Kolkata Doctor murder case: ಕೋಲ್ಕತ್ತಾ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ- ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ - Vistara News

ದೇಶ

Kolkata Doctor murder case: ಕೋಲ್ಕತ್ತಾ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ- ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Kolkata Doctor murder case: ಸಂತ್ರಸ್ತೆ ಸಾವಿಗೆ ನ್ಯಾಯ ಸಿಗಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಧ್ಯಪ್ರದೇಶ ಮಾಡಲು ನಿರ್ಧರಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10:30ಕ್ಕೆ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಇರುವ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.

VISTARANEWS.COM


on

Kolkata Doctor murder case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೋಲ್ಕತಾದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ(RG Kar Medical college) ನಡೆದಿರುವ ವೈದ್ಯೆಯ ಬರ್ಬರ ಸಾಮೂಹಿಕ ಅತ್ಯಾಚಾರ ಹಾಗು ಕೊಲೆಯ (Kolkata Doctor murder case) ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್‌((Supreme Court)ನಲ್ಲಿ ನಡೆಯಲಿದೆ.

ಸಂತ್ರಸ್ತೆ ಸಾವಿಗೆ ನ್ಯಾಯ ಸಿಗಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಧ್ಯಪ್ರದೇಶ ಮಾಡಲು ನಿರ್ಧರಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10:30ಕ್ಕೆ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಇರುವ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ

ಇದನ್ನೂ ಓದಿ: Kolkata Doctor Murder case: ಮಮತಾ ಬ್ಯಾನರ್ಜಿ ಹತ್ಯೆಗೆ ಪ್ರಚೋದಿಸಿ ಪೋಸ್ಟ್‌- ವಿದ್ಯಾರ್ಥಿನಿ ಅರೆಸ್ಟ್‌

ಇನ್ನು ಪ್ರಕರಣದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಶಾಮೀಲಾಗಿರುವ ಬಗ್ಗೆ ಪರಿಶೀಲಿಸಲು ಪಶ್ಚಿಮ ಬಂಗಾಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ನಾಲ್ಕು ಬಾರಿ ಸಿಬಿಐ ವಿಚಾರಣೆಗೆ ಒಳಗಾದ ಘೋಷ್, ಹತ್ಯೆಗೀಡಾದ ಟ್ರೈನಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಟೀಕೆಗಳನ್ನು ಮಾಡಿದ ನಂತರ ವೈದ್ಯರ ಆಕ್ರೋಶ ಹೆಚ್ಚಾಗಿದೆ. ಅವರ ಕರೆ ವಿವರಗಳು ಮತ್ತು ಚಾಟ್ ದಾಖಲೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sexual Assault: ಫೇಕ್‌ NCC ಕ್ಯಾಂಪ್‌ ಆಯೋಜಿಸಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ; ರಾಜಕಾರಣಿ ಸೇರಿ 8 ಮಂದಿ ಅರೆಸ್ಟ್‌

Sexual Assault: ನಕಲಿ ಎನ್‌ಸಿಸಿ ಕ್ಯಾಂಪ್‌ನಲ್ಲಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ರಾಜಕೀಯ ಪಕ್ಷದ ಮುಖಂಡ ಸೇರಿದಂತೆ ಎಂಟು ಜನರನ್ನು ಅರೆಸ್ಟ್‌ ಮಾಡಲಾಗಿದೆ.

VISTARANEWS.COM


on

Sexual Assault
Koo

ಚೆನ್ನೈ: ಕೋಲ್ಕತ್ತಾ ಟ್ರೈನಿ ವೈದ್ಯೆ ಹತ್ಯೆ ಪ್ರಕರಣ(Kolkata Doctor Murder case) ಖಂಡಿಸಿ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ತಮಿಳುನಾಡಿ(Tamil Nadu)ನಲ್ಲಿ ಇಂತಹದ್ದೇ ಒಂದು ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ನಕಲಿ ಎನ್‌ಸಿಸಿ ಕ್ಯಾಂಪ್‌(NCC)ನಲ್ಲಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ(Sexual Assault) ನಡೆದಿದೆ. ವಿಚಾರಣೆ ನಡೆಸಿದಾಗ ಇತರ ನಾಲ್ವರು ಬಾಲಕಿಯರಿಗೂ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ರಾಜಕೀಯ ಪಕ್ಷದ ಮುಖಂಡ ಸೇರಿದಂತೆ ಎಂಟು ಜನರನ್ನು ಅರೆಸ್ಟ್‌ ಮಾಡಲಾಗಿದೆ.

