೆ ಹೇಳಿದ ಮಾತಲ್ಲ. ಶುಚಿತ್ವ, ಶುದ್ಧತೆ, ಗ್ರಾಹಕರ ಆರೋಗ್ಯದ ಕಡೆಗೆ ಗಮನ ಕೊಡದ ಈಟರಿಗಳ ಬಗ್ಗೆ ಮಾತ್ರ ಈ ಮಾತನ್ನು ಹೇಳಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

ಹಾಗಾದರೆ ಸ್ಥಳೀಯಾಡಳಿತಗಳು ಸಾರ್ವಜನಿಕರ ಆರೋಗ್ಯ ಖಾತರಿಪಡಿಸಿಕೊಳ್ಳಲು ಏನು ಮಾಡಬಹುದು? ಬೀದಿ ಬದಿಯ ಈಟರಿಗಳಿಗೆ ದಿಡೀರ್‌ ದಾಳಿ ನಡೆಸಿ ಅಲ್ಲಿನ ಹೈಜೀನ್‌ ಅನ್ನು ಪರೀಕ್ಷಿಸುವುದು ಒಂದು ದಾರಿ. ಹೋಟೆಲ್‌ಗಳೂ ಈ ಹೈಜೀನ್‌ ಮಾನದಂಡಗಳನ್ನು ಅನುಸರಿಸಬೇಕು. ಸಾರ್ವಜನಿಕರೂ, ಸ್ವಚ್ಛತೆ ಕಾಪಾಡಿಕೊಳ್ಳದ ಸ್ಥಳಗಳಲ್ಲಿ ಆಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನಿಂದ ಹಾಗೂ ಆಹಾರದಿಂದ ಬಂದ ಕಾಲರಾ ಕೂಡ ಕೆಲವರಲ್ಲಿ ಕಂಡುಬಂದಿದೆ. ಸೋಂಕುಗಳು ವ್ಯಾಪಕವಾಗಿರುವ ಕಾಲದಲ್ಲಿ, ಮನೆಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಆಹಾರವೇ ಅತ್ಯುತ್ತಮ.

Continue Reading

ಲೈಫ್‌ಸ್ಟೈಲ್

Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

Nestle Company ಮಕ್ಕಳು ದೇಶದ ಸಂಪತ್ತು ಎನ್ನುತ್ತಾರೆ. ಹಾಗಾಗಿ ಅವರ ಆರೋಗ್ಯ ತುಂಬಾ ಮಹತ್ವವಾದದ್ದು. ಈಗಂತೂ ರಾಗಿ ಗಂಜಿ, ಕುಚ್ಚಲಕ್ಕಿ ಗಂಜಿ ಬದಲು ಬೆಳಿಗ್ಗೆ ಎದ್ದಾಕ್ಷಣ ದೊಡ್ಡದೊಂದು ಗ್ಲಾಸ್ ನಲ್ಲಿ ಹಾಲು ಹಾಕಿ ಅದಕ್ಕೆ ಒಂದಷ್ಟು ಮಾರುಕಟ್ಟೆಯಿಂದ ತಂದ ಪುಡಿ ಸುರಿದು ಮಕ್ಕಳ ಹೊಟ್ಟೆಯನ್ನು ತುಂಬಿಸಿಬಿಡುತ್ತಾರೆ. ಅದರಲ್ಲಿರುವ ಸಕ್ಕರೆ ಪ್ರಮಾಣ, ಕಲರ್ ಗೆ ಬಳಸಿರುವ ವಸ್ತುಗಳ ಬಗ್ಗೆ ನಮ್ಮ ಗಮನವೇ ಇಲ್ಲ. ಇದೀಗ ಸಾಕಷ್ಟು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ನೆಸ್ಲೆ ಕಂಪೆನಿಯು ಇಂತಹದ್ದೊಂದು ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದೆ.

