Tea time: ಬಿಸಿಬಿಸಿ ಹಬೆಯಾಡುವ ಚಹಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! - Vistara News

ಆಹಾರ/ಅಡುಗೆ

Tea time: ಬಿಸಿಬಿಸಿ ಹಬೆಯಾಡುವ ಚಹಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಮಳೆಗಾಲವನ್ನು ನೆಪವಾಗಿಸಿ ಹಂಡೆಗಟ್ಟಲೆ ಚಹಾ ನೀವು ಸವಿಸವಿದು ಕುಡಿಯುವ ಮೊದಲು ಕೆಲವು ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಿ. ಮಳೆಗಾಲದಲ್ಲಿ ಮನಸ್ಸಲ್ಲೇ ಕುಣಿಯುತ್ತಾ ಚಹಾ ಮಾಡಿಕೊಳ್ಳುವಾಗ ಈ ಕೆಳಗಿನ ತಪ್ಪುಗಳನ್ನು ಮಾಡಬೇಡಿ.

VISTARANEWS.COM


on

drink in rain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಡೆಬಿಡದೆ ಸುರಿವ ಮಳೆಗೂ ಚಹಾಕ್ಕೂ (Tea time) ಗಳಸ್ಯ ಕಂಠಸ್ಯ ಸಂಬಂಧ. ಮಳೆ ಸುರಿವಾಗ ಬಿಸಿಬಿಸಿ ಮಸಾಲೆ ಚಹಾವನ್ನೋ, ಶುಂಠಿ ಹಾಕಿದ ಚಹಾವನ್ನೋ ಮಾಡಿ ಹಬೆಯಾಡುವಂತೆ ಕಪ್ಪಿನಲ್ಲಿ ಹಿಡಿದುಕೊಂಡು ಕಿಟಕಿಗೆ ತಲೆಯಾನಿಸಿ ಸುರಿವ ಮಳೆಯನ್ನೇ ನೋಡಿಕೊಂಡು ಗುಟುಕು ಗುಟುಕಾಗಿ ಚಹಾ ಹೀರುತ್ತಿದ್ದರೆ ಆ ಸುಖಕ್ಕೆ ಹೋಲಿಕೆ ಎಲ್ಲಿದೆ! ಆದರೆ, ಈ ಮಳೆಗಾಲವನ್ನು ನೆಪವಾಗಿಸಿ ಹಂಡೆಗಟ್ಟಲೆ ಚಹಾ ನೀವು ಸವಿಸವಿದು ಕುಡಿಯುವ ಮೊದಲು ಕೆಲವು ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಿ. ಮಳೆಗಾಲದಲ್ಲಿ ಮನಸ್ಸಲ್ಲೇ ಕುಣಿಯುತ್ತಾ ಚಹಾ ಮಾಡಿಕೊಳ್ಳುವಾಗ ಈ ಕೆಳಗಿನ ತಪ್ಪುಗಳನ್ನು (kitchen tips) ಮಾಡಬೇಡಿ.

೧. ಚಹಾದಲ್ಲಿ ಟ್ಯಾನಿನ್‌ ಇದೆ. ಇದು ಅತಿಯಾದರೆ, ನಮ್ಮ ದೇಹ ಕಬ್ಬಿಣಾಂಶವನ್ನು ಆಹಾರದಿಂದ ಸರಿಯಾಗಿ ಹೀರಿಕೊಳ್ಳಲು ತಡೆಯಾಗುತ್ತದೆ. ಅಷ್ಟೇ ಅಲ್ಲ, ಚಹಾದಲ್ಲಿ ಕೆಫಿನ್‌ ಇರುವುದು ಎಲ್ಲರಿಗೂ ಗೊತ್ತಿದೆ. ಅತಿಯಾದ ಕೆಫಿನ್‌ ಸೇವನೆ, ದೇಹದಲ್ಲಿರುವ ನೀರಿನಂಶವನ್ನು ಹೊರಹಾಕುತ್ತದೆ. ಇದರಿಂದ ನಿರ್ಜಲೀಕರಣದ ಸಮಸ್ಯೆ ಬರಬಹುದು. ಹಾಗಾಗಿ, ಹೊರಗೆ ವಾತಾವರಣ ಹೇಗೆಯೇ ಇರಲಿ, ಆ ಸಂತಸದ ಪರಾಕಾಷ್ಠೆಯಲ್ಲಿ ಲೀಟರುಗಟ್ಟಲೆ ಚಹಾ ಮಾಡಿಕೊಂಡು ಚೊಂಬು ತುಂಬ ಚಹಾ ಸುರಿದುಕೊಂಡು ಚಹಾ ಕುಡಿಯಬೇಡಿ. ದಿನಕ್ಕೆ ಎರಡು ಕಪ್‌ ಚಹಾಕ್ಕಿಂತ ಹೆಚ್ಚು ಕುಡಿಯುವುದು ಖಂಡಿತ ಒಳ್ಳೆಯದಲ್ಲ ಎಂಬುದನ್ನು ಸದಾಕಾಲ ನೆನಪಿಡಿ.

೨. ಚಹಾಕ್ಕೂ ಮಸಾಲೆಗೂ ಒಂದು ಅದ್ಭುತ ಬಾಂಧವ್ಯವಿದೆ ನಿಜ. ಆದರೆ, ಯಾವುದೇ ಬಾಂಧವ್ಯವೂ ಅತಿಯಾಗಬಾರದು ಅಲ್ಲವೇ? ಹಿತಮಿತವಾಗಿದ್ದರೆ ಸಿಹಿಯಾದ ಬಾಂಧವ್ಯದ ಘಮ ಸುತ್ತಲೂ ಹರಡುತ್ತದೆ. ಹಾಗೆಯೇ ಚಹಾವೂ ಕೂಡಾ. ಚಹಾಕ್ಕೆ ಮಸಾಲೆ ಚೆನ್ನಾಗಿರುತ್ತದೆ ಎಂದುಕೊಂಡು ಧಾರಾಳವಾಗಿ ಮಸಾಲೆ ಸುರಿದು ಚಹಾ ಮಾಡಬೇಡಿ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಚಹಾದ ಮಸಾಲೆಯಲ್ಲಿರುವ ಲವಂಗ, ಚೆಕ್ಕೆ, ಏಲಕ್ಕಿ, ಜಾಯಿಕಾಯಿ, ಶುಂಠಿ ಇವೆಲ್ಲ ಅತಿಯಾದರೆ ಇದರಲ್ಲಿರುವ ಉಷ್ಣ ಕೆಲವರಲ್ಲಿ ವಾತ, ಪಿತ್ತ ಅಥವಾ ಕಫದ ಸಮತೋಲನವನ್ನು ಏರುಪೇರಾಗಿಸಿ ಉದ್ರೇಕಿಸಬಹುದು ಎನ್ನುತ್ತದೆ ಆಯುರ್ವೇದ. ಹಾಗಾಗಿ, ಚಹಾಕ್ಕೆ ಮಸಾಲೆ ಹಾಕುವಾಗ, ಸ್ವಲ್ಪವೇ ಸ್ವಲ್ಪ ಹಾಕಿ. ಸರಿಯಾದ ಪ್ರಮಾಣದ ಮಸಾಲೆಯ ಘಮ ಚಹಾದೊಂದಿಗೆ ಹದವಾಗಿ ಬೆರೆತು, ಮೈಮನಕ್ಕೆ ಈ ಮಳೆಗಾಲದಲ್ಲಿ ಅದ್ಭುತ ಚೈತನ್ಯ ಕೊಡಬಹುದು. ಆದರೆ ಅತಿ ಯಾವತ್ತಿಗೂ ಒಳ್ಳೆಯದಲ್ಲ.

