BJP Foundation Day 2023: ಜನಸಂಘದಿಂದ ಇಂದಿನವರೆಗೂ ಬದಲಾಗದ ಮೌಲ್ಯಗಳೇ ಬಿಜೆಪಿಯ ಬಲ - Vistara News

ದೇಶ

BJP Foundation Day 2023: ಜನಸಂಘದಿಂದ ಇಂದಿನವರೆಗೂ ಬದಲಾಗದ ಮೌಲ್ಯಗಳೇ ಬಿಜೆಪಿಯ ಬಲ

ಭಾರತದಲ್ಲಿ ತನ್ನನ್ನು ತಾನು ಸಮರ್ಥ ರಾಜಕೀಯ ಶಕ್ತಿಯಾಗಿ ಸ್ಥಾಪಿಸುವ ಹೋರಾಟವು ಆರಂಭದ ದಿನಗಳಲ್ಲಿ ಬಿಜೆಪಿ ಮುಂದಿತ್ತು. ಸತತ ಪ್ರಯತ್ನ ಹಾಗೂ ಬದ್ಧತೆಯ ಕಾರಣಕ್ಕೆ 1990ರ ದಶಕದಲ್ಲಿ ಪಕ್ಷದ ಭವಿಷ್ಯವು ನಾಟಕೀಯವಾಗಿ ಬದಲಾಯಿತು.

VISTARANEWS.COM


on

bjp foundation day 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
MR venkatesh
ಡಾ. ಎಂ. ಆರ್‌ ವೆಂಕಟೇಶ್

ಡಾ. ಎಂ. ಆರ್‌ ವೆಂಕಟೇಶ್
ಭಾರತದಲ್ಲಷ್ಟೆ ಅಲ್ಲ, ಇದೀಗ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯು (ಬಿಜೆಪಿ) 1980ರ ಏಪ್ರಿಲ್ 6ರಂದು ಸ್ಥಾಪಿಸಲ್ಪಟ್ಟಿತು. ಪಕ್ಷದ ಆರಂಭದ ದಿನಗಳಿಗೂ ಇಂದಿಗೂ ಹೋಲಿಸಿದರೆ ಬಹಳ ದೂರ ಸಾಗಿ ಬಂದಿದೆ. ಹೊಸತನದ ಕಾರ್ಯತಂತ್ರಗಳು ಮತ್ತು ಭವಿಷ್ಯದ ಕಡೆಗೆ ನೆಟ್ಟಿರುವ ದೃಷ್ಟಿಯೊಂದಿಗೆ ಭಾರತೀಯ ರಾಜಕೀಯವನ್ನು ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಸಂಸ್ಥಾಪನಾ ದಿನದ ಈ ಸಂದರ್ಭದಲ್ಲಿ, ಬಿಜೆಪಿಯ ಪಯಣ ಮತ್ತು ಭಾರತೀಯ ರಾಜಕೀಯದ ಮೇಲೆ ಪಕ್ಷವು ಬೀರಿದ ಪ್ರಭಾವವನ್ನು ಒಮ್ಮೆ ಅವಲೋಕಿಸಬಹುದು.

1951ರಲ್ಲಿ ಹಿಂದೂ ರಾಷ್ಟ್ರೀಯವಾದಿ ಚಳವಳಿಯ ನಾಯಕರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿಯವರು, ಪಂಡಿತ್ ದೀನದಯಾಳ್ ಉಪಾಧ್ಯಾಯರ ನೇತೃತ್ವದಲ್ಲಿ ರಚನೆಯಾದ ಭಾರತೀಯ ಜನಸಂಘವೇ ಬಿಜೆಪಿಯ ಮೂಲ ರೂಪ. 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರ ನೇತೃತ್ವದಲ್ಲಿ ಪಕ್ಷವನ್ನು ಬಿಜೆಪಿಯಾಗಿ ಪುನರ್ರಚಿಸಲಾಯಿತು. ಪಕ್ಷವು ಜನಸಂಘದ ರೂಪದಲ್ಲಿರಲಿ, ನಂತರ ಬಿಜೆಪಿ ರೂಪಕ್ಕೆ ಬದಲಾಗಲಿ, ಈಗಿನ ಆಧುನಿಕ ಮತ್ತು ಶಕ್ತಿಯುತ ರೂಪದಲ್ಲಿರಲಿ; ಪಕ್ಷವು ಹೊಂದಿರುವ ಮೌಲ್ಯಗಳಲ್ಲಿ ಒಂದಿಂಚೂ ಬದಲಾವಣೆ ಆಗಿಲ್ಲ.

1967ರ ಭಾರತೀಯ ಜನಸಂಘದ ಪ್ರಣಾಳಿಕೆಯಲ್ಲಿ, ಜನಸಂಘದ ಸ್ಥಾಪನೆಯ ಉದ್ದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. “ಇಂದು ದೇಶವು ಒಂದು ಪರ್ಯಾಯ ಪಕ್ಷವನ್ನು ಬಯಸುತ್ತಿದೆ. ಶಾಶ್ವತ ಮೌಲ್ಯಗಳು, ಸ್ಪಷ್ಟ ನೀತಿಗಳು ಹಾಗೂ ನಿರ್ದಿಷ್ಟ ಕಾರ್ಯಕ್ರಮಗಳನ್ನು ಪಕ್ಷವು ಹೊಂದಬೇಕಿದೆ. ಇವೆಲ್ಲವೂ ಈ ಮಣ್ಣಿನ ಆಳದಲ್ಲಿ ಬೇರೂರಿರಬೇಕು ಹಾಗೂ ದೇಶಾದ್ಯಂತ ತನ್ನ ರೆಕ್ಕೆಗಳನ್ನು ಚಾಚಿಕೊಂಡಿರಬೇಕು. ಸಮರ್ಪಿತ, ಸ್ವಾರ್ಥರಹಿತ ಹಾಗೂ ಶಿಸ್ತುಬದ್ಧ ಕಾರ್ಯಕರ್ತರ ತಂಡವಿರಬೇಕು ಹಾಗೂ ನಿರಂತರ ಗುರಿಯೆಡೆಗೆ ಸಾಗುತ್ತಿರಬೇಕು. ಸಮಾಜದ ಪ್ರತಿ ಸಮಸ್ಯೆಗೂ ವಾಸ್ತವಿಕ ಪರಿಹಾರ ಮಾರ್ಗವನ್ನು ಹೊಂದಿರಬೇಕು. ಈ ನಿರೀಕ್ಷೆಯನ್ನು ಈಡೇರಿಸುವ ಕಾರಣಕ್ಕಾಗಿಯೇ ಭಾರತೀಯ ಜನಸಂಘವು ಸ್ಥಾಪನೆಯಾಯಿತು” ಎಂದು ತಿಳಿಸಲಾಗಿತ್ತು. (ಮೂಲ: ಭಾರತೀಯ ಜನಸಂಘ ಪಾರ್ಟಿ ಡಾಕ್ಯುಮೆಂಟ್ಸ್: 1951-1972-1: ಪುಟ: 147)

