Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು! Vistara News

ಆರೋಗ್ಯ

Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

ಶೀತ ನೆಗಡಿ ಆದಾಗ ಕೆಲವು ಹಣ್ಣಗಳ ಸೇವನೆ ಸೂಕ್ತವಲ್ಲ. ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.

VISTARANEWS.COM


on

fruits and cold cough
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀತ, ನೆಗಡಿ (Cold, runny nose) ಆದಾಗ, ಮೂಗು ಹಿಡಿದುಕೊಂಡು ಸೀನುತ್ತಾ, ಅಯ್ಯೋ, ನನ್ನ ಶತ್ರುವಿಗೂ ಶೀತ ನೆಗಡಿ ಆಗೋದು ಮಾತ್ರ ಬೇಡಪ್ಪಾ ಅನ್ನುವಷ್ಟು ಕಿರಿಕಿರಿ ಆಗೋದು ಸಹಜ. ʻಔಷಧಿ ತೆಗೆದುಕೊಳ್ಳದಿದ್ರೆ ಒಂದು ವಾರದಲ್ಲಿ ಶೀತ ಕಡಿಮೆಯಾಗುತ್ತೆ, ಔಷಧಿ ತೆಗೊಂಡ್ರೆ ಒಂದೇ ವಾರದಲ್ಲಿ ಶೀತ ಮಾಯʼ ಎಂಬ ಜೋಕುಗಳೂ ಜನಜನಿತ. ʻಶೀತ ಬಂತೆಂದು ಮೂಗೇ ಕೊಯ್ದುಕೊಂಡರೆ ಆದೀತೇʼ ಎಂಬ ನುಡಿಗಟ್ಟೂ ಚಾಲ್ತಿಯಲ್ಲಿರುವುದು ನಮಗೆ ಗೊತ್ತು. ಇಂತಿಪ್ಪ ಶೀತದ ಮಹಾತ್ಮೆಯನ್ನು ಎಷ್ಟು ವಿವರಿಸಿದರೂ ಸಾಲದು. ಯಾಕೆಂದರೆ, ಎಷ್ಟೇ ಔಷಧಿ, ಮನೆಮದ್ದು ಮಾಡಿದರೂ ಶೀತ ಮಾತ್ರ ಅಷ್ಟು ಸುಲಭದಲ್ಲಿ ಹೋಗದು. ಆದರೆ, ಬಹಳಷ್ಟು ಸಾರಿ ನಮಗೆ, ಶೀತ, ನೆಗಡಿ ಆಗಿದ್ದಾಗ ಎಂಥ ಆಹಾರ ತಿಂದರೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ, ಒಬ್ಬೊಬ್ಬರು ಒಂದೊಂದು ವಿಧವಾಗಿ ತಮ್ಮ ಜ್ಞಾನವನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವವರೇ, ಸಲಹೆ ಕೊಡುವವರೇ. ಹಾಗಾದರೆ, ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.

1. ಸಿಟ್ರಸ್‌ ಹಣ್ಣುಗಳು: ಸಿಟ್ರಸ್‌ ಹಣ್ಣುಗಳಾದ ಮುಸಂಬಿ, ನಿಂಬೆ, ಕಿತ್ತಳೆ ಮತ್ತಿತರ ಹಣ್ಣುಗಳು ವಿಟಮಿನ್‌ ಸಿಯಿಂದ ಶ್ರೀಮಂತವಾದ ಹಣ್ಣುಗಳು. ವಿಟಮಿನ್‌ ಸಿ ಶೀತ, ನೆಗಡಿಗೆ ಒಳ್ಳೆಯದು ನಿಜ. ಆದರೆ, ಮುಖ್ಯವಾಗಿದು ಶೀತ ನೆಗಡಿಗೂ ಮುನ್ನ ಇಂತಹ ಹಣ್ಣುಗಳನ್ನು ತಿನ್ನುತ್ತಿದ್ದರೆ, ನಮ್ಮ ನಿತ್ಯಾಹಾರ ಪದ್ಧತಿಯಲ್ಲಿದ್ದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ, ಶೀತ ನೆಗಡಿ ನಮ್ಮ ಬಳಿ ಅಷ್ಟು ಸುಲಭವಾಗಿ ಸುಳಿಯದು. ಆದರೆ, ಶೀತ, ನೆಗಡಿ ಅತಿಯಾದಾಗ ಇಂತಹ ಹಣ್ಣುಗಳನ್ನು ತಿಂದರೆ ನೆಗಡಿ ಅತಿಯಾಗುವ ಸಂಭವವೂ ಇದೆ. ಕಾರಣವೇನೆಂದರೆ, ಇದರಲ್ಲಿರುವ ಆಸಿಡ್‌ ಅಂಶ ಶೀತವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಅದಕ್ಕಾಗಿ, ಶೀತ ಅಥವಾ ನೆಗಡಿಯಾದ ಮೇಲೆ ಈ ಹಣ್ಣುಗಳನ್ನು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.

2. ಅನನಾಸು: ಕೆಲವು ಮಂದಿಗೆ ಅನನಾಸಿನಲ್ಲಿರುವ ಬ್ರೊಮೆಲನಿನ್‌ ಎಂಬ ಕಿಣ್ವವು ಅಲರ್ಜಿಯನ್ನು ತರುವ ಸಂಭವ ಇರುತ್ತದೆ. ಶೀತದ ಜೊತೆಗೆ ಗಂಟಲು ನೋವೂ ಇದ್ದರೆ, ಅನನಾಸಿನಿಂದ ಅದು ಹೆಚ್ಚಾಗು ಸಂಭವವೂ ಇರುತ್ತದೆ.

3. ಟೊಮೇಟೋ: ಟೊಮೇಟೋ ಹಣ್ಣಿನಂತೆ ಬಳಸುವುದಿಲ್ಲವಾದರೂ ನಿತ್ಯವೂ ತರಕಾರಿಯಂತೆ ಊಟದಲ್ಲಿ ಬಳಸುವುದೇ ಹೆಚ್ಚು. ಆದರೆ, ಶೀತ, ನೆಗಡಿಯಾದಾಗ, ಈ ಟೊಮೇಟೋ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಟೊಮೇಟೋ ಸಾಸ್‌, ಕೆಚಪ್‌, ರಸಂ ಇತ್ಯಾದಿಗಳನ್ನು ತಿನ್ನುವುದರಿಂದ ಗಂಟಲು ಇನ್ನಷ್ಟು ಕೆಡುವ ಸಂಭವವಿರುತ್ತದೆ.

4. ಕಿವಿ: ಕಿವಿ ಹಣ್ಣಿನಲ್ಲಿ ಅತ್ಯಧಿಕ ಸಿ ವಿಟಮಿನ್‌ ಇದ್ದರೂ ಇದರಿಂದ ಶೀತ, ನೆಗಡಿಯ ಸಂದರ್ಭ ಮಾತ್ರ ಇದರಿಂದ ಗಂಟಲು ಕೆರೆತ ಉಂಟಾಗುವ ಸಂಭವ ಹೆಚ್ಚು. ಹೀಗಾಗಿ ನೆಗಡಿಯ ಸಂದರ್ಭ ಕಿವಿ ಹಣ್ಣನ್ನು ತಿನ್ನುವ ಮೊದಲು ಯೋಚಿಸಿ.

