ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ತಂದೆಯ ಆಸೆ ಈಡೇರಿಸಲು ಐಐಎಂ ಬಿಟ್ಟು ಭಾರತೀಯ ಸೇನಾ ಅಕಾಡೆಮಿ ಸೇರಿದ ಯುವಕ - Vistara News

ದೇಶ

ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ತಂದೆಯ ಆಸೆ ಈಡೇರಿಸಲು ಐಐಎಂ ಬಿಟ್ಟು ಭಾರತೀಯ ಸೇನಾ ಅಕಾಡೆಮಿ ಸೇರಿದ ಯುವಕ

Kargil War: ಮಕ್ಕಳು ತಂದೆಯ ಕನಸು ಈಡೇರಿಸಲು ನಾನಾ ತ್ಯಾಗ ಮಾಡುತ್ತಾರೆ. ಇಲ್ಲವೇ ನಾನಾ ಸಾಹಸ ಮಾಡುತ್ತಾರೆ. ಮಹಾರಾಷ್ಟ್ರದ ಪ್ರಜ್ವಲ್ ಅವರೂ ಇದೇ ಸಾಲಿಗೆ ಸೇರುತ್ತಾರೆ. ಐಐಎಂ ಸೇರುವ ಅವಕಾಶವಿದ್ದರೂ ಅದನ್ನು ತೊರೆದು ಭಾರತೀಯ ಸೇನಾ ಅಕಾಡೆಮಿ ಸೇರಿದ್ದಾರೆ ಅವರು.

VISTARANEWS.COM


on

he left IIM and joined IMA to fulfill the dream of his father who was martyred in Kargil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾಗ್ಪುರ್, ಮಹಾರಾಷ್ಟ್ರ: 1999ರ ಕಾರ್ಗಿಲ್‌ ಯುದ್ಧದಲ್ಲಿ (Kargil War) ಲ್ಯಾನ್ಸ್‌ ನಾಯಕ್ ಕೃಷ್ಣಾಜೀ ಸಮ್ರಿತ್ ಅವರು ಹುತಾತ್ಮರಾಗಿದ್ದರು. ಅವರಿಗೊಂದು ಆಸೆಯಿತ್ತು. ತಮ್ಮ ಮಗ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕೆಂಬ ಕನಸಿತ್ತು. ಮಹಾರಾಷ್ಟ್ರದ ಪುಲ್ಗಾಂವ್‌ನ ಕೃಷ್ಣಾಜೀ ಹುತಾತ್ಮರಾಗುವ ಹೊತ್ತಿಗೆ ಅವರ ಹಿರಿಯ ಮಗನಿಗೆ ಆಗ 2.5 ವರ್ಷ. ಕೃಷ್ಣಾಜೀ ಹುತಾತ್ಮರಾದ 45 ದಿನಗಳ ಬಳಿಕ ಕಿರಿಯ ಮಗ ಪ್ರಜ್ವಲ್ ಜನಿಸಿದ. ಈಗ ತಂದೆಯ ಆಸೆಯನ್ನು ಹಿರಿಯ ಮಗ ಈಡೇರಿಸದಿದ್ದರೂ, ಅವರ ಕಿರಿಯ ಪುತ್ರ ಪ್ರಜ್ವಲ್ ನೆರವೇರಿಸುತ್ತಿದ್ದಾರೆ.

ಹೌದು, 23 ವರ್ಷದ ಪ್ರಜ್ವಲ್ ಸೇನೆಯನ್ನು ಸೇರುವುದಕ್ಕಾಗಿ, ಡೆಹ್ರಾಡೂನ್‌ನಲ್ಲಿರುವ ಭಾರತೀಯ ಸೇನಾ ಅಕಾಡೆಮಿ(IMA)ಯನ್ನು ಜೂನ್ ಮೊದಲ ವಾರದಲ್ಲಿ ಸೇರ್ಪಡೆಯಾಗಲಿದ್ದಾರೆ. ಕೃಷ್ಣಾಜೀ ಅವರ ಹಿರಿಯ ಪುತ್ರ ಕುನಾಲ್ ಅವರು ಸೇನೆಗೆ ಬದಲಾಗಿ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಂದೆಯ ಆಸೆಯನ್ನು ಪ್ರಜ್ವಲ್ ನೆರವೇರಿಸಲು ಹೊರಟಿದ್ದಾರೆ. ಕುಟುಂಬದವರು ಪ್ರಜ್ವಲ್ ಆಸೆಗೆ ನೀರೆರದು ಪೋಷಿಸಿದ್ದಾರೆ.