ವಾರಾಣಸಿಯಲ್ಲಿ ನಡೆದ ಮತ್ತೊಂದು ಪ್ರಣಾಳಿಕೆ ಘೋಷಣೆ ಸಭೆಯಲ್ಲಿ ಮಾತನಾಡಿದ್ದ ಅಂದಿನ ಜನಸಂಘದ ಕಾರ್ಯದರ್ಶಿಯಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರು ಹೀಗೆ ಹೇಳಿದ್ದರು: “ಭಾರತೀಯ ಜನಸಂಘವು ದೇಶದ ರಾಜಕೀಯ ಜೀವನದಲ್ಲಿ ಕೆಲವು ನಿಶ್ಚಿತವಾದ ಮೌಲ್ಯ ಹಾಗೂ ಆದರ್ಶಗಳನ್ನು ಬೆಳೆಸುವ ನಿಟ್ಟಿನಲ್ಲಿ ವಚನ ಬದ್ಧವಾಗಿದೆ. ಜನಸಂಘವು ತನ್ನ ಘೋಷಣಾಪತ್ರವನ್ನು ಪ್ರಸ್ತಾಪಿಸುವಾಗ, ಜನರಿಗೆ ರುಚಿಕರವಾದ ಅಥವಾ ಮೋಹಕಗೊಳಿಸುವಂತಹ ಯಾವುದೇ ವಿಷಯವನ್ನು ಗಣನೆಗೆ ತೆಗೆದುಕೊಳ್ಳದೇ ದೇಶದ ಜೀವನಕ್ಕೆ ಯಾವುದು ಹಿತಕರವೋ ಅದನ್ನು ಮಾತ್ರ ಪರಿಗಣಿಸಲಾಗಿದೆ.”

Maharashtra BJP

“… ಕೇವಲ ಸ್ಥಾನಗಳಿಗಾಗಿ ನಾವು ಧರ್ಮ ಪ್ರತಿಪಾದಕರಾಗುವುದಿಲ್ಲ. ಬ್ರಿಟಿಷರ ಕಾಲದಿಂದಲೂ ನಮ್ಮೊಂದಿಗಿರುವ ತುಂಬಾ ವಿಷಯಗಳ ಬಗ್ಗೆ ನಿಜವಾಗಲೂ ನಾವು ಜಾಗೃತರಾಗಿರಬೇಕಾಗುತ್ತದೆ. ಎಂತಹ ವಿಷಯಗಳಲ್ಲಿ ಕಾಂಗ್ರೆಸ್‌ ಸರ್ಕಾರವು ಅತ್ಯಂತ ನಿರಾಶಾದಾಯಕವಾಗಿ ವ್ಯವಹರಿಸಿದೆಯೋ ಅಂತಹ ಹಲವಾರು ವಿಷಯಗಳಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ವ್ಯಹರಿಸಬಯಸುತ್ತದೆ” ಎಂದು ತಿಳಿಸಿದ್ದರು. (ಮೂಲ: ಪಂಡಿತ್ ದೀನದಯಾಳ್ ಉಪಾಧ್ಯಾಯ ಸಮಗ್ರ. ಸಂಪುಟ 6, ಪುಟ- 222)

ಭಾರತದಲ್ಲಿ ತನ್ನನ್ನು ತಾನು ಸಮರ್ಥ ರಾಜಕೀಯ ಶಕ್ತಿಯಾಗಿ ಸ್ಥಾಪಿಸುವ ಹೋರಾಟವು ಆರಂಭದ ದಿನಗಳಲ್ಲಿ ಬಿಜೆಪಿ ಮುಂದಿತ್ತು. ಸತತ ಪ್ರಯತ್ನ ಹಾಗೂ ಬದ್ಧತೆಯ ಕಾರಣಕ್ಕೆ 1990ರ ದಶಕದಲ್ಲಿ ಪಕ್ಷದ ಭವಿಷ್ಯವು ನಾಟಕೀಯವಾಗಿ ಬದಲಾಯಿತು. ಭಾರತದಲ್ಲಿ ಬಹುಸಂಖ್ಯಾತ ಹಿಂದುಗಳನ್ನು ಒಟ್ಟುಗೂಡಿಸುವ ಪಕ್ಷದ ಪ್ರಯತ್ನಗಳು 1992ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಐತಿಹಾಸಿಕ ಅಗತ್ಯಕ್ಕೆ ಬೆಂಬಲವಾಗಿ ನಿಲ್ಲುವವರೆಗೂ, ನಂತರವೂ ಸಾಗಿತು. ಈ ಘಟನೆಯ ನಂತರ ಬಿಜೆಪಿಯು ಭಾರತದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಲಾಯಿತು.