Cold Feeling

5. ಬೆರ್ರಿ: ಬೆರ್ರಿ ಹಣ್ಣುಗಳಾದ, ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ ಹಣ್ಣುಗಳಲ್ಲೂ ಅಸಿಡಿಕ್‌ ಅಂಶಗಳಿರುವುದರಿಂದ ಗಂಟಲಿಗೆ ಕೊಂಚ ಕಿರಿಕಿರಿ ಮಾಡುವ ಸಂಭವ ಹೆಚ್ಚು. ಹೀಗಾಗಿ ಇಂತಹ ಹುಳಿ ಹಣ್ಣುಗಳನ್ನು ಶೀತ, ನೆಗಡಿಯ ಸಂದರ್ಭ ಅತಿಯಾಗಿ ತಿನ್ನುವುದರಿಂದ ದೂರ ಉಳಿಯುವುದೇ ಒಳ್ಳೆಯದು.

ಇದನ್ನೂ ಓದಿ: Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?

6. ಪಪ್ಪಾಯಿ: ಪಪ್ಪಾಯಿಯಲ್ಲಿ ಏನಿದೆ ಎನ್ನಬಹುದು. ಆದರೆ, ಪಪ್ಪಾಯಿಯಲ್ಲಿರುವ ಪಪೈನ್‌ ಎಂಬ ಕಿಣ್ವವು ಗಂಟಲಿಗೆ ಕಿರಿಕಿರಿ ಮಾಡುವ ಕಾರಣ ಹೆಚ್ಚು ತಿನ್ನದಿರುವುದು ಒಳ್ಳೆಯದು.

7. ದ್ರಾಕ್ಷಿ: ದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿದ್ದು ಇದರಿಂದಾಗಿ ಕೆಲವೊಮ್ಮೆ ಒಳಗೆ ಕಫ ಗಟ್ಟಿಯಾಗುತ್ತದೆ. ಆಮೇಲೆ ಕಫವನ್ನು ಹೊರಗೆ ತೆಗೆಯುವುದೇ ಕಷ್ಟವಾಗಬಹುದು. ಕೆಮ್ಮು ಹಾಗೂ ಕಫದ ಪರಿಣಾಮ ತೀವ್ರವಾಗುವ ಸಂಭವ ಇರುವುದರಿಂದ ದ್ರಾಕ್ಷಿಯಿಂದ ಶೀತ ಹಾಗೂ ನೆಗಡಿಯಂತಹ ಸಂದರ್ಭಗಳಲ್ಲಿ ದೂರ ಇರುವುದೇ ಒಳ್ಳೆಯದು.

ಇದನ್ನೂ ಓದಿ: Fruits To Lower Cholesterol: ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Weight Loss Tips: ದೇಹ ತೂಕ ಇಳಿಸಲು ಸಹಕಾರಿ ಈ ಈರುಳ್ಳಿ ಹೂವು!

Weight Loss Tips: ಋತುಮಾನದ ತರಕಾರಿಗಳ ಪೈಕಿ ತೂಕ ಇಳಿಸುವವರಿಗೆ ಮೆಚ್ಚಾಗುವುದು ಈರುಳ್ಳಿ ಹೂವು. ಕೊಂಚ ಘಾಟು ಪರಿಮಳದ ಈ ಹೂವು, ದೇಹವನ್ನು ಹೇಗೆ ಕರಗಿಸುತ್ತದೆ (Weight Loss with Spring Onions) ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

onion flower
Koo

ಬೆಂಗಳೂರು: ಋತುಮಾನದ ಹಣ್ಣು-ತರಕಾರಿಗಳ ಸೇವನೆ ಯಾವತ್ತಿಗೂ ಲಾಭದಾಯಕ- ಕಿಸೆಗೆ ಮಾತ್ರವಲ್ಲ, ದೇಹಕ್ಕೂ ಹೌದು. ತೂಕ ಇಳಿಸುವ ಪ್ರಯತ್ನದಲ್ಲಿ ಇರುವವರಿಗೆ ತಟ್ಟೆ ತುಂಬಾ ಹಣ್ಣು-ತರಕಾರಿಗಳನ್ನೇ ಸೇವಿಸಲು ಸೂಚಿಸಲಾಗುತ್ತದೆ. ಹೀಗಿರುವಾಗ ಋತುಮಾನಕ್ಕೆ ತಕ್ಕಂತೆ ಆಹಾರವನ್ನು ರೂಢಿಸಿಕೊಂಡರೆ ನಾಲಿಗೆಯ ಸವಿಯನ್ನೂ ತಣಿಸಿಕೊಳ್ಳಬಹುದು. ಚಳಿಗಾಲದಲ್ಲಿ ದೊರೆಯುವ ತರಕಾರಿಗಳ ಪೈಕಿ ರುಚಿಕಟ್ಟಾಗಿದ್ದು ಈರುಳ್ಳಿ ಹೂವು ಅಥವಾ ಸ್ಪ್ರಿಂಗ್‌ ಆನಿಯನ್.‌ ಖಾದ್ಯಗಳ ಘಮ, ಸ್ವಾದ ಹೆಚ್ಚಿಸಿ, ಸತ್ವಗಳನ್ನೂ ಏರಿಸುವ ಈ ಹಸಿರು ದಂಟಿನಂಥ ಘಾಟು ತರಕಾರಿ, ಹಲವಾರು ವ್ಯಂಜನಗಳಿಗೆ ಒಗ್ಗಿಕೊಳ್ಳುತ್ತದೆ. ತೂಕ ಇಳಿಸುವ ಉತ್ಸಾಹದಲ್ಲಿ ಇರುವವರಿಗೆ ಇದು ಸೂಕ್ತವಾದ ತರಕಾರಿ. ಹೇಗೆ ಎಂಬುದನ್ನು ಗಮನಿಸೋಣ (Weight Loss Tips).

ಕ್ಯಾಲರಿ ಕಡಿಮೆ

ಇದರಲ್ಲಿ ಅನಗತ್ಯ ಕ್ಯಾಲರಿ ಮತ್ತು ಕೊಬ್ಬು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆ. ಸುಮಾರು 100 ಗ್ರಾಂನಷ್ಟು ಕತ್ತರಿಸಿದ ಈರುಳ್ಳಿ ಹೂವಿನಲ್ಲಿ ಇರುವುದು 31 ಕ್ಯಾಲರಿಗಳು ಮಾತ್ರ. ಅದರಲ್ಲೂ ೦.1ರಷ್ಟು ಕ್ಷೀಣವಾದ ಕೊಬ್ಬಿನಂಶ. ಹಾಗಾಗಿ ಹಸಿರು ತರಕಾರಿಗಳನ್ನು ಉಪಯೋಗಿಸುವ ಎಲ್ಲಾ ಅಡುಗೆಗಳಲ್ಲಿ ಈರುಳ್ಳಿ ಹೂವನ್ನು ಧಾರಾಳವಾಗಿ ಬಳಸಬಹುದು.