ಪ್ರಜ್ವಲ್ ಅವರಿಗೆ ತಮ್ಮ ಗುರಿಯನ್ನು ಸಾಧಿಸುವುದು ತೀರಾ ಸರಳವಾಗಿರಲಿಲ್ಲ. ಅವರು ಒಂಬತ್ತು ಬಾರಿ ಸೇವಾ ಆಯ್ಕೆ ಮಂಡಳಿ ಸಂದರ್ಶನವನ್ನು ಎದುರಿಸಬೇಕಾಯಿತು. ಈ ಬಾರಿ ಅವರದ್ದು ಕೊನೆಯ ಪ್ರಯತ್ನವಾಗಿತ್ತು. ಒಂದೊಮ್ಮೆ ಅಕಾಡೆಮೆ ಸೇರುವುದು ವಿಫಲವಾದರೆ, ಬ್ಯಾಕ್‌ಅಪ್ ಪ್ಲ್ಯಾನ್ ಆಗಿ, ಪ್ರಜ್ವಲ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಎಟಿ) ಪಾಸು ಮಾಡಿಕೊಂಡಿದ್ದರು. ಇದರಿಂದಾಗಿ ಅವರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(IIM) ಇಂಧೋರ್ ಮತ್ತು ಕೋಯಿಕ್ಕೋಡ್‌ನಿಂದ ಆಫರ್ ಕೂಡಾ ಬಂದಿತ್ತು. ಅಂತಿಮವಾಗಿ ಐಐಎಂ ಬದಲಿಗೆ ಐಎಂಎಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Pervez Musharraf Death: ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದ ಮುಷರಫ್, ಆಗ್ರಾ ಮಾತುಕತೆ ಮುರಿದರು

ತಂದೆಯ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಜ್ವಲ್ ಪ್ರತಿಷ್ಠಿತ ಐಐಎಂ ಕಾಲೇಜ್‌ಗಳನ್ನು ತ್ಯಾಗ ಮಾಡಿ, ಭಾರತೀಯ ಸೇನಾ ಅಕಾಡೆಮಿ ಸೇರಲು ರೆಡಿಯಾಗಿದ್ದಾರೆ. ಬಹುಶಃ ಅವರ ಹಿರಿಯ ಸಹೋದರ ಸೇನೆ ಸೇರಲು ಮನಸ್ಸು ಮಾಡಿದ್ದರೆ, ಪ್ರಜ್ವಲ್ ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದರೇನೋ. ಏನೇ ಇರಲಿ. ಪ್ರಜ್ವಲ್ ಅವರ ತ್ಯಾಗಕ್ಕೆ, ತಂದೆಯ ಮೇಲಿನ ಪ್ರೀತಿಗೆ ನಾವು ಸಲಾಮ್ ಮಾಡಲೇಬೇಕು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Salman Khan : ಸಲ್ಮಾನ್​ ಮನೆ ಬಳಿ ಗುಂಡಿನ ದಾಳಿ; ಪಂಜಾಬ್​​ನಲ್ಲಿ ಗನ್​ ಕೊಟ್ಟವರಿಬ್ಬರ ಬಂಧನ

Salman Khan : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ನಡೆದಿತ್ತು. ಆ ಆರೋಪಿಗಳಿಗೆ ಮಾರ್ಚ್ 15 ರಂದು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಎಂಬಿಬ್ಬರು ಪಿಸ್ತೂಲ್ ಮತ್ತು ಕಾಟ್ರಿಜ್​ಗಳನ್ನು ನೀಡಿದ್ದರು. ಈ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Salman Khan
Koo

ಮುಂಬಯಿ: ಬಾಲಿವುಡ್​ ನಟ ಸಲ್ಮಾನ್​ ಖಾನ್ (Salman Khan) ಅವರ ಮನೆಯ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ (Firing at Salman Khan house) ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಪಂಜಾಬ್​ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಗುಂಡಿನ ದಾಳಿ ನಡೆಸಿದವರಿಗೆ ಗನ್​ಗಳನ್ನು ನೀಡಿದ್ದರು.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ನಡೆದಿತ್ತು. ಆ ಆರೋಪಿಗಳಿಗೆ ಮಾರ್ಚ್ 15 ರಂದು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಎಂಬಿಬ್ಬರು ಪಿಸ್ತೂಲ್ ಮತ್ತು ಕಾಟ್ರಿಜ್​ಗಳನ್ನು ನೀಡಿದ್ದರು. ಈ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದಾರೆ.