ಅಂದಿನಿಂದ, ಬಿಜೆಪಿಯು ಶಕ್ತಿಯುತವಾಗುತ್ತಲೇ ಸಾಗಿದೆ. ಭಾರತದ ಆಡಳಿತ ಪಕ್ಷವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2014 ರಲ್ಲಿ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಪಕ್ಷವು ಅಭಿವೃದ್ಧಿ-ಕೇಂದ್ರಿತ ಕಾರ್ಯಸೂಚಿಯನ್ನು ಅನುಸರಿಸುತ್ತ ಮುನ್ನಡೆದಿದೆ. ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ ಅಭಿಯಾನ ಮತ್ತು ಡಿಜಿಟಲ್ ಇಂಡಿಯಾದಂತಹ ಪ್ರಮುಖ ಉಪಕ್ರಮಗಳಿಗೆ ಪಕ್ಷವು ಕಾರಣವಾಗಿದೆ. ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಒಳಿತನ್ನು ಉಂಟುಮಾಡುವಂತಹ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡು ವಸುಧೈವ ಕುಟುಂಬಕಂ ಎಂಬ ಭಾರತೀಯ ಪ್ರಾಚೀನ ಮೌಲ್ಯಗಳನ್ನೂ ಪ್ರತಿಪಾದಿಸುತ್ತಿದೆ.

ಬಿಜೆಪಿಯು ಅಧಿಕಾರಕ್ಕೇರುವ ಮಾರ್ಗವು ಅಷ್ಟು ಸಲೀಸಾಗಿರಲಿಲ್ಲ. ಮಾರ್ಗದುದ್ದಕ್ಕೂ ಅನೇಕ ಅಡೆತಡೆಗಳನ್ನು ನಿರ್ಮಿಸುವ ಪ್ರಯತ್ನ ನಡೆಯಿತು. ಈ ಕಾರ್ಯ ಇಂದಿಗೂ ಮುಂದುವರಿದಿದೆ. ಆದರೆ ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಪಕ್ಷದ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮೇಲೆ ನೀಡುತ್ತಿರುವ ಗಮನದಿಂದಾಗಿ ಸಮಸ್ತ ಭಾರತೀಯರ ಅಸ್ಖಲಿತ ಬೆಂಬಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಬೇರೆ ಪಕ್ಷಗಳಿಗಿಂತ ಬಿಜೆಪಿಯನ್ನು ಭಿನ್ನವಾಗಿಸುವುದೇ ಅದು ನಿರಂತರವಾಗಿ ನಿಭಾಯಿಸುತ್ತಾ ಬಂದಿರುವ ಮೌಲ್ಯಗಳ ಪ್ರತಿಪಾದನೆ. ನಾವು ಮತ್ತೊಂದು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಇದೀಗ ರಚನೆಯಾಗುವ ಬಿಜೆಪಿ ಪ್ರಣಾಳಿಕೆಯೂ ಅಂತ್ಯೋದಯ ಪರಿಕಲ್ಪನೆಯ ಕೇಂದ್ರಿತವಾಗಿಯೇ ಇರುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಉಳಿದ ಪಕ್ಷಗಳ ರೀತಿಯಲ್ಲಿ ಜನರನ್ನು ದಾರಿ ತಪ್ಪಿಸುವ, ಉಚಿತ ಘೋಷಣೆಗಳನ್ನು ಮಾಡುತ್ತ ಮೋಸ ಮಾಡುವ ಹಾಗೂ ಕೆಟ್ಟ ಆರ್ಥಿಕ ನಡತೆಗಳನ್ನು ಹುಟ್ಟುಹಾಕುವ ಪಕ್ಷವಲ್ಲ. ಬಿಜೆಪಿಯು ನಾಗರಿಕರನ್ನು ಆತ್ಮನಿರ್ಭರಗೊಳಿಸಲು ಬಯಸುತ್ತದೆಯೇ ವಿನಃ ಫ್ರೀ ಕಿಟ್‌ಗಳನ್ನು ಹಂಚಿ ಪರಾವಲಂಬಿಗಳನ್ನಾಗಿ ಅಲ್ಲ.‌

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್ ಜೀ: ಇಂದು ಅವರ ಹುಟ್ಟುಹಬ್ಬ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಆಶಯಕ್ಕೆ ಅನುಗುಣವಾಗಿ ಪಕ್ಷ ಸಾಗುತ್ತಿದೆ. ಯಾವ ವಿಚಾರಗಳನ್ನು ಕಾಂಗ್ರೆಸ್ ಸರ್ಕಾರಗಳು ಸಂಪೂರ್ಣ ಕಡೆಗಣಿಸಿದ್ದವೋ ಅಂತಹ ವಿಚಾರಗಳತ್ತ ಬಿಜೆಪಿ ಅತ್ಯಂತ ದೃಢವಾದ ಹಾಗೂ ನಿರ್ಧಾರಕ ಹೆಜ್ಜೆಗಳನ್ನು ಇರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನದ 370ನೇ ಪರಿಚ್ಛೇದದ ಅನ್ವಯವನ್ನು ತೆರವುಗೊಳಿಸುವುದು, ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಐರೋಪ್ಯ ರಾಷ್ಟ್ರಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿ ಭಾರತದ ಹೆದ್ದಾರಿಗಳನ್ನು ನಿರ್ಮಾಣ ಮಾಡುವುದು, ಪಾರದರ್ಶಕ ವ್ಯವಸ್ಥೆಯನ್ನು ಜಾರಿ ಮಾಡುವ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದು, ಎಂಒ (ಜನಧನ-ಧಾರ್-ಮೊಬೈಲ್) ಸಂಪರ್ಕಿಸುವ ಮೂಲಕ ಸಾಮಾಜಿಕ ಪಿಂಚಣಿ ಯೋಜನೆಗಳಲ್ಲಿ ನಡೆಯುತ್ತಿದ್ದ ಸೋರಿಕೆಯನ್ನು ಸಂಪೂರ್ಣ ತಡೆಗಟ್ಟುವುದು, ಅಧಿಕಾರಕ್ಕೆ ಬಂದ ಕೇವಲ 1000 ದಿನದ ಒಳಗಾಗಿ ದೇಶದ ಕೊಟ್ಟ ಕೊನೆಯ ಹಳ್ಳಿಯನ್ನೂ ವಿದ್ಯುತ್ ಸಂಪರ್ಕಕ್ಕೆ ಒಳಪಡಿಸುವುದು, ಇವುಗಳು ಕೆಲವು ಉದಾಹರಣೆಗಳು. ಈ ಎಲ್ಲ ವಿಚಾರಗಳೂ ಕಾಂಗ್ರೆಸ್ ಸಮಯದಲ್ಲಿ ಅವಗಣನೆಗೆ ಒಳಗಾಗಿದ್ದವು.