ನಾರು ಭರಪೂರ

ಒಂದು ಕಪ್‌ ಕತ್ತರಿಸಿದ ಈರುಳ್ಳಿ ಹೂವಿನಲ್ಲಿ 1.8 ಗ್ರಾಂನಷ್ಟು ನಾರು ದೊರೆಯುತ್ತದೆ. ಇದೀಗ ದೇಹದ ಚಯಾಪಚಯವನ್ನು ಹೆಚ್ಚಿಸುವುದಕ್ಕೆ ಸಹಕಾರಿ. ದೀರ್ಘ ಕಾಲದವರೆಗೆ ಹಸಿವು ಮುಂದೂಡಲು ನೆರವಾಗುತ್ತದೆ. ಕಳ್ಳ ಹಸಿವನ್ನು ದೂರ ಮಾಡಿ, ಸಿಕ್ಕಿದ್ದನ್ನೆಲ್ಲಾ ತಿನ್ನದಂತೆ ಬಾಯಿ ಕಟ್ಟಲು ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದು ಉಪಕಾರಿ.

ಚಯಾಪಚಯ ಹೆಚ್ಚಳ

ತೂಕ ಇಳಿಸುವವರಿಗೆ ತೊಂದರೆ ಕೊಡುವ ಹಲವು ವಿಷಯಗಳಲ್ಲಿ ದೇಹದ ಚಯಾಪಚಯ ಕುಸಿಯುವುದೂ ಒಂದು ಹೌದು. ದೇಹ ತನ್ನಲ್ಲಿ ಖರ್ಚಾಗದ ಶಕ್ತಿಯನ್ನು ಜಮೆ ಮಾಡಿಕೊಳ್ಳುವುದು ಕೊಬ್ಬಿನ ರೂಪದಲ್ಲಿ. ಆದರೆ ದೇಹಕ್ಕೆ ಬೇಕಾಗುವ ಶಕ್ತಿಗಿಂತ ಕಡಿಮೆಯೇ ಶಕ್ತಿ ಒದಗಿಸಿದರೆ ಮತ್ತು ದೊರೆಯುವ ಶಕ್ತಿಗಿಂತ ಹೆಚ್ಚಿನ ಕ್ಯಾಲರಿಗಳು ಖರ್ಚಾದರೆ ತೂಕ ಇಳಿಸುವುದು ಕಷ್ಟವಾಗುವುದಿಲ್ಲ. ಈರುಳ್ಳಿ ಹೂವಿನಲ್ಲಿನ ಅಲ್ಲಿಸಿನ್‌ ಅಂಶಕ್ಕೆ ದೇಹದ ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯವಿದೆ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಜಠರ ಮತ್ತು ಕರುಳುಗಳಲ್ಲಿ ಇರಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಪ್ರೊಬಯಾಟಿಕ್‌ ಎಷ್ಟು ಮುಖ್ಯವೊ ಪ್ರಿಬಯಾಟಿಕ್‌ ಆಹಾರಗಳೂ ಅಷ್ಟೇ ಮುಖ್ಯ. ಈರುಳ್ಳಿ ಹೂವು ಒಳ್ಳೆಯ ಪ್ರಿಬಯಾಟಿಕ್‌ ಸತ್ವಗಳನ್ನು ಹೊಂದಿದ್ದು, ಜೀರ್ಣಾಂಗಗಳ ಆರೋಗ್ಯ ವೃದ್ಧಿಗೆ ಅನುಕೂಲ ಒದಗಿಸುತ್ತದೆ. ಇದರಿಂದ ಸೇವಿಸಿದ ಆಹಾರಗಳನ್ನು ಹೀರಿಕೊಳ್ಳಲು ದೇಹಕ್ಕೆ ಸುಲಭವಾಗುತ್ತದೆ. ಇದರಿಂದ ಮತ್ತೆ ಮತ್ತೆ ತಿನ್ನುವ ಅಗತ್ಯವಿಲ್ಲದೆ, ತಿಂದಷ್ಟು ತೃಪ್ತಿ ನೀಡುತ್ತದೆ.

ಡೈಯುರೇಟಿಕ್‌

ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯ ಈರುಳ್ಳಿ ಹೂವಿಗಿದೆ. ದೇಹ ಉಬ್ಬರಿಸಿದಂತೆ ಅನಿಸುವುದು, ಹೊಟ್ಟೆ ಉಬ್ಬರದ ಭಾವ- ಇಂಥವುಗಳು ಕಡಿಮೆಯಾಗಿ ದೇಹಕ್ಕಿರುವ ಅನಗತ್ಯ ತೂಕ ಇಳಿದಂತಾಗುತ್ತದೆ.

ಹೇಗೆಲ್ಲಾ ಉಪಯೋಗಿಸಬಹುದು?

ತೂಕ ಇಳಿಸುವುದಕ್ಕೆ ಈರುಳ್ಳಿ ಹೂವುಗಳು ಅನುಕೂಲಕರ ಎಂಬುದೇನೋ ಸರಿ. ಆದರೆ ಇವುಗಳನ್ನು ಹೆಚ್ಚೆಚ್ಚು ಉಪಯೋಗಿಸಿದರೆ ಮಾತ್ರವೇ ಇದರ ಲಾಭಗಳನ್ನು ಪಡೆಯಲು ಸಾಧ್ಯ. ಹಾಗಾದರೆ ಏನೆಲ್ಲಾ ವ್ಯಂಜನಗಳಿಗೆ ಇದನ್ನು ಉಪಯೋಗಿಸಬಹುದು?

ಇದನ್ನೂ ಓದಿ: Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

ಈರುಳ್ಳಿಯಷ್ಟು ಅಲ್ಲದಿದ್ದರೂ, ಕೊಂಚ ಘಾಟು ಘಮವಿರುವ ಹೂವಿದು. ಹಾಗಾಗಿ ಹಸಿಯಾಗಿ ತಿನ್ನಬಹುದಾದ ಕೋಸಂಬರಿ, ಸಲಾಡ್‌ಗಳಿಗೆ ಹೊಂದುತ್ತದೆ. ಸಾರು, ಸೂಪ್‌ಗಳಿಗೆ ಬಳಸಿದರೆ ರುಚಿಗೆ ಮೋಸವಿಲ್ಲ. ಯಾವುದೇ ತರಕಾರಿಗಳ ಪಲ್ಯಗಳ ಜತೆ ಇದನ್ನು ಉಪಯೋಗಿಸಬಹುದು. ಹುಳಿ, ಸಾಂಬಾರ್‌, ಕೂಟುಗಳಿಗೂ ಇದು ಜೋಡಿಯಾಗಬಲ್ಲದು. ದೋಸೆ, ಉತ್ತಪ್ಪಗಳ ಮೇಲೆ ಉದುರಿಸಿದರೆ ಸವಿ ಹೆಚ್ಚಿಸಬಹುದು. ಉತ್ತರ ಭಾರತೀಯ ಗ್ರೇವಿಗಳಿಗೆ ಇದು ಸಂಗಾತಿ. ಬ್ಯಾಚುಲರ್‌ಗಳ ನೆಚ್ಚಿನ ಆಮ್ಲೆಟ್‌ಗೂ ಇದು ಜೋಡಿಯೇ. ಇಷ್ಟಾದ ಮೇಲೆ ಇನ್ನೇನು? ತೂಕ ಇಳಿಸುವ ಪ್ರಯತ್ನಕ್ಕೆ ಜಯವಾಗಲಿ!