ಘಟನೆ ವಿವರ:

ಕೃಷ್ಣಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ರಾಜಕೀಯ ಪಕ್ಷವಾಗಿರುವ ನಾಮ್‌ ತಮಿಳರ್‌ ಕಚ್ಚಿಯ ಜಿಲ್ಲಾ ಕಾರ್ಯದರ್ಶಿ ಶಿವರಾಮನ್‌ ಖಾಸಗಿ ಶಾಲೆಯೊಂದಕ್ಕೆ ಭೇಟಿ ಕೊಟ್ಟು ಎನ್‌ಸಿಸಿ ಕ್ಯಾಂಪ್‌ ಆಯೋಜಿಸುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಆತನೇ ಸ್ವಯಂ ಆಸಕ್ತಿಯಿಂದ ಎನ್‌ಸಿಸಿ ಕ್ಯಾಂಪ್‌ ಆಯೋಜಿಸಿದ್ದ. ಆತನ ಜೊತೆಗಿದ್ದ ತಂಡವನ್ನು ಮತ್ತು ಆತನ ಹಿನ್ನೆಲೆ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದೇ ಶಾಲಾ ಪ್ರಾಂಶುಪಾಲರು ಇದಕ್ಕೆ ಒಪ್ಪಿದರು.

ಶಿಬಿರವು ಆಗಸ್ಟ್ 5 ರಿಂದ ಆಗಸ್ಟ್ 9 ರವರೆಗೆ ನಡೆದಿದ್ದು, 17 ಹುಡುಗಿಯರು ಸೇರಿದಂತೆ 41 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದ ಸಮಯದಲ್ಲಿ, ಹುಡುಗರನ್ನು ನೆಲ ಮಹಡಿಯಲ್ಲಿ ಮತ್ತು ಹುಡುಗಿಯರನ್ನು ಮೇಲಿನ ಮಹಡಿಯಲ್ಲಿ ಇರಿಸಲಾಗಿತ್ತು. ಅಲ್ಲಿ ಮಿಲಿಟರಿ ತರಹದ ತರಬೇತಿ ನೀಡಲಾಗಿತ್ತು. ಅಲ್ಲದೇ ರಾತ್ರಿಯಲ್ಲಿ ನಾಲ್ಕು ಗಂಟೆಗಳ ಪಾಳಿಗಳವರೆಗೆ ಶಾಲೆಯ ಕಾಂಪೌಂಡ್ ಅನ್ನು ಕಾವಲು ಕಾಯಲು ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ನಿಯೋಜಿಸಲಾಯಿತು. ಈ ರಾತ್ರಿ ಪಾಳಿಯಲ್ಲಿ ಶಿವರಾಮನ್ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಸಂತ್ರಸ್ತೆ ಶಾಲೆಯ ಪ್ರಾಂಶುಪಾಲರಾದ ಸತೀಶ್ ಕುಮಾರ್ ಅವರಿಗೆ ಈ ಹೀನ ಕೃತ್ಯದ ಬಗ್ಗೆ ದೂರು ನೀಡಿದ್ದಳು. ಆದರೆ ಕ್ರಮ ತೆಗೆದುಕೊಳ್ಳುವ ಬದಲು, ಪ್ರಾಂಶುಪಾಲರು, ಶಾಲೆಯ ಇಬ್ಬರು ಶಿಕ್ಷಕರೊಂದಿಗೆ ಸೇರಿ ಈ ಕೃತ್ಯವನ್ನು ಮುಚ್ಚಿಡಲು ನಿರ್ಧರಿಸಿದರು. ಹುಡುಗಿ ಅಂತಿಮವಾಗಿ ತನ್ನ ತಾಯಿಗೆ ತಿಳಿಸಿದಳು, ಆಕೆಯ ತಂದೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಲೈಂಗಿಕ ದೌರ್ಜನ್ಯಕ್ಕೊಳಗಾದ ಹುಡುಗಿಯನ್ನು ಹೊರತುಪಡಿಸಿ, ಕನಿಷ್ಠ ನಾಲ್ವರು ವಿದ್ಯಾರ್ಥಿನಿಯರಿಗೆ ಶಿವರಾಮನ್ ಮತ್ತು ಅವರ ಸಹಚರರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಶಿವರಾಮನ್ ಮತ್ತು ಆತನ ಸಹಚರರು ಕೃಷ್ಣಗಿರಿಯ ಇತರ ಮೂರು ಶಾಲೆಗಳಲ್ಲಿ ಇದೇ ರೀತಿಯ ಅನಧಿಕೃತ ಎನ್‌ಸಿಸಿ ಕ್ಯಾಂಪ್‌ ನಡೆಸಿದೆ ಎನ್ನಲಾಗಿದೆ. ಅವರು ಈ ಹಿಂದಿನ ಅವಧಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುವ ಮೂಲಕ ಪ್ರಸ್ತುತ ಶಾಲೆಯ ಆಡಳಿತವನ್ನು ಮನವೊಲಿಸಿದರು.