ಪಕ್ಷವು ಭಾರತೀಯ ರಾಜಕೀಯದಲ್ಲಿ ಒಂದು ಮಾದರಿ ಬದಲಾವಣೆಯನ್ನು ತಂದಿದೆ. ಅದೆಂದರೆ ಜಾತಿ ಆಧಾರಿತ ರಾಜಕೀಯದಿಂದ ದೂರ ಸರಿಯುತ್ತ, ಹೆಚ್ಚು ಅಭಿವೃದ್ಧಿ-ಆಧಾರಿತ ವಿಧಾನಕ್ಕೆ ಜನರ ಗಮನವನ್ನು ಬದಲಾಯಿಸಿದೆ. ಇದು ದೇಶದ ಜನರಲ್ಲಿ ಹೆಮ್ಮೆಯ ಮತ್ತು ಸ್ವಾಭಿಮಾನದ ಭಾವನೆಯನ್ನು ಪ್ರಕಟಪಡಿಸುವಲ್ಲಿ ಸಾಧ್ಯವಾಗಿದೆ. ಈ ಭಾವನೆಯು ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿರದೆಯೇ ಎಲ್ಲರನ್ನೂ ಒಳಗೊಳ್ಳುವಿಕೆಯ (ಸಬ್ ಕಾ ಸಾಥ್) ನೀತಿಯನ್ನು ಅಳವಡಿಸಿಕೊಂಡಿದೆ. ಜನಸಂಘದ ಪ್ರಯಾಣವು ಅವಕಾಶಗಳು, ಸವಾಲುಗಳು, ಸಾಧನೆಗಳೆಲ್ಲವನ್ನೂ ಒಳಗೊಂಡಿವೆ. ನಿರಂತರವಾಗಿ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಸಾಗಿದೆ. ಆದರೆ ಇಷ್ಟೂ ವರ್ಷಗಳಲ್ಲಿ ಬದಲಾಗದೇ ಇರುವುದು ಎಂದರೆ ಮೌಲ್ಯಗಳ ಕುರಿತು ಇರುವ ಬದ್ಧತೆ. ಇದೇ ಅಂಶವು ಬಿಜೆಪಿಯನ್ನು ದೇಶದ ಜನರಲ್ಲಿ ಅತ್ಯಂತ ಪ್ರೀತಿಪಾತ್ರವನ್ನಾಗಿಸಿದೆ.‌

(ಲೇಖಕರು ಬಿಜೆಪಿ ಪ್ರಮುಖರು, ಬಿಎಂಟಿಸಿ ಮಾಜಿ ಉಪಾಧ್ಯಕ್ಷರು)

ಇದನ್ನೂ ಓದಿ: ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಜನ್ಮದಿನ | ಏಕಾತ್ಮ ಮಾನವತಾವಾದ ಮಾತ್ರವೇ ಸಮಾಜವನ್ನು ಮುನ್ನಡೆಸಬಲ್ಲದು: ಪಿ. ರಾಜೀವ್‌ ವಿಶೇಷ ಲೇಖನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Jehanabad Stampede: ಬಿಹಾರ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಭೀಕರ ಕಾಲ್ತುಳಿತ; 7 ಮಂದಿ ಸಾವು

Jehanabad Stampede: ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಾಲಯವೊಂದರಲ್ಲಿ ಸೋಮವಾರ (ಆಗಸ್ಟ್‌ 12) ನಸುಕಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಬಾರಾವರ್ ಬೆಟ್ಟಗಳಲ್ಲಿರುವ ಬಾಬಾ ಸಿದ್ದೇಶ್ವರ್ ನಾಥ್ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದಾರೆ.

VISTARANEWS.COM


on

Jehanabad Stampede
Koo

ಪಾಟ್ನಾ: ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಾಲಯವೊಂದರಲ್ಲಿ ಸೋಮವಾರ (ಆಗಸ್ಟ್‌ 12) ನಸುಕಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಬಾರಾವರ್ ಬೆಟ್ಟಗಳಲ್ಲಿರುವ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದಾರೆ (Jehanabad Stampede).

ʼʼಘಟನೆಯಲ್ಲಿ 7 ಮಂದಿ ಭಕ್ತರು ಮೃತಪಟ್ಟಿರುವುದು ದೃಡವಾಗಿದೆ. 7 ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೆಹಾನಾಬಾದ್‌ಗೆ ಕರೆ ತರಲಾಗಿದೆʼʼ ಎಂದು ಜೆಹಾನಾಬಾದ್ ಟೌನ್ ಇನ್ಸ್‌ಪೆಕ್ಟರ್‌ ದಿವಾಕರ್ ಕುಮಾರ್ ವಿಶ್ವಕರ್ಮ ಖಚಿತಪಡಿಸಿದ್ದಾರೆ. ಶ್ರಾವಣ ಮಾಸದಲ್ಲಿ ನಡೆಸಲಾಗುವ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಭಕ್ತರು ಹೆಚ್ಚಿನ ದೇವಾಲಯದಲ್ಲಿ ಜಮಾಯಿಸಿದ್ದರು. ಗಾಯಾಳುಗಳಿಗೆ ಸ್ಥಳೀಯ ಮಖ್ದುಮ್ಪುರ್ ಮತ್ತು ಸದರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