Continue Reading

ಆರೋಗ್ಯ

Orange Peel Benefits: ಕಿತ್ತಳೆ ಸಿಪ್ಪೆ ಎಸೆಯದಿರಿ, ನಿಮ್ಮ ಸೌಂದರ್ಯವರ್ಧಕ ನೀವೇ ತಯಾರಿಸಿ!

ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಸೌಂದರ್ಯವರ್ಧಕಗಳಿಗಿಂತಲೂ ಒಳ್ಳೆಯ ಫಲ ನೀಡುವ ಕಿತ್ತಳೆ ಸಿಪ್ಪೆಯೇ (Orange Peel Benefits) ನಿಮ್ಮ ಕೈಯಲ್ಲಿರುವಾಗ ವೃಥಾ ಅದನ್ನು ನಿರ್ಲಕ್ಷಿಸುವುದು ಸರಿಯೇ ಹೇಳಿ!

VISTARANEWS.COM


on

orange peel
Koo

ಚಳಿಗಾಲ ಬಂದೊಡನೆ ಮಾರುಕಟ್ಟೆಯ ತುಂಬ ಕಿತ್ತಳೆಯೂ ರಾಶಿ ಬೀಳುತ್ತದೆ. ಸಿ ವಿಟಮಿನ್‌ (Vitamin C) ಹಾಗೂ ಭರಪೂರ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ ಈ ಕಿತ್ತಳೆ ಹಣ್ಣು (Orange fruit) ರೋಗ ನಿರೋಧಕ (immunity) ಶಕ್ತಿಯನ್ನೂ ಹೆಚ್ಚು ಮಾಡುತ್ತದೆ. ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು (winter health problems) ಹತ್ತಿರ ಸುಳಿಯದಂತೆ ಕಾಫಾಡುವ ಶಕ್ತಿಯೂ ಈ ಕಿತ್ತಳೆಯಲ್ಲಿದೆ. ಇಂತಹ ಕಿತ್ತಳೆ ಹಣ್ಣನ್ನು ತಿಂದು ತಿಂದು ಸಿಪ್ಪೆಯನ್ನು ಮಾತ್ರ ಕಸದ ಬುಟ್ಟಿಗೆ ಎಸೆಯುತ್ತಿದ್ದೀರಾ? ಹಾಗಾದರೆ, ಮತ್ತೆ ಎಸೆಯುವ ಮೊದಲು ಒಮ್ಮೆ ಯೋಚಿಸಿ. ಅಂಗೈಯಲ್ಲಿ ಬಂಗಾರವನ್ನಿಟ್ಟು ಅದಕ್ಕಾಗಿ ಊರೆಲ್ಲ ಹುಡುಕಿದ ಹಾಗಾಯಿತು ನಿಮ್ಮ ಸ್ಥಿತಿ. ಯಾಕೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಸೌಂದರ್ಯವರ್ಧಕಗಳಿಗಿಂತಲೂ (Cosmetics) ಒಳ್ಳೆಯ ಫಲ ನೀಡುವ ಕಿತ್ತಳೆ ಸಿಪ್ಪೆಯೇ (Orange Peel Benefits) ನಿಮ್ಮ ಕೈಯಲ್ಲಿರುವಾಗ ವೃಥಾ ಅದನ್ನು ನಿರ್ಲಕ್ಷಿಸುವುದು ಸರಿಯೇ ಹೇಳಿ. ಕೊಂಚ ತಾಳ್ಮೆಯಿದ್ದರೆ, ನಿಮ್ಮ ಸೌಂದರ್ಯವರ್ಧಕವನ್ನು ನೀವೇ ತಯಾರಿ ಮಾಡಿಕೊಳ್ಳಬಹುದು!

1. ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಂಡರೆ, ಮಾರುಕಟ್ಟೆಯಿಂದ ಸ್ಕ್ರಬ್‌ಗೆ ದುಡ್ಡು ಕೊಡಬೇಕಾಗಿಲ್ಲ. ಒಣಗಿಸಿಟ್ಟುಕೊಂಡ ಕಿತ್ತಳೆಯ ಸಿಪ್ಪೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪುಡಿ ಮಾಡಿಕೊಂಡು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡರೆ ಆಗಾಗ ವಾರಕ್ಕೊಮ್ಮೆ ಈ ಕಿತ್ತಳೆ ಸಿಪ್ಪೆಯ ಪುಡಿಗೆ ನೀರು ಹಾಗೂ ಮೊಸರು ಸೇರಿ ಮುಖಕ್ಕೆ ಸ್ಕ್ರಬ್‌ ಮಾಡಿಕೊಳ್ಳಬಹುದು. ನೈಸರ್ಗಿಕವಾದ ಈ ಸ್ಕ್ರಬ್‌ ಸಾಮಾನ್ಯವಾದ ಮಾರುಕಟ್ಟೆಯ ರಾಸಾಯನಿಕಯುಕ್ತ ಸ್ಕ್ರಬ್‌ಗಳಿಗಿಂತಲೂ ಚೆನ್ನಾಗಿ ಫಲ ನೀಡುತ್ತದೆ. ಚರ್ಮದ ಒಣ ಸತ್ತ ಪದರಗಳು ಬಿದ್ದು ಹೋಗಿ ನಿಮ್ಮ ಮುಖದ ಚರ್ಮ ನಳನಳಿಸುತ್ತದೆ.

2. ಕಿತ್ತಳೆ ಸಿಪ್ಪೆಯನ್ನು ಹಾಗೆಯೇ ಕಸದ ಬುಟ್ಟಿಗೆ ಹಾಕುವ ಮೊದಲು ಒಂದಿಷ್ಟು ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಮೇಲೆ ನೀರನ್ನು ಸೋಸಿಕೊಂಡು ತಣಿಸಿ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಡಿ. ಆಗಾಗ ಮುಖಕ್ಕೆ ಇದನ್ನು ಟೋನರ್‌ನಂತೆ ಬಳಸಿಕೊಳ್ಳಬಹುದು. ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ ನೈಸರ್ಗಿಕ ಕಾಂತಿಯನ್ನು ಚಿಮ್ಮಿಸಿ ಯೌವನವನ್ನು ತುಳುಕಿಸುತ್ತದೆ. ಈ ನೀರನ್ನು 10ರಿಂದ 15 ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ನಿತ್ಯವೂ ಬಳಸಬಹುದು.

orange fruit benefits

3. ಒಣಗಿಸಿ ಪುಡಿ ಮಾಡಿಟ್ಟುಕೊಂಡ ಕಿತ್ತಳೆ ಪುಡಿಯನ್ನು ಜೇನಿನ ಜೊತೆಗೆ ಮಿಕ್ಸ್‌ ಮಾಡಿ ಮುಖಕ್ಕೆ ಪ್ಯಾಕ್‌ ಹಚ್ಚಿಕೊಳ್ಳಬಹುದು. ಈ ಫೇಸ್‌ ಪ್ಯಾಕ್‌ ಮುಖವನ್ನು ಇನ್ನಷ್ಟು ಹೊಳಪಾಗಿಸುತ್ತದೆ. 15-20 ನಿಮಿಷಗಳ ಕಾಳ ಇಟ್ಟುಕೊಂಡು ತೊಳೆಯಿರಿ.