ಸಲ್ಮಾನ್ ಖಾನ್‌ನನ್ನು ಕೊಂದೇ ತೀರುತ್ತೇನೆ, ನನ್ನ ಜೀವನದ ಗುರಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿʼʼ ಎಂದು ಉಲ್ಲೇಖಿಸಿದ್ದಾರೆ. ʻʻಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂಬುದಾಗಿ ಹೇಳಿದ್ದಾರೆ.

“ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆʼʼ ಎಂದು ಬಿಷ್ಣೋಯ್ ಹೇಳಿದ್ದಾರೆ.

ಇದನ್ನೂ ಓದಿ: Gyanvapi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ನೀಡಿದ್ದ ಜಡ್ಜ್‌ಗೆ ವಿದೇಶದಿಂದ ಜೀವ ಬೆದರಿಕೆ

ʻʻಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ” ಹೇಳಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ, ಕೃಷ್ಣಮೃಗವನ್ನು ಕೊಂದ ಆರೋಪದ ಮೂಲಕ ಸಲ್ಮಾನ್ ತನ್ನ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಲಾರೆನ್ಸ್‌ ಬಿಷ್ಣೋಯ್‌ ಹೇಳಿದ್ದಾರೆ.

ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲ. ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ನಾನು ಬೇರೆಯವರನ್ನು ಅವಲಂಬಿಸುವುದಿಲ್ಲ,’’ ಎಂದು ಎಬಿಪಿ ಸುದ್ದಿವಾಹಿನಿಗೆ ತಿಳಿಸಿದರು.

2018 ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಇದನ್ನು ಜಾಂಬಾಜಿ ಎಂದೂ ಕರೆಯುತ್ತಾರೆ.

Continue Reading

Lok Sabha Election 2024

Voting Tips: ಮತದಾನಕ್ಕೆ ಮೊದಲು ಏನು ಮಾಡಬೇಕು, ಏನು ಮಾಡಬಾರದು?

Voting Tips: ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ- 2024ರ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಮತಗಟ್ಟೆ ಆವರಣದಲ್ಲಿ ಮತದಾರರು ಮಾಡಬಹುದಾದ, ಮಾಡಬಾರದ ಕೆಲಸಗಳ ಪಟ್ಟಿ ಇಲ್ಲಿದೆ. ಮತ ಚಲಾವಣೆಯ ನಿಯಮಗಳನ್ನು ತಪ್ಪದೇ ಪಾಲಿಸಿ.

VISTARANEWS.COM


on

By

Lok Sabha Election-2024
Koo

ಬೆಂಗಳೂರು: ಲೋಕಸಭಾ (Voting Tips) ಚುನಾವಣೆ 2024ರ (Lok Sabha Election 2024) ಎರಡನೇ ಹಂತದ (second phase) ಮತದಾನ (voting) ಕರ್ನಾಟಕದಲ್ಲಿ (karnataka) ಮೊದಲ ಹಂತದ ಮತದಾನ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದೆ. ಮತದಾನ ಪ್ರಕ್ರಿಯೆಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಮತದಾರರೂ ತಮ್ಮ ಹಕ್ಕು ಚಲಾವಣೆಗೆ ಕಾತರರಾಗಿದ್ದಾರೆ.

ಎರಡನೇ ಹಂತದ ಚುನಾವಣಾ ಪ್ರಚಾರವು ಏಪ್ರಿಲ್ 24ರಂದು ಕೊನೆಯಾಗಿದ್ದು, ಮತದಾನವು ಶುಕ್ರವಾರ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ನಡೆಯಲಿದೆ.