“ಜನಸಂದಣಿಯನ್ನು ನಿರ್ವಹಿಸಲು ದೇವಾಲಯದ ಆಡಳಿತ ಮಂಡಳಿ ವಿಫಲವಾಗಿದ್ದೇ ಈ ಅನಾಹುತಕ್ಕೆ ಕಾರಣ. ಜನಸಂದಣಿ ನಿರ್ವಹಣೆಯಲ್ಲಿ ತೊಡಗಿದ್ದ ಕೆಲವು ಸ್ವಯಂಸೇವಕರು ಭಕ್ತರ ಮೇಲೆ ಲಾಠಿ ಪ್ರಯೋಗಿಸಿದ್ದರಿಂದಲೇ ಕಾಲ್ತುಳಿತಕ್ಕೆ ಸಂಭವಿಸಿತು” ಎಂದು ಸಂತ್ರಸ್ತೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ತಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲಿದೆ ಈ ದೇವಸ್ಥಾನ?

ಶಿವಾಲಯವಾದ ಬಾಬಾ ಸಿದ್ಧನಾಥ ದೇವಾಲಯವು ಮೂಲತಃ ಸಿದ್ಧೇಶ್ವರನಾಥ ದೇವಸ್ಥಾನ ಎಂದು ಗುರುತಿಸಲ್ಪಡುತ್ತದೆ. ಇದು ಬರಾವರ್ ಬೆಟ್ಟಗಳ ಶ್ರೇಣಿಯ ಅತ್ಯುನ್ನತ ಶಿಖರದಲ್ಲಿದೆ. ಈ ದೇವಾಲಯವನ್ನು ಕ್ರಿ.ಶ. 7ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ನಿರ್ಮಿಸಲಾಯಿತು. ಸ್ಥಳೀಯರು ಈ ದೇವಾಲಯವನ್ನು ಜರಾಸಂಧನ ಮಾವ ಬನ ರಾಜ ನಿರ್ಮಿಸಿದ್ದಾನೆಂದು ಹೇಳುತ್ತಾರೆ. ಈ ಜಿಲ್ಲೆಯನ್ನು ಬರಾವರ್ ಗುಹೆ ಎಂದೂ ಕರೆಯುತ್ತಾರೆ. ಬರಾವರ್ ಗುಹೆ ಜೆಹಾನಾಬಾದ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಖ್ದುಮ್ಪುರ್ ಬಳಿಯ ಗುಡ್ಡಗಾಡು ಪ್ರದೇಶದಲ್ಲಿದೆ.

ಹತ್ರಾಸ್‌ ದುರಂತ

ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 121 ಮಂದಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಜುಲೈ 2ರಂದು ಉತ್ತರ ಪ್ರದೇಶದ ಹತ್ರಾಸ್‌ದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಆಯೋಜಿಸಿದ್ದ ಸತ್ಸಂಗದ ವೇಳೆ ಈ ಕಾಲ್ತುಳಿತ ನಡೆದಿತ್ತು.

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ತಿಳಿಸಿದೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

Continue Reading

ದೇಶ

Panjab Flood: ಪಂಜಾಬ್‌ನಲ್ಲೂ ಪ್ರವಾಹ ಸ್ಥಿತಿ; ಒಂದೇ ಕುಟುಂಬದ 8 ಮಂದಿ ಸೇರಿ 9 ಜನ ನೀರುಪಾಲು

Panjab Flood: ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಪ್ರವಾಹಕ್ಕೆ ಅನೇಕ ವಾಹನಗಳು ಕೊಚ್ಚಿ ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರ್ ಬ್ಲಾಕ್‌ನಲ್ಲಿ SUV ವಾಹನ ನದಿಯಲ್ಲಿ ಕೊಚ್ಚಿಹೋಗಿದೆ. ಪಂಜಾಬ್‌ನ ಹಲವಾರು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ.

VISTARANEWS.COM


on

Panjab Flood
Koo

ಚಂಡೀಗಡ: ಪಂಜಾಬ್‌ನಲ್ಲಿ ಭಾರೀ ಮಳೆ(Heavy Rainfall)ಗೆ ಪ್ರವಾಹ(Panjab Flood) ಸ್ಥಿತಿ ನಿರ್ಮಾಣವಾಗಿದ್ದು, ಹಿಮಾಚಲ ಪ್ರದೇಶದ ಒಂದೇ ಕುಟುಂಬದ ಎಂಟು ಜನ ಸೇರಿದಂತೆ ಒಂಬತ್ತು ಮಂದಿ ಕೊಚ್ಚಿ ಹೋಗಿದ್ದಾರೆ. ಇನ್ನು ದುರ್ಘಟನೆಯಲ್ಲಿ ಇಬ್ಬರು ಕಣ್ಮರೆಯಾಗಿದ್ದಾರೆ. ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಪ್ರವಾಹಕ್ಕೆ ಅನೇಕ ವಾಹನಗಳು ಕೊಚ್ಚಿ ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರ್ ಬ್ಲಾಕ್‌ನಲ್ಲಿ SUV ವಾಹನ ನದಿಯಲ್ಲಿ ಕೊಚ್ಚಿಹೋಗಿದೆ. ಪಂಜಾಬ್‌ನ ಹಲವಾರು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್‌ಪುರ ಬಳಿಯ ಡೆಹ್ರಾದಿಂದ ಪಂಜಾಬ್‌ನ ಎಸ್‌ಬಿಎಸ್ ನಗರ ಜಿಲ್ಲೆಯ ಮೆಹ್ರೋವಾಲ್ ಗ್ರಾಮಕ್ಕೆ ಮದುವೆಗೆ ಹಾಜರಾಗಲು ಚಾಲಕನ ಸಮೇತ ಕುಟುಂಬದ 11 ಸದಸ್ಯರು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷದ ಮಗುವನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಿದ್ದಾರೆ. ಪಂಜಾಬ್‌ನ ನವನ್‌ಶಹರ್‌ನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡು 11 ಮಂದಿ ಎಸ್‌ಯುವಿಯಲ್ಲಿ ಪ್ರಯಾಣಿಸಿ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಪೋಲೀಸರ ಪ್ರಕಾರ, ಕುಟುಂಬವು ಮದುವೆ ಮುಗಿಸಿಕೊಂಡು ವಿಹಾರಕ್ಕೆ ಹೋಗುತ್ತಿದ್ದಾಗ ಪ್ರವಾಹದ ನೀರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಎನ್ನಲಾಗಿದೆ. ಇನ್ನು ಮೃತರನ್ನು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್‌ಪುರ ಸಮೀಪದ ಡೆಹ್ಲಾನ್ ಗ್ರಾಮದ ನಿವಾಸಿ ದೀಪಕ್ ಭಾಟಿಯಾ ಎಂದು ಗುರುತಿಸಲಾಗಿದ್ದು, ಅವರ ತಂದೆ ಸುರ್ಜಿತ್ ಭಾಟಿಯಾ, ತಾಯಿ ಪರಮ್‌ಜೀತ್ ಕೌರ್, ಚಿಕ್ಕಪ್ಪ ಸರೂಪ್ ಚಂದ್, ಚಿಕ್ಕಮ್ಮ ಬಂಡಾರ್ ಮತ್ತು ಶಿನೋ, ಪುತ್ರಿಯರಾದ ಭಾವನಾ ಮತ್ತು ಅಂಕು ಮೃತಪಟ್ಟಿದ್ದಾರೆ.