ಇದನ್ನೂ ಓದಿ: Uttarakhand Horror: ದೇಶವನ್ನೇ ಬೆಚ್ಚಿಬೀಳಿಸೋ ಮತ್ತೊಂದು ಘಟನೆ! ಬಸ್‌ನಲ್ಲೇ ಯುವತಿ ಮೇಲೆ ಡ್ರೈವರ್‌ ಸೇರಿ ಐವರಿಂದ ಗ್ಯಾಂಗ್‌ರೇಪ್‌

Continue Reading

ದೇಶ

Earthquake: ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಬ್ಯಾಕ್‌ ಟು ಬ್ಯಾಕ್‌ ಭೂಕಂಪ

Earthquake: ಇಂದು ಬೆಳಗ್ಗೆ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಯಾವುದೇ ಬೆಳವಣಿಗೆಗಳಿಗಾಗಿ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ

VISTARANEWS.COM


on

Earthquake
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu Kashmir)ದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಎರಡು ಭೂಕಂಪ(Earthquake) ಸಂಭವಿಸಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ಮತ್ತು 4.8 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಯಾವುದೇ ಬೆಳವಣಿಗೆಗಳಿಗಾಗಿ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ತಿಂಗಳೂ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಜನ ಬೆಚ್ಚಿಬಿದ್ದಿದ್ದರು. ರಿಕ್ಟರ್‌ ಮಾಪನದಲ್ಲಿ 4.1 ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬಂದಿದ್ದರು. ಕೆಲ ಗಂಟೆಗಳ ಬಳಿಕವೇ ಅವರು ಮನೆಗೆ ಹೋಗಿದ್ದಾರೆ. ಆದಾಗ್ಯೂ, ಪ್ರಾಣಾಪಾಯ ಸೇರಿ ಯಾವುದೇ ದುರಂತ ಸಂಭವಿಸಿರಲಿಲ್ಲ.

ಬಾರಾಮುಲ್ಲಾ ಪ್ರದೇಶದಲ್ಲಿ ಜುಲೈ 12 ಮಧ್ಯಾಹ್ನ 12.26ರ ಸುಮಾರಿಗೆ ಭೂಮಿ ಕಂಪಿಸಿದೆ. ಜನರ ಮನೆಗಳಲ್ಲಿರುವ ಫ್ಯಾನ್‌ ಹಾಗೂ ಮೇಜುಗಳು ಅಲುಗಾಡಿದ ಕಾರಣ ಜನ ಕೂಡಲೇ ಮನೆಯಿಂದ ಹೊರಗೆ ಬಂದಿದ್ದಾರೆ. ಭೂಮಿಯ 10 ಕಿಲೋಮೀಟರ್‌ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ ಸೇರಿ ಹಲವೆಡೆ ಭೂಕಂಪ ಸಂಭವಿಸಿತ್ತು.

ಚೀನಾದಲ್ಲಿ ಕೆಲ ತಿಂಗಳ ಹಿಂದಷ್ಟೇ ಸಂಭವಿಸಿದ್ದ ಭೂಕಂಪದಲ್ಲಿ 100ಕ್ಕೂ ಅಧಿಕ ಜನ ಮೃತಪಟ್ಟು, ಸಾವಿರಾರು ನಾಗರಿಕರು ಗಾಯಗೊಂಡಿದ್ದರು. ಜಪಾನ್‌ನಲ್ಲೂ ಹೊಸ ವರ್ಷದ ದಿನವೇ ಭೂಕಂಪ ಸಂಭವಿಸಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಚೀನಾದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿತ್ತು. ಅಫಘಾನಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌ ಸೇರಿ ಹಲವೆಡೆ ಭೂಕಂಪ ಸಂಭವಿಸಿದರೆ, ದೆಹಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪದ ಅನುಭವವಾಗುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ: Earthquake: ಜಮ್ಮು-ಕಾಶ್ಮೀರದಲ್ಲಿ 4.1 ತೀವ್ರತೆಯ ಭೂಕಂಪ; ಮನೆಯಿಂದ ಓಡಿಬಂದ ಜನ

Continue Reading

ಪ್ರವಾಸ

Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದಾಗಿ ಛಾಯಾಗ್ರಹಣಕ್ಕೆ ಅಸಂಖ್ಯಾತ ಅವಕಾಶಗಳನ್ನು ಒದಗಿಸುವ ನಗರ ಹೈದರಾಬಾದ್ (Hyderabad Tour). ಪುರಾತನ ಸ್ಮಾರಕ, ಬಿಡುವಿಲ್ಲದ ಮಾರುಕಟ್ಟೆ, ಶಾಂತಿಯುತ ಪರಿಸರ ಹೀಗೆ ಇಲ್ಲಿನ ಪ್ರತಿಯೊಂದು ಪ್ರದೇಶವೂ ಛಾಯಾಗ್ರಾಹಕರನ್ನು ಸೆಳೆಯುವುದು. ಕೆಮರಾ ಲೆನ್ಸ್ ಮೂಲಕ ಸುಂದರ ನಗರದ ಕಥೆಯನ್ನು ಇಲ್ಲಿ ಹೆಣೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Hyderabad Tour
Koo