VISTARANEWS.COM


on

Nestle Company
Koo

ಬೆಂಗಳೂರು: ನಾವು ನಮ್ಮ ಮಕ್ಕಳಿಗೆ ಯಾವುದೇ ಒಂದು ಆಹಾರವನ್ನು ನೀಡುವಾಗಲೂ ತುಂಬಾ ಎಚ್ಚರಿಕೆ ವಹಿಸುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ನೆಸ್ಲೆ ಕಂಪೆನಿಯ (Nestle Company) ಆಹಾರವನ್ನು ಕೇಳಿ ಪಡೆಯುತ್ತೇವೆ. ಯಾಕೆಂದರೆ ಇದು ವಿಶ್ವದ ಅತಿದೊಡ್ಡ ಮತ್ತು ಪ್ರಸಿದ್ಧ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿಯಾಗಿದೆ. ಆದರೆ ಈ ಕಂಪೆನಿಯ ಫುಡ್ ಅನ್ನು ಮಕ್ಕಳಿಗೆ ನೀಡಿದರೆ ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದರಲ್ಲಿ ಸಂಶಯವಿಲ್ಲ.

ಹೌದು ವಿಶ್ವದ ಅತಿದೊಡ್ಡ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿ ನೆಸ್ಲೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಗ್ರಾಹಕರ ಮತ್ತು ಶಿಶುಗಳ ಆಹಾರದಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಬಳಸುತ್ತಿದೆ ಎಂಬುದಾಗಿ ಅಧ್ಯಯನದಿಂದ ತಿಳಿದುಬಂದಿದೆಯಂತೆ. ಯುನೈಟೆಡ್ ಕಿಂಗ್ ಡಮ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೆಸ್ಲೆ ಸಕ್ಕರೆ ಮುಕ್ತ ಆಹಾರವನ್ನು ಮಾರಾಟ ಮಾಡುತ್ತಿದ್ದರೆ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ನೆಸ್ಲೆ ಮಗುವಿನ ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸುತ್ತಿದೆ ಎಂದು ಅಧ್ಯಯನ ತೋರಿಸಿದೆ.

ಜನಪ್ರಿಯವಾದ ‘ಬೋರ್ನ್ ವೀಟಾ’ ಮೇಲೆ ಭಾರತ ಸರ್ಕಾರವು ಕಠಿಣ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಅಧ್ಯಯನದ ಮೂಲಕ ತಿಳಿದುಬಂದಿದೆ.

ನೆಸ್ಲೆ ಕಂಪೆನಿ ಆಹಾರ ಉತ್ಪನ್ನಗಳ ಲೇಬಲ್ ಗಳಲ್ಲಿ ಪ್ಯಾಕೇಜಿಂಗ್, ವಿಟಮಿನ್ ಗಳು, ಖನಿಜಗಳು ಮತ್ತು ಉತ್ಪನ್ನಗಳಲ್ಲಿರುವ ಪೋಷಕಾಂಶಗಳ ವಿವರವನ್ನು ನೀಡುತ್ತಿದೆ ಆದರೆ ಉತ್ಪನ್ನಗಳಿಗೆ ಸೇರಿಸಿದ ಸಕ್ಕರೆ ಮಾಹಿತಿಯನ್ನು ಬಿಟ್ಟುಬಿಡಲಾಗಿದೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ. ಇದರಿಂದಾಗಿ ನೆಸ್ಲೆ ಕಂಪೆನಿಯ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ.