ಸಿಎಂ ಸಂತಾಪ

ಇನ್ನು ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಒಂಬತ್ತು ಜನರ ಸಾವಿನ ಸುದ್ದಿ ದುಃಖಕರವಾಗಿದೆ. “ನಾನು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌ ಪ್ರಕರಣ; ಪ್ರವಾಹದ ಭೀತಿ ಇಲ್ಲ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್

Continue Reading

ದೇಶ

Independence day 2024: ನಮ್ಮ ಹೆಮ್ಮೆಯ ರಾಷ್ಟ್ರಧ್ವಜದ ಬಗ್ಗೆ ಈ 10 ಸಂಗತಿಗಳು ತಿಳಿದಿರಲಿ

ದೇಶಾದ್ಯಂತ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸಲಾಗುತ್ತಿದೆ. ಈಗಾಗಲೇ ಇದಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಧ್ವಜದ ಬಗ್ಗೆ ನಾವು ತಿಳಿದಿರಲೇ ಬೇಕಾದ 10 ಪ್ರಮುಖ ಸಂಗತಿಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಸುಮಾರು 200 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆಯ (British rule in india) ವಿರುದ್ಧ ಹೋರಾಡಿ ಭಾರತೀಯರು ಅಂತಿಮವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯವನ್ನು ಪಡೆದರು. ಬಳಿಕ ದೇಶದ ಮೊದಲ ಪ್ರಧಾನಿಯಾದ (First PM of India) ಜವಾಹರಲಾಲ್ ನೆಹರು (Jawaharlal Nehru) ಅವರು ಆಗಸ್ಟ್ 15 ಅನ್ನು ಭಾರತದ ಸ್ವಾತಂತ್ರ್ಯ ದಿನ ಎಂದು ಘೋಷಿಸಿದರು. ಅಂದಿನಿಂದ ನಿರಂತರ ದೇಶಾದ್ಯಂತ ಈ ದಿನವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಈ ಬಾರಿ 78ನೇ ಸ್ವಾತಂತ್ರ್ಯ ದಿನದ (Independence day 2024) ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಬಳಿಕ ‘ಹರ್ ಘರ್ ತಿರಂಗ’ ಅಭಿಯಾನವು ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರವ್ಯಾಪಿ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುವ ಗುರಿಯಾಗಿದೆ.

ಭಾರತದ ರಾಷ್ಟ್ರಧ್ವಜದ ಬಗ್ಗೆ ನಾವು ತಿಳಿದಿರಲೇಬೇಕಾದ 10 ಪ್ರಮುಖ ಸಂಗತಿಗಳಿವೆ.


1. 1906ರ ಆಗಸ್ಟ್ 7ರಂದು ಭಾರತದಲ್ಲಿ ಮೊದಲ ರಾಷ್ಟ್ರಧ್ವಜವನ್ನು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಧ್ವಜವು ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳನ್ನು ಹೊಂದಿತ್ತು.


2. 1931ರಲ್ಲಿ ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳುವ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಧ್ವಜ ಈಗಿನ ಧ್ವಜಕ್ಕಿಂತ ಕೊಂಚ ಭಿನ್ನವಾಗಿತ್ತು. ಇದರಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವಿದ್ದು, ಮಧ್ಯೆ ಅಶೋಕ ಚಕ್ರದ ಬದಲಿಗೆ ಮಹಾತ್ಮ ಗಾಂಧಿಯವರು ನೂಲುವ ಚಕ್ರವನ್ನು ಹೊಂದಿತ್ತು.


3. ಕೆಲವು ಮಾರ್ಪಾಡುಗಳೊಂದಿಗೆ ಅಶೋಕ ಚಕ್ರವನ್ನು ಅಧಿಕೃತವಾಗಿ 1947ರ ಜುಲೈ 22ರಂದು ಭಾರತೀಯ ತಿರಂಗದಲ್ಲಿ ಅಳವಡಿಸಲಾಯಿತು. ಇದನ್ನು ಮೊದಲು 1947ರ ಆಗಸ್ಟ್ 15ರಂದು ಹಾರಿಸಲಾಯಿತು.


4. ಈ ಹಿಂದೆ ಆಯ್ದ ಸಂದರ್ಭಗಳಲ್ಲಿ ಹೊರತುಪಡಿಸಿ ಭಾರತೀಯ ನಾಗರಿಕರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶವಿರಲಿಲ್ಲ. ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರ ದಶಕದ ಸುದೀರ್ಘ ಕಾನೂನು ಹೋರಾಟದ ಅನಂತರ ಇದು ಬದಲಾಯಿತು. 2004ರ ಜನವರಿ 23ರಂದು ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.