ಸುಂದರವಾಗಿ ಫೋಟೋಶೂಟ್ (photoshoot) ಮಾಡಿಕೊಳ್ಳಬೇಕು, ಜೊತೆಗೆ ಒಂದಷ್ಟು ಪ್ರವಾಸದ (tour guide) ಸವಿಯನ್ನು ಅನುಭವಿಸಬೇಕು ಎಂದು ಬಯಸುವವರು ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ (Hyderabad Tour) ಭೇಟಿ ನೀಡಬಹುದು. ಇಲ್ಲಿ ಅತಂತ್ಯ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಬಹುದು. ಶ್ರೀಮಂತ ಐತಿಹಾಸಿಕ ಭೂತಕಾಲ ಮತ್ತು ಆಧುನಿಕ ನಗರ ಭೂದೃಶ್ಯದ ಮಿಶ್ರಣವಾಗಿರುವ ಈ ಪ್ರದೇಶ ಉತ್ತಮ ಛಾಯಾಗ್ರಹಣದ ಆಯ್ಕೆಗಳನ್ನು ನೀಡುತ್ತದೆ.

ಪ್ರಾಚೀನ ವಾಸ್ತುಶಿಲ್ಪ, ಬಿಡುವಿಲ್ಲದ ಮಾರುಕಟ್ಟೆಗಳು, ಶಾಂತಿಯುತ ಸರೋವರ, ಉತ್ಸಾಹಭರಿತ ಬೀದಿಗಳು ಹೈದರಾಬಾದ್ ನಲ್ಲಿ ಛಾಯಾಗ್ರಾಹಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಹೊಂದಿದೆ. ನಗರದೊಳಗಿನ ಈ ಕೆಲವು ಪ್ರಮುಖ ತಾಣಗಳಲ್ಲಿ ಉತ್ತಮ ಛಾಯಾಚಿತ್ರಗಳನ್ನು ಪಡೆಯಬಹುದು.


ಚಾರ್‌ ಮಿನಾರ್‌

ಹಳೆಯ ನಗರದ ಹೃದಯಭಾಗದಲ್ಲಿರುವ ಚಾರ್ ಮಿನಾರ್‌ ಹೈದರಾಬಾದ್‌ನ ಪರಂಪರೆ ಮತ್ತು ಇತಿಹಾಸವನ್ನು ಸಂಕೇತಿಸುವ ವಾಸ್ತು ಶಿಲ್ಪದ ಐಕಾನ್ ಆಗಿದೆ. 1591ರಲ್ಲಿ ನಿರ್ಮಿಸಲಾದ ನಾಲ್ಕು ಸೊಗಸಾದ ಮಿನಾರ್‌ಗಳು ಮತ್ತು ಕಮಾನುಗಳು ರಾತ್ರಿಯಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತದೆ. ಚಾರ್ಮಿನಾರ್ ಸುತ್ತಮುತ್ತಲಿನ ಪ್ರದೇಶವು ವರ್ಣರಂಜಿತ ಬಜಾರ್‌ಗಳು ಮತ್ತು ಸಂಕೀರ್ಣವಾದ ಕಟ್ಟಡಗಳಿಂದ ಸುತ್ತುವರಿದಿದೆ.

Hyderabad Tour
Hyderabad Tour


ಗೋಲ್ಕೊಂಡ ಕೋಟೆ

ಹಳೆಯ ವಾಸ್ತುಶಿಲ್ಪ ಮತ್ತು ವಿಹಂಗಮ ನೋಟಗಳನ್ನು ಇಷ್ಟಪಡುವುದಾದರೆ ಗೋಲ್ಕೊಂಡ ಕೋಟೆಯು ಈ ಎರಡನ್ನೂ ಸಂಪೂರ್ಣವಾಗಿ ಸಂಯೋಜಿಸುತ್ತದೆ. 13ನೇ ಶತಮಾನಕ್ಕಿಂತ ಹಿಂದಿನ ಈ ಕೋಟೆಯು ಬೆರಗುಗೊಳಿಸುವ ಪಾಳುಬಿದ್ದ ಅರಮನೆಗಳು, ಗೇಟ್‌ವೇಗಳು ಮತ್ತು ಅವುಗಳ ಕೆಳಗೆ ನಗರಗಳ ಸುಂದರ ದೃಶ್ಯಗಳನ್ನು ಪ್ರಸ್ತುತಪಡಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಅಥವಾ ಮುಂಜಾನೆ ಈ ಕೋಟೆಯ ಮೇಲಿನ ಈ ನೋಟಗಳನ್ನು ಛಾಯಾಗ್ರಾಹಕರು ಅದ್ಭುತವಾಗಿ ಸೆರೆಹಿಡಿಯಬಹುದು.


ಹುಸೇನ್ ಸಾಗರ್ ಕೆರೆ

ಹುಸೇನ್ ಸಾಗರ್ ಕೆರೆ ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಮೂಲಗಳಲ್ಲಿ ಒಂದಾಗಿದೆ. ಜಿಬ್ರಾಲ್ಟರ್ ರಾಕ್‌ನಲ್ಲಿ ಬುದ್ಧನ ಪ್ರತಿಮೆಯನ್ನು ಹೊಂದಿರುವ ಈ ಕೃತಕ ಸರೋವರದ ಮೇಲೆ ಸೂರ್ಯೋದಯ ಅಥವಾ ಸೂರ್ಯಾಸ್ತದ ವೇಳೆ ಪ್ರಶಾಂತವಾದ ನೀರಿನಲ್ಲಿ ದೋಣಿಗಳು ನೌಕಾಯಾನ ಮಾಡುತ್ತಿರುವ ಸುಂದರ ದೃಶ್ಯಗಳನ್ನು ಕಾಣಬಹುದು.