  • ನೆಸ್ಲೆ ಆಹಾರ ಉತ್ಪನ್ನಗಳಿಗೆ ಬಳಸುತ್ತಿರುವ ಸಕ್ಕರೆ ಪ್ರಮಾಣದ ಬಗ್ಗೆ ಇಲ್ಲಿದೆ ಮಾಹಿತಿ
  • ಥೈಲ್ಯಾಂಡ್ : ಒಂದು ಉತ್ಪನ್ನಕ್ಕೆ 6ಗ್ರಾಂ ಸಕ್ಕರೆ ಬಳಕೆ
  • ಇಥಿಯೋಪಿಯಾ: 5.2ಗ್ರಾಂ ಸಕ್ಕರೆ ಬಳಕೆ
  • ದಕ್ಷಿಣ ಆಫ್ರಿಕಾ: 4ಗ್ರಾಂ ಸಕ್ಕರೆ ಬಳಕೆ
  • ಪಾಕಿಸ್ತಾನ : 2.7ಗ್ರಾಂ ಸಕ್ಕರೆ ಬಳಕೆ
  • ಭಾರತ : 2.2ಗ್ರಾಂ ಸಕ್ಕರೆ ಬಳಕೆ
  • ಬಾಂಗ್ಲಾದೇಶ: 1.6ಗ್ರಾಂ ಸಕ್ಕರೆ ಬಳಕೆ
  • ಯುಕೆ, ಜರ್ಮನಿ, ಫ್ರಾನ್ಸ್ : ಶೂನ್ಯ ಸಕ್ಕರೆ ಬಳಕೆ

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಇದಕ್ಕೆ ಪ್ರತಿಕ್ರಿಯಿಸಿದ ನೆಸ್ಲೆ ಕಂಪೆನಿ ಉತ್ಪನ್ನಗಳಲ್ಲಿ ಸೇರಿಸಲಾದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ತಿಳಿಸಿದೆ. ಆದರೆ ಈ ಅಧ್ಯಯನದಿಂದ ಹೊರಬಿದ್ದ ಮಾಹಿತಿಯಿಂದಾಗಿ ನೆಸ್ಲೆ ಆಹಾರ ಉತ್ಪನ್ನಗಳ ಮಾರಾಟದಲ್ಲಿ ಹಿನ್ನೆಡೆಯನ್ನು ಎದುರಿಸುವುದು ಖಂಡಿತ ಎನ್ನಲಾಗಿದೆ. ಒಟ್ಟಾರೆ ಮಕ್ಕಳ ಜೀವದ ಜೊತೆ ಆಟವಾಡುವಂತಹ ಆಹಾರ ಉತ್ಪನ್ನಗಳ ಕಂಪನಿಯನ್ನು ಬುಡಸಹಿತ ಕಿತ್ತು ಹಾಕುವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.

Continue Reading

ಆಹಾರ/ಅಡುಗೆ

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

ಏನನ್ನಾದರೂ ದಿಢೀರನೆ ಬೇಕ್‌ ಮಾಡಬೇಕೆಂದರೆ ಬೇಕಿಂಗ್‌ ಪುಡಿಗಾಗಿ (Baking Powder) ತಡಕಾಡುತ್ತೇವೆ. ಇಡ್ಲಿ, ದೋಸೆಯ ಹಿಟ್ಟುಗಳು ಹುದುಗು ಬಾರದಿದ್ದರೆ, ಧೋಕ್ಲಾ ಬೇಗನೇ ಉಬ್ಬುವುದಕ್ಕೆ- ಹೀಗೆ ಹಲವು ತಿನಿಸುಗಳಲ್ಲಿ ಬೇಕಿಂಗ್‌ ಪುಡಿ ಬಳಕೆಯಾಗುತ್ತದೆ. ಏನಿದು ಬೇಕಿಂಗ್‌ ಪುಡಿ? ಇದರ ಇತಿಹಾಸವೇನು? ಈ ಲೇಖನ ಓದಿ.