4. ಕಿತ್ತಳೆಯ ಸಿಪ್ಪೆಯ ಒಳಭಾಗವನ್ನು ಅಂದರೆ ಬಿಳಿಯ ಭಾಗವನ್ನು ಚರ್ಮಕ್ಕೆ ಉಜ್ಜಿ. ಇದು ಹೆಚ್ಚುವರಿ ಎಣ್ಣೆಯಂಶ ಉತ್ಪತ್ತಿಯಾಗದಂತೆ ತಡೆಯುವ ಮೂಲಕ ಮೊಡವೆಯನ್ನು ತಡೆಯುತ್ತದೆ.

5. ಕಿತ್ತಳೆ ಸಿಪ್ಪೆಯನ್ನು ಎಸೆಯದೆ, ಅದನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿಡಿ. ಈ ನೀರು ಕೇವಲ ಒಳ್ಳೆಯ ಪರಿಮಳವನ್ನಷ್ಟೇ ಅಲ್ಲ, ನೀರಿಗೆ ಸಿಟ್ರಸ್‌ ತೈಲದಂಶವನ್ನೂ ಸೇರಿಸುವ ಮೂಲಕ ಚರ್ಮವನ್ನು ಹೊಳಪಾಗಿಸುತ್ತದೆ.

ಇದನ್ನೂ ಓದಿ: Dinner time: ಸೂರ್ಯಾಸ್ತಕ್ಕೂ ಮೊದಲೇ ರಾತ್ರಿಯೂಟ ಮಾಡುವ ಅಭ್ಯಾಸದ ಲಾಭಗಳೇನು ಗೊತ್ತೇ?

6. ಕಿತ್ತಳೆ ಸಿಪ್ಪೆಗೆ ಸಕ್ಕರೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಕೊಂಚ ಆಲಿವ್‌ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣದಿಂದ ದೇಹದ ಚರ್ಮಕ್ಕೆ ಮಸಾಜ್‌ ಮಾಡಿ. ಬಾಡಿ ಸ್ಕ್ರಬ್‌ ಆಗಿ ಬಳಸಿ. ಇದು ಒಣ, ಸತ್ತ ಚರ್ಮವನ್ನು ತೆಗೆದು ಚರ್ಮವನ್ನು ಹೊಳಪಾಗಿ, ನುಣುಪಾಗಿಸುತ್ತದೆ.

7. ಕಣ್ಣಿನ ಅಡಿಭಾಗದಲ್ಲಿ ಕಪ್ಪಾಗಿಬಿಡುವುದು ಹಾಗೂ ಊದಿಕೊಳ್ಳುವುದು ಇತ್ಯಾದಿ ಸಮಸ್ಯೆಗಳಿಗೂ ಕಿತ್ತಳೆ ಸಿಪ್ಪೆ ಒಳ್ಳೆಯದು. ಕಿತ್ತಳೆ ಸಿಪ್ಪೆಯನ್ನು ಫ್ರಿಡ್ಜ್‌ನಲ್ಲಿಟ್ಟು ನಂತರ ತಣ್ಣಗಿನ ಸಿಪ್ಪೆಯನ್ನು ಕಣ್ಣ ಕೆಳಗಿನ ವರ್ತುಲದ ಮೇಲೆ ಸ್ವಲ್ಪ ಹೊತ್ತು ಇಡಬಹುದು.

8. ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಂಗಿನೆಣ್ಣೆಯ ಜೊತೆಗೆ ಬೆರೆಸಿದರೆ ಅದನ್ನು ಲಿಪ್‌ ಬಾಮ್‌ವಂತೆಯೂ ಬಳಸಬಹುದು.

ಇದನ್ನೂ ಓದಿ: Ragi malt Benefits: ಮುಂಜಾನೆ ರಾಗಿ ಅಂಬಲಿ ಸೇವಿಸಿ, ಆರೋಗ್ಯದ ಚಿಂತೆ ಮರೆತುಬಿಡಿ!

Continue Reading

ಆರೋಗ್ಯ

Foods To Avoid Eating With Bananas: ತಿಳಿದಿರಲಿ, ಬಾಳೆಹಣ್ಣಿನ ಜೊತೆಗೆ ಈ ಆಹಾರಗಳನ್ನು ಸೇರಿಸಿ ತಿನ್ನಬಾರದು!

ಬಾಳೆ ಹಣ್ಣನ್ನು ಯಾವುದರ ಜೊತೆ ತಿನ್ನಬಾರದು (Foods to avoid eating with bananas) ಎಂಬ ಸಾಮಾನ್ಯ ಸಂಗತಿಯನ್ನು ನಾವು ತಿಳಿದುಕೊಂಡರೆ, ನಮ್ಮ ಹಲವು ಆರೋಗ್ಯ ಸಮಸ್ಯೆಗಳ ಕಾರಣಗಳು ನಮಗೆ ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಮಾಯವಾದೀತು! ಈ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Foods To Avoid Eating With Bananas
Koo

ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗುವ ಅತ್ಯಂತ ಸಾಮಾನ್ಯವಾದ ಹಣ್ಣು. ಬಡವನಿಂದ ಶ್ರೀಮಂತನವರೆಗೆ ಎಲ್ಲರಿಗೂ ಹಸಿವಾದಾಗ ಪಕ್ಕನೆ ನೆನಪಾಗುವ ಹಣ್ಣು ಎಂದರೆ ಇದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಬಡವನ ಸ್ನೇಹಿತ ಕೂಡಾ. ಇಂತಹ ಬಾಳೆಹಣ್ಣನ್ನು ಯಾವಾಗ ಬೇಕಾದ ಹಾಗೆ ನಾವು ತಿನ್ನಬಹುದೇ? ಹೇಗೆಲ್ಲ ಬಳಸುವುದು ಸೂಕ್ತವಲ್ಲ ಎಂಬ ಮಾಹಿತಿ ನಮಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡಿದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಹಣ್ಣನ್ನು ಯಾವುದರ ಜೊತೆ ತಿನ್ನಬಾರದು (Foods to avoid eating with bananas) ಎಂಬ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ತಿಳಿದುಕೊಂಡರೆ, ನಮ್ಮ ಹಲವು ಆರೋಗ್ಯ ಸಮಸ್ಯೆಗಳ ಕಾರಣಗಳು ನಮಗೆ ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಮಾಯವಾದೀತು.

ಬಾಳೆಹಣ್ಣು ಹಾಗೂ ಹಾಲು

ಆಯುರ್ವೇದದ ಪ್ರಕಾರ, ಬಾಳೆಹಣ್ಣಿನಲ್ಲಿ ಅಸಿಡಿಕ್‌ ಗುಣವೂ ಇದೆ. ಹಾಲು ಸಿಹಿ ಗುಣವನ್ನು ಹೊಂದಿದೆ. ಹೀಗಾಗಿ, ಹಾಲು ಹಾಗೂ ಬಾಳೆಹಣ್ಣು ಜೊತೆಯಾಗಿ ತೆಗೆದುಕೊಂಡರೆ, ಹೊಟ್ಟೆಯೊಳಗಿನ ಪ್ರಕೃತಿಗೆ ಗೊಂದಲವಾಗುವುದುಂಟು. ವಿರುದ್ಧ ಆಹಾರಗಳನ್ನು ಪರಸ್ಪರ ಸೇರಿಸಿ ತೆಗೆದುಕೊಂಡುರೆ ಅಡ್ಡ್‌ ಪರಿಣಾಮಗಳಾಗುವುದುಂಟು. ಆದರೆ, ಬಹುತೇಕರಿಗೆ ಈ ಬಗ್ಗೆ ಹೆಚ್ಚು ಅರಿವಿರುವುದಿಲ್ಲವಾದ್ದರಿಂದ ಈ ಎರಡು ವಿರುದ್ಧ ಗುಣಗಳ ಆಹಾರವನ್ನು ಬೆರೆಸಿ ಜೊತೆಯಾಗಿಯೂ ತೆಗೆದುಕೊಳ್ಳುವುದುಂಟು. ಇದರ ಪರಿಣಾಮವೆಂದರೆ, ಜೀರ್ಣಾಂಗವ್ಯೂಹದ ವ್ಯವಸ್ಥೆಯೊಳಗೆ ಆಮ್ಲ ಹೆಚ್ಚು ಉತ್ಪ್ತಿಯಾಗುತ್ತದೆ. ಇದಕ್ಕಾಗಿಯೇ ಅಸಿಡಿಟಿ ಸಮಸ್ಯೆಯೂ ಬಾಧಿಸುತ್ತದೆ. ಕೆಲವರಿಗೆ ಹೀಗೆ ವಿರುದ್ಧ ಆಹಾರಗಳ ಸೇವನೆಯಿಂದ ನೆಗಡಿ, ಶೀತ, ಕಫ, ಕೆಮ್ಮು ಮತ್ತಿತರ ಸಮಸ್ಯೆಗಳೂ ಬರುವುದುಂಟು.

Meat with banana

ಬಾಳೆಹಣ್ಣಿನ ಜೊತೆ ಮಾಂಸ

ಬಾಳೆಹಣ್ಣಿನಲ್ಲಿ ಪ್ಯೂರಿನ್‌ ಅಂಶವಿದೆ. ಇದು ಬೇಘ ಕರಗಲು ಸಹಾಯ ಮಾಡುತ್ತದೆ. ಆದರೆ ಮಾಂಸದಲ್ಲಿರುವ ಅತ್ಯಂತ ಹೆಚ್ಚಿನ ಪ್ರೊಟೀನ್‌ ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ. ಆರೋಗ್ಯ ಹಾಗೂ ಆಹಾರ ತಜ್ಞರ ಪ್ರಕಾರ ಇವೆರೆಡರೂ ಹೀಗಾಗಿ ವಿರುದ್ಧ ಗುಣಗಳನ್ನು ಹೊಂದಿರುವುದರಿಂದ ದೇಹದಲ್ಲಿ ಗ್ಯಾಸ್‌ ಉತ್ಪತ್ತಿ ಮಾಡುತ್ತವೆ.

ಬಾಳೆಹಣ್ಣು ಹಾಗೂ ಬೇಕಿಂಗ್‌

ಬಹಳಷ್ಟು ಮಂದಿ ಹೊಸ ಹೊಸ ರೆಸಿಪಿಗಳೊಂದಿಗೆ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರಬಹುದು. ಅಂಥಹ ರೆಸಿಪಿಗಳ ಪೈಕಿ ಬಹುತೇಕರು ಟ್ರೈ ಮಾಡುವುದು ಬಾಳೆಹಣ್ಣನ್ನು ಹಾಕಿ ಕೇಕ್‌, ಬ್ರೆಡ್‌ ಮತ್ತಿತರ ತಿನಿಸುಗಳನ್ನು ಬೇಕ್‌ ಮಾಡುವುದು. ಬಾಳೆಹಣ್ಣು ಹಾಗೂ ಬ್ರೆಡ್‌ ಎರಡೂ ಗುಣದಲ್ಲಿ ವಿರುದ್ಧವಾದವುಗಳು. ಇನ್ನು ಬಾಳೆಹಣ್ಣನ್ನೇ ಸೇರಿಸಿ ಬ್ರೆಡ್‌/ಕೇಕ್‌ ಮಾಡಿದರೆ ಹೇಗೆ? ಸಾಮಾನ್ಯವಾಗಿ ಬಾಳೆಹಣ್ಣು ಬೇಗ ಕರಗಿದರೆ, ಬೇಕ್‌ ಮಾಡಿದ ಕೇಕ್ ಕರಗಲು ಹೆಚ್ಚು ಕಾಳ ತೆಗೆದುಕೊಳ್ಳುತ್ತದೆ. ಹಾಗಾಗಿ ಇವೆರಡೂ ಕೂಡಾ ವಿರುದ್ಧ ಗುಣಗಳನ್ನು ಹೊಂದಿರುವಂಥದ್ದಾಗಿದ್ದು, ಜೀರ್ಣಕ್ರಿಯೆಯಲ್ಲಿ ಇದು ಏರುಪೇರು ಉಂಟು ಮಾಡುತ್ತದೆ.

Bananas and citrus fruits

ಬಾಳೆಹಣ್ಣು ಹಾಗೂ ಸಿಟ್ರಸ್‌ ಹಣ್ಣುಗಳು

ಬಾಳೆಹಣ್ಣಿನ ಜೊತೆಗೆ ಕೆಲವು ಹಣ್ಣುಗಳನ್ನು ಮಿಶ್ರ ಮಾಡಿ ತಿನ್ನುವುದುದಂಟು. ಬಗೆಬಗೆಯ ಹಣ್ಣುಗಳನ್ನು ಸೇರಿಸಿ ತಿಂದರೆ ಒಂದು ಹೊತ್ತಿನ ಊಟ ಮಾಡಿದಂತೆ ಎಂದು ಅಂದುಕೊಳ್ಳುವುದುಂಟು. ಮುಖ್ಯವಾಗಿ ಸಿಟ್ರಸ್‌ ಹಣ್ಣುಗಳಲ್ಲಿ ಆಮ್ಲೀಯ ಗುಣ ಹೆಚ್ಚಿದೆ. ಉದಾಹರನೆಗೆ ನಿಂಬೆಹಣ್ಣು, ದಾಲಿಂಬೆ, ಸ್ಟ್ರಾಬೆರಿ ಮತ್ತಿತರ ಹಣ್ಣೂಗಳನ್ನು ಬಾಳೆಹಣ್ಣಿನ ಜೊತೆಗೆ ತಿನ್ನಬೇಡಿ. ಹೀಗೆ ಮಾಡುವದರಿಂದ ದೇಹದ ತ್ರಿದೋಷಗಳಾದ ವಾತ, ಪಿತ್ತ, ಕಫಗಳಲ್ಲಿ ವ್ಯತ್ಯಾಸವಾಗಿ, ತಲೆನೋವು, ಶೀತ, ನೆಗಡಿ, ತಲೆಸುತ್ತು, ಮತ್ತಿತರ ತೊಂದರೆಗಳೂ ಕಾಡಬಹುದು.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Continue Reading

ಆರೋಗ್ಯ

Drumsticks For Weight Loss: ನುಗ್ಗೆಕಾಯಿ ತಿಂದೂ ತೂಕ ಇಳಿಸಿಕೊಳ್ಳಬಹುದು!