೩. ಬಹಳಷ್ಟು ಮಂದಿ ನಾವು ಬೆಳಗ್ಗೆ ಏಳುವಾಗಲೇ ಚಹಾದ ಕಪ್ಪು ಕೈಯಲ್ಲಿರಬೇಕು. ಇನ್ನೂ ಕೆಲವರಿಗೆ ಹಲ್ಲುಜ್ಜುವಷ್ಟು ಪುರುಸೊತ್ತೂ ಇಲ್ಲ, ಅದಕ್ಕೂ ಮೊದಲು ಹಾಸಿಗೆಗೇ ಚಹಾ ಬರಬೇಕು. ಆದರೆ, ನಿಜವಾಗಿ ನೋಡಿದರೆ ಖಾಲಿ ಹೊಟ್ಟೆಯಲ್ಲಿ ಚಹಾ ಹೊಟ್ಟೆಗಿಳಿಸುವುದು ಆರೋಗ್ಯಕರವಲ್ಲ. ಇದು ನಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯವನ್ನೇ ದುರ್ಬಲಗೊಳಿಸುತ್ತದಂತೆ. ಅದರಲ್ಲೂ ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ಮೊದಲೇ ಕೊಂಚ ದುರ್ಬಲವಾಗಿರುವುದರಿಂದ ಈ ಅಭ್ಯಾಸವಿದ್ದರೆ ಖಂಡಿತ ಮುಂದುವರಿಸಬೇಡಿ.

ಇದನ್ನೂ ಓದಿ: Benefits Of Lemongrass Tea: ನಿಂಬೆಹುಲ್ಲಿನ ಚಹಾದ ಪ್ರಯೋಜನಗಳು ಗೊತ್ತೇ?

೪. ಕೆಲವರಿಗೆ ಚಹಾಸೊಪ್ಪನ್ನು ಅಥವಾ ಪುಡಿಯನ್ನು ಬಹಳ ಹೊತ್ತಿನವರೆಗೆ ಕುದಿಸಿ ಚಹಾ ಮಾಡುವ ಅಭ್ಯಾಸವಿರುತ್ತದೆ. ಮಸಾಲೆ ಚಹಾ ಮಾಡುವಾಗ ಹೆಚ್ಚು ಹೊತ್ತು ಕುದಿಸಬೇಕು ಎಂಬುದು ಹಲವರ ಅಭಿಪ್ರಾಯ. ಆದರೆ, ಬಹಳ ಕಾಲದವರೆಗೆ ಕುದಿಸಿದರೆ ಚಹಾ ರುಚಿ ಕಹಿಗೆ ತಿರುಗುತ್ತದೆ. ಅಷ್ಟೇ ಅಲ್ಲ, ಅದರಲ್ಲಿ ಹೆಚ್ಚು ಕೆಫಿನ್‌ ಅಂಶವಿರುತ್ತದೆ. ಹಾಗಾಗಿ, ಸ್ವಲ್ಪ ಹೊತ್ತು ಕುದಿಸಿದರೆ ಸಾಕು. ತೀರಾ ಹೆಚ್ಚು ಕುದಿಸುವುದು ಒಳ್ಳೆಯದಲ್ಲ.

೫. ಊಟವಾದ ತಕ್ಷಣ ಚಹಾ ಕುಡಿವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ ಇದೂ ಕೂಡಾ ಒಳ್ಳೆಯದಲ್ಲ. ಚಹಾ ಅಸಿಡಿಕ್‌ ಆಗಿರುವುದರಿಂದ ಇದು ಜೀರ್ಣಕ್ರಿಯೆಗೆ ಉಪದ್ರವಕಾರಿಯಾಗಿದೆ. ಅಷ್ಟೇ ಅಲಲ, ಆಹಾರದಲ್ಲಿರುವ ಕಬ್ಬಿಣಾಂಶವನ್ನು ದೇಹ ಸರಿಯಾಗಿ ಹೀರಿಕೊಳ್ಳಲು ಚಹಾದಲ್ಲಿರುವ ಟ್ಯಾನಿನ್‌ ಬಿಡುವುದಿಲ್ಲ. ಹಾಗಾಗಿ ಊಟವಾದ ಮೇಲೆ ಕನಿಷ್ಠವೆಂದರೆ ಒಂದು ಗಂಟೆಯಾದರೂ ಬಿಟ್ಟು ಚಹಾ ಕುಡಿಯಿರಿ.