5. 2004ರಲ್ಲಿ ಭಾರತದ ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಗೌರವ ಮತ್ತು ಘನತೆಯಿಂದ ರಾಷ್ಟ್ರಧ್ವಜವನ್ನು ಮುಕ್ತವಾಗಿ ಹಾರಿಸುವ ಹಕ್ಕು ಭಾರತೀಯ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿತು.


6. 1904ರಲ್ಲಿ ಭಾರತದ ಮೊದಲ ರಾಷ್ಟ್ರಧ್ವಜವನ್ನು ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ ವಿನ್ಯಾಸಗೊಳಿಸಿದ್ದರು.


7. ರವೀಂದ್ರನಾಥ ಠಾಗೋರ್ ಅವರು 1911ರಲ್ಲಿ ‘ಭರೋತೋ ಭಾಗ್ಯೋ ಬಿಧಾತ’ ಹಾಡನ್ನು ರಚಿಸಿದರು. ಅನಂತರ ಅದನ್ನು ‘ಜನ ಗಣ ಮನ ‘ ಎಂದು ಮರುನಾಮಕರಣ ಮಾಡಲಾಯಿತು.

8. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇಡೀ ದೇಶದಲ್ಲಿಯೇ ರಾಷ್ಟ್ರ ಧ್ವಜ ತಯಾರಿಸುವ ಪ್ರಮುಖ ಘಟಕವಾಗಿದೆ.

ಇದನ್ನೂ ಓದಿ: Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

9. ತಿರಂಗ ಅಥವಾ ತ್ರಿವರ್ಣವು ಮೂರು ಬಣ್ಣಗಳನ್ನು ಹೊಂದಿದ್ದು, ಅದರಲ್ಲಿ ಕೇಸರಿ ಅಗ್ರಸ್ಥಾನದಲ್ಲಿದೆ. ಇದು ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಮಧ್ಯದಲ್ಲಿ ಬಿಳಿ ಶಾಂತಿ ಮತ್ತು ಸತ್ಯವನ್ನು ಒಳಗೊಂಡಿರುತ್ತದೆ. ಕೆಳಭಾಗದಲ್ಲಿರುವ ಹಸಿರು ಬಣ್ಣವು ಭೂಮಿಯ ಫಲವತ್ತತೆ, ಬೆಳವಣಿಗೆ ಮತ್ತು ಮಂಗಳಕರತೆಯನ್ನು ತೋರಿಸುತ್ತದೆ.

10. ಇನ್ನೂ ಐದು ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯ ದಿನವನ್ನು ಭಾರತದೊಂದಿಗೆ ಆಚರಿಸುತ್ತವೆ. ಇದರಲ್ಲಿ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಲಿಚ್ಟೆನ್‌ಸ್ಟೈನ್ ಮತ್ತು ಬಹರೈನ್ ಸೇರಿದೆ.

Continue Reading

ಪ್ರಮುಖ ಸುದ್ದಿ

Farooq Abdullah : ಗಡಿಯಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಉಗ್ರರು, ಸೇನೆ ಶಾಮೀಲು; ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ

Farooq Abdullah:

VISTARANEWS.COM


on

Farooq Abdullah
Koo

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿ ಹಾಗೂ ಜಮ್ಮಿ ಕಾಶ್ಮೀರ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಲು ಉಗ್ರರೊಂದಿಗೆ ಸೇನೆ ಶಾಮೀಲಾಗಿರುವುದೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಭಾನುವಾರ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಗಡಿಯಲ್ಲಿ ನುಸುಳುವ ಭಯೋತ್ಪಾದಕರೊಂದಿಗೆ ಸೇನೆಯು ಕೈ ಜೋಡಿಸಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.

ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಒಳ ಒಪ್ಪಂದ ಇದೆ. ಹೀಗಾಗಿಯೇ ಗಡಿಯಲ್ಲಿ ಭಾರಿ ಸಂಖ್ಯೆಯ ಸಿಬ್ಬಂದಿಯ ನಿಯೋಜನೆಯ ಹೊರತಾಗಿಯೂ ಅವರು ಉಗ್ರರು ಭಾರತವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನಮ್ಮ ಗಡಿಗಳಲ್ಲಿ ಬೃಹತ್ ಸೈನ್ಯ ನಿಯೋಜನೆ ಇದೆ. ಇದು ವಿಶ್ವದಲ್ಲೇ ಅತಿದೊಡ್ಡದು. ಆದರೂ ಭಯೋತ್ಪಾದಕರು ಭಾರತೀಯ ಭೂಪ್ರದೇಶಕ್ಕೆ ನುಸುಳುತ್ತಲೇ ಇದ್ದಾರೆ. ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಗಡಿಯಲ್ಲಿ ಸೇನೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದರೂ ಇದು ಹೇಗೆ ಸಾಧ್ಯ? ಅವರ ನಡುವೆ ಒಳಸಂಚು ಇದೆ ಎಂದು ಅಬ್ದುಲ್ಲಾ ಹೇಳಿದರು.

ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​​ ಜಿಲ್ಲೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈ ಗಂಭೀರ ಆರೋಪ ಮಾಡಿದ್ದಾರೆ. ಭಾರೀ ಪ್ರಮಾಣದ ಮಾದಕವಸ್ತುಗಳು ಮತ್ತು ಭಯೋತ್ಪಾದಕರು ದೇಶವನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎಂಬುದರ ಬಗ್ಗೆ ಉತ್ತರ ಮಾತ್ರ ಬಯಸುತ್ತೇನೆ ಎಂದು ಅಬ್ದುಲ್ಲಾ ಕೇಳಿದ್ದಾರೆ.