ನುಗ್ಗೆಕಾಯಿಯು ವ್ಯಂಜನಗಳ ರುಚಿಯನ್ನು ಮಾತ್ರವೇ ಹೆಚ್ಚಿಸುವುದಲ್ಲ, ಹೆಚ್ಚಿದ ತೂಕವನ್ನೂ ಇಳಿಸುತ್ತದೆ (Drumsticks for Weight Loss) ಎನ್ನುತ್ತವೆ ಅಧ್ಯಯನಗಳು. ನುಗ್ಗೆಯನ್ನು ಯಾವುದೇ ರೀತಿಯಲ್ಲಿ ಆಹಾರದ ಭಾಗವನ್ನಾಗಿ ಮಾಡಿಕೊಂಡರೂ ಲಾಭವಿದೆ. ಪ್ರಯತ್ನಿಸಿ ನೋಡಿ.

VISTARANEWS.COM


on

Drumsticks For Weight Loss
Koo

ಹಳೆಯ ಕಾಲದ ಜನರನ್ನು ಕೇಳಿದರೆ ಹೊಟ್ಟೆಯ ಮೇಲೊಂದು ಪುಟ್ಟ ಡೊಳ್ಳು ಕೂರುವುದು ಸಿರಿವಂತಿಕೆಯ ಲಕ್ಷಣ ಎನ್ನುತ್ತಿದ್ದರು. ಇಂದಿನ ಕಾಲದಲ್ಲಿ ಡೊಳ್ಳು ಸಿರಿಯಲ್ಲ, ಆರೋಗ್ಯಕ್ಕೆ ಹೊರೆ! ಬರೀ ಹೊಟ್ಟೆ ಕರಗಿಸುವುದು ಮಾತ್ರವೇ ಸವಾಲಲ್ಲ, ದೇಹ ತೂಕ ಕರಗಿಸುವುದೇ ದೊಡ್ಡ ಸವಾಲು ಎನಿಸುತ್ತದೆ. ಇದಕ್ಕಾಗಿ ಊಟ ಬಿಟ್ಟು, ನಿದ್ದೆಗೆಟ್ಟು, ತಲೆ ಕೆಟ್ಟು ಪ್ರಯತ್ನಿಸಿದರೂ ಯಶಸ್ಸು ಕಾಣದೆ ಇರಬಹುದು. ಇಂಥ ಸಂದರ್ಭದಲ್ಲಿ ಎಲ್ಲರಿಗೂ ಮೆಚ್ಚಾಗುವ ನುಗ್ಗೆಕಾಯಿ (Drumsticks for Weight Loss) ಮತ್ತು ನುಗ್ಗೆ ಸೊಪ್ಪುಗಳನ್ನು ತೂಕ ಇಳಿಸುವುದಕ್ಕಾಗಿ ಬಳಸಬಹುದೇ? ನೋಡೋಣ ಇದರ ಗುಣಗಳನ್ನು.

Moringa drumsticks

ದೇಹದಲ್ಲಿ ಜಮೆಯಾಗುವ ಕೊಬ್ಬನ್ನು ವಿಘಟಿಸಲು ಮತ್ತು ಕರಗಿಸಲು ನುಗ್ಗೆಸೊಪ್ಪು ಮತ್ತು ಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಮಾತ್ರವಲ್ಲ, ಬಹಳಷ್ಟು ಬಗೆಯ ಪೋಷಕಾಂಶಗಳು ನುಗ್ಗೆಯಲ್ಲಿದ್ದು, ದೇಹಕ್ಕೆ ಹಲವು ರೀತಿಯಲ್ಲಿ ಅನುಕೂಲಗಳನ್ನು ಒದಗಿಸಿಕೊಡುತ್ತದೆ. ಭಾರತೀಯ ಸೂಪಶಾಸ್ತ್ರದಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ನುಗ್ಗೆ, ಏಷ್ಯಾಖಂಡದ ಉದ್ದಗಲಕ್ಕೆ ಪ್ರಚಲಿತದಲ್ಲಿದೆ. ಇದು ತೂಕ ಇಳಿಕೆಗೆ ಹೇಗೆ ನೆರವಾಗುತ್ತದೆ ಎಂಬ ವಿವರಗಳಿವು.

weight loss

ತೂಕ ಇಳಿಕೆಗೆ ಬೇಕು

ನುಗ್ಗೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ವಿಟಮಿನ್‌ ಎ, ಇ, ಸಿ ಸತ್ವಗಳು, ಕ್ಯಾಲ್ಶಿಯಂ, ಪೊಟಾಶಿಯಂ, ಕಬ್ಬಿಣದಂಥ ಖನಿಜಗಳು ನುಗ್ಗೆಯಲ್ಲಿ ಭರಪೂರ ಇವೆ. ಹೆಚ್ಚಿನ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸಿದರೆ, ಕಳ್ಳ ಹಸಿವೆಯನ್ನು ತಡೆಯಬಹುದು. ಇದರಿಂದ ಸತ್ವವಿಲ್ಲದ, ಕ್ಯಾಲರಿ ತುಂಬಿದ ಸಕ್ಕರೆ, ಕೊಬ್ಬಿನ ಆಹಾರಗಳ ಸೇವನೆಯ ಬಯಕೆಯನ್ನು ಹತ್ತಿಕ್ಕುವುದಕ್ಕೆ ಅನುಕೂಲವಾಗುತ್ತದೆ.

ನಾರುಭರಿತ

ನುಗ್ಗೆಕಾಯಿಯಲ್ಲಿ ನಾರು ವಿಫುಲವಾಗಿದೆ. ನಾರುಭರಿತ ಆಹಾರಗಳ ಸೇವನೆಯಿಂದ ದೇಹಕ್ಕೆ ನಾನಾ ರೀತಿಯ ಲಾಭಗಳಿವೆ. ನಾರು ಹೆಚ್ಚು ತಿಂದಾಗ ಬೇಗ ಹೊಟ್ಟೆ ತುಂಬಿದಂತೆ ಭಾಸವಾಗಿ, ದೀರ್ಘಕಾಲದವರೆಗೆ ಹಸಿವಾಗದಂತೆ ಉಳಿಯುತ್ತದೆ. ಇವುಗಳು ಜೀರ್ಣವಾಗುವುದಕ್ಕೆ ಪಿಷ್ಟಭರಿತ ಆಹಾರಗಳಿಗಿಂತ ಹೆಚ್ಚಿನ ಸಮಯ ಬೇಕು. ಇದರಿಂದ ದೇಹಕ್ಕೆ ಅಗತ್ಯವಾದ್ದಕ್ಕಿಂತ ಹೆಚ್ಚಿನ ಆಹಾರ ಸೇವಿಸುವುದನ್ನು ತಪ್ಪಿಸಬಹುದು.