ಇದನ್ನೂ ಓದಿ: Health Benefits Of Rosemary Tea: ರೋಸ್‌ಮೆರಿ ಚಹಾದಿಂದ ಆರೋಗ್ಯಕ್ಕೇನು ಲಾಭ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಹಾರ/ಅಡುಗೆ

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Famous Food of bangalore: ಬೆಂಗಳೂರಿಗೆ ಹೋಗುವ ಪ್ಲ್ಯಾನ್ ಇದ್ದರೆ ಇಲ್ಲಿನ ಕೆಲವು ರುಚಿಕರವಾದ ಖಾದ್ಯವನ್ನು ಸವಿಯಲು ಮರೆಯದಿರಿ. ಹಾಗೆಯೇ ಈ ಖಾದ್ಯಗಳನ್ನು ಮನೆಯಲ್ಲೂ ತಯಾರಿಸಬಹುದು. ಆಹಾರ ಪ್ರಿಯರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Famous Food of bangalore
Koo

ಇಡ್ಲಿ (Idli), ದೋಸೆ (dose), ವಿವಿಧ ಬಗೆಯ (Famous Food of Bangalore) ರೈಸ್, ಮೈಸೂರು ಪಾಕ್ (mysore pak) ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ದಕ್ಷಿಣ ಭಾರತೀಯ (south india) ಪಾಕಪದ್ಧತಿಯು ಸುವಾಸನೆ ಮತ್ತು ವಿವಿಧ ರೆಸಿಪಿಗಳ ರುಚಿಕರ ಸವಿಯಿಂದ ತುಂಬಿರುತ್ತದೆ. ಕರಿಬೇವಿನ ಎಲೆಗಳು, ಹುಣಸೆಹಣ್ಣು, ಹಸಿರು ಮತ್ತು ಕೆಂಪು ಮೆಣಸಿನಕಾಯಿ, ತೆಂಗಿನ ಹಾಲು, ಕರಿಮೆಣಸು ಹೀಗೆ ಬಗೆಬಗೆಯ ಮಸಾಲೆಗಳು ಮತ್ತು ಗಿಡಮೂಲಿಕೆಗಳೊಂದಿಗೆ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರಿಗೆ (bengaluru) ಪ್ರಯಾಣ ಮಾಡುವ ಯೋಜನೆ ಇದ್ದರೆ ಇಲ್ಲಿನ ಕೆಲವೊಂದು ಖಾದ್ಯಗಳ (Best dish) ಸವಿಯನ್ನು ನೀವು ಪಡೆಯದೇ ಇದ್ದರೆ ಖಂಡಿತ ನಿಮ್ಮ ಪ್ರಯಾಣ ಪೂರ್ತಿ ಅಲ್ಲ. ಅಂತಹ ಖಾದ್ಯಗಳು ಯಾವುದು ಗೊತ್ತೇ? ಇಲ್ಲಿದೆ ಮಾಹಿತಿ.


ಮಂಗಳೂರು ಬಜ್ಜಿ

ಕರ್ನಾಟಕದ ಪ್ರಸಿದ್ಧ ಖಾದ್ಯಗಳು ಬೀದಿಯ ಮೂಲೆ ಮೂಲೆಯಲ್ಲಿ ಕಂಡುಬರುತ್ತದೆ. ಮಂಗಳೂರು ಬಜ್ಜಿಯನ್ನು ಅಧಿಕೃತ ಮಸಾಲೆಗಳು ಮತ್ತು ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಈ ಜನಪ್ರಿಯ ಆಹಾರವನ್ನು ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಬೆಂಗಳೂರಿನ ಮಂಗಳೂರು ಮೂಲದ ಹೋಟೆಲ್‌ಗಳಲ್ಲಿ ಈ ಬಜ್ಜಿ ಚೆನ್ನಾಗಿರುತ್ತದೆ.

ಹುಳಿ ಮೊಸರಿಗೆ ಅಕ್ಕಿ ಹಿಟ್ಟು ಮತ್ತು ಮೈದಾವನ್ನು ಬೆರೆಸುವ ಮೂಲಕ ಕರಿಬೇವು, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಸಕ್ಕರೆ, ನೀರು ಮತ್ತು ಬೇಕಿಂಗ್ ಪೌಡರ್ ಹಾಕಿ. 2 ಗಂಟೆಗಳ ಕಾಲ ಹಿಟ್ಟನ್ನು ಸಿದ್ಧಪಡಿಸಿ ಇಟ್ಟು ಬಳಿಕ ಗೋಲಿ ಬಜೆಯನ್ನು ಎಣ್ಣೆಯಲ್ಲಿ ಗರಿಗರಿಯಾಗಿ ಕೆಂಪು ಬಣ್ಣ ಬರುವವರೆಗೆ ಕರಿಯಿರಿ. ಸುವಾಸನೆಯ ರುಚಿಗಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿ.


ಬಿಸಿ ಬೇಳೆ ಬಾತ್

ಈ ಜನಪ್ರಿಯ ದಕ್ಷಿಣ-ಭಾರತೀಯ ಖಾದ್ಯವು ಇತರ ಭಕ್ಷ್ಯಗಳಂತೆ ಅಲ್ಲ. ಹಲವಾರು ದಕ್ಷಿಣ-ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮತ್ತು ರಾಜ್ಯದ ಹೊರಗೂ ಲಭ್ಯವಿದೆ. ಈ ಅಧಿಕೃತ ರೆಸಿಪಿ ನಿಜವಾಗಿಯೂ ಕರ್ನಾಟಕದ ವಿಶೇಷತೆಯಾಗಿದೆ. ಕರ್ನಾಟಕ ಶೈಲಿಯ ಬಿಸಿ ಬೇಳೆ ಬಾತ್ ಅನ್ನು ನೀವು ಮನೆಯಲ್ಲಿಯೂ ಪ್ರಯತ್ನಿಸಬಹುದು. ಬೆಂಗಳೂರಿನ ಬಹುತೇಕ ಹೋಟೆಲ್‌ಗಳಲ್ಲಿ ಇದು ಮುಖ್ಯ ಆಹಾರ.