ಎರಡನೇ ಹಂತದಲ್ಲಿ ಕೇರಳದ 20 ಸ್ಥಾನಗಳು, ಕರ್ನಾಟಕದ 28 ಸ್ಥಾನಗಳಲ್ಲಿ 14, ರಾಜಸ್ಥಾನದ 13 ಸ್ಥಾನಗಳು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8 ಸ್ಥಾನಗಳು, ಮಧ್ಯಪ್ರದೇಶದ ಏಳು ಸ್ಥಾನಗಳು, ಅಸ್ಸಾಂನಲ್ಲಿ ತಲಾ 5 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬಿಹಾರ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಮೂರು ಸ್ಥಾನಗಳು ಮತ್ತು ಮಣಿಪುರ, ತ್ರಿಪುರಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.

ಇದನ್ನೂ ಓದಿ: Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್‌ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!

ಮತದಾನ ಮಾಡಲಿರುವ ಮತದಾರರಿಗೆ ಕೆಲವೊಂದು ಜವಾಬ್ದಾರಿಗಳಿವೆ. ಮತದಾನದ ವೇಳೆ ಮತದಾರ ಮಾಡಬೇಕಾದ ಮತ್ತು ಮಾಡಬಾರದ ನಿಯಮಗಳು ಇಂತಿವೆ.


ಮತದಾನದಕ್ಕೂ ಮೊದಲು ಹೀಗೆ ಮಾಡಿ…

1. ಮತದಾನಕ್ಕೆ ಹೋಗುವ ಮುನ್ನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ಮತಗಟ್ಟೆಯನ್ನು ದೃಢೀಕರಿಸಿ.

2. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇದನ್ನು ಮಾಡಬಹುದು.

3. ನಿರ್ಣಾಯಕ ಲೋಕಸಭಾ ಚುನಾವಣೆ 2024ಕ್ಕೆ ನಿಮ್ಮ ಮತವನ್ನು ಚಲಾಯಿಸುವ ಮೊದಲು ನಿಮ್ಮ ಆಯಾ ಮತಗಟ್ಟೆಯಲ್ಲಿ ಮತದಾನದ ಸಮಯವನ್ನು ಪರಿಶೀಲಿಸಿ.

4. ಮತದಾರರು ತಮ್ಮ ಗುರುತು ಚೀಟಿ, ಆಧಾರ್, ಡ್ರೈವಿಂಗ್ ಲೈಸೆನ್ಸ್‌ನಂತಹ ಇತರ ಹೆಚ್ಚುವರಿ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಹೋಗಿ.

5. ಮತ ಚಲಾಯಿಸಲು ಹೊರಡುವ ಮೊದಲು ಸರಿಯಾದ ಆಯ್ಕೆ ಮಾಡಲು ನಿಮ್ಮ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಿ.

6. ನಿಮ್ಮ ಮತವನ್ನು ಚಲಾಯಿಸಿದ ಅನಂತರ EVMಗೆ ಲಿಂಕ್ ಮಾಡಲಾದ VVPAT ಯಂತ್ರದ ಔಟ್‌ಪುಟ್ ಅನ್ನು ಪರಿಶೀಲಿಸಿ. ಯಾವುದೇ ಸಂಶಯ ಕಂಡು ಬಂದರೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿ.

ಮತ ಹಾಕಲು ಹೋದಾಗ ಹೀಗೆ ಮಾಡಬೇಡಿ:

1. ಮತಗಟ್ಟೆಯಲ್ಲಿ ಮೊಬೈಲ್ ಬಳಸಬೇಡಿ.

2. ನಿಮ್ಮ ಮತವನ್ನು ಚಲಾಯಿಸುವಾಗ ಚಿತ್ರ ಅಥವಾ ಸೆಲ್ಫಿಗಳನ್ನು ತೆಗೆದುಕೊಳ್ಳಬೇಡಿ.

3. ಮತ್ತೊಬ್ಬ ಮತದಾರರ ಹೆಸರಿನಲ್ಲಿ ಹೋಗಿ ಮತ ಹಾಕುವುದು ಗಂಭೀರ ಅಪರಾಧವಾಗಿದ್ದು, ಬೇರೆಯವರ ಹೆಸರಿನಲ್ಲಿ ಮತ ಚಲಾಯಿಸಬಾರದು.

4. ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಚಿಹ್ನೆಯನ್ನು ಉತ್ತೇಜಿಸುವ ಯಾವುದನ್ನೂ ಮತಗಟ್ಟೆಗೆ ತರಬೇಡಿ.
ಮತದಾನ ಮಾಡುವಾಗ ಒಂದಕ್ಕಿಂತ ಹೆಚ್ಚು ಬಟನ್‌ಗಳನ್ನು ಒತ್ತಬೇಡಿ.