ಕುತುಬ್ ಶಾಹಿ ಗೋರಿಗಳು

ಗೋಲ್ಕೊಂಡಾ ಕೋಟೆಯ ಸಮೀಪದಲ್ಲಿರುವ ಕುತುಬ್ ಶಾಹಿ ಗೋರಿಗಳ ಸೊಗಸಾದ ಗುಮ್ಮಟಗಳು, ಉತ್ತಮ ಕೆತ್ತನೆಗಳು ಮತ್ತು ಶಾಂತಿಯುತ ಪರಿಸರ ಛಾಯಾಗ್ರಾಹಕರಿಗೆ ಸಂತೋಷವನ್ನು ಕೊಡುತ್ತದೆ. 16 ಮತ್ತು 17ನೇ ಶತಮಾನಗಳಲ್ಲಿ ನಿರ್ಮಿಸಲಾದ ಈ ಗೋರಿಗಳು ಪರ್ಷಿಯನ್ ಮತ್ತು ಭಾರತೀಯ ವಿನ್ಯಾಸಗಳ ಮಿಶ್ರಣವನ್ನು ಪ್ರದರ್ಶಿಸುತ್ತವೆ. ಇದು ಮ್ಯಾಕ್ರೋ ಶಾಟ್‌ಗಳು ಮತ್ತು ವೈಡ್ ಆಂಗಲ್ ಎರಡನ್ನೂ ಶೂಟ್ ಮಾಡಲು ಸಾಧ್ಯವಾಗಿಸುತ್ತದೆ.


ಲಾಡ್ ಬಜಾರ್ ಅಥವಾ ಚೂಡಿ ಬಜಾರ್

ಹೈದರಾಬಾದ್‌ನ ಜನಪ್ರಿಯ ಮಾರುಕಟ್ಟೆ ಲಾಡ್ ಬಜಾರ್ ಸಾಂಪ್ರದಾಯಿಕ ಬಳೆಗಳು, ಬಟ್ಟೆಗಳು, ಬೀದಿ ಆಹಾರಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಬಿಡುವಿಲ್ಲದ ವಾತಾವರಣ, ಬಳೆ ಪ್ರಭೇದಗಳು ಮತ್ತು ಸಂಕೀರ್ಣವಾದ ಸ್ಥಳೀಯ ಕರಕುಶಲತೆಯು ಇಲ್ಲಿ ಛಾಯಾಗ್ರಾಹಕರನ್ನು ಸೆಳೆಯುತ್ತದೆ. ರಸ್ತೆಯಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು ಇಷ್ಟಪಡುವವರಿಗೆ ಜನರಿಂದ ತುಂಬಿರುವ ಈ ಕಿರಿದಾದ ಹಾದಿಗಳು ಸಾಂಸ್ಕೃತಿಕ ಬಫೆಗಳಂತಿವೆ.


ನೆಹರು ಝೂಲಾಜಿಕಲ್ ಪಾರ್ಕ್

ವನ್ಯಜೀವಿ ಮತ್ತು ಪ್ರಕೃತಿ ಛಾಯಾಗ್ರಾಹಕರಿಗೆ ನೆಹರು ಝೂಲಾಜಿಕಲ್ ಪಾರ್ಕ್ ವಿವಿಧ ವಿಷಯಗಳನ್ನು ಒದಗಿಸುತ್ತದೆ. ಪಕ್ಷಿಗಳು ಅಥವಾ ಸರೀಸೃಪಗಳಂತಹ ಪ್ರಾಣಿಗಳು ಈ ಮೃಗಾಲಯದಲ್ಲಿದೆ. ಮುಂಜಾನೆಯ ಸಮಯವು ವನ್ಯಜೀವಿ ಛಾಯಾಗ್ರಾಹಕರಿಗೆ ಅಗತ್ಯವಿರುವ ಮೃದುವಾದ ಬೆಳಕನ್ನು ಒದಗಿಸುತ್ತದೆ.