ಅಕ್ಕಿ ಮತ್ತು ಕಡಲೆಕಾಯಿಯನ್ನು 25 ನಿಮಿಷಗಳ ಕಾಲ ನೆನೆಸಿ ಅನಂತರ ಉಪ್ಪು ಸೇರಿಸಿ. ಅಕ್ಕಿ ಮತ್ತು ಕಡಲೆಕಾಯಿಯನ್ನು ಬೇಯಿಸಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ಮುಂದೆ, ಹುಣಸೆಹಣ್ಣನ್ನು ನೆನೆಸಿ ಮತ್ತು ಅದರ ತಿರುಳನ್ನು ಹೊರತೆಗೆಯಿರಿ. ಪ್ರೆಶರ್ ಕುಕ್ ನಲ್ಲಿ ತೊಗರಿ ಬೆಳೆ, ಅರಿಶಿನ ಪುಡಿ ಮತ್ತು ನೀರು, ಎಲ್ಲಾ ಕತ್ತರಿಸಿದ ತರಕಾರಿಗಳು ಮತ್ತು ಉಪ್ಪನ್ನು ಬೆರೆಸಿ. ಈಗ, ಕುಕ್ಕರ್‌ನಲ್ಲಿ ನೆನೆಸಿದ ಅಕ್ಕಿ, ಕಡಲೆಕಾಳು, ಹಿಸುಕಿದ ದಾಲ್ ಮತ್ತು ಹುಣಸೆ ತಿರುಳನ್ನು ಸೇರಿಸಿ ಮತ್ತು ಮಸಾಲೆಯನ್ನು ತಯಾರಿಸಿ. ಬಿಸಿಬೇಳೆ ಬಾತ್ ಮಸಾಲ ಮತ್ತು ನೀರನ್ನು ಬಾಣಲೆಯಲ್ಲಿ ಹಾಕಿ ಬೇಯಿಸಿ ಕುಕ್ಕರ್‌ಗೆ ಸೇರಿಸಿ. ಅದಕ್ಕೆ ತಕ್ಕಂತೆ ಒಣಗಿದ ತೆಂಗಿನಕಾಯಿ ಮತ್ತು ಉಪ್ಪನ್ನು ಸೇರಿಸಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಲು ಮರೆಯಬೇಡಿ. ರುಚಿಕರವಾದ ತಡ್ಕಾಕ್ಕೆ ಕರಿಬೇವು, ಮರಾಠಿ ಮೊಗ್ಗು, ಇಂಗು, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಗೋಡಂಬಿ ಸೇರಿಸಿ. ಬಿಸಿಯಾಗಿ ಬಡಿಸಿ ಮತ್ತು ಹುರಿದ ಪಾಪಡ್‌ನೊಂದಿಗೆ ಸವಿಯಿರಿ.


ರಾಗಿ ಮುದ್ದೆ

ಇದು ಕರ್ನಾಟಕದ ‘ಪ್ರೋಟೀನ್ ಬೈಟ್ಸ್’ . ಇದು ಪ್ರಮುಖ ಆಹಾರವಾಗಿದೆ. ತಮಿಳುನಾಡಿನಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಈ ʼಪೌಷ್ಟಿಕ ಚೆಂಡುʼಗಳು ರೈತರನ್ನು ಹಗಲಿನಲ್ಲಿ ಚುರುಕಾಗಿ ಇರಿಸಲು ಸಹಾಯ ಮಾಡುತ್ತದೆ. ನೀವು ಈ ಗರಿಗರಿಯಾದ ಮುದ್ದೆಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬಹುದು. ಒಟ್ಟು 20 ನಿಮಿಷಗಳಲ್ಲಿ ತಯಾರಿಸಬಹುದು. ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳಲ್ಲಿ ರಾಗಿ ಮುದ್ದೆ ರುಚಿಕರವಾಗಿ ತಯಾರಿಸುತ್ತಾರೆ.

ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ಮತ್ತು ನೀರನ್ನು ಬೆರೆಸುವ ಮೂಲಕ ಪ್ರಾರಂಭಿಸಿ. ಮಿಶ್ರಣದಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಬಾಣಲೆಯಲ್ಲಿ ನೀರು, ತುಪ್ಪ ಮತ್ತು ಉಪ್ಪು ಸೇರಿಸಿ, ನೀರನ್ನು ಕುದಿಸಿ ಮತ್ತು ರಾಗಿ ಹಿಟ್ಟಿನ ಮಿಶ್ರಣವನ್ನು ಕುದಿಯುವ ನೀರಿಗೆ ಸುರಿಯಿರಿ. ದಪ್ಪವಾಗುವವರೆಗೆ ಬೇಯಿಸಿ. ಹಿಟ್ಟು ಸೇರಿಸಿ. ಅದರಲ್ಲಿ ಯಾವುದೇ ಹಿಟ್ಟಿನ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇನ್ನೊಂದು 5 ನಿಮಿಷ ಬೇಯಿಸಿ. ಮಿಶ್ರಣವನ್ನು ಪ್ಲೇಟ್ ಗೆ ವರ್ಗಾಯಿಸಿ, ಬೆರಳುಗಳಲ್ಲಿ ರಾಗಿ ಹಿಟ್ಟಿನ ಚೆಂಡುಗಳನ್ನು ಮಾಡಿ. ಯಾವುದಾದರೂ ಸಾಂಬಾರಿನೊಂದಿಗೆ ಬಡಿಸಿ.


ನೀರ್ ದೋಸೆ

ಕರ್ನಾಟದ ಪ್ರಸಿದ್ಧ ನೀರ್ ದೋಸೆ ದೋಸೆಗಳಲ್ಲೇ ವಿಶಿಷ್ಟವಾಗಿದೆ. ತೆಳುವಾದ ಈ ದೋಸೆ ಕರ್ನಾಟಕದಾದ್ಯಂತ ಜನಪ್ರಿಯ ಉಪಾಹಾರವಾಗಿದೆ. ಮುಖ್ಯವಾಗಿ ಬೆಂಗಳೂರಿನ ಕರಾವಳಿ ರೆಸ್ಟೋರೆಂಟ್‌ಗಳಲ್ಲಿ ನೀರ್‌ ದೋಸೆ ಪ್ರಮುಖ ಆಕರ್ಷಣೆಯಾಗಿದೆ. ಹಿಟ್ಟಿಗೆ ಹುದುಗುವಿಕೆಯ ಅಗತ್ಯವಿಲ್ಲ. ಮನೆಯಲ್ಲೆ ಇದನ್ನು ಸುಲಭವಾಗಿ ಮಾಡಬಹುದು.

ಅಕ್ಕಿಯನ್ನು ರಾತ್ರಿಯಿಡೀ ನೆನೆಸಿ ಅನಂತರ ನಯವಾದ ಪೇಸ್ಟ್ ಆಗಿ ರುಬ್ಬಿ. ಹಿಟ್ಟಿಗೆ ನೀರಿನ ಉಪ್ಪು ಸೇರಿಸಿ ಮತ್ತು ಬಾಣಲೆಯಲ್ಲಿ ಕೆಲವು ಹನಿ ಎಣ್ಣೆಯನ್ನು ಹಾಕಿ,. ತೆಳುವಾಗಿ ಸುರಿಯಿರಿ. ಅದನ್ನು 2 ನಿಮಿಷಗಳ ಕಾಲ ಮುಚ್ಚಳದಿಂದ ಮುಚ್ಚಿ ಮತ್ತು ದೋಸೆಯ ಬದಿಗಳು ಸುಲಭವಾಗಿ ಹೊರಬರುವವರೆಗೆ ಕಾಯಿಸಿ. ತ್ರಿಕೋನದಲ್ಲಿ ಮಡಚಿ, ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಲು ರುಚಿಯಾಗಿರುತ್ತದೆ.