5. ಒಬ್ಬ ಮತದಾರರಾಗಿ ನೀವು ಯಾರ ಪರವಾಗಿ ಮತ ಹಾಕಿದ್ದೀರಿ ಎಂಬುದನ್ನು ಒಬ್ಬ ಅಭ್ಯರ್ಥಿ/ ಪಕ್ಷವನ್ನು ಬಹಿರಂಗಪಡಿಸಬಾರದು.

Continue Reading

Latest

Gyanvapi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ನೀಡಿದ್ದ ಜಡ್ಜ್‌ಗೆ ವಿದೇಶದಿಂದ ಜೀವ ಬೆದರಿಕೆ

ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Mosque complex) ಯ ವೀಡಿಯೋಗ್ರಾಫಿಕ್‌ ಸಮೀಕ್ಷೆಗೆ (Videographic survey) ಮಾಡುವಂತೆ ಆದೇಶ ನೀಡುವ ಮೂಲಕ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಗಮನ ಸೆಳೆದಿದ್ದ ಹೆಚ್ಚುವರಿ ಸೆಶನ್ಸ್‌ ಜಡ್ಜ್‌ ರವಿ ಕುಮಾರ್‌ ದಿವಾಕರ್‌ (Ravi kumar Diwakar) ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ.

VISTARANEWS.COM


on

By

Gyanvapi Mosque
Koo

ಬರೇಲಿ(ಉತ್ತರ ಪ್ರದೇಶ): ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Mosque complex) ಯ ವೀಡಿಯೋಗ್ರಾಫಿಕ್‌ ಸಮೀಕ್ಷೆ (Videographic survey) ಮಾಡುವಂತೆ ಆದೇಶ ನೀಡುವ ಮೂಲಕ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಗಮನ ಸೆಳೆದಿದ್ದ ಹೆಚ್ಚುವರಿ ಸೆಶನ್ಸ್‌ ಜಡ್ಜ್‌ ರವಿ ಕುಮಾರ್‌ ದಿವಾಕರ್‌ (Ravi kumar Diwakar) ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ವಿದೇಶಿ ಫೋನ್‌ ನಂಬರ್‌ಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು (International threat calls) ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶ ದಿವಾಕರ್‌ ಪೊಲೀರಿಗೆ ದೂರು ನೀಡಿದ್ದಾರೆ. ಏ. 15 ರಂದು ಅಂತಾರಾಷ್ಟ್ರೀಯ ನಂಬರ್‌ನಿಂದ ಕರೆ ಬಂದಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ಜೀವ ಬೆದರಿಕೆಯೊಡ್ಡಿದ್ದ. ಇದಾದ ಕೆಲವು ದಿನಗಳ ನಂತರ ಅಂತಹದ್ದೇ ಮತ್ತೊಂದು ಕರೆ ಬಂದಿದೆ ಎಂದು ದಿವಾಕರ್‌ ದೂರಿನಲ್ಲಿ ತಿಳಿಸಿದ್ದಾರೆ.

2022ರಲ್ಲಿ ಕಾಶಿ ವಿಶ್ವನಾಥ ದೇಗುಲ (Kashi Vishwanath temple) ಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿಕ್‌ ಸಮೀಕ್ಷೆಗೆ ದಿವಾಕರ್‌ ಆದೇಶಿದ್ದರು. ಅಲ್ಲದೇ ಶುದ್ಧೀಕರಣ ಪ್ರದೇಶವನ್ನು ಸೀಲ್‌ ಮಾಡುವಂತೆಯೂ ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದರು. ಮಸೀದಿಯ ಪಶ್ಚಿಮ ಗೋಡೆಯ ಮೇಲಿರುವ ಕೆಲವು ದೇವತೆಗಳ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿ ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಹಿಂದೆ ಸಮೀಕ್ಷೆಗೆ ಆದೇಶಿಸಲಾಗಿತ್ತು. ಇದಾದ ಬಳಿಕ ಅವರಿಗೆ ಆಗಾಗ ಬೆದರಿಕೆ ಕರೆಗಳು ಬರಲು ಶುರುವಾಗಿತ್ತು.