ರಾಮೋಜಿ ಫಿಲ್ಮ್ ಸಿಟಿ

ಪ್ರಪಂಚದಲ್ಲೇ ಅತಿ ದೊಡ್ಡ ಫಿಲ್ಮ್ ಸ್ಟುಡಿಯೋ ಸಂಕೀರ್ಣ ರಾಮೋಜಿ ಫಿಲ್ಮ್ ಸಿಟಿ ಛಾಯಾಗ್ರಾಹಕರಿಗೆ ವಿವಿಧ ಹಿನ್ನೆಲೆಗಳನ್ನು ಒದಗಿಸುತ್ತದೆ. ವಿಷಯಾಧಾರಿತ ಸೆಟ್‌ಗಳು, ಉದ್ಯಾನ ಅಥವಾ ವಿಸ್ತಾರವಾದ ಚಲನಚಿತ್ರ ರಂಗಪರಿಕರ, ರಾಮೋಜಿಯ ಪ್ರತಿ ಇಂಚು ಸಿನಿಮೀಯ ಪರಿಣಾಮ ಅಥವಾ ನಾಟಕೀಯ ಸಂಯೋಜನೆಗಳನ್ನು ರಚಿಸಲು ಅವಕಾಶವನ್ನು ನೀಡುತ್ತದೆ. ಆಧುನಿಕ ಭೂದೃಶ್ಯ ಅಥವಾ ಪ್ರಾಚೀನ ಅರಮನೆಗಳ ಹಿನ್ನೆಲೆಯನ್ನೂ ಇಲ್ಲಿ ಪಡೆಯಬಹುದು.


ಬುದ್ಧನ ಪ್ರತಿಮೆ

ಬೃಹತ್ ಬುದ್ಧನ ಪ್ರತಿಮೆಯು ಹುಸೇನ್ ಸಾಗರ್ ಸರೋವರದ ದ್ವೀಪದಲ್ಲಿದೆ. ಇದು ಹೈದರಾಬಾದ್ ನಗರದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಪ್ರಶಾಂತವಾದ ನೀರಿನ ಮೇಲೆ ಬುದ್ಧನ ಪ್ರತಿಬಿಂಬವನ್ನು ಸೆರೆಹಿಡಿಯಬಹುದು. ಹತ್ತಿರದಲ್ಲಿರುವ ಸಣ್ಣಸಣ್ಣ ವಿವರಗಳ ಮೇಲೆಯೂ ಛಾಯಾಚಿತ್ರ ತೆಗೆಯಲು ಆದ್ಯತೆ ನೀಡಬಹುದು. ಪ್ರತಿಮೆಯನ್ನು ಹಿನ್ನೆಲೆಯಾಗಿಯೂ ಬಳಸಿಕೊಳ್ಳಬಹುದು.


ಎನ್‌ಟಿಆರ್ ಗಾರ್ಡನ್ಸ್

ಎನ್‌ಟಿಆರ್ ಉದ್ಯಾನ ಸುಂದರ ಭೂದೃಶ್ಯ, ಸಂಗೀತ ಕಾರಂಜಿ ಮತ್ತು ಮನರಂಜನಾ ಪ್ರದೇಶಗಳ ಸಂಯೋಜನೆಯಾಗಿದ್ದು ರೋಮಾಂಚಕ ಬಣ್ಣಗಳು ಮತ್ತು ಸಂತೋಷದಾಯಕ ಕ್ಷಣಗಳನ್ನು ಸೆರೆ ಹಿಡಿಯಲು ಸರಿಯಾದ ಸ್ಥಳವಾಗಿದೆ. ಉದ್ಯಾನದ ಮೈದಾನದಲ್ಲಿ ಛಾಯಾಗ್ರಾಹಕರನ್ನು ಸೆಳೆಯುವ ನೀರಿನ ಕ್ಯಾಸ್ಕೇಡ್‌ಗಳು, ಹೂವಿನ ಪ್ರದರ್ಶನಗಳು, ಆಟದ ಕಾರಿಡಾರ್‌ಗಳಂತಹ ವಿವಿಧ ಆಕರ್ಷಣೆಗಳನ್ನು ಹೊಂದಿದೆ.

ಇದನ್ನೂ ಓದಿ: Shimla For Honeymoon: ಹನಿಮೂನ್‍ ಜೋಡಿಗಳ ರೊಮ್ಯಾನ್ಸ್‌ ಹೆಚ್ಚಿಸುತ್ತವೆ ಶಿಮ್ಲಾದ ಈ ತಾಣಗಳು!


ಬಂಜಾರಾ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್‌ನಲ್ಲಿ ಸ್ಟ್ರೀಟ್ ಆರ್ಟ್

ಬಂಜಾರಾ ಹಿಲ್ಸ್ ಮತ್ತು ಜುಬಿಲಿ ಹಿಲ್ಸ್ ಉತ್ಸಾಹಭರಿತ ಬೀದಿ ಕಲಾಕೃತಿಗಳು ಮತ್ತು ಗೀಚುಬರಹವನ್ನು ಒಳಗೊಂಡಿದೆ. ಈ ಪ್ರದೇಶಗಳು ಛಾಯಾಗ್ರಾಹಕರಿಗೆ ಅನ್ವೇಷಿಸಲು ಯೋಗ್ಯವಾಗಿವೆ. ಸ್ಥಳೀಯ ಕಲಾವಿದರು ಮಾಡಿದ ಗೋಡೆಯ ಭಿತ್ತಿಚಿತ್ರಗಳನ್ನು ಹಲವಾರು ಬಣ್ಣಗಳು ಅಥವಾ ಆಲೋಚನೆಗಳನ್ನು ಪ್ರಚೋದಿಸುವ ವಿನ್ಯಾಸಗಳೊಂದಿಗೆ ಸೆರೆಹಿಡಿಯಬಹುದು.