ತಟ್ಟೆ ಇಡ್ಲಿ

ಈ ಪ್ರಸಿದ್ಧ ಖಾದ್ಯವು ಸಾಮಾನ್ಯ ಇಡ್ಲಿಗಳಿಗಿಂತ ದೊಡ್ಡದಾಗಿದೆ ಮತ್ತು ದಪ್ಪವಾಗಿರುತ್ತದೆ. ಬೆಂಗಳೂರು ಮತ್ತು ಮೈಸೂರು ರಾಜ್ಯ ಹೆದ್ದಾರಿಗಳ ಬಳಿ ಜನಪ್ರಿಯವಾಗಿ ಕಂಡುಬರುವ ಈ ಖಾದ್ಯವನ್ನು ನೀವು ತಟ್ಟೆ ಇಡ್ಲಿ ರೆಸ್ಟೋರೆಂಟ್‌ಗಳಲ್ಲಿ ಸವಿಯಬಹುದು. ದಕ್ಷಿಣ ಕರ್ನಾಟಕದ ಪ್ರಮುಖ ತಿಂಡಿ ಇದು.

ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿಟ್ಟು ಖಾದ್ಯವನ್ನು ತಯಾರಿಸಿ. ನಯವಾದ ಹಿಟ್ಟನ್ನು ಪಡೆಯುವವರೆಗೆ ರಾತ್ರಿ ರುಬ್ಬಿಕೊಂಡು ಇಡಿ. ಬ್ಯಾಟರ್ ಅನ್ನು ಸ್ಟೀಮರ್ ನಲ್ಲಿ ಸುರಿಯಿರಿ ಮತ್ತು 15-20 ನಿಮಿಷಗಳ ಕಾಲ ಉಗಿ ಮಾಡಿ. ನಿಮ್ಮ ಇಡ್ಲಿಯನ್ನು ಸಾಂಬಾರ್, ತೆಂಗಿನಕಾಯಿ ಚಟ್ನಿ ಅಥವಾ ಒಂದು ಕಪ್ ಕಾಫಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.


ದೊನ್ನೆ ಬಿರಿಯಾನಿ

ಈ ಜನಪ್ರಿಯ ಖಾದ್ಯವನ್ನು ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಸವಿಯಲಾಗುತ್ತದೆ. ಚಿಕನ್ ತುಂಡುಗಳನ್ನು ಸ್ವಚ್ಛಗೊಳಿಸಿ ದೊಡ್ಡ ಬಟ್ಟಲಿನಲ್ಲಿ ಅರಿಶಿನ, ಉಪ್ಪು, ನಿಂಬೆ ರಸ ಮತ್ತು ಮೊಸರು ಸೇರಿಸಿ 30 ನಿಮಿಷಗಳ ಕಾಲ ಮುಚ್ಚಿಡಿ. ಮಿಕ್ಸಿಂಗ್ ಜಾರ್‌ನಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ, ಸಂಪೂರ್ಣ ಮಸಾಲೆಗಳು, ದಾಲ್ಚಿನ್ನಿ ಕಡ್ಡಿ, ಏಲಕ್ಕಿ ಹಾಕಿ ಕುದಿಯಲು ಬಿಡಿ. ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರೈಸ್ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಚ್ಚಳದಿಂದ ಮುಚ್ಚಿ. ಬಾಣಲೆಯಲ್ಲಿ ನೀರನ್ನು ಕುದಿಸಿ ಮತ್ತು ಕಡಾಯಿಯ ಮುಚ್ಚಳದ ಮೇಲೆ ಇರಿಸಿ, ಮೇಲಿನಿಂದ ಶಾಖವನ್ನು ಒದಗಿಸಲು ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ನಿಮ್ಮ ದೊನ್ನೆ ಬಿರಿಯಾನಿ ಸಿದ್ಧವಾಗಿದೆ. ಹುರಿದ ಪಾಪಡ್ ಅಥವಾ ಧನಿಯಾ ರೈತಾದೊಂದಿಗೆ ಬಡಿಸಿ ಮತ್ತು ಆನಂದಿಸಿ.


ಮೈಸೂರು ಪಾಕ್

ದಕ್ಷಿಣ ಭಾರತೀಯ ಈ ಸಿಹಿತಿಂಡಿಯು ಅತ್ಯಂತ ಜನಪ್ರಿಯವಾಗಿದೆ. ಇದು ರುಚಿಕರವಾಗಿರುತ್ತದೆ. ಬೆಂಗಳೂರಿನ ಪ್ರಮುಖ ಬೇಕರಿಗಳಲ್ಲಿ ಉತ್ತಮ ದರ್ಜೆಯ ಮೈಸೂರ್‌ ಪಾಕ್‌ ಸಿಗುತ್ತದೆ. ನೀವು ಇದನ್ನು ಒಟ್ಟು 40 ನಿಮಿಷಗಳಲ್ಲಿ ಮಾಡಬಹುದು.

ಇದನ್ನೂ ಓದಿ: Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ದೊಡ್ಡ ಬಟ್ಟಲಿಗೆ ಬೆಸನ್ ಸೇರಿಸುವ ಮೂಲಕ ಪ್ರಾರಂಭಿಸಿ. ಕಡಾಯಿಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಸುರಿಯಿರಿ, ಹಿಟ್ಟನ್ನು 3 ಭಾಗಗಳಾಗಿ ವಿಂಗಡಿಸಲು ಮರೆಯಬೇಡಿ. ನೀರಿಗೆ ಸಕ್ಕರೆಯನ್ನು ಸೇರಿಸುವ ಮೂಲಕ ಸಕ್ಕರೆ ಪಾಕವನ್ನು ತಯಾರಿಸಿ. ಸಕ್ಕರೆ ಪಾಕಕ್ಕೆ ಹಿಟ್ಟಿನ ಸ್ವಲ್ಪ ಭಾಗವನ್ನು ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಹಿಟ್ಟಿನ ಇನ್ನೊಂದು ಭಾಗವನ್ನು ಸೇರಿಸಿ ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸಿ. ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಬಿಸಿ ಮಾಡಿದ ಎಣ್ಣೆ ಮತ್ತು ತುಪ್ಪವನ್ನು ಬಾಣಲೆಗೆ ಸೇರಿಸಿ. ಮಿಶ್ರಣವು ತುಪ್ಪವನ್ನು ಹೀರಿಕೊಂಡ ಬಳಿಕ ಮಿಶ್ರಣವು ದಪ್ಪವಾಗಲು ಪ್ರಾರಂಭಿಸುತ್ತದೆ. ಈ ಮೈಸೂರು ಪಾಕ್ ನ ಮಿಶ್ರಣವನ್ನು ತುಪ್ಪ ಸವರಿದ ಬಾಣಲೆಗೆ ವರ್ಗಾಯಿಸಿ ಐದು ನಿಮಿಷಗಳ ಬಳಿಕ ತುಂಡುಗಳಾಗಿ ಕತ್ತರಿಸಿ ಸವಿಯಿರಿ.