ಇತ್ತೀಚೆಗಷ್ಟೇ ಬರೇಲಿಗೆ ವರ್ಗಾವಣೆಗೊಂಡಿದ್ದ ದಿವಾಕರ್‌, ಈ ಹಿಂದೆಯೂ ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಜೀವ ಬೆದರಿಕೆ ಕರೆ ಬಂದಿರುವ ಬಗ್ಗೆ ದೂರು ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಅವರು ಬರೇಲಿಗೆ ವರ್ಗಾವಣೆಗೊಂಡಿದ್ದರು. ಬರೇಲಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 2018ರಲ್ಲಿ ನಡೆದಿದ್ದ ಬರೇಲಿ ಗಲಭೆ ಪ್ರಕರಣ ಕೈಗೆತ್ತಿಕೊಂಡಿದ್ದರು. ಗಲಭೆಯ ಮಾಸ್ಟರ್‌ಮೈಂಡ್‌ ಮೌಲಾನಾ ತೌಖೀರ್‌ ರಾಝಾ ವಿಚಾರಣೆಗೆ ಹಾಜರಾಗುವಂತೆ ಆದೇಶ ಹೊರಡಿಸಿದ್ದರು. ಈ ಗಲಭೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳು ನಾಶವಾಗಿದ್ದವು. ಅಲ್ಲದೇ ಬರೇಲಿಯಲ್ಲಿ ಬರೋಬ್ಬರಿ 27 ದಿನಗಳ ಕಾಲ ನಿಷೇದಾಜ್ಞೆ ಹೊರಡಿಸಲಾಗಿತ್ತು.

ಇದನ್ನೂ ಓದಿ: Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್‌ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!

ನ್ಯಾಯಾಧೀಶ ದಿವಾಕರ್‌ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಕರೆ ಬಂದಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಅಲಹಾಬಾದ್‌ ಹೈಕೋರ್ಟ್‌ ಅವರಿಗೆ ವೈ ಕೆಟಗರಿ ಭದ್ರತೆ ನೀಡುವಂತೆ ಆದೇಶ ಹೊರಿಡಿಸಿತ್ತು. ಬಳಿಕ ಅದನ್ನು ಎಕ್ಸ್‌ ಕೆಟಗೆರಿ ಭದ್ರತೆಗೆ ಇಳಿಸಲಾಯಿತು. ಪ್ರಸ್ತುತ ದಿವಾಕರ್‌ ಅವರ ಭದ್ರತೆಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ ಅವರ ಸಹೋದ್ಯೋಗಿಗಳ ಪ್ರಕಾರ ಭದ್ರತಾ ಸಿಬ್ಬಂದಿಗಳಿಗೆ ಯಾವುದೇ ಬಂದೂಕುಗಳನ್ನು ನೀಡಿಲ್ಲ. ಹೀಗಾಗಿ ಜೀವ ಬೆದರಿಕೆ ಕರೆಗಳು ಆಗಾಗ ಬರುತ್ತಿದ್ದರೂ ನ್ಯಾಯಾಧೀಶರಿಗೆ ಕನಿಷ್ಠ ಭದ್ರತೆ ಸಿಗದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Narendra Modi : ತಮ್ಮನ್ನು ನಿಂದಿಸಿದ ರಾಹುಲ್​ಗೆ ಪ್ರತ್ಯುತ್ತರ ಕೊಟ್ಟ ಮೋದಿ; ಇಲ್ಲಿದೆ ವಿಡಿಯೊ

Narendra Modi: “ನನ್ನ ವಿರುದ್ಧ ರಾಹುಲ್ ಗಾಂಧಿ “ಶೆಹಜಾದಾ” ಎಂದು ಹೇಳಿಕೆ ನೀಡಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಮತ್ತು ಕೋಪಗೊಳ್ಳಬಾರದು ಎಂದು ನಾನು ಕೈಮುಗಿದು ವಿನಂತಿಸುತ್ತೇನೆ. ನಾವು “ಕಾಮ್ ದಾರ್” ಗಳು ಮತ್ತು ರಾಹುಲ್ ಮತ್ತು ಅವರ ಪಕ್ಷದವರು “ನಾಮ್ ದಾರ್”ಗಳು. ಈ ”ನಾಮ್ ದಾರ್” ಗಳು ಹಲವಾರು ವರ್ಷಗಳಿಂದ “ಕಾಮ್ ದಾರ್” ಗಳನ್ನು ಅವಮಾನಿಸುತ್ತಲೇ ಇದ್ದಾರೆ ಎಂದು ಹೇಳಿದರು.