VISTARANEWS.COM


on

Baking Powder
Koo

ಏನನ್ನಾದರೂ ಬೇಕ್‌ ಮಾಡುವ ಉದ್ದೇಶ ನಿಮಗಿದೆ ಎಂದಿಟ್ಟುಕೊಳ್ಳೋಣ. ಇಂಟರ್ನೆಟ್‌ನಲ್ಲಿ ರೆಸಿಪಿ ಹುಡುಕುತ್ತೀರಿ. ಯಾವುದೇ ಪಾಕವನ್ನು ಹುಡುಕಿದರೂ ಅದರಲ್ಲಿ ಸಾಮಾನ್ಯವಾಗಿ ಬೇಕಿಂಗ್‌ ಪೌಡರ್‌ ಹಾಕುವುದಕ್ಕೆ ಹೇಳಿರುತ್ತಾರೆ. ಭಾರತೀಯ ಅಡುಗೆ ಮನೆಗಳಲ್ಲಿ ಪರಂಪರಾಗತವಾಗಿ ಇದರ ಬಳಕೆ ಇಲ್ಲದಿದ್ದರೂ, ಆಧುನಿಕ ಅಡುಗೆಮನೆಗಳಲ್ಲಿ ಇದು ತನ್ನ ಸ್ಥಾನ ಸ್ಥಾಪಿಸಿಕೊಂಡಿದೆ. ಹೆಚ್ಚಿನ ಬೇಕಿಂಗ್‌ ವಿಧಾನಗಳು ಬೇಕಿಂಗ್‌ ಪೌಡರ್‌ (Baking Powder) ಬಳಸುವುದಕ್ಕೆ ಸೂಚಿಸುತ್ತವೆ. ಬೇಕಿಂಗ್‌ ಸೋಡಾ ಸಹ ಅಲ್ಪ ಪ್ರಮಾಣದಲ್ಲಿ ಬಳಕೆಯಾದರೂ, ಅದು ಸ್ವಚ್ಛ ಮಾಡುವುದಕ್ಕೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಬೇಕಿಂಗ್‌ ಸೋಡಾದಷ್ಟು ಪ್ರಬಲವಾದ ಶುಚಿಕಾರಕವಲ್ಲ ಬೇಕಿಂಗ್‌ ಪುಡಿ. ಏನಿದು, ಎಂದಿನಿಂದ ಇದರ ಬಳಕೆ ಪ್ರಾರಂಭವಾಯ್ತು ಎಂಬೆಲ್ಲ ಮಾಹಿತಿಗಳು ಇಲ್ಲಿವೆ.
ಹಿಟ್ಟನ್ನು ಹುದುಗು ಬರಿಸಿ ಬೇಯಿಸುವುದು ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವ ಕ್ರಮ; ಅದು ಇಡ್ಲಿ-ದೋಸೆಗಳೇ ಇರಬಹುದು, ಧೋಕ್ಲಾ-ವಡೆಗಳೇ ಆಗಬಹುದು, ಕೇಕ್‌-ಬ್ರೆಡ್‌ಗಳೇ ಇರಬಹುದು. ಈ ಹುದುಗು ಬರುವುದೆಂದರೆ ಹಿಟ್ಟಿನಲ್ಲಿ ನೈಸರ್ಗಿಕವಾಗಿ ಒಂದಿಷ್ಟು ಎನ್‌ಜೈಮುಗಳು ಸೇರಿಕೊಳ್ಳುವುದು. ಪಾಶ್ಚಾತ್ಯ ಅಡುಗೆಗಳಲ್ಲಿ ಯೀಸ್ಟ್‌ ಬಳಕೆ ಶತಮಾನಗಳಿಂದಲೂ ಇದೆ. ಆದರೆ ಅವುಗಳಲ್ಲೂ ಸಮಯ ತೆಗೆದುಕೊಳ್ಳುತ್ತದೆ. ಬ್ರೆಡ್‌ ಮಾಡುವುದಕ್ಕೆ ಯೀಸ್ಟ್‌ ಸೇರಿಸಿದಾಗ ಹಲವಾರು ತಾಸುಗಳ ಕಾಲ ಹಿಟ್ಟನ್ನು ಹುದುಗಿಸಬೇಕು, ಆ ಹಿಟ್ಟು ಉಬ್ಬಿ ಬರಬೇಕು. ಆಗಲೇ ಮೃದುವಾದ ಹತ್ತಿಯಂಥ ಬ್ರೆಡ್‌ ಮಾಡುವುದಕ್ಕೆ ಸಾಧ್ಯ. ಭಾರತೀಯ ಪಾಕಗಳಲ್ಲೂ ಹಾಗೆಯೇ. ಆದರೆ ಹಿಟ್ಟನ್ನು ನೈಸರ್ಗಿಕವಾಗಿಯೇ ಹುದುಗಿಸುವ ಕ್ರಮ ಇನ್ನೂ ಚಾಲ್ತಿಯಲ್ಲಿದೆ. ತೀರಾ ಗಡಿಬಿಡಿಯಿದ್ದರೆ ಬೇಕಿಂಗ್‌ ಪೌಡರ್‌ ಇದ್ದೇಇದೆ!