Continue Reading

ಪ್ರಮುಖ ಸುದ್ದಿ

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Hyderabadi Biryani :: ಸ್ಟಾರ್ ಸ್ಪೋರ್ಟ್ಸ್​​ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್​ಗೆ ಭೇಟಿ ನೀಡಿ ಮತ್ತು ಬಿರಿಯಾನಿ ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್​​ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್​ಆರ್​ಎಚ್ ತಂಡದ ​​ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್​ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್​​ಗೆ ಪರಿಚಯಿಸಿದರು.

VISTARANEWS.COM


on

Hyderabadi Biryani
Koo

ಹೈದರಾಬಾದ್​​: ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಅವರ ಮಗಳು ಗ್ರೇಸ್ ಹೈದರಾಬಾದ್​ನಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಾ ಮೋಜಿನ ದಿನವನ್ನು ಕಳೆಯುತ್ತಿದ್ದಾರೆ. ವೃತ್ತಿಯಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಗ್ರೇಸ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್​​ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್​ಗೆ ಭೇಟಿ ನೀಡಿ ಮತ್ತು ಬಿರಿಯಾನಿ (Hyderabadi Biryani) ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್​​ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್​ಆರ್​ಎಚ್ ತಂಡದ ​​ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್​ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್​​ಗೆ ಪರಿಚಯಿಸಿದರು.

“ಹೈದರಾಬಾದ್ನಲ್ಲಿ ಬಿರಿಯಾನಿ ಒಂದು ಭಾವನೆ! @SunRisers ಅಭಿಮಾನಿಗಳೊಂದಿಗೆ ಅಪ್ರತಿಮ ಹೈದರಾಬಾದಿ ಬಿರಿಯಾನಿ ತಿನ್ನುವಾಗ ಐತಿಹಾಸಿಕ ಹೈದರಾಬಾದ್​ ನಗರದ ಸಾರವನ್ನು #GraceHayden ಅನುಭವಿಸಿದ್ದಾರೆ” ಎಂದು ಸ್ಟಾರ್ ಸ್ಪೋರ್ಟ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳಲ್ಲಿ ವೈರಲ್ ಆಗಿರುವ ವೀಡಿಯೊಗೆ ಶೀರ್ಷಿಕೆ ನೀಡಿದೆ.

ಕೆಲವು ವಾರಗಳ ಹಿಂದೆ, ಎಸ್ಆರ್​ಎಚ್​ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್ ಬಿರಿಯಾನಿ ಸವಿದಿದ್ದರು. ಕಮಿನ್ಸ್ ಮತ್ತು ಅವರ ಕುಟುಂಬ ಹೈದರಾಬಾದ್​​ನ ಬಂಜಾರಾ ಹಿಲ್ಸ್​ನಲ್ಲಿರುವ ಸದರ್ನ್ ಮಿರ್ಚಿ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದರು.

ಗುರುವಾರ, ಕಮಿನ್ಸ್ ನೇತೃತ್ವದ ಎಸ್ಆರ್​ಎಚ್ಗು ಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ರದ್ದಾದ ನಂತರ ಐಪಿಎಲ್ 2024ರ ಪ್ಲೇಆಫ್​ನಲ್ಲಿ ಸ್ಥಾನ ಪಡೆದ ಮೂರನೇ ತಂಡ ಎನಿಸಿಕೊಂಡಿತು.

ಇದನ್ನೂ ಓದಿ: Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

ಎಸ್ಆರ್​ಎಚ್​​ ಈಗಾಗಲೇ ಅರ್ಹತೆ ಪಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಜತೆ ಪ್ಲೇಆಫ್​ ಪಟ್ಟಿಯಲ್ಲಿ ಸೇರಿಕೊಂಡಿದೆ. ನಾಲ್ಕನೇ ಮತ್ತು ಅಂತಿಮ ಪ್ಲೇಆಫ್ ಸ್ಥಾನ ಶನಿವಾರ ಸಂಜೆ ನಿರ್ಧಾರಗೊಳ್ಳಲಿದೆ. ಸಿಎಸ್ಕೆ, ಆರ್​ಸಿಬಿ ತಂಡಗಳು ಪ್ರಸ್ತುತ ಸ್ಪರ್ಧೆಯಲ್ಲಿವೆ.

Continue Reading

ವಿದೇಶ

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

MDH, Everest Spices: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳನ್ನು ನೇಪಾಳ ನಿಷೇಧಿಸಿದೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

VISTARANEWS.COM


on

MDH, Everest Spices
Koo

ಕಾಠ್ಮಂಡುಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ನೇಪಾಳ ನಿಷೇಧಿಸಿದೆ. ಈ ಹಿಂದೆ ಇದೇ ಕಾರಣಕ್ಕೆ ಈ ಉತ್ಪನ್ನಗಳನ್ನು ಸಿಂಗಾಪುರ, ಹಾಂಕಾಂಗ್‌ ಮುಂತಾದೆಡೆ ಬ್ಯಾನ್‌ ಮಾಡಲಾಗಿತ್ತು. ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಥಿಲೀನ್ ಆಕ್ಸೈಡ್ (Ethylene Oxide) ಅಂಶ ಇದೆ ಎನ್ನುವ ದೂರು ಕೇಳಿ ಬಂದ ಕಾರಣಕ್ಕೆ ಈ ಉತ್ಪನ್ನಗಳ ಆಮದು, ಮಾರಾಟ ಮತ್ತು ಬಳಕೆಯನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ನಿರ್ದಿಷ್ಟ ಬ್ರ್ಯಾಂಡ್‌ಗಳ ಮಸಾಲೆಗಳಲ್ಲಿನ ರಾಸಾಯನಿಕಗಳ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