VISTARANEWS.COM


on

Lok sabaha election
Koo

ನವದೆಹಲಿ: ತಮ್ಮನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪಾರ್ಹ ಪದಗಳಿಂದ ನಿಂದಿಸುತ್ತಿರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ (ಏಪ್ರಿಲ್ 25) ಮಾತನಾಡಿದ್ದಾರೆ. ಮಧ್ಯಪ್ರದೇಶದ ಮೊರೆನಾದಲ್ಲಿ ವಿಜಯ ಸಂಕಲ್ಪ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ಅವರ ಅವಹೇಳನಕಾರಿ ಹೇಳಿಕೆಗಳಿಂದ ಜನರು ವಿಚಲಿತರಾಗಬಾರದು ಎಂದು ಮನವಿ ಮಾಡಿದ್ದಾರೆ . ಬಿಜೆಪಿಯ “ಕಾಮ್ದಾರ್” (ಕಾರ್ಯಕರ್ತ) ಮತ್ತು ಕಾಂಗ್ರೆಸ್ ನ “ನಾಮ್ದಾರ್” (ರಾಜವಂಶ) ನಡುವೆ ವ್ಯತ್ಯಾಸವಿದೆ ಎಂದು ಹೇಳಿದ ಮೋದಿ, ವಿನಮ್ರ ಹಿನ್ನೆಲೆಯಿಂದ ಬಂದ ತಮ್ಮಂತವರಿಗೆ ಅವಮಾನಗಳು ಹೊಸತೇನಲ್ಲ ಎಂದು ಪ್ರತಿಪಾದಿಸಿದರು.

ನನ್ನ ವಿರುದ್ಧ ರಾಹುಲ್ ಗಾಂಧಿ “ಶೆಹಜಾದಾ” (ಚಕ್ರವರ್ತಿಯ ಮಗ) ಎಂದು ಹೇಳಿಕೆ ನೀಡಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಮತ್ತು ಕೋಪಗೊಳ್ಳಬಾರದು ಎಂದು ನಾನು ಕೈಮುಗಿದು ವಿನಂತಿಸುತ್ತೇನೆ. ನಾವು “ಕಾಮ್ ದಾರ್” ಗಳು ಮತ್ತು ರಾಹುಲ್ ಮತ್ತು ಅವರ ಪಕ್ಷದವರು “ನಾಮ್ ದಾರ್”ಗಳು. ಈ ”ನಾಮ್ ದಾರ್” ಗಳು ಹಲವಾರು ವರ್ಷಗಳಿಂದ “ಕಾಮ್ ದಾರ್” ಗಳನ್ನು ಅವಮಾನಿಸುತ್ತಲೇ ಇದ್ದಾರೆ ಎಂದು ಹೇಳಿದರು.

ಜನರು ಅವರ ಹೇಳಿಕೆಗಳನ್ನು ಕೇಳಿಸಿಕೊಂಡು ಸಮಯ ವ್ಯರ್ಥ ಮಾಡಬಾರದು ಹಾಗೂ ನಮ್ಮ ಗುರಿಯತ್ತ ಮುಂದುವರಿಯಬೇಕು. ಅವರು (ರಾಹುಲ್ ಗಾಂಧಿ) ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಸಂಕಷ್ಟದಲ್ಲಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಮ್ಮನ್ನು ಇನ್ನಷ್ಟು ಅವಮಾನಿಸುತ್ತಾರೆ. ನಾನು ಸಾಮಾನ್ಯ ವ್ಯಕ್ತಿ , ನಾನು ಬಡ ಹಿನ್ನೆಲೆಯಿಂದ ಬಂದಿರುವವನು. ಆದ್ದರಿಂದ ಇಂತಹ ಅವಮಾನಗಳು ನನಗೆ ಹೊಸತಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್‌ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!

ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಭಾರತದ ಚುನಾವಣಾ ಆಯೋಗ (ಇಸಿಐ) ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಮತ್ತು ವಿಭಜನೆಯನ್ನು ಪ್ರಚೋದಿಸುತ್ತಿವೆ ಎಂಬ ದೂರುಗಳು ದಾಖಲಾಗಿವೆ.