Baking soda

ಆವಿಷ್ಕಾರ ಆಗಿದ್ದೇಕೆ?

ಪಶ್ಚಿಮ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳು ತಲೆದೋರಿದವು. ಎಲ್ಲವನ್ನೂ ಬೃಹತ್‌ ಪ್ರಮಾಣದಲ್ಲಿ ಮಾಡುವ ಗೀಳು ಆರಂಭವಾಯಿತು, ಬ್ರೆಡ್‌ ಮತ್ತದರ ಸೋದರ ಸಂಬಂಧಿಗಳು ಸಹ ಈ ಪಟ್ಟಿಗೆ ಸೇರಿದವು. ಮನೆಮಂದಿಯ ಯೋಗಕ್ಷೇಮವನ್ನೇ ಕಸುಬಾಗಿ ನೆಚ್ಚಿಕೊಂಡಿದ್ದ ಮಹಿಳೆಯರು ಕೈಗಾರಿಕೆಗಳಿಗೆ ತೆರಳಿ ದುಡಿಯಲು ಆರಂಭಿಸಿದ ಮೇಲೆ, ಬೇಕರಿಗಳಿಂದ ಆಹಾರ ಖರೀದಿಸುವ ಅಗತ್ಯ ಕಂಡುಬಂತು. ಹೀಗೆ ಹೆಚ್ಚಿನ ಪ್ರಮಾಣದಲ್ಲಿ, ಕ್ಷಿಪ್ರವಾಗಿ ಬೇಕ್‌ ಮಾಡುವ ಉದ್ದೇಶ ಬೇಕಿಂಗ್‌ ಪೌಡರ್‌ ಮತ್ತು ಸೋಡಾಗಳ ಆವಿಷ್ಕಾರದ ಹಿಂದಿತ್ತು.
ಬ್ರಿಟಿಷ್‌ ದೇಶದ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್‌ ಬರ್ಡ್‌ ಎಂಬಾತ, ೧೮೪೩ರಲ್ಲಿ, ಬೇಕಿಂಗ್‌ ಪೌಡರ್‌ ಆವಿಷ್ಕರಿಸಿದ. ಬೇಕಿಂಗ್‌ ಸೋಡಾ ಮತ್ತು ಆಮ್ಲವೊಂದರ (ಟಾರ್ಟರ್‌ ಕ್ರೀಮ್‌) ಮಿಶ್ರಣಗಳು ತೇವಾಂಶ ಅಥವಾ ಉಷ್ಣತೆಯ ಸಂಪರ್ಕಕ್ಕೆ ಬಂದಾಕ್ಷಣ ಹುದುಗಲಾರಂಭಿಸುತ್ತವೆ ಎಂಬುದನ್ನು ಆತ ತೋರಿಸಿಕೊಟ್ಟ. ಹೀಗೆ ಹತ್ತೊಂಬತ್ತನೇ ಶತಮಾನದ ಹೊತ್ತಿಗೆ, ಇಂದಿನ ಕಾಲದಲ್ಲಿ ಉಪಯೋಗಿಸುತ್ತಿರುವ ಬೇಕಿಂಗ್‌ ಪುಡಿ ಸಿದ್ಧಗೊಂಡಿತು.