“ಹಾಂಗ್‌ಕಾಂಗ್ ಮತ್ತು ಸಿಂಗಾಪುರ್ ಈಗಾಗಲೇ ಈ ಉತ್ಪನ್ನಗಳಿಗೆ ನಿಷೇಧ ಹೇರಿವೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ನಾವು ಕೂಡ ಪರೀಕ್ಷೆ ನಡೆಸಲು ಮುಂದಾಗಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ. ಈ ಮಧ್ಯೆ ರಫ್ತಾಗುವ ಭಾರತೀಯ ಮಸಾಲೆಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸ್ಪೈಸ್ ಮಂಡಳಿ ಕ್ರಮ ಕೈಗೊಂಡಿದೆ. ಮಂಡಳಿ ಟೆಕ್ನೋ-ಸೈಂಟಿಫಿಕ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದಿದೆ. ಜತೆಗೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ.

ಅಖಿಲ ಭಾರತ ಸಾಂಬಾರ ಪದಾರ್ಥಗಳ ರಫ್ತುದಾರರ ವೇದಿಕೆ ಮತ್ತು ಭಾರತೀಯ ಮಸಾಲೆ ಮತ್ತು ಆಹಾರ ಪದಾರ್ಥ ರಫ್ತುದಾರರ ಸಂಘದಂತಹ 130ಕ್ಕೂ ಹೆಚ್ಚು ಸಂಘಗಳೊಂದಿಗೆ ಭಾರತೀಯ ಸ್ಪೈಸ್ ಮಂಡಳಿ ಸಮಾಲೋಚನೆಯನ್ನೂ ನಡೆಸಿದೆ. ಮಂಡಳಿಯು ಎಲ್ಲ ರಫ್ತುದಾರರಿಗೆ ಎಥಿಲೀನ್ ಆಕ್ಸೈಡ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Continue Reading

ಆಹಾರ/ಅಡುಗೆ

Milk Products: ಹಾಲು, ಹಾಲಿನ ಉತ್ಪನ್ನ ಸೇವಿಸಿದರೆ ಲಾಭವೋ ನಷ್ಟವೋ?

ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ (Milk products) ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು (Dairy products) ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಹಾಲು ಸೇವನೆಯ ಲಾಭ ನಷ್ಟಗಳೇನು?

VISTARANEWS.COM


on

Milk Products
Koo

ನಿತ್ಯಾಹಾರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ (Milk products) ಸೇವನೆ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಂತೂ ಬಹಳ ಸಾಮಾನ್ಯ. ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇನ್ನೂ ಕೆಲವರಿಗೆ, ಹಾಲಿನಲ್ಲಿ ಇರುವ ಲ್ಯಾಕ್ಟೋಸ್‌ ಕಾರಣದಿಂದಲೂ ಕೆಲವರು ಹಾಲಿನ ಉತ್ಪನ್ನಗಳನ್ನು ಬಿಡುವುದುಂಟು. ಆದರೆ ಇದರಿಂದ ಲಾಭಗಳೂ ಇವೆ, ನಷ್ಟವೂ ಇವೆ. ಬನ್ನಿ, ಲ್ಯಾಕ್ಟೋಸ್‌ ರಹಿತ ಆಹಾರ ಸೇವನೆಯಿಂದ ಆಗುವ ಲಾಭ ನಷ್ಟಗಳನ್ನು ಗಮನಿಸೋಣ.

Health Tips Kannada Stay away from these foods to get rid of acne

ಮೊಡವೆ ನಿವಾರಣೆ

ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗಬಹುದು. ಕೆಲವು ಮಂದಿಗೆ ಹಾಲಿನ ಉತ್ಪನ್ನ ಸೇವನೆಯಿಂದ ಚರ್ಮ ಎಣ್ಣೆಯುಕ್ತವಾಗುವುದರಿಂದ ಮೊಡವೆಗಳುಂಟಾಗುತ್ತವೆ. ಹೀಗಾಗಿ ಕೆಲವರಿಗೆ ಹಾಲು ಹಾಗೂ ಹಾಲಿನ ಉತ್ಪನ್ನ ಬಿಟ್ಟ ಕೂಡಲೇ, ಚರ್ಮದ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ.

Weight Loss

ತೂಕ ಇಳಿಕೆ

ತೂಕ ಇಳಿಸಬೇಕು ಎಂದು ಬಯಸುವ ಮಂದಿಯೂ ಹಾಲಿನ ಉತ್ಪನ್ನಗಳಿಗೆ ಗುಡ್‌ಬೈ ಹೇಳುತ್ತಾರೆ. ಲ್ಯಾಕ್ಟೋಸ್‌ನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದನ್ನು ಬಿಟ್ಟ ಕೂಡಲೇ, ಸಹಜವಾಗಿಯೇ ತೂಕದಲ್ಲಿ ಇಳಿಕೆಯಾಗುತ್ತದೆ.

Pay attention to the causes of allergy flare-ups There can be many reasons like pollen dust food etc Monsoon Allergies

ಅಲರ್ಜಿ ನಿವಾರಣೆ

ಕೆಲವು ಮಂದಿಗೆ ಲ್ಯಾಕ್ಟೋಸ್‌ನಿಂದ ಅಲರ್ಜಿಗಳುಂಟಾಗುವ ಕಾರಣದಿಂದ ಇದನ್ನು ಬಿಟ್ಟ ಕೂಡಲೇ ಅಲರ್ಜಿ ಸಮಸ್ಯೆ ಪರಿಹಾರವಾಗುತ್ತದೆ.

Dairy products Protein Foods

ಡೇರಿ ಉತ್ಪನ್ನದ ಕತೆ ಏನು?

ಆದರೆ, ಡೇರಿ ಉತ್ಪನ್ನಗಳನ್ನು ಬಿಡುವುದು ಬಹಳ ಕಷ್ಟ. ಕೇವಲ ಹಾಲು ಬಿಡುವುದರಿಂದ ಡೈರಿ ಉತ್ಪನ್ನ ಬಿಟ್ಟಂತಾಗುವುದಿಲ್ಲ. ಬಹಳಷ್ಟು ಆಹಾರಗಳಲ್ಲಿ ಇಂದು ಡೇರಿ ಉತ್ಪನ್ನಗಳನ್ನು ಬಳಸುವುದರಿಂದ ಸಾಕಷ್ಟು ಆಹಾರ ಪದಾರ್ಥಗಳನ್ನು ನಾವು ಬಿಡಬೇಕಾಗುತ್ತದೆ. ಇದು ಬಹಳ ಕಷ್ಟ.