Continue Reading

ಪ್ರಮುಖ ಸುದ್ದಿ

Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

Sudha Murthy’ :

VISTARANEWS.COM


on

Sudha Murthy'
Koo

ಬೆಂಗಳೂರು : ರಕ್ಷಾ ಬಂಧನ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ (Sudha Murthy) ಹಂಚಿಕೊಂಡ ಸಂದೇಶ ವಿವಾದಕ್ಕೆ ಈಡಾಗಿದ್ದು ಬಳಿಕ ಅವರು ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮಗೆ ಹೇಗೆ “ಪ್ರಮುಖ ಹಬ್ಬ” ಮತ್ತು ದಾರ ಅಥವಾ ರಾಖಿ ಹೊಂದಿರುವ ಮೌಲ್ಯವನ್ನು ಅವರು ವಿವರಣೆ ನೀಡಿದ್ದು ಒಂದು ವರ್ಗದ ಜನರನ್ನು ಕೆರಳಿಸಿತ್ತು. ಬಳಿಕ ಅವರು ತಮ್ಮ ಹೇಳಿಕೆಯನ್ನು ತಿದ್ದಿಕೊಂಡಿದ್ದಾರೆ. ಆದಾಗ್ಯೂ ಇದು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್​ನಲ್ಲಿ ಚರ್ಚೆಗೆ ಕಾರಣವಾಯಿತು. ನಾನು ಬೆಳೆಯುವ ಅವಧಿಯಲ್ಲಿ ಕಲಿತ ಕಥೆಯನ್ನು ಹೇಳುವ ಉದ್ದೇಶ ತಮ್ಮದಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.


“ರಕ್ಷಾ ಬಂಧನವು ನನಗೆ ಒಂದು ಪ್ರಮುಖ ಹಬ್ಬವಾಗಿದೆ, ಸಹೋದರಿಯೊಬ್ಬಳು ಕಷ್ಟದ ಸಂದರ್ಭದಲ್ಲಿ ಯಾವಾಗಲೂ ನನಗೆ ನೆರವಿಗೆ ಬರಬೇಕು ಎಂದು ಸಹೋದರನಿಗೆ ಕಟ್ಟುವ ದಾರ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬರೆದುಕೊಂಡಿದ್ದಾರೆ.

ರಾಣಿ ಕರ್ಣಾವತಿ (ಮೇವಾರ್ ಸಾಮಾಜ್ಯ ) ತನ್ನ ರಾಜ್ಯದ ಮೇಲೆ ದಾಳಿ ನಡೆದಾಗ ಏನು ಮಾಡಬೇಕೆಂದು ಅವಳಿಗೆ ತಿಳಿಯದೇ ಮೊಘಲ್ ಚಕ್ರವರ್ತಿ ಹುಮಾಯೂನ್ ಗೆ ದಾರವೊಂದನ್ನು ಕಳುಹಿಸಿ, ನಾನು ಅಪಾಯದಲ್ಲಿದ್ದೇನೆ ದಯವಿಟ್ಟು ನನ್ನನ್ನು ನಿಮ್ಮ ಸಹೋದರಿ ಎಂದು ಪರಿಗಣಿಸಿ ಕಾಪಾಡಿ ಎಂದ ಕೋರಿದ್ದಳು.. ಹುಮಾಯೂನ್ ಗೆ ಅದು ಏನೆಂದು ತಿಳಿದಿರಲಿಲ್ಲ ಇದು ಏನು ಎಂದು ಸಭಾಸದರನ್ನು ಕೇಳಿದ್ದಳು. ಆಗ ವರು ಸಹೋದರನಿಗೆ ಸಹೋದರಿಯ ಕರೆ ಎಂದು ಹೇಳಿದರು. ಇದು ಈ ನೆಲದ ಪದ್ಧತಿ ಎಂದರು. ಇದು ನಿಜವಾಗಿದ್ದರೆ ನಾನು ರಾಣಿ ಕರ್ಣಾವತಿಗೆ ಸಹಾಯ ಮಾಡುತ್ತೇನೆ ಎಂದು ಹುಮಾಯುನ್ ದೆಹಲಿಯಿಂದ ಹೊರಟಿದ್ದ. ಆದರೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ ಮತ್ತು ಕರ್ಣಾವತಿ ನಿಧನ ಹೊಂದಿದ್ದರು ಎಂದು ಸುಧಾ ಮೂರ್ತಿ ಕತೆಯನ್ನು ಹೇಳಿದ್ದರು.