Baking soda

ಇಂದಿನ ದಿನಗಳಲ್ಲಿ

ಕೇವಲ ಹಿಟ್ಟನ್ನು ಹುದುಗಿಸುವುದಕ್ಕೆ ಮಾತ್ರವೇ ಬೇಕಿಂಗ್‌ ಪುಡಿ ಇಂದಿನ ದಿನಗಳಲ್ಲಿ ಸೀಮಿತಗೊಂಡಿಲ್ಲ. ಬೇಕ್‌ ಮಾಡಿದ ತಿನಿಸುಗಳು ಸರಿಯಾದ ಆಕಾರ ಹೊಂದಲು, ಅದಕ್ಕೆ ಪದರುಪದರಾದ ಮೇಲ್ಮೈ ಬರುವುದಕ್ಕೆ- ಹೀಗೆ ತಿನಿಸುಗಳು ಕಣ್ಣಿಗೂ ತಂಪೆರೆಯುವಂತೆ ಮಾಡುವುದಕ್ಕೆ ಇದು ಸಹಕಾರಿ. ಮಾತ್ರವಲ್ಲ, ಗೋದಿ ಅಥವಾ ಮೈದಾ ಬಳಸದ ಗ್ಲೂಟೆನ್‌-ಮುಕ್ತ ಬೇಕಿಂಗ್‌ನಲ್ಲೂ ಬೇಕಿಂಗ್‌ ಪುಡಿಯ ಕೊಡುಗೆ ಸಾಕಷ್ಟಿರುತ್ತದೆ. ಮೊಟ್ಟೆಯನ್ನು ಬಳಸದೆ ಬೇಕ್‌ ಮಾಡುವುದಕ್ಕೆ ಸಹ ಬೇಕಿಂಗ್‌ ಪುಡಿ ಅತ್ಯಗತ್ಯ. ಇದಲ್ಲದೆ, ಹೊಸ ರೆಸಿಪಿಗಳು ಬೇಕಿಂಗ್‌ ಪುಡಿಯನ್ನು ಬಳಸಿಕೊಂಡೇ ತಿನಿಸುಗಳ ಬಣ್ಣ, ರುಚಿ ಮತ್ತು ಮೇಲ್ನೋಟವನ್ನು ಶೋಧಿಸಲು ಯತ್ನಿಸುತ್ತಿರುವುದು ಆಸಕ್ತಿಕರ ಸಂಗತಿ.

ಇದನ್ನೂ ಓದಿ: Sugarcane Milk Benefits: ಬಿಸಿಲಲ್ಲೂ ತಾಜಾತನ ನೀಡುವ ಕಬ್ಬಿನಹಾಲು ದೇವರು ಕೊಟ್ಟ ಅಮೃತ!

Continue Reading

ಆಹಾರ/ಅಡುಗೆ

Midnight Hunger: ಮಧ್ಯರಾತ್ರಿಯ ಹಸಿವು ನಿಮ್ಮನ್ನು ಕಾಡುತ್ತಿದೆಯೆ? ಈ ಸಂಗತಿಗಳನ್ನು ಗಮನಿಸಿ

ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ (Midnight hunger) ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಆದರೆ ಇದರ ಪರಿಣಾಮ?