ಪೋಷಕಾಂಶ ಕೊರತೆ

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾದ ಸಾಕಷ್ಟು ಪೋಷಕಾಂಶಗಳು ಸಿಗುವುದರಿಂದ ಇದನ್ನು ಬಿಟ್ಟರೆ, ಇದಕ್ಕೆ ಪರ್ಯಾಯವಾಗಿ ಪೋಷಕಾಂಶಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದರೆ ಈ ಪೋಷಕಾಂಶಗಳ ಕೊರತೆಯಾಗಬಹುದು.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಪೋಷಕಾಂಶ ಪೂರೈಕೆ

ಹಾಲಿನ ಉತ್ಪನ್ನಗಳಿಂದ ನಮ್ಮ ದೇಹಕ್ಕೆ ನಿತ್ಯವೂ ಸಿಗುವ ಪ್ರೊಟೀನ್‌, ಕ್ಯಾಲ್ಸಿಯಂ ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಬೇರೆ ಆಹಾರಗಳಿಂದ ಭರಿಸುವುದು ಬಹಳ ಕಷ್ಟ. ಇದಕ್ಕಾಗಿ ಸಪ್ಲಿಮೆಂಟ್‌ಗಳ ಸೇವನೆಯನ್ನೂ ಮಾಡಬೇಕಾಗಬಹುದು. ಸಪ್ಲಿಇಮೆಂಟ್‌ ಸೇವನೆ ಮಾಡದೇ ಇದ್ದರೆ, ಹಾಳಿಗೆ ಪರ್ಯಾಯ ಮೂಲಗಳನ್ನು ಹುಡುಕಿ ನಿತ್ಯವೂ ಆ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸೇರುವಂತೆ ಮಾಡಬೇಕು. ಈ ಕಾರಣಗಳಿಂದಾಗಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಕೆಲವು ಲಾಭಗಳಿದ್ದರೂ, ನಷ್ಟದ ಪ್ರಮಾಣ ಅಧಿಕವಾಗಿರುವುದರಿಂದ ಅದನ್ನು ಬಿಡುವುದು ಆರೋಗ್ಯಕರ ಲಕ್ಷಣವಲ್ಲ ಎನ್ನಲಾಗುತ್ತದೆ. ಇವು ನಮ್ಮ ನಿತ್ಯ ಆಹಾರದ ಪ್ರಮುಖ ಭಾಗವಾಗಿರುವುದರಿಂದ ಇದನ್ನು ಬಿಡುವುದು ಯೋಗ್ಯ ಆಯ್ಕೆಯಲ್ಲ ಎಂದು ತಜ್ಞರು ಹೇಳುತ್ತಾರೆ.

Continue Reading
Advertisement
Sobhita Dhulipala golden new look from Cannes Film Festival
ಬಾಲಿವುಡ್34 seconds ago

Cannes 2024: ಆಸ್ಕರ್‌ ಪ್ರಶಸ್ತಿಯ ಆಕಾರದಂತೆ ಕಂಡ ಶೋಭಿತಾ ಧೂಲಿಪಾಲ!

IPL 2024 Man commits suicide after taking loan for IPL betting
ರಾಯಚೂರು8 mins ago

IPL 2024 : ಐಪಿಎಲ್‌ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ

MLC Election
ಕರ್ನಾಟಕ11 mins ago

MLC Election: ವಿಧಾನ ಪರಿಷತ್‌ ಚುನಾವಣೆ; ನೈಋತ್ಯ ಶಿಕ್ಷಕರ ಕ್ಷೇತ್ರದ 1 ನಾಮಪತ್ರ ತಿರಸ್ಕೃತ

Kannada New Movie anartha cinema teaser Out
ಸ್ಯಾಂಡಲ್ ವುಡ್38 mins ago

Kannada New Movie: `ಅನರ್ಥ’ ಸಿನಿಮಾ ಟೀಸರ್‌ ಔಟ್‌!

Air india
ದೇಶ43 mins ago

Air India: ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೆ ಅವಘಡ; ತಪ್ಪಿದ ಭಾರೀ ದುರಂತ; ತುರ್ತು ಭೂ ಸ್ಪರ್ಶ

Aishwarya Rai undergo surgery post her return from Cannes Film Festival
ಬಾಲಿವುಡ್2 hours ago

Aishwarya Rai:   ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮುಗಿದ ಬಳಿಕ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

IPL 2024
ಐಪಿಎಲ್ 20242 hours ago

IPL 2024: ಸಿಎಸ್‌ಕೆ ತಂಡವನ್ನು ಸೋಲಿಸಿದ ಆರ್‌ಸಿಬಿ; ಪ್ಲೇ ಆಫ್‌ನಲ್ಲಿ ಯಾರು ಯಾರಿಗೆ ಎದುರಾಳಿ? ಇಲ್ಲಿದೆ ವೇಳಾಪಟ್ಟಿ

viral video
ವೈರಲ್ ನ್ಯೂಸ್2 hours ago

Viral Video: ಛೀ…ಈತನೆಂಥಾ ಕಾಮುಕ! ಸಾರ್ವಜನಿಕ ಸ್ಥಳದಲ್ಲಿ ಈ ಪಾಪಿ ಬಾಲಕಿಗೆ ಮಾಡಿದ್ದೇನು ಗೊತ್ತಾ?

Kalki 2898 AD Keerthy Suresh Lends Her Voice To Bujji Car
ಟಾಲಿವುಡ್2 hours ago

Kalki 2898 AD: ಪ್ರಭಾಸ್‌ ಜೀವನದಲ್ಲಿ ಎಂಟ್ರಿ ಆದ ವ್ಯಕ್ತಿ ಇವರೇನಾ? ಏನದು ʻಬುಜ್ಜಿʼ?

Vijay Sethupathi Starrer Tamil Movie Teaser Released
ಕಾಲಿವುಡ್2 hours ago

Vijay Sethupathi: ವಿಜಯ್ ಸೇತುಪತಿ- ರುಕ್ಮಿಣಿ ವಸಂತ್ ನಟನೆಯ ತಮಿಳು ಸಿನಿಮಾ ಟೀಸರ್‌ ಔಟ್‌!  

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ5 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20245 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