ಇದನ್ನೂ ಓದಿ: Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ಗಡಿ ರಕ್ಷಣೆ ಕೇಂದ್ರ ಸರ್ಕಾರದ ವಿಷಯವಾಗಿದೆ. ನಮ್ಮ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಈ ಬಗ್ಗೆ ಮಾತನಾಡಬೇಕು” ಎಂದು ಅವರು ಹೇಳಿದ್ದಾರೆ.

“ಸುಮಾರು 200ರಿಂದ300 ಉಗ್ರರು ಹೇಗೆ ಭಾರತಕ್ಕೆ ಬಂದಿದ್ದಾರೆ. ಅವರು ಎಲ್ಲಿಂದ ಬಂದರು? ಇದಕ್ಕೆ ಯಾರು ಜವಾಬ್ದಾರರು. ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಉತ್ತರಿಸಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.

ಗುಲಾಂ ನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ ಆರೋಪಗಳು “ದುರದೃಷ್ಟಕರ” ಎಂದು ಹೇಳಿದೆ.

ಸೇನೆಯ ಶೌರ್ಯ ಪ್ರಶ್ನಾತೀತ

ಫಾರೂಕ್ ಅಬ್ದುಲ್ಲಾ ಹಿರಿಯ ರಾಜಕಾರಣಿ ಮತ್ತು ಅವರು ಭಾರತೀಯ ಸೇನೆಯ ಶೌರ್ಯವನ್ನು ಪ್ರಶ್ನಿಸಿರುವುದು ತುಂಬಾ ದುರದೃಷ್ಟಕರ. ಇದು ದೇಶಕ್ಕಾಗಿ ಅಂತಿಮ ತ್ಯಾಗ ಮಾಡುವ ಭಾರತೀಯ ಸೇನೆಯ ಧೈರ್ಯಶಾಲಿ ಸೈನಿಕರ ತ್ಯಾಗವನ್ನು ಪ್ರಶ್ನಿಸುವಂತಿದೆ” ಎಂದು ಹೇಳಿದ್ದಾರೆ.

ಅನಂತ್​ನಾಗ್​​ ಜಿಲ್ಲೆಯ ಅಹ್ಲಾನ್ ಗಗರ್ಮಾಂಡು ಅರಣ್ಯ ಪ್ರದೇಶದಲ್ಲಿ ಶನಿವಾರ 10,000 ಅಡಿ ಎತ್ತರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ ಒಂದು ದಿನದ ನಂತರ ಫಾರೂಕ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ.

ಕೊಕರ್ನಾಗ್ ಬೆಲ್ಟ್​​​ನ ದೂರದ ಅಹ್ಲಾನ್ ಗಗರ್ಮಾಂಡು ಅರಣ್ಯದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ಸೂಚಿಸುವ ಗುಪ್ತಚರ ವರದಿಗಳ ಆಧಾರದ ಮೇಲೆ ಭದ್ರತಾ ಪಡೆಗಳು ಪ್ರಾರಂಭಿಸಿದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಶನಿವಾರ ಸಂಜೆ ಗುಂಡಿನ ಚಕಮಕಿ ಪ್ರಾರಂಭವಾಯಿತು.

Continue Reading
Advertisement
Blood Pressure
ಆರೋಗ್ಯ3 mins ago

Sweet Potato Benefits: ಸವಿದವರೇ ಬಲ್ಲರು ಗೆಣಸಿನ ಸೊಗಸು! ಹಲವು ಆರೋಗ್ಯ ಸಮಸ್ಯೆಗೂ ಪರಿಹಾರ

Heavy Rain
ಮಳೆ11 mins ago

Heavy Rain: ಸಿಲಿಕಾನ್‌ ಸಿಟಿಯಲ್ಲಿ ಮಳೆಯ ಅಬ್ಬರ; ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ

Nanu Mattu Gunda-2 dog simba dubbing rakesh adiga in main roles
ಸ್ಯಾಂಡಲ್ ವುಡ್17 mins ago

Nanu Mattu Gunda-2: ಬರ್ತಿದೆ ʻನಾನು ಮತ್ತು ಗುಂಡ-2ʼ ಸಿನಿಮಾ; ಡಬ್ಬಿಂಗ್‌ಗೆ ಇಳಿದ ಸಿಂಬ!

Jehanabad Stampede
ದೇಶ51 mins ago

Jehanabad Stampede: ಬಿಹಾರ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಭೀಕರ ಕಾಲ್ತುಳಿತ; 7 ಮಂದಿ ಸಾವು

Panjab Flood
ದೇಶ55 mins ago

Panjab Flood: ಪಂಜಾಬ್‌ನಲ್ಲೂ ಪ್ರವಾಹ ಸ್ಥಿತಿ; ಒಂದೇ ಕುಟುಂಬದ 8 ಮಂದಿ ಸೇರಿ 9 ಜನ ನೀರುಪಾಲು

ಬೆಂಗಳೂರು1 hour ago

Teachers Protest: ಶಿಕ್ಷಣ ಇಲಾಖೆ ವಿರುದ್ಧ ಸಮರ ಸಾರಿದ ಶಿಕ್ಷಕರು; ಇಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ

Independence day 2024
ದೇಶ3 hours ago

Independence day 2024: ನಮ್ಮ ಹೆಮ್ಮೆಯ ರಾಷ್ಟ್ರಧ್ವಜದ ಬಗ್ಗೆ ಈ 10 ಸಂಗತಿಗಳು ತಿಳಿದಿರಲಿ

Karnataka Weather forecast
ಮಳೆ3 hours ago

Karnataka weather : ಬೆಂಗಳೂರಿಗೆ ಭಾರಿ ಮಳೆ ಎಚ್ಚರಿಕೆ; ಚಾಮರಾಜನಗರ, ರಾಮನಗರಕ್ಕೆ ಯೆಲ್ಲೋ ಅಲರ್ಟ್‌

Dina bhavishya
ಭವಿಷ್ಯ4 hours ago

Dina Bhavishya : ಈ ದಿನ ಹತಾಶೆ ಹಾಗೂ ಆತುರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ

ಪ್ರಮುಖ ಸುದ್ದಿ8 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