VISTARANEWS.COM


on

Midnight Hunger
Koo

ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಮಧ್ಯರಾತ್ರಿಯ ಹಸಿವು (Midnight hunger). ಹೌದು. ಇಡೀ ದಿನ ಒಂದು ಶಿಸ್ತುಬದ್ಧ ಆಹಾರ ಕ್ರಮದಲ್ಲಿ ದಿನ ಕಳೆದ ಮೇಲೆ, ಅದ್ಯಾಕೋ ಮಧ್ಯರಾತ್ರಿಯ ಹೊತ್ತು ಏನಾದರೂ ತಿನ್ನಬೇಕೆಂಬ ಚಪಲ ಹೆಚ್ಚುತ್ತದೆ. ಇಡೀ ದಿನದ ತಪಸ್ಸು ನೀರಿನಲ್ಲಿ ಮಾಡಿದ ಹೋಮದಂತಾಗಿಬಿಡುತ್ತದೆ. ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರೊಂದು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಇದರ ಪರಿಣಾಮ ಅನಾರೋಗ್ಯಕರ ಕುರುಕಲು ತಿನಿಸುಗಳೇ ಹೊಟ್ಟೆ ಸೇರುತ್ತದೆ. ಹಾಗಾದರೆ, ಈ ಮಧ್ಯರಾತ್ರಿಯ ತಿನ್ನುವ ಚಪಲವನ್ನು (Midnight hunger) ಮೀರುವುದು ಹೇಗೆ? ಇದರಿಂದ ಹೊರಬರುವುದು ಹೇಗೆ ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಯಸುವವರಿಗೆ ಇಲ್ಲಿ ಕೆಲವು ಸಲಹೆಗಳಿವೆ.

indian dinner

ರಾತ್ರಿಯೂಟ ಪ್ರೊಟೀನ್‌ನಿಂದ ಶ್ರೀಮಂತವಾಗಿರಲಿ

ಹೌದು. ರಾತ್ರಿಯ ಊಟವನ್ನು ಬೇಗ ಮುಗಿಸುವವರೂ ಸೇರಿದಂತೆ ಒಂದು ಬಹುಮುಖ್ಯ ಉಪಾಯವೆಂದರೆ, ರಾತ್ರಿಯ ಊಟದ ಆಯ್ಕೆ. ನಿಮ್ಮ ರಾತ್ರಿಯ ಊಟದಲ್ಲಿ ಪ್ರೊಟೀನ್‌ ಹೆಚ್ಚಿರಲಿ. ಪ್ರೊಟೀನ್‌ನಿಂದ ಕೂಡಿದ ಆಹಾರ ಹೊಟ್ಟೆ ತುಂಬಿಸಿದ ಅನುಭವ ಕೊಡುತ್ತದೆ. ಪರಿಣಾಮವಾಗಿ ಹಸಿವಾಗುವುದಿಲ್ಲವಾದ್ದರಿಂದ ತಡರಾತ್ರಿ ತಿನ್ನಬೇಕೆಂಬ ತುಡಿತ ಕಾಡುವುದಿಲ್ಲ. ಹಾಗಾಗಿ ರಾತ್ರಿಯ ಊಟವನ್ನೇ ಯೋಚಿಸಿ ಮಾಡಿ. ಆಗ ಏನೇನೋ ಹಾಳುಮೂಳು ತಡರಾತ್ರಿ ತಿನ್ನುವುದು ತಪ್ಪುತ್ತದೆ.

ಕಡಿಮೆ ತಿನ್ನಿ

ರಾತ್ರಿ ಹೀಗೆ ಪ್ರೊಟೀನ್‌ಭರಿತ ಊಟ ಮಾಡಿದರೂ ಮಧ್ಯರಾತ್ರಿ ಹಸಿವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ಏನು ಮಾಡುವುದು, ಏನಾದರೂ ತಿನ್ನದೆ ಇದ್ದರೆ ಅಸಿಡಿಟಿಯ ಸಮಸ್ಯೆ ಕೆಲವರದ್ದು. ಹೀಗಾಗಿ ಏನು ತಿನ್ನಬಹುದು, ಏನು ಮಾಡಬೇಕು ಎಂಬ ಪ್ರಶ್ನೆ ಕೆಲವರದ್ದು. ಇಂಥ ಸಂದರ್ಭ ಖಂಡಿತವಾಗಿಯೂ ತಿನ್ನಿ. ಆದರೆ ಏನು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನ ಇರಲಿ. ಜೊತೆಗೆ ಎಷ್ಟು ತಿನ್ನುತ್ತಿದ್ದೀರಿ ಎಂಬ ಗಮನವೂ ಇರಲಿ. ಹಾಗಾಗಿ ಇಂಥ ಸಂದರ್ಭ ತಿನ್ನಲಿಕ್ಕಾಗಿಯೇ ಕೆಲವು ಆರೋಗ್ಯಕರ ಆಹಾರಗಳನ್ನು ಸ್ನ್ಯಾಕ್‌ಗಳನ್ನು ಜೊತೆಗೆ ಇಟ್ಟುಕೊಂಡಿರಿ. ಅಷ್ಟೇ ಅಲ್ಲ, ಹೆಚ್ಚು ತಿನ್ನಬೇಡಿ. ಕಡಿಮೆ ಪ್ರಮಾಣದಲ್ಲಿ ತಿಂದು ಹೊಟ್ಟೆಯನ್ನು ಸಮಾಧಾನಪಡಿಸಿ.