ಎಕ್ಸ್ ನಲ್ಲಿ ಹಲವಾರು ಬಳಕೆದಾರರು ಮೂರ್ತಿಯವರ ಕತೆಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು. ರಾಖಿ ಹಬ್ಬ ಆರಂಭಗೊಂಡಿದ್ದು ಮಹಾಭಾರತದ ಸಮಯಕ್ಕೆ ಎಂದು ವಾದಿಸಿದ್ದರು. ಮಹಾಭಾರತದ ಸಮಯದಲ್ಲಿ, ರಾಜ ಶಿಶುಪಾಲನನ್ನು ಕೊಲ್ಲಲು ಸುದರ್ಶನ ಚಕ್ರ ಬಳಸುವಾಗ ಶ್ರೀಕೃಷ್ಣನು ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದ. ಈ ವೇಳೆ ದ್ರೌಪದಿ ಗಾಯವನ್ನು ಬಟ್ಟೆಯ ತುಂಡಿನಿಂದ ಕಟ್ಟಿದ್ದಳು. ಶ್ರೀಕೃಷ್ಣನು ಖುಷಿಯಿಂದ ಕಷ್ಟಕಾಲದಲ್ಲಿ ನೆರವಾಗುವುದಾಗಿ ದ್ರೌಪದಿಗೆ ಭರವಸೆ ನೀಡಿದ್ದ. ಕೌರವರು ದ್ರೌಪದಿಯನ್ನು ಅವಮಾನಿಸಲು ಪ್ರಯತ್ನಿಸಿದಾಗ ಶ್ರೀಕೃಷ್ಣನು ಸೀರೆಯನ್ನು ನೀಡಿ ಆಕೆಯ ಮಾನ ಕಾಪಾಡಿದ. ಇದು ರಾಖಿ ಹಬ್ಬದ ಮೂಲ ಎಂದು ವಾದಿಸಿದರು.

ಇದನ್ನೂ ಓದಿ: Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

ಬಳಿಕ ಸುಧಾ ಮೂರ್ತಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. “ರಕ್ಷಾ ಬಂಧನದಂದು ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಖಂಡಿತವಾಗಿಯೂ ಹಬ್ಬದ ಮೂಲ ಅದಲ್ಲ. ನಾನು ವೀಡಿಯೊದಲ್ಲಿ ಮೊದಲೇ ಹೇಳಿದ್ದೇನೆ. ಇದು ಈ ನೆಲದ ಪದ್ಧತಿ ಎಂದು. ನಾನು ಬೆಳೆಯುತ್ತಿರುವಾಗ ಕಲಿತ ಅನೇಕ ಕಥೆಗಳಲ್ಲಿ ಅದೂ ಒಂದು. ರಕ್ಷಾ ಬಂಧನದ ಹಿಂದಿನ ಸಾಂಕೇತಿಕತೆಯ ಬಗ್ಗೆ ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರ.

Continue Reading
Advertisement
Sexual Assault
ದೇಶ16 mins ago

Sexual Assault: ಫೇಕ್‌ NCC ಕ್ಯಾಂಪ್‌ ಆಯೋಜಿಸಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ; ರಾಜಕಾರಣಿ ಸೇರಿ 8 ಮಂದಿ ಅರೆಸ್ಟ್‌

Rayara Aradhane 2024
ಧಾರ್ಮಿಕ28 mins ago

Rayara Aradhane 2024 : ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

ಪ್ರಮುಖ ಸುದ್ದಿ55 mins ago

Bengaluru Rape Attempt Case : ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ ಹೊಸ ತಿರುವು, ಸಂತ್ರಸ್ತೆಯ ವಿರುದ್ಧವೇ ಕೇಸ್‌ ದಾಖಲು!

Student Death
ಪ್ರಮುಖ ಸುದ್ದಿ1 hour ago

Student Death : ಮೈಸೂರಿನ ಕಾಲೇಜಿನ ಹಾಸ್ಟೆಲ್‌‌ನಲ್ಲಿ 17 ವರ್ಷದ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು

Electricity theft
ಪ್ರಮುಖ ಸುದ್ದಿ2 hours ago

Electricity Theft : ಸರ್ಕಾರ ಫ್ರೀ ಕೊಡುತ್ತಿದ್ದರೂ ಮತ್ತಷ್ಟು ಕರೆಂಟ್‌ ಕದ್ದು ಸಿಕ್ಕಿಬಿದ್ದ ಕಾಂಗ್ರೆಸ್‌ ನಾಯಕಿ!

Earthquake
ದೇಶ2 hours ago

Earthquake: ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಬ್ಯಾಕ್‌ ಟು ಬ್ಯಾಕ್‌ ಭೂಕಂಪ

Hyderabad Tour
ಪ್ರವಾಸ2 hours ago

Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

Murder case
ಕ್ರೈಂ2 hours ago

Murder Case : ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ

Kolkata Doctor murder case
ದೇಶ2 hours ago

Kolkata Doctor murder case: ಕೋಲ್ಕತ್ತಾ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ- ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Tungabhadra dam
ಪ್ರಮುಖ ಸುದ್ದಿ2 hours ago

Tungabhadra Dam : ತುಂಗಭದ್ರಾ ಜಲಾಶಯದ ಬಳಿ ವಿಧಿಸಿದ್ದ ಸೆಕ್ಷನ್‌ 144 ವಾಪಸ್‌‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