ನಾರು ಹೆಚ್ಚಿರುವ ಆಹಾರಗಳು ನಮ್ಮ ಜೀರ್ಣಾಂಗಗಳನ್ನು ಶುದ್ಧಗೊಳಿಸುತ್ತವೆ. ಕರಗಬಲ್ಲ ನಾರುಗಳು ನಮ್ಮ ದೇಹದಲ್ಲಿನ ಕೊಬ್ಬಿನಾಂಶವನ್ನು ವಿಘಟಿಸಿದರೆ, ಕರಗದೆ ಇರುವಂಥ ನಾರುಗಳು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ, ನುಗ್ಗೆಯಲ್ಲಿನ ಕ್ಯಾಲರಿ ಕಡಿಮೆ. ಮನಸ್ಸಿಗೆ ತೃಪ್ತಿಯಾಗುವಷ್ಟು ತಿಂದರೂ, ಸಿಕ್ಕಾಪಟ್ಟೆ ಕ್ಯಾಲರಿಗಳೇನೂ ದೇಹ ಸೇರುವುದಿಲ್ಲ. ಹಾಗಾಗಿ ನುಗ್ಗೆ ತಿನ್ನುವಾಗ ಹೆಚ್ಚು ಯೋಚಿಸಬೇಕಿಲ್ಲ.

ಚಯಾಪಚಯ ಹೆಚ್ಚಳ

ತೂಕ ಇಳಿಕೆಗಾಗಿಯೇ ಆಹಾರಕ್ರಮವನ್ನು ರೂಪಿಸಿಕೊಂಡಿದ್ದರೆ, ಅದರಲ್ಲಿ ನುಗ್ಗೆಗೆ ಜಾಗ ಬೇಕೇಬೇಕು. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಂದರೆ ಇದರಲ್ಲಿರುವ ಐಸೊಥಿಯೊಸೈನೇಟ್‌ಗಳು ದೇಹದ ಶಕ್ತಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಅಂದರೆ ನಾವು ಬಳಸುವ ಶಕ್ತಿಗಿಂತ ದೇಹಕ್ಕೆ ದೊರೆಯುವ ಶಕ್ತಿ ಕಡಿಮೆಯಾದರೆ ಸಹಜವಾಗಿಯೇ ದೇಹದ ತೂಕ ಇಳಿಯುತ್ತದೆ.

Sugar control

ಸಕ್ಕರೆಮಟ್ಟ ನಿಯಂತ್ರಣ

ತೂಕ ನಿಯಂತ್ರಿಸುವಾಗ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣವನ್ನೂ ಅಗತ್ಯವಾಗಿ ಮಾಡಬೇಕಾಗುತ್ತದೆ. ರಕ್ತದಲ್ಲಿ ಸಕ್ಕರೆಯಂಶ ಹತೋಟಿಯಲ್ಲಿಲ್ಲದೆ ಏರಿಳಿತವಾಗುತ್ತಿದ್ದರೆ, ತಿನ್ನುವ ಆಹಾರದ ಪ್ರಮಾಣ, ಅಗತ್ಯ ಮತ್ತು ಬಯಕೆಗಳೂ ನಿಯಂತ್ರಣಕ್ಕೆ ದೊರೆಯುವುದಿಲ್ಲ. ಅನಾರೋಗ್ಯಕರ ಆಹಾರಗಳತ್ತ ನಮ್ಮ ಚಿತ್ತ ಹೊರಳಬಹುದು. ಇಂಥವೆಲ್ಲದಕ್ಕೂ ಕಡಿವಾಣ ಹಾಕಲು ಸುಲಭವಾಗುವಂತೆ, ನುಗ್ಗೆಕಾಯಿ ಸಕ್ಕರೆ ಮಟ್ಟವನ್ನು ಏರಿಳಿತವಿಲ್ಲದಂತೆ ಮಾಡಲು ನೆರವಾಗುತ್ತದೆ.

ಡಿಟಾಕ್ಸ್‌ ಪೇಯ

ನುಗ್ಗೆ ಸೊಪ್ಪಿನ ಚಹಾವನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಡಿಟಾಕ್ಸ್‌ ಪೇಯವಾಗಿ ಬಳಸಲಾಗುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಅದರಲ್ಲೂ ನುಗ್ಗೆ ಸೊಪ್ಪಿನ ಕಷಾಯವನ್ನು ಬೆಳಗಿನ ಹೊತ್ತು ಸೇವಿಸಿದಾದ ಹೊಟ್ಟೆಯ ಭಾಗದಲ್ಲಿ ಜಮೆಯಾಗಿರುವ ಕೊಬ್ಬನ್ನು ಕತ್ತರಿಸಲು ಸಹಾಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Continue Reading
Advertisement
Elephant Arjuna
ಕರ್ನಾಟಕ5 hours ago

Elephant Arjuna: ಮೈಸೂರು, ಹಾಸನದಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಈಶ್ವರ ಖಂಡ್ರೆ

Kabaddi news
ಕ್ರೀಡೆ6 hours ago

Pro Kabaddi : ಮುಂಬಾ ವಿರುದ್ಧ ಜಯಂಟ್ಸ್​​ಗೆ 39-37 ಅಂಕಗಳ ಜಯ

Belagavi Winter Session
ಕರ್ನಾಟಕ6 hours ago

Belagavi Winter Session: ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು

our former mlas they did not get even 50 votes in Madhya Pradesh Says Congress
ದೇಶ6 hours ago

ಮಾಜಿ ಎಮ್ಮೆಲ್ಲೆಗಳಿಗೆ ಅವರ ಊರಲ್ಲೇ 50 ವೋಟು ಬಿದ್ದಿಲ್ಲ! ಕಾಂಗ್ರೆಸ್ ನಾಯಕ

Team India1
ಟಾಪ್ 10 ನ್ಯೂಸ್6 hours ago

VISTARA TOP 10 NEWS : ಸಿದ್ದು ಮುಸ್ಲಿಂ ಓಲೈಕೆ ಜಟಾಪಟಿ, ʼಅರ್ಜುನʼನಿಗೆ ಕಂಬನಿಯ ವಿದಾಯ ಇತ್ಯಾದಿ ಪ್ರಮುಖ ಸುದ್ದಿಗಳು

Vistara News Best Teacher Award -2023 programme inauguration by Yadgiri DC Sushila B. at Yadgiri
ಕರ್ನಾಟಕ6 hours ago

ಯಾದಗಿರಿಯಲ್ಲಿ ‘ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್’ ಕಾರ್ಯಕ್ರಮಕ್ಕೆ ಚಾಲನೆ

BJP knew the result two days earlier vote count Says Congress
ದೇಶ7 hours ago

ಬಿಜೆಪಿಗೆ ರಿಸಲ್ಟ್ ಎರಡು ದಿನ ಮೊದ್ಲೇ ಗೊತ್ತಿತ್ತು! ಕಾಂಗ್ರೆಸ್ ಹೊಸ ವರಾತ್

HD Kumaraswamy
ಕರ್ನಾಟಕ7 hours ago

HD Kumaraswamy: ವೈಯಕ್ತಿಕವಾಗಿ ಕೆಣಕಿದರೆ ನಾನು ಸುಮ್ಮನಿರಲ್ಲ ಎಂದ ಎಚ್‌ಡಿಕೆ

Rahul Dravid
ಕ್ರಿಕೆಟ್7 hours ago

Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

Minister Ramalinga Reddy statement
ಕರ್ನಾಟಕ8 hours ago

5 ಕೋಟಿ ವೆಚ್ಚದಲ್ಲಿ‌ ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ ಪೂರ್ಣ: ಸಚಿವ ರಾಮಲಿಂಗಾ ರೆಡ್ಡಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

CM Siddaramaiah and Black magic
ಕರ್ನಾಟಕ8 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ9 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ9 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ24 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ5 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

ಟ್ರೆಂಡಿಂಗ್‌