ಪ್ರಕರಣದ ದಾಖಲಿಸಿದ ಚುನಾವಣಾ ಆಯೋಗ

ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಚುನಾವಣಾ ಆಯೋಗವು ಜನ ಪ್ರತಿನಿಧ್ಯ ಕಾಯ್ದೆಯ ಸೆಕ್ಷನ್ 77 ಅನ್ನು ಅನ್ವಯಿಸಿದೆ. ಪಕ್ಷದ ಅಧ್ಯಕ್ಷರು ತಮ್ಮ ಸ್ಟಾರ್ ಪ್ರಚಾರಕರ ನಡವಳಿಕೆಗಳ ಮೇಲೆ ಕಣ್ಗಾವಲು ಇಟ್ಟಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧದ ಎಂಸಿಸಿ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಬೇಕಾಗಿದೆ. ಏಪ್ರಿಲ್ 29 ರಂದು ಬೆಳಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡಲು ಚುನಾವಣಾ ಆಯೋಗ ಅವರಿಬ್ಬರಿಗೆ ಗಡುವು ನಿಗದಿಪಡಿಸಿದೆ.

ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತ ಏಪ್ರಿಲ್ 19 ರಂದು ಮುಕ್ತಾಯಗೊಂಡಿದೆ. ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಲಿದೆ. ಮುಂದಿನ ಹಂತಗಳು ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿವೆ. 543 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.

Continue Reading
Advertisement
2nd PUC Exam 2 KSRTC BMTC bus travel free for students in exam timing
Lok Sabha Election 202412 mins ago

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯುತ್ತೀರಾ? ಹಾಗಿದ್ರೆ ನಿಮ್ಗೆ ಬಸ್‌ ಪ್ರಯಾಣ ಫ್ರೀ!

Money Guide
ಮನಿ-ಗೈಡ್34 mins ago

Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

2nd PUC Exam 2 from April 29 and make Another mistake
ಶಿಕ್ಷಣ35 mins ago

2nd PUC Exam: ಏಪ್ರಿಲ್‌ 29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಮತ್ತೊಂದು ಎಡವಟ್ಟು!

Salman Khan
ಪ್ರಮುಖ ಸುದ್ದಿ49 mins ago

Salman Khan : ಸಲ್ಮಾನ್​ ಮನೆ ಬಳಿ ಗುಂಡಿನ ದಾಳಿ; ಪಂಜಾಬ್​​ನಲ್ಲಿ ಗನ್​ ಕೊಟ್ಟವರಿಬ್ಬರ ಬಂಧನ

Karnataka Weather Forecast
ಮಳೆ49 mins ago

Karnataka Weather : ನಾಳೆ ಬೆಳಗಾವಿ, ಚಾಮರಾಜನಗರದಲ್ಲಿ ಮಳೆ ; ಉಳಿದೆಡೆ ಬಿಸಿಲ ಶಾಕ್‌

Lok Sabha Election-2024
Lok Sabha Election 202452 mins ago

Voting Tips: ಮತದಾನಕ್ಕೆ ಮೊದಲು ಏನು ಮಾಡಬೇಕು, ಏನು ಮಾಡಬಾರದು?

Gyanvapi Mosque
Latest52 mins ago

Gyanvapi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ನೀಡಿದ್ದ ಜಡ್ಜ್‌ಗೆ ವಿದೇಶದಿಂದ ಜೀವ ಬೆದರಿಕೆ

Case of luring apartment dwellers Relief for DK Shivakumar
Lok Sabha Election 20241 hour ago

DK Shivakumar: ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಮಿಷ ಪ್ರಕರಣ; ಡಿ.ಕೆ. ಶಿವಕುಮಾರ್‌ಗೆ ರಿಲೀಫ್

ಫ್ಯಾಷನ್1 hour ago

Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

Lok sabaha election
ಪ್ರಮುಖ ಸುದ್ದಿ2 hours ago

Narendra Modi : ತಮ್ಮನ್ನು ನಿಂದಿಸಿದ ರಾಹುಲ್​ಗೆ ಪ್ರತ್ಯುತ್ತರ ಕೊಟ್ಟ ಮೋದಿ; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ4 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ4 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ7 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20249 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