Dry seeds

ಒಣಬೀಜಗಳು

ಹೊಟ್ಟೆಯನ್ನು ಸಮಾಧಾನಪಡಿಸುವ ಇಂತಹ ಆರೋಗ್ಯಕರ ಸ್ನ್ಯಾಕ್‌ಗಳು ಏನಿವೆ ಎಂದು ನೀವು ಕೇಳಿದರೆ, ಖಂಡಿತ ಇವೆ. ಒಣಬೀಜಗಳು ಇಂಥ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್‌ಗಳು. ಕೆಲವು ಹುರಿದ ಧಾನ್ಯಗಳು, ಒಣಬೀಜಗಳು, ಮಖಾನಾದಂತಹ ಕಡಿಮೆ ಕ್ಯಾಲರಿಯ ಸ್ನ್ಯಾಕ್‌ಗಳನ್ನು ಇಟ್ಟುಕೊಳ್ಳಬಹುದು. ಇವು ಕೇವಲ ಆರೋಗ್ಯಕರವಷ್ಟೇ ಅಲ್ಲ, ಇದರಲ್ಲಿರುವ ಕೊಬ್ಬೂ ಕೂಡಾ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಒಳ್ಳೆಯ ಕೊಬ್ಬೇ ಆಗಿದೆ. ಹೀಗಾಗಿ. ಚಿಪ್ಸ್‌, ಕುರುಕಲು, ಎಣ್ಣೆ ಪದಾರ್ಥಗಳು, ಜ್ಯೂಸ್‌ಗಳು, ಟೆಟ್ರಾ ಪ್ಯಾಕೆಟ್‌ಗಳು, ಕೆಫಿನ್‌ಯುಕ್ತ ಪೇಯಗಳು ಇತ್ಯಾದಿಗಳನ್ನು ಹೀರುವ ಅಭ್ಯಾಸವಿದ್ದರೆ ಖಂಡಿತಾ ಬಿಡಿ. ಬಹುಮುಖ್ಯವಾಗಿ ಇಂಥವನ್ನು ಖರೀದಿಸುವ ಅಭ್ಯಾಸವನ್ನೇ ಮೊದಲು ಬಿಡಿ. ಉತ್ತಮ ಆರೋಗ್ಯಕರ ಒಣಬೀಜಗಳು, ಹುರುದ ಧಾನ್ಯಗಳು ಇತ್ಯಾದಿಗಳನ್ನು ಪಕ್ಕದಲ್ಲಿಡಿ. ಕೆಲ ದಿನಗಳ ಕಾಲ ಈ ಅಭ್ಯಾಸ ಕಷ್ಟವಾಗಬಹುದು. ಆದರೆ, ಕಷ್ಟವೇನಲ್ಲ. ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯವಾಗುತ್ತದೆ.

ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

Continue Reading
Advertisement
Steet Food
ಆಹಾರ/ಅಡುಗೆ57 mins ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ1 hour ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ2 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ2 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ2 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ3 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ3 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ3 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ3 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ4 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